text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಕಸ ವಿಲೇವಾರಿಗೆ ಇಂದೋರ್‌ ಮಾದರಿ | Udayavani – ಉದಯವಾಣಿ Saturday, 15 Aug 2020 | UPDATED: 08:28 PM IST ಕಸ ವಿಲೇವಾರಿಗೆ ಇಂದೋರ್‌ ಮಾದರಿ Team Udayavani, Dec 2, 2019, 11:36 AM IST ಬೆಂಗಳೂರು: ನಗರದ ತ್ಯಾಜ್ಯ ವಿಲೇವಾರಿಗೆ ಮಧ್ಯ ಪ್ರದೇಶದ ಇಂದೋರ್‌ ಮಾದರಿ ಅಳವಡಿಸಿಕೊಳ್ಳಲುಬಿಬಿಎಂಪಿ ಸದ್ದಿಲ್ಲದೆ ಸಿದ್ಧತೆನಡೆಸಿಕೊಳ್ಳುತ್ತಿದೆ. ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಇಂದೋರ್‌ ಕಳೆದ ನಾಲ್ಕು ವರ್ಷದಿಂದ ಸ್ವತ್ಛ ನಗರಿ ಪ್ರಶಸ್ತಿಗೆ ಪಾತ್ರವಾಗುತ್ತಿದ್ದು, ಈ ಮಾದರಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಹೀಗಾಗಿ, ಅದೇಮಾದರಿ ಅಳವಡಿಕೆಗೆ ಬಿಬಿಎಂಪಿ ಮುಂದಾಗಿದೆ. ಇಂದೋರ್‌ ಮಾದರಿ ಅಳವಡಿಸಿಕೆಗೆ ಈಗಾಗಲೇಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಗರದ ವಿವಿಧೆಡೆಅಂದಾಜು 70ರಿಂದ 75 ಎಕರೆ ಭೂಮಿಯನ್ನು ವೇಸ್ಟ್‌ ಟು ಎನರ್ಜಿ ಘಟಕ ಸ್ಥಾಪನೆಗೆಂದು ಪಾಲಿಕೆ ನೀಡಿದೆ. ಅಲ್ಲದೆ, ಈ ಜಾಗದಲ್ಲಿ ವೇಸ್ಟು ಟು ಎನರ್ಜಿ ಸೇರಿ ವಿವಿಧ ಮಾದರಿಯ ಏಳು ಘಟಕಗಳನ್ನು ಸ್ಥಾಪಿಸುವ ಸಂಬಂಧ ಈಗಾಗಲೇ ಹಲವು ಕಂಪನಿಗಳೊಂದಿಗೆ ಬಿಬಿಎಂಪಿ ಒಪ್ಪಂದಕ್ಕೆ ಸಹಿ ಹಾಕಿದೆ. "ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬೆಂಗಳೂರಿಗೆ ಕಡಿಮೆ ಅಂಕ ಬಂದಾಗ ಬಿಬಿಎಂಪಿ ಅಧಿಕಾರಿಗಳು ಇಂದೋರ್‌ ರೀತಿಯನಗರದೊಂದಿಗೆ ಬೆಂಗಳೂರನ್ನು ಹೋಲಿಕೆ ಮಾಡಿ ನೋಡಬಾರದು. ಬೆಂಗಳೂರು ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕೂ, ಇಂದೋರ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕೂ ವ್ಯತ್ಯಾಸವಿದೆ. ಅಷ್ಟೇ ಅಲ್ಲ, ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿಕೊಂಡರೆ, ಇಂದೋರ್‌ ಏನೇನೂ ಅಲ್ಲ' ಎಂದು ಹಿಂದಿನ ಆಯುಕ್ತರಾಗಿದ್ದ ಮಂಜುನಾಥ ಪ್ರಸಾದ್‌ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದ ಹಲವು ಅಧಿಕಾರಿಗಳು ಹೇಳಿದ್ದರು. ಆದರೆ, ಇದೀಗಬಿಬಿಎಂಪಿ ಇಂದೋರ್‌ ಮಾದರಿ ಅಳವಡಿಕೆಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಆದರೆ, ಇಂದೋರ್‌ ಹಾಗೂ ಬೆಂಗಳೂರಿನ ವಿಚಾರದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿಯಲ್ಲಿ ಹಲವು ವ್ಯತ್ಯಾಸ ಇದೆ. ಇಂದೋರ್‌ನಲ್ಲಿ ಏಳು ವೇಸ್ಟ್‌ ಟು ಎನರ್ಜಿ ಘಟಕಗಳಿವೆ. ಇದರಿಂದ ಮಿಶ್ರ ತ್ಯಾಜ್ಯ ಸಾಗಿಸಿದರೂ ನಿಭಾಯಿಸುವ ಸಾಮರ್ಥ್ಯವಿದೆ. ಆದರೆ, ಬೆಂಗಳೂರಿನಲ್ಲಿ ಒಂದೇ ಒಂದು ವೇಸ್ಟ್‌ ಟು ಎನರ್ಜಿ ಘಟಕ ಕೂಡ ಇಲ್ಲ. ಅಲ್ಲದೆ, ಇಂದೋರ್‌ಗೆ ಹೋಲಿಸಿದರೆ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಹೆಚ್ಚು. ಹೀಗಾಗಿ ಆ ಮಾದರಿ ಅನುಷ್ಠಾನ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಆ ಮಾದರಿ ಮೇಲೆ ಒಲವೇಕೆ?: ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆಡಳಿತ ಇದ್ದಾಗ ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಟೆಂಡರ್‌ ಕರೆದು, ಗುತ್ತಿಗೆದಾರರನ್ನು ಅಂತಿಮಗೊಳಿಸಿತ್ತು. ಆದರೆ, ಟೆಂಡರ್‌ ಪ್ರಕ್ರಿಯಲ್ಲಿ ಮೀಸಲಾತಿ ನೀಡಿಲ್ಲ ಎಂದು ಕೆಲವು ಗುತ್ತಿಗೆದಾರರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೀಗಾಗಿ, ಇಂದೋರ್‌ ಮಾದರಿ ಅಳವಡಿಕೆಗೆ ಒಲವು ತೋರಿಸುತ್ತಿದೆ ಎಂದು ಹೇಳಲಾಗಿದೆ.
2020/08/15 14:59:22
https://www.udayavani.com/district-news/bangalore-city-news/indore-model-for-garbage-disposal
mC4
ಅಕ್ರಮ ವಲಸಿಗರ ಪತ್ತೆಗೆ ಮಾಹಿತಿ ಕಲೆ | Udayavani – ಉದಯವಾಣಿ Team Udayavani, Dec 13, 2019, 11:45 AM IST ಹುಬ್ಬಳ್ಳಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗುತ್ತಿದ್ದಂತೆ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ಹಾಗೂ ಪೊಲೀಸ್‌ ಇಲಾಖೆಯಿಂದ ಹು-ಧಾ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಅಕ್ರಮ ವಲಸಿಗರ ಪತ್ತೆ ಮಾಡುವ ಕಾರ್ಯ ಭರದಿಂದ ಸಾಗಿದೆ. ಐಎಸ್‌ಡಿ ತಂಡ ಕಳೆದೆರಡು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಠಾಣೆಗಳಲ್ಲಿ ವಲಸಿಗರನ್ನು ಪತ್ತೆ ಮಾಡುತ್ತಿದ್ದು, ಅಂಥವರ ಕುರಿತು ಮಾಹಿತಿ ಕಲೆ ಹಾಕುತ್ತಿದೆ. ಅಲ್ಲದೆ ಕಟ್ಟಡ ಕಾಮಗಾರಿ, ರಸ್ತೆ ರಿಪೇರಿ, ಚಿನ್ನಾಭರಣ ಕುಸುರಿ ಕೆಲಸ ಸೇರಿದಂತೆ ಇನ್ನಿತರೆ ಕೆಲಸಗಳಲ್ಲಿ ತೊಡಗಿರುವ ವಲಸಿಗರ ಬಗ್ಗೆ ನಿಗಾ ವಹಿಸಿದೆ. ಈಗಾಗಲೇ ಐಎಸ್‌ಡಿ ತಂಡ ಹೊರ ರಾಜ್ಯದಿಂದ ಹು-ಧಾಗೆ ಬಂದಿರುವ 300ಕ್ಕೂ ಅಧಿಕ ವಲಸಿಗರನ್ನು ಭೇಟಿ ಮಾಡಿ ಅವರಿಂದ ಅಗತ್ಯ ದಾಖಲೆಗಳ ಮಾಹಿತಿ ಪಡೆದಿದೆ ಎಂದು ತಿಳಿದು ಬಂದಿದೆ. ವಲಸಿಗರ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕುವಂತೆ ಐಎಸ್‌ಡಿಗೆ ಮೌಖೀಕವಾಗಿ ಸೂಚನೆಗಳು ಬಂದ ಹಿನ್ನೆಲೆಯಲ್ಲಿ ಈ ವಿಭಾಗದವರು ರಸ್ತೆ ರಿಪೇರಿ ಹಾಗೂ ಕಟ್ಟಡ ಕಾಮಗಾರಿಗಳ ಗುತ್ತಿಗೆದಾರರು, ಇಂಜನಿಯರ್‌ಗಳನ್ನು ಭೇಟಿ ಮಾಡಿ ಅವರ ಬಳಿ ಎಷ್ಟು ವಲಸಿಗರು ಕೆಲಸ ಮಾಡುತ್ತಿದ್ದಾರೆ. ಅವರು ಎಷ್ಟು ವರ್ಷಗಳಿಂದ ತಮ್ಮ ಬಳಿ ಕೆಲಸಕ್ಕಿದ್ದಾರೆ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ಬಾಂಗ್ಲಾ ಹಾಗೂ ರೋಹಿಂಗ್ಯಾ, ಥೈಲ್ಯಾಂಡ್‌ ಇನ್ನಿತರ ಕಡೆಯ ಅನೇಕರು ಅವಳಿನಗರದಲ್ಲಿ ತಂಗಿದ್ದಾರೆನ್ನಲಾಗುತ್ತಿದ್ದು, ಇವರಲ್ಲಿ ಬಹುತೇಕರು ಕಟ್ಟಡ ನಿರ್ಮಾಣ, ಚಿನ್ನಾಭರಣ ಕುಸುರಿ ಕೆಲಸ, ರಸ್ತೆ ಕಾಮಗಾರಿ, ಚಿಂದಿ ಆಯುವ ಕೆಲಸ ಸೇರಿದಂತೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಆಧಾರ ಕಾರ್ಡ್‌, ಮತದಾರರ ಚೀಟಿ ಸೇರಿದಂತೆ ಇನ್ನಿತರೆ ಸರಕಾರಿ ಸೌಲಭ್ಯದ ದಾಖಲೆ ಹೊಂದಿದ್ದಾರೆ. ತಾವು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನಗಳಿಗೆ ಸೇರಿದವರೆಂದು ಹೇಳುತ್ತಿದ್ದು, ಈ ಕುರಿತಾಗಿಯೇ ಪರಿಶೀಲನೆ ನಡೆಯುತ್ತಿದೆ. ಸ್ಥಳೀಯ ಐಎಸ್‌ಡಿ ವಿಭಾಗದ ಬೆಂಗಳೂರಿನ ಐಎಸ್‌ಡಿಗೆ ಕಳುಹಿಸಲಿದ್ದಾರೆ. ಅದು ಆಯಾ ರಾಜ್ಯಗಳ ಸಂಬಂಧಪಟ್ಟವರಿಗೆ ವಲಸಿಗರ ಬಗ್ಗೆ ಇರುವ ದಾಖಲೆಗಳನ್ನು ಕಳುಹಿಸಿ ಅವರಿಂದ ಸಮಗ್ರ ಮಾಹಿತಿ ಪಡೆಯಲಿದ್ದಾರೆಂದು ತಿಳಿದು ಬಂದಿದೆ. ಅವಳಿ ನಗರಕ್ಕೆ ವಲಸೆ ಬಂದಿರುವವರು ತಾವು ಪಶ್ಚಿಮ ಬಂಗಾಳದವರು, ಉತ್ತರ ಪ್ರದೇಶದವರು, ಬಿಹಾರದವರು, ದೆಹಲಿಯವರು ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಇವರಲ್ಲಿ ಕೆಲವರು ಬಾಂಗ್ಲಾ, ರೋಹಿಂಗ್ಯಾದಿಂದಲೂ ಬಂದವರಾಗಿದ್ದಾರೆ ಎನ್ನುವ ಶಂಕೆ ಇದ್ದು, ಈ ಬಗ್ಗೆಯೂ ಐಎಸ್‌ಡಿ ಹಾಗೂ ಸ್ಥಳೀಯ ಪೊಲೀಸರು ತೀವ್ರ ನಿಗಾ ವಹಿಸಿ ಅವರ ದಾಖಲೆ ಪರಿಶೀಲಿಸುತ್ತಿದ್ದಾರೆಂದು ತಿಳಿದು ಬಂದಿದೆ. ಹು-ಧಾ ಪೊಲೀಸ್‌ ಕಮೀಷನರೇಟ್‌, ಧಾರವಾಡ ಜಿಲ್ಲಾ ಪೊಲೀಸ್‌ ಸಹಯೋಗದೊಂದಿಗೆ ಜಿಲ್ಲೆಯ ಹು-ಧಾ ಅವಳಿ ನಗರ, ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ ತಾಲೂಕುಗಳಲ್ಲಿ ವಲಸಿಗರ ಬಗ್ಗೆ ಸ್ಥಳೀಯ ಐಎಸ್‌ಡಿ ವಿಭಾಗದವರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಪ್ರದೇಶಗಳಲ್ಲಿ ವಾಸಿಸಿರುವ ಪಶ್ಚಿಮ ಬಂಗಾಲ, ಬಿಹಾರ, ಉತ್ತರ ಪ್ರದೇಶದ ಮುಖಂಡರನ್ನು ಭೇಟಿ ಮಾಡಿ, ಆ ಪ್ರದೇಶಗಳ ವಲಸಿಗ ಜನರ ಸಮೀಕ್ಷೆಗೆ ಮುಂದಾಗಿದ್ದಾರೆ. ಅಲ್ಲದೆ ಚಿನ್ನಾಭರಣ ಅಂಗಡಿಗಳಲ್ಲಿ ಕೆಲಸ ಮಾಡುವವರು, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರು, ರಸ್ತೆ ರಿಪೇರಿ ಮಾಡುವ ಗುತ್ತಿಗೆದಾರರು ಸೇರಿದಂತೆ ಇನ್ನಿತರೆ ಕಾಮಗಾರಿಗಳಲ್ಲಿ ವಲಸಿಗರನ್ನು ಕೆಲಸಕ್ಕೆ ನಿಯೋಜಿಸಿಕೊಂಡವರನ್ನು ಭೇಟಿ ಮಾಡಿ ಅವರಿಂದ ವಲಸಿಗರ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅವಳಿ ನಗರದಲ್ಲಿ ವಲಸಿಗರಾಗಿ ಆಗಮಿಸಿದವರ ಬಗ್ಗೆ ನಿಗಾ ವಹಿಸಲಾಗಿದೆ. ಅನಧಿಕೃತವಾಗಿ ವಾಸವಾದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರವಾಸಿಗರೆಂದು ಆಗಮಿಸಿ ನಗರದ ಮಸಾಜ್‌ ಪಾರ್ಲರ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಯುವತಿಯರ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗಿದೆ. ಬೀಟ್‌ ವ್ಯವಸ್ಥೆ ಬಲಗೊಳಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. – ಆರ್‌.ದಿಲೀಪ್‌, ಆಯುಕ್ತರು, ಹು ಧಾ ಪೊಲೀಸ್‌ ಕಮೀಷನರೇಟ್‌
2020/06/05 07:37:06
https://www.udayavani.com/district-news/dharwad-news/information-art-for-the-detection-of-illegal-immigrants
mC4
ಕೆ.ಆರ್‌.ಆಸ್ಪತ್ರೆಗೆ 'ಮೇಜರ್‌ ಸರ್ಜರಿ' | Prajavani Major Surgery for KR Hospital ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧ: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಕೆ.ಆರ್‌.ಆಸ್ಪತ್ರೆಗೆ 'ಮೇಜರ್‌ ಸರ್ಜರಿ' ಪ್ರಜಾವಾಣಿ ವಾರ್ತೆ Updated: 08 ಆಗಸ್ಟ್ 2021, 09:43 IST ಮೈಸೂರು: 'ಕೆ.ಆರ್‌.ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಬಗೆಹರಿಯದೇ ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಿನ ದಿನಗಳಲ್ಲಿ ಮೇಜರ್‌ ಸರ್ಜರಿ ನಡೆಸಲಾಗುವುದು' ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು. ಕೋವಿಡ್‌ ನಿರ್ವಹಣೆ ಮತ್ತು ನೆರೆ ಪರಿಸ್ಥಿತಿ ಬಗ್ಗೆ ಚರ್ಚಿಸಲು ಶನಿವಾರ ಆಯೋಜಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅದಕ್ಕೂ ಮುನ್ನ, ಶಾಸಕರಾದ ಎಲ್‌.ನಾಗೇಂದ್ರ ಮತ್ತು ಸಾ.ರಾ.ಮಹೇಶ್‌ ಅವರು ಮೈಸೂರಿನ 'ದೊಡ್ಡಾಸ್ಪತ್ರೆ'ಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. 'ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ' ಎಂದು ಅಸಮಾಧಾನ ಹೊರಹಾಕಿದರು. 'ವೈದ್ಯರು, ಸಹಾಯಕ ಸಿಬ್ಬಂದಿಯ ಕೊರತೆಯಿದ್ದು, ರೋಗಿಗಳು ಪರದಾಡುವಂತಾಗಿದೆ. ಕೆಲ ದಿನಗಳ ಹಿಂದೆ ಬುದ್ಧಿಮಾಂದ್ಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಅದಾದ ಬಳಿಕವೂ ಆಸ್ಪತ್ರೆಯ ಆಡಳಿತ ಎಚ್ಚೆತ್ತುಕೊಂಡಿಲ್ಲ. ಅ ಘಟನೆಯ ಬಳಿಕ ಹೊಸದಾಗಿ ಎಷ್ಟು ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದೀರಿ' ಎಂದು ನಾಗೇಂದ್ರ, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ (ಎಂಎಂಸಿಆರ್‌ಐ) ಡೀನ್‌ ಡಾ.ಸಿ.ಪಿ.ನಂಜರಾಜ್ ಅವರನ್ನು ಪ್ರಶ್ನಿಸಿದರು. '1,041 ಹಾಸಿಗೆ ಸೌಲಭ್ಯ ಇರುವ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಚ್ಚಬೇಕು. ಸರ್ಕಾರ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹಣ ಕೊಡುತ್ತದೆ. ಆದರೆ ಇರುವ ಆಸ್ಪತ್ರೆಯ ನವೀಕರಣಕ್ಕೆ ಏಕೆ ಅಸಡ್ಡೆ' ಎಂದು ಕಿಡಿಕಾರಿದರು. ಅವರಿಗೆ ಪ್ರತಿಕ್ರಿಯಿಸಿದ ಡಾ.ಸಿ.ಪಿ.ನಂಜರಾಜ್, 'ಆಸ್ಪತ್ರೆಗೆ ಬೇಕಿರುವ ವೈದ್ಯಕೀಯ ಸಲಕರಣೆಗಳು ಮತ್ತು ಅಗತ್ಯವಿರುವ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ. ಉತ್ತರ ಬಂದಿಲ್ಲ. ಕೆಲವು ವಿಭಾಗಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬಾರದು ಎಂಬ ಸೂಚನೆ ಬಂದಿದೆ' ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಸಚಿವರು, 'ನಿಮಗೆ ಎಷ್ಟು ದಾದಿಯರು ಮತ್ತು ವೈದ್ಯರ ಅಗತ್ಯವಿದೆ, ಸರ್ಕಾರದಿಂದ ಏನೆಲ್ಲಾ ನೆರವು ಬೇಕು ಎಂಬುದರ ಪಟ್ಟಿ ಕೊಡಿ. ಎಲ್ಲವನ್ನೂ ದೊರಕಿಸಿಕೊಡಲಾಗುವುದು. ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಒಂದು ವಾರ ಕಾಲಾವಕಾಶ ಕೊಡಿ. ಆರೋಗ್ಯ ಸಚಿವರ ಜತೆ ಪ್ರತ್ಯೇಕ ಸಭೆ ನಡೆಸಲಾಗುವುದು. ಕೆ.ಆರ್‌. ಆಸ್ಪತ್ರೆಯ ಸಮಸ್ಯೆಗಳನ್ನು ಬಗೆಹರಿಸಲು ಮೇಜರ್‌ ಆಪರೇಷನ್‌ ಮಾಡುತ್ತೇನೆ' ಎಂದರು. ಮೂರನೇ ಅಲೆಗೆ ಸಿದ್ಧತೆ: ಡಿಎಚ್‌ಒ ಡಾ.ಕೆ.ಎಚ್‌.ಪ್ರಸಾದ್ ಮಾತನಾಡಿ, 'ಸಂಭಾವ್ಯ ಮೂರನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲ ಸಿದ್ಧತೆ ನಡೆಸಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಕೆ ಕೊಟ್ಟಿರುವುದರಿಂದ ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಲಾಗಿದೆ' ಎಂದರು. 'ನಿತ್ಯ 5 ಸಾವಿರ ಪ್ರಕರಣಗಳು ವರದಿಯಾದರೂ ನಿಭಾಯಿಸುವಷ್ಟು ಸಾಮಾನ್ಯ ಹಾಸಿಗೆ, ಆಮ್ಲಜನಕ ಸೌಲಭ್ಯದ ಹಾಸಿಗೆ ಹಾಗೂ ವೆಂಟಿಲೇಟರ್‌ ಸೌಲಭ್ಯ ಸಜ್ಜಾಗಿದೆ. ಐದು ಸಾವಿರ ಪ್ರಕರಣಗಳು ವರದಿಯಾದಾಗ ಮಕ್ಕಳಿಗೆ 300 ಹಾಸಿಗೆಗಳ ಅಗತ್ಯತೆ ಬರಬಹುದು ಎಂದು ಅಂದಾಜಿಸಲಾಗಿದೆ' ಎಂದು ಮಾಹಿತಿ ನೀಡಿದರು. ಮುಂಜಾಗ್ರತಾ ಕ್ರಮ: ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಸೋಮಶೇಖರ್, 'ಮೂರನೇ ಅಲೆ ಬಂದರೂ ಅದನ್ನು ಎದುರಿಸಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾರೂ ಹೆದರಬೇಕಾಗಿಲ್ಲ. ಚೆಲುವಾಂಬ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮಕ್ಕಳಿಗಾಗಿ ಮೀಸಲಿಡಲಾಗಿದೆ' ಎಂದರು. ಶಾಸಕರಾದ ಎಚ್‌.ಪಿ.ಮಂಜುನಾಥ್, ಬಿ.ಹರ್ಷವರ್ಧನ್, ಸಂದೇಶ್‌ ನಾಗರಾಜು, ಹಂಗಾಮಿ ಮೇಯರ್‌ ಅನ್ವರ್‌ ಬೇಗ್, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್‌ಪಿ ಆರ್‌.ಚೇತನ್, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್‌ ರೆಡ್ಡಿ ಪಾಲ್ಗೊಂಡಿದ್ದರು. ಸಿಎಸ್‌ಆರ್‌ ನಿಧಿ ಉಪಕರಣ ಅಧಿಕಾರಿ ಮನೆಗೆ; ಸಾ.ರಾ.ಮಹೇಶ್‌ ಆರೋಪ 'ಆರ್‌ಬಿಐ ನೋಟು ಮುದ್ರಣ ಸಂಸ್ಥೆಯು ಕೋವಿಡ್‌ ನಿರ್ವಹಣೆ ಉದ್ದೇಶದಿಂದ ಸಿಎಸ್‌ಆರ್‌ ನಿಧಿಯಿಂದ ನೀಡಿದ್ದ ಉಪಕರಣವೊಂದು ಈ ಹಿಂದೆ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರ ಮನೆ ಸೇರಿದ್ದು, ದುರುಪಯೋಗ ಆಗಿದೆ' ಎಂದು ಶಾಸಕ ಸಾ.ರಾ.ಮಹೇಶ್‌ ಆರೋಪಿಸಿದರು. '₹ 2 ಲಕ್ಷ ಹಾಗೂ ₹ 3.98 ಲಕ್ಷ ಮೌಲ್ಯದ ಉಪಕರಣಗಳು ಜಿಲ್ಲಾಸ್ಪತ್ರೆಯ ಹೆಸರಿಗೆ ಬಂದಿದ್ದು, ಅಲ್ಲಿ ಸ್ವೀಕೃತವಾಗಿಲ್ಲ. ಅದು ಅಧಿಕಾರಿಯ ಮನೆಗೆ ಹೋಗಿರುವ ಬಗ್ಗೆ ನನ್ನ ಬಳಿ ದಾಖಲೆಯಿದೆ. ಈ ಕುರಿತಂತೆ ನಾನು ಬರೆದಿರುವ ಪತ್ರಕ್ಕೆ ಸ್ಪಷ್ಟ ಉತ್ತರ ಏಕೆ ನೀಡಿಲ್ಲ' ಎಂದು ಜಿಲ್ಲಾ ಸರ್ಜನ್‌ ಡಾ.ರಾಜೇಶ್ವರಿ ಅವರನ್ನು ಪ್ರಶ್ನಿಸಿದರು. 'ಜಿಲ್ಲಾಸ್ಪತ್ರೆಗೆ ಆ ಉಪಕರಣಗಳ ಅಗತ್ಯತೆ ಇಲ್ಲ ಎಂಬುದನ್ನು ನೋಟು ಮುದ್ರಣ ಸಂಸ್ಥೆಗೆ ತಿಳಿಸಿದ್ದೇನೆ. ಜಿಲ್ಲಾಡಳಿತಕ್ಕೂ ಮಾಹಿತಿ ನೀಡಿದ್ದೇನೆ' ಎಂದು ರಾಜೇಶ್ವರಿ ಉತ್ತರಿಸಿದರು.‌ ಇದಕ್ಕೆ ಸಮಾಧಾನಗೊಳ್ಳದ ಸಚಿವ ಎಸ್‌.ಟಿ.ಸೋಮಶೇಖರ್, 'ಶಾಸಕರು ಹೇಳುವುದನ್ನು ಗಮನವಿಟ್ಟು ಕೇಳಿ. ಆ ಬಳಿಕ ಉತ್ತರಿಸಿ. ಆ ಉಪಕರಣ ಎಲ್ಲಿಗೆ ಹೋಗಿದೆ ಎಂಬುದನ್ನು ದಾಖಲೆಗಳನ್ನು ಪರಿಶೀಲಿಸಿ ವರದಿ ಕೊಡಿ' ಎಂದು ಹೇಳಿದರು. ಸಭೆಯ ಬಳಿಕ ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು, 'ಸಾ.ರಾ.ಮಹೇಶ್‌ ಮಾಡಿರುವ ಆರೋಪದ ಬಗ್ಗೆ ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು. ಕೋವಿಡ್‌ ನಿರ್ವಹಣೆಗೆ ಹಲವು ಸಂಸ್ಥೆಗಳು ಸಿಎಸ್‌ಆರ್‌ ನಿಧಿಯಿಂದ ನೆರವು ನೀಡಿವೆ. ಅವು ದುರುಪಯೋಗ ಆಗಿಲ್ಲ. ಯಾವುದೋ ಒಂದು ಪ್ರಕರಣದಲ್ಲಿ ಈ ರೀತಿ ಗೊಂದಲ ಆಗಿದೆ. ಅದನ್ನೇ ದೊಡ್ಡದಾಗಿ ಬಿಂಬಿಸಿ ತಪ್ಪು ಸಂದೇಶ ನೀಡಬಾರದು' ಎಂದರು. 'ಕೋವಿಡ್‌ ಸಾವು; ಲೆಕ್ಕ ಸರಿಪಡಿಸಿ': 'ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಲೆಕ್ಕವನ್ನು ಇನ್ನೂ ಸರಿಪಡಿಸಲು ಆಗಿಲ್ಲ. ಅದರಿಂದ ಸರ್ಕಾರದ ₹ 1 ಲಕ್ಷ ಪರಿಹಾರದಿಂದ ಹಲವು ಕುಟುಂಬಗಳು ವಂಚಿತವಾಗಿವೆ' ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು. 'ಕೋವಿಡ್‌ನಿಂದ ಆಗಿರುವ ಯಾವುದೇ ಸಾವನ್ನೂ ಮುಚ್ಚಿಡಬಾರದು. ಎಲ್ಲ ಸಾವಿನ ಆಡಿಟ್‌ ಆಗಬೇಕು. ಸರ್ಕಾರ ನೀಡುವ ಪರಿಹಾರದಿಂದ ಯಾರೂ ವಂಚಿತರಾಗಬಾರದು' ಎಂದು ಜಿಲ್ಲಾಧಿಕಾರಿ ಅವರು ಡಿಎಚ್‌ಒ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ಸೂಚಿಸಿದರು. '60 ಸಾವಿರ ಡೋಸ್‌ ಲಸಿಕೆ ಲಭ್ಯ': 'ಎರಡು ದಿನದಿಂದ ಕೋವಿಡ್ ಲಸಿಕೆ ಪೂರೈಕೆಯ ಪ್ರಮಾಣ ಹೆಚ್ಚಿದ್ದು, ಈಗ 60 ಸಾವಿರ ಡೋಸ್‌ಗಳ ಸಂಗ್ರಹವಿದೆ. ಮೊದಲ ಡೋಸ್‌ ಪಡೆದು 84 ದಿನಗಳು ಕಳೆದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು' ಎಂದು ಡಿಎಚ್‌ಒ ಡಾ.ಕೆ.ಎಚ್‌.ಪ್ರಸಾದ್‌ ಹೇಳಿದರು. 'ಎರಡನೇ ಡೋಸ್‌ ಪಡೆಯುವ ಅವಧಿ ಬಂದರೂ, ಲಸಿಕೆ ಅಲಭ್ಯತೆ ಕಾರಣ ಹಲವರು ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ಮೊದಲು ಲಸಿಕೆ ನೀಡಲು ಕ್ರಮವಹಿಸಿ' ಎಂದು ಶಾಸಕ ಸಾ.ರಾ.ಮಹೇಶ್‌ ಒತ್ತಾಯಿಸಿದರು. ವಿಷ್ಣುವರ್ಧನ್‌ ಪ್ರತಿಮೆ ತೆರವು ಅಭಿಮಾನಿಗಳ ಆಕ್ರೋಶ '); $('#div-gpt-ad-855756-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-855756'); }); googletag.cmd.push(function() { googletag.display('gpt-text-700x20-ad2-855756'); }); },300); var x1 = $('#node-855756 .field-name-body .field-items div.field-item > p'); if(x1 != null && x1.length != 0) { $('#node-855756 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-855756').addClass('inartprocessed'); } else $('#in-article-855756').hide(); } else { _taboola.push({article:'auto', url:'https://www.prajavani.net/district/mysore/major-surgery-for-kr-hospital-855756.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-855756', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-855756'); }); googletag.cmd.push(function() { googletag.display('gpt-text-300x20-ad2-855756'); }); // Remove current Outbrain //$('#dk-art-outbrain-855756').remove(); //ad before trending $('#mob_rhs1_855756').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-855756 .field-name-body .field-items div.field-item > p'); if(x1 != null && x1.length != 0) { $('#node-855756 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-855756 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-855756'); }); } else { $('#in-article-mob-855756').hide(); $('#in-article-mob-3rd-855756').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-855756','#in-article-867869','#in-article-867743','#in-article-867729','#in-article-867726']; var twids = ['#twblock_855756','#twblock_867869','#twblock_867743','#twblock_867729','#twblock_867726']; var twdataids = ['#twdatablk_855756','#twdatablk_867869','#twdatablk_867743','#twdatablk_867729','#twdatablk_867726']; var obURLs = ['https://www.prajavani.net/district/mysore/major-surgery-for-kr-hospital-855756.html','https://www.prajavani.net/district/mysore/vishnu-vardhan-statue-fan-outrage-867869.html','https://www.prajavani.net/district/mysore/apply-for-muda-ca-sites-from-sept-25-867743.html','https://www.prajavani.net/district/mysore/adoption-of-156-children-suffering-from-malnutrition-in-kr-constituency-sa-ramadas-867729.html','https://www.prajavani.net/district/mysore/kpcc-working-president-druvanarayana-oppose-to-new-education-policy-867726.html']; var vuukleIds = ['#vuukle-comments-855756','#vuukle-comments-867869','#vuukle-comments-867743','#vuukle-comments-867729','#vuukle-comments-867726']; // var nids = [855756,867869,867743,867729,867726]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2021/09/18 21:49:42
https://www.prajavani.net/district/mysore/major-surgery-for-kr-hospital-855756.html
mC4
ಪರಂತಪ ವಿಜಯ ೨/ ಅಧ್ಯಾಯ ೭ - ವಿಕಿಸೋರ್ಸ್ ಪರಂತಪ ವಿಜಯ ೨/ ಅಧ್ಯಾಯ ೭ ⁠ಸುಮಿತ್ರ-ಎಲೈ ಶಂಬರನೆ ! ನಿನ್ನ ಸಂತಾಪವನ್ನು ನೋಡಿದರೆ ನನಗೆ ಬಹಳ ವ್ಯಸನವಾಗುತ್ತದೆ. ಕಾಮಮೋಹಿನಿಯು ಮೊದಲಿಂದಲೂ ನಿನ್ನಲ್ಲಿ ಅನುರಕ್ತಳಾಗಿರಲಿಲ್ಲ. ಅವಳಲ್ಲಿ ನಿನಗಿದ್ದ ಅಭಿಮಾನವನ್ನು ನೋಡಿ, ನಿಮ್ಮಿಬ್ಬರಿಗೂ ಘಟನೆ ಮಾಡಬೇಕೆಂದು ನಾನು ಬಹಳ ಪ್ರಯತ್ನ ಪಟ್ಟೆನು. ಇದೆಲ್ಲ ನಿಪ್ಪಲವಾಯಿತು. ⁠ಶಂಬರ- ಎಂದಿಗೂ ನಿಪ್ಪಲವಾಗುವುದಿಲ್ಲ. ಪರಂತಪನನ್ನು ನೋಡಿ ಅವಳು ನನ್ನನ್ನು ತಿರಸ್ಕಾರ ಮಾಡಿದ್ದಾಳೆ. ಇವನನ್ನು ಹಿಡಿದು ಕಾರಾಗೃಹದಲ್ಲಾದರೂ ಇಡುತ್ತೇನೆ; ಅಥವಾ ಯಮಪುರಿಗಾದರೂ ಕಳುಹಿಸುತ್ತೇನೆ. ಕೂಡಲೇ ಅವಳು ವಿನೀತಳಾಗುವಳು. ⁠ಸುಮಿತ್ರ- ಇದು ಅಸಾಧ್ಯ. ಪರಂತಪನು ಸಾಮಾನ್ಯನಲ್ಲ. ಇವನ ಬುದ್ದಿಯೂ, ಶಕ್ತಿಯೂ, ಊಹಾಪೋಹಜ್ಞಾನವೂ ಅಸಾಧಾರಣವಾಗಿರುವುವು. ಇವನ ಗುಣಾತಿಶಯಗಳ ಹಾಗೆಯೇ, ಇವನನ್ನು ನೋಡಿದವರೂ, ಇವನ ಸಂಗಡ ಸಂಭಾಷಣೆಯನ್ನು ಮಾಡಿದವರೂ ಸಹ, ಇವನಲ್ಲಿ ಅತ್ಯಂತ ವಿಶ್ವಾಸಪಡುತ್ತಾರೆ. ಇವನನ್ನು ಪ್ರತಿಭಟಿಸಿದರೆ, ನಮ್ಮ ಪರಿಣಾಮ ಹೇಗಾಗುವುದೋ ಕಾಣೆನು. ⁠ಶಂಬರ- ಯಾರಿಗೂ ತಿಳಿಯದಂತೆ ಇವನನ್ನು ಹಿಡಿದು ಕಾರಾಗೃಹದಲ್ಲಿಡುವೆನು. ಮರಣಾವಧಿ ಬಿಡುವುದಿಲ್ಲ. ⁠ಸುಮಿತ್ರ- ನೀನು ಲೋಕ ವ್ಯವಹಾರಜ್ಞನಲ್ಲ. ಪ್ರಪಂಚದಲ್ಲಿ ನಾವು ಒಂದು ವಿಧವಾಗಿ ಯೋಚಿಸುತ್ತಿದ್ದರೆ, ಅದು ನೆರವೇರದಂತೆ ಮಾಡುವುದಕ್ಕೆ ದೈವವು ಯೋಚಿಸುತ್ತಿರುವುದು. ಕೊನೆಗೆ ⁠"ಯತೋಧರ್ಮಸ್ತತೋಜಯಃ" ಎಂಬಂತೆ, ಧರ್ಮವಿದ್ದ ಕಡೆ ಜಯವುಂಟಾಗುವುದು ನಾವು ಮಾಡಿದ ಅನೇಕ ಅಧರ್ಮಗಳ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತಿರುವೆವು, ಈರೀತಿಯನ್ನು ತಿಳಿದೂ, ಪುನಃ ಅಧರ್ಮದಲ್ಲಿ ಪ್ರವರ್ತಿಸಬಹುದೆ? ⁠ಶಂಬರ- ಈ ವೈದಿಕೋಕ್ತಿಗಳಿಂದ ಪ್ರಯೋಜನವಿಲ್ಲ. ಕಾರ್ಯ ಸಾಧನೆಗಾಗಿ ಪ್ರವರ್ತಿಸತಕ್ಕವರು ವೈದಿಕೋಕ್ತಿಗಳಿಗೆ ಕಿವಿಗೊಟ್ಟರೆ, ಅವರಿಗೆ ಯಾವ ಕಾರ್ಯವೂ ಕೈಗೂಡುವುದಿಲ್ಲ. ನಿನ್ನ ಧರ್ಮೋಪದೇಶಗಳು, ಪುರಾಣ ಕಾಲಕ್ಕೆ ತಕ್ಕುವುಗಳಾಗಿರುವುವು. ನನಗೆ ತೋರಿದ ರೀತಿಯಲ್ಲಿ ನಾನು ನಡೆಸುತೇನೆ. ಈ ವಿಷಯದಲ್ಲಿ ನಿನ್ನ ಧರ್ಮೋಪದೇಶಗಳನ್ನು ಕೇಳತಕ್ಕವನಲ್ಲ. ⁠ಸುಮಿತ್ರ- ಯಾವ ಕೆಲಸವನ್ನು ಮಾಡಬೇಕಾದರೂ, ಪೂರ್ವಭಾವಿಯಾಗಿಯೇ ಪರಿಣಾಮವನ್ನು ಯೋಚಿಸಬೇಕು. ಹಾಗಿಲ್ಲದಿದ್ದರೆ, ಅನರ್ಥ ವುಂಟಾಗುವುದೇ ನಿಜ. ಅದು ಹಾಗಿರಲಿ ; ಈ ಪರಂತಪನು ಸಾಮಾನ್ಯನಲ್ಲ. ದುಷ್ಟರನ್ನು ಹೇಗಾದರೂ ಅಡಗಿಸುವನು. ಮಾಧವನು, ಈತನಲ್ಲಿ ಪುತ್ರವಾತ್ಸಲ್ಯದಿಂದ ತನ್ನ ಸರ್ವಸ್ವವನ್ನೂ ಈತನಿಗೇ ಕೊಟ್ಟರುವನು. ಅವನು ಬರೆದ ಉಯಿಲಿನಂತೆ, ಈ ಆಸ್ತಿಯನ್ನೆಲ್ಲ ಸ್ವಾಧೀನ ಪಡಿಸಿಕೊಳ್ಳುವುದಕ್ಕಾಗಿ ಈತನು ಇಲ್ಲಿಗೆ ಬಂದಿರುವನು. ನಿನಗೂ ಕಾಮಮೋಹಿನಿಗೂ ವಿವಾಹವಾದ ಮೇಲೆ ಈ ಸಂಗತಿಯನ್ನು ತಿಳಿಯಿಸಬೇಕೆಂದು ನಿಶ್ಚಯಿಸಿದ್ದೆನು; ಇದಕ್ಕೆ ಅವನೂ ಒಪ್ಪಿದ್ದನು. ಇದಲ್ಲದೆ, ಇನ್ನೊಂದು ರಹಸ್ಯವುಂಟು. ಇವನು ಕೈಪೆಟ್ಟಿಗೆಯನ್ನು ತೆಗೆದಾಗ, ದೊಡ್ಡ ಮೊಹರುಳ್ಳ ಒಂದು ಕಾಗದವು ಕಾಣಬಂದಿತು. ಅದನ್ನು ಮಾತ್ರ ಮರೆಸಿ, ಉಯಿಲು ಮೊದಲಾದುವುಗಳನ್ನೆಲ್ಲ ತೋರಿಸಿದನು. ಆದಿನ ರಾತ್ರಿಯೇ ಈತನು ನಿದ್ದೆ ಮಾಡುವ ಕಾಲದಲ್ಲಿ ಬೇರೆ ಬೀಗದ ಕೈಯನ್ನು ತಂದು ಆ ಕಾಗದವನ್ನು ಪರೀಕ್ಷಿಸಿದೆನು. ಇವನು ದುಷ್ಟನಿಗ್ರಹದ ವಿಷಯದಲ್ಲಿ ಸರಕಾರದಿಂದ ಸರ್ವಾಧಿಕಾರವನ್ನು ಹೊಂದಿರುವನೆಂದು ಆ ಕಾಗದದಿಂದ ಗೊತ್ತಾಯಿತು. ಇಂಥವನ ಮೇಲೆ ಪ್ರತಿಭಟಿಸುವುದು ಉಚಿತವಲ್ಲ. ಈ ಮಾತನ್ನು ಕೇಳಿದಕೂಡಲೆ, ಶಂಬರನು ಚಿಂತಾಪರವಶನಾಗಿ ಮೂರ್ಛೆಬಿದ್ದು, ಶೈತ್ಯೋಪಚಾರಗಳಿಂದ ಪ್ರಜ್ಞೆಯನ್ನು ಹೊಂದಿ, ಸುಮಿತ್ರ ತನನ್ನು ಕುರಿತು 'ಅಯ್ಯೋ ! ಸರ್ವಪ್ರಕಾರದಿಂದಲೂ ನಾನು ಕೆಟ್ಟೆನು. ಮಾಧವನಿಗೆ ಹಕ್ಕುದಾರನೆಂದೂ, ಅವನ ಐಶ್ವರ್ಯವೆಲ್ಲ ನನ್ನದೆಂದೂ ತಿಳಿದಿದ್ದೆನು. ಅದೆಲ್ಲವೂ ಪರಾಧೀನವಾಯಿತು. ಕಾಮಮೋಹಿನಿಯಾದರೂ ದೊರಕಬಹುದೆಂದಿದ್ದನು. ಇವಳೂ ಪರಾಧೀನಳಾದಳು. ನಾನು ಬಹು ನಿರ್ಭಾಗ್ಯನು. ಇನ್ನು ನಾನು ಜೀವಿಸಿರಬಾರದು. ಈ ಕ್ಷಣವೇ ಪರಂತಪನನ್ನು ಯಾವ ವಿಧದಿಂದಲಾದರೂ ಕೊಂದು, ಮಾಧವನ ಐಶ್ವರ್ಯವನ್ನೂ ಕಾಮಮೋಹಿನಿಯನ್ನೂ ಹೊಂದುವ ಪ್ರಯತ್ನವನ್ನು ಮಾಡುವೆನು ; ಅಥವಾ, ಈ ಪ್ರಯತ್ನದಲ್ಲಿಯೇ ಪ್ರಾಣವನ್ನಾದರೂ ಬಿಡುವೆನು. ' ಎಂದು ಹೇಳಿದನು. ⁠ಸುಮಿತ್ರ- ಅಯ್ಯಾ! ಪುತ್ರನೇ! ದುಡುಕಬೇಡ; ದುಡುಕಬೇಡ. ಮಾಧವನ ಆಸ್ತಿಯೂ ಹೋಗಲಿ; ಕಾಮಮೋಹಿನಿಯೂ ಹೋಗಲಿ. ನನಗೆ ಗಂಡುಮಕ್ಕಳಿಲ್ಲ. ನನ್ನ ಸ್ವತ್ತಿಗೆಲ್ಲ ನೀನೇ ಬಾಧ್ಯನಾಗಿರು. ನನ್ನ ಸೋದರ ಸೊಸೆಯಾದ ಕಲಾವತಿಗೆ ನಿನ್ನಲ್ಲಿ ಅನುರಾಗವುಂಟಾಗುವಂತೆ ಮಾಡಿರುತ್ತೇನೆ. ನನ್ನ ಆಸ್ತಿಯನ್ನೆಲ್ಲ ಅವಳ ಹೆಸರಿಗೆ ಉಯಿಲು ಬರೆದಿರುತ್ತೇನೆ. ಅವಳನ್ನು ಪರಿಗ್ರಹಿಸಿ, ನನ್ನ ಆಸ್ತಿಯನ್ನೆಲ್ಲ ಅನುಭವಿಸಿ ಕೊಂಡು ಸುಖವಾಗಿ ಬಾಳು. ಪ್ರಬಲರಲ್ಲಿ ವಿರೋಧವನ್ನು ಬೆಳಸಬೇಡ. ⁠ಶಂಬರ- ನನ್ನ ಭಾಗಕ್ಕೆ, ನನ್ನ ತಂದೆಯ ಸಹೋದರರಾದ ನೀವಿಬ್ಬರೂ ಮಿತ್ರರಾಗಿ ಪರಿಣಮಿಸಲಿಲ್ಲ. ಮಾಧವನು, ತನ್ನ ಅಸ್ತಿಯನ್ನೆಲ್ಲ ಅಜ್ಞಾತ ಕುಲಗೋತ್ರನಾದ ಪರಂತಪನಿಗೆ ಒಪ್ಪಿಸಿದನು. ನೀನು ನಿನ್ನ ಆಸ್ತಿಯನ್ನೆಲ್ಲ ಕಲಾವತಿಗೆ ಕೊಟ್ಟೆ. ನನ್ನ ತಂದೆಯಾದರೂ, ನನಗೆ ಅನ್ನವಸ್ತ್ರಗಳಿಗೂ ಗತಿಯಿಲ್ಲದಂತೆ, ತನ್ನ ಸರ್ವಸ್ವವನ್ನೂ ದ್ಯೂತ ವ್ಯಭಿಚಾರಗಳಲ್ಲಿ ಕಳೆದು, ಅಕಾಲ ಮರಣವನ್ನು ಹೊಂದಿ, ನನ್ನ ಭಾಗಕ್ಕೆ ಶತ್ರುವಾಗಿ ಪರಿಣಮಿಸಿದನು. ನಿನ್ನ ವಂಶದಲ್ಲಿ ಹುಟ್ಟಿದ ನನಗೆ ಈರೀತಿ ನಿರ್ಗತಿಯಾಯಿತು. ಕಲಾವತಿಯಲ್ಲಿ ನನಗೆ ಅನುರಾಗವಿಲ್ಲ. ನಿನ್ನ ಆಸ್ತಿಯೂ ನನಗೆ ಅವಶ್ಯಕವಿಲ್ಲ. ನನ್ನ ಮನಸ್ಸಿಗೆ ತೋರಿದಂತೆ ನಾನು ನಡೆದುಕೊಳ್ಳುವೆನು. ⁠ಸುಮಿತ್ರ- ಎಲೈ ಶಂಬರನೆ! ದುಡುಕಬೇಡ; ದುಡುಕಬೇಡ. ನಿಧಾನಿಸು. ಮಾಧವನು ಮಾಡಿದ ಕೆಲಸವು ಪೂರಯಿಸಿಹೋಯಿತು. ಅವನ ಆಸ್ತಿಯು ಪುನಃ ನಿನಗೆ ಸೇರಲಾರದು. ಆದರೆ, ನಾನು ನನ್ನ ಆಸ್ತಿ ನನ್ನ ಜೀವನಾನಂತರ ಕಲಾವತಿಗೆ ಸೇರತಕ್ಕುದೆಂದು ಉಯಿಲು ಬರೆದಿರುತ್ತೇನೆ. ಈ ಸಂಗತಿ ಅವಳಿಗೆ ಚೆನ್ನಾಗಿ ತಿಳಿಯದು. ಅವಳನ್ನು ನೀನು ಮದುವೆ ಮಾಡಿಕೊಂಡಪಕ್ಷದಲ್ಲಿ, ಈ ವುಯಿಲನ್ನು ರದ್ದು ಮಾಡಿ, ನಿನ್ನನ್ನೇ ನನ್ನ ಆಸ್ತಿಗೆಲ್ಲ ಬಾಧ್ಯನನ್ನಾಗಿ ಮಾಡುತ್ತೇನೆ. ಚಿಂತಿಸಬೇಡ; ಚೆನ್ನಾಗಿ ಪರ್ಯಾಲೋಚಿಸು. ⁠ಶಂಬರ- ನಾನು, ಪರಂತಪನಿಗೆ ಪ್ರತೀಕಾರವನ್ನು ಮಾಡದೆ ಎಂದಿಗೂ ಬಿಡತಕ್ಕವನಲ್ಲ. ನಾಳೆಯೇ ಅವನನ್ನು ಕಲಹಕ್ಕಾಗಿ ಕರೆದು, ಅವನೊಡನೆ ಯುದ್ಧವನ್ನು ಮಾಡುವೆನು. (ಪೂರ್ವ ಕಾಲದಲ್ಲಿ, ವಾದಿ ಪ್ರತಿವಾದಿಗಳಲ್ಲಿ ನ್ಯಾಯವು ಯಾರ ಪಕ್ಷವಾಗಿದೆಯೆಂಬುದನ್ನು ಪರೀಕ್ಷಿಸುವುದಕ್ಕಾಗಿ, ಇಬ್ಬರು ಪಂಚಾಯಿತರ ಮುಂದೆ ದ್ವಂದ್ವ ಯುದ್ಧವನ್ನು ಮಾಡಿ ಅದರಲ್ಲಿ ಗೆದ್ದವನ ಪಕ್ಷವು ನ್ಯಾಯವೆಂದೂ ಸೋತವನದು ಅಧರ್ಮವೆಂದೂ ನಿರ್ಣಸುತ್ತಿದ್ದರು) ⁠ಸುಮಿತ್ರ- ಇದು ಅಪಾಯಕರವಾದುದು. ನೀನು ಬಲಿಷ್ಟನಾದರೂ ಅವನನ್ನು ಸೋಲಿಸಲಾರೆ. ಹಾಗೂ ಆಗಲಿ; ನೀನು ಯಾವ ರೀತಿಯಲ್ಲಿ ಅವನನ್ನು ಸೋಲಿಸಬೇಕೆಂದು ಯೋಚಿಸಿರುತ್ತೀಯೆ? ಶಂಬರ-ಪಿಸ್ತೂಲಿನಿಂದ ಸುಟ್ಟು ಅವನನ್ನು ಕೊಂದುಬಿಡುವೆನು. ⁠ಸುಮಿತ್ರ- ಪಿಸ್ತೂಲನ್ನು ಉಪಯೋಗಿಸುವುದರಲ್ಲಿ ಅವನಿಗಿಂತ ನೀನು ಸಮರ್ಥನೋ ? ⁠ಶಂಬರ - ಅವನು ಮಾತ್ರವೇ ಅಲ್ಲ. ಈ ವಿಷಯದಲ್ಲಿ ಯಾರೂ ನನಗೆ ಎದುರಿಲ್ಲ. ⁠ಸುಮಿತ್ರ- ಪರಂತಪನು ಸರಕಾರದಿಂದ ಹೊಂದಿರುವ ಸನ್ನದಿನ ವಿಷಯವನ್ನು ನಾನು ಮೊದಲೇ ತಿಳಿಸಿರುತ್ತೇನಷ್ಟೆ ! ನಾನಾವಿಧವಾದ ಆಯುಧಗಳ ಉಪಯೋಗದಲ್ಲಿ ಅದ್ವಿತೀಯವಾದ ಪಾಂಡಿತ್ಯವಿದ್ದ ಹೊರತು, ಇಂಥ ಅಧಿಕಾರವನ್ನು ಎಂದಿಗೂ ಕೊಡಲಾರರು. ⁠ಶಂಬರ- ಅವನು ಒಳ್ಳೆಯ ಪಂಡಿತನಾಗಿಯೇ ಇರಬಹುದು; ಆದರೆ ನನ್ನ ಸಾಮರ್ಥ್ಯವೂ ಸರಕಾರದವರಿಗೆ ಚೆನ್ನಾಗಿ ತಿಳಿದಿರುವುದು. ಅವನಿಗಿಂತಲೂ ಹೆಚ್ಚಾದ ಅಧಿಕಾರವನ್ನು ಸರಕಾರದವರು ಕಾಲಕ್ರಮೇಣ ನನಗೂ ಕೊಡಬಹುದು. ⁠ಸುಮಿತ್ರ- ಎಷ್ಟು ಹೇಳಿದರೇನು? ಪರಂತಪನ ಕಡೆಗೆ ನ್ಯಾಯವಿರುವುದು. ಉಯಿಲಿನ ಪ್ರಕಾರ ಅವನು ಮಾಧವನ ಆಸ್ತಿಯನ್ನು ಅಪೇಕ್ಷಿಸುವನು. ಕಾಮಮೋಹಿನಿಗೂ ಈತನಲ್ಲಿ ಅನುರಾಗ ವಿಶೇಷ ವುಂಟಾದುದರಿಂದಲೇ, ಅವಳು ಆತನಿಗೆ ಸ್ವಾಧೀನಳಾಗಿರುವಳು. ಅವಳಿಗೆ ನಿನ್ನಲ್ಲಿ
2020/09/26 08:40:06
https://kn.wikisource.org/wiki/%E0%B2%AA%E0%B2%B0%E0%B2%82%E0%B2%A4%E0%B2%AA_%E0%B2%B5%E0%B2%BF%E0%B2%9C%E0%B2%AF_%E0%B3%A8/_%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF_%E0%B3%AD
mC4
ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ | Bandipur National Park | Ban | Vehicles | Environments | Kerala | Mysuru| ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ - Kannada Oneindia 29 min ago ಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವು ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ | Published: Thursday, June 18, 2009, 12:46 [IST] ಚಾಮರಾಜನಗರ, ಜೂ. 18 : ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಕಾರ್ಯರೂಪಕ್ಕೆ ಬರುವ ಮೊದಲೇ ಆದೇಶವನ್ನು ಹಿಂಪಡೆಯಲಾಗಿದೆ. ಸರಕಾರ ಆದೇಶವನ್ನು ಹಿಂಪಡೆಯಲು ಮರಳು ಲಾಬಿ ಕಾರಣ ಎನ್ನಲಾಗಿದೆ. ಬೆಂಗಳೂರಿನಿಂದ ಕ್ಯಾಲಿಕಟ್ ಗೆ ಸಂಪರ್ಕ ಕಲ್ಪಿಸುವ ಹತ್ತಿರದ ಮಾರ್ಗ ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ಸಂಚಾರ ನಿರ್ಬಂಧಿಸಿದರೆ ಕೇರಳಕ್ಕೆ ಮೈಸೂರು ಕಡೆಯಿಂದ ಪ್ರಮುಖ ಮಾರ್ಗವೊಂದನ್ನು ಮುಚ್ಚಿದಂತಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಹಾಗೂ ಮರಳು ಸಾಗಣಿಕೆಗೆ ತೊಂದರೆಯುಂಟಾಗುತ್ತದೆ ಎಂಬ ಕಾರಣದಿಂದ ಈ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇದರೊಂದಿಗೆ ಲಾರಿ ಲಾಬಿ ಕೆಲಸ ಮಾಡಿದೆ ಎನ್ನಲಾಗಿದೆ. ಮೈಸೂರು ban kerala ಕೇರಳ ರಸ್ತೆ ಸಂಚಾರ bandipur national park ನಿಷೇಧ vehicles ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಾಹನ
2020/03/31 01:33:58
https://kannada.oneindia.com/news/2009/06/18/ban-on-night-rides-in-bandipur-angers-greens.html
mC4
ವಿಮಾನನಿಲ್ದಾಣದಲ್ಲೇ ಗೆಳೆಯನ ಜೊತೆ ಕುಸ್ತಿಪಟು ವಿನೇಶ್ ಪೋಗಟ್ ನಿಶ್ಚಿತಾರ್ಥ..! – EESANJE / ಈ ಸಂಜೆ ವಿಮಾನನಿಲ್ದಾಣದಲ್ಲೇ ಗೆಳೆಯನ ಜೊತೆ ಕುಸ್ತಿಪಟು ವಿನೇಶ್ ಪೋಗಟ್ ನಿಶ್ಚಿತಾರ್ಥ..! August 28, 2018 Sri Raghav Vinesh Phogat gets engaged at airport on return after clinching Gold at Asian Games ನವದೆಹಲಿ, ಆ.28- ಏಷ್ಯನ್ ಗೇಮ್ಸ್ ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿರುವ ವಿನೇಶ್ ಪೋಗಟ್ ಶನಿವಾರ ಜಕಾರ್ತದಿಂದ ತವರಿಗೆ ಆಗಮಿಸಿದ ಬೆನ್ನಿಗೆಯೇ ತನ್ನ ದೀರ್ಘ ಕಾಲದ ಗೆಳೆಯ ಸೋಮ್‍ವೀರ್ ರಾಥಿ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಗಮನ ಸೆಳೆದಿದ್ದಾರೆ. ವಿನೇಶ್ ವಿವಾಹ ನಿಶ್ಚಿತಾರ್ಥದಂತಹ ಜೀವನದ ಸ್ಮರಣೀಯಕ್ಷಣಕ್ಕೆ ಆಯ್ದು ಕೊಂಡಿದ್ದ ಸ್ಥಳ ವಿಭಿನ್ನವಾಗಿತ್ತು. ಗ್ರಿಕೊ-ರೊಮನ್ ಕುಸ್ತಿಪಟುಗಳಾಗಿರುವ ವಿನೇಶ್ ಹಾಗೂ ಸೋಮ್‍ವೀರ್ ದಿಲ್ಲಿಯ ಇಂದಿರಾಗಾಂಧಿ ಅಂತರ್‍ರಾಷ್ಟ್ರೀಯ ಏರ್ ಪೋರ್ಟ್‍ನ ಆಗಮನದ ದ್ವಾರದಲ್ಲಿ ನಿಶ್ಚಿತಾರ್ಥ ಉಂಗುರವನ್ನು ಬದಲಾಯಿಸಿಕೊಂಡರು. ಈ ಅಪರೂಪದ ಕ್ಷಣಕ್ಕೆ ವಿನೇಶ್-ಸೋಮ್‍ವೀರ್ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸಾಕ್ಷಿಯಾದರು. ಶನಿವಾರವೇ 24ನೇ ವರ್ಷಕ್ಕೆ ಕಾಲಿಟ್ಟಿರುವ ವಿನೇಶ್ ಏರ್ ಪೋರ್ಟ್‍ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನೂ ಆಚರಿಸಿಕೊಂಡರು. ಸರಳವಾಗಿ, ಹಠಾತ್ತನೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ವಿನೇಶ್ ಇದರಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಲ್ಲಿ ಯಾವುದೇ ವಿವಾದ-ಗೊಂದಲಗಳಿಲ್ಲ. ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಈ ಕುರಿತ ಸುದ್ದಿ ಸತ್ಯಕ್ಕೆ ದೂರವಾದುದು. ನಾನು ಹಾಗೂ ಸೋಮ್‍ವೀರ್ 7-8ನೇ ವಯಸ್ಸಿನಲ್ಲಿ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ನಡುವಿನ ಸ್ನೇಹ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.
2019/01/23 13:58:47
http://www.eesanje.com/2018/08/28/vinesh-phogat-gets-engaged-at-airport-on-return-after-clinching-gold-at-asian-games/
mC4
ಕೋವಿಡ್ ಹೆಚ್ಚಳ : ಇಂದಿನಿಂದ ಆಂಧ್ರಪ್ರದೇಶದ 1ರಿಂದ 9ನೇ ತರಗತಿ ಶಾಲೆಗಳು ಬಂದ್ - ಪ್ರೆಸ್ ಕನ್ನಡ ಅಮರಾವತಿ: ದೇಶದಲ್ಲಿ ಕೊರೊನಾ ವೈರಸ್ ಅಬ್ಬರಕ್ಕೆ ದೇಶದ ಜನ ತತ್ತರಿಸಿ ಹೋಗಿದ್ದಾರೆ. ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ, ದೆಹಲಿ, ಹರಿಯಾಣ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳು ಬಂದ್ ಆಗಿವೆ. ಈಗ ಆಂಧ್ರಪ್ರದೇಶ ರಾಜ್ಯಕ್ಕೂ ತಟ್ಟಿದ ಕೋವಿಡ್ ಎಫೆಕ್ಟ್, ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ರಾಜ್ಯಾದ್ಯಂತ ಇಂದಿನಿಂದ 1 ರಿಂದ 9 ನೇ ತರಗತಿವರೆಗಿನ ಎಲ್ಲಾ ಶಾಲೆಗಳನ್ನು ಮುಚ್ಚಲು ಆಂಧ್ರಪ್ರದೇಶ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆದೇಶಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದ್ದು, ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ರಾಜ್ಯದ 1ರಿಂದ 9 ತರಗತಿ ಶಾಲೆಗಳು ಬಂದ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ‌. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಏಪ್ರಿಲ್ 20 ರಿಂದ ರಾಜ್ಯದಾದ್ಯಂತ ಹಾಸ್ಟೆಲ್ ಗಳು ಮತ್ತು ಕೋಚಿಂಗ್ ಕೇಂದ್ರಗಳು ಸೇರಿದಂತೆ 1 ರಿಂದ 9 ನೇ ತರಗತಿಗಳ ವರೆಗಿನ ಎಲ್ಲಾ ಶಾಲೆಗಳನ್ನು ಮುಚ್ಚಲು ಸೋಮವಾರ ಆದೇಶಿಸಿದ್ದಾರೆ. 10 ಹಾಗೂ 12 ತರಗತಿಗಳ ಕುರಿತು ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೋವಿಡ್-19 ಮಾರ್ಗಸೂಚಿ ಅನುಸರಿಸಿ 10 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ. ರಾಜ್ಯದ ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ, ,ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು ಮತ್ತು ನಿಯಮಗಳನ್ನು ಉಲ್ಲಂಘಿಸುವ ಎಲ್ಲರಿಗೂ 100 ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು‌.
2022/01/20 10:39:48
https://presskannada.com/covid-hechala-indininda-andrapradeshada-1rinda-9ne-taragati-shalegalu-band/
mC4
'ಕೊರೊನಾ ಸೋಂಕಿಗೆ ಒಳಗಾದವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ' - Saaksha TV 'ಕೊರೊನಾ ಸೋಂಕಿಗೆ ಒಳಗಾದವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ' ನವದೆಹಲಿ: ದೇಶಾದ್ಯಂರ ಮಹಾಮಾರಿ ಕೊರೊನಾ 2ನೇ ಅಲೆಗೆ ಜನ ತತ್ತರಿಸಿಹೋಗಿದ್ದಾರೆ.. ಮತ್ತೊಂದೆಡೆ ಲಸಿಕೆ ಅಬಿಯಾನವೂ ಜಾರಿಯಲ್ಲಿದೆ.. ಆದ್ರೆ ಸೋಂಕಿತರು ಲಸಿಕೆ ಪಡೆಯಬಹುದಾ ಎಲ್ಲವಾ ಎಂಬ ಗೊಂದಲಗಳು ಇತ್ತು.. ಇದೀಗ ಇದಕ್ಕೆ ಅಧ್ಯಯನ ವೊಂದರಿಂದ ಉತ್ತರ ಸಿಕ್ಕಿದೆ. ವಿವೇಚನೆಯಿಲ್ಲದ ಹಾಗೂ ಅಪೂರ್ಣವಾದ ಲಸಿಕಾ ಅಭಿಯಾನವು ರೂಪಾಂತರ ತಳಿಗಳ ಹೊರಹೊಮ್ಮುವಿಕೆಯನ್ನು ಪ್ರಚೋದಿಸುತ್ತದೆ ಎಂದು ಏಮ್ಸ್‌ನ ವೈದ್ಯರು, ಕೊರೊನಾ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು, ಸಾರ್ವಜನಿಕ ಆರೋಗ್ಯ ತಜ್ಞರ ತಂಡ ಹೇಳಿದ್ದು, ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರಿಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದೂ ತಜ್ಞರು ಸಲಹೆ ನೀಡಿದ್ದಾರೆ. ಮಕ್ಕಳನ್ನು ಸೇರಿದಂತೆ ದೊಡ್ಡ ಜನಸಮುದಾಯಕ್ಕೆ ಲಸಿಕೆ ನೀಡುವ ಪ್ರಯತ್ನಗಳ ಬದಲಿಗೆ, ದುರ್ಬಲರಿಗೆ ಮತ್ತು ಸೋಂಕಿನ ಅಪಾಯ ಇರುವವರಿಗೆ ಮೊದಲು ಲಸಿಕೆ ನೀಡಬೇಕು. ಇದೇ ಈ ಹೊತ್ತಿನ ಗುರಿಯಾಗಿರಬೇಕು ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಸಂಘ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ನ ತಜ್ಞರು ವರದಿ ನೀಡಿದ್ದಾರೆ. ಇನ್ನು ಎಲ್ಲರಿಗೂ ಒಂದೇ ಬಾರಿಗೆ ಲಸಿಕೆ ಕೊಡುವ ಪ್ರಯತ್ನಗಳಿಂದ ಮಾನವ ಮತ್ತು ಇತರ ಸಂಪನ್ಮೂಲಗಳು ಬರಿದಾಗುತ್ತವೆ ಎಂದು ತಜ್ಞರು ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ.
2021/06/18 18:04:43
https://saakshatv.com/covid19-vaccine-covid-pateints-dont-need-to-take-vaccine-study/
mC4
ಶಿಶಿಲ ಬಸದಿ ಪರಿಸರದಲ್ಲಿ ನಿಧಿ ಶೋಧ: ಆರೋಪಿಗಳು ಪರಾರಿ | ಸುದ್ದಿ ಬೆಳ್ತಂಗಡಿ ಶಿಶಿಲ: ಇಲ್ಲಿಯ ಕೋಟೆಬಾಗಿಲಿನಲ್ಲಿ ಪಾಳು ಬಿದ್ದಿರುವ ಪುರಾತನ ಬಸದಿಯೊಳಗಡೆ ನಿಧಿಗಾಗಿ ಶೋಧ ನಡೆಸಿರುವ ಪ್ರಕರಣ ನ.3 ರಂದು ತಡರಾತ್ರಿ ಬೆಳಕಿಗೆ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಮತ್ಸ್ಯತೀರ್ಥ ಕ್ಷೇತ್ರವೆಂದೇ ಖ್ಯಾತಿ ಪಡೆದ ಇಲ್ಲಿನ ಬಸದಿ ಪರಿಸರದಲ್ಲಿ ಎರಡು ದಿನಗಳಿಂದ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುತ್ತಿದ್ದುದನ್ನು ಕಂಡು ಸ್ಥಳೀಯರು ಪ್ರಶ್ನಿಸಿದಾಗ, ಅವರು ತಾವು ಮೀನು ಹಿಡಿಯಲೆಂದು ಹೊಳೆಗೆ ಬಂದವರೆಂದು ತಿಳಿಸಿದ್ದರು. ಅನುಮಾನಗೊಂಡ ಸ್ಥಳೀಯರು ರಾತ್ರಿ ವೇಳೆ ಬಸದಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಹಾಸು ಕಲ್ಲುಗಳನ್ನು ಸರಿಸಿ, ಹೊಂಡ ತೋಡಿರುವುದು ಪತ್ತೆಯಾಯಿತು. ಪಕ್ಕದಲ್ಲಿಯೇ ತೆಂಗಿನಕಾಯಿ, ಕುಂಕುಮ, ಲಿಂಬೆಹುಳಿ ಹಾಗೂ ಹೂವುಗಳಿಂದ ಪೂಜೆ ಮಾಡಿದ ಕುರುಹು ಕೂಡ ಕಂಡ ಬಂದಿದೆ. ಕೂಡಲೇ ಸ್ಥಳೀಯರು ಧರ್ಮಸ್ಥಳ ಪೊಲೀಸರಿಗೆ ವಿಷಯ ತಿಳಿಸಿದ್ದು, ತಡರಾತ್ರಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ವಿಶಯ ತಿಳಿದ ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರ ವಾಹನದ ನೋಂದಣಿ ಸಂಖ್ಯೆ ಲಭ್ಯವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2020/10/23 22:18:26
http://belthangady.suddinews.com/archives/343915
mC4
ಮಹನೀಯ ಮದ್ಲೆಗಾರರ ಪ್ರಭಾವಲಯ | ಕೆಂಡಸಂಪಿಗೆ ಕೃಷ್ಣಪ್ರಕಾಶ್ ಉಳಿತ್ತಾಯ | Mar 4, 2022 | ಸಂಪಿಗೆ ಸ್ಪೆಷಲ್ | ಬಲಿಪ ನಾರಾಯಣ ಭಾಗವತರು ಮದ್ದಳೆಗಾರರಾದ ದಿವಂಗತ ಕುದುರೆಕೋಡ್ಲು ರಾಮ ಭಟ್ಟರು ಮತ್ತು ದಿವಂಗತ ಕೆಮ್ಮಣ್ಣು ನಾರ್ಣಪ್ಪಯ್ಯ ಇವರಲ್ಲಿ ಅತ್ಯಂತ ಗೌರವವನ್ನು ಇರಿಸಿಕೊಂಡವರು. ಹಿರಿಯ ಬಲಿಪ ನಾರಾಯಣ ಭಾಗವತರ ನೆಚ್ಚಿನ ಮದ್ದಳೆಗಾರರಾಗಿದ್ದ ಈ ಮಹನೀಯರ ನುಡಿತಗಳು ಕೇಳ್ಮೆಯಲ್ಲಿ ಭಿನ್ನತರವಾಗಿದ್ದರೂ ಅವು ಬಲಿಪ ನಾರಾಯಣ ಭಾಗವತರ ಗಾನದೊಂದಿಗೆ ಅಪೂರ್ವರೀತಿಯಲ್ಲಿ ಸಾಂಗತ್ಯವನ್ನು ಹೊಂದುತ್ತಿದ್ದವು. ಹಿರಿಯರೆನ್ನುವಂತೆ ಕುದುರೆಕೋಡ್ಲು ರಾಮ ಭಟ್ಟರ ಮದ್ದಳೆವಾದನ ನವಿರಾದದ್ದು. ನುಡಿಸಾಣಿಕೆಯಲ್ಲಿ ನಯ ನಾಜೂಕು ಇರುತ್ತಿತ್ತು. ಕುದುರೆಕೋಡ್ಲು ರಾಮ ಭಟ್ಟರು ಹಿರಿಯ ಬಲಿಪನಾರಾಯಣ ಭಾಗವತರಿಗೆ ಬಹುಕಾಲದ ಕಿರಿಯ ಒಡನಾಡಿ ಮದ್ದಳೆಗಾರರಾಗಿದ್ದರು. ಮೇಳದ ತಿರುಗಾಟವೂ ಬಲಿಪ ನಾರಾಯಣ ಭಾಗವತರ ಜತೆಗಿದ್ದುದೇ ಆಗಿದ್ದಿತು. ಆನಂತರದ ಕಾಲದಲ್ಲಿ ಕಿರಿಯ ಬಲಿಪ ನಾರಾಯಣ ಭಾಗವತರಿಗೆ ಜಾಗಟೆ ಕೊಟ್ಟು ಆಶೀರ್ವಾದ ಮಾಡಿ ಅವರನ್ನು ಭಾಗವತಿಕೆ ಮಾಡುವಂತೆ ಪ್ರೇರೇಪಿಸಿ ರೂಪಿಸಿದವರೂ ಕುದುರೆಕೋಡ್ಲು ರಾಮ ಭಟ್ಟರೇ. ಕೆಮ್ಮಣ್ಣು ನಾರ್ಣಪ್ಪಯ್ಯನವರಲ್ಲಿ ಬೀಸು ಬಿರುಸಾದ ವಾದನ ಕೌಶಲವಿರುತ್ತಿತ್ತು. ನಾಜೂಕಿಗಿಂತಲೂ ಓಜಸ್ವಿಯಾದ ವಾದನ ವೈಶಿಷ್ಟ್ಯವೆಂದರೂ ಸರಿಯೇ. ತಾಡನದ ಸಾಂದ್ರತೆ ಅಧಿಕ. ಹಿರಿಯ ಬಲಿಪ ನಾರಾಯಣ ಭಾಗವತರಿಗೆ ಸರಿಜೋಡಿಯಾಗಿ ಭಾಗವತಿಕೆಗೆ ಮದ್ದಳೆಯ ಸಾಂಗತ್ಯ ಕೊಟ್ಟವರು. ಕಿರಿಯ ಬಲಿಪ ನಾರಾಯಣ ಭಾಗವತರು ಅತ್ಯಂತ ಗೌರವದಿಂದ ಕಾಣುತ್ತಿದ್ದ ಹಿರಿಯರು. ಇವರಿಬ್ಬರ ಜತೆಗೂ ಬಲಿಪ ನಾರಾಯಣ ಭಾಗವತರು ಭಾಗವತಿಕೆ ಮಾಡಿದ್ದಾರೆ. ಇವರ ಬಗೆಗೆ ಹೇಳುವಾಗ ಬಲಿಪರ ಕಣ್ಣುಗಳು ಮಿಂಚುತ್ತವೆ. ಹೃದಯ ಮಗುವಿನಂತೆ ಕುಣಿಯುತ್ತದೆ. ಅವರ ಹಿರಿತನದ ಮುಂದೆ ತಾವು ಮಗುವಾಗುತ್ತಾರೆ. ತಮ್ಮದೇ ಶೈಲಿಯಲ್ಲಿ ಇವರಿಬ್ಬರ ವಾದನ ಕೌಶಲವನ್ನು ಕುರಿತು ಬಲಿಪ ನಾರಾಯಣ ಭಾಗವತರ ಮಾತು ಹೀಗಿದೆ- 'ಕುದುರೆಕೋಡ್ಲು ರಾಮ ಭಟ್ಟರ ಚೆಂಡೆ ಮದ್ದಳೆ ಎರಡರಲ್ಲೂ ಸೈ. ಮದ್ದಳೆವಾದನ ಶುದ್ಧ ಯಕ್ಷಗಾನೀಯ ಮದ್ದಳೆವಾದನ. ಎಡ-ಬಲಗಳ ಹೊಂದಾಣಿಕೆ ಅಷ್ಟು ಸುಖ. ಚೆಂಡೆಯನ್ನು ¨ಭಾಗವತರು ಹಾಡುವ ಶ್ರುತಿಗೆ ಸುರ್ ತಾನ್ (ಸುಲ್ತಾನ್) ನುಡಿಸಲು ಆರಂಭಿಸಿದ್ದು ಕುದುರೆಕೋಡ್ಲು ರಾಮ ಭಟ್ಟರು ಎಂಬ ಮಾತೂ ಇದೆ. ಅವರು ನುಡಿಸುವ ಛಾಪು(ಮದ್ದಳೆಯ ಬಲ ಭಾಗಕ್ಕೆ ಹಸ್ತದಿಂದ ತಾಡಿಸಿದಾಗ ಹೊರಡುವ ಷಡ್ಜ ಸ್ವರ) ಅಂದರೆ ಶುದ್ಧ. ಅದರಲ್ಲಿ ಆಧಾರ ಶ್ರುತಿಯಲ್ಲದೆ ಬೇರೇನೂ ಕೇಳಿಸದು! (ಅಂದರೆ, ಛಾಪು ಶುದ್ಧವಾಗಿದ್ದು ಅಲ್ಲಿ ಅಶುದ್ಧವಾದ ಬೇರೆಯಾವುದೇ ನಾದ ಬಾರದು. ಅದು ಹೊರಡಿಸುವುದು ಶುದ್ಧ ಷಡ್ಜವನ್ನು ಮಾತ್ರ.). "ಪದದಿಂದ ಸ್ವಲ್ಪವೂ ಭಾರ ಅವರ ಮದ್ದಳೆಯ ನುಡಿತ ಇರಲಿಕ್ಕಿಲ್ಲ". ಅಂದರೆ ಬಲಿಪರು ವಿವರಿಸ ಹೊರಟಿರುವುದು ರಾಮ ಭಟ್ಟರು ಮದ್ದಳೆಯ ನುಡಿಸಿದಾಗ ಹೊರಡಿಸುವ ಶಬ್ದದ ಪ್ರಮಾಣ ಭಾಗವತಿಕೆಯ ಸ್ವರಭಾರಕ್ಕಿಂತ ಅಥವಾ ಸ್ವರಪ್ರಮಾಣಕ್ಕಿಂತ ಅಧಿಕವಿರದು ಎಂಬುದನ್ನು. "ಅವರ ಮದ್ದಳೆ ಎಲ್ಲೂ ಮದ್ದಳೆಗೆ ಒರಸಿಕೊಂಡು ಹೋಗದು". ಇದು ಬಹಳ ಸುಂದರವಾದ ಉಕ್ತಿ. ಅಂದರೆ ನುಡಿಸುವಾಗ ನುಡಿತದ ಅಕ್ಷರಗಳು ಎಲ್ಲೂ ಅಸ್ಪಷ್ಟವಾಗಿರದು. ತಾಡನಗಳೆಲ್ಲವೂ ದೃಢವಾಗಿದ್ದು ಆದರೆ ಮೃದುವಾಗಿ ಇರುತ್ತಿದ್ದವು. ಪದ್ಯದ ಭಾರಕ್ಕಿಂಥ ಅಧಿಕವಾದ ನಾದವನ್ನು ಹೊರಡಿಸದೆ ಪದ್ಯದ ಒಳಗಿದ್ದಿರುತ್ತಿತ್ತು. ಪದ್ಯವನ್ನು ಮೀರಿ ಎಂದೂ ಹೋಗುತ್ತಿರಲಿಲ್ಲ. ಭಾಗವತಿಕೆಯನ್ನು "ತಿಂದು ಹಾಕುತ್ತಿರಲಿಲ್ಲ". ಅಂಥ ನಮ್ಯತೆ ಮದ್ದಳೆವಾದನದಲ್ಲಿರುತ್ತಿತ್ತು. ಉಕ್ಕಿನಡ್ಕದ ಭಗವತಿ ಮೇಳದಲ್ಲಿ ಬಳ್ಳಂಬೆಟ್ಟು ಮೇಳದಲ್ಲಿ ರಾಮಭಟ್ಟರು ಮತ್ತು ಶಿವ ಮದ್ಲೆಗಾರರ ಒಂದು ಗಂಟೆ ನಲವತ್ತು ನಿಮಿಷದ ಪೀಠಿಕೆ. ಮೇಳದ ಯಜಮಾನರು ಬಂದು ಇಬ್ಬರಲ್ಲೂ ದಯವಿಟ್ಟು ನಿಲ್ಲಿಸಿ ಎಂದು ಕೇಳಿಕೊಂಡಾಗಲೇ ಇಬ್ಬರೂ ನಿಲ್ಲಿಸಿದರಂತೆ. ಅಂದಿನ ಭಾಗವತಿಕೆಗೆ ಜೋಡಾಟದ ಭಾಗವತಿಕೆ ಚಕ್ಕುಲಿ ಶಂಭಟ್ಟರು ಮತ್ತು ಬಲಿಪ ನಾರಾಯಣ ಭಾಗವತರು. ಕೆಮ್ಮಣ್ಣು ನಾರ್ಣಪ್ಪಯ್ಯನವರ ನುಡಿತಗಳಾದರೋ ಓಜಸ್ವಿ. ನುಡಿಗಳ ಪಾಟಾಕ್ಷರಗಳ ಗಡಣವೂ, ತಾಡನ ಸಾಂದ್ರತೆಯೂ ಮತ್ತು ಕೊಡುವ ಛಾಪುವಿನ ಗತ್ತು ಗಾಂಭೀರ್ಯವೂ ದೊಡ್ಡದೇ ಆಗಿತ್ತು. ಹಿರಿಯ ಬಲಿಪ ನಾರಾಯಣ ಭಾಗವತರೂ ಮತ್ತು ಕೆಮ್ಮಣ್ಣು ನಾರ್ಣಪ್ಪಯ್ಯನವರ ಜೋಡಿ ಮಾಡಿದ ಮೋಡಿಯೂ ನೆನಪಲ್ಲಿರುವಂಥದ್ದು ಎಂದು ಕಿರಿಯ ಬಲಿಪ ನಾರಾಯಣ ಭಾಗವತರು ನೆನಪಿಸಿಕೊಳ್ಳುತ್ತಾರೆ. ನಾರ್ಣಪ್ಪಯ್ಯನವರು ಕಿರಿಯ ಬಲಿಪರಲ್ಲಿ ಹೇಳುತ್ತಿದ್ದ ಮಾತು-ಪ್ರೇಕ್ಷಕರಿಗೆ ನಮ್ಮ ಕಲೆ (ನುಡಿಸಾಣಿಕೆ-ಹಾಡು) ಬೇಕು ಬೇಕು ಅಂತ ಮಾಡಬೇಕು ನಾವು ಎಂದು. ಹಾಗೆಯೇ ಮದ್ದಳೆ-ಭಾಗವತಿಕೆಯನ್ನು ಮೆರೆಸಿದ್ದಾರೆ ಎಂಬುದು ಬಲಿಪರ ಅನುಭವದ ಮಾತು. ಅಗರಿ ಶ್ರೀನಿವಾಸ ಭಾಗವತರು ಮತ್ತು ವಿದ್ವಾನ್ ದಾಮೋದರ ಮಂಡೆಚ್ಚರೊಡನೆಯೂ ಮದ್ದಳೆ ನುಡಿಸಿದ್ದಾರೆ. ಅವರೊಡಗಿನ ಜತೆಗಾರಿಕೆಯಲ್ಲಿ ಮೂಡುಬಿದಿರೆಯಲ್ಲಿ ನಡೆದ ತಾಳಮದ್ದಳೆಯಲ್ಲಿ ಮುಕ್ಕಾಲು ಗಂಟೆಗಳ ಕಾಲ ಪ್ರೇಕ್ಷಕರಿಂದ ಅದೂ ಆಟ (ಯಕ್ಷಗಾನ, ತಾಳಮದ್ದಳೆಯಲ್ಲ) ಬರಿಯ ಕಿರಿಯ ಬಲಿಪ ನಾರಾಯಣ ಭಾಗವತರು ಮತ್ತು ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆವಾದನಕ್ಕೆ ಪ್ರೇಕ್ಷಕರ ಗಡಚಿಕ್ಕುವ ಚಪ್ಪಾಳೆಯ ಕರತಾಡನವನ್ನು ಈಗಲೂ ವಿಸ್ಮಯವೆಂಬಂತೆ ನೆನಪಿಸಿಕೊಳ್ಳುತ್ತಾರೆ. ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆವಾದನದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಏರಿಳಿತಗಳ ಸಮ್ಮಿಳಿತವಿರುತ್ತಿತ್ತು. ಕೇವಲ ಚಾಪು ಮತ್ತು ಮೆಲುದನಿಯ ನುಡಿಗಳಿಂದ ಪದ್ಯದ ಒಂದು ಘಟ್ಟಕ್ಕಾಗುವಾಗ ಗಡಚಿಕ್ಕುವ ಪಾಟಸಮೂಹಗಳಿಂದ ಭಾಗವತಿಕೆಯನ್ನು ಅಲಂಕರಿಸುವ ವ್ಯುತ್ಪತ್ತಿಯುಳ್ಳ ಮದ್ದಳೆವಾದನ ಕ್ರಮವಾಗಿದ್ದಿರಬಹುದು. ಕೆಮ್ಮಣ್ಣು ನಾರ್ಣಪ್ಪಯ್ಯನವರು ಬಹುಕಾಲ ಮೇಳದ ತಿರುಗಾಟವನ್ನು ಮಾಡಿದವರಲ್ಲ. ಅವರ ಶಿಷ್ಯರಾದ ನೆಡ್ಲೆ ನರಸಿಂಹ ಭಟ್ಟರಂಥವರನ್ನು ಯಕ್ಷಗಾನಕ್ಕೆ ಕೊಟ್ಟ ಕೀರ್ತಿ ಇವರ ಪಾಲಿಗಿದೆ. ನಾರ್ಣಪ್ಪಯ್ಯರ ಮದ್ದಳೆವಾದನದಲ್ಲಿ ಪದ್ಯದ ನಡುವೆ ಬಿಡುವ ವಿರಾಮದ ಜಾಗದಲ್ಲಿ ನುಡಿಸುವ ಪೆಟ್ಟುಗಳು ಅತ್ಯಂತ ಮನೋಹರವಾಗಿತ್ತಂತೆ. ಪದ್ಯಹೇಳುವಾಗ ನಮ್ಯವಾದ ಮೃದು ನುಡಿಗಲೂ ಇತ್ತಂತೆ. ಅಂಥ ಮದ್ಲೆಗಾರರು ಇನ್ನೊಬ್ಬರಿಲ್ಲ ಎಂಬುದು ಬಲಿಪರ ಅಭಿಪ್ರಾಯ. ಕೆಮ್ಮಣ್ಣು ನಾರ್ಣಪ್ಪಯ್ಯನವರಿಗೆ ಕಿರಿಯ ಬಲಿಪ ನಾರಾಯಣ ಭಾಗವತರೊಡನೆ ಮೇಳದ ತಿರುಗಾಟ ಮಾಡಬೇಕೆಂಬ ಬಯಕೆಯೂ ಇತ್ತು. ಅದನ್ನು ನೇರವಾಗಿ ಬಲಿಪರಲ್ಲಿ ಹೇಳಿದ್ದರು. ಬಲಿಪರ ಆ ತಿರುಗಾಟದಲ್ಲಿ ಮದ್ಲೆಗಾರ (ಪ್ರಧಾನ ಮದ್ಲೆಗಾರರಾಗಿ) ನೆಡ್ಲೆ ನರಸಿಂಹ ಭಟ್ಟರಿಂದ್ದುದರಿಂದ ಇದು ಅನಿವಾರ್ಯವಾಗಿ ಇದು ನೆರವೇರಲಿಲ್ಲ. ಆದರೂ ಆಟ ಹತ್ತಿರವಿದ್ದಾಗಲೆಲ್ಲ ಬಲಿಪರ ಜತೆಯಾಗಿ ಪೀಠಿಕೆಗೆ ಮದ್ಲೆಗೆ ಕೂತರೆ ಬೆಳಗಿನವರೆಗೂ ಮದ್ದಳೆ ನುಡಿಸಿ ಹೋಗುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ನಾರ್ಣಪ್ಪಯ್ಯನವರು ದುಡಿಯುತ್ತಿದ್ದು ತಮ್ಮ ವೃದ್ಧಾಪ್ಯದಲ್ಲಿ ಮೂಡುಬಿದ್ರೆಯ ಜೈನ ಬಸದಿಯ ಸಮೀಪದ ಮನೆಯಲ್ಲಿ ವಾಸವಾಗಿದ್ದು ಯಕ್ಷಗಾನ ಕಲೆಯನ್ನು ಪ್ರೀತಿಸಿದ ಕಲಾವಂತರಾಗಿದ್ದ ಮಹನೀಯ ಕಲಾವಿದರು. ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆವಾದನದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಏರಿಳಿತಗಳ ಸಮ್ಮಿಳಿತವಿರುತ್ತಿತ್ತು. ಕೇವಲ ಚಾಪು ಮತ್ತು ಮೆಲುದನಿಯ ನುಡಿಗಳಿಂದ ಪದ್ಯದ ಒಂದು ಘಟ್ಟಕ್ಕಾಗುವಾಗ ಗಡಚಿಕ್ಕುವ ಪಾಟಸಮೂಹಗಳಿಂದ ಭಾಗವತಿಕೆಯನ್ನು ಅಲಂಕರಿಸುವ ವ್ಯುತ್ಪತ್ತಿಯುಳ್ಳ ಮದ್ದಳೆವಾದನ ಕ್ರಮವಾಗಿದ್ದಿರಬಹುದು ಅದು ಕೂಡ್ಲು ಮೇಳದ ಆಟ. ಅಜ್ಜ ಕೆಮ್ಮಣ್ಣು ನಾರ್ಣಪ್ಪಯ್ಯ ಮತ್ತು ಬಲಿಪ ನಾರಾಯಣ ಭಾಗವತರು ಒಟ್ಟಿಗೆ ಹೋದದ್ದನ್ನು ನೆನಪಿಸಿಕೊಳ್ಳುತ್ತಾರೆ. ಇದು ಜರುಗಿದ್ದು ಕಾಂತಾವರದಲ್ಲಿ ನಡೆದ ಆಟ. ಅಂದಿನ ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆಯ ಶೈಲಿಯ ಬಗೆಯನ್ನು ನೆನಪಿಸಿ ಕೊಂಡ ಬಗೆ ಇದು. ಅಜ್ಜ ಬಲಿಪರ ಹಾಡು ಅಂಗದ ಸಂಧಾನ ಪ್ರಸಂಗ. ಶಂಕರನಾರಾಯಣ ಸಾಮಗರ ಅಂಗದ. ಪಾರ್ತಿಸುಬ್ಬ ಕವಿಯ ಕುರುಂಜಿ ಅಷ್ಟತಾಳದ ಹಾಡು "ಯಾರಯ್ಯಾ ಕಪಿ ಯಾರಯ್ಯ" ಎಂದು ಹಾಡನ್ನು ಎತ್ತಿಕೊಂಡಲ್ಲಿಗೆ ಛಾಪು -ಮದ್ದಳೆಯ ಕರಣೆಗೆ ಹಸ್ತದಿಂದ ತಾಡಿಸುವಾಗ "ತಾಂ" ಎಂಬ ನಾದ ಬರುತ್ತದೆ; ಅದಕ್ಕೆ ಚಾಪು ಎಂದು ಹೆಸರಿಸುತ್ತಾರೆ- ಬರೇ ಛಾಪು ಮಾತ್ರ ನುಡಿಸಿದರು. 'ಯಾರಯ್ಯ ಬಂದವ ನೀನು' ಇನ್ನೊಂದು ಛಾಪು ನುಡಿಸಿದರು-ನಾರ್ಣಪ್ಪಯ್ಯ. "ನಿನ್ನನ್ಯಾರಟ್ಟಿದರು ಕಾರ್ಯವೇನು" ಎಂದು ಹಾಡಿದಲ್ಲಿಗೆ ಎರಡು ಛಾಪು (ತಾಂ ತಾಂ) ನುಡಿಸಿದರು. "ನೋಡೆ ಮೂರುಕಣ್ಣವನಾದರೇನು" ಅಲ್ಲಿಗೆ ಮೂರು ಛಾಪು (ತಾಂ ತಾಂ ತಾಂ) ನುಡಿಸಿದರಂತೆ. "ದ್ವಾರಪಾಲಕರನಂಜಿಸಿಹೊಕ್ಕುಬಲುಮೊನೆಗಾರನಂದದಿಬಲುಗರ್ವದಿಕುಳಿತಿರ್ಪೆ" ಇಲ್ಲಿ ಸಣ್ಣದನಿಯ ನುಡಿತಗಳಿಂದ ಮಧುರ ಗುಣದ ಪಾಟಸಮುಚ್ಛಯಗಳಿಂದ ನುಡಿಸುತ್ತಾ "ಕುಳಿತಿರ್ಪೆ" ಎಂಬಲ್ಲಿಗೆ ಓಜಸ್ವಿಯಾದ ವಿಧವಿಧದ ಘನವಾದ ಪಾಟಾಕ್ಷರಗಳನ್ನು ಮದ್ದಳೆಯಲ್ಲಿ ನುಡಿಸಿದಾಗ ಪಡಿಮೂಡಿದ ವಿಸ್ಮಯವನ್ನು ಬಲಿಪರು ನೆನಪಿಸಿ ಹೇಳುತ್ತಾರೆ. ಇಲ್ಲಿ ಸಣ್ಣ ನಾದವನ್ನು ಹೊರಡಿಸುತ್ತಾ ಮದ್ದಳೆಯಲ್ಲಿ ನುಡಿಗಳನ್ನು ನುಡಿಸಿ ಉಡಾಪೆಗಾಗುವಾಗ (ಯಕ್ಷಗಾನದಲ್ಲಿ ಅಷ್ಟತಾಳದಿಂದ ಏಕತಾಳಕ್ಕೆ ತಿರುಗುವ ಪ್ರಸಕ್ತಿಗೆ ಉಡಾಪೆಗೆ ತಿರುಗುವುದು ಎಂಬ ವಾಗ್ರೂಢಿ ಇದೆ) ಓಜಸ್ವಿಯಾದ "ತಕತಕತಾಂ" ಎಂಬ ನುಡಿತಕ್ಕೆ ಇಡೀ ಸಭೆಯೇ ನಿಬ್ಬೆರಗಾಗುವಂತೆ ನುಡಿಸಿದ್ದರು. ಇದು ಅಂದಿನ ನುಡಿತವನ್ನು ಬೆರಗುಗಣ್ಣಿನಿಂದ ಬಲಿಪರು ವಿವರಿಸುವ ರೀತಿ. ನಾರ್ಣಪ್ಪಯ್ಯನವರು ಹೇಳುತ್ತಿದ್ದರಂತೆ ಕಿರಿಯ ಬಲಿಪ ನಾರಾಯಣ ಭಾಗವತರಲ್ಲಿ ಹೇಳುತ್ತಿದ್ದರಂತೆ ಅಷ್ಟತಾಳದಲ್ಲಿ ನಲವತ್ತೆಂಟು ಪದ್ಯ ಹಾಡಿದರೆ ನಲವತ್ತೆಂಟು ರೀತಿಯ ನುಡಿತಗಳನ್ನು ನುಡಿಸುವೆ ಎಂದು ಇದು ಅವರ ವಾದನ ವಿದ್ವತ್ತೆಗೆ ಸಾಕ್ಷಿ. ಬಲಿಪರಿಗೂ ನಾರ್ಣಪ್ಪಯ್ಯನವರ ಮದ್ದಳೆಗೆ ಹಾಡುವುದೆಂದರೆ ಹಬ್ಬ. ಅವರ ಮದ್ದಳೆವಾದನ ಮಾತ್ರವಲ್ಲ ಜತೆಗಿನ ಪದ್ಯವನ್ನೂ ಮೇಲೆ ಹಾಕಿ ಬಿಡುವ ಶಕ್ತಿ ಇವರ ಮದ್ದಳೆವಾದನದಲ್ಲಿತ್ತು ಎಂಬುದು ಬಲಿಪರ ಅಭಿಪ್ರಾಯ. ಅವರ ಜತೆಗೆ ತುಂಬ ಕಾರ್ಯಕ್ರಮಕ್ಕೆ ಜತೆಯಾಗಿದ್ದರಂತೆ. ನರಸಿಂಹ ಭಟ್ಟರು ಅವರ ಶಿಷ್ಯರಾದರೂ ನಾರ್ಣಪ್ಪಯ್ಯರ ರೀತಿಯ ಮದ್ದಳೆವಾದನವಲ್ಲ. ಇವರುಗಳ ವಿದ್ವತ್ತೆ ಕೇವಲ ಮದ್ದಳೆವಾದನದಲ್ಲಿ ಮಾತ್ರವಲ್ಲ ಪ್ರಸಂಗ ಜ್ಞಾನ ಅರ್ಥಜ್ಞಾನದಲ್ಲೂ ಇತ್ತು. ಭಾಗವತನಿಗೆ ಒತ್ತಾಸೆಯಾಗಿ ನಿಲ್ಲುವಂಥ ಪ್ರಸಂಗದ ನಡೆಯ ಬಗೆಗೂ ಮತ್ತು ಪ್ರಸಂಗದ ದಾರಿ ಬಿಟ್ಟು ಹೋಗುವ ವೇಷಧಾರಿ ಅರ್ಥಧಾರಿಗಳಿಗೂ ಎಚ್ಚರಕೊಡುವ ವ್ಯುತ್ಪನ್ನವೂ ಇವರಲ್ಲಿದ್ದವು. ತಾಳಮದ್ದಳೆ-ಯಕ್ಷಗಾನದಲ್ಲಿ ಪದ್ಯದ ಆಶಯ ಬಿಟ್ಟೋ ಅಥವಾ ಪದ್ಯದ ಅರ್ಥಮೀರಿಯೋ ಮಾತನಾಡಿದರೆ ಆಗಿನ ಮದ್ದಳೆಗಾರರು ಛಾಪು ನುಡಿಸಿ ಭಾಗವತನಿಗೆ ಸೂಚನೆ ಕೊಡುವ ಕ್ರಮವೂ ಇದ್ದಿತ್ತು. ಇದನ್ನು ಲೆಕ್ಕಿಸದೆ ಅರ್ಥಧಾರಿ ಮಾತನಾಡಲು ತೊಡಗಿದರೆ ಮೇಲಿಂದಮೇಲೆ ಛಾಪು ಕೊಡುವ ಛಾತಿಯೂ ಮದ್ದಳೆಗಾರರಿಗಿತ್ತು. ಅಂಥವನ್ನು ಉಳಿದವರು ಗೌರವಿಸುವ ಸೌಜನ್ಯವೂ ಕಾಣಬಹುದಿತ್ತು. ಇಂಥ ಮದ್ದಳೆಗಾರರೇ ಕುದುರೆಕೋಡ್ಲು ರಾಮ ಭಟ್ಟರು ಮತ್ತು ಕೆಮ್ಮಣ್ಣು ನಾರ್ಣಪ್ಪಯ್ಯನವರು. ಅರ್ಕುಳದಲ್ಲಿ ನಡೆದ ತಾಳಮದ್ದಳೆಯಲ್ಲಿ ನೆಡ್ಲೆ ನರಸಿಂಹ ಭಟ್ಟರ ಚೆಂಡೆವಾದನ, ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆವಾದನ ಮತ್ತು ಕಿರಿಯ ಬಲಿಪ ನಾರಾಯಣ ಭಾಗವತರ ಭಾಗವತಿಕೆ. ಅತಿಕಾಯ-ರಾವಣವಧೆ ಪ್ರಸಂಗ. "ಕಂಡನು ದಶವದನ" ಪದ್ಯದ ಬಲಿಪ-ಕೆಮ್ಮಣ್ಣು-ನೆಡ್ಲೆಯವರ ಪ್ರಸ್ತುತಿಗೆ ಶೇಣಿ ಗೋಪಾಲಕೃಷ್ಣ ಭಟ್ಟರು ಯಾವುದೇ ಅರ್ಥಮಾತನಾಡದೆ "ಇದೇ ಸಾಕಲ್ಲ……. ರಾಮನ ಸಾಕ್ಷಾತ್ಕಾರವಾಯ್ತಲ್ಲ.." ಎಂದು ಅರ್ಥ ಮಾತನಾಡದೆ ನಿಲ್ಲಿಸಿದರಂತೆ. ಈ ಘಟನೆಯನ್ನು ಅತ್ಯಂತ ರೋಚಕವಾಗಿ ವಿವರಿಸುತ್ತಾರೆ ಬಲಿಪರು. ಕುದುರೆಕೋಡ್ಲು ರಾಮ ಭಟ್ಟರ ಬಗ್ಗೆ ಹೇಳುತ್ತಾ ಬಲಿಪ ನಾರಾಯಣ ಭಾಗವತರು ತಮ್ಮ ತಿರುಗಾಟದ ಮೊದಲ ವರುಷಗಳಲ್ಲಿ ಪದ್ಯದ ಮುಕ್ತಾಯದ ಸಮಯದಲ್ಲಿ ರಾಗಾಲಾಪ ತುಸು ಹೆಚ್ಚಾಗುತ್ತಿದ್ದುದನ್ನು ನೆನಪಿಸಿಕೊಂಡರು. ಇದನ್ನು ನೇರ್ಪುಮಾಡಿದ್ದು ರಾಮ ಭಟ್ಟರು. ಹೀಗೆ ಮುಕ್ತಾಯದ ಸಂದರ್ಭದ ಹಾಡನ್ನೆಲ್ಲಾ ಬಲಿಪರು ಹೆಚ್ಚಿನ ರಾಗಾಲಾಪದಲ್ಲೇ ಮುಕ್ತಾಯಕ್ಕೆ ಜಾಗಟೆ ಎತ್ತುವ ಸಂದರ್ಭ ರಾಮ ಭಟ್ಟರು ಮುಕ್ತಾಯ ನುಡಿಸದೆ ಬಿಡ್ತಿಗೆಯ ನುಡಿತವನ್ನು ನುಡಿಸಿದ್ದರು ಚೆಂಡೆಯಲ್ಲಿ. ಬಲಿಪರು ಮುಕ್ತಾಯದ ನಿರ್ದಿಷ್ಟ ಆವರ್ತ ಮುಗಿದೊಡನೆಯೇ ಜಾಗಟೆ ಕೆಳಗಿಳಿಸಲು ಯೋಚಿಸುತ್ತಿರುವಾಗ ರಾಮ ಭಟ್ಟರ ನುಡಿತ ಮುಗಿದಿರಲಿಲ್ಲ. ಇದ್ಯಾಕೆ ಹೀಗೆಂಬ ದೃಷ್ಟಿಯಿಂದ ಬಲಿಪರು ರಾಮ ಭಟ್ಟರನ್ನು ನೋಡಿದಾಗ, ರಾಮ ಭಟ್ಟರು "ಪದ್ಯ ಮುಗಿತಾ?" ಎಂದು ಕೇಳಿದರು. "ಹೌದು" ಎಂದ ಬಲಿಪರಿಗೆ "ಹ್ಹೋ! ನಾನು ಬಿಡ್ತಿಗೆಗೆ ಜಾಗ ಕೊಟ್ಟದ್ದು ಅಂತ ತಿಳಿದುಕೊಂಡೆ" ಎಂದರು. ಬಲಿಪರಿಗೆ ತಾನು ತಪ್ಪಿದೆ ಎಂದು ಗೋಚರವಾಯ್ತು. ಮತ್ತೆ ರಾಮ ಭಟ್ಟರಲ್ಲಿ ವಿಚಾರಿಸಲಾಗಿ ಅವರಂದ ಮಾಹಿತಿ ಬಿಡಿತ (ಪದ್ಯ ಎತ್ತುಗಡೆಯಾದೊಡನೆ ಮದ್ದಳೆ-ಚೆಂಡೆ ನುಡಿಸಲು ಕೊಡುವ ಜಾಗ) ಪೂರ್ವದಲ್ಲಿ ನಾಲ್ಕಾವರ್ತದ ರಾಗಾಲಾಪ ಬೇಕು. ಇದು ಮದ್ದಳೆಗಾರರಿಗೆ ಬಿಡಿತಕ್ಕೆ ಸೂಚನೆ. ಮತ್ತು ಪದ್ಯದ ಸಾಹಿತ್ಯ ಮುಗಿದೊಡನೆ ಮುಕ್ತಾಯಕ್ಕೆ ಪೂರ್ವ ಭಾಗವತ ಮಾಡುವ ಆಲಾಪ ಬಿಡಿತದಷ್ಟು ಅಳತೆಯದಾಗಿರಬಾರದು. ಮತ್ತೂ ಒಂದು ಕ್ರಮವೆಂದರೆ ಬಿಡಿತಕ್ಕೆ ಎಷ್ಟು ತಾಳಾವರ್ತ ಆವರ್ತವಿದೆಯೋ ಅಷ್ಟು ಕಾಲಮಾತ್ರ ಬಿಡಿತ ಪೂರ್ವ ಆಲಾಪವಿರಬೇಕು. ಈ ಮಾಹಿತಿ ಬಹು ಮಹತ್ತ್ವದ್ದು. ಹಿಂದಿನ ಕಾಲದಲ್ಲಿ ಇದೆಲ್ಲ ಸ್ಥಾಪಿತವಾಗಿದ್ದದ್ದು ಎಂದು ಬಲಿಪರು ಹೇಳುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಈಗಿನ ಅತಿ ಆಲಾಪ ಪ್ರಸಕ್ತಿಯ ಸಂದರ್ಭದಲ್ಲಿ ಈ ಮಾಹಿತಿ ಮಹತ್ತ್ವದ್ದು. ಇದು ಬಲಿಪ ನಾರಾಯಣ ಭಾಗವತರ ಹಾಡಿಕೆಯಲ್ಲಿ ಸ್ಪುಟವಾಗಿ ಗೊತ್ತಾಗುವಂಥದ್ದು. ಬಿಡಿತಪೂರ್ವ ಆಲಾಪದ ಅಳತೆಯು ಬಿಡಿತಕ್ಕಿರುವ ಅಳತೆಗೆ ಸಾಂಗತ್ಯವನ್ನು ಹೊಂದಿದಂಥದ್ದಾಗಿದೆ. ಮತ್ತು ಪದ್ಯದ ಮುಕ್ತಾಯಕ್ಕೆ ಸಣ್ಣ ಆಲಾಪವು ಮದ್ದಳೆ ಚೆಂಡೆವಾದಕರಿಗೆ ಸ್ಫುಟವಾದ ಸೂಚನೆಯಾಗುತ್ತದೆ. ಇಂಥ ಮಹನೀಯ ಮದ್ಲೆಗಾರರ ಬಗೆಗಿನ ಮಾತುಗಳನ್ನು ಕೇಳಿದಾಗ ನಮ್ಮಲ್ಲಿ ಅವರ ಕಲಾವಂತಿಕೆಯ ಸ್ವರೂಪದ ಅರಿವಾಗುತ್ತದೆ. ಅವರ ನುಡಿಸಾಣಿಕೆಯ ಮಹತ್ತ್ವ ಮತ್ತು ಕಲಾನಿಷ್ಠ ಪ್ರಸ್ತುತಿಯ ಅರಿವಾಗುತ್ತದೆ. ಒಬ್ಬೊಬ್ಬರ ನುಡಿತವೂ ಒಂದೊಂದು ಗುಣವನ್ನು ಅಭಿವ್ಯಕ್ತಿಸುವಂಥದ್ದು. ಒಬ್ಬರದ್ದು ಮೃದು ಮಧುರ ಗುಣವಾಗಿದ್ದರೆ ಮತ್ತೊಬ್ಬರದ್ದು ಓಜಸ್ವಿಯಾಗಿ ಇರುತ್ತಿತ್ತು. ಆದರೂ ಇವು ಯಕ್ಷಗಾನ ಭಾಗವತಿಕೆಯ ಒಳಗೇ ಇದ್ದು ಹಾಡಿಕೆಯನ್ನು ದಾಟಿ ಹೋಗುತ್ತಿರಲಿಲ್ಲ ಎಂಬುದು ನಮ್ಮ ಪ್ರಧಾನ ವಿವಕ್ಷೆಯಾಗಿರಬೇಕು. ಕುದುರೆಕೋಡ್ಲು ರಾಮ ಭಟ್ಟರು ಹೇಳುತ್ತಿದ್ದ ಹದಿಮೂರು ಘಾತದ ಝಂಪೆಯ ಕುರಿತಾಗಿ ಮಾತನಾಡುತ್ತಾ ಬಲಿಪರು ತಮಗೆ ಕುದುರೆಕೋಡ್ಲು ರಾಮ ಭಟ್ಟರು, ಸುಬ್ಬಣ್ಣಿ ಮದ್ಲೆಗಾರರ ಕಾಲದಲ್ಲಿ ಇದ್ದ ಈ ರೀತಿಯ ಝಂಪೆಯನ್ನು ಹಾಡಲು ಹೇಳುತ್ತಿದ್ದರು. ಇದು ಆರಂಭವಾಗುವುದು ಝಂಪೆಯ ಮೊದಲ ಮೂರು ಜಾಗಟೆ ಪೆಟ್ಟು ಮುಗಿದು ಅನಂತರದ ಐದು ಜಾಗಟೆ ಪೆಟ್ಟಿನ ಆರಂಭಕ್ಕೆ. ಅದಕ್ಕೆ ಅನುಸಾರಿಯಾಗಿ ಜಾಗಟೆಯಲ್ಲಿ "ಟ್ಟ ಟ್ಟ ಟ್ಟ ಟ್ಟ ಟ್ಟಾ ಟ್ಟ ಟ್ಟ ಟ್ಟ ಟ್ಟ ಟ್ಟಾ ಟ್ಟ ಟ್ಟ ಟ್ಟಾ" ಈ ರೀತಿಯ ಜಾಗಟೆಯ ಘಾತಗಳು ಹಾಕುತ್ತಿದ್ದರು. ಇದು ಸರಿಯಾಗಿ ಹದಿಮೂರು ಜಾಗಟೆಯ ಪೆಟ್ಟುಗಳಾಗಿರುತ್ತಿದ್ದುವು. ಅದಕ್ಕೆ ಅನುಸಾರಿಯಾದ ಮದ್ಲೆಯ ತತ್ಕಾರವೂ ಇತ್ತೆನ್ನಿ. ಅದು- ತಾಂ ತಾಂ ದಿಂದತ್ತಾಂ, ತಕ್ಧಿನ ಧಿನ್ನಕ ದಿದ್ದಾ ದಿದ್ದಾ ಧೋಂ" ಎಂಬುದು. ಈ ರೀತಿಯಾದ ಹಾಡನ್ನು ಅಜ್ಜ ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು ಮತ್ತು ಅಗರಿ ಶ್ರೀನಿವಾಸ ಭಾಗವತರೂ ಹಾಡುತ್ತಿದ್ದರು ಎಂಬುದನ್ನು ಬಲಿಪ ನಾರಾಯಣ ಭಾಗವತರು ಹೇಳುತ್ತಾರೆ.
2022/07/04 03:12:44
https://www.kendasampige.com/biography-of-balipa-narayana-bhagavatharu/
mC4
ಕರಾವಳಿ, ಮಲೆನಾಡಲ್ಲಿ ಬಿರುಸಾದ ಮಳೆ: ತುಂಬಿಕೊಳ್ಳುತ್ತಿರುವ ಕೆರೆ–ಕಟ್ಟೆಗಳು | Prajavani Heavy Rainfall In Coastal ನದಿಗಳ ಒಳಹರಿವು ಹೆಚ್ಚಳ l ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಕರಾವಳಿ, ಮಲೆನಾಡಲ್ಲಿ ಬಿರುಸಾದ ಮಳೆ: ತುಂಬಿಕೊಳ್ಳುತ್ತಿರುವ ಕೆರೆ–ಕಟ್ಟೆಗಳು ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಬುಧವಾರ ಮಳೆ ಬಿರುಸಾಗಿದೆ. ಹಳ್ಳ–ಕೊಳ್ಳ, ಕೆರೆ ಕಟ್ಟೆಗಳು ತುಂಬಿಕೊಳ್ಳುತ್ತಿದ್ದು, ನದಿಗಳ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 69 ಮಿಲಿ ಮೀಟರ್‌ ಮಳೆಯಾಗಿದ್ದು, ನೇತ್ರಾವತಿ ಸೇರಿದಂತೆ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಳೆಯೊಂದಿಗೆ ಜೋರಾಗಿ ಗಾಳಿಯೂ ಬೀಸುತ್ತಿದೆ. ಗಾಳಿಯ ರಭಸಕ್ಕೆ ಪುತ್ತೂರು ತಾಲ್ಲೂಕಿನ ನರಿಮೊಗರು ಸರ್ಕಾರಿ ಶಾಲೆಯ ಶೌಚಾಲಯದ ಮೇಲೆ ಬುಧವಾರ ಬೆಳಿಗ್ಗೆ ಮರವೊಂದು ಮುರಿದು ಬಿದ್ದಿದೆ. ಸ್ಥಳದಲ್ಲಿದ್ದ ಒಬ್ಬ ವಿದ್ಯಾರ್ಥಿಗೆ ಗಾಯವಾಗಿದೆ. ಮಂಗಳೂರು ನಗರದ ಆಕಾಶಭವನದಲ್ಲಿ ಗುಡ್ಡ ಕುಸಿದು ಮನೆಯೊಂದರ ಮೇಲೆ ಬಿದ್ದು ಹಾನಿಯಾಗಿದೆ. ಕೊಟ್ಟಾರ ಚೌಕಿ ಸೇರಿದಂತೆ ನಗರದ ತಗ್ಗು ಪ್ರದೇಶದಲ್ಲಿ ರಾಜ ಕಾಲುವೆಗಳು ಮಳೆಯ ನೀರಿನಿಂದ ತುಂಬಿ ಹರಿಯುತ್ತಿದ್ದವು. ನೆರೆಯ ಭೀತಿ: ಉಡುಪಿ ಜಿಲ್ಲೆಯಾದ್ಯಂತ ಬುಧವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಬೈಂದೂರಿನಲ್ಲಿ ಸೌಪರ್ಣಿಕ, ಯಡಮಾವಿನಹೊಳೆ ಹಾಗೂ ಸುಮನಾವತಿ ನದಿಗಳು ತುಂಬಿ ಹರಿಯುತ್ತಿದ್ದು ನೆರೆ ಭೀತಿ ಸೃಷ್ಟಿಯಾಗಿದೆ. ಬ್ರಹ್ಮಾವರದ ಉಗ್ಗೆಲ್‌ಬೆಟ್ಟಿನಲ್ಲಿ ಮಡಿಸಾಲು ಹೊಳೆಯ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಹರಿವಿಗೆ ಮರದ ದಿಮ್ಮಿಗಳು ಅಡ್ಡಿಯಾಗಿದ್ದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ. ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮೂಡಿಗೆರೆ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕಳಸ ಭಾಗದಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಮಳೆ ಅಬ್ಬರಿಸಿದೆ. ಹೊರನಾಡು– ಕಳಸ ಮಾರ್ಗದ ಹೆಬ್ಬಾಳೆ ಹೊಳೆ ಸೇತುವೆ ಮೇಲೆ ಹರಿದಿದೆ. ಸೇತುವೆ ಮಾರ್ಗದಲ್ಲಿ ಸುಮಾರು ಒಂದು ಗಂಟೆ ವಾಹನ ಸಂಚಾರ ಕಡಿತಗೊಂಡಿತ್ತು. ಕೊಡಗಿನಲ್ಲಿ ಮಳೆ ಚುರುಕು: ಕೊಡಗು ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನದ ನಂತರ ನಾಪೋಕ್ಲು, ಮಡಿಕೇರಿ, ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಮಳೆ ಚುರುಕಾಗಿದೆ.ಮಂಗಳವಾರ ರಾತ್ರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕಾವೇರಿ ನದಿಯು ಮತ್ತಷ್ಟು ಮೈದುಂಬಿಕೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನಮಟ್ಟ ಕೊಂಚ ಏರಿಕೆಯಾಗಿದೆ. ಹಾರಂಗಿ ಒಳಹರಿವು 1,274 ಕ್ಯುಸೆಕ್‌ಗೆ ಏರಿಕೆ ಕಂಡಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಚುರುಕುಗೊಂಡಿದೆ. ಸಾಗರ, ತೀರ್ಥಹಳ್ಳಿ, ಹೊಸನಗರದಲ್ಲಿ ಜೋರು ಮಳೆಯಾಗಿದ್ದು, ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ, ಶಿಕಾರಿಪುರ, ಸೊರಬ, ಭದ್ರಾವತಿ, ಶಿರಾಳಕೊಪ್ಪ, ಆನವಟ್ಟಿಯಲ್ಲಿ ಉತ್ತಮ ಮಳೆಯಾಗಿದೆ. ತುಂಗಾ ಜಲಾಶಯದಿಂದ 22,268 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸೇತುವೆ ಜಲಾವೃತ: ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಬಿದ್ದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿ ಒಳಹರಿವು ಹೆಚ್ಚಾಗಿದೆ. ಸಂಕೇಶ್ವರದಿಂದ ಮಹಾರಾಷ್ಟ್ರದ ಗಡಹಿಂಗ್ಲಜಗೆ ಸಂಪರ್ಕ ಕಲ್ಪಿಸುವ ನಾಗನೂರು ಸೇತುವೆ ಜಲಾವೃತವಾಗಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ರಸ್ತೆಗಳೆಲ್ಲ ಹೊಳೆಗಳಂತಾಗಿವೆ. ಶಿರಸಿಯಲ್ಲಿ ಸತತ ಮಳೆಯಿಂದಾಗಿ ಚಳಿ ಹೆಚ್ಚಾಗಿದೆ. ಹೊನ್ನಾವರ, ಕುಮಟಾ, ಗೋಕರ್ಣ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡದಲ್ಲಿ ಮಳೆ ಅಬ್ಬರಿಸಿತು. ಸಿರಿಬಾಗಿಲು ಬಳಿ ರೈಲು ಮಾರ್ಗದಿಂದ ಮಣ್ಣು ತೆರವು ಮಂಗಳೂರು: ಹಾಸನ– ಮಂಗಳೂರು ರೈಲು ಮಾರ್ಗದ ಸಿರಿಬಾಗಿಲು ಬಳಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದ್ದ ಪ್ರದೇಶದಲ್ಲಿ ರೈಲು ಮಾರ್ಗದ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಬುಧವಾರ ಪೂರ್ಣಗೊಂಡಿದೆ. ಮಂಗಳವಾರ ಭೂಕುಸಿತ ಸಂಭವಿಸಿದ್ದ ಕಾರಣದಿಂದ ಬೆಂಗಳೂರು– ಮಂಗಳೂರು ನಡುವಣ ರೈಲು ಸಂಚಾರ ಸ್ಥಗಿತಗೊಂಡಿತ್ತು. ಸಕಲೇಶಪುರ– ಸುಬ್ರಹ್ಮಣ್ಯ ಘಾಟಿ ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿದ್ದರಿಂದ ರೈಲು ಮಾರ್ಗದ ಮೇಲೆ ಮಣ್ಣು ಕುಸಿದು ಬೀಳುತ್ತಲೇ ಇತ್ತು. ಈ ಮಾರ್ಗ ಈಗ ರೈಲು ಸಂಚಾರಕ್ಕೆ ಮುಕ್ತವಾಗಿದೆ ಎಂದು ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಸತೀಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. '); $('#div-gpt-ad-650350-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-650350'); }); googletag.cmd.push(function() { googletag.display('gpt-text-700x20-ad2-650350'); }); },300); var x1 = $('#node-650350 .field-name-body .field-items div.field-item > p'); if(x1 != null && x1.length != 0) { $('#node-650350 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-650350').addClass('inartprocessed'); } else $('#in-article-650350').hide(); } else { _taboola.push({article:'auto', url:'https://www.prajavani.net/stories/stateregional/heavy-rainfall-coastal-650350.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-650350', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-650350'); }); googletag.cmd.push(function() { googletag.display('gpt-text-300x20-ad2-650350'); }); // Remove current Outbrain //$('#dk-art-outbrain-650350').remove(); //ad before trending $('#mob_rhs1_650350').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-650350 .field-name-body .field-items div.field-item > p'); if(x1 != null && x1.length != 0) { $('#node-650350 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-650350 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-650350'); }); } else { $('#in-article-mob-650350').hide(); $('#in-article-mob-3rd-650350').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-650350','#in-article-763297','#in-article-763296','#in-article-763284','#in-article-763283']; var twids = ['#twblock_650350','#twblock_763297','#twblock_763296','#twblock_763284','#twblock_763283']; var twdataids = ['#twdatablk_650350','#twdatablk_763297','#twdatablk_763296','#twdatablk_763284','#twdatablk_763283']; var obURLs = ['https://www.prajavani.net/stories/stateregional/heavy-rainfall-coastal-650350.html','https://www.prajavani.net/karnataka-news/drugs-followup-notice-to-akul-balaji-and-others-763297.html','https://www.prajavani.net/karnataka-news/cabinet-expansion-unavailable-consent-bs-yadiyurappa-return-763296.html','https://www.prajavani.net/karnataka-news/asha-workers-demand-763284.html','https://www.prajavani.net/karnataka-news/crp-brp-counseling-763283.html']; var vuukleIds = ['#vuukle-comments-650350','#vuukle-comments-763297','#vuukle-comments-763296','#vuukle-comments-763284','#vuukle-comments-763283']; // var nids = [650350,763297,763296,763284,763283]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2020/09/18 20:33:55
https://www.prajavani.net/stories/stateregional/heavy-rainfall-coastal-650350.html
mC4
ಸುದ್ದಿ - ಕ್ಯಾಶನ್ ವಿನಿಮಯ ರಾಳ ಜ್ಞಾನ ಕರುಳಿನ ಮೂಲಕ ಪೊಟ್ಯಾಸಿಯಮ್ ನಷ್ಟವನ್ನು ವೇಗಗೊಳಿಸುವ ಮೂಲಕ ಹೈಪರ್‌ಕಲೇಮಿಯಾಕ್ಕೆ ಚಿಕಿತ್ಸೆ ನೀಡಲು ಕ್ಯಾಶನ್-ಎಕ್ಸ್‌ಚೇಂಜ್ ರೆಸಿನ್‌ಗಳನ್ನು ಬಳಸಲಾಗುತ್ತದೆ, ವಿಶೇಷವಾಗಿ ಕಳಪೆ ಮೂತ್ರ ಉತ್ಪಾದನೆಯ ಸಂದರ್ಭದಲ್ಲಿ ಅಥವಾ ಡಯಾಲಿಸಿಸ್‌ಗೆ ಮುಂಚಿತವಾಗಿ (ಹೈಪರ್ಕಲೇಮಿಯಾಕ್ಕೆ ಚಿಕಿತ್ಸೆ ನೀಡುವ ಅತ್ಯಂತ ಪರಿಣಾಮಕಾರಿ ವಿಧಾನ). ರಾಳಗಳು ಸ್ಥಿರವಾದ negativeಣಾತ್ಮಕ ಶುಲ್ಕಗಳನ್ನು ಹೊಂದಿರುವ ದೊಡ್ಡ ಕರಗದ ಅಣುಗಳ ಒಟ್ಟುಗೂಡಿಸುವಿಕೆಯನ್ನು ಒಳಗೊಂಡಿರುತ್ತವೆ, ಇದು ಧನಾತ್ಮಕ ಆವೇಶದ ಅಯಾನುಗಳನ್ನು (ಕ್ಯಾಟಯನ್ಸ್) ಸಡಿಲವಾಗಿ ಬಂಧಿಸುತ್ತದೆ; ಇವುಗಳು ದ್ರವ ಪರಿಸರದಲ್ಲಿನ ಕ್ಯಾಟಿಯನ್ಸ್‌ಗಳೊಂದಿಗೆ ಸುಲಭವಾಗಿ ವಿನಿಮಯ ಮಾಡಿಕೊಳ್ಳುತ್ತವೆ, ಇದು ರಾಳ ಮತ್ತು ಅವುಗಳ ಸಾಂದ್ರತೆಯ ಮೇಲಿನ ಸಂಬಂಧವನ್ನು ಅವಲಂಬಿಸಿರುತ್ತದೆ. ಸೋಡಿಯಂ ಅಥವಾ ಕ್ಯಾಲ್ಸಿಯಂ ತುಂಬಿದ ರಾಳಗಳು ಈ ಕ್ಯಾಟಯನ್‌ಗಳನ್ನು ಕರುಳಿನಲ್ಲಿರುವ ಪೊಟ್ಯಾಶಿಯಂ ಕ್ಯಾಟಯನ್‌ಗಳೊಂದಿಗೆ ಆದ್ಯತೆ ವಿನಿಮಯ ಮಾಡುತ್ತವೆ (ಪ್ರತಿ ಗ್ರಾಂ ರಾಳಕ್ಕೆ 1 ಎಂಎಂಒಎಲ್ ಪೊಟ್ಯಾಸಿಯಮ್); ಬಿಡುಗಡೆಯಾದ ಕ್ಯಾಟಯಾನುಗಳು (ಕ್ಯಾಲ್ಸಿಯಂ ಅಥವಾ ಸೋಡಿಯಂ) ಹೀರಲ್ಪಡುತ್ತವೆ ಮತ್ತು ರೆಸಿನ್ ಜೊತೆಗೆ ಬಂಧಿತ ಪೊಟ್ಯಾಸಿಯಮ್ ಮಲದಲ್ಲಿ ಹಾದುಹೋಗುತ್ತದೆ. ರಾಳವು ಸೇವಿಸಿದ ಪೊಟ್ಯಾಸಿಯಮ್ ಅನ್ನು ಹೀರಿಕೊಳ್ಳುವುದನ್ನು ತಡೆಯುವುದಿಲ್ಲ, ಆದರೆ ಇದು ಸಾಮಾನ್ಯವಾಗಿ ಕರುಳಿನಲ್ಲಿ ಸ್ರವಿಸುವ ಪೊಟ್ಯಾಸಿಯಮ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ಮರುಹೀರಿಕೊಳ್ಳುತ್ತದೆ. ಹೈಪರ್‌ಕಲೇಮಿಯಾದಲ್ಲಿ, ಪಾಲಿಸ್ಟೈರೀನ್ ಸಲ್ಫೋನೇಟ್ ರಾಳದ ಮೌಖಿಕ ಆಡಳಿತ ಅಥವಾ ಧಾರಣ ಎನಿಮಾಗಳನ್ನು ಬಳಸಬಹುದು. ಸೋಡಿಯಂ-ಹಂತದ ರಾಳವನ್ನು (ರೆಸೋನಿಯಮ್ ಎ) ಮೂತ್ರಪಿಂಡ ಅಥವಾ ಹೃದಯ ವೈಫಲ್ಯದ ರೋಗಿಗಳಲ್ಲಿ ಸ್ಪಷ್ಟವಾಗಿ ಬಳಸಬಾರದು ಏಕೆಂದರೆ ಸೋಡಿಯಂ ಓವರ್‌ಲೋಡ್ ಕಾರಣವಾಗಬಹುದು. ಕ್ಯಾಲ್ಸಿಯಂ-ಹಂತದ ರಾಳವು (ಕ್ಯಾಲ್ಸಿಯಂ ರೆಸೋನಿಯಮ್) ಹೈಪರ್ಕಾಲ್ಸೆಮಿಯಾಕ್ಕೆ ಕಾರಣವಾಗಬಹುದು ಮತ್ತು ಪೂರ್ವಭಾವಿ ರೋಗಿಗಳಲ್ಲಿ ಇದನ್ನು ತಪ್ಪಿಸಬೇಕು, ಉದಾ: ಮಲ್ಟಿಪಲ್ ಮೈಲೋಮಾ, ಮೆಟಾಸ್ಟಾಟಿಕ್ ಕಾರ್ಸಿನೋಮ, ಹೈಪರ್ಪ್ಯಾರಥೈರಾಯ್ಡಿಸಮ್ ಮತ್ತು ಸಾರ್ಕೊಯಿಡೋಸಿಸ್ ಇರುವವರು. ಮೌಖಿಕವಾಗಿ ಅವು ತುಂಬಾ ರುಚಿಯಾಗುವುದಿಲ್ಲ, ಮತ್ತು ಎನಿಮಾ ರೋಗಿಗಳು ರಾಳದಲ್ಲಿ ಲಭ್ಯವಿರುವ ಎಲ್ಲಾ ತಾಣಗಳಲ್ಲಿ ಪೊಟ್ಯಾಸಿಯಮ್ ವಿನಿಮಯ ಮಾಡಲು ಅಗತ್ಯವಿದ್ದಷ್ಟು (ಕನಿಷ್ಠ 9 ಗಂಟೆ) ಅವುಗಳನ್ನು ಉಳಿಸಿಕೊಳ್ಳುವುದು ಅಪರೂಪ.
2021/10/26 18:21:33
http://kn.dongli-chem.com/news/cation-exchange-resin-knowledge/
mC4
ರಾಜಿ ನೋಡುತ್ತಾ ನೆನಪಾದ ಗೂಢಚಾರರು! - Yuvalive ರಾಜಿ ಅಂತ ಚಲನಚಿತ್ರವೊಂದು ಬಿಡುಗಡೆಯಾಯ್ತು. ರಾಷ್ಟ್ರೀಯತೆಯ ಭಾವವುಳ್ಳಂಥ ಎಂಥವರೂ ಬೆರಗಾಗಬಲ್ಲಂಥ ನಟನೆ ಮತ್ತು ಕಥಾ ವಸ್ತು ರಾಜಿಯದ್ದು. ಪಾಕಿಸ್ತಾನದ ಪರವಾಗಿ ಗೂಢಚಯರ್ೆ ನಡೆಸುವಂತ ಕಶ್ಮೀರದ ವ್ಯಕ್ತಿಯಿಂದ ಚಿತ್ರ ಆರಂಭಗೊಳ್ಳುತ್ತದೆ. 1971 ರ ಪಾಕಿಸ್ತಾನ-ಭಾರತ ಯುದ್ಧದ ವೇಳೆ ಪಾಕಿಸ್ತಾನ ಭಾರತವನ್ನು ಮಣಿಸಲು ಭಯಾನಕವಾದ ತಂತ್ರವೊಂದನ್ನು ಹೆಣೆಯುತ್ತಿದೆ ಎಂದು ಅರಿತ ಆತ ಅಲ್ಲಿನ ಸೈನ್ಯದ ಮುಖ್ಯಾಧಿಕಾರಿಯ ಮಗನೊಂದಿಗೆ ತನ್ನ ಮಗಳನ್ನೇ ಮದುವೆ ಮಾಡಿ ಕೊಡುವ ಮಾತುಕತೆಯಾಡಿ ಬಂದುಬಿಡುತ್ತಾನೆ. ಇನ್ನೂ ಕಾಲೇಜು ಓದುತ್ತಿದ್ದ 20 ರ ತರುಣಿ ಸೆಹಮತ್ ತನ್ನ ತಂದೆಯ ಪರಿಸ್ಥಿತಿಯನ್ನು ಅರಿತು ಈ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ವಾಸ್ತವವಾಗಿ ಅವಳೆದುರಿಗಿದ್ದ ಸವಾಲು ಮದುವೆಯಾಗಿ ಮಕ್ಕಳನ್ನು ಹೆರುವುದಲ್ಲ ಬದಲಿಗೆ ಭಾರತದ ಪರವಾಗಿ ಅಲ್ಲಿ ಗೂಢಚಯರ್ೆ ನಡೆಸುತ್ತಾ ಪಾಕಿಸ್ತಾನ ರೂಪಿಸುತ್ತಿರುವ ಯೋಜನೆಗಳ ಕುರಿತಂತೆ ಮಾಹಿತಿ ಕಲೆ ಹಾಕುವುದು.ತುತರ್ು ತರಬೇತಿ ಪಡೆದ ಸೆಹಮತ್ ಮದುವೆಯಾಗಿ ಪಾಕಿಸ್ತಾನ ಸೇರಿಕೊಂಡು ಸೈನಿಕ ಮುಖ್ಯಾಧಿಕಾರಿಯ ಮನೆಯಲ್ಲೇ ಇದ್ದುಕೊಂಡು ಗೂಢಚಯರ್ೆ ನಡೆಸುವುದು ಚಿತ್ರದ ಕಥಾವಸ್ತು. ಆಲಿಯಾ ಭಟ್ ತನ್ನ ಬಾಲಿಶವಾದ ನಟನೆಯಿಂದ ಅದು ಯಾವಾಗ ಪ್ರೌಢ ಸೆಹಮತ್ ಆಗಿ ಬದಲಾಗುತ್ತಾಳೋ ಅರಿವೇ ಆಗುವುದಿಲ್ಲ. ತಾನು ಸೇರಿಕೊಂಡ ಮನೆಯವರೆಲ್ಲರನ್ನೂ ತನ್ನ ಬುಟ್ಟಿಗೆ ಹಾಕಿಕೊಂಡ ಸೆಹಮತ್ ನಿಧಾನವಾಗಿ ಅತ್ಯಂತ ಪ್ರಮುಖವಾದ ಮಾಹಿತಿಗಳನ್ನು ಭಾರತದ ಸೈನ್ಯಕ್ಕೆ ಕಳುಹಿಸಲಾರಂಭಿಸುತ್ತಾಳೆ. ಭಾರತೀಯ ಸೇನೆ ಪಾಕಿಸ್ತಾನ ಆಕಾಶ ಮಾರ್ಗದಿಂದ ದಾಳಿ ಮಾಡಬಹುದೆಂದು ಕಾಯುತ್ತ ಕುಳಿತಾಗಿ ಜಲಾಂತಗರ್ಾಮಿ ನೌಕೆಯ ಮೂಲಕ ವಿಶಾಖಪಟ್ಟಣದಲ್ಲಿ ಐಎನ್ಎಸ್ ವಿಕ್ರಾಂತನ್ನೇ ಉಡಾಯಿಸುವ ಅವರ ಪ್ರಯತ್ನದ ಕುರಿತಂತೆ ಮಾಹಿತಿ ಕೊಡುವುದೇ ಸೆಹಮತ್. ಈ ಹಂತದಲ್ಲಿ ಆಕೆ ಎದುರಿಸುವ ಸವಾಲುಗಳು, ತನ್ನ ಗಂಡನೊಂದಿಗೆ ಬೆಳೆಯುವ ಆಕೆಯ ಪ್ರೀತಿ, ಜೊತೆಗಿದ್ದವರನ್ನು ಕೊಲ್ಲಬೇಕಾಗಿ ಬರುವ ಅವಳ ಪರಿಸ್ಥಿತಿ ಇವೆಲ್ಲವೂ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಒಬ್ಬ ಗೂಢಚಾರಿಯ ಬದುಕಿನ ಸವಾಲುಗಳು, ಆತನಿಗಿರಬೇಕಾದ ನಿಭರ್ಾವುಕತೆ, ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ತಾನೇ ಸಾಯುವ ಸ್ಥಿತಿ ಬಂದಾಗಲೂ ಅದನ್ನು ಸ್ವೀಕಾರ ಮಾಡಬೇಕಾದ ಮನೋಭಾವ ಇವೆಲ್ಲವೂ ಮನೋಜ್ಞವಾಗಿ ಚಿತ್ರಿತಗೊಂಡಿದೆ. ಈ ಚಿತ್ರ ನೈಜ ಘಟನೆಯನ್ನು ಆಧರಿಸಿದ್ದೆಂದು ಉಲ್ಲೇಖಗೊಂಡಿದೆ. ಈ ಕುರಿತಂತೆ ಇಂಗ್ಲೀಷಿನಲ್ಲಿ ವಿಸ್ತಾರವಾದ ಕಾದಂಬರಿಯೂ ಹೊರಬಂದಿದೆ. ಅಕಸ್ಮಾತ್ ಇಂತಹದ್ದೊಂದು ಘಟನೆ ನಡೆದಿದ್ದು ನಿಜವೇ ಆಗಿದ್ದರೆ ಈ ದೇಶವನ್ನು ಇಂದಿನ ಸ್ಥಿತಿ-ಗತಿಯಲ್ಲಿ ಉಳಿಸಲಿಕ್ಕೆಂದು ಎಷ್ಟೊಂದು ಜನ ಬಲಿದಾನವಾಗಿದ್ದಾರಲ್ಲಾ ಎಂಬುದೇ ತಳಮಳ ಹುಟ್ಟಿಸಿಬಿಡುತ್ತದೆ. ನಾವಿನ್ನೂ ರೆಸಾಟರ್್ಗಳಲ್ಲಿ ಶಾಸಕರನ್ನು ಕೂಡಿ ಹಾಕಿಕೊಂಡು ಕುಚರ್ಿ ಏರುವುದಕ್ಕಾಗಿ ಏನನ್ನು ಬೇಕಾದರೂ ಬಲಿ ಕೊಡಲು ಸಿದ್ಧರಾಗುತ್ತಿದ್ದೇವೆ. ದೇಶ-ಧರ್ಮಗಳ ಕಾಳಜಿಯಿಲ್ಲದ ಇಂತಹ ಜನರಿಂದಲೇ ಈ ಸ್ಥಿತಿಗೆ ತಲುಪಿರೋದು ನಾವು. ಅದು ಯಾವಾಗಲೂ ಹಾಗೆಯೇ. ಗೂಢಚಾರರನ್ನು ತಾವೇ ಕಳಿಸಿದ್ದೆಂದು ಯಾವ ಸಕರ್ಾರವೂ ಒಪ್ಪಿಕೊಳ್ಳಲಾರದು. ಹಾಗೆ ಒಪ್ಪಿಕೊಂಡು ಬಿಟ್ಟರೆ ಅದು ಮತ್ತೊಂದು ರಾಷ್ಟ್ರದ ಸಾರ್ವಭೌಮತೆಯ ವಿರುದ್ಧ ಕೆಲಸ ಮಾಡಿದಂತೆಯೇ. ಅದು ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮುರಿದಂತಾಗುತ್ತದೆ. ಹಾಗಂತ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ವಿರುದ್ಧ ಗೂಢಚಯರ್ೆ ನಡೆಸುವುದೇ ಇಲ್ಲವೆಂದುಕೊಳ್ಳಬೇಡಿ. ಅಮೇರಿಕಾದ ಸಿಐಎ ಜಗತ್ತಿನ ಮೂಲೆ-ಮೂಲೆಯಲ್ಲಿ ಹದ್ದುಗಣ್ಣಿಟ್ಟಿದೆ. ಚೀನಾ ತನ್ನ ಹಾಡರ್್ವೇರ್ ನೆಟ್ವಕರ್್ನ ಮೂಲಕ ಯಾವ ರಾಷ್ಟ್ರದ ಯಾವ ದತ್ತಾಂಶವನ್ನು ಬೇಕಿದ್ದರೂ ತನ್ನ ರಾಷ್ಟ್ರದಲ್ಲೇ ಕುಳಿತು ಓದುವ ವ್ಯವಸ್ಥೆ ರೂಪಿಸಿಕೊಂಡಿದೆ. ಭಾರತದ ಬಳಿ ರಾ ಇದ್ದಂತೆ ಪಾಕಿಸ್ತಾನದ ಬಳಿ ಐಎಸ್ಐ ಇದೆ. ಪ್ರತಿಯೊಂದು ರಾಷ್ಟ್ರವೂ ತನ್ನ ರಾಷ್ಟ್ರದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲೆಂದು ಈ ಪ್ರಯತ್ನವನ್ನು ಮಾಡಿಯೇ ಮಾಡುತ್ತದೆ. ಆದರೆ ಗೂಢಚಾರನೊಬ್ಬ ಸಿಕ್ಕಿಬಿದ್ದರೆ ತನಗೂ ಅವನಿಗೂ ಸಂಬಂಧವೇ ಇಲ್ಲವೆಂದುಬಿಡುತ್ತದೆ. ಆತ ಅನಾಮಧೇಯನಾಗಿಯೇ ಉಳಿದುಬಿಡುತ್ತಾನೆ. ರಾಷ್ಟ್ರಕ್ಕಾಗಿ ಗಡಿಯಲ್ಲಿ ನಿಂತು ಕಾದಾಡುವ ಸೈನಿಕನಾದರೂ ತೀರಿಕೊಂಡ ನಂತರ ಎಲ್ಲ ಗೌರವಗಳ ಜೊತೆಗೆ ಕೈತುಂಬ ಹಣ ಪಡೆಯುತ್ತಾನೆ. ಆದರೆ ಈ ಬಗೆಯ ಗೂಢಚಾರರು ಮಾತ್ರ ಯಾವುದೂ ಇಲ್ಲದೇ ಸಾಮಾನ್ಯವಾಗಿಯೇ ಉಳಿದುಬಿಡುತ್ತಾರೆ.
2021/12/01 01:15:14
http://www.yuvalive.net/%E0%B2%B0%E0%B2%BE%E0%B2%9C%E0%B2%BF-%E0%B2%A8%E0%B3%8B%E0%B2%A1%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%A8%E0%B3%86%E0%B2%A8%E0%B2%AA%E0%B2%BE%E0%B2%A6-%E0%B2%97%E0%B3%82%E0%B2%A2/
mC4
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇಲಾಖೆಗಳ ನಡುವೆ ಸಮನ್ವಯ ಅಗತ್ಯ: ಡಿಸಿ ಶಿವಕುಮಾರ್ – Public TV ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇಲಾಖೆಗಳ ನಡುವೆ ಸಮನ್ವಯ ಅಗತ್ಯ: ಡಿಸಿ ಶಿವಕುಮಾರ್ ಶಿವಮೊಗ್ಗ: ಜಿಲ್ಲೆಯಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಮೇಲ್ವಿಚಾರಣೆ ಮತ್ತು ಜಾಗರೂಕತೆ ಸಮಿತಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಬಾಲಕಾರ್ಮಿಕರ ಪತ್ತೆಗೆ ನಿರಂತರ ಕಾರ್ಯಾಚರಣೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಜತೆಗೆ ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ಥಳೀಯಾಡಳಿತದ ಮುಖ್ಯಾಧಿಕಾರಿಗಳ ಸಹಕಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಅರೆಕಾಲಿಕವಾಗಿ ಹೊರಗೆ ಕೆಲಸ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ವಸತಿ ನಿಲಯಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಬೇಕು. ಬಾಲಕಾರ್ಮಿಕರನ್ನು ನಿಯೋಜಿಸದಂತೆ ವಾಣಿಜ್ಯ ಸಂಸ್ಥೆಗಳು ಹಾಗೂ ಉದ್ದಿಮೆಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಈ ಕುರಿತು ಮುಚ್ಚಳಿಕೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಿಂದ ಇದುವರೆಗೆ ಒಟ್ಟು 427 ತಪಾಸಣೆಗಳನ್ನು ಕೈಗೊಳ್ಳಲಾಗಿದ್ದು, ಮೂರು ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಎಲ್ಲಾ ಮೂರು ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. 2016-17ನೇ ಸಾಲಿನಲ್ಲಿ 11, 17-18ನೇ ಸಾಲಿನಲ್ಲಿ 5 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಅಪಾಯಕಾರಿಯಲ್ಲದ ಕೆಲಸದಲ್ಲಿ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ ಅಪಾಯಕಾರಿ ವಲಯದಲ್ಲಿ 18 ವರ್ಷದ ಒಳಗಿನ ಮಕ್ಕಳನ್ನು ನೇಮಕ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ರಘುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣ್ಣ ಪಾಂಚಾಳ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
2021/03/03 04:35:27
https://publictv.in/eradication-of-child-labor-requires-coordination-between-departments-shivamogga-dc/
mC4
ದೆವ್ವದ ಕಥೆ:ಸತ್ಯ ಘಟನೆ | ಸಂಪದ - Sampada ದೆವ್ವದ ಕಥೆ:ಸತ್ಯ ಘಟನೆ Submitted by pkumar on June 6, 2012 - 9:13am ಇದು 2000ನೇ ಇಸವಿಯಲ್ಲಿನ ನಡೆದ ಘಟನೆ. ಆಗೆಲ್ಲ ಹಳ್ಳಿಗಳಲ್ಲಿ ಬಾತ್ ರೂಮ್ ಗಳು ಯಾರು ಹೆಚ್ಚಾಗಿ ಕಟ್ಟಿಸುತ್ತಿರಲಿಲ್ಲ.ಆಗ ತಾನೇ ಹಾಸನದ ಸಮೀಪದ ಹಳ್ಳಿಯೊಂದರಿಂದ ತಿಪಟೂರು ಸಮೀಪದ ಹಳ್ಳಿಗೆ ಹೆಣ್ಣುಮಗಳೊಬಳನ್ನು ಮದುವೆ ಮಾಡಿಕೊಡಲಾಗಿತ್ತು. ಪಾಪ ಹೊಸದಾಗಿ ಮದುವೆಯಾದ ಹುಡುಗಿ ಆಕೆ.ಮದುವೆಯಾಗಿ ಒಂದು ವಾರ ಆಗಿರಬಹುದು.ಒಂದು ದಿನ ರಾತ್ರಿ 11.30ರ ಸಮಯದಲ್ಲಿ ಶೌಚಕ್ಕೆ ತೆರಳಬೇಕೆಂದು ಗಂಡನನ್ನು ಎಬ್ಬಿಸಿ ಕರೆದುಕೊಂಡು ಹೋಗಿದ್ದಾರೆ.ಅವರ ಮನೆಯಲ್ಲಿ ಒಂದು ಕಪ್ಪು ಬಿಳಿ ಮಿಶ್ರ ಬಣ್ಣದ ನಾಯಿ ಸಾಕಿದ್ದಾರೆ.ಅವರು ಆಚೆ ಹೋಗುವಾಗ ಅದನ್ನು ಗಮನಿಸದೆ ಹೋಗಿದ್ದಾರೆ.ಗಂಡನನ್ನು ಅನತಿ ದೂರದಲ್ಲಿ ನಿಲ್ಲಿಸಿ ಹೋಗಿ ಶೌಚ ಮುಗಿಸಿಕೊಂಡು ಬರುವಾಗ ಅವರ ಮನೆಯ ನಾಯಿ ಬಂದು ನಿಂತಿದೆ.ಅಯ್ಯೊ ಇದನ್ನು ಕಟ್ಟಿಹಾಕಿ ಮಲಗಿದ್ದೆವಲ್ಲ ಹೇಗೆ ಬಿಚ್ಚಿಕೊಂಡು ಹೋಯ್ತು ಎಂದು ನಾಯಿಗೆ ಕಟ್ಟಿದ್ದ ಚೈನ್ ಹಿಡಿದು ಎಳೆದುಕೊಂಡು ಬರುತಿದ್ದಾರೆ.ಅದು ಇವರನ್ನು ಸುಮ್ಮನೆ ಹಿಂಬಾಲಿಸಿಕೊಂಡು ಬಂತು.ಅಷ್ಟರಲ್ಲಿ ಗಂಡ ಏನೇ ಇದು ನಾಯಿ ನಿನಗೆ ಎಲ್ಲಿ ಸಿಕ್ತು ಅಂದಾಗ ಅಲ್ಲಿ ಬಂದು ನಿಂತಿತ್ತು ರೀ ಎಳೆಕೊಂಡು ಬಂದೆ ಅಂತಂದಿದ್ದಾರೆ. ಇವರ ಮನೆ ಹತ್ತಿರ ಬಂದಾಗ ಇವರಿಗೆ ಅಲ್ಲಿ ಇನ್ನೊಂದು ನಾಯಿ ಬೊಗಳುವ ಸದ್ದು ಕೇಳಿದೆ.ಯಾವುದೋ ಬೀದಿ ನಾಯಿ ಇರಬೇಕು ಅಂತ ಮನೆ ಬಾಗಿಲ ಬಳಿ ಹೋದಾಗ ಗೊತ್ತಾಯ್ತು ಅವರ ಮನೆ ನಾಯಿ ಕಟ್ಟಿದಲ್ಲೇ ಇದೆ ಎಂದು.ಹಾಗಾದರೆ ಇದ್ಯಾವ ನಾಯಿ ಎಂದು ಇಬ್ಬರು ತಿರುಗಿ ನೋಡಿದರೆ ದುರು ದುರು ಕಣ್ಣು ಬಿಡುತ್ತ ಕೆಂಪಗೆ ಸಿಡಿಯುವಂತಿದ್ದ ಕಣ್ಣು ಗುಡ್ಡೆಗಳು .ಕುರೂಪಿಯಂತೆ ಕಂಡು ಬಂತು ನಾಯಿ.ಬಿಡೇ ಆ ಚೈನು ಅಂತ ಕೈ ಹಿಡಿದು ಎಳೆದ ಗಂಡ.ಇದ್ದಕ್ಕಿದಂತೆ ಆ ಸಮಯದಲ್ಲಿ ಎಲ್ಲಿ೦ದಲೋ ಒ೦ದು ಕರು ಪ್ರತ್ಯಕ್ಷ್ಯವಾಗಿ ಅ೦ಬಾ ಎ೦ದು ಬ೦ದಿದೆ..ಇದ್ದಕ್ಕಿದ್ದ೦ತೆ ಭಯಗೊ೦ಡ ಗ೦ಡ ಹೆ೦ಡತಿ ತಮ್ಮ ಕಣ್ಣೆದುರಲ್ಲಿ ಏನು ನೆಡೆಯುತ್ತಿದೆ ಎ೦ದು ಊಯಿಸಲಾಗದಶ್ಟು ಗಾಬರಿ ಬಿದ್ದಿದ್ದಾರೆ....ಆಗ ಅವರು ಮತ್ತೆ ತಿರುಗಿ ನೋಡುವಷ್ಟರಲ್ಲಿ ಆ ನಾಯಿಯು ಮನೆ ಪಕ್ಕದಲ್ಲಿದ್ದ ತ೦ತಿ ಬೇಲಿಯ ಒಳಗೆ ಕಟ್ ಕಟ್ ಎ೦ದು ಸದ್ದು ಮಾಡುತ್ತ ನುಸುಳಿ ಹೋಯಿತ೦ತೆ..ದೇವರ ರೂಪದ೦ತೆ ಬ೦ದ ಆ ಕರು ಬೇರಾರು ಅಲ್ಲ ಆ ಊರಿನ ದೇವರು ಬಸವಣ್ಣ ಸ್ವಾಮಿ ಅ೦ತೆ...ಬೆಳಗ್ಗೆ ನವ ವಧುವಿಗೆ ಚಳಿ ಜ್ವರ ಬ೦ದುಬಿಟ್ಟಿತ್ತ೦ತೆ..ಆ ನ೦ತರ ಪೂಜೆ ಪುನಸ್ಕಾರ ಮಾಡಿಸಿ ಸರಿಪಡಿಸಿದರ೦ತೆ... ಒಟ್ಟಿನಲ್ಲಿ ಅವರು ಇದು ಹಿ೦ಗಿ೦ಗೆ ಆಯಿತು ಎ೦ದು ವರ್ಣಿಸಿ ಹೇಳುವಾಗ ಎಲ್ಲರು ಕಿವಿ ನಿಮಿರಿಸಿಕೊ೦ಡು ಕೇಳುತ್ತಾರೆ.. ಆದರೆ ಇದನೆಲ್ಲ ನ೦ಬುವ್ವರು ಸತ್ತ್ಯ ಎ೦ದುಕೊೞುತ್ತಾರೆ... ನ೦ಬದವರು ಶುದ್ಧ ಸುೞು ಎ೦ದು ಭಾವಿಸುತ್ತಾರೆ.. ಎರಡರ ನಡುವೆ ಸಿಲುಕಿ ಹೆಣಗಾಡುವವರು ಹೇಳುತ್ತಾರೆ.... ಹೀಗೂ ಉ೦ಟೆ...! 5847 ಹಿಟ್ಸ್ ಉ: ದೆವ್ವದ ಕಥೆ:ಸತ್ಯ ಘಟನೆ Submitted by kavinagaraj on June 6, 2012 - 2:52pm ಹೀಗೂ ಉಂಟೆ? :)) Submitted by venkatb83 on June 6, 2012 - 5:54pm ಕುಮಾರ್ ಅವ್ರೆ- ಈ ತರಹದ ಹಲವು ಘಟನೆಗಳು ಈಗಲೂ ಹಳ್ಳಿಯಲ್ಲಿ ನಗರದಲ್ಲಿ ಇವೆ-ಆಗುತ್ತವೆ... ನಂಬುವುದು ಬಿಡುವುದು ಅವರವರ ಭಾವಕ್ಕೆ...!! ಇದು ಒಂದು ಬರಹವಾಗಿ ಸಖತ್ ಮಜಾ ಕೊಟ್ಟಿತು-ಓದಲು.. ಶುಭವಾಗಲಿ.. ನನ್ನಿ \|/
2019/09/18 14:24:33
https://sampada.net/%E0%B2%A6%E0%B3%86%E0%B2%B5%E0%B3%8D%E0%B2%B5%E0%B2%A6-%E0%B2%95%E0%B2%A5%E0%B3%86%E0%B2%B8%E0%B2%A4%E0%B3%8D%E0%B2%AF-%E0%B2%98%E0%B2%9F%E0%B2%A8%E0%B3%86
mC4
ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದ ಐ.ಟಿ ದಾಳಿ | Prajavani ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದ ಐ.ಟಿ ದಾಳಿ ಬೆಂಗಳೂರು, ಮಂಡ್ಯ, ಹಾಸನದ ವಿವಿಧೆಡೆ ಶೋಧ ಬೆಂಗಳೂರು/ಮಂಡ್ಯ/ಹಾಸನ: ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಎರಡು ದಿನ ಉಳಿದಿರುವ ಹೊತ್ತಿನಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಹಲವೆಡೆ ದಾಳಿ ಮುಂದುವರಿಸಿರುವುದು ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ. ಬೆಂಗಳೂರು, ಮಂಡ್ಯ ಮತ್ತು ಹಾಸನ ಸೇರಿದಂತೆ ವಿವಿಧೆಡೆ ಏಕಕಾಲಕ್ಕೆ ಐ.ಟಿ ಅಧಿಕಾರಿಗಳ ತಂಡ ಕಾರ್ಯಾಚರಣೆಗಿಳಿದಿದೆ. ಜೆಡಿಎಸ್‌ ನಾಯಕರ ಆಪ್ತರ ಮನೆ ಮತ್ತು ಕಚೇರಿಗಳನ್ನು ಶೋಧಿಸಲಾಗಿದೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು ಮತ್ತು ಡಿ.ಸಿ. ತಮ್ಮಣ್ಣ ಅವರ ಆಪ್ತರ ಮನೆಗಳಲ್ಲಿ ‌ಪರಿಶೀಲನೆ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಒಟ್ಟು 5 ಕಡೆ, ಮಂಡ್ಯದಲ್ಲಿ 1 ಕಡೆ ಹಾಗೂ ಬೆಂಗಳೂರಿನ 1 ಕಡೆ ದಾಳಿ ನಡೆದಿದೆ. ಎಷ್ಟು ಹಣ, ಆಭರಣ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಕೆಲವು ಉದ್ಯಮಿಗಳು ಗಳಿಸಿರುವ ಆದಾಯ ಘೋಷಣೆ ಮಾಡಿಲ್ಲ ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ ಎಂದು ಐ.ಟಿ ಮೂಲಗಳು ತಿಳಿಸಿವೆ. ಸಚಿವ ಎಚ್.ಡಿ.ರೇವಣ್ಣ ಅವರ ದೊಡ್ಡಪ್ಪನ ಮಗ ಹೊಳೆನರಸೀಪುರ ತಾಲ್ಲೂಕು ಹರದನಹಳ್ಳಿಯ ಪಾಪಣ್ಣಿ, ಹಾಸನ ವಿದ್ಯಾನಗರ ಗುತ್ತಿಗೆದಾರ ಅನಂತ ಕುಮಾರ್‌, ಕಾರ್ಲೆ ಇಂದ್ರೇಶ್, ರವೀಂದ್ರ ನಗರದ ಪಟೇಲ್ ಶಿವರಾಂ (ಮಾಜಿ ಎಂಎಲ್‌ಸಿ) ಹೌಸಿಂಗ್ ಬೋರ್ಡ್‌ನಲ್ಲಿರುವ ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಅವರ ಮನೆಗಳನ್ನೂ ಶೋಧಿಸಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಅವರ ಪತಿ ಸಾದೊಳಲು ಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮೇಗೌಡರ ಮನೆ, ಕಚೇರಿಗಳಲ್ಲೂ ತಡಕಾಡಿದರು. ರೇವಣ್ಣ ಬೆಂಗಾವಲು ವಾಹನ ತಪಾಸಣೆ ಹೊಳೆನರಸೀಪುರ: ಇಲ್ಲಿಯ ಚೆನ್ನಾಂಬಿಕಾ ಚಿತ್ರಮಂದಿರ ಸಮೀಪ ಸಚಿವ ಎಚ್.ಡಿ. ರೇವಣ್ಣ ಅವರ ಬೆಂಗಾವಲು ವಾಹನದ ತಪಾಸಣೆ ಮಾಡಿದ ಐ.ಟಿ ಅಧಿಕಾರಿಗಳ ತಂಡ ₹ 1.20 ಲಕ್ಷ ದಾಖಲೆ ಇಲ್ಲದ ಹಣ ವಶಪಡಿಸಿಕೊಂಡಿದೆ. ಸೋಮವಾರ ರಾತ್ರಿ 12.45ರ ಸುಮಾರಿಗೆ ಹಣ ಪತ್ತೆ ಆಗಿದೆ. 'ಬೆಂಗಾವಲು ವಾಹನದಲ್ಲಿ ಚಾಲಕ ಚಂದ್ರಯ್ಯ, ಪೊಲೀಸ್‌ ಸಿಬ್ಬಂದಿ ಮತ್ತು ರವಿ ಎಂಬುವರು ಇದ್ದರು' ಎನ್ನಲಾಗಿದೆ.
2019/04/19 02:42:06
https://www.prajavani.net/stories/stateregional/it-raids-lok-sabha-elections-629524.html
mC4
ಮುದ - ಮನರಂಜನೆ ನೀಡಿದ ನವೋದಯ ಸಂಘ ®ಬೆಂಗಳೂರು ವಾರ್ಷಿಕ ಕ್ರೀಡೋತ್ಸವ ಬೆಂಗಳೂರು: ದೇವಾಡಿಗ ಸಮಾಜ ಭಾಂದವರಲ್ಲಿ ಕ್ರೀಡಾ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇವಾಡಿಗ ನವೋದಯ ಸಂಘ ®ಬೆಂಗಳೂರು ಇದರ ವಾರ್ಷಿಕ ಕ್ರೀಡೋತ್ಸವವನ್ನು ದಿನಾಂಕ 03/02/2019 ರಂದು ಬೆಂಗಳೂರಿನ ವಿಶ್ವವಿದ್ಯಾನಿಲಯ ದ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಈ ಕ್ರೀಡೋತ್ಸವ ದಲ್ಲಿ 250 ಕ್ಕೂ ಹೆಚ್ಚು ಸ್ಪರ್ಧಿಗಳು ಹಾಗೂ ಸಮಾಜ ಭಾಂಧವರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮಾಜ ಭಾಂಧವರ ಸಮಾಕ್ಷಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ್ ರವರು ಮತ್ತು ಕೆಂಪೇಗೌಡ ಪ್ರಶಸ್ತಿ ವಿಜೇತೆ,ಕರ್ನಾಟಕದ ಹೆಮ್ಮೆಯ ಓಟಗಾರ್ತಿ ಸ್ನೇಹಾ ಪಿ.ಜೆ ಯವರು ಈ ಕ್ರೀಡಾ ಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗಣ್ಯ ಅತಿಥಿಗಳು ಕ್ರೀಡಾ ಜ್ಯೋತಿಯನ್ನು ಸ್ಪರ್ಧಿಗಳ ಕೈಗೆ ಹಸ್ತಾಂತರಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ವಯಸ್ಸಿನ ಮಿತಿಗೆ ಅನುಗುಣವಾಗಿ ಹತ್ತು ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಾಲಿಬಾಲ್, ರನ್ನಿಂಗ್ ರೇಸ್, ಬ್ಯಾಡ್ಮಿಂಟನ್, ಶಾಟ್ ಪುಟ್, ಡಿಸ್ಕಸ್ ,ಥ್ರೊ ಬಾಲ್... ಇತ್ಯಾದಿ ಸ್ಪರ್ಧೆಯಲ್ಲಿ ಸದಸ್ಯರು ಉತ್ತಮವಾಗಿ ಭಾಗವಹಿಸಿ ತಮ್ಮ ಕ್ರೀಡಾಸಕ್ತಿಯನ್ನು ತೋರಿಸಿದರು. ಕ್ರೀಡೋತ್ಸವ ದಲ್ಲಿ ಸಣ್ಣ ಮಕ್ಕಳ ಆಟಗಳು ಮನಸಿಗೆ ಮುದ ನೀಡಿದರೆ, ಹಿರಿಯರ ಸ್ಪರ್ಧೆಗಳು ಮನರಂಜಿಸಿತು ಹಾಗೂ ಯುವ ಸ್ಪರ್ಧಿಗಳ ಆಟಗಳು ಯುವಕರಲ್ಲಿ ಹುರುಪು ಹೆಚ್ಚಿಸಿತು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯಾವುದೇ ಕೊರತೆ ಇಲ್ಲದೆ ಸಂಘದ ಉಪಾಧ್ಯಕ್ಷರಾದ ಶ್ರೀ ಮಂಜುನಾಥ್ ಪಾಂಡೆಶ್ವರ್ ರವರು ಮಾಡಿದ್ದರು.ಕ್ರೀಡೋತ್ಸವದ ಅಂತಿಮ ಘಟ್ಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಕ್ರೀಡೋತ್ಸವವನ್ನು ಮಾಡಲು ಸ್ಥಳಾವಕಾಶ ನೀಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ್ ರವರಿಗೂ ಮತ್ತು ಕ್ರೀಡಾ ಕೂಟಕ್ಕೆ ಸಹಕರಿಸಿದ ಫ್ಯೂಚರ್ ಟ್ಯಾಬ್ ಮಾಲಿಕರಾದ ಶ್ರೀ ರಿತೇಶ್ ದೇವಾಡಿಗ, ಸಾಗರ್ ಇಂಡಸ್ಟ್ರೀಸ್ ಮಾಲಿಕರಾದ ಸತೀಶ್ ದೇವಾಡಿಗ , ಹೋಟೆಲ್ ಗ್ರೀನ್ ಗಾರ್ಡೇನಿಯದ ಮಾಲಿಕರಾದ ಶ್ರೀ ಮಂಜುನಾಥ್ ಪಾಂಡೆಶ್ವರ್ ಹಾಗೂ ಕ್ರೀಡೋತ್ಸವದಲ್ಲಿ ಪಾಲ್ಗೊಂಡ ಸಮಾಜ ಭಾಂದವರಿಗೂ ಧನ್ಯವಾದಗಳು.
2019/10/17 05:58:49
http://devadiga.com/news/details/927/%E0%B2%AE%E0%B3%81%E0%B2%A6---%E0%B2%AE%E0%B2%A8%E0%B2%B0%E0%B2%82%E0%B2%9C%E0%B2%A8%E0%B3%86-%E0%B2%A8%E0%B3%80%E0%B2%A1%E0%B2%BF%E0%B2%A6--%E0%B2%A8%E0%B2%B5%E0%B3%8B%E0%B2%A6%E0%B2%AF-%E0%B2%B8%E0%B2%82%E0%B2%98-%C2%AE%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81--%E0%B2%B5%E0%B2%BE%E0%B2%B0%E0%B3%8D%E0%B2%B7%E0%B2%BF%E0%B2%95-%E0%B2%95%E0%B3%8D%E0%B2%B0%E0%B3%80%E0%B2%A1%E0%B3%8B%E0%B2%A4%E0%B3%8D%E0%B2%B8%E0%B2%B5
mC4
ಅಶಕ್ತ ಜನಪದ ಕಲಾವಿದರಿಗೆ ಮಾಸಾಶನ ಅಗತ್ಯ:ಕೋಟ | Vartha Bharati- ವಾರ್ತಾ ಭಾರತಿ 'ಕೋಲು ಹೊಯ್ಯುವ ಪದಗಳು' ದಾಖಲಾತಿ ಕಮ್ಮಟ ವಾರ್ತಾ ಭಾರತಿ Aug 27, 2016, 7:14 PM IST ಮಂದಾರ್ತಿ, ಆ.27: ನಮ್ಮ ಗ್ರಾಮೀಣ ಭಾಗಗಳಲ್ಲಿ ಈಗಲೂ ಸಾಕಷ್ಟು ಮಂದಿ ಜನಪದ ಕಲಾವಿದರು ಇದ್ದಾರೆ. ಅಂಥವರನ್ನು ಗುರುತಿಸುವ ಕೆಲಸ ವಾಗಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಮುಗ್ಧ ಅಶಕ್ತ ಕಲಾವಿದರಿಗೆ ಮಾಸಾಶನ ಸಿಗುವಂತಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಂಗಳೂರು ಆಕಾಶವಾಣಿ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದೊಂದಿಗೆ ಮಂದಾರ್ತಿ ದುರ್ಗಾಪರಮೇಶ್ವರಿ ದೇವಳದ ಸಭಾಭವನದಲ್ಲಿ ಆಯೋಜಿಸಿದ ಕುಂದಗನ್ನಡದ ಹಾಡುಗಬ್ಬ 'ಕೋಲು ಹೊಯ್ಯುವ ಪದಗಳು' ಕುರಿತ ಎರಡು ದಿನಗಳ ದಾಖಲಾತಿ ಕಮ್ಮಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಭಾವನೆಗಳನ್ನು, ಸೌಹಾರ್ದ ಮತ್ತು ಸಾಮರಸ್ಯದ ಬದುಕನ್ನು ಆಡು ಭಾಷೆಯ ಮೂಲಕ ತಿಳಿಸುವಂತೆ ಮಾಡುವ ಇಂತಹ ಮುಗ್ಧ ಕಲಾವಿದರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸಂದುಹೋದ ಇತಿಹಾಸದ ಕಟ್ಟಕಡೆಯ ಪಳೆಯುಳಿಕೆಯಂತಿರುವ ಇಂಥ ಜಾನಪದ ಸಾಹಿತ್ಯಗಳ ದಾಖಲಾತಿ ಮಾಡಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ತುರ್ತಾಗಿ ಆಗಬೇಕು. ಇಂಥ ಕಾರ್ಯಕ್ಕೆ ಮುಂದಾದ ಆಕಾಶವಾಣಿಯ ಕಾರ್ಯಕ್ರಮ ಅಭಿನಂದನಾರ್ಹ ಎಂದು ಮಾಜಿ ಸಚಿವರು ಹೇಳಿದರು. ಅರಿವು ಅಗತ್ಯ: ನಮ್ಮ ಇತಿಹಾಸ, ಚರಿತ್ರೆಯ ಬಗ್ಗೆ ತಿಳಿಯದೇ ಇದ್ದರೆ ಚಾರಿತ್ರಹೀನ ಸಮಾಜ ಸಷಿಯಾಗುತ್ತದೆ. ಆದ್ದರಿಂದ ಚರಿತ್ರೆಯನ್ನು ತಿಳಿಸುವ ಜಾನಪದ ಸಾಹಿತ್ಯಗಳನ್ನು ದಾಖಲಾತಿ ಮಾಡಿ ಉಳಿಸುವಂತಾಗಬೇಕು ಎಂದು ಮಂಗಳೂರು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಉದಯ ಬಾರ್ಕೂರು ಹೇಳಿದರು. ಕಾರ್ಯಕ್ರಮದಲ್ಲಿ 'ಚರಿತ್ರೆ ಮತ್ತು ಚಾರಿತ್ರ' ವಿಷಯದ ಕುರಿತು ಉಪನ್ಯಾಸ ನೀಡಿದ ಡಾ.ಬಾರ್ಕೂರು, ಯುವ ಜನಾಂಗ ಜಾನಪದ ಇತಿಹಾಸ ತಿಳಿಸುವ ಸಂಸ್ಕಾರಯುತ ಬದುಕನ್ನು ಕಟ್ಟುವ ಇಂತಹ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಲು ಮುಂದೆ ಬರಬೇಕು ಎಂದರು. ಮಂಗಳೂರು ಆಕಾಶವಾಣಿಯಕಾರ್ಯಕ್ರಮ ಮುಖ್ಯಸ್ಥ ಹಾಗೂ ಸಹಾಯಕ ನಿಲಯ ನಿರ್ದೇಶಕ ಸಡಾ.ವಸಂತಕುಮಾರ ಪೆರ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಸಮಿತಿ ಸದಸ್ಯ ಗೋಪಾಲ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಮಂಗಳೂರು ಆಕಾಶವಾಣಿಯ ಡಾ. ಸದಾನಂದ ಪೆರ್ಲ ಸ್ವಾಗತಿಸಿ, ನಿರ್ವಾಹಕ ದೇವು ಹನೆಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
2021/01/25 19:18:40
https://www.varthabharati.in/article/karavali/37411
mC4
ಅಘೋಷಿತ ಲಾಕ್‌ಡೌನ್‌ ಯಾಕೆ ಅಂದರೆ, ಸಚಿವ ಸುಧಾಕರ್ ಉತ್ತರ ಕೊಟ್ಟಿದ್ದು ಹೀಗೆ! | Health Minister Dr. Sudhakar Said, No Confusion In Covid-19 Guidelines - Kannada Oneindia sudhakar coronavirus Guidelines corona vaccine karnataka ಸುಧಾಕರ್ ವೈರಸ್ ಮಾರ್ಗಸೂಚಿಗಳು ಕೊರೊನಾ ಲಸಿಕೆ ಕರ್ನಾಟಕ | Updated: Friday, April 23, 2021, 13:17 [IST] ಬೆಂಗಳೂರು, ಏಪ್ರಿಲ್ 23: ಅಗತ್ಯ ವಸ್ತು, ಸೇವೆ ಹೊರತು ಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದ ಸರಕಾರದ ನಿರ್ಧಾರ ವ್ಯಾಪಕ ಟೀಕೆಗೆಗೊಳಗಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಕೇಳಿದಾಗ, ಪ್ರಾಣಾಯಾಮ ಮಾಡಿ ಎನ್ನುವ ಉತ್ತರವನ್ನು ನೀಡಿದ್ದಾರೆ. "ಕೆಲವರು ಮಾರ್ಗಸೂಚಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಯಾರೂ ಹೆದರಿಕೊಳ್ಳಬೇಡಿ, ಆತಂಕಕ್ಕೆ ಒಳಗಾಗದಿರಿ. ಅದರಿಂದ ನಮಗೆ ಕಾಯಿಲೆಗಳು ಹೆಚ್ಚಾಗುತ್ತದೆ. ಆತ್ಮವಿಶ್ವಾಸದಿಂದ ಇದ್ದು, ದಿನನಿತ್ಯ ಬೆಳಗ್ಗೆ ಪ್ರಾಣಾಯಾಮವನ್ನು ಮಾಡಿ"ಎನ್ನುವ ಸಲಹೆಯನ್ನು ಸಚಿವರು ನೀಡಿದ್ದಾರೆ. "ಯಾವ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎನ್ನುವುದನ್ನು ಮೊದಲ ದಿನವೇ ನೀಡಲಾಗಿತ್ತು. ಆ ಮಾರ್ಗಸೂಚಿಯಲ್ಲಿ ಎಲ್ಲವೂ ಅಡಕವಾಗಿದೆ. ಕೆಲವರು ಈ ಬಗ್ಗೆ ಸಂದೇಹ ವ್ಯಕ್ತ ಪಡಿಸಿದಾಗ, ಅದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದೇವೆ"ಎಂದು ಸುಧಾಕರ್ ಹೇಳಿದ್ದಾರೆ. "ನಮ್ಮ ಶ್ವಾಸಕೋಶಗಳು ಉತ್ತಮವಾಗಿ ಕೆಲಸ ಮಾಡಬೇಕು ಅಂದರೆ, ಪ್ರಾಣಾಯಾಮ ಬಹಳ ಮುಖ್ಯ. ಉತ್ತಮ ಆಕ್ಸಿಜನ್ ಅವನ್ನು ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿ. ರೋಗ ನಿರೋಧಕ ಶಕ್ತಿ ನಮ್ಮಲ್ಲಿ ಹೆಚ್ಚಾದಾಗ ಯಾವ ವೈರಾಣು ಕೂಡಾ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ"ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ. "ವೀಕೆಂಡ್ ಕರ್ಫ್ಯೂ ಇರುವುದರಿಂದ ಎಲ್ಲರೂ ಇದನ್ನು ಪಾಲಿಸಬೇಕಾಗುತ್ತದೆ. ನಮಗೆ ಜನರ ಸಹಕಾರ ಅಗತ್ಯ, ಕೆಲವರು ನಮ್ಮ ನಿಲುವನ್ನು ಟೀಕಿಸುತ್ತಾರೆ. ಕೆಲವು ದೇಶಗಳು ತಿಂಗಾಳುನುಗಟ್ಟಲೆ ಲಾಕ್ ಡೌನ್ ಮಾಡಿವೆ. ಜನರಿಗೆ ತಪ್ಪು ಸಂದೇಶವನ್ನು ಕಳುಹಿಸುದನ್ನು ನಿಲ್ಲಿಸಲಿ"ಎಂದು ಸುಧಾಕರ್, ವಿರೋಧ ಪಕ್ಷದವರನ್ನು ಟೀಕೆ ಮಾಡಿದ್ದಾರೆ. "ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ, ಜನರನ್ನು ಇನ್ನಷ್ಟು ಭಯ ಪಡಿಸುವ ಕೆಲಸ ಯಾರಿಂದಲೂ ಆಗಬಾರದು. ಈ ಎಮರ್ಜೆನ್ಸಿಯ ವೇಳೆ ಎಲ್ಲಾ ಸಹಕಾರ ಕೇಂದ್ರದಿಂದ ಬಂದಿದೆ, ಜೊತೆಜೊತೆಗೆ ಕಾಲಕಾಲಕ್ಕೆ ನಮಗೆ ಸೂಕ್ತ ಸಲಹೆಯನ್ನು ಪ್ರಧಾನಿ ಮೋದಿ ನೀಡುತ್ತಿದ್ದಾರೆ.
2021/05/06 19:50:40
https://kannada.oneindia.com/news/karnataka/health-minister-dr-sudhakar-said-no-confusion-in-corona-guidelines-221074.html?ref_medium=Desktop&ref_source=OI-KN&ref_campaign=Sticky_Bottom
mC4
ಬಲ್ಲವನೇ ಬಲ್ಲ ಬೆಲ್ಲದ ರುಚಿಯ - TheNewsism \n Home ಆರೋಗ್ಯ ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಬೆಲ್ಲದ ಆರೋಗ್ಯಕರ ಗುಣಗಳು: ಬೆಲ್ಲದಲ್ಲಿ ಸಮರ್ಥವಾದ ಕಬ್ಬಿಣಾಂಶ(ಐರನ್) ಇರುತ್ತದೆ. ಬಿಸಿಲು ಬಣ್ಣ ಇರುವ ಬೆಲ್ಲದಲ್ಲಿ ಇನ್ನೂ ಹೆಚ್ಚು ಕಬ್ಬಿಣಾಂಶ ಲಭ್ಯವಾಗುತ್ತದೆ. ಕ್ರಮ ತಪ್ಪದೆ ಇದನ್ನು ತೆಗೆದುಕೊಳ್ಳುತ್ತಿದ್ದರೆ ಐರನ್ ಕೊರತೆ ಎಂಬ ಸಮಸ್ಯೆ ಇರುವುದೇ ಇಲ್ಲ. ಬೆಲ್ಲದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಸಣ್ಣ ಮಕ್ಕಳಿಗೆ ಬೆಲ್ಲವನ್ನು ತಿನ್ನಲು ಕೊಡುವುದು ಲಾಭದಾಯಕವಾಗಿದೆ, ಶಾರೀರಿಕ ಬೆಳವಣಿಗೆ ವೇಗವಾಗಿ ಆಗುತ್ತದೆ. ಮೂಳೆಗಳು ಗಟ್ಟಿಯಾಗಿ ಶರೀರವು ಬಲವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣವೂ ಹೆಚ್ಚುವುದರಿಂದ ನಿಃಶಕ್ತಿಯು ಬರುವುದಿಲ್ಲ. ಮೆಗ್ನೆಷಿಯಂ ಮಾಂಸಖಂಡಗಳ ನೋವನ್ನು, ಉಳುಕನ್ನು, ಹಿಡಿದಂತಾಗುವುದನ್ನು ಕಡಿಮೆಗೊಳಿಸುತ್ತದೆ. ಮಂಡಿ, ಮೊಣಕೈಗಳನ್ನು ಸದೃಢ ಮಾಡುತ್ತದೆ. ಬೆಲ್ಲದಲ್ಲಿ ಇರುವ ಜಿಂಕ್ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ಸದೃಢಪಡಿಸುತ್ತದೆ. ಇದರಲ್ಲಿರುವ ಆ್ಯಂಟಿಬಾಯಟಿಕ್ ಗುಣವು ದೇಹವನ್ನು ರೋಗ ನಿರೋಧಕವಾಗಿ ಗಟ್ಟಿಯಾಗಿ ಮಾಡುತ್ತದೆ. ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತದೆ. ಜಠರದ ಚಲನೆಗೆ ನೆರವಾಗಿ ಮಲಬದ್ಧತೆಯಿಂದ ರಕ್ಷಿಸುತ್ತದೆ. ಬೆಲ್ಲವು ಜೀರ್ಣಕಾರಿ ಎಂಜೈಮ್‌ಗಳನ್ನು ಚುರುಕಾಗಿರಿಸಿ, ಶೀಘ್ರವಾಗಿ ಆಹಾರವನ್ನು ಜೀರ್ಣ ಮಾಡಲು ಸಹಕರಿಸುತ್ತದೆ. ಈ ಕಾರಣದಿಂದಾಗಿ ಹೊಟ್ಟೆ ಉಬ್ಬರ, ಅಸಿಡಿಟಿ, ತೇಗು ಇಂಥವುಗಳನ್ನು ತಡೆಗಟ್ಟುತ್ತದೆ. ಆದ್ದರಿಂದಲೇ ಕೆಲವರು ಊಟವಾದ ತಕ್ಷಣವೇ ಒಂದು ಸಣ್ಣ ಹೆಂಟೆ ಬೆಲ್ಲವನ್ನು ಬಾಯಲ್ಲಿ ಹಾಕಿ ಚೀಪುತ್ತಾರೆ. ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ. ಗಂಟಲಿನಲ್ಲಿ ಕಟ್ಟಿರುವ ಕಫವನ್ನು ಬೆಲ್ಲ ಕರಗಿಸಿ ತೊಲಗಿಸುತ್ತದೆ. ನೆಗಡಿ, ಕೆಮ್ಮಿನಿಂದ ಉಪಶಮನ ನೀಡುತ್ತದೆ.ರಕ್ತವನ್ನು ಪುಷ್ಟಿ ಮಾಡಿ, ರಕ್ತವನ್ನು ವೃದ್ಧಿಯಾಗುವಂತೆ ಮಾಡುವ ಗುಣ ಬೆಲ್ಲಕ್ಕಿದೆ. ಇದರ ಬಳಕೆ ಮಾಡುವುದರಿಂದ ಶಕ್ತಿವಂತರಾಗಿ ದೃಢಕಾಯರಾಗಿ ಬೆಳೆಯುವಂತೆ ಮಾಡುತ್ತದೆ. ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವ ಕಾರಣ ದೇಹದಲ್ಲಿ ಆಮ್ಲೀಯ ತತ್ವಗಳನ್ನು ನಿಭಾಯಿಸುತ್ತದೆ. ಹೀಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ನಿಶ್ಯಕ್ತಿಯಾದಾಗ ಸ್ವಲ್ಪ ಬೆಲ್ಲವನ್ನು ಸೇವಿಸಿದರೆ ಕೂಡಲೇ ಶಕ್ತಿ ಬರುತ್ತದೆ.ಇದು ಬಂದಾಗ ಸಣ್ಣ ಬೆಲ್ಲದ ಹೆಂಟೆಯನ್ನು ಬಾಯಲ್ಲಿ ಹಾಕಿ ಚೀಪಿ ರಸವನ್ನು ಕುಡಿಯುತ್ತಾ ಇದ್ದರೆ, ಕೂಡಲೇ ಬಿಕ್ಕಳಿಕೆ ನಿಂತು ಹೋಗುತ್ತದೆ. ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ನಿವಾರಣೆಯಾಗಲಿದೆ. ಎಳ್ಳು ಬೆರೆಸಿ ಜೊತೆಗೆ ಸೇವಿಸಿದರೆ ಶ್ವಾಸಕೋಶಕ್ಕೆ ಉತ್ತಮ.
2021/02/24 17:47:18
https://kannada.thenewsism.com/bella/
mC4
ಹೃದಯಾಘಾತ — Vikaspedia ಹೃದಯಾಘಾತ ಎಂದರೇನು? ಇದನ್ನು ಪತ್ತೆ ಹಚ್ಚುವುದು ಹೇಗೆ? ಹೃದಯಾಘಾತದ ಸಂದರ್ಭದಲ್ಲಿ ರೋಗಿಗೆ ನೀಡುವ ಪ್ರಥಮ ಚಿಕಿತ್ಸೆಯೇನು? ಹೃದಯಾಘಾತಗಳನ್ನು ತಡೆಯುವುದು ಹೇಗೆ? ಎದೆಯ ಮಧ್ಯ ಭಾಗದ, ಕೊಂಚ ಎಡ ಭಾಗಕ್ಕೆ ಹೃದಯ ಇರುತ್ತದೆ. ಹೃದಯವು ದಿನವೊಂದಕ್ಕೆ ಒಂದು ಲಕ್ಷ ಬಾರಿ ಬಡಿಯುತ್ತದೆ. ಪ್ರತಿ ಬಡಿತದೊಂದಿಗೂ ಇಡೀ ದೇಹಕ್ಕೆ ರಕ್ತವನ್ನು ಹೃದಯವು ತಳ್ಳುತ್ತದೆ. ನಿಮಿಷವೊಂದಕ್ಕೆ ಹೃದಯವು 60-90 ಬಾರಿ ಬಡಿದುಕೊಳ್ಳುತ್ತದೆ. ಹೃದಯವು ಸರಿಯಾಗಿ ಕಾರ್ಯ ನಿರ್ವಹಿಸಲು ಮಯೋಕಾರ್ಡಿಯಂ ಆರೋಗ್ಯಪೂರ್ಣವಾಗಿರಬೇಕು. ಹೃದಯಕ್ಕೆ ಅಗತ್ಯವಾದ ಪೋಷಕಗಳು ಹಾಗೂ ಆಮ್ಲಜನಕವನ್ನು ರಕ್ತನಾಳಗಳು (ಅಪಧಮನಿ, ಅಭಿಧಮನಿ) ಪೂರೈಸುತ್ತವೆ. ಹೃದಯವನ್ನು ಎಡ ಹಾಗೂ ಬಲ ಎಂದು ಎರಡು ಭಾಗಗಳಾಗಿ ವಿಭಜಿಸಬಹುದು. ಬಲಭಾಗವು ಎರಡು ಕೋಣೆಗಳನ್ನು ಅಂದರೆ, ಬಲ ಹೃತ್ಕರ್ಣ ಹಾಗೂ ಬಲ ಹೃತ್ಕುಕ್ಷಿಗಳೆಂದು ಕರೆಯಲಾಗುತ್ತದೆ. ಅದೇ ಬಗೆಯಲ್ಲಿ ಎಡ ಭಾಗದಲ್ಲಿಯೂ ಹೃತ್ಕರ್ಣ ಹಾಗೂ ಹೃತ್ಕುಕ್ಷಿಗಳಿರುತ್ತವೆ. ದೇಹದ ಎಲ್ಲ ಭಾಗಗಳಿಂದ ಅಶುದ್ಧ ರಕ್ತವು ಬಲ ಹೃತ್ಕರ್ಣಕ್ಕೆ ಮೊದಲು ಬರುತ್ತದೆ. ಅಲ್ಲಿಂದ ಅದು ಬಲ ಹೃತ್ಕುಕ್ಷಿಗೆ ಮೂಲಕ ಪುಪ್ಪಸಗಳಿಗೆ ಅದನ್ನು ರವಾನಿಸುತ್ತದೆ. ಹೀಗೆ ರವಾನಿಸಲು ಹೃದಯ ಪಂಪ್ ಮಾಡಬೇಕು. ಪುಪ್ಪಸಗಳಿಂದ ಶುದ್ಧವಾದ ರಕ್ತವು ಹೃದಯದ ಎಡಭಾಗಕ್ಕೆ ಬಂದು, ಅಲ್ಲಿಂದ ಇಡೀ ದೇಹಕ್ಕೆ ವಿತರಣೆಯಾಗುತ್ತದೆ. ಈ ಪ್ರಕ್ರಿಯೆಲ್ಲಿ ಪ್ರಮುಖ ಪಾತ್ರವಹಿಸುವುದು ನಾಲ್ಕು ಕವಾಟಗಳು. ತಲಾ ಎರಡೆರಡು ಎಡ ಮತ್ತು ಬಲ ಬದಿಯಲ್ಲಿರುವ ಕವಾಟಗಳು ಒಮ್ಮುಖ ದ್ವಾರಗಳಂತೆ ಕಾರ್ಯ ನಿರ್ವಹಿಸಿ, ರಕ್ತದ ದಿಕ್ಕನ್ನು ನಿರ್ಧರಿಸುತ್ತವೆ. ರಕ್ತವನ್ನು ದೇಹದ ಇತರ ಭಾಗಗಳಿಗೆ ಪಂಪ್ ಮಾಡುವ ಮೂಲಕ ರವಾನಿಸುವ ಅತ್ಯಂತ ಪ್ರಮುಖವಾದ ಅಂಗವೇ ಹೃದಯ. ಅಪಧಮನಿಗಳು ಎಂದು ಕರೆಯಲಾಗುವ ರಕ್ತನಾಳಗಳ ಮೂಲಕ ಆಮ್ಲಜನಕವನ್ನು ಪಡೆಯುತ್ತದೆ. ರಕ್ತನಾಳಗಳು ಕಟ್ಟಿಕೊಂಡು ರಕ್ತ ಸಂಚಾರಕ್ಕೆ ಅಡಚಣೆಯುಂಟಾದರೆ, ಹೃದಯದ ಸ್ನಾಯುಗಳಿಗೆ ಅಗತ್ಯವಾದ ರಕ್ತದ ಪೂರೈಕೆಯಾಗದೇ ಅವು ಸಾಯುತ್ತವೆ. ಇದನ್ನೇ ಹೃದಯಾಘಾತ ಎನ್ನಲಾಗುತ್ತದೆ. ಹೃದಯದ ಸ್ನಾಯುಗಳಿಗೆ ಉಂಟಾಗುವ ಹಾನಿಗೆ ಅನುಗುಣವಾಗಿ, ಹೃದಯಾಘಾತದ ತೀವ್ರತೆಯನ್ನು ಗುರುತಿಸಲಾಗುತ್ತದೆ. ಸತ್ತ ಹೃದಯದ ಸ್ನಾಯು ಹೃದಯದ ಕಾರ್ಯವೈಖರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ, ಹೃದಯ ಹೆಚ್ಚು ರಕ್ತವನ್ನು ಪಂಪ್ ಮಾಡಲಾಗದು ಈ ಸ್ಥಿತಿಯನ್ನು ಕಂಜೆಸ್ಟಿವ್ ಹೃದಯ ವೈಫಲ್ಯ ಎನ್ನಲಾಗುತ್ತದೆ. ಸ್ಥಿತಿಯಿಂದ ಉಸಿರಾಟದ ಕೊರತೆ ಮತ್ತು ಪಾದಗಳಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ. ಇದು ಏಕೆ ಕಾಣಿಸಿಕೊಳ್ಳುತ್ತದೆ? ನಾವು ಬೆಳೆದಂತೆಲ್ಲಾ, ದೇಹದ ವಿವಿಧ ರಕ್ತನಾಳಗಳ ಒಳ ಭಾಗದಲ್ಲಿ ಕೊಬ್ಬಿನ ಶೇಖರಣೆಯಾಗಿ, ಕ್ರಮೇಣ ರಕ್ತ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ಈ ಬಗೆಯಲ್ಲಿ ರಕ್ತ ನಾಳ ಕಿರಿದಾಗುವಿಕೆಯನ್ನು ಅಥೆರೋಸ್ಕೆಲೆರೋಸಿಸ್ ಎಂದು ಕರೆಯಲಾಗುತ್ತದೆ.ಮಹಿಳೆಯರಿಗಿಂತ ಪುರುಷರಲ್ಲಿ ಹೃದಯಾಘಾತ ಹೆಚ್ಚು. ಈಸ್ಟ್ರೋಜನ್ ಮತ್ತು ಪ್ರೋಜೆಸ್ಟ್ರೋನ್ ಗಳೆಂಬ ಮಹಿಳೆಯರ ಲಿಂಗ ಹಾರ್ಮೋನುಗಳ ಪ್ರಭಾವದಿಂದಾಗಿ, ಮಹಿಳೆಯರಲ್ಲಿ ಹೃದಯಾಘಾತ ಕೊಂಚ ಕಡಿಮೆಯೇ ಎನ್ನಬಹುದು. ಈ ಬಗೆಯ ರಕ್ಷಣಾತ್ಮಕ ಪ್ರಭಾವ ಮಹಿಳೆಯರ ಮುಟ್ಟು ನಿಲ್ಲುವಿಕೆಯವರೆಗೂ ಇರಬಲ್ಲದು. ಏಷ್ಯನ್ನರು ಅದರಲ್ಲೂ ವಿಶೇಷವಾಗಿ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು. ಈ ಗಂಡಾಂತರಕ್ಕೆ ಕಾರಣಗಳು: ಹೆಚ್ಚಿನ ರಕ್ತದೊತ್ತಡ ಹೆಚ್ಚಿನ ತೂಕ ಹೆಚ್ಚಿನ ಕೊಲ್ಲೆಸ್ಟ್ರಾಲ್ ಮತ್ತು ಉತ್ತಮ ಕೊಬ್ಬಿನಂಶದ ಕಡಿಮೆ ಪ್ರಮಾಣ ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಒತ್ತಡ, ಸತತ ಕೋಪ ಹಾಗೂ ಆತಂಕ ವಂಶಪಾರಂಪರ್ಯ ಕಾರಣಗಳು ರೋಗ ಲಕ್ಷಣಗಳನ್ನು ಗುರುತಿಸಲು ತುಂಬ ಕಷ್ಟ. ಇವು ಮತ್ಯಾವುದೋ ಆನಾರೋಗ್ಯದ ಲಕ್ಷಣಗಳಂತೆಯೂ ಕಾಣಿಸಬಹುದು. ಆದರೆ, ಪ್ರಮುಖ ಲಕ್ಷಣವೆಂದರೆ, ಎದೆ ಭಾರದೊಂದಿಗೆ ಕೂಡಿದ ಎದೆನೋವು ಮತ್ತು ಉಸಿರಾಟದ ಕೊರತೆ. ಬೆವರುವಿಕೆ, ತಲೆ ಸುತ್ತುವಿಕೆ ಮತ್ತು ಪ್ರಜ್ಞಾಹೀನತೆಯಾಗುವ ಭಾವನೆಗಳು ಇದರ ಲಕ್ಷಣಗಳು. ನೋವು ಮುಖ್ಯವಾಗಿ ಎದೆಯ ಮುಂಭಾಗ ಅಥವಾ ಮೊಲೆ ಮೂಳೆಯ ಹಿಂಭಾಗದಲ್ಲಿರಬಹುದು. ನೋವು ಈ ಭಾಗದಿಂದ ಆರಂಭವಾಗಿ, ಕತ್ತು ಅಥವಾ ಎಡ ಭಾಗಕ್ಕೆ ಹೋಗಬಹುದು. ವಾಂತಿ, ಆತಂಕ, ಕೆಮ್ಮು ಮತ್ತು ನಾಡಿ ಬಡಿತದಲ್ಲಿ ಏರಿಕೆ, 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಣಿಸಿಕೊಳ್ಳುವ ನೋವು-ಇವು ಇತರ ಲಕ್ಷಣಗಳು. ಕೆಲ ಪ್ರಕರಣಗಳಲ್ಲಿ ರಕ್ತದೊತ್ತಡದಲ್ಲಿ ತೀವ್ರ ಕುಸಿತವುಂಟಾಗಿ ರೋಗಿಯು ನಿಸ್ತೇಜನಾಗಿ ಕಂಡು ಬರಬಹುದು. ಈ ಬಗೆಯ ರಕ್ತದೊತ್ತಡ ಕುಸಿತದಿಂದ ರೋಗಿಯು ಸಾವನ್ನಪ್ಪಬಹುದು. ವೈದ್ಯರು ವ್ಯಕ್ತಿಯ ವಿವರವಾದ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುವರು. ಆ ಬಳಿಕ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ದಾಖಲಿಸುವರು. ಹೃದಯದ ಚಟುವಟಿಕೆಯ ದಾಖಲೆಯಾದ ಎಲೆಕ್ಟ್ರೋ ಕಾರ್ಡಿಯೋಗ್ರಾಮ್, ಇಸಿಜಿ ತೆಗೆಯಲಾಗುತ್ತದೆ. ಹೃದಯದ ಬಡಿತದ ದರ, ಬಡಿತದಲ್ಲೇನಾದರೂ ವೈಪರಿತ್ಯಗಳಿವೆ ಮತ್ತು ಹೃದಯದ ಸ್ನಾಯುಗಳಿಗೇನದರೂ ಹಾನಿಯುಂಟಾಗಿದೆಯೇ ಎಂಬ ಮಾಹಿತಿಯನ್ನು ಇಸಿಜಿ ನೀಡುತ್ತದೆ. ಆರಂಭದ ಹಂತದಲ್ಲಿ ಸಾಮಾನ್ಯ ಇಸಿಜಿಯು ಹೃದಯಾಘಾತವನ್ನು ಹೊರೆಗಡಬಲ್ಲದು. ಹೃದಯದ ಸ್ನಾಯುಗಳು ಹಾನಿಗೊಂಡಿರುವುದನ್ನು ರಕ್ತದ ಪರೀಕ್ಷೆಗಳು ಖಚಿತ ಪಡಿಸಲು ಸಹಕಾರಿ. ಹೃದಯದ ಚಟುವಟಿಕೆಯ ಕುರಿತು ಉಪಯುಕ್ತ ಮಾಹಿತಿಯನ್ನು ಅರಿಯಲು ಇಕೋ ಕಾರ್ಡಿಯೋಗ್ರಾಮ್ ಎಂಬ ಸ್ಕ್ಯಾನ್ ಸಹಾಯ ಮಾಡುತ್ತದೆ. ರಕ್ತನಾಳಗಳಲ್ಲಿ ಅಡಚಟಣೆ ಉಂಟಾಗಿರುವುದು ಖಚಿತ ಪಡಿಸುವುದು ಕರೋನರಿ ಆಂಜಿಯೋಗ್ರಾಮ್. ಹೃದಯಾಘಾತದ ಸಂದರ್ಭದಲ್ಲಿ ತತ್ ಕ್ಷಣ ಚಿಕಿತ್ಸೆ ನೀಡುವುದರಿಂದ ಜೀವನವನ್ನು ಉಳಿಸಬಹುದು. ತಜ್ಞ ವೈದ್ಯರು ಬರುವವರೆಗೂ ರೋಗಿಯನ್ನು ಮಲಗಿಸಿಯೇ ಇರಬೇಕು ಮತ್ತು ಬಿಗಿಯಾದ ಉಡುಪುಗಳನ್ನು ಸಡಿಲಿಸಬೇಕು. ಆಮ್ಲಜನಕದ ಸಿಲಿಂಡರ್ ಲಭ್ಯವಿದ್ದಲ್ಲಿ ಆಮ್ಲಜನಕವನ್ನು ರೋಗಿಗೆ ನೀಡಬೇಕು.ನೈಟ್ರೋಗ್ಲಿಸರೀನ್ ಅಥವಾ ಸಾರ್ಬಿಟ್ರೇಟ್ ಮಾತ್ರೆಗಳು ಲಭ್ಯವಿದ್ದಲ್ಲಿ, ಒಂದೆರಡು ಮಾತ್ರೆಗಳನ್ನು ನಾಲಿಗೆಯ ಕೆಳಗಿಡಬೇಕು. ಆಸ್ಪ್ರಿನ್ ಮಾತ್ರೆಯನ್ನು ಕರಗಿಸಿ ನೀಡಬೇಕು. ಹೃದಯಾಘಾತ ಸಂದರ್ಭವು ತುರ್ತು ವೈದ್ಯಕೀಯ ನಿಗಾವನ್ನು ಬೇಡುತ್ತದೆ ಮತ್ತು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು. ಹೃದಯಾಘಾತವಾದ ಆರಂಭಿಕ ಕೆಲ ನಿಮಿಷ ಅಥವಾ ಕೆಲ ಗಂಟೆಗಳು ಅತ್ಯಂತ ಗಂಡಾಂತರಕಾರಿ. ಆರಂಭದಲ್ಲಿಯೇ ಪತ್ತೆಯಾದಾಗ, ಸೂಕ್ತವಾದ ಔಷಧಿಗಳ ಮೂಲಕ ನೀಡಿ ರಕ್ತನಾಳಗಳಲ್ಲಿನ ರಕ್ತದ ಕರಣೆಯನ್ನು ಕರಗಿಸಬಹುದು. ಹೃದಯದ ಬಡಿತದ ವೈಪರಿತ್ಯವನ್ನು ಗಮನಿಸಿ, ಸೂಕ್ತ ಚಿಕಿತ್ಸೆ ನೀಡಬಹುದು. ರಕ್ತದೊತ್ತಡ ಜಾಸ್ತಿಯಿದ್ದರೆ, ಅದನ್ನು ಕಡಿಮೆ ಮಾಡಲು ಸೂಕ್ತ ಚಿಕಿತ್ಸೆ ನೀಡಬೇಕು. ನಿರ್ದಿಷ್ಟವಾದ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ರೋಗಿಯ ವಯಸ್ಸು, ಹೃದಯಾಘಾತದ ಪ್ರಮಾಣ, ಹೃದಯದ ಸ್ನಾಯುಗಳಿಗೆ ಆಗಿರುವ ಹಾನಿಯ ಪ್ರಮಾಣ ಮತ್ತು ರಕ್ತನಾಳದಲ್ಲಿ ಕಾಣಿಸಿಕೊಂಡಿರುವ ಅಡಚಣೆಗಳ ಮೇಲೆ ನಿರ್ಧರಿಸಲಾಗುತ್ತದೆ. ಅನೇಕ ಸಂದರ್ಭದಲ್ಲಿ ಈ ಅಡಚಣೆಗಳನ್ನು ನಿವಾರಿಸಲು ಕೆಲ ನಿರ್ದಿಷ್ಟ ತಂತ್ರಗಳನ್ನು ಬಳಸಲಾಗುತ್ತದೆ. ಕರೋನರಿ ಅಂಜಿಯೋಪ್ಲಾಸ್ಟಿ, ಬಲೂನುಗಳ ಮೂಲಕ ರಕ್ತನಾಳಗಳನ್ನು ಹಿಗ್ಗಿಸುವ ತಂತ್ರ ಅಥವಾ ಕರೋನರಿ ಬೈಪಾಸ್ ಸರ್ಜರಿ ತಂತ್ರಗಳ ಮುಖಾಂತರ ಅಡಚಣೆಗಳನ್ನು ನಿವಾರಿಸಬಹುದು. ಹೃದಯಾಘಾತಗಳಿಗೆ ಒಳಗಾಗುವ ಸಾಧ್ಯತೆಯಿರುವವರು ಈ ಕೆಳಕಂಡ ಕ್ರಮವನ್ನು ಕೈಗೊಳ್ಳಬೇಕು: ಜೀವನಶೈಲಿಯಲ್ಲಿ ಬದಲಾವಣೆ ಆಹಾರವು ಆರೋಗ್ಯಪೂರ್ಣವಾಗಿದ್ದು, ಕೊಬ್ಬು ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿರಬೇಕು. ನಾರಿನಂಶ ಹಾಗೂ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ತೂಕ ಹೆಚ್ಚಿರುವವರು, ತೂಕ ಇಳಿಸಬೇಕು. ದೈಹಿಕ ಚಟುವಟಿಕೆ, ಕಸರತ್ತುಗಳನ್ನು ದಿನಂಪ್ರತಿ ಮಾಡಬೇಕು. ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಡಯಾಬಿಟೀಸ್, ಹೆಚ್ಚಿನ ರಕ್ತದೊತ್ತಡ ಹಾಗೂ ಹೆಚ್ಚಿನ ಕೊಲ್ಲೆಸ್ಟ್ರಾಲ್ ಹೊಂದಿರುವವರು ಸೂಕ್ತವಾದ ಔಷಧವನ್ನು ಸೇವಿಸುವ ಮೂಲಕ ಈ ಕಾಯಿಲೆಗಳನ್ನು ಹತೋಟಿಯಲ್ಲಿಡಬೇಕು.
2021/01/25 01:50:50
https://kn.vikaspedia.in/health/caaccccb7ccdc9fcbfc95ca4cc6/c85c82c97-cb5ccdcafcc2cb9-cb5ccdcafcbeca7cbfc97cb3cc1-1/cb9cc3ca6cafcbec98cbeca4
mC4
ಈ ಪ್ರಶ್ನೆಗಳು ಹೊರಗೆ ಕಂಡಷ್ಟು ಮುಗ್ಧವಲ್ಲ | Sanmarga Home ಸಂಪಾದಕೀಯ ಈ ಪ್ರಶ್ನೆಗಳು ಹೊರಗೆ ಕಂಡಷ್ಟು ಮುಗ್ಧವಲ್ಲ ಸನ್ಮಾರ್ಗ ಸೀರತ್ ಸಂಪಾದಕೀಯ ಎರಡು ಪ್ರಶ್ನೆಗಳಿವೆ. 1. ಪ್ರವಾದಿ ಮುಹಮ್ಮದ್‍ರ(ಸ) ವಿಷಯದಲ್ಲಿ ಮುಸ್ಲಿಮರೇಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ? 2. ಮುಸ್ಲಿಮರ ಧೋರಣೆಯೇಕೆ ಆಕ್ರಮಣಕಾರಿ ರೂಪದಲ್ಲಿರುತ್ತದೆ? ನಿಜವಾಗಿ, ಮೇಲಿನ ಎರಡೂ ಪ್ರಶ್ನೆಗಳು ಬಾಹ್ಯವಾಗಿ ಕಂಡಷ್ಟು ಮುಗ್ಧವಲ್ಲ. ಭಾವನಾತ್ಮಕ ಪ್ರತಿಕ್ರಿಯೆ ಮತ್ತು ಆಕ್ರಮಣಕಾರಿ ಧೋರಣೆ- ಎಂಬೆರಡು ಪದ ಪ್ರಯೋಗಗಳಲ್ಲಿ ಹೊರಗೆ ಕಾಣದ ಕೆಲವು ಅಂತರ್ಗತ ಸಂಗತಿಗಳಿವೆ. ಪ್ರವಾದಿಗೆ ಸಂಬಂಧಿಸಿ ಮುಸ್ಲಿಮರು ಯಾವಾಗೆಲ್ಲ ಆಕ್ರಮಣಕಾರಿಯಾಗಿ ಮತ್ತು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬ ಉಪ ಪ್ರಶ್ನೆಯನ್ನು ಕೇಳಿದಾಗ ಮೂಲ ಪ್ರಶ್ನೆ ಬಿಚ್ಚಿಕೊಳ್ಳತೊಡಗುತ್ತದೆ. ಪ್ರವಾದಿ ಮುಹಮ್ಮದರನ್ನು(ಸ) ಪ್ರಶ್ನಾತೀತವಾಗಿ ಒಪ್ಪಿಕೊಳ್ಳಬೇಕು ಮತ್ತು ಅವರನ್ನು ನಿಕಷಕ್ಕೆ ಒಡ್ಡುವುದು ಅಪರಾಧ ಎಂದು ಯಾವುದೇ ಜನಸಮೂಹದ ಮೇಲೆ ಒತ್ತಡವನ್ನು ಹೇರುವುದು ಸ್ವತಃ ಪ್ರವಾದಿಯವರ(ಸ) ಶಿಕ್ಷಣಕ್ಕೇ ವಿರುದ್ಧ. ಮುಹಮ್ಮದರಿಗೆ ಪ್ರವಾದಿತ್ವ ಲಭಿಸಿದ್ದು 40ನೇ ವರ್ಷದಲ್ಲಿ. ಇಲ್ಲಿಂದ 53 ವರ್ಷಗಳ ವರೆಗೆ ಅವರು ಮಕ್ಕಾದಲ್ಲಿದ್ದರೂ ಅವರಿಗೆ ಅನುಯಾಯಿಗಳು ಸಿಕ್ಕಿದ್ದು ಜುಜುಬಿ ಸಂಖ್ಯೆಯಲ್ಲಿ. ಆ ಬಳಿಕ ಮದೀನಕ್ಕೆ ಹೋದರು. ಮಕ್ಕಾದ ಪ್ರಮಾಣಕ್ಕೆ ಹೋಲಿಸಿದರೆ, ಅಲ್ಲಿನ ಅನುಯಾಯಿಗಳ ಸಂಖ್ಯೆ ಹೆಚ್ಚು. ಆ ಬಳಿಕ ಪುನಃ ಮಕ್ಕಾಕ್ಕೆ ಬಂದರು. ಈ ಮೂರೂ ಹಂತಗಳು ಪ್ರವಾದಿಯವರ ಬದುಕಿನ ಬೇರೆ ಬೇರೆ ಮಜಲುಗಳು. ಆದರೆ, ಈ ಮೂರು ಹಂತಗಳಲ್ಲೂ ಪ್ರವಾದಿ ವಿಮರ್ಶಾತೀತರಾಗಿರಲಿಲ್ಲ. ಅವರು ಮತ್ತು ಅವರ ವಿಚಾರಧಾರೆ ವಿಮರ್ಶೆಗೆ ಒಳಗಾಗಿದೆ. ಸ್ವತಃ ಪವಿತ್ರ ಕುರ್‍ಆನೇ ಅವರ ನಿಲುವನ್ನು ಪ್ರಶ್ನಿಸಿದೆ. ತಪ್ಪು ಎಂದು ಹೇಳಿ ತಿದ್ದಿದೆ. ಪತ್ನಿಯರೇ ಪ್ರಶ್ನಿಸಿದ್ದಾರೆ. ಅವರ ಅನುಯಾಯಿಗಳು ಅವರಿಗಿಂತ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಈ ಯಾವ ಸಂದರ್ಭದಲ್ಲೂ ಪ್ರವಾದಿ ಇವುಗಳಿಗೆ ಭಾವ ನಾತ್ಮಕವಾಗಿ ಅಥವಾ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿಲ್ಲ. ಅಂದು ಮಾತ್ರವಲ್ಲ, ಇಂದು ಕೂಡ ಜಾಗತಿಕವಾಗಿ ವಿಮರ್ಶೆ ಮತ್ತು ಪ್ರ ಶ್ನೆಗಳು ಕೇಳಿ ಬರುತ್ತಲೂ ಇವೆ. ಪ್ರವಾದಿ ಪ್ರಸ್ತುತ ಪಡಿಸಿರುವ ಆಹಾರಕ್ರಮ, ಶಿಕ್ಷಾ ನೀತಿ, ಮದ್ಯ ವಿರೋಧಿ- ಬಡ್ಡಿ ವಿರೋಧಿ ನಿಲುವುಗಳು, ಕೌಟುಂಬಿಕ ನೀತಿ-ನಿಯಮಗಳು, ಮಹಿಳೆಯರ ಕುರಿತಾಗಿರುವ ಧೋರಣೆಗಳು, ಪವಿತ್ರ ಕುರ್‍ಆನಿನ ವಚನಗಳು… ಎಲ್ಲವೂ ವಿಮರ್ಶೆಗೆ ಒಳಗಾಗುತ್ತಲೇ ಇವೆ ಮತ್ತು ಈ ವಿಮರ್ಶೆಗಳು ಆಕ್ರಮಣಕಾರಿ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ತುತ್ತಾದದ್ದು ಶೂನ್ಯ ಅನ್ನುವಷ್ಟು ಕಡಿಮೆ. ಹಾಗಿದ್ದರೆ, ಡಿ.ಜೆ. ಹಳ್ಳಿಯಲ್ಲಿ ನಡೆದಿದ್ದೇನು, ಫ್ರಾನ್ಸ್ ನಲ್ಲಿ ಅಥವಾ ಇನ್ನಿತರ ಕಡೆ ನಡೆದಿರುವುದೆಲ್ಲ ಏನು ಎಂಬ ಪ್ರಶ್ನೆ ಉದ್ಭವಿಸಬಹುದು. ನೇರವಾಗಿ ಹೇಳುವುದಾದರೆ ಅವು ವಿಮರ್ಶೆ ಅಲ್ಲ. ವ್ಯಂಗ್ಯ, ಅಣಕ, ದೂಷಣೆ, ಅಪಹಾಸ್ಯ ಇತ್ಯಾದಿ ಇತ್ಯಾದಿಗಳು. ಆದ್ದರಿಂದ ಭಾವನಾತ್ಮಕ ಮತ್ತು ಆಕ್ರಮಣಕಾರಿ ಪ್ರತಿಕ್ರಿಯೆಗಳು ಎಂಬ ಏಕ ವಾಕ್ಯವನ್ನು ಬಿಡಿಸಿ, ಅವಲೋಕಿಸುವ ಅಗತ್ಯ ಇದೆ. ಹಾಗಂಥ, ಇಂಥ ಪ್ರತಿಕ್ರಿಯೆಗಳು ಸಮರ್ಥನೀಯ ಎಂದಲ್ಲ. ಅವು ಖಂಡನೀಯ ಮತ್ತು ಕಾನೂನು ಪ್ರಕಾರ ಅಂಥವುಗಳಿಗೆ ಶಿಕ್ಷೆಯಾಗಬೇಕು. ಅಂಥ ಪ್ರತಿಕ್ರಿಯೆಗಳು ಪ್ರವಾದಿಯವರ(ಸ) ವರ್ಚಸ್ಸಿನ ಮೇಲೆ ಹಾನಿಯೆಸಗುತ್ತವೆ ಮತ್ತು ಅಪಹಾಸ್ಯ ಮಾಡಿದವರ ಮೇಲೆಯೇ ಸಾರ್ವಜನಿಕ ಅನುಕಂಪಕ್ಕೆ ಕಾರಣವಾಗುತ್ತದೆ. ಇದಕ್ಕೆ ಇನ್ನೊಂದು ಮಗ್ಗುಲೂ ಇದೆ. ಪ್ರವಾದಿ ಮುಹಮ್ಮದರು(ಸ) ನಿರ್ದಿಷ್ಟ ದಿನ, ತಿಂಗಳು, ವರ್ಷದಲ್ಲಿ ಮಾತ್ರ ಸ್ಮರಣೆಗೆ ಒಳಗಾಗಿರುವ ವ್ಯಕ್ತಿ ಅಲ್ಲ. ಅವರನ್ನು ಪ್ರತಿದಿ ನವೂ ಸ್ಮರಿಸದ, ಅವರ ವಚನಗಳನ್ನು ಉಲ್ಲೇಖಿಸದ, ಅವರ ಬಗ್ಗೆ ಅಭಿಮಾನ ಪಡದ ಒಂದೇ ಒಂದು ಮುಸ್ಲಿಮ್ ಮನೆ ಇರುವ ಸಾಧ್ಯತೆ ಇಲ್ಲ. ಪ್ರವಾದಿಯವರು(ಸ) ಮುಸ್ಲಿಮರಿಗೆ ಅಷ್ಟು ನಿಕಟ ಮತ್ತು ಆಪ್ತ. ಇಂಥದ್ದೊಂದು ಸಂಬಂಧವನ್ನು ತನ್ನ ಸಮುದಾಯದ ಜೊತೆ ಬೇರೆ ಯಾವುದೇ ನಾಯಕರು ಇರಿಸಿಕೊಂಡಿದ್ದಾರೋ ಎಂಬುದು ಸಂಶಯ. ಪ್ರವಾದಿಯವರ(ಸ) ಜೊತೆಗೆ ಮುಸ್ಲಿಮ್ ಸಮುದಾಯದ ಈ ನಿಕಟ ಸಂಬಂಧವೇ ಅವರ ಶೀಘ್ರ ಮತ್ತು ಕೆಲವೊಮ್ಮೆ ಆವೇಶಭರಿತ ಪ್ರತಿಕ್ರಿಯೆಗಳ ಹಿಂದಿನ ಕಾರಣ ಎಂದೂ ಹೇಳಬಹುದು. ವಿಷಾದ ಏನೆಂದರೆ, ಪ್ರವಾದಿ(ಸ)ಯನ್ನು ವ್ಯಂಗ್ಯವಾಗಿ ಇರಿಯುವ, ಹೀನಾಯವಾಗಿ ಚಿತ್ರಿಸುವ ಮತ್ತು ಅವಹೇಳ ನಕಾರಿಯಾಗಿ ವಿವರಿಸುವವರು ಅವರನ್ನು(ಸ) ಆಳವಾಗಿ ಓದಿರುವುದಿಲ್ಲ ಅಥವಾ ವಿರೋಧಕ್ಕಾಗಿಯೇ ವಿರೋಧಿಸುವವರ ಬರಹಗಳನ್ನಷ್ಟೇ ಓದಿರುತ್ತಾರೆ ಎಂಬುದು. ಇತಿಹಾಸದ ಯಾವುದೇ ವ್ಯಕ್ತಿಯನ್ನು ನೀವು ದಕ್ಕಿಸಿಕೊಳ್ಳಬೇಕಾದರೆ ಅವರನ್ನು ವಿವರಿಸುವ ಎಲ್ಲ ಮೂಲಗಳ ಬರಹಗಳನ್ನೂ ಓದಬೇಕು. ಮುಕ್ತ ಮನಸ್ಸೂ ಬೇಕು. ಸದ್ಯ ಅಲಭ್ಯವಾಗಿರುವುದೇ ಇವೆರಡು. ಅಂದಹಾಗೆ, ಪ್ರವಾದಿ ಮುಹಮ್ಮದರನ್ನು ಈ ಸಮಾಜಕ್ಕೆ ಸರಿಯಾದ ರೂಪದಲ್ಲಿ ಪರಿಚಯಿಸುವುದೇ ಇಂದಿನ ದಿನಗಳಲ್ಲಿ ಪ್ರವಾದಿಯವರಿಗೆ ಮುಸ್ಲಿಮ್ ಸಮುದಾಯ ನೀಡಬಹುದಾದ ಅತಿದೊಡ್ಡ ಗೌರವ. Previous articleಗೋ ಹತ್ಯೆ ಮಾಡುವವರಿಗೆ ಜೈಲು ಶಿಕ್ಷೆ ಖಚಿತ: ಸಿಎಂ ಯೋಗಿ ಆದಿತ್ಯನಾಥ್ Next articleಆರೋಗ್ಯ ಸೇತು ನಿರ್ಮಿಸಿದ್ದು ಯಾರು?| ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕೇಂದ್ರ ಸರಕಾರ; ಸ್ಪಷ್ಟೀಕರಣ ಕೋರಿ ಕೇಂದ್ರ ಮಾಹಿತಿ ಆಯೋಗ
2021/06/14 08:23:04
http://sanmarga.com/sanmarga-seerat-editorial/
mC4
ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು! | Top 26 amazing pilgrimage sites in Karnataka - Kannada Nativeplanet »ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು! Updated: Tuesday, June 12, 2018, 16:48 [IST] ಪ್ರವಾಸ ಮಾಡುವುದೆ ಒಂದು ಸುಂದರ ಅನುಭವ. ಅದರಲ್ಲೂ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಲೆತು ಪ್ರವಾಸ ಮಾಡಿದರಂತೂ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಒಮ್ಮೆ ಕಲ್ಪಿಸಿಕೊಳ್ಳಿ ಯಾವುದೊ ಹಬ್ಬ ಹರಿದಿನಗಳ ಪ್ರಯುಕ್ತ ಬಂಧುಗಳು/ಮಿತ್ರರು ಒಂದೆಡೆ ಸೇರಿದರೆಂದುಕೊಳ್ಳಿ, ಸಮಯವೂ ಕೃಪೆ ತೋರಿದೆ ಅಂದಾಗ ಒಬ್ಬರಿಗಾದರೂ ಸರಿ, ಪ್ರವಾಸ ಮಾಡಬೇಕೆನ್ನುವ ವಿಚಾರ ಮನದಲ್ಲಿ ಬರದೆ ಇರಲಾರದು. ಅಂದರೆ ಸಾಮಾನ್ಯವಾಗಿ ಮನುಷ್ಯ ಸಂಘಜೀವಿಯಾಗಿದ್ದು ಇಂದಿನ ರಭಸದ ಜೀವನದಲ್ಲಿ ಏಕಾಂಗಿಯಾಗಿರುವಂತೆ ಭಾವಿಸಿರುತ್ತಾನೆ. ಮರಭೂಮಿಯಲ್ಲಿ ಓಯಸಿಸ್ ಕಂಡಾಗ ಆಗುವ ಆನಂದದಂತೆ ಉದ್ದನೇಯ ವಿಕೆಂಡ್ ರಜೆಗಳು ಅಥವಾ ಪ್ರಮುಖ ಹಬ್ಬಗಳು ಬಂದಾಗ ಎಲ್ಲರೊಂದಿಗೆ ಸಮಯ ಕಳೆಯ ಬಯಸುತ್ತಾನೆ. ಇನ್ನೂ ಈ ಸುಂದರ ಸಮಯವನ್ನು ಬಹು ಹೊತ್ತಿನವರೆಗೆ ಕಳೆಯಬೇಕೆಂದಿದ್ದರೆ ಪ್ರವಾಸ ಮಾಡುವುದು ಉತ್ತಮ ಆಯ್ಕೆಯಾಗಿ ಬಿಡುತ್ತದೆ. ಇನ್ನೂ ಸಾಮಾನ್ಯವಾಗಿ ಕುಟುಂಬ ಬಳಗದಲ್ಲಿ ಸಾಕಷ್ಟು ಹಿರಿಯ, ಮಧ್ಯ ವಯಸ್ಕದವರಿದ್ದರೆ ಧಾರ್ಮಿಕ ಪ್ರವಾಸ ಮಾಡುವುದೆ ಎಲ್ಲರಿಗೂ ಆನಂದ ತರುವ ವಿಚಾರವಾಗಿಬಿಡುತ್ತದೆ. ನಿಮಗೂ ಸಹ ಕರ್ನಾಟಕದಲ್ಲೆ ಧಾರ್ಮಿಕ ಯಾತ್ರೆ ಮಾಡಬೇಕೆಂಬ ಇಚ್ಛೆ ಇದೆಯೆ? ಯಾವೆಲ್ಲ ಸ್ಥಳಗಳಿಗೆ ಕರ್ನಾಟಕದಲ್ಲಿ ಭೇಟಿ ನೀಡಬಹುದಾಗಿದೆ ಎಂಬುದರ ಕುರಿತು ತಿಳಿಯಬೇಕೆ? ಚಿಂತಿಸದಿರಿ. ಈ ಲೇಖನಾನ್ನೊಮ್ಮೆ ಓದಿ ನಿಮಗಿಷ್ಟವಾಗುವ ಧಾರ್ಮಿಕ ತಾಣಗಳ ಪ್ರವಾಸ ಯೋಜನೆ ರೂಪಿಸಿಕೊಳ್ಳಿ. ಈ ಲೇಖನದಲ್ಲಿ ಕರ್ನಾಟಕದಲ್ಲಿರುವ ಕೆಲವು ವಿಶೇಷ ಹಾಗೂ ಆಯ್ದ ಆಕರ್ಷಕ ಧಾರ್ಮಿಕ ಯಾತ್ರೆಯ ತಾಣಗಳ ಕುರಿತು ತಿಳಿಸಲಾಗಿದೆ. ಎಲ್ಲಮ್ಮನ ದೇವಾಲಯ ಶಕ್ತಿಯ ಅವತಾರ, ಪಾರ್ವತಿಯ ರೂಪವೆಂದೆ ಪರಿಗಣಿಸಲಾಗುವ ಎಲ್ಲಮ್ಮನು ನೆಲೆಸಿರುವ ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ ಸವದತ್ತಿ. ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿಯು ಬೆಳಗಾವಿ ನಗರ ಕೇಂದ್ರದಿಂದ ಸುಮಾರು 88 ಕಿ.ಮೀಗಳಷ್ಟು ದೂರವಿದ್ದು ತೆರಳಲು ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ದೊರೆಯುತ್ತವೆ. ಈ ಭಾಗದಲ್ಲಿ ಈ ಕ್ಷೇತ್ರವು ಎಲ್ಲಮ್ಮನ ಗುಡ್ಡ ಎಂಬ ಹೆಸರಿನಿಂದಲೆ ಪ್ರಖ್ಯಾತವಾಗಿದ್ದು ಪ್ರತಿ ವರ್ಷ ನವಂಬರ್-ಡಿಸೆಂಬರ್ ಸಮಯದಲ್ಲಿ ಜರುಗುವ ರೇಣುಕಾ ದೇವಿಯ ಉತ್ಸವ (ಜಾತ್ರೆ) ಅತ್ಯಂತ ಆಕರ್ಷಕವಾಗಿರುತ್ತದೆ. ರೇಣುಕಾ ಎಲ್ಲಮ್ಮನ ಸಾಂದರ್ಭಿಕ ಚಿತ್ರ. ಚಿತ್ರಕೃಪೆ: Upadhye Guruji ಗದಗ ಜಿಲ್ಲೆಯ ತಾಣ ಉತ್ತರ ಕರ್ನಾಟಕದ ಪ್ರಮುಖ ಜಾತ್ರೆ ಉತ್ಸವಗಳ ಪೈಕಿ ಭೀಮಾಂಬಿಕಾ ಜಾತ್ರೆಯೂ ಸಹ ಒಂದು. ಪಾರ್ವತಿಯ ಅವತಾರ ಅಂಬಿಕೆಯು ಇಲ್ಲಿ ಭೀಮಾಂಬಿಕೆಯಾಗಿ ನೆಲೆಸಿರುವ ಈ ಕ್ಷೇತ್ರವೆ ಇಟಗಿ. ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮವಾಗಿದೆ ಇಟಗಿ. ಗಜೇಂದ್ರಗಡ್ ನಿಂದ 13 ಕಿ.ಮೀ ದೂರವಿರುವ ಇಟಗಿಗೆ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ವನಶಂಕರಿಯೂ ಹೌದು! ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ತಾಣ ಬಾದಾಮಿಯ ಚೋಳಚಗುಡ್ಡದಲ್ಲಿರುವ ಶಾಖಾಂಬರಿ, ವನವನ್ನೆ ನಡುಗಿಸುವ ವನಶಂಕರಿ ಹಾಗೂ ಪಾರ್ವತಿಯ ಅವತಾರವಾದ ಬನಶಂಕರಿ ಒಂದು ಸುಪ್ರಸಿದ್ಧ ದೇವಿಯಾಗಿದ್ದಾಳೆ. ಈ ದೇವಿಯ ಜಾತ್ರೆಯೂ ಸಹ ಸಾಮಾನ್ಯವಾಗಿ ಜನವರಿಯ ಸಂದರ್ಭದಲ್ಲಿ ಜರುಗುತ್ತದೆ ಹಾಗೂ ಈ ಸಂದರ್ಭದಲ್ಲಿ ಪಕ್ಕದ ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಬಾದಾಮಿ ಬೆಳಗಾವಿಯಿಂದ 150 ಹಾಗೂ ಬಾಗಲಕೋಟೆಯಿಂದ 38 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ತೆರಳಲು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಗಳಿಂದ ಬಸ್ಸುಗಳು ದೊರೆಯುತ್ತವೆ. ಗುರುಗಳಿಗೆ ಗುರುವಾದ ಶ್ರೀ ದತ್ತಾತ್ರೇಯರು ನೆಲೆಸಿರುವ ಪ್ರಭಾವಿ ಕ್ಷೇತ್ರವೆ ಗಾಣಗಾಪುರ. ಹಾಗಾಗಿ ಗಾಣಗಾಪುರವನ್ನು ದತ್ತಾತ್ರೇಯ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ. ಸ್ವತಃ ಸ್ವಾಮಿಯವರು ಹೇಳಿರುವಂತೆ ಇಂದಿಗೂ ಅವರು ಮುಂಜಾನೆಯ ವೇಳೆಗೆ ಸಂಗಮದಲ್ಲಿ ಮಿಂದು ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವಕರಿಸುತ್ತಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರು ವಿಶಿಷ್ಟವಾದ ಮಧುಕರಿ ಆಚರಣೆಯನ್ನು ಪಾಲಿಸುತ್ತಾರೆ. ಮಧುಕರಿ ಎಂದರೆ ಭೀಕ್ಷೆ ಬೇಡುವುದಾಗಿದೆ. ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಾಣಗಾಪುರದಲ್ಲಿರುವ ಮನೆಗಳ ಪೈಕಿ ಕನಿಷ್ಠ ಐದು ಮನೆಗಳಲ್ಲಿ ಭೀಕ್ಷೆ ಬೇಡಿ ನಂತರ ಪಾದುಕೆಯ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ. ಗಾಣಗಾಪುರ ಒಂದು ಹಳ್ಳಿಯಾಗಿದ್ದು ಉತ್ತರ ಕರ್ನಾಕ ಭಾಗದ ಕಲಬುರಗಿ (ಹಿಂದಿನ ಗುಲಬರ್ಗಾ) ಜಿಲ್ಲೆಯ ಅಫ್ಜಲಪುರ ತಾಲೂಕಿನಲ್ಲಿದೆ. ಕಲಬುರಗಿ ನಗರ ಕೇಂದ್ರದಿಂದ 40 ಕಿ.ಮೀ ಗಳಷ್ಟು ದೂರವಿರುವ ಗಾಣಗಾಪುರಕ್ಕೆ ತೆರಳಲು ಕಲಬುರಗಿಯಿಂದ ಸಾಕಷ್ಟು ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಚಿತ್ರಕೃಪೆ: Satish-ansingkar ಶಿರಸಿ ಮಾರಿಕಾಂಬ ಉತ್ತರ ಕನ್ನಡ ಜಿಲ್ಲೆಯ ಶಿರಸಿಯು ಒಂದು ಉತ್ತಮ ಪ್ರವಾಸಿ ಪಟ್ಟಣವಾಗಿದೆ. ಬನವಾಸಿ, ಸೋಂದಾ, ಸಹಸ್ರಲಿಂಗ, ಯಾಣ ಮುಂತಾದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಿಗೆ ಹತ್ತಿರವಾಗಿರುವ ಈ ತಾಣವು ಪ್ರತಿ ಎರಡು ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ಜರುಗುವ ಸುಪ್ರಸಿದ್ಧ ಮಾರಿಕಾಂಬೆಯ ಜಾತ್ರೆಯಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಮಾರಿಕಾಂಬೆಯ ದೇವಸ್ಥಾನವು 17 ನೇಯ ಶತಮಾನದ್ದಾಗಿದ್ದು ಮುಖ್ಯವಾಗಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ದೇವಿಯನ್ನು ಆರಾಧಿಸುತ್ತಾರೆ. ಮಾರಿಕಾಂಬ ದೇವಿಯ ಸಾಂದರ್ಭಿಕ ಚಿತ್ರ ಮೂಕಾಸುರ ಸಂಹಾರಿಣಿ ಕ್ಷೇತ್ರ ಪಾರ್ವತಿಯ ಅವತಾರವಾದ ಶಕ್ತಿ, ದುರ್ಗೆ, ಕಾಳಿ, ಅಂಬಿಕೆ ಎಂತೆಲ್ಲ ಕರೆಯಲ್ಪಡುತ್ತಾಳೆ ಈ ದೇವಿ. ದಂತ ಕಥೆಯೊಂದರ ಪ್ರಕಾರ, ಈ ದೇವಿಯು ಬೆಳಿಗ್ಗೆಯ ಸಮಯದಲ್ಲಿ ಕೇರಳದ ಒಂದು ಪ್ರಸಿದ್ಧ ದೇವಾಲಯದಲ್ಲಿ ಭಕ್ತರನ್ನು ಹರಸಿ ನಂತರದ ಸಮಯದಲ್ಲಿ ಕರ್ನಾಟಕದಲ್ಲಿರುವ ತನ್ನ ತವರು ನೆಲೆಗೆ ಬಂದು ನೆಲೆಸುತ್ತಾಳೆ. ಈಕೆ ಮತ್ತಿನಾರೂ ಅಲ್ಲ, ದೇವಿ ಮೂಕಾಂಬಿಕೆ ಹಾಗೂ ಈಕೆ ನೆಲೆಸಿರುವ ಶ್ರೀಕ್ಷೇತ್ರವೆ ಕೊಲ್ಲೂರು. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿ ಕರ್ನಾಟಕದಲ್ಲೆ ಸಾಕಷ್ಟು ಪ್ರಸಿದ್ಧಿಯನ್ನು ಗಳಿಸಿದೆ. ತುಮಕೂರಿನಲ್ಲಿರುವ ಶಕ್ತಿದೇವಿ ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಎಂಬ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ ಅಮ್ಮನವರ ದೇಗುಲವಿದೆ. ದಸರಿಘಟ್ಟ ಗ್ರಾಮವು ತಿಪಟೂರಿನಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿದೆ. ಇಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿಯು ಅಪಾರ ಶಕ್ತಿಶಾಲಿಯಾಗಿದ್ದು ನಂಬಿಕೊಂಡು ಬರುವ ಭಕ್ತರ ಕೈಬಿಡುವುದಿಲ್ಲವೆಂದು ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳ ಅಭಿಪ್ರಾಯ. ಶಕ್ತಿಕ್ಷೇತ್ರ ಸಾಗರ ತಾಲೂಕಿನಲ್ಲಿರುವ ಸಿಗಂದೂರು ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಮೂರು ಸುತ್ತಲು ಆವೃತವಾಗಿರುವ ಚೌಡೇಶ್ವರಿ ದೇವಿ ನೆಲೆಸಿರುವ ಅದ್ಭುತ ಕ್ಶೇತ್ರ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆಯುತ್ತಾರೆ. ಈ ದೇವಿಯ ಕೃಪೆಯಿಂದ ಶೀಘ್ರದಲ್ಲಿ ಫಲ ಪ್ರಾಪ್ತಿಯಾಗುತ್ತದೆಂದು ನಂಬಲಾಗಿದೆ. ಕೃಷ್ಣನ ನಿವಾಸ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿಯೂ ಧಾರ್ಮಿಕ ಆಕರ್ಷಣೆಯಾಗಿಯೂ ಜನರನ್ನು ಆಕರ್ಷಿಸುವ ಉಡುಪಿ ಕ್ಷೇತ್ರವು ಸಾಕಷ್ಟು ಪ್ರ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಇಲ್ಲಿರುವ ಕೃಷ್ಣ ಮಠವು ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾದ ದೇವ ಸನ್ನಿಧಿಯಾಗಿದ್ದು ಅಪಾರ ಪ್ರಮಾಣದಲ್ಲಿ ಭಕ್ತಾದಿಗಳನ್ನು ಸೆಳೆಯುತ್ತದೆ. ಶಂಕರರು ಸ್ಥಾಪಿಸಿದ ಪೀಠ ಅದ್ವೈತ ಮತದ ಸಂಸ್ಥಾಪಕರಾದ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಹಾ ಜಗತ್ಪೀಠಗಳಲ್ಲಿ ಒಂದಾಗಿರುವ ಶಾರದಾಪೀಠವು ಸ್ಥಿತವಿರುವ ಪುಣ್ಯ ಸ್ಥಳವೆ ತುಂಗಾ ನದಿ ತಟದಲ್ಲಿ ನೆಲೆಸಿರುವ ಶೃಂಗೇರಿ. ಇಂದಿಗೂ ಶೃಂಗೇರಿ ಅಪಾರ ಪ್ರಮಾಣದಲ್ಲಿ ಪ್ರವಾಸಿಗರನ್ನು/ಭಕ್ತರನ್ನು ಆಕರ್ಷಿಸುವ ತಾಣವಾಗಿದ್ದು ಬೆಂಗಳೂರಿನಿಂದ 330 ಕಿ.ಮೀ ಗಳಷ್ಟು ದೂರದಲ್ಲಿದೆ. ಹಸಿವನ್ನು ದೂರ ಓಡಿಸುವಾಕೆ! ಅನ್ನಪೂರ್ಣೆಗೆ ಮುಡಿಪಾದ ಒಂದು ಮುಖ್ಯ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಕ್ಕಮಗಳೂರಿನಿಂದ ಸುಮಾರು ನೂರು ಕಿ.ಮೀ ದೂರದಲ್ಲಿರುವ ಹೊರನಾಡು ಎಂಬ ಕ್ಷೇತ್ರದಲ್ಲಿದೆ. ಇದನ್ನು ಶ್ರೀಕ್ಷೇತ್ರ ಹೊರನಾಡು ಎಂದೂ ಸಹ ಕರೆಯಲಾಗುತ್ತದೆ. ಹೊರನಾಡು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿರುವುದರಿಂದ ಬೆಂಗಳೂರು, ಚಿಕ್ಕಮಗಳೂರು ಮುಂತಾದ ಸ್ಥಳಗಳಿಂದ ಇಲ್ಲಿಗೆ ಬಸ್ಸುಗಳು ದೊರೆಯುತ್ತವೆ ಅಲ್ಲದೆ ಬಾಡಿಗೆ ವಾಹನಗಳು ಸಹ ದೊರೆಯುತ್ತವೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಕಟೀಲು ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಮಂಗಳೂರು ನಗರ ಕೇಂದ್ರದಿಂದ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿರುವ ಕಟೀಲು ತನ್ನಲ್ಲಿರುವ ಅತಿ ಮುಖ್ಯವಾದ ದುರ್ಗಾ ಪರಮೇಶ್ವರಿ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಗೋಕರ್ಣ ಕ್ಷೇತ್ರವು ತನ್ನಲ್ಲಿರುವ ಶಿವ ದೇವಾಲಯವಾದ ಮಹಾಬಲೇಶ್ವರ ದೇವಾಲಯ, ಕಡ ತೀರ ಹಾಗೂ ಪಾವಿತ್ರ್ಯತೆಯುಳ್ಳ ಕೋಟಿತೀರ್ಥಗಳಿಗಾಗಿ ಹೆಸರುವಾಸಿಯಾದ ಸ್ಥಳವಾಗಿದೆ. ನೀಳ ವರ್ಣದ ನಯನ ಮನೋಹರ ಕಡಲ ಹಾಸಿಗೆಯ ಹಿನ್ನಿಲೆಯಲಿ ಗಾಢ ಪ್ರಭಾವ ಬೀರುವ ಧ್ಯಾನ ಮೊಗದ ಪರಶಿವನ ವಿಶಾಲ ಕಾಯ ನೋಡಿದಾಕ್ಷಣ ಮನದ ಒತ್ತಡಗಳೆಲ್ಲವೂ ನಿರ್ನಾಮವಾಗಿ ಅಧ್ಯಾತ್ಮಿಕತೆಯ ದಿವ್ಯ ಭಾವ ಉಕ್ಕಿ ಹರಿಯುವಂತೆ ಮಾಡುವಂತಿದೆ ಮುರುಡೇಶ್ವರ. ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಕೌಟುಂಬಿಕ ಯಾತ್ರಾ ಕೇಂದ್ರವಾಗಿದೆ. ಬೆಂಗಳೂರಿನಿಂದ ಮುರುಡೇಶ್ವರ ಸುಮಾರು 515 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಮುರುಡೇಶ್ವರ ತನ್ನದೆ ಆದ ರೈಲು ನಿಲ್ದಾಣ ಹೊಂದಿದ್ದು ಮಂಗಳೂರು-ಮುಂಬೈ ಕೊಂಕಣ ರೈಲು ಮಾರ್ಗದಲ್ಲಿ ನಿಲುಗಡೆ ಹೊಂದಿದೆ. ಚಿತ್ರಕೃಪೆ: Vamshireddy ಶ್ರೀಕಂಠೇಶ್ವರನ ರೂಪದಲ್ಲಿ ಕಾರ್ಕೋಟಕ ವಿಷವನ್ನು ಸೇವಿಸಿ ಲೋಕವನ್ನೆ ಅದರ ಮಾರಣಾಂತಿಕ ಪರಿಣಾಮದಿಂದ ಕಾಪಾಡಿದ ನೀಳ ಕಂಠದ ಸಾಂಬ ಶಿವನು ಪ್ರಶಾಂತವಾಗಿ ನೆಲೆಸಿ ಭಕ್ತರನ್ನು ಹರಸುತ್ತಿರುವ ಪುಣ್ಯ ಕ್ಷೇತ್ರವಾಗಿದೆ ಈ ನಂಜನಗೂಡು. ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಕಪಿಲಾ ನದಿಯ (ಕಬಿನಿ) ತಟದಲ್ಲಿ ನೆಲೆಸಿರುವ ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ಮೈಸೂರು ನಗರ ಕೇಂದ್ರದಿಂದ 25 ಕಿ.ಮೀ ಗಳಷ್ಟು ದೂರವಿರುವ ನಂಜನಗೂಡು, ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದ್ದು ಬೆಂಗಳೂರಿನಿಂದ ಸುಮಾರು 175 ಕಿ.ಮೀ ಗಳಷ್ಟು ದೂರದಲ್ಲಿದೆ. ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಸಂಬೋಧಿಸಲಾಗುವ ಮೈಸೂರು ನಗರದಿಂದ ಸುಮಾರು ಹದಿನಾಲ್ಕು ಕಿ.ಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟ ಒಂದಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ತಾಯಿ ಚಾಮುಂಡೇಶ್ವರಿ ದೇವಿಯು ನೆಲೆಸಿರುವ ಪುಣ್ಯ ಕ್ಷೇತ್ರವಾಗಿದೆ. ಈ ಚಾಮುಂಡಿ ಬೆಟ್ಟವು ಮೈಸೂರಿನ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದ್ದು ಸಾಮಾನ್ಯವಾಗಿ ಮೈಸೂರಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಂದ ಭೆಟಿ ನೀಡಲ್ಪಡುತ್ತದೆ. ಕೆಲ ಜ್ಯೋತಿಷಿಗಳ ಪ್ರಕಾರ, ಸರ್ಪ ದೋಷವು ಸಾಮಾನ್ಯವಾಗಿ ಬಹುತೇಕರಲ್ಲಿ ಕಂಡುಬರುತ್ತದೆಯಂತೆ. (ನಂಬಿಕೆಯ ಪ್ರಕಾರ, ಈ ದೋಷವು ತಿಳಿದೊ ತಿಳಿಯದೆಯೊ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿ ನಾನಾ ವಿಧಗಳ ಮೂಲಕ ಬರುವ ದೋಷ) ಈ ರೀತಿ ಹೇಳುವವರ ಉದ್ದೇಶ ಏನೆ ಇರಲಿ ಆದರೆ ಇದಕ್ಕೊಂದು ಪರಿಣಾಮಕಾರಿಯಾದ ಪರಿಹಾರ ಕರುಣಿಸುವಾತನೊಬ್ಬ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾನೆ ಎನ್ನುವುದು ನಮಗೆಲ್ಲ ಸಂತುಷ್ಟಿ ನೀಡುವ ವಿಷಯವಾಗಿದೆ. ಅದೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ಮಂಗಳೂರು ಜಿಲ್ಲೆಯ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ. ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ ಎತ್ತರದ ಬಾಹುಬಲಿಯ ಪ್ರತಿಮೆಯೂ ಕೂಡ ಧರ್ಮಸ್ಥಳದಲ್ಲಿದೆ. ತುಮಕೂರಿನಲ್ಲಿರುವ ದೇವರಾಯನದುರ್ಗದ ಈಶಾನ್ಯಕ್ಕೆ ಬ್ಯಾಚೇನಹಳ್ಳಿ, ಎ.ವೆಂಕಟಾಪುರದ ಮಾರ್ಗವಾಗಿ ಸುಮಾರು 26 ಕಿ.ಮೀ ಚಲಿಸಿದರೆ ಸಿಗುವ ಧಾರ್ಮಿಕ ಮಹತ್ವ ಪಡೆದಿರುವ ಕ್ಷೇತ್ರವೆ ಗೊರವನಹಳ್ಳಿ. ಮೂಲತಃ ಗೊರವನಹಳ್ಳಿಯು ಲಕ್ಷ್ಮಿ ದೇವಿಯ ದೇಗುಲದಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿನ ಲಕ್ಷ್ಮಿ ದೇವಿಯು ಐಶ್ವರ್ಯವಲ್ಲದೆ ಕಂಕಣ ಭಾಗ್ಯವನ್ನು ಕರುಣಿಸುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಾಗಿ ಮದುವೆ ಆಗ ಬಯಸುವ ಪುರುಷ ಹಾಗೂ ಮಹಿಳಾ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಿರುತ್ತಾರೆ. ಸಾಂದರ್ಭಿಕ ಚಿತ್ರ. ಲಕ್ಷ್ಮಿ ದೇವಿಯು ವೆಂಕಟೇಶ್ವರನ ಸಮೇತನಾಗಿ ನೆಲೆಸಿರುವ ಒಂದು ಅಪರೂಪದ ಸ್ಥಳ ನಮ್ಮ ಕರ್ನಾಟಕದಲ್ಲಿ ಕಂಡುಬರುತ್ತದೆ. ಅದೆ ಕಲ್ಲೂರು ಶ್ರೀಕ್ಷೇತ್ರ. ಕಲ್ಲೂರು, ಕಲ್ಲೂರು ಮಹಾಲಕ್ಷ್ಮಿಯಿಂದಾಗಿಯೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿಯಾಗಿದೆ. ಈ ಲಕ್ಷ್ಮಿ ದೇವಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಾಕ್ಷಾತ್ ಅವತಾರವೆ ಆಗಿದ್ದಾಳೆ. ಸಾಣೆ ಕಲ್ಲಿನಲ್ಲಿ ಒಡಮೂಡಿದ ಲಕ್ಷ್ಮಿ ದೇವಿಯ ವಿಗ್ರಹವು ನೋಡಲು ಆಕರ್ಷಕವಾಗಿರುವುದಷ್ಟೆ ಅಲ್ಲದೆ ಅತ್ಯಂತ ಶಕ್ತಿಶಾಲಿಯೂ ಕೂಡ ಆಗಿದೆ. ಕಲ್ಲೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ರಾಯಚೂರು ನಗರದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಕಲ್ಲೂರು. ರಾಯರ ನೆಚ್ಚಿನ ದೇವ ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿಯಲ್ಲಿರುವ ಕೋಟಿಲಿಂಗೇಶ್ವರ ದೇವಾಲಯವು ಸಾಕಷ್ಟು ಗಮನಸೆಳೆವ ದೇವಾಲಯವಾಗಿದೆ. ಈ ದೇವಾಲಯದಾವರಣದಲ್ಲಿ ಎಲ್ಲಿ ನೋಡಿದರಲ್ಲಿ ಬರಿ ಶಿವಲಿಂಗಗಳೆ. ಬೆಂಗಳೂರಿನಿಂದ 65 ಕಿ.ಮೀ ದೂರವಿರುವ ಕೋಲಾರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಕಮ್ಮಸಂದ್ರದಿಂದ ಸುಮಾರು ಐದು ಕಿ.ಮೀ ದೂರದಲ್ಲಿ ಈ ದೇವಾಲಯವಿದ್ದು ಸಾಕಷ್ಟು ವಾಹನಗಳು ಕೋಲಾರ ನಗರಕೇಂದ್ರ ಹಾಗೂ ಕೋಲಾರ್ ಗೋಲ್ಡ್ ಫೀಲ್ಡ್ ನಿಂದ ದೊರೆಯುತ್ತವೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮವು ಲಿಂಗಾಯತ ಮತದವರ ಪಾಲಿಗೆ ಅದ್ವಿತೀಯ ತೀರ್ಥ ಕ್ಷೇತ್ರವಾಗಿದ್ದು, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಐಕ್ಯಗೊಂಡ ಪುಣ್ಯ ಸ್ಥಳವಾಗಿದೆ. ಮತ್ತೊಂದು ಪ್ರವಾಸಿ ಪ್ರಖ್ಯಾತಿಯ ತಾಣವಾದ ಆಲಮಟ್ಟಿ ಆಣೆಕಟ್ಟಿನಿಂದ ಸುಮಾರು 15 ಕಿ.ಮೀ ಗಳಷ್ಟು ದೂರವಿರುವ ಕೂಡಲಸಂಗಮವು ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದ ಸ್ಥಳವಾಗಿದೆ. ನಂತರದಲ್ಲಿ ಈ ಸಂಗಮದ ನದಿಯು ಮುಂದೆ ಆಂಧ್ರದ ಪುಣ್ಯ ಕ್ಷೇತ್ರವಾದ ಶ್ರೀಶೈಲಂ ಕಡೆಗೆ ಹರಿಯುತ್ತದೆ. ಸರ್ಪ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಪ್ರಖ್ಯಾತ ಸರ್ಪ ಕ್ಷೇತ್ರವಾದರೆ, ಘಾಟಿ ಸುಬ್ರಹ್ಮಣ್ಯವು ಬೆಂಗಳೂರಿಗೆ ಬಲು ಹತ್ತಿರದಲ್ಲಿರುವ ಸರ್ಪ ಕ್ಷೇತ್ರವಾಗಿದೆ. ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ 10 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರಗಳ ಪೈಕಿ ಒಂದಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಪ ದೋಷ ನಿವಾರಣೆಗೆಂದು, ಸುಬ್ರಹ್ಮಣ್ಯನ ದರುಶನ ಪಡೆಯಲೆಂದು ಸಾಕಷ್ಟು ಜನ ಭಕ್ತಾದಿಗಳು ನಿತ್ಯ ಭೇಟಿ ನೀಡುತ್ತಾರೆ. ಸುಬ್ರಹ್ಮಣ್ಯನನ್ನು ನಾಗನ ರೂಪದಲ್ಲಿ ಇಲ್ಲಿ ಆರಾಧಿಸಲಾಗುತ್ತದೆ. ಚಿತ್ರಕೃಪೆ: Rejenish ಸಾಲಿಗ್ರಾಮ ಗುರುನರಸಿಂಹ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವಿನ ಅವತಾರವಾದ ನರಸಿಂಹನನ್ನು ಕೂಟ ಬ್ರಾಹ್ಮಣರು ಗುರುವಾಗಿಯೂ, ಕುಲದೇವರಾಗಿಯೂ ಭಕ್ತಿಯಿಂದ ಪೂಜಿಸುತ್ತಾರೆ. ಈ ಸಮುದಾಯದವರ ಮುಖ್ಯ ಧಾರ್ಮಿಕ ಕ್ಷೇತ್ರವಾಗಿ ಸಾಲಿಗ್ರಾಮವು ಸಾಕಷ್ಟು ಮಹತ್ವ ಪಡೆದಿದೆ. ಸಾಲಿಗ್ರಾಮವು ತನ್ನಲ್ಲಿರುವ ಗುರು ನರಸಿಂಹ ದೇವಾಲಯದಿಂದಾಗಿಯೆ ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ಕ್ಷೇತ್ರವಾಗಿದೆ. ಮುಖ್ಯವಾಗಿ ಸಾಲಿಗ್ರಾಮದ ಕಲ್ಲಿನಲ್ಲಿ ನರಸಿಂಹನು ಎಡಗೈನಲ್ಲಿ ಶಂಖವನ್ನು ಅಲಗೈನಲ್ಲಿ ಹಾಗೂ ಚಕ್ರವನ್ನು ಹಿಡಿದು ಯೋಗ ಮುದ್ರೆಯಲ್ಲಿ ನಿಂತಿರುವುದು ವಿಶೇಷವಾಗಿದೆ. ಸಾಂದರ್ಭಿಕ ಚಿತ್ರ.
2021/06/13 19:49:15
https://kannada.nativeplanet.com/travel-guide/top-26-amazing-pilgrimage-sites-karnataka-000897.html
mC4
ಚಿನ್ನ ಕಳ್ಳಸಾಗಣೆ| ಮುಖ್ಯಮಂತ್ರಿ ಪಿಣರಾಯಿ ತಲೆದಂಡಕ್ಕೆ ಕಾಂಗ್ರೆಸ್ ಪಟ್ಟು; ದುಬೈಯಲ್ಲಿ ಫರೀದ್ ವಿಚಾರಣೆ , ಗಡೀಪಾರು ಸಾಧ್ಯತೆ - HosadiganthaWeb ಚಿನ್ನ ಕಳ್ಳಸಾಗಣೆ| ಮುಖ್ಯಮಂತ್ರಿ ಪಿಣರಾಯಿ ತಲೆದಂಡಕ್ಕೆ ಕಾಂಗ್ರೆಸ್ ಪಟ್ಟು; ದುಬೈಯಲ್ಲಿ ಫರೀದ್ ವಿಚಾರಣೆ , ಗಡೀಪಾರು ಸಾಧ್ಯತೆ ಹೊಸದಿಲ್ಲಿ/ದುಬೈ: ಕೇರಳದ ತಿರುವನಂತಪುರಂನಲ್ಲಿ ಇತ್ತೀಚೆಗೆ ಪತ್ತೆಯಾದ ಭಾರೀ ಚಿನ್ನ ಕಳ್ಳಸಾಗಣೆ ಪ್ರಕರಣದ ೩ನೇ ಪ್ರಮುಖ ಆರೋಪಿ, ಸದ್ಯ ದುಬೈಯಲ್ಲಿರುವ ಫೈಸಲ್ ಫರೀದ್‌ನನ್ನು ದುಬೈ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈತನನ್ನು ಭಾರತಕ್ಕೆ ಗಡೀಪಾರುಗೊಳಿಸುವ ಸಾಧ್ಯತೆ ಇದೆ.ಈತನನ್ನು ವಿಚಾರಣೆಗೊಳಪಡಿಸಲು ಭಾರತೀಯ ತನಿಖಾ ಸಂಸ್ಥೆಗಳು ಸಜ್ಜಾಗಿದ್ದು, ಉಭಯ ದೇಶಗಳ ನಡುವೆ ೧೯೯೯ರ ಗಡೀಪಾರು ಒಪ್ಪಂದ ಜಾರಿಯಲ್ಲಿರುವ ಕಾರಣ ಯುಎಇ ಈತನನ್ನು ಭಾರತಕ್ಕೆ ಗಡೀಪಾರುಗೊಳಿಸಬೇಕಾಗುತ್ತದೆ. ಈಗಾಗಲೇ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಈತನ ಬಂಧನಕ್ಕೆ ವಾರಂಟ್ ಹೊರಡಿಸಿದೆ. ಈ ನಡುವೆ ಕೇರಳದಲ್ಲಿ ಪ್ರತಿಪಕ್ಷಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ದುಬೈಯಿಂದ ಈತನೇ ಕೇರಳಕ್ಕೆ ಚಿನ್ನ ಕಳುಹಿಸಿದ್ದು, ೧೪.೮ಕೋ.ರೂ.ಮೌಲ್ಯದ ೩೧ಕಿಲೋ ಚಿನ್ನವನ್ನು ಯುಎಇ ಕಾನ್ಸುಲೇಟ್ ಜನರಲ್ ಮೂಲಕ ಕಳುಹಿಸಲಾಗಿದೆ.ಅಲ್ಲಿ ಈತನಿಗೀಗ ಪ್ರಯಾಣ ನಿರ್ಬಂಧಗಳನ್ನು ವಿಸಲಾಗಿದೆ.ಈತನ ಪಾಸ್‌ಪೋರ್ಟನ್ನು ಹಿಂಪಡೆಯಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳು ತಿಳಿಸಿವೆ. ಚಿನ್ನದ ಪಾರ್ಸೆಲ್‌ನಲ್ಲಿ ಈತನ ದುಬೈ ವಿಳಾಸ ನೀಡಲಾಗಿದ್ದು, ವಿಲ್ಲಾ ನಂ.೫, ಅಲ್ ರಶೀದಿಯಾ, ದುಬೈ ಎಂದು ನಮೂದಿಸಲಾಗಿದೆ.ಫೈಸಲ್ ತನ್ನ ಕುಟುಂಬದೊಂದಿಗೆ ಅಲ್ಲಿ ವಾಸವಾಗಿದ್ದಾನೆ. ಪಿಣರಾಯಿ ರಾಜೀನಾಮೆಗೆ ಚೆನ್ನಿತ್ತಲ ಪಟ್ಟು ಭಾರೀ ಪ್ರಮಾಣದ ಚಿನ್ನ ಕಳ್ಳಸಾಗಣೆ ಕೇಸಿಗೆ ಸಂಬಂಧಿಸಿ ತನ್ನ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ.ಅರು ರಾಜೀನಾಮೆ ನೀಡಲೇಬೇಕು ಎಂದು ಕೇರಳ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆಗ್ರಹಿಸಿದ್ದಾರೆ. ಈಗಾಗಲೇ ವಿಪಕ್ಷ ಕಾಂಗ್ರೆಸ್ ಶಾಸಕ ವಿ.ಡಿ.ಸತೀಶನ್ ಅವರು ಎಡರಂಗ ಸರಕಾರದ ವಿರುದ್ಧ 'ಅವಿಶ್ವಾಸ ಗೊತ್ತುವಳಿ'ನೋಟಿಸ್ ನೀಡಿದ್ದಾರೆ .ಇದು ಜು.೨೭ಕ್ಕೆ ಹಣಕಾಸು ಮಸೂದೆಯನ್ನು ಕೈಗೆತ್ತಿಕೊಳ್ಳಲಿರುವ ಕೇರಳ ವಿಧಾನಸಭಾ ಅವೇಶನದಲ್ಲಿ ಮಂಡನೆಯಾಗಲಿದೆ.ಆದರೆ ವಿಪಕ್ಷ ಕಡೆಯಲ್ಲಿ ೪ ೩ಸದಸ್ಯರಿದ್ದರೆ ಆಳುವ ಕೂಟದಲ್ಲಿ ೯೧ ಮಂದಿ ಇರುವ ಕಾರಣ ತಕ್ಷಣಕ್ಕೆ ಈ ಮಂಡನೆ ಪಿಣರಾಯಿ ಸರಕಾರಕ್ಕೆ ಅಪಾಯ ತರದು. ಆದರೆ ಸರಕಾರದ ವಿಶ್ವಾಸಾರ್ಹತೆ ಬಗ್ಗೆ ರಾಜ್ಯದ ಜನತೆಗೆ ಪ್ರಶ್ನೆ ಮಾಡಲು ಎಡೆ ಮಾಡಿಕೊಡಲಿದೆ. ಹಲವು ಹಗರಣಗಳು ಕೇರಳದ ಆಳುವ ಕಮ್ಯುನಿಸ್ಟ್ ಸರಕಾರವು ಸ್ಪ್ರಿಂಕ್ಲರ್ ವ್ಯವಹಾರ, ಪಂಪಾದಿಂದ ಮರಳು ತೆಗೆಯುವ ವಿವಾದ, ಜರ್ಮನ್ ಕಂಪೆನಿಯೊಂದರ ಜೊತೆಗಿನ ಬೆವ್ಕೋ ಆಪ್ ವಿವಾದ ಸೇರಿದಂತೆ ಹಲವು ಹಗರಣಗಳ ಸುಳಿಯಲ್ಲಿ ಸಿಲುಕಿದ್ದು, ಇವು ಮುಖ್ಯಮಂತ್ರಿ ಪಿಣರಾಯಿ ಕಚೇರಿಯನ್ನೇ ಸುತ್ತಿಕೊಂಡಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಉನ್ನತ ಶಿಕ್ಷಣ ಸಚಿವನಿಗೆ ಗಿಫ್ಟ್ ! ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಈಗಾಗಲೇ ಯುಎಇ ಕಾನ್ಸುಲೇಟ್‌ನಿಂದ 'ಗಿಫ್ಟ್' ಸ್ವೀಕರಿಸಿದ್ದನ್ನು ಒಪ್ಪಿಕೊಳ್ಳಬೇಕಾಗಿ ಬಂದಿದ್ದು, ಇದನ್ನು ಕೇಂದ್ರದ ಅನುಮತಿಯಿಲ್ಲದೆಯೇ ರಮ್ಜಾನ್ ಕಿಟ್‌ಗಳ ರೂಪದಲ್ಲಿ ಸ್ವೀಕರಿಸಲಾಗಿತ್ತು.ಆದರೆ ಸಚಿವ ಜಲೀಲ್ ಮತ್ತು ಅವರ ಕಚೇರಿ ಸಿಬ್ಬಂದಿ ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವ ಗಂಭೀರ ಆರೋಪಕ್ಕೆ ಈಡಾಗಿರುವುದು ಕೇರಳದಲ್ಲೀಗ ಜನರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಉನ್ನತ ಶಿಕ್ಷಣ ಸಚಿವ ಕಳ್ಳಸಾಗಣೆಯಂತಹ ಗಂಭೀರ ಪ್ರಕರಣದ ನಂಟು ಹೊಂದಿರುವುದು ಕೇರಳದ ಪ್ರಜ್ಞಾವಂತರಲ್ಲಿ ಆಘಾತ ಮೂಡಿಸಿದೆ. ಎಡರಂಗ ಸರಕಾರದಲ್ಲಿ ಸಿಎಂ ಪಿಎ ಅಮಾನತಾದ ೬ನೇ ಅಧಿಕಾರಿ ಚಿನ್ನಕಳ್ಳಸಾಗಣೆ ಪ್ರಕರಣದಲ್ಲಿ ನಂಟು ಹೊಂದಿರುವ , ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಎಡರಂಗ ಸರಕಾರದ ಅವಯಲ್ಲಿ ಅಮಾನತುಗೊಂಡ ೬ನೇ ಪ್ರಮುಖ ಅಧಿಕಾರಿಯಾಗಿರುವುದು ಪಿಣರಾಯಿ ಸರಕಾರದ ವಿಶ್ವಾಸಾರ್ಹತೆಯತ್ತ ಬೆರಳು ಮಾಡುವಂತೆ ಮಾಡಿದೆ.ಈಗಾಗಲೇ ಬೇರೆ ಬೇರೆ ಪ್ರಕರಣಗಳಲ್ಲಿ ಮೂವರು ಐಎಎಸ್ ಮತ್ತು ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗಿ ಬಂದಿದೆ.
2022/06/26 02:32:29
https://hosadigantha.com/%E0%B2%9A%E0%B2%BF%E0%B2%A8%E0%B3%8D%E0%B2%A8-%E0%B2%95%E0%B2%B3%E0%B3%8D%E0%B2%B3%E0%B2%B8%E0%B2%BE%E0%B2%97%E0%B2%A3%E0%B3%86-%E0%B2%AE%E0%B3%81%E0%B2%96%E0%B3%8D%E0%B2%AF%E0%B2%AE%E0%B2%82/
mC4
ನಾಳೆ ರಾತ್ರಿಯಿಂದ 15 ದಿನಗಳ ಸಂಪೂರ್ಣ ಲಾಕ್ ಡೌನ್ | themangaloremirror.in ಬೆಂಗಳೂರು, ಎಪ್ರಿಲ್ 26 : ನಾಳೆ ರಾತ್ರಿಯಿಂದ 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಸಿದ್ದಾರೆ. ಇಂದಿನ ಕೊರೋನಾ ನಿಯಂತ್ರಣ ಸಂಬಂಧ ನಡೆದಂತ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಮಂತ್ರಿ ಮಂಡಲದ ಸಭೆಯ ನಂತರ, ಈ ಕೋವಿಡ್ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಹಾರಾಷ್ಟ್ರ ಮೀರಿಸಿ, ಬೆಂಗಳೂರು ಸುತ್ತಾ ಮುತ್ತಾ ಹೆಚ್ಚು ಹರಡುತ್ತಿದೆ. ಹೀಗಾಗಿ ಸಚಿವ ಸಂಪುಟ ಸದಸ್ಯರು, ತಜ್ಞರ ಜೊತೆಗೆ ಚರ್ಚಿಸಿ, ಕೆಲವು ನಿರ್ಧಾರಕ್ಕೆ ಬಂದಿದ್ದೇವೆ. ಮೊದಲನೆಯದು ಸರ್ಕಾರಿ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಈ ಬಗ್ಗೆ ರೂಪುರೇಷೆಗಳನ್ನು ಆರೋಗ್ಯ ಇಲಾಖೆ ಪ್ರಕಟಿಸಲಿದೆ. ಈ ಕೋವಿಡ್ ತಡೆಯೋದಕ್ಕೆ ಬಿಗಿ ಕ್ರಮವಾಗಿ ನಾಳೆ ರಾತ್ರಿಯಿಂದ 14 ದಿನ ಬಿಗಿ ಕ್ರಮ ಜಾರಿಯಲ್ಲಿರುತ್ತದೆ. ಇದು ರಾಜ್ಯಾಧ್ಯಂತ ಜಾರಿಯಲ್ಲಿ ಇರಲಿದೆ ಎಂದರು. ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯ ನಂತ್ರ ಎಲ್ಲವೂ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ ಎಂದರು. ಗಾರ್ಮೆಂಟ್ಸ್ ನೌಕರರನ್ನು ಬಿಟ್ಟು, ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಿಲ್ಲ. ವೈದ್ಯಕೀಯ, ಅಗತ್ಯ ಸೇವೆ ಎಂದಿನಂತೆ ಇರಲಿದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ರವೆರೆಗ ಕರ್ಪ್ಯೂ ಮುಂದುವರೆಯಲಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಬಂದೋಬಸ್ತ್ ಮಾಡಲಿದ್ದಾರೆ. ತಾಲೂಕು ಆಡಳಿತ ಕೂಡ ನಿಯಂತ್ರಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. Related Topics:BJPBS YadiyurappaCMcoronaCoviddistrict collectorkarnatakalockdownyadiyurappaಕರ್ನಾಟಕಕರ್ನಾಟಕ ಬಿಜೆಪಿಕೊರೊನಕೋವಿಡ್ಕೋವಿಡ್ 19ಜಿಲ್ಲಾಧಿಕಾರಿಯಡಿಯೂರಪ್ಪಲಾಕ್ ಡೌನ್ಸಿ ಎಂ
2021/05/09 22:42:10
https://themangaloremirror.in/14-days-full-lockdown-from-tomorrow-night/
mC4
ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಕಲ್ಪಿಸಲು ತಾಕೀತು - Mysuru Mithra Tuesday 7 December 2021 , 2:55 pm Home » ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಕಲ್ಪಿಸಲು ತಾಕೀತು ಗುಂಡ್ಲುಪೇಟೆ: ಪ್ರಯಾಣಿಕರಿಗೆ ಮೂಲಸೌಕರ್ಯವನ್ನು ಒದಗಿಸುವಂತೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾ ಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಬಸ್ ನಿಲ್ದಾಣದಲ್ಲಿ ಹರಿಯುತ್ತಿದ್ದ ಕೊಳಚೆ ನೀರನ್ನು ಮತ್ತು ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ ಪ್ರಯಾಣಿಕರಿಗೆ ಮೂಲಸೌಕರ್ಯವನ್ನು ಒದಗಿಸುವುದು ಇಲಾಖೆಯ ಮೊದಲ ಕರ್ತವ್ಯ. ಇದನ್ನು ಅರಿತು ಕ್ರಮವಹಿಸಿ ಎಂದು ಡಿಪೋ ವ್ಯವಸ್ಥಾಪಕ ಜಿ.ಎಂ.ಜಯಕುಮಾರ್ ಅವರಿಗೆ ತಾಕೀತು ಮಾಡಿದರು. ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯದ ಬಗ್ಗೆ ಹಲವು ದೂರುಳಿದ್ದು, ಸಮರ್ಪಕವಾಗಿ ಸ್ವಚ್ಛತಾ ಕಾರ್ಯಗಳು ನಡೆಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಮತ್ತು ಕಸ ನಿರ್ವಹಣೆ ಸಮರ್ಪಕವಾಗಿಲ್ಲ. ಸಾರಿಗೆ ನಿಲ್ದಾಣ ಒಳಭಾಗ ದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ಹರಿಯುತ್ತಿರುವುದು ಸೇರಿದಂತೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಳಚೆ ನೀರು ಬಸ್‍ನಿಲ್ದಾಣದ ದ್ವಾರದಲ್ಲಿಯೇ ಹರಿಯುತ್ತಿರುವುದರಿಂದ ಬಸ್ ನಿಲ್ದಾಣದ ಒಳಗೆ ಪ್ರವೇಶಿಸುವ ಮತ್ತು ಬಸ್‍ಗಾಗಿ ಕಾಯುವ ಪ್ರಯಾಣಿಕರಿಗೆ ತೊಂದ ರೆಯಾಗುತ್ತಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಮೂಲಸೌಕರ್ಯ ಕಲ್ಪಿಸಿ ಎಂದು ಶಾಸಕ ನಿರಂಜನ ಕುಮಾರ್ ಅಧಿಕಾರಿಗಳಿಗೆ ಒಂದು ವಾರಗಳ ಕಾಲ ಗಡುವು ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಹುಂಡಿ ಜಗದೀಶ್, ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಮುಖಂಡರಾದ ಗೋವಿಂದಸ್ವಾಮಿ, ಎಸ್.ಸಿ.ಮಂಜುನಾಥ್, ಸತೀಶ್ ಇತರರು ಇದ್ದರು.
2021/12/07 09:25:33
https://mysurumithra.com/instruction-to-provide-infrastructure-at-the-bus-stop/
mC4
ಒಂದಲ್ಲ ಎರಡಲ್ಲ ಮೂರು ಬಾರಿ ಕೊರೊನಾ ಗೆದ್ದ ಪತ್ರಕರ್ತ ಗೆಳೆಯನ ಪಾಸಿಟಿವ್ ಮಾತು | a positive story of my journalist friend who won the battle against coronavirus 3 times - Kannada Oneindia ಒಂದಲ್ಲ ಎರಡಲ್ಲ ಮೂರು ಬಾರಿ ಕೊರೊನಾ ಗೆದ್ದ ಪತ್ರಕರ್ತ ಗೆಳೆಯನ ಪಾಸಿಟಿವ್ ಮಾತು | Updated: Monday, May 31, 2021, 11:41 [IST] ಕಳೆದ ವರ್ಷದ ಆರಂಭದಲ್ಲಿ ಮೊದಲ ಬಾರಿಗೆ ಕಿವಿಗೆ ಬಿದ್ದಿತ್ತು ಕೊರೊನಾ ವೈರಸ್ ಎಂಬ ಅದೃಶ್ಯ ಶತ್ರುವಿನ ಹೆಸರು. ಆರಂಭದಲ್ಲಿ ಅಲ್ಲೆಲ್ಲೋ ಚೀನಾದಲ್ಲಿ ಎಂದು ವರದಿಯಾಗುತ್ತಿದ್ದರೆ ಕೇವಲ ಒಂದು ಸುದ್ದಯೆಂಬಂತೆ ಪ್ರತಿಕ್ರಿಯೆಗಳು ನಮ್ಮದಾಗಿರುತ್ತು. ಆದರೆ ಆ ಕಣ್ಣಿಗೆ ಕಾಣದ ಶತ್ರು ಪಕ್ಕಕ್ಕೆ ಬಂದು ನಿಲ್ಲಲು ಹೆಚ್ಚು ಸಮಯವೇ ತೆಗೆದುಕೊಳ್ಳಲಿಲ್ಲ. ಅಲ್ಲೊಂದು ಇಲ್ಲೊಂದು ಬೆಳಕಿಗೆ ಬರುತ್ತಿದ್ದ ಪ್ರಕರಣಗಳು ಊಹೆಗೂ ಮೀರಿ ಹರಡಿ ಬಿಟ್ಟಿತ್ತು. ಒಂದಲ್ಲ,ಎರಡಲ್ಲ ಮೂರು ಬಾರಿ ಕೊರೊನಾ ಬಂದ್ರೂ ಗೆದ್ದು ಬಂದಿದ್ದು ಹೇಗೆ | Oneindia Kannada ಈಗ ಈ ವೈರಸ್ ನಮ್ಮನ್ನು ಕಾಡಲು ಆರಂಭಿಸಿ ಒಂದು ವರ್ಷ ಕಳೆದಿದೆ. ಹಲವಾರು ಜನರು ಈ ವೈರಸ್‌ಗೆ ನಲುಗಿದ್ದಾರೆ. ಕೆಲವರಿಗೆ ಏನೂ ಆಗಿಲ್ಲವೆಂಬಂತೆ ಬಂದು ಹೋಗಿದ್ದರೆ ಇನ್ನೂ ಕೆಲವರಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಈ ಮಧ್ಯೆ ನನ್ನ ಗೆಳೆಯನೊಬ್ಬ ಒಂದಲ್ಲ ಎರಡಲ್ಲ ಮೂರು ಬಾರಿ ಕೊರೊನಾ ವೈರಸ್‌ಗೆ ತುತ್ತಾಗಿ ಗೆದ್ದು ಬಂದಿದ್ದಾನೆ. ಆತ ಪತ್ರಕರ್ತ. ರಾಜ್ಯದ ಖ್ಯಾತ ಖಾಸಗಿ ವಾಹಿನಿಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಕೊರೊನಾ ವೈರಸ್‌ನ ಸಂದರ್ಭದಲ್ಲಿ ವರದಿಗಾರಿಕೆಯ ಪಾಡು ಸಂಕಷ್ಟ ಅನುಭವಿಸಿದವರಿಗೆ ಅರ್ಥವಾಗಲು ಸಾಧ್ಯ. ಇಂಥ ಸ್ಥಿತಿಯಲ್ಲಿ ರ್‍ಯಾಂಡಮ್ ಟೆಸ್ಟ್‌ಗೆ ಒಳಗಾಗಿದ್ದ ಈ ನನ್ನ ಗೆಳೆಯನಿಗೆ ಮೊದಲ ಬಾರಿ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಯಾವುದೇ ಲಕ್ಷಣಗಳು ಇಲ್ಲದಿದ್ದರೂ ನಿಯಮದಂತೆಯೇ 14 ದಿನಗಳ ಕ್ವಾರಂಟೈನ್ ಪೂರೈಸಿ ನೆಗೆಟಿವ್ ವರದಿಯೊಂದಿಗೆ ಮತ್ತೆ ತನ್ನ ಕರ್ತವ್ಯದಲ್ಲಿ ಮಗ್ನನಾಗಿದ್ದ. ಒಂದೂವರೆ ತಿಂಗಳ ನಂತರ ಮತ್ತೆ ಜ್ವರ, ಮತ್ತೆ ಪಾಸಿಟಿವ್ ಇದಾಗಿ ಒಂದೂವರೆ ತಿಂಗಳಾಗಿತ್ತಷ್ಟೆ. ರಾತ್ರಿ ಹೆಚ್ಚೇ ಸುಸ್ತಿನ ಅನುಭವವಿದ್ದ ಗೆಳೆಯನಿಗೆ ಮರುದಿನ ಬೆಳಗ್ಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಪರೀಕ್ಷೆಗೆ ಒಳಗಾಗಿದ್ದ. ವರದಿಗಳು ಬರುವುದರ ಒಳಗಾಗಿ ವೈರಸ್‌ನ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಮೊದಲ ಬಾರಿ ಶಾಂತವಾಗಿದ್ದ ಕೊರೊನಾ ವೈರಸ್ ಆತನನ್ನು ಹೆಚ್ಚೇ ಕಾಡಿತ್ತು. ಆದರೆ ಮನೆಯಲ್ಲಿಯೇ ಇದ್ದು ಚಿಕಿತ್ಸೆಯನ್ನು ಪಡೆದುಕೊಂಡಿದ್ದ. ವೈದ್ಯ ಗೆಳೆಯನ ಸಹಾಯ ಸಿಕ್ಕಿದ್ದು ಆತನಿಗೆ ದೊಡ್ಡ ಸಹಕಾರಿಯಾಗಿತ್ತು. ಕೆಲ ದಿನಗಳ ಜ್ವರ, ಮೈಕೈ ನೋವುಗಳಂತಾ ಅನುಭವಗಳೊಂದಿಗೆ ಜ್ವರ ಶಾಂತವಾಗಿತ್ತು. ಕೊರೊನಾ ಹಿಮ್ಮೆಟ್ಟಿತ್ತು. ಎರಡನೇ ಅಲೆಯಲ್ಲಿ ಮತ್ತೊಮ್ಮೆ ಬಂದ ಬೇಡದ ಗೆಳೆಯ ಮೊದಲ ಅಲೆಯಲ್ಲಿ ಎರಡು ಬಾರಿ ಕೊರೊನಾ ವೈರಸ್‌ನ ಭಿನ್ನ ಅನುಭವಗಳನ್ನು ಪಡೆದಿದ್ದ ಗೆಳೆಯನಿಗೆ ಎರಡನೇ ಅಲೆಯಲ್ಲಿಯೂ ಕಾಡಿತ್ತು. ಮೇ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡ ಜ್ವರ ಮತ್ತೆ ಕೊರೊನಾ ವೈರಸ್ ಎಂದು ಸ್ವತಃ ಗೆಳೆಯನಿಗೆ ಆರಂಭದಲ್ಲೇ ಅನುಭವಕ್ಕೆ ಬಂದಿತ್ತು. ಪರೀಕ್ಷೆಯಲ್ಲಿಯೂ ಅದು ದೃಢವಾಗಿತ್ತು. ಮೊದಲ ಎರಡು ಬಾರಿಯ ಅನುಭವಕ್ಕಿಂತಲೂ ಇದು ಕಠಿಣವಾಗಿತ್ತು. ಆದರೆ ಈ ಬಾರಿಯೂ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ನಿರ್ಧರಿಸಿದ್ದ. ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಂಡಿದ್ದ. ಆದರೆ ಈ ಬಾರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆತಂಕ, ದುಗುಡಗಳು ಕಾಡಲು ಆರಂಭಿಸಿದ್ದರೂ ಆತ್ಮಸ್ಥೈರ್ಯ ಗಟ್ಟಿಯಾಗಿತ್ತು. ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಸೂಕ್ತ ಸಂದರ್ಭದಲ್ಲಿ ದೊರೆತಿದ್ದ ಕಾರಣ ಈ ಬಾರಿಯೂ ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿದಿತ್ತು. ಎರಡು ವಾರಗಳ ಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖನಾಗಿದ್ದ. ಉತ್ತಮ ಆಹಾರ, ಸಮಯಕ್ಕೆ ಸರಿಯಾಗಿ ಔಷಧಿ ಮೂರು ಬಾರಿಯೂ ಆಸ್ಪತ್ರೆಗೆ ಹೋಗದೆ ಚಿಕಿತ್ಸೆಯನ್ನು ಪಡೆದು ಹಿಮ್ಮೆಟ್ಟಿಸಿದ್ದಾನೆ ನನ್ನ ಮಿತ್ರ. ಮೊದಲ ಬಾರಿಗೆ ಲಕ್ಷಣಗಳು ಇಲ್ಲದೆ ಇದ್ದರೂ ಮತ್ತೆರಡು ಬಾರಿ ಅಕ್ಷರಶಃ ಆತನನ್ನು ಆತಂಕಕ್ಕೆ ಮೂಡಿಸಿತ್ತು. ಆದರೆ ಧೈರ್ಯದಿಂದ ಹಿಮ್ಮೆಟ್ಟಿಸಿದ್ದ. ಔಷಧಿಗಳ ಜೊತೆಗೆ ಪೌಷ್ಟಿಕ ಆಹಾರ ಸೇವಿಸುವಂತೆ ವೈದ್ಯರೊಬ್ಬರು ನೀಡಿದ್ದ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ್ದ. ಡ್ರೈ ಫ್ರೂಟ್ಸ್, ಮಾಂಸಾಹಾರವನ್ನು ಹೆಚ್ಚಾಗಿ ಸೇವಿಸುತ್ತಾ ದೇಹಕ್ಕೆ ಪೌಷ್ಟಿಕಾಂಶಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದ. ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಸಿನಿಮಾ, ಪುಸ್ತಕಗಳ ಒಡನಾಟ ಹೆಚ್ಚಿಸಿಕೊಂಡ. ಜೊತೆಗೆ ಬರಹಗಾರನೂ ಆಗಿರುವ ಆತನಿಗೆ ಈ ಸಂದರ್ಭ ಒಂದು ಕಾದಂಬರಿಯನ್ನು ಬರೆಯಲು ಪ್ರೇರೇಪಿಸಿದೆ ಎನ್ನುತ್ತಾನೆ. ಧೈರ್ಯವೇ ಅಸ್ತ್ರ ಸಣ್ಣ ಪ್ರಮಾಣದ ಅಸ್ತಮಾ ಸಮಸ್ಯೆ ಇರುವ ಮಧ್ಯೆಯೂ ಆಮ್ಲಜನಕದ ಮಟ್ಟ 85ಕ್ಕಿಂತ ಕಡಿಮೆಯಾದಾಗ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ನೆರವಾಗಿದ್ದು ವೈದ್ಯಕೀಯ ನೆರವುಗಳು ಮಾತ್ರವಲ್ಲ. ಆತನ ಮಾನಸಿಕ ಸಿದ್ಧತೆ. ಹೀಗಾಗಿ ಕೊರೊನಾ ವೈರಸ್ ತಗುಲಿತೆಂದರೆ ಆತಂಕಕ್ಕೆ ಒಳಗಾಗಿ ಮತ್ತಷ್ಟು ಸಮಸ್ಯೆಗೆ ಒಳಗಾಗುವ ಬದಲು ಅದನ್ನು ಹಿನ್ನೆಟ್ಟಿಸಲು ಬೇಕಾಗುವ ಧೈರ್ಯವನ್ನು ನಾವೇ ಪಡೆದುಕೊಳ್ಳಬೇಕಿದೆ. stories of strength coronavirus life after corona karnataka success feature ವೈರಸ್ ಕೊರೊನಾ ನಂತರದ ಬದುಕು ಕರ್ನಾಟಕ
2021/06/21 21:36:56
https://kannada.oneindia.com/features/positive-story-of-my-journalist-friend-who-won-the-battle-against-coronavirus-3-times-223756.html
mC4
ಟ್ಯಾಗ್‌ಗಳು: :: ರತೀಶ ರತ್ನಾಕರ ::, Africa, agriculture, coffee, Coffee Beans, Coffee Cultivation, coffeeae, crop, Ethiopia, farming, Goats, Karnataka, nursery, Organic, Rubiaceae, ಆಪ್ರಿಕಾ, ಇಳುವರಿ, ಕರ‍್ನಾಟಕ, ಕಾಪಿ, ಕಾಪಿ ಬೆಳೆ, ಕಾಪಿಯೇಯ್, ಕೊಡಗು, ಕ್ಯಾಲ್ಶಿಯಂ, ಕ್ರುಶಿ, ಚಿಕ್ಕಮಗಳೂರು, ತೋಟಗಾರಿಕೆ, ನೈಟ್ರೋಜನ್, ಬೆಳೆ, ಬೇಸಾಯ, ಮೆಗ್ನೇಶಿಯಂ, ರುಬಿಯೇಸಿಯಯ್, ರೈತ, ಹಾಸನ
2021/04/13 09:56:48
https://honalu.net/2014/08/13/%E0%B2%95%E0%B2%BE%E0%B2%AA%E0%B2%BF-%E0%B2%AC%E0%B3%86%E0%B2%B3%E0%B3%86-%E0%B2%B9%E0%B3%81%E0%B2%9F%E0%B3%8D%E0%B2%9F%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%B9%E0%B2%B0/
mC4
ಗೆಣಸ್ಲೆ: February 2015 ಮಲಬಾರ ಮಹಾರಾಜ ಮೆಕ್ಕಾಕ್ಕೆ ಹೋಗಿ ಮಾಡಿದ್ದೇನು? ಕಾಸರಗೋಡಿನ ತಳಂಗರದ ಮಲಿಕ್ ದಿನಾರ್ ಮಸೀದಿ ನೋಡಲೇ ಬೇಕೆಂಬ ಆಸೆಯಿಂದ ಕಳೆದ ವಾರ ಕೇರಳದ ಕಾಸರಗೋಡಿನ ತಳಂಗರದ ಮಲಿಕ್ ದಿನಾರ್ ಮಸೀದಿಗೆ ಭೇಟಿ ಕೊಟ್ಟಿದ್ದೆ. ತುಂಬ ದಿನಗಳಿಂದ ಹೋಗಲೇ ಬೇಕೆಂದುಕೊಂಡ ಸ್ಥಳವದು. ಭಾಷೆ ಹೇಗೋ ಮ್ಯಾನೇಜ್ ಮಾಡಬಹುದಾಗಿತ್ತಾದರೂ ಜೊತೆಯಲ್ಲಾರೂ ಇದ್ದಿರಲಿಲ್ಲ. ಕಾಸರಗೋಡು ಹೇಳಿಕೇಳಿ ಮತೀಯ ಗಲಭೆಗೆ ಹೆಸರುವಾಸಿ. ಅಲ್ಲದೇ ಸಣ್ಣಗೆ ಗಲಾಟೆಯೂ ನಡೆಯುತ್ತಿದ್ದ ಸಮಯ. ಅಂಥಹುದರಲ್ಲಿ ಮಸೀದಿಯ ಒಳಹೊಕ್ಕು ಅರ್ಧಂಬರ್ಧ ಮಲಯಾಳದಲ್ಲಿ ಅಲ್ಲಿದ್ದವರನ್ನು ಮಾತನಾಡಿಸಿ ಬಂದ ನನ್ನ ಧೈರ್ಯದ ಬಗ್ಗೆ ನನಗೇ ಆಶ್ಚರ್ಯವಿದೆ. ತಿರುಗಿ ಬರುವಾಗ ನನಗೆ ಗಾಢವಾಗಿ ನೆನಪಾಗಿದ್ದು ಕೊಡಂಗಾಲೂರು....... ಅದು ಕೇರಳ ದೇಶದ ರಾಜ್ಯಗಳ ರಾಜಧಾನಿಯಾಗಿ ಒಂದಾನೊಂದು ಕಾಲದಲ್ಲಿ ಮೆರೆದ ಊರು. ಅಲ್ಲಿನ ಸುಂದರ ಹಿನ್ನೀರು, ಕಣ್ಣಗಿ ಮುಕ್ತಿ ಪಡೆದ ಸ್ಥಳವಾದ ಕೊಡಂಗಾಲೂರ್ ಭಗವತಿ ಆಲಯ, ತಿರುವಂಚಿಕುಲಮ್ ಮಹಾದೇವ ಸೇರಿ ಹತ್ತು ಹಲವು ಹಳೆಯ ದೇವಸ್ಥಾನಗಳು, ಭರಣಿ ಜಾತ್ರೆ.... ಅಷ್ಟಾಗಿದ್ದರೆ ಹೇಳಲೇನೂ ವಿಶೇಷವಿರುತ್ತಿರಲಿಲ್ಲ. ಆದರೆ ಇದು ಇನ್ನೂ ಒಂದು ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಭಾರತದ ನೆಲದಲ್ಲಿ ಪ್ರಪ್ರಥಮ ಮಸೀದಿ ಸ್ಥಾಪನೆಯಾದದ್ದು ಇಲ್ಲೇ. ಇದ್ದ ಕಥೆಯನ್ನೇ ನಂಬುವುದಾದರೆ ಕೇರಳದಲ್ಲಿ ಆದಿ ಶಂಕರರು ಹುಟ್ಟುವ ಮೊದಲು(ಶೃಂಗೇರಿ ಮಠದ ದಾಖಲೆಯಲ್ಲಿರುವ ಆದಿಶಂಕರರು), ಭಾರತಕ್ಕೆ ಹ್ಯುಯಾನ್‌ತ್ಸಾಂಗ್ ಬರುವ ಕಾಲದಲ್ಲೇ ಇಲ್ಲಿ ಇಸ್ಲಾಂ ನೆಲೆಯೂರಿ ಒಂದು ಮಸೀದಿಯೂ ಕಟ್ಟಲ್ಪಟ್ಟಿತ್ತು. ಇರಾಕ್, ಇರಾನ್, ಇಜಿಪ್ಟ್, ಟ್ಯುನೇಶಿಯಾಗಳಲ್ಲಿ ಇಸ್ಲಾಮ್ ಕಾಲಿಡುವ ಮೊದಲೇ ಈ ಮಸೀದಿ ನಿರ್ಮಾಣವಾಗಿತ್ತು. ಅರಬ್ಬಿನಿಂದ ದೂರದೂರದಲ್ಲೆಲ್ಲೋ ಇರುವ ಕೇರಳದ ಮೂಲೆಯೊಂದರಲ್ಲಿ ಆ ಮಸೀದಿ ತಲೆ ಎತ್ತಿದ್ದರ ಹಿಂದೆ ಒಂದು ಇಂಟರೆಸ್ಟಿಂಗ್ ಘಟನೆಯಿದೆ. ಹಾಗೆಂದು ಅವತ್ತಿನ ಇಸ್ಲಾಮಿನ ಪ್ರಸಾರವೇನೂ ನಾವಂದುಕೊಂಡಂತೆ ಖಡ್ಗದ ಬಲದಿಂದಾಗಿರಲಿಲ್ಲ. ಇಸ್ಲಾಮಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಅರಸನೊಬ್ಬನ ಉನ್ಮತ್ತ ಭಕ್ತಿಯ ಬಲದಿಂದ. ಕೊಡಂಗಾಲೂರಿನ ಚೇರಮನ್ ಮಸೀದಿ ಆಗಿನ ಕಾಲದಲ್ಲಿ ಕೇರಳವನ್ನಾಳುತ್ತಿದ್ದ ಚೇರ ರಾಜ್ಯದ ಕೊನೆಯ ಅರಸ ಚೇರಮನ್ ಪೆರುಮಾಳ್, ಮೊಹಮ್ಮದ ಪೈಗಂಬರರ ಪವಾಡವೊಂದಕ್ಕೆ ಮನಸೋತು ಮೆಕ್ಕಾಗೆ ಪ್ರಯಾಣ ಬೆಳೆಸಿ ಪೈಗಂಬರರಿಂದಲೇ ಇಸ್ಲಾಮ್ ಸ್ವೀಕರಿಸಿ ಭಾರತದಲ್ಲಿ ಮೊತ್ತಮೊದಲು ಇಸ್ಲಾಮಿನ ಪ್ರಸಾರಕ್ಕೆ ಕಾರಣನಾದ. ಇದು ಸತ್ಯವೇ? ಗೊತ್ತಿಲ್ಲ. ಅಥವಾ ಸುಳ್ಳೇ? ಹೇಳಲಾಗದು. ಈ ಕಥೆಯಂತೂ ಕೇರಳದ ಮುಸ್ಲೀಮರಲ್ಲಿ ಮನೆಮಾತು. ಲೆಕ್ಕವಿಲ್ಲದಷ್ಟು ಬಾರಿ ಇದೇ ಕಥೆ ಅವರ ಪುಸ್ತಕಗಳಲ್ಲಿ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡಿದೆ. ಕೇರಳೋತ್ಪತ್ತಿ ಮಾರ್ತಾಂಡದ ಗುಂಡರ್ಟ್‌ನ ಭಾಷಾಂತರ, ಲೋಗನ್ನಿನ ಮಲಬಾರ್ ಮ್ಯಾನುವೆಲ್, ಟ್ರಾವೆಂಕೋರ್ ಮ್ಯಾನುವೆಲ್ಲುಗಳ ಹಲವು ಆವೃತ್ತಿಗಳಲ್ಲಿನ ವಿವಾದಿತ 'ಮಿಥ್'ಗಳಷ್ಟೇ ನಮಗಿಂದು ಸಿಗುವ ಆಧಾರಗಳು. ಹಾಗೆಂದು ಕೇರಳದವರಾಗಲೀ, ದಕ್ಷಿಣ ಭಾರತದವರಾಗಲೀ ಬಹಳ ಹಿಂದಿನಿಂದಲೂ ತಮ್ಮ ಇತಿಹಾಸವನ್ನು ಇದಮಿತ್ಥಂ ಎಂದು ಬರೆದಿಟ್ಟಿದ್ದು ಕಡಿಮೆಯೇ. ಕಾವ್ಯಕ್ಕೆ ತೋರಿಸಿದ ಆಸ್ಥೆಯನ್ನು ಚರಿತ್ರೆಗೆ ತೋರಿಸಿದ ಬರಹಗಾರರೂ ಬೆರಳೆಣಿಕೆಯಷ್ಟೇ. ಅದು ನಮ್ಮ ದೇಶದ ದುರಂತವೇ. ಕ್ಯಾಲಿಕಟ್ ಯಾ ಕಲ್ಲೀಕೋಟೆಯು ಕ್ಯಾಲಿಕೋ ಎಂಬ ಬಟ್ಟೆಯ ಮೇಲಿನ ಪ್ರಿಂಟಿಂಗಿಗೆ ಒಂದಾನೊಂದು ಕಾಲದಲ್ಲೇ ದೇಶಾಂತರದಲ್ಲೂ ಹೆಸರುವಾಸಿಯಾಗಿತ್ತಾದರೂ ಅದರ ಮೇಲೆ ಬರೆದಿಟ್ಟಿದ್ದು ಅಷ್ಟಕ್ಕಷ್ಟೇ. ಝಾಮೋರಿನ್ ರಾಜರುಗಳ ಅಧಿಕೃತ ಚರಿತ್ರೆಯಾದ ಗ್ರಂಥಾವಳಿಯ ಬಹುಭಾಗ ನಾಶವಾಗಿ ಉಳಿದ ಸಣ್ಣ ತುಣುಕೊಂದು ಓದಲೂ ಬಾರದಷ್ಟು ಗೆದ್ದಲು ಹಿಡಿದು ವಲ್ಲತ್ತೋಲ್ ಲೈಬ್ರರಿಯಲ್ಲಿ ಸುರಕ್ಷಿತವಾಗಿದೆ. ಅಲ್ಲಿಂದೀಚೆ ಹಿಂದಿನ ಜನ ಬದಲಾದರು, ಹಿಂದಿನ ಸಂಸ್ಕೃತಿ ಬದಲಾಯಿತು. ಕೆಲವು ಗುರುತು ಕೂಡ ಸಿಕ್ಕದಂತೆ. ಹಳೆಯ ಇತಿಹಾಸ ಭಾಷೆ, ಸಂಸ್ಕೃತಿ ಬರದ ಬ್ರಿಟೀಷ್ ಇತಿಹಾಸಕಾರರ ಕೃಪೆಯಿಂದ ಇಂಗ್ಲೀಷಿಗೆ ಭಾಷಾಂತರಗೊಂಡು ಅಲ್ಲಿಂದ ಮತ್ತೆ ಮಲಯಾಳಕ್ಕೋ ಉಳಿದ ಭಾಷೆಗೋ ಬಂದುದನ್ನೇ ಅಧಿಕೃತವೆಂದು ಮಹಾಪ್ರಸಾದದಂತೆ ನಮ್ಮ ಜನ ಸ್ವೀಕರಿಸಿದರು. ಅದರಲ್ಲಿ ಆಳ ಕೊರೆದಷ್ಟೂ ಸಿಗುವುದು ಒಂದಿಷ್ಟು ಕಥೆಗಳು, ಜಾನಪದದ ನಂಬಿಕೆಗಳು, ವ್ಯಕ್ತಿ ವೈಭವೀಕರಣಗಳು, ರೋಚಕ ಕಾವ್ಯಗಳು, ಬಾಕಿ ಉಳಿದರೆ ಸ್ವಲ್ಪ ಸತ್ಯ. ಆ ಬಾಕಿ ಉಳಿವ ಸತ್ಯವನ್ನು ಹುಡುಕ ಹೊರಟರೆ ಅದೊಂದು ಬಿಟ್ಟು ಮತ್ತೆಲ್ಲವೂ ಇತಿಹಾಸಕಾರನ ಕಾಲಿಗೆ ಎಡತಾಕುತ್ತದೆ. ಈ ಕಥೆ ಶುರುವಾಗುವುದು ಸಾವಿರ ಮುನ್ನೂರು ವರ್ಷಗಳ ಹಿಂದೆ ಸುಮಾರು ಕ್ರಿ.ಶ ೬೨೩ರ ಸುಮಾರಿಗೆ. ಕೇರಳವನ್ನಾಳಿದ ಕೊನೆಯ ಚೇರ ಅರಸು ಚೇರಮನ್ ಪೆರುಮಾಳ್. ಆ ಕಾಲದಲ್ಲೇ ಪಶ್ಚಿಮದ ಜೊತೆಗಿನ ಸಮುದ್ರಾಂತರ ವ್ಯವಹಾರದಲ್ಲಿ ಕೇರಳ ವಿಶ್ವಪ್ರಸಿದ್ಧವಾಗಿತ್ತು. ಮುಜಿರಿಸ್ ಮತ್ತು ಅರಬ್ ಬಂದರುಗಳ ಮಧ್ಯೆ ಹಡಗುಗಳ ಓಡಾಟ ಅವ್ಯಾಹತವಾಗಿತ್ತು. ಕಾಳುಮೆಣಸು, ಸಾಂಬಾರ್ ಪದಾರ್ಥಗಳು, ಬೆಲೆಬಾಳುವ ಹರಳುಗಳು, ಮಸ್ಲಿನ್ ಬಟ್ಟೆ, ಮರದ ಕೆತ್ತನೆಗಳು ಕೇರಳದಿಂದ ಅರಬ್, ಇಜಿಪ್ಟ್, ಯುರೋಪಿಗೆ ಸಾಗಣೆಯಾದರೆ ಪ್ರತಿಯಾಗಿ ಅಲ್ಲಿಂದ ಅತ್ತರು, ಚಿನ್ನ ಮುತ್ತುಗಳು ಇಲ್ಲಿ ಬರುತ್ತಿದ್ದವು. ಹತ್ತು ಹನ್ನೊಂದನೇ ಶತಮಾನದ ಹೊತ್ತಿನಲ್ಲೇ ಕೊಡಂಗಾಲೂರಿನಲ್ಲಿದ್ದ ಕಂಚು ಮತ್ತು ಹಿತ್ತಾಳೆಯ ಕಾರ್ಖಾನೆಯಿಂದ ಯುರೋಪಿನ ಮಾರ್ಕೇಟಿಗೆ ಬಗೆಬಗೆಯ ಡಿಸೈನುಗಳ ಪಾತ್ರೆಗಳ ಸಾಗಣೆಯಾಗುತ್ತಿದ್ದ ಬಗ್ಗೆ ಕೈರೋದ ಟ್ಯೂನೀಶಿಯನ್ ಜ್ಯೂನ ಕಾಲದ ದಾಖಲೆಗಳಿವೆ. ಅದೊಂದೇ ಸಾಕು ವಿದೇಶಗಳಲ್ಲಿ ಹಬ್ಬಿದ್ದ ಕೇರಳದ ಕೀರ್ತಿಯ ಬಗ್ಗೆ ತಿಳಿಯಲು. ಕಾಲ ಅಸ್ಪಷ್ಟವಾದರೂ ಇದೇ ಕೊಡಂಗಾಲೂರನ್ನಾಳುತ್ತಿದ್ದವನು ಚೇರಮನ್ ಪೆರುಮಾಳ್. ಒಂದು ಪೂರ್ಣಿಮೆಯ ರಾತ್ರಿಯಲ್ಲಿ ಆತ ಬಾಲ್ಕನಿಯಲ್ಲಿ ವಾಯುವಿಹಾರ ಮಾಡುತ್ತಿದ್ದಾಗ(ಹಳೆಯ ಕೇರಳದ ತರವಾಡು ಮನೆಗಳಲ್ಲಿ ಬಾಲ್ಕನಿಗಳಿರುತ್ತಿರಲಿಲ್ಲವೆಂಬುದು ಬೇರೆ ವಿಷಯ) ಅಚ್ಚರಿಯೊಂದು ಕಣ್ಣಿಗೆ ಬಿದ್ದಿತಂತೆ. ಚಂದ್ರ ಎರಡಾಗಿ ಹೋಳಾಗಿ ಪುನಃ ಒಂದಾದ ದೃಶ್ಯ. ರಾಜ ಆ ಪವಾಡವನ್ನು ಕಂಡು ದಂಗಾದ. ಆಸ್ಥಾನ ಜ್ಯೋತಿಷಿಗಳು ಅಂಥಹ ಒಂದು ಘಟನೆ ನಡೆದಿರುವುದನ್ನು ಪ್ರಮಾಣೀಕರಿಸಿದರು. ಕೆಲ ದಿನಗಳ ನಂತರ ಅರೇಬಿಯಾದಿಂದ ಶ್ರೀಲಂಕಾಕ್ಕೆ ಪ್ರಯಾಣಿಸುತ್ತಿದ್ದ ಶೇಕ್ ಸಾಜುದ್ದೀನ್ ಎಂಬ ಯಾತ್ರಿ ಮುಜಿರಿಸ್ ಬಂದರಿನಲ್ಲಿ ಬಂದಿಳಿದನಂತೆ, ಆತನಿಂದ ಮಹಮ್ಮದ್ ಪೈಗಂಬರರು ಸ್ಥಾಪಿಸಿದ ಇಸ್ಲಾಮ್ ಮತದ ಬಗ್ಗೆ, ಅವರು ಚಂದ್ರನನ್ನು ಹೋಳಾಗಿಸಿ ಪುನಃ ಜೋಡಿಸಿದ ಪವಾಡದ ಬಗ್ಗೆ ಕೇಳಿ ಕುತೂಹಲಗೊಂಡ ಪೆರುಮಾಳ್ ಮೆಕ್ಕಾಕ್ಕೆ ತೆರಳಲು ನಿರ್ಧರಿಸಿದ. ತನ್ನ ಸಿಂಹಾಸನವನ್ನು ತೊರೆದು, ರಾಜ್ಯವನ್ನು ೩೨ ಭಾಗಗಳಾಗಿಸಿ ತನ್ನ ಅಳಿಯಂದಿರಿಗೆ ಹಂಚಿ ಮೆಕ್ಕಾದ ಹಡಗು ಹತ್ತಿದ. ಅಲ್ಲಿ ಪೈಗಂಬರರನ್ನು ಭೆಟ್ಟಿಯಾದ ಪೆರುಮಾಳ್ ಹೊಸ ಮತವನ್ನು ಸ್ವೀಕರಿಸಿ ತೌಜ್ ಉಲ್ ಹರೀದ್ ಎಂಬ ಹೊಸ ಹೆಸರು ಪಡೆದನಂತೆ. ಜೆಡ್ಡಾದ ರಾಜನ ಮಗಳನ್ನು ಮದುವೆಯಾಗಿ ಹನ್ನೆರಡು ವರ್ಷ ಮೆಕ್ಕಾದಲ್ಲೇ ಕಳೆದ ಆತ ಪೈಗಂಬರರ ಆಣತಿಯಂತೆ ಹೊಸ ಮತವನ್ನು ಕೇರಳದಲ್ಲಿ ಪಸರಿಸಲು ಪುನಃ ತನ್ನೂರಿನತ್ತ ಪ್ರಯಾಣ ಬೆಳೆಸಿದ, ಆತನ ದುರಾದೃಷ್ಟ, ಆತನಿಗೆ ಪುನಃ ಕೇರಳವನ್ನು ಕಾಣಲಾಗಲಿಲ್ಲ. ಸಮುದ್ರಮಾರ್ಗದ ಮಧ್ಯದಲ್ಲೇ ಅನಾರೋಗ್ಯದಿಂದ ಕೊನೆಯುಸಿರೆಳೆದನಂತೆ. ಸಾಯುವುದಕ್ಕಿಂತ ಮೊದಲು ತನ್ನ ಕುಟುಂಬಕ್ಕೆ ಪತ್ರ ಬರೆದವನು ಸಂಗಡಿಗರಿಗೆ ಆಶ್ರಯ ನೀಡುವಂತೆಯೂ, ಅವರ ಧರ್ಮಪ್ರಸಾರದಲ್ಲಿ ನೆರವಾಗುವಂತೆಯೂ ಹೇಳಿದನಂತೆ. ಆತನ ಶವವನ್ನು ಯೆಮನ್ನಿನ ಝಫರ್‌ನಲ್ಲಿ ದಫನ ಮಾಡಲಾಯಿತೆಂದು ಕೆಲವರು ನಂಬಿದರೆ, ಸಲಾಲಾಹ್‌ನಲ್ಲೆಂದು ಇನ್ನು ಕೆಲವರು, ಶಹರ್ ಅಲ್ ಮುಕಲ್ಲಾದಲ್ಲೆಂದು ಮತ್ತೆ ಕೆಲವರು ಹೇಳುತ್ತಾರೆ. ಸಲಾಲಾಹ್ ಸಮುದ್ರ ತೀರದಲ್ಲಿರುವುದರಿಂದ ಅಲ್ಲೇ ಇದೆ ಎಂಬ ವಾದವೂ ಇದೆ. ಇದೇ ಸಲಾಲಾಹ್ ಮತ್ತು ಮುಕಲ್ಲಾ ಹೆಸರಿನ ಸ್ಥಳಗಳು ಅವನ ಮಾವನ ಮನೆಯಾದ ಜೆಡ್ಡಾದಲ್ಲೂ ಇರುವುದರಿಂದ ಅಲ್ಲೂ ಸಮಾಧಿ ಇರಬಹುದಾದ ಬಗ್ಗೆ ಗೊಂದಲವಿದೆ. ಆತನ ಪತ್ರವನ್ನು ತಂದ ಪೈಗಂಬರರ ಹದಿಮೂರು ಶಿಷ್ಯರಲ್ಲಿ ಒಬ್ಬನಾದ ಮಲೀಕ್ ದಿನಾರ್ ತನ್ನ ಸಂಗಡಿಗರೊಡನೆ ಕೊಡಂಗಾಲೂರಿಗೆ ಬಂದಿಳಿದ. ಇವರಿಗೋಸ್ಕರ ಸ್ಥಳೀಯ ರಾಜ ಮಸೀದಿ ನಿರ್ಮಿಸಲು ನೆರವು ನೀಡಿದ. ಆ ಮಸೀದಿಯೇ ಕೊಡಂಗಾಲೂರಿನ ಪ್ರಸಿದ್ಧ ಚೇರಮನ್ ಜುಮ್ಮಾ ಮಸೀದಿ. ಈ ಕಥೆಯನ್ನೇ ನಂಬುವುದಾದರೆ ಭಾರತದ ಅತಿ ಹಳೆಯ ಮಸೀದಿಗಳಲ್ಲೊಂದೆಂದು ಖ್ಯಾತಿ ಪಡೆದ ಇದು ಮದೀನಾದ ನಂತರದ ಪ್ರಪಂಚದ ಎರಡನೆ ಅತ್ಯಂತ ಪುರಾತನ ಜುಮ್ಮಾ ಮಸ್ಜಿದ್. ಕಳೆದ ೧೩೭೫ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಶುಕ್ರವಾರದ ಜುಮ್ಮಾ ನಮಾಜ್ ನಡೆಯುತ್ತಿದೆ. ಬರೀ ಅಲ್ಲಿ ಮಾತ್ರವಲ್ಲದೇ ಮಲಿಕ್ ದಿನಾರ ಮತ್ತವನ ಸಂಗಡಿಗರು ಕೇರಳದ ಕೊಲ್ಲಂ, ಕಾಸರಗೋಡಿನ ತಳಂಗರ ಸೇರಿ ಒಂಭತ್ತು ಮಸೀದಿಗಳನ್ನು ನಿರ್ಮಿಸಿದ್ದಾರೆ. ಪುನರ್ನಿರ್ಮಿತ ಮುಚ್ಚಿದ ಗರ್ಭಗುಡಿ, ಎದುರಿಗೆ ತೂಗುದೀಪ ಈ ಮಸೀದಿ ಉಳಿದವುಗಳಂತಲ್ಲ. ಎಲ್ಲ ಮಸೀದಿಗಳೂ ಮೆಕ್ಕಾದ ದಿಕ್ಕಾಗ ಪಶ್ಚಿಮದತ್ತ ಮುಖ ಮಾಡಿದ್ದರೆ ಇದಿರುವುದು ಪೂರ್ವಾಭಿಮುಖವಾಗಿ. ಇದರ ರಚನೆಯೂ ಥೇಟ್ ಹಿಂದೂಗಳ ದೇವಾಲಯದ ಮಾದರಿಯದ್ದು. ಬಹುತೇಕ ಕೇರಳದ ಹೆಚ್ಚಿನ ಹಳೆಯ ಆಲಯ ಅಥವಾ ತರವಾಡುಗಳನ್ನು ಹೋಲುವಂಥದ್ದು. ಇಡಿಯ ಕಟ್ಟಡ ತೇಗದ ಮರದ ಸುಂದರ ಕೆತ್ತನೆಗಳನ್ನೊಳಗೊಂಡಿದೆ. ಒಳಗಡೆ ಗರ್ಭಗುಡಿಯಂಥ ರಚನೆಯೂ ಇದೆ. ದೇವಸ್ಥಾನದಲ್ಲಿರುವಂತೆ ದೊಡ್ಡದೊಂದು ಸದಾ ಉರಿಯುತ್ತಿರುವ ದೀಪ ಇಲ್ಲಿನ ವಿಶೇಷತೆ. ಬಂದ ಭಕ್ತರೆಲ್ಲ ಹಚ್ಚಿ ಹೋಗುವ ಊದಿನಕಡ್ಡಿಗಳೆಲ್ಲ ಮತ್ತೆ ದೇವಸ್ಥಾನದ ನೆನಪನ್ನೇ ಕೊಡುತ್ತವೆ. ಈಚೆಗೆ ಈ ಮಸೀದಿ ಹೊಸದಾಗಿ ಪುನರ್ನಿರ್ಮಾಣಗೊಂಡಿದ್ದರೂ ತಲಂಗರ, ಕೊಲ್ಲಂನ ಮಸೀದಿಗಳೆಲ್ಲ ಇನ್ನೂ ತಮ್ಮ ಹಳೆಯ ವಿನ್ಯಾಸವನ್ನು, ಹೊಳಹನ್ನು ಹಾಗೆಯೇ ಉಳಿಸಿಕೊಂಡಿವೆ. ಅವೆರಡೂ ಮಸೀದಿಗಳಿಗೆ ಭೇಟಿ ಕೊಟ್ಟು ನಾನು ಸ್ವತಃ ಒಳಹೊಕ್ಕು ಕೂಲಂಕುಶವಾಗಿ ನೋಡಿ ಬಂದಿದ್ದೇನೆ. ಈ ಮಸೀದಿಯನ್ನು ಕಟ್ಟಿದ ಮತಾಂತರಿ ಹಿಂದೂ ರಾಜನ ಬಗ್ಗೆ ಇಂಡಿಯಾ ಆಫೀಸ್ ಲೈಬ್ರರಿ, ಲಂಡನ್ನಿನ ದಾಖಲೆಗಳಲ್ಲೂ ಉಲ್ಲೇಖವಿದೆ(reference number: Arabic, 2807, 152-173). ಆ ರಾಜನ ಹೆಸರನ್ನು ಚಕ್ರವರ್ತಿ ಫರ್ಮಸ್ ಎನ್ನಲಾಗಿದೆ. ಚಕ್ರವರ್ತಿ ಶಬ್ದವನ್ನು ಅರೇಬಿಕ್‌ನಲ್ಲಿ ಸರಿಯಾಗಿ ಉಚ್ಛರಿಸಲು ಬಂದಮೇಲೆ ಫರ್ಮಸ್ ಮಾತ್ರ ಯಾಕೆ ಅಪಭೃಂಶಗೊಂಡಿತೋ ನಾಕಾಣೆ! ಈತ ಇಸ್ಲಾಂ ಸ್ವೀಕರಿಸಿ ಶೇಖ್ ತಾಜುದ್ದೀನ ಎಂದು ಹೆಸರಾದನಂತೆ. ಅಬು ಸಯೀದ್ ಅಲ್ ಕಾದ್ರಿ ಎಂಬ ಅರಬ್ ಲೇಖಕ ಈ ಫಾರ್ಮಸ್ ಪೈಗಂಬರರಿಗೆ ಒಂದು ಭರಣಿ ಶುಂಠಿ ಬೆರೆಸಿದ ತರಕಾರಿ ಉಪ್ಪಿನಕಾಯಿಯನ್ನು ಕೊಟ್ಟ ಕಥೆಯನ್ನೂ ಬರೆದಿಟ್ಟಿದ್ದಾನೆ.(ಆ ಕಾಲದಲ್ಲಿ ಕೇರಳದಲ್ಲಿ ತರಕಾರಿ ಉಪ್ಪಿನಕಾಯಿಯನ್ನೂ ಮಾಡುತ್ತಿರಲಿಲ್ಲ, ಶುಂಠಿಯ ಪರಿಚಯ ಮೊದಲೇ ಇರಲಿಲ್ಲ ಎಂಬುದು ಐತಿಹಾಸಿಕ ಸತ್ಯ.). ಇದೇ ರಾಜನನ್ನು ಬ್ರಿಟಿಷ್ ಲೈಬ್ರರಿಯ ಇತಿಹಾಸ ಪುಸ್ತಕ "Qissat Shakruti Firmad" ಆ ರಾಜನ ಹೆಸರನ್ನು ಶಕ್ರುತಿ ಎನ್ನುತ್ತದೆ. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಆತ ಭೇಟಿ ಕೊಟ್ಟ ಸಮಯವನ್ನು ೯ನೇ ಶತಮಾನದ ಅಂತ್ಯಕ್ಕೆ ಎಳೆತರುತ್ತದೆ. ಮೆಕ್ಕಾಗೆ ಭೇಟಿ ನೀಡಿದ ಮತ್ತು ಮಸೀದಿಯನ್ನು ನಿರ್ಮಿಸಿದ ಪೆರುಮಾಳರಿಬ್ಬರೂ ಬೇರೆ ಎನ್ನುವ ವಾದವೂ ಇದೆ. ಸಿಕ್ಕುವ ಆಧಾರಗಳೆಲ್ಲ ಘಟನೆ ನಡುದು ಕನಿಷ್ಟ ನಾಲ್ಕೈದು ನೂರು ವರ್ಷಗಳ ನಂತರ ಬರೆಯಲ್ಪಟ್ಟವು. ಕೇರಳೋತ್ಪತ್ತಿ ಮಾರ್ತಾಂಡದಲ್ಲಿ ಈ ಕಥೆ ಇರುವುದಾದರೂ ಅದರ ಕಾಲ ಚರ್ಚಾರ್ಹ. ಪ್ರಾಯಶಃ ಅದು ಕ್ರಿ.ಶ ಸಾವಿರದೈನೂರಕ್ಕಿಂತ ಹಳೆಯದೇನೂ ಅಲ್ಲ. ಲೋಗನ್ನಿನ ಮಲಬಾರ್ ಮ್ಯಾನುವಲ್ಲಿನ ಪ್ರಕಾರ ಮೆಕ್ಕಾಗೆ ಭೇಟಿ ನೀಡಿದವನು ಪೆರುಮಾಳನಲ್ಲ, ಬದಲಾಗಿ ಝಾಮೋರಿನ್ ಅರಸು. ಆತ ಅಬ್ದುಲ್ಲಾ ಸಮೀರಿ ಎಂಬ ಹೆಸರಿನೊಂದಿಗೆ ಮತಾಂತರಗೊಂಡ(ಝಾಮೋರಿನ ಅಪಭೃಂಶಗೊಂಡು ಸಮೀರಿ ಎಂದಾಯ್ತೇ!). ತಲಂಗರದ ಮಸೀದಿಯಲ್ಲಿರುವ ದಾಖಲೆಗಳೂ ಇದನ್ನೇ ಪುಷ್ಟೀಕರಿಸುತ್ತವೆ. ಇನ್ನೊಂದಿಷ್ಟು ಗೊಂದಲಕ್ಕೆ ಕಾರಣವಾಗುವಂತೆ ಯೆಮೆನ್ನಿನ ಝಪರ್‌ನ ಕೇರಳರಾಜನ ಸಮಾಧಿಯ ಕಾಲವೂ ೯ನೇ ಶತಮಾನವೇ ಮತ್ತು ಆತನ ಹೆಸರು ಅಬ್ದುಲ್ ಸಮೀರಿ. ಕಹಾನಿಮೇಂ ಇನ್ನೂ ಒಂದು ಟ್ವಿಸ್ಟ್ ಎಂದರೆ ಎರಡನೇ ಚೇರ ಸಾಮ್ರಾಜ್ಯ ಶುರುವಾಗಿದ್ದು ಕ್ರಿ.ಶ ೮೦೦ ರ ಸುಮಾರಿಗೆ ಕುಲಶೇಖರ ಆಳ್ವಾರ್ ಪೆರುಮಾಳನಿಂದ, ಕೊನೆಗೊಂಡಿದ್ದು ರಾಮ ಕುಲಶೇಖರ ಪೆರುಮಾಳನಿಂದ ೧೧೦೨ರಲ್ಲಿ. ಅಂದರೆ ಮಹಮ್ಮದ್ ಪೈಗಂಬರರ ಕಾಲದಲ್ಲಿ ಚೇರ ರಾಜ್ಯವೇ ಅಸ್ತಿತ್ವದಲ್ಲಿರಲಿಲ್ಲ. ಒಬ್ಬ ರಾಜ ಇಸ್ಲಾಮಿಗೆ ಮತಾಂತರಗೊಂಡಿದ್ದು ನಿಜವೇ ಆಗಿದ್ದರೂ ಅದು ಪೈಗಂಬರರ ಕಾಲಕ್ಕಿಂತ ಕನಿಷ್ಟ ಮೂರು ಶತಮಾನದ ನಂತರವಿರಬಹುದು. ಅದಕ್ಕೆ ಪೂರಕವಾಗಿ ಮಲಯಾಳದ ಒಂದು ಜಾನಪದ ಕಥೆಯೂ ಇದೆ. ಪೆರುಮಾಳ ಎಂಬ ರಾಜ ಹೆಂಡತಿಯ ಮಾತು ಕೇಳಿ ತನ್ನ ಪ್ರಾಮಾಣಿಕ ಸೇನಾಧಿಪತಿಯನ್ನು ಕೊಲ್ಲಿಸುತ್ತಾನೆ. ಈ ಅನ್ಯಾಯದ ವಿರುದ್ಧ ಜನ ದಂಗೆ ಎದ್ದರು. ತಲೆತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ರಾಜನನ್ನು ಅರಬ್ಬಿ ವರ್ತಕರು ರಕ್ಷಿಸಿದರು. ತಮ್ಮ ಧರ್ಮವನ್ನು ಸ್ವೀಕರಿಸಿದರೆ ತಮ್ಮೊಡನೆ ಕರೆದೊಯ್ಯುವುದಾಗಿ ಹೇಳಿದರು. ಧರ್ಮಕ್ಕಿಂತ ಜೀವ ದೊಡ್ಡದಲ್ಲವೇ! ಪೆರುಮಾಳ ಅರಬ್ಬಿನ ವರ್ತಕರೊಡನೆ ಪರಾರಿಯಾದ. ಇದಕ್ಕೆ ಪೂರಕವೆಂಬಂತೆ 'ಪೆಂಚೊಳ್ಳು ಕೆಟ್ಟ ಪೆರುಮಾಳೆ, ಮಕ್ಕತ್ತು ಪೋಯಿ ಟೊಪ್ಪಿ ಎತ್ತಲ'(ಹೆಂಡ್ತಿ ಮಾತು ಕೇಳಿ ಹಾಳಾದ ಪೆರುಮಾಳ, ಮಕ್ಕಾಗೆ ಓಡಿಹೋಗಿ ಟೊಪ್ಪಿ ಹಾಕಿಕೊಂಡ) ಎಂಬೊಂದು ಪ್ರಸಿದ್ಧವಾದ ಗಾದೆಯೇ ಮಲಬಾರಿನಲ್ಲಿ ಚಾಲ್ತಿಯಲ್ಲಿದೆ. ಕೊನೆಯ ಚೇರ ಪೆರುಮಾಳನ ನಂತರ ಕ್ಯಾಲಿಕಟ್ ಝಾಮೋರಿನ್‌ಗಳ ಆಳ್ವಿಕೆಗೊಳಪಟ್ಟಿತು. ಝೆಮೋರಿನ್‌ಗಳ ಕಾಲದಲ್ಲಿಯೇ ಅರಬ್ಬಿನ ನಡುವಿನ ವ್ಯವಹಾರಗಳು ಮತ್ತು ಕೇರಳದಲ್ಲಿ ಇಸ್ಲಾಮಿನ ಬೆಳವಣಿಗೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದು. ಅದಕ್ಕೆ ಸಾಕ್ಷಿಯಾಗಿ ಝಾಮೋರೀನಗಳು ಕಟ್ಟಿಸಿದ ಮುಕ್ಕಂಟಿ ಮಸೀದಿ, ಶಾಹ್ ಬುಂದರ್ ಎನ್ನುವವನನ್ನು ಕ್ಯಾಲಿಕಟ್‌ನ ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದು, ಮುಸ್ಲೀಂ ವಸಾಹತುಶಾಹಿಗಳಿಗೆ ಸಿಕ್ಕ ಎಲ್ಲೂ ಇಲ್ಲದ ಗೌರವದ ಸರಮಾಲೆಗಳೇ ಸಾಕ್ಷಿ. ಮಧ್ಯಪ್ರಾಚ್ಯದೊಡಗಿನ ವ್ಯಾಪಾರವನ್ನು ಉತ್ತಮಗೊಳಿಸಲು, ಅಲ್ಲಿಂದ ಬರುವ ಹೊನ್ನಿನಾಸೆಗೆ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದ ಝಾಮೋರಿನ್ ಅರಸನೊಬ್ಬ ಹಣದಾಸೆಗೆ ಬಲಿಬಿದ್ದು ಇಸ್ಲಾಮನ್ನು ಸ್ವೀಕರಿಸಿರಬಹುದು ಎಂದೂ ಕೆಲ ಇತಿಹಾಸಕಾರರು ವಾದಿಸುತ್ತಾರೆ. ಮಲಯದ ಇತಿಹಾಸವನ್ನು ಗಮನಿಸಿದರೆ ಅಲ್ಲಿನ ಶ್ರೀವಿಜಯ ವಂಶದ ಪರಮೇಶ್ವರ ಎಂಬ ತಮಿಳು ಮೂಲದ ರಾಜ ಜಾವಾವನ್ನಾಳುತ್ತಿದ್ದ. ಸಿಂಗಪುರವನ್ನು ಹುಟ್ಟುಹಾಕಿದ ಕೀರ್ತಿಯೂ ಇವನಿಗೇ ಸಲ್ಲಬೇಕು. ತಮಿಳು ಮುಸ್ಲೀಂ ವ್ಯಾಪಾರಿಗಳ ಪ್ರಭಾವಳಿಗೆ ಸಿಲುಕಿ ಇಸ್ಲಾಮಿಗೆ ಮತಾಂತರಗೊಂಡ ಈತನ ಕಥೆ ಮಲೇಷಿಯಾದಲ್ಲಿ ಪ್ರಸಿದ್ಧವಾದುದೇ. ಹಿಂದೂಗಳ ಅದ್ಭುತ ಇತಿಹಾಸ ಹೊಂದಿದ್ದ ಮಲಯ ದ್ವೀಪ ಮೂರ್ಖ ರಾಜನೊಬ್ಬನ ಗಡಿಬಿಡಿಯಿಂದ ದೇಶಕ್ಕೆ ದೇಶವೇ ಮತಾಂತರಗೊಂಡು ತನ್ನ ಬೇರುಗಳಿಂದ ದೂರವಾದದ್ದು ಖೇದಕರವಾದರೂ ಸತ್ಯ. ಇಲ್ಲಿಯೂ ಹಾಗೇನಾದರೂ ನಡೆದಿತ್ತೇ? ಕಾಲದ ಕುರಿತು ಅಸ್ಪಷ್ಟತೆಗಳಿದ್ದರೂ, ರಾಜನ ಹೆಸರಿನ ಬಗ್ಗೆಯೇ ವಿವಾದವಿದ್ದರೂ ಕೇರಳದ ಮಲಬಾರನ್ನಾಳುತ್ತಿದ್ದವನೊಬ್ಬ ಮಕ್ಕಾಕ್ಕೆ ತೆರಳಿ, ಇಸ್ಲಾಮಿಗೆ ಮತಾಂತರವಾಗಿ, ಯಮನ್ನಿನಲ್ಲಿ ಸಮಾಧಿಗೊಂಡು, ಪರೋಕ್ಷವಾಗಿ ಕೇರಳದಲ್ಲಿ ಇಸ್ಲಾಮ್ ಹರಡಲು ಮತ್ತು ಭಾರತದ ಅತಿ ಹಳೆಯದೆನ್ನಲಾದ ಮಸೀದಿಯೊಂದು ಸ್ಥಾಪಿತಗೊಳ್ಳಲು ಕಾರಣನಾಗಿದ್ದನೆಂಬುದು ಐತಿಹಾಸಿಕ ಸತ್ಯ. ಇರುವ ಕಥೆ ಒಂದು ವೇಳೆ ನಿಜವೇ ಆಗಿದ್ದರೆ ಅರಬ್ಬಿನ ಬಹುಭಾಗಕ್ಕಿಂತ ಮೊದಲೇ ಇಲ್ಲಿನ ನೆಲದಲ್ಲಿ ಇಸ್ಲಾಂ ನೆಲೆನಿಂತು ಪಸರಿಸಿತ್ತೆಂಬುದು ಅಲ್ಲಿನ ಮುಸ್ಲೀಮರಿಗೆ ಹರ್ಷದ ಸಂಗತಿಯೇ. ಪೆರುಮಾಳನಿಂದ ಮತ್ತು ಮುಂದೆ ಝಾಮೋರಿನ್ ಅರಸರ ಕಾಲದಲ್ಲಿ ಅರಬ್ಬೀ ವರ್ತಕರಿಗೆ ಸಿಕ್ಕ ಸನ್ಮಾನಗಳಿಂದ ಕೇರಳ ಇಸ್ಲಾಂ ಹುಲುಸಾಗಿ ಬೆಳೆಯಲು ಹದಗೊಂಡ ಭೂಮಿಯಾಯಿತು. ಮುಂದೆ ಟಿಪ್ಪೂವಿನ ಆಕ್ರಮಣಕ್ಕೆ ಸಿಕ್ಕು ಮಲಬಾರ್ ಅರ್ಧಕ್ಕರ್ಧ ಬಲವಂತದ ಮತಾಂತರಕ್ಕೊಳಪಡುವುದರೊಂದಿಗೆ ಇಂದು ಕೇರಳದಲ್ಲಿ ಮೂಲನಿವಾಸಿಗಳೇ ಅಲ್ಪಸಂಖ್ಯಾತರಾಗುವ ಹೊಸ್ತಿಲಲ್ಲಿದ್ದಾರೆ ಎಂಬುದು ಬೇರೆ ವಿಚಾರ ಬಿಡಿ.
2022/06/30 07:02:00
https://sachinsbhat.blogspot.com/2015/02/
mC4
ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಮೊದಲ ಕೋವಿಡ್‌ ಕೇಸ್ ಎದುರಿಸಿದ ವೈದ್ಯೆ | Prajavani PV Achievers 2021 corona warriors Dr Renuka Katti Staff Nurse Nageshwari D Group employ M Bennurkar Rachanna social worker P Bisagond Sharanu Pappa prerana association founder Rakshita Laadavanti ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಮೊದಲ ಕೋವಿಡ್‌ ಕೇಸ್ ಎದುರಿಸಿದ ವೈದ್ಯೆ ಪ್ರಜಾವಾಣಿ ವಾರ್ತೆ Updated: 01 ಜನವರಿ 2021, 06:18 IST ದೇಶದ ಮೊದಲ ಕೋವಿಡ್‌ ಪ್ರಕರಣ ಎದುರಿಸಿದ ವೈದ್ಯೆ ರೇಣುಕಾ ಕಟ್ಟಿ ಕಲಬುರ್ಗಿ: ಕಲಬುರ್ಗಿಯವರೇ ಆದ ಡಾ.ರೇಣುಕಾ ಕಟ್ಟಿ ಅವರು ಮಕ್ತಂಪುರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆಗಿದ್ದಾರೆ. ದೇಶದಲ್ಲೇ ಮೊಟ್ಟ ಮೊದಲು ಕೋವಿಡ್‌ ಸಾವು ಸಂಭವಿಸಿದ್ದು ಮೋಮಿನ್‌ಪುರ ಬಡಾವಣೆಯಲ್ಲಿ. ಇದು ಇವರದೇ ಆರೋಗ್ಯ ಕೇಂದ್ರದ ವ್ಯಾಪ‍್ತಿಗೆ ಬರುತ್ತದೆ. ಕೋವಿಡ್‌ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲದ ಸಂದರ್ಭದಲ್ಲಿ ಡಾ.ರೇಣುಕಾ ಅವರು ಇದೇ ಪ್ರಕರಣಗಳನ್ನು ಎದುರಿಸಬೇಕಾಯಿತು. ಸೌದಿಯಿಂದ ಮರಳಿದ್ದ ವ್ಯಕ್ತಿ ಕೋವಿಡ್‌ನಿಂದ 2020ರ ಮಾರ್ಚ್‌ 10ರಂದು ಮೃತಪಟ್ಟರು. ಪ್ರಕರಣ ಹೆಚ್ಚುತ್ತಲೇ ಹೋದವು. ಹೀಗಾಗಿ, ದೇಶದ ಚಿತ್ತ ಮೋಮಿನ್‌ಪುರ ಬಡಾವಣೆಯತ್ತ ಹರಿಯುವಂತಾಯಿತು. ಜನರಲ್ಲಿ ಪ್ರಾಣ ಭೀತಿ ಆವರಿಸಿಕೊಂಡಿತು. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಎದೆಗುಂದದೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದುವರಿದ ರೇಣುಕಾ, ತಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ಪಡೆದು ಸೋಂಕಿತರ ಪತ್ತೆ ಕಾರ್ಯಾಚರಣೆಗೆ ಇಳಿದರು. ಏಪ್ರಿಲ್‌, ಮೇ ತಿಂಗಳಲ್ಲಿ ದೆಹಲಿಯಿಂದ ಬಂದ 'ತಬ್ಲಿಗಿ'ಗಳು ಕೂಡ ಇದೇ ಬಡಾವಣೆಯಲ್ಲಿದ್ದರು. ಅವರನ್ನು ಪತ್ತೆ ಮಾಡಿ, ಮಾದರಿ ಸಂಗ್ರಹಿಸಿ ವರದಿ ನೀಡುವ ಹೊಣೆಗಾರಿಕೆಯನ್ನೂ ಡಾ.ರೇಣುಕಾ ನಿರ್ವಹಿಸಿದರು. 400ಕ್ಕೂ ಹೆಚ್ಚು ಜನರ ಸ್ಯಾಂಪಲ್‌ಗಳನ್ನು ಖುದ್ದು ಮುಂದೆ ನಿಂತು ಸಂಗ್ರಹಿಸಿದರು. ಜನರಿಗೆ ಮಾಹಿತಿ ರವಾನಿಸಿ ಅವರು ಕೊರೊನಾದಿಂದ ಮುಕ್ತರಾಗುವಂತೆ ಪ್ರಯತ್ನಿಸಿದ್ದು ಇವರ ಹೆಗ್ಗಳಿಕೆ. ವೃತ್ತಿ ನಿಷ್ಠೆಗೆ ಕನ್ನಡಿ ನರ್ಸ್‌ ನಾಗೇಶ್ವರಿ ಕಲಬುರ್ಗಿ: ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 11 ವರ್ಷಗಳಿಂದ ಸ್ಟಾಫ್‌ ನರ್ಸ್‌ ಆಗಿರುವ ನಾಗೇಶ್ವರಿ ಎಂ. ಬೆನ್ನೂರಕರ್ 'ವೃತ್ತಿ ಬದ್ಧತೆ'ಗೆ ಹೆಸರಾದವರು. ಸುತ್ತಲಿನ ಹಳ್ಳಿಗಳ ಜನರಿಗೆ ಚಿರಪ‍ರಿಚಿತರು. ಕೊರೊನಾ ಸಂದರ್ಭದಲ್ಲಿ ಫ್ರಂಟ್‌ಲೈನ್‌ ವಾರಿಯರ್‌ ಆಗಿಯೂ ಸೇವೆ ಸಲ್ಲಿಸಿದರು. ಕೊಲ್ಲೂರು ಗ್ರಾಮದ ಸಿದ್ದಮ್ಮ ಹನುಮಂತಪ್ಪ ಎಂಬುವರಿಗೆ ಈಚೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾತ್ರಿ 10ರ ಸುಮಾರಿಗೆ ಅವರನ್ನು ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಹೆರಿಗೆ ನೋವು ಹೆಚ್ಚಾಗಿದ್ದರಿಂದ ನಾಗೇಶ್ವರಿ ಅವರೇ ಹೆರಿಗೆ ಮಾಡಿಸಲು ಮುಂದಾದರು. ಆದರೆ, 11 ಗಂಟೆ ಸುಮಾರಿಗೆ ವಿದ್ಯುತ್‌ ಕಡಿತಗೊಂಡು, ಇಡೀ ಆಸ್ಪತ್ರೆಗೆ ಕತ್ತಲಾವರಿಸಿತು. ಆಸ್ಪತ್ರೆಯಲ್ಲಿನ ಇನ್ವರ್ಟರ್‌ ಕೂಡ ಕೈಕೊಟ್ಟಿತು. ಎರಡು ತಾಸು ಕಾದರೂ ವಿದ್ಯುತ್‌ ಬರಲಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲೂ ಎದೆಗುಂದದ ನಾಗೇಶ್ವರಿ ಅವರು, ತಾವೇ ಹೆರಿಗೆ ಮಾಡಿಸಲು ವ್ಯವಸ್ಥೆ ಮಾಡಿಕೊಂಡರು. ನಾಲ್ಕು ಜನರ ಮೊಬೈಲ್ ಪಡೆದು, ಟಾರ್ಚ್‌ ಬಿಟ್ಟು ಅದರ ಬೆಳಕಿನ ಸಹಾಯದಿಂದ ಯಶಸ್ವಿ ಹೆರಿಗೆ ಮಾಡಿಸಿದರು. ಕಠಿಣ ಸಂದರ್ಭದಲ್ಲಿಯೂ ನುಣುಚಿಕೊಳ್ಳದೇ ಧೈರ್ಯ ತೋರಿ ಹೆರಿಗೆ ಮಾಡಿಸಿ ಎರಡು ಜೀವ ಉಳಿಸಿ ಅವರು ಮಾದರಿಯಾದರು. ನಾಗೇಶ್ವರಿ ಅವರ ವೃತ್ತಿನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳ ಹೆರಿಗೆ ವಿಭಾಗಕ್ಕೆ ಒಂದು ಪ್ರತ್ಯೇಕ ಇನ್ವರ್ಟರ್‌ ಮಂಜೂರು ಮಾಡಿದರು. ಮಾನಸಿಕ ಸ್ಥೈರ್ಯ ತುಂಬಿದ ರಾಚಣ್ಣ ಕಲಬುರ್ಗಿ: ತಾಲ್ಲೂಕಿನ ಪಟ್ಟಣ ಗ್ರಾಮದ ರಾಚಣ್ಣ ಪಿ. ಬಿಸಗೊಂಡ ಅವರು ಎಂ.ಎಸ್‌.ಡಬ್ಲ್ಯು ಪದವೀಧರ. ಶಿಕ್ಷಣ ಮುಗಿದ ಬಳಿಕ ಶ್ರೀಶ್ರೀ ರವಿಶಂಕರ ಗುರೂಜಿ ಅವರ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯಲ್ಲಿ ಯೋಗ ಕಲಿತು, ಅಲ್ಲಿಯೇ ಯೋಗ ಶಿಕ್ಷಕರಾಗಿದ್ದರು. ನಂತರ ಗ್ರೂಪ್‌–ಡಿ ನೌಕರರಾಗಿ ಕಲಬುರ್ಗಿಯ ಜಿಮ್ಸ್‌ ಆಸ್ಪತ್ರೆಗೆ ಸೇರಿದ್ದು, ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 2020ರ ಮಾರ್ಚ್‌ ಮೊದಲ ವಾರದಿಂದಲೂ ಜಿಮ್ಸ್‌ನ ಕೋವಿಡ್‌ ವಿಭಾಗದಲ್ಲೇ ರಾಚಣ್ಣ ಕೆಲಸ ಮಾಡುತ್ತಿದ್ದಾರೆ. ಇವರ ಶ್ರಮ, ಕಾರ್ಯಶೈಲಿ, ಯೋಗ ಜ್ಞಾನವನ್ನು ಗುರುತಿಸಿದ ಜಿಮ್ಸ್‌ ಅಧಿಕಾರಿಗಳೇ ಅವರನ್ನು ಕೋವಿಡ್‌ ವಾರ್ಡ್‌ಗೆ ನಿಯೋಜಿಸಿದರು. ಕೋವಿಡ್‌ ವಾರ್ಡ್‌ನ ಸ್ವಚ್ಛತೆ, ಸ್ಯಾನಿಟೈಜೇಷನ್‌, ರೋಗಿಗಳ ಆರೈಕೆ ಮಾಡುವುದು ಇವರ ದೈನಂದಿನ ಕೆಲಸ. ಇದರೊಂದಿಗೆ ಆಸ್ಪತ್ರೆಯ ಪ್ರೊಜೆಕ್ಟ್‌ ಕೆಲಸ, ಡ್ಯುಟಿ ಎಂಗೇಜ್‌ಮೆಂಟ್ ಮುಂತಾದ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಿದರು. 'ಸೋಂಕಿತರನ್ನು ಮಲ– ಮೂತ್ರ ವಿಸರ್ಜನೆಗೆ ಕರೆದೊಯ್ಯುವುದು, ಊಟ–ನೀರು ಕೊಡುವುದು, ಸಂಬಂಧಿಕರಿಗೆ ಧೈರ್ಯ ಹೇಳುವುದು, ಕುಟುಂಬದವರೊಂದಿಗೆ ಸಂವಹನ ಏರ್ಪಡಿಸುವುದು, ಯೋಗ– ಧ್ಯಾನ ಹೇಳಿಕೊಡುವುದು ಮುಂತಾದ ಗುರುತರ ಜವಾಬ್ದಾರಿ ನಿರ್ವಹಿಸಿದೆ. ದೇವರ ಸೇವೆ ಮಾಡಲು ಒಂದು ಅವಕಾಶ ಸಿಕ್ಕಿತು. ಮಾಡಿದೆ' ಎನ್ನುತ್ತಾರೆ ರಾಚಣ್ಣ. ಅನ್ನ, ಆರೋಗ್ಯಕ್ಕೆ ಹೆಸರಾದ ಜಿ99, ಜಿ55 ಕಲಬುರ್ಗಿ: ಏಳು ವರ್ಷಗಳಿಂದ ಕಲಬುರ್ಗಿ ಜಿಲ್ಲೆಯಲ್ಲಿ 'ಜಿ–99' ಮತ್ತು 'ಜಿ–55' ತಂಡಗಳು ಸಮಾಜ ಸೇವೆಯಲ್ಲಿ ತೊಡಗಿವೆ. ಈ ತಂಡಗಳ ನಿರ್ಮಾತೃ ಸಮಾಜ ಸೇವಕ ಶರಣು ಪಪ್ಪಾ. ಆರಂಭದಲ್ಲಿ ಏಕಾಂಗಿಯಾಗಿ ಬಡವರ ಸೇವೆ ಮಾಡುತ್ತಿದ್ದ ಅವರನ್ನು ಕಂಡು ಹಲವರು ಸ್ವಯಂಪ್ರೇರಿತರಾಗಿ ಕೈ ಜೋಡಿಸಿದರು. ಆಗ 99 ಮಂದಿಯ ಒಂದು ತಂಡ ರಚನೆಯಾಯಿತು. ಮತ್ತಷ್ಟು ಸದಸ್ಯರ ಸಂಖ್ಯೆ ಹೆಚ್ಚಾದಾಗ 55 ಸದಸ್ಯರ ಇನ್ನೊಂದು ತಂಡ ರಚಿಸಲಾಯಿತು. ಇದರಲ್ಲಿರುವ ಪ್ರತಿಯೊಬ್ಬ ಸದಸ್ಯ ತಮ್ಮ ಸ್ವಂತ ದುಡಿಮೆಯಲ್ಲಿ ಪ್ರತಿ ತಿಂಗಳು ₹ 500 ದೇಣಿಗೆ ನೀಡುತ್ತಾರೆ. ಹೀಗೆ ಸಂಗ್ರಹವಾಗುವ ₹ 77 ಸಾವಿರವನ್ನು ಪ್ರತಿ ತಿಂಗಳೂ ಈ ತಂಡ ಬಡವರ ವೈದ್ಯಕೀಯ ವೆಚ್ಚಕ್ಕೆ ನೀಡುತ್ತದೆ. ಲಾಕ್‌ಡೌನ್‌ ವೇಳೆ ತಂಡದ ಸದಸ್ಯರು ಪ್ರತಿ ದಿನ 500ಕ್ಕೂ ಹೆಚ್ಚು ಬೀದಿ ಬದಿ ಜನ, ವ್ಯಾಪರಿಗಳಿಗೆ ದೈನಂದಿನ ಎರಡು ಊಟ ನೀಡಲು ಶುರು ಮಾಡಿದರು. ಮನೆಗಳಿಗೆ ತರಕಾರಿ ವಿತರಿಸಿದರು. ಬಡವರು, ಕಾರ್ಮಿಕರು, ವಲಸಿಗರು, ವೃದ್ಧಾಶ್ರಮದ ವಾಸಿಗಳಿಗೆ, ಅಸಹಾಯಕರಿಗೆ ಎರಡು ತಿಂಗಳಿಗೆ ಸಾಲುವಷ್ಟು ದಿನಸಿ ಕಿಟ್‌ಗಳನ್ನು ವಿತರಿಸಿದರು. ಲಾಕ್‌ಡೌನ್‌ ಅವಧಿ ಮುಗಿಯುವವರೆಗೆ 4500ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ವಿತರಿಸಲಾಗಿದೆ. ಮಾಸ್ಕ್‌, ಸ್ಯಾನಿಟೈಸರ್‌, ಕೈಗವಸು ನೀಡಿದೆ. ತಂಡದ ಸದಸ್ಯರು ರಕ್ತದಾನ ಸಹ ಮಾಡಿದ್ದು ವಿಶೇಷ. ಸಮಾಜಕ್ಕೆ 'ಪ್ರೇರಣೆ'ಯಾದ ತಂಡ ಕಲಬುರ್ಗಿ: ನರೋಣ ಗ್ರಾಮದ ರಕ್ಷಿತಾ ಮಹಾದೇವಪ್ಪ ಲಾಡವಂತಿ ಬಿ.ಎಸ್ಸಿ ಕೃಷಿ ಪದವೀಧರೆ. ನಾಲ್ಕು ವರ್ಷಗಳ ಹಿಂದೆ ತಮ್ಮ ಕಿರಿಯ ವಯಸ್ಸಿನಲ್ಲಿಯೇ ಸಮಾಜ ಸೇವೆಗೆ ಮುಂದಾದರು. ಸ್ನೇಹಿತರು ಕೈ ಜೋಡಿಸಿದಾಗ 2019ರಲ್ಲಿ 'ಪ್ರೇರಣಾ' ಎಂಬ ಸಂಘ ಕಟ್ಟಿಕೊಂಡರು. ರೈತರು, ಬಡವರು, ಪೌರಕಾರ್ಮಿಕರು, ತರಕಾರಿ ವ್ಯಾಪಾರಸ್ಥರು, ವೃದ್ಧರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಿದರು. ಲಾಕ್‌ಡೌನ್‌ ಸಂದರ್ಭದಲ್ಲಿ ಊಟ, ಬಟ್ಟೆಗಾಗಿ ಪರದಾಡುತ್ತಿದ್ದ ಜನರ ನೆರವಿಗೆ ಈ ತಂಡದ 25 ಜನರು ಸಜ್ಜಾದರು. ₹ 2.5 ಲಕ್ಷದ ಆಹಾರ ಸಾಮಗ್ರಿ ವಿತರಿಸಿದರು. 2000ಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್‌, ಸ್ಯಾನಿಟೈಸರ್, ಮಾಸ್ಕ್‌ ವಿತರಿಸಿದರು. ರೆಕ್‌ಡ್ರಾಸ್ ಮತ್ತು ವಿವಿಧ ಇಲಾಖೆಗಳ ತಂಡದೊಂದಿಗೆ ಹಳ್ಳಿಗಳಿಗೆ ಹೋಗಿ ಅರಿವು ಮೂಡಿಸಿದರು. ಸ್ಲಂ ಪ್ರದೇಶ, ಅಲೆಮಾರಿ ಸಮುದಾಯಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನಿರ್ಗತಿಕರಿಗೆ ದಿನವೂ ಸಿದ್ಧಪಡಿಸಿದ ಊಟ ನೀಡಿದರು.‌ ತಂಡದಲ್ಲಿರುವ ವೈದ್ಯರು, ಫಾರ್ಮಾಸಿಸ್ಟ್‌ಗಳೂ ಉಚಿತ ಸೇವೆ ನೀಡುತ್ತಿದ್ದಾರೆ. ಕೊರೊನೋತ್ತರ ಕೂಡ ಈ ತಂಡ ತನ್ನ ಸಮಾಜ ಸೇವೆ ಮುಂದುವರಿಸಿದೆ. ಈ ತಂಡದವರು ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ. ಸಂಬಳದ ಹಣ ಹಾಕಿ, ಸಮಾಜ ಸೇವೆ ಮಾಡುತ್ತಿದ್ದಾರೆ. PVAchievers2021 ಪ್ರಜಾವಾಣಿ ಕೊರೊನಾ ಸೇನಾನಿಗಳು 2021 ವಾಚಕರ ವಾಣಿ: ಸ್ವಾಮೀಜಿಗಳು ಅಭಿನಂದನಾರ್ಹರು ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಲೇಖನ: ತೆರೆಮರೆ ಹೀರೊಗಳಿಗೆ ಪ್ರಣಾಮ ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಇಲ್ಲಿವೆ ಕರುನಾಡಿನ ಸಾಧಕರ ಯಶೋಗಾಥೆಗಳು ಕೊರೊನಾ ಸೇನಾನಿಗಳು 2021- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊರೊನಾ ವಾರಿಯರ್ಸ್ ಕೊರೊನಾ ಸೇನಾನಿಗಳು 2021| ಜನರಿಗೆ ನೆರವಾದ ಚಿಕ್ಕಬಳ್ಳಾಪುರದ ವಾರಿಯರ್‌ಗಳು ಕೊರೊನಾ ಸೇನಾನಿಗಳು 2021- ಪ್ರಜಾವಾಣಿ ಗುರುತಿಸಿದ ಕೋಲಾರದ ಕಣ್ಮಣಿಗಳಿವರು ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಕೋವಿಡ್ ರೋಗಿಗಳ ಆರೈಕೆ ಗರಿಮೆ... ಕೊರೊನಾ ಸೇನಾನಿಗಳು 2021- ಪ್ರಜಾವಾಣಿ ಗುರುತಿಸಿದ ರಾಮನಗರ ಜಿಲ್ಲೆಯ ಸಾಧಕರಿವರು ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರಾ ಡಾರ್ಲಿಂಗ್ ಕೃಷ್ಣ? '); $('#div-gpt-ad-790779-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-790779'); }); googletag.cmd.push(function() { googletag.display('gpt-text-700x20-ad2-790779'); }); },300); var x1 = $('#node-790779 .field-name-body .field-items div.field-item > p'); if(x1 != null && x1.length != 0) { $('#node-790779 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-790779').addClass('inartprocessed'); } else $('#in-article-790779').hide(); } else { _taboola.push({article:'auto', url:'https://www.prajavani.net/district/kalaburagi/pv-achievers-2021-corona-warriors-dr-renuka-katti-staff-nurse-nageshwari-d-group-employ-m-bennurkar-790779.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-790779', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-790779'); }); googletag.cmd.push(function() { googletag.display('gpt-text-300x20-ad2-790779'); }); // Remove current Outbrain //$('#dk-art-outbrain-790779').remove(); //ad before trending $('#mob_rhs1_790779').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-790779 .field-name-body .field-items div.field-item > p'); if(x1 != null && x1.length != 0) { $('#node-790779 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-790779 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-790779'); }); } else { $('#in-article-mob-790779').hide(); $('#in-article-mob-3rd-790779').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-790779','#in-article-799762','#in-article-799759','#in-article-799721','#in-article-799652']; var twids = ['#twblock_790779','#twblock_799762','#twblock_799759','#twblock_799721','#twblock_799652']; var twdataids = ['#twdatablk_790779','#twdatablk_799762','#twdatablk_799759','#twdatablk_799721','#twdatablk_799652']; var obURLs = ['https://www.prajavani.net/district/kalaburagi/pv-achievers-2021-corona-warriors-dr-renuka-katti-staff-nurse-nageshwari-d-group-employ-m-bennurkar-790779.html','https://www.prajavani.net/district/kalaburagi/chincholi-congress-leader-gives-money-to-rss-for-construction-of-ram-temple-799762.html','https://www.prajavani.net/district/kalaburagi/janata-parade-against-amendment-of-agriculture-acts-farmers-voice-799759.html','https://www.prajavani.net/district/kalaburagi/corn-mille-toor-dal-will-distribute-in-ration-says-umesh-katti-799721.html','https://www.prajavani.net/district/kalaburagi/cuk-row-hearing-postponed-feb-10-799652.html']; var vuukleIds = ['#vuukle-comments-790779','#vuukle-comments-799762','#vuukle-comments-799759','#vuukle-comments-799721','#vuukle-comments-799652']; // var nids = [790779,799762,799759,799721,799652]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2021/01/26 11:05:46
https://www.prajavani.net/district/kalaburagi/pv-achievers-2021-corona-warriors-dr-renuka-katti-staff-nurse-nageshwari-d-group-employ-m-bennurkar-790779.html
mC4
ಮುಂದಿನ ಚುನಾವಣೆಗೆ ಬೊಮ್ಮಾಯಿ ನೇತೃತ್ವ | Udayavani – ಉದಯವಾಣಿ Wednesday, 08 Dec 2021 | UPDATED: 05:37 AM IST Team Udayavani, Oct 17, 2021, 7:28 PM IST ಹೊನ್ನಾಳಿ: ಹೊಸ ಕಲ್ಪನೆಯ ದಿಕ್ಸೂಚಿಯಂತೆ ನಡೆದುಕೊಳ್ಳುವ ಸಿಎಂ ಬಸವರಾಜ ಬೊಮ್ಮಾಯಿ ಅಭಿವೃದ್ಧಿಯೊಂದಿಗೆ ಮುನ್ನುಗ್ಗುತ್ತಿದ್ದಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ನ್ಯಾಮತಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ "ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ದಲ್ಲಿ ಕೊರೊನಾದಿಂದ 37,931 ಜನ ಮೃತಪಟ್ಟಿದ್ದಾರೆ. ಕೊರೊನಾದಿಂದ ಮೃತಪಟ್ಟಿರು ವವರ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಹಾಗೂ ಕೇಂದ್ರದಿಂದ 50 ಸಾವಿರ ರೂ. ಸೇರಿ ಒಟ್ಟು 1.5 ಲಕ್ಷ ರೂ. ಪರಿಹಾರ ವಿತರಿಸಲಾಗು ವುದು. ರಾಜ್ಯದ 923 ವಿವಿಧ ಹಟ್ಟಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು. ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಮೂಲ ಗುರಿ ಎಂದರು.
2021/12/08 00:11:57
https://www.udayavani.com/district-news/davanagere-news/r-ashok-speak-about-bommai
mC4
ನಮ್ಮಿಬ್ಬರ ಸ್ವರ್ಗದಲ್ಲಿ ಆಹಾರ, ಹಣಕ್ಕೆ ಯಾವುದೇ ಸ್ಥಾನವಿಲ್ಲ; ಅಲ್ಲಿರುವುದು ಪ್ರೇಮ ಮಾತ್ರ...: ಸೋನಿಯಾ - Varthabharati ನಮ್ಮಿಬ್ಬರ ಸ್ವರ್ಗದಲ್ಲಿ ಆಹಾರ, ಹಣಕ್ಕೆ ಯಾವುದೇ ಸ್ಥಾನವಿಲ್ಲ; ಅಲ್ಲಿರುವುದು ಪ್ರೇಮ ಮಾತ್ರ...: ಸೋನಿಯಾ ವಾರ್ತಾ ಭಾರತಿ : 27 Oct, 2017 ಶಾಹೀನ್,ಸೋನಿಯಾ ತಮ್ಮ ಪುತ್ರಿ ಸುಖ್ತಾರಾಳೊಂದಿಗೆ ಇದು ನಿಜಜೀವನದ ಕಥೆ. ಇದು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಕರಗಿಸುತ್ತದೆ ಮತ್ತು ಕೇವಲ ಮುಗುಳ್ನಗೆಯೊಂದಿಗೂ ಪ್ರೇಮಕಥೆ ಆರಂಭವಾಗುತ್ತದೆ ಎನ್ನುವುದು ನಿಮಗೆ ಅರ್ಥವಾಗುತ್ತದೆ. ಇದು ಅಂತಹ ಶಾಹೀನ್(21) ಮತ್ತು ಸೋನಿಯಾ(19) ದಂಪತಿಯ ಕಥೆ. ಇದನ್ನು ಸೋನಿಯಾಳ ಬಾಯಿಯಿಂದಲೇ ಕೇಳಿ. ಅದೆಲ್ಲವೂ ಮುಗುಳ್ನಗೆಯೊಂದಿಗೆ ಆರಂಭಗೊಂಡಿತ್ತು. ಅದು ಮೊದಲ ನೋಟದ ಪ್ರೇಮವಾಗಿತ್ತು. ಶಾಹೀನ್ ಕಟ್ಟಡ ನಿರ್ಮಾಣ ಕಾರ್ಮಿಕನಾದರೆ ನಾನು ಜವಳಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದೆ. ಊಟದ ಸಮಯದಲ್ಲಿ ನಾನು ಮನೆಗೆ ಮರಳುತ್ತಿದ್ದರೆ ಆತ ದಾರಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ನಿಂತಿರುತ್ತಿದ್ದ. ಅದೊಂದು ದಿನ ಆಕಸ್ಮಿಕವಾಗಿ ನಮ್ಮ ಕಣ್ಣುಗಳು ಪರಸ್ಪರ ಸಂಧಿಸಿದ್ದವು. ನಾನು ಅಂದು ಮುಗುಳ್ನಕ್ಕಿದ್ದು ಏಕೆ ಎನ್ನುವುದು ಗೊತ್ತಿಲ್ಲ, ಪ್ರತಿಯಾಗಿ ಆತನೂ ಮುಗುಳ್ನಗೆ ಬೀರಿದ್ದ. ಇದು ಸುಮಾರು ಒಂದು ವರ್ಷ ಕಾಲ ಹೀಗೆಯೇ ಮುಂದುವರಿದಿತ್ತು. ಅಲ್ಲಿ ಶಾಹೀನ್‌ನ ಕೆಲಸ ಮುಗಿದಿದ್ದರೂ ಅದೆಲ್ಲಿದ್ದರೂ ನಾನು ದಿನನಿತ್ಯ ಊಟಕ್ಕೆ ಹೋಗುವಾಗ ಅಲ್ಲಿ ಬಂದು ನನಗಾಗಿ ಕಾಯುತ್ತಿದ್ದ. ಇಷ್ಟಿದ್ದರೂ ನಾವು ಪರಸ್ಪರ ಒಮ್ಮೆಯೂ ಮಾತನಾಡಿರಲಿಲ್ಲ. ಅದೊಂದು ದಿನ ಮಧ್ಯಾಹ್ನ ಊಟಕ್ಕೆ ತೆರಳುವಾಗ ಆತ ಯಥಾಪ್ರಕಾರ ನನಗಾಗಿ ಕಾದು ನಿಂತಿದ್ದ. ಅದೇಕೋ ಅಂದು ನನ್ನ ಕಾಲುಗಳು ಮುಂದಕ್ಕೆ ಚಲಿಸಿರಲೇ ಇಲ್ಲ. ಆತ ನನ್ನ ಬಳಿಗೆ ಬಂದು ಹಿಂಜರಿಯುತ್ತಲೇ, ರಸ್ತೆಯಲ್ಲಿ ಪರಸ್ಪರರತ್ತ ಮುಗುಳ್ನಗೆ ಬೀರುವ ಬದಲು ನಾವು ಎಲ್ಲಿಯಾದರೂ ಭೇಟಿಯಾಗಲು ಸಾಧ್ಯವಿಲ್ಲವೇ ಎಂದು ಕೇಳಿದ್ದ. ಹಾಗೆ ನಮ್ಮ ಮೊದಲ ಭೇಟಿ ಅಥವಾ ಕಲಿತವರ ಭಾಷೆಯಲ್ಲಿ 'ಮೊದಲ ಡೇಟಿಂಗ್' ನ್ಯಾಷನಲ್ ಮ್ಯೂಝಿಯಂನಲ್ಲಿ ನಿಗದಿಗೊಂಡಿತ್ತು. ಅಲ್ಲಿ ಒಂದೇ ಕಡೆ ಅಷ್ಟೆಲ್ಲ ವಸ್ತುಗಳನ್ನು ನೋಡಿ ನಾವು ಬೆರಗಾಗಿದ್ದೆವು. ಅಲ್ಲಿದ್ದ ರಾಜರು ಮತ್ತು ರಾಣಿಯರಿಗೆ ಸೇರಿದ ವಸ್ತುಗಳನ್ನು ನಾನು ಅಚ್ಚರಿಯಿಂದ ನೋಡುತ್ತ ಸಂಭ್ರಮಿಸುತ್ತ ಸಾಗುತ್ತಿದ್ದಾಗ ನನ್ನನ್ನು ನಿಲ್ಲಿಸಿದ ಶಾಹೀನ್,'ನೀನು ನನ್ನ ರಾಣಿಯಾಗುವೆಯಾ' ಎಂದು ಪ್ರಶ್ನಿಸಿದ್ದ. ನಾನು ತಕ್ಷಣ ನಕ್ಕು 'ಯಾವಾಗ'ಎಂದು ಪ್ರಶ್ನಿಸಿದ್ದೆ. ಅದಕ್ಕೆ ಶಾಹೀನ್ ಕೂಡ ಮುಖದ ತುಂಬ ನಗುವನ್ನು ತುಂಬಿಕೊಂಡು,ಇಂದೇ ಆಗೋಣವೇ ಎಂದು ಕೇಳಿದ್ದ. ಹಾಗೆ ನಮ್ಮ ಮೊದಲ ಭೆಟಿಯ ದಿನವೇ ನಾವು ಮದುವೆ ಮಾಡಿಕೊಂಡಿದ್ದೆವು. ಆ ದಿನದ ನೆನಪಿಗಾಗಿ ಮ್ಯೂಝಿಯಂನ ಪ್ರವೇಶ ಚೀಟಿಗಳು ಈಗಲೂ ನನ್ನ ಬಳಿಯಿವೆ. ನನ್ನ ಗಂಡ ಕೆಲಸವಿಲ್ಲದೆ ಮನೆಯಲ್ಲಿ ಕುಳಿತ ದಿನಗಳಲ್ಲಿ ನಾವು ಉಪವಾಸ ಕಳೆದದ್ದಿದೆ. ಅಂತಹ ಮಳೆಯ ದಿನಗಳಲ್ಲಿ ನಾವಿಬ್ಬರು ಎರಡು ಕಪ್ ಚಹಾ ಮತ್ತು ಬ್ರೆಡ್‌ನ ತುಣುಕಿನೊಂದಿಗೆ ಒಬ್ಬರನ್ನೊಬ್ಬರು ಆಧರಿಸಿದ್ದೆವು. ಶಾಹೀನ್‌ಗೆ ಆಗಾಗ್ಗೆ ಚಹಾ ಗುಟುಕರಿಸುವುದು ಅಭ್ಯಾಸ. ಆತನಿಗೆ ಚಹಾವಿಲ್ಲದ ದಿನ ಬಾರದಂತೆ ನೋಡಿಕೊಳ್ಳಲು ನಾನು ರಹಸ್ಯವಾಗಿ ಪುಡಿಗಾಸನ್ನು ಉಳಿತಾಯ ಮಾಡುತ್ತಿರುತ್ತೇನೆ. ನಮ್ಮ ಬಳಿ ರಾಜ್ಯವಿಲ್ಲದಿರಬಹುದು ಅಥವಾ ರಾಜರು ಮತ್ತು ರಾಣಿಯರು ಹೊಂದಿದ್ದ ಸಂಪತ್ತು ಇಲ್ಲದಿರಬಹುದು. ಆದರೆ ನಾವು ನಮ್ಮದೇ ಸ್ವರ್ಗವನ್ನು ಸೃಷ್ಟಿಸಿಕೊಂಡಿದ್ದೇವೆ ಮತ್ತು ಈ ಸ್ವರ್ಗದಲಲಿ ಆಹಾರ ಮತ್ತು ಹಣಕ್ಕೆ ಯಾವುದೇ ಸ್ಥಾನವಿಲ್ಲ. ಅಲ್ಲಿ ಇರುವುದು ನಮ್ಮಿಬ್ಬರ ಪ್ರೇಮ ಮಾತ್ರ....
2018/10/21 18:35:30
http://m.varthabharati.in/article/2017_10_27/100955
mC4
ರಾಮನಗರ: ಆಸ್ತಿಪತ್ರ ವಿತರಣೆಗೆ ಅ.2ರ ಗುರಿ | Prajavani swamitva project in Ramanagara ಗೋಪಹಳ್ಳಿ, ಕಾಳಾರಿ ಕಾವಲ್‌ ಗ್ರಾ.ಪಂ. ಗಳಲ್ಲಿ ಸ್ವಮಿತ್ವ ಯೋಜನೆಯ ಪ್ರಾಯೋಗಿಕ ಅನುಷ್ಟಾನ ಪ್ರಜಾವಾಣಿ ವಾರ್ತೆ Updated: 06 ಆಗಸ್ಟ್ 2020, 18:35 IST ರಾಮನಗರ: ಡ್ರೋಣ್ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದ ವಸತಿ ಪ್ರದೇಶಗಳಲ್ಲಿನ ಜಮೀನನ್ನು ಭೂಮಾಪನ ಮಾಡಿ ಆಸ್ತಿ ಪತ್ರಗಳನ್ನು ವಿತರಿಸುವ ಸ್ವಮಿತ್ವ ಯೋಜನೆಯ ಪ್ರಾಯೋಗಿಕ ಅನುಷ್ಟಾನವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಅಕ್ಟೋಬರ್‌ 2ರಂದು ಈ ಯೋಜನೆಯ ಫಲಾನುಭವಿಗಳಿಗೆ ಆಸ್ತಿಪತ್ರ ವಿತರಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರದ ಸರ್ವೆ ಆಫ್ ಇಂಡಿಯಾ ಸಂಸ್ಥೆ, ರಾಜ್ಯದ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಇದನ್ನು ಅನುಷ್ಠಾನಗೊಳಿಸುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ 5 ಜಿಲ್ಲೆಗಳ 83 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಪೈಲಟ್ ಯೋಜನೆಯಾಗಿ ರಾಮನಗರ ತಾಲ್ಲೂಕಿನ ಗೋಪಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ 6 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಾಗಡಿ ತಾಲ್ಲೂಕಿನ ಕಾಳಾರಿ ಕಾವಲ್/ಹೊಸಪಾಳ್ಯ ಗ್ರಾಮ ಪಂಚಾಯಿತಿಯ 7 ಗ್ರಾಮಗಳನ್ನು ಎರಡನೇ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. 13 ಗ್ರಾಮಗಳಿಂದ ಸುಮಾರು 5 ಸಾವಿರ ಆಸ್ತಿಗಳನ್ನು ಆಸ್ತಿಗಳನ್ನು ಭೂಮಾಪನ ಮಾಡಿ ಅಕ್ಟೋಬರ್ 2ರಂದು ಆಸ್ತಿ ಪತ್ರವನ್ನು ವಿತರಿಸುವ ಗುರಿಯನ್ನು ಜಿ.ಪಂ. ಹೊಂದಿದೆ. ಈಗಾಗಲೇ ಗೋಪಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಆಸ್ತಿಗಳನ್ನು ಗುರುತಿಸುವ ಮತ್ತು ಡ್ರೋಣ್ ಮೂಲಕ ಛಾಯಾಚಿತ್ರವನ್ನು ಸೆರೆಹಿಡಿಯುವ ಕಾರ್ಯವು ಪೂರ್ಣಗೊಂಡಿದೆ. ಕಾಳಾರಿ ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಆಸ್ತಿಗಳನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ವಿಶೇಷ ಸಭೆ: ಯೋಜನೆಯ ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಗ್ರಾಮ ಸಭೆಯನ್ನು ನಡೆಸಿ ಜನಪ್ರತಿನಿಧಿಗಳಿಗೆ ಮತ್ತು ಗ್ರಾಮಸ್ಥರಿಗೆ ಯೋಜನೆ ಅನುಷ್ಠಾನ ಬಗ್ಗೆ, ಯೋಜನೆಯ ಪ್ರಯೋಜನಗಳ ಬಗ್ಗೆ ಮತ್ತು ಗ್ರಾಮಸ್ಥರು ನೀಡಬೇಕಾದ ಸಹಕಾರದ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ನಂತರ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಂದಿಗೆ ಭೂಮಾಪಕರು ಪ್ರತಿಯೊಂದು ಆಸ್ತಿಯ ಗಡಿಗಳನ್ನು ಆಸ್ತಿಯ ಮಾಲೀಕರ ಸಮ್ಮುಖದಲ್ಲಿ ಪರಿಶೀಲಿಸಿ, ಗಡಿಗಳ ಅಂಚುಗಳನ್ನು ಸುಣ್ಣದಲ್ಲಿ ಗುರುತಿಸುತ್ತಾರೆ. ಆಸ್ತಿಯ ಗಡಿಗಳನ್ನು ಗುರುತಿಸಿದ ನಂತರ ಡ್ರೋಣ್ ಮೂಲಕ ಗ್ರಾಮದ ಆಸ್ತಿಗಳ ಛಾಯಾಚಿತ್ರವನ್ನು ಸೆರೆ ಹಿಡಿಯಲಾಗುವುದು. ಈ ಛಾಯಚಿತ್ರಗಳನ್ನು ಸಂಸ್ಕರಿಸಿ, ಸುಣ್ಣದಲ್ಲಿ ಗುರುತಿಸಲಾದ ಅಂಚುಗಳನ್ನು ಆಧರಿಸಿ ಪ್ರತಿಯೊಂದು ಆಸ್ತಿಯ ನಕ್ಷೆ ತಯಾರಿಸಿ, ನಕ್ಷೆಯನ್ನು ಜಮೀನಿನೊಂದಿಗೆ ತಾಳೆ ಮಾಡಲಾಗುವುದು. ಆನಂತರ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅವಶ್ಯವಿದ್ದಲ್ಲಿ ಆಸ್ತಿ ಮಾಲೀಕರಿಂದ ದಾಖಲೆಗಳನ್ನು ಪಡೆದುಕೊಂಡು ನಕ್ಷೆ ಮತ್ತು ಕರಡು ಆಸ್ತಿ ಪತ್ರವನ್ನು ಸಿದ್ಧಪಡಿಸಿ ಆಸ್ತಿ ಮಾಲೀಕರಿಗೆ ವಿತರಿಸಲಾಗುವುದು. ಕರಡು ನಕ್ಷೆ ಮತ್ತು ಆಸ್ತಿ ಪತ್ರದ ಬಗ್ಗೆ ಆಸ್ತಿ ಮಾಲೀಕರಿಂದ ಆಕ್ಷೇಪಣೆಗಳು/ತಕರಾರು ಇದ್ದಲ್ಲಿ ಇತ್ಯರ್ಥಪಡಿಸಿ ಅಂತಿಮ ಆಸ್ತಿ ಪತ್ರವನ್ನು ವಿತರಿಸಲಾಗುವುದು. ಗ್ರಾಮದಲ್ಲಿ ವಸತಿ ಪ್ರದೇಶದ ಆಸ್ತಿ ಮಾಲೀಕರು ಭೂಮಾಪಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಆಸ್ತಿಗಳ ಗಡಿಗಳನ್ನು ಗುರುತಿಸುವಾಗ ಸ್ಥಳದಲ್ಲಿ ಹಾಜರಿದ್ದು, ತಮ್ಮ ಆಸ್ತಿಯ ಗಡಿಗಳನ್ನು ತೋರಿಸಲು ಹಾಗೂ ಆಸ್ತಿಯ ಬಗ್ಗೆ ತಮ್ಮಲ್ಲಿರುವ ದಾಖಲೆಗಳನ್ನು ಸಿಬ್ಬಂದಿ ಕೇಳಿದಾಗ ಸಲ್ಲಿಸಬೇಕು. ಹೀಗೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಯೋಜನೆ ಯಶಸ್ವಿ ಆಗುತ್ತದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ. ಗ್ರಾಮೀಣ ವಸತಿ ಪ್ರದೇಶಗಳ ಆಸ್ತಿಯ ಗಡಿಗಳನ್ನು ನಿರ್ಧರಣೆ ಮಾಡಿ ಹಕ್ಕು ದಾಖಲೆಗಳನ್ನು ಕಾಲೋಚಿತಗೊಳಿಸುವುದು. ಆಸ್ತಿ ಮಾಲೀಕರಿಗೆ ನಕ್ಷೆ ಸಹಿತ ಆಸ್ತಿ ಪತ್ರಗಳನ್ನು ವಿತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಆಸ್ತಿ ಮಾಲೀಕರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದ ಸುಲಭವಾಗುತ್ತದೆ. ಹಣಕಾಸು ಸಂಸ್ಥೆಗಳು ಈ ದಾಖಲೆಗಳ ಖಾತ್ರಿಯಿಂದಾಗಿ ಜನರಿಗೆ ಹೆಚ್ಚಿನ ಹಣಕಾಸು ಸೇವೆಗಳನ್ನು ಒದಗಿಸಲು ಅನುಕೂಲವಾಗುತ್ತದೆ. ಪ್ರತಿಯೊಂದು ಆಸ್ತಿಯ ಆಸ್ತಿ ತೆರಿಗೆಯನ್ನು ಸ್ಪಷ್ಟವಾಗಿ ಮತ್ತು ವೈಜ್ಞಾನಿಕವಾಗಿ ನಿರ್ಧರಿಸಲು ದಾರಿ ಮಾಡಿಕೊಡುತ್ತದೆ, ಇದರಿಂದ ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗಿ, ನಾಗರಿಕರಿಗೆ ಅತ್ಯುತ್ತಮ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಅಲ್ಲದೆ ಆಸ್ತಿಯ ಮಾಲೀಕರು ಕಟ್ಟಡ ಪರವಾನಗಿಯನ್ನು ಪಡೆಯುವ ಪ್ರಕ್ರಿಯೆ ಸರಳವಾಗುತ್ತದೆ. ಸರ್ಕಾರಿ ಆಸ್ತಿಯಲ್ಲಿನ ಅಕ್ರಮ ಸ್ವಾಧೀನವನ್ನು ತೆರವುಗೊಳಿಸಬಹುದಾಗಿರುತ್ತದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು. ಜಿಲ್ಲೆಯ ಎರಡು ಗ್ರಾ.ಪಂ.ಗಳಲ್ಲಿ ಸ್ವಮಿತ್ವ ಯೋಜನೆ ಪ್ರಾಯೋಗಿಕ ಅನುಷ್ಟಾನ ಪ್ರಗತಿಯಲ್ಲಿದೆ. ಅಕ್ಟೋಬರ್‌ 2ರ ಒಳಗೆ ಇಲ್ಲಿನ ಜನರಿಗೆ ಆಸ್ತಿಪತ್ರ ವಿತರಿಸಲಾಗುವುದು. -ಇಕ್ರಂ, ಜಿ.ಪಂ. ಸಿಇಒ '); $('#div-gpt-ad-751268-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-751268'); }); googletag.cmd.push(function() { googletag.display('gpt-text-700x20-ad2-751268'); }); },300); var x1 = $('#node-751268 .field-name-body .field-items div.field-item > p'); if(x1 != null && x1.length != 0) { $('#node-751268 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-751268').addClass('inartprocessed'); } else $('#in-article-751268').hide(); } else { _taboola.push({article:'auto', url:'https://www.prajavani.net/district/ramanagara/swamitva-project-in-ramanagara-751268.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-751268', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-751268'); }); googletag.cmd.push(function() { googletag.display('gpt-text-300x20-ad2-751268'); }); // Remove current Outbrain //$('#dk-art-outbrain-751268').remove(); //ad before trending $('#mob_rhs1_751268').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-751268 .field-name-body .field-items div.field-item > p'); if(x1 != null && x1.length != 0) { $('#node-751268 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-751268 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-751268'); }); } else { $('#in-article-mob-751268').hide(); $('#in-article-mob-3rd-751268').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-751268','#in-article-766859','#in-article-766685','#in-article-766537','#in-article-766516']; var twids = ['#twblock_751268','#twblock_766859','#twblock_766685','#twblock_766537','#twblock_766516']; var twdataids = ['#twdatablk_751268','#twdatablk_766859','#twdatablk_766685','#twdatablk_766537','#twdatablk_766516']; var obURLs = ['https://www.prajavani.net/district/ramanagara/swamitva-project-in-ramanagara-751268.html','https://www.prajavani.net/district/ramanagara/covid19-coronavirus-update-766859.html','https://www.prajavani.net/district/ramanagara/the-meeting-decision-to-hand-over-to-the-acb-766685.html','https://www.prajavani.net/district/ramanagara/congress-angry-over-bjp-governments-new-bills-766537.html','https://www.prajavani.net/district/ramanagara/no-chance-for-duplicate-voters-jds-766516.html']; var vuukleIds = ['#vuukle-comments-751268','#vuukle-comments-766859','#vuukle-comments-766685','#vuukle-comments-766537','#vuukle-comments-766516']; // var nids = [751268,766859,766685,766537,766516]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2020/10/01 13:03:10
https://www.prajavani.net/district/ramanagara/swamitva-project-in-ramanagara-751268.html
mC4
ಏರ್ ಸ್ಟ್ರೈಕ್ ನಂತರ ಉತ್ತರ ಪ್ರದೇಶದಲ್ಲಿ ಬದಲಾಗಲಿದೆಯೆ ಬಿಜೆಪಿ ಲಕ್ಕು? | Poll survey : BJP to gain post air strike in Uttar Pradesh - Kannada Oneindia 4 min ago ಉದ್ಧವ್ ಠಾಕ್ರೆ ಹೇಳಿಕೆ; ಪ್ರತಿಕೃತಿ ದಹನ, ಕರವೇಯಿಂದ ಎಚ್ಚರಿಕೆ 7 min ago ರೈತರ ಬೆಂಬಿಲಿಸಿ ಜನವರಿ 20ರಂದು ಬೃಹತ್ ಹೋರಾಟ: ಡಿಕೆ ಶಿವಕುಮಾರ್ 7 min ago ಇದು 'ಮಹಾ' ಮುಖಭಂಗದ ಸುದೀರ್ಘ ಕತೆ: ಏನಿದು ಉಭಯ ರಾಜ್ಯಗಳ ಗಡಿ ವಿವಾದ? | Updated: Monday, March 11, 2019, 11:20 [IST] Lok Sabha Elections 2019 : ಏರ್ ಸ್ಟ್ರೈಕ್ ನಂತರ ಬಿಜೆಪಿ ಅದೃಷ್ಟ ಬದಲಾಗುತ್ತಾ? | Oneindia Kannada ನವದೆಹಲಿ, ಮಾರ್ಚ್ 11 : ದೇಶದ ಅತೀದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ನಂತರ ಮೇ 23ರಂದು ಪ್ರಕಟವಾಗಲಿರುವ ಫಲಿತಾಂಶ ಭಾರೀ ಕುತೂಹಲ ಹುಟ್ಟಿಸಲಿದೆ. ಇರುವ 80 ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟು ಕ್ಷೇತ್ರಗಳು ಯಾವ ಪಕ್ಷಕ್ಕೆ ಒಲಿಯಲಿವೆ? ಹಿಂದೆ ಕೂಡ ಹಲವಾರು ಸಂಸ್ಥೆಗಳು ಈ ಬಗ್ಗೆ ಸಮೀಕ್ಷೆಗಳನ್ನು ನಡೆಸಿವೆ. ಭಾರತೀಯ ಜನತಾ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದರೆ ಏನಾಗಲಿದೆ, ಬಿಡಿಬಿಡಿಯಾಗಿ ಸ್ಪರ್ಧೆಗಿಳಿದರೆ ಯಾರಿಗೆ ಎಷ್ಟು ಸೀಟುಗಳು ಲಭಿಸಲಿವೆ ಇತ್ಯಾದಿ ಇತ್ಯಾದಿ ವರದಿಗಳು ಬಂದಿವೆ. ಆದರೆ, ಇಂಡಿಯಾ ಟಿವಿ ಮತ್ತು ಸಿಎನ್ಎಕ್ಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಎಲ್ಲಾ ರಾಜಕೀಯ ಪಕ್ಷಗಳ ಹುಬ್ಬೇರುವಂತೆ ಮಾಡಿದೆ. ಏಕೆಂದರೆ, ಈ ಸಮೀಕ್ಷೆಯನ್ನು ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ಏರ್ ಸ್ಟ್ರೈಕ್ ನಂತರ ನಡೆಸಿದ್ದಾಗಿದೆ. ಏರ್ ಸ್ಟ್ರೈಕನ್ನು ಯಾವುದೇ ರಾಜಕೀಯ ಪಕ್ಷ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ಬಗ್ಗೆ ವಾದ-ವಿವಾದಗಳು, ಅಭಿಪ್ರಾಯಗಳು ಏನೇ ಇರಲಿ, ಯಾವುದೇ ರಾಜಕೀಯ ಪಕ್ಷ ಏರ್ ಸ್ಟ್ರೈಕನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದಿದ್ದರೂ ಜನರ ಅಭಿಪ್ರಾಯವನ್ನು ಬದಲಿಸಲು ಸಾಧ್ಯವಿಲ್ಲ ಅಲ್ಲವೆ? ಬಿಜೆಪಿಗೆ ವರವಾಗಲಿದೆಯೇ ಏರ್ ಸ್ಟ್ರೈಕ್ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 80 ಕ್ಷೇತ್ರಗಳಲ್ಲಿ 41 ಕ್ಷೇತ್ರಗಳನ್ನು ಬಾಚಿಕೊಳ್ಳಲಿದೆ ಎಂದು ಈ ಸಮೀಕ್ಷೆ ವರದಿ ಮಾಡಿದೆ. ಇದು ಬಿಜೆಪಿ ವಿರೋಧಿ ಪಕ್ಷಗಳಿಗೆ ಸ್ವಲ್ಪ ನಡುಕ ತಂದರೂ ಅಚ್ಚರಿಯಿಲ್ಲ. ಇನ್ನು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಮಾಯಾವತಿ ಅವರ ನಾಯಕತ್ವದ ಬಹುಜನ ಸಮಾಜವಾದಿ ಪಕ್ಷ ಮತ್ತು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕ ದಳ ರಚಿಸಿಕೊಂಡಿರುವ ಮಹಾಘಟಬಂಧನ್ ಕೇವಲ 35 ಸೀಟುಗಳನ್ನು ಮಾತ್ರ ಗೆಲ್ಲಲು ಯಶಸ್ವಿಯಾಗಲಿದೆ. ಇದು ಹಿಂದಿನ ಸಮೀಕ್ಷೆಗಳಲ್ಲಿ ಹೇಳಿದ್ದಕ್ಕಿಂತ ಕಡಿಮೆಯಾಗಿರುವುದು ಮಹಾಘಟಬಂಧನ್ ಗೆ ತಲೆನೋವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ. ಏರ್ ಸ್ಟ್ರೈಕ್ ನಂತರ ಬಿಜೆಪಿ ಜನಪ್ರಿಯತೆ ಏರಿಕೆ ಇದೇ ಸಿಎನ್ಎಕ್ಸ್ ಸಂಸ್ಥೆ ಪುಲ್ವಾಮಾ ದಾಳಿಯ ನಂತರ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 29 ಸೀಟುಗಳನ್ನು ಗೆಲ್ಲತ್ತದೆ ಎಂದು ತಿಳಿಸಿತ್ತು. ಏರ್ ಸ್ಟ್ರೈಕ್ ನಂತರ ಖಂಡಿತವಾಗಿ ಬಿಜೆಪಿಯ ಜನಪ್ರಿಯತೆ ಬೆಳೆದಿರುವುದು ಈ ಸಮೀಕ್ಷೆಯಿಂದ ಸಾಬೀತಾಗುತ್ತಿದೆ. ಆದರೆ, ಅದೇ ಮಹಾಘಟಬಂಧನ್ 49 ಲೋಕಸಭೆ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಆ ಸಮೀಕ್ಷೆ ಹೇಳಿತ್ತು. ಆದರೆ, ಕೇವಲ ಹನ್ನೆರಡು ದಿನಗಳಲ್ಲಿ ನಡೆಸಿದ ಏರ್ ಸ್ಟ್ರೈಕ್ ಈ ಚಿತ್ರಣವನ್ನು ಬದಲಾಯಿಸಿದೆ. ಎಸ್ಬಿ, ಬಿಎಸ್ಪಿ ಮೈತ್ರಿಕೂಡ ಕನಿಷ್ಠ ಹದಿನಾಲ್ಕು ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದೆ. ಕಾಂಗ್ರೆಸ್ ಹಣೆಬರಹದಲ್ಲಿ ಬದಲಾವಣೆ ಇಲ್ಲ ಕಾಂಗ್ರೆಸ್ಸಿನ ಹಣೆಬರಹದಲ್ಲಿ ಅಂತಹ ಬದಲಾವಣೆ ಕಂಡುಬರುವುದಿಲ್ಲ. ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಸೀಟು ಮಾತ್ರ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಎರಡು ಸೀಟು ಹೆಚ್ಚಿಗೆ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇದು, ಬಿಜೆಪಿಯನ್ನು ಕೇಂದ್ರದಲ್ಲಿ ಕೆಡವಿ ಮತ್ತೆ ಅಧಿಕಾರ ಗದ್ದುಗೆಯೇರಲು ಭಾರೀ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ಸಿಗೆ ಅಂತಹ ಹೇಳಿಕೊಳ್ಳುವಂತಹ ಸಾಧನೆಯೇನಲ್ಲ. ಎರಡು ಸೀಟು ಹೆಚ್ಚಿಗೆ ಗೆದ್ದಿದ್ದಕ್ಕೆ ಕಾಂಗ್ರೆಸ್ ಬೀಗುವಂತೆಯೂ ಇಲ್ಲ. ಅಂದ ಹಾಗೆ, ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಅವರು ಕೂಡ ಸ್ಪರ್ಧಿಸುತ್ತಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಈ ಬಾರಿಯೂ ಕ್ರಮವಾಗಿ ಅಮೇಥಿ ಮತ್ತು ರಾಯ್ ಬರೇಲಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ಪ್ರಿಯಾಂಕಾ ವಾದ್ರಾ ಬಂದರೂ ಬದಲಾಗದೆ ಕಾಂಗ್ರೆಸ್ ಲಕ್ಕು? ಬಿಜೆಪಿ ಮತಗಳಿಕೆ ಏರಿಸಿದ ಏರ್ ಸ್ಟ್ರೈಕ್ ಏರ್ ಸ್ಟ್ರೈಕ್ ನಂತರ ಬಿಜೆಪಿ ನೇತೃತ್ವದ ಎನ್‌ಡಿಎನಲ್ಲಿ ಮತಗಳಿಕೆಯ ಶೇಕಡಾವಾರು ಪ್ರಮಾಣ ಕೂಡ ಏರಿಕೆಯಾಗಲಿದೆ. ಬಿಜೆಪಿ ಶೇ.49.95ರಷ್ಟು ಮತಗಳನ್ನು ಗಳಿಸಿದರೆ, ಸಮಾಜವಾದಿ ಪಕ್ಷ ಶೇ.17 ಮತ್ತು ಬಹುಜನ ಸಮಾಜ ಪಕ್ಷ ಶೇ.18.03ಯಷ್ಟು ಮತಗಳನ್ನು ಗಳಿಸಲಿವೆ. ನಾಲ್ಕನೇ ಸ್ಥಾನದಲ್ಲಿ ಕಾಂಗ್ರೆಸ್ ಕೇವಲ ಶೇ.11.37ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 71 ಸೀಟು ಗೆದ್ದಿದ್ದರೆ, ಸಮಾಜವಾದಿ ಪಕ್ಷ 5ರಲ್ಲಿ ಗೆದ್ದಿತ್ತು. ಕಾಂಗ್ರೆಸ್ ಕೇವಲ 2 ಸೀಟು ಗೆದ್ದಿದ್ದರೆ, ಈಬಾರಿ ಭಾರೀ ಹುಮ್ಮಸ್ಸಿನಲ್ಲಿರುವ ಮಾಯಾವತಿ ಅವರು ಕಳೆದ ಬಾರಿ ಗೆದ್ದಿದ್ದು ಶೂನ್ಯ. ಏರ್ ಸ್ಟ್ರೈಕ್ ಗೆ ಸಾಕ್ಷ್ಯ ಕೊಡಬೇಕಾ? ಈ ರೀತಿ ಬದಲಾವಣೆಗಳಾಗಲು ಕಾರಣಗಳೂ ಇಲ್ಲದಿಲ್ಲ. ಪಾಕಿಸ್ತಾನ ಬೆಂಬಲಿಸುತ್ತಿರುವ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ತಾಣಗಳ ಮೇಲೆ ನಡೆಸಿದ ಏರ್ ಸ್ಟ್ರೈಕನ್ನು ನಡೆಸಿದ್ದಕ್ಕೆ ಕೇಂದ್ರ ಸರಕಾರ ಸಾಕ್ಷ್ಯ ಕೊಡಬೇಕು ಎಂದು ವಿರೋಧ ಪಕ್ಷದವರು ಆಗ್ರಹಿಸಿದ್ದನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, ಶೇ.56.91ರಷ್ಟು ಜನ 'ಇಲ್ಲ' ಎಂದು ಹೇಳಿದ್ದರು, ಶೇ.22ರಷ್ಟು 'ಹೌದು' ಎಂದಿದ್ದರೆ, ಶೇ.21.09ರಷ್ಟು ಜನ 'ಗೊತ್ತಿಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಹುಜನರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿರುವುದು ಇದರಿಂದ ನಿಚ್ಚಳವಾಗಿದೆ. ಏರ್ ಸ್ಟ್ರೈಕ್ ನಡೆಸಿದ ನಂತರ ಆಯ್ಕೆ ಬದಲಾಗಿದೆಯೆ ಏರ್ ಸ್ಟ್ರೈಕ್ ನಡೆಸಿದ ನಂತರ ನಿಮ್ಮ ಆಯ್ಕೆ ಬದಲಾಗಿದೆಯೆ ಎಂದು ಕೇಳಿದ ಪ್ರಶ್ನೆಗೂ ಶೇ.32.05ರಷ್ಟು ಜನರು 'ಸಾಕಷ್ಟು ಬದಲಾವಣೆ' ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.40.65ರಷ್ಟು ಮತದಾರರು 'ಅಷ್ಟೇನೂ ಇಲ್ಲ' ಎಂದಿದ್ದಾರೆ, ಶೇ.27.30ರಷ್ಟು ಜನರು 'ಏನನ್ನೂ ಹೇಳಲಾರೆ' ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಪಾಕಿಸ್ತಾನದ ವಿರುದ್ಧ ಯುದ್ಧವೊಂದೇ ಎರಡೂ ದೇಶಗಳ ನಡುವಿನ ಸಮಸ್ಯೆಗಳಿಗೂ ಪರಿಹಾರವೇ ಎಂಬ ಪ್ರಶ್ನೆಗೆ ಶೇ.62.82ರಷ್ಟು ಜನರು 'ಹೌದು, ಯುದ್ಧ ಬೇಕು' ಎಂದು ಹೇಳಿದ್ದಾರೆ. ಶೇ.25.79ರಷ್ಟು ಜನರು 'ಯುದ್ಧ ಬೇಡವೇ ಬೇಡ' ಎಂದಿದ್ದರೆ, ಶೇ.11.39ರಷ್ಟು ಜನರು 'ನಮಗಿದರ ಬಗ್ಗೆ ಅಷ್ಟು ಗೊತ್ತಿಲ್ಲ' ಎಂದು ನುಡಿದಿದ್ದಾರೆ. ಉಗ್ರವಾದವನ್ನು ಪ್ರಾಮಾಣಿಕವಾಗಿ ಹತ್ತಿಕ್ಕಿದವರು ಈಗಿರುವ ಮತ್ತು ಹಿಂದಿರುವ ಯಾವ ಸರಕಾರ ಭಯೋತ್ಪಾದನೆಯನ್ನು ಅತ್ಯಂತ ಸಮರ್ಥವಾಗಿ ಮತ್ತು ಅತ್ಯಂತ ಪ್ರಾಮಾಣಿಕವಾಗಿ ಹತ್ತಿಕ್ಕಿವೆ ಎಂಬ ಪ್ರಶ್ನೆಗೆ, ಶೇ.48.99ರಷ್ಟು ಜನರು 'ಮೋದಿ ಸರಕಾರ' ಎಂದು ಒಕ್ಕೊರಲಿನಿಂದ ಕೂಗಿದ್ದಾರೆ. ಹಿಂದಿನ ಮನಮೋಹನ ಸಿಂಗ್ ಅವರು ಸರಕಾರಕ್ಕೆ ಸಿಕ್ಕಿದ್ದು ಶೇ.11.62 ಮತಗಳು, ಎರಡೂ ಸರಕಾರಕ್ಕೆ ಸಿಕ್ಕಿದ್ದು ಶೇ.10.48ರಷ್ಟು ಮತಗಳು. ಶೇ.20.81ರಷ್ಟು ಜನರು ಇಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದಿದ್ದರೆ, ಗೊತ್ತಿಲ್ಲ ಅಂದವರು ಶೇ.8.10ರಷ್ಟು ಜನರು ಮಾತ್ರ. ಇನ್ನು, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಬಿಗಿಮುಷ್ಠಿಯಿಂದ ಬಿಡಿಸಿಕೊಂಡು ಬಂದ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂದು ಕೇಳಿದ ಪ್ರಶ್ನೆಗೆ, ಶೇ.75.41ರಷ್ಟು ಜನರು ನರೇಂದ್ರ ಮೋದಿ ಸರಕಾರಕ್ಕೆ ನೀಡಿದ್ದಾರೆ. ಶೇ.10.12ರಷ್ಟು ಜನರು ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ್ದಾರೆ. ಯಡಿಯೂರಪ್ಪ ಕೂಡ ಇದೇ ಹೇಳಿದ್ದರು ಕೆಲದಿನಗಳ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಆಡಿದ್ದ ಒಂದು ಮಾತು ಭಾರೀ ವಿವಾದ ಸೃಷ್ಟಿಸಿತ್ತು. ಅದೇನೆಂದರೆ, 'ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿಜೆಪಿ ಸರಕಾರ ಮಾಡಿದ ಏರ್ ಸ್ಟ್ರೈಕ್ ನಿಂದಾಗಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲಿದೆ' ಎಂದು. ವಿರೋಧ ಪಕ್ಷಗಳು ಯಡಿಯೂರಪ್ಪನವರು ಏರ್ ಸ್ಟ್ರೈಕನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹುಯಿಲೆಬ್ಬಿಸಿದ್ದರು. ಇದು ತುಸುಮಟ್ಟಿಗೆ ತಣ್ಣಗಾಗಿದ್ದರೂ ಏರ್ ಸ್ಟ್ರೈಕ್ ಕರ್ನಾಟಕದಲ್ಲಿ ಬಿಜೆಪಿಗೆ ಅಂತಹ ಲಾಭ ತಂದುಕೊಡುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಏಕೆಂದರೆ, ಬಿಜೆಪಿ ಈ ಬಾರಿ ಕೇವಲ 13 ಸೀಟುಗಳನ್ನು ಮಾತ್ರ ಗೆಲ್ಲಲಿದೆ. ಕಾಂಗ್ರೆಸ್ಸಿಗೆ 13 ಸೀಟುಗಳು ದಕ್ಕಿದರೆ ಉಳಿದೆರಡು ಜೆಡಿಎಸ್ ಪಾಲಾಗಲಿವೆ ಎಂದು ಇದೇ ಸಮೀಕ್ಷೆ ಹೇಳಿದೆ. lok sabha opinion polls 2019 lok sabha elections 2019 uttar pradesh bjp ಲೋಕಸಭೆ ಚುನಾವಣೆ 2019 ಚುನಾವಣಾ ಸಮೀಕ್ಷೆ ಬಿಜೆಪಿ ಉತ್ತರ ಪ್ರದೇಶ Lok Sabha Poll survey 2019: BJP to gain more seats post air strike in Uttar Pradesh in the upcoming Lok Sabha Elections 2019. The survey was conducted by India TV-CNX says, air strike has certainly changed the mood in Uttar Pradesh.
2021/01/19 09:50:16
https://kannada.oneindia.com/news/lucknow/poll-survey-bjp-to-gain-post-air-strike-in-uttar-pradesh-161982.html
mC4
ಟ್ರಯಾಂಗಲ್ ಲವ್ ಸ್ಟೋರಿ, ಪ್ರೀತಿಗಾಗಿ ಶವವಾದ ಯುವಕರು..! – EESANJE / ಈ ಸಂಜೆ October 18, 2021 Sunil Kumar Bodies found with gunshot wounds in UP village case ಮುಜಾಫರ್‍ನಗರ, ಅ.18- ಪ್ರೀತಿ ಕೈಕೊಟ್ಟಿದ್ದರಿಂದ ವಿಚಲಿತರಾದ ಇಬ್ಬರು ಯುವಕರ ಪೈಕಿ ಒಬ್ಬ ಮತ್ತೊಬ್ಬನನ್ನು ಹತ್ಯೆ ಮಾಡಿ, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಮೆ ಮಾಡಿಕೊಂಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ಮುಜಾಫರ್‍ನಗರ ಜಿಲ್ಲೆಯ ದುಹ್ಲೆರ ಗ್ರಾಮದ ಜಮೀನಿನಲ್ಲಿ ಗುಂಡೇಟಿನಿಂದ ಮೃತಪಟ್ಟ ಇಬ್ಬರು ಯುವಕರ ಶವಗಳು ಅ.13ರಂದು ಪತ್ತೆಯಾಗಿದ್ದವು. ಪಾರಸ್ (22), ದೀಪಕ್ (23) ಎಂಬಿಬ್ಬರು ಮೃತಪಟ್ಟಿದ್ದರು. ಯುವಕರ ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಹತ್ಯೆ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ತನಿಖೆ ನಡೆಸಿದ ಪೊಲೀಸರು ಸಾವಿನ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ದೀಪಕ್ ಪಾರಸ್‍ನನ್ನು ಗುಂಡಿಟ್ಟು ಹತ್ಯೆ ಮಾಡಿ, ನಂತರ ತಾನು ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಮುಖ್ಯಾಧಿಕಾರಿ ಅತುಲ್ ಕುಮಾರ್ ತಿಳಿಸಿದ್ದಾರೆ. ಈ ಘಟನೆಯ ಹಿಂದೆ ಒಬ್ಬ ಮಹಿಳೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆ ಸ್ಪಷ್ಟತೆ ಬಂದ ಬಳಿಕ ಮಹಿಳೆಯನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
2022/07/06 22:07:40
https://eesanje.com/bodies-found-with-gunshot/
mC4
ಸವಾಲುಗಳನ್ನು ಮೆಟ್ಟಿ ಮುನ್ನಡೆಯಬೇಕು: ಪ್ರಧಾನಿ ಮೋದಿ Home ರಾಷ್ಟೀಯ ಸವಾಲುಗಳನ್ನು ಮೆಟ್ಟಿ ಮುನ್ನಡೆಯಬೇಕು: ಪ್ರಧಾನಿ ಮೋದಿ ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾಸಿಕ 66 ನೇಯ "ಮನ್ ಕಿ ಬಾತ್" ಕಾರ್ಯಕ್ರಮದಲ್ಲಿ ರವಿವಾರ ಬೆಳಗ್ಗೆ 11 ಗಂಟೆಗೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಈ ಸಮಯದಲ್ಲಿ ನಾವು ಎದುರಿಸುತ್ತಿರುವ ಸವಾಲುಗಳಿಗೆ ಹೆದರಬಾರದು, ಸವಾಲುಗಳನ್ನು ಮೆಟ್ಟಿ ಮುನ್ನಡೆಯಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ನರೇಂದ್ರ ಮೋದಿಯವರು, ಕೊರೊನಾ ಮಹಾಮಾರಿಯಿಂದ ಮಾನವ ಕುಲಕ್ಕೆ ಸಂಕಷ್ಟ ಎದುರಾಗಿದೆ. 2020 ನೇ ವರ್ಷ ಮುಗಿಯುತ್ತಿಲ್ಲ ಎನಿಸುತ್ತಿದೆ. 2020 ನೇ ವರ್ಷ ಕೆಲವರಿಗೆ ಇಷ್ಟವಾಗುತ್ತಿಲ್ಲ. ಮತ್ತೆ ಕೆಲವರಿಗೆ ಇಷ್ಟವಾಗಿದೆ. ಕಷ್ಟಗಳು ಸದಾ ಬರುತ್ತಲೇ ಇರುತ್ತವೆ. ಕಷ್ಟ ಬಂದ ಕೂಡಲೇ ಈ ವರ್ಷ ಕೆಟ್ಟ ವರ್ಷ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು. ಲಡಾಖ್ ನಲ್ಲಿ ನಮಗೆ ಸವಾಲು ಎಸೆದವರಿಗೆ ಸರಿಯಾದ ತಿರುಗೇಟು ನೀಡಿದ್ದೇವೆ. ನಮ್ಮ ಸೈನಿಕರು ಧೈರ್ಯಶಾಲಿಗಳು ಮತ್ತು ಸರ್ವಸ್ವವನ್ನು ದೇಶಕ್ಕಾಗಿ ತ್ಯಾಗಮಾಡಲು ಸಿದ್ದರಿರುವ ಅವರು ಎದುರಾಳಿಗಳು ಮೇಲುಗೈ ಸಾಧಿಸಲು ಬಿಡಲಿಲ್ಲ. ಅವರ ನೋವನ್ನು ನಾವು ಅನುಭವಿಸುತ್ತೇವೆ. ಅವರ ಶೌರ್ಯವೇ ಭಾರತದ ಶಕ್ತಿ ಎಂದು ಹೇಳಿದರು. ಇದೆ ಸಮಯದಲ್ಲಿ ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊದ್ದಿಯ ಕಾಮೇಗೌಡ ಅವರ ಪರಿಸರ ಪ್ರೇಮದ ಕುರಿತು ಮಾತನಾಡಿದರು. ಸಣ್ಣ ರೈತರಾಗಿರುವ ಇವರು ತಮ್ಮ ಸ್ವಂತ ಹಣದಲ್ಲಿ 16 ಕೆರೆಗಳನ್ನು ನಿರ್ಮಿಸಿ ನೀರಿನ ಸಮಸ್ಯೆಯನ್ನು ನೀಗಿಸಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಪರಿಸರ ಸೇವೆಯನ್ನು ಪ್ರಧಾನಿಗಳು ಶ್ಲಾಗಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆಯ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿಗಳ ಸಾಮಾಜಿಕ ಅಂತರವನ್ನು ಕಾಪಾಡಿ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ನಾವೆಲ್ಲರೂ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಈ ಸಮಯದಲ್ಲಿ ಖಿನ್ನತೆಗೆ ಒಳಗಾಗದೆ ಖುಷಿ ಖುಷಿಯಾಗಿ ಬಾಲ್ಯದ ಆಟಗಳನ್ನು ಆಡುತ್ತ ಹೋರಾಡೋಣ ಎಂದು ಹೇಳಿದ್ದಾರೆ.
2022/07/04 21:29:50
https://vartavani.com/pm-modi-speech-in-man-ki-bhaat/
mC4
ಅಮೆರಿಕಾದಲ್ಲಿ ವಿಜಯಿಯಾಗಲಿ ಪಿ.ಸಿ. ವಿಜಯ ಕಾಂಚನ್ | KANNADIGA WORLD Home ಕನ್ನಡ ವಾರ್ತೆಗಳು ಕರಾವಳಿ ಅಮೆರಿಕಾದಲ್ಲಿ ವಿಜಯಿಯಾಗಲಿ ಪಿ.ಸಿ. ವಿಜಯ ಕಾಂಚನ್ ಮಂಗಳೂರು ,ಅ.04: ಪೊಲೀಸ್ ಕಾನ್‌ಸ್ಟೇಬಲ್‌ಗಳಂದರೆ ಸಾರ್ವಜನಿಕರಿಗೆ ಇರುವ ಗೌರವ ಅಷ್ಟಕ್ಕಷ್ಟೇ. ಅವರ ಮೇಲೆ ಇರುವ ಗೌರವಕ್ಕಿಂತ ತಾತ್ಸಾರ ಮನೋಭವವೇ ಅಧಿಕ. ಇದರಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ಗಳ ತಪ್ಪಿಲ್ಲ ಎಂದೇನಲ್ಲ…! ಆದರೆ, ಇಲ್ಲೊಬ್ಬ ಪೊಲೀಸ್ ಕಾನ್‌ಸ್ಟೇಬಲ್ ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರೇ ವಿಜಯ ಕಾಂಚನ್. ವಿಜಯ ಕಾಂಚನ್1994 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡವರು. ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು ರೌಡಿ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸಿ ರೌಡಿಗಳಲ್ಲಿ ನಡುಕ ಹುಟ್ಟಿಸಿರುವ ದೃಢಕಾಯ. ಆರಂಭದಲ್ಲಿ ದೇಹದಾರ್ಢ್ಯದಲ್ಲಿ ಆಸಕ್ತರಾಗಿದ್ದ ಅವರು ಬಳಿಕ ಪವರ್ ಲಿಫ್ಟಿಂಗ್‌ನಲ್ಲಿ ತನ್ನ ಆಸಕ್ತಿಯನ್ನು ಕ್ರೋಢೀಕರಿಸಿ ಯಶಸ್ವಿಯಾಗಿರುವ ದಕ್ಷ ಪೊಲೀಸ್ ಕಾನ್‌ಸ್ಟೇಬಲ್. ರಾಜ್ಯ, ರಾಷ್ಟ್ರ, ಏಷ್ಯಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಬಾಚಿಕೊಂಡಿರುವ ಅವರು ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ. ಅ.17 ರಿಂದ 19 ರವರೆಗೆ ಅಮೆರಿಕಾದ ಲಾಸ್ ವೇಗಾಸ್‌ನಲ್ಲಿ ನಡೆಯಲಿರುವ ವಿಶ್ವ ಮುಕ್ತ ಪವರ್ ಲಿಫ್ಟಿಂಗ್ ಚಾಂಪಿಂiiನ್‌ಶಿಪ್‌ನಲ್ಲಿ ಭಾಗವಹಿಸಲು ಅವರು ಸಜ್ಜಾಗುತ್ತಿದ್ದಾರೆ. ಇದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೂ ಹೆಮ್ಮೆಯ ವಿಷಯ. ಅದ್ವಿತೀಯ ಸಾಧಕ ವಿಜಯ ಕಾಂಚನ್: ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲಾ ಪದಕಗಳನ್ನು ಗೆದ್ದು ತರುವ ವಿಜಯ ಕಾಂಚನ್ ಪವರ್ ಲಿಫ್ಟಿಂಗ್‌ನಲ್ಲಿ ಮಾಡಿರುವ ಸಾಧನೆ ಅದ್ವಿತೀಯ. 2010 ರಲ್ಲಿ ಪಿಲಿಫೈನ್ಸ್‌ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಬಾರಿಗೆ ಭಾಗವಹಿಸಿ ಭಾರತಕ್ಕೆ ಕಂಚಿನ ಪದಕ ತಂದು ಕೊಟ್ಟವರು ವಿಜಯ ಕಾಂಚನ್. 2011 ರಲ್ಲಿ ಜಪಾನ್‌ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 3 ಬೆಳ್ಳಿಯ ಪದಕಗಳನ್ನು ಗೆದ್ದು ಅದ್ವಿತೀಯ ಸಾಧನೆಗೈದರು. 2012 ರಲ್ಲಿ ಕಜಕಿಸ್ಥಾನದಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮತ್ತೆ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. ಪವರ್ ಲಿಫ್ಟಿಂಗ್‌ನಲ್ಲಿ ಬೆಂಚ್ ಪ್ರೆಸ್ ಅವರ ನೆಚ್ಚಿನ ವಿಭಾಗ. ಜಮ್ಮುವಿನಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಅವರು ಚಿನ್ನದ ಪದಕ ಗಳಿಸಿದ್ದರು. ಬೆಂಚ್ ಪ್ರೆಸ್, ಡೆಡ್ ಲಿಫ್ಟ್ ಮತ್ತು ಸ್ಕಾಟ್‌ನಲ್ಲಿ ತನ್ನ ಸಾರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ತಯಾರಿಯಲ್ಲಿದ್ದಾರೆ ವಿಜಯ ಕಾಂಚನ್. ಸರಕಾರದ ಸಹಕಾರ ಅಗತ್ಯ: ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಸದಾ ಕರ್ತವ್ಯ ನಿರತರಾಗಿರುವ ವಿಜಯ ಕಾಂಚನ್‌ನಂತಹ ಕ್ರೀಡಾಪಟುಗಳಿಗೆ ಸರಕಾರದ ಪ್ರೋತ್ಸಾಹ ಅತ್ಯಗತ್ಯ. ಏಷ್ಯಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕಾದರೆ ವಿಜಯ ಕಾಂಚನ್ ಅವರಿಗೆ 2 ಲಕ್ಷ ರೂ.ಗಳಾದರೂ ಬೇಕಾಗುತ್ತದೆ. ಕೈಯಿಂದ ಖರ್ಚು ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅವರು ರಾಜ್ಯ, ದೇಶಕ್ಕೆ ಕೀರ್ತಿಯನ್ನು ತಂದುಕೊಡುತ್ತಾರೆ. ಆದರೆ, ಇಂತಹ ಕ್ರೀಡಾಪಟುಗಳಿಗೆ ಖರ್ಚು ಮಾಡಿದ ಹಣದ ಅರ್ಧ ಭಾಗವನ್ನಷ್ಟೇ ಸರಕಾರ ಭರಿಸುತ್ತದೆ. ಅದೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಿಂದಿರುಗಿ ಬಂದ ಅನೇಕ ದಿನಗಳ ಬಳಿಕ…! ಈ ನಿಟ್ಟಿನಲ್ಲಿ ಸರಕಾರ ಇಂತಹ ಕ್ರೀಡಾಪಟುಗಳಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ತೆರಳುವ ವೇಳೆ ಮುಂಗಡ ಹಣದ ವ್ಯವಸ್ಥೆಯನ್ನು ಮಾಡಬೇಕು. ಇಲ್ಲದಿದಲ್ಲಿ ಇಂತಹ ಕ್ರೀಡಾಪಟುಗಳು ಸಾಲ ಮೂಲಗಳನ್ನು ಮಾಡಿಕೊಂಡು ಒತ್ತಡದ ಸನ್ನಿವೇಶದಲ್ಲಿ ಸ್ಪರ್ಧೆಯಲ್ಲಿ ಭಾಗವಿಸಬೇಕಾಗುತ್ತದೆ. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ ಅತ್ಯಗತ್ಯ. ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ವಿಜಯ ಕಾಂಚನ್ ಅವರಿಗೆ 2012 ರಲ್ಲಿ ಮುಖ್ಯ ಮಂತ್ರಿಗಳ ಚಿನ್ನದ ಪದಕದ ಗೌರವ ದೊರಕಿತ್ತು. ಅ.6 ರಂದು ದಿಲ್ಲಿಗೆ ತೆರಳಲಿರುವ ವಿಜಯ ಕಾಂಚನ್ ಅ.14 ರಂದು ಅಲ್ಲಿಂದ ಅಮೆರಿಕಾಕ್ಕೆ ತೆರಳಲಿದ್ದಾರೆ. ವಿಜಯ ಕಾಂಚನ್ ಅವರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯ ಗಳಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂಬುದು ನಮ್ಮೆಲ್ಲರ ಆಶಯ.
2021/12/02 12:41:54
https://www.kannadigaworld.com/kannada/karavali-kn/105820.html
mC4
ಸಂಪಾದಕೀಯ | ಒಲಿಂಪಿಕ್ಸ್‌ ಮುಂದೂಡಿಕೆ ವಿವೇಕಯುತ ನಿರ್ಧಾರ | Prajavani ಸಂಪಾದಕೀಯ Updated: 28 ಮಾರ್ಚ್ 2020, 02:00 IST 'ನಾಳೆಯನ್ನು ಅನ್ವೇಷಿಸುತ್ತಾ' ಎಂಬ ಧ್ಯೇಯವಾಕ್ಯದೊಂದಿಗೆ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಜುಲೈ 24ರಂದು ಆರಂಭವಾಗಬೇಕಿದ್ದ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಕೊರೊನಾ ವೈರಸ್‌ ಮಹಾಮಾರಿಯಿಂದಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೊಂದು ವಿವೇಕಯುತ ನಿರ್ಧಾರ. 1916ರ ಕೂಟವು ಪ್ರಥಮ ವಿಶ್ವಯುದ್ಧದ ಕಾರಣ, 1940 ಹಾಗೂ 1944ರ ಒಲಿಂಪಿಕ್‌ ಕ್ರೀಡಾಕೂಟಗಳು ದ್ವಿತೀಯ ವಿಶ್ವಯುದ್ಧದಿಂದಾಗಿ ರದ್ದಾಗಿದ್ದವು. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾ ಮಹಾಮೇಳಕ್ಕೆ ಇದೇ ಮೊದಲ ಬಾರಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಈ ಸಲದ ಕೂಟವನ್ನು ಅಭೂತಪೂರ್ವ ರೀತಿಯಲ್ಲಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಜಪಾನ್ ಮಾಡಿಕೊಂಡಿತ್ತು. ಅದಕ್ಕಾಗಿ, ₹ 89 ಸಾವಿರ ಕೋಟಿ ವೆಚ್ಚ ಮಾಡಿತ್ತು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಾಗಿ ಜಪಾನ್ ಹೇಳಿತ್ತು. ನಿಗದಿತ ವೇಳಾಪಟ್ಟಿಯಂತೆ ಕೂಟ ಆಯೋಜಿಸುವ ಛಲವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಾಲ್ಕು ದಿನಗಳ ಹಿಂದಿನವರೆಗೂ ತೋರಿತ್ತು. ಆದರೆ ಕೊರೊನಾ ವೈರಸ್‌ನ ಉಗ್ರಪ್ರತಾಪ ಮುಂದುವರಿದಿದ್ದರಿಂದ ಪ್ರಮುಖ ದೇಶಗಳು ಕೂಟದಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡಲು ಆರಂಭಿಸಿದವು. ಆತಿಥೇಯ ಜಪಾನಿನಲ್ಲಿಯೇ ಕೊರೊನಾ ಪಿಡುಗಿಗೆ 50ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ವಿಶ್ವದಾದ್ಯಂತ ಸಾವು–ನೋವು ಹೆಚ್ಚುತ್ತಲೇ ಇದೆ. ಇದರಿಂದಾಗಿ ಐಒಸಿಗೆ ಕೂಟ ಮುಂದೂಡುವ ಅನಿವಾರ್ಯ ಎದುರಾಯಿತು. ಈ ನಿರ್ಧಾರಕ್ಕೆ ಕ್ರೀಡಾವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆತಿಥೇಯ ದೇಶ, ಪ್ರಾಯೋಜಕರು, ಸ್ಪರ್ಧಿಗಳ ಎದುರು ಹಲವಾರು ಸವಾಲುಗಳು ಇವೆ. ‌ ಈ ಕ್ರೀಡಾಮೇಳವನ್ನು ಮುಂದಿನ ವರ್ಷದ ಬೇಸಿಗೆಯಲ್ಲಿಯೇ ಆಯೋಜಿಸಬೇಕಾಗುತ್ತದೆ. ದಿನಾಂಕ ಹೊಂದಿಸಿಕೊಳ್ಳಲು ಐಒಸಿ ಕಸರತ್ತು ನಡೆಸುತ್ತಿದೆ. ಏಕೆಂದರೆ, 2021ರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌, ಈಜು ಚಾಂಪಿಯನ್‌ಷಿಪ್‌ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳ ವೇಳಾಪಟ್ಟಿ ಈಗಾಗಲೇ ಸಿದ್ಧವಾಗಿದೆ. ಆದ್ದರಿಂದ ಅವುಗಳೆಲ್ಲವನ್ನೂ ಮರುಹೊಂದಾಣಿಕೆ ಮಾಡಿ, ಒಲಿಂಪಿಕ್ಸ್‌ ಆಯೋಜಿಸುವುದು ದೊಡ್ಡ ಸವಾಲಾಗಲಿದೆ. ಏಳು ವರ್ಷಗಳಿಂದ ಸಿದ್ಧಗೊಳಿಸಿರುವ ಕ್ರೀಡಾಗ್ರಾಮ ಮತ್ತು ಮೂಲಸೌಲಭ್ಯಗಳನ್ನು ಇನ್ನೊಂದು ವರ್ಷ ನಿರ್ವಹಿಸುವುದು ಆತಿಥೇಯರಿಗೆ ಆರ್ಥಿಕ ಹೊರೆಯಾಗಲಿದೆ. ಕೊರೊನಾ ಕೊಟ್ಟ ಪೆಟ್ಟಿನಿಂದ ವಿಶ್ವದ ಬಹಳಷ್ಟು ಉದ್ಯಮಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಆದ್ದರಿಂದ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್‌ ಸಂಸ್ಥೆಗಳು ಪ್ರಾಯೋಜಕತ್ವವನ್ನು ಮುಂದುವರಿಸಲಿವೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಒಲಿಂಪಿಕ್ಸ್ ಪದಕ ಗೆಲ್ಲುವ ಛಲದಲ್ಲಿ ನಾಲ್ಕು ವರ್ಷಗಳಿಂದ ಅಭ್ಯಾಸ ಮಾಡಿರುವ ಕ್ರೀಡಾಪಟುಗಳು ಮತ್ತು ದೇಶಗಳು ಕೂಡ ಕಠಿಣ ಸವಾಲುಗಳನ್ನು ಎದುರಿಸಬೇಕಿದೆ. ಈ ಕೂಟದಲ್ಲಿ ಹನ್ನೊಂದು ಸಾವಿರ ಸ್ಪರ್ಧಿಗಳು ಕಣಕ್ಕಿಳಿಯುವ ನಿರೀಕ್ಷೆ ಇತ್ತು. ಅದರಲ್ಲಿ ಅರ್ಧದಷ್ಟು ಆಟಗಾರರು ಈಗಾಗಲೇ ಅರ್ಹತೆ ಪಡೆದಿದ್ದರು. ಅವರು ಮತ್ತೊಮ್ಮೆ ಅರ್ಹತಾ ಸುತ್ತಿನಲ್ಲಿ ಭಾಗವಹಿಸುವ ಅಗತ್ಯವಿಲ್ಲವೆಂದು ಐಒಸಿ ಸ್ಪಷ್ಟಪಡಿಸಿದೆ. ಇದರಿಂದಾಗಿ ಅವರಿಗೆ ಅಭ್ಯಾಸಕ್ಕೆ ಹೆಚ್ಚು ಸಮಯವೇನೋ ಸಿಕ್ಕಿದೆ. ಆದರೆ, ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಸವಾಲು ಇದೆ. ಈ ವರ್ಷ ಕೊನೆಯ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ವೃತ್ತಿಜೀವನಕ್ಕೆ ವಿದಾಯ ಹೇಳುವ ಯೋಚನೆಯಲ್ಲಿದ್ದ ಹಿರಿಯ ಕ್ರೀಡಾಪಟುಗಳು ಮುಂದಿನ ವರ್ಷದವರೆಗೂ ಕಾಯಬೇಕಿದೆ. ವಯೋಮಿತಿ ನಿರ್ಬಂಧ ಇರುವ ಕೆಲವು ಕ್ರೀಡೆಗಳಲ್ಲಿ ಹಲವು ಸ್ಪರ್ಧಿಗಳು ಮುಂದಿನ ವರ್ಷ ಅರ್ಹತೆ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಆದಕಾರಣ, ವಯೋಮಿತಿ ನಿಯಮವನ್ನು ಪರಿಷ್ಕರಿಸುವಂತೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾದ ಫುಟ್‌ಬಾಲ್ ತಂಡಗಳು ಈಗಾಗಲೇ ಐಒಸಿಗೆ ಮನವಿ ಸಲ್ಲಿಸಿವೆ. ಇನ್ನೊಂದೆಡೆ, ಈ ಕ್ರೀಡಾಪಟುಗಳನ್ನು ಪೋಷಿಸಲು ಮತ್ತಷ್ಟು ಸಂಪನ್ಮೂಲವನ್ನು ಹೊಂದಿಸಿಕೊಳ್ಳುವತ್ತ ಆಯಾ ದೇಶ ಸಿದ್ಧವಾಗಬೇಕಿದೆ. ಪದಕ ಗಳಿಕೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಚೀನಾ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ ದೇಶಗಳು ಕೊರೊನಾ ಹೊಡೆತದಿಂದ ಬಸವಳಿದಿವೆ. ಭಾರತದಲ್ಲಿಯೂ ಈ ವೈರಸ್‌ನ ಉಪಟಳ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ ರದ್ದಾಗುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸುಮಾರು ₹10 ಸಾವಿರ ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಕೂಡ ರದ್ದುಗೊಳ್ಳಬಹುದು. ಯಾವುದೇ ಕ್ರೀಡಾಕೂಟ ರದ್ದಾಗುವುದು, ಕ್ರೀಡಾ ಅಭಿಮಾನಿಗಳ ಪಾಲಿಗೆ ನೋವಿನ ಸಂಗತಿಯೇ ಸರಿ. ಜಗತ್ತಿನ ಸದ್ಯದ ಸಮಸ್ಯೆಯಾಗಿರುವ ಕೊರೊನಾ ವೈರಸ್‌ ಹಾವಳಿ ನಿವಾರಣೆಯಾಗಿ, ಪ್ರೀತಿ, ಸಹೋದರತ್ವ ಮತ್ತು ಸಮೃದ್ಧಿಯ ದ್ಯೋತಕವಾದ ಒಲಿಂಪಿಕ್ ಕ್ರೀಡಾಮೇಳ ನಡೆಯುವಂತಾಗಬೇಕು ಎಂದು ಕ್ರೀಡಾಪ್ರಪಂಚ ಹಾರೈಸುತ್ತಿದೆ. '); $('#div-gpt-ad-715590-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-715590'); }); googletag.cmd.push(function() { googletag.display('gpt-text-700x20-ad2-715590'); }); },300); var x1 = $('#node-715590 .field-name-body .field-items div.field-item > p'); if(x1 != null && x1.length != 0) { $('#node-715590 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-715590').addClass('inartprocessed'); } else $('#in-article-715590').hide(); } else { _taboola.push({article:'auto', url:'https://www.prajavani.net/op-ed/editorial/postponing-the-olympics-is-a-wise-decision-715590.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-715590', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-715590'); }); googletag.cmd.push(function() { googletag.display('gpt-text-300x20-ad2-715590'); }); // Remove current Outbrain //$('#dk-art-outbrain-715590').remove(); //ad before trending $('#mob_rhs1_715590').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-715590 .field-name-body .field-items div.field-item > p'); if(x1 != null && x1.length != 0) { $('#node-715590 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-715590 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-715590'); }); } else { $('#in-article-mob-715590').hide(); $('#in-article-mob-3rd-715590').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-715590','#in-article-733622','#in-article-733319','#in-article-733036','#in-article-732683']; var twids = ['#twblock_715590','#twblock_733622','#twblock_733319','#twblock_733036','#twblock_732683']; var twdataids = ['#twdatablk_715590','#twdatablk_733622','#twdatablk_733319','#twdatablk_733036','#twdatablk_732683']; var obURLs = ['https://www.prajavani.net/op-ed/editorial/postponing-the-olympics-is-a-wise-decision-715590.html','https://www.prajavani.net/op-ed/editorial/tushar-mehta-solicitor-general-of-india-editorial-public-interest-litigation-supreme-court-of-india-733622.html','https://www.prajavani.net/op-ed/editorial/infection-testing-carelessness-in-terms-of-quick-results-733319.html','https://www.prajavani.net/op-ed/editorial/agricultural-crisis-needs-implementation-prioritized-733036.html','https://www.prajavani.net/op-ed/editorial/discussion-about-classical-kannada-language-732683.html']; var vuukleIds = ['#vuukle-comments-715590','#vuukle-comments-733622','#vuukle-comments-733319','#vuukle-comments-733036','#vuukle-comments-732683']; // var nids = [715590,733622,733319,733036,732683]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2020/06/05 11:55:32
https://www.prajavani.net/op-ed/editorial/postponing-the-olympics-is-a-wise-decision-715590.html
mC4
ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು! | Techie Killed Mother In Bengaluru Twist To Case - Kannada Oneindia | Updated: Tuesday, February 4, 2020, 15:15 [IST] ಬೆಂಗಳೂರು, ಫೆಬ್ರವರಿ 04 : ಮಹಿಳಾ ಟೆಕ್ಕಿ ತಾಯಿಯನ್ನು ಕೊಂದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ತಾಯಿಯನ್ನು ಕೊಂದ ಬಳಿಕ ಸಹೋದರನ ಹತ್ಯೆಗೆ ಯತ್ನಿಸಿದ್ದ ಟೆಕ್ಕಿ, ಎರಡು ದಿನದಿಂದ ನಾಪತ್ತೆಯಾಗಿದ್ದು ಕೆ. ಆರ್. ಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಟೆಕ್ಕಿ ಅಮೃತಾ ಮಾರತ್ತಹಳ್ಳಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಫೆಬ್ರವರಿ 2ರಂದು ತಾಯಿ ನಿರ್ಮಲಾರನ್ನು ಹತ್ಯೆ ಮಾಡಿ, ಸಹೋದರ ಹರೀಶ್ ಹತ್ಯೆಗೆ ಯತ್ನಿಸಿದ್ದಳು. ಸಾಲದ ವಿಚಾರದಲ್ಲಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿತ್ತು. ಹತ್ಯೆ ಬಳಿಕ ಅಮೃತ ಪರಾರಿಯಾಗುತ್ತಿರುವ ದೃಶ್ಯ ರಸ್ತೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೃತಾ ಪರಾರಿಯಾಗಲು ಆಕೆಯ ಪ್ರಿಯಕರ ಸಹಾಯ ಮಾಡಿದ್ದಾನೆ. ಆತನೇ ಬಂದು ಅಮೃತಾಳನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಕ್ಕಿದೆ. ಬ್ಯಾಗ್ ಹಾಕಿಕೊಂಡು ಮನೆಯಿಂದ ಓಡಿ ಬರುವ ಅಮೃತಾ, ಪ್ರಿಯಕರನ ಜೊತೆ ಬೈಕ್‌ನಲ್ಲಿ ಕುಳಿತುಕೊಂಡು ಪರಾರಿಯಾಗಿದ್ದಾಳೆ. ಮದುವೆ ವಿಚಾರಕ್ಕೆ ಈ ಹತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರೀತಿಸಿದ ಹುಡುಗನ ಜೊತೆ ವಿವಾಹಕ್ಕೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕೆ. ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿದ ಅಮೃತಾ ತಾಯಿ ನಿರ್ಮಲಾ ಹತ್ಯೆ ಮಾಡಿದ್ದಳು. ಸಹೋದರ ಹರೀಶ್ ಹತ್ಯೆಗೆ ವಿಫಲಯತ್ನ ನಡೆಸಿದ್ದರು. ಬಳಿಕ ಮನೆಯಿಂದ ಪರಾರಿಯಾಗಿದ್ದರು. ಹರೀಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸಾಲದ ಕಥೆ ಹೇಳಿದ್ದಳು : ಟೆಕ್ಕಿ ಅಮೃತಾ ತಾನು 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದೇನೆ. ಸಾಲಗಾರರು ಭಾನುವಾರ ಮನೆಗೆ ಬರುತ್ತಾರೆ. ಆದ್ದರಿಂದ, ಅವಮಾನವಾಗುತ್ತದೆ. ಅದಕ್ಕೆ ತಾಯಿಯನ್ನು ಕೊಂದೆ ಎಂದು ಸಹೋದರ ಹರೀಶ್ ಬಳಿ ಹೇಳಿದ್ದಳು. ಆದರೆ, ಪ್ರಕರಣದ ದಿಕ್ಕು ತಪ್ಪಿಸಲು ಈ ರೀತಿ ಹೇಳಿರುವುದು ಈಗ ಖಚಿತವಾಗಿದೆ. ತಾಯಿಯನ್ನು ಹತ್ಯೆ ಮಾಡಿದ ಬಳಿಕ ಬೈಕ್‌ನಲ್ಲಿ ಪರಾರಿಯಾಗಿರುವುದು ಗಮನಿಸಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬ ಸಂಶಯ ಉಂಟಾಗುತ್ತದೆ. ಕೆ. ಆರ್. ಪುರ ಪೊಲೀಸರು ಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಮೃತಾಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ. ಅಮೃತಾ ಬಂಧನವಾದ ಬಳಿಕ ಘಟನೆ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ. 33 year old techie Amrutha murdered mother and attempt to kill brother in K.R.Puram police station limits, Bengaluru. Now twist to case.
2020/02/16 20:59:10
https://kannada.oneindia.com/news/bengaluru/techie-killed-mother-in-bengaluru-twist-to-case-184394.html
mC4
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ, ರಾಜಕೀಯ ಸಂಚಿಗೆ ಕಾಂಗ್ರೆಸ್ ಕಾರ್ಪೊರೇಟರ್ಗಳ ಆಕ್ರೋಶ - SHIVAMOGGA CITY - Shivamogga Live ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ, ರಾಜಕೀಯ ಸಂಚಿಗೆ ಕಾಂಗ್ರೆಸ್ ಕಾರ್ಪೊರೇಟರ್ಗಳ ಆಕ್ರೋಶ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಹಾಗೂ ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೀಶ್ ಮತ್ತು ಪಾಲಿಕೆಯ ಕಾಂಗ್ರೆಸ್ ಸದಸ್ಯರು ಖಂಡಿಸಿದ್ದಾರೆ. ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಸೋಲಿನ ಭೀತಿಯಲ್ಲಿರುವ ಬಿಜೆಪಿ ಈ ಮೂಲಕ ರಾಜಕೀಯ ಸಂಚು ನಡೆಸುತ್ತಿರುವುದು ಖಂಡನೀಯ. ಬಿಜೆಪಿ ನಾಯಕರು ಭ್ರಮೆಯಲ್ಲಿದ್ದಾರೆ ಮತ್ತು ಭಯದಲ್ಲಿದ್ದಾರೆ. ಇಲ್ಲದಿದ್ದರೆ ಚುನಾವಣಾ ಸಮಯ ದಲ್ಲಿಯೇ ಕಾಂಗ್ರೆಸ್ ನಾಯಕರ ಮನೆ ಮೇಲೆ ಸಿಬಿಐ ದಾಳಿ ನಡೆಸುವುದೇಕೆ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಕಾರ್ಪೊರೇಟರ್‍ಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್ಕ, ಯಮುನಾ ರಂಗೇಗೌಡ, ರಮೇಶ್ ಹೆಗ್ಡೆ, ಶಾಮೀರ್ ಖಾನ್, ರೇಖಾ ರಂಗನಾಥ್, ಮಂಜುಳಾ ಶಿವಣ್ಣ, ಮೆಹಕ್ ಷರೀಫ್ ಅವರು ಸಹಿ ಮಾಡಿ, ಸಿಬಿಐ ದಾಳಿಯನ್ನು ಖಂಡಿಸಿದ್ದಾರೆ. ಹಳೇ ಜೈಲು ಆವರಣಕ್ಕೆ ಉಪಮೇಯರ್ ಸೂಚಿಸಿದ ಹೆಸರಿಡುವುದು ಬೇಡ ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019 ನಗರದ ಹಳೇ ಕಾರಾಗೃಹ ಅವರಣದಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸುತ್ತಿರುವುದು ಸ್ವಾಗತಾರ್ಹ. ಆದರೆ ಉದ್ಯಾನವನಕ್ಕೆ ಇಂತಹವರದ್ದೆ ಹೆಸರು ಇಡಬೇಕು ಎಂಬುದು ಸೂಕ್ತವಲ್ಲ ಎಂದು ಜಿಲ್ಲಾ … ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್ಗೆ 20 ಸಾವಿರ ದಂಡ ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2020 ಸಕಾಲದಲ್ಲಿ ಉದ್ಯಮ ಪರವಾನಗಿ ನೀಡದೆ ವಿಳಂಬ ಮಾಡಿದ್ದಕ್ಕೆ ಮಹಾನಗರ ಪಾಲಿಕೆ ಆಯುಕ್ತರಿಗೆ ಗ್ರಾಹಕರ ವೇದಿಕೆಯು ದಂಡ ವಿಧಿಸಿ ತೀರ್ಪು ನೀಡಿದೆ. ವುಡ್ … ಗಳಗಳ ಕಣ್ಣೀರು ಹಾಕಿದ ಚುನಾವಣಾ ಅಭ್ಯರ್ಥಿಯ ಕುಟುಂಬ, ಹೊರಡಲಿಲ್ಲ ಮತದಾರರನ್ನು ಹೊತ್ತ ಬಸ್ಸು ಶಿವಮೊಗ್ಗ ಲೈವ್.ಕಾಂ | SHIMOGA | 22 ಡಿಸೆಂಬರ್ 2019 ಬ್ಯಾಲೆಟ್ ಪೇಪರ್ ಗೊಂದಲದಿಂದ ಕುರುಬರ ಸಂಘದ ನಿರ್ದೇಶಕರ ಸ್ಥಾನದ ಮತದಾನ ರದ್ದುಗೊಳ್ಳುತ್ತಿದ್ದಂತೆ ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ ಹೈಡ್ರಾಮಾ ನಡೆಯಿತು. ಕೆಲವು ಅಭ್ಯರ್ಥಿಗಳು, …
2020/10/25 10:31:52
https://shivamoggalive.com/2020/10/05/shimoga-corporators-oppose-cbi-raid/
mC4
ಆಡಳಿತ ಮತ್ತು ಪ್ರತಿಪಕ್ಷಗಳ ಜಂಗೀ ಕುಸ್ತಿಗೆ ವೇದಿಕೆ ಸಜ್ಜು, ಸೋಮವಾರದಿಂದ 15ನೇ ಜಂಟಿ ಅಧಿವೇಶನ – EESANJE / ಈ ಸಂಜೆ ಸಚಿವ ಸಂಪುಟದಿಂದ ನನ್ನನ್ನು ಕೈಬಿಡುವುದಿಲ್ಲ: ಸಚಿವೆ ಶಶಿಕಲಾ ರಾಜಕೀಯ ಪಿತೂರಿ ಎದುರಿಸಿ ನಿಲ್ಲುತ್ತೇನೆ: ಡಿ ಕೆ ಶಿವಕುಮಾರ್ ಪೊಲೀಸ್ ಪರೀಕ್ಷೆ 'ಡೀಲ್ ಮಾಸ್ಟರ್' ಪತ್ತೆಗೆ ಶೋಧ.. ಬೆಂಗಳೂರು,ಫೆ.15- ರಾಜಕೀಯ ಗೊಂದಲದ ನಡುವೆಯೇ ಸೋಮವಾರದಿಂದ 15ನೇ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಂಗೀ ಕುಸ್ತಿಗೆ ವೇದಿಕೆಯಾಗಲಿದೆ. ಸೋಮವಾರ ಬೆಳಗ್ಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಸಂತಾಪ ನಿರ್ಣಯ ಮಂಡನೆಯಾಗಲಿದ್ದು, ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತುದಿಗಾಲಲ್ಲಿ ನಿಂತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ರೂಢ ಬಿಜೆಪಿಯ ವೈಫಲ್ಯಗಳನ್ನು ಸದನದಲ್ಲಿ ಎತ್ತಿ ಹಿಡಿಯಲು ಸಜ್ಜಾಗಿದೆ. ಇದಕ್ಕೆ ಪ್ರತಿ ತಂತ್ರ ರೂಪಿಸಿರುವ ಬಿಜೆಪಿ ಕೂಡ ಪ್ರತಿ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ನಾಳೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಕಲಾಪದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಣತಂತ್ರ ರೂಪಿಸಲಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದು 2ನೇ ಅಧಿವೇಶನವಾಗಿದೆ. ಮಾ.5ರಂದು ಹಣಕಾಸು ಖಾತೆಯನ್ನು ಹೊಂದಿರುವ ಯಡಿಯೂರಪ್ಪ 2020-21 ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಹೀಗಾಗಿ ಈ ಅಧಿವೇಶನ ಅತ್ಯಂತ ಮಹತ್ವ ಪಡೆದುಕೊಂಡಿದೆ. ರಾಜ್ಯದ ಪ್ರಚಲಿತ ವಿದ್ಯಮಾನಗಳು ಹಾಗೂ ನಾಡಿನ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಹವಣಿಸುತ್ತಿವೆ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಇಬ್ಬರು ಸಾವನ್ನಪ್ಪಿದ ಗೋಲಿಬಾರ್ ಪ್ರಕರಣ, ಬೀದರ್‍ನ ಶಾಹಿನ್ ಶಾಲೆಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಡೆಸಿದ ನಾಟಕ ಸಂಬಂಧ ಶಿಕ್ಷಕರು ಮತ್ತು ತಾಯಿಯನ್ನು ಬಂಧಿಸಿದ್ದು, ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳು, ಮಂಗಳೂರು ಗಲಭೆಯಲ್ಲಿ ಪೊಲೀಸರ ವೈಫಲ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ವಿಡಿಯೋಗಳು ಸದನದಲ್ಲಿ ಪ್ರತಿಧ್ವನಿಸಲಿವೆ. ಈಗಾಗಲೇ ಕುಮಾರಸ್ವಾಮಿ ಅವರೇ ಮಂಗಳೂರು ಗಲಭೆಯನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದರು. ಸರ್ಕಾರ ಈ ಬಗ್ಗೆ ಸಮರ್ಪಕ ಉತ್ತರ ನಡೆದಿದ್ದರೆ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಗುಡುಗಿದ್ದರು. ಈ ನಡುವೆ ನಿನ್ನೆಯಷ್ಟೇ ಬೀದರ್‍ಗೆ ತೆರಳಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೀದರ್‍ನ ಶಾಹಿನ್ ಶಿಕ್ಷಣ ಸಂಸ್ಥೆಯ ಮೇಲೆ ಪೊಲೀಸರು ನಡೆದುಕೊಂಡಿರುವ ರೀತಿ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದರು. ಒಂದು ವೇಳೆ ಪ್ರತಿಪಕ್ಷದವರು ಮಂಗಳೂರು ಮತ್ತು ಬೀದರ್ ಪ್ರಕರಣಗಳ ಬಗ್ಗೆ ಚರ್ಚಿಸಲು ಮುಂದಾದರೆ ಸದನದಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಸಿಲುಕಿರುವ ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ದವೂ ಹೋರಾಟ ನಡೆಯುವ ಸಾಧ್ಯತೆ ಇದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಅವರು ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಿದ್ದರ ಆರೋಪಕ್ಕೆ ಸಿಲುಕಿದ್ದಾರೆ. ಇಂತಹ ಆರೋಪ ಹೊತ್ತಿರುವ ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಈಗಾಗಲೇ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕೆಂಡ ಕಾರಿವೆ. ಸದನದಲ್ಲಿ ಇದು ಕೂಡ ಮಾರ್ಧನಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಳೆದ ಅಕ್ಟೋಬರ್-ನವಂಬರ್‍ನಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಮನೆಮಠ, ಸೂರು, ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂದಾಜು 35 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಸರ್ಕಾರವೇ ಕೇಂದ್ರಕ್ಕೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಈವರೆಗೆ 1800 ಕೋಟಿ ಹಣ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದ ನಿರೀಕ್ಷೆಯಂತೆ ಪರಿಹಾರದ ಮೊತ್ತವನ್ನು ನೀಡಿಲ್ಲ ಎಂಬ ಆರೋಪವಿದೆ. ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಲು ಸಜ್ಜಾಗಿವೆ. ಜೊತೆಗೆ ಈ ಬಾರಿ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಬರಬೇಕಾದ 12 ಸಾವಿರ ಕೋಟಿ ಕಡಿತಗೊಳ್ಳಲಿದೆ ಎಂಬ ಆತಂಕ ಎದುರಾಗಿದೆ. ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್‍ವೈ ಹೇಳುತ್ತಿದ್ದರಾದರೂ ಪ್ರತಿಪಕ್ಷಗಳು ಮಾತ್ರ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸುತ್ತಿವೆ. ಇನ್ನು ಗೌರವಧನ ಹೆಚ್ಚಳ ಮಾಡಬೇಕೆಂದು ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಪಕ್ಷಗಳು ಛಾಟಿ ಬೀಸುವ ಸಾಧ್ಯತೆ ಇದೆ. ಕಲಾಪದಲ್ಲಿ ಮಾಧ್ಯಮಗಳಿಗೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಡಿವಾಣ ಹಾಕಿರುವುದಕ್ಕೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಇದು ಕೂಡ ಚರ್ಚೆಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
2020/11/25 10:16:16
https://www.eesanje.com/joint-session-2/
mC4
ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ: ಸಿ.ಟಿ ರವಿ | Malnad Times Home Shivamogga News Shivamogga ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ: ಸಿ.ಟಿ ರವಿ – ಸಿದ್ದರಾಮಯ್ಯನವರು ಸೋಲುವ ಹತಾಷೆಯಿಂದ ಅಸಂಬದ್ದವಾಗಿ ಮಾತನಾಡುತ್ತಿದ್ದಾರೆ… ಶಿವಮೊಗ್ಗ : ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಅವರು ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಹೆಚ್ಚಿನ ಅಂತರದಲ್ಲಿ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಲುವ ಹತಾಷೆಯಿಂದ ಅಸಂಬದ್ದವಾಗಿ ಮಾತನಾಡುತ್ತಿರುವುದು ದುರದೃಷ್ಟಕರ. ಅವರ ಹೇಳಿಕೆಯಲ್ಲಿ ರಾಜಕೀಯ ಮುಸ್ಸದ್ದಿತನವಿಲ್ಲ. 4 ಬಾರಿ ಮುಖ್ಯಮಂತ್ರಿ 2 ಬಾರಿ ಪ್ರಧಾನಿಯಾದ ಜನಾದೇಶ ಪಡೆದ ವಿಶ್ವಮಾನ್ಯ ನಾಯಕರಾದ ಮೋದಿಯರನ್ನು ಹೆಬ್ಬೆಟ್ಟಿನ ಪ್ರಧಾನಿ ಎನ್ನುತ್ತಾರೆ. ಜನಾದೇಶ ಯಾತ್ರೆಯನ್ನು ಜನ ಬರ್ಬಾತ್ ಯಾತ್ರೆ ಎಂದು ಲೇವಡಿಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ ಎಂದರು. ಸಾಕ್ಷ್ಯಾದಾರವಿಲ್ಲದೆ ಬರಿ ಪ್ರಚಾರಕ್ಕಾಗಿ ಆಪಾದನೆ ಮಾಡುತ್ತಾರೆ ಯಾವುದಕ್ಕು ಸಾಕ್ಷೆ ಒದಗಿಸಲ್ಲ ಆಧಾರ ರಹಿತ ಆರೋಪವನ್ನು ಮಾಡಿ ಪ್ರಚಾರದ ಭ್ರಮೆಯಲ್ಲಿದ್ದಾರೆ, ಮುಂಬರುವ 5 ರಾಜ್ಯಗಳ ಚುನಾವಣೆಯಲ್ಲಿ 4 ರಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣ ಪೂರ್ವ ಸಮೀಕ್ಷೆ ಹೇಳಿದೆ. ಪಂಜಾಬ್ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು ಬಿಜೆಪಿ ತನ್ನ ಬಲ ವೃದ್ಧಿಸಲಿದೆ. ಕೃಷಿ ಮಸೂದೆ ಹಿಂಪಡೆಯಲು ಚುನಾವಣೆ ಕಾರಣವಲ್ಲ. ರೈತರ ಹೆಸರಿನಲ್ಲಿ ದೇಶ ದ್ರೋಹಿಗಳ ಷಡ್ಯಂತ್ರಮಾಡಿ ಅರಾಜಕತೆಯನ್ನು ಸೃಷ್ಟಿ ಮಾಡಿ ದೇಶವನ್ನು ಒಡೆಯುವ ತುಕುಡೆ ಗ್ಯಾಂಗ್ ಗಳ ಚಿಂತನೆಗೆ ಬ್ರೇಕ್ ಹಾಕಲು ಮಸೂದೆ ಹಿಂಪಡೆದಿದ್ದಾರೆ. ಪ್ರಧಾನಿ ಕಾರ್ಯ ವೈಖರಿ ಬಗ್ಗೆ ಜನರಿಗೆ ವಿಸ್ವಾಸವಿದೆ. ದೇಶ ವಿರೋಧಿಗಳ ಕೈಗೆ ಭಾವನಾತ್ಮಕ ಅಸ್ತ್ರಗಳು ಸಿಗಬಾರದು ಎಂಬ ದೃಷ್ಟಿಯಿಂದ ದೇಶ ಹಿತಕ್ಕಾಗಿ ಮಸೂದೆಯನ್ನು ಹಿಂಪಡೆಯಲಾಗಿದೆ ಅಷ್ಟೆ. ಈ 3 ಮಸೂದೆಯಲ್ಲಿ ರೈತರಿಗೆ ಹಾನಿಯಾಗುವ ಯಾವುದೇ ಅಂಶವಿಲ್ಲ ಬದಲಿಗೆ ಅನುಕೂಲವಿದೆ ಎಂದರು. ಕೃಷಿ ಕಾಯ್ದೆಯಲ್ಲಿ ತಪ್ಪಾದರು ಎಲ್ಲಿದೆ? ಎಂದು ಪ್ರಶ್ನಿಸಿ, ರೈತ ತನ್ನ ಉತ್ಪನ್ನವನ್ನು ಎಲ್ಲಾದರೂ ಮಾರಾಟ ಮಾಡಬಹುದು, ಮಾರಾಟ ಮಾಡಿದ 48 ಗಂಟೆಯೊಳಗೆ ರೈತನಿಗೆ ಹಣ ಪಾವತಿ ಮಾಡಬೇಕು ಎಂಬಿತ್ಯಾದಿ ಅಂಶದಲ್ಲಿ ತಪ್ಪೇನಿದೆ?. ಮೂರು ಮಸೂದೆಯನ್ನು ವಾಪಸ್ ಪಡೆದ ನಂತರವೂ ಪ್ರಧಾನಿ ಬಗ್ಗೆ ಮಾತನಾಡುವುದು, ಹೋರಾಟ ಮುಂದುವರಿಸುವುದಾಗಿ ಹೇಳುತ್ತಿರುವುದರ ಹಿಂದೆ ಷಡ್ಯಂತ್ರ ಇದೆ. ತುಕ್ಡೆ ಗ್ಯಾಂಗ್ ನ ವಿರೋಧ ಇದೆ ಎಂದು ಹೇಳಿದರು. ಇವತ್ತು ಫಸಲ್ ವಿಮಾ ಯೋಜನೆ ಸೇರಿದಂತೆ ರೈತರಿಗೆ ಬೆಂಬಲ ಬೆಲೆ ಸಹಾಯ ಧನ ನಿರಂತರ ವಿದ್ಯುತ್, ಬೆಳೆಗೆ ಒಳ್ಳೆಯ ಬೆಲೆ ಎಲ್ಲವನ್ನು ಕೇಂದ್ರ ಸರ್ಕಾರ ನೀಡಿದೆ ಗುಣಮಟ್ಟದ ವಿದ್ಯುತ್ ನೀಡಿದೆ, ರೈತರಿ ಕಾಯಕಲ್ಪವಾಗುವ ಯಾವುದೆ ಯೋಜನೆ ಯಿಂದ ಸರ್ಕಾರ ಹಿಂದೆ ಸರಿಯುವುದಿಲ್ಲ. ಬರೇ 10 ತಿಂಗಳಲ್ಲಿ 3 ಲಸಿಕೆ ಕಂಡುಹಿಡಿದು ಪ್ರಪಂಚದ ಯಾವುದೇ ದೇಶ ಮಾಡದ 100 ಕೋಟಿ ಜನರಿಗೆ ಲಸಿಕೆ ನೀಡಿದ ಸರ್ಕಾರ ನಮ್ಮದು. ರೈತರ ಮೇಲೆ ದೌರ್ಜನ್ಯ ಎಂದು ಪ್ರತಿಬಿಂಬಿಸಿ ಅರಾಜಕತೆ ಸೃಷ್ಟಿಸುವ ಹುನ್ನಾರವನ್ನು ದೇಶದ ಜನ ಅರಿತ್ತಿದ್ದಾರೆ. ಶಿವಮೊಗ್ಗ ಸೇರಿದಂತೆ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದು ನಿಚ್ಚಿತ ಎಂದರು. ಪ್ರತಾಪ್ ಸಿಂಹ ಕುರಿತು ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಟ್ ಕಾಯಿನ್ ವಿಷಯದಲ್ಲಿ ವೈಚಾರಿಕ ಟೀಕೆ ಮಾಡಲಿ. ಆದರೆ ಕಾವಿಯ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಪ್ರಭಾರಿ ಗಿರೀಶ್ ಪಟೇಲ್, ಶಾಸಕ ಹರತಾಳು ಹಾಲಪ್ಪ, ಡಿ.ಎಸ್ ಅರುಣ್, ನಗರಾಧ್ಯಕ್ಷ ಜಗದೀಶ್, ಮೇಯರ್ ಸುನೀತಾ ಅಣ್ಣಪ್ಪ ಪ್ರಮುಕರಾದ ಶಿವರಾಜ್, ಧರ್ಮಪ್ರಸಾದ್, ಶ್ರೀನಾಥ್, ಸತೀಶ್, ಹೃಷಿಕೇಶ್ ಪೈ, ಅಣ್ಣಪ್ಪ,ಮಧುಶೂದನ್ ಮೊದಲಾದವರು ಇದ್ದರು. Previous articleಡಿ.ಮಂಜುನಾಥ್ ಗೆಲುವಿಗೆ ಕನ್ನಡಾಭಿಮಾನಿಗಳ ವಿಜಯೋತ್ಸವ Next articleಆರಗ ಜ್ಞಾನೇಂದ್ರ ವಿರುದ್ಧವೇ ಅದೆಷ್ಟೋ ಕೇಸುಗಳಿವೆ, ಈಗ ನೋಡಿದ್ರೆ ಅವರೇ ಗೃಹ ಮಂತ್ರಿಯಾಗಿದ್ದಾರೆ : ಕಿಮ್ಮನೆ ರತ್ನಾಕರ್
2022/01/27 13:41:29
https://malnadtimes.com/%E0%B2%9C%E0%B2%A8%E0%B2%B8%E0%B3%8D%E0%B2%B5%E0%B2%B0%E0%B2%BE%E0%B2%9C%E0%B3%8D-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86%E0%B2%97%E0%B3%86-%E0%B2%85%E0%B2%AD%E0%B3%82%E0%B2%A4%E0%B2%AA/posts/13705
mC4
ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಬಗ್ಗೆಇಲ್ಲಿದೆ ಮುಖ್ಯ ಮಾಹಿತಿ | The News 24 Kannada Home ಸುದ್ದಿ ಜಾಲ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಬಗ್ಗೆಇಲ್ಲಿದೆ ಮುಖ್ಯ ಮಾಹಿತಿ February 17, 2021 - 8:20 AM ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಬಗ್ಗೆಇಲ್ಲಿದೆ ಮುಖ್ಯ ಮಾಹಿತಿ ನವದೆಹಲಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಬಗ್ಗೆ ಮಾಹಿತಿ ಇಲ್ಲಿದೆ. ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡುತ್ತದೆ. ಎಲ್‌ಪಿಜಿ ಸಬ್ಸಿಡಿಯನ್ನು ವಿವಿಧ ರಾಜ್ಯಗಳಲ್ಲಿ ನಿಗದಿಪಡಿಸಲಾಗಿದೆ. ಅದೇ ಸಮಯದಲ್ಲಿ ವಾರ್ಷಿಕ ಆದಾಯವು 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಇರುವವರನ್ನು ಈ ಸೌಲಭ್ಯದಿಂದ ಹೊರಗಿಡಲಾಗಿದೆ. ನೀವು ಫೆಬ್ರವರಿ ತಿಂಗಳಲ್ಲಿ ಸಬ್ಸಿಡಿ ಪಡೆದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಈ ರೀತಿ ಪರಿಶೀಲಿಸಬಹುದಾಗಿದೆ. ಇಂಡೇನ್ ಗ್ಯಾಸ್‌ನ ಗ್ರಾಹಕರು ಹೀಗೆ ಪರಿಶೀಲಿಸಿ ಮೊದಲನೆಯದಾಗಿ, ನೀವು ಇಂಡೇನ್ ಗ್ಯಾಸ್‌ನ ಅಧಿಕೃತ ವೆಬ್‌ಸೈಟ್ https://bit.ly/3rU6Lol ‌ಗೆ ಭೇಟಿ ನೀಡಬೇಕು. ಸಿಲಿಂಡರ್‌ನ ಚಿತ್ರವು ನಿಮ್ಮ ಮುಂದೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡುವುದರಿಂದ ದೂರು ಪೆಟ್ಟಿಗೆ ತೆರೆಯುತ್ತದೆ, ಸಬ್ಸಿಡಿ ಸ್ಥಿತಿ ಬರೆಯಿರಿ ಮತ್ತು ಮುಂದುವರಿಕೆ ಗುಂಡಿಯನ್ನು ಒತ್ತಿ. ಈಗ ಸಬ್ಸಿಡಿ ಸಂಬಂಧಿತ ಬಟನ್ ಕ್ಲಿಕ್ ಮಾಡಿ, ಅದರ ನಂತರ ನೀವು ಉಪ ವಿಭಾಗದಲ್ಲಿ ಕೆಲವು ಹೊಸ ಆಯ್ಕೆಗಳನ್ನು ಪಡೆಯುತ್ತೀರಿ, ಇಲ್ಲಿ ನೀವು ಸಬ್ಸಿಡಿ ನಾಟ್ ರಿಸೀವ್ಡ್ ಅನ್ನು ಕ್ಲಿಕ್ ಮಾಡಬೇಕು. ಇದರ ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ, ನಂತರ ID ಯ ಆಯ್ಕೆ ಇರುತ್ತದೆ, ಅಲ್ಲಿ ನಿಮ್ಮ ಅನಿಲ ಸಂಪರ್ಕದ ID ಅನ್ನು ನಮೂದಿಸಿ. ಇದರ ನಂತರ, ನೀವು ಅದನ್ನು ಪರಿಶೀಲಿಸುವ ಮೂಲಕ ಸಲ್ಲಿಸಬೇಕು. ಈಗ ಸಬ್ಸಿಡಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಸಿಗುತ್ತವೆ. ನೀವು ಎಷ್ಟು ಸಬ್ಸಿಡಿ ಸ್ವೀಕರಿಸಿದ್ದೀರಿ ಮತ್ತು ಎಷ್ಟು ಕಳುಹಿಸಲಾಗುತ್ತಿದೆ. ಇದಲ್ಲದೆ, ಕಸ್ಟಮರ್ ಕೇರ್ ಗೆ ಮಾತನಾಡುವ ಮೂಲಕ ನಿಮ್ಮ ಸಬ್ಸಿಡಿಯ ಬಗ್ಗೆ ಮಾಹಿತಿಯನ್ನು ಸಹ ನೀವು ಪಡೆಯಬಹುದು. ಇಂಡೇನ್ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆ 1800-233-3555. ಇಲ್ಲಿಯೂ ನಿಮ್ಮನ್ನು ಮೊಬೈಲ್ ಸಂಖ್ಯೆ ಅಥವಾ ಗ್ರಾಹಕ ಐಡಿ ಕೇಳಲಾಗುತ್ತದೆ. ಫೆಬ್ರವರಿಯಲ್ಲಿ ಗ್ಯಾಸ್ ಸಿಲಿಂಡರ್ ದರ ಎರಡು ಸಲ ಹೆಚ್ಚಳ ಫೆಬ್ರವರಿ ತಿಂಗಳಲ್ಲಿ ಸರ್ಕಾರಿ ತೈಲ ಕಂಪನಿಗಳು ಅನಿಲ ದರವನ್ನು ಎರಡು ಬಾರಿ ಹೆಚ್ಚಿಸಿವೆ. ಫೆಬ್ರವರಿ 4 ರಂದು ಮೆಟ್ರೋ ನಗರಗಳಲ್ಲಿ ಇಂಡೇನ್, ಹೆಚ್‌ಪಿಯ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 25 ರೂ.ಗಳಷ್ಟು ಏರಿಕೆ ಮಾಡಿದ್ದು, ಫೆಬ್ರವರಿ 15 ರಂದು ಸಿಲಿಂಡರ್‌ಗೆ 50 ರೂ. ಹೆಚ್ಚಳ ಮಾಡಲಾಗಿದೆ.
2021/04/13 14:31:56
https://thenews24.net/2021/02/17/here-is-the-main-information-on-lpg-gas-cylinder-subsidy/
mC4
ಬಾದಾಮಿಯಲ್ಲಿ ರಾಮುಲು ಪರ ಯಡಿಯೂರಪ್ಪ ಪ್ರಚಾರ : ಸಿಎಂ ವಿರುದ್ಧ ಆಕ್ರೋಶ Sun May 09 2021 11:29:25 GMT+0000 (Coordinated Universal Time) TV5 Kannada10 May 2018 10:51 AM GMT ಬಾಗಲಕೋಟೆ : ಬಾದಾಮಿ ಶಿವಯೋಗ ಮಂದಿರ ವೀರಶೈವ ಮಹಾಸಭಾ ಸಂಸ್ಥಾಪಕ ಹಾನಗಲ್ಲ ಕುಮಾರಸ್ವಾಮಿಗಳ ಐಕ್ಯ ಸ್ಥಳ. ಸಿಎಂ ಸಿದ್ದರಾಮಯ್ಯ ಲಿಂಗಾಯತ ವೀರಶೈವರನ್ನ ಒಡೆದು ಆಳಲು ಹೋಗಿ ಮಹಾ ತಪಸ್ವೀ, ದಾರ್ಶನಿಕ ಹಾನಗಲ್ಲ ಕುಮಾರಸ್ವಾಮಿಯವರಿಗೆ ಅಪಮಾನ ಮಾಡಿದ್ದಾರೆ. ಅವರನ್ನ ಜನತೆ ಎಂದೂ ಕ್ಷಮಿಸೋದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಶ್ರೀರಾಮುಲು ಪರ ಪ್ರಚಾರಕ್ಕಾಗಿ ಜಿಲ್ಲೆಯ ಬಾದಾಮಿಗೆ ಆಗಮಿಸಿದ ಅವ್ರು, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬಾರದು ಎನ್ನುವ ಒಂದೇ ಒಂದು ಕಾರಣಕ್ಕೆ ಜಾತಿಯ ವಿಷಬೀಜ ಬಿತ್ತುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಇದನ್ನು ಜನ ಕುಂತಲ್ಲಿ ನಿಂತಲ್ಲಿ ಖಂಡಿಸುತ್ತಿದ್ದಾರೆ. ಬಾದಾಮಿ ಚುನಾವಣೆಯಲ್ಲಿ ಸಿಎಂ ನೂರಕ್ಕೆ ನೂರು ಸೋಲು ಅನುಭವಿಸಿ, ವಾಲ್ಮೀಕಿ ಸಮಾಜದ ನಾಯಕ ಶ್ರೀರಾಮುಲು 25 ಸಾವಿರ ಅಂತರದಲ್ಲಿ ಗೆಲ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು. ಅಲ್ಲದೇ ನಾನು ಮುಖ್ಯಮಂತ್ರಿ ಅದ ಕೆಲವೇ ದಿನಗಳಲ್ಲಿ ಬಾದಾಮಿ, ಪಟ್ಟದಕಲ್ಲು ಐಹೊಳೆ ಕ್ಷೇತ್ರದ ಅಭಿವೃದ್ಧಿಗಾಗಿ 200 ಕೋಟಿ ಹಣ ನೀಡಲಿದ್ದೇನೆ. ಮೇ 17 ರಂದು ನಾನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನಸ್ವೀಕರಿಸಿದ ಪ್ರಥಮ ಕ್ಯಾಬಿನೆಟ್ಟಿನಲ್ಲಿ ರಾಷ್ಟ್ರೀಕೃತ ಹಾಗೂ ಸ್ಥಳಿಯ ಸಂಸ್ಥೆಗಳ 1 ಲಕ್ಷದ ವೆರೆಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು. ಇನ್ನು ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ನಿಶ್ಚಿತ ಎಂದು ಗೊತ್ತಾಗಿ ಬಾದಾಮಿಗೆ ಕದ್ದು ಮುಚ್ಚಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲೂ ಅವ್ರು ಸೋಲು ಅನುಭವಿಸಲಿದ್ದಾರೆ. ಅಲ್ಲದೇ ಜಗತ್ತು ಕಂಡ ಶ್ರೇಷ್ಠ ನಾಯಕ ಮೋದಿಯವ್ರ ಬಗ್ಗೆ ಸಿದ್ಧರಾಮಯ್ಯ ಬಹಳಹಗುರವಾಗಿ ಮಾತನಾಡ್ತಾ, ಮೋದಿ ಅವ್ರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇನ್ನೇನು ಐದು ದಿನದಲ್ಲಿ ಮನೆಗೆ ಹೋಗುವವರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಪ್ರಧಾನಿಯವರಿಗೆ ಹಗುರವಾಗಿ ಮಾತನಾಡಿದ್ದಕ್ಕೆ ಸಿಎಂ ಗೆ ತಕ್ಕ ಪಾಠ ಕಲಿಸಬೇಕಾಗುತ್ತೆ. ರಾಜ್ಯದ ಜನತೆಗೆ ಸ್ವಚ್ಛ ಪ್ರಮಾಣಿಕ ಹಾಗೂ ಧಕ್ಷ ಆಡಳಿತ ಕೊಡುತ್ತೇವೆ. ಹೀಗಾಗಿ ರಾಜ್ಯದ ಜನ ನಮಗೆ ಆಶಿರ್ವಾದ ಮಾಡಿ ಎಂದ ಬಿಎಸ್.ವೈ ಮನವಿ ಮಾಡಿದ್ರು. ಬಿಎಸ್.ವೈ ಜೊತೆ ಕೇಂದ್ರ ಸಚಿವ ರಮೇಶ್ ಜಿಗಜಿನಗಿ, ಸಂಸದ ಗದ್ದಿಗೌಡರ್, ಮಾಜಿ ಶಾಸಕ ಪಿ.ಎಚ್ಪುಜಾರ್ ಸೇರಿದಂತೆ ಜಿಲ್ಲೆಯ ಅನೇಕ ನಾಯಕರು ಬಿಎಸ್.ವೈ ಸಾಥ್ ನೀಡಿದ್ರು.
2021/05/09 11:29:26
http://www.tv5kannada.com/2018/05/10/%E0%B2%AC%E0%B2%BE%E0%B2%A6%E0%B2%BE%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B0%E0%B2%BE%E0%B2%AE%E0%B3%81%E0%B2%B2%E0%B3%81-%E0%B2%AA%E0%B2%B0-%E0%B2%AF%E0%B2%A1/
mC4
ಕುಟುಂಬ ರಾಜಕಾರಣ ಬಿಜೆಪಿ ಮಾಡಿಲ್ವಾ? : ಎಚ್‌ಡಿಕೆ ತಿರುಗೇಟು | HD Kumaraswamy reacts on family politics allegation snr ನಮ್ಮ ಪಕ್ಷದ್ದು ಕುಟುಂಬ ರಾಜಕಾರಣವಾದರೆ ಬಿಜೆಪಿಯವರದ್ದು ಯಾವ ರಾಜಕಾರಣ' ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ Bengaluru, First Published Nov 14, 2021, 7:35 AM IST ಬೆಂಗಳೂರು (14): 'ನಮ್ಮ ಪಕ್ಷದ್ದು ಕುಟುಂಬ ರಾಜಕಾರಣವಾದರೆ (Family politics) ಬಿಜೆಪಿಯವರದ್ದು (BJP) ಯಾವ ರಾಜಕಾರಣ' ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD kumaraswamy) ಖಾರವಾಗಿ ಪ್ರಶ್ನಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶಾಸಕ ಅಪ್ಪಚ್ಚು ರಂಜನ್‌ (appachu Ranjan) ಸಹೋದರ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadish Shettar) ತಮ್ಮ ಸಹ ವಿಧಾನಪರಿಷತ್‌ ಸದಸ್ಯರು. ಉದಾಸಿ ಕುಟುಂಬದ ಕಥೆ ಏನು? ಕುಟುಂಬ ರಾಜಕಾರಣ ಅಲ್ಲಿಯೂ ಇಲ್ಲವೇ? ಪಕ್ಷಕ್ಕೆ ಬಂದು ಜನರಿಂದ ಗೆದ್ದವರನ್ನು ಹಣ ಕೊಟ್ಟು ಖರೀದಿ ಮಾಡಿದ್ದು ಯಾವ ಪಕ್ಷ? ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಾಗದೆ ಅನ್ಯ ಪಕ್ಷಗಳಿಂದ ಶಾಸಕರನ್ನು (MLA) ಸೆಳೆದವರು ಯಾರು? ನಿಮ್ಮ ಸರ್ಕಾರಗಳು ಹೇಗೆ ಬಂದವು ಎನ್ನುವುದನ್ನು ನೀವು ಅರ್ಥ ಮಾಡಿಕೊಂಡು ಮಾತನಾಡಬೇಕು' ಎಂದು ವಾಗ್ದಾಳಿ ನಡೆಸಿದರು. 'ಪಕ್ಷಕ್ಕೆ ಬಂದವರು ನಂಬಿಕೆ ದ್ರೋಹ ಮಾಡಿ ಹೋದರೆ ಪಕ್ಷವನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಕೆಲವೊಮ್ಮೆ ಇಂತಹ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿಜೆಪಿಯವರು ಕ್ಷುಲ್ಲಕ ವಿಚಾರ ಮಾತನಾಡುವುದು ಬೇಡ' ಎಂದರು. 'ಕಾಂಗ್ರೆಸ್‌ (Congress) ಪಕ್ಷದ್ದು ಓಲೈಕೆ ರಾಜಕಾರಣ, ಜೆಡಿಎಸ್‌ ಪಕ್ಷದ್ದು ಕುಟುಂಬ ರಾಜಕಾರಣ' ಎಂದು ಬಿಜೆಪಿ ಮಾಡಿರುವ ಟ್ವೀಟ್‌ಗೆ ತಿರುಗೇಟು ನೀಡಿದರು. MLC ಚುನಾವಣೆಯಲ್ಲಿ ಆಸಕ್ತಿ ಇಲ್ಲ : ಪರಿಷತ್‌ ಚುನಾವಣೆಗೆ (MLC Election) ಸ್ಪರ್ಧಿಸುವ ಆಕಾಂಕ್ಷೆ ನನಗಿಲ್ಲ. ಹಾಸನ (Hassan) ಜಿಲ್ಲೆಯಿಂದ ಅಭ್ಯರ್ಥಿ ಆಯ್ಕೆ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಶೇ.70ಕ್ಕೂ ಹೆಚ್ಚು ಮಂದಿ ನಮ್ಮ ತಾಯಿ ಭವಾನಿ (bhavani Revanna) ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಪಕ್ಷದ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ (HD Devegowda) ಮೊಮ್ಮಗ ಡಾ. ಸೂರಜ್‌ ರೇವಣ್ಣ (suraj revanna) ಹೇಳಿದ್ದಾರೆ. ಅಮ್ಮನೋ - ಮಗನೊ : ವಿಧಾನ ಪರಿಷತ್‌ ಚುನಾವಣೆ (Karnataka MLC Election) ಘೋಷಣೆ ಬೆನ್ನಲ್ಲೇ ಜೆಡಿಎಸ್‌ (JDS) ಪಾಳಯದೊಳಗೆ ಅಭ್ಯರ್ಥಿ ಆಯ್ಕೆ ಚಟುವಟಿಕೆಗಳು ಬಿರುಸುಗೊಂಡಿದೆ. ಹಾಸನ (Hassan) ಜಿಲ್ಲೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಶುಕ್ರವಾರ ಸಂಸದ ಪ್ರಜ್ವಲ್‌ ರೇವಣ್ಣ (Prajwal revanna) ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಭವಾನಿ ರೇವಣ್ಣ (Bhavani Revanna) ಅವರ ಹೆಸರೇ ಗಟ್ಟಿ ಧ್ವನಿಯಲ್ಲಿ ಕೇಳಿಬಂದಿದೆ. ಆದರೆ, ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ.
2021/12/01 21:35:54
https://kannada.asianetnews.com/politics/hd-kumaraswamy-reacts-on-family-politics-allegation-snr-r2jhst
mC4
ಪಿರಿಯಾಪಟ್ಟಣ: ಎಟಿಎಂ ಪಿನ್ ನೀಡಿ 68 ಸಾವಿರ ಕಳೆದುಕೊಂಡ ಶಿಕ್ಷಕಿ | Periyapatna teacher shares her ATM PIN and loses 68 thousand rupees | Kannadaprabha.com ಪಿರಿಯಾಪಟ್ಟಣ: ಎಟಿಎಂ ಪಿನ್ ನೀಡಿ 68 ಸಾವಿರ ಕಳೆದುಕೊಂಡ ಶಿಕ್ಷಕಿ Published: 12 Oct 2017 12:25 PM IST ಪಿರಿಯಾಪಟ್ಟಣ: ಬ್ಯಾಂಕ್‌ ಸಿಬ್ಬಂದಿ ಎಂದು ಭಾವಿಸಿ ಅಪರಿಚಿತ ವ್ಯಕ್ತಿಗೆ ತನ್ನ ಎಟಿಎಂ ಪಿನ್ ಮಾಹಿತಿ ನೀಡಿದ್ದ ಶಿಕ್ಷಕಿಯೊಬ್ಬರು ಖಾತೆಯಲ್ಲಿದ್ದ 68 ಸಾವಿರ ನಗದನ್ನು ಕಳೆದುಕೊಂಡಿದ್ದಾರೆ. ಪಿರಿಯಾಪಟ್ಟಣದ ಹುಣಸೇಕುಪ್ಪೆ ಅಂಗನವಾಡಿ ಶಿಕ್ಷಕಿ ಎಸ್‌.ಆರ್‌. ಸುನಂದಾ ಹಣ ಕಳೆದುಕೊಂಡ ನತದೃಷ್ಟೆಯಾಗಿದ್ದು ಪಿರಿಯಾಪಟ್ಟಣದ ಎಸ್ ಬಿಐ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಮಂಗಳವಾರ ಶಿಕ್ಷಕಿಯ ಮೊಬೈಲ್ ಗೆ ಕರೆ ಮಾಡಿದ್ದ ವಂಚಕ "ನಾವು ಎಸ್‌ಬಿಐ ಬ್ಯಾಂಕ್‌ನಿಂದ ಕರೆಮಾಡುತ್ತಿದ್ದೇವೆ. ನಿಮ್ಮ ಎಟಿಎಂ ಬ್ಲಾಕ್‌ ಆಗಿದೆ. ಮತ್ತೆ ಅದನ್ನು ನವೀಕರಣ ಮಾಡಬೇಕು" ಎನ್ನುವ ಮೂಲಕ ಕಾರ್ಡ್‌ ನಂಬರ್‌, ಪಾಸ್‌ವರ್ಡ್‌ ನಂಬರ್‌ ಮಾಹಿತಿಯನ್ನು ಪಡೆದಿದ್ದಾನೆ. ಆ ಬಳಿಕ ಬ್ಯಾಂಕ್ ನಿಂದ ಬಂದ ಒಟಿಪಿ ನಂಬರ್‌ ಸಹ ದಾಖಲಿಸಿಕೊಂಡಿದ್ದಾನೆ. ಇದಾದ ಕೆಲವೇ ಸಮಯಕ್ಕೆ ಖಾತೆಯಲ್ಲಿದ್ದ ಹಣ ಡ್ರಾ ಆದ ಮೆಸೇಜ್ ಸಿಕ್ಕಿದ್ದು ಪ್ರಾರಂಭದಲ್ಲಿ 500 ರೂ. ಬಳಿಕ 10 ಸಾವಿರ ಹೀಗೆ ಒಟ್ಟಾರೆ ಖಾತೆಯಲ್ಲಿ ಇದ್ದ 68 ಸಾವಿರ ರೂ. ನ್ನು ವಂಚಕ ಎಗರಿಸಿದ್ದಾನೆ. ಹಣ ಡ್ರಾ ಆದ ಮೆಸೇಜ್ ನೋಡಿದ್ದ ಶಿಕ್ಷಕಿಗೆ ತಾವು ವಂಚನೆಗೆ ಒಳಗಾಗಿರುವುದು ತಿಳಿದು ಆಘಾತವಾಗಿದೆ. ತಕ್ಷಣ ಆಕೆ ಪಿರಿಯಾಪಟ್ಟಣದ ಪೊಲೀಸ್‌ ಠಾಣೆಗೆ ಮತ್ತು ಎಸ್‌ಬಿಐ ಬ್ಯಾಂಕ್‌ಗೆ ದೂರು ನೀಡಿದ್ದಾರೆ. ಈ ಹಿಂದೆ 2016ನೇ ಮೇ ತಿಂಗಳಿನಲ್ಲಿ ಕೆನರಾ ಬ್ಯಾಂಕ್‌ ಪಿರಿಯಾಪಟ್ಟಣ ಶಾಖೆಯಲ್ಲಿ ಖಾತೆ ಹೊಂದಿದ್ದ ಶಿಕ್ಷಕಿಯೊಬ್ಬರು ಇದೇ ರೀತಿ 44 ಸಾವಿರ ರೂ. ಕಳೆದುಕೊಂಡು ವಂಚನೆಗೆ ಒಳಗಾಗಿದ್ದರು. ಇದು ಎರಡನೇ ಪ್ರಕರಣ ಎನ್ನುವುದಾಗಿ ಪಿರಿಯಾಪಟ್ಟಣ ಪೋಲೀಸರು ಮಾಹಿತಿ ನಿಡಿದ್ದಾರೆ. Topics : ATM PIN, Periyapatna, Anganwadi teacher, Periyapatna SBI, ಎಟಿಎಂ ಪಿನ್, ಪಿರಿಯಾಪಟ್ಟಣ, ಅಂಗನವಾಡಿ ಶಿಕ್ಷಕಿ, ಪಿರಿಯಾಪಟ್ಟಣ ಎಸ್ ಬಿಐ One of the teacher who shares her ATM pin information to an unknown person had lost Rs 68,000 rupees from her account.
2018/06/24 01:35:18
http://media.kannadaprabha.com/karnataka/periyapatna-teacher-shares-her-atm-pin-and-loses-68-thousand-rupees/303570.html
mC4
ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ | Latest news bytes - ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ - Kannada Oneindia 5 min ago ಸ್ವಾಭಿಮಾನಕ್ಕೆ ಧಕ್ಕೆಯಾದರೆ ಇಂದೇ ರಾಜೀನಾಮೆ: ರೇಣುಕಾಚಾರ್ಯ 16 min ago ಭಾರತದಲ್ಲಿನ ಮಳೆ, ಪ್ರವಾಹದ ಬಗ್ಗೆ ನಾಸಾ ಹೇಳಿದ್ದೇನು? ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ | Published: Monday, January 7, 2008, 13:00 [IST] ಕೋಲಾರ : ಜಿಲ್ಲೆಯ ಹಳೆಪಾಳ್ಯ ಗ್ರಾಮದಲ್ಲಿ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಗ್ರಾನೈಟ್ ಬಂಡೆ ಬಿದ್ದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಜರುಗಿದೆ. ಬಂಡೆ ಕೆಳಗೆ ಸಿಗ್ಹಾಕ್ಕಿಕೊಂಡ ಮೂವರು ಗುರುತು ಸಿಗಲಾರದಷ್ಟು ಜಜ್ಜಿಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬ್ರಾಹ್ಮಣರಿಗೆ ರಾಜಕೀಯ ಮೀಸಲಾತಿ ನೀಡಲು ಆಗ್ರಹ ಬೆಂಗಳೂರು : ಬ್ರಾಹ್ಮಣರಿಗೆ ರಾಜಕೀಯ ಮೀಸಲು ಕಲ್ಪಿಸುವಂತೆ ಕೋರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಮನವಿ ಸಲ್ಲಿಸಲು ಅಖಿಲ ಭಾರತ ಚಾಣಕ್ಯ ಬ್ರಾಹ್ಮಣ ಸಂಘ ನಿರ್ಧರಿಸಿದೆ. ನಗರದ ಚಾಮರಾಜಪೇಟೆಯಲ್ಲಿ ನಡೆದ 'ಬ್ರಾಹ್ಮಣರಿಗೆ ರಾಜಕೀಯ ಮೀಸಲಾತಿ' ಕುರಿತ ವಿಚಾರ ಸಂಕಿರಣ ನಡೆಯಿತು. ಬ್ರಾಹ್ಮಣರಿಗೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಈ ಹಿಂದೆ ಸಾಕಷ್ಟು ಅವಕಾಶ ಒದಗಿತ್ತು. ಆದರೆ, ನಾವೇ ಹಿಂದೇಟು ಹಾಕಿದ್ದೇವೆ ಎಂದು ವಿದ್ವಾಂಸ ಪಾವಗಡ ಪ್ರಕಾಶ್ ರಾವ್ ಹೇಳಿದರು. ರಾಜಕೀಯವಾಗಿ ಪ್ರಬಲರಾದರೆ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ.ಅಗತ್ಯಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯಕವಾಗುತ್ತದೆ ಎಂದು ಮಾಜಿ ಶಾಸಕ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ವಿ. ಶಂಕರ ನಾರಾಯಣ, ಗವಿಗಂಗಾಧರ ಸ್ವಾಮಿ ದೇವಸ್ಥಾನದ ಸೋಮಸುಂದರ ದೀಕ್ಷಿತ, ಉದ್ಯಮಿ ಛಾಯಾಪತಿ, ಸಂಘದ ಅಧ್ಯಕ್ಷ ಆರ್. ಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್. ಜಿ. ಲಕ್ಷ್ಮೀನಾರಾಯಣ ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ದೂರದರ್ಶನದ ಮಹೇಶ್ ಜೋಷಿ ರಾಜಕೀಯಕ್ಕೆ ಬೆಂಗಳೂರು : ಸರ್ಕಾರಿ ಉದ್ಯೋಗ ತೊರೆದು ರಾಜಕೀಯ ಪ್ರವೇಶಿಸುತ್ತಿರುವ ಪಟ್ಟಿಯಲ್ಲಿ ದೂರದರ್ಶನದ ಹಿರಿಯ ನಿರ್ದೇಶಕ ಡಾ. ಮಹೇಶ್ ಜೋಷಿ ಹೊಸ ಸೇರ್ಪಡೆಯಾಗಲಿದ್ದಾರೆ. ಸರ್ಕಾರಿ ಉದ್ಯೋಗ ತೊರೆದು ಶೀಘ್ರದಲ್ಲೇ ತಮ್ಮ ಪಕ್ಷ ಸೇರುತ್ತಾರೆ ಎಂದು ಮಾಯಾವತಿಯವರ ಬಹುಜನ ಪಕ್ಷದ ರಾಜ್ಯ ವಕ್ತಾರರು ಹೇಳಿದ್ದಾರೆ. ಈಗಾಗಲೇ ಪೊಲೀಸ್ ಅಧಿಕಾರಿಗಳಾದ ಬಿ.ಕೆ ಶಿವರಾಮ್, ದಿವಾಕರ್ ಇಲಾಖೆ ತೊರೆದು ರಾಜಕೀಯ ಪ್ರವೇಶಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದಲ್ಲದೇ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಸಿ.ರಾಮಮೂರ್ತಿ ಅವರೂ ಸದ್ಯದಲ್ಲೇ ಇಲಾಖೆ ತೊರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷ ಕೂಡ ಮಹೇಶ್ ಜೋಷಿಯವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದೆ ಎನ್ನಲಾಗಿದೆ.
2019/08/21 08:37:27
https://kannada.oneindia.com/news/2008/01/07/news-bytes.html
mC4
ಪುಸ್ತಕಗಳಿಂದ : ಸಹಜ ಸಮೃದ್ಧ ಪ್ರಕಾಶನ : ಸಂಪಾದಕ : ಜಿ.ಕೃಷ್ಣಪ್ರಸಾದ : ಬಿ.ಟಿ.ಗೆ ಒತ್ತು – ಬದನೆಗೆ ಕುತ್ತು, ನಾಟಿ ಬದನೆಗೆ ಒದಗಿದ ಕಂಟಕ..! : ಈ ಆಂದೋಲನದಲ್ಲಿ ನೀವೂ ಪಾಲ್ಗೊಳ್ಳಿ – ಕಣಜ Home/ಜಿ.ಕೃಷ್ಣಪ್ರಸಾದ, ಪುಸ್ತಕಗಳಿಂದ, ಬಿ.ಟಿ.ಗೆ ಒತ್ತು - ಬದನೆಗೆ ಕುತ್ತು ನಾಟಿ ಬದನೆಗೆ ಒದಗಿದ ಕಂಟಕ..!, ಸಹಜ ಸಮೃದ್ಧ ಪ್ರಕಾಶನ/ಪುಸ್ತಕಗಳಿಂದ : ಸಹಜ ಸಮೃದ್ಧ ಪ್ರಕಾಶನ : ಸಂಪಾದಕ : ಜಿ.ಕೃಷ್ಣಪ್ರಸಾದ : ಬಿ.ಟಿ.ಗೆ ಒತ್ತು – ಬದನೆಗೆ ಕುತ್ತು, ನಾಟಿ ಬದನೆಗೆ ಒದಗಿದ ಕಂಟಕ..! : ಈ ಆಂದೋಲನದಲ್ಲಿ ನೀವೂ ಪಾಲ್ಗೊಳ್ಳಿ ಇಷ್ಟು ದಿನಗಳ ಕಾಲ ಆಹಾರದಲ್ಲಿ ಸಸ್ಯಾಹಾರ ಅಥವಾ ಮಾಂಸಾಹಾರ ಎಂಬ ಎರಡು ಬಗೆಗಳಿದ್ದವು. ಆದರೆ ಇನ್ನು ಮುಂದೆ ಹಾಗಿರುವುದಿಲ್ಲ..! ಏಕೆಂದರೆ, ಒಂದು ಜೀವಿಯ ಕೋಶದಲ್ಲಿನ 'ಜೀನ್'ಗಳನ್ನು ಹೊರತೆಗೆದು, ಇನ್ನೊಂದು ಜೀವಿಯ ಕೋಶದೊಳಗೆ ಬಲವಂತದಿಂದ ಸೇರಿಸಿ, ಹೊಸ ಬಗೆಯ ಆಹಾರ ಉತ್ಪಾದನೆಗೆ ಎಲ್ಲ ತಯಾರಿ ಪೂರ್ಣಗೊಂಡಿದೆ! ಜೈವಿಕವಾಗಿ ಮಾರ್ಪಡಿಸಲಾದ (ಕುಲಾಂತರಿ- ಜಿ.ಎಂ.ಫುಡ್) ಆಹಾರ ಇಷ್ಟರಲ್ಲೇ ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಬ್ಯಾಕ್ಟೀರಿಯಾ, ವೈರಸ್, ಜೇಡ, ಚೇಳು ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ಹೊರತೆಗೆದು ಬದನೆ, ಆಲೂಗಡ್ಡೆ, ಮೆಕ್ಕೆಜೋಳದಂಥ ಆಹಾರಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತದೆ. ಇದೇ 'ಜಿ.ಎಂ. ಆಹಾ'. ನೋಡಲು ಇದು ನಾವು ದಿನನಿತ್ಯ ಬಳಸುವ ಆಹಾರದಂತೆಯೇ ಇರುತ್ತದೆ. ಆದರೆ ಇದು ಅದಲ್ಲ! ಕುಲಾಂತರಿ ಆಹಾರಕ್ಕೆ ಅನುಮತಿ ನೀಡುವ ನಿರ್ಧಾರವು, ಈ ಆಹಾರವನ್ನು ಉತ್ಪಾದಿಸುವ ಕಂಪೆನಿಗಳು ಮಾಡುವ ವಾದದ ಮೇಲೆಯೇ ಸಂಪೂರ್ಣ ಅವಲಂಬಿತವಾಗಿದೆ. ಈ ಕ್ರಮಕ್ಕೆ ಭಾರತ ಸೇರಿದಂತೆ ಇನ್ನಿತರ ದೇಶಗಳ ವಿಜ್ಞಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಮ್ಮೆ ಕುಲಾಂತರಿ ಬೆಳೆ ಬೆಳೆಯಲು ಆರಂಭವಾದರೆ, ನಿಸರ್ಗದಲ್ಲಿನ ವಂಶವಾಹಿ ವ್ಯವಸ್ಥೆ ಸಂಪೂರ್ಣ ಬುಡಮೇಲಾಗುತ್ತಿದೆ. ಇದನ್ನು ಮತ್ತೆ ಸರಿಪಡಿಸುವುದು ಅಸಾಧ್ಯ. ನಿರ್ಮೂಲನೆ ಮಾಡಲು ಅಸಾಧ್ಯವಾಗುವ ಕೀಟ, ರೋಗ ಹಾಗೂ ಕಳೆ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇದೆ. ಇದರಿಂದ ನಮ್ಮ ಸಾಂಪ್ರದಾಯಿಕ ತಳಿಗಳು ಕಣ್ಮರೆಯಾಗಿ, ಜೀವವೈವಿಧ್ಯಕ್ಕೂ ಧಕ್ಕೆ ಉಂಟಾಗಲಿದೆ.ಬಹುತೇಕ ಐರೋಪ್ಯ ರಾಷ್ಟ್ರಗಳೂ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಕುಲಾಂತರಿ ಆಹಾರ ಬೆಳೆಗೆ ನಿಷೇಧ ವಿಧಿಸಲಾಗಿದೆ. 'ಕುಲಾಂತರಿ ಆಹಾರ ಬೆಳೆ ಬಿಡುಗಡೆ ಮಾಡುವುದು ಬೇಡ' ಎಂದು ಪ್ರಮುಖ ವಿಜ್ಞಾನಿಗಳೇ ಆಗ್ರಹಿಸಿದ್ದಾರೆ. ಆದರೆ ವಿರೋಧಗಳ ಮಧ್ಯೆಯೂ ಭಾರತದಲ್ಲಿ ಈ ಆಹಾರದ ಬಿಡುಗಡೆಗೆ ಸಿದ್ಧತೆ ನಡೆದಿವೆ. ಈ ಆಹಾರವನ್ನು ಜನರ ಮೇಲೆ ಪರೀಕ್ಷಿಸಲು ತಯಾರಿ ನಡೆದಿದೆಯೇನೋ ಎಂಬಂತೆ, ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸದೇ ಅತ್ಯವಸರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಲಾಭ ಗಳಿಕೆಯೊಂದನ್ನೇ ದಂಧೆಯಾಗಿಸಿಕೊಂಡು ಕಂಪೆನಿಗಳು ನಡೆಸುವ ಈ ಬೃಹತ್ ಪ್ರಮಾಣದ ಪ್ರಯೋಗಗಳಲ್ಲಿ ನೀವು ಪ್ರಯೋಗ ಜೀವಿಗಳಾಗಿ ಬಳಕೆಯಾಗಲಿದ್ದೀರಿ..! ವಿವಿಧ ರಾಜ್ಯಗಳಲ್ಲಿ ಆರಂಭವಾದ 'ಕುಲಾಂತರಿ ವಿರೋಧಿ' ಚಳುವಳಿಗೆ ಕರ್ನಾಟಕದಲ್ಲಿಯೂ ಚಾಲನೆ ದೊರೆತಿದೆ. ಗ್ರೀನ್‌ಪೀಸ್ ಸಂಘಟನೆಯು 'ಸಹಜ ಸಮೃದ್ಧ' ಸಾವಯವ ಕೃಷಿಕರ ಬಳಗವು 'ಸಂವಾದ' ಹಾಗೂ 'ಭೂಮಿ' ಸಂಸ್ಥೆಯ ಜತೆಗೂಡಿ 'ನಾನು ಪ್ರಯೋಗ ಪಶು ಅಲ್ಲ' (ಐ ಆಮ್ ನೋ ಲ್ಯಾಬ್ ರ್ಯಾಟ್) ಚಳುವಳಿ ರೂಪಿಸಿದೆ. ವಿವಿಧ ಕಾರ್ಯಕ್ರಮಗಳ ಮೂಲಕ, ಕುಲಾಂತರಿ ಬೆಳೆ ತಂದೊಡ್ಡುವ ಅಪಾಯಗಳ ಕುರಿತು ಅರಿವು ಮೂಡಿಸಲು ಯತ್ನಿಸಲಾಗುವುದು. ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಶ್ರೀ ಶ್ರೀರಾಮುಲು ಅವರಿಗೆ ಸಾವಿರಗಟ್ಟಲೇ ಪತ್ರ ಬರೆಯುವ ಮೂಲಕ ನಾಡಿನಲ್ಲಿ ಕುಲಾಂತರಿ ನಿಷೇಧಕ್ಕೆ ಆಗ್ರಹಿಸಲಾಗುವುದು. ಈ ಆಂದೋಲನಕ್ಕೆ ನೀವೂ ಕೈ ಜೋಡಿಸಿ. 'ಕುಲಾಂತರಿ ಆಹಾರ ಧಾನ್ಯ ನಿಷೇಧಿಸಿ' ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಪತ್ರ ಬರೆದು ಒತ್ತಾಯಿಸಿ. ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಬರೆದ ಪತ್ರದ ಸಾರಾಂಶ ಇಲ್ಲಿದೆ: ನಾನು ಪ್ರಯೋಗ ಜೀವಿ ಅಲ್ಲ ಗೌರವಾನ್ವಿತ ಆರೋಗ್ಯ ಸಚಿವ ಶ್ರೀ ಶ್ರೀರಾಮುಲು, ಪ್ರಸ್ತುತ ನಾವು ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಬಹು ಮಹತ್ವದ ಸಂಗತಿಯೊಂದನ್ನು ನಿಮ್ಮೊಂದಿಗೆ ಪ್ರಸ್ತಾಪಿಸಲು ಬಯಸುತ್ತೇನೆ. ಕುಲಾಂತರಿ (ವಂಶವಾಹಿ ಪರಿವರ್ತಿತ- 'ಜೆನೆಟಿಕಲಿ ಮಾಡಿಫೈಡ್') ಬೆಳೆ ಹಾಗೂ ಆಹಾರಧಾನ್ಯಗಳು ತಂದೊಡ್ಡುವ ಅಪಾಯಗಳ ಕುರಿತು ಕೇಂದ್ರ ಸರ್ಕಾರದ ಆರೋಗ್ಯ ಸಚಿವ ಶ್ರೀ ಅನ್ಬುಮಣಿ ರಾಮದಾಸ್ ಹಾಗೂ ಪ್ರಖ್ಯಾತ ವಿಜ್ಞಾನಿಗಳಾದ ಡಾ. ಪುಷ್ಪಾ ಭಾರ್ಗವ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕುಲಾಂತರಿ ಆಹಾರಧಾನ್ಯದ ಕುರಿತು ನನಗೆ ಉಂಟಾದ ಆತಂಕದ ಬಗ್ಗೆ ನೀವು ಕಾಳಜಿ ತೋರುತ್ತೀರಿ ಎಂಬ ನಂಬಿಕೆಯಿಂದ ಈ ಪತ್ರ ಬರೆಯುತ್ತಿದ್ದೇನೆ. ಕುಲಾಂತರಿ ತಂತ್ರಜ್ಞಾನವು ಪರಿಸರ ಹಾಗೂ ಆಹಾರ ಬೆಳೆಗಳ ಮೇಲೆ 'ಮತ್ತೆ ಮೂಲಸ್ಥಿತಿಗೆ ತರಲು ಸಾಧ್ಯವಾಗದ' ಹಾನಿಯನ್ನು ಉಂಟು ಮಾಡುತ್ತದೆ. ಇದಕ್ಕೆ ಪೂರಕವೆನಿಸುವ ವೈಜ್ಞಾನಿಕ ಸಾಕ್ಷಾಧಾರಗಳೂ ಲಭ್ಯವಾಗಿವೆ. ಕುಲಾಂತರಿ ತಂತ್ರಜ್ಞಾನದ ಕಂಪೆನಿಗಳು ನಡೆಸಿದ ಪ್ರಯೋಗಗಳಿಂದ ಕಂಡುಬಂದ ಸಂಗತಿ ಎಂದರೆ, ಆ ಆಹಾರ ಸೇವಿಸಿದ ಪ್ರಾಣಿಗಳು ಸಂತಾನಶಕ್ತಿ ಕುಂಠಿತಗೊಂಡು ಅವುಗಳ ಅಂಗಗಳು ಹಾಗೂ ಕೋಶಗಳು ಹಾನಿಗೆ ಈಡಾಗಿವೆ. ಇದರ ಜತೆಗೆ ಬೆಳವಣಿಗೆ, ರೋಗನಿರೋಧಕ ಶಕ್ತಿ ಕುಂಠಿತಗೊಂಡಿರುವುದೂ ಪತ್ತೆಯಾಗಿದೆ. ಇಷ್ಟೇ ಅಲ್ಲ, ಆಹಾರದ ಪೋಷಕಾಂಶ ರಚನೆಯೂ ಬದಲಾಗಿದೆ. ಈ ಸಂಶೋಧನಾ ವರದಿಗಳು ಬಹಿರಂಗಗೊಂಡ ನಂತರ ವಿದೇಶಗಳಲ್ಲಿ ಕುಲಾಂತರಿ ಬೆಳೆ/ ಆಹಾರವನ್ನು ನಿಷೇಧಿಸಲಾಗಿದೆ. ಕುಲಾಂತರಿಗೆ ವಿರೋಧ ಹೆಚ್ಚುತ್ತಿರುವ ಸಂದರ್ಭದಲ್ಲೇ ಭಾರತದಲ್ಲಿ ಬಿ.ಟಿ. ಬದನೆಕಾಯಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ಈ ಉತ್ಪನ್ನದ ಜೈವಿಕ ಸುರಕ್ಷತೆಯೇ ಪ್ರಶ್ನಾರ್ಹವಾಗಿದೆ. ಏಕೆಂದರೆ, ಕುಲಾಂತರಿ ಆಹಾರಧಾನ್ಯ ಉತ್ಪಾದನಾ ಕಂಪೆನಿಗಳು ನೀಡಿದ ಕೆಲವು ಅಂಶಗಳನ್ನು ಆಧರಿಸಿಯೇ ಉತ್ಪನ್ನ ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ..! ತರಕಾರಿಗಳ ಪೈಕಿ ಬದನೆಕಾಯಿ ಹೆಚ್ಚು ಪ್ರಮಾಣದ ಜೀವಸತ್ವ ಒಳಗೊಂಡಿದ್ದು, ಔಷಧಿ ರೂಪದಲ್ಲೂ ಇದನ್ನು ಸೇವಿಸಲಾಗುತ್ತಿದೆ. ಇದೆಲ್ಲಕ್ಕೂ ಮಿಗಿಲಾಗಿ ಒಂದು ಸಂಗತಿಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಬದನೆಗೆ ಬರುವ ಕೀಟಬಾಧೆಯನ್ನು ನಿವಾರಿಸಲು ಸಾಕಷ್ಟು ನಿಸರ್ಗಸ್ನೇಹಿ ಪದ್ಧತಿಗಳಿವೆ. ಇವುಗಳಿಗೆ ರಾಸಾಯನಿಕ ಸಿಂಪಡಣೆಯೂ ಬೇಡ; ಕುಲಾಂತರಿ ಬೀಜಗಳೂ ಬೇಡ. ಶ್ರೀ ಶ್ರೀರಾಮುಲು ಅವರೇ, ಲಕ್ಷಾಂತರ ನಾಗರಿಕರ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಕುಲಾಂತರಿ ಆಹಾರವನ್ನು ನಿಷೇಧಿಸಲು ನಿಮಗೆ ಸಂಪೂರ್ಣ ಅಧಿಕಾರವಿದೆ. ಇಂಥ ಅಪಾಯಕಾರಿ ತಂತ್ರಜ್ಞಾನದ ವಿರುದ್ಧ ಕೇರಳದಂಥ ಕೆಲವು ರಾಜ್ಯಗಳು ಈಗಾಗಲೇ ದನಿಯೆತ್ತಿವೆ. ಲಕ್ಷಾಂತರ ಜನರ ಪ್ರತಿನಿಧಿಯಾಗಿರುವ ನಿಮಗೆ, ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಈ ನಿಟ್ಟಿನಲ್ಲಿ ಕುಲಾಂತರಿ ಬೆಳೆ ನಿಷೇಧಕ್ಕೆ ಮುಂದಾಗುವಂತೆ ಒತ್ತಾಯಿಸುತ್ತೇನೆ. ಕುಲಾಂತರಿ ತಂತ್ರಜ್ಞಾನವನ್ನು ನನ್ನ ಮೇಲೆ ಪ್ರಯೋಗಿಸಬೇಡಿ. ಏಕೆಂದರೆ, ನಾನು ಪ್ರಯೋಗಾಲಯದ ಜೀವಿ ಅಲ್ಲ. ಕುಲಾಂತರಿ ಆಹಾರ ಬಳಕೆಯನ್ನು ನಾನು ತಿರಸ್ಕರಿಸುತ್ತೇನೆ. ಬಿ.ಟಿ. ಬದನೆ ಸೇರಿದಂತೆ ಇನ್ನಾವುದೇ ಕುಲಾಂತರಿ ಬೆಳೆಗೆ ಭಾರತದಲ್ಲಿ ಅವಕಾಶ ನೀಡುವುದನ್ನು ನಿಲ್ಲಿಸಿ. ಇಷ್ಟೇ ಅಲ್ಲ, ಕುಲಾಂತರಿ ಆಹಾರ ಆಮದು ಮಾಡಿಕೊಳ್ಳುವುದನ್ನು ಕೂಡ ನಿಲ್ಲಿಸಿ ಎಂದು ಆಗ್ರಹಿಸುತ್ತೇನೆ
2021/12/04 19:07:58
https://kanaja.karnataka.gov.in/%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B2%BF%E0%B2%82%E0%B2%A6-%E0%B2%B8%E0%B2%B9%E0%B2%9C-%E0%B2%B8%E0%B2%AE%E0%B3%83%E0%B2%A6%E0%B3%8D%E0%B2%A7-%E0%B2%AA-10/
mC4
ಸಾಲದ ಕಂತನ್ನು ಪಾವತಿ ಮಾಡದ್ದಕ್ಕೆ ಅಣ್ಣನನ್ನೇ ಕೊಂದ ಪಾಪಿ ತಮ್ಮ Public TVSeptember 26, 2021 ಮಂಡ್ಯ: ಹಣಕಾಸಿನ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಡ್ಯ ನಗರದ ವಿದ್ಯಾನಗರದಲ್ಲಿ ಜರುಗಿದೆ. ರೇಣುಕಾಪ್ರಸಾದ್ ಎಂಬಾತ ತನ್ನ ಅಣ್ಣ ಮಹೇಶ್(45)ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ರೇಣುಕಾಪ್ರಸಾದ್ ಮಹೇಶ್‍ಗೆ ಖಾಸಗಿ ಸಹಕಾರ ಸಂಘದಲ್ಲಿ ಜಾಮೀನು ನೀಡಿ ಸಾಲ ಕೊಡಿಸಿದ್ದರು. ಆದರೆ ಮಹೇಶ್ ಸರಿಯಾಗಿ ಸಾಲದ ಕಂತನ್ನು ಪಾವತಿ ಮಾಡದ ಕಾರಣ ಸಂಘದವರು ರೇಣುಕಾಪ್ರಸಾದ್ ಅವರನ್ನು ನಿಮ್ಮ ಅಣ್ಣ ಕಂತು ಕಟ್ಟಿಲ್ಲ ಎಂದು ಕೇಳುತ್ತಿದ್ದರು. ಇದೇ ವಿಚಾರಕ್ಕೆ ಹಲವು ದಿನಗಳಿಂದ ಅಣ್ಣ-ತಮ್ಮಂದಿರ ನಡುವೆ ಜಗಳವಾಗುತ್ತಿತ್ತು. ಇದನ್ನೂ ಓದಿ: ಗಾಂಧಿ, ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಕಂಡ್ರೆ ಬಿಜೆಪಿಗೆ ಆಗ್ತಿರಲಿಲ್ಲ, ಈಗ ನಾಟಕ ಆಡ್ತಾರೆ: ಸಿದ್ದರಾಮಯ್ಯ ಮಹೇಶ್ ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ನನ್ನ ವ್ಯಾಪಾರದಲ್ಲಿ ಲಾಸ್ ಆಗುತ್ತಿದೆ ಹೀಗಾಗಿ ಕಂತು ಕಟ್ಟಲು ಆಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದರು. ಆದರೆ ಮಹೇಶ್ ವ್ಯಾಪಾರ ಮಾಡಿದ ಹಣನ್ನು ಜೂಜಾಡಿ ಕಳೆಯುತ್ತಿದ್ದ ಎಂದು ಸಹ ಕೆಲವರು ಆರೋಪ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ರಾತ್ರಿ ಅಣ್ಣನನ್ನು ಮನೆಯ ಹತ್ತಿರ ಕರೆಸಿಕೊಂಡು ಕಂತಿನ ವಿಚಾರವನ್ನು ಕೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಡುವ ಹಂತಕ್ಕೆ ತಲುಪಿದೆ. ಈ ಪರಿಣಾಮ ರೇಣುಕಾಪ್ರಸಾದ್ ಮಹೇಶ್‍ಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ನಾನು ಕಾಂಗ್ರೆಸ್‍ಗೆ ಹೋಗ್ತೀನೆಂದು ಹೇಳಿಕೆ ಕೊಡುವವರಿಗೆಲ್ಲಾ ತಲೆ ಕೆಟ್ಟಿದೆ: ಶಿವಲಿಂಗೇಗೌಡ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರೇಣುಕಾಪ್ರಸಾದ್‍ನನ್ನು ಹುಡುಕುತ್ತಿದ್ದಾರೆ. Co-operative Society Eastern Police Station mandya Murder Public TV ಕೊಲೆ ಪಬ್ಲಿಕ್ ಟಿವಿ ಪೂರ್ವ ಪೊಲೀಸ್ ಠಾಣೆ ಮಂಡ್ಯ ಸಹಕಾರ ಸಂಘ
2021/12/02 19:35:22
https://publictv.in/brother-killed-his-elder-brother-in-mandya/
mC4
ಆಪಲ್ ತಯಾರಿಸಲಿದೆ ಮಡುಚಬಲ್ಲ ಐಫೋನ್‌!! | Apple working on foldable iphone - Kannada Gizbot ಆಪಲ್ ತಯಾರಿಸಲಿದೆ ಮಡುಚಬಲ್ಲ ಐಫೋನ್‌!! Published: Tuesday, March 27, 2018, 10:36 [IST] ಪುಸ್ತಕದ ರೀತಿಯಲ್ಲಿ ಮಡುಚಬಲ್ಲ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿ ಮುಂದಿರುವುದನ್ನು ನೋಡಿ ಎಚ್ಚೆತ್ತಿರುವ ವಿಶ್ವ ಟೆಕ್ ದಿಗ್ಗಜ ಆಪಲ್ ಕೂಡ ಮಡುಚಬಲ್ಲ ಸ್ಮಾರ್ಟ್‌ಪೋನ್‌ಗಳ ತಯಾರಿಕೆಗೆ ಒಲವನ್ನು ತೋರಿದೆ. ವಿಶ್ವದಾಧ್ಯಂತ ಐಫೋನ್ ತಯರಿಕೆ ಬಿಡಿಭಾಗಗಳ ಪೂರೈಕೆದಾರರ ಜೊತೆ ಈ ನಿಟ್ಟಿನಲ್ಲಿ ಆಪಲ್ ಸಂಸ್ಥೆ ಮಾತುಕತೆ ನಡೆಸಿದೆ. ಆಪಲ್ ಸಂಸ್ಥೆ ಜೊತೆ ಪೂರೈಕೆದಾರರಾಗಿ ಕೆಲಸ ಮಾಡುತ್ತಿರುವ ಕಂಪೆನಿಗಳ ಮಾಹಿತಿಯಂತೆ, ಭವಿಷ್ಯದ ಐಫೋನ್ ಅನ್ನು ಟ್ಯಾಬ್ಲೆಟ್ ರೀತಿಯಲ್ಲೂ ಉಪಯೋಗಿಸಬಹುದಾದ ಬಿಗ್‌ಸ್ಕ್ರೀನ್ ಹೊಂದಿರುವ ಫೋನ್‌ಗಳಂತೆ ತಯಾರಿಸಲು ಬಗ್ಗೆ ಆಪಲ್ ತಲೆಕೆಡಿಸಿಕೊಂಡಿದೆಯಂತೆ. 2020ರ ವೇಳೆಗೆ ಮಡುಚಬಲ್ಲ ಸ್ಮಾರ್ಟ್‌ಪೋನ್‌ ತಯಾರಿಸುವುದು ಆಪಲ್‌ ಕಂಪೆನಿಯ ಗುರಿಯಾಗಿದೆಯಂತೆ.!! ಮಾಧ್ಯಮಗಳಿಗೆ ಸಿಕ್ಕಿರುವ ಮತ್ತೊಂದು ಮಾಹಿತಿ ಪ್ರಕಾರ, ಮಡುಚಬಲ್ಲ ಸ್ಮಾರ್ಟ್‌ಪೋನ್‌ ತಯಾರಿಕೆಯಂತಹ ವಿಶೇಷ ಫೀಚರ್ ಇರುವ ಐಫೋನ್​ನ ತಯಾರಿಕೆಗೆ ಆಪಲ್ ಕಂಪೆನಿ ಏಷ್ಯಾದ ಟೆಕ್ ದಿಗ್ಗಜ ಎಲ್​ಜಿ ಸಂಸ್ಥೆ ಜೊತೆ ಜಂಟಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಹಾರ್ಡ್‌ವೇರ್ ತಯಾರಿಕೆ ಕೆಲಸವನ್ನು ಎಲ್‌ಜಿ ಕಂಪೆನಿಗೆ ವಹಿಸಿದೆ ಎನ್ನಲಾಗಿದೆ.!! ಈಗಾಗಲೇ ಮಡುಚಬಲ್ಲ ಸ್ಮಾರ್ಟ್‌ಪೋನ್‌ ತಯಾರಿಕೆಗೆ ಆಪಲ್ ಪೇಟೆಂಟ್ ಹಕ್ಕು ಪಡೆದಿದ್ದು, ಇದರ ಸ್ಕ್ರೀನ್ ಅನ್ನೂ ಕೂಡ ಬಗ್ಗಿಸಲು ಸಾಧ್ಯವಿರುವ ಮಡುಚಬಲ್ಲ ಸ್ಮಾರ್ಟ್‌ಪೋನ್‌ಗಳ ತಯಾರಿಕೆ ಇನ್ನೇನು ಆರಂಭವಾಗಲಿದೆ. ಹಾಗಾಗಿ, ಸ್ಯಾಮ್‌ಸಂಗ್ ಸ್ಯಾಮ್‌ಸಂಗ್ ಜೊತೆಗೆ ಆಪಲ್‌ನ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳನ್ನು ಸಹ ಗ್ರಾಹಕ ಎದುರು ನೋಡಬಹುದಾಗಿದೆ.!!
2018/12/13 07:42:30
https://kannada.gizbot.com/mobile/apple-working-on-foldable-iphone-016432.html
mC4
ಸುಷ್ಮಾ, ರಾಜೇ, ಚೌಹಾನ್ ರಾಜೀನಾಮೆ ಪಡೆದ್ರೆ ಅಧಿವೇಶನ ಸುಲಲಿತ: ಕಾಂಗ್ರೆಸ್ | KANNADIGA WORLD Home ಕನ್ನಡ ವಾರ್ತೆಗಳು ರಾಷ್ಟ್ರೀಯ ಸುಷ್ಮಾ, ರಾಜೇ, ಚೌಹಾನ್ ರಾಜೀನಾಮೆ ಪಡೆದ್ರೆ ಅಧಿವೇಶನ ಸುಲಲಿತ: ಕಾಂಗ್ರೆಸ್ ಸುಷ್ಮಾ, ರಾಜೇ, ಚೌಹಾನ್ ರಾಜೀನಾಮೆ ಪಡೆದ್ರೆ ಅಧಿವೇಶನ ಸುಲಲಿತ: ಕಾಂಗ್ರೆಸ್ Posted By: Karnataka News BureauPosted date: July 21, 2015 In: ರಾಷ್ಟ್ರೀಯ ನವದೆಹಲಿ; ಮುಂಗಾರು ಅಧಿವೇಶನ ಸುಲಲಿತವಾಗಿ ನಡೆಯಬೇಕು ಎಂದು ಬಯಸಿದಲ್ಲಿ ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಮತ್ತು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಕೂಡಲೇ ವಜಾಗೊಳಿಸಿ ಎಂದು ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಮಾತನಾಡಿ, ಪ್ರಧಾನಮಂತ್ರಿ ಮೋದಿ ಮೂವರು ಆರೋಪಿ ನಾಯಕರುಗಳ ವಿರುದ್ಧ ಕ್ರಮಕೈಗೊಂಡಲ್ಲಿ ಪಕ್ಷಕ್ಕೆ ಹತ್ತಿದ ಕಳಂಕ ನಿವಾರಣೆಯಾಗುವುದಲ್ಲದೇ ಅಧಿವೇಶನ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿ ಯಾವ ರೀತಿ ಕ್ರಮ ಕೈಗೊಂಡಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೃಪ್ತಿಯಾಗುತ್ತದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಲಲಿತ್ ಗೇಟ್ ಹಗರಣದಲ್ಲಿ ಸಿಲುಕಿದ ಸುಷ್ಮಾ, ರಾಜೇ ಮಧ್ಯಪ್ರದೇಶದ ಸಿಎಂ ಹಾಗೂ ಮಹಾರಾಷ್ಟ್ರದ ಇಬ್ಬರು ಸಚಿವರನ್ನು ವಜಾಗೊಳಿಸಿದಲ್ಲಿ ಪಕ್ಷಕ್ಕೆ ತೃಪ್ತಿಯಾಗುತ್ತದೆ ಎಂದು ತಿಳಿಸಿದ್ದಾರೆ. ಬಿಜೆಪಿ ಹೈಕಮಾಂಡ್ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳನ್ನು ನವದೆಹಲಿಗೆ ಕರೆಸಿಕೊಂಡು ಚರ್ಚಿಸಿದೆ. ಅದರಂತೆ ಅವರ ರಾಜೀನಾಮೆ ಕೂಡಾ ಪಡೆಯಬೇಕು ಎಂದರು. ಒಂದು ವೇಳೆ ಪ್ರಧಾನಮಂತ್ರಿ ಮೂವರು ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದಲ್ಲಿ ಅವರೇ ಪ್ರಧಾನಿ ಹುದ್ಗೆಗೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
2020/10/26 03:36:46
https://www.kannadigaworld.com/kannada/india-kn/184950.html
mC4
ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡಲ್ಲ ಎಂದು ಗುಡುಗಿದ ಒವೈಸಿ | We Will Not Bharat To Become Hindu Rashtra, Said Asaduddin Owaisi - Kannada Oneindia | Published: Tuesday, October 15, 2019, 18:04 [IST] ಮುಂಬೈ, ಅಕ್ಟೋಬರ್ 15: "ಭಾರತ ಹಿಂದೂ ರಾಷ್ಟ್ರವಲ್ಲ. ನಾವು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ" ಎಂದು ಹೇಳುವ ಮೂಲಕ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಸೋಮವಾರದಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ರ ಹಿಂದೂ ರಾಷ್ಟ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದಲ್ಲಿ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಒಂದು ವರ್ಗ ಇಡೀ ದೇಶಕ್ಕೆ ಒಂದು ಬಣ್ಣವನ್ನು ಬಳಿಯಲು ಬಯಸಿದೆ. ಆದರೆ ನಾವು ಹಿಂದೂಸ್ತಾನವನ್ನು ಹಲವು ಬಣ್ಣಗಳಲ್ಲಿ ನೋಡುತ್ತೇವೆ. ಇದೇ ಹಿಂದೂಸ್ತಾನದ ಸೌಂದರ್ಯ ಎಂದು ಅವರು ಹೇಳಿದ್ದಾರೆ. ಶಿವಸೇನೆಯು ಹಸಿರು ಬಣ್ಣದ ವಿರೋಧಿ ಎಂದು ಆರೋಪಿಸಿದ ಅವರು, ನಿಮ್ಮ ಕನ್ನಡಕವನ್ನು ಬದಲಿಸಿಕೊಳ್ಳಿ. ರಾಷ್ಟ್ರಧ್ವಜದಲ್ಲಿ ಕೂಡ ಇರುವ ಹಸಿರು ಬಣ್ಣವನ್ನು ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಜಾತ್ಯತೀತತೆ ಹಾಗೂ ಬಹುತ್ವದ ಕಾರಣಕ್ಕೆ ಭಾರತ ವಿಶಿಷ್ಟವಾಗಿದೆ. ಭಾರತದ ರೀತಿ ಜಗತ್ತಿನಲ್ಲಿ ಬೇರೆ ಯಾವ ರಾಷ್ಟ್ರವೂ ಇಲ್ಲ. ನಮಗೆ ಈ ಬಗ್ಗೆ ಹೆಮ್ಮೆ ಇದೆ ಎಂದು ಒವೈಸಿ ಅಭಿಪ್ರಾಯ ಪಟ್ಟಿದ್ದಾರೆ. "ನಿಮ್ಮ ಕರುಣೆಯ ಮೇಲೆ ನಾವು ಇಲ್ಲಿರುವುದಲ್ಲ ಎಂದು ಆರೆಸ್ಸೆಸ್ ನಲ್ಲಿ ಇರುವವರಿಗೆ ಹೇಳಲು ಬಯಸುತ್ತೇನೆ. ನನ್ನ ಸಂತೋಷ ಅಥವಾ ದುಃಖದ ಸೂಚ್ಯಂಕವನ್ನು ನೀವು ಅಳೆಯಲು ಬಯಸಿದರೆ ಸಂವಿಧಾನವು ನಮಗೆ ಏನು ಕೊಟ್ಟಿದೆ ಎಂಬುದನ್ನು ನೀವು ಮತ್ತು ನಾವು ನೋಡಬೇಕು" ಎಂದಿದ್ದಾರೆ. asaduddin owaisi mumbai hindu rss assembly elections ಮುಂಬೈ ಹಿಂದೂ ಆರೆಸ್ಸೆಸ್ ವಿಧಾನಸಭೆ ಚುನಾವಣೆ AIMIM president Asaduddin Owaisi said in Maharashtra assembly elections that, will not let Bharat to become Hindu rashtra.
2020/11/25 06:26:16
https://kannada.oneindia.com/news/mumbai/we-will-not-bharat-to-become-hindu-rashtra-said-asaduddin-owaisi-177509.html
mC4
ವಿಶ್ವ ಚಿತ್ರ ಸಂತೆ…ಚಿಲ್ಡ್ರನ್‌ ಆಫ್‌ ಹೆವನ್‌: ಅಣ್ಣನ ಕಣ್ಣಿನಲ್ಲಿ ತಂಗಿಯ ಕನಸು | Udayavani – ಉದಯವಾಣಿ Thursday, 21 Jan 2021 | UPDATED: 11:06 PM IST Team Udayavani, Nov 24, 2020, 5:45 PM IST *ಮಧುವಂತಿ ಮಜಿದ್‌ ಮಜಿದಿ ಇರಾನ್‌ ನ ಸಿನಿಮಾ ನಿರ್ದೇಶಕ. ಜಗತ್ತಿನ ಕೆಲವು ಅತ್ಯುತ್ತಮ ಕುಸುರಿ ಕಲೆಯ ಚಿತ್ರ ನಿರ್ದೇಶಕರಲ್ಲಿ ಒಬ್ಬ. ಅದರಲ್ಲೂ ಭಾವಕೋಶವನ್ನು ತಟ್ಟುವ ನಿರ್ದೇಶಕ. ಸಣ್ಣ ಘಟನೆಗಳನ್ನೇ ಎತ್ತಿಕೊಂಡು ಅದಕ್ಕೆ ಚೆಂದದ ಕುಸುರಿ ಕಲೆಯ ಕೌದಿ ಹೊದಿಸಿ, ಸೊಗಸನ್ನು ಹೆಚ್ಚಿಸುವವ ಅವನು. ಆ ಘಟನೆಗಳು ನಮ್ಮೆದುರಿಗೇ ನಡೆದಿರುವಂಥದ್ದೂ ಆಗಿರಬಹುದು. ಆದರೆ, ಅವನ ಚಿತ್ರಪಟದಲ್ಲಿ ಕಂಡರೆ ಹೊಸದಾಗಿಯೇ ಹೊಳೆಯುತ್ತದೆ. ಅವನ ಅತ್ಯಂತ ಕೆಲವು ಹೆಸರಾಂತ ಸಿನಿಮಾಗಳೆಂದರೆ 'ಚಿಲ್ಡ್ರನ್‌ ಆಫ್‌ ಹೆವೆನ್‌', 'ಕಲರ್‌ ಆಫ್‌ ಪ್ಯಾರಡೈಸ್‌', 'ಸಾಂಗ್‌ ಆಫ್‌ ದಿ ಸ್ಪ್ಯಾರೋ' ಇತ್ಯಾದಿ. ಅದರಲ್ಲೂ ಮೊದಲೆರಡು ಚಿತ್ರಗಳು ಬಹಳ ಹಳೆಯವು. ಆದರೆ ಇಂದಿಗೂ ಅದೇ ಹೊಸತನವನ್ನು ಕಾದುಕೊಂಡಿರುವಂಥವು. ತೀರಾ ಮಕ್ಕಳ ಚಿತ್ರವೆಂದೆನಿಸುವ ಕಥಾವಸ್ತುವನ್ನು ಇಟ್ಟುಕೊಂಡೂ ಎಲ್ಲರ ಭಾವಾಕಾಶವನ್ನು ತಟ್ಟಿಬಿಡುವ ಚಿತ್ರಗಳಿವು. ಸಾಂಗ್‌ ಆಫ್‌ ದಿ ಸ್ಪ್ಯಾರೋ ಮತ್ತೊಂದು ನೆಲೆಯ ಚಿತ್ರ. ಸಾಮಾನ್ಯವಾಗಿ ವಿಶ್ವ ಚಿತ್ರ ಪರಂಪರೆಯನ್ನು ಪ್ರವೇಶಿಸುವ [ಕಳೆದರಡು ದಶಕಗಳ ಮಂದಿ] ಬಹಳಷ್ಟು ಮಂದಿ ಈ ಚಿತ್ರಗಳ ಹಾದಿಯಲ್ಲೇ ನಡೆದು ಬಂದಿರುತ್ತಾರೆ. ಆ ರೀತಿ ಶಿಫಾರಸು ಮಾಡುವ ಚಿತ್ರಗಳಿವು, ಬಹಳ ವಿಶೇಷವಾಗಿ ಚಿಲ್ಡ್ರನ್‌ ಆಫ್‌ ಹೆವೆನ್‌ ಮತ್ತು ಕಲರ್‌ ಆಫ್‌ ಪ್ಯಾರಡೈಸ್‌. ಮೊದಲೇ ಹೇಳಿದಂತೆ ಮನುಷ್ಯ ಸಂಬಂಧಗಳಲ್ಲಿನ ಸೂಕ್ಷ್ಮತೆ, ನಾಜೂಕುತನವನ್ನು ಇರಾನಿ ನಿರ್ದೇಶಕರು ಅತ್ಯಂತ ನಯವಾಗಿ, ಸೊಗಸಾಗಿ ಕಟ್ಟಿಕೊಡಬಲ್ಲರು. ಅದರಲ್ಲೂ ಮಕ್ಕಳ ಮುಗ್ಧ ಭಾವನೆಗಳಲ್ಲಿನ ಹೂಗಳಂಥ ಕೋಮಲತೆಯನ್ನು ಹಾಗೆಯೇ ತಾಜಾ ತಾಜಾ ಆಗಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಚಿಲ್ಡ್ರನ್‌ ಆಫ್‌ ಹೆವನ್‌ ಕುರಿತಾದ ಬರಹವಿದು. ಈ ಚಿತ್ರದಲ್ಲಿ ಎಲ್ಲೆಲ್ಲೂ ಕಾಣುವುದು ಆ ಸೊಬಗು. ಮನುಷ್ಯ ಸಂಬಂಧಗಳ ನಿರ್ವಹಣೆ. ಅದ್ರಲ್ಲೂ ನಿರ್ದೇಶಕ ತೋರಿದ ನಾಜೂಕುತನ. ಇದನ್ನು ಪುಷ್ಟೀಕರಿಸುವಂಥ ಎಷ್ಟೊಂದು ದೃಶ್ಯಗಳು ಬೇಕು ಆ ಚಿತ್ರದಲ್ಲಿ. ಪ್ರತಿ ಕ್ಷಣದಲ್ಲೂ ಆ ಕಾಳಜಿಯೇ ಇಡೀ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಅಂಥ ಕೆಲವು ಸನ್ನಿವೇಶಗಳನ್ನು ಹೇಳುತ್ತೇನೆ. ಇಲ್ಲಿ ಜಹ್ರಾ ಎಂದರೆ ಶುಭ್ರ, ಹೂವ ಎಂದೆಲ್ಲಾ ಅರ್ಥವಿದೆ. ಇವು ಸ್ವರ್ಗದ ಹೂವುಗಳೇ ! ಹೀಗೆ ಮನುಷ್ಯ ಸಂಬಂಧಗಳ ನಿರ್ವಹಣೆ ಕುರಿತೇ ಬರೆಯಲು ಬಹಳಷ್ಟಿದೆ. ಇಡೀ ಚಿತ್ರದಲ್ಲಿ ಅಣ್ಣ-ತಂಗಿಯರಿಬ್ಬರನ್ನೇ ಇಟ್ಟುಕೊಂಡು ಒಂದು ಸುಂದರವಾದ ಕಥೆ ಹೆಣೆಯುವ ಮಜಿದ್ ಮಜ್ದಿ ಎಷ್ಟು ಅದ್ಭುತವಾದ ನಿರ್ದೇಶಕ ಎನಿಸಿ ಬಿಡುತ್ತಾನೆ. ಪ್ರತಿ ಚಿತ್ರದಲ್ಲೂ ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನೇ ಹೇಳುತ್ತಾ, ಅದನ್ನು ಹಾಗೆಯೇ ಗಟ್ಟಿಗೊಳಿಸುವ ಬಗೆಗೆ ಕೃತಜ್ಞತೆ ಹೇಳಲೇಬೇಕು. ಪ್ರತಿ ಸನ್ನಿವೇಶಗಳಲ್ಲೂ ಅದನ್ನೇ "ಕೇಂದ್ರೀಕರಿಸುತ್ತಾ' ಎಲ್ಲಿಯೂ ಅದು ಭಾರ ಅಥವಾ ರೇಜಿಗೆ ಹುಟ್ಟಿಸದಂತೆ ಎಚ್ಚರ ವಹಿಸುವುದು ಈ ನಿರ್ದೇಶಕನ ವಿಶೇಷತೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಅಣ್ಣ-ತಂಗಿಯಂಥ ಸೂಕ್ಷ್ಮ ಸಂಬಂಧದ ಪೋಟ್ರೈಟ್ ಇದು. ವಿಷಾದವೆಂಬುದು ಬರೀ ಯಾಂತ್ರಿಕ ನೆಲೆಯ 'ಪ್ಚ್‌' ಎಂಬ ಭಾವ ಹೊರಡಿಸಬಾರದು, ಅದರ ಬದಲಾಗಿ ನಮ್ಮ ಭಾವಕೋಶವನ್ನು ತಟ್ಟಿ, ಆವರಿಸಿಕೊಳ್ಳಬೇಕು. ಅದು ಕೊಂಚ ಕಷ್ಟ. ಆ ಸಾಧ್ಯತೆ ಇರಾನಿನ ಚಿತ್ರಗಳಲ್ಲಿ ಆಗಾಗ್ಗೆ ಕಂಡು ಬರುವುದುಂಟು.
2021/01/21 17:38:45
https://www.udayavani.com/cinema/movie-review/majid-majidis-children-of-heaven
mC4
ಸುಬ್ರಹ್ಮಣ್ಯ : ದಲಿತ ಮುಖಂಡರ ಮೇಲೆಯೇ ದೂರು ದಾಖಲು | ಸುದ್ದಿ ಸುಳ್ಯ ಸುಬ್ರಹ್ಮಣ್ಯ : ದಲಿತ ಮುಖಂಡರ ಮೇಲೆಯೇ ದೂರು ದಾಖಲು ಸುಬ್ರಹ್ಮಣ್ಯದ ಅಗ್ರಹಾರದ ಮಹಿಳೆಯೊಬ್ಬರು ದಲಿತ ಮುಖಂಡರ ಮೇಲೆ ಪೋಲೀಸ್ ದೂರು ನೀಡಿ ದೂರು ದಾಖಲಾದ ಘಟನೆ ಜು.13 ರಂದು ನಡೆದಿದೆ. ಮಹಿಳೆಯು ಸುಬ್ರಹ್ಮಣ್ಯ ಪೇಟೆಯಿಂದ ಅಗ್ರಹಾರ ಮನೆಗೆ ಹೋಗುತ್ತಿರುವಾಗ ಮಹಿಳೆಯ ಗಂಡ ಕುಮಾರ, ದಲಿತ ಮುಖಂಡರಾದ ಲಕ್ಷ್ಮಿ , ಸುಂದರ ಪಾಟಾಜೆ ,ವಿಶ್ವನಾಥ್ ಅಲೆಕ್ಕಾಡಿ ,ಅಣ್ಣಿ ಯೆಲ್ತಮಾರ್, ರಾಘವ ಕಲ್ಲಾರ, ಶ್ರೀನಿವಾಸ್ ಬಾಳಿಲ ,ರಮೇಶ್ ಮತ್ತಾಡಿ ,ರಾಜೇಶ್ ನೆಟ್ಟಾರು, ಎಂಬುವರು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ "ಎ ಬೇವರ್ಸಿ ನೀನು ಯಾಕೆ ಚಿದಾನಂದನ ಜೊತೆ ಇರುವುದು" ಎಂದು ಹೇಳುತ್ತಾ ಸುಂದರ್ ಪಾಟಾಜೆಯವರು, ಅವಾಚ್ಯವಾಗಿ ಬೈದು, ಪಿರ್ಯಾದಿದಾರರೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಉಳಿದ ಆರೋಪಿಗಳು " ಇನ್ನುಮುಂದೆ ಚಿದಾನಂದನ ಜೊತೆಗೆ ಹೋದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎ೦ದು ದೂರಿನಲ್ಲಿ ತಿಳಿಸಿದ್ದಾರೆ. ಫಿರ್ಯಾದಿದಾರರ ಅಪ್ರಾಪ್ತ ವಯಸ್ಸಿನ ಮಗಳಾದ ಕಾವ್ಯಾಳ ಮನ ಪರಿವರ್ತಿಸಿ ಚಿದಾನಂದ ಎಂಬಾತನ ವಿರುದ್ಧ ಸುಳ್ಳು ಜಾತಿ ನಿಂದನೆ ದೂರು ಕೊಡಿಸಿದ್ದಾರೆ ಎ೦ದೂ ದೂರಿನಲ್ಲಿ ತಿಳಿಸಲಾಗಿದೆ. ದೂರು ಸ್ವೀಕರಿಸಿದ ಪೋಲೀಸರು ಕಲ೦: 341,504,354,506 r/w 149 IPC ರಂತೆ ದೂರು ದಾಖಲಿಸಿಕೊ0ಡಿದ್ದಾರೆ೦ದು ತಿಳಿದುಬ೦ದಿದೆ.
2021/08/02 19:16:24
https://sullia.suddinews.com/archives/529136
mC4
ಕಿರ್ಮಾನಿಗೆ ಸಿಕೆ ನಾಯ್ಡು ಪ್ರಶಸ್ತಿ, ಕೊಹ್ಲಿಗೆ ಉಮ್ರಿಗರ್ ಟ್ರೋಫಿ | Virat Kohli wins India's cricketer of the year trophy, Lifetime Achievement award for Kirmani - Kannada Oneindia » ಕಿರ್ಮಾನಿಗೆ ಸಿಕೆ ನಾಯ್ಡು ಪ್ರಶಸ್ತಿ, ಕೊಹ್ಲಿಗೆ ಉಮ್ರಿಗರ್ ಟ್ರೋಫಿ ಕಿರ್ಮಾನಿಗೆ ಸಿಕೆ ನಾಯ್ಡು ಪ್ರಶಸ್ತಿ, ಕೊಹ್ಲಿಗೆ ಉಮ್ರಿಗರ್ ಟ್ರೋಫಿ Updated: Wednesday, January 6, 2016, 15:29 [IST] ಮುಂಬೈ,ಜ. 05: ಭಾರತದ ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಅವರಿಗೆ 2015ನೇ ಸಾಲಿನ ಕರ್ನಲ್ ಸಿಕೆ ನಾಯ್ಡು ಪ್ರಶಸ್ತಿ ನೀಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೌರವ ಸಲ್ಲಿಸಿದೆ. ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪಾಲಿ ಉಮ್ರಿಗರ್ ಟ್ರೋಫಿ ಲಭಿಸಿದೆ. ಪ್ರಶಸ್ತಿ ವಿಜೇತ ಕ್ರಿಕೆಟರ್ ಗಳ ಚಿತ್ರಗಳು ಮುಂದಿವೆ. ಭಾರತದ ಪ್ರಥಮ ಟೆಸ್ಟ್ ನಾಯಕ ಕರ್ನಲ್ ಕೊಟ್ಟಾರಿ ಕನಕೈಯ ನಾಯುಡು ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನು ಬಿಸಿಸಿಐ ನೀಡುತ್ತಾ ಬಂದಿದೆ. 1994ರಿಂದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 25 ಲಕ್ಷ ಚೆಕ್, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ. 65 ವರ್ಷ ವಯಸ್ಸಿನ ಕರ್ನಾಟಕದ ಆಟಗಾರ ಸೈಯದ್ ಕಿರ್ಮಾನಿ ಅವರು ಭಾರತದ ಪರ 88 ಟೆಸ್ಟ್ ಹಾಗೂ 49 ಏಕದಿನ ಕ್ರಿಕೆಟ್ ಅವರು 1976 ಹಾಗೂ 1986 ರ ಅವಧಿಯಲ್ಲಿ ಆಡಿದ್ದರು. ಆಕ್ಲೆಂಡ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದರು. 1976ರ ಫೆಬ್ರವರಿ 21ರಂದು ನ್ಯೂಜಿಲೆಂಡ್ ವಿರುದ್ಧವೇ ಮೊದಲ ಏಕದಿನ ಕ್ರಿಕೆಟ್ ಪಂದ್ಯವಾಡಿದ್ದರು. 1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ಡೆವಿಲ್ಸ್ ಪಡೆಯಲ್ಲಿ ಕಿರ್ಮಾನಿ ಮಹತ್ವದ ಪಾತ್ರ ವಹಿಸಿದ್ದರು. ಪಾಲಿ ಉಮ್ರಿಗರ್ ಟ್ರೋಫಿ ಜೊತೆ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪಾಲಿ ಉಮ್ರಿಗರ್ಟ್ರೋಫಿ ಲಭಿಸಿದೆ ಸ್ಪಿನ್ ದಿಗ್ಗಜರ ಜೊತೆ ಆಟವಾಡಿದ ಹೆಮ್ಮೆ ಇದೆ ಎರಪಳ್ಳಿ ಪ್ರಸನ್ನ, ಬಿಎಸ್ ಚಂದ್ರಶೇಖರ್ ಹಾಗೂ ಬಿಷನ್ ಸಿಂಗ್ ಬೇಡಿ ಅವರ ಕಾಲದಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಹೆಮ್ಮೆ ಇದೆ ಎಂದು ಸೈಯದ್ ಕಿರ್ಮಾನಿ ಪ್ರತಿಕ್ರಿಯಿಸಿದ್ದಾರೆ. ಈಗಿನ ಕಾಲದಲ್ಲಿ ಧೋನಿ ಅವರು ಉತ್ತಮ ಕೀಪಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ಮಿಂಚುತ್ತಿರುವುದು ಒಳ್ಳೆ ವಿಷಯ. ಅವರನ್ನು ಮಾದರಿಯಾಗಿ ಯುವ ಕ್ರಿಕೆಟರ್ಸ್ ನೋಡಬಹುದು ಎಂದಿದ್ದಾರೆ. ಎಂಎಸ್ ಧೋನಿ ಅವರಿಗೆ ಪ್ರಶಸ್ತಿ ಏಕದಿನ ಕ್ರಿಕೆಟ್ ನಾಯಕ ಧೋನಿ ಅವರಿಗೆ ಪ್ರಶಸ್ತಿ ನೀಡಿದ ಅನುರಾಗ್ ಠಾಕೂರ್. ಶಶಾಂಕ್ ಮನೋಹರ್ ಅವರಿಂದ ಪ್ರಶಸ್ತಿ ಪ್ರದಾನ ಕೊಹ್ಲಿಗೆ ಉಮ್ರಿಗರ್ ಟ್ರೋಫಿ. ಶಶಾಂಕ್ ಮನೋಹರ್ ಅವರಿಂದ ಪ್ರಶಸ್ತಿ ಪ್ರದಾನ ಕರ್ನಾಟಕದ ರಾಬಿನ್ ಉತ್ತಪ್ಪ ಅವರಿಗೂ ಪ್ರಶಸ್ತಿ ಕರ್ನಾಟಕ ರಣಜಿ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರಿಗೂ ಪ್ರಶಸ್ತಿ Cricket gave me an education in life: Syed Kirmani tells @ShirinSadikot https://t.co/hA2RPluRrn pic.twitter.com/KamvzpVFn4 — BCCI (@BCCI) January 5, 2016 ಕ್ರಿಕೆಟ್ ನನಗೆ ಶಿಕ್ಷಣ ನೀಡಿದೆ ಎಂದ ಕಿರ್ಮಾನಿ ಕ್ರಿಕೆಟ್ ನನಗೆ ಶಿಕ್ಷಣ ನೀಡಿದೆ ಎಂದ ಕಿರ್ಮಾನಿ ಅವರಿಗೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. #TeamIndia Captains - @msdhoni and @imVkohli at the #BCCIawards pic.twitter.com/zPCJkyKUNF ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರು ಹಾಜರಿದ್ದರು. Read in English: Kohli wins cricketer of the year trophy virat kohli, test cricket, bcci, award, mumbai, india, ಭಾರತ, ಕ್ರಿಕೆಟ್, ವಿರಾಟ್ ಕೊಹ್ಲಿ, ಬಿಸಿಸಿಐ, ಪ್ರಶಸ್ತಿ, ಮುಂಬೈ Former stumper Syed Kirmani was bestowed with the prestigious Col. CK Nayudu Lifetime Achievement Award for his contribution to Indian cricket, while Test captain Virat Kohli bagged the Polly Umrigar Trophy for Cricketer of the Year in the BCCI awards night here on Tuesday.
2017/10/20 19:54:55
https://kannada.oneindia.com/sports/cricket/lifetime-achievement-award-kirmani-virat-kohli-too-wins-bcci-ms-dhoni-099888.html
mC4
ಸೈನಿಕರ ಅಮೂಲ್ಯ ಕೊಡುಗೆ ಬಣ್ಣಿಸಲು ಪದಗಳಿಲ್ಲ: ಸೇನಾ ದಿನದಂದು ಪ್ರಧಾನಿ | udayavani 10:41 AM Jan 15, 2022 | Team Udayavani | ನವದೆಹಲಿ: ಜನವರಿ 15 ಶನಿವಾರದ ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ಇದು ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ ಮತ್ತು ರಾಷ್ಟ್ರೀಯ ಸುರಕ್ಷತೆಗೆ ಅದರ ಅಮೂಲ್ಯ ಕೊಡುಗೆಗೆ ಪದಗಳು ನ್ಯಾಯವನ್ನು ನೀಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. "ಸೇನಾ ದಿನದ ಸಂದರ್ಭದಲ್ಲಿ ವಿಶೇಷವಾಗಿ ನಮ್ಮ ಧೈರ್ಯಶಾಲಿ ಸೈನಿಕರು, ಗೌರವಾನ್ವಿತ ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಭಾರತೀಯ ಸೇನೆಯು ತನ್ನ ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ರಾಷ್ಟ್ರೀಯತೆಗೆ ಭಾರತೀಯ ಸೇನೆಯ ಅಮೂಲ್ಯ ಕೊಡುಗೆಗೆ ಪದಗಳು ನ್ಯಾಯ ಸಲ್ಲಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. "ಭಾರತೀಯ ಸೇನೆಯ ಸಿಬ್ಬಂದಿ ಪ್ರತಿಕೂಲ ಭೂಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ ಮತ್ತು ನೈಸರ್ಗಿಕ ವಿಪತ್ತುಗಳು ಸೇರಿದಂತೆ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹ ನಾಗರಿಕರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾಗರೋತ್ತರ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇನೆಯ ನಾಕ್ಷತ್ರಿಕ ಕೊಡುಗೆಯ ಬಗ್ಗೆ ಭಾರತವು ಹೆಮ್ಮೆಪಡುತ್ತದೆ" ಎಂದು ಪ್ರಧಾನಿ ಹೇಳಿದ್ದಾರೆ. . ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಅವರು 1949 ರಲ್ಲಿ ತಮ್ಮ ಬ್ರಿಟಿಷ್ ಪೂರ್ವಾಧಿಕಾರಿಯನ್ನು ಬದಲಿಸಿ, ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಳ್ಳುವುದನ್ನು ಗುರುತಿಸಲು ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತಿದೆ.
2022/05/29 01:42:57
https://m.udayavani.com/article/pm-modi-best-wishes-on-the-occasion-of-army-day/1195874?utm=relatednews
mC4
ನವೆಂಬರ್‌ 1ಕ್ಕೆ "ಆಯುಷ್ಮಾನ್‌ ಭವ' | Udayavani – ಉದಯವಾಣಿ Wednesday, 27 Oct 2021 | UPDATED: 06:08 PM IST ಫ್ಯಾಮಿಲಿ ಇಷ್ಟಪಡುವ ಸಿನಿಮಾ: ಶಿವಣ್ಣ Team Udayavani, Sep 17, 2019, 3:05 AM IST ಶಿವರಾಜಕುಮಾರ್‌ ಲಂಡನ್‌ನಿಂದ ವಾಪಾಸ್‌ ಬಂದು ಈಗ "ಭಜರಂಗಿ-2′ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಆರ್‌.ಎಸ್‌.ಗೌಡ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ನಡುವೆಯೇ ಶಿವರಾಜಕುಮಾರ್‌ ಅವರ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು "ಆಯುಷ್ಮಾನ್‌ ಭವ'. ಶಿವರಾಜಕುಮಾರ್‌, ಪಿ.ವಾಸು ಕಾಂಬಿನೇಶನ್‌ನಲ್ಲಿ ಬರುತ್ತಿರುವ "ಆಯುಷ್ಮಾನ್‌ ಭವ' ಚಿತ್ರ ನವೆಂಬರ್‌ 1 ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ರಾಜ್ಯೋತ್ಸವಕ್ಕೆ ಶಿವರಾಜಕುಮಾರ್‌ ಅವರ ಸಿನಿಮಾ ಬಿಡುಗಡೆಯಾದಂತಾಗುತ್ತದೆ. ಈಗಾಗಲೇ ಪಿ.ವಾಸು ಹಾಗೂ ಶಿವಣ್ಣ ಕಾಂಬಿನೇಶನ್‌ನಲ್ಲಿ ಬಂದಿರುವ "ಶಿವಲಿಂಗ' ಚಿತ್ರ ಹಿಟ್‌ ಆಗಿತ್ತು. ಈಗ ಮತ್ತೆ ಆ ಜೋಡಿಯ ಸಿನಿಮಾ ಬರುತ್ತಿರುವುದರಿಂದ ಸಿನಿಮಾ ನಿರೀಕ್ಷೆ ಹೆಚ್ಚಾಗಿದೆ. ಶಿವಣ್ಣ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಮುಖ್ಯವಾಗಿ ಎರಡು ಕಾರಣ, ಒಂದು ಫ್ಯಾಮಿಲಿ ಎಂಟರ್‌ಟೈನರ್‌ ಆದರೆ, ಮತ್ತೊಂದು ಮ್ಯೂಸಿಕಲ್‌ ಸಿನಿಮಾ. "ಆಯುಷ್ಮಾನ್‌ ಭವ' ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚು ಕೊಡಲಾಗಿದ್ದು, ಚಿತ್ರದ ಹಾಡುಗಳು ಹಿಟ್‌ ಆಗುತ್ತವೆ ಎಂಬ ವಿಶ್ವಾಸ ಶಿವರಾಜಕುಮಾರ್‌ ಅವರಿಗಿದೆ. ಜೊತೆಗೆ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರವಾಗಿ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗುವ ವಿಶ್ವಾಸ ಕೂಡಾ ಇದೆ. "ಆಯುಷ್ಮಾನ್‌ ಭವ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ವಾಸು ಅವರು ಸ್ಟೈಲ್‌ ಸಿನಿಮಾ. ಇತ್ತೀಚೆಗೆ ಬಂದ ನನ್ನ ಸಿನಿಮಾಗಳೆಲ್ಲವೂ ಆ್ಯಕ್ಷನ್‌ನಿಂದ ಕೂಡಿತ್ತು. ಆದರೆ, "ಆಯುಷ್ಮಾನ್‌ ಭವ' ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ತುಂಬಾ ಗ್ಯಾಪ್‌ನ ನಂತರ ಬರುತ್ತಿರುವ ನನ್ನ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಜೊತೆಗೆ ಚಿತ್ರದಲ್ಲಿ ಸಂಗೀತಕ್ಕೂ ಹೆಚ್ಚಿನ ಒತ್ತುಕೊಡಲಾಗಿದೆ' ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಶಿವಣ್ಣ. ಚಿತ್ರದಲ್ಲಿ ಅಂಡರ್‌ವಾಟರ್‌ ಫೈಟ್‌ ಕೂಡಾ ಇದ್ದು, ಇದು ಕೂಡಾ ಸಿನಿಮಾದ ಹೈಲೈಟ್ಸ್‌. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೊದಲು "ದ್ರೋಣ' ಚಿತ್ರ ತೆರೆಕಾಣಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ "ದ್ರೋಣ' ಸಿನಿಮಾ ಮುಂದಕ್ಕೆ ಹೋಗಿದೆ. ಈಗ "ಆಯುಷ್ಮಾನ್‌ ಭವ' ಬರುತ್ತಿದ್ದು, ದ್ವಾರಕೀಶ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿ.
2021/10/27 12:42:22
https://www.udayavani.com/cinema/balcony-sandalwood-news/ayushman-bhava-for-november-1
mC4
ಪದ್ಮಾವತ್‌ ಬದಲಿಗೆ ಭಾಗಮತಿ ಚಿತ್ರದ ವಿರುದ್ಧ ಪ್ರತಿಭಟನೆ! | KANNADIGA WORLD Home ಕನ್ನಡ ವಾರ್ತೆಗಳು ಮನೋರಂಜನೆ ಪದ್ಮಾವತ್‌ ಬದಲಿಗೆ ಭಾಗಮತಿ ಚಿತ್ರದ ವಿರುದ್ಧ ಪ್ರತಿಭಟನೆ! Posted By: Karnataka News BureauPosted date: February 02, 2018 In: ಮನೋರಂಜನೆ ತಮಿಳುನಾಡು: ಬನ್ಸಾಲಿ ನಿರ್ದೇಶನದ ಪದ್ಮಾವತ್‌ ಚಿತ್ರದ ಬಿಡುಗಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾದರೂ ಯಶಸ್ಸಿನ ಪ್ರದರ್ಶನ ಕಾಣುತ್ತಿರುವುದು ತಿಳಿದಿರುವ ವಿಚಾರ, ಆದರೆ ತಮಿಳುನಾಡಿನ ಈರೋಡ್‌ನಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ಕೆಲ ವ್ಯಕ್ತಿಗಳು ಪದ್ಮಾವತ್‌ ಚಿತ್ರ ಪ್ರದರ್ಶನ ನಡೆಯುತ್ತಿರುವ ಚಿತ್ರಮಂದಿರದ ಮುಂದೆ ಪ್ರತಿಭಟಿಸುವ ಬದಲು ತೆಲುಗಿನ ಭಾಗಮತಿ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ದಕ್ಷಿಣದ ಹೆಚ್ಚಿನ ರಾಜ್ಯಗಳಲ್ಲಿ ಹಿಂದಿ ಭಾಷೆಯ ಮೇಲೆ ಅತಿಯಾದ ಮೋಹವಿಲ್ಲದಿದ್ದರೂ, ಕೆಲ ದಿನಗಳಿಂದ ಪದ್ಮಾವತ್‌ ಚಿತ್ರದ ವಿರುದ್ಧ ಮಾತ್ರ ಎಲ್ಲೆಡೆ ಪ್ರತಿಭಟನೆ ನಡೆಸಿಕೊಂಡು ಬರಲಾಗಿತ್ತು. ಈ ಎಲ್ಲದರ ನಡುವೆಯೂ ಜ.25ರಂದು ಚಿತ್ರ ಬಿಡುಗಡೆಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಡುವೆ ತಮಿಳುನಾಡಿನ ಈರೋಡ್‌ನಲ್ಲಿ ಕೆಲ ಪ್ರತಿಭಟನಾಕಾರರು ಪದ್ಮಾವತ್‌ ಚಿತ್ರದ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿ ಚಿತ್ರ ಮಂದಿರಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಚಿತ್ರ ಮಂದಿರುದಲ್ಲಿ ಅನುಷ್ಕಾ ನಟನೆಯ ತೆಲುಗಿನ ಭಾಗಮತಿ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಇದನ್ನರಿಯದ ಪ್ರತಿಭಟನಾಕಾರರು ಚಿತ್ರ ಮಂದಿರದಲ್ಲಿ ಪ್ರತಿಭಟನೆ ನಡೆಸಿ ಚಿತ್ರ ಪ್ರದರ್ಶನ ರದ್ದುಗೊಳಿಸುವಂತೆ ಮಾಡಿದ್ದಾರೆ ಎಂದು ಭಾರತೀಯ ನೌಕಾಪಡೆಯ ನಿವೃತ್ತ ಲೆಫ್ಟಿನೆಂಟ್ ಸಿಡಿಆರ್ ಗೋಕುಲ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. ಬನ್ಸಾಲಿಯ ಪದ್ಮಾವತ್‌ ತಮಿಳು, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಡಬ್ಬಿಂಗ್‌ ಕೂಡಾ ಮಾಡಲಾಗಿದ್ದು, ತಮಿಳುನಾಡಿನಲ್ಲೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು.
2021/03/08 16:09:53
https://www.kannadigaworld.com/kannada/sports-ent-kn/320702.html
mC4
ಜಾನ್ ಲಿಥ್ಗೊ ಹೂವಿನ ಚಂದ್ರನ ಕೊಲೆಗಾರರ ​​ಪಾತ್ರಕ್ಕೆ ಸೇರಿಕೊಳ್ಳುತ್ತಾನೆ | ನಾನು ಮ್ಯಾಕ್‌ನಿಂದ ಬಂದವನು ಇಗ್ನಾಸಿಯೊ ಸಲಾ | 11/08/2021 18:00 | ಆಪಲ್ ಟಿವಿ, ಸುದ್ದಿ ಮೇ ಮಧ್ಯದಲ್ಲಿ, ಹೊಸ ಮಾರ್ಟಿನ್ ಸ್ಕಾರ್ಸೆಸೆ ಚಿತ್ರದ ನಿರ್ಮಾಣ ಆರಂಭವಾಯಿತು: ಹೂವಿನ ಚಂದ್ರನ ಕೊಲೆಗಾರರು. ಇದು ಈ ಚಿತ್ರದ ಪಾತ್ರವರ್ಗವೆಂದು ತೋರುತ್ತದೆ ಇದು ಇನ್ನೂ ಪೂರ್ಣಗೊಂಡಿಲ್ಲ, ಕೆಲವು ದಿನಗಳ ಹಿಂದೆ ಹಿರಿಯ ನಟ ಬ್ರೆಂಡನ್ ಫ್ರೇಸರ್ ಸೇರಿಕೊಂಡರು. ಆದರೆ, ಜಾನ್ ಲಿಥ್‌ಗೋ ಕೂಡ ಈ ಯೋಜನೆಗೆ ಸೇರಿಕೊಂಡಿದ್ದರಿಂದ ಅವನು ಒಬ್ಬನೇ ಆಗಿರಲಿಲ್ಲ. ವೆರೈಟಿಯ ಪ್ರಕಾರ, ಜಾನ್ ಲಿಥ್ಗೋ ಈ ಚಿತ್ರದ ಪಾತ್ರವರ್ಗಕ್ಕೆ ಸೇರಿಕೊಂಡರು, ಅಲ್ಲಿ ಅವರು ಪ್ರಾಸಿಕ್ಯೂಟರ್ ಪಾತ್ರವನ್ನು ನಿರ್ವಹಿಸುತ್ತಾರೆ. ಬ್ರೆಂಡನ್ ಫ್ರೇಸರ್ ವಕೀಲರಾಗಿ ನಟಿಸಲಿದ್ದಾರೆ. ನ್ಯಾಯಾಲಯದಲ್ಲಿ ಚಿತ್ರದ ಪಾತ್ರವರ್ಗವು ತೋರುತ್ತದೆ, ಉತ್ಪಾದನೆ ಆರಂಭವಾದಾಗ ಇನ್ನೂ ನಿರ್ಧಾರವಾಗಿಲ್ಲ. ಕನಿಷ್ಠ ನಾವು ಈ ಚಿತ್ರದ ಪಾತ್ರವರ್ಗಕ್ಕೆ ಕೊನೆಯ ಎರಡು ಸೇರ್ಪಡೆಗಳಿಂದ ನಾವು ಅರ್ಥಮಾಡಿಕೊಳ್ಳಬಹುದು, ಅದರಲ್ಲಿ ನಾವು ಕಾಣುತ್ತೇವೆ ಜೆಸ್ಸಿ ಪ್ಲೆಮನ್ಸ್, ಲಿಯೊನಾರ್ಡೊ ಡಿಕಾಪ್ರಿಯೊ, ರಾಬರ್ಟ್ ಡೆನಿರೋ ಮತ್ತು ಲಿಲಿ ಗ್ಲಾಡ್ಸ್ಟೋನ್ ಅತ್ಯಂತ ಪ್ರಮುಖ ಪಾತ್ರಗಳಲ್ಲಿ. ಈ ಚಲನಚಿತ್ರವು ಅದೇ ಹೆಸರಿನ ಕಾಲ್ಪನಿಕವಲ್ಲದ ಪುಸ್ತಕವನ್ನು ಆಧರಿಸಿದೆ, ಡೇವಿಡ್ ಗ್ರ್ಯಾನ್ ಬರೆದಿದ್ದಾರೆ. ಈ ಚಲನಚಿತ್ರವು 1920 ರಲ್ಲಿ ಓಕ್ಲಹೋಮದಲ್ಲಿ ಸೆಟ್ಟೇರಿತು ಮತ್ತು ಹೊಸದಾಗಿ ರಚಿಸಲಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತಮ್ಮ ಭೂಮಿಯಲ್ಲಿ ಪತ್ತೆಯಾದ ತೈಲಕ್ಕೆ ಬಾಡಿಗೆ ಹಕ್ಕುಗಳನ್ನು ಪಡೆದ ಶ್ರೀಮಂತ ಒಸೇಜ್ ಭಾರತೀಯರ ಕೊಲೆಗಳನ್ನು ತನಿಖೆ ಮಾಡುತ್ತಿದೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಯಾವುದೇ ವಿವರಗಳಿಲ್ಲದಿದ್ದರೂ, ನಾವು ಈಗಾಗಲೇ ಎ ಅನ್ನು ನೋಡಿದ್ದೇವೆ ಈ ವರ್ಷದ ಮೇ ತಿಂಗಳಲ್ಲಿ ಮೊದಲ ಚಿತ್ರ ಇದರಲ್ಲಿ ನಾವು ರೆಕಾರ್ಡಿಂಗ್ ಸಮಯದಲ್ಲಿ ಡಿಕಾಪ್ರಿಯೊ ಮತ್ತು ಗ್ಲಾಡ್‌ಸ್ಟೋನ್ ಅನ್ನು ನೋಡಬಹುದು. ಕೆಲವು ದಿನಗಳ ನಂತರ ಚಿತ್ರೀಕರಣದ ಸಮಯದಲ್ಲಿ ಡೆನಿರೋ ಅಪಘಾತಕ್ಕೀಡಾದರು ಅದು ಅವನನ್ನು ಕೆಲವು ದಿನಗಳವರೆಗೆ ರೆಕಾರ್ಡಿಂಗ್‌ಗೆ ಗೈರುಹಾಜರಾಗುವಂತೆ ಒತ್ತಾಯಿಸಿತು. ಹೆಚ್ಚಾಗಿ, ಆಪಲ್ ವರ್ಷಾಂತ್ಯದ ಮೊದಲು ಅದನ್ನು ಬಿಡುಗಡೆ ಮಾಡಲು ಬಯಸುತ್ತದೆ ಹಾಲಿವುಡ್ ಅಕಾಡೆಮಿ ಆಸ್ಕರ್‌ನ ಪೂಲ್‌ಗಳನ್ನು ಪ್ರವೇಶಿಸಿ 2022. ಈ ಉತ್ಪಾದನೆಯು ಆಪಲ್‌ನ ಬೊಕ್ಕಸಕ್ಕೆ 200 ಮಿಲಿಯನ್ ಡಾಲರ್‌ಗಳಷ್ಟು ವೆಚ್ಚವಾಗಲಿದೆ ಎಂದು ವದಂತಿಗಳಿವೆ. ಲೇಖನಕ್ಕೆ ಪೂರ್ಣ ಮಾರ್ಗ: ನಾನು ಮ್ಯಾಕ್‌ನಿಂದ ಬಂದವನು » ಆಪಲ್ » ಸುದ್ದಿ » ಹೂವಿನ ಚಂದ್ರನ ಕೊಲೆಗಾರರ ​​ಪಾತ್ರಕ್ಕೆ ಜಾನ್ ಲಿಥ್ಗೋ ಸೇರಿಕೊಳ್ಳುತ್ತಾರೆ ಕ್ಲೀನ್‌ಶಾಟ್ ಎಕ್ಸ್ ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡಲಾಗಿದ್ದು, ಒಂದಕ್ಕಿಂತ ಹೆಚ್ಚು ಸ್ಕ್ರೀನ್‌ಶಾಟ್‌ಗಳನ್ನು ಸಂಯೋಜಿಸಲು ನಿಮಗೆ ಅವಕಾಶ ನೀಡುತ್ತದೆ
2021/10/16 17:41:07
https://www.soydemac.com/kn/%E0%B2%B9%E0%B3%82%E0%B2%B5%E0%B2%BF%E0%B2%A8-%E0%B2%9A%E0%B2%82%E0%B2%A6%E0%B3%8D%E0%B2%B0%E0%B2%A8-%E0%B2%95%E0%B3%8A%E0%B2%B2%E0%B3%86%E0%B2%97%E0%B2%BE%E0%B2%B0%E0%B2%B0-%E2%80%8B%E2%80%8B%E0%B2%AA%E0%B2%BE%E0%B2%A4%E0%B3%8D%E0%B2%B0%E0%B2%95%E0%B3%8D%E0%B2%95%E0%B3%86-%E0%B2%9C%E0%B2%BE%E0%B2%A8%E0%B3%8D-%E0%B2%B2%E0%B2%BF%E0%B2%A5%E0%B3%8D%E0%B2%97%E0%B3%8B-%E0%B2%B8%E0%B3%87%E0%B2%B0%E0%B2%BF%E0%B2%95%E0%B3%8A%E0%B2%B3%E0%B3%8D%E0%B2%B3%E0%B3%81%E0%B2%A4%E0%B3%8D%E0%B2%A4%E0%B2%BE%E0%B2%A8%E0%B3%86/
mC4
ಜಿಯೋ ಫೋನ್ ಉಳ್ಳವರಿಗೆ ಜಿಯೋ ರೈಲ್ ಆಪ್ ಬಿಡುಗಡೆ | Reliance Jio Launches JioRail App for JioPhone and JioPhone2 users - Kannada Goodreturns ಭಾರತವನ್ನು ಡಿಜಿಟಲ್ ಎಂಪವರ್ ಮೆಂಟ್ ಮಾಡುವ ಸಲುವಾಗಿ ಜಿಯೋ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಿದೆ. ಇದರಲ್ಲಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಜಿಯೋ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡುತ್ತಿದೆ. IRCTC ಟಿಕೇಟ್ ಬುಕಿಂಗ್ ಆಯ್ಕೆಯನ್ನು ತನ್ನ ಜಿಯೋ ಪೋನ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದಕ್ಕಾಗಿ ಜಿಯೋ ರೈಲ್ ಎನ್ನುವ ಆಪ್ ವೊಂದನ್ನು ಹೊಸದಾಗಿ ಬಿಡುಗಡೆ ಮಾಡಿದೆ. ಜಿಯೋ ಆಪ್ ಸ್ಟೋರಿನಲ್ಲಿ ಹೊಸದಾಗಿ ಲಾಂಚ್ ಮಾಡಿರುವ ಜಿಯೋ ರೈಲ್ ಆಪ್ ಲಭ್ಯವಿದ್ದು, ಬಳಕೆದಾರರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ರೈಲು ಪ್ರಯಾಣ ಸುಖಕರವಾಗಿರಲಿದೆ, ಅಲ್ಲದೇ IRCTC ಆಕೌಂಟ್ ಇಲ್ಲದೆ ಇರುವವರು ಸಹ ಈ ಆಪ್ ಮೂಲಕ ಆಕೌಂಟ್ ಕ್ರಿಯೇಟ್ ಮಾಡಿ ಟಿಕೇಟ್ ಬುಕ್ ಮಾಡಬಹುದಾಗಿದೆ. ಇದಲ್ಲದೇ ಈ ಆಪ್ ಮೂಲಕ ಜಿಯೋ ಫೋನ್ ಬಳಕೆದಾರರು PNR ಸ್ಟೇಟಸ್ ಸಹ ನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಆಪ್ ಮೂಲಕ ಟಿಕೇಟ್ ಬುಕ್ ಮಾಡಿ, ಅದರ ಸ್ಥಿತಿಗತಿಯನ್ನು ಇದರಲ್ಲಿ ನೋಡಬಹುದಾಗಿದೆ. ಇದಲ್ಲದೇ ಟ್ರೈನ್ ಎಲ್ಲಿದೇ ಎಂದು ನೋಡುವ ಅವಕಾಶವು ಇದ್ದು, ಫುಡ್ ಸಹ ಆಪ್ ನಲ್ಲಿಯೇ ಆರ್ಡರ್ ಮಾಡಬಹುದಾಗಿದೆ. ಈ ಆಪ್ ಬಳಕೆಯಿಂದಾಗಿ ಜಿಯೋ ಫೋನ್ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ, ಒಂದೇ ಕ್ಲಿಕ್ ನಲ್ಲಿ ಟಿಕೇಟ್ ಪಡೆಯುವುದರೊಂದಿಗೆ ಉದ್ದದ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ, ಡಿಜಿಟಲ್ ಲೈಫ್ ಅನ್ನು ಎಂಜಾಯ್ ಮಾಡಲು ಅವಕಾಶ ನೀಡಲಿದೆ. Reliance Jio Launches JioRail App for JioPhone and JioPhone2 users For the first time, IRCTC reserved ticket booking service is available for users on any JioPhone through the brand new JioRail app. The app will allow customers to book and cancel tickets by using debit cards, credit cards and e-wallets, check PNR status, train information, timings, routes, seat availability and several other services at a click of a button on their JioPhones.
2019/10/18 14:38:12
https://kannada.goodreturns.in/news/2019/01/28/reliance-jio-launches-jiorail-app-for-jiophone-and-jiophone2-users-003741.html?utm_medium=Desktop&utm_source=GR-KN&utm_campaign=Similar-Topic-Slider
mC4
ಕಣಿವೆ ರಾಜ್ಯದಲ್ಲಿ ಕಲ್ಲು ತೂರಿದ್ದಕ್ಕೆ 765 ಮಂದಿ ಬಂಧನ! | Artical 370: Stonepelting In Jammu-Kashmir. 765 persons Arrested - Kannada Oneindia | Published: Tuesday, November 19, 2019, 22:35 [IST] ದೆಹಲಿ, ನವೆಂಬರ್.19: ಕೇಂದ್ರ ಸರ್ಕಾರದ ಅದೊಂದು ತೀರ್ಮಾನ ಕಣಿವೆ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಜನರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆಲ್ಲ ಕಾರಣವಾಗಿದ್ದೇ 370ನೇ ವಿಧಿ ರದ್ದತಿ. ಹೌದು, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಈ ಸಂಬಂಧ ಸಂಸತ್ ಉಭಯ ಸದನಗಳಲ್ಲಿ ತಿದ್ದುಪಡಿ ಮಂಡನೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಜಮ್ಮು-ಕಾಶ್ಮೀರದಲ್ಲಿ ಪೊಲೀಸರು ಹಾಗೂ ಸೇನಾ ಪಡೆ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರು. ಆಗಸ್ಟ್.5 ರಿಂದ ನವೆಂಬರ್.15ರವರೆಗೆ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದವು. ಈ ಸಂಬಂಧ 765 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಜಿ.ಕಿಶಿನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಜಿ.ಕಿಶಿನ್ ರೆಡ್ಡಿ ಕಲ್ಲು ತೂರಾಟ ಹಿನ್ನೆಲೆ 190 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 765 ಜನರನ್ನು ಬಂಧಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಇನ್ನು, ಜಮ್ಮು-ಕಾಶ್ಮೀರದಲ್ಲಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಜನವರಿ.1ರಿಂದ ಆಗಸ್ಟ್.4ರ ಅವಧಿಯಲ್ಲಿ 361 ಪ್ರಕರಣಗಳು ದಾಖಲಾಗಿವೆ ಎಂದರು. ಕಳೆದ ಆರು ತಿಂಗಳ ಅವಧಿಯಲ್ಲಿ ಜಮ್ಮು-ಕಾಶ್ಮೀರಕ್ಕೆ 34, ಲಕ್ಷ 10 ಸಾವಿರ 219 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪೈಕಿ 12 ಸಾವಿರದ 934 ಮಂದಿ ವಿದೇಶಿಗರಾಗಿದ್ದಾರೆ. ಪ್ರವಾಸಿಗರ ಭೇಟಿಯಿಂದ ಕಳೆದ ಆರು ತಿಂಗಳ ಅವಧಿಯಲ್ಲಿ 25.12 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ. jammu kashmir stone pelting arrest cases police central government lok sabha ಜಮ್ಮು ಕಾಶ್ಮೀರ ಕಲ್ಲು ತೂರಾಟ ಬಂಧನ ಪೊಲೀಸ್ ಕೇಂದ್ರ ಸರ್ಕಾರ ಲೋಕಸಭೆ
2020/04/09 12:10:36
https://kannada.oneindia.com/news/new-delhi/artical-370-stonepelting-in-jammu-kashmir-765-persons-arrested-179554.html
mC4
ಸರ್ಜಾ ಬಳಿ ದುಡ್ಡು, ಹೆಸರಿದೆ: ಶೃತಿ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ – torrentspree ಸರ್ಜಾ ಬಳಿ ದುಡ್ಡು, ಹೆಸರಿದೆ: ಶೃತಿ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಬೆನ್ನಿಗೆ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ನಿಂತ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸಂಯುಕ್ತಾ ಹೆಗ್ಡೆ ಕೂಡ ಅವರಿಗೆ ಸಾಥ್ ನೀಡಿದ್ದಾರೆ. ಹರಿಹರನ್ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಬ್ಯಾಟ್ ಬೀಸಿದ್ದು, ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿರುವ ಸಂಯುಕ್ತಾ ಸರ್ಜಾ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ‌ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ‌ಮುಂದೆ ಬಂದು ತಮಗಾದ ಅನ್ಯಾಯದ ಬಗ್ಗೆ ಮಾತನಾಡಲು ಭಯಪಡುತ್ತಾರೆ. ನಮ್ಮಂತ ನಟಿಯರು ಧೈರ್ಯವಾಗಿ ಮುಂದೆ ಬಂದು ಮಾತನಾಡಿದರೆ ಟೀಕೆ ಮತ್ತು ಟ್ರೋಲ್ಗೆ ಗುರಿಯಾಗುತ್ತೇವೆ. ಈಗ ಶ್ರುತಿ ಬಗ್ಗೆಯು ಎಲ್ಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಹೌದು ಸರ್ಜಾ ಅವರ ಕುಟುಂಬಕ್ಕೆ ಇತಿಹಾಸವಿದೆ. ಪವರ್ ಇದೆ ಹಾಗೂ ಹಣ ಬಲ ಇದೆ. ಹಾಗಂತ ಅವರಿಗೆ ಅಸಹ್ಯವಾಗಿ ನಡೆದಕೊಳ್ಳುವ ಅಧಿಕಾರ ಕೊಟ್ಟವರು ಯಾರು? ನಮ್ಮ ಚಿತ್ರರಂಗದಲ್ಲಿ ನಾವು ಈ ರೀತಿಯ ಹೋರಾಟದಲ್ಲಿ ಸೋಲುತ್ತೇವೆ. ಅನೇಕರು ಶ್ರುತಿ ಹೇಳಿದ ಮಾತನ್ನು ಸುಳ್ಳು ಎನ್ನುತ್ತಿದ್ದಾರೆ. ಬೇರೆ ಸ್ಥಳದಿಂದ ಬಂದು ಇಲ್ಲಿ ಭಾಷೆ ಕಲಿತು ಸುಳ್ಳು ಹೇಳುತ್ತಾರೆ ಎನ್ನುವ ಆರೋಪ ಮಾಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನಾಯಕಿಯರಿಗೆ ಸಂಭಾವನೆಯಲ್ಲಂತೂ ಸಮಪಾಲು ಇಲ್ಲ. ಹಾಗಂತ ಈ ವಿಚಾರವನ್ನು ಪ್ರಶ್ನೆ ಮಾಡಬಾರದೇ? ತಪ್ಪನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ನ್ಯಾಯಕ್ಕಾಗಿ ಹೋರಾಟ ಮಾಡಲೇ ಬೇಕು. ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ ಅಂತ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಪ್ರಶ್ನಿಸಿದ್ದಾರೆ. ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ನಟಿ ರಾಗಿಣಿ ಕೂಡ ಶೃತಿ ಹರಿಹರನ್ ಬೆನ್ನಿಗೆ ನಿಂತಿದ್ದು, ಮೀಟೂ ಅಭಿಯಾನದಿಂದ ಸಮಸ್ಯೆ ಹೇಳಿಕೊಳ್ಳುವುದು ಒಳ್ಳೆಯ ವಿಷಯ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶೃತಿ ಹರಿಹರನ್ ಒಳ್ಳೆ ಹುಡುಗಿ, ಅನಗತ್ಯವಾಗಿ ಹೇಳಿಕೊಳ್ಳಲ್ಲ. ಶೃತಿ ಅವರಿಗೆ ನಿಜವಾಗಿ ಅಂತಹ ಘಟನೆ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಮೀಟೂ ಅಭಿಯಾನವನ್ನು ಯಾರು ಕೂಡ ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ ಎಂದು ತಿಳಿಸಿದ ರಾಗಿಣಿ, ಪ್ರತಿ ದಿನ ಈ ಅಭಿಯಾನ ಹೆಚ್ಚಾಗುತ್ತಿದೆ. ಇದು ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಅನ್ವಯವಾಗುತ್ತದೆ. ಈ ಅಭಿಯಾನ ಆಗುತ್ತಿರುವುದು ನನಗೆ ಸಂತಸ ತಂದಿದೆ. ನಾನು ಮೀಟೂ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.
2020/02/19 16:47:11
https://torrentspree.com/2018/10/22/actress-samyuktha-hegde-support-to-sruthi-hariharan/
mC4
ಪ್ರಶ್ನೆ ಮಾಡುವ ದಿನದಿಂದ ವಿಜ್ಞಾನಿಯ ಉದಯ: ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಇಸ್ರೋ ಪೂರ್ವಾಧ್ಯಕ್ಷ ಕಿರಣ್ ಕುಮಾರ್ — Bantwalnews.com Posted By: Bantwal News June 25, 2018 ಕೇಂದ್ರ ಸರಕಾರದ ನೀತಿ ಆಯೋಗದ ಅಟಲ್ ಇನ್ನೋವೇಷನ್ ಮಿಷನ್ ಅಡಿಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಆರಂಭಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪೂರ್ವಾಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಸೋಮವಾರ ಉದ್ಘಾಟಿಸಿದರು. ಬಳಿಕ ಸೇರಿದ್ದ ಸುಮಾರು 60ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಿಆರ್‌ಎಂಪಿ ಸಿಬಿಎಸ್‌ಸಿ ಶಾಲೆ, ಪಾಣೆಮಂಗಳೂರು ಎಸ್.ಎಲ್.ಎನ್.ಪಿ, ಶಾರದಾ ಹೈಸ್ಕೂಲು, ಬಂಟ್ವಾಳ ಟೆಂಪಲ್ ಸ್ಕೂಲ್, ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಪ್ರೌಢಶಾಲೆ ನಾರ್ಶಾಮೈದಾನ, ಕಲ್ಲಡ್ಕ ಶ್ರೀರಾಮ ಹೈಸ್ಕೂಲು ಹೀಗೆ ತಾಲೂಕಿನ ನಾನಾ ಶಾಲೆಗಳ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಿಸಿದ ಕಿರಣ್ ಕುಮಾರ್, ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಸಂದೇಹಗಳ ನಿವಾರಿಸಿದರು. ಯಾವಾಗ ನಾವು ಪ್ರಶ್ನೆ ಮಾಡಲು ಆರಂಭಿಸುತ್ತೇವೋ ಆಗಿನಿಂದಲೇ ನಾವು ವಿಜ್ಞಾನಿಯಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಇದನ್ನು ನಿರಂತರವಾಗಿ ಮುಂದುವರಿಸಿದವರು ಭವಿಷ್ಯದಲ್ಲಿ ವಿಜ್ಞಾನಿಯಾಗುತ್ತಾರೆ. ಯಾವುದೇ ವಿಷಯದ ಕುರಿತು ಪ್ರಶ್ನಿಸುವ ಮನೋಭಾವವನ್ನುರೂಢಿಸಿಕೊಳ್ಳಬೇಕು, ಇದಕ್ಕಾಗಿ ಇಸ್ರೋ ಭುವನ್ ಎಂಬ ಆನ್‌ಲೈನ್ ಮಾಹಿತಿ ನೀಡುವ ಸೈಟ್ ಮಾಡಿದೆ. ಅಲ್ಲಿ ಬಾಹ್ಯಾಕಾಶದ ಕುರಿತು ಇರುವ ಸಂದೇಹಗಳಿಗೆ ಉತ್ತರ ದೊರಕುತ್ತದೆ ಎಂದರು. ಏಲಿಯನ್ ಗಳು ನಿಜಯಾಗಿಯೂ ಇದೆಯಾ, ಜ್ಯೋತಿಷ್ಯಶಾಸ್ತ್ರ ನಿಜವೇ ಎಂಬಿತ್ಯಾದಿ ಪ್ರಶ್ನೆಗಳೂ ವಿದ್ಯಾರ್ಥಿಗಳಿಂದ ಬಂತು. ಈ ಸಂದರ್ಭ ಉತ್ತರಿಸಿದ ಕಿರಣ್ ಕುಮಾರ್, ಏಲಿಯನ್ ಗಳು ಎಂಬುದಿಲ್ಲ. ಇದುವರೆಗೂ ಅವುಗಳ ಇರುವಿಕೆಯ ಬಗ್ಗೆ ಯಾವುದೇ ಸಂಶೋಧನೆಗಳು ಸಾಬೀತುಪಡಿಸಿಲ್ಲ. ಮನುಷ್ಯನಿಗೆ ಭೂಮಿ ಮೇಲೆ ಅಧಿಪತ್ಯ ಸ್ಥಾಪಿಸುವುದಷ್ಟೇ ಅಲ್ಲ, ಮಂಗಳಗ್ರಹದಲ್ಲಿರಬೇಕು ಎಂಬ ಆಸೆ ಇದೆ. ಅನ್ಯಗ್ರಹಗಳ ಮೇಲೆ ಅಧಿಪತ್ಯ ಸ್ಥಾಪನೆಗೂ ಮನುಷ್ಯ ಹೊರಡುತ್ತಿದ್ದಾನೆ ಎಂದರು. ಸಂಖ್ಯಾವಿಧಿ ಮೂಲಕ ಅಂದಾಜಿಸುವ ಪ್ರಕ್ರಿಯೆ ಜ್ಯೋತಿಷ್ಯಶಾಸ್ತ್ರದಲ್ಲಿದ್ದು, ಇದರಲ್ಲಿ ವೈಜ್ಞಾನಿಕ ಸಂಶೋಧನೆಗೆ ಕೆಲವು ತಾಳೆಯಾಗಬಹುದು ಎಂದರು. ಈ ಸಂದರ್ಭ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಹೊಸ ದಾಖಲೆಯನ್ನೇ ಬರೆದಿದೆ. ಚಂದ್ರಯಾನ ಮಾಡಿದಾಗ ಚಂದ್ರನ ಮೇಲೆ ನೀರಿನ ಕಣಗಳಿವೆ ಎಂಬುದನ್ನು ಪ್ರಪಂಚಕ್ಕೆ ಸಾರಿ ಹೇಳಿದ್ದ ಭಾರತ, ಮಂಗಳನ ಕಕ್ಷೆಗೆ ಮೊದಲ ಉಪಗ್ರಹ ಸೇರಿಸಿದ ಖ್ಯಾತಿಯನ್ನೂ ಪಡೆದಿದೆ. ತೊಂದರೆಗಳು ಜಾಸ್ತಿ, ಸಂಪನ್ಮೂಲಗಳು ಕಡಿಮೆ ಎಂಬ ಪ್ರತಿಕೂಲ ಸ್ಥಿತಿ ಇದ್ದರೂ ಇಚ್ಛಾಶಕ್ತಿ ಇದ್ದರೆ ಗುರಿ ಸಾಧನೆ ಸಾಧ್ಯ ಎಂಬುದನ್ನು ಭಾರತೀಯ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ ಎಂದರು. ಉಪಗ್ರಹಗಳಿಂದ ಜನರ ಹಿತ ಕಾಪಾಡುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಉಪಗ್ರಹ ನಿರ್ಮಿಸಿ ಬಳಕೆ ಮಾಡುವುದರಲ್ಲಿ ಭಾರತ ಅಗ್ರಗಣ್ಯನೆನಿಸಿದೆ ಎಂದು ಕಿರಣ್ ಕುಮಾರ್ ಹೇಳಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವಿಶ್ವವೇ ಬೆರಗಾಗುವ ಮಾದರಿಯಲ್ಲಿ ಮುನ್ನಡೆಯುತ್ತಿದೆ. ಭಾರತದ ವೈಜ್ಞಾನಿಕ ಕ್ಷಮತೆ, ತಂತ್ರಜ್ಞಾನದ ಕ್ಷಮತೆ ಬೇರೆ ದೇಶಗಳ ತಂತ್ರಜ್ಞಾನದ ವಿಸ್ತಾರಕ್ಕೂ ನೆರವಾಗುತ್ತಿದೆ ಎಂದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಕ್ಷೇತ್ರಕ್ಕೆ ಭಾರತ ಕೊಟ್ಟಿರುವ ವಿವಿಧ ಕೊಡುಗೆಗಳನ್ನು ಉಲ್ಲೇಖಿಸಿದರು. ಪ್ರಕೃತಿಯನ್ನು ವಿದೇಶಿ ಕನ್ನಡಕ ದಿಂದಲೇ ನೋಡಬೇಕೆನ್ನುವ ಕೆಲ ದೇಶಗಳ ನಡೆ ಆತಂಕಕಾರಿ ಎಂದ ಅವರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸುವಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಯಶಸ್ವಿಯಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡುತ್ತಿರುವ ಬಂಟ್ವಾಳದಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಸಂಪರ್ಕ ಪ್ರಮುಖ್ ಕೆ.ಎಸ್.ವೆಂಕಟೇಶ್, ಮುಂಬಯಿಯ ಲೆಕ್ಕಪರಿಶೋಧಕ ನಾರಾಯಣ ಶೆಟ್ಟಿ, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ರಾಧಾಕೃಷ್ಣ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಬೆಂಗಳೂರಿನ ಉದಯ್ ಬಿ.ಸಿ, ಸರ್ವೋತ್ತಮ ಬಾಳಿಗಾ ಉಪಸ್ಥಿತರಿದ್ದರು. ಶೈಲಿನಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಕಿರಣ್ ಕುಮಾರ್ ಅವರು ಪ್ರಯೋಗಾಲಯವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ರಚಿಸಿದ ಮಾಡೆಲ್ ಗಳ ವೀಕ್ಷಣೆ ಮಾಡಿದರು. ಈ ಸಂದರ್ಭ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. 6 ರಿಂದ 12 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕ್ಷೇತ್ರದ ಕುರಿತಾಗಿ ಕುತೂಹಲ, ಆಸಕ್ತಿಯನ್ನು ಹೆಚ್ಚಿಸಿ, ಅದನ್ನು ಉತ್ತೇಜಿಸುವ ವಿವಿಧ ಸಲಕರಣೆಗಳನ್ನು ಜೋಡಿಸಲಾಗಿದೆ. ಹೊಸ ಸಂಶೋಧನೆಗಳನ್ನು ಮಾಡುವ ಯುವ ವಿಜ್ಞಾನಿಗಳಿಗೆ ಅದಕ್ಕೆ ಪೂರಕವಾದ ಮಾಹಿತಿ, ಮಾರ್ಗದರ್ಶನವನ್ನು ನೀಡುವ, ವೈಜ್ಞಾನಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಪ್ರೇರೇಪಿಸುವ ವಿವಿಧ ಯಂತ್ರಗಳು, ಪುಸ್ತಕಗಳು ಗಮನ ಸೆಳೆಯುತ್ತಿದೆ. ಸೈನ್ಸ್(ವಿಜ್ಞಾನ), ಟೆಕ್ನಾಲಜಿ(ತಂತ್ರಜ್ಞಾನ), ಇಂಜಿನಿಯರಿಂಗ್, ಮೆಥಮೆಟಿಕ್ಸ್(ಗಣಿತಶಾಸ್ತ್ರ) ವಿಚಾರ ಜೊತೆಯಾಗಿ ಸ್ಟೆಮ್ ಹೆಸರಿನಲ್ಲಿ ಮಕ್ಕಳಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುವ ವಿವಿಧ ವಿಜ್ಞಾನ ಮಾಡೆಲ್ಗಳು ಕುತೂಹಲವನ್ನು ಹೆಚ್ಚಿಸುವಂತಿದೆ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 2500 ಚದರ ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ನಿರ್ಮಾಣಗೊಂಡಈ ಲ್ಯಾಬ್ ನಲ್ಲಿ ಪ್ರಸ್ತುತ 3ಡಿ ಪ್ರಿಂಟರ್, ರೋಬೋಟ್ಗಳು, 25 ಕ್ಕೂ ಅಧಿಕ ಸೆನ್ಸಾರ್ ಗಳು ಸೇರಿದಂತೆ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳು, ಪ್ರಯೋಗ ಮಾಪನಗಳು, ವಸ್ತುಗಳನ್ನು ಇಲ್ಲಿ ಜೋಡಿಸಿಡಲಾಗಿದೆ. https://bantwalnews.com/2018/06/20/kalladka-srirama-vidyakendra-4/ TOPICS:#kalladkasrirama vidya kendraಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ Be the first to comment on "ಪ್ರಶ್ನೆ ಮಾಡುವ ದಿನದಿಂದ ವಿಜ್ಞಾನಿಯ ಉದಯ: ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಇಸ್ರೋ ಪೂರ್ವಾಧ್ಯಕ್ಷ ಕಿರಣ್ ಕುಮಾರ್"
2021/12/02 00:02:30
https://bantwalnews.com/2018/06/25/atal-tinkaring-lab/
mC4
ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ | DMK Chief, Five Time CM M Karunanidhi Political Journey - Kannada Oneindia 6 min ago ಪುಟ್ಟ ಬಾಲಕಿಯ ಪ್ರಶ್ನೆಗೆ ಮನಸೋತ ಶಿಕ್ಷಣ ಸಚಿವ ಸುರೇಶ್ ಕುಮಾರ್ 13 min ago ಸ್ಪೈಜ್ ಜೆಟ್ ಪೈಲಟ್‌ ಹಣೆಗೆ ಗನ್ ಇಟ್ಟು, ಚಾಕುವಿನಿಂದ ಇರಿದು ದರೋಡೆ 25 min ago ಪೋಷಕರ ಹೊರೆ ತಗ್ಗಿಸಲು ಮಕ್ಕಳ ಡೊನೇಷನ್ ಮನ್ನಾ ಮಾಡಿದ ಚನ್ನಪಟ್ಟಣದ ಖಾಸಗಿ ಶಾಲೆ | Updated: Friday, August 10, 2018, 21:39 [IST] ಕರುಣಾನಿಧಿ ಐದು ದಶಕಗಳ ರಾಜಕೀಯ ಜೀವನದ ಹಿನ್ನೋಟ | Oneindia Kannada ಚೆನ್ನೈ, ಆಗಸ್ಟ್ 07: ಅಭಿಮಾನಿಗಳ ಪಾಲಿನ 'ಅಣ್ಣಾಚಿ', 'ಕಳೈನರ್', ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ವರಿಷ್ಠ, ತಮಿಳುನಾಡಿನ ರಾಜಕೀಯ ಚಿತ್ರಣವನ್ನು ಬದಲಾಯಿಸಿದ ಬರಹಗಾರ, ಕವಿ, ವಾಸ್ತುಶಿಲ್ಪಿ, ಹಠವಾದಿ, ಸ್ವಾಭಿಮಾನಿ, ಐದು ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಮುತ್ತುವೇಲ್ ಕರುಣಾನಿಧಿ ತಮ್ಮ ಇಹಲೋಕ ರಾಜಕೀಯ ಜೀವನವನ್ನು ಮುಗಿಸಿದ್ದಾರೆ. ಡಿಎಂಕೆ ಸ್ಥಾಪಕ ಸಿ.ಎನ್ ಅಣ್ಣಾದೊರೈ ಅವರ ನಂತರ ಪಕ್ಷದವನ್ನು ಸಮರ್ಥವಾಗಿ ಮುನ್ನಡೆಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಮಹತ್ವ ತಂದವರು. ಕರುಣಾನಿಧಿಯವರು ಜಸ್ಟಿಸ್ ಪಾರ್ಟಿಯ ಅಳಗಿರಿಸ್ವಾಮಿಯವರ ಭಾಷಣ ಕೇಳಿ ಪ್ರೇರಿತರಾಗಿ ತಮ್ಮ 14ನೇ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಇಳಿದರು ಹಾಗೂ 1932ರಲ್ಲಿ ಅಳಗಿರಿಸ್ವಾಮಿಯವರಿಂದ ಹೆಚ್ಚು ಪ್ರಭಾವಿತರಾಗಿ ಹಿಂದಿ-ವಿರೋಧಿ ಚಳವಳಿಗಳಲ್ಲಿಯ‌ೂ ಭಾಗವಹಿಸಿದರು. ಅವರ ಪ್ರದೇಶದ ಯುವಜನರಿಗಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಸದಸ್ಯರಿಗೆ ಕೈಬರಹದ ಪತ್ರಿಕೆ 'ಮಾನವರ್ ನೇಸನ್'ಅನ್ನು ಹಂಚಿದರು. ನಂತರ 'ತಮಿಳುನಾಡು ತಮಿಳು ಮಾನವರ್ ಮನ್ರಮ್' ಎಂಬ ಒಂದು ವಿದ್ಯಾರ್ಥಿ ಸಂಘವನ್ನು ಕಟ್ಟಿದರು. ಕರುಣಾನಿಧಿ ಸ್ವತಃ ವಿದ್ಯಾರ್ಥಿ ಸಮುದಾಯದ ಜತೆ ಇತರೆ ಸದಸ್ಯರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಕೊಂಡರು. ಅವರು ಸಮೀಪದ ಗುಡಿಸಲುಗಳಿಗೆ ಭೇಟಿಕೊಟ್ಟು ತಮ್ಮ ಕೈಲಾದ ಎಲ್ಲ ನೆರವು ನೀಡಿದರು. ಈ ಸದಸ್ಯರಿಗಾಗಿ ಇಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿದರು, ಅದು ಮುಂದೆ DMK ಪಕ್ಷದ ಅಧಿಕೃತ ಪತ್ರಿಕೆಯಾದ ಮುರಸೊಳಿ ಪತ್ರಿಕೆಯಾಗಿ ಬೆಳೆಯಿತು. ರಾಜಕೀಯ ಲೋಕದ 'ಕಲಾವಿದ' ಕರುಣಾನಿಧಿ ಅವರ ರಾಜಕಾರಣದ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದೆ ಓದಿ... ಚಳವಳಿಯ ಮೂಲಕ ರಾಜಕೀಯ ಪ್ರವೇಶ ಕರುಣಾನಿಧಿಯವರು ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಮೊದಲು ಚುನಾಯಿತರಾದರು. ದಾಲ್ಮಿಯಪುರಮ್ ರೈಲು ನಿಲ್ದಾಣದ ಹೆಸರು ಬದಲಾವಣೆಗಾಗಿ ಮಾಡಿದ ಚಳವಳಿಯ ಸಂದರ್ಭದಲ್ಲಿ ಅವರನ್ನು ಬಂಧಿಸಿ, ತಿರುಚಿರಾಪಲ್ಲಿ ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು. ಅವರು 1961ರಲ್ಲಿ DMK ಕೋಶಾಧಿಕಾರಿಯಾದರು ಹಾಗೂ 1962ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದರು. 1967ರಲ್ಲಿ DMK ಅಧಿಕಾರಕ್ಕೆ ಬಂದಾಗ, ಲೋಕೋಪಯೋಗಿ ಇಲಾಖೆಯ ಮಂತ್ರಿ ಪದವಿ ಪಡೆದರು. 1969ರಲ್ಲಿ ಅಣ್ಣಾದೊರೈ ನಿಧನರಾದ ನಂತರ, ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾದರು. ಜುಲೈ 27, 1969ರಲ್ಲಿ ಡಿಎಂಕೆ ಅಧ್ಯಕ್ಷರಾದರು ಜುಲೈ 27, 1969ರಲ್ಲಿ ಡಿಎಂಕೆ ಅಧ್ಯಕ್ಷರಾದರು. ಇದಾದ ಬಳಿಕ 1969ರಿಂದ 1971ರ ತನಕ ಮುಖ್ಯಮಂತ್ರಿಯಾದರು. ಇದಕ್ಕೂ ಮುನ್ನ ವಿರೋಧ ಪಕ್ಷದ ಉಪ ನಾಯಕ, ಲೋಕೋಪಯೋಗಿ ಇಲಾಖೆಯ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು. 1971ರಲ್ಲಿ ಮತ್ತೊಮ್ಮೆ ಅಧಿಕಾರ ಗಳಿಸಿದ ಡಿಎಂಕೆ ನೇತೃತ್ವದ ಸರ್ಕಾರದ ಸಿಎಂ ಆದರು. ಆದರೆ, 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆಯಬೇಕಾಯಿತು. 1976ರಲ್ಲಿ ಅಧಿಕಾರ ಕಳೆದುಕೊಂಡರು ಎಮೆರ್ಜನ್ಸಿಯ ನಂತರ ಡಿಎಂಕೆ ಅಧಿಕಾರ ಕಳೆದುಕೊಂಡಿತು. ಮತ್ತೆ ಅಧಿಕಾರ ಗಳಿಸಿದ್ದು 1989ರಲ್ಲಿ ಅದು ಎಂಜಿ ರಾಮಚಂದ್ರನ್ ಅವರ ನಿಧನದ ನಂತರ ಎಂಬುದು ಗಮನಾರ್ಹ. ಮೂರನೇ ಬಾರಿಗೆ 1989ರಿಂದ 1991ರ ತನಕ ಸಿಎಂ ಆಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಯಶಸ್ಸು ಸಿಗದಿದ್ದರೂ ವಿಪಿ ಸಿಂಗ್ ಸರ್ಕಾರದಲ್ಲಿ ಸೋದರಳಿಯ ಮುರಸೋಳಿ ಮಾರನ್ ಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಗುವಂತೆ ಮಾಡಿದರು. ಆದರೆ, ಮಾರನ್ ಅವರ ರಾಜಕೀಯ ಬದುಕಿಗೆ ನೆರವಾದರು. ತಮಿಳು ಮನಿಲಾ ಕಾಂಗ್ರೆಸ್ ಜತೆ ಸಖ್ಯ 1996ರಲ್ಲಿ ಕಾಂಗ್ರೆಸ್ಸಿನಿಂದ ಬಂಡಾಯವೆದ್ದು ತಮಿಳು ಮನಿಲಾ ಕಾಂಗ್ರೆಸ್ ಎಂಬ ಪಕ್ಷ ಕಟ್ಟಿದ ಜಿ.ಕೆ ಮೂಪನಾರ್ ಜತೆ ಸಖ್ಯ ಬೆಳೆಸಿದ ಎಂ ಕರುಣಾನಿಧಿ ಅವರು ಮತ್ತೆ ಅಧಿಕಾರ ಗಳಿಸಿ ಸಿಎಂ ಆದರು. 2001ರ ತನಕ ಅಧಿಕಾರ ನಡೆಸಿದರು. ವಿಶೇಷವೆಂದರೆ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಆದರೆ, 2004ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಜತೆ ಮೈತ್ರಿ ಗಳಿಸಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದರು. 2009ರ ತನಕ ಈ ಮೈತ್ರಿ ಅಬಾಧಿತವಾಗಿತ್ತು. ಈ ಬಲದಿಂದಲೇ 2006ರಲ್ಲಿ ಐದನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಿತು. ಡಿಎಂಕೆ ತೊರೆದ ವೈಕೋ, ಸ್ಟಾಲಿನ್ ನೇತೃತ್ವ ಕರುಣಾನಿಧಿಯವರು ಸ್ವಜನಪಕ್ಷಪಾತ ಉತ್ತೇಜಿಸಲು ಹಾಗೂ ನೆಹರು-ಗಾಂಧಿ ಕುಟುಂಬದ ಮಾದರಿಯಲ್ಲಿ ಒಂದು ರಾಜಕೀಯ ವಂಶಾಡಳಿತ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿ ವಿರೋಧ ಪಕ್ಷಗಳು, ಅವರ ಪಕ್ಷದ ಅನೇಕ ಸದಸ್ಯರು ಹಾಗೂ ಕೆಲವು ರಾಜಕೀಯ ವೀಕ್ಷಕರು ದೂಷಿಸಿದರು. ಹೀಗೆ ಖಂಡಿಸಿದವರಲ್ಲಿ DMKಅನ್ನು ಬಿಟ್ಟುಹೋದ ವೈಕೊ ಧ್ವನಿ ದೊಡ್ಡದಾಗಿತ್ತು. ಎಂ ಕೆ ಅಳಗಿರಿ ಹಾಗೂ ಎಂಕೆ ಸ್ಟಾಲಿನ್ ನಡುವಿನ ನಡುವಿನ ರಾಜಕೀಯ ಪೈಪೋಟಿಗೆ ಕರುಣಾನಿಧಿ ಸಾಕ್ಷಿಯಾದರು. ಆದರೆ, ಐದು ಬಾರಿ ಸಿಎಂ ಆದರೂ ಒಮ್ಮೆ ಕೂಡಾ ತಮ್ಮ ಮಕ್ಕಳನ್ನು ಸಿಎಂ ಪಟ್ಟದಲ್ಲಿ ಕೂರಿಸಲಿಲ್ಲ. ಎರಡು ಬಾರಿ ಶಾಸಕರಾದರೂ ಚೆನ್ನೈನ 44ನೇ ಮೇಯರ್ ಆಗಿ, ನಾಲ್ಕನೇ ಅವಧಿಗೆ ಶಾಸಕರಾದ ಬಳಿಕ ಕ್ಯಾಬಿನೆಟ್ ಸೇರುವ ಅವಕಾಶ ಸಿಕ್ಕಿತು. karunanidhi tamil nadu chennai dmk ಎಂ ಕರುಣಾನಿಧಿ ತಮಿಳುನಾಡು ಚೆನ್ನೈ ಡಿಎಂಕೆ Five-time Chief Minister, DMK chief M Karunanidhi passed away today(August 07). After taking charge as DMK president on July 27, 1969, he led the DMK to a massive victory in the 1971 Assembly elections, he was Five Time Chief Minister and longest serving President of DMK.
2020/06/04 05:10:36
https://kannada.oneindia.com/news/chennai/dmk-chief-five-time-cm-m-karunanidhi-political-journey-147259.html?utm_medium=Desktop&utm_source=OI-KN&utm_campaign=Also-Read
mC4
ಐಫೋನ್ ಸ್ಯಾಮ್‌ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್ರಾಯ್ಡ್ ಫೋನ್ಗಾಗಿ ಡಿಜೆಡ್ 09 ಬ್ಲೂಟೂತ್ ಸ್ಮಾರ್ಟ್ ವಾಚ್ ರಿಲೊಜಿಯೊ ಟಿಎಫ್ ಸಿಮ್ ಕಾರ್ಡ್ ಕ್ಯಾಮೆರಾವನ್ನು ಖರೀದಿಸಿ Free - ಉಚಿತ ಸಾಗಾಟ ಮತ್ತು ತೆರಿಗೆ ಇಲ್ಲ | ವೂಪ್ಶಾಪ್ ® ಐಫೋನ್ಗಾಗಿ ಸ್ಯಾಮ್ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್ರಾಯ್ಡ್ ಫೋನ್ಗೆ ಡಿಜೆಎಕ್ಸ್ಎಕ್ಸ್ಎಕ್ಸ್ ಬ್ಲೂಟೂತ್ ಸ್ಮಾರ್ಟ್ವಾಚ್ ರಿಲೋಜಿಯೊ ಟಿಎಫ್ ಸಿಮ್ ಕಾರ್ಡ್ ಕ್ಯಾಮೆರಾ د.ا84.44 د.ا66.07 ಐಫೋನ್ ಸ್ಯಾಮ್‌ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್ರಾಯ್ಡ್ ಫೋನ್ ಪ್ರಮಾಣಕ್ಕಾಗಿ ಡಿಜೆಡ್ಎಕ್ಸ್ಎನ್ಎಮ್ಎಕ್ಸ್ ಬ್ಲೂಟೂತ್ ಸ್ಮಾರ್ಟ್ ವಾಚ್ ರಿಲೊಜಿಯೊ ಟಿಎಫ್ ಸಿಮ್ ಕಾರ್ಡ್ ಕ್ಯಾಮೆರಾ SKU: 32797503378 ವರ್ಗ: ಫೋನ್ಸ್ ಬ್ರಾಂಡ್ ಹೆಸರು: ಸಿAwono ಕಾರ್ಯ: ಪಾಸೋಮೀಟರ್, ಸ್ಲೀಪ್ ಟ್ರ್ಯಾಕರ್, ಎಕ್ಸ್‌ಎನ್‌ಯುಎಂಎಕ್ಸ್-ಗಂಟೆ ಸೂಚನೆ, ಫಿಟ್‌ನೆಸ್ ಟ್ರ್ಯಾಕರ್, ಸಂದೇಶ ಜ್ಞಾಪನೆ, ಕ್ಯಾಲೆಂಡರ್, ಡಯಲ್ ಕರೆ, ಅಲಾರ್ಮ್ ಗಡಿಯಾರ, ದೂರಸ್ಥ ನಿಯಂತ್ರಣ, ತಿಂಗಳು, ಉತ್ತರ ಕರೆ, ವಾರ, ಕರೆ ಜ್ಞಾಪನೆ ಹಿಂಬದಿಯ ಕ್ಯಾಮೆರಾ: 0.3MP ಭಾಷೆ: ಪೋರ್ಚುಗೀಸ್, ಸ್ಪ್ಯಾನಿಷ್, ಇಂಗ್ಲಿಷ್, ಜರ್ಮನ್, ಪೋಲಿಷ್, ರಷ್ಯನ್, ಇಟಾಲಿಯನ್, ಫ್ರೆಂಚ್, ಟರ್ಕಿಶ್ ಬ್ಯಾಟರಿ ಸಾಮರ್ಥ್ಯ: 180-220mAh ಸ್ಕ್ರೀನ್ ಗಾತ್ರ: 1.54 " ಸಿಸ್ಟಮ್: Android Wear ಸಿಪಿಯು ಮಾದರಿ: MTK6261D ಕೌಟುಂಬಿಕತೆ: ಧರಿಸಬಹುದಾದ ರೆಸಲ್ಯೂಷನ್: 240 * 240px GSM 850 / 900 / 1800 / 1900 MHz, ಸಿಂಗಲ್ ಮೈಕ್ರೋ ಸಿಮ್ ಕಾರ್ಡ್ (ಸಿಮ್ ಕಾರ್ಡ್ ಪ್ಯಾಕೇಜ್‌ನಲ್ಲಿ ಸೇರಿಸಲಾಗಿಲ್ಲ) ಬ್ಲೂಟೂತ್ ಡಯಲರ್, ಕಾಲ್ ಜ್ಞಾಪನೆ, ಬ್ಲೂಟೂತ್ ಕಾಲ್ ಬ್ಲೂಟೂತ್ SMS / IM ಸಂದೇಶ ಸೂಚಿಸಲಾಗಿದೆ 1.54 "ಟಿಎಫ್ಟಿ ಎಲ್ಸಿಡಿ ಟಚ್ಸ್ಕ್ರೀನ್ 240 * 240 ಪಿಕ್ಸೆಲ್ಗಳು 0.3 M ಕ್ಯಾಮರಾ ಫೋನ್ ಅನ್ನು ಬಂಧಿಸಲು ವಿರೋಧಿ ನಷ್ಟ ತಂತ್ರಜ್ಞಾನ (ಜಿಪಿಎಸ್ ಅನ್ನು ಬೆಂಬಲಿಸುವುದಿಲ್ಲ) ಪೆಡೊಮೀಟರ್, ಸ್ಲೀಪ್ ಮಾನಿಟರ್, ಸ್ಡೆಪ್ಟರಿ ರಿಮೈಂಡರ್ ಕ್ಯಾಲೆಂಡರ್ (ಸಿಂಕ್ರೊನೈಸಬಲ್) ಆವರ್ತನ: GSM 850 / 900 / 1800 / 1900 MHz ನೆಟ್ವರ್ಕ್ & ಸಂಪರ್ಕ: 2g ನೆಟ್ವರ್ಕ್ ಮಾತ್ರ ಸಿಮ್ ಕಾರ್ಡ್: ಸಿಂಗಲ್ ಸಿಮ್ ಕಾರ್ಡ್ (ಮೈಕ್ರೋ ಸಿಮ್ ಕಾರ್ಡ್) ಫೋನ್ ಆಗಿರಬಹುದು ಬ್ಲೂಟೂತ್: ಬ್ಲೂಟೂತ್ 3.0 ಬಾಹ್ಯ ಮೆಮೊರಿ: 32GB ವರೆಗೆ TF ಕಾರ್ಡ್ ಅನ್ನು ಬೆಂಬಲಿಸಿ (ಮೆಮೊರಿ ಕಾರ್ಡ್ ಪ್ಯಾಕೇಜ್‌ನಲ್ಲಿ ಒಳಗೊಂಡಿಲ್ಲ) ಕ್ಯಾಮೆರಾ: 0.3 M ಸಂಗೀತ: ಬೆಂಬಲ ಚಿತ್ರ ಸ್ವರೂಪ: JPEG, GIF, BMP, PNG ಸಂಗೀತ ಸ್ವರೂಪ: MP3, WAV ಕಾರ್ಯಗಳು: ಬ್ಲೂಟೂತ್ ಡಯಲರ್, ಸಂಪರ್ಕಗಳು, ಕರೆ ಜ್ಞಾಪನೆ, ಗಡಿಯಾರ, ವಿರೋಧಿ ನಷ್ಟ, ಪೆಡೋಮೀಟರ್, ಸ್ಲೀಪ್ ಮಾನಿಟರ್, ಜಡ ಸ್ಮರಣೆ, ​​ಕ್ಯಾಲೆಂಡರ್ ಬ್ಯಾಟರಿ: 220 mAh USB ಪೋರ್ಟ್: ಮಿನಿ USB 5pin ಇಂಟರ್ಫೇಸ್ ಗ್ರಾವಿಟಿ ಸಂವೇದಕ: ಬೆಂಬಲ ವಾಚ್ ಫೋನ್‌ನಂತೆ ಹೇಗೆ ಕಾರ್ಯನಿರ್ವಹಿಸುತ್ತದೆ? ನೀವು ಹಿಂಬದಿಯ ಕವರ್ ತೆರೆದ ನಂತರ ವಾಚ್‌ನಲ್ಲಿ ಅನ್ಲಾಕ್ ಮಾಡಲಾದ ಜಿಎಸ್ಎಮ್ ಎಕ್ಸ್‌ಎನ್‌ಯುಎಂಎಕ್ಸ್‌ಜಿ ನೆಟ್‌ವರ್ಕ್ ಮೈಕ್ರೋ ಸಿಮ್ ಕಾರ್ಡ್ ಅನ್ನು ಸೇರಿಸುವ ಮೂಲಕ, ಬ್ಯಾಟರಿಯನ್ನು ತೆಗೆದುಹಾಕಿ ಮತ್ತು ನೀವು ಸಿಮ್ ಕಾರ್ಡ್ ಸ್ಲಾಟ್ ಅನ್ನು ಕಾಣುತ್ತೀರಿ, ಸಾಮಾನ್ಯವಾಗಿ ಕೆಲವು ವಾಹಕಗಳು ಹೊಂದಿಕೆಯಾಗದ ಕಾರಣ ಗ್ರಾಹಕರು ಅನ್ಲಾಕ್ ಮಾಡಿದ ಟಿ-ಮೊಬೈಲ್ ಮೈಕ್ರೋ ಸಿಮ್ ಕಾರ್ಡ್‌ಗಳನ್ನು ಖರೀದಿಸಲು ನಾವು ಸೂಚಿಸುತ್ತೇವೆ. ಈ ಗಡಿಯಾರದೊಂದಿಗೆ, ದಯವಿಟ್ಟು ನಿಮ್ಮ ಮೈಕ್ರೋ ಸಿಮ್ ಕಾರ್ಡ್ ಈ ಬ್ಯಾಂಡ್‌ಗಳಿಗೆ ಹೊಂದಿಕೆಯಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ: GSM 2 / 850 / 900 / 1800 MHz, ಫೋನ್ ಕರೆಗಳನ್ನು ಮಾಡಲು ನಿಮ್ಮ ಗಡಿಯಾರವನ್ನು ಬಳಸಿ, ನಂತರ SMS ಕಳುಹಿಸಿ ಮತ್ತು ಸ್ವೀಕರಿಸಿ. ಐಫೋನ್ ಸರಣಿಗಾಗಿ, ಇದು ಕೇವಲ ಉತ್ತರ ಮತ್ತು ಕರೆ, ಫೋನ್ ಪುಸ್ತಕ, ಮ್ಯೂಸಿಕ್ ಪ್ಲೇ, ಕ್ಯಾಮೆರಾ, ಗಡಿಯಾರ, ಪೆಡೋಮೀಟರ್, ಫೋನ್ ಆಂಟಿ-ಲಾಸ್ಟ್ ಅಲರ್ಟ್ ಅನ್ನು ಬೆಂಬಲಿಸುವುದಿಲ್ಲ. ಎಸ್‌ಎಂಎಸ್, ರೇಡಿಯೋ, ರಿಮೋಟ್ ಕ್ಯಾಮೆರಾ ನಿಯಂತ್ರಣ, ನಿದ್ರೆಯ ಮೇಲ್ವಿಚಾರಣೆ ಇತ್ಯಾದಿಗಳನ್ನು ಇನ್ನೂ ಬೆಂಬಲಿಸುವುದಿಲ್ಲ. ವಾಚ್ ಮೆನುವಿನಲ್ಲಿ ಆಂಡ್ರಾಯ್ಡ್ ಮೊಬೈಲ್ ಸ್ಕ್ಯಾನ್ ಕ್ಯೂಆರ್ ಕೋಡ್ ಅಥವಾ ಕೆಳಗಿನ ಲಿಂಕ್ ಡೌನ್‌ಲೋಡ್ ಅಪ್ಲಿಕೇಶನ್. ಗಡಿಯಾರವು 2g ನೆಟ್‌ವರ್ಕ್ ಆಗಿದೆ, ಇದು ಇಂಟರ್ನೆಟ್ ಪ್ರವೇಶಕ್ಕೆ ನಿಧಾನವಾಗಿದೆ. ವಾಚ್‌ನ RAM ಮೆಮೊರಿ ಚಿಕ್ಕದಾಗಿದೆ, ಆದ್ದರಿಂದ ವಾಚ್‌ಗೆ ಫೇಸ್‌ಬುಕ್, ವಾಟ್ಸಾಪ್ ಮತ್ತು ಬ್ರೌಸರ್‌ಗೆ ಲಾಗ್ ಇನ್ ಆಗಲು ಸಾಧ್ಯವಿಲ್ಲ.ಆದರೆ ನೀವು ಅಪ್ಲಿಕೇಶನ್‌ನಲ್ಲಿ ಸಂದೇಶ ಜ್ಞಾಪನೆಯನ್ನು ಹೊಂದಿಸಬಹುದು, ಮತ್ತು ನೀವು ಸಂದೇಶವನ್ನು ಸಹ ಪರಿಶೀಲಿಸಬಹುದು. 1 X ಕಾವೊನೊ DZ09 ಸ್ಮಾರ್ಟ್ವಾಚ್ ಐಫೋನ್‌ಗಾಗಿ ಕೆಲವು ಕಾರ್ಯಗಳು ಕಾರ್ಯನಿರ್ವಹಿಸುವುದಿಲ್ಲ: ಅಲಾರಮ್‌ಗಳು, ಕಳೆದುಹೋದ ಅಲಾರಂ ಮುಂತಾದ ಎಲ್ಲಾ ವಾಚ್ ಕಾರ್ಯಗಳ ಜೊತೆಗೆ ನೀವು ಕರೆಗಳನ್ನು ತೆಗೆದುಕೊಳ್ಳಬಹುದು, ಫೋನ್ ಸಂಖ್ಯೆಯನ್ನು ನೋಡಬಹುದು ಮತ್ತು ನಿಮ್ಮ ಸಂಗೀತವನ್ನು ಕೇಳಬಹುದು. ಆದರೆ ಇದು ನಿಮ್ಮ ಫೋನ್ ಪುಸ್ತಕದೊಂದಿಗೆ ಸಿಂಕ್ ಆಗುವುದಿಲ್ಲ ಆದ್ದರಿಂದ ನೀವು ಪಡೆದರೆ ಫೋನ್ ಕರೆ ಸಂಖ್ಯೆ ತೋರಿಸುತ್ತದೆ ಆದರೆ ವ್ಯಕ್ತಿಗಳ ಹೆಸರಲ್ಲ, ನೀವು ಎತ್ತಿಕೊಂಡು ಉತ್ತರಿಸಬಹುದು ಆದರೆ ಅದು ನಿಮ್ಮ ಐಫೋನ್‌ಗಳ ಸಾಫ್ಟ್‌ವೇರ್‌ನೊಂದಿಗೆ ಸಿಂಕ್ ಆಗುತ್ತಿಲ್ಲ. ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುವ ಇತರ ಕೆಲವು ಕಾರ್ಯಗಳು ನಿಮ್ಮ ನಿರ್ದಿಷ್ಟ ಐಫೋನ್‌ನಲ್ಲಿ ಸಹ ಕಾರ್ಯನಿರ್ವಹಿಸುವುದಿಲ್ಲ. ತಿಳಿದಿರಲಿ, ಇದು ಒಂದು ಉತ್ತಮ ಗಡಿಯಾರ ಐಫೋನ್, ಆದರೆ ನೀವು ಈ ಗಡಿಯಾರದಿಂದ ಪೂರ್ಣ 100% ಅನ್ನು ಪಡೆಯದಿರಬಹುದು, ಬಹುಶಃ 85-90% ನಂತೆ ಕಾರ್ಯಗಳನ್ನು ಈ ಬೆಲೆಗೆ ಇದು ಇನ್ನೂ ಒಳ್ಳೆಯದು ಐಪಿ ಐಪಿ ಡೌನ್‌ಲೋಡ್ ಅನ್ನು ಬೆಂಬಲಿಸಲಿಲ್ಲ !!!! ದಯವಿಟ್ಟು ಸಂಪರ್ಕಿಸಬೇಡಿ ವಾಚ್ ನೇರವಾಗಿ ಚಾರ್ಜರ್‌ನೊಂದಿಗೆ, ಅತಿಯಾದ ಪ್ರವಾಹವು ಸಾಧನವನ್ನು ಹಾನಿಗೊಳಿಸಬಹುದು, ದಯವಿಟ್ಟು ದಯೆಯಿಂದ ಅರ್ಥಮಾಡಿಕೊಳ್ಳಿ !!! 7 ವಿಮರ್ಶೆಗಳು ಐಫೋನ್ಗಾಗಿ ಸ್ಯಾಮ್ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್ರಾಯ್ಡ್ ಫೋನ್ಗೆ ಡಿಜೆಎಕ್ಸ್ಎಕ್ಸ್ಎಕ್ಸ್ ಬ್ಲೂಟೂತ್ ಸ್ಮಾರ್ಟ್ವಾಚ್ ರಿಲೋಜಿಯೊ ಟಿಎಫ್ ಸಿಮ್ ಕಾರ್ಡ್ ಕ್ಯಾಮೆರಾ ವೈ *** ಡಿ - ಜನವರಿ 31, 2019 ಎಸ್ ಇಗುಯಲ್ ಎ ಲಾ ಇಮೇಜನ್, ಲೆಲೆಗೊ ರಾಪಿಡೋ ವೈ ಬೈನ್ ಪ್ರೊಟೆಜಿಡೊ. ವಿ *** ಆರ್ - ಜನವರಿ 28, 2019 , Упоковка, чисы 2 недели в, все хорошо спасибо ಎಂ *** ಕೆ - ಜನವರಿ 9, 2019 ಒಡ್ಪೋವಾಡಾ ಪಾಪಿಸು ಎ ಒಬ್ರಾಜ್ಕಾಮ್. ವೈಪಾಡಜ ಫ್ಯಾಂಟಾಸ್ಟಿಕ್ಕಿ ಎಮ್ ಮೀ - ಡಿಸೆಂಬರ್ 14, 2018 Ürün 21 günde Türkiye YE GELDİ.şimdilik ಸರಿ gibi gözüküyor kullandıktan ನಂತರ deneyimlerimi yazarım .ಬ್ಲೂಟೂತ್ bağlantısında telefondaki melodi çalıyor şimdilik bunu söyleyebilirim ನಾನು *** z - ನವೆಂಬರ್ 13, 2018 ಎಸ್ ನಿಖರ ಪೆರೋ ಮಿ ರೆಲೊಜ್ ನೋ ಫನ್‌ಕಿಯೋನಾ, ಡೆಸ್ಗ್ರಾಸಿಯಡಮೆಂಟ್ ಲೆಲೆಗೊ ಡೆಸ್ಕೊಂಪ್ಯೂಸ್ಟೊ, ಯೋ ಮಿ ಸಿಯೆಂಟೊ ಮುಯ್ ಎನೋಜಾ ಪೋರ್ಕ್ ಲೋ ಎಸ್ಪೆರಾಬಾ ಕಾನ್ ಅನ್ಸಿಯಾಸ್ ಲೆಗೊ ರೊಟೊ ಡೆ ಲಾ ಎಬಿಲ್ಲಾ ವೈ ನೋ ಎನ್‌ಕೈಂಡೆ ನಿ ಕಾರ್ಗಾ, ಟೈರ್ ಮಿ ಡೈನೆರೊ. ಸಿ *** ಎ - ನವೆಂಬರ್ 12, 2018 ನನ್ನ ಉತ್ಪನ್ನವು ಉತ್ತಮವಾಗಿ ರಕ್ಷಿಸಲ್ಪಟ್ಟಿದೆ, ದಿನಾಂಕವನ್ನು ಸೂಚಿಸುವ ಮೊದಲು ನಾನು ಬಂದಿದ್ದೇನೆ, ಉತ್ಪನ್ನವನ್ನು ನಿರ್ದಿಷ್ಟಪಡಿಸಿದಂತೆ, ಅಂಗಡಿಯೊಂದಿಗೆ ಸಂವಹನವು ಉತ್ತಮವಾಗಿದೆ ಮತ್ತು ಗಮನ ಹರಿಸಿದೆ. ಎಲ್ಲವೂ ಚೆನ್ನಾಗಿ. ನಾನು ಅದನ್ನು ಶಿಫಾರಸು ಮಾಡುತ್ತೇವೆ
2020/07/14 00:41:58
https://kn.woopshop.com/product/dz09-bluetooth-smartwatch-relogio-tf-sim-card-camera-for-iphone-samsung-htc-lg-huawei-android-phone/
mC4
ಕೊರೋನಾ ಚೇತರಿಕೆ ದರ 73.18%, ಪಾಸಿಟಿವ್ ಪ್ರಕರಣದಲ್ಲೂ ಇಳಿಕೆ | News13 News13 > ಸುದ್ದಿಗಳು > ರಾಷ್ಟ್ರೀಯ > ಕೊರೋನಾ ಚೇತರಿಕೆ ದರ 73.18%, ಪಾಸಿಟಿವ್ ಪ್ರಕರಣದಲ್ಲೂ ಇಳಿಕೆ ಕೊರೋನಾ ಚೇತರಿಕೆ ದರ 73.18%, ಪಾಸಿಟಿವ್ ಪ್ರಕರಣದಲ್ಲೂ ಇಳಿಕೆ ನವದೆಹಲಿ: ಒಂದೇ ದಿನದಲ್ಲಿ ದೇಶವು ಕೊರೋನಾದ ಇಲ್ಲಿಯವರೆಗಿನ ಅತಿ ಹೆಚ್ಚು ಚೇತರಿಕೆಗಳನ್ನು ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದ ಸುಮಾರು 58 ಸಾವಿರ ಜನರು ಗುಣಮುಖರಾಗಿ ತಮ್ಮ ಮನೆಗಳಿಗೆ ಮರಳಿದ್ದಾರೆ. ಇದರೊಂದಿಗೆ ದೇಶದಲ್ಲಿಕೋವಿಡ್-19 ನಿಂದ‌ ಚೇತರಿಕೆಯಾದ ಒಟ್ಟು ಮೊತ್ತವು ಎರಡು ದಶಲಕ್ಷವನ್ನು ಮುಟ್ಟಿದೆ ಎಂದು ವರದಿಗಳು ತಿಳಿಸಿವೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 19 ಲಕ್ಷ 77 ಸಾವಿರ 779 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಇದರೊಂದಿಗೆ ರಾಷ್ಟ್ರವ್ಯಾಪಿ ಚೇತರಿಕೆ ಪ್ರಮಾಣವು ಶೇಕಡಾ 73.18 ಕ್ಕೆ ಸುಧಾರಿಸಿದೆ. ಪ್ರಕರಣದ ಸಾವಿನ ಪ್ರಮಾಣವು ಸ್ಥಿರವಾದ ಕುಸಿತವನ್ನು ತೋರಿಸುತ್ತಲೇ ಇದೆ ಮತ್ತು ಈಗ ಅದು ಶೇಕಡಾ 1.92 ರಷ್ಟಿದೆ. ದೇಶದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸುಮಾರು 55 ಸಾವಿರ ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು ಪ್ರಕರಣಗಳ ಸಂಖ್ಯೆಯನ್ನು ಇದು 27 ಲಕ್ಷ 2 ಸಾವಿರ 743 ಕ್ಕೆ ತೆಗೆದುಕೊಂಡು ಹೋಗಿದೆ. ಪಾಸಿಟಿವ್‌ ಪ್ರಕರಣಗಳ ಪ್ರಮಾಣವೂ ಸ್ಥಿರವಾದ ಕುಸಿತಕ್ಕೆ ಸಾಕ್ಷಿಯಾಗಿದೆ ಮತ್ತು ಈಗ ಪರೀಕ್ಷಿಸಲಾದ ಒಟ್ಟು ಮಾದರಿಗಳಲ್ಲಿ ಕೇವಲ 8.81 ರಷ್ಟು ಮಾತ್ರ ಪಾಸಿಟಿವ್‌ ಬರುತ್ತಿದೆ. ಪ್ರಸ್ತುತ, ದೇಶದಲ್ಲಿ ಒಟ್ಟು ಸಕ್ರಿಯ ಕರೋನಾ ಪ್ರಕರಣಗಳ ಸಂಖ್ಯೆ ಆರು ಲಕ್ಷ 73 ಸಾವಿರ 166. ಒಂದೇ ದಿನದಲ್ಲಿ 876 ಸಾವುಗಳು ಸಂಭವಿಸಿದ್ದು, ಇದು ಒಟ್ಟು ಸಾವಿನ ಸಂಖ್ಯೆಯನ್ನು 51 ಸಾವಿರ 797 ಕ್ಕೆ ತಲುಪಿಸಿದೆ ಎಂದು ವರದಿಯಾಗಿದೆ. ಭಾರತವು ತನ್ನ ಕೋವಿಡ್‌ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ, ದೇಶವು ಒಂದು ದಿನದಲ್ಲಿ ಹತ್ತಿರ ಹತ್ತಿರ ಒಂದು ಮಿಲಿಯನ್ ಮಾದರಿಗಳನ್ನು ಪರೀಕ್ಷಿಸಿದೆ. ಒಂದು ದಿನದಲ್ಲಿ ಸುಮಾರು ಒಂಬತ್ತು ಲಕ್ಷ ಮಾದರಿಗಳ ದಾಖಲೆಯ ಪರೀಕ್ಷೆಯೊಂದಿಗೆ, ರಾಷ್ಟ್ರವು ನಿನ್ನೆ ಮಹತ್ವದ ಮೈಲಿಗಲ್ಲು ಸಾಧಿಸಿದೆ. 'ಟೆಸ್ಟ್, ಟ್ರ್ಯಾಕ್ ಮತ್ತು ಟ್ರೀಟ್' ತಂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಗಮನಾರ್ಹ ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
2020/10/01 13:38:52
https://news13.in/archives/162511
mC4
ಸಾಂಪ್ರದಾಯಿಕ ಮೈಸೂರ್ ಪಾಕ್ ಗಾಗಿ ಹುಡುಕಾಟವೇ - RailYatri Blog Home Food ಸಾಂಪ್ರದಾಯಿಕ ಮೈಸೂರ್ ಪಾಕ್ ಗಾಗಿ ಹುಡುಕಾಟವೇ ಸಾಂಪ್ರದಾಯಿಕ ಮೈಸೂರ್ ಪಾಕ್ ಗಾಗಿ ಹುಡುಕಾಟವೇ ಮೈಸೂರು ನಮಗೆ ವಿವಿಧ ವಸ್ತುಗಳನ್ನು ನೆನಪಿಸುತ್ತದೆ ಅವುಗಳೆಂದರೆ ಆಕರ್ಷಕ ರೇಷ್ಮೇ ಸೀರೆ, ಮೈಸೂರು ಅರಮನೆ, ಮತ್ತು ಜನಪ್ರಿಯವಾದ ಸ್ಯಾಂಡಲ್ ಸೋಪ್. ಅದಾಗ್ಯೂ, ಫುಡೀಗಳು ಕೇವಲ ಮೈಸೂರ್ ಪಾಕ್ ನನ್ನು ಮಾತ್ರ ಹೇಳುತ್ತಾರೆ; ಇದು ಈ ಪ್ರತಿಷ್ಠಿತ ನಗರದ ಪ್ರಾಂತೀಯ ಖಾದ್ಯ. ನವಿರಾದ ಭಕ್ಷ್ಯದ ಇತಿಹಾಸ ಮೈಸೂರು ಪಾಕನ್ನು ಮೊದಲಿಗೆ ಮಾದಪ್ಪ ಎಂಬ ವ್ಯಕ್ತಿಯು ಮೈಸೂರು ಅರಮನೆಯಲ್ಲಿ ತಯಾರಿಸಿದರು. ಆತನು ಪ್ರಾಯೋಗಿಕವಾಗಿ ಕಡಲೇಹಿಟ್ಟನ್ನು ಮತ್ತು ತುಪ್ಪವನ್ನು ಸೇರಿಸಿ ಒಂದು ಹೊಸ ಬಗೆಯ ಗಟ್ಟಿ ಪಾಕವನ್ನು ಮಾಡಿದನು. ಆ ಪಾಕವು ಗಟ್ಟಿಯಾದ ಮೇಲೆ ಕೇಕ್-ನಂತಹ ಸಿಹಿಯಾಯಿತು. ಆತನು ಅದನ್ನು ಕೃಷ್ಣ ರಾಜ ವಡೆಯರ್ ಗೆ ಪ್ರಸ್ತುತ ಪಡಿಸಿದನು, ಇವರು ಮೈಸೂರು ಅರಸರಲ್ಲಿ ಅತ್ಯಂತ ಜನಪ್ರಿಯವಾದವರು. ಅರಸರಿಗೆ ಇದು ಬಹಳ ಇಷ್ಟವಾಯಿತು ಹಾಗು ಆದಕ್ಕೆ ಪ್ರಖ್ಯಾತ ಸಿಹಿಖಾದ್ಯದ ಸ್ಥಾನವನ್ನು ನೀಡಿದರು. ಮಾದಪ್ಪ ಅದಕ್ಕೆ ಹೆಚ್ಚಿನ ಪದಾರ್ಥಗಳನ್ನು ಸೇರಿಸಿದನು ಹಾಗೂ ಅದನ್ನು ಮೈಸೂರ್ ಪಾಕಾ ಎಂದು ಕರೆದನು (ಪಾಕಾ ಎಂದರೆ ಕನ್ನಡದಲ್ಲಿ ಒಂದು ಸಕ್ಕರೆಯ ಮಿಶ್ರಣ ಎಂದು). ಮುಂದುವರದಂತೆ, ಮೈಸೂರು ಪಾಕಾವನ್ನ ಜನಪ್ರಯವಾಗಿ ಮೈಸೂರ್ ಪಾಕ್ ಅಥವಾ ಮೈಸೂರೆಪ ಎಂದು ಕರೆಯಲಾಗುತ್ತದೆ. ನಗರದ ಹೊರಗೆ ಮತ್ತು ಭಕ್ಷ್ಯಗಳು ಚೆನ್ನೈ ಎಂದರೆ ಪಾಕಾ ಸವಿಯುವ ತಾಣ. ಶ್ರೀ ಕೃಷ್ಣ ಸ್ವೀಟ್ಸ್, ಇದು ಚೆನ್ನೈ-ಮೂಲದ ಖಾದ್ಯಗಳ ಅಂಗಡಿಯ ಒಂದು ಜಾಲವಾಗಿದ್ದು, ಮೈಸೂರ್ ಪಾಕ್ ನ ಒಂದು ನಂಬಿಕಸ್ಥ ಮೂಲಸ್ಥಳವಾಗಿದೆ. ಆದರೆ ಹಳೆಯ ತಲೆಮಾರಿನವರು ಇಂದಿಗೂ ಶ್ರೀ ಕೃಷ್ಣ ಸ್ವೀಟ್ಸ್ ನಲ್ಲಿನ ಮೈಸೂರ್ ಪಾಕ್ ಅನ್ನು ಒಂದು ಬದಲಾದ ಅವೃತ್ತಿಯ ಸಿಹಿ ಎಂದು ಹಾಗೂ ಇದು ಸಾಂಪ್ರದಾಯಿಕ ರೀತಿಯದ್ದಲ್ಲ ಎಂದು ನಂಬುತ್ತಾರೆ. ಚೆನ್ನೈನಲ್ಲಿ ಮೈಸುರ್ ಪಾಕ್ ಮಾರಾಟ ಮಾಡುವ ಹಲವಾರು ಸ್ವೀಟ್ಸ್ ಅಂಗಡಿಗಳಿವೆ, ಆದರೆ ಸಾಂಪ್ರದಯಿಕ ರೀತಿ ಮೈಸೂರ್ ಪಾಕನ್ನು ಮೈಸೂರಿನ ಬೀದಿಗಳಲ್ಲೇ ತಯಿಸಲಾಗುತ್ತದೆ ಎನ್ನುವ ನಂಬಿಕೆ ಇದೆ. ಬಾಂಬೆ ಟಿಫನ್ನೀಸ್ ಮತ್ತು ಗುರು ಸ್ವೀಟ್ಸ್ (ಇವೆರಡೂ ಸಹ ಮೈಸೂರ್ ಅರಮನೆಯ ಹತ್ತಿರ ಇವೆ) ಗಳನ್ನು ಈ ರುಚಿಕರ ಭಕ್ಷವನ್ನು ಸವಿಯುವ ಉತ್ತಮವಾದ ಸ್ಥಳ ಎಂದು ಪರಿಗಣಿಸಲಾಗಿದೆ. ಮಾದಪ್ಪ ಈ ಸಿಹಿಯನ್ನು ಸೃಷ್ಠಿಸಿದವರು, ಗುರು ಸ್ವೀಟ್ಸ್ ನ ಪ್ರಸ್ತುತ ಮಾಲೀಕರ ತಾತನವರು. ಹಾಗಾಗಿ, ಇದು ಸಾಂಪ್ರದಾಯಿಕ ಮೈಸೂರ್ ಪಾಕ್ ಅನ್ನು ಸವಿಯುವ ಉತ್ತಮ ಸ್ಥಳ ಎನ್ನಬಹುದು. ಗುರು ಸ್ವೀಟ್ ಮಾರ್ಟ್ ಗುರು ಸ್ವೀಟ್ಸ್ ಸಯ್ಯಾಜಿ ರಾವ್ ರಸ್ತೆಯಲ್ಲಿ ಸ್ಥಾಪಿತವಾಗಿದೆ (ಮೈಸೂರು ಅರಮನೆಯ ಹಿಂದಿನ ಪ್ರವೇಶದ್ವಾರದಿಂದ ಕಾಲ್ನಡಿಗೆಯ ದೂರದಲ್ಲಿದೆ). ಇದು ನೋಡಲು ಹೆಚ್ಚು ಪ್ರಸಿದ್ಧ-ಸ್ಥಳದಂತೆ ಕಾಣುವಿದಿಲ್ಲ. ಈ ಅಂಗಡಿಯಲ್ಲಿ ಪ್ರವೇಶದ್ವಾರ ಅಥವಾ ಲಾಬಿ ಅಂತಹ ಸ್ಥಳವಿಲ್ಲ. ನೀವು ಫುಟ್ ಪಾತ್ ನಲ್ಲಿ ನಿಲ್ಲಬೇಕು ಹಾಗೂ ಗಾಜಿನ ಜಾರ್ ನಲ್ಲಿನ ಖಾದ್ಯಗಳನ್ನು ಬೆರೆಳು ತೋರಿಸಿ ಕೇಳಬೇಕು. ಇದರ ಪ್ರಸ್ತುತ ಮಾಲೀಕರಲ್ಲಿ ಒಬ್ಬರಾದ, ನಟರಾಜ್, ಅವರು ಈ ಸಿಹಿ ಖಾದ್ಯವನ್ನು ತಮ್ಮ ಮುತ್ತಾತನವರೇ ಸೃಷ್ಟಿಸಿದ್ದು ಎಮ್ದು ಹೇಳಿಕೊಳ್ಳುತ್ತಾರೆ. ಇವರು ಇಲ್ಲಿ ಇಂದಿಗೂ ಸಾಂಪ್ರದಾಯಿಕ ಪದ್ದತಿಯಲ್ಲಿ ಮೈಸೂರ್ ಪಾಕ್ ಮಾಡಲಾಗುತ್ತದೆ, ಉಳಿದ ಎಲ್ಲಾ ಪದಾರ್ಥಗಳನ್ನು ಮನೆಯಲ್ಲ ತಯಾರಿಸಲಾಗುತ್ತದೆ, ಕೇವಲ ಸಕ್ಕರೆ, ಏಲಕ್ಕ ಮತ್ತ ಅರಿಶಿಣವನ್ನ ಮಾತ್ರ ಹೊರಗಿಂದ ತರಲಾಗುತ್ತದೆ. ಮೈಸೂರ್ ಪಾಕನ್ನ ಬಿಟ್ಟರೆ, ಹಾಲಿನ ಬರ್ಫಿ ಗಳು ಸಹ ಈ ಅಂಗಡಿಯಲ್ಲ ರುಚಿಕರವಾದ ಖಾದ್ಯ.
2020/07/11 04:33:55
https://blog.railyatri.in/search-for-authentic-mysore-pak-kannada/
mC4
ನೀರಿನ ಟ್ಯಾಂಕ್‌ಗೆ ವಿಷ: ಮಠಕ್ಕೆ ಜನಪ್ರತಿನಿಧಿಗಳ ಭೇಟಿ | Udayavani – ಉದಯವಾಣಿ ನೀರಿನ ಟ್ಯಾಂಕ್‌ಗೆ ವಿಷ: ಮಠಕ್ಕೆ ಜನಪ್ರತಿನಿಧಿಗಳ ಭೇಟಿ ಹುಣಸೂರು: ತಾಲೂಕಿನ ಗಾವಡಗೆರೆ ವಸತಿ ಶಾಲೆಯ ಓವರ್‌ ಹೆಡ್‌ ಟ್ಯಾಂಕ್‌ ನೀರಿಗೆ ಕಿಡಿಗೇಡಿಗಳು ವಿಷ ಬೆರೆಸಿದ ಪ್ರಕರಣ ತಿಳಿದು ಜಿಪಂ ಉಪಾಧ್ಯಕ್ಷೆ ಗೌರಮ್ಮ ಮತ್ತಿತರ ಜನಪ್ರತಿನಿಧಿಗಳು ಮಠಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಗಾವಡಗೆರೆಯ ಗುರುಲಿಂಗ ಜಂಗಮ ದೇವರ ಮಠದ ಮಠದಲ್ಲಿ ನಟರಾಜಸ್ವಾಮೀಜಿ ಅವರನ್ನು ಭೇಟಿ ಮಾಡಿದ ಅವರು, ಮಠದಲ್ಲಿನ ಘಟನಾ ಸ್ಥಳಗಳಲ್ಲಿ ಅಡ್ಡಾಡಿ ಮಾಹಿತಿ ಪಡೆದ ನಂತರ ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಎಂದು ಧೈರ್ಯ ತುಂಬಿದರು. ಮಠದಲ್ಲಿ 3ನೇ ಪ್ರಕರಣ: ಕಳೆದ ಹತ್ತು ವರ್ಷಗಳಿಂದೀಚೆಗೆ ಮೊದಲು ಹುಲ್ಲಿನ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದರೆ, ಐದು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಮಲಗುವ ಕೊಠಡಿಯೊಳಕ್ಕೆ ಬಟ್ಟೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಎಸೆದಿದ್ದರು. ಇದೀಗ ಟ್ಯಾಕ್‌ ನೀರಿಗೆ ವಿಷ ಬೆರೆಸಿರುವ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕೆಂದು ಮಠದ ಅಭಿಮಾನಿಗಳು ಆಗ್ರಹಿಸಿದ್ದಾರೆ. ಕುಡಿಯಲು ಯೋಗ್ಯವಲ್ಲ: ಗಾವಡಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೀರಿನ ಪರೀಕ್ಷೆ ನಡೆಸಿದ್ದು, ಕುಡಿಯಲು ಯೋಗ್ಯವಲ್ಲವೆಂಬ ಪ್ರಾಥಮಿಕ ವರದಿ ಬಂದಿದೆ. ಅಲ್ಲದೇ ಪೊಲೀಸರು ಸಹ ಪ್ರತ್ಯೇಕವಾಗಿ ನೀರಿನ ಸ್ಯಾಂಪಲ್‌ ಸಂಗ್ರಹಿಸಿದ್ದಾರೆ. ಮೈಸೂರಿನ ಫೊರೆನ್ಸಿಕ್‌ ಲ್ಯಾಬ್‌ಗೂ ಸಹ ನೀರಿನ ಸ್ಯಾಂಪಲ್‌ ಕಳುಹಿಸಲಾಗಿದ್ದು, ಇನ್ನೂ ವರದಿ ಬರಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌ ತಿಳಿಸಿದ್ದಾರೆ. ತಾಲೂಕು ಆಹಾರ ನಿರೀಕ್ಷಕ ಸುರೇಶ್‌, ಸಂಪೂರ್ಣ ವರದಿ ಬರುವವರೆಗೂ ಪ್ರತ್ಯೇಕವಾಗಿ ಅಡುಗೆ ತಯಾರಿಸಲು ಸೂಚಿಸಿದ್ದಾರೆ. ಇಂದು ಗ್ರಾಪಂ ವಿಶೇಷ ಸಭೆ: ಮಠದಲ್ಲಿ ನಡೆದಿರುವ ಘಟನೆಯಿಂದ ಎಚ್ಚೆತ್ತುಕೊಂಡಿರುವ ಗಾವಡಗೆರೆ ಗ್ರಾಮ ಪಂಚಾಯ್ತಿ ಬುಧವಾರ ಮಧ್ಯಾಹ್ನ 3ಕ್ಕೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಪ್ರಕಾಶ್‌ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ, ಸ್ವಾಮಿಜಿಯವರ ನೆರವಿಗೆ ನಿಲ್ಲುವುದಾಗಿ ತಾಪಂ ಇಒ ಕೃಷ್ಣಕುಮಾರ್‌ ತಿಳಿಸಿದ್ದಾರೆ. ಉಪಾಧ್ಯಕ್ಷರೊಂದಿಗೆ ಮಾಜಿ ಸದಸ್ಯ ದೇವರಾಜ್‌, ತಾಪಂ ಅಧ್ಯಕ್ಷೆ ಪದ್ಮಮ್ಮ, ಸದಸ್ಯ ಗಣಪತಿರಾವ್‌ ಇಂಡೋಲ್ಕರ್‌, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಪ್ರಕಾಶ್‌, ಪಿಡಿಒ ಲೋಕೇಶ್‌, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶೋಧಾ ಇತರರಿದ್ದರು. ಜನಪ್ರತಿನಿಧಿಗಳ ಭೇಟಿ ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ಸಿದ್ಧತೆ ಯೋಗ ದಿನಾಚರಣೆ: ಧರ್ಮ ಗುರುಗಳು ಭಾಗಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹ ಮೈಸೂರು: ಕಾವೇರಿ ಹಾಗೂ ಕಬಿನಿ ಅಚ್ಚುಕಟ್ಟು ನಾಲೆಗಳಿಂದ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ... ಪಾರಂಪರಿಕ ಶೈಲಿಯಲ್ಲೇ ಅರಮನೆ ದುರಸ್ತಿಯಾಗಲಿ: ಪ್ರಮೋದಾದೇವಿ ಒಡೆಯರ್‌ ಮೈಸೂರು: ಅತ್ಯಂತ ಪುರಾತನ ಮೈಸೂರು ಅರಮನೆಯ ಕಟ್ಟಡ ಅಲ್ಲಲ್ಲಿ ಶಿಥಿಲಾವಸ್ಥೆ ತಲುಪಿದ್ದು, ಪಾರಂಪರಿಕ ಶೈಲಿಯಲ್ಲೇ ನಿರ್ವಹಣೆ ಆಗಬೇಕಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ... ಅಂತರ್ಜಲ ವೃದ್ಧಿಗೆ ಜನಜಾಗೃತಿ ಅಗತ್ಯ ಮೈಸೂರು: ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನೀರಿಲ್ಲದೇ ಕಷ್ಟಕರ ಜೀವನ ಎದುರಿಸಬೇಕಾಗುತ್ತದೆ ಎಂದು ಜಿಪಂ ಸಿಇಒ ಕೆ.ಜ್ಯೋತಿ ಹೇಳಿದರು. ರಾಜ್ಯ... ಯೋಗ, ಧ್ಯಾನ, ಆಧ್ಯಾತ್ಮಿಕತೆಯಿಂದ ಆರೋಗ್ಯ ಜೀವನ ಮೈಸೂರು: ಆಧ್ಯಾತ್ಮದಲ್ಲಿ ಯೋಗಾಭ್ಯಾಸ ಪ್ರಮುಖವಾಗಿರುವುದರಿಂದ ಮುಂದಿನ ದಿನಗಳಲ್ಲಿ ವಾರ್ಡ್‌ ಮಟ್ಟದಲ್ಲಿ ಯೋಗಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗುವುದು...
2020/02/19 12:03:16
https://www.udayavani.com/district-news/mysore-news/water-tank-poisoning-representatives-visit-to-the-mutt
mC4
ವಿಕೃ ಗೋಕಾಕ ಸಮ್ಮೇಳನ : ಕೊಪ್ಪಳದ ನಾಲ್ಕು ಹೋರಾಟಗಾರರ ಕುರಿತು ವಿಚಾರ ಗೋಷ್ಠಿ » Kannadanet.com Home ಈ ಕ್ಷಣದ ಸುದ್ದಿ ವಿಕೃ ಗೋಕಾಕ ಸಮ್ಮೇಳನ : ಕೊಪ್ಪಳದ ನಾಲ್ಕು ಹೋರಾಟಗಾರರ ಕುರಿತು ವಿಚಾರ ಗೋಷ್ಠಿ ವಿಕೃ ಗೋಕಾಕ ಸಮ್ಮೇಳನ : ಕೊಪ್ಪಳದ ನಾಲ್ಕು ಹೋರಾಟಗಾರರ ಕುರಿತು ವಿಚಾರ ಗೋಷ್ಠಿ ಕೊಪ್ಪಳ, ಫೆ. ೦೯: ಸುರ್ವೆ ಕಲ್ಚರಲ್ ಅಕಾಡೆಮಿ ರೂಪಿಸಿದ ಕಾರ್ಯಕ್ರಮ ಕೊಪ್ಪಳದ ಹೊರಾಟಗಾರರ ಮಾಲಿಕೆಯಲ್ಲಿ ಕೊಪ್ಪಳದ ನಾಲ್ಕು ಜನ ಹಿರಿಯ ಹೋರಾಟಗಾರರನ್ನು ಕುರಿತು ವಿಚಾರ ಗೋಷ್ಠಿಗಳನ್ನು ನಗರದ ಸಾಹಿತ್ಯ ಭವನದಲ್ಲಿ ಫೆ. ೧೪ ರಿಂದ ನಡೆಯುವ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಸಮ್ಮೇಳನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘಟಕರಾದ ರಮೇಶ ಸುರ್ವೆ ಮತ್ತು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. ಎಲ್ಲ ಯುಗಗಳಲಿ, ತನ್ನ ಇರುವನ್ನು ಜಗತ್ತಿಗೆ ತೋರಿಸಿದ ಮಹಾ ಕೋಪಣ ನಗರ, ಅಂದು ಜಿಲ್ಲೆಯಾಗಿ ಇಂದಿಗೂ ಜಿಲ್ಲೆಯಾಗಿ ಪ್ರಸಿದ್ದಿಯಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಇಂದಿನ ಸಾಮಾಜಿಕ ಹೋರಾಟಗಳವರೆಗೆ ಮಾದರಿಯಾದ ಜಿಲ್ಲೆ. ಜೈನರು, ಕದಬಂರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಚಾಲುಕ್ಯರು, ಟಿಪ್ಪುವರೆಗೆ ಅನೇಕ ರಾಜ ಮಹಾರಾಜರು ಕಿರೀಟದಾರಿಗಳಾಗಿ ಆಳಿದ ಮಹಾ ನಾಡು. ಅಂದು ಕೀರಿಟ ಧರಿಸಿ ಆಳಿದವರ ಸಾಲಿನಲ್ಲಿ, ಇಂದು ಕೀರಿಟವಿಲ್ಲದ ಅನೇಕ ಹೋರಾಟಗಾರರು ಇಲ್ಲಿ ಆಳಿ ತಮ್ಮ ಅಸ್ತಿತ್ವ ಸಾರಿದ್ದಾರೆ. ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿದ್ದಾರೆ ಇತ್ತೀಚಿನ ಸಾಮಾಜಿಕ – ಸಾಹಿತ್ಯಿಕ – ಸಾಂಸ್ಕೃತಿಕ ಹಾಗೂ ಜನವರ ಹೋರಾಟಗಳಿಗೆ ದಾಖಲಾದವರು ಸಾವಿರಾರು ಜನ. ಇಂತಹವರಲ್ಲಿ ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟಿದೂರು, ಎಚ್. ಎಸ್. ಪಾಟೀಲ್ ಮತ್ತು ಡಾ. ಮಹಂತೇಶ ಮಲ್ಲನಗೌಡರು ಅವರನ್ನು ಗೌರವಿಸಿ ಅವರ ಬದುಕು – ಬರಹ – ಹೋರಾಟ ನೆನೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋಷ್ಠಿ ೧ ರಲ್ಲಿ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರನ್ನು ಕುರಿತು ಗೋಷ್ಠಿ ಫೆ. ೧೪ ರಂದು ನಡೆಯಲಿದೆ. ವಿ.ಬಿ. ರೆಡ್ಡರ್ ಅಧ್ಯಕ್ಷತೆವಹಿಸಲಿದ್ದಾರೆ. ಪತ್ರಕರ್ತ ನ್ಯೂಸ್ – ೧೮ ರಾಯಚೂರು ವರದಿಗಾರ, ಶರಣಪ್ಪ ಬಾಚಲಾಪುರ, ಕನ್ನಡ ಪ್ರಭ ಕೊಪ್ಪಳದ ಮುಖ್ಯ ವರದಿಗಾರ ಸೋಮರೆಡ್ಡಿ ಅಳವಂಡಿ ವಿಠ್ಠಪ್ಪರ ಬದುಕು ಬರಹ – ಹೋರಾಟ – ಪತ್ರಿಕೊಧ್ಯಮ ಸಾಹಿತ್ಯ ಕುರಿತು ಮಾತನಾಡಲಿದ್ದಾರೆ. ಗೋಷ್ಠಿ ೨ ರಲ್ಲಿ ಹಿರಿಯ ಡಾ. ಮಹಾಂತೇಶ ಮಲ್ಲನಗೌಡರ ಕುರಿತು ಗೋಷ್ಠಿ ಫೆ. ೧೫ ರಂದು ನಡೆಯಲಿದೆ. ಶಿವಮೂಗ್ಗದ ಹಿರಿಯ ಸಾಹಿತಿ ಜಯದೇವಪ್ಪ ಜೈನಕೇರಿ ಅಧ್ಯಕ್ಷತೆವಹಿಸಲಿದ್ದು, ಕಾರ್ಯಕ್ರಮವನ್ನು ಡಾ. ವಸುಂಧರಾ ಭೂಪತಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರು ಉದ್ಘಾಟಸಲಿದ್ದಾರೆ. ಕವಿ ಸುರೇಶ ಕಂಬಳಿ, ಶಿಕ್ಷಕಿ ವಿಜಯಲಕ್ಷ್ಮಿ ಕೊಟಗಿಯವರು ಅವರ ಬರಹ – ಬದುಕು- ಹಾಗೂ ಕಾವ್ಯ ಮತ್ತು ಸಾಂಸ್ಕೃತಿಕ ಕೊಡುಗೆ ಕುರಿತು ಮಾತನಾಡಲಿದ್ದಾರೆ. ಗೋಷ್ಠಿ ೩ ರಲ್ಲಿ ಕುದುರಿಮೋತಿ ಹೋರಾಟದಿಂದ ದಾಖಲಾದ ಅಲ್ಲಮಪ್ರಭು ಬೆಟ್ಟದೂರರ ಕುರಿತು ಫೆ. ೧೬ ರಂದು ನಡೆಯಲಿದೆ. ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ವೇದವ್ಯಾಸ ಎಚ್. ಕೌಲಗಿ ಅಧ್ಯಕ್ಷತೆವಹಿಸುವರು. ಕಾರ್ಯಕ್ರಮವನ್ನು ಕೊಪ್ಪಳದ ಸಂಸದ ಸಂಗಣ್ಣ ಕರಡಿಯವರು ಉದ್ಘಾಟಿಸಲಿದ್ದಾರೆ. ಪ್ರಿನ್ಸಿಪಾಲರು ಸಾಹಿತಿಗಳಾದ ಡಾ. ಸಿ.ಬಿ. ಚಿಲಕರಾಗಿ, ಸಾಹಿತಿ – ರಂಗಸಾಧಕ ಈಶ್ವರ ಹತ್ತಿಯವರು ಅಲ್ಲಮ ಪ್ರಭು ಬೆಟ್ಟದೂರರ ಜೀವನ, ಸಾದನೆ, ಸಾಹಿತ್ಯ, ಹೋರಾಟಗಳು ವಿವಿಧ ಮಜಲುಗಳನ್ನು ದಾಖಲಿಸಲಿದ್ದಾರೆ. ಗೋಷ್ಠಿ ೪ ಹಿರಿಯರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್. ಪಾಟೀರ ಗೋಷ್ಠಿಯಲ್ಲಿ ಡಾ. ಕೆ.ಬಿ. ಬ್ಯಾಳಿ ಅಧ್ಯಕ್ಷತೆವಹಿಸಲಿದ್ದಾರೆ. ಡಾ ಫಕೀರಪ್ಪ ವಜ್ರಬಂಡಿ, ಮುಮ್ತಾಜ ಬೇಗಂ ಉಪನ್ಯಾಸಕರು ಎಚ್.ಎಸ್. ಪಾಟೀಲರ ಬದುಕು ಬರಹ ಮತ್ತು ಸಾಹಿತ್ಯ ಹಾಗೂ ಹೋರಾಟಗಳ ಕುರಿತು ದಾಖಲಿಸಲಿದ್ದಾರೆ. ನಾಲ್ಕು ಜನರು ಕೊಪ್ಪಳ ಜಿಲ್ಲೆ ಹಾಗೂ ನಗರದ ಎಲ್ಲ ಹೋರಾಟಗಳಲ್ಲಿ ಮತ್ತು ಒಂದಿಲ್ಲೊಂದು ಚಟುವಟಿಕೆಯಲ್ಲಿ ದಾಖಲಾದವರು.
2021/04/21 23:38:32
http://kannadanet.com/%E0%B2%88-%E0%B2%95%E0%B3%8D%E0%B2%B7%E0%B2%A3%E0%B2%A6-%E0%B2%B8%E0%B3%81%E0%B2%A6%E0%B3%8D%E0%B2%A6%E0%B2%BF/%E0%B2%B5%E0%B2%BF%E0%B2%95%E0%B3%83-%E0%B2%97%E0%B3%8B%E0%B2%95%E0%B2%BE%E0%B2%95-%E0%B2%B8%E0%B2%AE%E0%B3%8D%E0%B2%AE%E0%B3%87%E0%B2%B3%E0%B2%A8-%E0%B2%95%E0%B3%8A%E0%B2%AA%E0%B3%8D%E0%B2%AA/
mC4
ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ | Sanjevani Home ಜಿಲ್ಲೆ ಬೆಂಗಳೂರು ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ ಮಾಲೂರು.ನ೧೪:ರಾಜ್ಯ ಸರಕಾರ ಅಡುಗೆ ಕೆಲಸದವರಿಗೆ ಗುರುತಿನ ಚೀಟಿ ವಿತರಣೆ ಜೊತೆಗೆ ಅವರ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಸುರೇಶ್ ಕುಮಾರ್ ತಿಳಿಸಿದರು. ಪಟ್ಟಣದ ಮಾಲೂರು-ಬೆಂಗಳೂರು ರಸ್ತೆಯ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್, ಕರ್ನಾಟಕ ಅಡುಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಯೂನಿಯನ್ ಮಾಲೂರು ಶಾಖೆ ರಚನೆ, ಶ್ರೀದೇವಿ ಅನ್ನಪೂರ್ಣೇಶ್ವರಿ, ಭುವನೇಶ್ವರಿ ವಿಶೇಷ ಪೂಜೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಿರಿಯ ಅಡುಗೆ ಕೆಲಸಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಶೇ೮೦ರಷ್ಟು ಅಸಂಘಟಿತ ಕಾರ್ಮಿಕರು ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವರಿಗೆ ಸಾಮಾಜಿಕ ಭದ್ರತೆಯೊಜನೆ ಇಲ್ಲದಂತಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸಂಘಟಿತ ಕಾರ್ಮಿಕ ಕಾಯ್ದೆಯನ್ನು ಸಂಸತ್‌ನಲ್ಲಿ ಮಂಡಿಸಿದರು. ಪ್ರತಿರಾಜ್ಯದಲ್ಲಿಯು ಕಾರ್ಮಿಕ ಕಾಯ್ದೆಯನ್ನು ಅನುಷ್ಟಾನಗೊಳಿಸುವಂತೆ ಆದೇಶಿಸಿದ್ದರು, ಅದರಂತೆ ರಾಜ್ಯದಲ್ಲಿಯೂ ಅಸಂಘಟಿತ ಕಾರ್ಮಿಕ ಮಂಡಳಿ ಸ್ಥಾಪನೆ ಮಾಡಲಾಗಿದೆ. ಸರಕಾರದಲ್ಲಿ ರೀತಿ ನೀತಿ ರೂಪಿಸುವ ಹಂತದಲ್ಲಿ ಬೆಳೆದಿದ್ದೆವೆ. ಅಡುಗೆ ಕಾರ್ಮಿಕರು ಬೆಂಕಿಯ ಮುಂದೆ ಶ್ರಮವಹಿಸಿ ರುಚಿ ರುಚಿಯಾದ ಅಡುಗೆಗಳನ್ನು ಮಾಡಿ ಬಡಿಸುತ್ತಾರೆ. ಅಂತಹ ಅಡುಗೆ ಕೆಲಸದ ಕಾರ್ಮಿಕರಿಗೆ ಅವಗಢಸಂಭವಿಸಿದ್ದಲ್ಲಿ ಪರಿಹಾರ, ಪಿಂಚಣಿ ಸೌಲಭ್ಯವನ್ನು ಕಾರ್ಮಿಕ ಪರಿಷತ್‌ನಿಂದ ಒದಗಿಸಲಾಗುವುದು, ಗುರ್ತಿನ ಚೀಟಿಯನ್ನು ಸರಕಾರ ವಿತರಿಸುತ್ತಿದ್ದು, ಅದರ ಜೊತೆಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಅಗತ್ಯವಿದೆ. ಅಸಂಘಟಿತ ಕಾರ್ಮಿಕರ ಸಮ್ಮೇಳವನ್ನು ಹಮ್ಮಿಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು, ಇಎಸ್‌ಐ/ಪಿಎಫ್, ಕನಿಷ್ಟ ವೇತನ ನೀತಿ, ನಿಯಮ ರೂಪಿಸಲು ಸರಕಾರ ವಿಳಂಭ ನೀತಿ ಅನುಸರಿಸುತ್ತಿದೆ. ಸರಕಾರದ ವಿರುದ್ಧ ಹೋರಾಟವನ್ನು ರೂಪಿಸಲಾಗುವುದು. ಕೋವಿಡ್‌ನಿಂದ ಅಡುಗೆಯವರು ಸಂಕಷ್ಟದಲ್ಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಅವರು ನಡೆಸಿದ ಹೋರಾಟದಿಂದ ಗುರ್ತಿನ ಚೀಟಿಯನ್ನು ನೀಡಿದ್ದಾರೆ. ಅಡುಗೆಯವರ ಕೌಶಲ್ಯ ಅಭಿವೃದ್ಧಿ ಮಾಡುವ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆದು ೪೦ ವರ್ಷದೊಳಗಿನವರಿಗೆ ಅಡುಗೆ ಮಾಡುವ ಬಗ್ಗೆ ತರಬೇತಿ ನೀಡಬೇಕು. ಸ್ವಯಂ ಉದ್ಯೋಗ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಸಾಲದ ಸೌಲಭ್ಯ ಕಲ್ಪಿಸುತ್ತಿದೆ. ಆದರೆ ಅಡುಗೆ ಕಾರ್ಮಿಕರಿಗೂ ಸಾಲದ ಸೌಲಭ್ಯ ವಿಸ್ತರಣೆ ಮಾಡುವಂತೆ ಒತ್ತಾಯಿಸಿದರು. ೧ ಲಕ್ಷ ವಸತಿ ಯೋಜನೆಯನ್ನು ಸರಕಾರ ಘೋಷಣೆ ಮಾಡಿದೆ. ರಾಜ್ಯ ಸರಕಾರ ಅಡುಗೆಯವರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುವಂತೆ ಒತ್ತಾಯಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾ.ಅಧ್ಯಕ್ಷ ಎಸ್.ವಿ.ಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ಅಡುಗೆ ಕೆಲಸದವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ನ ರಾಜ್ಯಾಧ್ಯಕ್ಷ ಹೆಚ್.ವಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು, ತಾಲೂಕು ಅಧ್ಯಕ್ಷ ವೈ.ಎಸ್.ಕೃಷ್ಣಮೂರ್ತಿ, ಆಹಾರ ಸುರಕ್ಷತಾಧಿಕಾರಿ ನಾಗರಾಜಸ್ವಾಮಿ, ನಂಜುಂಡಸ್ವಾಮಿ, ರಾಮಚಂದ್ರರಾವ್, ಶ್ಯಾಮ್ ಕುಮಾರ್, ಶ್ರೀನಿವಾಸ ರಾವ್, ಪರಮೇಶ್, ಚನ್ನಯ್ಯ, ಬಾಲಾಜಿ ಸಿಂಗ್, ಶ್ರೀರಾಮ್, ಉಮೇಶ್, ಗೋಪಾಲರಾವ್, ಶ್ರೀನಿವಾಸಮೂರ್ತಿ, ಚನ್ನಕೇಶವ, ದೇವಿ ಪ್ರಸಾದ್, ನಾಗರಾಜ್, ನಾರಾಯಣ ಮೂರ್ತಿ, ವೆಂಕಟೇಶ್, ಇನ್ನಿತರರು ಇದ್ದರು.
2020/11/28 14:23:21
https://www.sanjevani.com/%E0%B2%85%E0%B2%A1%E0%B3%81%E0%B2%97%E0%B3%86-%E0%B2%95%E0%B2%BE%E0%B2%B0%E0%B3%8D%E0%B2%AE%E0%B2%BF%E0%B2%95%E0%B2%B0%E0%B2%BF%E0%B2%97%E0%B3%86-%E0%B2%AA%E0%B3%8D%E0%B2%B0%E0%B2%A4%E0%B3%8D%E0%B2%AF/
mC4
ನಾನು ರಾಜೀನಾಮೆ ಕೊಟ್ಟೇ ಇಲ್ಲಿ ಬಂದಿದ್ದೇನೆ : ಸಚಿವ ಸುಧಾಕರ್ | Karnataka Health Minister Sudhakar Reacts BJP MLA Renukacharya Statement snr Bengaluru, First Published May 6, 2021, 1:18 PM IST ಬೆಂಗಳೂರು (ಮೇ.06): ನಾನೂ ಈಗಾಗಲೇ ರಾಜೀನಾಮೆ ಕೊಟ್ಟೇ ಇಲ್ಲಿ ಬಂದಿದ್ದು, ರಾಜೀನೇಮೆ ಕೊಟ್ಟ ಕಷ್ಟವನ್ನೂ ಅನುಭವಿಸಿದ್ದೇನೆ. ಇದರಿಂದ ಸರ್ಕಾರನೂ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ವಿರುದ್ಧ ಸಚಿವ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುಧಾಕರ್, ಚಾಮರಾಜನಗರದ ಆಕ್ಸಿಜನ್ ದುರಂತ ಹಿನ್ನೆಲೆ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ಸಮಯದಲ್ಲಿ ನಾನು ರಾಜಕೀಯ ಮಾತಾಡಲ್ಲ. ನಾನು ರಾಜೀನಾಮೆ ಕೊಟ್ಟು ಬಂದಿದ್ದು ಇದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದಿದ್ದು, ತಾವೂ ಕಮಲ ಪಾಳಯ ಅಧಿಕಾರಕ್ಕೆ ಏರಲು ಕಾರಣರೆಂಬುದರ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಚಾಮರಾಜನಗರ ಆಸ್ಪತ್ರೆ ದುರಂತ: ಆಕ್ಸಿಜನ್‌ನಿಂದ ಸತ್ತಿಲ್ಲ ಎಂದು ಸರ್ಟಿಫಿಕೇಟ್ ಕೊಟ್ಟ ಸಚಿವರು .. ನಾನು ಕೊರೋನ ಯೋಧನ ರೀತಿ ಆಗಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಈ ಸಮಯದಲ್ಲಿ ‌ನಾನು ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ . ಕೊರೋನಾ ಮುಗಿಯುವವರೆಗೂ ನಾನು ಯಾವ ಬೇಸರವನ್ನು ವ್ಯಕ್ತಪಡಿಸುವುದಿಲ್ಲ. ನನಗೆ ಯಾವ ಆಸೆಯೂ ಇಲ್ಲ. ಸರ್ಕಾರ ಮತ್ತು ಪಕ್ಷ ಕೊಡೋ ಆದೇಶದಂತೆ ಕೆಲಸ ಮಾಡುತ್ತೇನೆ ಎಂದು ಸುಧಾಕರ್ ಹೇಳಿದರು. ಜನತಾ ಕರ್ಫ್ಯೂ ವಿಫಲ, ಪೂರ್ಣ ಲಾಕ್‌ಡೌನ್‌ಗೆ ಚಿಂತನೆ: ಡಾ.ಸುಧಾಕರ್ ಯಾರ ವೈಯಕ್ತಿಕ ವಿಚಾರವನ್ನು ನಾನು ಮಾತನಾಡುವುದಿಲ್ಲ. ಯಾರ ಬಗ್ಗೆಯೂ ನಾನು ಹಗುರವಾಗಿ ಮಾತಾಡುವುದಿಲ್ಲ. ರೇಣುಕಾಚಾರ್ಯ ತಮ್ಮ ರಾಜೀನಾಮೆ ಬಗ್ಗೆ ಮಾತನಾಡಿದ್ದು, ಆದರೆ ನನಗೆ ಈಗಲೂ ಅವರ ಬಗ್ಗೆ ಗೌರವ ಇದೆ ಎಂದರು. ಸಚಿವರಿಗೆ ಅಧಿಕಾರ ಹಂಚಿಕೆ ಮಾಡಿರುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಸುಧಾಕರ್ ಇದರಿಂದ ನನಗೆ ಯಾವುದೇ ಬೇಸರವಿಲ್ಲ. ನನಗೆ ಇನ್ನು ಒಳ್ಳೆಯದಾಗಿದೆ. ನನ್ನ ಕೆಲಸಕ್ಕೆ ಹೆಚ್ಚು ಬಲ ಸಿಕ್ಕಂತಾಗಿದೆ. ಹಿರಿಯ ಸಚಿವರುಗಳು ಹೆಚ್ಚು ಸಹಕಾರ ಕೊಡುತ್ತಿದ್ದಾರೆ. ಅವರ ಕೆಲಸ ಉತ್ತಮವಾಗಿ ಮಾಡುತ್ತಿದ್ದಾರೆ. ಎರಡು‌-ಮೂರು ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನ ಸರಿ ಮಾಡುತ್ತಾರೆ ಎಂದರು.
2021/06/20 18:06:23
https://kannada.asianetnews.com/state/karnataka-health-minister-sudhakar-reacts-bjp-mla-renukacharya-statement-snr-qsodpn
mC4
ಸದಾಶಿವ್ ಅಮೃಪುರ್‍ಕರ್ ನಿಧನಕ್ಕೆ ಗ್ರೇಗರಿ ಡಿ'ಅಲ್ಮೇಡಾ ಸಂತಾಪ | KANNADIGA WORLD Home ಕನ್ನಡ ವಾರ್ತೆಗಳು ಕರಾವಳಿ ಸದಾಶಿವ್ ಅಮೃಪುರ್‍ಕರ್ ನಿಧನಕ್ಕೆ ಗ್ರೇಗರಿ ಡಿ'ಅಲ್ಮೇಡಾ ಸಂತಾಪ Posted By: Sathish KapikadPosted date: November 03, 2014 In: ಕರಾವಳಿ, ಮುಂಬೈ ಮುಂಬಯಿ, ಅ.03 ಚಲನಚಿತ್ರಗಳಲ್ಲಿ ಬಹುತೇಕವಾಗಿ ಖಳನಾಯಕನ ಪಾತ್ರಗಳನ್ನೇ ನಿರ್ವಹಿಸಿ ಬಾಲಿವುಡ್‌ನಲ್ಲಿ ತನ್ನದೇ ಆದ ಪ್ರತಿಷ್ಠೆಯನ್ನು ಸಿದ್ಧಿಗೊಳಿಸಿ ಇಂದಿಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದ ಸದಾ ಸದಾಶಿವ್ ಅಮೃಪುರ್‍ಕರ್ ನಿಧನಕ್ಕೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಮೂಲದ ಮುಂಬಯಿ ಅಲ್ಲಿನ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಗ್ರೇಗರಿ ಎಲ್. ಡಿ'ಅಲ್ಮೇಡಾ ಸಂತಾಪ ಸೂಚಿಸಿದ್ದಾರೆ. ವಿಲನ್ ಪಾತ್ರಗಳ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವಂತೆ ಇತರ ಭಾಷೆಗಳಲ್ಲೂ ನಟಿಸಿ ಚಿತ್ರರಸಿಕರ ಪಾಲಿನ ಅತ್ತ್ಯುತ್ತಮ ನಟ ಅಮೃಪುರ್‍ಕರ್ ತನ್ನ ನಿರ್ಮಾಪಕತ್ವ ಮತ್ತು ಚಲನಚಿತ್ರ ನಿರ್ಮಾಪಕಿ ಶ್ರೀಮತಿ ಲೀನಾ ಜಿ.ಡಿ'ಆಲ್ಮೇಡಾ ಅವರ ಸಹ ನಿರ್ಮಾಪಕತ್ವದಲ್ಲಿ ಮರಾಠಿ ಭಾಷೆಯಲ್ಲಿ ನಿರ್ಮಿತ ಮರಾಠಿ ಚಲನಚಿತ್ರ `ಒವಲಿತೆ ಭವುರಾಯ'ವನ್ನು ಯಶಸ್ವೀಯಾಗಿ ಚಿತ್ರೀಕರಿಸುವ ಲ್ಲೂ ಮತ್ತು ತನ್ನ ಸುಪುತ್ರಿ ನಟಿ ಸ್ಮೀತಾ ಜಿ.ಡಿ'ಅಲ್ಮೇಡಾ ಅವರನ್ನು ಚಿತ್ರದ ನಾಯಕಿ ನಟಿಯಾಗಿಸಿ ಆಯ್ಕೆಗೊಳಿಸಿದ್ದ ಅಮೃಪುರ್‍ಕರ್ ತುಳು-ಕನ್ನಡಿಗರಲ್ಲಿ ಅಪಾರವಾದ ಅಭಿಮಾನ ಇರಿಸಿದ್ದರು. ತನ್ನ ನಿರ್ಮಾಪಕತ್ವದ `ಹಸ್ರೀ' ಚಲನಚಿತ್ರಕ್ಕೆ ಅತ್ತ್ಯುತ್ತಮ ನಿರ್ಮಾಪಕ, ಶ್ರೇಷ್ಠ ಫಿಲ್ಮ್ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ಪ್ರತಿಷ್ಠಿತ ಐದು ಪುರಸ್ಕಾರಗಳು ಲಭಿಸುವಸಿದ್ದು ಅಮೃಪುರ್‍ಕರ್ ಮಾರ್ಗದರ್ಶನ ನಮಗೆ ಪ್ರೇರಣೆಯಾಗಿತ್ತು. ಸಡಕ್, ಹಿಸ್ಕ್, ಅರ್ಧಸತ್ಯ, ಹಮ್ ಸಾಥ್ ಸಾಥ್ ಹೇ ಸೇರಿದಂತೆ ಅನೇಕ ಚಿತ್ರಗಳ ನಟನೆಯಿಂದ ಕೋಟ್ಯಾಂತರ ಚಿತ್ರಪ್ರೇಕ್ಷಕರ ಮನ, ಮನೆ ಮಾತಾಗಿರುವ ಅಮೃಪುರ್‍ಕರ್ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ವಾರವಷ್ಟೇ ಅಂಧೇರಿ ಪಶ್ಚಿಮದ ಕೋಕಿಲಾ ಬೆನ್ ಧೀರೂಭಾಯಿ ಅಂಬಾನಿ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು ಇಂದು ಬೆಳಿಗ್ಗೆ ನಿಧನ ಹೊಂದಿದ್ದು ನಮಗೆ ದುಃಖ ತಂದಿದೆ ಎಂದೂ ಗ್ರೇಗರಿ ಡಿ'ಅಲ್ಮೇಡಾ ತಿಳಿಸಿದ್ದಾರೆ. ಮೃತರ ನಿಧನಕ್ಕೆ ನಿರ್ಮಾಪಕಿ ಶ್ರೀಮತಿ ಲೀನಾ ಜಿ. ಡಿ'ಅಲ್ಮೇಡಾ, ನಟಿ ಸ್ಮೀತಾ ಜಿ.ಡಿ'ಅಲ್ಮೇಡಾ ಅವರೂ ಸಂತಾಪ ಸೂಚಿದ್ದಾರೆ. ಗ್ರೇಗರಿ ಡಿ'ಅಲ್ಮೇಡಾ ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
2021/07/24 23:35:31
https://www.kannadigaworld.com/kannada/karavali-kn/113057.html
mC4
'ತುರ್ತು ಸಹಾಯಕ್ಕಾಗಿ 100 ಅನ್ನು ಡಯಲ್ ಮಾಡಿದರೆ ಪ್ರತಿಕ್ರಿಯೆ ಸಿಗುತ್ತಿಲ್ಲ' – ಮಹಿಳಾ ಕಾರ್ಯಕರ್ತೆ ಸಂಧ್ಯಾ ರಾಣಿ | ವಿಶ್ವ ಕನ್ನಡಿಗ ನ್ಯೂಸ್ ಹ್ಯೂಮಾನಿಟಿ ಫೌಂಡೇಷನ್ ನಿಂದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನ 54 mins ago Home Editor Post 'ತುರ್ತು ಸಹಾಯಕ್ಕಾಗಿ 100 ಅನ್ನು ಡಯಲ್ ಮಾಡಿದರೆ ಪ್ರತಿಕ್ರಿಯೆ ಸಿಗುತ್ತಿಲ್ಲ' – ಮಹಿಳಾ ಕಾರ್ಯಕರ್ತೆ ಸಂಧ್ಯಾ ರಾಣಿ Posted By: ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್)on: November 30, 2019 In: Editor Post, ತೆಲಂಗಾಣ, ರಾಷ್ಟ್ರೀಯ ಸುದ್ದಿಗಳು ಹೈದರಾಬಾದ್ (ತೆಲಂಗಾಣ)(ವಿಶ್ವಕನ್ನಡಿಗ ನ್ಯೂಸ್): ಸಹಾಯಕ್ಕಾಗಿ ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಭಾರತದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ – 100 ಅನ್ನು ಡಯಲ್ ಮಾಡುತ್ತಾರೆ, ಆದರೆ ಹಲವು ಬಾರಿ ಉತ್ತರ ಸಿಗುತ್ತಿಲ್ಲ ಎಂದು ಮಹಿಳಾ ಕಾರ್ಯಕರ್ತೆ ಸಂಧ್ಯಾ ರಾಣಿ ಶನಿವಾರ ಹೇಳಿದ್ದಾರೆ. ವೈದ್ಯೆ ಪ್ರೀಯಾಂಕ ರೆಡ್ಡಿಯವರ ಸುಟ್ಟ ಶವವು ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯ ಶಡ್ನಗರ ಹೊರವಲಯದಲ್ಲಿ ಗುರುವಾರ ಪತ್ತೆಯಾದ, ವಿಷಯದಲ್ಲಿ ಹಲವರು ಪ್ರತಿಕ್ರಯಿಸಿದರು. "ಅವಳು ಪೊಲೀಸರನ್ನು ಕರೆದಿದ್ದರೆ, ಅವಳನ್ನು ಉಳಿಸಬಹುದಿತ್ತು.- ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ" ಪಶುವೈದ್ಯಕೀಯ ವೈದ್ಯರು ಪೊಲೀಸರನ್ನು ಕರೆಸಬೇಕಾಗಿತ್ತು ಎಂಬ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಣಿ ಎಎನ್‌ಐಗೆ ಹೀಗೆ ಹೇಳಿದರು: ತುರ್ತು ಸಹಾಯಕ್ಕಾಗಿ 100 ಅನ್ನು ಡಯಲ್ ಮಾಡಿದ ಆದರೆ ಪ್ರತಿಕ್ರಿಯೆಯನ್ನು ಪಡೆಯದ ಅನೇಕ ಮಹಿಳೆಯರು ಇದ್ದಾರೆ. ಏಕೆ ಕ್ರಮ ಕೈಗೊಂಡಿಲ್ಲ ತಪ್ಪಿತಸ್ಥರ ವಿರುದ್ಧ? " "ಈ ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ನಮಗೆ ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ ಮಹಿಳಾ ಪಶುವೈದ್ಯಕೀಯ ವೈದ್ಯರ ಕ್ರೂರ ಹತ್ಯೆಯ ನಂತರ, ಸಾಕಷ್ಟು ಆಪಾದನೆ ನಡೆಯುತ್ತಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಗೃಹ ಸಚಿವ ಅಲಿ ಶುಕ್ರವಾರ ಎಎನ್‌ಐಗೆ ಹೀಗೆ ಹೇಳಿದ್ದಾರೆ: "ಈ ಘಟನೆಯಿಂದ ನಾವು ದುಃಖಿತರಾಗಿದ್ದೇವೆ. ತೆಲಂಗಾಣ ಪೊಲೀಸರು ಎಚ್ಚರಿಕೆ ಮತ್ತು ಅಪರಾಧವನ್ನು ನಿಯಂತ್ರಿಸುವಲ್ಲಿ ಸಮರ್ಥರಾಗಿದ್ದಾರೆ. ಶಿಕ್ಷಣ ಪಡೆದಿದ್ದರೂ ಸಹ, ಅವಳು ತನ್ನ ಸಹೋದರಿಯನ್ನು ಕರೆದು ಪೊಲೀಸ್ ಸಹಾಯವಾಣಿ ಸಂಖ್ಯೆಯನ್ನು ಡಯಲ್ ಮಾಡದಿರುವುದು ದುರದೃಷ್ಟಕರ – 100. ಅವಳು ಪೊಲೀಸರನ್ನು ಕರೆದಿದ್ದರೆ, ಅವಳನ್ನು ಉಳಿಸಬಹುದಿತ್ತು. ಮಹಿಳೆಯರ ಮೇಲಿನ ಅಪರಾಧ ವರದಿಯಾದಾಗಲೆಲ್ಲಾ ಜನರು ಬಲಿಪಶುವನ್ನು ಒಂದಲ್ಲ ಒಂದು ರೀತಿಯಲ್ಲಿ ದೂಷಿಸಲು ಪ್ರಾರಂಭಿಸುತ್ತಾರೆ ಎಂದು ಅವರು ಹೇಳಿದರು. "ಮಹಿಳೆಯರು ರಾತ್ರಿಯಲ್ಲಿ ಏಕೆ ಹೊರಗೆ ಹೋಗುತ್ತಿದ್ದಾರೆ? ಅವರು ಬೈಕುಗಳನ್ನು ಏಕೆ ಓಡಿಸುತ್ತಿದ್ದಾರೆ? ಎಲ್ಲಾ ರೀತಿಯ ಪ್ರಶ್ನೆಗಳು ಬರುತ್ತವೆ" ಎಂದು ಅವರು ಹೇಳಿದರು.
2020/09/19 05:52:16
http://vknews.in/391702/
mC4
ಟಿ20 ವಿಶ್ವಕಪ್: ಅಫ್ಘಾನಿಸ್ತಾನ ಭಾರತವನ್ನು ಸೋಲಿಸಬಹುದು: ಮೈಕಲ್ ವಾನ್ ಎಚ್ಚರಿಕೆ | T20 World Cup 2021: Michael Vaughan warns Team India for match against Afghanistan - kannada MyKhel » ಟಿ20 ವಿಶ್ವಕಪ್: ಅಫ್ಘಾನಿಸ್ತಾನ ಭಾರತವನ್ನು ಸೋಲಿಸಬಹುದು: ಮೈಕಲ್ ವಾನ್ ಎಚ್ಚರಿಕೆ Updated: Wednesday, November 3, 2021, 22:19 [IST] ಟಿ20 ವಿಶ್ವಕಪ್‌ನಲ್ಲಿ ಭಾರತ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ನಾಯಕ ಮೈಕಲ್ ವಾನ್ ಟೀಮ್ ಇಂಡಿಯಾಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಭಾರತ ಎಂದಿನಂತೆ ಸುರಕ್ಷಿತವಾಗಿ ಆಡುವ ಪ್ರಯತ್ನ ನಡೆಸಿದರೆ ಅಫ್ಘಾನಿಸ್ತಾನ ಭಾರತವನ್ನು ಮಣಿಸಲಿದೆ ಎಂದಿದ್ದಾರೆ ಮೈಕಲ್ ವಾನ್. ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಮೈಕಲ್ ವಾನ್ ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದ್ದರೆ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಬೇಕಿದೆ ಎಂದಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಉತ್ತಮ ಗೆಲುವು ಸಾಧಿಸಲು ಸಾಧ್ಯವಾದರೆ ಭಾರತ ಈ ವಿಶ್ವಕಪ್‌ನ ಹೋರಾಟದಲ್ಲಿ ಮುಂದುವರಿಯಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಭಾರತಕ್ಕೆ ಇದು ನಿರ್ಣಾಯಕ ದಿನವಾಗಿದೆ. ಭಾರತ ಒಂದು ವೇಳೆ ಸುರಕ್ಷಿತ ರೀತಿಯಲ್ಲಿ ಆಡುವ ಪ್ರಯತ್ನ ನಡೆಸಿದರೆ ಅಫ್ಘಾನಿಸ್ತಾನ ಭಾರತವನ್ನು ಮಣಿಸಲಿದೆ. ಮುನ್ನುಗ್ಗಿ ಮತ್ತು ಆಕ್ರಮಣಕಾರಿಯಾಗಿ ಆಡಿ, ಹಾಗಾದಲ್ಲಿ ಮಾತ್ರ ಗೆಲುವು ಸಾಧಿಸಿ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯ" ಎಂದು ಮೈಕಲ್ ವಾನ್ ಪಂದ್ಯಕ್ಕೂ ಮುನ್ನ ಟ್ವೀಟ್ ಮಾಡಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಭಾರತ ಈಗ ಅಕ್ಷರಶಃ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದೆ. ಪಾಕಿಸ್ತಾನ ಹಾಘೂ ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಎರಡು ಪಂದ್ಯಗಳನ್ನು ಸೋತ ಕಾರಣದಿಂದಾಗಿ ಭಾರತ ಸೆಮಿ ಫೈನಲ್ ಹಾದಿಯನ್ನು ದುರ್ಗಮಗೊಳಸಿದೆ. ಹೀಗಾಗಿ ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಗೆಲುವು ಬಹಳ ಅಗತ್ಯವಾಗಿದೆ. ವಿಶ್ವದರ್ಜೆಯ ಸ್ಪಿನ್ನರ್‌ಗಳನ್ನು ಹೊಂದಿರುವ ಅಫ್ಘಾನಿಸ್ತಾನ ಎದುರಾಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಆತ್ಮ ವಿಶ್ವಾಸವನ್ನು ಹೊಂದಿದೆ. ಭಾರತ ಮುಂದಿನ ಹಂತಕ್ಕೇರಬೇಕಾದರೆ ಈಗ ಉಳಿದಿರುವ ಮೂರು ಪಂದ್ಯಗಳಲ್ಲಿಯೂ ಉತ್ತಮ ಅಂತರದಿಂದ ಗೆಲುವು ಸಾಧಿಸಬೇಕಿದೆ. ಅಲ್ಲದೆ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ಮುಂಬರುವ ಒಂದೊಂದು ಪಂದ್ಯಗಳನ್ನು ಸೋಲಲೇ ಬೇಕಿದೆ. ಹಾಗಾದಲ್ಲಿ ಮಾತ್ರವೇ ಭಾರತದ ಸೆಮಿಫೈನಲ್ ಕನಸು ಜೀವಂತವಾಗಿಳಿಯಲು ಸಾಧ್ಯ. ಇನ್ನು ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತ ಅಫ್ಘಾನಿಸ್ತಾನದ ವಿರುದ್ಧ ಸೋತ ಉದಾಹರಣೆಯಿಲ್ಲ. ಇದಕ್ಕೂ ಮುನ್ನ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಎರಡು ಬಾರಿ ಮುಖಾಮುಖಿಯಾಗಿತ್ತು ಈ ಎರಡು ಸಂದರ್ಭಗಳಲ್ಲಿಯೂ ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ. Read more about: t20 world cup 2021 michael vaughan team india mykhel original ಟೀಮ್ ಇಂಡಿಯಾ ಮೈಕಲ್ ವಾನ್ ಟಿ20 ವಿಶ್ವಕಪ್ 2021
2021/11/28 21:05:06
https://kannada.mykhel.com/cricket/t20-world-cup-2021-michael-vaughan-warns-team-india-for-match-against-afghanistan-020963.html
mC4
ಅಗ್ನಿಪಥ' ಪ್ರತಿಭಟನೆ: ಸಿಕಂದರಾಬಾದ್ ಹಿಂಸಾಚಾರದ 'ಮಾಸ್ಟರ್ ಮೈಂಡ್' ಬಂಧನ - ಕನ್ನಡಿ ನ್ಯೂಸ್ - Kannadi News ಅಗ್ನಿಪಥ' ಪ್ರತಿಭಟನೆ: ಸಿಕಂದರಾಬಾದ್ ಹಿಂಸಾಚಾರದ 'ಮಾಸ್ಟರ್ ಮೈಂಡ್' ಬಂಧನ ಸಿಕಂದರಾಬಾದ್: 'ಅಗ್ನಿಪಥ' ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿದ ಹಿಂಸಾಚಾರದ ಹಿಂದಿನ ಮಾಸ್ಟರ್‌ಮೈಂಡ್ ಆವುಲಾ ಸುಬ್ಬಾ ರಾವ್ ಎಂದು ಹೇಳಲಾಗಿದೆ, ಹಿಂಸಾಚಾರದ ವೇಳೆ ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಒಬ್ಬರು ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನಸಮೂಹವನ್ನು ಪ್ರೇರೇಪಿಸಲು ಅವರು ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದಾರೆ ಮತ್ತು ಸಿಕಂದರಾಬಾದ್‌ನಲ್ಲಿ ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ವರದಿಯಾಗಿದೆ. ಆವೂಲ್‌ ಸುಬ್ಬರಾವ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಗೆ ಸೇರಿದವನು ಮತ್ತು ಕಳೆದ ಕೆಲವು ವರ್ಷಗಳಿಂದ ನರಸರಾವ್‌ಪೇಟೆ, ಹೈದರಾಬಾದ್ ಸೇರಿದಂತೆ ಕನಿಷ್ಠ ಏಳು ಸ್ಥಳಗಳಲ್ಲಿ ಸೇನಾ ಆಕಾಂಕ್ಷಿಗಳಿಗಾಗಿ ತರಬೇತಿ ಅಕಾಡೆಮಿಯನ್ನು ನಡೆಸುತ್ತಿದ್ದಾನೆ. ಶನಿವಾರ ವಿಚಾರಣೆಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಶುಕ್ರವಾರ ಸಾವಿರಾರು ಪ್ರತಿಭಟನಾಕಾರರು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ರೈಲುಗಳ ಮೇಲೆ ದಾಳಿ ಮಾಡಿ, ಕೋಚ್‌ಗಳನ್ನು ಸುಟ್ಟುಹಾಕಿ ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ್ದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದಾಗ ವಾರಂಗಲ್‌ನ 19 ವರ್ಷದ ರಾಜೇಶ್ ಎಂಬವರು ಮೃತಪಟ್ಟಿದ್ದರು ಮತ್ತು ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದರು. ಅದೋನಿ, ಕರ್ನೂಲ್, ಗುಂಟೂರು, ನೆಲ್ಲೂರು, ಅಮದಾಲವಲಸ, ವಿಶಾಖಪಟ್ಟಣ ಮತ್ತು ಯಲಮಂಚಿಲಿಯಿಂದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕು ವರ್ಷಗಳ ಅಲ್ಪಾವಧಿ ಒಪ್ಪಂದದ ಆಧಾರದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಸೈನಿಕರ ನೇಮಕಾತಿಗಾಗಿ ಸರ್ಕಾರ ಮಂಗಳವಾರ 'ಅಗ್ನಿಪಥ' ಯೋಜನೆಯನ್ನು ಅನಾವರಣಗೊಳಿಸಿದ ನಂತರ ಹಲವಾರು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿತು. ಯೋಜನೆಯಡಿಯಲ್ಲಿ, 17.5 ವರ್ಷದಿಂದ 21 ವರ್ಷ ವಯಸ್ಸಿನ ಜನರನ್ನು ನಾಲ್ಕು ವರ್ಷಗಳ ಅವಧಿಗೆ ಸೇವೆಗಳಿಗೆ ಸೇರಿಸಲಾಗುತ್ತದೆ. ಈ ಅವಧಿಯಲ್ಲಿ, ಅವರಿಗೆ ₹ 30,000-40,000 ತಿಂಗಳ ವೇತನ ಹಾಗೂ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ. ನಂತರ ಹೆಚ್ಚಿನವರಿಗೆ ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಲ್ಲದೆ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ.
2022/06/28 19:27:58
https://kannadi.news/2022/06/19/%E0%B2%85%E0%B2%97%E0%B3%8D%E0%B2%A8%E0%B2%BF%E0%B2%AA%E0%B2%A5-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86-%E0%B2%B8%E0%B2%BF%E0%B2%95%E0%B2%82%E0%B2%A6/
mC4
ಎಎಪಿ ಶಾಸಕ ಸೋಮನಾಥ ಭಾರ್ತಿ ಮೇಲಿನ 2 ವರ್ಷದ ಜೈಲು ಶಿಕ್ಷೆ ರದ್ದು- Kannada Prabha ಸೋಮನಾಥ್ ಭಾರ್ತಿ (ಸಂಗ್ರಹ ಚಿತ್ರ) ನವದೆಹಲಿ: ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 2 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಆಪ್ ಶಾಸಕ ಸೋಮನಾಥ ಭಾರ್ತಿ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಹೌದು.. ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಎಎಪಿ ಶಾಸಕ ಸೋಮನಾಥ ಭಾರ್ತಿ ಅವರ ಅಪರಾಧ ಮತ್ತು 2 ವರ್ಷಗಳ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಬುಧವಾರ ಅಮಾನತುಗೊಳಿಸಿದೆ. ಹಲ್ಲೆ ಪ್ರಕರಣದಲ್ಲಿ ಶಿಕ್ಷೆಯನ್ನು ದೆಹಲಿ ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿದ್ದ ನಂತರ ಸೋಮನಾಥ್ ಭಾರ್ತಿ ಇಂದು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕೈಟ್ ಅವರು, ಆದೇಶವನ್ನು ನಿರ್ದೇಶಿಸುವಾಗ, ಸೋಮನಾಥ್ ಭಾರ್ತಿ ಅವರ ಅಪರಾಧ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ದೆಹಲಿ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದ್ದಾರೆ. ಹೈಕೋರ್ಟ್‌ನ ಮುಂದೆ ಅವರು ಸಲ್ಲಿಸಿದ್ದ ಮನವಿಯಲ್ಲಿ, ಪರಿಷ್ಕರಣೆ ಅರ್ಜಿಯ ಬಾಕಿ ಇರುವಾಗ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಲು ಅವರು ಕೋರಿದ್ದರು. 2016 ರಲ್ಲಿ ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷ ಜನವರಿಯಲ್ಲಿ ಸೋಮನಾಥ್ ಭಾರ್ತಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದ ನಂತರ ಸೋಮನಾಥ್ ಭಾರ್ತಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
2021/05/11 22:24:19
https://www.kannadaprabha.com/nation/2021/mar/24/aap-mla-somnath-bhartis-2-year-jail-term-in-assault-case-suspended-442293.html
mC4
ಕೊರೊನಾ ಭಯದ ನಡುವೆಯೂ ಸಿನಿಮಾ ರಿಲೀಸ್​ ಮಾಡಿ ಗೆದ್ದ 'ಗ್ರೂಫಿ' - ಸವಿ ಕನ್ನಡ ನ್ಯೂಸ್ ಕೊರೊನಾ ಎರಡನೇ ಅಲೆಯ ನಂತ್ರ ಸ್ಟಾರ್​ಗಳ ಸಿನಿಮಾಗಳೇ ತೆರೆ ಮೇಲೆ ಬರೋಕೆ ಮನಸ್ಸು ಮಾಡಲಿಲ್ಲ.. ಇಂತಹ ಟೈಮ್​ನಲ್ಲಿ ಧೈರ್ಯ ಮಾಡಿ ಥಿಯೇಟರ್​ ಅಂಗಳಕ್ಕೆ ಬಂದ ಸಿನಿಮಾ ಗ್ರೂಫಿ.. ಹೊಸಬರೇ ಮಾಡಿರುವ ಈ ಚಿತ್ರ ಕಳೆದ ಆಗಸ್ಟ್​ 25ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್​ ಆಗಿತ್ತು.. ನಿಧಾನವಾಗಿ ಪ್ರೇಕ್ಷಕರ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಗ್ರೂಫಿ ಚಿತ್ರ ಯಶಸ್ವಿ 25 ದಿನಗಳ ಪೂರೈಸಿದೆ.. ಈ ಸಂಭ್ರಮವನ್ನು ಗ್ರೂಫಿ ಚಿತ್ರತಂಡ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.. ಸೆಲ್ಫಿ ಯಾಕೆ ಗ್ರೂಫಿ ಒಕೆ ಅಂತ ಚಿತ್ರಪ್ರೇಮಿಗಳ ಅಂಗಳಕ್ಕೆ ಬಂದ ಸಿನಿಮಾ ಗ್ರೂಫಿ.. ಮ್ಯಾಜಿಕಲ್​ ಕಂಪೋಸರ್​ ಅರ್ಜುನ್​ ಜನ್ಯ ಬಳಗದ ಈ ಸಿನಿಮಾ ಈಗ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.. ಕಂಟೆಂಟ್​ ಚೆನ್ನಾಗಿದ್ರೆ ಕನ್ನಡ ಸಿನಿ ಪ್ರೇಕ್ಷಕರು ಹೀರೋ ಯಾರು ಅಂತ ನೋಡದೆ ಕೈ ಹಿಡಿತಾರೆ.. ಅದೇ ರೀತಿ ಹೊಸಬರ ವಿಭಿನ್ನ ಪ್ರಯತ್ನದ ಗ್ರೂಫಿ ಚಿತ್ರವನ್ನು ಕನ್ನಡಿಗರು ಕೈ ಹಿಡಿದು 25 ದಿನಗಳ ವರೆಗೆ ಕರೆದು ಕೊಂಡು ಬಂದಿದ್ದಾರೆ. ಇದನ್ನೂ ಓದಿ:ಸಖತ್​​ ಸ್ಲಿಮ್​​ ಆಗಿರುವ ನಟಿ ರಮ್ಯಾ ಫೋಟೋಗೆ ಫ್ಯಾನ್ಸ್​ ಫುಲ್​​ ಫಿದಾ.. ಹೊಸಬರ ಚಿತ್ರವಾದ್ರು ಮೆಚ್ಚಿ ಹರಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಸಲುವಾಗಿ ಚಿತ್ರತಂಡ ಸುದ್ದಿ ಗೋಷ್ಠಿ ನಡೆಸಿ, 25 ದಿನಗಳ ಸಂತಸವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಲಿಯಾ ಗ್ಲೋಬಲ್​ ಮೀಡಿಯಾ ಹೌಸ್​ನ ನಿರ್ಮಾಪಕ ಕೆ.ಜಿ ಸ್ವಾಮಿ ಹೊಸಬರ ಚಿತ್ರವಾದ್ರು ಅದಕ್ಕೆ ಭರ್ಜರಿ ಪ್ರಚಾರ ಮಾಡಿ.ಗ್ರೂಫಿ ಚಿತ್ರವನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ಸಕ್ಸಸ್ ಆಗಿದ್ದಾರೆ.. ಗ್ರೂಫಿ ಚಿತ್ರ ಟ್ರೈಲರ್​ ಮತ್ತು ಹಾಡುಗಳಿಂದಲ್ಲೇ ಸಿನಿರಸಿಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.. ಅದ್ರೆ ಕೊರೊನ ಕಾರಣ ಚಿತ್ರದ ಕಲೆಕ್ಷನ್ ಕೊಂಚ ಡಲ್​ ಇದ್ರು.. ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆಯಂತೆ.. ಈಗ ಕೊರೊನ ಕಮ್ಮಿ ಆಗ್ತಿದ್ದು ಚಿತ್ರವನ್ನು ರಾಜ್ಯದ ಎಲ್ಲಾ ಜನರಿಗೂ ತಲುಪಿಸುವ ಪ್ರಯತ್ನದಲ್ಲಿದೆ ಚಿತ್ರತಂಡ.. ಅದೇನೆ ಇರಲಿ ಜನರು ಮನೆಯಿಂದ ಹೊರ ಬರಲು ಹೆದರುವಂತ ಸಮಯದಲ್ಲಿ., ಸಿನಿಮಾವನ್ನು ರಿಲೀಸ್​ ಮಾಡಿ. ಒಂದು ಮಟ್ಟಕ್ಕೆ ಗೆಲುವು ಕಂಡಿರುವ ಗ್ರೂಫಿ ಚಿತ್ರವನ್ನು, ಮುಂದಿನ ದಿನಗಳಲ್ಲಿ ಪ್ರೇಕ್ಷಕ ಪ್ರಭುಗಳು ಕೈ ಹಿಡಿದು. 50 ದಿನಗಳತ್ತ ಕರೆದೋಯ್ತಾರ ಕಾದು ನೋಡಬೆಕು..
2021/09/25 19:06:52
https://savikannada.in/news/180397/
mC4
ಪರಿಸರ ಸಂರಕ್ಷಣೆಗೆ ಜೈವಿಕ ಕೃಷಿ | Udayavani – ಉದಯವಾಣಿ Thursday, 13 May 2021 | UPDATED: 04:45 AM IST ಪ್ರಯಾಣ ನಿರ್ಬಂಧ : ಸಿಂಗಾಪುರ್‌ ಬ್ಯಾಡ್ಮಿಂಟನ್‌ ರದ್ದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ನ್ಯೂಜಿಲ್ಯಾಂಡ್‌ ಕೀಪರ್‌ ಬ್ರಾಡ್ಲಿ ವಾಟ್ಲಿಂಗ್ ನಿವೃತ್ತಿ ಚೋಪ್ರಾ ರಚಿಸಿದ ಟೀಮ್‌ ಇಂಡಿಯಾ ತಂಡಕ್ಕೆ ಶಿಖರ್‌ ಧವನ್‌ ನಾಯಕ ಆರೋಪಿತ ವ್ಯಕ್ತಿಯನ್ನು ನ್ಯಾಯಾಂಗ ಬಂಧನದಡಿ ಗೃಹ ಬಂಧನಕ್ಕೆ ಅವಕಾಶ : ಸುಪ್ರೀಂಕೋರ್ಟ್‌ ರಾಜ್ಯದಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ : ಅರೋಗ್ಯ ಇಲಾಖೆ ಸೋಂಕು ನಿವಾರಣೆಗೆ ಯಜ್ಞ ಮಾಡಿ : ಮಧ್ಯಪ್ರದೇಶ ಸಂಸ್ಕೃತಿ ಸಚಿವೆಯ ಹೇಳಿಕೆ ಶಿವಮೊಗ್ಗ : ಕೋವಿಡ್ ಸೋಂಕಿಗೆ ಜಿಲ್ಲೆಯಲ್ಲಿ ಒಂದೇ ದಿನ 26 ಮಂದಿ ಸಾವು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಗೆ ಕೋವಿಡ್ ಪಾಸಿಟಿವ್ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರ ವಿಫಲ: ಕಾಂಗ್ರೆಸ್ ನಾಯಕರ ಪ್ರತಿಭಟನೆ ಕೋವಿಡ್-19 ಸೋಂಕಿಗೆ ಮಾಜಿ ಕ್ರಿಕೆಟಿಗ ಆರ್.ಪಿ.ಸಿಂಗ್ ತಂದೆ ನಿಧನ ಬೆಡ್ ಕೊರತೆ ನೀಗಿಸಲು 3200 ಸ್ಟೆಪ್ ಡೌನ್ ಆಸ್ಪತ್ರೆ ನಿರ್ಮಾಣ: ಬಸವರಾಜ ಬೊಮ್ಮಾಯಿ ಎರಡನೇ ಡೋಸ್‌ ಪಡೆಯುವವರಿಗೆ ಲಸಿಕೆ ಕೊರತೆ ಉಂಟಾಗುತ್ತಿಲ್ಲ: ಅಶ್ವಥ್ ನಾರಾಯಣ ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ., 1 ಲಕ್ಷ N-95 ಮಾಸ್ಕ್ ನೀಡಿದ ಅಪೆಕ್ಸ್ ಬ್ಯಾಂಕ್ ಸ್ಟಂಪ್ ಹಿಂದಿನಿಂದ ಧೋನಿ ಸಲಹೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಕುಲದೀಪ್ ಯಾದವ್ ಅಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಯೂನಿವರ್ಸ್ ಬಾಸ್..! ಸಿಎಸ್ ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿಗೆ ಮತ್ತೊಮ್ಮೆ ಕೋವಿಡ್ ಪಾಸಿಟಿವ್ ರಾಜಕೀಯ ಎಂಟ್ರಿ ಬಗ್ಗೆ ನಟ ಸೋನು ಸೂದ್ ಏನು ಹೇಳಿದ್ರು ಗೊತ್ತಾ ? ಮತ್ತೆ ಕಿರುತೆರೆಗೆ ಮರಳಿದ ವಿಜಯ್ ಸೇತುಪತಿ 'ಚೆನ್ನಾಗಿದ್ದೇನೆ,ನನಗೇನು ಆಗಿಲ್ಲ': ಸಾವಿನ ವದಂತಿಗೆ 'ಶಕ್ತಿಮಾನ್' ನಟ ಮುಕೇಶ್ ಆಕ್ರೋಶ ದರ್ಶನ್ ಫಾರ್ಮ್ ಹೌಸ್ ಗೆ ಹೊಸ ಅತಿಥಿಯಾಗಿ ಬಂದ ಗಿಣಿರಾಮ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌: ನಲಸೊಪರದಲ್ಲಿ ರಕ್ತದಾನ ಶಿಬಿರ ಮೀರಾರೋಡ್‌ ಶ್ರೀ ಶನೀಶ್ವರ ಮಂದಿರದಲ್ಲಿ ವಿಶೇಷ ಮಹಾಪೂಜೆ, ಗೌರವಾರ್ಪಣೆ ಚೋಪ್ರಾ ರಚಿಸಿದ ಟೀಮ್‌ ಇಂಡಿಯಾ ತಂಡಕ್ಕೆ ಶಿಖರ್‌ ಧವನ್‌ ನಾಯಕ ರಾಜ್ಯದಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ : ಅರೋಗ್ಯ ಇಲಾಖೆ ದಾವಣಗೆರೆ ಜಿಲ್ಲೆಯಲ್ಲಿ 362 ಹೊಸ ಕೋವಿಡ್ ಪ್ರಕರಣ ಪತ್ತೆ, 326 ಮಂದಿ ಗುಣಮುಖ ಶಿವಮೊಗ್ಗ : ಕೋವಿಡ್ ಸೋಂಕಿಗೆ ಜಿಲ್ಲೆಯಲ್ಲಿ ಒಂದೇ ದಿನ 26 ಮಂದಿ ಸಾವು ಚುನಾವಣಾ ಕರ್ತವ್ಯ ವೇಳೆ ಅಸುನೀಗಿದವರಿಗೆ 1ಕೋಟಿ ಪರಿಹಾರ ನೀಡಿ : ಅಲಹಾಬಾದ್‌ ಹೈಕೋರ್ಟ್‌ ಆಕ್ಸಿಜನ್ ವಿತರಣೆಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಿಎಂ ಸೂಚನೆ ಲಸಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಜನರಿಗೆ ದ್ರೋಹವೆಸಗಿದೆ : ಸಿದ್ದು ಆಕ್ರೋಶ ಮಂಡ್ಯದಲ್ಲಿ ರಾಜ್ಯದ ಮೊದಲ ಆಕ್ಸಿಜನ್ ಪ್ಲಾಂಟ್ ನಿರ್ಮಾಣ : ಸಚಿವ ನಾರಾಯಣ ಗೌಡ ಕೋವಿಡ್‌ ವಾರ್‌ ರೂಂಗಳಲ್ಲಿ ಬೆಡ್‌ ಬ್ಲಾಕಿಂಗ್‌ ಹಗರಣ : ಅರ್ಜಿ ವಿಚಾರಣೆಗೆ ಹೈಕೋರ್ಟ್‌ ನಕಾರ ಮೇ ಅಂತ್ಯದೊಳಗೆ ವಿದ್ಯಾರ್ಥಿಗಳಿಗೆ ಪೂರ್ಣ ಆಹಾರ ಧಾನ್ಯ ವಿತರಣೆ: ಸುರೇಶ್ ಕುಮಾರ್ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಕ್ರಮ: ಡಾ.ಸುಧಾಕರ್ ಮೇ.13 ರಂದು ಭೂಮಿಗೆ ಅಪ್ಪಳಿಸಲಿದೆಯಂತೆ "ಸೌರ ಚಂಡಮಾರುತ' ಅಂತ್ಯಕ್ರಿಯೆಗೆ ಹೋದವರು ದುರಂತ ಅಂತ್ಯವಾದರು.! : ಕಾರು ಅಪಘಾತದಲ್ಲಿ ನಾಲ್ವರು ಸಾವು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಗೆ ಕೋವಿಡ್ ಪಾಸಿಟಿವ್ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರ ವಿಫಲ: ಕಾಂಗ್ರೆಸ್ ನಾಯಕರ ಪ್ರತಿಭಟನೆ ಪರಿಸರ ಸಂರಕ್ಷಣೆಗೆ ಜೈವಿಕ ಕೃಷಿ Team Udayavani, Jul 28, 2019, 5:00 AM IST 1960ರಲ್ಲಿ ಆದ ಹಸಿರು ಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನೇ ಬದಲಿಸಿತ್ತು. ಭತ್ತ, ಗೋಧಿ ಮತ್ತು ಇತರ ಬೆಳೆಗಳು ಆಧುನಿಕ ಕೃಷಿ ಕ್ರಾಂತಿಯಿಂದ ಹೆಚ್ಚು ಇಳುವರಿ ನೀಡಲಾರಂಭಿಸಿದವು. ಆದರೆ ಇದರಿಂದ ಬೇಡಿಕೆ, ಪೂರೈಕೆಗಳ ನಡುವಿನ ಅಂತರ ಕಡಿಮೆ ಮಾಡಿತ್ತು. ಕೃಷಿ ಉತ್ಪನ್ನಗಳ ಬೆಲೆ ಏರುಪೇರಿಗೂ ಕಾರಣವಾಗಿತ್ತು. ಅತಿಯಾದ ರಸಗೊಬ್ಬರ, ರಾಸಾಯನಿಕ ಬಳಕೆ ನಿಧಾನವಾಗಿ ಮಣ್ಣಿನಲ್ಲಿದ್ದ ನೈಸರ್ಗಿಕ ಅಂಶಗಳನ್ನು ಕಡಿಮೆಯಾಗುವಂತೆ ಮಾಡಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಭಾರತದಲ್ಲಿ ಬರ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಚಟುವಟಕೆ ಮುಖ್ಯವಾಗಿರುವ ಭಾಗಗಳಲ್ಲಿ ನೀರಿನ ಕೊರತೆ ಇದೆ. ಹೀಗಾಗಿ ಕಡಿಮೆ ನೀರಿನ ಬಳಕೆಯಿಂದ ಹೆಚ್ಚು ಇಳುವರಿ ಪಡೆಯುವ, ವಾತಾವರಣಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೃಷಿ ಚಟುವಟಿಕೆ ಮಾಡುವ ಯೋಜನೆ ಅಗತ್ಯ. ಆ ಮೂಲಕ ಬೇಡಿಕೆಗೆ ತಕ್ಕಂತೆ ಆಹಾರ ಉತ್ಪನ್ನಗಳನ್ನು ಪೂರೈಸುವುದು ಇತ್ತೀಚೆಗಿನ ದಿನಗಳಲ್ಲಿ ಅನಿವಾರ್ಯ. ಹೀಗಾಗಿ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಯುವುದು ಉತ್ತಮ ಮಾರ್ಗ. ರಕ್ಷಣೆಗಾಗಿ ಸಿರಿಧಾನ್ಯ ಇಂದು ಸಾವಯವ ಮತ್ತು ಸಿರಿಧಾನ್ಯಗಳ ಕೃಷಿ ಯಾಕೆ ಅಗತ್ಯ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಸಿರಿಧಾನ್ಯ ಬೆಳೆಯುವುದರಿಂದ ಕಡಿಮೆ ನೀರಿನ ಮೂಲಕ ಕೃಷಿ ಮಾಡಬಹುದು. ಇವುಗಳಿಗೆ ಭತ್ತ, ಗೋಧಿ ಮತ್ತು ಕಬ್ಬಿನ ಬೆಳೆಗಳಿಗಿಂತ ಶೇ. 80ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಮಣ್ಣು ಸವೆತ ತಡೆಯುವುದಕ್ಕೂ ಸಿರಿಧಾನ್ಯಗಳ ಕೃಷಿ ಸಾಕಷ್ಟು ನೆರವು ನೀಡುತ್ತದೆ. ಕೃಷಿ ಧಾನ್ಯ ಬೆಳೆಯುವ ಬಗೆ ಭಾರತದಲ್ಲಿ ಕೃಷಿಕರು ಕೇವಲ ಧಾನ್ಯ ಬೆಳೆಯನ್ನೇ ನಂಬಿ ಕುಳಿತಿರಲು ಸಾಧ್ಯವಿಲ್ಲ. ಅಕ್ಕಿ ಮತ್ತು ಗೋಧಿ ಭಾರತದ ಆಹಾರ ಪದ್ಧತಿಯಲ್ಲಿ ಅತಿ ಪ್ರಮುಖ ಸ್ಥಾನ ಪಡೆದಿವೆ. ಹೀಗಾಗಿ ಸಂಪೂರ್ಣ ಧಾನ್ಯ ಬೆಳೆಯುವುದು, ಉಪಯೋಗಿಸುವುದು ಸಾಧ್ಯವಿಲ್ಲ. ಆದರೆ ಧಾನ್ಯಗಳನ್ನು ಒಂದು ಪ್ರಮುಖ ಬೆಳೆಯ ಅನಂತರ ಉಪಬೆಳೆಯಾಗಿ, ಮತ್ತೂಂದು ಬೆಳೆಯ ಮಧ್ಯದಲ್ಲಿ ಬೆಳೆಯಬಹುದು. ಇದು ಮಣ್ಣಿನ ಫ‌ಲವತ್ತತೆ ಕಾಪಾಡಲು ವಿವಿಧ ರೀತಿಯಲ್ಲಿ ನೆರವಾಗುತ್ತದೆ. ಆದರೆ ಧಾನ್ಯಗಳನ್ನು ಬೆಳೆಯಲು ಸಾಕಷ್ಟು ಹಿನ್ನಡೆಗಳಿವೆ. ಭತ್ತ ಮತ್ತು ಗೋಧಿಗಿಂತ ಕಡಿಮೆ ಇಳುವರಿ ನೀಡುವ ಕಾರಣದಿಂದ ಕೃಷಿಕರು ಇದರ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲ. ಮಳೆ ಮತ್ತು ನೀರಿನ ಕೊರತೆ ಇಲ್ಲದೆ ಇದ್ದರೆ ರೈತರು ಸಾವಯವ ಕೃಷಿ ಕಡೆಗೆ ಮನಸ್ಸು ಮಾಡುವುದು ಕಡಿಮೆ. ಈ ಸಮಸ್ಯೆಗೆ ಇತ್ತೀಚೆಗೆ ರಾಜ್ಯ ಸರಕಾರದ ಅನೇಕ ಸಂಸ್ಥೆಗಳು ಪರಿಹಾರ ನೀಡುವ ಪ್ರಯತ್ನ ಮಾಡುತ್ತಿವೆೆ. ರಾಜ್ಯದ ಮಾಜಿ ಕೃಷಿ ಸಚಿವ ಕೃಷ್ಣ ಬೈರೇಗೌಡರು ಧಾನ್ಯಗಳ ಬೇಡಿಕೆ ಹೆಚ್ಚಿಸಲು ಹಲವು ಕ್ರಮ ಕೈಗೊಂಡಿದ್ದರು. ಪರಿಸರ ರಕ್ಷಣೆ ಭಾರತದಲ್ಲಿ ಕೃಷಿ ಚಟುವಟಿಕೆಗಳು ಒಂದೆರಡು ತಿಂಗಳಿನಲ್ಲಿ ಬದಲಾಗಲು ಸಾಧ್ಯವಿಲ್ಲ. ಅದಕ್ಕೆ ವರ್ಷಗಳೇ ಬೇಕು. ಇಂದು ಆರಂಭ ಮಾಡಿದರೆ ಮುಂದಿನ ಪೀಳಿಗೆಗಾದರೂ ಸಾವಯವ ಕೃಷಿ ಕಡೆಗೆ ಗಮನ ಕೊಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬಹುದು. ಕರ್ನಾಟಕದಲ್ಲಿ ಕೇವಲ 6 ವರ್ಷಗಳ ಹಿಂದೆ ಸಾವಯವ ಕೃಷಿಯನ್ನು ಕೇವಲ 4,000 ಹೆಕ್ಟೇರ್‌ ಪ್ರದೇಶಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದರೆ ಇಂದು 98,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾತಾವರಣ, ಭೂಮಿಯ ರಕ್ಷಣೆ ಸಾಧ್ಯ. ಅಧಿಕ ಪೋಷಕಾಂಶ ಸಾವಯವ ಸಿರಿಧಾನ್ಯಗಳಲ್ಲಿ ಅಧಿಕ ಪೋಷಕಾಂಶ ಇದೆ. ಕಡಿಮೆ ಪ್ರಮಾಣದ ಗ್ಲೇಮಿಕ್‌ ಇಂಡೆಕ್ಸ್‌, ಹೆಚ್ಚಿನ ಫೈಬರ್‌ ಅಂಶಗಳು ಇರುವುದರಿಂದ ಆರೋಗ್ಯಕ್ಕೆ ಪೂರಕವಾಗಿದೆ. ಸ್ಥೂಲಕಾಯ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌, ಹೈಪರ್‌ಟೆನ್ಶನ್‌ ಮತ್ತು ಅನೀಮಿಯಾ ವಿರುದ್ಧ ಈ ಮಿಲ್ಲೆಟ್ಸ್‌ ಹೋರಾಡುತ್ತದೆ. ಅಪೌಷ್ಟಿಕತೆ ಸಮಸ್ಯೆ ವಿಶ್ವದಲ್ಲಿ ಲಕ್ಷಾಂತರ ಜನರು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಇಥಿಯೋಪಿಯಾದಿಂದ ಹಿಡಿದು ಭಾರತದವರೆಗೂ ಅಪೌಷ್ಟಿಕತೆ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ. ಸಿರಿಧಾನ್ಯಗಳಲ್ಲಿ ಹಸಿವನ್ನು ತಗ್ಗಿಸುವ ಸಾಮರ್ಥ್ಯ ಅಕ್ಕಿಗಿಂತಲೂ ಹೆಚ್ಚಾಗಿದೆ. ಹಸಿವನ್ನು ನೀಗಿಸಲು ಈ ಸ್ಮಾರ್ಟ್‌ಫ‌ುಡ್‌ ಸಹಕಾರಿ ಎನ್ನುತ್ತಾರೆ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಮಿಲ್ಲೆಟ್ ರೀಸರ್ಚ್‌ ವಿಭಾಗದ ನಿರ್ದೇಶಕ ವಿಲಾಸ್‌ ತೋನಪಿ ಅವರು. ಫ‌ಲವತ್ತತೆ ಉತ್ತಮ ಸಿರಿಧಾನ್ಯ ಬೆಳೆಯುವುದರಿಂದ ಮಣ್ಣಿನ ಫ‌ಲವತ್ತತೆ ಉತ್ತಮಗೊಳಿಸಬಹುದು. ಸತತ ಕೃಷಿ ಚಟುವಟಿಕೆಯಿಂದ ಚಿಕ್ಕ ಬ್ರೇಕ್‌ ಕೂಡ ಭೂಮಿಗೆ ಸಿಗುತ್ತದೆ. ಮಣ್ಣಿನ ಸವೆತ, ನೀರಿನ ಸಂರಕ್ಷಣೆ ಕೂಡ ಇದರಿಂದ ಸಾಧ್ಯ, ಆರೋಗ್ಯ ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ.ಸಮರ್ಥ ಜೈವಿಕ ಕೃಷಿ ಜೈವಿಕ ಕೃಷಿ ಮೂಲಕವೇ ಪರಿಸರ ಹಾಗೂ ನೀರಿನ ಸಂರಕ್ಷಣೆ ಕಷ್ಟ. ಆದರೆ ಅದಕ್ಕೆ ಬೇಕಾದ ಬೇರೆ ಮಾರ್ಗಗಳನ್ನು ಆಯ್ದುಕೊಳ್ಳಬೇಕು. ಕಡಿಮೆ ರಸಗೊಬ್ಬರ ಬಳಕೆ, ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರಗಳ ಬಳಕೆ, ಹನಿ ನೀರಾವರಿ ಪದ್ಧತಿ ಮತ್ತು ಸಾವಯವ ಗೊಬ್ಬರಗಳ ಬಳಕೆ ಕೃಷಿ ಚಟುವಟಿಕೆಗಳಿಗೆ ಮತ್ತು ಪರಿಸರ ಸಂರಕ್ಷಣೆಗೆ ಸಾಕಷ್ಟು ಉಪಕಾರಿಯಾಗಿದೆ. ರಾಜ್ಯ ಸರಕಾರ ಹಲವು ಎನ್‌ಜಿಒಗಳು ಈ ಬಗ್ಗೆ ಅರಿವು ಮೂಡಿಸಲು ರೈತರ ಜತೆ ಸಂವಾದ ನಡೆಸುತ್ತಿವೆ. ಉದಾ: ಇಂಡಿಯನ್‌ ಕಲ್ಚರಲ್ ರಿಸರ್ಚ್‌ ಮತ್ತು ಆ್ಯಕ್ಷನ್‌ ಸುಮಾರು 5,000 ಕೃಷಿಕರ ಜತೆ ಕೆಲಸ ಮಾಡುತ್ತಿದೆ. ಇದು ಹಲವು ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಮಿಶ್ರ ಬೆಳೆಗಳಿಗೆ ಉತ್ತೇಜನ ನೀಡಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಪಡೆಯುವ ಯೋಜನೆಯನ್ನು ರೈತರಿಗೆ ತಿಳಿಹೇಳುತ್ತಿದೆ. ಅಲ್ಲದೆ ಕಡಿಮೆ ನೀರಿನ ಬಳಕೆ, ಕಡಿಮೆ ರಾಸಾಯನಿಕ ಬಳಕೆಗೂ ಉತ್ತೇಜನ ನೀಡುತ್ತಿದೆ
2021/05/12 23:18:14
https://www.udayavani.com/sudina/sudina-selection/organic-farming-for-environmental-protection
mC4
ಸಪ್ತಪದಿಗೆ 61 ಜೋಡಿಗಳ ನೋಂದಣಿ | Udayavani – ಉದಯವಾಣಿ Monday, 10 Aug 2020 | UPDATED: 11:30 AM IST Team Udayavani, Mar 24, 2020, 3:52 PM IST ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ ವಿನೂತನ ಕಾರ್ಯಕ್ರಮದಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಪ್ರವರ್ಗ ಎ ದೇವಾಲಯ ಗಳಾದ ದೊಡ್ಡಬಳ್ಳಾಪುರ ತಾಲೂಕಿನ ಎಸ್‌. ಎಸ್‌.ಘಾಟಿ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ನೆಲಮಂಗಲ ತಾಲೂಕಿನ ಶ್ರೀ ಗಂಗಾಧರೇಶ್ವರಸ್ವಾಮಿ, ಹೊನ್ನಾದೇವಿ, ಶಿವಗಂಗೆ ದೇವಾಲಯಗಳಲ್ಲಿ ಏಪ್ರಿಲ್‌ 26ರಂದು "ಸಾಮೂಹಿಕ ಸರಳ ವಿವಾಹ' ಆಯೋಜಿಸಲಾಗಿದೆ. ಘಾಟಿ ಸುಬ್ರಹ್ಮಣ್ಯ ದೇವಾಲಯದಿಂದ ಇದುವರೆಗೂ 201 ಅರ್ಜಿ ಪಡೆದಿದ್ದು, 60 ಅರ್ಜಿಗಳು ಮಾತ್ರ ನೋಂದಣಿಯಾಗಿದೆ. ಶಿವಗಂಗೆ ದೇವಾಲಯದಲ್ಲಿ 10 ಅರ್ಜಿ, 01 ಅರ್ಜಿ ಮಾತ್ರ ನೋಂದಣಿಯಾಗಿದೆ. ಒಟ್ಟು ಜಿಲ್ಲೆಯಲ್ಲಿ 211 ಅರ್ಜಿಗಳನ್ನು ಪಡೆದಿದ್ದು, 61 ಅರ್ಜಿಗಳು ಮಾತ್ರ ನೋಂದಣಿಯಾಗಿವೆ. ಸಾಮೂಹಿಕ ಸರಳ ವಿವಾಹವಾಗಲಿಚ್ಛಿಸುವ ವಧು-ವರರು ಅರ್ಜಿಯನ್ನು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಪಡೆದು ಮಾರ್ಚ್‌ 27 ರೊಳಗೆ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬಹುದು ಎಂದು ಆಯಾ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
2020/08/10 06:01:07
https://www.udayavani.com/district-news/bangalore-rural-news/61-for-the-saptapadi-registration-of-pairs
mC4
ದಿನದ ಅಪರಾಧಗಳ ಪಕ್ಷಿನೋಟ 13ನೇ ನವೆಂಬರ್‍ 2015 ಸಂಜೆ | ಕೆ.ಜಿ.ಎಫ್ ಪೊಲೀಸ್ ← ದಿನದ ಅಪರಾಧಗಳ ಪಕ್ಷಿನೋಟ 13 ನೇ ನವೆಂಬರ್‌ 2015 ದಿನದ ಅಪರಾಧಗಳ ಪಕ್ಷಿನೋಟ 14ನೇ ನವೆಂಬರ್‍ 2015 → ದಿನದ ಅಪರಾಧಗಳ ಪಕ್ಷಿನೋಟ 13ನೇ ನವೆಂಬರ್‍ 2015 ಸಂಜೆ Posted on November 13, 2015 by policenewskgf ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.11.2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆ ಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲಕ್ಷ್ಮೀಪತಿ, ಪ್ರೋಫೆಸರ್‍, ಡಾ|| ಟಿ.ಟಿ.ಐ.ಟಿ ಇಂಜಿನಿಯರಿಂಗ್ ಕಾಲೇಜ್, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ: 09-11-2015 ರಂದು ಸಂಜೆ 05.00 ಗಂಟೆಗೆ ಲ್ಯಾಬ್‌ನ್ನು ಬೀಗ ಹಾಕಿಕೊಂಡು ಹೋಗಿ, ದಿನಾಂಕ: 13-11-2015 ರಂದು ಬೆಳಿಗ್ಗೆ 08.45 ಗಂಟೆಗೆ ಬಂದು ನೋಡಲಾಗಿ ೧) ಇ.ಸಿ.ಇ, ೨) ಸಿ.ಎಸ್.ಇ ಮತ್ತು ಇ.ಇ.ಇ ವಿಭಾಗದ ಲಾಕ್‌ಗಳನ್ನು ಯಾರೋ ಕಳ್ಳರು ಮುರಿದು ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ. ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ರೌಡಿ ಆಸಾಮಿಗಳ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿರುತ್ತದೆ. 1. ನಾಗರಾಜ್ @ ತಂಗಂ ಬಿನ್ ಶಾಮಪ್ಪ, ಕಾಮಸಮುದ್ರಂ ಗ್ರಾಮ, ಬಂಗಾರಪೇಟೆ ತಾಲ್ಲೂಕು. 2. ಸೀನಪ್ಪ @ ಸೀನಾ ಬಿನ್ ಮುನಿಯಪ್ಪ, ಜಾನುಗುಟ್ಟ ಗ್ರಾಮ, ಬಂಗಾರಪೇಟೆ ತಾಲ್ಲೂಕು This entry was posted in Uncategorized. Bookmark the permalink. ← ದಿನದ ಅಪರಾಧಗಳ ಪಕ್ಷಿನೋಟ 13 ನೇ ನವೆಂಬರ್‌ 2015
2016/12/07 08:38:40
https://policenewskgf.wordpress.com/2015/11/13/%e0%b2%a6%e0%b2%bf%e0%b2%a8%e0%b2%a6-%e0%b2%85%e0%b2%aa%e0%b2%b0%e0%b2%be%e0%b2%a7%e0%b2%97%e0%b2%b3-%e0%b2%aa%e0%b2%95%e0%b3%8d%e0%b2%b7%e0%b2%bf%e0%b2%a8%e0%b3%8b%e0%b2%9f-13%e0%b2%a8%e0%b3%87-15/
mC4
ರೈಲ್ವೇ ನೌಕರರ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸಲು ಗೋಯಲ್ ಸಲಹೆ | Piyush Goyal gives directions for "comprehensive training programme" for Railways employees - Kannada Oneindia | Updated: Tuesday, November 14, 2017, 21:00 [IST] ನವದೆಹಲಿ, ನವೆಂಬರ್ 14: ಭಾರತೀಯ ರೈಲ್ವೇ ನೌಕರರ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸಲು ಪಿಯೂಷ್ ಗೋಯಲ್ ಸಲಹೆ ಮೇರೆಗೆ ರೈಲ್ವೇ ನೌಕರರಿಗೆ ತರಬೇತಿ ನೀಡುವ 'ಪ್ರಾಜೆಕ್ಟ್ ಸಕ್ಷಮ್' ಹೆಸರಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಒಂದು ವಾರಗಳ ಕಾಲ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ. ನೌಕರರ ಕೆಲಸದಲ್ಲಿ ಬದಲಾವಣೆ ತರಲು ಈ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಇನ್ನು ಮುಂದೆ ರೈಲಿನಲ್ಲೂ ಗೋಲ್ಡ್ ಕ್ಲಾಸ್ ಪ್ರಯಾಣ ಸಾಧ್ಯ ಪ್ರತೀ ವಲಯದ ಎಲ್ಲಾ ಸಿಬ್ಬಂದಿಗಳಿಗೆ ಒಂದು ವಾರಗಳ ತರಬೇತಿ ನೀಡಲಾಗುತ್ತದೆ. ಮುಂದಿನ ಒಂದು ವರ್ಷಗಳ ಪ್ರತಿ ವರ್ಗದ ಸಿಬ್ಬಂದಿಗಳು ನಿರ್ವಹಿಸಲಿರುವ ಹುದ್ದೆಗೆ ಅನುಗುಣವಾಗಿ ಈ ತರಬೇತಿ ನೀಡಲಾಗುತ್ತದೆ. ರೈಲ್ವೇ ಜಾಲ ಬೆಳೆಯತ್ತಿದ್ದಂತೆ ನವೀನ ದರ್ಜೆಯ ಸೇವೆಗಳು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇವುಗಳ ಜ್ಞಾನ ನೌಕರರಿಗೆ ಸಿಗಲು ಈ ರೀತಿ ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ. ಈ ತರಬೇತಿಯ ಪರಿಣಾಮಗಳನ್ನು ಗುರುತಿಸಲು ಪ್ರತೀ ವಲಯಗಳಲ್ಲಿ ಒಂದಷ್ಟು ಮಾನದಂಡಗಳನ್ನೂ ಪಟ್ಟಿ ಮಾಡಲಾಗಿದೆ. ಈ ಮೂಲಕ ಸುಧೀರ್ಘ ಹಾದಿಯಲ್ಲಿ ಸಿಬ್ಬಂದಿಗಳ ಕಾರ್ಯಕ್ರಮತೆ ಜತೆ ರೈಲ್ವೇ ಕಾರ್ಯಕ್ಷಮತೆಯನ್ನೂ ಹೆಚ್ಚಿಸುವ ವಿಶಿಷ್ಟ ಗುರಿಯನ್ನು ಹಾಕಿಕೊಳ್ಳಲಾಗಿದೆ. railway indian railways ರೈಲ್ವೆ delhi ನವದೆಹಲಿ ಭಾರತೀಯ ರೈಲ್ವೆ piyush goel Railway Minister Piyush Goyal gives directions for "comprehensive training programme" for all employees of Indian Railways to boost productivity and efficiency.
2019/11/15 16:49:34
https://kannada.oneindia.com/news/india/piyush-goyal-gives-directions-comprehensive-training-programme-for-railways-employees-129044.html?utm_source=articlepage-Slot1-9&utm_medium=dsktp&utm_campaign=similar-topic-slider
mC4
ಮಹಾರಾಷ್ಟ್ರದಲ್ಲಿ ಗೋಮಾಂಸ ನಿಷೇಧ ಹೈದರಾಬಾದ್ ವಿವಿಗಳಲ್ಲಿ ಆಕ್ರೋಶ » Kannadanet.com ಅಂಬೇಡ್ಕರ್ ಅಸೋಸಿಯೇಶನ್‌ನಿಂದ ಗೋಮಾಂಸ ಉತ್ಸವ ಹೈದರಾಬಾದ್, : ಮಹಾರಾಷ್ಟ್ರದಲ್ಲಿ ಗೋಮಾಂಸದ ಮೇಲಿನ ನಿಷೇಧ ಕ್ರಮವನ್ನು ಪ್ರತಿಭಟಿಸಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ (ಎಎಸ್‌ಎ) ಸುಮಾರು 200 ಮಂದಿ ವಿದ್ಯಾರ್ಥಿಗಳು ಬುಧವಾರ 'ಗೋಮಾಂಸ ಉತ್ಸವ' ನಡೆಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಗೆ 'ಕಲ್ಯಾಣಿ ಬಿರ್ಯಾನಿ ತಿನ್ನೋಣ' ಎಂದು ಹೆಸರಿಟ್ಟುಕೊಂಡಿದ್ದರು. ಹೈದರಾಬಾದ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಬಿರ್ಯಾನಿ ಮತ್ತು 'ಚಿಲ್ಲಿ ಬೀಫ್' ಹಂಚಿಕೊಂಡು ಸೇವಿಸುವ ಮೂಲಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 18ನೆ ಶತಮಾನದಲ್ಲಿ ಹೈದರಾಬಾದ್‌ಗೆ ವಲಸೆ ಬಂದಿದ್ದ ಬೀದರ್‌ನ ಕಲ್ಯಾಣಿ ನವಾಬರಿಂದಾಗಿ ಈ 'ಬೀಫ್ ಬಿರ್ಯಾನಿ' ಖ್ಯಾತಿ ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಗೋಮಾಂಸ ನಿಷೇಧ ಕ್ರಮದ ವಿರುದ್ಧ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಿದರು. ಮುಂಬೈ ಮತ್ತು ಮಹಾರಾಷ್ಟ್ರದ ಜನತೆಗೆ ಬೆಂಬಲ ಸೂಚಿಸಲು ಹಾಗೂ ಜನಸಾಮಾನ್ಯರ ಆಹಾರ ಸಂಸ್ಕೃತಿಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಬೀಫ್ ಉತ್ಸವ ನಡೆಸಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. 'ದೇಶದ ಫ್ಯಾಸಿಸ್ಟ್ ಶಕ್ತಿಗಳು ಜನಸಾಮಾನ್ಯರ ಆಹಾರ ಸಂಸ್ಕೃತಿಯನ್ನು ಹೊಸಕಿ ಹಾಕುತ್ತಿವೆ' ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಜನರ ಆಹಾರಾಭ್ಯಾಸಗಳನ್ನು ನಾವು ಗೌರವಿಸಬೇಕು. ಗೋಮಾಂಸದ ಮೇಲಿನ ನಿಷೇಧ ಕ್ರಮವು, ಈಗಾಗಲೇ ಹಿಂದುಳಿದಿರುವ ಸಮುದಾಯಗಳ ವಿರುದ್ಧ ಹೇರಲಾಗಿರುವ ತಾರತಮ್ಯದ ಇನ್ನೊಂದು ರೂಪವೆನಿಸಿದೆ' ಎಂದು ಎಎಸ್‌ಎ ಅಧ್ಯಕ್ಷ ಡಿ.ಪ್ರಶಾಂತ್ ಹೇಳಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಬೀಫ್ ಬಿರ್ಯಾನಿ ಪ್ಯಾಕೆಟ್‌ಗಳನ್ನು ಖರೀದಿಸಿದ ವಿದ್ಯಾರ್ಥಿಗಳು, ಹೈದರಾಬಾದ್ ವಿಶ್ವವಿದ್ಯಾನಿಲಯದ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಹಂಚಿಕೊಂಡು ತಿಂದರು. ಉಸ್ಮಾನಿಯಾ ವಿವಿ ಹಾಗೂ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್ ವಿವಿ ವಿದ್ಯಾರ್ಥಿಗಳೂ 'ಬೀಫ್ ಉತ್ಸವ'ದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ 'ಕಾಸ್ಟ್ ಆನ್ ದ ಮೆನು' ಸಾಕ್ಷಚಿತ್ರವನ್ನು ಪ್ರದರ್ಶಿಸಲಾಯಿತು. ಗೋಮಾಂಸ ಸೇವನೆ ಎಂಬುದು, ಈ ದೇಶದಲ್ಲಿ ದಲಿತರು ಮತ್ತು ಮುಸ್ಲಿಂ ಸಮುದಾಯಗಳ ಆಹಾರ ಸಂಸ್ಕೃತಿಯ ಒಂದು ಭಾಗವಾಗಿದೆ. ಗೋಮಾಂಸದ ಮೇಲಿನ ನಿಷೇಧ ಕ್ರಮವನ್ನು ಪ್ರಬಲವಾಗಿ ವಿರೋಧಿಸಲಾಗುವುದು ಎಂದು ವಿದ್ಯಾರ್ಥಿಗಳು ಆಕ್ರೋಶದಿಂದ ಹೇಳಿದ್ದಾರೆ. ಗೋಹತ್ಯೆ ನಿಷೇಧದಿಂದ ಕಡಿಮೆ ಬೆಲೆಯ ಮಾಂಸ ವ್ಯಾಪಾರ ಮತ್ತು ಚರ್ಮೋದ್ಯಮದಲ್ಲಿ ನಿರತರಾಗಿರುವ ಬಹುತೇಕ ಜನರಿಗೆ ತೊಂದರೆಯಾಗಲಿದೆ. ಕೆಲವು ಸಮುದಾಯಗಳ ಜೀವನೋಪಾಯ ಎಂಬುದು ಮಾಂಸ ಮತ್ತು ಚರ್ಮ ಕೈಗಾರಿಕೆಯ ಮೇಲೆ ಅವಲಂಬಿತವಾಗಿವೆ. ನಿಷೇಧಕ್ರಮದಿಂದ ಅವರ ಜೀವನೋಪಾಯವನ್ನು ಕಸಿದುಕೊಂಡಂತಾಗುವುದು. ಇದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ ಎಂದು ಎಎಸ್‌ಎ ಉಪಾಧ್ಯಕ್ಷ ಮುಹಮ್ಮದ್ ಆಶ್ರಫ್ ಹೇಳಿದ್ದಾರೆ. ಈ ಹಿಂದೆಯೂ ಕೂಡ ನಗರದ ವಿಶ್ವವಿದ್ಯಾನಿಲಯಗಳ ಬೇರೆಬೇರೆ ಕ್ಯಾಂಪಸ್‌ಗಳಲ್ಲಿ ಬೀಫ್ ಉತ್ಸವ ನಡೆಸಲಾಗಿತ್ತು. ಗೋಮಾಂಸವನ್ನು ದೈನಂದಿನ ಆಹಾರವಾಗಿ ಬಳಸುವ ಸಮುದಾಯಗಳ ಹಕ್ಕುಗಳ ಪ್ರತಿಪಾದನೆಯ ಕಾರ್ಯತಂತ್ರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 'ನಾವು ಜಾತ್ಯತೀತ ದೇಶವೊಂದರಲ್ಲಿ ಬದುಕುತ್ತಿದ್ದೇವೆ. ವಿವಿಗಳ ಹಾಸ್ಟೆಲ್‌ಗಳಲ್ಲಿ ಶಾಖಾಹಾರಿ ಖಾದ್ಯಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ನಮಗೆ ಬೀಫ್ ಸೇರಿದಂತೆ ಮಾಂಸಾಹಾರಿ ಖಾದ್ಯಗಳನ್ನು ಒದಗಿಸಬೇಕು' ಎಂದು ಉಸ್ಮಾನಿಯಾ ವಿವಿಯ ಸಂಶೋಧನಾ ವಿದ್ಯಾರ್ಥಿ ಬಿ.ಸುದರ್ಶನ್ ಹೇಳುತ್ತಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಆದರೆ, ಕೋಣ ಮತ್ತು ಎತ್ತುಗಳ ಹತ್ಯೆಗೆ ಅನುಮತಿ ಇದೆ. ಈ ಪ್ರಾಣಿಗಳು 14 ವರ್ಷಕ್ಕಿಂತ ಮೇಲಿನ ಪ್ರಾಯದವು ಆಗಿರಬೇಕು ಹಾಗೂ ಕೃಷಿ ಕೆಲಸಕಾರ್ಯಗಳು, ಸಂತಾನೋತ್ಪತ್ತಿ ಇಲ್ಲವೇ ಹಾಲು ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿರಬಾರದು ಎಂಬ ಷರತ್ತು ವಿಧಿಸಲಾಗಿದೆ.
2020/10/20 00:53:13
http://kannadanet.com/koppal-breaking-news/blog-post_62-13/
mC4
ನೆಲ್ಯಾಡಿಯಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಾಳೆ | Prajavani ನೆಲ್ಯಾಡಿಯಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಾಳೆ ಪುತ್ತೂರು: 'ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ. ರೋಡ್ ವರೆಗಿನ ರಾಷ್ಟ್ರೀಯ ಹೆದ್ದಾರಿ–75 ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಚತುಷ್ಪಥ ರಸ್ತೆಯ ಹೆಸರಲ್ಲಿ ಈ ಹೆದ್ದಾರಿಯನ್ನು ಸಂಪೂರ್ಣ ಹಾಳುಗೆಡವಲಾಗಿದೆ. ಹೆದ್ದಾರಿಯನ್ನು ಸುರಕ್ಷಿತ ಬಳಕೆಗೆ ಯೋಗ್ಯಗೊಳಿಸಲು ಆಗ್ರಹಿಸಿ ಇದೇ 10ರಂದು ನೆಲ್ಯಾಡಿಯಲ್ಲಿ ಒಂದು ಗಂಟೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು' ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ವರ್ಗಿಸ್ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, '3 ವರ್ಷಗಳಿಂದ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದೆ. 6 ತಿಂಗಳಿನಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆಯನ್ನು ಅಗೆದು ಹೊಂಡ ನಿರ್ಮಿಸಲಾಗಿದೆ. ನೂರಾರು ಮಂದಿ ವಾಹನ ಚಾಲಕರು ಈ ಹೊಂಡಗಳಿಗೆ ಬಿದ್ದು ಆಸ್ಪತ್ರೆ ಸೇರುವಂತಾಗಿದ್ದು, ರಸ್ತೆಯಲ್ಲಿ ಸಂಚಾರ ಮಾಡುವ ಮಂದಿ ಪ್ರಾಣಭೀತಿಗೆ ಒಳಗಾಗಿದ್ದಾರೆ. ಕಾಮಗಾರಿ ಬಗ್ಗೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು. 'ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದ್ದು, ಜನತೆಯ ಪಾಲಿಗೆ ಅಪಾಯವನ್ನುಂಟು ಮಾಡುವ ಸ್ಥಿತಿ ಇಲ್ಲಿದೆ. ಕಳೆದ ಮಳೆಗಾಲದಲ್ಲಿ ವಳಾಲು ಬೈಲು ಎಂಬಲ್ಲಿಗೆ ನೆರೆ ನೀರು ನುಗ್ಗಿ ಮೂರು ಮನೆಗಳು ಕುಸಿಯಲು ಈ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯೇ ಕಾರಣವಾಗಿತ್ತು ಎಂದು ದೂರಿದ ಅವರು ಕಾಮಗಾರಿ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರಿಗೆ ಸಮರ್ಪಕವಾದ ಮಾಹಿತಿ ನೀಡಬೇಕು. ಪ್ರಸ್ತುತ ಇರುವ ಹೆದ್ದಾರಿಯನ್ನು ಅಗೆದು ಹೊಂಡ ಮಾಡಿರುವ ಕಡೆ ಮರು ಡಾಮರೀಕರಣ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಹೆದ್ದಾರಿಯಲ್ಲಿ ಸಂಭವಿಸುವ ಸಾವು-ನೋವುಗಳಿಗೆ ರಸ್ತೆ ದುಃಸ್ಥಿತಿಗೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್ಎಚ್ಎಐ)ಹೊಣೆಗಾರರನ್ನಾಗಿಸಬೇಕು' ಎಂದು ಅವರು ಒತ್ತಾಯಿಸಿದರು. 'ಜಿಲ್ಲಾಧಿಕಾರಿ, ಶಾಸಕರು, ಸಂಸದರು, ಸಚಿವರಿಗೆ ಮನವಿ ನೀಡಲಾಗಿದೆ. ಯಾರೂ ಇದುವರೆಗೆ ಸ್ಪಂದಿಲ್ಲ. ಹಾಗಾಗಿ ಇದೇ 10ರಂದು ಹೆದ್ದಾರಿ ಸಂಚಾರ ತಡೆದಯ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಪ್ರತಿಭಟನೆಯಲ್ಲಿ 23 ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ರಸ್ತೆ ತಡೆ ಬಳಿಕ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಯಲಿದೆ' ಎಂದು ತಿಳಿಸಿದರು. ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಕೆ.ಜೆ., ಸದಸ್ಯ ಆದರ್ಶ್‌ ಜೋಸೆಫ್, ನೆಲ್ಯಾಡಿ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕರ್ನಾಟಕ ನೀತಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಪ್ರಮೋದ್ ಇದ್ದರು.
2019/10/23 13:57:30
https://www.prajavani.net/district/dakshina-kannada/nh-protest-672215.html
mC4
ನೀರಿಳಿಸಿದ ದೂರುಗಳು...! | Prajavani ನೀರಿಳಿಸಿದ ದೂರುಗಳು...! ರಾಯಚೂರು: ನಿವೇಶನ ಮಾರ್ಪಾಡು, ಹೈಕೋರ್ಟ್ ಆದೇಶ ಜಾರಿಗೆ ವಿಳಂಬ, ಅಕ್ರಮ ಕಟ್ಟಡ ತೆರವು, ಭೂ ಸ್ವಾಧೀನ ಪರಿಹಾರಧನ ವಿತರಣೆಯಲ್ಲಿ ವಿಳಂಬ, ಪಹಣಿ ವಿತರಣೆ, ವೇತನ ಪರಿಷ್ಕರಣೆ, ಕೆಎಟಿ ಆದೇಶ ಜಾರಿ, ವಿದ್ಯುತ್ ತಂತಿ ಸ್ಥಳಾಂತರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ದೂರುಗಳ ಸುರಿಮಳೆ...! ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಲೋಕಾಯುಕ್ತ ಡಾ.ಶಿವರಾಜ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಸಮಾಲೋಚನೆ ಸಭೆಯಲ್ಲಿ ಸಾರ್ವಜನಿಕರಿಂದ ನೂರಾರು ದೂರುಗಳು ಕೇಳಿಬಂದವು. ಸುಗೂರೇಶ ರತ್ನಾಕರ, ಗೃಹ ಮಂಡಳಿಗೆ ಸಂಬಂಧಿಸಿದ ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳು ಮಾಹಿತಿ ಕೇಳಿದರೂ ನಿಂದಿಸುತ್ತಾರೆ ಎಂದು ಆರೋಪಿಸಿದರು. ಲೋಕಾಯುಕ್ತ ಡಾ.ಶಿವರಾಜ ಪಾಟೀಲ್, `ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಂವಿಧಾನದಲ್ಲಿ ಯಾವುದೇ ವ್ಯಕ್ತಿಗೆ ನಿಂದಿಸುವ ಅಧಿಕಾರ ಇಲ್ಲ. ನೀವು ಸಾರ್ವಜನಿಕರಿಗೆ ನಿಂದಿಸಿದಂತೆ ಸಾರ್ವಜಕರು ನಿಮ್ಮನ್ನು ನಿಂದಿಸಿದರೆ, ಕಚೇರಿಯಲ್ಲಿಯೇ ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂಥ ಪ್ರಸಂಗಗಳು ನಡೆಯಬಾರದು~ ಎಂದು ಅಧಿಕಾರಿಗೆ ಎಚ್ಚರಿಸಿದರು. ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಾಣವಾಗದೇ ಬಿಲ್ ಪಾವತಿಸಲಾಗಿದೆ. ಅಲ್ಲದೇ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ ಎಂದು ಸಿಂಧನೂರು ತಾಲ್ಲೂಕಿನ ಜೆ. ಹೊಸೂರ ಗ್ರಾಮ ಪಂಚಾಯಿತಿ ಸದಸ್ಯ ಬಸನಗೌಡ ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನ ವಿವರಣೆ ನೀಡಿದರು. `ನೀವು ಸಲ್ಲಿಸಿದ ದೂರು ಸರಿಯಾಗಿದ್ದರೆ, ಸೋಮವಾರ ಸ್ಥಳ ಪರಿಶೀಲನೆ ಮಾಡಲಾಗುವುದು. ನೀವು ಅಲ್ಲಿಯೇ ಇರಬೇಕು. ದೂರು ದುರುದ್ದೇಶದಿಂದ ಕೂಡಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು~ ಎಂದು ಲೋಕಾಯುಕ್ತರು ತಿಳಿಸಿದರು. `ಕಳೆದ 17 ವರ್ಷಗಳಿಂದಲೂ ಜಿಲ್ಲಾ ಕೇಂದ್ರ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಒಂದು ಸಾವಿರ ರೂಪಾಯಿ ಮಾತ್ರ ವೇತನ ನೀಡಲಾಗುತ್ತಿದೆ. ನನ್ನ ನಂತರ ನೇಮಕವಾದವರ ಸೇವೆಯನ್ನು ಕಾಯಂ ಮಾಡಲಾಗಿದೆ. ಅಲ್ಲದೇ ಕಳ್ಳತನ ಆರೋಪದ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಹುಸೇನಪ್ಪ ಆಶಾಣ್ಣ ತಮ್ಮ ಪತ್ನಿ, ಮಕ್ಕಳೊಂದಿಗೆ ಸಭೆಗೆ ಬಂದು ಅಳಲು ತೋಡಿಕೊಂಡರು. ಗ್ರಂಥಾಲಯ ಇಲಾಖೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ವೇತನಕ್ಕೆ ಸಂಬಂಧಿಸಿದ ದೂರಿನ ಬಗ್ಗೆ ಸೋಮವಾರ ಕಚೇರಿಗೆ ಬರುವಂತೆ ಸೂಚಿಸಿದರು. ಪೊಲೀಸ್ ಕಾನ್‌ಸ್ಟೇಬಲ್ ನೇಮಕದ ಆದೇಶಕ್ಕೆ ಸಂಬಂಧಿಸಿದಂತೆ ಕೆಎಟಿಯಿಂದ ತನ್ನ ಪರ ಆದೇಶ ಬಂದಿದ್ದರೂ ಜಾರಿಗೊಳಿಸಿಲ್ಲ ಎಂದು ದೇವದುರ್ಗ ತಾಲ್ಲೂಕಿನ ಹೊನ್ನಟ್ಟಿಗಿ ಗ್ರಾಮ ಭೀಮರಾಯ ದೂರಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಅವರು, ಈ ಆದೇಶ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಿವೇಶನದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಸ್ಥಳಾಂತರಿಸಲು ಜೆಸ್ಕಾಂ ಅಧಿಕಾರಿಗಳಿಗೆ ಎರಡು ವರ್ಷದಿಂದ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹೇಶ ಎಂಬುವವರು ಹೇಳಿದರು. ಒಂದು ವಾರದೊಳಗಾಗಿ ವಿದ್ಯುತ್ ತಂತಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತರಿಗೆ ಜೆಸ್ಕಾಂನ ಅಧಿಕಾರಿಗಳು ತಿಳಿಸಿದರು. ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದ ಯುವತಿಯೊಬ್ಬರು, `ನನಗಿಂತ ಕಡಿಮೆ ಅಂಕಗಳಿಸಿದವರನ್ನು ನೇಮಕ ಮಾಡಲಾಗಿದೆ. ನಾನು ಅನಾಥಳಾಗಿದ್ದೇನೆ. ತಾರತಮ್ಯದ ಬಗ್ಗೆ ಕ್ರಮ ಕೈಗೊಳ್ಳಬೇಕು~ ಎಂದು ಮನವಿ ಮಾಡಿದರು. ನೇಮಕಾತಿ ಪ್ರಕರಣ ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ. ಮಾನವೀತೆ ಹಿತದೃಷ್ಟಿಯಿಂದ ಅನಾಥ ಯುವತಿಗೆ ಸಹಾಯ ಮಾಡುವಂತೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿರಿ ಎಂದು ಲೋಕಾಯುಕ್ತರು ತಿಳಿಸಿದರು. ಸರ್ಕಾರ ಭೂ ಸ್ವಾಧೀನಪಡಿಸಿಕೊಂಡ ಪರಿಹಾರ ದೊರೆಯದೇ ಅಲೆದಾಡುವ ಪರಿಸ್ಥಿತಿ ಬಂದಿದೆ. ಸರ್ಕಾರ ಭೂ ಸ್ವಾಧೀನಪಡಿಸಿಕೊಂಡು ಕಳೆದ ಆರು ವರ್ಷಗಳು ಕಳೆದರೂ ಪರಿಹಾರ ಮಾತ್ರ ದೊರಕಿಲ್ಲ ಎಂದು ದೇವದುರ್ಗ ತಾಲ್ಲೂಕಿನ ಹೆಗಡದಿನ್ನಿ ಗ್ರಾಮದ ರೈತರು ಸಮಸ್ಯೆಯನ್ನು ವಿವರಿಸಿದರು. ಒಂದೆರಡು ದಿನಗಳಲ್ಲಿ ಪರಿಹಾರಧನ ವಿತರಣೆಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಉಜ್ಜಲ್ ಘೋಷ್ ಸಭೆಗೆ ತಿಳಿಸಿದರು. ನಗರಸಭೆಯಿಂದ ನೂತನ ತರಕಾರಿ ಮಾರುಕಟ್ಟೆಯ ಕಾಮಗಾರಿ ಆರಂಭಿಸಬೇಕು ಎಂದು ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎನ್.ಮಹಾವೀರ ಲೋಕಾಯುಕ್ತರಿಗೆ ಮನವಿ ಮಾಡಿದರು. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಭೂಮಿಪೂಜೆಯನ್ನು ಮಾಡಲಾಗಿದೆ. ಆದರೆ, ನಗರಸಭೆಯ ಅಧಿಕಾರಿಗಳ ತಪ್ಪಿನಿಂದಾಗಿ ಕಾಮಗಾರಿ ಆರಂಭಕ್ಕೆ ವಿಳಂಬವಾಗುತ್ತಿದೆ ಎಂದು ಲೋಕಾಯುಕ್ತರಿಗೆ ಜಿಲ್ಲಾಧಿಕಾರಿ ಅನ್ಬುಕುಮಾರ ತಿಳಿಸಿದರು. '); $('#div-gpt-ad-48309-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-48309'); }); googletag.cmd.push(function() { googletag.display('gpt-text-700x20-ad2-48309'); }); },300); var x1 = $('#node-48309 .field-name-body .field-items div.field-item > p'); if(x1 != null && x1.length != 0) { $('#node-48309 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-48309').addClass('inartprocessed'); } else $('#in-article-48309').hide(); } else { _taboola.push({article:'auto', url:'https://www.prajavani.net/article/ನೀರಿಳಿಸಿದ-ದೂರುಗಳು'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-48309', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-48309'); }); googletag.cmd.push(function() { googletag.display('gpt-text-300x20-ad2-48309'); }); // Remove current Outbrain //$('#dk-art-outbrain-48309').remove(); //ad before trending $('#mob_rhs1_48309').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-48309 .field-name-body .field-items div.field-item > p'); if(x1 != null && x1.length != 0) { $('#node-48309 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-48309 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-48309'); }); } else { $('#in-article-mob-48309').hide(); $('#in-article-mob-3rd-48309').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-48309','#in-article-830503','#in-article-830452','#in-article-830309','#in-article-830284']; var twids = ['#twblock_48309','#twblock_830503','#twblock_830452','#twblock_830309','#twblock_830284']; var twdataids = ['#twdatablk_48309','#twdatablk_830503','#twdatablk_830452','#twdatablk_830309','#twdatablk_830284']; var obURLs = ['https://www.prajavani.net/article/ನೀರಿಳಿಸಿದ-ದೂರುಗಳು','https://www.prajavani.net/district/raichur/id-ul-fitr-celebrated-830503.html','https://www.prajavani.net/district/raichur/ramadan-celebration-greeting-exchange-830452.html','https://www.prajavani.net/district/raichur/raichur-taluk-officers-meeting-830309.html','https://www.prajavani.net/district/raichur/free-food-in-indira-canteen-started-830284.html']; var vuukleIds = ['#vuukle-comments-48309','#vuukle-comments-830503','#vuukle-comments-830452','#vuukle-comments-830309','#vuukle-comments-830284']; // var nids = [48309,830503,830452,830309,830284]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2021/05/14 14:03:55
https://www.prajavani.net/article/%E0%B2%A8%E0%B3%80%E0%B2%B0%E0%B2%BF%E0%B2%B3%E0%B2%BF%E0%B2%B8%E0%B2%BF%E0%B2%A6-%E0%B2%A6%E0%B3%82%E0%B2%B0%E0%B3%81%E0%B2%97%E0%B2%B3%E0%B3%81
mC4
ಸೌಲಭ್ಯವಿಲ್ಲದ ಕೆಆರ್‌ಐಡಿಎಲ್‌ ಕಾಮಗಾರಿ: ಗುತ್ತಿಗೆದಾರರ ಸಂಘದ ಮಾಧವ ನಾಯಕ ಆರೋಪ - e-ಉತ್ತರಕನ್ನಡ Home › ಜಿಲ್ಲಾ ಸುದ್ದಿ › ಸೌಲಭ್ಯವಿಲ್ಲದ ಕೆಆರ್‌ಐಡಿಎಲ್‌ ಕಾಮಗಾರಿ: ಗುತ್ತಿಗೆದಾರರ ಸಂಘದ ಮಾಧವ ನಾಯಕ ಆರೋಪ ಕಾರವಾರ:ಸಿವಿಲ್ ಗುತ್ತಿಗೆದಾರರ ಸಂಘದ ಕಾರವಾರ ತಾಲ್ಲೂಕು ಘಟಕದವರು ಕಾಮಗಾರಿ ಮಾಹಿತಿಯ ಅಣಕು ಫಲಕ ಪ್ರದರ್ಶಿಸಿದರು ಕಾರವಾರ: ಕರಾವಳಿ ಭಾಗದಲ್ಲಿ ಅತಿವೃಷ್ಟಿಗೆ ಬಾಧಿತವಾದ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಯನ್ನು ತಂತ್ರಜ್ಞರು, ಸಿಬ್ಬಂದಿ, ಸೌಲಭ್ಯ ಇಲ್ಲದ ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಸಿವಿಲ್ ಗುತ್ತಿಗೆದಾರರ ಸಂಘದ ಕಾರವಾರ ತಾಲ್ಲೂಕು ಘಟಕದ ಅಧ್ಯಕ್ಷ ಮಾಧವ ನಾಯಕ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮುಖ್ಯಮಂತ್ರಿ ವಿಶೇಷ ನಿಧಿ ಅಡಿಯಲ್ಲಿ ಜಿಲ್ಲೆಗೆ ಮಂಜೂರಾದ ₹70 ಕೋಟಿ ಅನುದಾನದ ಪೈಕಿ ಕರಾವಳಿ ಭಾಗಕ್ಕೆ ಮೀಸಲಿಟ್ಟ ₹55 ಕೋಟಿ ಮೊತ್ತದ ಕಾಮಗಾರಿಯನ್ನು ಈ ಭಾಗದ ಜನಪ್ರತಿನಿಧಿಗಳು ಕೆ.ಆರ್.ಐ.ಡಿ.ಎಲ್.ಗೆ ಕೊಡಿಸಿ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದ್ದಾರೆ' ಎಂದು ಆರೋಪಿಸಿದರು. 'ಹಿಂದೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಭೂ ಸೇನಾ ನಿಗಮಕ್ಕೆ ಯಾವುದೇ ಕೆಲಸ ಕೊಡಬಾರದು ಎಂದು ಠರಾವು ಮಾಡಲಾಗಿತ್ತು. ಈಗ ಹೆಸರು ಬದಲಾಯಿಸಿ ಕೆ.ಆರ್.ಐ.ಡಿ.ಎಲ್. ಎಂದು ನಾಮಕಾರಣ ಮಾಡಲಾಗಿದ್ದು ಅಧಿಕಾರಿಗಳು ನಿಯಮ ಉಲ್ಲಂಘಿಸಿ ಕಾಮಗಾರಿ ಗುತ್ತಿಗೆ ನೀಡುತ್ತಿದ್ದಾರೆ' ಎಂದರು.
2021/12/09 01:14:19
https://euttarakannada.in/archives/11590
mC4
ಮಳೆಗಾಲದ ಹೊಸ್ತಿಲಲ್ಲಿ ಬಿಬಿಎಂಪಿಯ ನಿರುತ್ಸಾಹ: ಪರಿಹಾರ ಘೋಷಣೆಯಲ್ಲಿ ಫಸ್ಟ್; ವಿಪತ್ತು ನಿರ್ವಹಣೆಯಲ್ಲಿ ಲಾಸ್ಟ್ | Vartha Bharati- ವಾರ್ತಾ ಭಾರತಿ ಬೆಂಗಳೂರಿನಲ್ಲಿವೆ 209 ಅಪಾಯಕರ ಸ್ಥಳಗಳು ಬೆಂಗಳೂರು, ಜೂ.5: ಮಳೆ ಅನಾಹುತದಿಂದ ಜನರು ಮೃತಪಟ್ಟರೆ ಸ್ಥಳದಲ್ಲಿಯೇ ಪರಿಹಾರ ಘೋಷಿಸುವ ಬಿಬಿಎಂಪಿಯು ವಿಪತ್ತು ನಿರ್ವಹಿಸುವಲ್ಲಿ ಮಾತ್ರ ಹಿಂದುಳಿದಿದೆ. 198 ವಾರ್ಡ್‍ಗಳಲ್ಲಿ 209 ಹಾಟ್ ಸ್ಪಾಟ್‍ಗಳನ್ನು ಗುರುತಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ! ಕೊರೋನ ಭೀತಿ ನಡುವೆಯೇ ಜನರು ಜೀವನ ನಡೆಸುತ್ತಿದ್ದು, ಮಳೆ ಬಂದರೆ ಯಾವ ರಸ್ತೆಯಲ್ಲಿ ನೀರು ತುಂಬಿದೆ, ಯಾವ ಮರದಿಂದ ಕೊಂಬೆಗಳು ಬೀಳುತ್ತವೆ ಎಂಬ ಆತಂಕದಲ್ಲಿಯೇ ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ. ಇತ್ತೀಚಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ರಸ್ತೆ ಬದಿಯಲ್ಲಿ ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕಟ್ ಮಾಡಲು ಸೂಚಿಸಿದ್ದರೂ, ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಿಲಿಕಾನ್ ಸಿಟಿ ಬೆಳೆದಂತೆ ಹಾಟ್ ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಒಟ್ಟಾರೆ 209 ಹಾಟ್ ಸ್ಪಾಟ್‍ಗಳಿವೆ ಎಂದು ನೀರುಗಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಅವರು ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಿದ್ದಾರೆ. ಇದೀಗ ಮುಂಗಾರು ಆರಂಭವಾಗಲಿದ್ದು, ವಿಪತ್ತು ನಿರ್ವಹಣೆಗೆ ಪರಿಣಾಮಕಾರಿಯಾಗಿ ಕ್ರಮ ಕೈಕೊಳ್ಳದಿರುವುದು ಕಂಡು ಬಂದಿದೆ. ಮಳೆಗಾಲದಲ್ಲಿ ಎದುರಾಗಬಹುದಾದ ವಿಪತ್ತನ್ನು ಕಳೆದ ವಾರ ನಗರದಲ್ಲಿ ಸುರಿದ ಮಳೆ ಪರಿಚಯಿಸಿಕೊಟ್ಟಿದ್ದರೂ ಬಿಬಿಎಂಪಿ ಮಾತ್ರ ಮಳೆಯ ಬಗ್ಗೆ ಹಾಗೂ ಅದರಿಂದ ಆಗಬಹುದಾದ ಅನಾಹುತದ ಬಗ್ಗೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮಳೆ ನೀರುಗಾಲುವೆ ವಿಭಾಗದಿಂದ ಅಪಾಯಗ್ರಸ್ಥ ಸ್ಥಳಗಳ ಬಗ್ಗೆ ಆಯುಕ್ತರಿಗೆ ವರದಿ ನೀಡಿದ್ದರೂ, ಆಯುಕ್ತರು ಸ್ಥಳ ಪರಿಶೀಲನೆಗೆ ಮುಂದಾಗದೇ ಅನುಮೋದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಪಾಯಕರ ಸ್ಥಳಗಳಲ್ಲಿ ಕೆಲ ಸ್ಥಳಗಳಲ್ಲಿ ಹೆಚ್ಚು ಸಾವು-ನೋವು ಸಂಭವಿಸಲಿವೆ ಎಂದು ಸರ್ವೇ ತಿಳಿಸಿದೆ. ಅದರಲ್ಲಿ ಅತೀ ಹೆಚ್ಚು- ಗಂಭೀರ ಅಪಾಯಕರ ಸ್ಥಳಗಳೆಂದು 58 ಸ್ಥಳಗಳನ್ನು ಗುರುತಿಸಿದ್ದಾರೆ. ಹಾಗೆಯೇ ಸಾಮಾನ್ಯ ಅಪಾಯಕರ ಸ್ಥಳಗಳ ಸಂಖ್ಯೆ 151ರಷ್ಟಿದೆ ಎಂದು ವರದಿ ನೀಡಿದ್ದಾರೆ. ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ದುರಂತಕ್ಕೆ ಕಾರಣವಾಗುವ ಸ್ಥಳಗಳಿವೆ ಎನ್ನುವುದನ್ನು ಪತ್ತೆ ಮಾಡಿರುವ ಮಳೆನೀರು ಕಾಲುವೆ ವಿಭಾಗ ಅದು ಯಾವ ಮಾನದಂಡಗಳನ್ನಿಟ್ಟುಕೊಂಡು ಈ ಅಪಾಯಗ್ರಸ್ಥ ಸ್ಥಳಗಳನ್ನು ಪತ್ತೆ ಮಾಡಿದ್ದಾರೆ ಎಂಬುದನ್ನು ವಿವರಿಸಿಲ್ಲ. ಆದರೆ ಇದೊಂದು ವಾಸ್ತವವಲ್ಲದ ಪಟ್ಟಿ ಎಂಬುದು ಕೆಲ ತಜ್ಞರು ಆರೋಪಿಸಿದ್ದಾರೆ. ರಾಜಕಾಲುವೆಗಿಲ್ಲ ಶೇ. 40 ರಷ್ಟು ತಡೆಗೋಡೆ ಇಷ್ಟೊಂದು ಅಪಾಯಕಾರಿ ಸನ್ನಿವೇಶದ ಚಿತ್ರಣವನ್ನು ಬಿಬಿಎಂಪಿಗೆ ಸಲ್ಲಿಸಿದರೂ ಈವರೆಗೆ ರಾಜಕಾಲುವೆಗಳಲ್ಲಿನ ಹೂಳು ಹಾಗೇ ಉಳಿದಿದೆ. ಇದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ನೂರಾರು ಕೋಟಿ ರೂ. ಅನುದಾನ ನೀಡಿದರೂ, ಇನ್ನೂ ಶೇ. 40 ರಷ್ಟು ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಬಾಕಿ ಉಳಿದಿದೆ. ಹೂಳು ಏಕೆ ಎತ್ತಲಿಲ್ಲ ಎಂದು ಪ್ರಶ್ನಿಸಿದರೆ ಕೊರೋನ ಹಿನ್ನೆಲೆ ಲಾಕ್‍ಡೌನ್ ಎಂಬ ನೆಪ ಅಧಿಕಾರಿಗಳು ಹೇಳುತ್ತಾರೆ ಎಂಬುವುದು ಸಾರ್ವಜನಿಕರ ದೂರು. ವಲಯಗಳು- ಅತೀ ಅಪಾಯಗ್ರಸ್ಥ ಸ್ಥಳ- ಸಾಮಾನ್ಯ ಅಪಾಯಗ್ರಸ್ಥ ಸ್ಥಳ- ಒಟ್ಟು ಪೂರ್ವ ವಲಯ- 05- 15- 20 ಪಶ್ಚಿಮ ವಲಯ- 05- 33- 38 ದಕ್ಷಿಣ ವಲಯ- 03- 07- 10 ಕೋರಮಂಗಲ ಕಣಿವೆ- 10- 19- 29 ಯಲಹಂಕ- 04- 07- 11 ಮಹಾದೇವಪುರ- 11- 21- 32 ಬೊಮ್ಮನಹಳ್ಳಿ- 12- 07- 19 ಆರ್ ಆರ್ ನಗರ- 08- 29- 37 ದಾಸರಹಳ್ಳಿ- 00- 13- 13 ಒಟ್ಟು- 58- 151- 209 ನಗರದಲ್ಲಿ 209 ಹಾಟ್ ಸ್ಪಾಟ್‍ಗಳನ್ನು ಗುರುತಿಸಲಾಗಿದ್ದು, ಎಲ್ಲ ವಲಯಗಳ ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ನಾನು ಮೂರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡಿಸಿದ್ದೇನೆ. ಲಾಕ್ ಡೌನ್ ಹಿನ್ನೆಲೆ ರಾಜಕಾಲುವೆಯ ಹೂಳು ಎತ್ತಲಾಗಿರಲಿಲ್ಲ. ಇದೀಗ ಆರಂಭವಾಗಿದೆ. ತಡೆ ಗೋಡೆ ಕಟ್ಟಲು ಇನ್ನಷ್ಟು ಅನುದಾನ ನೀಡುವಂತೆ ಸರಕಾರಕ್ಕೆ ತಿಳಿಸಲಾಗಿದೆ.
2020/07/07 08:19:16
http://www.varthabharati.in/article/bengaluru/246298
mC4
ಹಿಜಾಬ್ ತೀರ್ಪು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಗೈರು ಹಿಜಾಬ್ ತೀರ್ಪು ವಿರುದ್ಧ ಮುಸ್ಲಿಂ ಸಂಘಟನೆಗಳ ಕರ್ನಾಟಕ ಬಂದ್ ಕರೆ ನಡುವೆಯೇ ಜಿಲ್ಲೆಯ ಕಾಲೇಜುಗಳಲ್ಲಿ ಗುರುವಾರದಿಂದ ಪದವಿ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಆದರೆ, ಬಹುತೇಕ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಯಿಂದ ದೂರ ಉಳಿದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ದಕ್ಷಿಣ ಕನ್ನಡ: ಶಾಲಾ-ಕಾಲೇಜುಗಳ ಪ್ರದೇಶದಲ್ಲಿ ನಿಷೇಧಾಜ್ಞೆ ಫೆ.26 ವರೆಗೂ ಮುಂದುವರಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಫೆ.26 ವರೆಗೂ ಮುಂದುವರೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ತಾಕತ್ತಿದ್ದರೆ ನಾನು ಹಿಜಾಬ್ ಧರಿಸಿ ಬಂದಾಗ ವಿಧಾನಸೌಧದೊಳಗೆ ತಡೆಯಲಿ ನೋಡೋಣ: ಶಾಸಕಿ ಕನೀಝ್ ಫಾತಿಮ ಸವಾಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭಾಗಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ಅಡ್ಡಿಪಡಿಸುವ ಕಾಲೇಜು ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರ ವಿರುದ್ಧ ಹರಿಹಾಯ್ದಿರುವ ಶಾಸಕಿ ಕನೀಝ್ ಫಾತಿಮಾ, ವಿಧಾನ ಸೌಧದೊಳಗೆ ಸಾಧ್ಯವಾದರೆ ತಾವು ಹಿಜಾಬ್ ಧರಿಸಿಕೊಂಡು ಹೋಗುವುದನ್ನು ತಡೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಕೊರೋನಾ ಕರ್ಫ್ಯೂ ತೆರವು: ಮತ್ತೆ ಮೊಳಗಲಿದೆ ಕಂಬಳದ ಕಹಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ನೈಟ್ ಕರ್ಫ್ಯೂ ತೆರವುಗೊಂಡಿದ್ದು, ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ 2021-22ನೇ ಸಾಲಿನ ಉಳಿದ ರೇಸ್‌ಗಳನ್ನು ಪುನರಾರಂಭಿಸಲು ಸಿದ್ಧವಾಗಿದೆ. ಹೆಚ್ಚಿದ ಕೊರೋನಾ ಸೋಂಕು: ದಕ್ಷಿಣ ಕನ್ನಡದಲ್ಲಿ 12 ಶಾಲೆಗಳು ಬಂದ್ ದಕ್ಷಿಣ ಕನ್ನಡದಲ್ಲಿ ಶಾಲಾ ಮಕ್ಕಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದ್ದು, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಂಕಿಗೊಳಗಾಗಿದ್ದಾರೆ. ಅಲ್ಲದೆ, 68 ಶಾಲಾ ಶಿಕ್ಷಕರಲ್ಲೂ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಸೋಂಕಿರುವ ಶಾಲೆಗಳನ್ನು ಬಂದ್ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ ಎಂದು ತಿಳಿದುಬಂದಿದೆ.
2022/05/24 15:46:23
https://www.kannadaprabha.com/topic/Dakshina_Kannada
mC4
ಅನಂತ್ ಕುಮಾರ್ ಹೆಗಡೆ - ವಿಕಿಪೀಡಿಯ ೩ ವಯಕ್ತಿಕ ಜೀವನ ೫ ಸಾಮಾಜಿಕ ಚಟುವಟಿಕೆಗಳು ಅನಂತ್ ಕುಮಾರ್ ಹೆಗಡೆಯವರು ೧೯೬೮ರ ಮೇ ೨೦ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ಹೆಗಡೆ ಮತ್ತು ತಾಯಿ ಲಲಿತಾ. ಇವರು ತಮ್ಮ ಪದವಿಯನ್ನು ಶಿರಸಿಯ ಎಂಎಂ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೆಜಿನಲ್ಲಿ ಪಡೆದರು. ಇವರ ಕಾಲೇಜು ದಿನಗಳಲ್ಲಿ, ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದರು.[೧] ವಯಕ್ತಿಕ ಜೀವನಸಂಪಾದಿಸಿ ಅನಂತ್ ಕುಮಾರ್ ಹೆಗಡೆಯವರು ೧೯೯೮ರಲ್ಲಿ ಶ್ರೀರೂಪ ಹೆಗಡೆವರನ್ನು ವಿವಾಹವಾದರು. ಈ ದಂಪತಿಗಳಿಗೆ ಒಬ್ಬಳು ಪುತ್ರಿ ಮತ್ತು ಒಬ್ಬ ಪುತ್ರನಿದ್ದಾನೆ. ೧೯೯೬ರಲ್ಲಿ ನೆಡೆದ ೧೧ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದರು. ನಂತರ ಐದು ಬಾರಿ ಉತ್ತರ ಕನ್ನಡ ಕ್ಷೇತ್ರದ ಸಂಸದರಾಗಿ ಚುನಾಯಿತರಾದರು. ೨೦೧೬ರ ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಬಿನೆಟ್‌ನಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಗಿದ್ದರು.[೨] ಸಾಮಾಜಿಕ ಚಟುವಟಿಕೆಗಳುಸಂಪಾದಿಸಿ ಅನಂತ್ ಕುಮಾರ್ ಹೆಗಡೆಯವರು ಕದಂಬ ಸಂಸ್ಥೆಗಳ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆಗಳು ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಕ್ಷೇತ್ರದ ಕಾರ್ಯದಲ್ಲಿ ಭಾಗಿಯಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತದೆ. ಬಿಜೆಪಿ ಆಡಳಿತಕ್ಕೆ ಬಂದಿರುವುದು ಸಂವಿಧಾನದ ಬದಲಾವಣೆ ಮಾಡಲು ಎನ್ನುವ ಹೇಳಿಕೆ ನೀಡಿದ್ದಾರೆ[೩] ಇತಿಹಾಸದ ಪ್ರಕಾರ ಉಪವಾಸಕ್ಕೆ ಬ್ರಿಟಿಷರು ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು. ಇದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟಿ ಹೋಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಬಳಿಯೇ ಹೇಗೆ ಹೋರಾಟ ಮಾಡಬೇಕು ಎಂದು ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು;ಹೋರಾಟ ನಡೆದಿತ್ತು. ಮಹಾತ್ಮ ಗಾಂಧೀಜಿ ನಡೆಸಿದ ಹೋರಾಟ, ಉಪವಾಸ ಸತ್ಯಾಗ್ರಹ ಸಹ ಒಂದು ನಾಟಕ' ಎಂದು ಹೆಗಡೆ ಇತ್ತೀಚೆಗೆ ಹೇಳಿದ್ದರು;[೪][೫] ↑ https://indianexpress.com/article/who-is/who-is-anant-kumar-hegde-4826135/ ↑ https://www.ndtv.com/india-news/cabinet-reshuffle-karnataka-lawmaker-and-taekwondo-expert-ananthkumar-hegde-becomes-minister-of-stat-1745491 ↑ List of BJP leaders who made controversial remarks - Anant Kumar Hegde's controversial comments on secularism | The Economic Times ↑ 'ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಿದ್ದಲ್ಲ: ಸಂಸದ ಅನಂತಕುಮಾರ ಹೆಗಡೆ, ಪ್ರಜಾವಾಣಿ; 01 ಫೆಬ್ರವರಿ 2020 ↑ https://www.prajavani.net/stories/stateregional/congress-attacks-anant-kumar-hegde-on-independent-movement-statement-702820.html
2021/06/21 23:11:50
https://kn.m.wikipedia.org/wiki/%E0%B2%85%E0%B2%A8%E0%B2%82%E0%B2%A4%E0%B3%8D_%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D_%E0%B2%B9%E0%B3%86%E0%B2%97%E0%B2%A1%E0%B3%86
mC4
ಸರ್ಕಸ್ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಿಸಿದ ಶಾಸಕ ಗಣೇಶ ಹುಕ್ಕೇರಿ - Public TV ಚಿಕ್ಕೋಡಿ: ಲಾಕ್‍ಡೌನ್ ಆಗುವ ಮೊದಲು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಸರ್ಕಸ್ ಪ್ರದರ್ಶಿಸಲು ಸರ್ಕಸ್ ಕಲಾವಿದರು ಆಗಮಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರದರ್ಶನ ಇಲ್ಲದೆ ಹಣ, ಊಟವಿಲ್ಲದೆ ಕೊರಗುತ್ತಿದ್ದ ಸರ್ಕಸ್ ಕಲಾವಿದರಿಗೆ ಶಾಸಕ ಗಣೆಶ್ ಹುಕ್ಕೇರಿ ದಿನಸಿ ಸಾಮಾಗ್ರಿ ವಿತರಿಸಿದ್ದಾರೆ. ಸರ್ಕಸ್ ಕಂಪನಿಯ ಕಲಾವಿದರು ಸಂಕಷ್ಟದಲ್ಲಿ ಇರುವುದನ್ನು ಮನಗಂಡು, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಸುಮಾರು ಆರವತ್ತಕ್ಕೂ ಹೆಚ್ಚು ಕಲಾವಿದರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ರೇಶನ್ ಹಾಗೂ ಗೃಹಪಯೋಗಿ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಇದನ್ನೂ ಓದಿ: ಮಂಗಳಮುಖಿಯರಿಗೆ ಲಸಿಕೆಯೊಂದಿಗೆ ದಿನಸಿ ಕಿಟ್ ವಿತರಣೆ ಕೊರೊನಾ ಹಾಗೂ ಲಾಕಡೌನ್ ಹಿನ್ನೆಲೆ ಅನೇಕ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ದಿನದ ಜೀವನ ಸಾಗಿಸುವುದು ಕೂಡ ಕಷ್ಟವಾಗಿದೆ. ಹಿಗಾಗಿ ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಗೊಳಗಾದ ಕಲಾವಿದರ ತಂಡಕ್ಕೆ, ಒಂದು ತಿಂಗಳಿಗೆ ಸಾಕಾಗುವಷ್ಟು ಗೃಹಪಯೋಗಿ ಸಾಮಗ್ರಿಗಳನ್ನು ಹಂಚಿದ್ದೇವೆ. ಈ ಮೂಲಕ ಕಲಾವಿದರ ಸಂಕಷ್ಟದಲ್ಲಿ ಭಾಗಿಯಾಗುವ ಕೆಲಸವನ್ನ ನಾವು ಮಾಡುತ್ತೀದ್ದೇವೆ ಎಂದು ಶಾಸಕ ಗಣೇಶ್ ಹುಕ್ಕೇರಿ ಹೇಳಿದ್ದಾರೆ. ಈ ವೇಳೆ ಚಿಕ್ಕೋಡಿ ಪುರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. Tags: chikkodi, Corona, Ganesh hukkeri, publictv, ಕೊರೊನಾ, ಗಣೆಶ್ ಹುಕ್ಕೇರಿ, ಚಿಕ್ಕೊಡಿ, ದಿನಸಿ, ಪಬ್ಲಿಕ್ ಟಿವಿ
2021/06/22 20:57:14
https://publictv.in/groceries-distributes-to-circus-artists-ganesh-hukkeri-chikkod/
mC4
ಕೊಯರ್ ಸಂಚಿಕೆ - ಮಾರ್ಚ್, 2014 ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಕೊಯರ್) ಸಂಚಿಕೆ - ಮಾರ್ಚ್ 6, 2014 ನೀಲಿ ಬಣ್ಣದ ಪದಗಳಿಗೆ 'ವೆಬ್ ಹೈಪರ್ ಲಿಂಕ್ ' ಮಾಡಲಾಗಿದೆ ; ಅಲ್ಲಿ ಕ್ಲಿಕ್ ಮಾಡುವ ಮೂಲಕ ಆ ವಿಷಯಕ್ಕೆ ಹೆಚ್ಚಿನ ಮಾಹಿತಿ ಪಡೆಯಬಹುದು. ಫೆಬ್ರವರಿ ತಿಂಗಳಿನಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಿಗೆ 3 ದಿನದ ಕೊಯರ್ ಕಾರ್ಯಾಗಾರ ನಡೆಸಲಾಯಿತು. ಜಿಲ್ಲಾ ಹಂತದ ಅನುಕ್ರಮ ಕಾರ್ಯಗಾರಗಳ ಅನುಭವ ಹಂಚಿಕೆ, 2014-15 ಸಾಲಿನ ವಿಷಯ ಶಿಕ್ಷಕರ ವೇದಿಕೆ ಮತ್ತು ಕೊಯರ್ ಮುಂದಿನ ಹಂತಗಳ ಯೋಜನೆಯ ಬಗ್ಗೆ ಚರ್ಚಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು . ಸಾರಾಂಶಿಕರಿಸಿದ ಅನುಕ್ರಮ ಕಾರ್ಯಗಾರಗಳಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಈ ಕೆಳಕಂಡ ಲಿಂಕ್ ಗಳಲ್ಲಿ ನೋಡಬಹುದು. ಗಣಿತ ಕಾರ್ಯಗಾರ ಅಭಿಪ್ರಾಯಗಳು ವಿಜ್ಞಾನ ಕಾರ್ಯಗಾರ ಅಭಿಪ್ರಾಯಗಳು ಸಮಾಜವಿಜ್ಞಾನ ಕಾರ್ಯಗಾರ ಅಭಿಪ್ರಾಯಗಳು ಮುಖ್ಯ ಶಿಕ್ಷಕರ ಸಾಹಿತ್ಯ – ಶಾಲಾ ಕಾಣ್ಕೆ ಶಾಲಾ ಕಾಣ್ಕೆ ಬಗೆಗಿನ ಸಾಹಿತ್ಯ - ಈ ಲಿಂಕ್ ಮೂಲಕ ಪ್ರೋ.ಕೈ ಮಿಂಗ್ ಚಾಂಗ್ ರವರ "Vision in Quality Schooling" ಪುಸ್ತಕದ ಕನ್ನಡ ಅವತರಣಿಕೆಯನ್ನು ಓದಬಹುದು. ಈ ಕನ್ನಡ ಅವತರಣಿಕೆಯನ್ನು ಚಿತ್ರದುರ್ಗ ಡಯಟ್ ನ ಶ್ರೀಮತಿ. ಸುಧಾ ಮೇಡಮ್ ರವರು ರಚಿಸಿದ್ದಾರೆ. ಪ್ರಶ್ನೆ ಪತ್ರಿಕೆಗಳು, ನೀಲ ನಕ್ಷೆಗಳು ಮತ್ತು ಸಿ.ಸಿ.ಇ ಸಾಮಗ್ರಿಗಳು ಗಣಿತ ಪ್ರಶ್ನೆ ಪತ್ರಿಕೆಗಳು ವಿಜ್ಞಾನ ಪ್ರಶ್ನೆ ಪತ್ರಿಕೆಗಳು ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಗಳು ವಿಜ್ಞಾನ ಸಂಪನ್ಮೂಲಗಳು GHS.ಯಾದಗಿರಿ ಶಾಲೆಯೆ ಶ್ರೀಮತಿ.ಜ್ಯೋತಿ ಗೊಬ್ಬಿನವರ್ ರಚಿಸಿರುವ "ಎಲೆಗಳ ಅಡ್ಡ ಸೀಳುವಿಕೆಯ ಪ್ರಯೋಗದ" ವೀಡಿಯೋ ಮತ್ತು GHS ಚಂದ್ರಿಕಿ ಶಾಲೆಯ ಶ್ರೀಮತಿ ಖಲೀಮುನ್ನಿಸ್ಸಾ ರವರು ರಚಿಸಿರುವ 'ರಾಸಾಯನಿಕ ಪ್ರತಿಕ್ರಿಯೆಗಳ '. ವೀಡಿಯೋಗಳು ಕೊಯರ್ ನ ವಿಜ್ಞಾನ ಪುಟದಲ್ಲಿ ಲಭ್ಯವಿವೆ. ಏಪ್ರಿಲ್ /ಮೇ ತಿಂಗಳಿನಲ್ಲಿ ಜಿಯೋಜೀಬ್ರಾ ಮತ್ತು ಟರ್ಟಲ್ ಆರ್ಟ ಬಗೆಗಿನ ವಿಶೇಷ ಕಾರ್ಯಗಾರ ಅಥವಾ ಅಂತರ್ಜಾಲ ಕೋರ್ಸ್ ನಡೆಸಲು ಯೋಜಿಸಲಾಗಿದೆ. ಈ ಕೋರ್ಸ್ ನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು koer@karnatakaeducation.org.in. ವಿಳಾಸಕ್ಕೆ ಇಮೇಲ್ ಕಳುಹಿಸಬಹುದು. ಕಲಿಕಾರ್ಥಿಗಳ ಸ್ಪಂದನೆಗನುಗುಣವಾಗಿ ಕೋರ್ಸ್ ಯೋಜಿಸಲಾಗುವುದು. ಥಂಡರ್ ಬರ್ಡ್ ಎಂಬುದು ಒಂದು ಇ-ಮೇಲ್ ಕ್ಲೈಂಟ್ ಆಗಿದ್ದು ನಮ್ಮ ಇಮೇಲ್ ಗಳನ್ನು ನಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ನಮ್ಮ ಇ-ಮೇಲ್ ಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು ಕಲಿಕಾ ಸಂಪನ್ಮೂಲವಾಗಿ ಬಳಸಬಹುದು. ವಿಷಯ ಶಿಕ್ಷಕರ ವೇದಿಕೆಯು ಇ-ಮೇಲ್ ಆಧಾರಿತ ವೇದಿಕೆ ಯಾಗಿರುವುದರಿಂದ ಈ ಥಂಡರ್ ಬರ್ಡ್ ಬಳಕೆಯು ಬಹಳ ಉಪಯುಕ್ತವಾಗುವುದು. ಥಂಡರ್ ಬರ್ಡ್ ಬಗೆಗಿನ ಸಾಹಿತ್ಯ ಕೈಪಿಡಿ ಗಾಗಿ ಇಲ್ಲಿ ಕ್ಲಿಕ್ ಮಾಡಿ. ವಿದ್ಯಾರ್ಥಿಗಳು ತಾವು ಸಂಗ್ರಹಿಸಿದ ಮಾಹಿತಿಯನ್ನು ಕಥೆ ರೂಪದಲ್ಲಿ ಬರೆದು ನಂತರ ವಿದ್ಯುನ್ಮಾನ ಮಾದ್ಯಮದಲ್ಲಿ ಹಂಚಿಕೊಳ್ಳುವ ವಿಧಾನ ಬಹಳ ಪರಿಣಾಮಕಾರಿಯಾಗಿದೆ, ಯಾದಗಿರಿ ಜಿಲ್ಲೆಯGHS ಮೋಟನಹಳ್ಳಿ ಮತ್ತು GHS ಹೊನಗೇರಾ ಶಾಲೆಯ ಮಕ್ಕಳು ಭಾಗವಹಿಸಿದ ವಿದ್ಯುನ್ಮಾನ ಕಥೆ ಹಂಚಿಕೊಳ್ಳುವಿಕೆ ಚಟುವಟಿಕೆಯ ವೀಡಿಯೋಗಳನ್ನು ವೀಕ್ಷಿಸಿ. ನಿಮಗಿದು ಗೊತ್ತೆ..? ಆಸಕ್ತಿಯುಳ್ಳ ಶಿಕ್ಷಕರು Karnataka School wiki ಯ ಲಾಗಿನ್ ಐಡಿ ಪಡೆಯುವ ಮೂಲಕ ತಮ್ಮದೇ ಶಾಲೆಯ ಸ್ಕೂಲ್ ವಿಕಿ ಪುಟವನ್ನು ರಚಿಸಿ ಕೊಂಡು ಶಾಲೆಯ ಮಾಹಿತಿಯನ್ನು ಈ ಪುಟದಲ್ಲಿ ಹಂಚಿಕೊಳ್ಳಬಹುದಾಗಿದೆ. ತಮ್ಮ ಶಾಲೆಯ ಸ್ಕೂಲ್ ವಿಕಿ ಪುಟ ರಚಿಸಲು KOER@karnatakaeducation.org.in ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು.
2020/08/13 13:28:44
https://karnatakaeducation.org.in/KOER/KOER_Newsletter_Mar06-kn.html
mC4
ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ – Public TV Home/Cinema/ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿನ ಹೆಸರನ್ನು ಉಳಿಸಿ ಎಂದು ಸ್ಯಾಂಡಲ್‍ವುಡ್ ನಟ ಅನಿರುದ್ಧ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಐಟಿ ಹಬ್, ಗ್ರೀನ್ ಸಿಟಿ ಹೀಗೆ ಇಡೀ ವಿಶ್ವದಲ್ಲಿಯೇ ಗಮನ ಸೆಳೆದ ಬೆಂಗಳೂರು ಇತ್ತೀಚೆಗೆ ಅವ್ಯವಸ್ಥೆಗಳ ಕೂಪವಾಗುತ್ತಿದೆ. ಬೆಂಗಳೂರಿನ ಸಮಸ್ಯೆಯನ್ನು ಆಲಿಸಲು ಪ್ರತ್ಯೇಕವಾಗಿರುವ ಇಲಾಖೆಯನ್ನು ರಚಿಸಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಕಿವಿ ಹಿಂಡುವ ಕೆಲಸ ಮಾಡಬೇಕು. ಇಲ್ಲಿನ ಜನಪ್ರತಿನಿಧಿಗಳು ಇಚ್ಛಾ ಶಕ್ತಿ ಪ್ರದರ್ಶಿಸಿದರೆ ಸ್ವಚ್ಛ ನಗರಿ ಬೆಂಗಳೂರು ಆಗಬಹುದು ಅಂತ ಪ್ರಧಾನಿಗೆ ಪತ್ರದ ಮೂಲಕ ಅನಿರುದ್ಧ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್‍ಗೆ ಪಿತೃ ವಿಯೋಗ ಕಳೆದ ವಾರವಷ್ಟೇ ಬ್ರ್ಯಾಂಡ್ ಬೆಂಗಳೂರು ಕಡೆ ಸರ್ಕಾರ ಗಮನಹರಿಸಬೇಕು ಎಂದು ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪತ್ರ ಬರೆದಿದ್ದರು. ಇದನ್ನೂ ಓದಿ: ಮಳೆ ಅವಾಂತರದಿಂದ ಬೆಂಗಳೂರು ಬ್ರ್ಯಾಂಡ್ ಉಳಿಸಿಕೊಳ್ಳಲು ಸಿಎಂಗೆ ಪತ್ರ ಬರೆದ ಎಸ್ಎಂ ಕೃಷ್ಣ ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮುಂಗಾರ ಪೂರ್ವ ಮಳೆಯಗುತ್ತಿದ್ದು ಇದರಿಂದ ಹಲವು ಅವಾಂತರಗಳು ಘಟಿಸಿ ಜನಜೀವನಕ್ಕೆ ತೀವ್ರ ತೊಂದರೆಯನ್ನು ಉಂಟುಮಾಡಿದೆ. ಅದರಲ್ಲೂ ವಿಶ್ವದಲ್ಲಿನ ವೇಗದ ಬೆಳವಣಿಗೆಗಳ ನಗರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರದಲ್ಲಿನ ಮಳೆ ಅನಾಹುತಗಳು ಆತಂಕ ಹುಟ್ಟಿಸಿದೆ. ಇದು 'ಬ್ರಾಂಡ್ ಬೆಂಗಳೂರು' ಹೆಸರಿಗೆ ಆತಂಕ ಸೃಷ್ಟಿಸಿದ್ದು, ಭವಿಷ್ಯತ್ತಿನಲ್ಲಿ ಇದರಿಂದ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯಕ್ಕೆ ಬಂಡವಾಳ ಹೂಡುವ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಅದರಿಂದ ಇಲ್ಲಿ ಪ್ರತಿಷ್ಟಾಪನೆಗೊಳ್ಳಬಹುದಾದ ಕೈಗಾರಿಕಾ ವಸಹಾತುಗಳು ಬೇರೆ ರಾಜ್ಯಗಳ ಪಾಲಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಎಸ್.ಎಂ. ಕೃಷ್ಣ ಅವರು ಪತ್ರದಲ್ಲಿ ಕಳವಳವನ್ನು ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ನಟ ಅನಿರುದ್ಧ್ ಕೂಡ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಪ್ರಶ್ನೆ ಮಾಡಿದ್ದಾರೆ.
2022/06/28 21:42:19
https://publictv.in/save-the-name-of-the-brand-bangalore-actor-anirudh-has-written-letter-to-prime-minister-narendra-modi/
mC4
ಶ್ರೀಮನ್ನಾರಾಯಣನಿಂದ ಸಾಕಷ್ಟು ಕಲಿತೆ: ವಿಜಯವಾಣಿ ಸಂದರ್ಶನದಲ್ಲಿ ರಕ್ಷಿತ್​ ಮನದಾಳ · ವಿಜಯವಾಣಿ ಸುದ್ದಿಜಾಲ June 6, 2019 3:03 AM No Comments ನಟ ರಕ್ಷಿತ್ ಶೆಟ್ಟಿ ಅಭಿನಯದ ಯಾವುದೇ ಸಿನಿಮಾ ತೆರೆಕಾಣದೆ ಬರೋಬ್ಬರಿ ಎರಡೂವರೆ ವರ್ಷವಾಯ್ತು. ಅಷ್ಟು ಸಮಯ ಅವರು 'ಅವನೇ ಶ್ರೀಮನ್ನಾರಾಯಣ' ಚಿತ್ರದ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ರಕ್ಷಿತ್ ಜನ್ಮದಿನದ ಹಿನ್ನೆಲೆಯಲ್ಲಿ ಇಂದು (ಜೂ.6) 2ನೇ ಟೀಸರ್ ರಿಲೀಸ್ ಆಗುತ್ತಿದೆ. ಅಲ್ಲದೆ, ಒಂದು ವರ್ಷದ ನಂತರ ಅವರು ಮತ್ತೆ ಸಾಮಾಜಿಕ ಜಾಲತಾಣಕ್ಕೂ ಮರಳಿದ್ದಾರೆ. # ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿರಿ. ಇದರಿಂದ ಅಭಿಮಾನಿಗಳೊಂದಿಗೆ ಸಂವಹನ ಮಾಡಲಾಗುತ್ತಿಲ್ಲ ಎಂಬ ಬೇಸರ ಇತ್ತಾ? ಖಂಡಿತವಾಗಿಯೂ ಆ ಬಗ್ಗೆ ಬೇಸರವಿದೆ. ಆದರೆ, ನಾನು ಇದರಿಂದ ದೂರ ಇರುವುದಕ್ಕೆ ಕಾರಣವೂ ಇತ್ತು. ಸೋಷಿಯಲ್ ಮೀಡಿಯಾಗೆ ಒಂದು ರೀತಿಯಲ್ಲಿ ಅಡಿಕ್ಟ್ ಆಗಿಬಿಟ್ಟಿದ್ದೆ. ಒಂದು ಸಲ ಅದರೊಳಕ್ಕೆ ಎಂಟ್ರಿ ಆದರೆ, ತುಂಬ ಸಮಯ ಅಲ್ಲೇ ವ್ಯರ್ಥವಾಗುತ್ತಿತ್ತು. ನನ್ನ ಬೇರೆ ಕೆಲಸಗಳಿಗೆ ಟೈಮ್ ನೀಡಲು ಆಗುತ್ತಿರಲಿಲ್ಲ. ಯಾರದ್ದಾದರೂ ಟ್ವೀಟ್ ನೋಡಿದರೆ, ಅದಕ್ಕೆ ರಿಪ್ಲೈ ಮಾಡಬೇಕು ಎನಿಸುತ್ತಿತ್ತು. ಮಾಡದಿದ್ದರೆ ಬೇಸರವಾಗುತ್ತಿತ್ತು. ಕೊನೆಗೆ ಒಂದು ತಂಡಕ್ಕೆ ಅದನ್ನು ನಿಭಾಯಿಸುವುದಕ್ಕೆ ಸೂಚಿಸಿದೆ. ಆದರೆ, ಅದು ಕೂಡ ನನಗ್ಯಾಕೋ ಇಷ್ಟವಾಗಲಿಲ್ಲ. ಹಾಗಾಗಿ, ಗ್ಯಾಪ್ ತೆಗೆದುಕೊಂಡೆ. ಈಗ ಟೀಮ್ ರಕ್ಷಿತ್ ಶೆಟ್ಟಿ ಎಂಬ ಹೆಸರಿನಲ್ಲೇ ಟ್ವಿಟರ್ ಅಕೌಂಟ್ ಇರಲಿದೆ. ಆ ಮೂಲಕ ಅಭಿಮಾನಿಗಳೊಂದಿಗೆ ಸಂವಹನ ಮುಂದುವರಿಸುತ್ತೇನೆ. # ಈ ಬಾರಿಯ ಬರ್ತ್​ಡೇ ವಿಶೇಷಗಳೇನು? 'ಅವನೇ ಶ್ರೀಮನ್ನಾರಾಯಣ' ಚಿತ್ರದ ಒಂದು ಟೀಸರ್ ರಿಲೀಸ್ ಆಗಲಿದೆ. ಇದರಲ್ಲಿ ಯಾವುದೇ ವಿಷಯಗಳನ್ನು ಹೇಳುತ್ತಿಲ್ಲ. ಮುಂದೆ ಒಂದು ಟ್ರೇಲರ್ ಬರಲಿದೆ. ನನ್ನ ಹುಟ್ಟುಹಬ್ಬಕ್ಕೆ ಒಂದು ದಿನ ಇರುವಾಗಲೇ ಸಿನಿಮಾದ ಶೂಟಿಂಗ್ ಮುಗಿದಿದೆ. ಅದು ನನಗೆ ಬಹಳ ಖುಷಿ ನೀಡಿದೆ. # 'ಕಿರಿಕ್ ಪಾರ್ಟಿ' ಬಳಿಕ ತುಂಬ ಸಮಯ ತೆಗೆದುಕೊಂಡು ಈ ಸಿನಿಮಾ ಮಾಡಿ ದ್ದೀರಿ. ಎರಡೂವರೆ ವರ್ಷ ನಿಮ್ಮನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ.. ಫಸ್ಟ್ ಡೇ ಫಸ್ಟ್ ಶೋ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ನಾವು ಕಳೆದ ಮೂರು ವರ್ಷಗಳಿಂದ ಶ್ರಮ ಹಾಕಿದ್ದೇವೆ. ಆ ಸಿನಿಮಾವನ್ನು ನೋಡುವುದಕ್ಕೆ ಪ್ರೇಕ್ಷಕರಿಗೆ ಎಷ್ಟು ಕುತೂಹಲವಿದೆಯೋ, ಅದೇ ಥರ ಅವರ ಪ್ರತಿಕ್ರಿಯೆಯನ್ನು ನೋಡುವುದಕ್ಕೆ ನನಗೂ ಕುತೂಹಲವಿದೆ. ನಾನು ಮಾಡಿರುವ ಸಿನಿಮಾಗಳಲ್ಲೇ ಇದು ನನಗೆ ತುಂಬ ಅತಿ ಹೆಚ್ಚು ತೃಪ್ತಿ ನೀಡಿದೆ. ಒಬ್ಬ ಕಲಾವಿದನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ ಈ ಸಿನಿಮಾ ಸಾಕಷ್ಟು ಕಲಿಸಿದೆ. ಒಬ್ಬ ವಿದ್ಯಾರ್ಥಿ ಡಿಗ್ರಿ ಕಲಿತು ಕೆಲಸ ಮಾಡುವುದಕ್ಕೆ ಶುರು ಮಾಡುವಂತೆ ಈ ಸಿನಿಮಾ ಕೂಡ ನನಗೆ ಒಂದು ರೀತಿಯ ಡಿಗ್ರಿ ಆಗಿದೆ. # ಮೊದಲ ಬಾರಿ ನಿಮ್ಮ ಚಿತ್ರವೊಂದು ಬೇರೆ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ.. ನನ್ನ ಪ್ರಕಾರ, ಮುಂಬರುವ ಬಹುತೇಕ ಸಿನಿಮಾಗಳು ಇದೇ ಮಾದರಿಯನ್ನು ಅನುಸರಿಸಲಿವೆ. ತಮ್ಮ ಸಿನಿಮಾ ಬಗ್ಗೆ ಭರವಸೆ ಇದ್ದಾಗ ಎಲ್ಲರೂ ಬೇರೆ ಭಾಷೆಗೆ ಡಬ್ ಮಾಡಿ, ರಿಲೀಸ್ ಮಾಡುತ್ತಾರೆ. ಈ ಮೂಲಕ ಸಿನಿಮಾಗಳು ಬೇರೆ ಬೇರೆ ಪ್ರೇಕ್ಷಕರಿಗೆ ರೀಚ್ ಆಗಲಿವೆ. ಸದ್ಯ ನಮ್ಮ ಚಿತ್ರದ ಟೀಸರ್ ಕನ್ನಡದಲ್ಲಿ ಇರಲಿದೆ. ಟ್ರೇಲರ್ ಐದು ಭಾಷೆಯಲ್ಲಿ ಬರಲಿದೆ. # ನಿಮ್ಮ ನಿರ್ದೇಶನದ ಮುಂದಿನ ಸಿನಿಮಾ 'ಪುಣ್ಯಕೋಟಿ'. ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದೇ? ಸದ್ಯ ನಾನಿನ್ನೂ ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ನಾನು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬರುತ್ತಿದೆ. ನಾನು ಹಲವು ಸ್ಕ್ರಿಪ್ಟ್ ಬರೆಯುತ್ತಿರುತ್ತೇನೆ. ಅದರಲ್ಲಿ ಕೆಲವೊಂದನ್ನು ನಾನೇ ನಿರ್ದೇಶನ ಮಾಡಬೇಕು ಎನಿಸುತ್ತದೆ. ಆ ರೀತಿ ಅನಿಸಿದ ಸಿನಿಮಾ 'ಪುಣ್ಯಕೋಟಿ'. ಇದು ವರೆಗೂ ನಾನು ಬರೆದ ಸ್ಕ್ರಿಪ್ಟ್​ಗಳಲ್ಲಿ ಇದು ಬಹಳ ಆಸಕ್ತಿಕರವಾದ ವಿಷಯವನ್ನು ಹೊಂದಿದೆ. # 'ಅವನೇ ಶ್ರೀಮನ್ನಾರಾಯಣ' ಕ್ಕಾಗಿ ಅಂದಾಜು 600 ದಿನಗಳಷ್ಟು ಶ್ರಮ ಹಾಕಿದ್ದೀರಿ. ಇದರ ಮಧ್ಯೆ ಬೇರೆ ಸಿನಿಮಾಗಳಿಗಾಗಿ ಏನಾದರೂ ತಯಾರಿ..? ಹೌದು, ಈ ಮಧ್ಯೆ ನನ್ನ ನಟನೆಯ '777 ಚಾರ್ಲಿ' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ನಾನು ಮುಂದೆ ನಿರ್ದೇಶನ ಮಾಡಲಿರುವ 'ಪುಣ್ಯಕೋಟಿ' ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಜತೆಜತೆಗೆ ಮಾಡಿದ್ದೇನೆ. Avane SrimannarayanaRakshit ShettySandalwoodVijayavani Interviewಅವನೇ ಶ್ರೀಮನ್ನಾರಾಯಣರಕ್ಷಿತ್ ಶೆಟ್ಟಿವಿಜಯವಾಣಿ ಸಂದರ್ಶನಸ್ಯಾಂಡಲ್​ವುಡ್​
2019/07/18 21:24:39
https://www.vijayavani.net/birthday-boy-rakshit-shetty-exclusive-interview-in-vijayavani/
mC4
ಹುರಿಯತ್‌ಗೆ ಬೆದರಿಕೆ ಹಾಕಿ ದೂರ ಸರಿದ ಹಿಜ್‌ಬುಲ್‌ ಕಮಾಂಡರ್‌ ಮೂಸಾ | Udayavani – ಉದಯವಾಣಿ Tuesday, 02 Jun 2020 | UPDATED: 05:12 AM IST ಹುರಿಯತ್‌ಗೆ ಬೆದರಿಕೆ ಹಾಕಿ ದೂರ ಸರಿದ ಹಿಜ್‌ಬುಲ್‌ ಕಮಾಂಡರ್‌ ಮೂಸಾ Team Udayavani, May 13, 2017, 5:16 PM IST ಜಮ್ಮು : "ಇಸ್ಲಾಂ ಗಾಗಿ ನಾವು ನಡೆಸುತ್ತಿರುವ ಹೋರಾಟದಲ್ಲಿ ನೀವು ತಲೆ ಹಾಕಿದರೆ ನಿಮ್ಮ ತಲೆ ಕಡಿದು ಲಾಲ್‌ ಚೌಕದಲ್ಲಿ ನೇತು ಹಾಕುತ್ತೇನೆ' ಎಂದು ಹುರಿಯತ್‌ ನಾಯಕರಿಗೆ ಆಡಿಯೋ ಟೇಪ್‌ ಬೆದರಿಕೆ ಹಾಕಿದ ಒಂದು ದಿನದ ತರುವಾಯ ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌ ಝಾಕೀರ್‌ ಮೂಸಾ ಇಂದು ಶನಿವಾರ ಹೊಸ ವಿಡಿಯೋ ಬಿಡುಗಡೆ ಮಾಡಿ "ನಾನು ಹಿಜ್‌ಬುಲ್‌ ಸಂಘಟನೆಯಲ್ಲಿ ಇಲ್ಲ' ಎಂದು ಸಾರಿದ್ದಾನೆ. "ಹಿಜ್‌ಬುಲ್‌ ನನ್ನನ್ನು ಓರ್ವ ಸದಸ್ಯನೆಂದು ಪರಿಗಣಿಸದಿದ್ದರೆ ನಾನು ಅದನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಬಯಸುತ್ತೇನೆ' ಎಂಬುದಾಗಿ ಮೂಸಾ ಹೇಳಿದ್ದಾನೆ. ಆದರೆ ತನ್ನ ಈ ಹಿಂದಿನ ಆಡಿಯೋ ಟೇಪ್‌ ಸಂದೇಶದಲ್ಲಿ "ಹುರಿಯತ್‌ ನಾಯಕರ ತಲೆ ಕಡಿದು ಲಾಲ್‌ ಚೌಕದಲ್ಲಿ ನೇತು ಹಾಕುವ' ತನ್ನ ನಿಲುವಿಗೆ ತಾನು ಬದ್ಧನಾಗಿದ್ದೇನೆ ಎಂದು ಮತ್ತೂಮ್ಮೆ ಗುಡುಗಿದ್ದಾನೆ. ನಿನ್ನೆ ಮೂಸಾ ಬಿಡುಗಡೆ ಮಾಡಿದ್ದ ಆಡಿಯೋ ಟೇಪ್‌ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆದ ಬಳಿಕ ಹಿಜ್‌ಬುಲ್‌ ಮುಜಾಹಿದೀನ್‌ ವಕ್ತಾರ ಸಲೀಂ ಹಶ್‌ಮೀ ಹೇಳಿಕೆಯೊಂದು ಬಿಡುಗಡೆ ಮಾಡಿ, "ಮೂಸಾ ಹೇಳಿಕೆಗೂ ಹಿಜ್‌ಬುಲ್‌ ಸಂಘಟನೆಗೂ ಯಾವುದೇ ಸಂಬಂಧವಿಲ್ಲ; ಮೇಲಾಗಿ ಆತನ ಹೇಳಿಕೆ ನಮಗೆ ಸ್ವೀಕಾರಾರ್ಹವಾದುದಲ್ಲ; ಅದು ಕೇವಲ ಆತನ ವೈಯಕ್ತಿಕ ಅಭಿಪ್ರಾಯ; ಆ ರೀತಿಯ ಯಾವುದೇ ಹೇಳಿಕೆ ಅಥವಾ ಕ್ರಮದಿಂದ ಉಂಟಾಗುವ ಗೊಂದಲವು ನಮ್ಮ ಹೋರಾಟಕ್ಕೆ ಮರಣಗಂಟೆಯಾದೀತು' ಎಂದು ಹೇಳಿದ್ದ.
2020/06/01 23:43:26
https://www.udayavani.com/news-section/national-news/after-threatening-to-behead-hurriyat-leaders-zakir-musa-disassociates-himself-from-hizbul-mujahideen
mC4
ನೂತನ ತಾಲೂಕಿನಲ್ಲಿಲ್ಲ ವಿದ್ಯಾರ್ಥಿ ವಸತಿ ನಿಲಯ | Udayavani – ಉದಯವಾಣಿ Saturday, 15 Aug 2020 | UPDATED: 10:23 AM IST ಕಲ್ಯಾಣ ರಾಜ್ಯ ಕಟ್ಟುವುದೇ ನಮ್ಮ ಗುರಿ: ಸ್ವಾಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಯಡಿಯೂರಪ್ಪ ಕೋವಿಡ್ ವಾರಿಯರ್ಸ್ ಗೆ ನಾನು ತಲೆಬಾಗಿ ನಮಿಸುತ್ತೇನೆ: ಪ್ರಧಾನಿ ಮೋದಿ ಆ.16ರಿಂದ ಪ್ರಸಿದ್ಧ ಮಾತಾ ವೈಷ್ಣೋದೇವಿ ಯಾತ್ರೆ ಆರಂಭ, ದಿನಕ್ಕೆ 2 ಸಾವಿರ ಭಕ್ತರಿಗೆ ಅವಕಾಶ LIVE ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ: ಕೆಂಪುಕೋಟೆಯಲ್ಲಿ ಪ್ರಧಾನಿ ನರೆಂದ್ರ ಮೋದಿ ಕಾಮೆಡ್‌-ಕೆ ಪರೀಕ್ಷೆಗೆ ಹೈಕೋರ್ಟ್‌ ಅಸ್ತು ಕೋವಿಡ್ ವೀರರಿಗೆ ಋಣಿ; ಸ್ವಾತಂತ್ರ್ಯೋತ್ಸವ ಮುನ್ನಾದಿನ ರಾಷ್ಟ್ರಪತಿ ಭಾಷಣ ಧಾರವಾಡ: 219 ಹೊಸ ಕೋವಿಡ್ 19 ಪ್ರಕರಣಗಳು: ಒಟ್ಟು 4528 ಜನ ಗುಣಮುಖ ಶಿಕ್ಷಕರು, ಕೌಶಲ ತರಬೇತಿಗೆ ಪೆನ್ಸಿಲ್ವೇನಿಯಾ ಸಹಭಾಗಿತ್ವ: ಡಿಸಿಎಂ ಅಶ್ವತ್ಥನಾರಾಯಣ ಘೋಷಣೆ ಕೋವಿಡ್ ಕಳವಳ-ಆಗಸ್ಟ್ 14: 7908 ಹೊಸ ಪ್ರಕರಣ ; 6940 ಡಿಸ್ಚಾರ್ಜ್ ; 104 ಸಾವು ವಿನಯ್ ಡೈರಿಯಲ್ಲಿ 'ಯಜಮಾನ'ನ ಭರ್ಜರಿ ಬಂಡಿ ಸವಾರಿ ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಇಲ್ಲ ; ಇಲ್ಲಿದೆ ಸರಕಾರದ ಮಾರ್ಗಸೂಚಿ ಹುತಾತ್ಮ ಪೊಲೀಸ್ ಸಿಬ್ಬಂದಿಗಳ ಸ್ಮಾರಕ ಅಭಿವೃದ್ಧಿಗೆ ಸೂಕ್ತ ಕ್ರಮ: ಸುರೇಶ್ ಕುಮಾರ್ ಭರವಸೆ ರಾಜ್ಯಪಾಲರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶ ಚಾಮರಾಜನಗರ: 68 ಮಂದಿ ಗುಣಮುಖ: 55 ಹೊಸ ಪ್ರಕರಣಗಳು; ಇಬ್ಬರು ಸಾವು ಜಾಮೀಯಾ ಹಿಂಸಾಚಾರ ಬಳಿಕ ದೆಹಲಿ ಗಲಭೆಗೆ ಸಂಚು ಹೂಡಿದ್ದು ಪಿಎಫ್ ಐ! ಸತ್ಯ ಬಿಚ್ಚಿಟ್ಟ ಹೈದರ್ ನೂತನ ತಾಲೂಕಿನಲ್ಲಿಲ್ಲ ವಿದ್ಯಾರ್ಥಿ ವಸತಿ ನಿಲಯ Team Udayavani, Jul 15, 2019, 3:13 PM IST ಕನಕಗಿರಿ: ಹೈದ್ರಬಾದ್‌ ಕರ್ನಾಟಕದ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಪೂರಕ ವಾತವರಣ ಇಲ್ಲದೇ ಇರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಟ್ಟಣದಲ್ಲಿ ಮೆಟ್ರಿಕ್‌ ನಂತರದ ವಸತಿ ನಿಲಯ ಇಲ್ಲದಿರುವುದು. ವಸತಿ ನಿಲಯ ಇಲ್ಲದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ಸರ್ಕಾರಿ ಪಪೂ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ರುದ್ರಮುನಿ ಪಿಯು ಕಾಲೇಜು, ಬೆಸ್ಟ್‌ ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ಹಲವಾರು ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಬಸ್‌ ಸೌಲಭ್ಯವಿಲ್ಲದ ಕಾರಣ ನಿತ್ಯ ಆಟೋ, ಬೈಕ್‌ ಹಾಗೂ ನಡೆದುಕೊಂಡ ಕಾಲೇಜಿಗೆ ಬರುವಂತಹ ಪರಿಸ್ಥಿತಿ ಇದೆ. ಇದರಿಂದಾಗಿ ಕೆಲವೊಮ್ಮೆ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ನಿರ್ಲಕ್ಷ್ಯ: ಪಟ್ಟಣದಲ್ಲಿ 3 ಪಿಯು ಮತ್ತು 2 ಪದವಿ ಕಾಲೇಜುಗಳಿವೆ. ಕನಕಗಿರಿ ಪಟ್ಟಣಕ್ಕೆ ಸರ್ಕಾರ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ ಮಂಜೂರು ಮಾಡದೇ ವಿದ್ಯಾರ್ಥಿಗಳ ಭವಿಷ್ಯ ಜೊತೆ ಚೆಲ್ಲಾಟವಾಡುತ್ತಿದೆ. ವಸತಿನಿಲಯಗಳು ಇಲ್ಲದೇ ಇರುವುದರಿಂದ ಕೆಲ ವಿದ್ಯಾರ್ಥಿಗಳು ಮನೆಯನ್ನು ಬಾಡಿಗೆಗೆ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಗ್ಗೆ ಕಾಳಜಿ ವಹಿಸಬೇಕಾದ ಜನಪತ್ರಿನಿಧಿಗಳು ನಿರ್ಲಕ್ಷ ವಹಿಸಿದ್ದಾರೆ. ಬೇರೆ ಪಟ್ಟಣಗಳತ್ತ ಪಯಣ: ಕನಕಗಿರಿಯಲ್ಲಿ ಮೆಟ್ರಿಕ್‌ ನಂತರ ವಸತಿ ನಿಲಯಗಳು ಇಲ್ಲದೇ ಇರುವುದರಿಂದ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳು ದೂರದ ಗಂಗಾವತಿ, ಕೊಪ್ಪಳ ನಗರಗಳತ್ತ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದಾರೆ. ಈ ಭಾಗದಲ್ಲಿ ವಸತಿ ನಿಲಯಗಳನ್ನು ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳು ಅನ್ಯ ಪಟ್ಟಣಗಳತ್ತ ಮುಖ ಮಾಡಿದ್ದಾರೆ. ವಸತಿ ನಿಲಯಗಳನ್ನು ಪ್ರಾರಂಭಿಸುವಂತೆ ಹಲವಾರು ಬಾರಿ ಇಲಾಖೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು. ಕನಕಗಿರಿಯಲ್ಲಿ ಮೆಟ್ರಿಕ್‌ ನಂತರ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳನ್ನು ಮಂಜೂರು ಮಾಡುವಂತೆ ಇಲಾಖೆಗೆ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಕಗಿರಿ ನೂತನ ತಾಲೂಕು ಆಗಿರುವುದರಿಂದ ಸರ್ಕಾರ ಈ ವರ್ಷ ವಸತಿ ನಿಲಯ ಪ್ರಾರಂಭಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು.•ಬಿ. ಕಲ್ಲೇಶ, ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರ ವಸತಿ ನಿಲಯಗಳನ್ನು ಪ್ರಾರಂಭಿಸುವಂತೆ ಸಂಘಟನೆಯಿಂದ ಶಾಸಕರಿಗೆ, ಸಚಿವರಿಗೆ ಹಾಗೂ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಶಾಸಕರ ನಿರ್ಲಕ್ಷ್ಯದಿಂದ ವಸತಿ ನಿಲಯಗಳು ಮಂಜೂರು ಆಗುತ್ತಿಲ್ಲ. ಕನಕಗಿರಿ ನೂತನ ತಾಲೂಕು ಕೇಂದ್ರವಾಗಿದೆ. ಹಳ್ಳಿಗಳಿಗೆ ಸರಿಯಾದ ಬಸ್‌ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ವಸತಿ ನಿಲಯಗಳು ಮಂಜೂರು ಆಗದಿದ್ದಲ್ಲಿ ಸಂಘಟನೆಯಿಂದ ಪ್ರತಿಭಟನೆ ಮಾಡಲಾಗುವುದು. •ಅಮರೇಶ ಕಡಗದ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ
2020/08/15 04:54:51
https://www.udayavani.com/district-news/koppal-news/student-hostel-is-not-in-the-new-taluk
mC4
ಅಸಮರ್ಪಕ ಮಾಹಿತಿ: ಸದಸ್ಯರ ತರಾಟೆ | Prajavani ಅಸಮರ್ಪಕ ಮಾಹಿತಿ: ಸದಸ್ಯರ ತರಾಟೆ Published: 07 ಏಪ್ರಿಲ್ 2011, 12:45 IST Updated: 07 ಏಪ್ರಿಲ್ 2011, 12:45 IST ಲಿಂಗಸುಗೂರ: ರಾಜೀವಗಾಂಧಿ ವಸತಿ ನಿಗಮದಿಂದ ಪ್ರತಿಯೊಂದು ಕ್ಷೇತ್ರಕ್ಕೆ ಜೋಪಡಿ ರಹಿತ ಗ್ರಾಮದ ನಿರ್ಮಾ ಣಕ್ಕೆ ಒಂದು ಸಾವಿರ ಮನೆ ಮಂಜೂರು ಮಾಡಲಾಗಿದೆ. ಲಿಂಗಸು ಗೂರ ಕ್ಷೇತ್ರದ ಜಾಗೃತ ಸಮಿತಿ ಸಭೆಯನ್ನು ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕರೆಯ ಲಾಗಿತ್ತು. ಸಭೆ ಆರಂಭ ಗೊಳ್ಳುತ್ತಿದ್ದಂತೆ ಬಹುತೇಕ ಸದಸ್ಯರು ಸಭೆ ಕುರಿತು ಮಾಹಿತಿ ನೀಡದಿರುವ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು. ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಾನಪ್ಪ ವಜ್ಜಲ ಮಧ್ಯಪ್ರವೇಶಿಸಿ, ಜಾಗೃತ ಸಮಿತಿ ಅಥವಾ ಇತರೆ ಸಭೆಗಳಿಗೆ ಸಂಬಂಧಿಸಿ ಪ್ರತಿಯೋರ್ವ ಸದಸ್ಯರಿಗೆ ಪೂರ್ವ ನಿಯೋಜಿತವಾಗಿ ಮಾಹಿತಿ ನೀಡಬೇಕು. ಪದೆ ಪದೆ ಇಂಥ ಆರೋಪಗಳು ಕೇಳಿಬರುತ್ತಿವೆ. ಪುನಃ ಇಂಥ ಆರೋಪ ಮರುಕಳಿ ಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿ ಗಳಿಗೆ ತಾಕೀತು ಮಾಡಿದರು. ಸದಸ್ಯ ಕಾರ್ಯದರ್ಶಿ ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುಂದೆ ಹಾಗಾಗದಂತೆ ನೋಡಿ ಕೊಳ್ಳುವ ಭರವಸೆ ನೀಡಿದರು. ವ್ಯವಸ್ಥಾಪಕ ಬಸವರಾಜ, ಸಿಬ್ಬಂದಿ ಮಲ್ಲಿಕಾರ್ಜುನ ಈಗಾಗಲೆ ತಾಲ್ಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲಿ ಜೋಪಡಿ ಹೊಂದಿರುವ ಕುರಿತು ಸಮೀಕ್ಷೆ ಮಾಡಿ ಆನ್‌ಲೈನ್‌ದಲ್ಲಿ ಹಾಕಲಾಗಿದೆ. ಕ್ಷೇತ್ರಕ್ಕೆ ಬಂದಿರುವ ಒಂದು ಸಾವಿರ ಮನೆಗಳನ್ನು ಗ್ರಾಮ ಪಂಚಾಯಿತಿ ವಾರು ಆಯ್ಕೆ ಮಾಡ ಬೇಕು. ಆಯಾ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಅರ್ಹ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ವಿವರಿಸಿದರು. ಹಾಜರಿದ್ದ ಕೆಲ ಸದಸ್ಯರು ಸಂಖ್ಯಾವಾರು ಹಂಚಿಕೊಳ್ಳುವ ವಿಚಾರ ವ್ಯಕ್ತಪಡಿಸಿದರು. ಈ ಯೋಜನೆ ಅನುಷ್ಠಾನದ ನೀತಿ, ನಿಯಮಗಳನ್ನು ಸಭೆಗೆ ತಿಳಿಸುತ್ತಿದ್ದಂತೆ ಯಾವೊಬ್ಬ ಸದಸ್ಯರು ಚಕಾರ ವೆತ್ತಲಿಲ್ಲ. ಪ್ರತಿ ಗ್ರಾಮ ಪಂಚಾ ಯಿತಿಗೆ 50 ರಿಂದ 60 ಮನೆಗಳ ಹಂಚಿಕೆಗೆ ತೀರ್ಮಾನಿಸಲಾಯಿತು. ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಮತ್ತು ಜೋಪಡಿ ಹೊಂದಿರುವ ಸಂಖ್ಯೆ ಆಧರಿಸಿ ಪಕ್ಷಾತೀತವಾಗಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ಗ್ರಾಮಗಳ ಆಯ್ಕೆ ಮಾಡಲಾಯಿತು. ಸಭೆ ಅಧ್ಯಕ್ಷತೆಯನ್ನು ಶಾಸಕ ಮಾನಪ್ಪ ವಜ್ಜಲ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ ಲಕ್ಷ್ಮಪ್ಪ ಮಾಕಾಪುರ, ಉಪಾಧ್ಯಕ್ಷೆ ಸಂಗಮ್ಮ ಸಿದ್ಧನಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಪಾಟೀಲ ಮತ್ತಿತರು ಪಾಲ್ಗೊಂಡಿದ್ದರು.
2019/01/17 02:58:52
https://www.prajavani.net/article/%E0%B2%85%E0%B2%B8%E0%B2%AE%E0%B2%B0%E0%B3%8D%E0%B2%AA%E0%B2%95-%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0-%E0%B2%A4%E0%B2%B0%E0%B2%BE%E0%B2%9F%E0%B3%86
mC4
ಕೃಷ್ಣ ಜನ್ಮಾಷ್ಟಮಿಗೆ ಗಿಫ್ಟ್​ ನೀಡಿದ ಡಾರ್ಲಿಂಗ್​ ಪ್ರಭಾಸ್​..'ರಾಧೆ ಶ್ಯಾಮ್‌' ಪೋಸ್ಟರ್ ರಿಲೀಸ್​ - ಸವಿ ಕನ್ನಡ ನ್ಯೂಸ್ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಡಾರ್ಲಿಂಗ್​ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಚಿತ್ರ 'ರಾಧೆ ಶ್ಯಾಮ್‌' ಸಿನಿಮಾದ ಹೊಸ ಪೋಸ್ಟರ್ ಒಂದನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಪೋಸ್ಟರ್​ನಲ್ಲಿ ಪ್ರಭಾಸ್​ ಮತ್ತು ಪೂಜಾ ಇಬ್ಬರು ಕ್ಲಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಪೋಸ್ಟರ್​, ಟೀಸರ್​ಗಳಿಂದ ಪ್ರೇಕ್ಷಕರ ಗಮನ ಸೆಳೆದಿರೋ 'ರಾಧೆ ಶ್ಯಾಮ್‌' ಸಿನಿಮಾ ರೆಟ್ರೋ ಕಾಲದ ಲವ್ ಸ್ಟೋರಿ ಕಥೆಯನ್ನ ಹೊಂದಿದೆ. ನಿರ್ದೇಶಕ ರಾಧಕೃಷ್ಣ ಕುಮಾರ್ ಕಲ್ಪನೆಯಲ್ಲಿ 'ರಾಧೆ ಶ್ಯಾಮ್‌' ಚಿತ್ರ ಮೂಡಿ ಬರುತ್ತಿದ್ದು, 2022 ಸಂಕ್ರಾಂತಿ ಹಬ್ಬದ ದಿನ ಜನವರಿ 14 ರಂದು ಬರಲಿದೆ. ಇನ್ನು ಕೊರೊನಾ ಎರಡನೇ ಅಲೆ ಬಾರದೆ ಹೋಗಿದ್ರೆ ಜುಲೈ 31 ನೇ ತಾರೀಕು ರಾಧೆ ಶ್ಯಾಮ್​ ಚಿತ್ರ ರಿಲೀಸ್ ಆಗ್ತಿತ್ತು. ಅದ್ರೆ ಇದೀಗ 'ರಾಧೆ ಶ್ಯಾಮ್‌' ಚಿತ್ರ ಮುಂದಿನ ಸಂಕ್ರಾಂತಿಗೆ ಬರೋದಾಗಿ ಹೇಳಿದೆ. ಪ್ರಭಾಸ್​ ಫ್ಯಾನ್ಸ್​ 'ರಾಧೆ ಶ್ಯಾಮ್‌' ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾದು ಕುಳಿದ್ದಾರೆ. ಪ್ರಭಾಸ್​ ಸದ್ಯ 'ಸಲಾರ್‌' 'ಆದಿಪುರುಷ್' ಚಿತ್ರದ ಶೂಟಿಂಗ್​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ.
2021/09/18 09:53:48
https://savikannada.in/news/177034/
mC4
ಡಿ.ಕೆ. ಶಿವಕುಮಾರ್‌ ಗೆ ಸುಳ್ಯ ಕೋರ್ಟ್‌ ನಿಂದ ವಾರಂಟ್‌ ಜಾರಿ:ಏನಿದು ಪ್ರಕರಣ? | Udayavani – ಉದಯವಾಣಿ ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎನ್ನಲಾಗಿದೆ. Team Udayavani, Sep 15, 2021, 10:50 AM IST ಸುಳ್ಯ, ಸೆ. 14: ವಿದ್ಯುತ್‌ ಸಮಸ್ಯೆ ಬಗ್ಗೆ ಕರೆ ಮಾಡಿದ ಬೆಳ್ಳಾರೆಯ ಸಾಯಿ ಗಿರಿಧರ್‌ ಮತ್ತು ಇಂಧನ ಖಾತೆಯ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ನಡುವಿನ ಫೋನ್‌ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್‌ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಹಾಜರಾಗದಿರುವ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಸುಳ್ಯ ನ್ಯಾಯಾಲಯ ವಾರಂಟ್‌ ಜಾರಿ ಮಾಡಿದೆ. ಇದನ್ನೂ ಓದಿ:ಈ ಪದವೀಧರ ಮಹಿಳೆ ಆಡು ಸಾಕಾಣಿಕೆ ಮಾಡಿ ಜೀವನ ಕಟ್ಟಿಕೊಂಡ ಗಟ್ಟಿಗಿತ್ತಿ ಕೋರ್ಟ್‌ಗೆ ಹಾಜರಾಗದಿರುವು ದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿ.ಕೆ. ಶಿವಕುಮಾರ್‌ ಅವರನ್ನು ಕೋರ್ಟ್‌ ಎದುರು ಹಾಜರುಪಡಿಸುವಂತೆ ಐಜಿಪಿ ಮತ್ತು ಡಿಐಜಿಗೆ ಕೂಡ ನೋಟಿಸ್‌ ಜಾರಿ ಮಾಡುವಂತೆ ಆದೇಶಿಸಿದ್ದಾರೆ. ಸೆ. 29ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಸ್ಥಳೀಯವಾಗಿ ನಿರಂತರ ಕಾಡುತ್ತಿದ್ದ ವಿದ್ಯುತ್‌ ಸಮಸ್ಯೆಯ ಬಗ್ಗೆ ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ ಅವರು 2016ರ ಫೆಬ್ರವರಿ 28ರಂದು ರಾತ್ರಿ ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎನ್ನಲಾಗಿದೆ. ಡಿಕೆಶಿ ಅವರು ತತ್‌ ಕ್ಷಣ ಮೆಸ್ಕಾಂ ಎಂಡಿ ಮೂಲಕ ಅಂದಿನ ಸುಳ್ಯ ಮೆಸ್ಕಾಂ ಪ್ರಭಾರ ಎಇಇ ಹರೀಶ್‌ ನಾೖಕ್‌ ಅವರಿಂದ ಸಾಯಿ ಗಿರಿಧರ ವಿರುದ್ಧ ಪೊಲೀಸರಿಗೆ ದೂರು ನೀಡಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾತ್ರಿಯೇ ಬೆಳ್ಳಾರೆಗೆ ಹೋಗಿ ರೈ ಅವರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಶಿವಕುಮಾರ್‌ ಸಾಕ್ಷಿಯಾಗಿದ್ದು, ಸಾಕ್ಷ್ಯ ನುಡಿಯಲು ಹಾಜರಾಗುವಂತೆ ಸುಳ್ಯ ಕೋರ್ಟ್‌ 3 ಬಾರಿ ಸಮನ್ಸ್ ಮತ್ತು ಒಂದು ಬಾರಿ ವಾರಂಟ್‌ ಜಾರಿ ಮಾಡಿತ್ತು. ಆದರೂ ಡಿಕೆಶಿ ಹಾಜರಾಗಿರಲಿಲ್ಲ.
2021/09/20 17:40:56
https://www.udayavani.com/homepage-karnataka-edition/big5-karnataka-edition/sulya-court-issues-summons-to-shivakumar
mC4
ಕೃಷ್ಣಾ ಐತೀರ್ಪು: ವಿಶೇಷ ಮೇಲ್ಮನವಿಗೆ ಚಿಂತನೆ | Prajavani ಕೃಷ್ಣಾ ಐತೀರ್ಪು: ವಿಶೇಷ ಮೇಲ್ಮನವಿಗೆ ಚಿಂತನೆ ನವದೆಹಲಿ: ಕೃಷ್ಣಾ ನದಿ ವಿವಾದ ಕುರಿತು ನ್ಯಾ. ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯಮಂಡಳಿ ನೀಡಿರುವ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ರಾಜ್ಯ ವಕೀಲರ ತಂಡ ಮುಕ್ತ ಮನಸು ಹೊಂದಿದ್ದು, ಎಲ್ಲ ಸಾಧಕ– ಬಾಧಕಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಕೃಷ್ಣಾ ಐತೀರ್ಪು ಕುರಿತು ಕೆಲವು ಸ್ಪಷ್ಟನೆ ಕೇಳಿ ಸಲ್ಲಿಸಲಾಗಿದ್ದ ಅರ್ಜಿಗಳ ಸಂಬಂಧ ನ್ಯಾಯಮಂಡಳಿ ನವೆಂಬರ್‌ 29 ರಂದು ವಿಸ್ತೃತವಾದ ತೀರ್ಪು ಕೊಟ್ಟಿದೆ. ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹಿರಿಯ ವಕೀಲ ನಾರಿಮನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು, ನ್ಯಾ.ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯ­ಮಂಡಳಿ ನೀಡಿರುವ ತೀರ್ಪಿನಲ್ಲಿ ರಾಜ್ಯಕ್ಕೆ ಅನು­ಕೂವಾಗುವ ಅನೇಕ ಅಂಶಗಳಿವೆ. ಎಲ್ಲೋ ಕೆಲವು ಕಡೆ ಸ್ವಲ್ಪ ಹಿನ್ನಡೆ ಆಗಿರಬಹುದು. ಎಲ್ಲಿ ಅನು­ಕೂಲವಾಗಿದೆ. ಎಲ್ಲಿ ಅನಾನುಕೂಲ ಆಗಿದೆ ನೋಡಿ­ಕೊಂಡು ಅನಂತರ ಅಂತಿಮ ತೀರ್ಮಾನ ಮಾಡೋಣ ಎಂದು ನಾರಿಮನ್‌ ಮುಖ್ಯಮಂತ್ರಿ­ಗಳಿಗೆ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಲು ಅನುಮತಿ ನೀಡಿರುವ ಅಂಶ ರಾಜ್ಯಕ್ಕೆ ಬಹು ದೊಡ್ಡ ಲಾಭವಾಗಲಿದೆ ಎಂದು ನಾರಿಮನ್‌ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಮೂಲಗಳು ವಿವರಿಸಿವೆ. ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲು ಸಾಕಷ್ಟು ಸಮಯಾವಕಾಶವಿದೆ. ದುಡುಕಿನ ಹೆಜ್ಜೆಗಳನ್ನು ಇಡುವುದು ಬೇಡ. ಬೇರೆ ರಾಜ್ಯಗಳು ಏನು ಮಾಡುತ್ತವೆ ಎನ್ನುವುದನ್ನು ಕಾದು ನೋಡಿ ಮುಂದಿನ ನಿರ್ಧಾರ ಮಾಡೋಣ ಎಂದು ನಾರಿಮನ್‌ ಸಲಹೆ ನೀಡಿದ್ದಾರೆ. ನಾರಿಮನ್‌ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳ ಜತೆ ನೀರಾವರಿ ಸಚಿವ ಎಂ.ಬಿ. ಪಾಟೀಲ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ, ಯೋಜನಾ ಸಚಿವ ಎಸ್‌.ಆರ್‌. ಪಾಟೀಲ. ಅಡ್ವೊಕೇಟ್‌ ಜನರಲ್‌ ರವಿವರ್ಮ ಕುಮಾರ್ ಮುಂತಾದವರಿದ್ದರು. ಕೃಷ್ಣಾ ನದಿ ವಿವಾದದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರ ತಂಡದ ಸದಸ್ಯರಾದ ಜವಳಿ, ಮೋಹನ್‌ ಕಾತರಕಿ, ಬ್ರಿಜೇಶ್ ಕಾಳಪ್ಪ ಅವರಿದ್ದರು. ನಮ್ಮ ಎಲ್ಲ ಆತಂಕಗಳನ್ನು ನಾರಿಮನ್ ಅವರಿಗೆ ವಿವರಿಸಲಾಗಿದೆ. ಎಲ್ಲ ಸಂಗತಿಗಳನ್ನು ಆಲಿಸಿದ್ದಾರೆ. ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಒಂದು ವಾರದಲ್ಲಿ ತಮ್ಮ ನಿಲುವು ತಿಳಿಸಲಿದ್ದಾರೆಂದು ಸಿದ್ದರಾಮಯ್ಯ ಬಳಿಕ ಪತ್ರಕರ್ತರಿಗೆ ತಿಳಿಸಿದರು. ಮುಖ್ಯಮಂತ್ರಿ, ನಾರಿಮನ್‌ ಅವರನ್ನು ಭೇಟಿ ಮಾಡುವ ಮೊದಲು ಕರ್ನಾಟಕ ಭವನದಲ್ಲಿ ಕಾನೂನು ಹಾಗೂ ನೀರಾವರಿ ತಜ್ಞರ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. ದಿಢೀರ್‌ ಬೆಳವಣಿಗೆ ಅಲ್ಲ: ಸಚಿವ ಸಂಪುಟಕ್ಕೆ ಡಿ.ಕೆ. ಶಿವಕುಮಾರ್‌, ರೋಷನ್‌ ಬೇಗ್‌ ಅವರನ್ನು ಸೇರಿಸಿಕೊಂಡಿದ್ದು ದಿಢೀರ್‌ ಬೆಳವಣಿಗೆ ಅಲ್ಲ. ಪಕ್ಷದ ಹೈಕಮಾಂಡ್‌ ಜತೆ ಸುದೀರ್ಘವಾಗಿ ಚರ್ಚಿಸಿದ ಬಳಿಕವೇ ಕೈಗೊಂಡಿರುವ ತೀರ್ಮಾನ ಎಂದು ಸಿದ್ದರಾಮಯ್ಯ ಸಂಪುಟ ವಿಸ್ತರಣೆಯನ್ನು ಬಲವಾಗಿ ಸಮರ್ಥಿಸಿಕೊಂಡರು.
2018/12/11 23:05:34
https://www.prajavani.net/article/%E0%B2%95%E0%B3%83%E0%B2%B7%E0%B3%8D%E0%B2%A3%E0%B2%BE-%E0%B2%90%E0%B2%A4%E0%B3%80%E0%B2%B0%E0%B3%8D%E0%B2%AA%E0%B3%81-%E0%B2%B5%E0%B2%BF%E0%B2%B6%E0%B3%87%E0%B2%B7-%E0%B2%AE%E0%B3%87%E0%B2%B2%E0%B3%8D%E0%B2%AE%E0%B2%A8%E0%B2%B5%E0%B2%BF%E0%B2%97%E0%B3%86-%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86
mC4
ಮಂಗಳೂರಿನ ನದಿಯಲ್ಲಿ ತೇಲಿಬಂದ ಯುವತಿ ಶವ- ಸಮುದ್ರಪಾಲಾಗುವುದನ್ನು ತಪ್ಪಿಸಿದ ಮೀನುಗಾರರು - E MUNGARU --> Home › Costal › ಮಂಗಳೂರಿನ ನದಿಯಲ್ಲಿ ತೇಲಿಬಂದ ಯುವತಿ ಶವ- ಸಮುದ್ರಪಾಲಾಗುವುದನ್ನು ತಪ್ಪಿಸಿದ ಮೀನುಗಾರರು ಮಂಗಳೂರಿನ ನದಿಯಲ್ಲಿ ತೇಲಿಬಂದ ಯುವತಿ ಶವ- ಸಮುದ್ರಪಾಲಾಗುವುದನ್ನು ತಪ್ಪಿಸಿದ ಮೀನುಗಾರರು 9/11/2021 09:22:00 PM ಮಂಗಳೂರು: ನೇತ್ರಾವತಿ ನದಿಯಲ್ಲಿ ತೇಲಿಬರುತ್ತಿದ್ದ ಯುವತಿಯ ಮೃತದೇಹವೊಂದು ಹೊಯ್ಗೆಬಜಾರ್‌ ಸಮೀಪ ಸಮುದ್ರದ ಸೇರುತ್ತಿರುವುದನ್ನು ತಪ್ಪಿಸಿರುವ ಮೀನುಗಾರರು, ಮೃತದೇಹವನ್ನು ದಡಕ್ಕೆ ತಂದು ಹಾಕಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಬೆಳ್ಳಂಬೆಳಗ್ಗೆ ಮೀನುಗಾರಿಕೆ ನಡೆಸಲೆಂದು ಸಮುದ್ರಕ್ಕೆ ತೆರಳುತ್ತಿದ್ದ ಸ್ಥಳೀಯ ಮೀನುಗಾರರು ನದಿಯಲ್ಲಿ ತೇಲಿಬರುತ್ತಿದ್ದ ಈ ಮೃತದೇಹವು ಸಮುದ್ರದ ಸೇರುತ್ತಿರುವುದನ್ನು ನೋಡಿದ್ದಾರೆ‌. ತಕ್ಷಣ ಮೃತದೇಹವನ್ನು ಮೇಲಕ್ಕೆತ್ತಿ ದಡಕ್ಕೆ ತಂದು ಹಾಕಿದ್ದಾರೆ. ಬಳಿಕ ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತದೇಹವನ್ನು ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಯುವತಿಯ ಗುರುತು ಪತ್ತೆ ಇನ್ನೂ ಆಗಿಲ್ಲ. ಸುಮಾರು 5 ಅಡಿ ಎತ್ತರವಿರುವ ಯುವತಿಯು ಕಪ್ಪುಬಣ್ಣದ ಟೀಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.‌ ಒಂದು ಕೈಯಲ್ಲಿ ಕಪ್ಪಿನ ಬಳೆ ಮತ್ತು ಕೆಂಪು ದಾರವನ್ನು ಧರಿಸಿದ್ದಾರೆ. ಉದ್ದನೆಯ ಕೂದಲು ಇರುವ ಯುವತಿಯ ಮೃತದೇಹದ‌‌ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2021/09/18 14:17:18
https://www.emungaru.com/2021/09/dead-body-detected.html
mC4
ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ | Salman sentenced to five year rigorous imprisonment - Kannada Filmibeat ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ ಹಾಸ್ಯನಟ ಸತೀಶ್‌ ಶಾ ಖುಲಾಸೆ, ಗೋವರ್ಧನ್‌ ಸಿಂಗ್‌ಗೆ ಒಂದು ವರ್ಷ ಸೆರೆವಾಸ ಜೋಧ್‌ಪುರ : ದೊರೆ ಮಾಡಿದರೆ ದಂಡಕ್ಕಿಲ್ಲ ಎಂಬ ಮಾತು ಸುಳ್ಳಾಗಿದೆ. ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ, ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಸೋಮವಾರ ಸ್ಥಳೀಯ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25,000 ರೂಪಾಯಿ ದಂಡ ವಿಧಿಸಿದೆ. ಮುಖ್ಯ ನ್ಯಾಯಾಧೀಶ ಬ್ರಿಜೇಂದ್ರಕುಮಾರ್‌ ಜೈನ್‌ ಈ ತೀರ್ಪು ನೀಡಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಗೋವರ್ಧನ್‌ ಸಿಂಗ್‌ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಲಾಗಿದೆ. ಹಾಸ್ಯನಟ ಸತೀಶ್‌ ಶಾ ಸೇರಿದಂತೆ ಇತರ ಏಳು ಜನ ಈ ಪ್ರಕರಣದಲ್ಲಿ ಖುಲಾಸೆಯಾಗಿದ್ದಾರೆ. 1998ರಲ್ಲಿ ಇಲ್ಲಿನ ಘೋರಾ ಫಾರ್ಮ್‌ ಹೌಸ್‌ನಲ್ಲಿರುವ ಕೃಷ್ಣ ಮೃಗವನ್ನು ಸಲ್ಮಾನ್‌ ಹತ್ಯೆಗೈದಿದ್ದರು. ಈ ಕುರಿತು ಆರೋಪಿ ಪರ ವಕೀಲರ ವಾದವನ್ನು ನ್ಯಾಯಾಧೀಶರು ಮಾರ್ಚ್‌ 28ರಂದು ಆಲಿಸಿ, ಏಪ್ರಿಲ್‌ 10ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದರು. ಅಳಿವಿನಂಚಿನಲ್ಲಿರುವ ಪ್ರಾಣಿ ಕೊಂದ ಕಾರಣ, ಇದೇ ನ್ಯಾಯಾಲಯ ಫೆಬ್ರವರಿ 17ರಂದು ಸಲ್ಮಾನ್‌ಖಾನ್‌ಗೆ ಕಾರಾಗೃಹವಾಸ ಶಿಕ್ಷೆ ವಿಧಿಸಿತ್ತು. ಸಲ್ಮಾನ್‌ಖಾನ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಉದ್ದೇಶದಿಂದ, ತೀರ್ಪನ್ನು ಒಂದು ತಿಂಗಳ ಮಟ್ಟಿಗೆ ಅಮಾನತ್ತಿನಲ್ಲಿಡಲಾಗಿತ್ತು. ಸಲ್ಮಾನ್‌ಖಾನ್‌, ಇನ್ನೂ ನಾಲ್ಕು ಪ್ರಕರಣಗಳಲ್ಲಿ ಕದ್ದು ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ. ಬಾಲಿವುಡ್‌ ತಾರೆಗಳಾದ ಸೈಫ್‌ ಅಲಿಖಾನ್‌, ನೀಲಂ, ಟಬು ಹಾಗೂ ಸೋನಾಲಿ ಬೇಂದ್ರೆ ಈ ಪ್ರಕರಣಗಳಲ್ಲಿ ಸಹಆರೋಪಿಗಳಾಗಿದ್ದಾರೆ.
2021/07/29 09:17:25
https://kannada.filmibeat.com/news/100406salman-jail.html
mC4