text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಅಮಾಜ್‌ಫಿಟ್‌ ಸ್ಮಾರ್ಟ್‌ವಾಚ್‌ ಖರೀದಿಸಲು ಇದೇ ಬೆಸ್ಟ್‌ ಟೈಂ! | Amazfit is offering great deals and discounts on some of its smartwatches - Kannada Gizbot 3 min ago ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಹೆಡ್‌ಫೋನ್‌ಗಳು! | Updated: Wednesday, September 29, 2021, 18:13 [IST] ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ವಾಚ್‌ಗಳು ಕೂಡ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿವೆ. ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳಿಗೆ ಟೆಕ್‌ ವಲಯದಲ್ಲಿ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಅಮಾಜ್‌ಫಿಟ್‌ ಕೂಡ ಬಳಕೆದಾರರ ನೆಚ್ಚಿನ ಬ್ರಾಂಡ್‌ ಎನಿಸಿಕೊಂಡಿದೆ. ಸದ್ಯ ಅಮಾಜ್‌ಫಿಟ್‌ ತನ್ನ ವಿಭಿನ್ನ ಸ್ಮಾರ್ಟ್‌ವಾಚ್‌ಗಳಿಂದ ಗುರುತಿಸಿಕೊಂಡಿದೆ. ಇದೀಗ ತನ್ನ ಸ್ಮಾರ್ಟ್‌ವಾಚ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಅನ್ನು ನೀಡುತ್ತಿದೆ. ಹೌದು, ಅಮಾಜ್‌ಫಿಟ್‌ ಕಂಪೆನಿ ತನ್ನ ಕೆಲವು ಸ್ಮಾರ್ಟ್‌ವಾಚ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ನೀವು ಕೂಡ ಅಮಾಜ್‌ಫಿಟ್‌ ಸ್ಮಾರ್ಟ್‌ವಾಚ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಬಯಸಿದರೆ ಇದು ಉತ್ತಮ ಸಮಯವಾಗಿದೆ. ಅದರಲ್ಲೂ ಜನಪ್ರಿಯ ಸ್ಮಾರ್ಟ್‌ವಾಚ್‌ಗಳಾದ ಅಮಾಜ್‌ಫಿಟ್ ಜಿಟಿಎಸ್ 2 ಮಿನಿ, ಬಿಪ್ ಯು ಪ್ರೊ ಮತ್ತು ಬಿಪ್‌ಯು ವಾಚ್‌ಗಳಿಗೆ ರಿಯಾಯಿತಿ ಘೋಷಿಸಿದೆ. ಹಾಗಾದ್ರೆ ಅಮಾಜ್‌ಫಿಟ್‌ ವಾಚ್‌ಗಳಿಗೆ ಯಾವೆಲ್ಲಾ ರಿಯಾಯಿತಿ ದೊರೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ. ಆನ್‌ಲೈನ್‌ ಶಾಪಿಂಗ್‌ ದೈತ್ಯ ಅಮೆಜಾನ್‌ ಸೈಟ್‌ನಲ್ಲಿ ಅಮಾಜ್‌ಫಿಟ್ ಬ್ರಾಂಡ್ ಡೇ ಸೇಲ್ ಲೈವ್‌ ಆಗಿದೆ. ಅಲ್ಲದೆ ಅಮಾಜ್ ಫಿಟ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಕೂಡ ರಿಯಾಯಿತಿ ಸೇಲ್‌ ಲೈವ್ ಆಗಿದೆ. ಈ ಸೇಲ್‌ ಇದೇ ಸೆಪ್ಟೆಂಬರ್ 12 ರವರೆಗೆ ನಡೆಯಲಿದೆ. ಇದರಲ್ಲಿ ಅಮಾಜ್‌ಫಿಟ್ ಜಿಟಿಎಸ್ 2 ಮಿನಿ ಅಮೆಜಾನ್‌ನಲ್ಲಿ ಮಾತ್ರ ಲಭ್ಯವಿದೆ. ಆದರೆ ಬಿಪ್‌ ಯು ಮತ್ತು ಬಿಪ್‌ ಯು ಪ್ರೊ ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಅಮಾಜ್‌ಫಿಟ್ ಜಿಟಿಎಸ್ 2 ಮಿನಿ ಅಮಾಜ್‌ಫಿಟ್‌ ಜಿಟಿಎಸ್‌ 2 ಮಿನಿ ಸ್ಮಾರ್ಟ್‌ವಾಚ್‌ ಮೂಲ ಬೆಲೆ 6999 ರೂ, ಆಗಿದ್ದು, ಅಮೆಜಾನ್ ಮತ್ತು ಅಮಾಜ್‌ಫಿಟ್ ವೆಬ್‌ಸೈಟ್‌ನಲ್ಲಿ ಬ್ರಾಂಡ್ ಡೇ ಸೇಲ್‌ನಲ್ಲಿ 6799ರೂ, ಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಹೊಂದಿದೆ. ಇದರ ಸ್ಕ್ರೀನ್ ಸೈಜ್ ಸ್ತ್ರೀ ಮತ್ತು ಪುರುಷ ಖರೀದಿದಾರರಿಗೆ ಸೂಕ್ತವಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಆಕರ್ಷಕ ಡಿಸ್‌ಪ್ಲೇ ಮತ್ತು ಬಯೋಟ್ರಾಕರ್ 2, ಆಕ್ಸಿಜನ್ ಬೀಟ್ಸ್, ಎಸ್‌ಪಿಒ 2 ಮಾಪನ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಮಾಜ್‌ಫಿಟ್ ಬಿಪ್‌ ಯು ಪ್ರೊ ಅಮಾಜ್‌ಫಿಟ್ ಬಿಪ್‌ ಯು ಪ್ರೊ ಸ್ಮಾರ್ಟ್‌ವಾಚ್‌ ಭಾರತದಲ್ಲಿ 4999ರೂ. ಬೆಲೆಯನ್ನು ಹೊಂದಿದೆ. ಇದು ಅಮಾಜ್‌ಫಿಟ್‌ ಬ್ರಾಂಡ್ ಡೇ ಸೇಲ್‌ ಟೈಂ ನಲ್ಲಿ 4799ರೂ,ಗಳಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.43-ಇಂಚಿನ HD ಬಿಗ್‌ TFT-LCD ಕಲರ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ವಾಚ್ ಕೇಸ್ ಅನ್ನು 2.5 ಡಿ ಕಾರ್ನಿಂಗ್ ಗೊರಿಲ್ಲಾ 3 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ ಈ ವಾಚ್‌ ಇನ್-ಬಿಲ್ಟ್ ಅಲೆಕ್ಸಾ ಮತ್ತು ಜಿಪಿಎಸ್ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ. ಅಮಾಜ್‌ಫಿಟ್ ಬಿಪ್‌ ಯು ಈ ಸ್ಮಾರ್ಟ್‌ವಾಚ್‌ ಮೂಲ ಬೆಲೆ 3999 ರೂ. ಹೊಂದಿದ್ದು, ಇದು ರಿಯಾಯಿತಿ ದರದಲ್ಲಿ 3799ರೂ ಗಳಿಗೆ ಲಭ್ಯವಾಗಲಿದೆ. ಇದು ಇಂಟರ್‌ಬಿಲ್ಟ್‌ ಅಲೆಕ್ಸಾ, ಇಂಟರ್‌ಬಿಲ್ಟ್‌ ಜಿಪಿಎಸ್,ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.43 ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ವಾಚ್‌ 60+ ಸ್ಪೋರ್ಟ್ಸ್ ಮೋಡ್, ಬಯೋಟ್ರಾಕರ್, 2 ಪಿಪಿಜಿ, ಮತ್ತು ಆಕ್ಸಿಜನ್ ಬೀಟ್ಸ್, ಸೊಮ್ನಸ್‌ಕೇರ್, 5 ಎಟಿಎಂ ವಾಟರ್‌ ರೆಸಿಸ್ಟೆನ್ಸ್‌ ಅನ್ನು ಹೊಂದಿದೆ. ಮಿ ಬ್ಯಾಂಡ್‌ 5 ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು 14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಪವರ್‌ ಸೇವ್‌ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಸೇರಿದಂತೆ ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್‌ ಮಾಡುವ ವಿಶೇಷತೆಯನ್ನು ಹೊಂದಿದೆ. ಬೆಲೆಯು 2,499ರೂ. ಆಗಿದೆ. Amazfit Brand Day sale has gone live on Amazon and the official website of Amazfit.to know more visit to kannada.gizbot.com
2022/01/28 09:09:12
https://kannada.gizbot.com/news/amazfit-is-offering-great-deals-and-discounts-on-some-of-its-smartwatches-027774.html
mC4
ಬಿಜೆಪಿಗೆ ಕಸಿವಿಸಿ ಉಂಟುಮಾಡಿದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ | Subramanian Swamy Slams Supporters Of BJP And PM Narendra Modi Over Surge In Covid Cases - Kannada Oneindia 12 min ago ಏ.18ರಂದು ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ 22 min ago ಹರಿದ್ವಾರ ಕುಂಭ ಮೇಳ: ಪ್ರಧಾನ ಸಾಧು ಕೊರೊನಾ ಸೋಂಕಿಗೆ ಬಲಿ Sports ರಿಯಾನ್ ಪರಾಗ್ ಅಲ್ಲ 'ರಿಯಾನ್ ಲಿಂಗ'! india subramanian swamy narendra modi bjp coronavirus COVID19 corona vaccine ಭಾರತ ಸುಬ್ರಮಣಿಯನ್ ಸ್ವಾಮಿ ನರೇಂದ್ರ ಮೋದಿ ಬಿಜೆಪಿ ವೈರಸ್ ಕೊರೊನಾ ಲಸಿಕೆ politics | Published: Monday, April 5, 2021, 10:58 [IST] ನವದೆಹಲಿ ಏಪ್ರಿಲ್ 5: ಕೊರೊನಾವೈರಸ್ ಸೋಂಕಿನ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರದೇ ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ ಪರೋಕ್ಷವಾಗಿ ಟೀಕಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ದೇಶಾದ್ಯಂತ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಏಕಾಏಕಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಅಭಿಮಾನಿಗಳನ್ನು ಸುಬ್ರಮಣಿಯನ್ ಸ್ವಾಮಿ 'ಗಂಧಭಕ್ತರು' ಎಂದು ವ್ಯಂಗ್ಯವಾಡಿದ್ದಾರೆ. ತಮ್ಮದೇ ಸರ್ಕಾರ ಹಾಗೂ ಪಕ್ಷದ ವಿರುದ್ಧ ನೇರಾನೇರ ವಾಗ್ದಾಳಿ ನಡೆಸುವುದರಲ್ಲಿ ಹೆಸರಾದ ಸುಬ್ರಮಣಿಯನ್ ಸ್ವಾಮಿ ಅವರು ಭಾನುವಾರ ಪೋಸ್ಟ್ ಮಾಡಿರುವ ಟ್ವೀಟ್, ಬಿಜೆಪಿಗೆ ಕಸಿವಿಸಿ ಉಂಟುಮಾಡಿದೆ. '2020ರ ಏಪ್ರಿಲ್‌ ಮಧ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಕರಣಗಳು ದಿನವೂ 1 ಲಕ್ಷದಷ್ಟು ವರದಿಯಾಗುತ್ತಿದ್ದು, ನವೆಂಬರ್ ವೇಳೆಗೆ 10,000ಕ್ಕೆ ಇಳಿಯಿತು. ಅಂಧಭಕ್ತರು ಮತ್ತು ಗಂಧಭಕ್ತರು (ಕೊಳಕು) ಯಾರಿಗೆ ಅದರ ಶ್ರೇಯಸ್ಸು ನೀಡಿದ್ದರು? ಈಗ ಪ್ರಕರಣಗಳು ಮತ್ತೆ ಒಂದು ಲಕ್ಷಕ್ಕೆ ಏರಿಕೆಯಾಗುತ್ತಿವೆ. ಹಾಗಾದರೆ ಈಗ ಯಾರು ಶ್ರೇಯಸ್ಸು ತಮ್ಮದು ಎಂದು ಹೇಳಿಕೊಳ್ಳುತ್ತಾರೆ?' ಎಂದು ಸ್ವಾಮಿ ಟೀಕಿಸಿದ್ದಾರೆ. When the Coronavirus Pandemic cases were running at 100,000 daily mid April 2020 and fell to 10, 000 by November. who was given the credit by Andhbhakts and Gandhbahkts ? Now have the cases risen again to 100, 000 again? Then who will now claim credit? — Subramanian Swamy (@Swamy39) April 4, 2021 ಸ್ವಾಮಿ ಅವರ ಟ್ವೀಟ್‌ಗೆ ಟ್ವಿಟ್ಟರ್ ಬಳಕೆದಾರರೊಬ್ಬರು, ಬೇಸಿಗೆ ಕಾಲದಲ್ಲಿ ಮಾತ್ರವೇ ಕೊರೊನಾ ವೈರಸ್ ತೀವ್ರಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ವೈರಸ್ ಹರಡಲು ಹವಾಮಾನ ಕಾರಣ ಎಂಬರ್ಥದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಸ್ವಾಮಿ, 'ಅಂಧಭಕ್ತರು ಮತ್ತು ಗಂಧಭಕ್ತರಿಗೆ ಅಗತ್ಯವಾಗಿರುವ ನೆಪವೊಂದು ನಿಮಗೆ ಸಿದ್ಧವಾಗಿ ದೊರಕಿದೆ' ಎಂದು ಹೇಳಿದ್ದಾರೆ. ಸ್ವಾಮಿ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಮಾನಿಗಳು ಹಾಗೂ ವಿರೋಧಿಗಳ ನಡುವಿನ ಟ್ವೀಟ್ ಸಮರಕ್ಕೆ ಕಾರಣವಾಗಿದೆ. ಕೋವಿಡ್ ಲಸಿಕೆಯ ಕಚ್ಚಾ ಸಾಮಗ್ರಿ ನಿರ್ಬಂಧ ತೆರವುಗೊಳಿಸಿ: ಅಮೆರಿಕಕ್ಕೆ ಮನವಿ ಈ 10 ರಾಜ್ಯಗಳಲ್ಲಿದ್ದಾರೆ ದೇಶದ ದೈನಂದಿನ ಶೇ.80ರಷ್ಟು ಕೊರೊನಾ ಸೋಂಕಿತರು BJP Rajya Sabha MP Subramanian Swamy slams supporters of BJP and PM Narendra Modi over the surge in Covid cases.
2021/04/16 17:51:42
https://kannada.oneindia.com/news/india/subramanian-swamy-slams-supporters-of-bjp-and-pm-narendra-modi-over-surge-in-covid-cases-219674.html?ref_source=articlepage-Slot1-9&ref_medium=dsktp&ref_campaign=similar-topic-slider
mC4
ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ Networks of Drugs Network: 13 People Detained ಕರ್ನಾಟಕಕ್ರೈಮ್ ಸುದ್ದಿಬೆಳಗಾವಿ ಬೆಳಗಾವಿ:( tarunkranti) ಮುಂಬೈ ಮೂಲದ ಬೃಹತ್ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ ನಗರದ ಪೋಲಿಸರು ಬೃಹತ ಡ್ರಗ್ಸ್ ಜಾಲವೊಂದನ್ನು ಭೇದಿಸುದ್ದು ಸ್ಥಳಿಯ ಯುವಜನರು ಹಾಗೂ ಮುಂಬೈ ಮೂಲದ ಮಹಿಳೆ ಸೇರಿ 13 ಜನರನ್ನು ಬಂಧಿಸಿದ್ದಾರೆ. ಈ ಸಂಬಂಧ ನಗರದ ಪೋಲಿಸ್ ಆಯುಕ್ತರ ಸಭಾಭವನದಲ್ಲಿ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಗರ ಪೋಲಿಸ ಆಯುಕ್ತ ಡಿ.ಸಿ. ರಾಜಪ್ಪ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ ಮಾಹಿತಿ ನೀಡಿದರು. ಸ್ಥಳಿಯ ಯುವಕರಾದ ಯಾಶೀನ ಹಾಗೂ ಸೂರಜ ಇಬ್ಬರೂ ಮುಂಬೈ ಮೂಲದ ಸುಶೀಲಾ ಸ್ವಾಮಿ ಎಂಬ ಮಹಿಳೆಯ ಜೊತೆ ವ್ಯವಹಾರ ನಡೆಸಿ ಮುಂಬೈ ಯಿಂದ "ಫನ್ನಿ" ಎಂದು ಕರೆಯಲ್ಪಡುವ ಪೌಡರ ರೂಪದ ಡ್ರಗ್ಸ್ ನ್ನು ತಂದು ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು. ಇವರು ಹೆಚ್ಚಾಗಿ ಕಾಲೇಜು ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದು ₹300 ಹಾಗೂ 500 ರೂಪಾಯಿಗಳ ಪ್ಯಾಕೇಟಗಳಲ್ಲಿ ಡ್ರಗ್ಸ್ ಮಾರಟ ಮಾಡುತ್ತಿದ್ದರು ಎಂದು ತಿಳಿಸಿದರು. ಈ ರೀತಿಯ ಕೆಮಿಕಲ್ ಡ್ರಗ್ಸ್ ಗಳನ್ನು ಸೇವಿಸಿ ಕೆಲವು ಯುವಕರು ಕಲ್ಲು ತೂರಾಟದಲ್ಲಿಯೂ ಭಾಗವಾಗಿದ್ದಾರೆಂದು ಆರೋಪ ಕೇಳಿ ಬಂದಿದ್ದು ಈ ನಿಟ್ಟಿನಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಜೆ ಅವರು ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೀಮಾ ಲಾಟಕರ್, ಮಹಾನಿಂಗ ನಂದಗಾವಿ, ಮತ್ತಿತರರು ಉಪಸ್ಥಿತರಿದ್ದರು.
2018/12/16 13:29:03
http://tarunkranti.news/networks-of-drugs-network-13-people-detained/
mC4
ಕ್ರೀಡಾ ತಂಡಕ್ಕೆ ಯುಬಿ ನೆರವು | Prajavani ಕ್ರೀಡಾ ತಂಡಕ್ಕೆ ಯುಬಿ ನೆರವು Published: 02 ಆಗಸ್ಟ್ 2011, 01:00 IST Updated: 02 ಆಗಸ್ಟ್ 2011, 01:00 IST ಅಂತರ‌್ರಾಷ್ಟ್ರೀಯ ಮಕ್ಕಳ ಕ್ರೀಡಾಕೂಟದಲ್ಲಿ (ಮಕ್ಕಳ ಒಲಿಂಪಿಕ್ಸ್) ಪಾಲ್ಗೊಳ್ಳುವ ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್‌ನ (ಬಿಎಸ್‌ಎಸ್‌ಎಫ್) ತಂಡದ ಪ್ರಾಯೋಜಕತ್ವ ವಹಿಸಲು ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ ಮುಂದಾಗಿದ್ದಾರೆ. ಈ ಶಾಲಾ ತಂಡ ಕೂಟದಲ್ಲಿ ಕಳೆದ ಮೂರು ವರ್ಷದಿಂದಲೂ ಪಾಲ್ಗೊಳ್ಳುತ್ತಿವೆ. ಆದರೆ ಪ್ರಾಯೋಜಕರ ಕೊರತೆ ಅದರ ಉತ್ಸಾಹಕ್ಕೆ ತಣ್ಣೀರೆರಚುತ್ತಲೇ ಬಂದಿದೆ. ಬಹುತೇಕ ಸಂದರ್ಭಗಳಲ್ಲಿ ಮಕ್ಕಳ ಪೋಷಕರೇ ಲಕ್ಷಾಂತರ ರೂಪಾಯಿ ವೆಚ್ಚ ಭರಿಸುತ್ತಿದ್ದರು. ಈ ಸಲವೂ 7 ಮಕ್ಕಳ ತಂಡಕ್ಕೆ ಹಣದ ಕೊರತೆ ಎದುರಾಗಿತ್ತು. ಇದನ್ನು `ಪ್ರಜಾವಾಣಿ~ ಕ್ರೀಡಾ ಪುರವಣಿ ಬೆಳಕಿಗೆ ತಂದಿತ್ತು. ಈಗ ಮಲ್ಯ ಅವರು ಇದಕ್ಕೆ ಸಹಾಯಹಸ್ತ ನೀಡಿದ್ದಾರೆ. ಮಕ್ಕಳ ಕ್ರೀಡಾಕೂಟಕ್ಕೆ ಅಂತರ‌್ರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಓಸಿ) ಮಾನ್ಯತೆಯಿದೆ. 50 ದೇಶಗಳ ಸುಮಾರು 3000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಬೆಂಗಳೂರು ತಂಡದಲ್ಲಿ ಹೆಬ್ಬಾಳ ವಿದ್ಯಾನಿಕೇತನ ಶಾಲೆಯ ಆದಿತ್ಯ ಶರ್ಮಾ, ಹೇಮಂತ್ ಮತ್ತು ತೇಜಸ್, ಮಲ್ಯ ಅದಿತಿ ಶಾಲೆಯ ಶಿವ್, ಎಬನೇಜರ್ ಶಾಲೆಯ ಸಿದ್ದಾರ್ಥ, ನ್ಯಾಷನಲ್ ಹಿಲ್‌ವ್ಯೆ ಶಾಲೆಯ ಚಿರಾಗ್, ಗ್ರೀನ್‌ವುಡ್ ಶಾಲೆಯ ರಿಷಬ್ ಇದ್ದಾರೆ. ಕ್ರೀಡಾಪ್ರೇಮಿಯಾದ ಮಲ್ಯ ಅವರ ಯುಬಿ ಸಮೂಹ ಕ್ರಿಕೆಟ್, ಫುಟ್ಬಾಲ್, ಗಾಲ್ಫ್, ಫಾರ್ಮುಲಾ ಒನ್, ಕುದುರೆ ಸವಾರಿ ಮುಂತಾದ ಕ್ರೀಡಾವಳಿಗಳನ್ನು ಪ್ರಾಯೋಜಿಸುತ್ತ ಬಂದಿದೆ. ಕ್ರೀಡಾ ಪ್ರತಿಭೆಗಳ ಶೋಧನೆಗೂ ವೇದಿಕೆ ಒದಗಿಸಿದೆ. ದೇಶದ ಪ್ರಸಿದ್ಧ ಫುಟ್ಬಾಲ್ ತಂಡಗಳಾದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್‌ಗೂ ಬೆಂಬಲಿಸುತ್ತಿದೆ. ಇತ್ತೀಚೆಗೆ ಫೋರ್ಸ್ ಇಂಡಿಯಾ ಎಫ್1 ಟೀಮ್ ಅಕಾಡೆಮಿ ಸ್ಥಾಪಿಸುವ ಮೂಲಕ ಮೂಲಕ ವೃತ್ತಿಪರ ಮೋಟಾರ್ ಸ್ಪೋರ್ಟ್ಸ್‌ಗಳಲ್ಲಿ ಭಾಗವಹಿಸುವ ಭಾರತೀಯ ಮಕ್ಕಳು ಮತ್ತು ಯುವಜನರಿಗೆ ತರಬೇತಿ ನೀಡುತ್ತಿದೆ.
2019/01/19 02:36:17
https://www.prajavani.net/article/%E0%B2%95%E0%B3%8D%E0%B2%B0%E0%B3%80%E0%B2%A1%E0%B2%BE-%E0%B2%A4%E0%B2%82%E0%B2%A1%E0%B2%95%E0%B3%8D%E0%B2%95%E0%B3%86-%E0%B2%AF%E0%B3%81%E0%B2%AC%E0%B2%BF-%E0%B2%A8%E0%B3%86%E0%B2%B0%E0%B2%B5%E0%B3%81
mC4
ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ – The News Updates October 17, 2021 October 17, 2021 ram pargeLeave a Comment on ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ . ಉಪ್ಪು ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ ಅಡುಗೆಯಲ್ಲಿ ಉಪ್ಪಿನ ಅಂಶವು ಕಡಿಮೆಯಾದರೆ ಆಹಾರವೇ ಸಾರಸ್ವತ ಇರುವುದಿಲ್ಲ ಉಪ್ಪಿನ ಸಂಶೋಧನೆ ಯಾವಾಗ ಆಯಿತು ಅಂದಿನಿಂದ ಇದರಲ್ಲಿ ನಕಾರಾತ್ಮಕ ಶಕ್ತಿಯ ಗುಣವನ್ನು ದೂರ ಮಾಡುವ ಶಕ್ತಿಯಿದೆ ಎಂದು ನಂಬಲಾಗಿದೆ ವಸ್ತುವಿನ ಮೂಲಕ ಹೇಳುವುದಾದರೂ ಉಪ್ಪಿನಿಂದ ನಕಾರಾತ್ಮಕ ಶಕ್ತಿಗೆ ಬೇಗವಾಗಿ ಹೊರಟುಹೋಗುತ್ತದೆ ಉಪ್ಪು ಎಲ್ಲಿ ಇರುವುದಿಲ್ಲವೋ ಆ ಜಾಗದಲ್ಲಿ ಭೂತಪ್ರೇತ ವಾಸ ವಾಗಿರುತ್ತದೆ ಮತ್ತು ಆ ಮನೆಯಲ್ಲಿ ಯಾವುದೇ ರೀತಿಯ ಸುಖ ಸಂಭ್ರಮವು ಇರುವುದಿಲ್ಲ ವಾಸ್ತುಶಾಸ್ತ್ರದ ಅನುಸಾರವಾಗಿ ಉಪ್ಪಿನಲ್ಲಿ ಒಂದು ರೀತಿಯ ಭಿನ್ನವಾದ ಅಂಶವಿರುತ್ತದೆ ಈ ಒಂದು ಕಾರಣದಿಂದ ಮಂತ್ರ ತಂತ್ರಗಳಲ್ಲಿ ಜನರು ಅನ್ನು ಬಳಸುತ್ತಾರೆ ಈ ರೀತಿ ಹೇಳಲಾಗುತ್ತದೆ ಉಪ್ಪು ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಕೆಲವು ಜನರು ವಶೀಕರಣ ದಲ್ಲಿ ಉಪ್ಪನ್ನು ಹೆಚ್ಚಾಗಿ ಬಳಸುತ್ತಾರೆ ಇದೇ ರೀತಿ ಉಪ್ಪನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನೀವು ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರಾಗಬಹುದು ಮೊದಲನೆಯದಾಗಿ ಉಪ್ಪು ಮತ್ತು ಗಾಜು ಇದು ರಾಹು ಕಾರಕ ವಾಗಿರುತ್ತದೆ ಈ ಕಾರಣದಿಂದ ನೀವು ಕಪ್ಪು ಗಾಜಿನ ಬಟ್ಟಲಿನಲ್ಲಿ ಉಪ್ಪನ್ನು ತನ್ನ ಶೌಚಾಲಯದ ಬಳಿ ಏನಾದರೂ ಇದ್ದರೆ ಅಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಯು ನಾಶಗೊಳ್ಳುತ್ತದೆ ಇದರಿಂದ ನೀವು ಏನಾದರೂ ಉಪಾಯ ಮಾಡಿದರೆ ಅಲ್ಲಿರುವ ಸೂಕ್ಷ್ಮಣು ಜೀವಿಗಳು ಸಹ ನಾಶವಾಗುತ್ತದೆ ಸಾಮಾನ್ಯವಾಗಿ ಶೌಚಾಲಯದಲ್ಲಿ ಹೆಚ್ಚಿನ ನಕಾರಾತ್ಮಕ ಶಕ್ತಿಗಳು ಇರುತ್ತದೆ ಅಂತಹ ಸಮಯದಲ್ಲಿ ಆ ನಕಾರಾತ್ಮಕ ಶಕ್ತಿಗಳನ್ನು ಉಪ್ಪುದೂರ ಮಾಡುತ್ತದೆ ಉಪ್ಪಿನ ನೀರಿನಿಂದ ನೀವು ನೆಲವನ್ನು ಹೊರಿಸಿದರೆ ನೀವು ಚಮತ್ಕಾರವನ್ನು ಸಹ ನೋಡಬಹುದು ವೈಜ್ಞಾನಿಕ ದೃಷ್ಟಿಯಿಂದಲೂ ಸಹ ಈ ಉಪಾಯ ತುಂಬಾ ಉತ್ತಮ ಎಂದು ತಿಳಿಸಲಾಗಿದೆ. ನೀವು ಮನೆಯವರು ಸುವ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ವಾರದಲ್ಲಿ ಎರಡು ಬಾರಿಯಾದರೂ ನೀವು ನೆಲವನ್ನು ಒರಸಿ ದರೆ ಈ ರೀತಿ ಮಾಡಿದರೆ ಕಂಡಿತ ನೀವು ಧನಸಂಪತ್ತು ಆಗಮನದಲ್ಲಿ ವೃದ್ಧಿಯನ್ನು ಕಾಣುತ್ತೀರಾ ನಂತರ ಉಪ್ಪು ನಿಮ್ಮ ಮನೆಯನ್ನು ಸಕಾರಾತ್ಮಕ ಶಕ್ತಿಗಳಿಂದ ತುಂಬಿಸುತ್ತದೆ ಮನೆಯ ಉದ್ದಾರಕ್ಕಾಗಿ ಈ ರೀತಿಯ ಉಪಾಯವನ್ನು ನೀವು ಮಾಡುವುದು ಉತ್ತಮ ಸಕಾರಾತ್ಮಕ ಶಕ್ತಿಯ ಎಲ್ಲಿರುತ್ತದೆ ಲಕ್ಷ್ಮೀದೇವಿಯನ್ನು ಮನೆಯ ಒಳಗೆ ಆಹ್ವಾನ ಮಾಡಿದರೆ ಮೂರನೆಯದಾಗಿ ಗಾಜಿನ ಡಬ್ಬದಲ್ಲಿ ಉಪ್ಪು ಮತ್ತು ಲವಂಗವನ್ನು ಹಾಕಿ ಇಡಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತಿನ ಆಗಮನವು ಆಗುತ್ತಲೇ ಇರುತ್ತದೆ ಜೊತೆಗೆ ತಾಯಿ ಲಕ್ಷ್ಮೀದೇವಿಯ ಕೃಪೆಯು ನಿಮ್ಮ ಮೇಲೆ ಯಾವಾಗಲೂ ಇರುತ್ತದೆ ನಾಲ್ಕನೆಯದಾಗಿ ಉಪ್ಪಿನಿಂದ ನೀವು ಕೈಕಾಲುಗಳನ್ನು ತೆರೆದುಕೊಂಡರೆ ಉಪ್ಪಿನ ನೀರಿನಿಂದ ಸ್ನಾನವನ್ನು ಮಾಡಿದರೆ ತುಂಬಾನೆ ಒಳ್ಳೆಯದು ಇದರಿಂದ ಶರೀರವು ತುಂಬಾ ಫ್ರೆಶ್ ಆಗುತ್ತದೆ
2022/05/28 16:02:05
https://thenewsupdates.in/uppina-deepa-hacchi-edarindaguva-prayojana/2158/
mC4
ಕನ್ನಡ ಕನ್ನಡಿಗ ಕರ್ನಾಟಕ: ಡಾ|| ಹೆಚ್. ನರಸಿಂಹಯ್ಯ - ಒಂದು ವ್ಯಕ್ತಿ ಚಿತ್ರ ('ತೆರೆದ ಮನ' ಪುಸ್ತಕದಿಂದ) ಡಾ|| ಹೆಚ್‌. ನರಸಿಂಹಯ್ಯನವರು ೬ನೇ ಜೂನ್ ೧೯೨೦ರಂದು ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಈಗ ಅವರಾರೂ ಇಲ್ಲ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ. ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆ ಮೇಲೆ ಹನ್ನೆರೆಡು ವರ್ಷಗಳು ಪ್ರಿನ್ಸಿಪಲ್‌ರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ಅವರ ಕಾಲದಲ್ಲಿ ಹಲವು ಮಹತ್ತರ ಕಾರ್ಯಗಳ ಸಾಧನೆ. ಈಗ ಎಚ್. ಎನ್. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಪ್ ಕರ್ನಾಟಕದ ಅಧ್ಯಕ್ಷರು. ವಿದ್ಯಾರ್ಥಿ ದೆಶೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಇಲ್ಲಿಯ ತನಕ ಕಾಲೇಜ್ ಹಾಸ್ಟಲೇ ಅವರ ಮನೆ. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದ ಜೀವನ ಒಂದು ವಿಶಿಷ್ಟ ಧಾಖಲೆ. ೧೯೪೨ ನೆಯ ಇಸಿವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್‌ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ 'ಕ್ವಿಟ್ ಇಂಡಿಯಾ' ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ. ಅಮೆರಿಕಾದ ಓಹೈಒ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷದಲ್ಲಿ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಮಟ್ಟದ ಪ್ರಥಮ ಶ್ರೇಣಿ. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲು. ಅವರ ಸರ್ವಸ್ವವನ್ನು ಈ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೌಢ್ಯದ ವಿರುದ್ಧ ಸತತ ಹೋರಾಟ. ಮುವತ್ತು ವರ್ಷಗಳ ಹಿಂದೆ ಬೆಂಗಳೂರು ಸೈನ್ಸ್ ಪೋರಂ (Bangalore Science forum) ಎಂಬ ವಿಜ್ಞಾನ ವೇದಿಕೆಯ ಸ್ಥಾಪಕ ಅಧ್ಯಕ್ಷರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದಾರೆ. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತ ಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರ ವಿಶಿಷ್ಟ ಸೇವೆಗಾಗಿ `ರಾಜ್ಯ ಪ್ರಶಸ್ತಿ` , ಭಾರತ ಸರ್ಕಾರದ `ಪದ್ಮ ಭೂಷಣ`, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್‌ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` (Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ`. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು. ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು. ಮಾನಸಿಕ, ದೈಹಿಕ ನೋವುಗಳ ಮಧ್ಯೆಯೂ ಅವರ ಹಾಸ್ಯ ಮನೋಭಾವವನ್ನು ಕಾಣಬಹುದು. ಸ್ನೇಹಮಯ ಮಾನವತಾವಾದಿ, ವಿಚಾರವಾದಿ. ಒಳ್ಳೆಯ ಅಭ್ಯಾಸಗಳಿಂದ ಕೂಡಿದ ಸ್ವಚ್ಛ, ಸರಳ ಸಂಯಮದ ಜೀವನ. ತೆರೆದ ಮನದಷ್ಟೇ ತೆರೆದ ಜೀವನ. ಅದಮ್ಯ ಆತ್ಮವಿಶ್ವಾಸ. ಜೀವನ ಪರ್ಯಂತ ಹೋರಾಟ. ಕರ್ಮಯೋಗಿ. ಎಪ್ಪತ್ಮೂರರ ಹೊಸ್ತಿನಲ್ಲಿಯೂ ನಿರಂತರ ದುಡಿಮೆ. ರಾಷ್ಟ್ರೀಯವಾದಿ, ಸುಮಾರು ಅರವತ್ತು ವರ್ಷಗಳಿಂದ ಖಾದಿದಾರಿ. ಪಟ್ಟು ಹಿಡಿದು ಕಾರ್ಯಸಾಧಿಸುವ ಮನೋಭಾವ, ದೃಡ ಮನಸ್ಸು. ಅನಾಥ ವಿದ್ಯಾರ್ಥಿಯಾಗಿ ಹಳ್ಳಿಯಿಂದ ಬಂದು ಯಾವ ಜಾತೀಯ, ರಾಜಕೀಯ ಬೆಂಬಲವಿಲ್ಲದೆ ಉನ್ನತ ಸ್ಥಾನಗಳನ್ನು ಗಳಿಸಿ ಐವತ್ತೇಳು ವರ್ಷಗಳ ಹಿಂದೆ ಯಾವ ಶಾಲೆಯಲ್ಲಿ ಓದಿದರೋ, ತದನಂತರ ಯಾವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರೋ ಅದೇ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯಾದ ಪ್ರತಿಷ್ಟಿತ ನ್ಯಾಷನಲ್ ಸೊಸೈಟಿಗೆ ಅಧ್ಯಕ್ಷರಾಗಿರುವುದು ಒಂದು ಅಪೂರ್ವ ಸಾಧನೆ.
2018/07/16 08:32:32
http://kannadakannadigga.blogspot.com/2011/04/blog-post_10.html
mC4
ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಆಕಲು ಬೇಡಿಕೆಯಿಟ್ಟ ಜಾರಕಿಹೊಳಿ ಬ್ರದರ್ಸ್ - Tarun kranti ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆ ಇಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರನ್ನು ನಗರದ ಖಾಸಗಿ ಹೋಟೆಲ್​ನಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ತಾಜ್​ವೆಸ್ಟ್​ ಎಂಡ್ ಹೋಟೆಲ್​ನಲ್ಲಿ ಜಾರಕಿಹೊಳಿ ಸಹೋದರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಿಎಂ ಕುಮಾರಸ್ವಾಮಿ ಅವರಿಗೆ ಜಾರಕಿಹೊಳಿ ಸಹೋದರರು ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಬೆಳಗಾವಿಯಲ್ಲಿ ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಬೇಕು ಹಾಗೂ ಬಳ್ಳಾರಿಯ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ‌ ನೀಡುವ ಬಗ್ಗೆ ಜಾರಕಿಹೊಳಿ ಸಹೋದರರು ಸಿಎಂ ಮುಂದೆ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ ಕುಮಾರಸ್ವಾಮಿ ಅವರು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದು ಬೇಡ, ನಿಮ್ಮ ಅಸಮಾಧಾನಗಳು ಏನೇ ಇದ್ದರೂ ಬಗೆಹರಿಸೋಣ ಎಂದು ತಿಳಿಸಿದ್ದಾರೆ. ಈ ವೇಳೆ ಶಾಸಕ ಬಿ.ನಾಗೇಂದ್ರ ಮತ್ತು ಸಚಿವ ಎಚ್​.ಡಿ.ರೇವಣ್ಣ ಕೂಡ ಸ್ಥಳದಲ್ಲಿ ಹಾಜರಿದ್ದರು. ಇದರ ನಡುವೆ ಕಾಂಗ್ರೆಸ್ ಅತೃಪ್ತ ಎಂಟಕ್ಕೂ ಹೆಚ್ಚು ಜನ ಶಾಸಕರು ಮುಂಬೈ ರೆಸಾರ್ಟ್​ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. //// The post ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಆಕಲು ಬೇಡಿಕೆಯಿಟ್ಟ ಜಾರಕಿಹೊಳಿ ಬ್ರದರ್ಸ್ appeared first on News Belgaum.
2018/12/09 21:18:59
http://tarunkranti.news/%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B2%B8%E0%B3%8D%E0%B2%A4%E0%B2%95%E0%B3%8D%E0%B2%B7%E0%B3%87%E0%B2%AA%E0%B2%95%E0%B3%8D%E0%B2%95%E0%B3%86-%E0%B2%AC%E0%B3%8D%E0%B2%B0/
mC4
ಜಮೀರ್​ ಅಹಮ್ಮದ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್ - Power TV News Home ಪವರ್ ಪಾಲಿಟಿಕ್ಸ್ ಜಮೀರ್​ ಅಹಮ್ಮದ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್ ಜಮೀರ್​ ಅಹಮ್ಮದ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್ ಗದಗ : ಶಾಸಕ ಜಮೀರ್ ಅಹಮ್ಮದ್ ಖಾನ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ ಎಂದು ಸಚಿವ ಜಗದೀಶ್​ ಶೆಟ್ಟರ್ ಗುಡುಗಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ವೇಳೆ ಪೊಲೀಸರ ಗುಂಡೇಟಿಂದ ಮೃತಪಟ್ಟವರ ಕುಟುಂಬಗಳಿಗೆ ಜಮೀರ್ ಅಹಮ್ಮದ್ ಖಾನ್ ಪರಿಹಾರ ನೀಡಿಬೇಕೆಂಬ ವಿಚಾರಕ್ಕೆ ಸಂಬಂಧಟ್ಟಂತೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹ್ಮದ್ ಅವ್ರಿಗೆ ಬರೀ ಜಾತಿ, ಧರ್ಮ ಅನ್ನೋದೇ ಮಾತ್ರ ಕಾಳಜಿ ಇದೆ. ಹೀಗೆ ಪರಿಹಾರ ನೀಡಿದ್ರೆ ಗಲಭೆ ಮಾಡೋರಿಗೆ ಪ್ರಚೋದನೆ ನೀಡಿದಂತೆ ಆಗುತ್ತೆ. ಸಮಾಜ, ಸಮಾಜದ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಬಗ್ಗೆ ಗೊತ್ತೇ ಇಲ್ಲ. ಒಬ್ಬ ರಾಜಕಾರಣಿಯಾಗಿ, ಶಾಸಕನಾಗಿ ಮಾಡುವ ಕರ್ತವ್ಯಕ್ಕೆ ಯಾವಾಗಲೂ ವಿಮುಖರಾಗಿ ನಡೆಯುವ ಕೆಲಸ ಜಮೀರ್ ಮಾಡುತ್ತಿದ್ದಾರೆ ಅಂತ ಶೆಟ್ಟರ್ ವಾಗ್ದಾಳಿ ನಡೆಸಿದ್ರು. ಇದ್ರಲ್ಲಿ ಕೋಮು ದ್ವೇಷ ಮಾಡುವ, ಜೊತೆಗೆ ಜಾತಿ ಇಟ್ಟುಕೊಂಡು ವಾದ ಮಾಡುವ ಕೆಲಸ ಇದೆ. ಜಮೀರ್ ಮಾಡುವ ಕೆಲಸ ಸಮಾಜಕ್ಕೆ ಮಾರಕವಾಗಲಿದೆ ಎಂದರು. ಇನ್ನು ಗಲಭೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನಿಡಿದ್ರು. ಇದೇ ವೇಳೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಸಹ ಗದಗನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಇಂದೊಂದು ಪೂರ್ವ ನಿಯೋಜಿತ ಸಂಚಾಗಿದ್ದು ಕೇವಲ ಒಂದು ವಾಟ್ಸ್​ಆ್ಯಪ್​​ ಮೆಸೇಜ್ ಗೆ ಸಾಕಷ್ಟು ಜನ್ರು ಸೇರೋದು ಅಸಾಧ್ಯ. 2 ಸಾವಿರದಿಂದ 3 ಸಾವಿರ ಜನ್ರು ಸೇರುತ್ತಾರೆ ಎಂದ್ರೆ ಹೇಗೆ ಸಾಧ್ಯ. ಹೀಗಾಗಿ ಇದೊಂದು ಪೂರ್ಣ ನಿಯೋಜಿತ ಸಂಚು. ಇಷ್ಟೆಲ್ಲಾ ಗಲಾಟೆ ಹಿಂಸಾಚಾರ ನಡೆದ್ರು ಕಾಂಗ್ರೆಸ್ ಪಕ್ಷ ಖಂಡಿಸುತ್ತಿಲ್ಲಾ.ಹಿಂದಿನ ಕಾಂಗ್ರೆಸ್ ಸರ್ಕಾರ ಪಿ ಎಫ್ ಐ ಹಾಗೂ ಎಸ್ ಡಿ ಪಿ ಐ ಸಂಘಟನೆ ಮೇಲಿನ ಪ್ರಕರಣ ಹಿಂದಕ್ಕೆ ತೆಗೆದುಕೊಂಡಿತ್ತು ಎಂದು ಹರಿಹಾಯ್ದರು. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ಭಯೋತ್ಪಾದನೆಗೆ ನಿಕಟವಾದ ಸಂಪರ್ಕ ಇದೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದೇ ಕಾಂಗ್ರೆಸ್ ಉದ್ದೇಶವಾಗಿದೆ ಅಂತ‌ ತಿಳಿಸಿದ್ರು. ಇನ್ನು ಸಂಘಟನೆಗಳ ನಿಷೇಧ ಕುರಿತು ಗುರುವಾರ ಕ್ಯಾಬಿನೆಟ್ ನಲ್ಲಿ ನಿರ್ಧಾರವಾಗುತ್ತದೆ. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಸ್ತಿಯನ್ನು ಉತ್ತರ ಪ್ರದೇಶದ ಮಾದರಿಯಲ್ಲಿ ವಸೂಲಿ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ ಎಂದರು.
2020/09/22 11:28:03
https://www.powertvnews.in/gadag-jagadish-shettar/
mC4
ದೇಹ-ಧರಿಸಿರುವ ಕ್ಯಾಮೆರಾದ ನೆರವಿನೊಂದಿಗೆ ಸರ್ಕಾರದ ನೆಟ್‌ವರ್ಕ್ ರಕ್ಷಣೆ | ಒಎಂಜಿ ಪರಿಹಾರಗಳು ಹೆಚ್ಚುತ್ತಿರುವ ಭದ್ರತಾ ಕಾಳಜಿಗಳೊಂದಿಗೆ, ನಗರದ ಕಣ್ಗಾವಲು ಸರ್ಕಾರಕ್ಕೆ ಅವಶ್ಯಕವಾಗಿದೆ. "ಒಎಂಜಿ ಕಾನೂನು ಜಾರಿ - ದೇಹ-ಧರಿಸಿರುವ ಕ್ಯಾಮೆರಾ (ಡಿವಿಆರ್ / ವೈಫೈ / 3 ​​ಜಿ / 4 ಜಿ) / ಡಿಜಿಟಲ್ ಎವಿಡೆನ್ಸ್ ಮ್ಯಾನೇಜ್‌ಮೆಂಟ್ - ಸಿಂಗಾಪುರ್" ನಗರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಿಸುವಲ್ಲಿ ಪೊಲೀಸ್ ಅಧಿಕಾರಿಗಳು, ಸಂಚಾರ ಪೊಲೀಸ್, ಕಸ್ಟಮ್ ಆಡಳಿತ, ಮಿಲಿಟರಿ ಮತ್ತು ಸರ್ಕಾರಿ ಭದ್ರತಾ ಸಿಬ್ಬಂದಿಗೆ ಸಹಾಯವನ್ನು ನೀಡುತ್ತದೆ ನವೀನ ಬಯೋಮೆಟ್ರಿಕ್ ತಂತ್ರಜ್ಞಾನದೊಂದಿಗೆ. ಗಡಿ ಭದ್ರತೆಯನ್ನು ನಿರ್ವಹಿಸಲು ಬಯೋಮೆಟ್ರಿಕ್ ವ್ಯವಸ್ಥೆಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಸ್ಥಾಪಿಸಬಹುದು ಮತ್ತು ಗಡಿಯುದ್ದಕ್ಕೂ ಜನರ ಹರಿವನ್ನು ಪತ್ತೆ ಮಾಡಬಹುದು. ಇದು ವಲಸೆ ತಂತ್ರಜ್ಞಾನಗಳು, ನಿರ್ಗಮನ ಮತ್ತು ಪ್ರವೇಶ ಪ್ರವೇಶ ನಿಯಂತ್ರಣ ವ್ಯವಸ್ಥೆಗಳು ಮತ್ತು ರಾಷ್ಟ್ರೀಯ ಡೇಟಾಬೇಸ್ ನಿಯೋಜನೆಗಳನ್ನು ಒಳಗೊಂಡಿದೆ. ಸರ್ಕಾರಗಳು ತಮ್ಮ ಇಲಾಖೆಗಳ ನಡುವೆ ನಿರ್ಣಾಯಕ ಸಂವಹನವನ್ನು ನೀಡಲು ಸುರಕ್ಷಿತ ಸಾಧನಗಳ ಅಗತ್ಯವಿದೆ. ಅವರ ರಾಜತಾಂತ್ರಿಕ ಇಲಾಖೆಗಳಿಗೆ ಸೂಚನೆಗಳನ್ನು ನೀಡುತ್ತಿರಲಿ, ಅಥವಾ ಸರ್ಕಾರಿ ಉದ್ಯೋಗದಾತರ ಹೊಣೆಗಾರಿಕೆಯನ್ನು ನೀಡಲಿ. ಮುಖ್ಯ ಕಚೇರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಲಿಂಕ್‌ಗಳನ್ನು ಖಚಿತಪಡಿಸಿಕೊಳ್ಳಲು ಅವರು ಹೆಚ್ಚಿನ ಕಾರ್ಯಕ್ಷಮತೆಯ ಕಣ್ಗಾವಲು ಅವಲಂಬಿಸಿದ್ದಾರೆ. ಪೊಲೀಸರು ವಿವಾದಾತ್ಮಕ ಘಟನೆಯಲ್ಲಿ ಭಾಗಿಯಾದಾಗ, ಸಮುದಾಯದ ಸದಸ್ಯರು ಮತ್ತು ಸುದ್ದಿ ಮಾಧ್ಯಮಗಳು ಘಟನೆಯ ಬಿಡಬ್ಲ್ಯೂಸಿ ದೃಶ್ಯಾವಳಿ ಇದೆಯೇ ಎಂದು ತಿಳಿಯಲು ಬಯಸುತ್ತವೆ, ಮತ್ತು ಇಲಾಖೆಯು ಬಿಡಬ್ಲ್ಯೂಸಿಗಳನ್ನು ನಿಯೋಜಿಸದಿದ್ದರೆ, ಸಮುದಾಯದ ಸದಸ್ಯರು ಏಕೆ ಎಂದು ತಿಳಿಯಲು ಬಯಸುತ್ತಾರೆ. ದೇಹ-ಧರಿಸಿರುವ ವೀಡಿಯೊ ಕ್ಯಾಮೆರಾಗಳು ಅಮೂಲ್ಯ ಸಾಧನಗಳಾಗಿವೆ, ಇದನ್ನು ಸಂಚಾರ ನಿಲುಗಡೆಗಳು, ಬಂಧನಗಳು, ಸಮಚಿತ್ತತೆ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ದಾಖಲಿಸಲು ಕಾನೂನು ಜಾರಿಗೊಳಿಸುವವರು ಬಳಸಬಹುದು. ದೇಹ-ಧರಿಸಿರುವ ವೀಡಿಯೊ ಕ್ಯಾಮೆರಾ ವ್ಯವಸ್ಥೆಗಳು ಸಾಮಾನ್ಯವಾಗಿ ಕ್ಯಾಮೆರಾ, ಮೈಕ್ರೊಫೋನ್, ಬ್ಯಾಟರಿ ಮತ್ತು ಆನ್‌ಬೋರ್ಡ್ ಡೇಟಾ ಸಂಗ್ರಹಣೆಯನ್ನು ಒಳಗೊಂಡಿರುತ್ತವೆ. ಮಾದರಿಯನ್ನು ಅವಲಂಬಿಸಿ ಅವುಗಳನ್ನು ದೇಹದ ಮೇಲೆ ವಿವಿಧ ಸ್ಥಳಗಳಲ್ಲಿ ತಲೆಗೆ ಜೋಡಿಸಲು ಅಥವಾ ಧರಿಸಲು ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ಗ್ಯಾಜೆಟ್‌ಗಳ ನವೀನ ಅವಧಿಯಲ್ಲಿ ವಾಸಿಸುತ್ತಿರುವ, ಇತ್ತೀಚಿನ ರೀತಿಯ ಗೇರ್‌ಗಳು ಸಮಾಜದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸಿಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆಯ ಅಗತ್ಯವಾಗಿ ಮಾರ್ಪಟ್ಟಿವೆ. ದೇಹ-ಧರಿಸಿರುವ ಕ್ಯಾಮೆರಾ ಸ್ವಲ್ಪ ಗ್ಯಾಜೆಟ್ ಆಗಿದ್ದು, ಒಬ್ಬ ವ್ಯಕ್ತಿಯು ಕಂಠರೇಖೆ ಅಥವಾ ಜೇಬಿನಿಂದ ಕತ್ತರಿಸಬಹುದು ಮತ್ತು ಇತರರು ಆಕರ್ಷಕವಾದ ಜೋಡಣೆಯನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯು ಅದನ್ನು ರಕ್ಷಣಾತ್ಮಕ ಕ್ಯಾಪ್ ಮೇಲೆ ಅಥವಾ ಕನ್ನಡಕಗಳಾಗಿ ನಿರ್ಮಿಸಬಹುದು. ಈ ಸುಧಾರಿತ ಗ್ಯಾಜೆಟ್‌ನ ಬ್ಯಾಟರಿ ಸ್ಥಿರವಾದ ಅತ್ಯುತ್ತಮ ಖಾತೆಗಳೊಂದಿಗೆ 6 ರಿಂದ 8 ಗಂಟೆಗಳವರೆಗೆ ಮುಂದುವರಿಯುತ್ತದೆ. ಇದು ಸಂಜೆ ಸಮಯದ ಸಮಯದಲ್ಲಿ ಅಥವಾ ಮಂದ ಸ್ಥಳದಲ್ಲಿ ರೆಕಾರ್ಡಿಂಗ್ ಅನ್ನು ರೆಕಾರ್ಡ್ ಮಾಡಬಹುದು. ಭದ್ರತಾ ಸಿಬ್ಬಂದಿಗೆ ಇದು ಅಸಾಧಾರಣವಾಗಿದೆ. ತೀರಾ ಇತ್ತೀಚಿನದು ಒಂದೆರಡು ವರ್ಷಗಳು, ವೆಬ್‌ನ ವಿಸ್ತರಿಸುತ್ತಿರುವ ಬಳಕೆಯನ್ನು ನೋಡಲು ಇದು ತುಂಬಾ ಸ್ಪಷ್ಟವಾಗಿದೆ. ಆದ್ದರಿಂದ, ಪ್ರಸ್ತುತ ಯುಗದಲ್ಲಿ, ಯಾರಾದರೂ ನಿಸ್ಸಂದೇಹವಾಗಿ ಹಲವಾರು ಹಂತಗಳಲ್ಲಿ ವೀಡಿಯೊ ಫಿಲ್ಮ್ ಅನ್ನು ವರ್ಗಾಯಿಸಬಹುದು ಮತ್ತು ಲೈವ್ ಸ್ಪಿಲ್ಲಿಂಗ್ ಅನ್ನು ಪ್ರಾರಂಭಿಸಬಹುದು. ಆ ಪಠ್ಯದಲ್ಲಿ, ದೇಹ-ಧರಿಸಿರುವ ಕ್ಯಾಮೆರಾ ಸರ್ಕಾರಕ್ಕೆ ಅದರ ಸಂಪೂರ್ಣ ಅನುಕೂಲಗಳು ಮತ್ತು ಅನಾನುಕೂಲಗಳ ಜೊತೆಗೆ ಸಂರಕ್ಷಿತ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ನಾವು ಭದ್ರತೆ ಮತ್ತು ಯೋಗಕ್ಷೇಮದ ಬಗ್ಗೆ ಮಾತನಾಡುವಾಗ, ಭದ್ರತಾ ಅಧಿಕಾರಿಗಳು ಅಥವಾ ಪೊಲೀಸ್ ಸಿಬ್ಬಂದಿ ಗಂಟೆ ಬಾರಿಸುತ್ತಾರೆ. ಪ್ರಸ್ತುತ ಅನೇಕ ರಾಜ್ಯ ಸರ್ಕಾರಗಳು ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ದೇಹ-ಧರಿಸಿರುವ ಕ್ಯಾಮೆರಾವನ್ನು ಧರಿಸುವುದನ್ನು ಕಡ್ಡಾಯಗೊಳಿಸಿವೆ. ಈ ಇತ್ತೀಚಿನ ಆವಿಷ್ಕಾರವು ಯಾವುದೇ ಭದ್ರತಾ ಎಚ್ಚರಿಕೆಯ ನಂತರ ಒಂದು ಸಾಮಾನ್ಯ ಚರ್ಚೆಯ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿ ಅಥವಾ ಯಾವುದೇ ಘಟನೆಯಲ್ಲಿ ಸಂಭವಿಸುವ ಯಾವುದೇ ಘಟನೆಗಳನ್ನು ದಾಖಲಿಸಲು ಅವರಿಗೆ ಅಧಿಕಾರ ನೀಡುತ್ತದೆ. ತಪ್ಪುಗಳನ್ನು ಮತ್ತು ಸುರಕ್ಷತಾ ಎಚ್ಚರಿಕೆಗಳನ್ನು ನಿರ್ವಹಿಸುವಲ್ಲಿ ನೇರತೆಯಂತೆ ತೀಕ್ಷ್ಣತೆಯನ್ನು ವಿಸ್ತರಿಸಲು ಇದು ತುಂಬಾ ಉಪಯುಕ್ತವಾಗಿದೆ. ಅದು ಇರಲಿ, ದೇಹ-ಧರಿಸಿರುವ ಕ್ಯಾಮೆರಾಗಳನ್ನು ಪಾಲಿಸುವ ಕಾರ್ಯವು ಅದರ ಆಧಾರ ಹಂತದಲ್ಲಿದೆ, ಆದರೆ ಇದು ನಿಧಾನವಾಗಿ ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿತ ಗೇರ್ ಆಗಿರುತ್ತದೆ ಮತ್ತು ರಾಷ್ಟ್ರದಾದ್ಯಂತ ಪೊಲೀಸ್ ಅಧಿಕಾರಿಗಳಿಗೆ ಒಂದು ಉಡುಪಿನ ತುಣುಕಾಗಿದೆ. ಕೆಲವು ಪ್ರಮುಖ ಪ್ರಕರಣಗಳು ಈ ಆವಿಷ್ಕಾರವನ್ನು ಮುಂಭಾಗದ ಸ್ಥಾನಕ್ಕೆ ಕೊಂಡೊಯ್ದಿವೆ ಮತ್ತು ಅದರ ಹರಡುವಿಕೆಯನ್ನು ವಿಸ್ತರಿಸಿದೆ. ಪ್ರಸ್ತುತ ದೇಹ-ಧರಿಸಿರುವ ಕ್ಯಾಮೆರಾಗಳು ಕಾನೂನು ಅಗತ್ಯ ಜಾಲದಲ್ಲಿ ಮತ್ತೊಂದು ಮಾದರಿಯಾಗಿ ಮಾರ್ಪಟ್ಟಿವೆ. ಕಾನೂನು ದೃ offices ೀಕರಣ ಕಚೇರಿಗಳು ಅದರ ಉಪಯುಕ್ತತೆಯನ್ನು ನಿರ್ಣಯಿಸಲು ಪರೀಕ್ಷಾ ಪ್ರಕರಣ ಯೋಜನೆಗಳೊಂದಿಗೆ ಸಂಪರ್ಕಿಸುತ್ತವೆ. ಬಳಕೆ ದೇಹ-ಧರಿಸಿರುವ ಕ್ಯಾಮೆರಾಗಳು ಪೊಲೀಸ್ ವಿಭಾಗಗಳ ನೇರತೆ ಮತ್ತು ಜವಾಬ್ದಾರಿಯನ್ನು ವಿವರಿಸುತ್ತದೆ. ದೇಹ-ಧರಿಸಿರುವ ಕ್ಯಾಮೆರಾಗಳನ್ನು ಬಳಸಿಕೊಂಡು ಪಾಲಿಶ್ ಮಾಡಿದ ವಿಧಾನ ಮತ್ತು ಪೊಲೀಸರ ನಡವಳಿಕೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಇದು ಪೊಲೀಸರಲ್ಲಿ ಸಿದ್ಧತೆಯನ್ನು ವಿಸ್ತರಿಸುತ್ತದೆ. ಅವರು ತಮ್ಮ ಚಟುವಟಿಕೆಗಳು ಮತ್ತು ಒಟ್ಟಾರೆ ಜನಸಂಖ್ಯೆಯೊಂದಿಗಿನ ಒಡನಾಟವನ್ನು ಹೆಚ್ಚು ಗಮನದಲ್ಲಿಟ್ಟುಕೊಳ್ಳುತ್ತಾರೆ ಮತ್ತು ಶಂಕಿತರನ್ನು ಇರಿಸಿಕೊಳ್ಳಲು ಮತ್ತು ಅಧಿಕಾರದ ದುರುಪಯೋಗವನ್ನು ಉಳಿಸಿಕೊಳ್ಳಲು ಮುಖ್ಯವಾದ ಅಧಿಕಾರದ ಬಳಕೆಯ ನಡುವೆ ಹೆಚ್ಚು ದೂರ ಹೋಗಲು ಹೆಚ್ಚು ಹಿಂಜರಿಯುತ್ತಾರೆ. ಕೇಂದ್ರೀಕರಿಸುತ್ತದೆ ಜನರು ತಮ್ಮನ್ನು ತಾವು ವೀಕ್ಷಣೆಗೆ ಒಳಪಡಿಸಿದಾಗ ಅವರ ನಡವಳಿಕೆ ಬದಲಾಗುತ್ತದೆ ಎಂದು ವಿವಿಧ ಮೂಲಗಳಿಂದ ನಿರೂಪಿಸಲಾಗಿದೆ. ದೇಹ-ಧರಿಸಿರುವ ಕ್ಯಾಮೆರಾದ ಮೇಲ್ವಿಚಾರಣೆ ಮತ್ತು ರೆಕಾರ್ಡಿಂಗ್ ಅಡಿಯಲ್ಲಿ ಅವರು ತಮ್ಮನ್ನು ನೋಡಿದಾಗ ಅವರು ಹೆಚ್ಚು ವಿಧೇಯರಾಗುತ್ತಾರೆ ಮತ್ತು ರೆಕಾರ್ಡಿಂಗ್ ಮಾಡುವ ವ್ಯಕ್ತಿಯೊಂದಿಗೆ ಅವರ ಸಹಯೋಗವನ್ನು ಮಾರ್ಪಡಿಸುತ್ತಾರೆ. ಕ್ಯಾಮೆರಾದ ಕಣ್ಣು ಅವುಗಳನ್ನು ನೋಡುವ ವಿಧಾನದ ಬಗ್ಗೆ ತಿಳಿದಿರುವ ಜನರು, ಸಾಮಾನ್ಯವಾಗಿ ನೋಡುಗರು ಪ್ರಮಾಣಿತ ಎತ್ತಿಹಿಡಿಯುವ ಅಂಶವಾಗಿದ್ದಾಗ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಅಥವಾ ನಡವಳಿಕೆಯನ್ನು ಗ್ರಹಿಸುತ್ತಾರೆ ಎಂಬುದನ್ನು ಒಟ್ಟುಗೂಡಿಸಿದ ಪುರಾವೆ ತೋರಿಸುತ್ತದೆ. ಅಧಿಕಾರಿಯ ವೃತ್ತಿಯಲ್ಲಿ ಕೆಲವು ಬಾರಿ ಅವರು ಸೆರೆಹಿಡಿಯುವ ವ್ಯಕ್ತಿ ಮತ್ತು ಅವರು ದೃಶ್ಯದಲ್ಲಿ ಪ್ರಸ್ತುತಪಡಿಸುವ ಮುನ್ನಡೆಯು ಪ್ರಾಥಮಿಕ ನ್ಯಾಯಾಲಯಕ್ಕಾಗಿ ನ್ಯಾಯಾಲಯದಲ್ಲಿ ಭೇಟಿಯಾದಾಗ ನಂಬಲಾಗದಷ್ಟು ವಿಭಿನ್ನ ವ್ಯತ್ಯಾಸವಾಗಿದೆ. ಭವ್ಯವಾಗಿ ಮಾತನಾಡುವ ಪರಿಣಿತ ಉಡುಪಿನ ಪ್ರತಿಸ್ಪಂದಕನು ಯುದ್ಧದೊಂದಿಗೆ ಸಂಬಂಧ ಹೊಂದಿದ್ದ ಮತ್ತು ಬ್ಯಾಟರಿಗಾಗಿ ಇರಿಸಲಾಗಿರುವ ಮಾದಕ ಫಲಾನುಭವಿಗಿಂತ ಬಹಳ ಭಿನ್ನವಾಗಿದೆ. ನ್ಯಾಯಾಲಯವು ವೀಡಿಯೊ ರೆಕಾರ್ಡಿಂಗ್ ಅನ್ನು ನೋಡಿದಾಗ ಅನಿಸಿಕೆ ತುಂಬಾ ಅಸಾಧಾರಣವಾಗಿದೆ ಎಂದು ತಜ್ಞರು ದೃ saw ವಾಗಿ ನೋಡಿದರು. ಸ್ವರ್ಗೀಯ ಸೀಸವನ್ನು ಹೊಂದಿರುವ ಸಮವಸ್ತ್ರದಲ್ಲಿ ಪರಿಣಿತರಾಗಿ ಧರಿಸಿರುವ ಪ್ರತಿವಾದಿಯನ್ನು ಪತ್ತೆಹಚ್ಚಲು ನ್ಯಾಯಾಲಯಕ್ಕೆ ಇಳಿಯಲು ಇದು ಅಸಾಧಾರಣವಾಗಿದೆ, ಅದು ಸೆರೆಹಿಡಿಯಲ್ಪಟ್ಟ ವ್ಯಕ್ತಿಯಂತೆಯೇ ಅಲ್ಲ. ಆ ವ್ಯಕ್ತಿಯ ನಿಜವಾದ ಪಾತ್ರ ಮತ್ತು ಮನಸ್ಸಿನ ಚೌಕಟ್ಟನ್ನು ಹಿಡಿಯಲು ಕ್ಯಾಮೆರಾವನ್ನು ಬಳಸುವುದರಿಂದ ಪ್ರಾಥಮಿಕಕ್ಕೆ ಸಂಬಂಧಿಸಿದಂತೆ ಉಪಯುಕ್ತವಾಗಬಹುದು. ಜೊತೆಗೆ ಕಲ್ಪಿಸಬಹುದಾದ ನಡವಳಿಕೆಯ ಹೊಂದಾಣಿಕೆಗಳು, ಸಂಸ್ಥೆಗಳಿಗೆ ದೇಹ-ಧರಿಸಿರುವ ಕ್ಯಾಮೆರಾಗಳ ಇತರ ಗ್ರಹಿಸಬಹುದಾದ ಅನುಕೂಲಗಳು ಸ್ಥಳೀಯ ಆಕ್ಷೇಪಣೆಗಳು ಕಡಿಮೆಯಾಗುತ್ತವೆ ಮತ್ತು ವಿದ್ಯುತ್ ಘಟನೆಗಳ ಅಧಿಕೃತ ಬಳಕೆ. 2012 ರಲ್ಲಿ, ಸಿಟಿ ಆಫ್ ರಿಯಾಲ್ಟೊ ಪೊಲೀಸ್ ಇಲಾಖೆ, ಯುನೈಟೆಡ್ ಕಿಂಗ್‌ಡಮ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗಿನ ಸಂಬಂಧದಲ್ಲಿ, ಬಾಡಿ ಕ್ಯಾಮೆರಾಗಳನ್ನು ಧರಿಸಿದ ಪೊಲೀಸರ ಫಲಿತಾಂಶಗಳು ಮತ್ತು ಪರಿಣಾಮಗಳ ಕುರಿತು ವರ್ಷಪೂರ್ತಿ ವರದಿಯನ್ನು ನೀಡಿತು. ಒಂದು ವರ್ಷದಲ್ಲಿ, ವಿಭಿನ್ನ ವಾಚ್ ಚಲನೆಗಳಿಗೆ ಕ್ಯಾಮೆರಾಗಳನ್ನು ನೀಡಲಾಗಿದ್ದರೆ, ಇತರರು ಖಂಡಿತವಾಗಿಯೂ ಇಲ್ಲ. ಪರೀಕ್ಷೆಯು ವಿವಿಧ ಸಂದರ್ಭಗಳಲ್ಲಿ ವಿವಿಧ ಚಲನೆಗಳಿಗೆ ಸುಲಭವಾದ ಉದಾಹರಣೆಯಾಗಿದೆ. ವರ್ಷವಿಡೀ ಸಮಯದ ನಂತರ, ಫಲಿತಾಂಶಗಳು ಆಘಾತಕಾರಿ. ಬಾಡಿ ಕ್ಯಾಮೆರಾಗಳನ್ನು ವಿಂಗಡಿಸಲಾದ ಕೂಟಗಳು ಹಿಂದಿನ ವರ್ಷಕ್ಕಿಂತ 60% ರಷ್ಟು ವಿದ್ಯುತ್ ಬಳಕೆಯ ಸಂಭವವನ್ನು ಕಡಿಮೆಗೊಳಿಸಿದವು. ಹೋಲಿಸಬಹುದಾದ ಸಭೆಯ ಬಗ್ಗೆ ಸ್ಥಳೀಯ ಕುಂದುಕೊರತೆಗಳನ್ನು ಹಿಂದಿನ ವರ್ಷದ ನಿರ್ಧಾರಗಳಿಗಿಂತ 88% ರಷ್ಟು ಕಡಿಮೆ ಮಾಡಲಾಗಿದೆ ಎಂದು ಪರೀಕ್ಷೆಯು ಪ್ರಕಟಿಸಿತು. ರಿಯಾಲ್ಟೊ ಪೊಲೀಸ್ ಮುಖ್ಯಸ್ಥರು ಕುಂದುಕೊರತೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಥವಾ ನಿವಾಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ಇದು ಎರಡರಲ್ಲೂ ಒಂದು ತಟ್ಟೆಯಾಗಿದೆ. ಇನ್ನೊಂದರಲ್ಲಿ ದೇಹ-ಧರಿಸಿರುವ ಕ್ಯಾಮೆರಾಗಳ ಬಗ್ಗೆ ಸುರಕ್ಷಿತ ವ್ಯವಸ್ಥೆ ಮತ್ತು ಅದು ಸ್ಥಳೀಯ ಗೊಣಗಾಟಗಳನ್ನು ಹೇಗೆ ಕಡಿಮೆ ಮಾಡುತ್ತದೆ, ಮೆಸಾ ಪೊಲೀಸ್ ಇಲಾಖೆ ವರ್ಷಪೂರ್ತಿ ವರದಿಯನ್ನು ನಿರ್ದೇಶಿಸಿತು, ವಿಶೇಷವಾಗಿ ಕುಂದುಕೊರತೆಗಳನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸಿದೆ. ಪರೀಕ್ಷಾ ಪ್ರಕರಣ ಕಾರ್ಯಕ್ರಮವು ಎರಡು ಕೂಟಗಳನ್ನು ಒಳಗೊಂಡಿತ್ತು; ನಿಯೋಜಿಸಲಾದ ಬಾಡಿ ಕ್ಯಾಮೆರಾಗಳನ್ನು ಹೊಂದಿರುವ 50 ವಾಚ್ ಅಧಿಕಾರಿಗಳು ಮತ್ತು ಬಾಡಿ ಕ್ಯಾಮೆರಾಗಳಿಲ್ಲದ 50. ಎರಡೂ ಕೂಟಗಳನ್ನು ಡೋಲ್ಡ್ watch ಟ್ ವಾಚ್ ಕಟ್ಟುಪಾಡುಗಳು ಮತ್ತು ಸಾಮಾಜಿಕ ಆರ್ಥಿಕತೆಯಲ್ಲಿ ಹೋಲಿಸಬಹುದಾಗಿದೆ. ಅರಿ z ೋನಾ ವಿಶ್ವವಿದ್ಯಾನಿಲಯದ ತಂಡವಾಗಿ ನಿರ್ದೇಶಿಸಲಾದ ಪರೀಕ್ಷೆಯು ಬಾಡಿ ಕ್ಯಾಮೆರಾಗಳಿಲ್ಲದ ವಾಚ್ ಅಧಿಕಾರಿಗಳಿಗೆ ಅನೇಕ ಪಟ್ಟು ಹೆಚ್ಚು ನಿವಾಸಿಗಳ ಪ್ರತಿಭಟನೆಯನ್ನು ಹೊಂದಿದೆ ಎಂದು ಸಂಕ್ಷಿಪ್ತಗೊಳಿಸಿದೆ. ಇದಲ್ಲದೆ, ದೇಹ-ಧರಿಸಿರುವ ಕ್ಯಾಮೆರಾಗಳನ್ನು ಧರಿಸಿದ್ದ ವಾಚ್ ಅಧಿಕಾರಿಗಳು ವಿದ್ಯುತ್ ಕುಂದುಕೊರತೆಗಳ ಬಳಕೆಯಲ್ಲಿ 75% ಇಳಿಕೆ ಮತ್ತು ದೇಹದ ಕ್ಯಾಮೆರಾಗಳಿಲ್ಲದ ಹಿಂದಿನ ವರ್ಷದಿಂದ ಸ್ಥಳೀಯ ಆಕ್ಷೇಪಣೆಗಳಲ್ಲಿ 40% ಇಳಿಕೆ ಕಂಡುಬಂದಿದೆ ಎಂದು ತನಿಖೆಯು ಕೊನೆಗೊಳಿಸಿತು. ಬಳಸಿಕೊಳ್ಳಲಾಗಿದೆ. ಎರಡು ಪರೀಕ್ಷೆಗಳು ದೇಹ-ಧರಿಸಿರುವ ಕ್ಯಾಮೆರಾಗಳು ಸರ್ಕಾರಕ್ಕೆ ಸುರಕ್ಷಿತ ವ್ಯವಸ್ಥೆಯನ್ನು ಒದಗಿಸುತ್ತವೆ ಎಂದು ತೋರಿಸಿಕೊಟ್ಟಿದ್ದು, ಆಶ್ಚರ್ಯಕರ ಫಲಿತಾಂಶಗಳು ದೇಹ-ಧರಿಸಿರುವ ಕ್ಯಾಮೆರಾಗಳು ನಿವಾಸಿಗಳ ಆಕ್ಷೇಪಣೆಯನ್ನು ಕಡಿಮೆಗೊಳಿಸುತ್ತವೆ. ಎಪಿಸೋಡ್ ಅನ್ನು ರೆಕಾರ್ಡ್ ಮಾಡುವ ಗಮನದಿಂದ ಎರಡು ಬದಿಗಳನ್ನು ನಿರ್ದೇಶಿಸಲು ಇದು ಸೀಮಿತ ಮಟ್ಟಿಗೆ ನಿರೀಕ್ಷಿಸಲಾಗಿದೆ. ಕ್ಯಾಮೆರಾದ ಎರಡು ಬದಿಗಳಲ್ಲಿ ನಡವಳಿಕೆಯನ್ನು ಹೆಚ್ಚಿಸುತ್ತದೆ ಎಂದು ನಾವು imagine ಹಿಸಿದ್ದರಿಂದ ಅವರು ರೆಕಾರ್ಡಿಂಗ್ ಮಾಡುತ್ತಿದ್ದಾರೆ ಎಂದು ವ್ಯಕ್ತಿಗಳಿಗೆ ತಿಳಿಸುವಂತೆ ನಾವು ನಮ್ಮ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ಗ್ರೀನ್ಸ್‌ಬೊರೊ ಪೊಲೀಸ್ ಮುಖ್ಯಸ್ಥ ಕೆನ್ ಮಿಲ್ಲರ್ ಹೇಳುತ್ತಾರೆ. ವೀಡಿಯೊ ರೆಕಾರ್ಡಿಂಗ್ ದೇಹದಿಂದ ಧರಿಸಿರುವ ಕ್ಯಾಮೆರಾಗಳನ್ನು ಬಳಸುವ ಅಧಿಕಾರಿಗಳಿಂದ ಕಚೇರಿಯ ಆಂತರಿಕ ಸಮಸ್ಯೆಗಳನ್ನು ಪರಿಹರಿಸಲು ಬಳಸಿಕೊಳ್ಳಬಹುದು. ಇದಕ್ಕಿಂತ ಹೆಚ್ಚಾಗಿ, ಇದು ಅಮೂಲ್ಯವಾದ ತಯಾರಿಕೆಯ ಸಾಧನವಾಗಿದೆ. ಬಾಡಿ ಕ್ಯಾಮೆರಾ ವಿಡಿಯೋ ಬಳಕೆಯ ಕುರಿತು ರಾಷ್ಟ್ರದಾದ್ಯಂತದ ಪೊಲೀಸ್ ಮುಖ್ಯಸ್ಥರಿಂದ ನಡೆಯುತ್ತಿರುವ ಅಧ್ಯಯನದಲ್ಲಿ, 94% ರಷ್ಟು ಜನರು ಅಧಿಕೃತ ನಡವಳಿಕೆಯನ್ನು ಪರಿಹರಿಸಲು ಅಥವಾ ತಯಾರಿ ಸಾಧನವಾಗಿ ಅಧ್ಯಕ್ಷರ ಸಮೀಕ್ಷೆಗೆ ಇದನ್ನು ಬಳಸುತ್ತಾರೆ ಎಂದು ವ್ಯಕ್ತಪಡಿಸಿದ್ದಾರೆ. ಬಾಡಿ ಕ್ಯಾಮೆರಾ ವೀಡಿಯೊ ಮಾದರಿಗಳನ್ನು ತಯಾರಿಸುವ ಬೃಹತ್ ಅಳತೆಯನ್ನು ಹೊಂದಿದೆ. ಚಲನಚಿತ್ರವನ್ನು ಪರಿಶೀಲಿಸುವಾಗ, ಕಾರ್ಯನಿರ್ವಾಹಕರು ಪ್ರಸ್ತುತ ಕಾರ್ಯತಂತ್ರಗಳನ್ನು ನಿರ್ಣಯಿಸಬಹುದು ಮತ್ತು ನಿಜವಾದ ಅಧಿಕೃತ ಅನುಭವಗಳನ್ನು ಅವಲಂಬಿಸಿ ಮಾರ್ಪಾಡುಗಳನ್ನು ಮಾಡಬೇಕೆ ಎಂದು ಆಯ್ಕೆ ಮಾಡಬಹುದು. ಕ್ಷೇತ್ರದಲ್ಲಿ ನಿಜವಾದ ತರುವಿಕೆಯ ಮೇಲೆ ಅವಲಂಬಿತವಾಗಿರುವ ತನ್ನ ಅಧಿಕಾರಿಗಳನ್ನು ತಯಾರಿಸಲು ತಯಾರಿ ಕಚೇರಿ ಸಾಕಷ್ಟು ನಿರ್ದಿಷ್ಟ ಸಂದರ್ಭಗಳನ್ನು ರಚಿಸಬಹುದು. ಇದಲ್ಲದೆ, ಅಧಿಕೃತ ಸಿದ್ಧತೆ ಈಗ ವೈಯಕ್ತಿಕ ಕಚೇರಿಗೆ ಅಥವಾ ವಿಭಾಗದ ಒಳಗೆ ನಿಖರವಾಗಿರಲು ಸಾಧ್ಯವಾಗುತ್ತದೆ. ಬಹುಶಃ ಕಾನೂನು ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆಯ ಸ್ಥಾನವು ಅಪರಾಧ ಪರೀಕ್ಷೆಗಳಿಗೆ ಪರಿಶೀಲನೆಯನ್ನು ಹಿಡಿಯುತ್ತದೆ ಮತ್ತು ವರದಿ ಮಾಡುತ್ತದೆ. ಮತ್ತೊಮ್ಮೆ, ಇದು ಕಾನೂನು ಉಲ್ಲಂಘಿಸುವವರ ಪ್ರವರ್ಧಮಾನಕ್ಕೆ ಸಹಾಯ ಮಾಡುವ ಮತ್ತೊಂದು ಸಾಧನವಾಗಿದೆ. ತತ್ವ ತಪ್ಪಾದ ದೃಶ್ಯಕ್ಕೆ ಅಧಿಕಾರಿಗಳು ಉತ್ತರಿಸುವ ಹಂತದಲ್ಲಿ, ಅವರ ಏಕಾಗ್ರತೆ ಮತ್ತು ಪ್ರಾಥಮಿಕ ಮೂಲಭೂತ ಕಾಳಜಿಯು ದೃಶ್ಯವನ್ನು ರಕ್ಷಿಸುತ್ತದೆ ಮತ್ತು ವೈದ್ಯಕೀಯ ನೆರವು ಕ್ರಮಗಳೊಂದಿಗೆ ದುರದೃಷ್ಟಕರ ಸಾವುನೋವುಗಳಿಗೆ ಸಹಾಯ ಮಾಡುತ್ತದೆ. ಅವರು ತಮ್ಮ ಸಭೆಗಳನ್ನು ಪ್ರಾರಂಭಿಸಿದಾಗ ಮತ್ತು ಏನಾಯಿತು ಎಂಬುದನ್ನು ಜೋಡಿಸಲು ಪ್ರಯತ್ನಿಸುತ್ತಿದ್ದಂತೆ, ಪ್ರತಿಯೊಂದು ಸೂಕ್ಷ್ಮತೆಗಳ ಬಗ್ಗೆ ಯೋಚಿಸುವುದು ಕಷ್ಟ. ದೇಹ-ಧರಿಸಿರುವ ಕ್ಯಾಮೆರಾವನ್ನು ಬಳಸುವುದರ ಮೂಲಕ, ಅಧಿಕಾರಿಯು ದೃಶ್ಯವನ್ನು ಮತ್ತು ಹಲವಾರು ಕ್ಷಣ ಸೂಕ್ಷ್ಮತೆಗಳನ್ನು ತಪ್ಪಿಸಿಕೊಳ್ಳಬಹುದು. ಅವರು ತಪ್ಪಾದ ಸ್ಥಳದ ಸುತ್ತಲೂ ಅಡ್ಡಾಡುತ್ತಿರುವಾಗ, ಆರಂಭಿಕ ಉತ್ತರದಂತೆ ಅವರು ಅದನ್ನು ದಾಖಲಿಸಿದ್ದಾರೆ. ಈ ಸಾಧನವು ಅಧಿಕಾರಿಗಳಿಗೆ ಸಾಕಷ್ಟು ಡೇಟಾವನ್ನು ನೀಡಬಹುದು, ಅದು ಸ್ವಲ್ಪ ಸಮಯದ ನಂತರ ಶಾಂತಿಯುತವಾಗಿರುವಾಗ ಮತ್ತು ಧಾವಿಸದಿದ್ದಾಗ ಉತ್ತಮವಾಗಿ ತೋರಿಸುತ್ತದೆ. ಇನ್-ವೆಹಿಕಲ್ ಕ್ಯಾಮೆರಾಗಳಂತೆ ಅಲ್ಲ, ದೇಹ-ಧರಿಸಿರುವ ಕ್ಯಾಮೆರಾಗಳು ತಪ್ಪಾದ ದೃಶ್ಯದ ಸುತ್ತಲೂ ಅಧಿಕಾರಿಗಳ ಚಲನೆ ಮತ್ತು ವಿವಿಧ ವ್ಯಕ್ತಿಗಳನ್ನು ಭೇಟಿಯಾಗುವುದರಿಂದ ನಡೆಯುವ ಎಲ್ಲವನ್ನೂ ದಾಖಲಿಸುತ್ತದೆ ಎಂದು ಡಾಲ್ಟನ್ ಪೊಲೀಸ್ ಮುಖ್ಯಸ್ಥ ಪಾರ್ಕರ್ ಹೇಳುತ್ತಾರೆ. ದೇಹವನ್ನು ಧರಿಸಿರುವ ಕ್ಯಾಮೆರಾಗಳು ನಿಖರವಾಗಿ ಡೇಟಾವನ್ನು ಉಳಿಸುವಲ್ಲಿ ನಂಬಲಾಗದಷ್ಟು ಮೌಲ್ಯಯುತವಾಗಿವೆ. ನೆರೆಹೊರೆಯ ಈ ಆವಿಷ್ಕಾರವನ್ನು ತೆಗೆದುಕೊಳ್ಳಲು ಪರೀಕ್ಷಕರು ಹೆಚ್ಚುವರಿಯಾಗಿ ಅಧಿಕಾರ ಹೊಂದಿದ್ದಾರೆ ಮತ್ತು ಉತ್ಸಾಹದಿಂದ ಸಂಘಟನೆಗಳನ್ನು ಆಕರ್ಷಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ತೋರಿಸಲು ವೀಡಿಯೊ ರೆಕಾರ್ಡ್ ಹೊಂದಿರುವುದು ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಕೆಂಟುಕಿಯಲ್ಲಿ, ನೆರೆಹೊರೆಯ ಗಾರ್ಡ್ ವಕೀಲರು ದೇಹ-ಧರಿಸಿರುವ ಕ್ಯಾಮೆರಾ ವೀಡಿಯೊವನ್ನು ನೀಡುವ ಬಳಕೆಯ ಬಗ್ಗೆ ಅಭಿಪ್ರಾಯಪಟ್ಟರು. ಚಾರ್ಜ್ ಮಾಡಬಹುದಾದ ಒಳಸಂಚನ್ನು ಅರಿಯಲು ಇದು ಅವರಿಗೆ ತುಂಬಾ ಸರಳವಾಗಿಸುತ್ತದೆ, ಇದನ್ನು ನೋಡಲು ನಿಮಗೆ ನ್ಯಾಯಾಧೀಶರ ಮಂಡಳಿಯ ಅಗತ್ಯವಿಲ್ಲದ ಕಾರಣ ಅವರ ಹೆಚ್ಚಿನ ಅನುಕೂಲವಾಗಲಿದೆ. ವೀಡಿಯೊ ದೃ mation ೀಕರಣವನ್ನು ನ್ಯಾಯಾಲಯದಲ್ಲಿ ನೀಡಿದಾಗ ಕೌಟುಂಬಿಕ ಕ್ರೂರ ಸಂದರ್ಭಗಳಿಗೆ ಇದು ಬಹುಪಾಲು ಮಾನ್ಯವಾಗಿರುತ್ತದೆ. ಸಾಮಾನ್ಯವಾಗಿ, ವಿಶೇಷವಾಗಿ ಕಿರುಕುಳದ ರೇಖಾಚಿತ್ರವಿದ್ದರೆ ಮತ್ತು ಶೋಷಿತ ಜನರು ಭಯಭೀತರಾಗಿದ್ದರೆ, ಅವರು ಆರೋಪಗಳನ್ನು ಹೇರದಂತೆ ಬಯಸುತ್ತಾರೆ. ಸಾಮಾಜಿಕ ಸಂಬಂಧ ದೃ mation ೀಕರಣವು ತ್ರಾಸದಾಯಕ, ಉತ್ತಮ ಸನ್ನಿವೇಶವಾಗಿದೆ. ಸಹಾಯ ಮಾಡದ ದುರದೃಷ್ಟಕರ ಸಾವುನೋವುಗಳು ಮತ್ತು ಪ್ರಾಥಮಿಕವು ಎಲ್ಲಾ ಉದ್ದೇಶಗಳು ಮತ್ತು ಉದ್ದೇಶಗಳಿಗಾಗಿ ima ಹಿಸಲಾಗದು.
2021/03/04 21:35:07
https://omg-solutions.com/kn/%E0%B2%A6%E0%B3%87%E0%B2%B9-%E0%B2%A7%E0%B2%B0%E0%B2%BF%E0%B2%B8%E0%B2%BF%E0%B2%B0%E0%B3%81%E0%B2%B5-%E0%B2%95%E0%B3%8D%E0%B2%AF%E0%B2%BE%E0%B2%AE%E0%B2%B0%E0%B2%BE/%E0%B2%A6%E0%B3%87%E0%B2%B9-%E0%B2%A7%E0%B2%B0%E0%B2%BF%E0%B2%B8%E0%B2%BF%E0%B2%B0%E0%B3%81%E0%B2%B5-%E0%B2%95%E0%B3%8D%E0%B2%AF%E0%B2%BE%E0%B2%AE%E0%B3%86%E0%B2%B0%E0%B2%BE%E0%B2%A6-%E0%B2%B8%E0%B2%B9%E0%B2%BE%E0%B2%AF%E0%B2%A6%E0%B2%BF%E0%B2%82%E0%B2%A6-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%97%E0%B2%B3-%E0%B2%A8%E0%B3%86%E0%B2%9F%E0%B3%8D%E2%80%8C%E0%B2%B5%E0%B2%B0%E0%B3%8D%E0%B2%95%E0%B3%8D-%E0%B2%B0%E0%B2%95%E0%B3%8D%E0%B2%B7%E0%B2%A3%E0%B3%86/
mC4
ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ.ದೇವೇಗೌಡ – Public TV Home/Karnataka/ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ.ದೇವೇಗೌಡ ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತಕ್ಷಣ ನಾವು ಬಿಜೆಪಿಗೆ ಹೊಗುತ್ತೇವೆ ಎಂದಲ್ಲ. ಹಾಸನ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಪ್ರಧಾನಿಯವರಲ್ಲಿ ಚರ್ಚಿಸೋಕೆ ಹೋಗಿದ್ದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಎಚ್‌.ಡಿ.ದೇವೇಗೌಡ ಮತ್ತು ಪ್ರಧಾನಿ ಮೋದಿ ಭೇಟಿ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ದೇವೇಗೌಡ, ಮೋದಿ ಭಾಯಿಭಾಯಿ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಸಿದ್ದು ಟೀಕೆಗೆ ತಿರುಗೇಟು ನೀಡಿರುವ ಎಚ್‌.ಡಿ.ದೇವೇಗೌಡ, ಪ್ರಧಾನ ಮಂತ್ರಿಯವರನ್ನು ನಾನು ಸಾಕಷ್ಟು ಸಲ ಭೇಟಿ ಮಾಡಿದ್ದೇನೆ. ಮನಮೋಹನ್ ಸಿಂಗ್, ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದೆ. ನಾನು ಒಳಗೆ ಹೊರಗೆ ರಾಜಕೀಯ ಮಾಡೋ ಪ್ರಶ್ನೆ ಬೇರೆ. ಪ್ರಧಾನಿ ಭೇಟಿ ಮಾಡೋಕೆ ಸಿದ್ದರಾಮಯ್ಯ ಪರ್ಮಿಷನ್ ತಗೊಂಡು ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಆಯ್ಕೆ ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು, ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು: ಬಿಜೆಪಿ ಬೆಳಗ್ಗೆ ಒಂದು, ರಾತ್ರಿ ಒಂದು ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ. ನೇರವಾಗಿ ರಾಜಕೀಯ ಮಾಡುವ ವ್ಯಕ್ತಿ ನಾನು. ಇನ್ನು ಬಿಜೆಪಿ ಅಥವಾ ಕಾಂಗ್ರೆಸ್‍ಗೆ ಬೆಂಬಲ ಕೊಡುವುದು 2023ರ ಚುನಾವಣೆಯಲ್ಲಿ ತಿಳಿಯುತ್ತದೆ ಎಂದು ಮಾಹಿತಿ ನೀಡಿದರು. ರೈತರ ಸಾಲ ಮನ್ನಾ ಮಾಡಿ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು. ರೈತನ ಮಗನಾಗಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿಯಂತೆ ದೇಶದಲ್ಲಿ ಯಾರೂ ಆಡಳಿತ ನಡೆಸಿಲ್ಲ. ಕುಮಾರಸ್ವಾಮಿ ನನ್ನ ಅನುಮತಿ ಇಲ್ಲದೇ ಬಿಜೆಪಿಗೆ ಹೋಗಿ ಸರ್ಕಾರ ಮಾಡಿದ್ದರು. ನಂತರ ಕಾಂಗ್ರೆಸ್‍ನವರು ಮನೆ ಬಾಗಿಲಿಗೆ ಬಂದು ಬೇಡಿಕೊಂಡು ಸಿಎಂ ಮಾಡಿದರು. ಮತ್ತೆ ಈ ಸರ್ಕಾರವನ್ನು ತೆಗೆದವರು ಅವರೇ ಕಿಡಿಕಾರಿದರು. ಇದನ್ನೂ ಓದಿ: FD Interest- ಈ 2 ಬ್ಯಾಂಕ್‍ಗಳಲ್ಲಿನ ಠೇವಣಿಗೆ ಸಿಗುತ್ತೆ ಹೆಚ್ಚು ಬಡ್ಡಿ ದರ ಕಾಂಗ್ರೆಸ್‍ನವರು ಜೆಡಿಎಸ್‍ಗೆ ಬೆಂಬಲ ನೀಡಬೇಕಾದರೆ ನಾನು ಬೇಡ ಅಂದೆ. ಕಾಂಗ್ರೆಸ್‍ನವರು ಸಮ್ಮಿಶ್ರ ಸರ್ಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಮೈತ್ರಿ ಸರ್ಕಾರ ತೆಗೆದವರು ಯಾರು? ಉತ್ತರ ಕೊಡುತ್ತಾರಾ? ಕುಮಾರಸ್ವಾಮಿ ಸರ್ಕಾರ ಭ್ರಷ್ಟ ಸರ್ಕಾರ ಎನ್ನುತ್ತಾರೆ. ಕಾಂಗ್ರೆಸ್‍ನವರ ಹಣೆಬರಹ ಏನೆಂದು ಗೊತ್ತಿದೆ. ಸಮಯ ಬಂದಾಗ ಹೇಳುವೆ ಎಂದರು. ಸುಪಾರಿ ಪ್ರಕರಣದ ಬಗ್ಗೆ ಸಿಎಂ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಹಣವಂತರು ರಾಜಕೀಯಕ್ಕೆ ಬರಲು ಇದು ಒಂದು ಕಾರಣ. ಸುಪಾರಿ ಪ್ರಕರಣ ಸೂಕ್ತ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು. Chikkaballapura h d devegowda modi siddaramaiah ಎಚ್‌.ಡಿ.ದೇವೇಗೌಡ ಚಿಕ್ಕಬಳ್ಳಾಪುರ ನರೇಂದ್ರ ಮೋದಿ ಸಿದ್ದರಾಮಯ್ಯ
2022/01/20 01:20:32
https://publictv.in/h-d-devegowda-slams-siddaramaiah-over-critic-on-modi-meet/
mC4
ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!! - kannadatoday.com ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!! Interesting By pavan On February 10, 2018 No Comments ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶೆಟ್ಟಿ ಯಾವಾಗ ವಿವಾಹವಾಗುತ್ತಾರೆ ಹಾಗು ಯಾರನ್ನು ವಿವಾಹವಾಗುತ್ತಾರೆ ಎಂಬ ಚರ್ಚೆ ತುಂಬಾ ನೆಡೆಯುತ್ತಿದೆ,ಬಾಹುಬಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪ್ರೀತಿ ಮಾಡುತ್ತಿದ್ದು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಬಾಹುಬಲಿ-2 ನಂತರ ಅನುಷ್ಕಾ ಭಾಗಮತಿ ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣದಿಂದ,ನಟ ಪ್ರಭಾಸ್ ಕೂಡ ಸಹ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು,ಮಹಿಳಾ ಪ್ರಧಾನ ಚಿತ್ರವಾದರೂ ಭಾಗಮತಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಇತ್ತೀಚಿಗೆ ತನ್ನ ಕುಟುಂಬಸ್ಥರ ಜೊತೆ ಒಂದು ಕಾರ್ಯಕ್ರಮಕ್ಕೆ ಹಾಜರಿದ್ದರು,ಇದೇ ಕಾರ್ಯಕ್ರಮಕ್ಕೆ ಪ್ರಭಾಸ್ ಸಹ ಬಂದಿದ್ದರು,ಪ್ರಭಾಸ್ ನ ನೋಡಿದ್ದೇ ತಡ ಗಟ್ಟಿಯಾಗಿ ಅಪ್ಪಿಕೊಂಡು ಮೈ ಮರೆತರಂತೆ ಅನುಷ್ಕಾ. ಕುಟುಂಬಸ್ಥರು ಹಾಗು ಸಿನಿ ದಿಗ್ಗಜರ ಎದುರೇ ಪ್ರಭಾಸ್ ಮಡಿಲಲ್ಲಿ ಅನುಷ್ಕಾ ತುಂಬಾ ಹೊತ್ತೇ ಇದ್ದರಂತೆ,ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಪ್ರಭಾಸ್ ಗಾಗಿ ಸ್ವತಃ ಅನುಷ್ಕಾ ಅವರೇ ಬಿಸಿ ಬಿಸಿ ದೋಸೆ ಮಾಡಿ ತನ್ನ ಕೈಯಿಂದ ತಿನಿಸಿದರಂತೆ.ಇದನ್ನಲ್ಲಾ ನೋಡಿದ ಅಲ್ಲಿನ ಜನ ಇವರದು ಖಂಡಿತ ಸ್ನೇಹ ಮಾತ್ರ ಅಲ್ಲ,ಅದ್ದಕಿಂತ ಹೆಚ್ಚು ಎಂದು ಮನಸಲ್ಲೇ ಅನ್ಕೊಂಡರಂತೆ. source:-https://www.youtube.com/watch?v=Ha6JC-v8I9I ಕನ್ನಡದ ಟಾಪ್ ನಟಿ ಶೂಟಿಂಗ್ ವೇಳೆ ಬಟ್ಟೆ ಬದಲಾಯಿಸುವಾಗ ಯಾರೋ ಒಬ್ಬರು ಆಕೆಯನ್ನು ಮೊಬೈಲ್ ನಿಂದ ಶೂಟ್ ಮಾಡುತ್ತಾರೆ.!!! ಇಷ್ಟಕ್ಕೂ ಯಾರು ಆ ಟಾಪ್ ನಟಿ.???
2018/03/24 02:28:44
http://kannadatoday.com/2018/02/10/infront-of-her-relatives-anushka-hugged-star-hero-who-is-that-hero/
mC4
ಒಂದು ಭಿಕ್ಷುಕನಂತೆ ಉಂಗುರಗಳು | Apg29 ಒಂದು ಭಿಕ್ಷುಕನಂತೆ ಉಂಗುರಗಳು ನೀವೇ ವಂಚನೆಗೊಳಗಾಗುವುದಿಲ್ಲ ಮತ್ತು ಮೋಸ ಮತ್ತು ಹೇಗೆ ಇದು ನಿಜವಾಗಿಯೂ ಕರೆ ಮತ್ತು ಹಾರ್ಡ್ ಹೊಂದಿರುವ ಭಿಕ್ಷುಕನ ಎಂದು ತಿಳಿಯುವುದು? ಬಹುಶಃ ಇದು ಉತ್ತಮ ಲೀಗ್ ಹಿಂದಿದೆ. ನಿನ್ನೆ ಪ್ರೆಸೆಂಟ್ಸ್ ಸ್ವತಃ ಇಲ್ಲದೆ ನನಗೆ ರೊಮೇನಿಯನ್ ವ್ಯಕ್ತಿ ಎಂದು ಕರೆಯಲ್ಪಡುತ್ತಾರೆ. ಅವರು ಮುರಿದು ಸ್ವೀಡಿಷ್ ಈಗಿನಿಂದಲೇ ಮಾತನಾಡುವ ಪ್ರಾರಂಭವಾಯಿತು, ಆದರೆ ಇನ್ನೂ ಸಾಕಷ್ಟು ತೆರವುಗೊಳಿಸಿ. ಬಹುಶಃ ಅವರು ಕಾಗದದ ಮೊದಲು ಓದಿ. ಯಾರಾದರೂ ತನ್ನ ಹೆಸರು ಹೇಳಲು ಇಲ್ಲ ಬಂದ, ನಾನು ಅದನ್ನು ಯಾರು ಕೇಳಿ. ಆದರೆ ಉತ್ತರಿಸಲು ಆದರೆ ಮಾತನಾಡುವ ಮುಂದುವರೆಯಿತು ಮಾಡಲಿಲ್ಲ. ಅವರು, ಅವರ ಕುಟುಂಬ ಬಗ್ಗೆ ಎಸ್ಒಬಿ ಕಥೆಗಳನ್ನು ಹೇಳುವ ಪ್ರಾರಂಭಿಸಿದರು ಅವರು ಕ್ಯಾನ್ಸರ್ ರೋಗಿಗಳಿಗೂ ಮತ್ತು ಇದು ನಿಜವಾಗಿಯೂ ಹಾರ್ಡ್ ಹೊಂದಿತ್ತು. ನಾನು ಬೇಗ ತನ್ನ ಸಂದರ್ಭದಲ್ಲಿ ಹಣ ಕೋರುತ್ತಾರೆ ಎಂದು ತಿಳಿಯಬಹುದು. ಅವರು ಕರೆದ ಒಮ್ಮೆ ಕೇಳಿದರು ಮತ್ತು ನಾನು ಎರಡೂ ಅರ್ಥ ಅಥವಾ ಉಚ್ಚರಿಸುತ್ತಾರೆ ಸಾಧ್ಯವಿತ್ತು ಒಂದು ಹೆಸರಿಗೆ ಹದಗೆಟ್ಟ ಅಸ್ಪಷ್ಟ ಪ್ರತಿಕ್ರಿಯೆ ಸಿಕ್ಕಿತು. ಅವರು ವಾಸಿಸಿದ ನಾನು ಕೇಳಿದಾಗ ಮತ್ತು ರೊಮೇನಿಯಾ ತಿಳಿಸಲಾಯಿತು. ನೀವು ಸಹಜವಾಗಿ ಸ್ವೀಡಿಷ್, ನಾನು ಹೇಳಿದರು, ಆದರೆ ಅವರು ರೊಮೇನಿಯಾದ ಹೇಳಿದರು. ಆದರೆ ಸೆಲ್ ಫೋನ್ ಅವನು ಸ್ವೀಡನ್ ನಿಂದ ಕರೆ ಬಹಿರಂಗ. ನೀವು ಸ್ವೀಡನ್ನ ಕರೆ ನಾನು ಹೇಳಿದರು ಮುಂದುವರೆದಿತ್ತು: ನೀವು ಸುಳ್ಳು ನೀವು! ನಂತರ ನಾನು ವಿದಾಯ ಹೇಳಿದರು ಮತ್ತು ಕೊನೆಗೊಳಿಸಿದ್ದಾರೆ. ಹೊಂದಿತ್ತು ವ್ಯಕ್ತಿ ಅವರು ಕ್ರಿಶ್ಚಿಯನ್, ಆದರೆ ನಾನು ಈಗಾಗಲೇ ನಮ್ಮ ಅಂಗಡಿಗಳ ಮುಂದೆ ಕುಳಿತು ರೊಮೇನಿಯನ್ ಭಿಕ್ಷುಕರು ಅವರು ಕ್ರೈಸ್ತರು ಮತ್ತು ರೊಮೇನಿಯಾ ವಿವಿಧ ಚರ್ಚುಗಳ ಸದಸ್ಯರು ಹೇಳಿದಳು ಅಲ್ಲಿ ಗೊತ್ತು, ಆದರೆ ಪರೀಕ್ಷಿಸಿದ್ದು ಯಾವಾಗ ಇದು ಮೊಕದ್ದಮೆ ಎಂದಿಗೂ ಹೇಳಿದರು. ಖಂಡಿತವಾಗಿಯೂ, ನೀವು ಬಯಸಿದರೆ ತಮ್ಮನ್ನು, ಬಡ ಮತ್ತು ಅಗತ್ಯವಿರುವ ಯಾರು, ಆದರೆ ನೀಲಿ ಕಣ್ಣಿನ ಮತ್ತು ನಿರಾಧಾರ, ಮತ್ತು ಅವಕಾಶ ಕ್ರಿಶ್ಚಿಯನ್ ಸಹಾಯ ಜನರು ಬಳಸಬೇಕಾದ ನೀವು ಕ್ರಿಶ್ಚಿಯನ್ ಮತ್ತು ಧಾರ್ಮಿಕ ಜೀವನವನ್ನು ಬಯಸುವ ಕಾರಣ. ವಾಸ್ತವವಾಗಿ, ಇದು ಬಹಳ ತಮಗಿರುವ ಯೇಸುವಿನಲ್ಲಿ ಬೇಗ್ (ಅವರನ್ನು ಮರುಳು?) ಹಣ ಆನ್ ನಂಬುವ ಕ್ರೈಸ್ತರು ನೆಲೆಯಾಗಿದೆ ಕರೆ ಕೂಡಿದೆ. ಬಹುಶಃ ಅವು ವಂಚಿಸುವುದೂ ಸಹ ಕ್ರೈಸ್ತರು ಹುಡುಕಲು ನಿವ್ವಳ ಸುಮಾರು surfed ಬಂದಿದೆ. ನಾನು ಹಿಂದೆ ಭಿಕ್ಷುಕರು ಅವ್ಯವಸ್ಥೆ ಸ್ವೀಕರಿಸಿದ್ದೇವೆ. ಮತ್ತು ಹೇಗೆ ಇದು ನಿಜವಾಗಿಯೂ ಕರೆ ಮತ್ತು ಹಾರ್ಡ್ ಹೊಂದಿರುವ ಭಿಕ್ಷುಕನ ಎಂದು ತಿಳಿಯುವುದು? ಬಹುಶಃ ಇದು ಉತ್ತಮ ಲೀಗ್ ಹಿಂದಿದೆ. ದೂರವಾಣಿ ಮಾರಾಟಗಾರಿಕೆಯ ಯಾವುದೇ ಹಿಂದೆ, ನನ್ನ ವಸ್ತುಗಳ ಮೇಲೆ ತೂರಿಸು ಬಯಸುವ ದೂರವಾಣಿ ಮಾರಾಟಗಾರಿಕೆಯ ಯಾವುದೇ ಹೇಳುತ್ತಿದ್ದಾರೆ ಒಂದು ಹಾರ್ಡ್ ಸಮಯ. ನಾನು ಯಾವಾಗಲೂ ತಮ್ಮ ಉತ್ಪನ್ನಗಳ ನಾನು ಮಿಸ್ ಸಾಧ್ಯವಿಲ್ಲ ಎಂದು ವಿಶ್ವದ ಅವಕಾಶ ಎಂದು ತಮ್ಮ ವರ್ತನೆ ನಾನು ಮೂಲತಃ ಅರ್ಥವಾಗದ ಸ್ಟುಪಿಡ್ am ಎಂದು ಕೆಳಮಟ್ಟ ಭಾವಿಸಿದರು. ನಾನು ನನ್ನ ಮನವೊಲಿಸಿದರು ಮತ್ತು ಖರೀದಿಸಿತು ಅವುಗಳಲ್ಲಿ ಒಂದು, ನಾನು ನಂತರ ಮೋಸ ಭಾವಿಸಿದರು ಅವಕಾಶ. ಆದರೆ ಈಗ ನಾನು ಆಸಕ್ತಿ ಇಲ್ಲ ಎಂದು ನೇರವಾಗಿ ಯಾವುದೇ ನೆಲದ ಹೇಳುತ್ತಾರೆ. ಆದರೆ ಅವರು ನನಗೆ ಮನವೊಲಿಸಲು ಪ್ರಯತ್ನಿಸಿ ಮಾತಿಗೆ ಆದರೆ ಮುಂದುವರಿಸಲು, ನಾನು ಒಂದು ಸಂಸ್ಥೆ ಆದರೆ ಸ್ನೇಹಿ ವಿದಾಯ ಮತ್ತು ಆವರಿಸಿರುವ ಅಪ್ ತಕ್ಷಣ ನಿಲ್ಲಿಸಲು. ನಾನು ಅವರಿಗೆ ಅವಕಾಶ ನೀಡುವುದಿಲ್ಲ. ಹಿಂದೆ, ಈ ನನ್ನನ್ನು ಕೆಟ್ಟ ಆತ್ಮಸಾಕ್ಷಿಯ ನೀಡಲಾಗಿತ್ತು, ಆದರೆ ಎಂದಿಗೂ ನಾನು ನಾನು ಆಗಿದೆ ಬಳಸಿಕೊಂಡರು ನೀಡಲಾಗುತ್ತದೆ ಮತ್ತು ನೋವನ್ನು ಎಂದು ಅರ್ಥ ಏಕೆಂದರೆ ಮಾಡಿದ್ದರು. ನಾನು ಬಲವಾದ ಆಗಲು ಮತ್ತು ವಿಷಯ ಈ ರೀತಿಯ ನಿಲ್ಲುವ ಸಾಕಷ್ಟು ಹೆಚ್ಚಿನ ವಿಶ್ವಾಸವನ್ನು ಹೊಂದಿರುವುದಿಲ್ಲ. ಆದ್ದರಿಂದ, ನೀವು ಯಾವುದೇ ಹೇಳಲು ಧೈರ್ಯ ಮಾಡಬೇಕು. ಯಾರಾದರೂ ಮೇಕಪ್ ನೀವು ಯಾವುದೇ ಹೇಳಬೇಕಾದಾಗ ಕೀಳರಿಮೆ ಭಾವನೆ ಬಿಡಬೇಡಿ. ಹೆಚ್ಚಿನ ದೃಢ ಮತ್ತು ಧೈರ್ಯವನ್ನು ನಿಮ್ಮ ನಿರ್ಧಾರ ಸಂಸ್ಥೆಯ ಸ್ಟ್ಯಾಂಡ್. ಬಳಸುವ ಇರುವುದಿಲ್ಲ. ಮತ್ತು ನೀವು ಒಂದು ಕ್ರಿಶ್ಚಿಯನ್ ನೀವು ಯಾವುದೇ ಹೇಳಲು ವೇಳೆ, ಕ್ರಿಶ್ಚಿಯನ್ ಆಗಿ ಇಲ್ಲ ಕಡಿಮೆ. ಆದರೆ ಹೇಗೆ ನಾವು ಅವರಿಗೆ ಹಣ ಭಿಕ್ಷಾಟನೆ ಏನು ಮಾಡಬೇಕು? ಮೊದಲನೆಯದಾಗಿ ನಾವು ಅವರು ಅವನನ್ನು ಪಡೆಯಬಹುದು ಮತ್ತು ಉಳಿಸಿದ ಮತ್ತು ಶಾಶ್ವತತೆ ಉಳಿಸಲಾಗಿದೆ ಕೂರಲು ಯೇಸುವಿನ ಸುವಾರ್ತೆ ನೀಡಬೇಕು. ಇಲ್ಲವಾದರೆ, ಅವರು ತಮ್ಮ ಜೀವನದಲ್ಲಿ ಕೆಲವು ಸರಣಿಯನ್ನು ಪಡೆಯಲು ಎಂದಿಗೂ. ಮೊದಲನೆಯದಾಗಿ, ನಾವು ಭಿಕ್ಷುಕರು ಜೀಸಸ್ ನೀಡುತ್ತದೆ! ನಾನು ಮತ್ತೆ ಹೇಳುತ್ತೇನೆ: ಮೊದಲನೆಯದಾಗಿ, ನಾವು ಭಿಕ್ಷುಕರು ಜೀಸಸ್ ನೀಡುತ್ತದೆ! ಆಗ ಅವರು ಕಡುಬಡತನ ದೂರ ಮುರಿಯುತ್ತವೆ! ನಂತರ ನೀವು ಅವುಗಳನ್ನು ಸಾಮಾಜಿಕವಾಗಿ ಸಹಾಯ ಮಾಡಬಹುದು. ಜೀಸಸ್, ನಂತರ ಸಾಮಾಜಿಕ ನೆರವು ಕೆಲಸ ಮಾಡಲಿಲ್ಲ ಇಲ್ಲ! ಆದ್ದರಿಂದ, ನೀವು ಮೊದಲು ಯೇಸು ಸಾಮಾಜಿಕ ಚಿಕಿತ್ಸಾ ನೀಡಿ, ಮತ್ತು ನಂತರದಲ್ಲಿ!
2020/08/11 19:38:45
https://apg29.nu/kn/en-tiggare-ringer
mC4
ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಹೇಮಚಂದ್ರರಿಗೆ ಚಿನ್ನದ ಪದಕ | ಸುದ್ದಿ ಬೆಳ್ತಂಗಡಿ ಬೆಳ್ತಂಗಡಿ: ಇತ್ತೀಚೆಗೆ ಧಾರವಾಡದಲ್ಲಿ ಜರುಗಿದ ರಾಜ್ಯ ಮಟ್ಟದ ಸಿವಿಲ್ ಸರ್ವಿಸ್ ಸ್ಪರ್ಧಾ ಕೂಟ-2020ರಲ್ಲಿ ಪವರ್ ಲಿಪ್ಟಿಂಗ್ ಸ್ಪರ್ಧೇಯ 75 ಕೆ.ಜಿ ವಿಭಾಗದಲ್ಲಿ ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಬಬ್ಬುಕಟ್ಟೆ ಇವರು ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಈ ಸ್ಪರ್ಧಾ ಕೂಟದಲ್ಲಿ ಸತತವಾಗಿ 25 ವರ್ಷಗಳಿಂದ ಭಾಗವಹಿಸುತ್ತಿದ್ದು, ಪದಕಗಳನ್ನು ಪಡೆಯುತ್ತಾ ಬಂದಿದ್ದಾರೆ. ಇವರು ದ.ಕ.ಜಿ.ಪಂ ಸಮಾಜ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾಗಿದ್ದು, ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ-ಪುತ್ತೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಪ್ರಭಾರದಲ್ಲಿರುತ್ತಾರೆ. ಇವರು ತೊಕ್ಕೊಟ್ಟು ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದಾರೆ.
2020/08/09 03:08:52
http://belthangady.suddinews.com/archives/365071?ajaxCalendar=1&mo=8&yr=2020
mC4
ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಟಾಪ್ ಫೈವ್ ಆಟಗಾರರು - ಕರುನಾಡ ವಾಣಿ ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನವೂ ಒಂದಲ್ಲ ಒಂದು ದಾಖಲೆ ನಿರ್ಮಾಣವಾಗುತ್ತಾ ಬಂದಿದೆ. ಕ್ರಿಕೆಟ್ ಎಂಬ ಲೋಕದಲ್ಲಿ ಖ್ಯಾತಿ ಗಳಿಸಿದ ದಾಖಲೆಗಳಿದಂತೆಯೇ ಕುಖ್ಯಾತಿಗೆ ಪಾತ್ರವಾದ ಕೆಲವು ದಾಖಲೆಗಳು ಇವೆ. ಅದರಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿರುವ ಆಟಗಾರರು ಸಹ ಕುಖ್ಯಾತಿಯ ದಾಖಲೆಗೆ ಪಾತ್ರರಾಗಿದ್ದಾರೆ. ಅಷ್ಟಕ್ಕೂ ಐವರು ಆಟಗಾರರು ಯಾರು ಗೊತ್ತಾ? 5: ಶ್ರೀಲಂಕಾದ ಸ್ಪಿನ್ ದಿಗ್ಗಜ ರಾಗಿರುವ ಮುತ್ತಯ್ಯ ಮುರಳೀಧರನ್ ಅವರು ಹಲವಾರು ಬ್ಯಾಟ್ಸ್ಮನ್ಗಳ ಪಾಲಿಗೆ ದುಃಸ್ವಪ್ನವಾಗಿ ಕಾಡಿದ್ದಾರೆ. ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಸಾವಿರಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಇವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 25 ಬಾರಿ ಸೊನ್ನೆ ಸುತ್ತಿದ್ದಾರೆ. 4: ನಾಲ್ಕನೇ ಸ್ಥಾನದಲ್ಲಿ ಶ್ರೀಲಂಕಾದ ಮಾಜಿ ನಾಯಕ ಹಾಗೂ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾದ ಮಹೇಲಾ ಜಯವರ್ಧನೆ ರವರು ಇದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 12 ಸಾವಿರ ರನ್ ಕಲೆಹಾಕಿರುವ ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 28 ಬಾರಿ ಸೊನ್ನೆ ಸುತ್ತಿದ್ದಾರೆ. 3: ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ರಾಷ್ಟ್ರದ ಮಾಜಿ ನಾಯಕ ಹಾಗೂ ವಿಶ್ವವೇ ಕಂಡ ಅತಿ ಶ್ರೇಷ್ಠ ಸ್ವಿಂಗ್ ಬೌಲರ್ ಗಳಲ್ಲಿ ಒಬ್ಬರಾಗಿರುವ ವಾಸಿಮ್ ಅಕ್ರಮ್ ಕಾಣಸಿಗುತ್ತಾರೆ ಏಕದಿನ ಕ್ರಿಕೆಟ್ ನಲ್ಲಿ 502 ವಿಕೆಟ್ ಪಡೆದಿರುವ ಇವರು ಬೌಲಿಂಗ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಂತೆಯೇ 28 ಸೊನ್ನೆಸುತ್ತಿರುವ ಇವರು ಕುಖ್ಯಾತಿ ದಾಖಲೆಯನ್ನು ನಿರ್ಮಿಸಿಕೊಂಡಿದ್ದಾರೆ. 2. ಇನ್ನು ವಿಶ್ವದ ಸ್ಫೋಟಕ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿರುವ ಶಾಹಿದ್ ಅಫ್ರಿದಿ ರವರು ಏಕದಿನ ಕ್ರಿಕೆಟ್ ನಲ್ಲಿ ಎಂಟು ಸಾವಿರಕ್ಕೂ ಹೆಚ್ಚು ರನ್ ಸಿಡಿಸಿ ರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇಷ್ಟೇ ಅಲ್ಲದೆ ಬೌಲಿಂಗ್ ನಲ್ಲಿಯೂ ಸಹ ಮ್ಯಾಜಿಕ್ ಮಾಡಿರುವ ಇವರು 395 ವಿಕೆಟ್ಗಳನ್ನು ಕಬಳಿಸಿದ್ದಾರೆ ಆದರೆ ಸಿಕ್ಸರ್ ಮೂಲಕ ರನ್ ಗಳಿಸುವ ಭರದಲ್ಲಿ ಬರೋಬ್ಬರಿ 30 ಬಾರಿ ಸೊನ್ನೆ ಸುತ್ತಿದ್ದಾರೆ. 1. ಇನ್ನು ಶ್ರೀಲಂಕಾದ ಅತಿ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಮುಂಚೂಣಿಯ ಸಾಲಿನಲ್ಲಿ ನಿಲ್ಲುವ 13000 ರನ್ ಗಳಿಸಿರುವ ಸನತ್ ಜಯಸೂರ್ಯ ರವರು ಈ ಅಪ ಖ್ಯಾತಿ ಪಡೆದ ದಾಖಲೆಯಲ್ಲಿ ಮೊದಲಿಗರಾಗಿ ಕಾಣಸಿಗುತ್ತಾರೆ ಹೌದು ನಿಮಗೆ ಆಶ್ಚರ್ಯ ವಾಗಿರಬಹುದು ಆದರೆ ಇದು ಸತ್ಯ .ಜಯಸೂರ್ಯ ರವರು ಇದುವರೆಗೂ ಏಕದಿನ ಕ್ರಿಕೆಟ್ ನಲ್ಲಿ 34 ಬಾರಿ ಸೊನ್ನೆ ಸುತ್ತಿದ್ದಾರೆ.
2021/09/23 15:15:56
https://karunaadavaani.com/index.php/2019/01/05/top5zeorcricket/
mC4
ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ. – Navakarnataka news ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ. April 10, 2022 April 10, 2022 adminLeave a Comment on ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ. ಈ ರಾಶಿಯವರು ಪ್ರತಿಭಾವಂತರು. ಯಾವುದೇ ಕಷ್ಟವನ್ನು ಎದುರಿಸುವ ಧೈರ್ಯವನ್ನು ದೇವರು ಇವರಿಗೆ ಕೊಟ್ಟಿದ್ದಾನೆ. ಸದಾಕಾಲ ಇವರಿಗೆ ಸೂರ್ಯದೇವನ ಆಶೀರ್ವಾದ ಇರುವುದರಿಂದ ಇವರು ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ಯಾರಿಂದಲೂ ಸಲಹೆ ಮತ್ತು ಸೂಚನೆಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಿಗೆ ಈ ರಾಶಿಯವರು ಎಲ್ಲಾ ಕೆಲಸಗಳನ್ನೂ ತಾವೇ ಮಾಡುತ್ತಾರೆ. ಸೂರ್ಯ ದೇವನ ಆಶೀರ್ವಾದ ಇರುವುದರಿಂದ ಎಲ್ಲಾ ದೃಷ್ಟಿ ದೋಷಗಳು ನಿವಾರಣೆ ಆಗಲಿದೆ ಮತ್ತು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ. ಇವರ ಅದೃಷ್ಟ ದುಪ್ಪಟ್ಟು ಆಗಲಿದೆ. ಸಮಾಜದಲ್ಲಿ ಇವರು ಸಮಾಜಮುಖಿ ಕೆಲಸಗಳಿಂದ ಒಳ್ಳೆಯ ಸ್ಥಾನ ಮಾನವನ್ನು ಗಲಿಸಲಿದ್ದಾರೆ. ಹೊಸ ಉದ್ಯಮವನ್ನು ಪ್ರಾರಂಭಿಸಲು ಇದು ಸುಕ್ತವಾದ ಸಮಯ ಆಗಿದೆ. ಏನೇ ಕಷ್ಟಗಳು ಬಂದರು ಒಂದುಸಾರಿ ಸೂರ್ಯದೇವನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಎಲ್ಲಾ ಕಷ್ಟಗಳು ನಿವಾರಣೆ ಆಗಲಿವೆ. ನಿಮಗೆ ತೊಂದರೆ ಕೊಡುವ ಜನರನ್ನು ಹತ್ತಿರ ಸೇರಿಸಲೇಬೇಡಿ. ಸಂಗಾತಿಯ ಮನಸ್ಸಿನ ಮಾತನ್ನು ಅರ್ಥಮಾಡಿಕೊಳ್ಳಿ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆದಿರುವ ಆ 6 ಅದೃಷ್ಟಶಾಲಿ ರಾಶಿಗಳು ಯಾವುವು ಅಂದರೆ ಧನುರ್, ವೃಶ್ಚಿಕ, ಕನ್ಯಾ, ತುಲಾ, ಮೇಷ ಮತ್ತು ಸಿಂಹ ರಾಶಿಗಳು. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಸರ್ಯದೇವಾಯ ನಮಃ ಎಂದು ಕಮೆಂಟ್ ಮಾಡಿ.
2022/07/04 03:05:28
https://navakarnatakanews.com/visheshavaada-ramamanavmi-e-six-raashiyavarige-nsdfv-jndsf-bvjhdb/
mC4
ತೆರಿಗೆ ಹಣದಲ್ಲಿ ವೈದ್ಯರ ಉನ್ನತಾಭ್ಯಾಸಕ್ಕೆ ಅವಕಾಶ ಬೇಡ: ಎನ್.ಆರ್.ರಮೇಶ್ – EESANJE / ಈ ಸಂಜೆ November 26, 2020 Sunil Kumar Doctors, NR Ramesh, tax money ಬೆಂಗಳೂರು, ನ.26- ಸಾರ್ವಜನಿಕರ ತೆರಿಗೆ ಹಣದಿಂದ ಎಂಪಿಎಚ್ ಕೋರ್ಸ್ ಮಾಡಲು ತೆರಳುತ್ತಿ ರುವ ಇಬ್ಬರು ಬಿಬಿಎಂಪಿ ವೈದ್ಯರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಹಾಗೂ ಕಾನೂನು ಬಾಹಿರವಾಗಿ ಇಂತಹ ಕ್ರಮಕ್ಕೆ ಮುಂದಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದಕ್ಷಣ ವಿಭಾಗದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಬಿಬಿಎಂಪಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ರಾಮು ಮತ್ತು ಸಯ್ಯದ್ ಎಂಬುವರು 2016-2017ನೆ ಸಾಲಿನಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಪಾಲಿಕೆ ಕೋಟ್ಯಂತರ ಹಣದಲ್ಲಿ ಎಂಡಿ ಕೋರ್ಸ್ ಮಾಡಲು ಕಳುಹಿಸಿಕೊಡಲಾಗಿತ್ತು. ಮೂರು ವರ್ಷಗಳ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ವಾಪಸಾದ ಈ ಇಬ್ಬರು ವೈದ್ಯರು ತಮ್ಮ ವಿದ್ಯಾರ್ಜನೆ ವೇಳೆಯಲ್ಲೂ ಎಲ್ಲಲಾ ರೀತಿಯ ವೇತನ ಮತ್ತು ಭತ್ಯೆಗಳನ್ನು ಪಡೆದುಕೊಂಡಿರುತ್ತಾರೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿ ಪೂರೈಸಿ ಬಂದಿರುವ ರಾಮು ಮತ್ತು ಸಯ್ಯದ್ ಅವರು ಕಾನೂನಿನ ಪ್ರಕಾರ ಪಾಲಿಕೆಯ ರೆಫರಲ್ ಆಸ್ಪತ್ರೆಗಳಲ್ಲಿ ಫಿಜಿಷಿಯನ್‍ಗಳಾಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಈ ಇಬ್ಬರು ವೈದ್ಯರು ತಮ್ಮ ರಾಜಕೀಯ ಪ್ರಭಾವ ಬಳಸಿ ಕೆಸಿಎಸ್‍ಆರ್ ನಿಯಮಗಳನ್ನು ಗಾಳಿಗೆ ತೂರಿ ಮತ್ತೊಮ್ಮೆ ಸಾರ್ವಜನಿಕರ ತೆರಿಗೆ ಹಣದ ಮೂಲಕ ಎಂಪಿಎಚ್ ಕೋರ್ಸ್ ಮಾಡಲು ತೆರಳುತ್ತಿದ್ದಾರೆ. ಈ ಇಬ್ಬರು ವೈದ್ಯರಿಗೆ ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತರು, ಹಣಕಾಸು ವಿಭಾಗದ ಅಕಾರಿಗಳು ಹಾಗೂ ಆರೋಗ್ಯಾಕಾರಿಗಳು ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಈ ಕೂಡಲೇ ಈ ಇಬ್ಬರು ವೈದ್ಯರ ಎಂಪಿಎಚ್ ಅಧ್ಯಯನಕ್ಕೆ ತೆರಳುವುದನ್ನು ರದ್ದುಗೊಳಿಸಿ ಅವಶ್ಯಕತೆ ಇರುವ ರೆಫರಲ್ ಮತ್ತು ಡಯಾಲಿಸಿಸ್ ಕೇಂದ್ರಗಳಲ್ಲಿ ಫಿಜಿಶಿಯನ್‍ಗಳಾಗಿ ನಿಯೋಜಿಸಬೇಕು ಎಂದು ಎನ್.ಆರ್.ರಮೇಶ್ ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ತೆರಿಗೆ ಹಣದೊಂದಿಗೆ ಚೆಲ್ಲಾಟ ವಾಡುತ್ತಿರುವ ವೈದ್ಯರು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
2021/12/01 15:20:10
https://www.eesanje.com/nr-ramesh-12/
mC4
ಟಿ20ಯಲ್ಲೂ ಕನ್ನಡಿಗ ರಾಹುಲ್‌ ವಿಕೆಟ್ ಕೀಪರ್‌! | Virat Kohli suggests KL Rahul will keep in T20I Series Against New Zealand ಟಿ20ಯಲ್ಲೂ ಕನ್ನಡಿಗ ರಾಹುಲ್‌ ವಿಕೆಟ್ ಕೀಪರ್‌! ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಪಂತ್‌ಗೆ ಶಾಕ್ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... Auckland, First Published Jan 24, 2020, 10:19 AM IST ಆಕ್ಲೆಂಡ್‌(ಜ.24): ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸ್ಥಾನವನ್ನು ಪಡೆದಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌ಗೆ ಟಿ20 ಮಾದರಿಯಲ್ಲೂ ಹೆಚ್ಚುವರಿ ಜವಾಬ್ದಾರಿ ನೀಡುವುದಾಗಿ ನಾಯಕ ವಿರಾಟ್‌ ಕೊಹ್ಲಿ ಖಚಿತಪಡಿಸಿದ್ದಾರೆ. ಈ ಮೂಲಕ ಪಂತ್‌ಗೆ ನಾಯಕ ಶಾಕ್ ಕೊಟ್ಟಿದ್ದಾರೆ. ಇಂಡೋ-ಕಿವೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, 'ರಾಹುಲ್‌ ಕೀಪಿಂಗ್‌ ಮಾಡಿದರೆ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ ಇಲ್ಲವೇ ಆಲ್ರೌಂಡರ್‌ನನ್ನು ಆಡಿಸಲು ಅವಕಾಶ ಸಿಗಲಿದೆ. ವಿಕೆಟ್‌ ಕೀಪರ್‌ ಆಗಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಟಿ20ಯಲ್ಲೂ ಅವರನ್ನೇ ಮುಂದುವರಿಸಲಿದ್ದೇವೆ' ಎಂದರು. ಅಭ್ಯಾಸದ ವೇಳೆ ರಾಹುಲ್‌ ಹೆಚ್ಚಿನ ಸಮಯವನ್ನು ಕೀಪಿಂಗ್‌ ಮಾಡುವುದರಲ್ಲೇ ಕಳೆದರು. ಇದೇ ವೇಳೆ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆಯೂ ವಿರಾಟ್‌ ಸುಳಿವು ನೀಡಿದರು. ರಾಹುಲ್‌ ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿದ್ದು, ಟಿ20ಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದರು. ಇದರೊಂದಿಗೆ ಪೃಥ್ವಿ ಶಾ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿಲ್ಲದೆ ವೇಳಾಪಟ್ಟಿ ಬಗ್ಗೆ ವಿರಾಟ್‌ ಕೊಹ್ಲಿ ಅಸಮಾಧಾನ! ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿ ಮುಗಿದ ಮರುದಿನವೇ ನ್ಯೂಜಿಲೆಂಡ್‌ಗೆ ವಿಮಾನ ಹತ್ತಿದ ಭಾರತ ತಂಡ, ಮಂಗಳವಾರ ತಲುಪಿತು. ಬುಧವಾರ ವಿಶ್ರಾಂತಿ ಪಡೆದ ಆಟಗಾರರು, ಗುರುವಾರ ಅಭ್ಯಾಸ ನಡೆಸಿದರು. ಬಿಡುವಿಲ್ಲದ ವೇಳಾಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ನಾಯಕ ಕೊಹ್ಲಿ, ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಮುಂದೊಂದು ದಿನ ನೇರವಾಗಿ ಕ್ರೀಡಾಂಗಣಕ್ಕೆ ಬಂದಿಳಿದು ಆಡಬೇಕಾದ ಸಂದರ್ಭ ಬರಬಹುದು' ಎಂದಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿರುವ ಬೇಡಿಕೆಗಳನ್ನು ಒಪ್ಪಿಕೊಂಡಿರುವ ವಿರಾಟ್‌, ಕ್ರಿಕೆಟ್‌ ಇರುವುದೇ ಹೀಗೆ ಎಂದಿದ್ದಾರೆ.
2021/09/17 22:00:35
https://kannada.asianetnews.com/cricket-sports/virat-kohli-suggests-kl-rahul-will-keep-in-t20i-series-against-new-zealand-q4lhfa
mC4
ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..! - Kannada DriveSpark 5 min ago ನಾಳೆಯೇ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹೋಂಡಾ ಸಿಟಿ ಸೆಡಾನ್ ಕಾರು 15 min ago ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಆರ್‍ಎಸ್200 ಬೈಕ್ 23 min ago ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..! ಭಾರತದ ವಾಹನ ಸವಾರರು ಹಲವಾರು ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದೂ ಸಹ ಒಂದು. ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅದರಲ್ಲೂ ಚಿಕ್ಕದಾಗಿರುವ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತದೆ. ಆದರೆ ಈ ಟ್ರಾಫಿಕ್ ಜಾಮ್ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳುವುದೇ ಇಲ್ಲ. ತಪ್ಪು ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಜನರಿಗೆ ತೊಂದರೆಯಾದರೂ ಕ್ಯಾರೇ ಎನ್ನುವುದಿಲ್ಲ. ಚಿಕ್ಕ ರಸ್ತೆಯಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ವಾಹನಗಳಿಗೆ ತೊಂದರೆಯುಂಟು ಮಾಡುತ್ತಿದ್ದ ಕಾರ್ ಅನ್ನು ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕರು ಎತ್ತಿ ಪಕ್ಕಕ್ಕಿಟ್ಟ ಘಟನೆಯ ವೀಡಿಯೊವೊಂದು ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಪಂಜಾಬ್‍‍ನಲ್ಲಿ. ಈ ವೀಡಿಯೊವನ್ನು ಪೊಲೀಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಮಹೀಂದ್ರಾ ಟಿಯುವಿ300 ಚಿಕ್ಕ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು. ವಾಹನವು ಮುಂದಕ್ಕೆ ಹೋಗಲಾಗದೇ ಅಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಇದರಿಂದಾಗಿ ಮಹೀಂದ್ರಾ ಟಿಯುವಿ300 ಅನ್ನು ಚಲಾಯಿಸುತ್ತಿದ್ದವರು ಕಾರಿನಿಂದ ಹೊರಗಿಳಿದು ಯಾರೂ ನಿರೀಕ್ಷಿಸಿರದ್ದನ್ನು ಮಾಡುತ್ತಾರೆ. ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿಗೆ ಒರಗಿ ತನ್ನ ಕೈಗಳಿಂದ ಆ ಕಾರ್ ಅನ್ನು ಮೇಲಕ್ಕೆತ್ತಿ ಪಕ್ಕಕ್ಕೆ ಸರಿಸುತ್ತಾರೆ. ಮಹೀಂದ್ರಾ ಟಿಯುವಿ 300 ಕಾರು ಮುಂದಕ್ಕೆ ಚಲಿಸುವಷ್ಟು ಡಿಜೈರ್ ಕಾರ್ ಅನ್ನು ಪಕ್ಕಕ್ಕೆ ಸರಿಸುತ್ತಾರೆ. ಈ ಘಟನೆಯನ್ನು ನೋಡಿ ಸ್ಥಳದಲ್ಲಿದ್ದ ಜನರು ಆಶ್ಚರ್ಯಚಕಿತರಾಗುತ್ತಾರೆ. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕನಿಗೆ ಥಮ್ಸ್ ಅಪ್ ಮಾಡುತ್ತಾನೆ. ಇದಾದ ನಂತರ ಮಹೀಂದ್ರಾ ಟಿಯುವಿ300 ಅಲ್ಲಿಂದ ಮುಂದೆ ಸಾಗುತ್ತದೆ. ಈ ವೀಡಿಯೊದಲ್ಲಿ ಕಂಡು ಬರುವ ಡಿಜೈರ್ ಹಳೆಯ ತಲೆಮಾರಿನ ಸೆಡಾನ್ ಕಾರ್ ಆಗಿದೆ. ಈಗ ಈ ಕಾರ್ ಅನ್ನು ಮಾರಾಟ ಮಾಡುತ್ತಿಲ್ಲ. ಒಬ್ಬನೇ ವ್ಯಕ್ತಿ ಇಡೀ ಕಾರ್ ಅನ್ನು ಎತ್ತಿ ಪಕ್ಕಕ್ಕೆ ತಳ್ಳಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಹೊಸ ಮಾರುತಿ ಸುಜುಕಿ ಡಿಜೈರ್ ಕಾರು ಹಾರ್ಟ್‍‍ಟೆಕ್ ಪ್ಲಾಟ್‌ಫಾರ್ಮ್ ಮೇಲೆ ತಯಾರಾಗಿದೆ. ಇದು ಕಡಿಮೆ ತೂಕವನ್ನು ಹೊಂದಿದೆ. ಇದಕ್ಕಿಂತ ಮುಂಚೆ ಮಾರುಕಟ್ಟೆಯಲ್ಲಿದ ಡಿಜೈರ್ ಕಾರು 1,070 ಕೆ.ಜಿ ತೂಕವನ್ನು ಹೊಂದಿತ್ತು. ಕೇವಲ ಕೈ, ಕಾಲುಗಳ ಮೂಲಕ ಕಾರ್ ಅನ್ನು ಪಕ್ಕಕ್ಕೆ ಸರಿಸುವುದು ಸಣ್ಣ ಸಾಧನೆಯಲ್ಲ. ಈ ರೀತಿಯಾಗಿ ಕಾರ್ ಅನ್ನು ಪಕ್ಕಕ್ಕೆ ತಳ್ಳುವ ವೀಡಿಯೊಗಳು ಪ್ರಪಂಚದಾದ್ಯಂತ ವೈರಲ್ ಆಗಿವೆ. ಆ ವೀಡಿಯೊಗಳಲ್ಲಿ ಬಲಶಾಲಿಗಳು ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವುದನ್ನು ಕಾಣಬಹುದು. ಆದರೆ, ಸೆಡಾನ್ ಕಾರುಗಳನ್ನು ಪಕ್ಕಕ್ಕೆ ತಳ್ಳುವುದು ನಿಜಕ್ಕೂ ದೊಡ್ಡ ವಿಷಯ. ಡಿಜೈರ್ ಕಾರ್ ಅನ್ನು ಪಕ್ಕಕ್ಕೆ ತಳ್ಳಿದ ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕರ ಬಗ್ಗೆ ವಿವರಗಳು ತಿಳಿದು ಬಂದಿಲ್ಲ. ಅವರು ತಮ್ಮ ಶಕ್ತಿ, ಸಾಮರ್ಥ್ಯದ ಹಿಂದಿನ ರಹಸ್ಯವನ್ನು ತಿಳಿಸುತ್ತಾರೆಯೇ ಎಂಬುದನ್ನು ಕಾದು ನೋಡೋಣ. ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ನಿಲ್ಲಿಸುವಾಗ ಯಾವಾಗಲೂ ಜಾಗರೂಕರಾಗಿರಬೇಕು. ಅನೇಕ ಪ್ರದೇಶಗಳಲ್ಲಿ ಕಾರುಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಅನುಮತಿ ನೀಡದಿದ್ದರೂ, ವಾಹನ ಚಾಲಕರು ಅಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಅಕ್ರಮವಾಗಿ ನಿಲುಗಡೆ ಮಾಡಿರುವ ವಾಹನಗಳನ್ನು ಪೊಲೀಸರು ತೆರವುಗೊಳಿಸುತ್ತಿದ್ದರೂ ಸಹ, ಪದೇ ಪದೇ ಪಾರ್ಕಿಂಗ್‍ ಇಲ್ಲದ ಜಾಗಗಳಲ್ಲಿ ನಿಲ್ಲಿಸುತ್ತಲೇ ಇರುತ್ತಾರೆ. ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ದಾರಿ ಮಾಡಿಕೊಡುವುದು ಹಾಗೂ ಇತರರು ಸುಲಭವಾಗಿ ಹಾದುಹೋಗುವ ರೀತಿಯಲ್ಲಿ ವಾಹನವನ್ನು ನಿಲ್ಲಿಸುವುದು ಮುಖ್ಯ.
2020/07/14 07:20:17
https://kannada.drivespark.com/off-beat/mahindra-tuv300-driver-lifts-maruti-suzuki-dzire-017338.html?utm_medium=Desktop&utm_source=DS-KN&utm_campaign=Similar-Topic-Slider
mC4
ಸಾಮಾಜಿಕ ಸಂಶೋಧನೆ ಯಾಕಾಗಿ? | ನಿಲುಮೆ ಮೇ 17, 2013 – ಪ್ರೊ.ಜೆ.ಎಸ್.ಸದಾನಂದ {ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ} ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ. ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಬಾಲುರವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಎನ್ನುವ ಪ್ರಾಕ್ಕಲ್ಪನೆಯನ್ನು (ಇದೊಂದು ಸಂಶೋಧನೆಯ ಮುಖಾಂತರ ಸಾಬೀತಾಗಬೇಕಾದ ಪ್ರಾಕ್ಕಲ್ಪನೆ ಮಾತ್ರ) ಏಕೆ ಮುಂದಿಡುತ್ತಾರೆ ಎನ್ನುವುದರ ಹಿನ್ನೆಲೆಯನ್ನು ನಾವು ನೋಡಬೇಕು. ಭಾರತದಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಹಾಗು ಅದರ ಪರಿಣಾಮಗಳ ಕುರಿತು ಈಗಾಗಲೇ ಅಸಂಖ್ಯಾತ ಸಂಶೋಧನಾ ಗ್ರಂಥಗಳು ಹೊರಬಂದಿವೆ. ಜಾತಿವ್ಯವಸ್ಥೆಯ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವನ್ನು ನಾವು ಕಾಣುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿ ಎಲ್ಲಡೆ ಕಂಡುಬರುವ ಜಾತಿಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎನ್ನುವುದುನ್ನು ಎಲ್ಲಾ ವಿದ್ವಾಂಸರೂ ಹೆಚ್ಚು ಕಡಿಮೆ ಒಪ್ಪುತ್ತಾರೆ. ಬಾಲು ಅವರ ಪ್ರಕಾರ ಇದ್ಕಕೆ ಮುಖ್ಯ ಕಾರಣ ಈ ಎಲ್ಲಾ ಸಂಶೋಧನೆಗಳು ಜಾತಿವ್ಯವಸ್ಥೆ ಎನ್ನುವುದು ಹಿಂದೂ ರಿಲಿಜನ್ನ ಪ್ರಧಾನ ಲಕ್ಷಣ ಎನ್ನುವ ಇದುವರೆಗೆ ಯಾವುದೇ ಸಂಶೋಧನೆಯಿಂದ ಸಾಬೀತಾಗದ ನಂಬಿಕೆಯನ್ನು ಆಧರಿಸಿವೆ. ಹಿಂದೂ ರಿಲಿಜನ್ ಎನ್ನುವುದು ಅಸ್ತಿತ್ವದಲ್ಲಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಜಾತಿಗಳು ಅದರ ನ್ಯೆತಿಕ ನಿರ್ಬಂಧದಲ್ಲಿ ಬಂದಿಸಲ್ಪಟ್ಟಿವೆ ಎನ್ನುವುದು ಒಂದು ಸಾಮಾನ್ಯ ನಂಬಿಕೆಯಾಗಿ ಮುಂದುವರೆದುಕೊಂಡು ಬಂದಿದೆಯೇ ಹೊರತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಿಲ್ಲ. ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರಿತಂತೆ ಇರುವ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ. ಭಾರತದಲ್ಲಿ ಜಾತಿ ವಿನಾಶವನ್ನು ಗುರಿಯಾಗಿಟ್ಟುಕೊಂಡ ಕಾರ್ಯಕ್ರಮಗಳು ನಿರೀಕ್ಷಿತ ಫಲ ಕೊಡುತ್ತಿಲ್ಲ ಏಕೆ? ಜಾತಿಯ ವಿರುದ್ಧ ಹೊರಾಟಗಳು ನಡೆದಂತೆಲ್ಲಾ ಜಾತಿ ಮತ್ತಷ್ಟು ಗಟ್ಟಿಯಾಗಿ ಬೇರೂರುತ್ತಿರುವಂತೆ ನಮಗನಿಸುವುದು ಏಕೆ? ಜಾತಿವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಬೇಕೆಂದು ಬಯಸುವ ಗುಂಪುಗಳೇ ತಮ್ಮ ಗುರಿಯನ್ನು ತಲುಪಲು ತಮ್ಮ ಜಾತಿ ಅಸ್ಮಿತೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕಾದ ಆಂತರಿಕ ವ್ಯೆರುಧ್ಯವನ್ನು ಎದುರಿಸಬೇಕಾದ ಪರಿಸ್ಥಿತಿಗೆ ಏಕೆ ಒಳಗಾಗಿವೆ? ದಲಿತರ ಮೇಲಿನ ಶೋಷಣೆಗೆ ಜಾತಿಯ ಅಸ್ತಿತ್ವವೇ ಕಾರಣವೆಂದಾದರೆ ಜಾತಿಗಳನ್ನು ಉಳಿಸಿಕೊಂಡು ದಲಿತರೊಡನೆ ಸಂಘರ್ಷರಹಿತ ಸಹಬಾಳ್ವೆಯನ್ನು ಮಾಡುತ್ತಿರುವ ಹಲವು ಉದಾಹರಣೆಗಳನ್ನು ವಿವರಿಸುವುದು ಹೇಗೆ? ಜಾತಿವ್ಯವಸ್ಥೆಯ ಸಿದ್ಧಾಂತದ ಮೂಲದಿಂದ ಹುಟ್ಟಿಕೊಂಡ ಜಾತಿಯಾದಾರಿತ ಅಧಿಕಾರ ರಾಜಕೀಯ ಜಾತಿಗಳ ನಡುವಿನ ವ್ಯೆಮನಸ್ಯದ ಸಮಸ್ಯೆಯನ್ನು ಶಮನಗೊಳಿಸುತ್ತಿದೆಯೆ ಅಥವಾ ಅದನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆಯೆ? ಜಾತಿ ವ್ಯವಸ್ಥೆಯ ಕುರಿತು ಇದೂವರೆಗೆ ನಡೆದಿರುವ ಅಸಂಖ್ಯಾತ ಸಂಶೋಧನೆಗಳು ಅದರ ಸ್ವರೂಪವನ್ನು ಗುರುತಿಸಲು ಏಕೆ ವಿಫಲವಾಗಿವೆ? ಎಲ್ಲರಲ್ಲೂ ಮಾನವೀಯತೆಯ ಮೌಲ್ಯವನ್ನು ಬಿತ್ತುವ ಆಶಯವನ್ನು ಇಟ್ಟುಕೊಂಡ ಚಳುವಳಿಗಳು ಪ್ರಬಲವಾದಂತೆಲ್ಲಾ ಜಾತಿ ಧ್ವೇಷ ಹಾಗೂ ವ್ಯೆಮನಸ್ಯಗಳೂ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು? ಈ ಎಲ್ಲಾ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಹಾಗೂ ಅವುಗಳಿಗೆ ಉತ್ತರ ಕಂಡುಕೊಳ್ಳಬೇಕಾದ ತುರ್ತು ನಮಗೆಲ್ಲರಿಗೂ ಇದೆ ಎನ್ನುವುದನ್ನು ದೇವನೂರರೂ ಒಪ್ಪುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾವೆದುರಿಸುತ್ತಿರುವ ಈ ಸಮಸ್ಯೆಗಳೇ ಜಾತಿಯನ್ನು ಕುರಿತ ಸಂಶೋಧನಾ ಪ್ರಶ್ನೆಗಳನ್ನು ಚರ್ಚೆಗೊಳಪಡಿಸಲು ನಮಗೆ ಮೂಲ ಪ್ರೇರಣೆಯಾಗಿವೆ. ಬಾಲುರವರ ಪ್ರಕಾರ ಜಾತಿವ್ಯವಸ್ಥೆ ಇದೆ ಎನ್ನುವ ನಂಬಿಕೆಯನ್ನು ಆಧರಿಸಿರುವ ಚಿಂತನೆಗಳು ಹಾಗೂ ಚಳುವಳಿಗಳು ನಾವು ತಲುಪಬೇಕಾದ ಗುರಿಯನ್ನು ಅಂದರೆ ಶೋಷಣಾರಹಿತ, ಪರಸ್ಪರ ಸಹಬಾಳ್ವೆಗೆ ಪೂರಕವಾದ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅಡ್ಡಿಯಾಗಿವೆ. ನಮ್ಮ ಸಮಾಜದಲ್ಲಿ ಹತ್ತು ಹಲವು ವಿಧದ ಶೋಷಣೆಗಳು, ಸಂಘರ್ಷಗಳು ಪ್ರಕಟಗೊಳ್ಳುತ್ತಲೇ ಇವೆ. ಜಾತಿ ಶೋಷಣೆ ಎಂದು ನಾವು ಗುರುತಿಸುವ ವಿದ್ಯಮಾನದಲ್ಲಿ ಜಾತಿ ಒಂದು ಸಾಧನವಾಗಿ ಬಳಕೆಯಾಗುತ್ತಿದೆಯೇ ಹೊರತು ಜಾತಿಯಿಂದಾಗಿಯೇ ಅಂತಹ ಶೋಷಣೆ ಹುಟ್ಟಿಕೊಳ್ಳುತ್ತದೆ ಎಂದು ನಮಗೆ ತೋರಿಸಲಾಗುವುದಿಲ್ಲ. ಜಾತಿ ವ್ಯವಸ್ಥೆಯ ಸಿದ್ಧಾಂತದ ಚೌಕಟ್ಟಿನಲ್ಲಿ ನೋಡಿದಾಗ ಜಾತಿಗಳು ಇದ್ದದ್ದರಿಂದಾಗಿಯೇ ಅಂತಹ ಸಂಘರ್ಷ ಉಂಟಾಯಿತೆಂಬಂತೆ ಕಾಣುತ್ತದೆ ಎನ್ನುವುದು ಅವರ ವಾದ. ಉದಾಹರಣೆಗೆ, ಒಂದು ಹಾಸ್ಟೆಲ್ನಲ್ಲಿರುವ ವಿವಿಧ ಜಾತಿಯ ವಿದ್ಯಾರ್ಥಿಗಳ ನಡುವೆ ಸಂಘರ್ಷ ಉಂಟಾದಾಗ ಜಾತಿಯೇ ಕಾರಣವೆಂಬಂತೆ ನಾವು ಪರಿಗಣಿಸುತ್ತೇವೆ. ಆದರೆ ಅದೇ ವಿದ್ಯಾರ್ಥಿಗಳು ವಿವಿಧ ಭಾಷೆಯವರಾಗಿದ್ದರೆ ಅಥವಾ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದರೆ ಮತ್ತು ಅವರ ನಡುವೆ ಜಗಳ ನಡೆದರೆ ಆಗ ಭಾಷೆ ಅಥವಾ ಜಿಲ್ಲೆಗಳು ಇರುವುದರಿಂದಲೇ ಸಮಸ್ಯೆ ಉದ್ಭವಿಸಿತು ಎನ್ನು ತೀರ್ಮಾನಕ್ಕೆ ನಾವು ಬರುವುದಿಲ್ಲ ಮತ್ತು ಆ ಕಾರಣಕ್ಕಾಗಿ ಭಾಷೆಗಳನ್ನೇ ಅಥವಾ ಜಿಲ್ಲೆಗಳನ್ನೇ ನಿರ್ಮೂಲನೆ ಮಾಡಬೇಕೆಂದು ನಮಗನಿಸುವುದಿಲ್ಲ. ತಮ್ಮ ನಡುವಿನ ವೈಮನಸ್ಯಕ್ಕೆ ಭಾಷೆ ಅಥವಾ ಜಿಲ್ಲೆಗಳನ್ನು ಸಾಧನವಾಗಿ ಬಳಸಿಕೊಂಡರು ಎಂದಷ್ಟೇ ನಾವು ನೋಡುತ್ತೇವೆ. ಆದರೆ ಜಾತಿ ಘರ್ಷಣೆಗಳ ವಿಷಯಕ್ಕೆ ಬಂದಾಗ ಜಾತಿ ನಿರ್ಮೂಲನವೊಂದೇ ಪರಿಹಾರವಾಗಿ ನಮಗೆ ಕಾಣತೊಡಗುತ್ತದೆ. ಒಂದು ಶೋಷಣಾರಹಿತ ಹಾಗೂ ನ್ಯಾಯಯುತ ಸಮಾಜವನ್ನು ನಿರ್ಮಿಸಬೇಕೆಂಬ ಕಳಕಳಿ ಇರುವವರಿಗೆ ಮುಖ್ಯವಾಗಬೇಕಾದ ಅಂಶವೆಂದರೆ ಸಮಸ್ಯೆಯ ಸ್ವರೂಪವನ್ನು ಗುರುತಿಸುವಲ್ಲಿ ಯಾವ ಮಾರ್ಗ ಹೆಚ್ಚು ವ್ಯೆಜ್ಞಾನಿಕವಾದುದು ಮತ್ತು ಅದು ಎಷ್ಟರಮಟ್ಟಿಗೆ ಸಮಾಜದಲ್ಲಿ ಕಂಡುಬರುತ್ತಿರುವ ಅಸಮಾನತೆ, ಅನ್ಯಾಯ ಶೋಷಣೆಗಳಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಮರ್ಥವಾಗಿದೆ ಎನ್ನುವುದರತ್ತ ಗಮನ ಹರಿಸುವುದು. ಈ ನಿಟ್ಟಿನಲ್ಲಿ ಬಾಲುರವರದು ಒಂದು ಪ್ರಾಕ್ಕಲ್ಪನೆ (ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎನ್ನುವ) ಮಾತ್ರ. ಈ ಪ್ರಾಕ್ಕಲ್ಪನೆ ಮುಂದೆ ಈ ನಿಟ್ಟಿನಲ್ಲಿ ಯಾರಾದರೂ ಕ್ಯೆಗೊಳ್ಳಬಹುದಾದ ಸಂಶೋಧನೆಯ ಸಾಧ್ಯತೆಯನ್ನು ತೋರಿಸುತ್ತದೆ ಹಾಗೂ ಅಂತಹ ಒಂದು ಸಂಶೋಧನೆಯಲ್ಲಿ ಅವರ ಪ್ರಾಕ್ಕಲ್ಪನೆಯು ನಿರಾಕಾರಿಸಲ್ಪಡುವ ಸಾಧ್ಯತೆಯೂ ಇದೆ. ಅವರ ಪ್ರಾಕ್ಕಲ್ಪನೆಯು ಸಂಶೋಧನೆಯ ಮೂಲಕ ಸಾಬೀತಾಗಬೇಕಾದರೆ ಕೆಲವು ಕನಿಷ್ಟ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ: 1) ಜಾತಿಶೋಷಣೆಯ ವಿದ್ಯಮಾನದ ಬಗ್ಗೆ ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ನಾವು ಕೊಡುತ್ತಿರುವ ವಿವರಣೆಗಳಿಗಿಂತ ಉತ್ತಮವಾದ, ಅಂದರೆ ಕಡಿಮೆ ಆಂತರಿಕ ವ್ಯೆರುಧ್ಯಗಳನ್ನೊಳಗೊಂಡ (ಸಂಶೋಧನೆಯಲ್ಲಿ ಯಾವುದೇ ವಿವರಣೆಯು ಸಂಪೂರ್ಣವಾದ ಅಥವಾ ಅಂತಿಮವಾದ ವಿವರಣೆಯಾಗಿರುವುದಿಲ್ಲ) ಹಾಗೂ, 2) ಆ ವಿದ್ಯಮಾನದಲ್ಲಿ ನಾವು ಗುರುತಿಸುವ ಸಮಸ್ಯೆಗಳಿಗೆ ಈಗಿರುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವಂತಹ ವಿವರಣೆ ಅದಾಗಿರಬೇಕು. ಹಾಗಿದ್ದಾಗ ಮಾತ್ರ ಅದು ಜ್ಞಾನದ ಮುಂದುವರಿಕೆಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ. ಇಲ್ಲವಾದಲ್ಲಿ ಅವರ ಪ್ರಾಕ್ಕಲ್ಪನೆ ಬಿದ್ದುಹೋಗುತ್ತದೆ. ಮೇಲಿನ ಈ ಎರಡು ಅಂಶಗಳು ಅವರ ಪ್ರಾಕ್ಕಲ್ಪನೆಯನ್ನು ಪರೀಕ್ಷಿಸುವ ಮಾನದಂಡಗಳೂ ಕೂಡ ಆಗಿವೆ. ಅದರೆ ಈಗ ಬಾಲುರವರ ಪ್ರಾಕ್ಕಲ್ಪನೆಗೆ ಬರುತ್ತಿರುವ ಟೀಕೆಗಳ ಮಾನದಂಡ ಯಾವುದಾಗಿದೆ ನೋಡಿ. ಮೊದಲನೆಯದಾಗಿ, ಈಗಿರುವ ವಿವರಣೆಗಳು (ಜಾತಿವ್ಯವಸ್ಥೆ, ಪುರೋಹಿತಶಾಹಿ, ಬ್ರಾಹ್ಮಿಣಿಸಂ ಇತ್ಯಾದಿ) ಪ್ರಶ್ನಾತೀತ ಎನ್ನುವ ಧೋರಣೆ. ಎರಡನೆಯದಾಗಿ, ಜಾತಿ ವ್ಯವಸ್ಥೆಯ ಸೈದ್ಧಾಂತಿಕ ಚೌಕಟ್ಟನ್ನು ಪ್ರಶ್ನಿಸುವುದೆಂದರೆ ಅದನ್ನು ಆದರಿಸಿ ಇದೂವರೆಗೂ ಕಟ್ಟಿಕೊಂಡು ಬಂದ ಚಳುವಳಿಗಳ, ಹೋರಾಟಗಳ, ಮತ್ತು ಅದಕ್ಕಾಗಿ ಲಕ್ಷಾಂತರ ಮಂದಿ (ಅಂಬೇಡ್ಕರ‍್ ರವರನ್ನೂ ಒಳಗೊಂಡಂತೆ) ಮಾಡಿದ ತ್ಯಾಗದ ಮೂಲ ಆಶಯವನ್ನೇ ಅಲ್ಲಗಳೆದಂತೆ ಎನ್ನುವ ಮನೋಭಾವ. ಮೂರನೆಯದಾಗಿ, ಈಗ ಅನುಸರಿಸುತ್ತಿರುವ ಮಾರ್ಗಕ್ಕೆ ಯಾವುದೇ ಪರ್ಯಾಯ ಇರುವುದು ಸಾಧ್ಯವೇ ಇಲ್ಲ ಎನ್ನುವ ಅಚಲ ನಂಬಿಕೆ. ಸಾಮಾಜಿಕ ಅಥವಾ ಯಾವುದೇ ಚಳುವಳಿಯಲ್ಲಿ ತೊಡಗಿರುವವರಿಗೆ ಇಂತಹ ಧೋರಣೇಗಳಿರುವುದು ಅಸಹಜವೇನಲ್ಲ. ಒಂದು ರೀತಿಯಲ್ಲಿ ಅನಿವಾರ್ಯ ಕೂಡ. ತಾನು ಸಾಗುತ್ತಿರುವ ಮಾರ್ಗದ ಬಗ್ಗೆ ನಂಬಿಕೆ ಹೊಂದಿರದ ವ್ಯಕ್ತಿ ಚಳುವಳಿಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಂಶೋಧನೆಯಲ್ಲಿ ಅಂತಹ ಧೋರಣೆ ಅತ್ಯಂತ ಅಪಾಯಕಾರಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೊಸ ಸಾಧ್ಯತೆಗಳನ್ನೇ ಶಾಶ್ವತವಾಗಿ ಅದು ಮುಚ್ಚಿಬಿಡುತ್ತದೆ. ದೇವನೂರರು ಕೇವಲ ಒಬ್ಬ ಚಳುವಳಿಯ ಕಾರ್ಯಕರ್ತ ಮಾತ್ರವಲ್ಲ ಅವರು ಒಬ್ಬ ಚಿಂತಕರೂ ಹೌದು. ಆದರೆ ಬಾಲುರವರ ಸಂಶೋಧನಾ ಪ್ರಾಕ್ಕಲ್ಪನೆಯನ್ನು ವಿಮರ್ಶೆಗೊಳಪಡಿಸುವಾಗ ಅವರು ಅನುಸರಿಸುತ್ತಿರುವ ಮಾನದಂಡ ಮಾತ್ರ ಚಳುವಳಿಯ ಕಾರ್ಯಕರ್ತನದು. ಬಾಲು ಅವರ ವಾದದ ಬಗ್ಗೆ ಟೀಕೆಗಳು, ವಿಮರ್ಶೆಗಳು ಬಂದಷ್ಟೂ ಒಳ್ಳೆಯದೇ. ಹಾಗಿದ್ದಾಗ ಮಾತ್ರ ಜ್ಞಾನದ ಮುಂದುವರಿಕೆ ಸಾಧ್ಯ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮುಂದೊಂದು ದಿನ ಬಾಲು ಮಂಡಿಸಿದ ಪ್ರಾಕ್ಕಲ್ಪನೆಯನ್ನು ಅದಕ್ಕಿಂತಲೂ ಉತ್ತಮವಾದ ಮತ್ತೊಂದು ಪ್ರಾಕ್ಕಲ್ಪನೆಯು ಬದಲಿಸದಿದ್ದರೆ ಅವರು ಈಗ ಮಾಡುತ್ತಿರುವುದು ವ್ಯೆಜ್ಞಾನಿಕ ಸಂಶೋಧನೆಯೇ ಅಲ್ಲ ಎಂದಾಗುತ್ತದೆ. ಅವರು ಹೆಳುತ್ತಿರುವುದು ಸಾರ್ವಕಾಲಿಕ ಅಂತಿಮ ಸತ್ಯವೆಂದು ಯಾರಾದರೂ ಹೇಳಿದರೆ ಅವರಿಗೆ ಸಂಶೋಧನೆಯ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂದು ಹೇಳಬೇಕಾಗುತ್ತದೆ. ಜಾತಿ ವ್ಯವಸ್ಥೆಯನ್ನು ಕುರಿತ ಬಾಲು ಅವರ ಪ್ರಾಕ್ಕಲ್ಪನೆಯನ್ನು ನಿರಾಕರಿಸಲು ಜಾತಿ ವ್ಯವಸ್ಥೆಯ ಬಗ್ಗೆ ಈಗಾಗಲೇ ಕಟ್ಟಿಕೊಂಡಿರುವ ಬೌದ್ಧಿಕ ಚೌಕಟ್ಟಿನ ಬಗ್ಗೆ ಅವರು ಎತ್ತುವ ಸಮಸ್ಯೆಗಳಿಗೆ ಸಮರ್ಥ ಉತ್ತರ ನೀಡಬೇಕಾಗುತ್ತದೆ. ಅಂತಹ ಸಂಶೋಧನೆಯಲ್ಲಿ ತೊಡಗುವುದೇ ಹುನ್ನಾರ, ಕುಯುಕ್ತಿ ಎನ್ನುವುದು ಉತ್ತರವಾಗುವುದಿಲ್ಲ. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ನಾವು ಈಗಾಗಲೇ ಕಂಡುಕೊಂಡಿರುವ ಮಾರ್ಗಕ್ಕೆ ಪರ್ಯಾಯಗಳೇ ಇಲ್ಲ, ಅಂತಹ ಒಂದು ಪರ್ಯಾಯದ ಹುಡುಕಾಟ ನಿರರ್ಥಕ ಎನ್ನುವ ನಿಲುವು ಜ್ಞಾನದ ಬೆಳವಣಿಗೆಯನ್ನೇ ಸ್ಥಗಿತಗೊಳಿಸಿಬಿಡುತ್ತದೆ. ಮೀಸಲಾತಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ತನ್ನೆಲ್ಲಾ ಮಿತಿಗಳ ನಡುವೆ ಮೀಸಲಾತಿಯು ಅದರ ಫಲಾನುಭವಿ ಜಾತಿಗಳ ಅಭ್ಯುದಯದಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಿದೆ ಎನ್ನುವುದು ನನ್ನ ನಿಲುವು. ಎರಡು ದಶಕಗಳ ಹಿಂದೆ ನಾನು ಮಂಡಿಸಿದ ಪಿ.ಹೆಚ್.ಡಿ ಪ್ರಬಂಧದ ಕೊನೆಯಲ್ಲಿ 'ಯಾವ ವ್ಯವಸ್ಥೆಯೊಳಗೆ ಹಾಗೂ ಯಾವ ವ್ಯವಸ್ಥೆಯ ಕಾರಣದಿಂದಾಗಿ ಮೀಸಲಾತಿಯ ಬೇಡಿಕೆ ಹುಟ್ಟಿಕೊಂಡಿದೆಯೋ ಅಂತಹ ವ್ಯವಸ್ಥೆಯಲ್ಲಿರುವ ಅನ್ಯಾಯಕ್ಕಿಂತ ಮಿಗಿಲಾದ ಅನ್ಯಾಯ ಮೀಸಲಾತಿಯಿಂದಾಗುವುದು ಸಾಧ್ಯವಿಲ್ಲ', ಹೇಳಿರುವ ನನ್ನ ನಿಲುವು ಸರಿ ಎಂದು ಇಂದಿಗೂ ನನಗನಿಸುತ್ತದೆ. ಆದರೆ ಯಾವ ಗುರಿಯನ್ನು ಮುಟ್ಟುವ ಉದ್ದೇಶದಿಂದ ಮೀಸಲಾತಿಯನ್ನು ಸಾಧನವನ್ನಾಗಿ ನಾವು ಬಳಸುತ್ತಿದ್ದೇವೆಯೋ ಅಂತಹ ಗುರಿಯನ್ನು ನಾವು ಅದರ ಮೂಲಕ ಮುಟ್ಟಲು ಸಾಧ್ಯವಾಗುವುದಿಲ್ಲ, ಬದಲಿಗೆ ದೀರ್ಘಕಾಲದಲ್ಲಿ ಮೀಸಲಾತಿಯ ಫಲಾನುಭವಿ ಜಾತಿಗಳಿಗೆ ಅದರಿಂದ ಅನ್ಯಾಯವೇ ಆಗುತ್ತದೆ ಎಂದು ಯಾರಾದರೂ ವಾದಿಸಿದರೆ ಅಂತಹ ವಾದವನ್ನು ಮುಕ್ತಮನಸ್ಸಿನಿಂದ ಕೇಳಿಸಿಕೊಳ್ಳುತ್ತೇನೆ. ಹಾಗೆ ವಾದಿಸುವುದೇ ಒಂದು ಅಪರಾಧ ಎಂದು ನನಗನಿಸುವುದಿಲ್ಲ. ಏಕೆಂದರೆ ಅನ್ಯಾಯವನ್ನು ಸರಿಪಡಿಸುವುದು ನನಗೆ ಮುಖ್ಯವೇ ಹೊರತು ಮೀಸಲಾತಿಯನ್ನಾಗಲೀ ಅಥವಾ ಜಾತಿ ವ್ಯವಸ್ಥೆಯ ಕುರಿತು ಈಗಿರುವ ಬೌದ್ಧಿಕ ಚೌಕಟ್ಟನ್ನಾಗಲೀ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆನ್ನುವ ಹಠ ಸರಿ ಎಂದು ನನಗನಿಸುವುದಿಲ್ಲ. ಅಂತಹ ಹಠಮಾರಿತನದ ನಿಲುವಿನಿಂದ ಹುಟ್ಟಬಹುದಾದ ಪಟ್ಟಭದ್ರ ಶಕ್ತಿಗಳು ಸೃಷ್ಟಿಸಬಹುದಾದ ಅಪಾಯದ ಲಕ್ಷಣಗಳು ಈಗಾಗಲೇ ಗೋಚರಿಸತೊಡಗಿವೆ. ಚರ್ಚೆ, ಜಾತಿ ವ್ಯವಸ್ಥೆ, ಧರ್ಮ, ವಚನ ಚರ್ಚೆ, ವಚನ ಚಳುವಳಿ, ವಚನ ಸಾಹಿತ್ಯ, ಸಾಮಾಜಿಕ ಸಂಶೋಧನೆ, ಸಿ.ಎಸ್.ಎಲ್.ಸಿ, CSLC ← ಹೇಗೆ ಹೇಳಲಿ? ಏನು ಹೇಳಲಿ? ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ 'ಸೋತಿದ್ದು ಬಿಜೆಪಿ' → ಮೇ 17 2013 "ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರಿತಂತೆ ಇರುವ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ." Kannada Pls ಮೇ 18 2013 ಜ್ಞಾನಕ್ಕೆ ಪ್ರಾಧಾನ್ಯ ಕೊಡಲಿಚ್ಚಿಸದವರ ಬಗ್ಗೆ ಇಷ್ಟು ಕುತುಹಲ ಎಕೆ? ಹಿಂದೂ ಸಂಕೃತಿಯನ್ನು ತಿರಸ್ಕರಿಸುತ್ತಿರುವ ಕಾರಣವೇ? ಬಿಡಿ, ಡಾ|| ಅಂಬೇಡ್ಕರರವರೇ ದ್ವೇಷಕ್ಕೆ ಶರಣಾಗಿ ಹಿಂದೂ ಸಮಾಜಶಾಸ್ತ್ರದ ಕುರಿತು ಟೀಕೆ ಮಾಡುವ ಬದಲಾಗಿ ಕಟಾಕ್ಷ ಮಾಡಿರುವಾಗ ಈ ಮಹಾದೇವರಂಥವರ ದ್ರಿಷ್ಟಿಕೊನಕ್ಕೆ ಉಪ್ಪು ಹಾಕುವುದಾದರೂ ಏಕೆ? ಅವರಲ್ಲಿ ಅಷ್ಟು ಜಾಣ್ಮೆ ಇದ್ದಲ್ಲಿ ನನ್ನೊಡನೆ ತಾರ್ಕಿಕ ಚರ್ಚಾಕೂಟಕ್ಕೆ ಅಣಿಯಾಗಲಿ. Open debate ಇದಕ್ಕೆ ತಕ್ಕ ಸೂಕ್ತ ಉಪಚಾರ. ಅಲ್ಲೇ ಜನರಿಗೆ ತಿಳಿದು ಬರುವುದು ಇವರ ವಾದದಲ್ಲಿ ಎಷ್ಟು ವಿಷಯ-ಅರ್ಥವಿದೆ ಎನ್ನುವುದು. ಇದೇನೂ ಸತ್ಯ ಇಂದು 1980 ರಿಂದೀಚೆ ಶರದ ಪವಾರವರ ರಾಜಕೀಯ ಸ್ವಾರ್ಥಕ್ಕೆಂದು ನಾಗಪೂರದಿಂದ ಮುಂಬಾಯಿಗೆ ಪ್ರಕಾಶ್ ಅಂಬೇಡ್ಕರ್ ಹಾಗು ಅವರ ಮಾತೋಶ್ರೀಯವರನ್ನು ಕರೆತಂದು, ಇಲ್ಲಿಯ ಗಿರಗಾಂವ ಹತ್ತಿರ ಆಗಲೇ ಅಂದರೆ 1979 ರಲ್ಲಿ ಸ್ಥಾಪಿಸಿದ್ದ ದಲಿತ-ಪ್ಯಾಂಥರ ಸಂಘಟನೆಯ ಮುಂದಾಳತ್ವ ವಹಿಸಲು ಸ್ವಾಗತಿಸಲಾಯಿತು. ಶಿವಸೇನೆಯಿಂದ ಮಹಾರ ಜಾತಿಯ ಜನರನ್ನು ಮೊದಳುಬಾರಿಗೆ ಬೇರಪಡಿಸಲಾಯಿತು. ಮರಾಠವಾಡಾ ವಿಶ್ವವಿದ್ಯಾಲಯಕ್ಕೆ ಡಾ|| ಬಾಬಾಸಾಹೇಬ್ ಅಂಬೇಡ್ಕರ ರವರ ಹೆಸರು ನೀದಲ್ಗುವುದೆಂದು ಘೋಶಿಸಲಾಯಿತು, ಆಗ ಶಾರದಾ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.ಅಲ್ಲಿಯವರೆಗೆ ಜಾತಿಯ ಭೇದಭಾವ್ ನಗರಗಲೆಲ್ಲೂ ಕಾಣಬರುತ್ತಿರಲಿಲ್ಲ. ಅಂಬೇಡ್ಕರ ಇವರು ತಮ್ಮ ವಿಚಲಿತ್ ಮನಸ್ಥಿತಿಯಲ್ಲಿ ಕೆಲವು ಲೇಖನೆಗಳನ್ನು ಬರೆದಿದ್ದರೂ ಪ್ರಕಟಿಸದೆ ರದ್ದಿಗೆ ಎಸೆದಿದ್ದನ್ನೆಲ್ಲ ಒಂದುಗೂಡಿಸಿ ಮಹಾರಾಷ್ಟ್ರ ಸರ್ಕಾರದ ಪರವಾಗಿ ಆ ಲೇಖನಗಳ ಪುಸ್ತಕಗಳನ್ನು ಪ್ರಕಟಿಸುವಂತೆ ಆದೇಶ ನೀಡಿದರು. ಮಾತ್ರ ಅದು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲಾಗಿತ್ತು. ದಲಿತ ಮುಖಂಡರಲ್ಲಿ ಒಬ್ಬರು ಆ ಪುಸ್ತಕಗಳನ್ನು ನನಗೆ ಓದಲು ಕೊಟ್ಟಾಗ ನನಗರಿವಾದದ್ದು ಒಂದೇ, ಹೊಟ್ಟೆಯಲ್ಲಿ ಕಿಚ್ಚಿಟ್ಟು ಪಂಡಿತನೂ ಪ್ರತಿಪಾದಿಸಲು ಹೋದಾಗ್ ಅವನಾಥ ಮೂರ್ಖ ಬೇರೆಲ್ಲೂ ಕಾಣಿರಿ. ಕೊನೆಗೆ ನಾನೇ ದಲಿತ ಸಂಘಟನೆಯ ವಿದ್ಯಾವಂತ ಜನರನ್ನು ಉದ್ದೇಶಿಸಿ ಬಾಬಾ ಸಾಹೇಬರು ಆಕ್ಷೇಪವೆತ್ತಿದ್ದ ವಿಷಯದ ವಿವೇಚನೆ ಮಾಡಿ ಭಾರತಿಯ ಸಮಜವಿಜ್ನಾನ ಹಾಗು ಸಮಾಜಶಾಸ್ತ್ರದ ಆಧಾರದ ಮೇಲೆ ಆ ಆಕ್ಷೇಪಗಳನ್ನು ಕೇವಲ ಮಾನಸಿಕ ಅಸಮಂಜಸತನೆ ಎಂದು ಸಿದ್ಧ ಮಾಡಿದೆ. ಅಲ್ಲಿ ನೆರೆದ ಎಲ್ಲರೂ ನನ್ನ ಅವಲೋಕನವನ್ನು ಮನ್ನಿಸಿ ಭಾರತಿಯ ಸನಾತನ ಸಮಾಜ್ ಶಾತ್ರವನ್ನು ಶ್ರೇಷ್ಟವೆಂದು ಒಪ್ಪಿಕೊಂಡರು. ಇದು ಸಾಧಾರಣ ಕಾರ್ಯವಾಗಿರಲಿಲ್ಲ. ಅವರದೇ ಬಹುಸಂಖ್ಯ ವಸಾಹತಿನಲ್ಲಿ ಅಂಬೇಡ್ಕರರನ್ನು ತಪ್ಪು ಎಂದು ಸಿದ್ಧ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. ನನ್ನ ವ್ಯಕ್ತಿತ್ವವೇ ಭಿನ್ನ, ನನಗೆ ಎಳ್ಳಷ್ಟು ಜೀವದ ಭಯವಿಲ್ಲ. ನನ್ನ ವಿಚಾರವನ್ನು ಮಾಡಿಸಲು ಎಂದೂ ಸಂಕೋಚ ಪಡುವುದೂ ಇಲ್ಲ, ತಿಕಾಕರರ್ನ್ನು ಯಾವತ್ತೂ ಸ್ವಾಗತಿಸುತ್ತೇನೆ ಮಾತ್ರ ಕಟಾಕ್ಷ ಯಾವ ಕಾರಣಕ್ಕೂ ಸಹಿಸಲಾರೆ. ಇದೂ ಇತಿಹಾಸದ ಒಂದು ಭಾಗ ಎನ್ನುವುದನ್ನು ಮರೆಯ ಬೇಡಿ. ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಘನವಾದ, ತುಂಬಾ ತೂಕದ ( ಸುಮಾರು ಒಂದು ಕ್ವಿಂಟಲ್ ನಷ್ಟು ತೂಕದ್ದು) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ಚರ್ಚೆಗೆ ನೆಲೆಯಾಗಿರುವ ಅತಂತ್ಯ ವಿಶ್ವಾಸಾರ್ಹ ಪತ್ರಿಕೆ ಯೊಂದು 'ವಿಕೃತ ಸಂಶೋಧನೆಗೆ ಕಡಿವಾಣ ಬೇಕು' ಎಂಬುದನ್ನೆ ತಲೆಬರಹವಾಗಿ ಉಪಯೋಗಿಸಿದೆ ಮತ್ತು ೧ ಸೆಂ.ಮಿ ಗಾತ್ರದ ಅಕ್ಷರಗಳಲ್ಲಿ ಅದನ್ನು ಪ್ರಕಟಿಸಿದೆ! ಅದನೆಂದರೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ವಿಕೃತ ಸಂಶೋಧನೆಗಳಿಗೆ ಕಡಿವಾಣ ಹಾಕಬೇಕು..ಈ ಎಲ್ಲ ಸಂಶೋಧನೆಗಳು ಸಮಾಜಕ್ಕೆ ತಪ್ಪು ಕಲ್ಪನೆಯನ್ನು ನೀಡುತ್ತವೆ ಎಂದು. ಕೆಲವು ಸಂಶೋಧಕರಿಗೆ ತಾವು ಮಾಡಿದ್ದು, ಮಾಡುತ್ತಿರುವುದು ಮಾತ್ರ 'ಸುಕೃತ' ಸಂಶೋಧನೆ, ತಾವೇ ಒಂದು ವಿಷಯದ ಬಗ್ಗೆ ಫೈನಲ್ ಅಥಾರಿಟಿ ಎಂಬ ಭ್ರಮೆಯಿರುತ್ತದೆ. ಯಾರೇನೂ ಬ್ರಹ್ಮರಲ್ಲ.. ಆಣ್ಣಿಗೇರಿಯ ತಲೆಬುರುಡೆ ಯ ಇತಿಹಾಸ ಕುರಿತು ಕಲ್ಬುರ್ಗಿಯವರ 'ಕರಾರುವಾಕ್ಕು' ವಾಖ್ಯಾನ ಓದಿದ್ದು..ನಂತರ ವೈಜ್ಞಾನಿಕವಾಗಿ ಅದರ ಕಾಲ ಪತ್ತೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. .. 'ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಸಂಶೋಧಕ ಎಂ.ಎಂ ಕಲ್ಬುರ್ಗಿಯವರು' ಅಂತಾಗಬೇಕಿತ್ತು.. ಕ್ಷಮಿಸಿ ಸ್ಥಾಪಿತ ವಾದಗಳಿಗೆ ವಿರುದ್ದವಾಗಿ ಪ್ರಶ್ನೆಗಳನ್ನು ಎತ್ತಿದ್ದರೆ ಅವುಗಳಿಗೆ ಬೌದ್ದಿಕವಾಗಿ ಉತ್ತರಿಸಲಾಗದೆ ಅಧಿಕಾರದ ಧರ್ಪದ ಮೂಲಕ ಆ ರೀತಿಯ ಪ್ರಶ್ನೆಗಳನ್ನು ಕೇಳುವ ದ್ವನಿಗಳನ್ನು ಅಡಗಿಸುವ ಫ್ಯಾಸಿಸ್ಟ್ ಧೋರಣೆಯನ್ನು ಪ್ರದರ್ಶಿಸುವುದು ಹಲವು ದಶಕಗಳಿಂದ ಘನಸಂಶೋಧಕರೆಂಬ ಹಣೆಪಟ್ಟಿಹೊತ್ತವರಿಗೆ ಭೂಷಣವೇ? ಸಾಮಾಜಿಕ ವಾಸ್ತವಗಳನ್ನು ಶೋದಿಸುವ ಅವಶ್ಯಕತೆಯನ್ನೇ ನಿರಾಕರಿಸುವ ಮತ್ತು ತಾವು ಒಪ್ಪಿತ ನಿಲುಗಳ ಕುರಿತ ಮೂಲಭೂತ ಪ್ರಶ್ನೆಗಳು ಎದ್ದಾಗ ಆ ಪ್ರಶ್ನೆಗಳ ಬೌದ್ದಿಕ ಆಯಾಮಗಳನ್ನೇ ಮರೆಮಾಚಿ ಆ ರೀತಿ ಪ್ರಶ್ನಿಸುವವರೆಲ್ಲರೂ ಅನೈತಿಕರೂ ಮತ್ತು ಅಮಾನವೀಯ ಜೀವಿಗಳು ಎಂಬಂತೆ ತೀರ್ಪುಕೊಟ್ಟು ಅಮಾಯಕರನ್ನು ಎತ್ತಿಕಟ್ಟುವ ಕುಟಿಲತೆ ಯಾವ ಬೌದ್ದಿಕ ಚಿಂತನೆಯ ಲಕ್ಷಣ? ನೂರಾರು ವರ್ಷಗಳಿಂದ ಈ ಮಹಾನ್ ಬುದ್ದಿಜೀವಿಗಳ ವಿವರಿಸಿದ್ದನ್ನೆಲ್ಲಾ ಒಪ್ಪಿ ಅವರು ಸೂಚಿಸಿದ್ದೆಲ್ಲವನ್ನು ಕಾಯ್ದೆಗಳ ರೂಪದಲ್ಲಿ ಜಾರಿಗೊಳಿಸಿ ಐದಾರು ದಶಕಗಲು ಕಳೆದ ಮೇಲೂ ಶೋಷಣೆ ಅನ್ಯಾಯಗಳೆನ್ನಿಸುವ ವಾಸ್ತವಗಳು ನಮ್ಮ ಕಣ್ಣೆದುರಿಗೇ ರಾಚುವಂತೆ ಜೀವಂತವಿದ್ದಾಗಲೂ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವಲ್ಲಿ ಮತ್ತು ಅವುಗಳಿಗೆ ನೀಡಿರುವ ಪರಿಹಾರಗಳಲ್ಲಿ ಧೋಷಗಳಿರಬಹುದೇ ಮತ್ತು ಈ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳನ್ನು ಬೇರುಸಹಿತ ನಿರ್ಮೂಲನ ಮಾಡಲು ಈಗಿರುವ ವಿವರಣೆಗಳಿಗಿಂತ ಉತ್ತಮವಾದ ಸಿದ್ದಾಂತಗಳನ್ನು ರೂಪಿಸಲು ಸಾಧ್ಯವಿದೆಯೇ ಎನ್ನುವಂತಹ ಪ್ರಶ್ನೆಗಳನ್ನಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗುವುದನ್ನೇ ಮಹಾ ಅಪರಾಧವೆಂಬಂತೆ ಬಿಂಬಿಸುತ್ತಿರುವ ಈ ಸ್ಥಾಪಿತ ನಿಲುವುಗಳ ವಕ್ತಾರರ ಹಿಂದಿರುವ ಕಾಳಜಿಯಾದರೂ ಏನು? ಇವರಿಗೆ ಈ ಅನ್ಯಾಯ ಶೋಷಣೆಗಳನ್ನು ನಮ್ಮ ಸಮಾಜದಿಂದ ಬೇರುಸಹಿತ ಕಿತ್ತುಹಾಕುವುದು ಬೇಕಿಲ್ಲವೇ? ಈ ಸಮಸ್ಯೆಗಳು ಮರೆಯಾದರೆ ತಮ್ಮ ಮಾನವೀಯ ಮುಖವಾಡದ ಪ್ರದರ್ಶನಕ್ಕೆ ನಿಧರ್ಶನಗಳು ಸಿಗದಲ್ಲಾ ಎನ್ನುವ ಅಂಜಿಕೆ ಇವರುಗಳಿಗಿದೆಯೇ? ಈ ಶೋಷಣೆಯ ಅನ್ಯಾಯದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಕಟ್ಟಿಕೊಂಡಿರುವ 'ಬೌದ್ದಿಕ ನಾಯಕತ್ವ' ಮತ್ತು ಇತರೆ ಸ್ಥಾನಮಾನ, ಪ್ರಶಸ್ತಿಗಳಿಂದ ವಂಚಿತವಾಗಿಬಿಡಬಹದು ಎನ್ನುವ ಭಯ ಇವರನ್ನು ಆವರಿಸಿದೆಯೇ? ಇವರ ಕಿರೀಟಗಳು ಶಾಶ್ವತವಾಗಿರಬೇಕೆಂಬ ಕಾರಣಕ್ಕೆ ನಮ್ಮ ಜನ ಇದೇ ಸ್ಥಿತಿಯನ್ನು ಮತ್ತು ಇನ್ನೂ ಹೆಚ್ಚಿನ ಕಷ್ಟಕೋಟಲೆಗಳನ್ನು ಅನುಭವಿಸುತ್ತಾ ಮುಂದುವರಿಯಬೇಕೇ? ಅನ್ಯಾಯ ಮತ್ತು ಶೋಷಣೆಗಳಿಗೆ ಒಳಗಾಗಿರುವುವರು ಈ ಸೋಗಲಾಡಿ ಮೊಸಳೆ ಕಣ್ಣೀರನ್ನು ಇನ್ನೂ ಎಷ್ಟುದಿನ ನಂಬಿಕೊಂಡು ಹೋಗಬೇಕು? ನನ್ನ ಪ್ರಕಾರ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಬಹುಬೇಗ ಈ ವೇಷಗಳನ್ನು ಕಳಚಲೇಕಾದ ಅನಿವಾರ್ಯತೆ ಬರುತ್ತದೆ. ಇನ್ನೂ ಈ ಕಪಟನಾಟಕಗಳನ್ನು ಸಹಿಸಿಕೊಂಡು ಇವರು ನಮ್ಮನ್ನು ಉದ್ದಾರಮಾಡುವ ಅವತಾರಪುರಷರೆಂದು ನಂಬಿಕೊಂಡಿರುವ ಸಹನೆ ಈ ಅನ್ಯಾಯಶೋಷಣೆಗೊಳಗಾಗಿರುವ ಜನರಿಗೆ ಇಲ್ಲ. ನಮ್ಮ ಸಮಾಜದ ಕುರಿತ ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ಅವರ ಸ್ಥಾಪಿತ ನಿಲುವುಗಳಿಗೆ ವಿರುದ್ದವಾಗಿರುವ ಎತ್ತುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ತೋರುತ್ತಿರುವ ಅವರ ವರ್ತನೆಗಳೇ ಅವರ ನಾಟಕಗಳು ಜಗಜ್ಜಾಹಿರಾಗುವಂತೆ ನಿದರ್ಶನಗಳನ್ನು ಕೊಡುತ್ತಿವೆ.
2021/09/25 15:05:32
https://nilume.net/2013/05/17/%E0%B2%B8%E0%B2%BE%E0%B2%AE%E0%B2%BE%E0%B2%9C%E0%B2%BF%E0%B2%95-%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86-%E0%B2%AF%E0%B2%BE%E0%B2%95%E0%B2%BE%E0%B2%97%E0%B2%BF/
mC4
ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಸಮರ್ಥಿಸಿಕೊಂಡ ಸಿಎಂ – EESANJE / ಈ ಸಂಜೆ ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಸಮರ್ಥಿಸಿಕೊಂಡ ಸಿಎಂ ಮೈಸೂರು, ಜು.14- ನ್ಯಾಯಾಧೀಕರಣದ ತೀರ್ಪಿನಂತೆ ಜುಲೈ ತಿಂಗಳಲ್ಲಿ ತಮಿಳುನಾಡಿಗೆ 50 ಟಿಎಂಸಿ ನೀರು ಬಿಡಬೇಕಿತ್ತು. ಈವರೆಗೆ ಐದು ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ ಎಂದು ಕಾವೇರಿ ನೀರು ಬಿಟ್ಟಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಲ್ಲದೆ ಜಲಾಶಯಗಳಲ್ಲಿ ನೀರಿಲ್ಲ. ಅಲ್ಪಸ್ವಲ್ಪ ಮಳೆಯಿಂದ ಸ್ವಲ್ಪ ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಅದರಲ್ಲೇ ಸ್ವಲ್ಪ ಪ್ರಮಾಣದ ನೀರನ್ನು ಹರಿಸಿದ್ದೇವೆ. ತೀರ್ಪಿನಂತೆ 50 ಟಿಎಂಸಿ ನೀರನ್ನು ಬಿಡಬೇಕಾಗಿತ್ತು. ಅದು ಸಾಧ್ಯವಾಗದ ಕಾರಣ ಈವರೆಗೆ ಐದು ಟಿಎಂಸಿ ನೀರು ಬಿಡಲಾಗಿದೆ. ಮಳೆ ಬಂದು ಜಲಾಶಯ ತುಂಬಿದರೆ ಮಾತ್ರ ನೀಡು ಬಿಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮಳೆ ಬಾರದ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡಲು ಮುಂದಾಗಿದ್ದು, ಮೋಡ ಬಿತ್ತನೆಗೆ ಟೆಂಡರ್ ಕರೆಯಲಾಗಿದೆ. ತಿಂಗಳಾಂತ್ಯದೊಳಗೆ ಮಳೆ ಬರುವ ನಿರೀಕ್ಷೆ ಇದೆ. ಮಳೆ ಬಾರದಿದ್ದರೆ ಮೋಡ ಬಿತ್ತನೆ ಮಾಡಲಾಗುವುದು ಎಂದು ತಿಳಿಸಿದರು.
2018/03/23 05:07:56
http://www.eesanje.com/2017/07/14/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%97%E0%B3%86-%E0%B2%A8%E0%B3%80%E0%B2%B0%E0%B3%81-%E0%B2%AC%E0%B2%BF%E0%B2%9F%E0%B3%8D%E0%B2%9F%E0%B2%BF%E0%B2%A6/
mC4
ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್ | Prajavani ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್ Published: 07 ಜೂನ್ 2019, 12:28 IST Updated: 07 ಜೂನ್ 2019, 12:30 IST ನವದೆಹಲಿ: ವಿಶ್ವಕಪ್‌ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಮಹೇಂದ್ರ ಸಿಂಗ್ ಧೋನಿ ಅವರು ಸೇನೆಯ 'ಕಠಾರಿ ಮುದ್ರೆ'ಯನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದರು. ಹಸಿರು ಬಣ್ಣದ ಕೈಗವಸಿನ ಮೇಲೆ ಹಾಕಿಸಿರುವ ಮುದ್ರೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿತ್ತು. ಆದರೆ ಧೋನಿ ತಮ್ಮ ಕೈಗವಸುಗಳ ಮೇಲೆ ಹಾಕಿಸಿಕೊಂಡಿದ್ದ 'ಕಠಾರಿ ಮುದ್ರೆ-ಬಲಿದಾನದ ಪಟ್ಟಿ' ಯನ್ನು ತೆಗೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿಗೆ ಮನವಿ ಮಾಡಿದೆ. ಇದನ್ನೂ ಓದಿ: ಧೋನಿ ಗ್ಲೌಸ್‌ನಲ್ಲಿ ಸೇನೆಗೆ ಗೌರವ ಇದೆಲ್ಲದರ ನಡುವೆಯೇ ಧೋನಿ ಕೈಗವಸುಗಳ ಬಗ್ಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಫವಾದ್ ಹುಸೇನ್ ಚೌಧರಿ ಕುಹಕವಾಡಿದ್ದಾರೆ. ಧೋನಿ ಇಂಗ್ಲೆಂಡ್‌ನಲ್ಲಿರುವುದು ಕ್ರಿಕೆಟ್ ಆಡುವುದಕ್ಕಾಗಿ ಮಹಾಭಾರತಕ್ಕಾಗಿ ಅಲ್ಲ. ಭಾರತೀಯ ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಮೂರ್ಖತನ. ಭಾರತದ ಕೆಲವು ಮಾಧ್ಯಮಗಳು ಯುದ್ಧಕ್ಕೆ ಹಾತೊರೆಯುವಂತಿದೆ. ಅಂತವರನ್ನು ಸಿರಿಯಾ, ಅಫ್ಗಾನಿಸ್ತಾನ ಅಥವಾ ರವಾಂಡಕ್ಕೆ ಕೂಲಿಯಾಳುಗಳಾಗಿ ಕಳಿಸಿಕೊಡಬೇಕು ಎಂದು ಫವಾದ್ ಟ್ವೀಟಿಸಿದ್ದಾರೆ.
2019/06/17 22:58:48
https://www.prajavani.net/sports/cricket/dhoni-england-not-mahabharat-642508.html
mC4
ನಿಮ್ಮೊಡನೆ ವಿ.ಆರ್.ಭಟ್: 03/28/12 ತಾಪತ್ರಯ-ವಿನಿರ್ಮುಕ್ತೋ ದೇಹತ್ರಯ-ವಿಲಕ್ಷಣಃ | ಹೀಗಿರುತ್ತ ನಮ್ಮ ಲೌಕಿಕ ಜೀವನದಲ್ಲಿ ಹಿಂದಿನ ಜನ್ಮಾಂತರಗಳ ಕರ್ಮಾವಶೇಷಗಳು ನಮ್ಮನ್ನು ಬಾಧಿಸುತ್ತವೆ. ಅದಕ್ಕೆಲ್ಲಾ ನಾವು ಬಾಧ್ಯಸ್ಥರೇ. ಬುದ್ಧ ಜಾತಕ ಕಥೆಗಳನ್ನು ಕೇಳಿದ್ದೀರಿ, ಕರ್ಣ-ಭೀಷ್ಮರಂತಹ ಹಲವು ಮಹನೀಯರು ಯಾಕೆ ಹಾಗೆ ನೋವನುಭವಿಸಿದರು ಎಂಬುದನ್ನು ನೋಡಿದ್ದೀರಿ. ಭೀಷ್ಮನ ಬಗ್ಗೆ ಹಿಂದೊಮ್ಮೆ ಬರೆದಿದ್ದೆ, ಆಗಾಗ ಈ ಕಡೆ ನೀವು ಬಂದಿದ್ದರೆ ಅವುಗಳನ್ನೆಲ್ಲಾ ಓದಿರುತ್ತೀರಿ. ಉತ್ತಮವಾದ ಕೆಲಸಗಳನ್ನು ಮಾಡಿದವರು ಉತ್ತಮ ಫಲಗಳನ್ನೂ ಮಧ್ಯಮರು ಮಿಶ್ರ ಫಲಗಳನ್ನೂ ಅಧಮರು ಕೆಟ್ಟ ಫಲಗಳನ್ನೂ ಪಡೆಯುತ್ತಾರೆ. ನಿತ್ಯವೂ ನಾವು ಮಡುವ ಕೆಲಸವನ್ನೆಲ್ಲಾ ಒಮ್ಮೆ ಕೂತು ಅವಲೋಕಿಸುತ್ತಾ ಅಂತರಾತ್ಮನ ಜೊತೆಗೆ ನಿಕಟವರ್ತಿಯಾಗಿ ನಿಜದ ವರದಿಯನ್ನು ಆತನಿಗೆ ಒಪ್ಪಿಸಿ ಅವನಿಂದ ರಶೀದಿ ಪಡೆಯುವುದೇ ನಿದಿಧ್ಯಾಸನ ಕ್ರಿಯೆ. ನಾವು ಅನುದಿನ ಮಾಡುವ ಪಾಪ-ಪುಣ್ಯದ ವೆಚ್ಚ ಎಂದು ಪುರಂದರ ದಾಸರು ಹೇಳಿದ್ದು ಬರಿದೇ ಅಲ್ಲ. ನವಕೋಟಿ ನಾರಾಯಣನೆನಿಸಿದ್ದ ಶೀನಿವಾಸ ನಾಯಕನನ್ನು ತನ್ನ ಆಟಕ್ಕೆ ಬಳಸಿಕೊಂಡ ಶ್ರೀಮನ್ನಾರಾಯಣ ಅವರ ಲೋಭತ್ವವನ್ನು ತೊರೆಯಿಸಿ ತನ್ನ ದಾಸನನ್ನಾಗಿ ಸ್ವೀಕರಿಸಿದ. ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದ ಶ್ರೀಮಂತ ವ್ಯಾಪಾರಿಯೊಬ್ಬ ಹೀಗೆ ಪುರಂದರರಾಗುತ್ತಾರೆಂದು ಯಾರೂ ಎಣಿಸಿರಲಿಲ್ಲ. ಮಾನವ ಮನಸ್ಸಿಗೆ ಆಸೆ ಎಂಬುದು ತೀರುವುದಿಲ್ಲ. ಇಷ್ಟಿದ್ದರೆ ಅಷ್ಟಿರಲಿ ಎಂಬ ಆಸೆ, ಅಷ್ಟಿದ್ದರೆ ಮತ್ತಷ್ಟಿರಲಿ ಎಂಬ ಬಯಕೆ, ಮತ್ತಷ್ಟಿದ್ದರೆ ಮಗುದಷ್ಟಿರಲಿ ಎಂಬ ಅಪೇಕ್ಷೆ ಹೀಗೇ ಆಸೆಯ ಹಕ್ಕಿ ಹಾರುತ್ತಾ ಹಾರುತ್ತಾ ಎಲ್ಲೂ ಕೂರದೇ ಹಾರುತ್ತದೆ! ಇಂತಹ ಆಸೆಗಳಿಗೆ ಕಡಿವಾಣ ಹಾಕದೇ ಇದ್ದಲ್ಲಿ ಜೀವನದಲ್ಲಿ ಸಮಸ್ಯೆಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ. ಯೋಗದ ಕೊನೆಯಘಟ್ಟಕ್ಕಿಂತ ಹಿಂದಿನ ಎರಡನೇ ಘಟ್ಟವಾದ ಧ್ಯಾನದಲ್ಲಿ ಶ್ರವಣ ಮತ್ತು ಮನನ ಕ್ರಿಯೆಗಳು ನಡೆಯುತ್ತವೆ. ಶ್ರವಣ ಎಂದರೆ ಉತ್ತಮವಾದುದನ್ನು ಕೇಳುವುದು ಮತ್ತು ಮನನ ಎಂದರೆ ಕೇಳಿದ್ದನ್ನೇ ಮತ್ತೆ ಮತ್ತೆ ಮನಸ್ಸಿನಲ್ಲಿ ನೆನಪಿಗೆ ತಂದುಕೊಳ್ಳುವುದು. ಇವೆರಡೂ ಮುಗಿದ ನಂತರದ ಹಂತ ನಿದಿಧ್ಯಾಸನ. ನಿದಿಧ್ಯಾಸನದಲ್ಲಿ ಎರಡು ಹಂತಗಳು. ಮೊದಲನೆಯದು ಮಿಥ್ಯೆಯನ್ನು ವಿಸರ್ಜಿಸುವುದು : ನಾನೆಂದರೆ ಈ ಶರೀರವಲ್ಲ, ನಾನು ಎತ್ತರವಿಲ್ಲ, ನಾನು ಚಿಕ್ಕವನಲ್ಲ, ನಾನು ದೊಡ್ಡವನೂ ಅಲ್ಲ, ನಾನು ಸುಂದರನಲ್ಲ, ನಾನು ಕುರೂಪಿಯೂ ಅಲ್ಲ, ನಾನು ಸೂಕ್ಷ್ಮನಲ್ಲ, ನಾನು ಸ್ಥೂಲವೂ ಅಲ್ಲ, ನಾನು ಬುದ್ಧಿಯಲ್ಲ, ನಾನು ಮನಸ್ಸಲ್ಲ, ನಾನು ಚಿತ್ತವಲ್ಲ, ನಾನು ಅಹಂಕಾರವಲ್ಲ ಹೀಗೆಲ್ಲಾ. ಎರಡನೆಯದು ಬ್ರಹ್ಮತ್ವವನ್ನು ಒಪ್ಪಿಕೊಳ್ಳುವುದು: ನಾನು ಆತ್ಮ, ನಾನು ಶುದ್ಧ, ನಾನು ಬುದ್ಧ[ಬೌದ್ಧಿಕವಾಗಿ ಬೆಳೆದವನು], ನಾನು ಮುಕ್ತ ಮತ್ತು ನಾನು ಕ್ರಿಯೆಯಲ್ಲದ, ಯಾವುದೇ ಸಂಗವಿಲ್ಲದ, ಜನನ-ಮರಣಗಳೂ ಬಾಧಿಸದ ಬ್ರಹ್ಮ ರೂಪ. ಈ ಹಂತಕ್ಕೆ ತಲುಪುವುದು ಸುಲಭದ ಮಾತಲ್ಲ. ಎಷ್ಟೋ ಜನರಿಗೆ ಇದೆಲ್ಲಾ ಅರ್ಥವಾಗುವುದು ದೂರದ ಮಾತು. ಬಾವಿಯೊಳಗಿದ್ದ ಕಪ್ಪೆ ತನ್ನ ಬಾವಿಯೇ ಜಗತ್ತು ಎಂದುಕೊಂಡ ಹಾಗೇ ನಿಜದ ಜಗತ್ತನ್ನು ಅರಿಯದೇ ಮಿಥ್ಯೆಯ ಜಗತ್ತಿನಲ್ಲಿ ಲೌಕಿಕ ಜಗದಲ್ಲಿ ಪ್ರತಿಯೊಂದು ಕ್ಷಣವೂ ತೊಡಗಿಕೊಂಡ ನಿಜವಾದ ನಾನು ನನ್ನನ್ನೇ ಮರೆತಿರುತ್ತೇನೆ. ಒಂದೊಮ್ಮೆ ನಿದಿಧ್ಯಾಸನ ಕ್ರಿಯೆಯಲ್ಲಿ ತೊಡಗಿಕೊಂಡರೆ ಈ ಜಗದ ವ್ಯಾವಹಾರಿಕ ಒಳತಿರುಳಿನ ಅರ್ಥ ನಮಗಾಗುತ್ತದೆ; ನಾವು ಬಂಧಮುಕ್ತರಾಗುತ್ತೇವೆ. ನಿದಿಧ್ಯಾಸನ ಕ್ರಿಯೆ ಯೋಗನಿದ್ರೆಯನ್ನು ನೀಡುತ್ತದೆ. ಆತ್ಮನೊಡನೆ ನಾನು ಅಂದರೆ ನನ್ನೊಡನೆ ನಾನು ಮತ್ತು ನಾನು ಮತ್ತು ನಾನು ಮತ್ತು ನಾನು ಮತ್ತು ನಿಜವಾದ ನಾನು. ಆ ನಿಜವಾದ ನಾನು ಎಚ್ಚೆತ್ತಾಗ, ಜಾಗ್ರತವಾದಾಗ ಈ ಮಿಥ್ಯೆಯ ನಾನುವನ್ನು ನಿಯಂತ್ರಿಸುತ್ತದೆ! ಒಳಗಿನ ನಾನು ಮತ್ತು ದೇವರು ಇವೆರಡರಲ್ಲಿ ಭೇದ ಎಣಿಸದೇ ಇದ್ದರೆ ಒಳಗಿನ ನಾನು ಹೇಳುವುದನ್ನು ಹೊರಗಿನ ನಾನು ಕಾರ್ಯಗತಗೊಳಿಸಬೇಕಾಗುತ್ತದೆ. ದೇವರಲ್ಲಿ ನಾವು ಸತ್ಯವನ್ನು ಬಚ್ಚಿಡಲಾರೆವು, ದೇವನಿಗೆ ಮೋಸಮಾಡಲಾರೆವು, ದೇವನಿಗೆ ಅನ್ಯಾಯಮಾಡಲಾರೆವು, ದೇವನನ್ನು ದೂಷಿಸಲಾರೆವು, ದೇವನನ್ನು ಶಿಕ್ಷಿಸಲಾರೆವು, ದೇವನಿಗೆ ಬೇಡದ್ದನ್ನು ನಿವೇದಿಸಲಾರೆವು, ದೇವ ಕೆಟ್ಟ ಚಟಗಳಿಗೆ ಅಧೀನನಾಗಲಾರ...ಹೀಗೇ ನನ್ನೊಳಗೇ ದೇವ ಇದ್ದಾನೆಂದಮೇಲೆ ಆತನಿಗೆ ಸರಿಯಾಗಿ ಹೊರಗಿನ ನಾನು ನಡೆದುಕೊಳ್ಳಬೇಕಾಯ್ತು! ಆಗ ಶ್ರೀಶಂಕರರ 'ಅಹಂ ಬ್ರಹ್ಮಾಸ್ಮಿ'ಯನ್ನು ನಾವು ಅನುಷ್ಠಾನದಲ್ಲಿ ಕಾಣುತ್ತೇವೆ! ದೇವರೇ ನಾನಾದಾಗ ನನ್ನ ಸುತ್ತ ಇರುವ ಪ್ರತಿಯೊಂದೂ ಜೀವಿಯಲ್ಲಿ, ವಸ್ತುವಿನಲ್ಲಿ, ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಲ್ಲೂ ನನ್ನದೇ ಇನ್ನೊಂದು ಅಂಶವನ್ನು ಕಾಣತೊಡಗುತ್ತೇನೆ. ಯಾರಿಗೂ ಅನ್ಯಾಯ ಮಾಡಲಾರೆ, ಯಾರಿಗೂ ಕೆಟ್ಟದ್ದನ್ನು ಬಯಸಲಾರೆ, ಯಾರಿಗೂ ಮೋಸಮಾಡಲಾರೆ, ಯಾರಿಗೂ ನೋವನ್ನು ಉಂಟುಮಾಡಲಾರೆ, ಎಲ್ಲರೂ ನನ್ನವರೇ ನನ್ನ ಭಾಗವೇ ಎಂಬ ಏಕದರಲ್ಲಿ ಅನೇಕ ಮತ್ತು ಅನೇಕದರಲ್ಲಿ ಏಕ ತತ್ವವನ್ನು ಕಾಣುತ್ತಾ ವಸುಧೆಯಲ್ಲಿರುವ ಎಲ್ಲಾ ಜೀವಿಗಳೂ ನನ್ನದೇ ಕುಟುಂಬ ಎಂಬ ಭಾವಕ್ಕೆ ತಲುಪುತ್ತೇವೆ. || ವಸುಧೈವ ಕುಟುಂಬಕಮ್ || ಎಂಬ ಭಾವ ಜಾಗೃತವಾದಾಗ ನಾವು ತಪ್ಪನ್ನೆಂದೂ ಮಾಡುವ ಗೋಜಿಗೆ ಹೋಗುವುದಿಲ್ಲ. ಹೀಗೇ ಪುನರಪಿ ಪ್ರತಿನಿತ್ಯ ನಾವು ನಮ್ಮೊಳಗೆ ಅಂದರೆ ಹೊರಗಿನ ನಾನು ಒಳಗಿನ ನಾನುವನ್ನು ಸಂಪರ್ಕಿಸಿ, ಸಂದರ್ಶಿಸಿ ಕೆಲಹೊತ್ತು ತದೇಕ ಚಿತ್ತದಿಂದ ಒಳಗಿನ ನಾನುವಿನೊಡನೆ ಆಟವಾಡುವ ಪ್ರಕ್ರಿಯೆಯೇ ನಿದಿಧ್ಯಾಸನ. ನಿದಿಧ್ಯಾಸನ ಕ್ರಿಯೆಯಲ್ಲಿ ತಲ್ಲೀರಾದಾಗ ಇಹದ ಜಂಜಡಗಳನ್ನೆಲ್ಲಾ ಮರೆಯಲು ಸಾಧ್ಯವಾಗುತ್ತದೆ. ಆಗ ಯಾವ ಮೊಬೈಲೂ ರಿಂಗಣಿಸುವುದು ನಮಗೆ ಕೇಳುವುದಿಲ್ಲ, ಯಾವುದೇ ವಾಹನ ಓಡಾಡಿದ ಗೌಜಿ ಕೇಳುವುದಿಲ್ಲ, ಯಾವುದೇ ಟಿವಿ ಧಾರಾವಹಿಯ ಭರಾಟೆಯಿಲ್ಲ, ಯಾರೂ ಮಡೆಸ್ನಾನ ಮಾಡುತ್ತಿಲ್ಲ, ಯಾರೂ ಧರಣಿಕೂರುತ್ತಿಲ್ಲ, ಎಲ್ಲೂ ಜಗಳಗಳಾಗುತ್ತಿಲ್ಲ, ಎಲ್ಲೂ ರಾಜಕೀಯದ ಒತ್ತಡವಿಲ್ಲ, ಯಾವುದೇ ಉದ್ವಿಗ್ನ ಪರಿಸ್ಥಿತಿಯೂ ಇಲ್ಲ, ಯಾರೂ ಏನನ್ನೂ ಕದ್ದೊಯ್ಯುವುದಿಲ್ಲ, ಯಾರೂ ಏನ್ನನ್ನೋ ಕೇಳಬಂದು ಕರೆಗಂಟೆ ಬಾರಿಸುವುದಿಲ್ಲ! ಸಮಯವೆಲ್ಲಾ ನನಗೇ ಮೀಸಲು ಮತ್ತೆ ನಮಗೇ ಮೀಸಲು ಮತ್ತು ನನಗೇ ಮೀಸಲು. ಈ ನಿದಿಧ್ಯಾಸನವೆಂಬ ಮಾನಸಿಕ ಸ್ನಾನ ಮುಗಿದಾಗ ಸಿಗುವ ಅಲೌಕಿಕ ಆನಂದ ಬೇರಾವ ಆನಂದಕ್ಕಿಂತಾ ಹೆಚ್ಚಿನದಿರುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರವನ್ನು ನಮಗೆ ನಾವೇ ಕಂಡುಕೊಳ್ಳಬಲ್ಲೆವು. ಪರಿಹಾರ ಎಂದರೆ ಮರೆಯಾಗುವುದಲ್ಲ, ಓಡಿಹೋಗುವುದಲ್ಲ, ಅಡಗಿಕೂರುವುದಲ್ಲ, ಆತ್ಮಹತ್ಯೆಮಾಡಿಕೊಳುವುದಲ್ಲ, ಯಾರಲ್ಲೋ ಬೇಡುವುದಲ್ಲ, ಯಾರನ್ನೋ ಕಾಡುವುದಲ್ಲ. ಅದು ಒಳಗಿನ ನನ್ನಿಂದ ಹೊರಗಿನ ನನಗಾಗಿ ನನ್ನೊಳಗೇ ಉದ್ಭವವಾಗುವ ಸ್ವಯಂಭೂ ಪರಿಹಾರ! ಆ ಪರಿಹಾರ ಸಿಕ್ಕರೆ ನಾವು ಯಾರನ್ನೂ ಎದುರಿಸಬಹುದು, ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಬಹುದು, ಉತ್ತಮ ಆರೋಗ್ಯವನ್ನು ಮರಳಿ ಗಳಿಸಬಹುದು, ಸಾಲಗಾರರನ್ನು ದಾರಿಯಲ್ಲೇ ನಿಲ್ಲಿಸಿ ಅವಧಿಯಲ್ಲಿ ಸಾಲ ಮರಳಿಸಬಹುದು, ಏರಲಾರದ ಬೆಟ್ಟವನ್ನು ಯಾವುದೋ ಮಾರ್ಗಬಳಸಿ ಏರಬಹುದು! ಯಾಕಾಗಿ ನಿದಿಧ್ಯಾಸನ ಕ್ರಿಯೆ ಬೇಕು ? ಧಾವಂತದ ಜೀವನ ಶೈಲಿಯಲ್ಲಿ ನಮಗೆ ನಮ್ಮೊಟ್ಟಿಗೆ ಕಳೆಯಲು ಮಾತ್ರ ಸಮಯವಿಲ್ಲ! ನಿಂತೇ ತಿಂಡಿ, ನಿಂತೇ ಊಟ ಎಲ್ಲವೂ ಫಾಸ್ಟ್ ಫಾಸ್ಟ್ ಫಾಸ್ಟ್. ಯಾವುದಕ್ಕೂ ಒಂದು ಶಿಷ್ಟಾಚಾರ ಎಂಬುದೇ ಇಲ್ಲ. ಕಂಡಲ್ಲಿ ನುಗ್ಗುವುದು ಬೇಕಾದ್ದು ಬೇಡದ್ದು ಎಲ್ಲವನ್ನೂ ಒಟ್ಟಾರೆ ಖರೀದಿಸುವುದು. ಬೇಕು ಬೇಕಾದ ಹಾಗೇ ಕ್ರೆಡಿಟ್ ಕಾರ್ಡ್ ಬಳಸುವುದು. ಪಕ್ಕದಮೆನೆಗಿಂತಾ ಕಮ್ಮಿ ಇಲ್ಲಾ ಎಂದು ತೋರಿಸಲು ಅವರ ಸ್ಯಾಂಟ್ರೋ ಕಾರಿಗಿಂತಲೂ ಉನ್ನತ ದರ್ಜೆಯ ಮಹಿಂದ್ರಾ ಸ್ಕಾರ್ಪಿಯೋ ಖರೀದಿಸುವುದು.... ಹೀಗೆಲ್ಲಾ. ಈ ಜಗತ್ತಿನಲ್ಲಿ ನಾನೂ ಏನೂ ಕಮ್ಮಿ ಇಲ್ಲಾ ಎಂಬ ಅಹಂ ನಮ್ಮನ್ನು ಬೇರೆ ಬೇರೇ ಕೆಲಸಗಳಿಗೆ ಹಚ್ಚುತ್ತದೆ. ನಮ್ಮ ಅಹಮಿಕೆ ಎಷ್ಟು ವಿಸ್ತೃತವಾದುದು ಎಂದರೆ ದೇವಸ್ಥಾನಗಳಿಗೆ ಒಂದೊಮ್ಮೆ ಟ್ಯೂಬ್ ಲೈಟ್ ಅಥವಾ ಗೋಡೆಗಡಿಯಾರ ಕೊಟ್ಟರೆ ಅದರ ಮೈತುಂಬಾ ನಮ್ಮ ಹೆಸರು ಬರೆದು, ಅಲ್ಲಿ ಬಂದವರಿಗೆ/ನೋಡಿದವರಿಗೆ " ಓ ಇಂಥವರು ದಾನಶೂರರಪ್ಪಾ" ಎನಿಸಬೇಕು ಎಂಬುದು ನಮ್ಮ ಮನದ ಬಯಕೆ! ಬಡರೋಗಿಗೋ ಬಡವಿದ್ಯಾರ್ಥಿಗೋ ೧೦ ರೂಪಾಯಿಗಳನ್ನು ಕೊಟ್ಟರೂ ದಾನಿಗಳ ಯಾದಿಯಲ್ಲಿ ಹೆಸರು ಬರಬೇಕೆಂಬ ಆಸೆ! ಹಲವರ ದೇಣಿಗೆಯಿಂದ ನಡೆಸುವ ಕಾರ್ಯಕ್ರಮದಲ್ಲಿ ನಮ್ಮ ಹೆಸರು ಪ್ರಧಾನವಾಗಿ ಘೋಷಿಸಲ್ಪಡಬೇಕೆಂಬ ಆಸೆ! ನಾಕು ಜನರಿಗೆ ಖಾಲೀ ಕಾಫಿ ಟೀ ಕೊಟ್ಟರೂ 'ಅತಿಥಿಸತ್ಕಾರ ದುರಂಧರ' ಎಂಬ ಬಿರುದು ಪಡೆವಾಸೆ! ಮನೆಯ ಪಕ್ಕದಲ್ಲಿ ಕಾಣುವ ಹಸಿದ ನಾಯಿಗೆ/ಕಾಗೆಗೆ ತುತ್ತು ಕೂಳನ್ನೂ ಹಾಕದೇ ಯಾವುದೋ ಮೃಗಾಲಯದಲ್ಲಿ ೧೦೦೦ ರೂಪಾಯಿ ನೀಡಿ "ಇಂಥದ್ದನ್ನು ಶ್ರೀಯುತರು ದತ್ತುಪಡೆದರು" ಎಂದು ಹೆಸರು ಬರೆಸುವಾಸೆ! ಎಲ್ಲೋ ಹೊಡೆದ ದುಡ್ಡಿನಲ್ಲಿ ಯಾವುದೋ ಕೆಲವು ಬಡ ವಿದ್ಯಾರ್ಥಿಗಳಿಗೆ ಒಂದೆರಡು ಪಟ್ಟಿಪುಸ್ತಕಗಳನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಕಾರ್ಪೋರೇಟರ್ ಜಾಗಕ್ಕೆ ಸ್ಪರ್ಧಿಸುವಾಸೆ! ಈ ಎಲ್ಲಾ ಆಸೆಗಳ ಹಿಂದೆ ಕೆಲಸಮಾಡುವುದು ಒಂದೇ : ಅದು 'ಅಹಂ'ಕಾರ! ನಟ ದಿ|ವಿಷ್ಣುವರ್ಧನ್ ಅವರು ಯಾರ್ಯಾರಿಗೋ ಕೈಲಾದ ಎಷ್ಟೆಷ್ಟೋ ದಾನಮಾಡಿದರು, ಆದರೆ ಅವರು ದಾನ ಕೊಟ್ಟಿದ್ದು ಸ್ವತಃ ಅವರಿಗೇ ನೆನಪುಳಿಯಲಿಲ್ಲ; ಮನೆಗಂತೂ ತಿಳಿಯಲೇ ಇಲ್ಲ! ದಾನವಿದ್ದರೆ ಹೀಗಿರಬೇಕೇ ವಿನಃ ಹೆಸರಿಗಾಗಿ ಮಾಡುವ ದಾನ ದಾನವೇ ಅಲ್ಲ; ಅಥವಾ ದಾನಕ್ಕೆ ದಕ್ಕಬಹುದಾದ ಪುಣ್ಯ, ಮೆರೆಯುವ ಅಹಂಕಾರದಿಂದ ನಶಿಸಿಹೋಗುತ್ತದೆ. ಇನ್ನು ಕಾರ್ಪೋರೇಟ್ ಕಲ್ಚರ್ ಒಂದಿದೆ: ಅವರು ದಾನ ಮಾಡಿದ್ದೇವೆ ಎಂದು ಹೆಸರು ಹಾಕಿಸುವುದರ ಜೊತೆಗೆ ಪತ್ರಿಕೆಗಳಲ್ಲಿ ತಾವು ಮಾಡಿದ ದಾನದ ಕಥೆಗಳನ್ನು ರಂಜನೀಯವಾಗಿ ಬರೆಯುತ್ತಾರೆ! 'ನಾವು ಇಂತಿಷ್ಟು ವರ್ಷ ಇಂಥಾ ಕಡೆಗಳಲ್ಲಿ ಇಂತಿಂಥವರಿಗೆ ಇಂತಿಂಥದ್ದನ್ನು ಕೊಡುತ್ತಿದ್ದೆವು'!! ಭಲಿಭಲಿರೇ ! ನೀವು ನಿಮ್ಮ ಸಂಸ್ಥೆಗೆ ಜಾಗ, ನೀರು, ರಸ್ತೆ, ವಿದ್ಯುತ್ತು ಮೊದಲಾದವುಗಳನ್ನು ಇದೇ ನೆಲದಿಂದ ಅಥವಾ ಈ ಪ್ರದೇಶದಿಂದ ಪಡೆದಿದ್ದೀರಿ-ಅದರಿಂದ ನಿಮ್ಮ ಸಂಸ್ಥೆಯ ಉತ್ಫನ್ನ ಬಹುಪಾಲು ಹೆಚ್ಚಿದಾಗ ಅದರಲ್ಲಿ ಅತ್ಯಲ್ಪ ಹಣವನ್ನು ಈ ತರಹದ ಕೆಲಸಕ್ಕೆ ವಿನಿಯೋಗಿಸಿದರೆ ಅದಕ್ಕೆ ಸಮಯ ಸಿಕ್ಕಾಗ ಹೇಳಿಕೊಳ್ಳಬೇಕೇನು? ಮರಳಿ ಮೂಲ ವಿಷಯಕ್ಕೆ ಬರೋಣ. ಕ್ರೆಡಿಟ್ ಕಾರ್ಡುಗಳನ್ನು ವಿಪರೀತ ಉಪಯೋಗಿಸಿ ಉಪಯೋಗಿಸಿ ಧಾರಾಳವಾಗಿ ಸಾಲಮಾಡಿಕೊಳ್ಳುವ ಜನ ಇದ್ದಾರೆ. ಸಾಲದಲ್ಲೇ ಜಾಗ, ಸಾಲದಲ್ಲೇ ಭವ್ಯ ಬಂಗಲೆ, ಸಾಲದಲ್ಲೇ ಕಾರು, ಸಾಲದಲ್ಲೇ ಇಟಾಲಿಯನ್ ಕಿಚನ್ ಕ್ಯಾಬಿನೆಟ್ಟು ಇನ್ನೇನೇನೋ ಎಲ್ಲಾ ಸಾಲದಲ್ಲೇ! ಒಂದೊಮ್ಮೆ ಮಾಡುತ್ತಿರುವ ಕೆಲಸ ಕಳೆದುಕೊಂಡುಬಿಟ್ಟರೆ ಏನಾಗಬಹುದೆಂಬ ಪರಿವೆಯೇ ಇರುವುದಿಲ್ಲ.ಗಂಡ-ಹೆಂಡತಿ ಇಬ್ಬರೂ ದುಡಿದರೂ ದುಡಿಮೆಯ ಬಹುತೇಕ ಭಾಗ ಸಾಲಗಳ ಮರುಪಾವತಿಗೆ, ಮಿಕ್ಕಿದ್ದು ಸ್ವಲ್ಪ ಯಾವುದೋ ಇನ್ಶೂರನ್ಸ್ ಮತ್ತಿನ್ನವುದೋ ಖಾಸಗೀ ಖರ್ಚು ಇದಕ್ಕೆ ಹೋಗಿ ತಿಂಗಳ ಕೊನೆಗೆ ಮತ್ತೆ ಕೈ ಖಾಲಿ ಖಾಲಿ! ಮತ್ತೆ ಕ್ರೆಡಿಟ್ ಕಾರ್ಡಿನಲ್ಲೇ ಕಾರಿಗೆ ಪೆಟ್ರೋಲ್ ಹಾಕಿಸುವ ಪ್ರಸಂಗ! ಮಹಾನಗರಗಳಲ್ಲಿ ಅತೀ ದೊಡ್ಡ ವ್ಯಕ್ತಿಯೂ ಬದುಕುತ್ತಿದ್ದಾನೆ, ಅತೀ ಚಿಕ್ಕ ಜವಾನನ ಕೆಲಸದವನೂ ಬದುಕುತ್ತಿದ್ದಾನೆ. ದೇಣಿಗೆ ಎಂದು ಬಾಗಿಲಿಗೆ ಹೋದರೆ ಇರುವ ಅಲ್ಪ ಹಣದಲ್ಲೇ ಚಿಕ್ಕಾಸನ್ನಾದರೂ ಜವಾನನಂಥವನು ನೀಡುತ್ತಾನೆಯೇ ಹೊರತು ಉನ್ನತ ಹುದ್ದೆಗಳಲ್ಲಿ ಇರುವ ಜನ ಅದಕ್ಕೆ ಮನಸ್ಸು ಮಾಡಲಾರರು! ಯಾರೋ ಒಬ್ಬ ಪುಣ್ಯಾತ್ಮ ನನಗೆ ಮಿಂಚಂಚೆ ಕಳಿಸಿದ್ದಾರೆ ಏನೆಂದರೆ ಆತನಿಗೆ ಸಂಗೀತ-ಸಾಹಿತ್ಯ-ಕಲೆ ಎಂದರೆ ಅಷ್ಟಕ್ಕಷ್ಟೇಯಂತೆ! ಸಂಗೀತ ಸಾಹಿತ್ಯ ಕಲಾ ವಿಹೀನಾಂ | ಸಾಕ್ಷಾತ್ ಪಶೂನಾಂ ಪರಪುಚ್ಚ ವಿಹೀನಃ || ಈ ಬದುಕನ್ನು ನಿಭಾಯಿಸಿಲಿಕ್ಕೆ ಬರೇ ಹಣದ ಥೈಲಿ ಇದ್ದರಾಗುವುದಿಲ್ಲ. ನೋಡಿ ಎಂತೆಂಥಾ ಎಳೆಯ ವಯಸ್ಸಿನಲ್ಲಿ ಹೃದಯಸ್ತಂಭನವಾಗಿ ಸತ್ತುಹೋಗುತ್ತಾರೆ. ಇಂತಹ ಘಟನೆಗಳು ಜಾಸ್ತಿ ಆಗುತ್ತಿವೆ ಯಾಕೆ? ಯಾಕೆಂದರೆ ಧಾವಂತದ ಜೀವನದಲ್ಲಿ ಸಾಕಷ್ಟು ಗಳಿಸಲಿಲ್ಲವಲ್ಲಾ ಎಂಬ ಹತಾಶ ಮನೋಸ್ಥಿತಿ ಅವರನ್ನು ಸದಾ ಕಾಡುತ್ತಿರುತ್ತದೆ. ಅನುಗಾಲವೂ ಒತ್ತಡದಲ್ಲೇ ಬದುಕುವ ಅವರಿಗೆ ಸಂಗೀತ ಎಂದರೇನು, ಸಾಹಿತ್ಯ ಯಾಕೆ ಬೇಕು, ಕಲೆ ಹೇಗಿರುತ್ತದೆ ಎಂಬುದರ ಬಗ್ಗೆ ಗಮನವೂ ಇಲ್ಲ, ಆಸಕ್ತಿಯೂ ಇಲ್ಲ. ಹೃದಯದ ಒತ್ತಡ ಜಾಸ್ತಿಯಾಗಿ ನೋವು ಉಲ್ಬಣಿಸಿ, ವೈದ್ಯರಲ್ಲಿಗೆ ಹೋದಾಗ ಅವರು ಹೇಳುತ್ತಾರೆ-- ವಿಶ್ರಾಂತಿ ತೆಗೆದುಕೊಳ್ಳಿ, ಮಾನಸಿಕವಾಗಿ ನಿಮಗೆ ಹಿತವೆನಿಸುವ ಜಾಗದಲ್ಲಿ ನಿರುಮ್ಮಳವಾಗಿ ಒಂದಷ್ಟು ದಿನ ಇದ್ದುಬನ್ನಿ! ಸಂಗೀತ-ಸಾಹಿತ್ಯ-ಕಲೆ ಇವು ಮೂರು ನಮ್ಮ ಜೀವನದಲ್ಲಿ ಮನಸ್ಸಿನಮೇಲೂ ತನ್ಮೂಲಕ ಹೃದಯದಮೇಲೂ ಬೀಳುವ ಭಾರವನ್ನು ಒತ್ತಡವನ್ನು ಕಮ್ಮಿ ಮಾಡುತ್ತವೆ! ಅದೇ ರೀತಿ ನಮ್ಮೊಳಗಿನ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ನಮಗೆ ಧ್ಯಾನ ಬೇಕು. ಶಾರೀರಿಕ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಮಾಡುವ ಧ್ಯಾನದಲ್ಲಿ ಮೂರನೇ ಹಂತವೇ ನಿದಿಧ್ಯಾಸನ ಕ್ರಿಯೆ! ಮೊದಲನೆಯದು ಶ್ರವಣ ಅಂದರೆ ಕೇಳುವುದು--ಯಾವುದನ್ನು? ಉತ್ತಮವಾದುದನ್ನು. ಎರಡನೆಯದು-ಮನನ ಅಂದರೆ ಕೇಳಿದ್ದನ್ನು ಬಹಳಹೊತ್ತು ಮನದಲ್ಲೇ ಪುನರಪಿ ಮೆಲುಕುಹಾಕುವುದು. ಮೂರನೆಯದು ನಿದಿಧ್ಯಾಸನ ಅಂದರೆ ನಮ್ಮೊಳಗಿನ ಆಳಕ್ಕೇ ನಾವು ಇಳಿಯುವುದು! ನಾವು ಹರನನ್ನು ಧ್ಯಾನಿಸಿದರೆ ಅಲ್ಲಿ ಹರಿಕಾಣದೇ ಇರಬಹುದು, ನಾವು ಹರಿಯನ್ನು ನೆನೆಪಿಸಿಕೊಂಡರೆ ಅಲ್ಲಿ ಗಣೇಶ ಸಿಗದೇ ಇರಬಹುದು, ಆದರೆ ಈ ಆಕಾರರೂಪೀ ಭಗವಂತನನ್ನು ಬಿಟ್ಟು ನಿರಾಕಾರ ರೂಪೀ ಭಗವಂತನಮೇಲೆ ಮನಸ್ಸುನೆಟ್ಟು ನಿರ್ವಿಷಯಧ್ಯಾನ ಮಾಡುವುದೇ ನಿದಿಧ್ಯಾಸನ ಕ್ರಿಯೆಯಾಗಿದೆ. ಅಲ್ಲಿ ಎಲ್ಲವೂ ನಿಶ್ಶಬ್ದ, ಶಾಂತ, ಪ್ರಶಾಂತ. ಅದು ಸದಾ ಶಾಂತ ಸರೋವರ. ಅಲ್ಲೊಬ್ಬ ಸೂರ್ಯ, ಅವನ ಪ್ರಕಾಶದಲ್ಲಿ ಆಸರೋವರದಲ್ಲಿ ಆತ್ಮವೆಂಬ ಹಂಸ ಈಜಾಡುತ್ತದೆ. ನಾನು ಯಾರು ಎಂಬುದಕ್ಕೆ ಅಲ್ಲಿ ಉತ್ತರ ಸಿಗುತ್ತದೆ! ಆ ನಾನು ನಿಜವಾದ ನಾನು, ಆ ನಾನುವಿಗೆ ಹೆಸರಿಲ್ಲ, ಬಣ್ಣವಿಲ್ಲ, ಶರೀರವಿಲ್ಲ, ರೂಪವಿಲ್ಲ, ಆಕಾರವಿಲ್ಲ! ಆ ನಾನುವನ್ನು ನೆನಪಿಸಿಕೊಳ್ಳಲು ಮುಂದಾದಲ್ಲಿ ಈ 'ನಾನು' ಸಹಜವಾಗಿ ಕರಗತೊಡಗುತ್ತದೆ. ಈ ನಾನು ಸಂಪೂರ್ಣ ಕರಗಿ ಆ ನಾನು ಗೋಚರಿಸಿದಾಗ ನಾವು ಮೇರೆ ಮೀರಿದ ಆನಂದವನ್ನು ಪಡೆಯಲು ಸಾಧ್ಯ. ಅಲ್ಲಿ ಎಲ್ಲವೂ ಇದೆ. ಯಾವುದನ್ನೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಬೇಕಾಗುವುದಿಲ್ಲ. ಆದರೆ ಇದು ಹೇಳಿದಷ್ಟು ಸುಲಭಕ್ಕೆ ಆಗುವ ಕೆಲಸವಲ್ಲ. ಅದಕ್ಕಾಗಿ ಮನಃಪರಿವರ್ತನೆಯಾಗಬೇಕಾಗುತ್ತದೆ. ಧ್ಯಾನಕ್ಕೆ ನಾವು ಒಗ್ಗಿಕೊಳ್ಳಬೇಕಾಗುತ್ತದೆ. ಎರಡುಕೋಣೆಗಳ ನೀಂ ಮಾಡು ಮನದಾಲಯದಿ ಹೊರ ಕೋಣೆಯಲಿ ಲೋಗರಾಟಗಳನಾಡು ತಿಮ್ಮಗುರುವಿನ ಪದ್ಯದ ಅರ್ಥದ ಆಳ ಎಲ್ಲಿದೆ ಎಂಬುದನ್ನು ತಾವು ಇಲ್ಲಿ ಸ್ವಲ್ಪ ತಿಳಿಯಬಹುದಾಗಿದೆ! ಮನಸ್ಸನ್ನು ಎರಡು ಕಂಪಾರ್ಟ್‍ಮೆಂಟ್ ರೀತಿ ಮಾಡಿಕೊಂಡು ಒಂದನ್ನು ಎಲ್ಲರೊಡನೆ ಪ್ರಾಪಂಚಿಕ ವ್ಯವಹಾರದಲ್ಲಿ ತೊಡಗಿಕೊಳ್ಳಲು ಬಳಸು ಎಂದಿದ್ದಾರೆ ಡೀವೀಜಿ. ಹೀಗೆ ನಾವು ಧ್ಯಾನ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದರಿಂದ ನಾಳೆ ಏನು ಎಂಬ ಭೀತಿ ನಮ್ಮಿಂದ ದೂರ ಸರಿಯುತ್ತದೆ. ನಮ್ಮ ಆತ್ಮಕ್ಕೆ ಪುನಶ್ಚೇತನವುಂಟಾಗಿ ನ್ಯಾಯಮಾರ್ಗದಲ್ಲಿ ಕಾರ್ಯತತ್ಪರವಾಗಲು ಅದು ಸಹಕಾರಿಯಾಗುತ್ತದೆ. 'ಬೇಕು' ಎಂಬ ಅತಿರೇಕದ ಬಯಕೆಗಳಿಗೆ ಕಡಿವಾಣ ಬಿದ್ದಾಗ ಆಯ-ವ್ಯಯದ [ಬ್ಯಾಲೆನ್ಸ್ ಶೀಟ್]ಅಢಾವೆ ಪತ್ರಿಕೆ ಸರಿಯಾಗಿ ಅನುಸರಿಸಲ್ಪಡುತ್ತದೆ. ಎಂತಹುದೇ ಪ್ರಸಂಗ ಬಂದರೂ ಮನಸ್ಸು ಅದನ್ನು ನಿಭಾಯಿಸುವ ತಾಕತ್ತನ್ನು ಪಡೆದುಕೊಳ್ಳುತ್ತದೆ. ಅಧಿಕ ಅಥವಾ ಕಮ್ಮಿ ರಕ್ತದೊತ್ತಡ, ಹೃದಯಸ್ತಂಭನ, ಮಧುಮೇಹ, ಅಲ್ಸರ್ ಮುಂತಾದ ಶಾರೀರಿಕ ಅಸೌಖ್ಯ ಸ್ಥಿತಿ ನಮ್ಮಿಂದ ದೂರವಿರಬೇಕೆಂದರೆ ನಾವು ಯೋಗ ಮತ್ತು ಧ್ಯಾನ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕು. ಜನಸಾಮಾನ್ಯರೊಡನೆ ಬೆರೆಯಬೇಕು. ನೀರೊಳಗಿದ್ದರೂ ಕೆಸವೆಯ/ತಾವರೆಯ ಎಲೆ ಒದ್ದೆಯಾಗದಿರುವಂತೆಯೇ ಸಂಸಾರದ ಲೌಕಿಕ ನೀರೊಳಗಿದ್ದರೂ ಜಂಜಾಟದ ಒದ್ದೆಯಿಂದ ಮುಕ್ತರಾಗಬಹುದಾಗಿದೆ. ಯಾವಾಗ ಅ-ದ್ವೈತ ಎಂಬುದನ್ನು ಕಾಣಲು ನಮ್ಮಿಂದ ಆಗುತ್ತದೋ ಅಂದೇ ನಮಗೆ ನಿರಾಕಾರ ಪರಮಾತ್ಮನ ಅರಿವು ಗೋಚರವಾಗುತ್ತದೆ. ಆ ದಿಸೆಯಲ್ಲಿ ಹೆಜ್ಜೆಯಿಡುತ್ತಾ ಮುಂದಕ್ಕೆ ಮುಂದಕ್ಕೆ ಸಾಗೋಣ ಎಂಬುದು ನನ್ನ ಸಲಹೆಯಾಗಿದೆ.
2021/12/07 00:31:23
https://nimmodanevrbhat.blogspot.com/2012_03_28_archive.html
mC4

This is a filtered version of the CulturaX dataset only containing samples of Kannada language. The dataset contains total of 1352142 samples.

Dataset Structure:

{
    "text": ...,
    "timestamp": ...,
    "url": ...,
    "source": "mc4" | "OSCAR-xxxx",
}

Data Sample:

{'text': "ಭಟ್ಕಳ : ತಂದೆ ತಾಯಿ ಸ್ಮರಣಾರ್ಥ ; ಉಚಿತ ನೋಟ್ ಬುಕ್ ವಿತರಣೆ | Vartha Bharati- ವಾರ್ತಾ ಭಾರತಿ\nಮುದರಂಗಡಿ ಬಿಜೆಪಿ ಗ್ರಾಪಂ ಸದಸ್ಯರ ವಿರುದ್ಧ ಪ್ರತಿಭಟನೆ\nಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ: ಪ್ರಕರಣ ದಾಖಲು\nಭಟ್ಕಳ : ತಂದೆ ತಾಯಿ ಸ್ಮರಣಾರ್ಥ ; ಉಚಿತ ನೋಟ್ ಬುಕ್ ವಿತರಣೆ\nವಾರ್ತಾ ಭಾರತಿ Jun 19, 2019, 10:52 PM IST\nಭಟ್ಕಳ : ತಾಲೂಕಿನ ಹುರುಳಿಸಾಲಿನ ನಿವಾಸಿಗಳಾದ ವೃತ್ತಿಯಲ್ಲಿ ಶಿಕ್ಷಕರಾದ ವೆಂಕಟೇಶ ನಾರಾಯಣ ನಾಯ್ಕ ಪಟೇಲರಮನೆ ಇವರ ತಂದೆ ತಾಯಿಗಳ ಅಕಾಲಿಕ ಮರಣದಿಂದ ಅವರ ಮರಣ ದಿನದ ಸವಿನೆನಪಿಗಾಗಿ ಕಳೆದ 9 ವರ್ಷದಿಂದ ಇಲ್ಲಿನ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುತ್ತಾ ಬಂದಿದ್ದು, ಮಂಗಳವಾರದಂದು ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಟ್ಟಳ್ಳಿಗೆ ತೆರಳಿ ವಿದ್ಯಾರ್ಥಿಗಳಿಗೆ ನೋಟ್ ವಿತರಿಸಿದರು.\nನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದ ಶಿಕ್ಷಕ ವೆಂಕಟೇಶ ನಾಯ್ಕ 'ವಿದ್ಯಾರ್ಥಿಗಳ ಭವಿಷ್ಯದ ದಿಸೆಯಿಂದ ಹಾಗೂ ತಂದೆ-ತಾಯಿಗಳ ಸವಿನೆನಪಿಗಾಗಿ ಉಚಿತ ನೋಟ್ ಬುಕ್ ವಿತರಿಸಲಾಗುತ್ತಿದೆ. ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಕೆಲಕ್ಕೆ ಪ್ರತಿ ವರ್ಷ, ನನ್ನ ಮಡದಿ ಜಯಲಕ್ಷ್ಮೀ ನಾಯ್ಕ ಅವರ ಸಹಕಾರದಿಂದ ಕುಟುಂಬದವರ ಸಹಕಾರದಿಂದ ಈ ಕಾರ್ಯ ಮಾಡುತ್ತಿದ್ದೇನೆ. ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು ತಂದೆತಾಯಿಗಳ ಹಾಗೂ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ನಾನು ಮಾಡಿದ ಕಾರ್ಯವನ್ನು ಮುಂದಿನ ದಿನದಲ್ಲಿ ದುಡಿಯುವ ವೇಳೆ ನಿಮ್ಮದಿಂದಾಗುವಷ್ಟು ಸಹಾಯ ಸೇವೆ ಮಾಡಿ ಎಂದು ಕರೆ ನೀಡಿದರು.\nನಂತರ ದಂತ ವೈದ್ಯರಾದ ಡಾ. ರವಿ ಮಾತನಾಡಿ ನಮ್ಮ ಸಮಾಜದಲ್ಲಿ ಇಂತಹ ವ್ಯಕ್ತಿಗಳಿರುವದರಿಂದ ನಮ್ಮ ಸಮಾಜವು ಏಳಿಗೆಯತ್ತ ಮುಖ ಮಾಡುತ್ತದೆ. ಮಕ್ಕಳಾದ ನಾವು ಎಲ್ಲೇ ಇರಿಬಹುದು ಹೇಗೆ ಇರಿಬಹುದ ಆದರೆ ತಂದೆ ತಾಯಿಗಳು ನಮಗೆ ಮಾಡಿರುವ ತ್ಯಾಗಕ್ಕೆ ನಾವು ಋಣ ತೀರಿಸಲು ಸಾಧ್ಯವಾಗದಿದ್ದರು ಇಂತಹ ಕೆಲಸ ಮಾಡಿ ಅವರ ತ್ಯಾಗಕ್ಕೆ ಪ್ರತಿಫಲ ಕೊಟ್ಟಂತೆ ಆಗುತ್ತದೆ ಅಂದು ಕಿವಿ ಮಾತನ್ನು ಮಕ್ಕಳಿಗೆ ಹೇಳಿದರು.\nಈ ಸಂಧರ್ಭದಲ್ಲಿ ಮುಟ್ಟಳ್ಳಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿದರು.\nಈಗಿನ ಇಲೆಕ್ಟ್ರಾನಿಕ ಜೀವನ ಶೈಲಿಯಲ್ಲಿ ಸಾಕಿದ ತಂದೆ ತಾಯಿಗಳನ್ನು ಅನಾಥಾಶ್ರಾಮಕ್ಕೊ ಅಥವಾ ದಾರಿಯ ಮೇಲೋ ಮನೆಯಿಂದ ಹೊರಗೆ ಹಾಕುವ ಮಕ್ಕಳ ನಡುವೆ ಅವರ ಅಕಾಲಿಕ ಮರಣದಿಂದ ನೊಂದು ಅವರ ಸವಿನೆನಪನ್ನು ಉತ್ತಮ ಕಾರ್ಯ ಮಾಡುವುದರೊಂದಿಗೆ ಸಾರ್ಥಕತೆಯನ್ನು ಮೆರೆದಿದ್ದಾರೆ.\nಈ ಸಂಧರ್ಭದಲ್ಲಿ ಶಾಲೆಯ ಎಸ್.ಡಿ. ಎಂ ಅಧ್ಯಕ್ಷರಾದ ವೆಂಕಟೇಶ ನಾಯ್ಕ, ರಾಜ್ಯ ಸರಕಾರಿ ನೌಕರರ ಸಂಘ ಸದಸ್ಯ ಬಿ.ಕೆ.ನಾಯ್ಕ, ಶಿಕ್ಷಕ ಸಿ.ಡಿ.ಪಡುವಣಿ, ಗಜಾನನ ನಾಯ್ಕ ಮುಖ್ಯ ಶಿಕ್ಷಕರು ವೆಂಕಟೇಶ್ ದೇವಡಿಗ್ ಶಿಕ್ಷಕರು ಉಪಸ್ಥಿತರಿದ್ದರು.",
 'timestamp': '2020/07/07 13:00:41',
 'url': 'http://www.varthabharati.in/article/karavali/196595',
 'source': 'mC4'}

Use with Datasets

from datasets import load_dataset

ds = load_dataset("RaviNaik/CulturaX-Kn")
Downloads last month
0
Edit dataset card