text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಅಮಾಜ್‌ಫಿಟ್‌ ಸ್ಮಾರ್ಟ್‌ವಾಚ್‌ ಖರೀದಿಸಲು ಇದೇ ಬೆಸ್ಟ್‌ ಟೈಂ! | Amazfit is offering great deals and discounts on some of its smartwatches - Kannada Gizbot 3 min ago ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಹೆಡ್‌ಫೋನ್‌ಗಳು! | Updated: Wednesday, September 29, 2021, 18:13 [IST] ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ವಾಚ್‌ಗಳು ಕೂಡ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿವೆ. ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳಿಗೆ ಟೆಕ್‌ ವಲಯದಲ್ಲಿ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಅಮಾಜ್‌ಫಿಟ್‌ ಕೂಡ ಬಳಕೆದಾರರ ನೆಚ್ಚಿನ ಬ್ರಾಂಡ್‌ ಎನಿಸಿಕೊಂಡಿದೆ. ಸದ್ಯ ಅಮಾಜ್‌ಫಿಟ್‌ ತನ್ನ ವಿಭಿನ್ನ ಸ್ಮಾರ್ಟ್‌ವಾಚ್‌ಗಳಿಂದ ಗುರುತಿಸಿಕೊಂಡಿದೆ. ಇದೀಗ ತನ್ನ ಸ್ಮಾರ್ಟ್‌ವಾಚ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಅನ್ನು ನೀಡುತ್ತಿದೆ. ಹೌದು, ಅಮಾಜ್‌ಫಿಟ್‌ ಕಂಪೆನಿ ತನ್ನ ಕೆಲವು ಸ್ಮಾರ್ಟ್‌ವಾಚ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ನೀವು ಕೂಡ ಅಮಾಜ್‌ಫಿಟ್‌ ಸ್ಮಾರ್ಟ್‌ವಾಚ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಬಯಸಿದರೆ ಇದು ಉತ್ತಮ ಸಮಯವಾಗಿದೆ. ಅದರಲ್ಲೂ ಜನಪ್ರಿಯ ಸ್ಮಾರ್ಟ್‌ವಾಚ್‌ಗಳಾದ ಅಮಾಜ್‌ಫಿಟ್ ಜಿಟಿಎಸ್ 2 ಮಿನಿ, ಬಿಪ್ ಯು ಪ್ರೊ ಮತ್ತು ಬಿಪ್‌ಯು ವಾಚ್‌ಗಳಿಗೆ ರಿಯಾಯಿತಿ ಘೋಷಿಸಿದೆ. ಹಾಗಾದ್ರೆ ಅಮಾಜ್‌ಫಿಟ್‌ ವಾಚ್‌ಗಳಿಗೆ ಯಾವೆಲ್ಲಾ ರಿಯಾಯಿತಿ ದೊರೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ. ಆನ್‌ಲೈನ್‌ ಶಾಪಿಂಗ್‌ ದೈತ್ಯ ಅಮೆಜಾನ್‌ ಸೈಟ್‌ನಲ್ಲಿ ಅಮಾಜ್‌ಫಿಟ್ ಬ್ರಾಂಡ್ ಡೇ ಸೇಲ್ ಲೈವ್‌ ಆಗಿದೆ. ಅಲ್ಲದೆ ಅಮಾಜ್ ಫಿಟ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಕೂಡ ರಿಯಾಯಿತಿ ಸೇಲ್‌ ಲೈವ್ ಆಗಿದೆ. ಈ ಸೇಲ್‌ ಇದೇ ಸೆಪ್ಟೆಂಬರ್ 12 ರವರೆಗೆ ನಡೆಯಲಿದೆ. ಇದರಲ್ಲಿ ಅಮಾಜ್‌ಫಿಟ್ ಜಿಟಿಎಸ್ 2 ಮಿನಿ ಅಮೆಜಾನ್‌ನಲ್ಲಿ ಮಾತ್ರ ಲಭ್ಯವಿದೆ. ಆದರೆ ಬಿಪ್‌ ಯು ಮತ್ತು ಬಿಪ್‌ ಯು ಪ್ರೊ ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಅಮಾಜ್‌ಫಿಟ್ ಜಿಟಿಎಸ್ 2 ಮಿನಿ ಅಮಾಜ್‌ಫಿಟ್‌ ಜಿಟಿಎಸ್‌ 2 ಮಿನಿ ಸ್ಮಾರ್ಟ್‌ವಾಚ್‌ ಮೂಲ ಬೆಲೆ 6999 ರೂ, ಆಗಿದ್ದು, ಅಮೆಜಾನ್ ಮತ್ತು ಅಮಾಜ್‌ಫಿಟ್ ವೆಬ್‌ಸೈಟ್‌ನಲ್ಲಿ ಬ್ರಾಂಡ್ ಡೇ ಸೇಲ್‌ನಲ್ಲಿ 6799ರೂ, ಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಹೊಂದಿದೆ. ಇದರ ಸ್ಕ್ರೀನ್ ಸೈಜ್ ಸ್ತ್ರೀ ಮತ್ತು ಪುರುಷ ಖರೀದಿದಾರರಿಗೆ ಸೂಕ್ತವಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಆಕರ್ಷಕ ಡಿಸ್‌ಪ್ಲೇ ಮತ್ತು ಬಯೋಟ್ರಾಕರ್ 2, ಆಕ್ಸಿಜನ್ ಬೀಟ್ಸ್, ಎಸ್‌ಪಿಒ 2 ಮಾಪನ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಮಾಜ್‌ಫಿಟ್ ಬಿಪ್‌ ಯು ಪ್ರೊ ಅಮಾಜ್‌ಫಿಟ್ ಬಿಪ್‌ ಯು ಪ್ರೊ ಸ್ಮಾರ್ಟ್‌ವಾಚ್‌ ಭಾರತದಲ್ಲಿ 4999ರೂ. ಬೆಲೆಯನ್ನು ಹೊಂದಿದೆ. ಇದು ಅಮಾಜ್‌ಫಿಟ್‌ ಬ್ರಾಂಡ್ ಡೇ ಸೇಲ್‌ ಟೈಂ ನಲ್ಲಿ 4799ರೂ,ಗಳಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.43-ಇಂಚಿನ HD ಬಿಗ್‌ TFT-LCD ಕಲರ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ವಾಚ್ ಕೇಸ್ ಅನ್ನು 2.5 ಡಿ ಕಾರ್ನಿಂಗ್ ಗೊರಿಲ್ಲಾ 3 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ ಈ ವಾಚ್‌ ಇನ್-ಬಿಲ್ಟ್ ಅಲೆಕ್ಸಾ ಮತ್ತು ಜಿಪಿಎಸ್ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ. ಅಮಾಜ್‌ಫಿಟ್ ಬಿಪ್‌ ಯು ಈ ಸ್ಮಾರ್ಟ್‌ವಾಚ್‌ ಮೂಲ ಬೆಲೆ 3999 ರೂ. ಹೊಂದಿದ್ದು, ಇದು ರಿಯಾಯಿತಿ ದರದಲ್ಲಿ 3799ರೂ ಗಳಿಗೆ ಲಭ್ಯವಾಗಲಿದೆ. ಇದು ಇಂಟರ್‌ಬಿಲ್ಟ್‌ ಅಲೆಕ್ಸಾ, ಇಂಟರ್‌ಬಿಲ್ಟ್‌ ಜಿಪಿಎಸ್,ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.43 ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ವಾಚ್‌ 60+ ಸ್ಪೋರ್ಟ್ಸ್ ಮೋಡ್, ಬಯೋಟ್ರಾಕರ್, 2 ಪಿಪಿಜಿ, ಮತ್ತು ಆಕ್ಸಿಜನ್ ಬೀಟ್ಸ್, ಸೊಮ್ನಸ್‌ಕೇರ್, 5 ಎಟಿಎಂ ವಾಟರ್‌ ರೆಸಿಸ್ಟೆನ್ಸ್‌ ಅನ್ನು ಹೊಂದಿದೆ. ಮಿ ಬ್ಯಾಂಡ್‌ 5 ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು 14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಪವರ್‌ ಸೇವ್‌ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಸೇರಿದಂತೆ ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್‌ ಮಾಡುವ ವಿಶೇಷತೆಯನ್ನು ಹೊಂದಿದೆ. ಬೆಲೆಯು 2,499ರೂ. ಆಗಿದೆ. Amazfit Brand Day sale has gone live on Amazon and the official website of Amazfit.to know more visit to kannada.gizbot.com
2022/01/28 09:09:12
https://kannada.gizbot.com/news/amazfit-is-offering-great-deals-and-discounts-on-some-of-its-smartwatches-027774.html
mC4
ಬಿಜೆಪಿಗೆ ಕಸಿವಿಸಿ ಉಂಟುಮಾಡಿದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ | Subramanian Swamy Slams Supporters Of BJP And PM Narendra Modi Over Surge In Covid Cases - Kannada Oneindia 12 min ago ಏ.18ರಂದು ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ 22 min ago ಹರಿದ್ವಾರ ಕುಂಭ ಮೇಳ: ಪ್ರಧಾನ ಸಾಧು ಕೊರೊನಾ ಸೋಂಕಿಗೆ ಬಲಿ Sports ರಿಯಾನ್ ಪರಾಗ್ ಅಲ್ಲ 'ರಿಯಾನ್ ಲಿಂಗ'! india subramanian swamy narendra modi bjp coronavirus COVID19 corona vaccine ಭಾರತ ಸುಬ್ರಮಣಿಯನ್ ಸ್ವಾಮಿ ನರೇಂದ್ರ ಮೋದಿ ಬಿಜೆಪಿ ವೈರಸ್ ಕೊರೊನಾ ಲಸಿಕೆ politics | Published: Monday, April 5, 2021, 10:58 [IST] ನವದೆಹಲಿ ಏಪ್ರಿಲ್ 5: ಕೊರೊನಾವೈರಸ್ ಸೋಂಕಿನ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರದೇ ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ ಪರೋಕ್ಷವಾಗಿ ಟೀಕಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ದೇಶಾದ್ಯಂತ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಏಕಾಏಕಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಅಭಿಮಾನಿಗಳನ್ನು ಸುಬ್ರಮಣಿಯನ್ ಸ್ವಾಮಿ 'ಗಂಧಭಕ್ತರು' ಎಂದು ವ್ಯಂಗ್ಯವಾಡಿದ್ದಾರೆ. ತಮ್ಮದೇ ಸರ್ಕಾರ ಹಾಗೂ ಪಕ್ಷದ ವಿರುದ್ಧ ನೇರಾನೇರ ವಾಗ್ದಾಳಿ ನಡೆಸುವುದರಲ್ಲಿ ಹೆಸರಾದ ಸುಬ್ರಮಣಿಯನ್ ಸ್ವಾಮಿ ಅವರು ಭಾನುವಾರ ಪೋಸ್ಟ್ ಮಾಡಿರುವ ಟ್ವೀಟ್, ಬಿಜೆಪಿಗೆ ಕಸಿವಿಸಿ ಉಂಟುಮಾಡಿದೆ. '2020ರ ಏಪ್ರಿಲ್‌ ಮಧ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಕರಣಗಳು ದಿನವೂ 1 ಲಕ್ಷದಷ್ಟು ವರದಿಯಾಗುತ್ತಿದ್ದು, ನವೆಂಬರ್ ವೇಳೆಗೆ 10,000ಕ್ಕೆ ಇಳಿಯಿತು. ಅಂಧಭಕ್ತರು ಮತ್ತು ಗಂಧಭಕ್ತರು (ಕೊಳಕು) ಯಾರಿಗೆ ಅದರ ಶ್ರೇಯಸ್ಸು ನೀಡಿದ್ದರು? ಈಗ ಪ್ರಕರಣಗಳು ಮತ್ತೆ ಒಂದು ಲಕ್ಷಕ್ಕೆ ಏರಿಕೆಯಾಗುತ್ತಿವೆ. ಹಾಗಾದರೆ ಈಗ ಯಾರು ಶ್ರೇಯಸ್ಸು ತಮ್ಮದು ಎಂದು ಹೇಳಿಕೊಳ್ಳುತ್ತಾರೆ?' ಎಂದು ಸ್ವಾಮಿ ಟೀಕಿಸಿದ್ದಾರೆ. When the Coronavirus Pandemic cases were running at 100,000 daily mid April 2020 and fell to 10, 000 by November. who was given the credit by Andhbhakts and Gandhbahkts ? Now have the cases risen again to 100, 000 again? Then who will now claim credit? — Subramanian Swamy (@Swamy39) April 4, 2021 ಸ್ವಾಮಿ ಅವರ ಟ್ವೀಟ್‌ಗೆ ಟ್ವಿಟ್ಟರ್ ಬಳಕೆದಾರರೊಬ್ಬರು, ಬೇಸಿಗೆ ಕಾಲದಲ್ಲಿ ಮಾತ್ರವೇ ಕೊರೊನಾ ವೈರಸ್ ತೀವ್ರಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ವೈರಸ್ ಹರಡಲು ಹವಾಮಾನ ಕಾರಣ ಎಂಬರ್ಥದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಸ್ವಾಮಿ, 'ಅಂಧಭಕ್ತರು ಮತ್ತು ಗಂಧಭಕ್ತರಿಗೆ ಅಗತ್ಯವಾಗಿರುವ ನೆಪವೊಂದು ನಿಮಗೆ ಸಿದ್ಧವಾಗಿ ದೊರಕಿದೆ' ಎಂದು ಹೇಳಿದ್ದಾರೆ. ಸ್ವಾಮಿ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಮಾನಿಗಳು ಹಾಗೂ ವಿರೋಧಿಗಳ ನಡುವಿನ ಟ್ವೀಟ್ ಸಮರಕ್ಕೆ ಕಾರಣವಾಗಿದೆ. ಕೋವಿಡ್ ಲಸಿಕೆಯ ಕಚ್ಚಾ ಸಾಮಗ್ರಿ ನಿರ್ಬಂಧ ತೆರವುಗೊಳಿಸಿ: ಅಮೆರಿಕಕ್ಕೆ ಮನವಿ ಈ 10 ರಾಜ್ಯಗಳಲ್ಲಿದ್ದಾರೆ ದೇಶದ ದೈನಂದಿನ ಶೇ.80ರಷ್ಟು ಕೊರೊನಾ ಸೋಂಕಿತರು BJP Rajya Sabha MP Subramanian Swamy slams supporters of BJP and PM Narendra Modi over the surge in Covid cases.
2021/04/16 17:51:42
https://kannada.oneindia.com/news/india/subramanian-swamy-slams-supporters-of-bjp-and-pm-narendra-modi-over-surge-in-covid-cases-219674.html?ref_source=articlepage-Slot1-9&ref_medium=dsktp&ref_campaign=similar-topic-slider
mC4
ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ Networks of Drugs Network: 13 People Detained ಕರ್ನಾಟಕಕ್ರೈಮ್ ಸುದ್ದಿಬೆಳಗಾವಿ ಬೆಳಗಾವಿ:( tarunkranti) ಮುಂಬೈ ಮೂಲದ ಬೃಹತ್ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ ನಗರದ ಪೋಲಿಸರು ಬೃಹತ ಡ್ರಗ್ಸ್ ಜಾಲವೊಂದನ್ನು ಭೇದಿಸುದ್ದು ಸ್ಥಳಿಯ ಯುವಜನರು ಹಾಗೂ ಮುಂಬೈ ಮೂಲದ ಮಹಿಳೆ ಸೇರಿ 13 ಜನರನ್ನು ಬಂಧಿಸಿದ್ದಾರೆ. ಈ ಸಂಬಂಧ ನಗರದ ಪೋಲಿಸ್ ಆಯುಕ್ತರ ಸಭಾಭವನದಲ್ಲಿ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಗರ ಪೋಲಿಸ ಆಯುಕ್ತ ಡಿ.ಸಿ. ರಾಜಪ್ಪ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ ಮಾಹಿತಿ ನೀಡಿದರು. ಸ್ಥಳಿಯ ಯುವಕರಾದ ಯಾಶೀನ ಹಾಗೂ ಸೂರಜ ಇಬ್ಬರೂ ಮುಂಬೈ ಮೂಲದ ಸುಶೀಲಾ ಸ್ವಾಮಿ ಎಂಬ ಮಹಿಳೆಯ ಜೊತೆ ವ್ಯವಹಾರ ನಡೆಸಿ ಮುಂಬೈ ಯಿಂದ "ಫನ್ನಿ" ಎಂದು ಕರೆಯಲ್ಪಡುವ ಪೌಡರ ರೂಪದ ಡ್ರಗ್ಸ್ ನ್ನು ತಂದು ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು. ಇವರು ಹೆಚ್ಚಾಗಿ ಕಾಲೇಜು ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದು ₹300 ಹಾಗೂ 500 ರೂಪಾಯಿಗಳ ಪ್ಯಾಕೇಟಗಳಲ್ಲಿ ಡ್ರಗ್ಸ್ ಮಾರಟ ಮಾಡುತ್ತಿದ್ದರು ಎಂದು ತಿಳಿಸಿದರು. ಈ ರೀತಿಯ ಕೆಮಿಕಲ್ ಡ್ರಗ್ಸ್ ಗಳನ್ನು ಸೇವಿಸಿ ಕೆಲವು ಯುವಕರು ಕಲ್ಲು ತೂರಾಟದಲ್ಲಿಯೂ ಭಾಗವಾಗಿದ್ದಾರೆಂದು ಆರೋಪ ಕೇಳಿ ಬಂದಿದ್ದು ಈ ನಿಟ್ಟಿನಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಜೆ ಅವರು ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೀಮಾ ಲಾಟಕರ್, ಮಹಾನಿಂಗ ನಂದಗಾವಿ, ಮತ್ತಿತರರು ಉಪಸ್ಥಿತರಿದ್ದರು.
2018/12/16 13:29:03
http://tarunkranti.news/networks-of-drugs-network-13-people-detained/
mC4
ಕ್ರೀಡಾ ತಂಡಕ್ಕೆ ಯುಬಿ ನೆರವು | Prajavani ಕ್ರೀಡಾ ತಂಡಕ್ಕೆ ಯುಬಿ ನೆರವು Published: 02 ಆಗಸ್ಟ್ 2011, 01:00 IST Updated: 02 ಆಗಸ್ಟ್ 2011, 01:00 IST ಅಂತರ‌್ರಾಷ್ಟ್ರೀಯ ಮಕ್ಕಳ ಕ್ರೀಡಾಕೂಟದಲ್ಲಿ (ಮಕ್ಕಳ ಒಲಿಂಪಿಕ್ಸ್) ಪಾಲ್ಗೊಳ್ಳುವ ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್‌ನ (ಬಿಎಸ್‌ಎಸ್‌ಎಫ್) ತಂಡದ ಪ್ರಾಯೋಜಕತ್ವ ವಹಿಸಲು ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ ಮುಂದಾಗಿದ್ದಾರೆ. ಈ ಶಾಲಾ ತಂಡ ಕೂಟದಲ್ಲಿ ಕಳೆದ ಮೂರು ವರ್ಷದಿಂದಲೂ ಪಾಲ್ಗೊಳ್ಳುತ್ತಿವೆ. ಆದರೆ ಪ್ರಾಯೋಜಕರ ಕೊರತೆ ಅದರ ಉತ್ಸಾಹಕ್ಕೆ ತಣ್ಣೀರೆರಚುತ್ತಲೇ ಬಂದಿದೆ. ಬಹುತೇಕ ಸಂದರ್ಭಗಳಲ್ಲಿ ಮಕ್ಕಳ ಪೋಷಕರೇ ಲಕ್ಷಾಂತರ ರೂಪಾಯಿ ವೆಚ್ಚ ಭರಿಸುತ್ತಿದ್ದರು. ಈ ಸಲವೂ 7 ಮಕ್ಕಳ ತಂಡಕ್ಕೆ ಹಣದ ಕೊರತೆ ಎದುರಾಗಿತ್ತು. ಇದನ್ನು `ಪ್ರಜಾವಾಣಿ~ ಕ್ರೀಡಾ ಪುರವಣಿ ಬೆಳಕಿಗೆ ತಂದಿತ್ತು. ಈಗ ಮಲ್ಯ ಅವರು ಇದಕ್ಕೆ ಸಹಾಯಹಸ್ತ ನೀಡಿದ್ದಾರೆ. ಮಕ್ಕಳ ಕ್ರೀಡಾಕೂಟಕ್ಕೆ ಅಂತರ‌್ರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಓಸಿ) ಮಾನ್ಯತೆಯಿದೆ. 50 ದೇಶಗಳ ಸುಮಾರು 3000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಬೆಂಗಳೂರು ತಂಡದಲ್ಲಿ ಹೆಬ್ಬಾಳ ವಿದ್ಯಾನಿಕೇತನ ಶಾಲೆಯ ಆದಿತ್ಯ ಶರ್ಮಾ, ಹೇಮಂತ್ ಮತ್ತು ತೇಜಸ್, ಮಲ್ಯ ಅದಿತಿ ಶಾಲೆಯ ಶಿವ್, ಎಬನೇಜರ್ ಶಾಲೆಯ ಸಿದ್ದಾರ್ಥ, ನ್ಯಾಷನಲ್ ಹಿಲ್‌ವ್ಯೆ ಶಾಲೆಯ ಚಿರಾಗ್, ಗ್ರೀನ್‌ವುಡ್ ಶಾಲೆಯ ರಿಷಬ್ ಇದ್ದಾರೆ. ಕ್ರೀಡಾಪ್ರೇಮಿಯಾದ ಮಲ್ಯ ಅವರ ಯುಬಿ ಸಮೂಹ ಕ್ರಿಕೆಟ್, ಫುಟ್ಬಾಲ್, ಗಾಲ್ಫ್, ಫಾರ್ಮುಲಾ ಒನ್, ಕುದುರೆ ಸವಾರಿ ಮುಂತಾದ ಕ್ರೀಡಾವಳಿಗಳನ್ನು ಪ್ರಾಯೋಜಿಸುತ್ತ ಬಂದಿದೆ. ಕ್ರೀಡಾ ಪ್ರತಿಭೆಗಳ ಶೋಧನೆಗೂ ವೇದಿಕೆ ಒದಗಿಸಿದೆ. ದೇಶದ ಪ್ರಸಿದ್ಧ ಫುಟ್ಬಾಲ್ ತಂಡಗಳಾದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್‌ಗೂ ಬೆಂಬಲಿಸುತ್ತಿದೆ. ಇತ್ತೀಚೆಗೆ ಫೋರ್ಸ್ ಇಂಡಿಯಾ ಎಫ್1 ಟೀಮ್ ಅಕಾಡೆಮಿ ಸ್ಥಾಪಿಸುವ ಮೂಲಕ ಮೂಲಕ ವೃತ್ತಿಪರ ಮೋಟಾರ್ ಸ್ಪೋರ್ಟ್ಸ್‌ಗಳಲ್ಲಿ ಭಾಗವಹಿಸುವ ಭಾರತೀಯ ಮಕ್ಕಳು ಮತ್ತು ಯುವಜನರಿಗೆ ತರಬೇತಿ ನೀಡುತ್ತಿದೆ.
2019/01/19 02:36:17
https://www.prajavani.net/article/%E0%B2%95%E0%B3%8D%E0%B2%B0%E0%B3%80%E0%B2%A1%E0%B2%BE-%E0%B2%A4%E0%B2%82%E0%B2%A1%E0%B2%95%E0%B3%8D%E0%B2%95%E0%B3%86-%E0%B2%AF%E0%B3%81%E0%B2%AC%E0%B2%BF-%E0%B2%A8%E0%B3%86%E0%B2%B0%E0%B2%B5%E0%B3%81
mC4
ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ – The News Updates October 17, 2021 October 17, 2021 ram pargeLeave a Comment on ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ . ಉಪ್ಪು ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ ಅಡುಗೆಯಲ್ಲಿ ಉಪ್ಪಿನ ಅಂಶವು ಕಡಿಮೆಯಾದರೆ ಆಹಾರವೇ ಸಾರಸ್ವತ ಇರುವುದಿಲ್ಲ ಉಪ್ಪಿನ ಸಂಶೋಧನೆ ಯಾವಾಗ ಆಯಿತು ಅಂದಿನಿಂದ ಇದರಲ್ಲಿ ನಕಾರಾತ್ಮಕ ಶಕ್ತಿಯ ಗುಣವನ್ನು ದೂರ ಮಾಡುವ ಶಕ್ತಿಯಿದೆ ಎಂದು ನಂಬಲಾಗಿದೆ ವಸ್ತುವಿನ ಮೂಲಕ ಹೇಳುವುದಾದರೂ ಉಪ್ಪಿನಿಂದ ನಕಾರಾತ್ಮಕ ಶಕ್ತಿಗೆ ಬೇಗವಾಗಿ ಹೊರಟುಹೋಗುತ್ತದೆ ಉಪ್ಪು ಎಲ್ಲಿ ಇರುವುದಿಲ್ಲವೋ ಆ ಜಾಗದಲ್ಲಿ ಭೂತಪ್ರೇತ ವಾಸ ವಾಗಿರುತ್ತದೆ ಮತ್ತು ಆ ಮನೆಯಲ್ಲಿ ಯಾವುದೇ ರೀತಿಯ ಸುಖ ಸಂಭ್ರಮವು ಇರುವುದಿಲ್ಲ ವಾಸ್ತುಶಾಸ್ತ್ರದ ಅನುಸಾರವಾಗಿ ಉಪ್ಪಿನಲ್ಲಿ ಒಂದು ರೀತಿಯ ಭಿನ್ನವಾದ ಅಂಶವಿರುತ್ತದೆ ಈ ಒಂದು ಕಾರಣದಿಂದ ಮಂತ್ರ ತಂತ್ರಗಳಲ್ಲಿ ಜನರು ಅನ್ನು ಬಳಸುತ್ತಾರೆ ಈ ರೀತಿ ಹೇಳಲಾಗುತ್ತದೆ ಉಪ್ಪು ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಕೆಲವು ಜನರು ವಶೀಕರಣ ದಲ್ಲಿ ಉಪ್ಪನ್ನು ಹೆಚ್ಚಾಗಿ ಬಳಸುತ್ತಾರೆ ಇದೇ ರೀತಿ ಉಪ್ಪನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನೀವು ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರಾಗಬಹುದು ಮೊದಲನೆಯದಾಗಿ ಉಪ್ಪು ಮತ್ತು ಗಾಜು ಇದು ರಾಹು ಕಾರಕ ವಾಗಿರುತ್ತದೆ ಈ ಕಾರಣದಿಂದ ನೀವು ಕಪ್ಪು ಗಾಜಿನ ಬಟ್ಟಲಿನಲ್ಲಿ ಉಪ್ಪನ್ನು ತನ್ನ ಶೌಚಾಲಯದ ಬಳಿ ಏನಾದರೂ ಇದ್ದರೆ ಅಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಯು ನಾಶಗೊಳ್ಳುತ್ತದೆ ಇದರಿಂದ ನೀವು ಏನಾದರೂ ಉಪಾಯ ಮಾಡಿದರೆ ಅಲ್ಲಿರುವ ಸೂಕ್ಷ್ಮಣು ಜೀವಿಗಳು ಸಹ ನಾಶವಾಗುತ್ತದೆ ಸಾಮಾನ್ಯವಾಗಿ ಶೌಚಾಲಯದಲ್ಲಿ ಹೆಚ್ಚಿನ ನಕಾರಾತ್ಮಕ ಶಕ್ತಿಗಳು ಇರುತ್ತದೆ ಅಂತಹ ಸಮಯದಲ್ಲಿ ಆ ನಕಾರಾತ್ಮಕ ಶಕ್ತಿಗಳನ್ನು ಉಪ್ಪುದೂರ ಮಾಡುತ್ತದೆ ಉಪ್ಪಿನ ನೀರಿನಿಂದ ನೀವು ನೆಲವನ್ನು ಹೊರಿಸಿದರೆ ನೀವು ಚಮತ್ಕಾರವನ್ನು ಸಹ ನೋಡಬಹುದು ವೈಜ್ಞಾನಿಕ ದೃಷ್ಟಿಯಿಂದಲೂ ಸಹ ಈ ಉಪಾಯ ತುಂಬಾ ಉತ್ತಮ ಎಂದು ತಿಳಿಸಲಾಗಿದೆ. ನೀವು ಮನೆಯವರು ಸುವ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ವಾರದಲ್ಲಿ ಎರಡು ಬಾರಿಯಾದರೂ ನೀವು ನೆಲವನ್ನು ಒರಸಿ ದರೆ ಈ ರೀತಿ ಮಾಡಿದರೆ ಕಂಡಿತ ನೀವು ಧನಸಂಪತ್ತು ಆಗಮನದಲ್ಲಿ ವೃದ್ಧಿಯನ್ನು ಕಾಣುತ್ತೀರಾ ನಂತರ ಉಪ್ಪು ನಿಮ್ಮ ಮನೆಯನ್ನು ಸಕಾರಾತ್ಮಕ ಶಕ್ತಿಗಳಿಂದ ತುಂಬಿಸುತ್ತದೆ ಮನೆಯ ಉದ್ದಾರಕ್ಕಾಗಿ ಈ ರೀತಿಯ ಉಪಾಯವನ್ನು ನೀವು ಮಾಡುವುದು ಉತ್ತಮ ಸಕಾರಾತ್ಮಕ ಶಕ್ತಿಯ ಎಲ್ಲಿರುತ್ತದೆ ಲಕ್ಷ್ಮೀದೇವಿಯನ್ನು ಮನೆಯ ಒಳಗೆ ಆಹ್ವಾನ ಮಾಡಿದರೆ ಮೂರನೆಯದಾಗಿ ಗಾಜಿನ ಡಬ್ಬದಲ್ಲಿ ಉಪ್ಪು ಮತ್ತು ಲವಂಗವನ್ನು ಹಾಕಿ ಇಡಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತಿನ ಆಗಮನವು ಆಗುತ್ತಲೇ ಇರುತ್ತದೆ ಜೊತೆಗೆ ತಾಯಿ ಲಕ್ಷ್ಮೀದೇವಿಯ ಕೃಪೆಯು ನಿಮ್ಮ ಮೇಲೆ ಯಾವಾಗಲೂ ಇರುತ್ತದೆ ನಾಲ್ಕನೆಯದಾಗಿ ಉಪ್ಪಿನಿಂದ ನೀವು ಕೈಕಾಲುಗಳನ್ನು ತೆರೆದುಕೊಂಡರೆ ಉಪ್ಪಿನ ನೀರಿನಿಂದ ಸ್ನಾನವನ್ನು ಮಾಡಿದರೆ ತುಂಬಾನೆ ಒಳ್ಳೆಯದು ಇದರಿಂದ ಶರೀರವು ತುಂಬಾ ಫ್ರೆಶ್ ಆಗುತ್ತದೆ
2022/05/28 16:02:05
https://thenewsupdates.in/uppina-deepa-hacchi-edarindaguva-prayojana/2158/
mC4
ಕನ್ನಡ ಕನ್ನಡಿಗ ಕರ್ನಾಟಕ: ಡಾ|| ಹೆಚ್. ನರಸಿಂಹಯ್ಯ - ಒಂದು ವ್ಯಕ್ತಿ ಚಿತ್ರ ('ತೆರೆದ ಮನ' ಪುಸ್ತಕದಿಂದ) ಡಾ|| ಹೆಚ್‌. ನರಸಿಂಹಯ್ಯನವರು ೬ನೇ ಜೂನ್ ೧೯೨೦ರಂದು ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಈಗ ಅವರಾರೂ ಇಲ್ಲ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ. ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆ ಮೇಲೆ ಹನ್ನೆರೆಡು ವರ್ಷಗಳು ಪ್ರಿನ್ಸಿಪಲ್‌ರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ಅವರ ಕಾಲದಲ್ಲಿ ಹಲವು ಮಹತ್ತರ ಕಾರ್ಯಗಳ ಸಾಧನೆ. ಈಗ ಎಚ್. ಎನ್. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಪ್ ಕರ್ನಾಟಕದ ಅಧ್ಯಕ್ಷರು. ವಿದ್ಯಾರ್ಥಿ ದೆಶೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಇಲ್ಲಿಯ ತನಕ ಕಾಲೇಜ್ ಹಾಸ್ಟಲೇ ಅವರ ಮನೆ. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದ ಜೀವನ ಒಂದು ವಿಶಿಷ್ಟ ಧಾಖಲೆ. ೧೯೪೨ ನೆಯ ಇಸಿವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್‌ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ 'ಕ್ವಿಟ್ ಇಂಡಿಯಾ' ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ. ಅಮೆರಿಕಾದ ಓಹೈಒ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷದಲ್ಲಿ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಮಟ್ಟದ ಪ್ರಥಮ ಶ್ರೇಣಿ. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲು. ಅವರ ಸರ್ವಸ್ವವನ್ನು ಈ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೌಢ್ಯದ ವಿರುದ್ಧ ಸತತ ಹೋರಾಟ. ಮುವತ್ತು ವರ್ಷಗಳ ಹಿಂದೆ ಬೆಂಗಳೂರು ಸೈನ್ಸ್ ಪೋರಂ (Bangalore Science forum) ಎಂಬ ವಿಜ್ಞಾನ ವೇದಿಕೆಯ ಸ್ಥಾಪಕ ಅಧ್ಯಕ್ಷರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದಾರೆ. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತ ಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರ ವಿಶಿಷ್ಟ ಸೇವೆಗಾಗಿ `ರಾಜ್ಯ ಪ್ರಶಸ್ತಿ` , ಭಾರತ ಸರ್ಕಾರದ `ಪದ್ಮ ಭೂಷಣ`, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್‌ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` (Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ`. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು. ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು. ಮಾನಸಿಕ, ದೈಹಿಕ ನೋವುಗಳ ಮಧ್ಯೆಯೂ ಅವರ ಹಾಸ್ಯ ಮನೋಭಾವವನ್ನು ಕಾಣಬಹುದು. ಸ್ನೇಹಮಯ ಮಾನವತಾವಾದಿ, ವಿಚಾರವಾದಿ. ಒಳ್ಳೆಯ ಅಭ್ಯಾಸಗಳಿಂದ ಕೂಡಿದ ಸ್ವಚ್ಛ, ಸರಳ ಸಂಯಮದ ಜೀವನ. ತೆರೆದ ಮನದಷ್ಟೇ ತೆರೆದ ಜೀವನ. ಅದಮ್ಯ ಆತ್ಮವಿಶ್ವಾಸ. ಜೀವನ ಪರ್ಯಂತ ಹೋರಾಟ. ಕರ್ಮಯೋಗಿ. ಎಪ್ಪತ್ಮೂರರ ಹೊಸ್ತಿನಲ್ಲಿಯೂ ನಿರಂತರ ದುಡಿಮೆ. ರಾಷ್ಟ್ರೀಯವಾದಿ, ಸುಮಾರು ಅರವತ್ತು ವರ್ಷಗಳಿಂದ ಖಾದಿದಾರಿ. ಪಟ್ಟು ಹಿಡಿದು ಕಾರ್ಯಸಾಧಿಸುವ ಮನೋಭಾವ, ದೃಡ ಮನಸ್ಸು. ಅನಾಥ ವಿದ್ಯಾರ್ಥಿಯಾಗಿ ಹಳ್ಳಿಯಿಂದ ಬಂದು ಯಾವ ಜಾತೀಯ, ರಾಜಕೀಯ ಬೆಂಬಲವಿಲ್ಲದೆ ಉನ್ನತ ಸ್ಥಾನಗಳನ್ನು ಗಳಿಸಿ ಐವತ್ತೇಳು ವರ್ಷಗಳ ಹಿಂದೆ ಯಾವ ಶಾಲೆಯಲ್ಲಿ ಓದಿದರೋ, ತದನಂತರ ಯಾವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರೋ ಅದೇ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯಾದ ಪ್ರತಿಷ್ಟಿತ ನ್ಯಾಷನಲ್ ಸೊಸೈಟಿಗೆ ಅಧ್ಯಕ್ಷರಾಗಿರುವುದು ಒಂದು ಅಪೂರ್ವ ಸಾಧನೆ.
2018/07/16 08:32:32
http://kannadakannadigga.blogspot.com/2011/04/blog-post_10.html
mC4
ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಆಕಲು ಬೇಡಿಕೆಯಿಟ್ಟ ಜಾರಕಿಹೊಳಿ ಬ್ರದರ್ಸ್ - Tarun kranti ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆ ಇಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರನ್ನು ನಗರದ ಖಾಸಗಿ ಹೋಟೆಲ್​ನಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ತಾಜ್​ವೆಸ್ಟ್​ ಎಂಡ್ ಹೋಟೆಲ್​ನಲ್ಲಿ ಜಾರಕಿಹೊಳಿ ಸಹೋದರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಿಎಂ ಕುಮಾರಸ್ವಾಮಿ ಅವರಿಗೆ ಜಾರಕಿಹೊಳಿ ಸಹೋದರರು ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಬೆಳಗಾವಿಯಲ್ಲಿ ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಬೇಕು ಹಾಗೂ ಬಳ್ಳಾರಿಯ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ‌ ನೀಡುವ ಬಗ್ಗೆ ಜಾರಕಿಹೊಳಿ ಸಹೋದರರು ಸಿಎಂ ಮುಂದೆ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ ಕುಮಾರಸ್ವಾಮಿ ಅವರು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದು ಬೇಡ, ನಿಮ್ಮ ಅಸಮಾಧಾನಗಳು ಏನೇ ಇದ್ದರೂ ಬಗೆಹರಿಸೋಣ ಎಂದು ತಿಳಿಸಿದ್ದಾರೆ. ಈ ವೇಳೆ ಶಾಸಕ ಬಿ.ನಾಗೇಂದ್ರ ಮತ್ತು ಸಚಿವ ಎಚ್​.ಡಿ.ರೇವಣ್ಣ ಕೂಡ ಸ್ಥಳದಲ್ಲಿ ಹಾಜರಿದ್ದರು. ಇದರ ನಡುವೆ ಕಾಂಗ್ರೆಸ್ ಅತೃಪ್ತ ಎಂಟಕ್ಕೂ ಹೆಚ್ಚು ಜನ ಶಾಸಕರು ಮುಂಬೈ ರೆಸಾರ್ಟ್​ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. //// The post ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಆಕಲು ಬೇಡಿಕೆಯಿಟ್ಟ ಜಾರಕಿಹೊಳಿ ಬ್ರದರ್ಸ್ appeared first on News Belgaum.
2018/12/09 21:18:59
http://tarunkranti.news/%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B2%B8%E0%B3%8D%E0%B2%A4%E0%B2%95%E0%B3%8D%E0%B2%B7%E0%B3%87%E0%B2%AA%E0%B2%95%E0%B3%8D%E0%B2%95%E0%B3%86-%E0%B2%AC%E0%B3%8D%E0%B2%B0/
mC4
ಜಮೀರ್​ ಅಹಮ್ಮದ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್ - Power TV News Home ಪವರ್ ಪಾಲಿಟಿಕ್ಸ್ ಜಮೀರ್​ ಅಹಮ್ಮದ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್ ಜಮೀರ್​ ಅಹಮ್ಮದ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ : ಜಗದೀಶ್ ಶೆಟ್ಟರ್ ಗದಗ : ಶಾಸಕ ಜಮೀರ್ ಅಹಮ್ಮದ್ ಖಾನ್​ಗೆ ಬರೀ ಜಾತಿ, ಧರ್ಮದ್ದೇ ಕಾಳಜಿ ಎಂದು ಸಚಿವ ಜಗದೀಶ್​ ಶೆಟ್ಟರ್ ಗುಡುಗಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ವೇಳೆ ಪೊಲೀಸರ ಗುಂಡೇಟಿಂದ ಮೃತಪಟ್ಟವರ ಕುಟುಂಬಗಳಿಗೆ ಜಮೀರ್ ಅಹಮ್ಮದ್ ಖಾನ್ ಪರಿಹಾರ ನೀಡಿಬೇಕೆಂಬ ವಿಚಾರಕ್ಕೆ ಸಂಬಂಧಟ್ಟಂತೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹ್ಮದ್ ಅವ್ರಿಗೆ ಬರೀ ಜಾತಿ, ಧರ್ಮ ಅನ್ನೋದೇ ಮಾತ್ರ ಕಾಳಜಿ ಇದೆ. ಹೀಗೆ ಪರಿಹಾರ ನೀಡಿದ್ರೆ ಗಲಭೆ ಮಾಡೋರಿಗೆ ಪ್ರಚೋದನೆ ನೀಡಿದಂತೆ ಆಗುತ್ತೆ. ಸಮಾಜ, ಸಮಾಜದ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಬಗ್ಗೆ ಗೊತ್ತೇ ಇಲ್ಲ. ಒಬ್ಬ ರಾಜಕಾರಣಿಯಾಗಿ, ಶಾಸಕನಾಗಿ ಮಾಡುವ ಕರ್ತವ್ಯಕ್ಕೆ ಯಾವಾಗಲೂ ವಿಮುಖರಾಗಿ ನಡೆಯುವ ಕೆಲಸ ಜಮೀರ್ ಮಾಡುತ್ತಿದ್ದಾರೆ ಅಂತ ಶೆಟ್ಟರ್ ವಾಗ್ದಾಳಿ ನಡೆಸಿದ್ರು. ಇದ್ರಲ್ಲಿ ಕೋಮು ದ್ವೇಷ ಮಾಡುವ, ಜೊತೆಗೆ ಜಾತಿ ಇಟ್ಟುಕೊಂಡು ವಾದ ಮಾಡುವ ಕೆಲಸ ಇದೆ. ಜಮೀರ್ ಮಾಡುವ ಕೆಲಸ ಸಮಾಜಕ್ಕೆ ಮಾರಕವಾಗಲಿದೆ ಎಂದರು. ಇನ್ನು ಗಲಭೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನಿಡಿದ್ರು. ಇದೇ ವೇಳೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಸಹ ಗದಗನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಇಂದೊಂದು ಪೂರ್ವ ನಿಯೋಜಿತ ಸಂಚಾಗಿದ್ದು ಕೇವಲ ಒಂದು ವಾಟ್ಸ್​ಆ್ಯಪ್​​ ಮೆಸೇಜ್ ಗೆ ಸಾಕಷ್ಟು ಜನ್ರು ಸೇರೋದು ಅಸಾಧ್ಯ. 2 ಸಾವಿರದಿಂದ 3 ಸಾವಿರ ಜನ್ರು ಸೇರುತ್ತಾರೆ ಎಂದ್ರೆ ಹೇಗೆ ಸಾಧ್ಯ. ಹೀಗಾಗಿ ಇದೊಂದು ಪೂರ್ಣ ನಿಯೋಜಿತ ಸಂಚು. ಇಷ್ಟೆಲ್ಲಾ ಗಲಾಟೆ ಹಿಂಸಾಚಾರ ನಡೆದ್ರು ಕಾಂಗ್ರೆಸ್ ಪಕ್ಷ ಖಂಡಿಸುತ್ತಿಲ್ಲಾ.ಹಿಂದಿನ ಕಾಂಗ್ರೆಸ್ ಸರ್ಕಾರ ಪಿ ಎಫ್ ಐ ಹಾಗೂ ಎಸ್ ಡಿ ಪಿ ಐ ಸಂಘಟನೆ ಮೇಲಿನ ಪ್ರಕರಣ ಹಿಂದಕ್ಕೆ ತೆಗೆದುಕೊಂಡಿತ್ತು ಎಂದು ಹರಿಹಾಯ್ದರು. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ಭಯೋತ್ಪಾದನೆಗೆ ನಿಕಟವಾದ ಸಂಪರ್ಕ ಇದೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದೇ ಕಾಂಗ್ರೆಸ್ ಉದ್ದೇಶವಾಗಿದೆ ಅಂತ‌ ತಿಳಿಸಿದ್ರು. ಇನ್ನು ಸಂಘಟನೆಗಳ ನಿಷೇಧ ಕುರಿತು ಗುರುವಾರ ಕ್ಯಾಬಿನೆಟ್ ನಲ್ಲಿ ನಿರ್ಧಾರವಾಗುತ್ತದೆ. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಸ್ತಿಯನ್ನು ಉತ್ತರ ಪ್ರದೇಶದ ಮಾದರಿಯಲ್ಲಿ ವಸೂಲಿ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ ಎಂದರು.
2020/09/22 11:28:03
https://www.powertvnews.in/gadag-jagadish-shettar/
mC4
ದೇಹ-ಧರಿಸಿರುವ ಕ್ಯಾಮೆರಾದ ನೆರವಿನೊಂದಿಗೆ ಸರ್ಕಾರದ ನೆಟ್‌ವರ್ಕ್ ರಕ್ಷಣೆ | ಒಎಂಜಿ ಪರಿಹಾರಗಳು ಹೆಚ್ಚುತ್ತಿರುವ ಭದ್ರತಾ ಕಾಳಜಿಗಳೊಂದಿಗೆ, ನಗರದ ಕಣ್ಗಾವಲು ಸರ್ಕಾರಕ್ಕೆ ಅವಶ್ಯಕವಾಗಿದೆ. "ಒಎಂಜಿ ಕಾನೂನು ಜಾರಿ - ದೇಹ-ಧರಿಸಿರುವ ಕ್ಯಾಮೆರಾ (ಡಿವಿಆರ್ / ವೈಫೈ / 3 ​​ಜಿ / 4 ಜಿ) / ಡಿಜಿಟಲ್ ಎವಿಡೆನ್ಸ್ ಮ್ಯಾನೇಜ್‌ಮೆಂಟ್ - ಸಿಂಗಾಪುರ್" ನಗರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಿಸುವಲ್ಲಿ ಪೊಲೀಸ್ ಅಧಿಕಾರಿಗಳು, ಸಂಚಾರ ಪೊಲೀಸ್, ಕಸ್ಟಮ್ ಆಡಳಿತ, ಮಿಲಿಟರಿ ಮತ್ತು ಸರ್ಕಾರಿ ಭದ್ರತಾ ಸಿಬ್ಬಂದಿಗೆ ಸಹಾಯವನ್ನು ನೀಡುತ್ತದೆ ನವೀನ ಬಯೋಮೆಟ್ರಿಕ್ ತಂತ್ರಜ್ಞಾನದೊಂದಿಗೆ. ಗಡಿ ಭದ್ರತೆಯನ್ನು ನಿರ್ವಹಿಸಲು ಬಯೋಮೆಟ್ರಿಕ್ ವ್ಯವಸ್ಥೆಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಸ್ಥಾಪಿಸಬಹುದು ಮತ್ತು ಗಡಿಯುದ್ದಕ್ಕೂ ಜನರ ಹರಿವನ್ನು ಪತ್ತೆ ಮಾಡಬಹುದು. ಇದು ವಲಸೆ ತಂತ್ರಜ್ಞಾನಗಳು, ನಿರ್ಗಮನ ಮತ್ತು ಪ್ರವೇಶ ಪ್ರವೇಶ ನಿಯಂತ್ರಣ ವ್ಯವಸ್ಥೆಗಳು ಮತ್ತು ರಾಷ್ಟ್ರೀಯ ಡೇಟಾಬೇಸ್ ನಿಯೋಜನೆಗಳನ್ನು ಒಳಗೊಂಡಿದೆ. ಸರ್ಕಾರಗಳು ತಮ್ಮ ಇಲಾಖೆಗಳ ನಡುವೆ ನಿರ್ಣಾಯಕ ಸಂವಹನವನ್ನು ನೀಡಲು ಸುರಕ್ಷಿತ ಸಾಧನಗಳ ಅಗತ್ಯವಿದೆ. ಅವರ ರಾಜತಾಂತ್ರಿಕ ಇಲಾಖೆಗಳಿಗೆ ಸೂಚನೆಗಳನ್ನು ನೀಡುತ್ತಿರಲಿ, ಅಥವಾ ಸರ್ಕಾರಿ ಉದ್ಯೋಗದಾತರ ಹೊಣೆಗಾರಿಕೆಯನ್ನು ನೀಡಲಿ. ಮುಖ್ಯ ಕಚೇರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಲಿಂಕ್‌ಗಳನ್ನು ಖಚಿತಪಡಿಸಿಕೊಳ್ಳಲು ಅವರು ಹೆಚ್ಚಿನ ಕಾರ್ಯಕ್ಷಮತೆಯ ಕಣ್ಗಾವಲು ಅವಲಂಬಿಸಿದ್ದಾರೆ. ಪೊಲೀಸರು ವಿವಾದಾತ್ಮಕ ಘಟನೆಯಲ್ಲಿ ಭಾಗಿಯಾದಾಗ, ಸಮುದಾಯದ ಸದಸ್ಯರು ಮತ್ತು ಸುದ್ದಿ ಮಾಧ್ಯಮಗಳು ಘಟನೆಯ ಬಿಡಬ್ಲ್ಯೂಸಿ ದೃಶ್ಯಾವಳಿ ಇದೆಯೇ ಎಂದು ತಿಳಿಯಲು ಬಯಸುತ್ತವೆ, ಮತ್ತು ಇಲಾಖೆಯು ಬಿಡಬ್ಲ್ಯೂಸಿಗಳನ್ನು ನಿಯೋಜಿಸದಿದ್ದರೆ, ಸಮುದಾಯದ ಸದಸ್ಯರು ಏಕೆ ಎಂದು ತಿಳಿಯಲು ಬಯಸುತ್ತಾರೆ. ದೇಹ-ಧರಿಸಿರುವ ವೀಡಿಯೊ ಕ್ಯಾಮೆರಾಗಳು ಅಮೂಲ್ಯ ಸಾಧನಗಳಾಗಿವೆ, ಇದನ್ನು ಸಂಚಾರ ನಿಲುಗಡೆಗಳು, ಬಂಧನಗಳು, ಸಮಚಿತ್ತತೆ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ದಾಖಲಿಸಲು ಕಾನೂನು ಜಾರಿಗೊಳಿಸುವವರು ಬಳಸಬಹುದು. ದೇಹ-ಧರಿಸಿರುವ ವೀಡಿಯೊ ಕ್ಯಾಮೆರಾ ವ್ಯವಸ್ಥೆಗಳು ಸಾಮಾನ್ಯವಾಗಿ ಕ್ಯಾಮೆರಾ, ಮೈಕ್ರೊಫೋನ್, ಬ್ಯಾಟರಿ ಮತ್ತು ಆನ್‌ಬೋರ್ಡ್ ಡೇಟಾ ಸಂಗ್ರಹಣೆಯನ್ನು ಒಳಗೊಂಡಿರುತ್ತವೆ. ಮಾದರಿಯನ್ನು ಅವಲಂಬಿಸಿ ಅವುಗಳನ್ನು ದೇಹದ ಮೇಲೆ ವಿವಿಧ ಸ್ಥಳಗಳಲ್ಲಿ ತಲೆಗೆ ಜೋಡಿಸಲು ಅಥವಾ ಧರಿಸಲು ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ಗ್ಯಾಜೆಟ್‌ಗಳ ನವೀನ ಅವಧಿಯಲ್ಲಿ ವಾಸಿಸುತ್ತಿರುವ, ಇತ್ತೀಚಿನ ರೀತಿಯ ಗೇರ್‌ಗಳು ಸಮಾಜದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸಿಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆಯ ಅಗತ್ಯವಾಗಿ ಮಾರ್ಪಟ್ಟಿವೆ. ದೇಹ-ಧರಿಸಿರುವ ಕ್ಯಾಮೆರಾ ಸ್ವಲ್ಪ ಗ್ಯಾಜೆಟ್ ಆಗಿದ್ದು, ಒಬ್ಬ ವ್ಯಕ್ತಿಯು ಕಂಠರೇಖೆ ಅಥವಾ ಜೇಬಿನಿಂದ ಕತ್ತರಿಸಬಹುದು ಮತ್ತು ಇತರರು ಆಕರ್ಷಕವಾದ ಜೋಡಣೆಯನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯು ಅದನ್ನು ರಕ್ಷಣಾತ್ಮಕ ಕ್ಯಾಪ್ ಮೇಲೆ ಅಥವಾ ಕನ್ನಡಕಗಳಾಗಿ ನಿರ್ಮಿಸಬಹುದು. ಈ ಸುಧಾರಿತ ಗ್ಯಾಜೆಟ್‌ನ ಬ್ಯಾಟರಿ ಸ್ಥಿರವಾದ ಅತ್ಯುತ್ತಮ ಖಾತೆಗಳೊಂದಿಗೆ 6 ರಿಂದ 8 ಗಂಟೆಗಳವರೆಗೆ ಮುಂದುವರಿಯುತ್ತದೆ. ಇದು ಸಂಜೆ ಸಮಯದ ಸಮಯದಲ್ಲಿ ಅಥವಾ ಮಂದ ಸ್ಥಳದಲ್ಲಿ ರೆಕಾರ್ಡಿಂಗ್ ಅನ್ನು ರೆಕಾರ್ಡ್ ಮಾಡಬಹುದು. ಭದ್ರತಾ ಸಿಬ್ಬಂದಿಗೆ ಇದು ಅಸಾಧಾರಣವಾಗಿದೆ. ತೀರಾ ಇತ್ತೀಚಿನದು ಒಂದೆರಡು ವರ್ಷಗಳು, ವೆಬ್‌ನ ವಿಸ್ತರಿಸುತ್ತಿರುವ ಬಳಕೆಯನ್ನು ನೋಡಲು ಇದು ತುಂಬಾ ಸ್ಪಷ್ಟವಾಗಿದೆ. ಆದ್ದರಿಂದ, ಪ್ರಸ್ತುತ ಯುಗದಲ್ಲಿ, ಯಾರಾದರೂ ನಿಸ್ಸಂದೇಹವಾಗಿ ಹಲವಾರು ಹಂತಗಳಲ್ಲಿ ವೀಡಿಯೊ ಫಿಲ್ಮ್ ಅನ್ನು ವರ್ಗಾಯಿಸಬಹುದು ಮತ್ತು ಲೈವ್ ಸ್ಪಿಲ್ಲಿಂಗ್ ಅನ್ನು ಪ್ರಾರಂಭಿಸಬಹುದು. ಆ ಪಠ್ಯದಲ್ಲಿ, ದೇಹ-ಧರಿಸಿರುವ ಕ್ಯಾಮೆರಾ ಸರ್ಕಾರಕ್ಕೆ ಅದರ ಸಂಪೂರ್ಣ ಅನುಕೂಲಗಳು ಮತ್ತು ಅನಾನುಕೂಲಗಳ ಜೊತೆಗೆ ಸಂರಕ್ಷಿತ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ನಾವು ಭದ್ರತೆ ಮತ್ತು ಯೋಗಕ್ಷೇಮದ ಬಗ್ಗೆ ಮಾತನಾಡುವಾಗ, ಭದ್ರತಾ ಅಧಿಕಾರಿಗಳು ಅಥವಾ ಪೊಲೀಸ್ ಸಿಬ್ಬಂದಿ ಗಂಟೆ ಬಾರಿಸುತ್ತಾರೆ. ಪ್ರಸ್ತುತ ಅನೇಕ ರಾಜ್ಯ ಸರ್ಕಾರಗಳು ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ದೇಹ-ಧರಿಸಿರುವ ಕ್ಯಾಮೆರಾವನ್ನು ಧರಿಸುವುದನ್ನು ಕಡ್ಡಾಯಗೊಳಿಸಿವೆ. ಈ ಇತ್ತೀಚಿನ ಆವಿಷ್ಕಾರವು ಯಾವುದೇ ಭದ್ರತಾ ಎಚ್ಚರಿಕೆಯ ನಂತರ ಒಂದು ಸಾಮಾನ್ಯ ಚರ್ಚೆಯ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿ ಅಥವಾ ಯಾವುದೇ ಘಟನೆಯಲ್ಲಿ ಸಂಭವಿಸುವ ಯಾವುದೇ ಘಟನೆಗಳನ್ನು ದಾಖಲಿಸಲು ಅವರಿಗೆ ಅಧಿಕಾರ ನೀಡುತ್ತದೆ. ತಪ್ಪುಗಳನ್ನು ಮತ್ತು ಸುರಕ್ಷತಾ ಎಚ್ಚರಿಕೆಗಳನ್ನು ನಿರ್ವಹಿಸುವಲ್ಲಿ ನೇರತೆಯಂತೆ ತೀಕ್ಷ್ಣತೆಯನ್ನು ವಿಸ್ತರಿಸಲು ಇದು ತುಂಬಾ ಉಪಯುಕ್ತವಾಗಿದೆ. ಅದು ಇರಲಿ, ದೇಹ-ಧರಿಸಿರುವ ಕ್ಯಾಮೆರಾಗಳನ್ನು ಪಾಲಿಸುವ ಕಾರ್ಯವು ಅದರ ಆಧಾರ ಹಂತದಲ್ಲಿದೆ, ಆದರೆ ಇದು ನಿಧಾನವಾಗಿ ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿತ ಗೇರ್ ಆಗಿರುತ್ತದೆ ಮತ್ತು ರಾಷ್ಟ್ರದಾದ್ಯಂತ ಪೊಲೀಸ್ ಅಧಿಕಾರಿಗಳಿಗೆ ಒಂದು ಉಡುಪಿನ ತುಣುಕಾಗಿದೆ. ಕೆಲವು ಪ್ರಮುಖ ಪ್ರಕರಣಗಳು ಈ ಆವಿಷ್ಕಾರವನ್ನು ಮುಂಭಾಗದ ಸ್ಥಾನಕ್ಕೆ ಕೊಂಡೊಯ್ದಿವೆ ಮತ್ತು ಅದರ ಹರಡುವಿಕೆಯನ್ನು ವಿಸ್ತರಿಸಿದೆ. ಪ್ರಸ್ತುತ ದೇಹ-ಧರಿಸಿರುವ ಕ್ಯಾಮೆರಾಗಳು ಕಾನೂನು ಅಗತ್ಯ ಜಾಲದಲ್ಲಿ ಮತ್ತೊಂದು ಮಾದರಿಯಾಗಿ ಮಾರ್ಪಟ್ಟಿವೆ. ಕಾನೂನು ದೃ offices ೀಕರಣ ಕಚೇರಿಗಳು ಅದರ ಉಪಯುಕ್ತತೆಯನ್ನು ನಿರ್ಣಯಿಸಲು ಪರೀಕ್ಷಾ ಪ್ರಕರಣ ಯೋಜನೆಗಳೊಂದಿಗೆ ಸಂಪರ್ಕಿಸುತ್ತವೆ. ಬಳಕೆ ದೇಹ-ಧರಿಸಿರುವ ಕ್ಯಾಮೆರಾಗಳು ಪೊಲೀಸ್ ವಿಭಾಗಗಳ ನೇರತೆ ಮತ್ತು ಜವಾಬ್ದಾರಿಯನ್ನು ವಿವರಿಸುತ್ತದೆ. ದೇಹ-ಧರಿಸಿರುವ ಕ್ಯಾಮೆರಾಗಳನ್ನು ಬಳಸಿಕೊಂಡು ಪಾಲಿಶ್ ಮಾಡಿದ ವಿಧಾನ ಮತ್ತು ಪೊಲೀಸರ ನಡವಳಿಕೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಇದು ಪೊಲೀಸರಲ್ಲಿ ಸಿದ್ಧತೆಯನ್ನು ವಿಸ್ತರಿಸುತ್ತದೆ. ಅವರು ತಮ್ಮ ಚಟುವಟಿಕೆಗಳು ಮತ್ತು ಒಟ್ಟಾರೆ ಜನಸಂಖ್ಯೆಯೊಂದಿಗಿನ ಒಡನಾಟವನ್ನು ಹೆಚ್ಚು ಗಮನದಲ್ಲಿಟ್ಟುಕೊಳ್ಳುತ್ತಾರೆ ಮತ್ತು ಶಂಕಿತರನ್ನು ಇರಿಸಿಕೊಳ್ಳಲು ಮತ್ತು ಅಧಿಕಾರದ ದುರುಪಯೋಗವನ್ನು ಉಳಿಸಿಕೊಳ್ಳಲು ಮುಖ್ಯವಾದ ಅಧಿಕಾರದ ಬಳಕೆಯ ನಡುವೆ ಹೆಚ್ಚು ದೂರ ಹೋಗಲು ಹೆಚ್ಚು ಹಿಂಜರಿಯುತ್ತಾರೆ. ಕೇಂದ್ರೀಕರಿಸುತ್ತದೆ ಜನರು ತಮ್ಮನ್ನು ತಾವು ವೀಕ್ಷಣೆಗೆ ಒಳಪಡಿಸಿದಾಗ ಅವರ ನಡವಳಿಕೆ ಬದಲಾಗುತ್ತದೆ ಎಂದು ವಿವಿಧ ಮೂಲಗಳಿಂದ ನಿರೂಪಿಸಲಾಗಿದೆ. ದೇಹ-ಧರಿಸಿರುವ ಕ್ಯಾಮೆರಾದ ಮೇಲ್ವಿಚಾರಣೆ ಮತ್ತು ರೆಕಾರ್ಡಿಂಗ್ ಅಡಿಯಲ್ಲಿ ಅವರು ತಮ್ಮನ್ನು ನೋಡಿದಾಗ ಅವರು ಹೆಚ್ಚು ವಿಧೇಯರಾಗುತ್ತಾರೆ ಮತ್ತು ರೆಕಾರ್ಡಿಂಗ್ ಮಾಡುವ ವ್ಯಕ್ತಿಯೊಂದಿಗೆ ಅವರ ಸಹಯೋಗವನ್ನು ಮಾರ್ಪಡಿಸುತ್ತಾರೆ. ಕ್ಯಾಮೆರಾದ ಕಣ್ಣು ಅವುಗಳನ್ನು ನೋಡುವ ವಿಧಾನದ ಬಗ್ಗೆ ತಿಳಿದಿರುವ ಜನರು, ಸಾಮಾನ್ಯವಾಗಿ ನೋಡುಗರು ಪ್ರಮಾಣಿತ ಎತ್ತಿಹಿಡಿಯುವ ಅಂಶವಾಗಿದ್ದಾಗ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಅಥವಾ ನಡವಳಿಕೆಯನ್ನು ಗ್ರಹಿಸುತ್ತಾರೆ ಎಂಬುದನ್ನು ಒಟ್ಟುಗೂಡಿಸಿದ ಪುರಾವೆ ತೋರಿಸುತ್ತದೆ. ಅಧಿಕಾರಿಯ ವೃತ್ತಿಯಲ್ಲಿ ಕೆಲವು ಬಾರಿ ಅವರು ಸೆರೆಹಿಡಿಯುವ ವ್ಯಕ್ತಿ ಮತ್ತು ಅವರು ದೃಶ್ಯದಲ್ಲಿ ಪ್ರಸ್ತುತಪಡಿಸುವ ಮುನ್ನಡೆಯು ಪ್ರಾಥಮಿಕ ನ್ಯಾಯಾಲಯಕ್ಕಾಗಿ ನ್ಯಾಯಾಲಯದಲ್ಲಿ ಭೇಟಿಯಾದಾಗ ನಂಬಲಾಗದಷ್ಟು ವಿಭಿನ್ನ ವ್ಯತ್ಯಾಸವಾಗಿದೆ. ಭವ್ಯವಾಗಿ ಮಾತನಾಡುವ ಪರಿಣಿತ ಉಡುಪಿನ ಪ್ರತಿಸ್ಪಂದಕನು ಯುದ್ಧದೊಂದಿಗೆ ಸಂಬಂಧ ಹೊಂದಿದ್ದ ಮತ್ತು ಬ್ಯಾಟರಿಗಾಗಿ ಇರಿಸಲಾಗಿರುವ ಮಾದಕ ಫಲಾನುಭವಿಗಿಂತ ಬಹಳ ಭಿನ್ನವಾಗಿದೆ. ನ್ಯಾಯಾಲಯವು ವೀಡಿಯೊ ರೆಕಾರ್ಡಿಂಗ್ ಅನ್ನು ನೋಡಿದಾಗ ಅನಿಸಿಕೆ ತುಂಬಾ ಅಸಾಧಾರಣವಾಗಿದೆ ಎಂದು ತಜ್ಞರು ದೃ saw ವಾಗಿ ನೋಡಿದರು. ಸ್ವರ್ಗೀಯ ಸೀಸವನ್ನು ಹೊಂದಿರುವ ಸಮವಸ್ತ್ರದಲ್ಲಿ ಪರಿಣಿತರಾಗಿ ಧರಿಸಿರುವ ಪ್ರತಿವಾದಿಯನ್ನು ಪತ್ತೆಹಚ್ಚಲು ನ್ಯಾಯಾಲಯಕ್ಕೆ ಇಳಿಯಲು ಇದು ಅಸಾಧಾರಣವಾಗಿದೆ, ಅದು ಸೆರೆಹಿಡಿಯಲ್ಪಟ್ಟ ವ್ಯಕ್ತಿಯಂತೆಯೇ ಅಲ್ಲ. ಆ ವ್ಯಕ್ತಿಯ ನಿಜವಾದ ಪಾತ್ರ ಮತ್ತು ಮನಸ್ಸಿನ ಚೌಕಟ್ಟನ್ನು ಹಿಡಿಯಲು ಕ್ಯಾಮೆರಾವನ್ನು ಬಳಸುವುದರಿಂದ ಪ್ರಾಥಮಿಕಕ್ಕೆ ಸಂಬಂಧಿಸಿದಂತೆ ಉಪಯುಕ್ತವಾಗಬಹುದು. ಜೊತೆಗೆ ಕಲ್ಪಿಸಬಹುದಾದ ನಡವಳಿಕೆಯ ಹೊಂದಾಣಿಕೆಗಳು, ಸಂಸ್ಥೆಗಳಿಗೆ ದೇಹ-ಧರಿಸಿರುವ ಕ್ಯಾಮೆರಾಗಳ ಇತರ ಗ್ರಹಿಸಬಹುದಾದ ಅನುಕೂಲಗಳು ಸ್ಥಳೀಯ ಆಕ್ಷೇಪಣೆಗಳು ಕಡಿಮೆಯಾಗುತ್ತವೆ ಮತ್ತು ವಿದ್ಯುತ್ ಘಟನೆಗಳ ಅಧಿಕೃತ ಬಳಕೆ. 2012 ರಲ್ಲಿ, ಸಿಟಿ ಆಫ್ ರಿಯಾಲ್ಟೊ ಪೊಲೀಸ್ ಇಲಾಖೆ, ಯುನೈಟೆಡ್ ಕಿಂಗ್‌ಡಮ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗಿನ ಸಂಬಂಧದಲ್ಲಿ, ಬಾಡಿ ಕ್ಯಾಮೆರಾಗಳನ್ನು ಧರಿಸಿದ ಪೊಲೀಸರ ಫಲಿತಾಂಶಗಳು ಮತ್ತು ಪರಿಣಾಮಗಳ ಕುರಿತು ವರ್ಷಪೂರ್ತಿ ವರದಿಯನ್ನು ನೀಡಿತು. ಒಂದು ವರ್ಷದಲ್ಲಿ, ವಿಭಿನ್ನ ವಾಚ್ ಚಲನೆಗಳಿಗೆ ಕ್ಯಾಮೆರಾಗಳನ್ನು ನೀಡಲಾಗಿದ್ದರೆ, ಇತರರು ಖಂಡಿತವಾಗಿಯೂ ಇಲ್ಲ. ಪರೀಕ್ಷೆಯು ವಿವಿಧ ಸಂದರ್ಭಗಳಲ್ಲಿ ವಿವಿಧ ಚಲನೆಗಳಿಗೆ ಸುಲಭವಾದ ಉದಾಹರಣೆಯಾಗಿದೆ. ವರ್ಷವಿಡೀ ಸಮಯದ ನಂತರ, ಫಲಿತಾಂಶಗಳು ಆಘಾತಕಾರಿ. ಬಾಡಿ ಕ್ಯಾಮೆರಾಗಳನ್ನು ವಿಂಗಡಿಸಲಾದ ಕೂಟಗಳು ಹಿಂದಿನ ವರ್ಷಕ್ಕಿಂತ 60% ರಷ್ಟು ವಿದ್ಯುತ್ ಬಳಕೆಯ ಸಂಭವವನ್ನು ಕಡಿಮೆಗೊಳಿಸಿದವು. ಹೋಲಿಸಬಹುದಾದ ಸಭೆಯ ಬಗ್ಗೆ ಸ್ಥಳೀಯ ಕುಂದುಕೊರತೆಗಳನ್ನು ಹಿಂದಿನ ವರ್ಷದ ನಿರ್ಧಾರಗಳಿಗಿಂತ 88% ರಷ್ಟು ಕಡಿಮೆ ಮಾಡಲಾಗಿದೆ ಎಂದು ಪರೀಕ್ಷೆಯು ಪ್ರಕಟಿಸಿತು. ರಿಯಾಲ್ಟೊ ಪೊಲೀಸ್ ಮುಖ್ಯಸ್ಥರು ಕುಂದುಕೊರತೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಥವಾ ನಿವಾಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ಇದು ಎರಡರಲ್ಲೂ ಒಂದು ತಟ್ಟೆಯಾಗಿದೆ. ಇನ್ನೊಂದರಲ್ಲಿ ದೇಹ-ಧರಿಸಿರುವ ಕ್ಯಾಮೆರಾಗಳ ಬಗ್ಗೆ ಸುರಕ್ಷಿತ ವ್ಯವಸ್ಥೆ ಮತ್ತು ಅದು ಸ್ಥಳೀಯ ಗೊಣಗಾಟಗಳನ್ನು ಹೇಗೆ ಕಡಿಮೆ ಮಾಡುತ್ತದೆ, ಮೆಸಾ ಪೊಲೀಸ್ ಇಲಾಖೆ ವರ್ಷಪೂರ್ತಿ ವರದಿಯನ್ನು ನಿರ್ದೇಶಿಸಿತು, ವಿಶೇಷವಾಗಿ ಕುಂದುಕೊರತೆಗಳನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸಿದೆ. ಪರೀಕ್ಷಾ ಪ್ರಕರಣ ಕಾರ್ಯಕ್ರಮವು ಎರಡು ಕೂಟಗಳನ್ನು ಒಳಗೊಂಡಿತ್ತು; ನಿಯೋಜಿಸಲಾದ ಬಾಡಿ ಕ್ಯಾಮೆರಾಗಳನ್ನು ಹೊಂದಿರುವ 50 ವಾಚ್ ಅಧಿಕಾರಿಗಳು ಮತ್ತು ಬಾಡಿ ಕ್ಯಾಮೆರಾಗಳಿಲ್ಲದ 50. ಎರಡೂ ಕೂಟಗಳನ್ನು ಡೋಲ್ಡ್ watch ಟ್ ವಾಚ್ ಕಟ್ಟುಪಾಡುಗಳು ಮತ್ತು ಸಾಮಾಜಿಕ ಆರ್ಥಿಕತೆಯಲ್ಲಿ ಹೋಲಿಸಬಹುದಾಗಿದೆ. ಅರಿ z ೋನಾ ವಿಶ್ವವಿದ್ಯಾನಿಲಯದ ತಂಡವಾಗಿ ನಿರ್ದೇಶಿಸಲಾದ ಪರೀಕ್ಷೆಯು ಬಾಡಿ ಕ್ಯಾಮೆರಾಗಳಿಲ್ಲದ ವಾಚ್ ಅಧಿಕಾರಿಗಳಿಗೆ ಅನೇಕ ಪಟ್ಟು ಹೆಚ್ಚು ನಿವಾಸಿಗಳ ಪ್ರತಿಭಟನೆಯನ್ನು ಹೊಂದಿದೆ ಎಂದು ಸಂಕ್ಷಿಪ್ತಗೊಳಿಸಿದೆ. ಇದಲ್ಲದೆ, ದೇಹ-ಧರಿಸಿರುವ ಕ್ಯಾಮೆರಾಗಳನ್ನು ಧರಿಸಿದ್ದ ವಾಚ್ ಅಧಿಕಾರಿಗಳು ವಿದ್ಯುತ್ ಕುಂದುಕೊರತೆಗಳ ಬಳಕೆಯಲ್ಲಿ 75% ಇಳಿಕೆ ಮತ್ತು ದೇಹದ ಕ್ಯಾಮೆರಾಗಳಿಲ್ಲದ ಹಿಂದಿನ ವರ್ಷದಿಂದ ಸ್ಥಳೀಯ ಆಕ್ಷೇಪಣೆಗಳಲ್ಲಿ 40% ಇಳಿಕೆ ಕಂಡುಬಂದಿದೆ ಎಂದು ತನಿಖೆಯು ಕೊನೆಗೊಳಿಸಿತು. ಬಳಸಿಕೊಳ್ಳಲಾಗಿದೆ. ಎರಡು ಪರೀಕ್ಷೆಗಳು ದೇಹ-ಧರಿಸಿರುವ ಕ್ಯಾಮೆರಾಗಳು ಸರ್ಕಾರಕ್ಕೆ ಸುರಕ್ಷಿತ ವ್ಯವಸ್ಥೆಯನ್ನು ಒದಗಿಸುತ್ತವೆ ಎಂದು ತೋರಿಸಿಕೊಟ್ಟಿದ್ದು, ಆಶ್ಚರ್ಯಕರ ಫಲಿತಾಂಶಗಳು ದೇಹ-ಧರಿಸಿರುವ ಕ್ಯಾಮೆರಾಗಳು ನಿವಾಸಿಗಳ ಆಕ್ಷೇಪಣೆಯನ್ನು ಕಡಿಮೆಗೊಳಿಸುತ್ತವೆ. ಎಪಿಸೋಡ್ ಅನ್ನು ರೆಕಾರ್ಡ್ ಮಾಡುವ ಗಮನದಿಂದ ಎರಡು ಬದಿಗಳನ್ನು ನಿರ್ದೇಶಿಸಲು ಇದು ಸೀಮಿತ ಮಟ್ಟಿಗೆ ನಿರೀಕ್ಷಿಸಲಾಗಿದೆ. ಕ್ಯಾಮೆರಾದ ಎರಡು ಬದಿಗಳಲ್ಲಿ ನಡವಳಿಕೆಯನ್ನು ಹೆಚ್ಚಿಸುತ್ತದೆ ಎಂದು ನಾವು imagine ಹಿಸಿದ್ದರಿಂದ ಅವರು ರೆಕಾರ್ಡಿಂಗ್ ಮಾಡುತ್ತಿದ್ದಾರೆ ಎಂದು ವ್ಯಕ್ತಿಗಳಿಗೆ ತಿಳಿಸುವಂತೆ ನಾವು ನಮ್ಮ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ಗ್ರೀನ್ಸ್‌ಬೊರೊ ಪೊಲೀಸ್ ಮುಖ್ಯಸ್ಥ ಕೆನ್ ಮಿಲ್ಲರ್ ಹೇಳುತ್ತಾರೆ. ವೀಡಿಯೊ ರೆಕಾರ್ಡಿಂಗ್ ದೇಹದಿಂದ ಧರಿಸಿರುವ ಕ್ಯಾಮೆರಾಗಳನ್ನು ಬಳಸುವ ಅಧಿಕಾರಿಗಳಿಂದ ಕಚೇರಿಯ ಆಂತರಿಕ ಸಮಸ್ಯೆಗಳನ್ನು ಪರಿಹರಿಸಲು ಬಳಸಿಕೊಳ್ಳಬಹುದು. ಇದಕ್ಕಿಂತ ಹೆಚ್ಚಾಗಿ, ಇದು ಅಮೂಲ್ಯವಾದ ತಯಾರಿಕೆಯ ಸಾಧನವಾಗಿದೆ. ಬಾಡಿ ಕ್ಯಾಮೆರಾ ವಿಡಿಯೋ ಬಳಕೆಯ ಕುರಿತು ರಾಷ್ಟ್ರದಾದ್ಯಂತದ ಪೊಲೀಸ್ ಮುಖ್ಯಸ್ಥರಿಂದ ನಡೆಯುತ್ತಿರುವ ಅಧ್ಯಯನದಲ್ಲಿ, 94% ರಷ್ಟು ಜನರು ಅಧಿಕೃತ ನಡವಳಿಕೆಯನ್ನು ಪರಿಹರಿಸಲು ಅಥವಾ ತಯಾರಿ ಸಾಧನವಾಗಿ ಅಧ್ಯಕ್ಷರ ಸಮೀಕ್ಷೆಗೆ ಇದನ್ನು ಬಳಸುತ್ತಾರೆ ಎಂದು ವ್ಯಕ್ತಪಡಿಸಿದ್ದಾರೆ. ಬಾಡಿ ಕ್ಯಾಮೆರಾ ವೀಡಿಯೊ ಮಾದರಿಗಳನ್ನು ತಯಾರಿಸುವ ಬೃಹತ್ ಅಳತೆಯನ್ನು ಹೊಂದಿದೆ. ಚಲನಚಿತ್ರವನ್ನು ಪರಿಶೀಲಿಸುವಾಗ, ಕಾರ್ಯನಿರ್ವಾಹಕರು ಪ್ರಸ್ತುತ ಕಾರ್ಯತಂತ್ರಗಳನ್ನು ನಿರ್ಣಯಿಸಬಹುದು ಮತ್ತು ನಿಜವಾದ ಅಧಿಕೃತ ಅನುಭವಗಳನ್ನು ಅವಲಂಬಿಸಿ ಮಾರ್ಪಾಡುಗಳನ್ನು ಮಾಡಬೇಕೆ ಎಂದು ಆಯ್ಕೆ ಮಾಡಬಹುದು. ಕ್ಷೇತ್ರದಲ್ಲಿ ನಿಜವಾದ ತರುವಿಕೆಯ ಮೇಲೆ ಅವಲಂಬಿತವಾಗಿರುವ ತನ್ನ ಅಧಿಕಾರಿಗಳನ್ನು ತಯಾರಿಸಲು ತಯಾರಿ ಕಚೇರಿ ಸಾಕಷ್ಟು ನಿರ್ದಿಷ್ಟ ಸಂದರ್ಭಗಳನ್ನು ರಚಿಸಬಹುದು. ಇದಲ್ಲದೆ, ಅಧಿಕೃತ ಸಿದ್ಧತೆ ಈಗ ವೈಯಕ್ತಿಕ ಕಚೇರಿಗೆ ಅಥವಾ ವಿಭಾಗದ ಒಳಗೆ ನಿಖರವಾಗಿರಲು ಸಾಧ್ಯವಾಗುತ್ತದೆ. ಬಹುಶಃ ಕಾನೂನು ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆಯ ಸ್ಥಾನವು ಅಪರಾಧ ಪರೀಕ್ಷೆಗಳಿಗೆ ಪರಿಶೀಲನೆಯನ್ನು ಹಿಡಿಯುತ್ತದೆ ಮತ್ತು ವರದಿ ಮಾಡುತ್ತದೆ. ಮತ್ತೊಮ್ಮೆ, ಇದು ಕಾನೂನು ಉಲ್ಲಂಘಿಸುವವರ ಪ್ರವರ್ಧಮಾನಕ್ಕೆ ಸಹಾಯ ಮಾಡುವ ಮತ್ತೊಂದು ಸಾಧನವಾಗಿದೆ. ತತ್ವ ತಪ್ಪಾದ ದೃಶ್ಯಕ್ಕೆ ಅಧಿಕಾರಿಗಳು ಉತ್ತರಿಸುವ ಹಂತದಲ್ಲಿ, ಅವರ ಏಕಾಗ್ರತೆ ಮತ್ತು ಪ್ರಾಥಮಿಕ ಮೂಲಭೂತ ಕಾಳಜಿಯು ದೃಶ್ಯವನ್ನು ರಕ್ಷಿಸುತ್ತದೆ ಮತ್ತು ವೈದ್ಯಕೀಯ ನೆರವು ಕ್ರಮಗಳೊಂದಿಗೆ ದುರದೃಷ್ಟಕರ ಸಾವುನೋವುಗಳಿಗೆ ಸಹಾಯ ಮಾಡುತ್ತದೆ. ಅವರು ತಮ್ಮ ಸಭೆಗಳನ್ನು ಪ್ರಾರಂಭಿಸಿದಾಗ ಮತ್ತು ಏನಾಯಿತು ಎಂಬುದನ್ನು ಜೋಡಿಸಲು ಪ್ರಯತ್ನಿಸುತ್ತಿದ್ದಂತೆ, ಪ್ರತಿಯೊಂದು ಸೂಕ್ಷ್ಮತೆಗಳ ಬಗ್ಗೆ ಯೋಚಿಸುವುದು ಕಷ್ಟ. ದೇಹ-ಧರಿಸಿರುವ ಕ್ಯಾಮೆರಾವನ್ನು ಬಳಸುವುದರ ಮೂಲಕ, ಅಧಿಕಾರಿಯು ದೃಶ್ಯವನ್ನು ಮತ್ತು ಹಲವಾರು ಕ್ಷಣ ಸೂಕ್ಷ್ಮತೆಗಳನ್ನು ತಪ್ಪಿಸಿಕೊಳ್ಳಬಹುದು. ಅವರು ತಪ್ಪಾದ ಸ್ಥಳದ ಸುತ್ತಲೂ ಅಡ್ಡಾಡುತ್ತಿರುವಾಗ, ಆರಂಭಿಕ ಉತ್ತರದಂತೆ ಅವರು ಅದನ್ನು ದಾಖಲಿಸಿದ್ದಾರೆ. ಈ ಸಾಧನವು ಅಧಿಕಾರಿಗಳಿಗೆ ಸಾಕಷ್ಟು ಡೇಟಾವನ್ನು ನೀಡಬಹುದು, ಅದು ಸ್ವಲ್ಪ ಸಮಯದ ನಂತರ ಶಾಂತಿಯುತವಾಗಿರುವಾಗ ಮತ್ತು ಧಾವಿಸದಿದ್ದಾಗ ಉತ್ತಮವಾಗಿ ತೋರಿಸುತ್ತದೆ. ಇನ್-ವೆಹಿಕಲ್ ಕ್ಯಾಮೆರಾಗಳಂತೆ ಅಲ್ಲ, ದೇಹ-ಧರಿಸಿರುವ ಕ್ಯಾಮೆರಾಗಳು ತಪ್ಪಾದ ದೃಶ್ಯದ ಸುತ್ತಲೂ ಅಧಿಕಾರಿಗಳ ಚಲನೆ ಮತ್ತು ವಿವಿಧ ವ್ಯಕ್ತಿಗಳನ್ನು ಭೇಟಿಯಾಗುವುದರಿಂದ ನಡೆಯುವ ಎಲ್ಲವನ್ನೂ ದಾಖಲಿಸುತ್ತದೆ ಎಂದು ಡಾಲ್ಟನ್ ಪೊಲೀಸ್ ಮುಖ್ಯಸ್ಥ ಪಾರ್ಕರ್ ಹೇಳುತ್ತಾರೆ. ದೇಹವನ್ನು ಧರಿಸಿರುವ ಕ್ಯಾಮೆರಾಗಳು ನಿಖರವಾಗಿ ಡೇಟಾವನ್ನು ಉಳಿಸುವಲ್ಲಿ ನಂಬಲಾಗದಷ್ಟು ಮೌಲ್ಯಯುತವಾಗಿವೆ. ನೆರೆಹೊರೆಯ ಈ ಆವಿಷ್ಕಾರವನ್ನು ತೆಗೆದುಕೊಳ್ಳಲು ಪರೀಕ್ಷಕರು ಹೆಚ್ಚುವರಿಯಾಗಿ ಅಧಿಕಾರ ಹೊಂದಿದ್ದಾರೆ ಮತ್ತು ಉತ್ಸಾಹದಿಂದ ಸಂಘಟನೆಗಳನ್ನು ಆಕರ್ಷಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ತೋರಿಸಲು ವೀಡಿಯೊ ರೆಕಾರ್ಡ್ ಹೊಂದಿರುವುದು ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಕೆಂಟುಕಿಯಲ್ಲಿ, ನೆರೆಹೊರೆಯ ಗಾರ್ಡ್ ವಕೀಲರು ದೇಹ-ಧರಿಸಿರುವ ಕ್ಯಾಮೆರಾ ವೀಡಿಯೊವನ್ನು ನೀಡುವ ಬಳಕೆಯ ಬಗ್ಗೆ ಅಭಿಪ್ರಾಯಪಟ್ಟರು. ಚಾರ್ಜ್ ಮಾಡಬಹುದಾದ ಒಳಸಂಚನ್ನು ಅರಿಯಲು ಇದು ಅವರಿಗೆ ತುಂಬಾ ಸರಳವಾಗಿಸುತ್ತದೆ, ಇದನ್ನು ನೋಡಲು ನಿಮಗೆ ನ್ಯಾಯಾಧೀಶರ ಮಂಡಳಿಯ ಅಗತ್ಯವಿಲ್ಲದ ಕಾರಣ ಅವರ ಹೆಚ್ಚಿನ ಅನುಕೂಲವಾಗಲಿದೆ. ವೀಡಿಯೊ ದೃ mation ೀಕರಣವನ್ನು ನ್ಯಾಯಾಲಯದಲ್ಲಿ ನೀಡಿದಾಗ ಕೌಟುಂಬಿಕ ಕ್ರೂರ ಸಂದರ್ಭಗಳಿಗೆ ಇದು ಬಹುಪಾಲು ಮಾನ್ಯವಾಗಿರುತ್ತದೆ. ಸಾಮಾನ್ಯವಾಗಿ, ವಿಶೇಷವಾಗಿ ಕಿರುಕುಳದ ರೇಖಾಚಿತ್ರವಿದ್ದರೆ ಮತ್ತು ಶೋಷಿತ ಜನರು ಭಯಭೀತರಾಗಿದ್ದರೆ, ಅವರು ಆರೋಪಗಳನ್ನು ಹೇರದಂತೆ ಬಯಸುತ್ತಾರೆ. ಸಾಮಾಜಿಕ ಸಂಬಂಧ ದೃ mation ೀಕರಣವು ತ್ರಾಸದಾಯಕ, ಉತ್ತಮ ಸನ್ನಿವೇಶವಾಗಿದೆ. ಸಹಾಯ ಮಾಡದ ದುರದೃಷ್ಟಕರ ಸಾವುನೋವುಗಳು ಮತ್ತು ಪ್ರಾಥಮಿಕವು ಎಲ್ಲಾ ಉದ್ದೇಶಗಳು ಮತ್ತು ಉದ್ದೇಶಗಳಿಗಾಗಿ ima ಹಿಸಲಾಗದು.
2021/03/04 21:35:07
https://omg-solutions.com/kn/%E0%B2%A6%E0%B3%87%E0%B2%B9-%E0%B2%A7%E0%B2%B0%E0%B2%BF%E0%B2%B8%E0%B2%BF%E0%B2%B0%E0%B3%81%E0%B2%B5-%E0%B2%95%E0%B3%8D%E0%B2%AF%E0%B2%BE%E0%B2%AE%E0%B2%B0%E0%B2%BE/%E0%B2%A6%E0%B3%87%E0%B2%B9-%E0%B2%A7%E0%B2%B0%E0%B2%BF%E0%B2%B8%E0%B2%BF%E0%B2%B0%E0%B3%81%E0%B2%B5-%E0%B2%95%E0%B3%8D%E0%B2%AF%E0%B2%BE%E0%B2%AE%E0%B3%86%E0%B2%B0%E0%B2%BE%E0%B2%A6-%E0%B2%B8%E0%B2%B9%E0%B2%BE%E0%B2%AF%E0%B2%A6%E0%B2%BF%E0%B2%82%E0%B2%A6-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%97%E0%B2%B3-%E0%B2%A8%E0%B3%86%E0%B2%9F%E0%B3%8D%E2%80%8C%E0%B2%B5%E0%B2%B0%E0%B3%8D%E0%B2%95%E0%B3%8D-%E0%B2%B0%E0%B2%95%E0%B3%8D%E0%B2%B7%E0%B2%A3%E0%B3%86/
mC4
ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ.ದೇವೇಗೌಡ – Public TV Home/Karnataka/ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ.ದೇವೇಗೌಡ ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತಕ್ಷಣ ನಾವು ಬಿಜೆಪಿಗೆ ಹೊಗುತ್ತೇವೆ ಎಂದಲ್ಲ. ಹಾಸನ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಪ್ರಧಾನಿಯವರಲ್ಲಿ ಚರ್ಚಿಸೋಕೆ ಹೋಗಿದ್ದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಎಚ್‌.ಡಿ.ದೇವೇಗೌಡ ಮತ್ತು ಪ್ರಧಾನಿ ಮೋದಿ ಭೇಟಿ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ದೇವೇಗೌಡ, ಮೋದಿ ಭಾಯಿಭಾಯಿ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಸಿದ್ದು ಟೀಕೆಗೆ ತಿರುಗೇಟು ನೀಡಿರುವ ಎಚ್‌.ಡಿ.ದೇವೇಗೌಡ, ಪ್ರಧಾನ ಮಂತ್ರಿಯವರನ್ನು ನಾನು ಸಾಕಷ್ಟು ಸಲ ಭೇಟಿ ಮಾಡಿದ್ದೇನೆ. ಮನಮೋಹನ್ ಸಿಂಗ್, ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದೆ. ನಾನು ಒಳಗೆ ಹೊರಗೆ ರಾಜಕೀಯ ಮಾಡೋ ಪ್ರಶ್ನೆ ಬೇರೆ. ಪ್ರಧಾನಿ ಭೇಟಿ ಮಾಡೋಕೆ ಸಿದ್ದರಾಮಯ್ಯ ಪರ್ಮಿಷನ್ ತಗೊಂಡು ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಆಯ್ಕೆ ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು, ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು: ಬಿಜೆಪಿ ಬೆಳಗ್ಗೆ ಒಂದು, ರಾತ್ರಿ ಒಂದು ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ. ನೇರವಾಗಿ ರಾಜಕೀಯ ಮಾಡುವ ವ್ಯಕ್ತಿ ನಾನು. ಇನ್ನು ಬಿಜೆಪಿ ಅಥವಾ ಕಾಂಗ್ರೆಸ್‍ಗೆ ಬೆಂಬಲ ಕೊಡುವುದು 2023ರ ಚುನಾವಣೆಯಲ್ಲಿ ತಿಳಿಯುತ್ತದೆ ಎಂದು ಮಾಹಿತಿ ನೀಡಿದರು. ರೈತರ ಸಾಲ ಮನ್ನಾ ಮಾಡಿ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು. ರೈತನ ಮಗನಾಗಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿಯಂತೆ ದೇಶದಲ್ಲಿ ಯಾರೂ ಆಡಳಿತ ನಡೆಸಿಲ್ಲ. ಕುಮಾರಸ್ವಾಮಿ ನನ್ನ ಅನುಮತಿ ಇಲ್ಲದೇ ಬಿಜೆಪಿಗೆ ಹೋಗಿ ಸರ್ಕಾರ ಮಾಡಿದ್ದರು. ನಂತರ ಕಾಂಗ್ರೆಸ್‍ನವರು ಮನೆ ಬಾಗಿಲಿಗೆ ಬಂದು ಬೇಡಿಕೊಂಡು ಸಿಎಂ ಮಾಡಿದರು. ಮತ್ತೆ ಈ ಸರ್ಕಾರವನ್ನು ತೆಗೆದವರು ಅವರೇ ಕಿಡಿಕಾರಿದರು. ಇದನ್ನೂ ಓದಿ: FD Interest- ಈ 2 ಬ್ಯಾಂಕ್‍ಗಳಲ್ಲಿನ ಠೇವಣಿಗೆ ಸಿಗುತ್ತೆ ಹೆಚ್ಚು ಬಡ್ಡಿ ದರ ಕಾಂಗ್ರೆಸ್‍ನವರು ಜೆಡಿಎಸ್‍ಗೆ ಬೆಂಬಲ ನೀಡಬೇಕಾದರೆ ನಾನು ಬೇಡ ಅಂದೆ. ಕಾಂಗ್ರೆಸ್‍ನವರು ಸಮ್ಮಿಶ್ರ ಸರ್ಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಮೈತ್ರಿ ಸರ್ಕಾರ ತೆಗೆದವರು ಯಾರು? ಉತ್ತರ ಕೊಡುತ್ತಾರಾ? ಕುಮಾರಸ್ವಾಮಿ ಸರ್ಕಾರ ಭ್ರಷ್ಟ ಸರ್ಕಾರ ಎನ್ನುತ್ತಾರೆ. ಕಾಂಗ್ರೆಸ್‍ನವರ ಹಣೆಬರಹ ಏನೆಂದು ಗೊತ್ತಿದೆ. ಸಮಯ ಬಂದಾಗ ಹೇಳುವೆ ಎಂದರು. ಸುಪಾರಿ ಪ್ರಕರಣದ ಬಗ್ಗೆ ಸಿಎಂ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಹಣವಂತರು ರಾಜಕೀಯಕ್ಕೆ ಬರಲು ಇದು ಒಂದು ಕಾರಣ. ಸುಪಾರಿ ಪ್ರಕರಣ ಸೂಕ್ತ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು. Chikkaballapura h d devegowda modi siddaramaiah ಎಚ್‌.ಡಿ.ದೇವೇಗೌಡ ಚಿಕ್ಕಬಳ್ಳಾಪುರ ನರೇಂದ್ರ ಮೋದಿ ಸಿದ್ದರಾಮಯ್ಯ
2022/01/20 01:20:32
https://publictv.in/h-d-devegowda-slams-siddaramaiah-over-critic-on-modi-meet/
mC4
ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!! - kannadatoday.com ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!! Interesting By pavan On February 10, 2018 No Comments ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶೆಟ್ಟಿ ಯಾವಾಗ ವಿವಾಹವಾಗುತ್ತಾರೆ ಹಾಗು ಯಾರನ್ನು ವಿವಾಹವಾಗುತ್ತಾರೆ ಎಂಬ ಚರ್ಚೆ ತುಂಬಾ ನೆಡೆಯುತ್ತಿದೆ,ಬಾಹುಬಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪ್ರೀತಿ ಮಾಡುತ್ತಿದ್ದು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಬಾಹುಬಲಿ-2 ನಂತರ ಅನುಷ್ಕಾ ಭಾಗಮತಿ ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣದಿಂದ,ನಟ ಪ್ರಭಾಸ್ ಕೂಡ ಸಹ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು,ಮಹಿಳಾ ಪ್ರಧಾನ ಚಿತ್ರವಾದರೂ ಭಾಗಮತಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಇತ್ತೀಚಿಗೆ ತನ್ನ ಕುಟುಂಬಸ್ಥರ ಜೊತೆ ಒಂದು ಕಾರ್ಯಕ್ರಮಕ್ಕೆ ಹಾಜರಿದ್ದರು,ಇದೇ ಕಾರ್ಯಕ್ರಮಕ್ಕೆ ಪ್ರಭಾಸ್ ಸಹ ಬಂದಿದ್ದರು,ಪ್ರಭಾಸ್ ನ ನೋಡಿದ್ದೇ ತಡ ಗಟ್ಟಿಯಾಗಿ ಅಪ್ಪಿಕೊಂಡು ಮೈ ಮರೆತರಂತೆ ಅನುಷ್ಕಾ. ಕುಟುಂಬಸ್ಥರು ಹಾಗು ಸಿನಿ ದಿಗ್ಗಜರ ಎದುರೇ ಪ್ರಭಾಸ್ ಮಡಿಲಲ್ಲಿ ಅನುಷ್ಕಾ ತುಂಬಾ ಹೊತ್ತೇ ಇದ್ದರಂತೆ,ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಪ್ರಭಾಸ್ ಗಾಗಿ ಸ್ವತಃ ಅನುಷ್ಕಾ ಅವರೇ ಬಿಸಿ ಬಿಸಿ ದೋಸೆ ಮಾಡಿ ತನ್ನ ಕೈಯಿಂದ ತಿನಿಸಿದರಂತೆ.ಇದನ್ನಲ್ಲಾ ನೋಡಿದ ಅಲ್ಲಿನ ಜನ ಇವರದು ಖಂಡಿತ ಸ್ನೇಹ ಮಾತ್ರ ಅಲ್ಲ,ಅದ್ದಕಿಂತ ಹೆಚ್ಚು ಎಂದು ಮನಸಲ್ಲೇ ಅನ್ಕೊಂಡರಂತೆ. source:-https://www.youtube.com/watch?v=Ha6JC-v8I9I ಕನ್ನಡದ ಟಾಪ್ ನಟಿ ಶೂಟಿಂಗ್ ವೇಳೆ ಬಟ್ಟೆ ಬದಲಾಯಿಸುವಾಗ ಯಾರೋ ಒಬ್ಬರು ಆಕೆಯನ್ನು ಮೊಬೈಲ್ ನಿಂದ ಶೂಟ್ ಮಾಡುತ್ತಾರೆ.!!! ಇಷ್ಟಕ್ಕೂ ಯಾರು ಆ ಟಾಪ್ ನಟಿ.???
2018/03/24 02:28:44
http://kannadatoday.com/2018/02/10/infront-of-her-relatives-anushka-hugged-star-hero-who-is-that-hero/
mC4
ಒಂದು ಭಿಕ್ಷುಕನಂತೆ ಉಂಗುರಗಳು | Apg29 ಒಂದು ಭಿಕ್ಷುಕನಂತೆ ಉಂಗುರಗಳು ನೀವೇ ವಂಚನೆಗೊಳಗಾಗುವುದಿಲ್ಲ ಮತ್ತು ಮೋಸ ಮತ್ತು ಹೇಗೆ ಇದು ನಿಜವಾಗಿಯೂ ಕರೆ ಮತ್ತು ಹಾರ್ಡ್ ಹೊಂದಿರುವ ಭಿಕ್ಷುಕನ ಎಂದು ತಿಳಿಯುವುದು? ಬಹುಶಃ ಇದು ಉತ್ತಮ ಲೀಗ್ ಹಿಂದಿದೆ. ನಿನ್ನೆ ಪ್ರೆಸೆಂಟ್ಸ್ ಸ್ವತಃ ಇಲ್ಲದೆ ನನಗೆ ರೊಮೇನಿಯನ್ ವ್ಯಕ್ತಿ ಎಂದು ಕರೆಯಲ್ಪಡುತ್ತಾರೆ. ಅವರು ಮುರಿದು ಸ್ವೀಡಿಷ್ ಈಗಿನಿಂದಲೇ ಮಾತನಾಡುವ ಪ್ರಾರಂಭವಾಯಿತು, ಆದರೆ ಇನ್ನೂ ಸಾಕಷ್ಟು ತೆರವುಗೊಳಿಸಿ. ಬಹುಶಃ ಅವರು ಕಾಗದದ ಮೊದಲು ಓದಿ. ಯಾರಾದರೂ ತನ್ನ ಹೆಸರು ಹೇಳಲು ಇಲ್ಲ ಬಂದ, ನಾನು ಅದನ್ನು ಯಾರು ಕೇಳಿ. ಆದರೆ ಉತ್ತರಿಸಲು ಆದರೆ ಮಾತನಾಡುವ ಮುಂದುವರೆಯಿತು ಮಾಡಲಿಲ್ಲ. ಅವರು, ಅವರ ಕುಟುಂಬ ಬಗ್ಗೆ ಎಸ್ಒಬಿ ಕಥೆಗಳನ್ನು ಹೇಳುವ ಪ್ರಾರಂಭಿಸಿದರು ಅವರು ಕ್ಯಾನ್ಸರ್ ರೋಗಿಗಳಿಗೂ ಮತ್ತು ಇದು ನಿಜವಾಗಿಯೂ ಹಾರ್ಡ್ ಹೊಂದಿತ್ತು. ನಾನು ಬೇಗ ತನ್ನ ಸಂದರ್ಭದಲ್ಲಿ ಹಣ ಕೋರುತ್ತಾರೆ ಎಂದು ತಿಳಿಯಬಹುದು. ಅವರು ಕರೆದ ಒಮ್ಮೆ ಕೇಳಿದರು ಮತ್ತು ನಾನು ಎರಡೂ ಅರ್ಥ ಅಥವಾ ಉಚ್ಚರಿಸುತ್ತಾರೆ ಸಾಧ್ಯವಿತ್ತು ಒಂದು ಹೆಸರಿಗೆ ಹದಗೆಟ್ಟ ಅಸ್ಪಷ್ಟ ಪ್ರತಿಕ್ರಿಯೆ ಸಿಕ್ಕಿತು. ಅವರು ವಾಸಿಸಿದ ನಾನು ಕೇಳಿದಾಗ ಮತ್ತು ರೊಮೇನಿಯಾ ತಿಳಿಸಲಾಯಿತು. ನೀವು ಸಹಜವಾಗಿ ಸ್ವೀಡಿಷ್, ನಾನು ಹೇಳಿದರು, ಆದರೆ ಅವರು ರೊಮೇನಿಯಾದ ಹೇಳಿದರು. ಆದರೆ ಸೆಲ್ ಫೋನ್ ಅವನು ಸ್ವೀಡನ್ ನಿಂದ ಕರೆ ಬಹಿರಂಗ. ನೀವು ಸ್ವೀಡನ್ನ ಕರೆ ನಾನು ಹೇಳಿದರು ಮುಂದುವರೆದಿತ್ತು: ನೀವು ಸುಳ್ಳು ನೀವು! ನಂತರ ನಾನು ವಿದಾಯ ಹೇಳಿದರು ಮತ್ತು ಕೊನೆಗೊಳಿಸಿದ್ದಾರೆ. ಹೊಂದಿತ್ತು ವ್ಯಕ್ತಿ ಅವರು ಕ್ರಿಶ್ಚಿಯನ್, ಆದರೆ ನಾನು ಈಗಾಗಲೇ ನಮ್ಮ ಅಂಗಡಿಗಳ ಮುಂದೆ ಕುಳಿತು ರೊಮೇನಿಯನ್ ಭಿಕ್ಷುಕರು ಅವರು ಕ್ರೈಸ್ತರು ಮತ್ತು ರೊಮೇನಿಯಾ ವಿವಿಧ ಚರ್ಚುಗಳ ಸದಸ್ಯರು ಹೇಳಿದಳು ಅಲ್ಲಿ ಗೊತ್ತು, ಆದರೆ ಪರೀಕ್ಷಿಸಿದ್ದು ಯಾವಾಗ ಇದು ಮೊಕದ್ದಮೆ ಎಂದಿಗೂ ಹೇಳಿದರು. ಖಂಡಿತವಾಗಿಯೂ, ನೀವು ಬಯಸಿದರೆ ತಮ್ಮನ್ನು, ಬಡ ಮತ್ತು ಅಗತ್ಯವಿರುವ ಯಾರು, ಆದರೆ ನೀಲಿ ಕಣ್ಣಿನ ಮತ್ತು ನಿರಾಧಾರ, ಮತ್ತು ಅವಕಾಶ ಕ್ರಿಶ್ಚಿಯನ್ ಸಹಾಯ ಜನರು ಬಳಸಬೇಕಾದ ನೀವು ಕ್ರಿಶ್ಚಿಯನ್ ಮತ್ತು ಧಾರ್ಮಿಕ ಜೀವನವನ್ನು ಬಯಸುವ ಕಾರಣ. ವಾಸ್ತವವಾಗಿ, ಇದು ಬಹಳ ತಮಗಿರುವ ಯೇಸುವಿನಲ್ಲಿ ಬೇಗ್ (ಅವರನ್ನು ಮರುಳು?) ಹಣ ಆನ್ ನಂಬುವ ಕ್ರೈಸ್ತರು ನೆಲೆಯಾಗಿದೆ ಕರೆ ಕೂಡಿದೆ. ಬಹುಶಃ ಅವು ವಂಚಿಸುವುದೂ ಸಹ ಕ್ರೈಸ್ತರು ಹುಡುಕಲು ನಿವ್ವಳ ಸುಮಾರು surfed ಬಂದಿದೆ. ನಾನು ಹಿಂದೆ ಭಿಕ್ಷುಕರು ಅವ್ಯವಸ್ಥೆ ಸ್ವೀಕರಿಸಿದ್ದೇವೆ. ಮತ್ತು ಹೇಗೆ ಇದು ನಿಜವಾಗಿಯೂ ಕರೆ ಮತ್ತು ಹಾರ್ಡ್ ಹೊಂದಿರುವ ಭಿಕ್ಷುಕನ ಎಂದು ತಿಳಿಯುವುದು? ಬಹುಶಃ ಇದು ಉತ್ತಮ ಲೀಗ್ ಹಿಂದಿದೆ. ದೂರವಾಣಿ ಮಾರಾಟಗಾರಿಕೆಯ ಯಾವುದೇ ಹಿಂದೆ, ನನ್ನ ವಸ್ತುಗಳ ಮೇಲೆ ತೂರಿಸು ಬಯಸುವ ದೂರವಾಣಿ ಮಾರಾಟಗಾರಿಕೆಯ ಯಾವುದೇ ಹೇಳುತ್ತಿದ್ದಾರೆ ಒಂದು ಹಾರ್ಡ್ ಸಮಯ. ನಾನು ಯಾವಾಗಲೂ ತಮ್ಮ ಉತ್ಪನ್ನಗಳ ನಾನು ಮಿಸ್ ಸಾಧ್ಯವಿಲ್ಲ ಎಂದು ವಿಶ್ವದ ಅವಕಾಶ ಎಂದು ತಮ್ಮ ವರ್ತನೆ ನಾನು ಮೂಲತಃ ಅರ್ಥವಾಗದ ಸ್ಟುಪಿಡ್ am ಎಂದು ಕೆಳಮಟ್ಟ ಭಾವಿಸಿದರು. ನಾನು ನನ್ನ ಮನವೊಲಿಸಿದರು ಮತ್ತು ಖರೀದಿಸಿತು ಅವುಗಳಲ್ಲಿ ಒಂದು, ನಾನು ನಂತರ ಮೋಸ ಭಾವಿಸಿದರು ಅವಕಾಶ. ಆದರೆ ಈಗ ನಾನು ಆಸಕ್ತಿ ಇಲ್ಲ ಎಂದು ನೇರವಾಗಿ ಯಾವುದೇ ನೆಲದ ಹೇಳುತ್ತಾರೆ. ಆದರೆ ಅವರು ನನಗೆ ಮನವೊಲಿಸಲು ಪ್ರಯತ್ನಿಸಿ ಮಾತಿಗೆ ಆದರೆ ಮುಂದುವರಿಸಲು, ನಾನು ಒಂದು ಸಂಸ್ಥೆ ಆದರೆ ಸ್ನೇಹಿ ವಿದಾಯ ಮತ್ತು ಆವರಿಸಿರುವ ಅಪ್ ತಕ್ಷಣ ನಿಲ್ಲಿಸಲು. ನಾನು ಅವರಿಗೆ ಅವಕಾಶ ನೀಡುವುದಿಲ್ಲ. ಹಿಂದೆ, ಈ ನನ್ನನ್ನು ಕೆಟ್ಟ ಆತ್ಮಸಾಕ್ಷಿಯ ನೀಡಲಾಗಿತ್ತು, ಆದರೆ ಎಂದಿಗೂ ನಾನು ನಾನು ಆಗಿದೆ ಬಳಸಿಕೊಂಡರು ನೀಡಲಾಗುತ್ತದೆ ಮತ್ತು ನೋವನ್ನು ಎಂದು ಅರ್ಥ ಏಕೆಂದರೆ ಮಾಡಿದ್ದರು. ನಾನು ಬಲವಾದ ಆಗಲು ಮತ್ತು ವಿಷಯ ಈ ರೀತಿಯ ನಿಲ್ಲುವ ಸಾಕಷ್ಟು ಹೆಚ್ಚಿನ ವಿಶ್ವಾಸವನ್ನು ಹೊಂದಿರುವುದಿಲ್ಲ. ಆದ್ದರಿಂದ, ನೀವು ಯಾವುದೇ ಹೇಳಲು ಧೈರ್ಯ ಮಾಡಬೇಕು. ಯಾರಾದರೂ ಮೇಕಪ್ ನೀವು ಯಾವುದೇ ಹೇಳಬೇಕಾದಾಗ ಕೀಳರಿಮೆ ಭಾವನೆ ಬಿಡಬೇಡಿ. ಹೆಚ್ಚಿನ ದೃಢ ಮತ್ತು ಧೈರ್ಯವನ್ನು ನಿಮ್ಮ ನಿರ್ಧಾರ ಸಂಸ್ಥೆಯ ಸ್ಟ್ಯಾಂಡ್. ಬಳಸುವ ಇರುವುದಿಲ್ಲ. ಮತ್ತು ನೀವು ಒಂದು ಕ್ರಿಶ್ಚಿಯನ್ ನೀವು ಯಾವುದೇ ಹೇಳಲು ವೇಳೆ, ಕ್ರಿಶ್ಚಿಯನ್ ಆಗಿ ಇಲ್ಲ ಕಡಿಮೆ. ಆದರೆ ಹೇಗೆ ನಾವು ಅವರಿಗೆ ಹಣ ಭಿಕ್ಷಾಟನೆ ಏನು ಮಾಡಬೇಕು? ಮೊದಲನೆಯದಾಗಿ ನಾವು ಅವರು ಅವನನ್ನು ಪಡೆಯಬಹುದು ಮತ್ತು ಉಳಿಸಿದ ಮತ್ತು ಶಾಶ್ವತತೆ ಉಳಿಸಲಾಗಿದೆ ಕೂರಲು ಯೇಸುವಿನ ಸುವಾರ್ತೆ ನೀಡಬೇಕು. ಇಲ್ಲವಾದರೆ, ಅವರು ತಮ್ಮ ಜೀವನದಲ್ಲಿ ಕೆಲವು ಸರಣಿಯನ್ನು ಪಡೆಯಲು ಎಂದಿಗೂ. ಮೊದಲನೆಯದಾಗಿ, ನಾವು ಭಿಕ್ಷುಕರು ಜೀಸಸ್ ನೀಡುತ್ತದೆ! ನಾನು ಮತ್ತೆ ಹೇಳುತ್ತೇನೆ: ಮೊದಲನೆಯದಾಗಿ, ನಾವು ಭಿಕ್ಷುಕರು ಜೀಸಸ್ ನೀಡುತ್ತದೆ! ಆಗ ಅವರು ಕಡುಬಡತನ ದೂರ ಮುರಿಯುತ್ತವೆ! ನಂತರ ನೀವು ಅವುಗಳನ್ನು ಸಾಮಾಜಿಕವಾಗಿ ಸಹಾಯ ಮಾಡಬಹುದು. ಜೀಸಸ್, ನಂತರ ಸಾಮಾಜಿಕ ನೆರವು ಕೆಲಸ ಮಾಡಲಿಲ್ಲ ಇಲ್ಲ! ಆದ್ದರಿಂದ, ನೀವು ಮೊದಲು ಯೇಸು ಸಾಮಾಜಿಕ ಚಿಕಿತ್ಸಾ ನೀಡಿ, ಮತ್ತು ನಂತರದಲ್ಲಿ!
2020/08/11 19:38:45
https://apg29.nu/kn/en-tiggare-ringer
mC4
ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಹೇಮಚಂದ್ರರಿಗೆ ಚಿನ್ನದ ಪದಕ | ಸುದ್ದಿ ಬೆಳ್ತಂಗಡಿ ಬೆಳ್ತಂಗಡಿ: ಇತ್ತೀಚೆಗೆ ಧಾರವಾಡದಲ್ಲಿ ಜರುಗಿದ ರಾಜ್ಯ ಮಟ್ಟದ ಸಿವಿಲ್ ಸರ್ವಿಸ್ ಸ್ಪರ್ಧಾ ಕೂಟ-2020ರಲ್ಲಿ ಪವರ್ ಲಿಪ್ಟಿಂಗ್ ಸ್ಪರ್ಧೇಯ 75 ಕೆ.ಜಿ ವಿಭಾಗದಲ್ಲಿ ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಬಬ್ಬುಕಟ್ಟೆ ಇವರು ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಈ ಸ್ಪರ್ಧಾ ಕೂಟದಲ್ಲಿ ಸತತವಾಗಿ 25 ವರ್ಷಗಳಿಂದ ಭಾಗವಹಿಸುತ್ತಿದ್ದು, ಪದಕಗಳನ್ನು ಪಡೆಯುತ್ತಾ ಬಂದಿದ್ದಾರೆ. ಇವರು ದ.ಕ.ಜಿ.ಪಂ ಸಮಾಜ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾಗಿದ್ದು, ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ-ಪುತ್ತೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಪ್ರಭಾರದಲ್ಲಿರುತ್ತಾರೆ. ಇವರು ತೊಕ್ಕೊಟ್ಟು ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದಾರೆ.
2020/08/09 03:08:52
http://belthangady.suddinews.com/archives/365071?ajaxCalendar=1&mo=8&yr=2020
mC4
ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಟಾಪ್ ಫೈವ್ ಆಟಗಾರರು - ಕರುನಾಡ ವಾಣಿ ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನವೂ ಒಂದಲ್ಲ ಒಂದು ದಾಖಲೆ ನಿರ್ಮಾಣವಾಗುತ್ತಾ ಬಂದಿದೆ. ಕ್ರಿಕೆಟ್ ಎಂಬ ಲೋಕದಲ್ಲಿ ಖ್ಯಾತಿ ಗಳಿಸಿದ ದಾಖಲೆಗಳಿದಂತೆಯೇ ಕುಖ್ಯಾತಿಗೆ ಪಾತ್ರವಾದ ಕೆಲವು ದಾಖಲೆಗಳು ಇವೆ. ಅದರಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿರುವ ಆಟಗಾರರು ಸಹ ಕುಖ್ಯಾತಿಯ ದಾಖಲೆಗೆ ಪಾತ್ರರಾಗಿದ್ದಾರೆ. ಅಷ್ಟಕ್ಕೂ ಐವರು ಆಟಗಾರರು ಯಾರು ಗೊತ್ತಾ? 5: ಶ್ರೀಲಂಕಾದ ಸ್ಪಿನ್ ದಿಗ್ಗಜ ರಾಗಿರುವ ಮುತ್ತಯ್ಯ ಮುರಳೀಧರನ್ ಅವರು ಹಲವಾರು ಬ್ಯಾಟ್ಸ್ಮನ್ಗಳ ಪಾಲಿಗೆ ದುಃಸ್ವಪ್ನವಾಗಿ ಕಾಡಿದ್ದಾರೆ. ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಸಾವಿರಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಇವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 25 ಬಾರಿ ಸೊನ್ನೆ ಸುತ್ತಿದ್ದಾರೆ. 4: ನಾಲ್ಕನೇ ಸ್ಥಾನದಲ್ಲಿ ಶ್ರೀಲಂಕಾದ ಮಾಜಿ ನಾಯಕ ಹಾಗೂ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾದ ಮಹೇಲಾ ಜಯವರ್ಧನೆ ರವರು ಇದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 12 ಸಾವಿರ ರನ್ ಕಲೆಹಾಕಿರುವ ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 28 ಬಾರಿ ಸೊನ್ನೆ ಸುತ್ತಿದ್ದಾರೆ. 3: ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ರಾಷ್ಟ್ರದ ಮಾಜಿ ನಾಯಕ ಹಾಗೂ ವಿಶ್ವವೇ ಕಂಡ ಅತಿ ಶ್ರೇಷ್ಠ ಸ್ವಿಂಗ್ ಬೌಲರ್ ಗಳಲ್ಲಿ ಒಬ್ಬರಾಗಿರುವ ವಾಸಿಮ್ ಅಕ್ರಮ್ ಕಾಣಸಿಗುತ್ತಾರೆ ಏಕದಿನ ಕ್ರಿಕೆಟ್ ನಲ್ಲಿ 502 ವಿಕೆಟ್ ಪಡೆದಿರುವ ಇವರು ಬೌಲಿಂಗ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಂತೆಯೇ 28 ಸೊನ್ನೆಸುತ್ತಿರುವ ಇವರು ಕುಖ್ಯಾತಿ ದಾಖಲೆಯನ್ನು ನಿರ್ಮಿಸಿಕೊಂಡಿದ್ದಾರೆ. 2. ಇನ್ನು ವಿಶ್ವದ ಸ್ಫೋಟಕ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿರುವ ಶಾಹಿದ್ ಅಫ್ರಿದಿ ರವರು ಏಕದಿನ ಕ್ರಿಕೆಟ್ ನಲ್ಲಿ ಎಂಟು ಸಾವಿರಕ್ಕೂ ಹೆಚ್ಚು ರನ್ ಸಿಡಿಸಿ ರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇಷ್ಟೇ ಅಲ್ಲದೆ ಬೌಲಿಂಗ್ ನಲ್ಲಿಯೂ ಸಹ ಮ್ಯಾಜಿಕ್ ಮಾಡಿರುವ ಇವರು 395 ವಿಕೆಟ್ಗಳನ್ನು ಕಬಳಿಸಿದ್ದಾರೆ ಆದರೆ ಸಿಕ್ಸರ್ ಮೂಲಕ ರನ್ ಗಳಿಸುವ ಭರದಲ್ಲಿ ಬರೋಬ್ಬರಿ 30 ಬಾರಿ ಸೊನ್ನೆ ಸುತ್ತಿದ್ದಾರೆ. 1. ಇನ್ನು ಶ್ರೀಲಂಕಾದ ಅತಿ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಮುಂಚೂಣಿಯ ಸಾಲಿನಲ್ಲಿ ನಿಲ್ಲುವ 13000 ರನ್ ಗಳಿಸಿರುವ ಸನತ್ ಜಯಸೂರ್ಯ ರವರು ಈ ಅಪ ಖ್ಯಾತಿ ಪಡೆದ ದಾಖಲೆಯಲ್ಲಿ ಮೊದಲಿಗರಾಗಿ ಕಾಣಸಿಗುತ್ತಾರೆ ಹೌದು ನಿಮಗೆ ಆಶ್ಚರ್ಯ ವಾಗಿರಬಹುದು ಆದರೆ ಇದು ಸತ್ಯ .ಜಯಸೂರ್ಯ ರವರು ಇದುವರೆಗೂ ಏಕದಿನ ಕ್ರಿಕೆಟ್ ನಲ್ಲಿ 34 ಬಾರಿ ಸೊನ್ನೆ ಸುತ್ತಿದ್ದಾರೆ.
2021/09/23 15:15:56
https://karunaadavaani.com/index.php/2019/01/05/top5zeorcricket/
mC4
ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ. – Navakarnataka news ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ. April 10, 2022 April 10, 2022 adminLeave a Comment on ವಿಶೇಷವಾದ ರಾಮನವಮಿ. ಈ 6 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದದಿಂದ ಭಾರೀ ಅದೃಷ್ಟ. ಧನಾಗಮನ. ಈ ರಾಶಿಯವರು ಪ್ರತಿಭಾವಂತರು. ಯಾವುದೇ ಕಷ್ಟವನ್ನು ಎದುರಿಸುವ ಧೈರ್ಯವನ್ನು ದೇವರು ಇವರಿಗೆ ಕೊಟ್ಟಿದ್ದಾನೆ. ಸದಾಕಾಲ ಇವರಿಗೆ ಸೂರ್ಯದೇವನ ಆಶೀರ್ವಾದ ಇರುವುದರಿಂದ ಇವರು ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ಯಾರಿಂದಲೂ ಸಲಹೆ ಮತ್ತು ಸೂಚನೆಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಿಗೆ ಈ ರಾಶಿಯವರು ಎಲ್ಲಾ ಕೆಲಸಗಳನ್ನೂ ತಾವೇ ಮಾಡುತ್ತಾರೆ. ಸೂರ್ಯ ದೇವನ ಆಶೀರ್ವಾದ ಇರುವುದರಿಂದ ಎಲ್ಲಾ ದೃಷ್ಟಿ ದೋಷಗಳು ನಿವಾರಣೆ ಆಗಲಿದೆ ಮತ್ತು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ. ಇವರ ಅದೃಷ್ಟ ದುಪ್ಪಟ್ಟು ಆಗಲಿದೆ. ಸಮಾಜದಲ್ಲಿ ಇವರು ಸಮಾಜಮುಖಿ ಕೆಲಸಗಳಿಂದ ಒಳ್ಳೆಯ ಸ್ಥಾನ ಮಾನವನ್ನು ಗಲಿಸಲಿದ್ದಾರೆ. ಹೊಸ ಉದ್ಯಮವನ್ನು ಪ್ರಾರಂಭಿಸಲು ಇದು ಸುಕ್ತವಾದ ಸಮಯ ಆಗಿದೆ. ಏನೇ ಕಷ್ಟಗಳು ಬಂದರು ಒಂದುಸಾರಿ ಸೂರ್ಯದೇವನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಎಲ್ಲಾ ಕಷ್ಟಗಳು ನಿವಾರಣೆ ಆಗಲಿವೆ. ನಿಮಗೆ ತೊಂದರೆ ಕೊಡುವ ಜನರನ್ನು ಹತ್ತಿರ ಸೇರಿಸಲೇಬೇಡಿ. ಸಂಗಾತಿಯ ಮನಸ್ಸಿನ ಮಾತನ್ನು ಅರ್ಥಮಾಡಿಕೊಳ್ಳಿ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆದಿರುವ ಆ 6 ಅದೃಷ್ಟಶಾಲಿ ರಾಶಿಗಳು ಯಾವುವು ಅಂದರೆ ಧನುರ್, ವೃಶ್ಚಿಕ, ಕನ್ಯಾ, ತುಲಾ, ಮೇಷ ಮತ್ತು ಸಿಂಹ ರಾಶಿಗಳು. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಸರ್ಯದೇವಾಯ ನಮಃ ಎಂದು ಕಮೆಂಟ್ ಮಾಡಿ.
2022/07/04 03:05:28
https://navakarnatakanews.com/visheshavaada-ramamanavmi-e-six-raashiyavarige-nsdfv-jndsf-bvjhdb/
mC4
ತೆರಿಗೆ ಹಣದಲ್ಲಿ ವೈದ್ಯರ ಉನ್ನತಾಭ್ಯಾಸಕ್ಕೆ ಅವಕಾಶ ಬೇಡ: ಎನ್.ಆರ್.ರಮೇಶ್ – EESANJE / ಈ ಸಂಜೆ November 26, 2020 Sunil Kumar Doctors, NR Ramesh, tax money ಬೆಂಗಳೂರು, ನ.26- ಸಾರ್ವಜನಿಕರ ತೆರಿಗೆ ಹಣದಿಂದ ಎಂಪಿಎಚ್ ಕೋರ್ಸ್ ಮಾಡಲು ತೆರಳುತ್ತಿ ರುವ ಇಬ್ಬರು ಬಿಬಿಎಂಪಿ ವೈದ್ಯರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಹಾಗೂ ಕಾನೂನು ಬಾಹಿರವಾಗಿ ಇಂತಹ ಕ್ರಮಕ್ಕೆ ಮುಂದಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದಕ್ಷಣ ವಿಭಾಗದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಬಿಬಿಎಂಪಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ರಾಮು ಮತ್ತು ಸಯ್ಯದ್ ಎಂಬುವರು 2016-2017ನೆ ಸಾಲಿನಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಪಾಲಿಕೆ ಕೋಟ್ಯಂತರ ಹಣದಲ್ಲಿ ಎಂಡಿ ಕೋರ್ಸ್ ಮಾಡಲು ಕಳುಹಿಸಿಕೊಡಲಾಗಿತ್ತು. ಮೂರು ವರ್ಷಗಳ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ವಾಪಸಾದ ಈ ಇಬ್ಬರು ವೈದ್ಯರು ತಮ್ಮ ವಿದ್ಯಾರ್ಜನೆ ವೇಳೆಯಲ್ಲೂ ಎಲ್ಲಲಾ ರೀತಿಯ ವೇತನ ಮತ್ತು ಭತ್ಯೆಗಳನ್ನು ಪಡೆದುಕೊಂಡಿರುತ್ತಾರೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿ ಪೂರೈಸಿ ಬಂದಿರುವ ರಾಮು ಮತ್ತು ಸಯ್ಯದ್ ಅವರು ಕಾನೂನಿನ ಪ್ರಕಾರ ಪಾಲಿಕೆಯ ರೆಫರಲ್ ಆಸ್ಪತ್ರೆಗಳಲ್ಲಿ ಫಿಜಿಷಿಯನ್‍ಗಳಾಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಈ ಇಬ್ಬರು ವೈದ್ಯರು ತಮ್ಮ ರಾಜಕೀಯ ಪ್ರಭಾವ ಬಳಸಿ ಕೆಸಿಎಸ್‍ಆರ್ ನಿಯಮಗಳನ್ನು ಗಾಳಿಗೆ ತೂರಿ ಮತ್ತೊಮ್ಮೆ ಸಾರ್ವಜನಿಕರ ತೆರಿಗೆ ಹಣದ ಮೂಲಕ ಎಂಪಿಎಚ್ ಕೋರ್ಸ್ ಮಾಡಲು ತೆರಳುತ್ತಿದ್ದಾರೆ. ಈ ಇಬ್ಬರು ವೈದ್ಯರಿಗೆ ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತರು, ಹಣಕಾಸು ವಿಭಾಗದ ಅಕಾರಿಗಳು ಹಾಗೂ ಆರೋಗ್ಯಾಕಾರಿಗಳು ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಈ ಕೂಡಲೇ ಈ ಇಬ್ಬರು ವೈದ್ಯರ ಎಂಪಿಎಚ್ ಅಧ್ಯಯನಕ್ಕೆ ತೆರಳುವುದನ್ನು ರದ್ದುಗೊಳಿಸಿ ಅವಶ್ಯಕತೆ ಇರುವ ರೆಫರಲ್ ಮತ್ತು ಡಯಾಲಿಸಿಸ್ ಕೇಂದ್ರಗಳಲ್ಲಿ ಫಿಜಿಶಿಯನ್‍ಗಳಾಗಿ ನಿಯೋಜಿಸಬೇಕು ಎಂದು ಎನ್.ಆರ್.ರಮೇಶ್ ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ತೆರಿಗೆ ಹಣದೊಂದಿಗೆ ಚೆಲ್ಲಾಟ ವಾಡುತ್ತಿರುವ ವೈದ್ಯರು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
2021/12/01 15:20:10
https://www.eesanje.com/nr-ramesh-12/
mC4
ಟಿ20ಯಲ್ಲೂ ಕನ್ನಡಿಗ ರಾಹುಲ್‌ ವಿಕೆಟ್ ಕೀಪರ್‌! | Virat Kohli suggests KL Rahul will keep in T20I Series Against New Zealand ಟಿ20ಯಲ್ಲೂ ಕನ್ನಡಿಗ ರಾಹುಲ್‌ ವಿಕೆಟ್ ಕೀಪರ್‌! ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಪಂತ್‌ಗೆ ಶಾಕ್ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... Auckland, First Published Jan 24, 2020, 10:19 AM IST ಆಕ್ಲೆಂಡ್‌(ಜ.24): ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸ್ಥಾನವನ್ನು ಪಡೆದಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌ಗೆ ಟಿ20 ಮಾದರಿಯಲ್ಲೂ ಹೆಚ್ಚುವರಿ ಜವಾಬ್ದಾರಿ ನೀಡುವುದಾಗಿ ನಾಯಕ ವಿರಾಟ್‌ ಕೊಹ್ಲಿ ಖಚಿತಪಡಿಸಿದ್ದಾರೆ. ಈ ಮೂಲಕ ಪಂತ್‌ಗೆ ನಾಯಕ ಶಾಕ್ ಕೊಟ್ಟಿದ್ದಾರೆ. ಇಂಡೋ-ಕಿವೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, 'ರಾಹುಲ್‌ ಕೀಪಿಂಗ್‌ ಮಾಡಿದರೆ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ ಇಲ್ಲವೇ ಆಲ್ರೌಂಡರ್‌ನನ್ನು ಆಡಿಸಲು ಅವಕಾಶ ಸಿಗಲಿದೆ. ವಿಕೆಟ್‌ ಕೀಪರ್‌ ಆಗಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಟಿ20ಯಲ್ಲೂ ಅವರನ್ನೇ ಮುಂದುವರಿಸಲಿದ್ದೇವೆ' ಎಂದರು. ಅಭ್ಯಾಸದ ವೇಳೆ ರಾಹುಲ್‌ ಹೆಚ್ಚಿನ ಸಮಯವನ್ನು ಕೀಪಿಂಗ್‌ ಮಾಡುವುದರಲ್ಲೇ ಕಳೆದರು. ಇದೇ ವೇಳೆ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆಯೂ ವಿರಾಟ್‌ ಸುಳಿವು ನೀಡಿದರು. ರಾಹುಲ್‌ ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿದ್ದು, ಟಿ20ಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದರು. ಇದರೊಂದಿಗೆ ಪೃಥ್ವಿ ಶಾ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿಲ್ಲದೆ ವೇಳಾಪಟ್ಟಿ ಬಗ್ಗೆ ವಿರಾಟ್‌ ಕೊಹ್ಲಿ ಅಸಮಾಧಾನ! ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿ ಮುಗಿದ ಮರುದಿನವೇ ನ್ಯೂಜಿಲೆಂಡ್‌ಗೆ ವಿಮಾನ ಹತ್ತಿದ ಭಾರತ ತಂಡ, ಮಂಗಳವಾರ ತಲುಪಿತು. ಬುಧವಾರ ವಿಶ್ರಾಂತಿ ಪಡೆದ ಆಟಗಾರರು, ಗುರುವಾರ ಅಭ್ಯಾಸ ನಡೆಸಿದರು. ಬಿಡುವಿಲ್ಲದ ವೇಳಾಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ನಾಯಕ ಕೊಹ್ಲಿ, ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಮುಂದೊಂದು ದಿನ ನೇರವಾಗಿ ಕ್ರೀಡಾಂಗಣಕ್ಕೆ ಬಂದಿಳಿದು ಆಡಬೇಕಾದ ಸಂದರ್ಭ ಬರಬಹುದು' ಎಂದಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿರುವ ಬೇಡಿಕೆಗಳನ್ನು ಒಪ್ಪಿಕೊಂಡಿರುವ ವಿರಾಟ್‌, ಕ್ರಿಕೆಟ್‌ ಇರುವುದೇ ಹೀಗೆ ಎಂದಿದ್ದಾರೆ.
2021/09/17 22:00:35
https://kannada.asianetnews.com/cricket-sports/virat-kohli-suggests-kl-rahul-will-keep-in-t20i-series-against-new-zealand-q4lhfa
mC4
ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..! - Kannada DriveSpark 5 min ago ನಾಳೆಯೇ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹೋಂಡಾ ಸಿಟಿ ಸೆಡಾನ್ ಕಾರು 15 min ago ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಆರ್‍ಎಸ್200 ಬೈಕ್ 23 min ago ಅನ್ ಲಾಕ್ ಎಫೆಕ್ಟ್: ಚೇತರಿಕೆ ಹಾದಿಯಲ್ಲಿ ವಾಹನ ಮಾರಾಟ ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..! ಭಾರತದ ವಾಹನ ಸವಾರರು ಹಲವಾರು ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದೂ ಸಹ ಒಂದು. ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅದರಲ್ಲೂ ಚಿಕ್ಕದಾಗಿರುವ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತದೆ. ಆದರೆ ಈ ಟ್ರಾಫಿಕ್ ಜಾಮ್ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳುವುದೇ ಇಲ್ಲ. ತಪ್ಪು ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಜನರಿಗೆ ತೊಂದರೆಯಾದರೂ ಕ್ಯಾರೇ ಎನ್ನುವುದಿಲ್ಲ. ಚಿಕ್ಕ ರಸ್ತೆಯಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ವಾಹನಗಳಿಗೆ ತೊಂದರೆಯುಂಟು ಮಾಡುತ್ತಿದ್ದ ಕಾರ್ ಅನ್ನು ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕರು ಎತ್ತಿ ಪಕ್ಕಕ್ಕಿಟ್ಟ ಘಟನೆಯ ವೀಡಿಯೊವೊಂದು ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಪಂಜಾಬ್‍‍ನಲ್ಲಿ. ಈ ವೀಡಿಯೊವನ್ನು ಪೊಲೀಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಮಹೀಂದ್ರಾ ಟಿಯುವಿ300 ಚಿಕ್ಕ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು. ವಾಹನವು ಮುಂದಕ್ಕೆ ಹೋಗಲಾಗದೇ ಅಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಇದರಿಂದಾಗಿ ಮಹೀಂದ್ರಾ ಟಿಯುವಿ300 ಅನ್ನು ಚಲಾಯಿಸುತ್ತಿದ್ದವರು ಕಾರಿನಿಂದ ಹೊರಗಿಳಿದು ಯಾರೂ ನಿರೀಕ್ಷಿಸಿರದ್ದನ್ನು ಮಾಡುತ್ತಾರೆ. ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿಗೆ ಒರಗಿ ತನ್ನ ಕೈಗಳಿಂದ ಆ ಕಾರ್ ಅನ್ನು ಮೇಲಕ್ಕೆತ್ತಿ ಪಕ್ಕಕ್ಕೆ ಸರಿಸುತ್ತಾರೆ. ಮಹೀಂದ್ರಾ ಟಿಯುವಿ 300 ಕಾರು ಮುಂದಕ್ಕೆ ಚಲಿಸುವಷ್ಟು ಡಿಜೈರ್ ಕಾರ್ ಅನ್ನು ಪಕ್ಕಕ್ಕೆ ಸರಿಸುತ್ತಾರೆ. ಈ ಘಟನೆಯನ್ನು ನೋಡಿ ಸ್ಥಳದಲ್ಲಿದ್ದ ಜನರು ಆಶ್ಚರ್ಯಚಕಿತರಾಗುತ್ತಾರೆ. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕನಿಗೆ ಥಮ್ಸ್ ಅಪ್ ಮಾಡುತ್ತಾನೆ. ಇದಾದ ನಂತರ ಮಹೀಂದ್ರಾ ಟಿಯುವಿ300 ಅಲ್ಲಿಂದ ಮುಂದೆ ಸಾಗುತ್ತದೆ. ಈ ವೀಡಿಯೊದಲ್ಲಿ ಕಂಡು ಬರುವ ಡಿಜೈರ್ ಹಳೆಯ ತಲೆಮಾರಿನ ಸೆಡಾನ್ ಕಾರ್ ಆಗಿದೆ. ಈಗ ಈ ಕಾರ್ ಅನ್ನು ಮಾರಾಟ ಮಾಡುತ್ತಿಲ್ಲ. ಒಬ್ಬನೇ ವ್ಯಕ್ತಿ ಇಡೀ ಕಾರ್ ಅನ್ನು ಎತ್ತಿ ಪಕ್ಕಕ್ಕೆ ತಳ್ಳಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಹೊಸ ಮಾರುತಿ ಸುಜುಕಿ ಡಿಜೈರ್ ಕಾರು ಹಾರ್ಟ್‍‍ಟೆಕ್ ಪ್ಲಾಟ್‌ಫಾರ್ಮ್ ಮೇಲೆ ತಯಾರಾಗಿದೆ. ಇದು ಕಡಿಮೆ ತೂಕವನ್ನು ಹೊಂದಿದೆ. ಇದಕ್ಕಿಂತ ಮುಂಚೆ ಮಾರುಕಟ್ಟೆಯಲ್ಲಿದ ಡಿಜೈರ್ ಕಾರು 1,070 ಕೆ.ಜಿ ತೂಕವನ್ನು ಹೊಂದಿತ್ತು. ಕೇವಲ ಕೈ, ಕಾಲುಗಳ ಮೂಲಕ ಕಾರ್ ಅನ್ನು ಪಕ್ಕಕ್ಕೆ ಸರಿಸುವುದು ಸಣ್ಣ ಸಾಧನೆಯಲ್ಲ. ಈ ರೀತಿಯಾಗಿ ಕಾರ್ ಅನ್ನು ಪಕ್ಕಕ್ಕೆ ತಳ್ಳುವ ವೀಡಿಯೊಗಳು ಪ್ರಪಂಚದಾದ್ಯಂತ ವೈರಲ್ ಆಗಿವೆ. ಆ ವೀಡಿಯೊಗಳಲ್ಲಿ ಬಲಶಾಲಿಗಳು ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವುದನ್ನು ಕಾಣಬಹುದು. ಆದರೆ, ಸೆಡಾನ್ ಕಾರುಗಳನ್ನು ಪಕ್ಕಕ್ಕೆ ತಳ್ಳುವುದು ನಿಜಕ್ಕೂ ದೊಡ್ಡ ವಿಷಯ. ಡಿಜೈರ್ ಕಾರ್ ಅನ್ನು ಪಕ್ಕಕ್ಕೆ ತಳ್ಳಿದ ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕರ ಬಗ್ಗೆ ವಿವರಗಳು ತಿಳಿದು ಬಂದಿಲ್ಲ. ಅವರು ತಮ್ಮ ಶಕ್ತಿ, ಸಾಮರ್ಥ್ಯದ ಹಿಂದಿನ ರಹಸ್ಯವನ್ನು ತಿಳಿಸುತ್ತಾರೆಯೇ ಎಂಬುದನ್ನು ಕಾದು ನೋಡೋಣ. ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ನಿಲ್ಲಿಸುವಾಗ ಯಾವಾಗಲೂ ಜಾಗರೂಕರಾಗಿರಬೇಕು. ಅನೇಕ ಪ್ರದೇಶಗಳಲ್ಲಿ ಕಾರುಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಅನುಮತಿ ನೀಡದಿದ್ದರೂ, ವಾಹನ ಚಾಲಕರು ಅಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಅಕ್ರಮವಾಗಿ ನಿಲುಗಡೆ ಮಾಡಿರುವ ವಾಹನಗಳನ್ನು ಪೊಲೀಸರು ತೆರವುಗೊಳಿಸುತ್ತಿದ್ದರೂ ಸಹ, ಪದೇ ಪದೇ ಪಾರ್ಕಿಂಗ್‍ ಇಲ್ಲದ ಜಾಗಗಳಲ್ಲಿ ನಿಲ್ಲಿಸುತ್ತಲೇ ಇರುತ್ತಾರೆ. ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ದಾರಿ ಮಾಡಿಕೊಡುವುದು ಹಾಗೂ ಇತರರು ಸುಲಭವಾಗಿ ಹಾದುಹೋಗುವ ರೀತಿಯಲ್ಲಿ ವಾಹನವನ್ನು ನಿಲ್ಲಿಸುವುದು ಮುಖ್ಯ.
2020/07/14 07:20:17
https://kannada.drivespark.com/off-beat/mahindra-tuv300-driver-lifts-maruti-suzuki-dzire-017338.html?utm_medium=Desktop&utm_source=DS-KN&utm_campaign=Similar-Topic-Slider
mC4
ಸಾಮಾಜಿಕ ಸಂಶೋಧನೆ ಯಾಕಾಗಿ? | ನಿಲುಮೆ ಮೇ 17, 2013 – ಪ್ರೊ.ಜೆ.ಎಸ್.ಸದಾನಂದ {ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ} ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ. ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಬಾಲುರವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಎನ್ನುವ ಪ್ರಾಕ್ಕಲ್ಪನೆಯನ್ನು (ಇದೊಂದು ಸಂಶೋಧನೆಯ ಮುಖಾಂತರ ಸಾಬೀತಾಗಬೇಕಾದ ಪ್ರಾಕ್ಕಲ್ಪನೆ ಮಾತ್ರ) ಏಕೆ ಮುಂದಿಡುತ್ತಾರೆ ಎನ್ನುವುದರ ಹಿನ್ನೆಲೆಯನ್ನು ನಾವು ನೋಡಬೇಕು. ಭಾರತದಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಹಾಗು ಅದರ ಪರಿಣಾಮಗಳ ಕುರಿತು ಈಗಾಗಲೇ ಅಸಂಖ್ಯಾತ ಸಂಶೋಧನಾ ಗ್ರಂಥಗಳು ಹೊರಬಂದಿವೆ. ಜಾತಿವ್ಯವಸ್ಥೆಯ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವನ್ನು ನಾವು ಕಾಣುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿ ಎಲ್ಲಡೆ ಕಂಡುಬರುವ ಜಾತಿಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎನ್ನುವುದುನ್ನು ಎಲ್ಲಾ ವಿದ್ವಾಂಸರೂ ಹೆಚ್ಚು ಕಡಿಮೆ ಒಪ್ಪುತ್ತಾರೆ. ಬಾಲು ಅವರ ಪ್ರಕಾರ ಇದ್ಕಕೆ ಮುಖ್ಯ ಕಾರಣ ಈ ಎಲ್ಲಾ ಸಂಶೋಧನೆಗಳು ಜಾತಿವ್ಯವಸ್ಥೆ ಎನ್ನುವುದು ಹಿಂದೂ ರಿಲಿಜನ್ನ ಪ್ರಧಾನ ಲಕ್ಷಣ ಎನ್ನುವ ಇದುವರೆಗೆ ಯಾವುದೇ ಸಂಶೋಧನೆಯಿಂದ ಸಾಬೀತಾಗದ ನಂಬಿಕೆಯನ್ನು ಆಧರಿಸಿವೆ. ಹಿಂದೂ ರಿಲಿಜನ್ ಎನ್ನುವುದು ಅಸ್ತಿತ್ವದಲ್ಲಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಜಾತಿಗಳು ಅದರ ನ್ಯೆತಿಕ ನಿರ್ಬಂಧದಲ್ಲಿ ಬಂದಿಸಲ್ಪಟ್ಟಿವೆ ಎನ್ನುವುದು ಒಂದು ಸಾಮಾನ್ಯ ನಂಬಿಕೆಯಾಗಿ ಮುಂದುವರೆದುಕೊಂಡು ಬಂದಿದೆಯೇ ಹೊರತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಿಲ್ಲ. ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರಿತಂತೆ ಇರುವ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ. ಭಾರತದಲ್ಲಿ ಜಾತಿ ವಿನಾಶವನ್ನು ಗುರಿಯಾಗಿಟ್ಟುಕೊಂಡ ಕಾರ್ಯಕ್ರಮಗಳು ನಿರೀಕ್ಷಿತ ಫಲ ಕೊಡುತ್ತಿಲ್ಲ ಏಕೆ? ಜಾತಿಯ ವಿರುದ್ಧ ಹೊರಾಟಗಳು ನಡೆದಂತೆಲ್ಲಾ ಜಾತಿ ಮತ್ತಷ್ಟು ಗಟ್ಟಿಯಾಗಿ ಬೇರೂರುತ್ತಿರುವಂತೆ ನಮಗನಿಸುವುದು ಏಕೆ? ಜಾತಿವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಬೇಕೆಂದು ಬಯಸುವ ಗುಂಪುಗಳೇ ತಮ್ಮ ಗುರಿಯನ್ನು ತಲುಪಲು ತಮ್ಮ ಜಾತಿ ಅಸ್ಮಿತೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕಾದ ಆಂತರಿಕ ವ್ಯೆರುಧ್ಯವನ್ನು ಎದುರಿಸಬೇಕಾದ ಪರಿಸ್ಥಿತಿಗೆ ಏಕೆ ಒಳಗಾಗಿವೆ? ದಲಿತರ ಮೇಲಿನ ಶೋಷಣೆಗೆ ಜಾತಿಯ ಅಸ್ತಿತ್ವವೇ ಕಾರಣವೆಂದಾದರೆ ಜಾತಿಗಳನ್ನು ಉಳಿಸಿಕೊಂಡು ದಲಿತರೊಡನೆ ಸಂಘರ್ಷರಹಿತ ಸಹಬಾಳ್ವೆಯನ್ನು ಮಾಡುತ್ತಿರುವ ಹಲವು ಉದಾಹರಣೆಗಳನ್ನು ವಿವರಿಸುವುದು ಹೇಗೆ? ಜಾತಿವ್ಯವಸ್ಥೆಯ ಸಿದ್ಧಾಂತದ ಮೂಲದಿಂದ ಹುಟ್ಟಿಕೊಂಡ ಜಾತಿಯಾದಾರಿತ ಅಧಿಕಾರ ರಾಜಕೀಯ ಜಾತಿಗಳ ನಡುವಿನ ವ್ಯೆಮನಸ್ಯದ ಸಮಸ್ಯೆಯನ್ನು ಶಮನಗೊಳಿಸುತ್ತಿದೆಯೆ ಅಥವಾ ಅದನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆಯೆ? ಜಾತಿ ವ್ಯವಸ್ಥೆಯ ಕುರಿತು ಇದೂವರೆಗೆ ನಡೆದಿರುವ ಅಸಂಖ್ಯಾತ ಸಂಶೋಧನೆಗಳು ಅದರ ಸ್ವರೂಪವನ್ನು ಗುರುತಿಸಲು ಏಕೆ ವಿಫಲವಾಗಿವೆ? ಎಲ್ಲರಲ್ಲೂ ಮಾನವೀಯತೆಯ ಮೌಲ್ಯವನ್ನು ಬಿತ್ತುವ ಆಶಯವನ್ನು ಇಟ್ಟುಕೊಂಡ ಚಳುವಳಿಗಳು ಪ್ರಬಲವಾದಂತೆಲ್ಲಾ ಜಾತಿ ಧ್ವೇಷ ಹಾಗೂ ವ್ಯೆಮನಸ್ಯಗಳೂ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು? ಈ ಎಲ್ಲಾ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಹಾಗೂ ಅವುಗಳಿಗೆ ಉತ್ತರ ಕಂಡುಕೊಳ್ಳಬೇಕಾದ ತುರ್ತು ನಮಗೆಲ್ಲರಿಗೂ ಇದೆ ಎನ್ನುವುದನ್ನು ದೇವನೂರರೂ ಒಪ್ಪುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾವೆದುರಿಸುತ್ತಿರುವ ಈ ಸಮಸ್ಯೆಗಳೇ ಜಾತಿಯನ್ನು ಕುರಿತ ಸಂಶೋಧನಾ ಪ್ರಶ್ನೆಗಳನ್ನು ಚರ್ಚೆಗೊಳಪಡಿಸಲು ನಮಗೆ ಮೂಲ ಪ್ರೇರಣೆಯಾಗಿವೆ. ಬಾಲುರವರ ಪ್ರಕಾರ ಜಾತಿವ್ಯವಸ್ಥೆ ಇದೆ ಎನ್ನುವ ನಂಬಿಕೆಯನ್ನು ಆಧರಿಸಿರುವ ಚಿಂತನೆಗಳು ಹಾಗೂ ಚಳುವಳಿಗಳು ನಾವು ತಲುಪಬೇಕಾದ ಗುರಿಯನ್ನು ಅಂದರೆ ಶೋಷಣಾರಹಿತ, ಪರಸ್ಪರ ಸಹಬಾಳ್ವೆಗೆ ಪೂರಕವಾದ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅಡ್ಡಿಯಾಗಿವೆ. ನಮ್ಮ ಸಮಾಜದಲ್ಲಿ ಹತ್ತು ಹಲವು ವಿಧದ ಶೋಷಣೆಗಳು, ಸಂಘರ್ಷಗಳು ಪ್ರಕಟಗೊಳ್ಳುತ್ತಲೇ ಇವೆ. ಜಾತಿ ಶೋಷಣೆ ಎಂದು ನಾವು ಗುರುತಿಸುವ ವಿದ್ಯಮಾನದಲ್ಲಿ ಜಾತಿ ಒಂದು ಸಾಧನವಾಗಿ ಬಳಕೆಯಾಗುತ್ತಿದೆಯೇ ಹೊರತು ಜಾತಿಯಿಂದಾಗಿಯೇ ಅಂತಹ ಶೋಷಣೆ ಹುಟ್ಟಿಕೊಳ್ಳುತ್ತದೆ ಎಂದು ನಮಗೆ ತೋರಿಸಲಾಗುವುದಿಲ್ಲ. ಜಾತಿ ವ್ಯವಸ್ಥೆಯ ಸಿದ್ಧಾಂತದ ಚೌಕಟ್ಟಿನಲ್ಲಿ ನೋಡಿದಾಗ ಜಾತಿಗಳು ಇದ್ದದ್ದರಿಂದಾಗಿಯೇ ಅಂತಹ ಸಂಘರ್ಷ ಉಂಟಾಯಿತೆಂಬಂತೆ ಕಾಣುತ್ತದೆ ಎನ್ನುವುದು ಅವರ ವಾದ. ಉದಾಹರಣೆಗೆ, ಒಂದು ಹಾಸ್ಟೆಲ್ನಲ್ಲಿರುವ ವಿವಿಧ ಜಾತಿಯ ವಿದ್ಯಾರ್ಥಿಗಳ ನಡುವೆ ಸಂಘರ್ಷ ಉಂಟಾದಾಗ ಜಾತಿಯೇ ಕಾರಣವೆಂಬಂತೆ ನಾವು ಪರಿಗಣಿಸುತ್ತೇವೆ. ಆದರೆ ಅದೇ ವಿದ್ಯಾರ್ಥಿಗಳು ವಿವಿಧ ಭಾಷೆಯವರಾಗಿದ್ದರೆ ಅಥವಾ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದರೆ ಮತ್ತು ಅವರ ನಡುವೆ ಜಗಳ ನಡೆದರೆ ಆಗ ಭಾಷೆ ಅಥವಾ ಜಿಲ್ಲೆಗಳು ಇರುವುದರಿಂದಲೇ ಸಮಸ್ಯೆ ಉದ್ಭವಿಸಿತು ಎನ್ನು ತೀರ್ಮಾನಕ್ಕೆ ನಾವು ಬರುವುದಿಲ್ಲ ಮತ್ತು ಆ ಕಾರಣಕ್ಕಾಗಿ ಭಾಷೆಗಳನ್ನೇ ಅಥವಾ ಜಿಲ್ಲೆಗಳನ್ನೇ ನಿರ್ಮೂಲನೆ ಮಾಡಬೇಕೆಂದು ನಮಗನಿಸುವುದಿಲ್ಲ. ತಮ್ಮ ನಡುವಿನ ವೈಮನಸ್ಯಕ್ಕೆ ಭಾಷೆ ಅಥವಾ ಜಿಲ್ಲೆಗಳನ್ನು ಸಾಧನವಾಗಿ ಬಳಸಿಕೊಂಡರು ಎಂದಷ್ಟೇ ನಾವು ನೋಡುತ್ತೇವೆ. ಆದರೆ ಜಾತಿ ಘರ್ಷಣೆಗಳ ವಿಷಯಕ್ಕೆ ಬಂದಾಗ ಜಾತಿ ನಿರ್ಮೂಲನವೊಂದೇ ಪರಿಹಾರವಾಗಿ ನಮಗೆ ಕಾಣತೊಡಗುತ್ತದೆ. ಒಂದು ಶೋಷಣಾರಹಿತ ಹಾಗೂ ನ್ಯಾಯಯುತ ಸಮಾಜವನ್ನು ನಿರ್ಮಿಸಬೇಕೆಂಬ ಕಳಕಳಿ ಇರುವವರಿಗೆ ಮುಖ್ಯವಾಗಬೇಕಾದ ಅಂಶವೆಂದರೆ ಸಮಸ್ಯೆಯ ಸ್ವರೂಪವನ್ನು ಗುರುತಿಸುವಲ್ಲಿ ಯಾವ ಮಾರ್ಗ ಹೆಚ್ಚು ವ್ಯೆಜ್ಞಾನಿಕವಾದುದು ಮತ್ತು ಅದು ಎಷ್ಟರಮಟ್ಟಿಗೆ ಸಮಾಜದಲ್ಲಿ ಕಂಡುಬರುತ್ತಿರುವ ಅಸಮಾನತೆ, ಅನ್ಯಾಯ ಶೋಷಣೆಗಳಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಮರ್ಥವಾಗಿದೆ ಎನ್ನುವುದರತ್ತ ಗಮನ ಹರಿಸುವುದು. ಈ ನಿಟ್ಟಿನಲ್ಲಿ ಬಾಲುರವರದು ಒಂದು ಪ್ರಾಕ್ಕಲ್ಪನೆ (ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎನ್ನುವ) ಮಾತ್ರ. ಈ ಪ್ರಾಕ್ಕಲ್ಪನೆ ಮುಂದೆ ಈ ನಿಟ್ಟಿನಲ್ಲಿ ಯಾರಾದರೂ ಕ್ಯೆಗೊಳ್ಳಬಹುದಾದ ಸಂಶೋಧನೆಯ ಸಾಧ್ಯತೆಯನ್ನು ತೋರಿಸುತ್ತದೆ ಹಾಗೂ ಅಂತಹ ಒಂದು ಸಂಶೋಧನೆಯಲ್ಲಿ ಅವರ ಪ್ರಾಕ್ಕಲ್ಪನೆಯು ನಿರಾಕಾರಿಸಲ್ಪಡುವ ಸಾಧ್ಯತೆಯೂ ಇದೆ. ಅವರ ಪ್ರಾಕ್ಕಲ್ಪನೆಯು ಸಂಶೋಧನೆಯ ಮೂಲಕ ಸಾಬೀತಾಗಬೇಕಾದರೆ ಕೆಲವು ಕನಿಷ್ಟ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ: 1) ಜಾತಿಶೋಷಣೆಯ ವಿದ್ಯಮಾನದ ಬಗ್ಗೆ ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ನಾವು ಕೊಡುತ್ತಿರುವ ವಿವರಣೆಗಳಿಗಿಂತ ಉತ್ತಮವಾದ, ಅಂದರೆ ಕಡಿಮೆ ಆಂತರಿಕ ವ್ಯೆರುಧ್ಯಗಳನ್ನೊಳಗೊಂಡ (ಸಂಶೋಧನೆಯಲ್ಲಿ ಯಾವುದೇ ವಿವರಣೆಯು ಸಂಪೂರ್ಣವಾದ ಅಥವಾ ಅಂತಿಮವಾದ ವಿವರಣೆಯಾಗಿರುವುದಿಲ್ಲ) ಹಾಗೂ, 2) ಆ ವಿದ್ಯಮಾನದಲ್ಲಿ ನಾವು ಗುರುತಿಸುವ ಸಮಸ್ಯೆಗಳಿಗೆ ಈಗಿರುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವಂತಹ ವಿವರಣೆ ಅದಾಗಿರಬೇಕು. ಹಾಗಿದ್ದಾಗ ಮಾತ್ರ ಅದು ಜ್ಞಾನದ ಮುಂದುವರಿಕೆಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ. ಇಲ್ಲವಾದಲ್ಲಿ ಅವರ ಪ್ರಾಕ್ಕಲ್ಪನೆ ಬಿದ್ದುಹೋಗುತ್ತದೆ. ಮೇಲಿನ ಈ ಎರಡು ಅಂಶಗಳು ಅವರ ಪ್ರಾಕ್ಕಲ್ಪನೆಯನ್ನು ಪರೀಕ್ಷಿಸುವ ಮಾನದಂಡಗಳೂ ಕೂಡ ಆಗಿವೆ. ಅದರೆ ಈಗ ಬಾಲುರವರ ಪ್ರಾಕ್ಕಲ್ಪನೆಗೆ ಬರುತ್ತಿರುವ ಟೀಕೆಗಳ ಮಾನದಂಡ ಯಾವುದಾಗಿದೆ ನೋಡಿ. ಮೊದಲನೆಯದಾಗಿ, ಈಗಿರುವ ವಿವರಣೆಗಳು (ಜಾತಿವ್ಯವಸ್ಥೆ, ಪುರೋಹಿತಶಾಹಿ, ಬ್ರಾಹ್ಮಿಣಿಸಂ ಇತ್ಯಾದಿ) ಪ್ರಶ್ನಾತೀತ ಎನ್ನುವ ಧೋರಣೆ. ಎರಡನೆಯದಾಗಿ, ಜಾತಿ ವ್ಯವಸ್ಥೆಯ ಸೈದ್ಧಾಂತಿಕ ಚೌಕಟ್ಟನ್ನು ಪ್ರಶ್ನಿಸುವುದೆಂದರೆ ಅದನ್ನು ಆದರಿಸಿ ಇದೂವರೆಗೂ ಕಟ್ಟಿಕೊಂಡು ಬಂದ ಚಳುವಳಿಗಳ, ಹೋರಾಟಗಳ, ಮತ್ತು ಅದಕ್ಕಾಗಿ ಲಕ್ಷಾಂತರ ಮಂದಿ (ಅಂಬೇಡ್ಕರ‍್ ರವರನ್ನೂ ಒಳಗೊಂಡಂತೆ) ಮಾಡಿದ ತ್ಯಾಗದ ಮೂಲ ಆಶಯವನ್ನೇ ಅಲ್ಲಗಳೆದಂತೆ ಎನ್ನುವ ಮನೋಭಾವ. ಮೂರನೆಯದಾಗಿ, ಈಗ ಅನುಸರಿಸುತ್ತಿರುವ ಮಾರ್ಗಕ್ಕೆ ಯಾವುದೇ ಪರ್ಯಾಯ ಇರುವುದು ಸಾಧ್ಯವೇ ಇಲ್ಲ ಎನ್ನುವ ಅಚಲ ನಂಬಿಕೆ. ಸಾಮಾಜಿಕ ಅಥವಾ ಯಾವುದೇ ಚಳುವಳಿಯಲ್ಲಿ ತೊಡಗಿರುವವರಿಗೆ ಇಂತಹ ಧೋರಣೇಗಳಿರುವುದು ಅಸಹಜವೇನಲ್ಲ. ಒಂದು ರೀತಿಯಲ್ಲಿ ಅನಿವಾರ್ಯ ಕೂಡ. ತಾನು ಸಾಗುತ್ತಿರುವ ಮಾರ್ಗದ ಬಗ್ಗೆ ನಂಬಿಕೆ ಹೊಂದಿರದ ವ್ಯಕ್ತಿ ಚಳುವಳಿಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಂಶೋಧನೆಯಲ್ಲಿ ಅಂತಹ ಧೋರಣೆ ಅತ್ಯಂತ ಅಪಾಯಕಾರಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೊಸ ಸಾಧ್ಯತೆಗಳನ್ನೇ ಶಾಶ್ವತವಾಗಿ ಅದು ಮುಚ್ಚಿಬಿಡುತ್ತದೆ. ದೇವನೂರರು ಕೇವಲ ಒಬ್ಬ ಚಳುವಳಿಯ ಕಾರ್ಯಕರ್ತ ಮಾತ್ರವಲ್ಲ ಅವರು ಒಬ್ಬ ಚಿಂತಕರೂ ಹೌದು. ಆದರೆ ಬಾಲುರವರ ಸಂಶೋಧನಾ ಪ್ರಾಕ್ಕಲ್ಪನೆಯನ್ನು ವಿಮರ್ಶೆಗೊಳಪಡಿಸುವಾಗ ಅವರು ಅನುಸರಿಸುತ್ತಿರುವ ಮಾನದಂಡ ಮಾತ್ರ ಚಳುವಳಿಯ ಕಾರ್ಯಕರ್ತನದು. ಬಾಲು ಅವರ ವಾದದ ಬಗ್ಗೆ ಟೀಕೆಗಳು, ವಿಮರ್ಶೆಗಳು ಬಂದಷ್ಟೂ ಒಳ್ಳೆಯದೇ. ಹಾಗಿದ್ದಾಗ ಮಾತ್ರ ಜ್ಞಾನದ ಮುಂದುವರಿಕೆ ಸಾಧ್ಯ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮುಂದೊಂದು ದಿನ ಬಾಲು ಮಂಡಿಸಿದ ಪ್ರಾಕ್ಕಲ್ಪನೆಯನ್ನು ಅದಕ್ಕಿಂತಲೂ ಉತ್ತಮವಾದ ಮತ್ತೊಂದು ಪ್ರಾಕ್ಕಲ್ಪನೆಯು ಬದಲಿಸದಿದ್ದರೆ ಅವರು ಈಗ ಮಾಡುತ್ತಿರುವುದು ವ್ಯೆಜ್ಞಾನಿಕ ಸಂಶೋಧನೆಯೇ ಅಲ್ಲ ಎಂದಾಗುತ್ತದೆ. ಅವರು ಹೆಳುತ್ತಿರುವುದು ಸಾರ್ವಕಾಲಿಕ ಅಂತಿಮ ಸತ್ಯವೆಂದು ಯಾರಾದರೂ ಹೇಳಿದರೆ ಅವರಿಗೆ ಸಂಶೋಧನೆಯ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂದು ಹೇಳಬೇಕಾಗುತ್ತದೆ. ಜಾತಿ ವ್ಯವಸ್ಥೆಯನ್ನು ಕುರಿತ ಬಾಲು ಅವರ ಪ್ರಾಕ್ಕಲ್ಪನೆಯನ್ನು ನಿರಾಕರಿಸಲು ಜಾತಿ ವ್ಯವಸ್ಥೆಯ ಬಗ್ಗೆ ಈಗಾಗಲೇ ಕಟ್ಟಿಕೊಂಡಿರುವ ಬೌದ್ಧಿಕ ಚೌಕಟ್ಟಿನ ಬಗ್ಗೆ ಅವರು ಎತ್ತುವ ಸಮಸ್ಯೆಗಳಿಗೆ ಸಮರ್ಥ ಉತ್ತರ ನೀಡಬೇಕಾಗುತ್ತದೆ. ಅಂತಹ ಸಂಶೋಧನೆಯಲ್ಲಿ ತೊಡಗುವುದೇ ಹುನ್ನಾರ, ಕುಯುಕ್ತಿ ಎನ್ನುವುದು ಉತ್ತರವಾಗುವುದಿಲ್ಲ. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ನಾವು ಈಗಾಗಲೇ ಕಂಡುಕೊಂಡಿರುವ ಮಾರ್ಗಕ್ಕೆ ಪರ್ಯಾಯಗಳೇ ಇಲ್ಲ, ಅಂತಹ ಒಂದು ಪರ್ಯಾಯದ ಹುಡುಕಾಟ ನಿರರ್ಥಕ ಎನ್ನುವ ನಿಲುವು ಜ್ಞಾನದ ಬೆಳವಣಿಗೆಯನ್ನೇ ಸ್ಥಗಿತಗೊಳಿಸಿಬಿಡುತ್ತದೆ. ಮೀಸಲಾತಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ತನ್ನೆಲ್ಲಾ ಮಿತಿಗಳ ನಡುವೆ ಮೀಸಲಾತಿಯು ಅದರ ಫಲಾನುಭವಿ ಜಾತಿಗಳ ಅಭ್ಯುದಯದಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಿದೆ ಎನ್ನುವುದು ನನ್ನ ನಿಲುವು. ಎರಡು ದಶಕಗಳ ಹಿಂದೆ ನಾನು ಮಂಡಿಸಿದ ಪಿ.ಹೆಚ್.ಡಿ ಪ್ರಬಂಧದ ಕೊನೆಯಲ್ಲಿ 'ಯಾವ ವ್ಯವಸ್ಥೆಯೊಳಗೆ ಹಾಗೂ ಯಾವ ವ್ಯವಸ್ಥೆಯ ಕಾರಣದಿಂದಾಗಿ ಮೀಸಲಾತಿಯ ಬೇಡಿಕೆ ಹುಟ್ಟಿಕೊಂಡಿದೆಯೋ ಅಂತಹ ವ್ಯವಸ್ಥೆಯಲ್ಲಿರುವ ಅನ್ಯಾಯಕ್ಕಿಂತ ಮಿಗಿಲಾದ ಅನ್ಯಾಯ ಮೀಸಲಾತಿಯಿಂದಾಗುವುದು ಸಾಧ್ಯವಿಲ್ಲ', ಹೇಳಿರುವ ನನ್ನ ನಿಲುವು ಸರಿ ಎಂದು ಇಂದಿಗೂ ನನಗನಿಸುತ್ತದೆ. ಆದರೆ ಯಾವ ಗುರಿಯನ್ನು ಮುಟ್ಟುವ ಉದ್ದೇಶದಿಂದ ಮೀಸಲಾತಿಯನ್ನು ಸಾಧನವನ್ನಾಗಿ ನಾವು ಬಳಸುತ್ತಿದ್ದೇವೆಯೋ ಅಂತಹ ಗುರಿಯನ್ನು ನಾವು ಅದರ ಮೂಲಕ ಮುಟ್ಟಲು ಸಾಧ್ಯವಾಗುವುದಿಲ್ಲ, ಬದಲಿಗೆ ದೀರ್ಘಕಾಲದಲ್ಲಿ ಮೀಸಲಾತಿಯ ಫಲಾನುಭವಿ ಜಾತಿಗಳಿಗೆ ಅದರಿಂದ ಅನ್ಯಾಯವೇ ಆಗುತ್ತದೆ ಎಂದು ಯಾರಾದರೂ ವಾದಿಸಿದರೆ ಅಂತಹ ವಾದವನ್ನು ಮುಕ್ತಮನಸ್ಸಿನಿಂದ ಕೇಳಿಸಿಕೊಳ್ಳುತ್ತೇನೆ. ಹಾಗೆ ವಾದಿಸುವುದೇ ಒಂದು ಅಪರಾಧ ಎಂದು ನನಗನಿಸುವುದಿಲ್ಲ. ಏಕೆಂದರೆ ಅನ್ಯಾಯವನ್ನು ಸರಿಪಡಿಸುವುದು ನನಗೆ ಮುಖ್ಯವೇ ಹೊರತು ಮೀಸಲಾತಿಯನ್ನಾಗಲೀ ಅಥವಾ ಜಾತಿ ವ್ಯವಸ್ಥೆಯ ಕುರಿತು ಈಗಿರುವ ಬೌದ್ಧಿಕ ಚೌಕಟ್ಟನ್ನಾಗಲೀ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆನ್ನುವ ಹಠ ಸರಿ ಎಂದು ನನಗನಿಸುವುದಿಲ್ಲ. ಅಂತಹ ಹಠಮಾರಿತನದ ನಿಲುವಿನಿಂದ ಹುಟ್ಟಬಹುದಾದ ಪಟ್ಟಭದ್ರ ಶಕ್ತಿಗಳು ಸೃಷ್ಟಿಸಬಹುದಾದ ಅಪಾಯದ ಲಕ್ಷಣಗಳು ಈಗಾಗಲೇ ಗೋಚರಿಸತೊಡಗಿವೆ. ಚರ್ಚೆ, ಜಾತಿ ವ್ಯವಸ್ಥೆ, ಧರ್ಮ, ವಚನ ಚರ್ಚೆ, ವಚನ ಚಳುವಳಿ, ವಚನ ಸಾಹಿತ್ಯ, ಸಾಮಾಜಿಕ ಸಂಶೋಧನೆ, ಸಿ.ಎಸ್.ಎಲ್.ಸಿ, CSLC ← ಹೇಗೆ ಹೇಳಲಿ? ಏನು ಹೇಳಲಿ? ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ 'ಸೋತಿದ್ದು ಬಿಜೆಪಿ' → ಮೇ 17 2013 "ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರಿತಂತೆ ಇರುವ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ." Kannada Pls ಮೇ 18 2013 ಜ್ಞಾನಕ್ಕೆ ಪ್ರಾಧಾನ್ಯ ಕೊಡಲಿಚ್ಚಿಸದವರ ಬಗ್ಗೆ ಇಷ್ಟು ಕುತುಹಲ ಎಕೆ? ಹಿಂದೂ ಸಂಕೃತಿಯನ್ನು ತಿರಸ್ಕರಿಸುತ್ತಿರುವ ಕಾರಣವೇ? ಬಿಡಿ, ಡಾ|| ಅಂಬೇಡ್ಕರರವರೇ ದ್ವೇಷಕ್ಕೆ ಶರಣಾಗಿ ಹಿಂದೂ ಸಮಾಜಶಾಸ್ತ್ರದ ಕುರಿತು ಟೀಕೆ ಮಾಡುವ ಬದಲಾಗಿ ಕಟಾಕ್ಷ ಮಾಡಿರುವಾಗ ಈ ಮಹಾದೇವರಂಥವರ ದ್ರಿಷ್ಟಿಕೊನಕ್ಕೆ ಉಪ್ಪು ಹಾಕುವುದಾದರೂ ಏಕೆ? ಅವರಲ್ಲಿ ಅಷ್ಟು ಜಾಣ್ಮೆ ಇದ್ದಲ್ಲಿ ನನ್ನೊಡನೆ ತಾರ್ಕಿಕ ಚರ್ಚಾಕೂಟಕ್ಕೆ ಅಣಿಯಾಗಲಿ. Open debate ಇದಕ್ಕೆ ತಕ್ಕ ಸೂಕ್ತ ಉಪಚಾರ. ಅಲ್ಲೇ ಜನರಿಗೆ ತಿಳಿದು ಬರುವುದು ಇವರ ವಾದದಲ್ಲಿ ಎಷ್ಟು ವಿಷಯ-ಅರ್ಥವಿದೆ ಎನ್ನುವುದು. ಇದೇನೂ ಸತ್ಯ ಇಂದು 1980 ರಿಂದೀಚೆ ಶರದ ಪವಾರವರ ರಾಜಕೀಯ ಸ್ವಾರ್ಥಕ್ಕೆಂದು ನಾಗಪೂರದಿಂದ ಮುಂಬಾಯಿಗೆ ಪ್ರಕಾಶ್ ಅಂಬೇಡ್ಕರ್ ಹಾಗು ಅವರ ಮಾತೋಶ್ರೀಯವರನ್ನು ಕರೆತಂದು, ಇಲ್ಲಿಯ ಗಿರಗಾಂವ ಹತ್ತಿರ ಆಗಲೇ ಅಂದರೆ 1979 ರಲ್ಲಿ ಸ್ಥಾಪಿಸಿದ್ದ ದಲಿತ-ಪ್ಯಾಂಥರ ಸಂಘಟನೆಯ ಮುಂದಾಳತ್ವ ವಹಿಸಲು ಸ್ವಾಗತಿಸಲಾಯಿತು. ಶಿವಸೇನೆಯಿಂದ ಮಹಾರ ಜಾತಿಯ ಜನರನ್ನು ಮೊದಳುಬಾರಿಗೆ ಬೇರಪಡಿಸಲಾಯಿತು. ಮರಾಠವಾಡಾ ವಿಶ್ವವಿದ್ಯಾಲಯಕ್ಕೆ ಡಾ|| ಬಾಬಾಸಾಹೇಬ್ ಅಂಬೇಡ್ಕರ ರವರ ಹೆಸರು ನೀದಲ್ಗುವುದೆಂದು ಘೋಶಿಸಲಾಯಿತು, ಆಗ ಶಾರದಾ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.ಅಲ್ಲಿಯವರೆಗೆ ಜಾತಿಯ ಭೇದಭಾವ್ ನಗರಗಲೆಲ್ಲೂ ಕಾಣಬರುತ್ತಿರಲಿಲ್ಲ. ಅಂಬೇಡ್ಕರ ಇವರು ತಮ್ಮ ವಿಚಲಿತ್ ಮನಸ್ಥಿತಿಯಲ್ಲಿ ಕೆಲವು ಲೇಖನೆಗಳನ್ನು ಬರೆದಿದ್ದರೂ ಪ್ರಕಟಿಸದೆ ರದ್ದಿಗೆ ಎಸೆದಿದ್ದನ್ನೆಲ್ಲ ಒಂದುಗೂಡಿಸಿ ಮಹಾರಾಷ್ಟ್ರ ಸರ್ಕಾರದ ಪರವಾಗಿ ಆ ಲೇಖನಗಳ ಪುಸ್ತಕಗಳನ್ನು ಪ್ರಕಟಿಸುವಂತೆ ಆದೇಶ ನೀಡಿದರು. ಮಾತ್ರ ಅದು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲಾಗಿತ್ತು. ದಲಿತ ಮುಖಂಡರಲ್ಲಿ ಒಬ್ಬರು ಆ ಪುಸ್ತಕಗಳನ್ನು ನನಗೆ ಓದಲು ಕೊಟ್ಟಾಗ ನನಗರಿವಾದದ್ದು ಒಂದೇ, ಹೊಟ್ಟೆಯಲ್ಲಿ ಕಿಚ್ಚಿಟ್ಟು ಪಂಡಿತನೂ ಪ್ರತಿಪಾದಿಸಲು ಹೋದಾಗ್ ಅವನಾಥ ಮೂರ್ಖ ಬೇರೆಲ್ಲೂ ಕಾಣಿರಿ. ಕೊನೆಗೆ ನಾನೇ ದಲಿತ ಸಂಘಟನೆಯ ವಿದ್ಯಾವಂತ ಜನರನ್ನು ಉದ್ದೇಶಿಸಿ ಬಾಬಾ ಸಾಹೇಬರು ಆಕ್ಷೇಪವೆತ್ತಿದ್ದ ವಿಷಯದ ವಿವೇಚನೆ ಮಾಡಿ ಭಾರತಿಯ ಸಮಜವಿಜ್ನಾನ ಹಾಗು ಸಮಾಜಶಾಸ್ತ್ರದ ಆಧಾರದ ಮೇಲೆ ಆ ಆಕ್ಷೇಪಗಳನ್ನು ಕೇವಲ ಮಾನಸಿಕ ಅಸಮಂಜಸತನೆ ಎಂದು ಸಿದ್ಧ ಮಾಡಿದೆ. ಅಲ್ಲಿ ನೆರೆದ ಎಲ್ಲರೂ ನನ್ನ ಅವಲೋಕನವನ್ನು ಮನ್ನಿಸಿ ಭಾರತಿಯ ಸನಾತನ ಸಮಾಜ್ ಶಾತ್ರವನ್ನು ಶ್ರೇಷ್ಟವೆಂದು ಒಪ್ಪಿಕೊಂಡರು. ಇದು ಸಾಧಾರಣ ಕಾರ್ಯವಾಗಿರಲಿಲ್ಲ. ಅವರದೇ ಬಹುಸಂಖ್ಯ ವಸಾಹತಿನಲ್ಲಿ ಅಂಬೇಡ್ಕರರನ್ನು ತಪ್ಪು ಎಂದು ಸಿದ್ಧ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. ನನ್ನ ವ್ಯಕ್ತಿತ್ವವೇ ಭಿನ್ನ, ನನಗೆ ಎಳ್ಳಷ್ಟು ಜೀವದ ಭಯವಿಲ್ಲ. ನನ್ನ ವಿಚಾರವನ್ನು ಮಾಡಿಸಲು ಎಂದೂ ಸಂಕೋಚ ಪಡುವುದೂ ಇಲ್ಲ, ತಿಕಾಕರರ್ನ್ನು ಯಾವತ್ತೂ ಸ್ವಾಗತಿಸುತ್ತೇನೆ ಮಾತ್ರ ಕಟಾಕ್ಷ ಯಾವ ಕಾರಣಕ್ಕೂ ಸಹಿಸಲಾರೆ. ಇದೂ ಇತಿಹಾಸದ ಒಂದು ಭಾಗ ಎನ್ನುವುದನ್ನು ಮರೆಯ ಬೇಡಿ. ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಘನವಾದ, ತುಂಬಾ ತೂಕದ ( ಸುಮಾರು ಒಂದು ಕ್ವಿಂಟಲ್ ನಷ್ಟು ತೂಕದ್ದು) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ಚರ್ಚೆಗೆ ನೆಲೆಯಾಗಿರುವ ಅತಂತ್ಯ ವಿಶ್ವಾಸಾರ್ಹ ಪತ್ರಿಕೆ ಯೊಂದು 'ವಿಕೃತ ಸಂಶೋಧನೆಗೆ ಕಡಿವಾಣ ಬೇಕು' ಎಂಬುದನ್ನೆ ತಲೆಬರಹವಾಗಿ ಉಪಯೋಗಿಸಿದೆ ಮತ್ತು ೧ ಸೆಂ.ಮಿ ಗಾತ್ರದ ಅಕ್ಷರಗಳಲ್ಲಿ ಅದನ್ನು ಪ್ರಕಟಿಸಿದೆ! ಅದನೆಂದರೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ವಿಕೃತ ಸಂಶೋಧನೆಗಳಿಗೆ ಕಡಿವಾಣ ಹಾಕಬೇಕು..ಈ ಎಲ್ಲ ಸಂಶೋಧನೆಗಳು ಸಮಾಜಕ್ಕೆ ತಪ್ಪು ಕಲ್ಪನೆಯನ್ನು ನೀಡುತ್ತವೆ ಎಂದು. ಕೆಲವು ಸಂಶೋಧಕರಿಗೆ ತಾವು ಮಾಡಿದ್ದು, ಮಾಡುತ್ತಿರುವುದು ಮಾತ್ರ 'ಸುಕೃತ' ಸಂಶೋಧನೆ, ತಾವೇ ಒಂದು ವಿಷಯದ ಬಗ್ಗೆ ಫೈನಲ್ ಅಥಾರಿಟಿ ಎಂಬ ಭ್ರಮೆಯಿರುತ್ತದೆ. ಯಾರೇನೂ ಬ್ರಹ್ಮರಲ್ಲ.. ಆಣ್ಣಿಗೇರಿಯ ತಲೆಬುರುಡೆ ಯ ಇತಿಹಾಸ ಕುರಿತು ಕಲ್ಬುರ್ಗಿಯವರ 'ಕರಾರುವಾಕ್ಕು' ವಾಖ್ಯಾನ ಓದಿದ್ದು..ನಂತರ ವೈಜ್ಞಾನಿಕವಾಗಿ ಅದರ ಕಾಲ ಪತ್ತೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. .. 'ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಸಂಶೋಧಕ ಎಂ.ಎಂ ಕಲ್ಬುರ್ಗಿಯವರು' ಅಂತಾಗಬೇಕಿತ್ತು.. ಕ್ಷಮಿಸಿ ಸ್ಥಾಪಿತ ವಾದಗಳಿಗೆ ವಿರುದ್ದವಾಗಿ ಪ್ರಶ್ನೆಗಳನ್ನು ಎತ್ತಿದ್ದರೆ ಅವುಗಳಿಗೆ ಬೌದ್ದಿಕವಾಗಿ ಉತ್ತರಿಸಲಾಗದೆ ಅಧಿಕಾರದ ಧರ್ಪದ ಮೂಲಕ ಆ ರೀತಿಯ ಪ್ರಶ್ನೆಗಳನ್ನು ಕೇಳುವ ದ್ವನಿಗಳನ್ನು ಅಡಗಿಸುವ ಫ್ಯಾಸಿಸ್ಟ್ ಧೋರಣೆಯನ್ನು ಪ್ರದರ್ಶಿಸುವುದು ಹಲವು ದಶಕಗಳಿಂದ ಘನಸಂಶೋಧಕರೆಂಬ ಹಣೆಪಟ್ಟಿಹೊತ್ತವರಿಗೆ ಭೂಷಣವೇ? ಸಾಮಾಜಿಕ ವಾಸ್ತವಗಳನ್ನು ಶೋದಿಸುವ ಅವಶ್ಯಕತೆಯನ್ನೇ ನಿರಾಕರಿಸುವ ಮತ್ತು ತಾವು ಒಪ್ಪಿತ ನಿಲುಗಳ ಕುರಿತ ಮೂಲಭೂತ ಪ್ರಶ್ನೆಗಳು ಎದ್ದಾಗ ಆ ಪ್ರಶ್ನೆಗಳ ಬೌದ್ದಿಕ ಆಯಾಮಗಳನ್ನೇ ಮರೆಮಾಚಿ ಆ ರೀತಿ ಪ್ರಶ್ನಿಸುವವರೆಲ್ಲರೂ ಅನೈತಿಕರೂ ಮತ್ತು ಅಮಾನವೀಯ ಜೀವಿಗಳು ಎಂಬಂತೆ ತೀರ್ಪುಕೊಟ್ಟು ಅಮಾಯಕರನ್ನು ಎತ್ತಿಕಟ್ಟುವ ಕುಟಿಲತೆ ಯಾವ ಬೌದ್ದಿಕ ಚಿಂತನೆಯ ಲಕ್ಷಣ? ನೂರಾರು ವರ್ಷಗಳಿಂದ ಈ ಮಹಾನ್ ಬುದ್ದಿಜೀವಿಗಳ ವಿವರಿಸಿದ್ದನ್ನೆಲ್ಲಾ ಒಪ್ಪಿ ಅವರು ಸೂಚಿಸಿದ್ದೆಲ್ಲವನ್ನು ಕಾಯ್ದೆಗಳ ರೂಪದಲ್ಲಿ ಜಾರಿಗೊಳಿಸಿ ಐದಾರು ದಶಕಗಲು ಕಳೆದ ಮೇಲೂ ಶೋಷಣೆ ಅನ್ಯಾಯಗಳೆನ್ನಿಸುವ ವಾಸ್ತವಗಳು ನಮ್ಮ ಕಣ್ಣೆದುರಿಗೇ ರಾಚುವಂತೆ ಜೀವಂತವಿದ್ದಾಗಲೂ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವಲ್ಲಿ ಮತ್ತು ಅವುಗಳಿಗೆ ನೀಡಿರುವ ಪರಿಹಾರಗಳಲ್ಲಿ ಧೋಷಗಳಿರಬಹುದೇ ಮತ್ತು ಈ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳನ್ನು ಬೇರುಸಹಿತ ನಿರ್ಮೂಲನ ಮಾಡಲು ಈಗಿರುವ ವಿವರಣೆಗಳಿಗಿಂತ ಉತ್ತಮವಾದ ಸಿದ್ದಾಂತಗಳನ್ನು ರೂಪಿಸಲು ಸಾಧ್ಯವಿದೆಯೇ ಎನ್ನುವಂತಹ ಪ್ರಶ್ನೆಗಳನ್ನಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗುವುದನ್ನೇ ಮಹಾ ಅಪರಾಧವೆಂಬಂತೆ ಬಿಂಬಿಸುತ್ತಿರುವ ಈ ಸ್ಥಾಪಿತ ನಿಲುವುಗಳ ವಕ್ತಾರರ ಹಿಂದಿರುವ ಕಾಳಜಿಯಾದರೂ ಏನು? ಇವರಿಗೆ ಈ ಅನ್ಯಾಯ ಶೋಷಣೆಗಳನ್ನು ನಮ್ಮ ಸಮಾಜದಿಂದ ಬೇರುಸಹಿತ ಕಿತ್ತುಹಾಕುವುದು ಬೇಕಿಲ್ಲವೇ? ಈ ಸಮಸ್ಯೆಗಳು ಮರೆಯಾದರೆ ತಮ್ಮ ಮಾನವೀಯ ಮುಖವಾಡದ ಪ್ರದರ್ಶನಕ್ಕೆ ನಿಧರ್ಶನಗಳು ಸಿಗದಲ್ಲಾ ಎನ್ನುವ ಅಂಜಿಕೆ ಇವರುಗಳಿಗಿದೆಯೇ? ಈ ಶೋಷಣೆಯ ಅನ್ಯಾಯದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಕಟ್ಟಿಕೊಂಡಿರುವ 'ಬೌದ್ದಿಕ ನಾಯಕತ್ವ' ಮತ್ತು ಇತರೆ ಸ್ಥಾನಮಾನ, ಪ್ರಶಸ್ತಿಗಳಿಂದ ವಂಚಿತವಾಗಿಬಿಡಬಹದು ಎನ್ನುವ ಭಯ ಇವರನ್ನು ಆವರಿಸಿದೆಯೇ? ಇವರ ಕಿರೀಟಗಳು ಶಾಶ್ವತವಾಗಿರಬೇಕೆಂಬ ಕಾರಣಕ್ಕೆ ನಮ್ಮ ಜನ ಇದೇ ಸ್ಥಿತಿಯನ್ನು ಮತ್ತು ಇನ್ನೂ ಹೆಚ್ಚಿನ ಕಷ್ಟಕೋಟಲೆಗಳನ್ನು ಅನುಭವಿಸುತ್ತಾ ಮುಂದುವರಿಯಬೇಕೇ? ಅನ್ಯಾಯ ಮತ್ತು ಶೋಷಣೆಗಳಿಗೆ ಒಳಗಾಗಿರುವುವರು ಈ ಸೋಗಲಾಡಿ ಮೊಸಳೆ ಕಣ್ಣೀರನ್ನು ಇನ್ನೂ ಎಷ್ಟುದಿನ ನಂಬಿಕೊಂಡು ಹೋಗಬೇಕು? ನನ್ನ ಪ್ರಕಾರ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಬಹುಬೇಗ ಈ ವೇಷಗಳನ್ನು ಕಳಚಲೇಕಾದ ಅನಿವಾರ್ಯತೆ ಬರುತ್ತದೆ. ಇನ್ನೂ ಈ ಕಪಟನಾಟಕಗಳನ್ನು ಸಹಿಸಿಕೊಂಡು ಇವರು ನಮ್ಮನ್ನು ಉದ್ದಾರಮಾಡುವ ಅವತಾರಪುರಷರೆಂದು ನಂಬಿಕೊಂಡಿರುವ ಸಹನೆ ಈ ಅನ್ಯಾಯಶೋಷಣೆಗೊಳಗಾಗಿರುವ ಜನರಿಗೆ ಇಲ್ಲ. ನಮ್ಮ ಸಮಾಜದ ಕುರಿತ ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ಅವರ ಸ್ಥಾಪಿತ ನಿಲುವುಗಳಿಗೆ ವಿರುದ್ದವಾಗಿರುವ ಎತ್ತುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ತೋರುತ್ತಿರುವ ಅವರ ವರ್ತನೆಗಳೇ ಅವರ ನಾಟಕಗಳು ಜಗಜ್ಜಾಹಿರಾಗುವಂತೆ ನಿದರ್ಶನಗಳನ್ನು ಕೊಡುತ್ತಿವೆ.
2021/09/25 15:05:32
https://nilume.net/2013/05/17/%E0%B2%B8%E0%B2%BE%E0%B2%AE%E0%B2%BE%E0%B2%9C%E0%B2%BF%E0%B2%95-%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86-%E0%B2%AF%E0%B2%BE%E0%B2%95%E0%B2%BE%E0%B2%97%E0%B2%BF/
mC4
ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಸಮರ್ಥಿಸಿಕೊಂಡ ಸಿಎಂ – EESANJE / ಈ ಸಂಜೆ ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಸಮರ್ಥಿಸಿಕೊಂಡ ಸಿಎಂ ಮೈಸೂರು, ಜು.14- ನ್ಯಾಯಾಧೀಕರಣದ ತೀರ್ಪಿನಂತೆ ಜುಲೈ ತಿಂಗಳಲ್ಲಿ ತಮಿಳುನಾಡಿಗೆ 50 ಟಿಎಂಸಿ ನೀರು ಬಿಡಬೇಕಿತ್ತು. ಈವರೆಗೆ ಐದು ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ ಎಂದು ಕಾವೇರಿ ನೀರು ಬಿಟ್ಟಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಲ್ಲದೆ ಜಲಾಶಯಗಳಲ್ಲಿ ನೀರಿಲ್ಲ. ಅಲ್ಪಸ್ವಲ್ಪ ಮಳೆಯಿಂದ ಸ್ವಲ್ಪ ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಅದರಲ್ಲೇ ಸ್ವಲ್ಪ ಪ್ರಮಾಣದ ನೀರನ್ನು ಹರಿಸಿದ್ದೇವೆ. ತೀರ್ಪಿನಂತೆ 50 ಟಿಎಂಸಿ ನೀರನ್ನು ಬಿಡಬೇಕಾಗಿತ್ತು. ಅದು ಸಾಧ್ಯವಾಗದ ಕಾರಣ ಈವರೆಗೆ ಐದು ಟಿಎಂಸಿ ನೀರು ಬಿಡಲಾಗಿದೆ. ಮಳೆ ಬಂದು ಜಲಾಶಯ ತುಂಬಿದರೆ ಮಾತ್ರ ನೀಡು ಬಿಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮಳೆ ಬಾರದ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡಲು ಮುಂದಾಗಿದ್ದು, ಮೋಡ ಬಿತ್ತನೆಗೆ ಟೆಂಡರ್ ಕರೆಯಲಾಗಿದೆ. ತಿಂಗಳಾಂತ್ಯದೊಳಗೆ ಮಳೆ ಬರುವ ನಿರೀಕ್ಷೆ ಇದೆ. ಮಳೆ ಬಾರದಿದ್ದರೆ ಮೋಡ ಬಿತ್ತನೆ ಮಾಡಲಾಗುವುದು ಎಂದು ತಿಳಿಸಿದರು.
2018/03/23 05:07:56
http://www.eesanje.com/2017/07/14/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%97%E0%B3%86-%E0%B2%A8%E0%B3%80%E0%B2%B0%E0%B3%81-%E0%B2%AC%E0%B2%BF%E0%B2%9F%E0%B3%8D%E0%B2%9F%E0%B2%BF%E0%B2%A6/
mC4
ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್ | Prajavani ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್ Published: 07 ಜೂನ್ 2019, 12:28 IST Updated: 07 ಜೂನ್ 2019, 12:30 IST ನವದೆಹಲಿ: ವಿಶ್ವಕಪ್‌ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಮಹೇಂದ್ರ ಸಿಂಗ್ ಧೋನಿ ಅವರು ಸೇನೆಯ 'ಕಠಾರಿ ಮುದ್ರೆ'ಯನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದರು. ಹಸಿರು ಬಣ್ಣದ ಕೈಗವಸಿನ ಮೇಲೆ ಹಾಕಿಸಿರುವ ಮುದ್ರೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿತ್ತು. ಆದರೆ ಧೋನಿ ತಮ್ಮ ಕೈಗವಸುಗಳ ಮೇಲೆ ಹಾಕಿಸಿಕೊಂಡಿದ್ದ 'ಕಠಾರಿ ಮುದ್ರೆ-ಬಲಿದಾನದ ಪಟ್ಟಿ' ಯನ್ನು ತೆಗೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿಗೆ ಮನವಿ ಮಾಡಿದೆ. ಇದನ್ನೂ ಓದಿ: ಧೋನಿ ಗ್ಲೌಸ್‌ನಲ್ಲಿ ಸೇನೆಗೆ ಗೌರವ ಇದೆಲ್ಲದರ ನಡುವೆಯೇ ಧೋನಿ ಕೈಗವಸುಗಳ ಬಗ್ಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಫವಾದ್ ಹುಸೇನ್ ಚೌಧರಿ ಕುಹಕವಾಡಿದ್ದಾರೆ. ಧೋನಿ ಇಂಗ್ಲೆಂಡ್‌ನಲ್ಲಿರುವುದು ಕ್ರಿಕೆಟ್ ಆಡುವುದಕ್ಕಾಗಿ ಮಹಾಭಾರತಕ್ಕಾಗಿ ಅಲ್ಲ. ಭಾರತೀಯ ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಮೂರ್ಖತನ. ಭಾರತದ ಕೆಲವು ಮಾಧ್ಯಮಗಳು ಯುದ್ಧಕ್ಕೆ ಹಾತೊರೆಯುವಂತಿದೆ. ಅಂತವರನ್ನು ಸಿರಿಯಾ, ಅಫ್ಗಾನಿಸ್ತಾನ ಅಥವಾ ರವಾಂಡಕ್ಕೆ ಕೂಲಿಯಾಳುಗಳಾಗಿ ಕಳಿಸಿಕೊಡಬೇಕು ಎಂದು ಫವಾದ್ ಟ್ವೀಟಿಸಿದ್ದಾರೆ.
2019/06/17 22:58:48
https://www.prajavani.net/sports/cricket/dhoni-england-not-mahabharat-642508.html
mC4
ನಿಮ್ಮೊಡನೆ ವಿ.ಆರ್.ಭಟ್: 03/28/12 ತಾಪತ್ರಯ-ವಿನಿರ್ಮುಕ್ತೋ ದೇಹತ್ರಯ-ವಿಲಕ್ಷಣಃ | ಹೀಗಿರುತ್ತ ನಮ್ಮ ಲೌಕಿಕ ಜೀವನದಲ್ಲಿ ಹಿಂದಿನ ಜನ್ಮಾಂತರಗಳ ಕರ್ಮಾವಶೇಷಗಳು ನಮ್ಮನ್ನು ಬಾಧಿಸುತ್ತವೆ. ಅದಕ್ಕೆಲ್ಲಾ ನಾವು ಬಾಧ್ಯಸ್ಥರೇ. ಬುದ್ಧ ಜಾತಕ ಕಥೆಗಳನ್ನು ಕೇಳಿದ್ದೀರಿ, ಕರ್ಣ-ಭೀಷ್ಮರಂತಹ ಹಲವು ಮಹನೀಯರು ಯಾಕೆ ಹಾಗೆ ನೋವನುಭವಿಸಿದರು ಎಂಬುದನ್ನು ನೋಡಿದ್ದೀರಿ. ಭೀಷ್ಮನ ಬಗ್ಗೆ ಹಿಂದೊಮ್ಮೆ ಬರೆದಿದ್ದೆ, ಆಗಾಗ ಈ ಕಡೆ ನೀವು ಬಂದಿದ್ದರೆ ಅವುಗಳನ್ನೆಲ್ಲಾ ಓದಿರುತ್ತೀರಿ. ಉತ್ತಮವಾದ ಕೆಲಸಗಳನ್ನು ಮಾಡಿದವರು ಉತ್ತಮ ಫಲಗಳನ್ನೂ ಮಧ್ಯಮರು ಮಿಶ್ರ ಫಲಗಳನ್ನೂ ಅಧಮರು ಕೆಟ್ಟ ಫಲಗಳನ್ನೂ ಪಡೆಯುತ್ತಾರೆ. ನಿತ್ಯವೂ ನಾವು ಮಡುವ ಕೆಲಸವನ್ನೆಲ್ಲಾ ಒಮ್ಮೆ ಕೂತು ಅವಲೋಕಿಸುತ್ತಾ ಅಂತರಾತ್ಮನ ಜೊತೆಗೆ ನಿಕಟವರ್ತಿಯಾಗಿ ನಿಜದ ವರದಿಯನ್ನು ಆತನಿಗೆ ಒಪ್ಪಿಸಿ ಅವನಿಂದ ರಶೀದಿ ಪಡೆಯುವುದೇ ನಿದಿಧ್ಯಾಸನ ಕ್ರಿಯೆ. ನಾವು ಅನುದಿನ ಮಾಡುವ ಪಾಪ-ಪುಣ್ಯದ ವೆಚ್ಚ ಎಂದು ಪುರಂದರ ದಾಸರು ಹೇಳಿದ್ದು ಬರಿದೇ ಅಲ್ಲ. ನವಕೋಟಿ ನಾರಾಯಣನೆನಿಸಿದ್ದ ಶೀನಿವಾಸ ನಾಯಕನನ್ನು ತನ್ನ ಆಟಕ್ಕೆ ಬಳಸಿಕೊಂಡ ಶ್ರೀಮನ್ನಾರಾಯಣ ಅವರ ಲೋಭತ್ವವನ್ನು ತೊರೆಯಿಸಿ ತನ್ನ ದಾಸನನ್ನಾಗಿ ಸ್ವೀಕರಿಸಿದ. ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದ ಶ್ರೀಮಂತ ವ್ಯಾಪಾರಿಯೊಬ್ಬ ಹೀಗೆ ಪುರಂದರರಾಗುತ್ತಾರೆಂದು ಯಾರೂ ಎಣಿಸಿರಲಿಲ್ಲ. ಮಾನವ ಮನಸ್ಸಿಗೆ ಆಸೆ ಎಂಬುದು ತೀರುವುದಿಲ್ಲ. ಇಷ್ಟಿದ್ದರೆ ಅಷ್ಟಿರಲಿ ಎಂಬ ಆಸೆ, ಅಷ್ಟಿದ್ದರೆ ಮತ್ತಷ್ಟಿರಲಿ ಎಂಬ ಬಯಕೆ, ಮತ್ತಷ್ಟಿದ್ದರೆ ಮಗುದಷ್ಟಿರಲಿ ಎಂಬ ಅಪೇಕ್ಷೆ ಹೀಗೇ ಆಸೆಯ ಹಕ್ಕಿ ಹಾರುತ್ತಾ ಹಾರುತ್ತಾ ಎಲ್ಲೂ ಕೂರದೇ ಹಾರುತ್ತದೆ! ಇಂತಹ ಆಸೆಗಳಿಗೆ ಕಡಿವಾಣ ಹಾಕದೇ ಇದ್ದಲ್ಲಿ ಜೀವನದಲ್ಲಿ ಸಮಸ್ಯೆಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ. ಯೋಗದ ಕೊನೆಯಘಟ್ಟಕ್ಕಿಂತ ಹಿಂದಿನ ಎರಡನೇ ಘಟ್ಟವಾದ ಧ್ಯಾನದಲ್ಲಿ ಶ್ರವಣ ಮತ್ತು ಮನನ ಕ್ರಿಯೆಗಳು ನಡೆಯುತ್ತವೆ. ಶ್ರವಣ ಎಂದರೆ ಉತ್ತಮವಾದುದನ್ನು ಕೇಳುವುದು ಮತ್ತು ಮನನ ಎಂದರೆ ಕೇಳಿದ್ದನ್ನೇ ಮತ್ತೆ ಮತ್ತೆ ಮನಸ್ಸಿನಲ್ಲಿ ನೆನಪಿಗೆ ತಂದುಕೊಳ್ಳುವುದು. ಇವೆರಡೂ ಮುಗಿದ ನಂತರದ ಹಂತ ನಿದಿಧ್ಯಾಸನ. ನಿದಿಧ್ಯಾಸನದಲ್ಲಿ ಎರಡು ಹಂತಗಳು. ಮೊದಲನೆಯದು ಮಿಥ್ಯೆಯನ್ನು ವಿಸರ್ಜಿಸುವುದು : ನಾನೆಂದರೆ ಈ ಶರೀರವಲ್ಲ, ನಾನು ಎತ್ತರವಿಲ್ಲ, ನಾನು ಚಿಕ್ಕವನಲ್ಲ, ನಾನು ದೊಡ್ಡವನೂ ಅಲ್ಲ, ನಾನು ಸುಂದರನಲ್ಲ, ನಾನು ಕುರೂಪಿಯೂ ಅಲ್ಲ, ನಾನು ಸೂಕ್ಷ್ಮನಲ್ಲ, ನಾನು ಸ್ಥೂಲವೂ ಅಲ್ಲ, ನಾನು ಬುದ್ಧಿಯಲ್ಲ, ನಾನು ಮನಸ್ಸಲ್ಲ, ನಾನು ಚಿತ್ತವಲ್ಲ, ನಾನು ಅಹಂಕಾರವಲ್ಲ ಹೀಗೆಲ್ಲಾ. ಎರಡನೆಯದು ಬ್ರಹ್ಮತ್ವವನ್ನು ಒಪ್ಪಿಕೊಳ್ಳುವುದು: ನಾನು ಆತ್ಮ, ನಾನು ಶುದ್ಧ, ನಾನು ಬುದ್ಧ[ಬೌದ್ಧಿಕವಾಗಿ ಬೆಳೆದವನು], ನಾನು ಮುಕ್ತ ಮತ್ತು ನಾನು ಕ್ರಿಯೆಯಲ್ಲದ, ಯಾವುದೇ ಸಂಗವಿಲ್ಲದ, ಜನನ-ಮರಣಗಳೂ ಬಾಧಿಸದ ಬ್ರಹ್ಮ ರೂಪ. ಈ ಹಂತಕ್ಕೆ ತಲುಪುವುದು ಸುಲಭದ ಮಾತಲ್ಲ. ಎಷ್ಟೋ ಜನರಿಗೆ ಇದೆಲ್ಲಾ ಅರ್ಥವಾಗುವುದು ದೂರದ ಮಾತು. ಬಾವಿಯೊಳಗಿದ್ದ ಕಪ್ಪೆ ತನ್ನ ಬಾವಿಯೇ ಜಗತ್ತು ಎಂದುಕೊಂಡ ಹಾಗೇ ನಿಜದ ಜಗತ್ತನ್ನು ಅರಿಯದೇ ಮಿಥ್ಯೆಯ ಜಗತ್ತಿನಲ್ಲಿ ಲೌಕಿಕ ಜಗದಲ್ಲಿ ಪ್ರತಿಯೊಂದು ಕ್ಷಣವೂ ತೊಡಗಿಕೊಂಡ ನಿಜವಾದ ನಾನು ನನ್ನನ್ನೇ ಮರೆತಿರುತ್ತೇನೆ. ಒಂದೊಮ್ಮೆ ನಿದಿಧ್ಯಾಸನ ಕ್ರಿಯೆಯಲ್ಲಿ ತೊಡಗಿಕೊಂಡರೆ ಈ ಜಗದ ವ್ಯಾವಹಾರಿಕ ಒಳತಿರುಳಿನ ಅರ್ಥ ನಮಗಾಗುತ್ತದೆ; ನಾವು ಬಂಧಮುಕ್ತರಾಗುತ್ತೇವೆ. ನಿದಿಧ್ಯಾಸನ ಕ್ರಿಯೆ ಯೋಗನಿದ್ರೆಯನ್ನು ನೀಡುತ್ತದೆ. ಆತ್ಮನೊಡನೆ ನಾನು ಅಂದರೆ ನನ್ನೊಡನೆ ನಾನು ಮತ್ತು ನಾನು ಮತ್ತು ನಾನು ಮತ್ತು ನಾನು ಮತ್ತು ನಿಜವಾದ ನಾನು. ಆ ನಿಜವಾದ ನಾನು ಎಚ್ಚೆತ್ತಾಗ, ಜಾಗ್ರತವಾದಾಗ ಈ ಮಿಥ್ಯೆಯ ನಾನುವನ್ನು ನಿಯಂತ್ರಿಸುತ್ತದೆ! ಒಳಗಿನ ನಾನು ಮತ್ತು ದೇವರು ಇವೆರಡರಲ್ಲಿ ಭೇದ ಎಣಿಸದೇ ಇದ್ದರೆ ಒಳಗಿನ ನಾನು ಹೇಳುವುದನ್ನು ಹೊರಗಿನ ನಾನು ಕಾರ್ಯಗತಗೊಳಿಸಬೇಕಾಗುತ್ತದೆ. ದೇವರಲ್ಲಿ ನಾವು ಸತ್ಯವನ್ನು ಬಚ್ಚಿಡಲಾರೆವು, ದೇವನಿಗೆ ಮೋಸಮಾಡಲಾರೆವು, ದೇವನಿಗೆ ಅನ್ಯಾಯಮಾಡಲಾರೆವು, ದೇವನನ್ನು ದೂಷಿಸಲಾರೆವು, ದೇವನನ್ನು ಶಿಕ್ಷಿಸಲಾರೆವು, ದೇವನಿಗೆ ಬೇಡದ್ದನ್ನು ನಿವೇದಿಸಲಾರೆವು, ದೇವ ಕೆಟ್ಟ ಚಟಗಳಿಗೆ ಅಧೀನನಾಗಲಾರ...ಹೀಗೇ ನನ್ನೊಳಗೇ ದೇವ ಇದ್ದಾನೆಂದಮೇಲೆ ಆತನಿಗೆ ಸರಿಯಾಗಿ ಹೊರಗಿನ ನಾನು ನಡೆದುಕೊಳ್ಳಬೇಕಾಯ್ತು! ಆಗ ಶ್ರೀಶಂಕರರ 'ಅಹಂ ಬ್ರಹ್ಮಾಸ್ಮಿ'ಯನ್ನು ನಾವು ಅನುಷ್ಠಾನದಲ್ಲಿ ಕಾಣುತ್ತೇವೆ! ದೇವರೇ ನಾನಾದಾಗ ನನ್ನ ಸುತ್ತ ಇರುವ ಪ್ರತಿಯೊಂದೂ ಜೀವಿಯಲ್ಲಿ, ವಸ್ತುವಿನಲ್ಲಿ, ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಲ್ಲೂ ನನ್ನದೇ ಇನ್ನೊಂದು ಅಂಶವನ್ನು ಕಾಣತೊಡಗುತ್ತೇನೆ. ಯಾರಿಗೂ ಅನ್ಯಾಯ ಮಾಡಲಾರೆ, ಯಾರಿಗೂ ಕೆಟ್ಟದ್ದನ್ನು ಬಯಸಲಾರೆ, ಯಾರಿಗೂ ಮೋಸಮಾಡಲಾರೆ, ಯಾರಿಗೂ ನೋವನ್ನು ಉಂಟುಮಾಡಲಾರೆ, ಎಲ್ಲರೂ ನನ್ನವರೇ ನನ್ನ ಭಾಗವೇ ಎಂಬ ಏಕದರಲ್ಲಿ ಅನೇಕ ಮತ್ತು ಅನೇಕದರಲ್ಲಿ ಏಕ ತತ್ವವನ್ನು ಕಾಣುತ್ತಾ ವಸುಧೆಯಲ್ಲಿರುವ ಎಲ್ಲಾ ಜೀವಿಗಳೂ ನನ್ನದೇ ಕುಟುಂಬ ಎಂಬ ಭಾವಕ್ಕೆ ತಲುಪುತ್ತೇವೆ. || ವಸುಧೈವ ಕುಟುಂಬಕಮ್ || ಎಂಬ ಭಾವ ಜಾಗೃತವಾದಾಗ ನಾವು ತಪ್ಪನ್ನೆಂದೂ ಮಾಡುವ ಗೋಜಿಗೆ ಹೋಗುವುದಿಲ್ಲ. ಹೀಗೇ ಪುನರಪಿ ಪ್ರತಿನಿತ್ಯ ನಾವು ನಮ್ಮೊಳಗೆ ಅಂದರೆ ಹೊರಗಿನ ನಾನು ಒಳಗಿನ ನಾನುವನ್ನು ಸಂಪರ್ಕಿಸಿ, ಸಂದರ್ಶಿಸಿ ಕೆಲಹೊತ್ತು ತದೇಕ ಚಿತ್ತದಿಂದ ಒಳಗಿನ ನಾನುವಿನೊಡನೆ ಆಟವಾಡುವ ಪ್ರಕ್ರಿಯೆಯೇ ನಿದಿಧ್ಯಾಸನ. ನಿದಿಧ್ಯಾಸನ ಕ್ರಿಯೆಯಲ್ಲಿ ತಲ್ಲೀರಾದಾಗ ಇಹದ ಜಂಜಡಗಳನ್ನೆಲ್ಲಾ ಮರೆಯಲು ಸಾಧ್ಯವಾಗುತ್ತದೆ. ಆಗ ಯಾವ ಮೊಬೈಲೂ ರಿಂಗಣಿಸುವುದು ನಮಗೆ ಕೇಳುವುದಿಲ್ಲ, ಯಾವುದೇ ವಾಹನ ಓಡಾಡಿದ ಗೌಜಿ ಕೇಳುವುದಿಲ್ಲ, ಯಾವುದೇ ಟಿವಿ ಧಾರಾವಹಿಯ ಭರಾಟೆಯಿಲ್ಲ, ಯಾರೂ ಮಡೆಸ್ನಾನ ಮಾಡುತ್ತಿಲ್ಲ, ಯಾರೂ ಧರಣಿಕೂರುತ್ತಿಲ್ಲ, ಎಲ್ಲೂ ಜಗಳಗಳಾಗುತ್ತಿಲ್ಲ, ಎಲ್ಲೂ ರಾಜಕೀಯದ ಒತ್ತಡವಿಲ್ಲ, ಯಾವುದೇ ಉದ್ವಿಗ್ನ ಪರಿಸ್ಥಿತಿಯೂ ಇಲ್ಲ, ಯಾರೂ ಏನನ್ನೂ ಕದ್ದೊಯ್ಯುವುದಿಲ್ಲ, ಯಾರೂ ಏನ್ನನ್ನೋ ಕೇಳಬಂದು ಕರೆಗಂಟೆ ಬಾರಿಸುವುದಿಲ್ಲ! ಸಮಯವೆಲ್ಲಾ ನನಗೇ ಮೀಸಲು ಮತ್ತೆ ನಮಗೇ ಮೀಸಲು ಮತ್ತು ನನಗೇ ಮೀಸಲು. ಈ ನಿದಿಧ್ಯಾಸನವೆಂಬ ಮಾನಸಿಕ ಸ್ನಾನ ಮುಗಿದಾಗ ಸಿಗುವ ಅಲೌಕಿಕ ಆನಂದ ಬೇರಾವ ಆನಂದಕ್ಕಿಂತಾ ಹೆಚ್ಚಿನದಿರುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರವನ್ನು ನಮಗೆ ನಾವೇ ಕಂಡುಕೊಳ್ಳಬಲ್ಲೆವು. ಪರಿಹಾರ ಎಂದರೆ ಮರೆಯಾಗುವುದಲ್ಲ, ಓಡಿಹೋಗುವುದಲ್ಲ, ಅಡಗಿಕೂರುವುದಲ್ಲ, ಆತ್ಮಹತ್ಯೆಮಾಡಿಕೊಳುವುದಲ್ಲ, ಯಾರಲ್ಲೋ ಬೇಡುವುದಲ್ಲ, ಯಾರನ್ನೋ ಕಾಡುವುದಲ್ಲ. ಅದು ಒಳಗಿನ ನನ್ನಿಂದ ಹೊರಗಿನ ನನಗಾಗಿ ನನ್ನೊಳಗೇ ಉದ್ಭವವಾಗುವ ಸ್ವಯಂಭೂ ಪರಿಹಾರ! ಆ ಪರಿಹಾರ ಸಿಕ್ಕರೆ ನಾವು ಯಾರನ್ನೂ ಎದುರಿಸಬಹುದು, ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಬಹುದು, ಉತ್ತಮ ಆರೋಗ್ಯವನ್ನು ಮರಳಿ ಗಳಿಸಬಹುದು, ಸಾಲಗಾರರನ್ನು ದಾರಿಯಲ್ಲೇ ನಿಲ್ಲಿಸಿ ಅವಧಿಯಲ್ಲಿ ಸಾಲ ಮರಳಿಸಬಹುದು, ಏರಲಾರದ ಬೆಟ್ಟವನ್ನು ಯಾವುದೋ ಮಾರ್ಗಬಳಸಿ ಏರಬಹುದು! ಯಾಕಾಗಿ ನಿದಿಧ್ಯಾಸನ ಕ್ರಿಯೆ ಬೇಕು ? ಧಾವಂತದ ಜೀವನ ಶೈಲಿಯಲ್ಲಿ ನಮಗೆ ನಮ್ಮೊಟ್ಟಿಗೆ ಕಳೆಯಲು ಮಾತ್ರ ಸಮಯವಿಲ್ಲ! ನಿಂತೇ ತಿಂಡಿ, ನಿಂತೇ ಊಟ ಎಲ್ಲವೂ ಫಾಸ್ಟ್ ಫಾಸ್ಟ್ ಫಾಸ್ಟ್. ಯಾವುದಕ್ಕೂ ಒಂದು ಶಿಷ್ಟಾಚಾರ ಎಂಬುದೇ ಇಲ್ಲ. ಕಂಡಲ್ಲಿ ನುಗ್ಗುವುದು ಬೇಕಾದ್ದು ಬೇಡದ್ದು ಎಲ್ಲವನ್ನೂ ಒಟ್ಟಾರೆ ಖರೀದಿಸುವುದು. ಬೇಕು ಬೇಕಾದ ಹಾಗೇ ಕ್ರೆಡಿಟ್ ಕಾರ್ಡ್ ಬಳಸುವುದು. ಪಕ್ಕದಮೆನೆಗಿಂತಾ ಕಮ್ಮಿ ಇಲ್ಲಾ ಎಂದು ತೋರಿಸಲು ಅವರ ಸ್ಯಾಂಟ್ರೋ ಕಾರಿಗಿಂತಲೂ ಉನ್ನತ ದರ್ಜೆಯ ಮಹಿಂದ್ರಾ ಸ್ಕಾರ್ಪಿಯೋ ಖರೀದಿಸುವುದು.... ಹೀಗೆಲ್ಲಾ. ಈ ಜಗತ್ತಿನಲ್ಲಿ ನಾನೂ ಏನೂ ಕಮ್ಮಿ ಇಲ್ಲಾ ಎಂಬ ಅಹಂ ನಮ್ಮನ್ನು ಬೇರೆ ಬೇರೇ ಕೆಲಸಗಳಿಗೆ ಹಚ್ಚುತ್ತದೆ. ನಮ್ಮ ಅಹಮಿಕೆ ಎಷ್ಟು ವಿಸ್ತೃತವಾದುದು ಎಂದರೆ ದೇವಸ್ಥಾನಗಳಿಗೆ ಒಂದೊಮ್ಮೆ ಟ್ಯೂಬ್ ಲೈಟ್ ಅಥವಾ ಗೋಡೆಗಡಿಯಾರ ಕೊಟ್ಟರೆ ಅದರ ಮೈತುಂಬಾ ನಮ್ಮ ಹೆಸರು ಬರೆದು, ಅಲ್ಲಿ ಬಂದವರಿಗೆ/ನೋಡಿದವರಿಗೆ " ಓ ಇಂಥವರು ದಾನಶೂರರಪ್ಪಾ" ಎನಿಸಬೇಕು ಎಂಬುದು ನಮ್ಮ ಮನದ ಬಯಕೆ! ಬಡರೋಗಿಗೋ ಬಡವಿದ್ಯಾರ್ಥಿಗೋ ೧೦ ರೂಪಾಯಿಗಳನ್ನು ಕೊಟ್ಟರೂ ದಾನಿಗಳ ಯಾದಿಯಲ್ಲಿ ಹೆಸರು ಬರಬೇಕೆಂಬ ಆಸೆ! ಹಲವರ ದೇಣಿಗೆಯಿಂದ ನಡೆಸುವ ಕಾರ್ಯಕ್ರಮದಲ್ಲಿ ನಮ್ಮ ಹೆಸರು ಪ್ರಧಾನವಾಗಿ ಘೋಷಿಸಲ್ಪಡಬೇಕೆಂಬ ಆಸೆ! ನಾಕು ಜನರಿಗೆ ಖಾಲೀ ಕಾಫಿ ಟೀ ಕೊಟ್ಟರೂ 'ಅತಿಥಿಸತ್ಕಾರ ದುರಂಧರ' ಎಂಬ ಬಿರುದು ಪಡೆವಾಸೆ! ಮನೆಯ ಪಕ್ಕದಲ್ಲಿ ಕಾಣುವ ಹಸಿದ ನಾಯಿಗೆ/ಕಾಗೆಗೆ ತುತ್ತು ಕೂಳನ್ನೂ ಹಾಕದೇ ಯಾವುದೋ ಮೃಗಾಲಯದಲ್ಲಿ ೧೦೦೦ ರೂಪಾಯಿ ನೀಡಿ "ಇಂಥದ್ದನ್ನು ಶ್ರೀಯುತರು ದತ್ತುಪಡೆದರು" ಎಂದು ಹೆಸರು ಬರೆಸುವಾಸೆ! ಎಲ್ಲೋ ಹೊಡೆದ ದುಡ್ಡಿನಲ್ಲಿ ಯಾವುದೋ ಕೆಲವು ಬಡ ವಿದ್ಯಾರ್ಥಿಗಳಿಗೆ ಒಂದೆರಡು ಪಟ್ಟಿಪುಸ್ತಕಗಳನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಕಾರ್ಪೋರೇಟರ್ ಜಾಗಕ್ಕೆ ಸ್ಪರ್ಧಿಸುವಾಸೆ! ಈ ಎಲ್ಲಾ ಆಸೆಗಳ ಹಿಂದೆ ಕೆಲಸಮಾಡುವುದು ಒಂದೇ : ಅದು 'ಅಹಂ'ಕಾರ! ನಟ ದಿ|ವಿಷ್ಣುವರ್ಧನ್ ಅವರು ಯಾರ್ಯಾರಿಗೋ ಕೈಲಾದ ಎಷ್ಟೆಷ್ಟೋ ದಾನಮಾಡಿದರು, ಆದರೆ ಅವರು ದಾನ ಕೊಟ್ಟಿದ್ದು ಸ್ವತಃ ಅವರಿಗೇ ನೆನಪುಳಿಯಲಿಲ್ಲ; ಮನೆಗಂತೂ ತಿಳಿಯಲೇ ಇಲ್ಲ! ದಾನವಿದ್ದರೆ ಹೀಗಿರಬೇಕೇ ವಿನಃ ಹೆಸರಿಗಾಗಿ ಮಾಡುವ ದಾನ ದಾನವೇ ಅಲ್ಲ; ಅಥವಾ ದಾನಕ್ಕೆ ದಕ್ಕಬಹುದಾದ ಪುಣ್ಯ, ಮೆರೆಯುವ ಅಹಂಕಾರದಿಂದ ನಶಿಸಿಹೋಗುತ್ತದೆ. ಇನ್ನು ಕಾರ್ಪೋರೇಟ್ ಕಲ್ಚರ್ ಒಂದಿದೆ: ಅವರು ದಾನ ಮಾಡಿದ್ದೇವೆ ಎಂದು ಹೆಸರು ಹಾಕಿಸುವುದರ ಜೊತೆಗೆ ಪತ್ರಿಕೆಗಳಲ್ಲಿ ತಾವು ಮಾಡಿದ ದಾನದ ಕಥೆಗಳನ್ನು ರಂಜನೀಯವಾಗಿ ಬರೆಯುತ್ತಾರೆ! 'ನಾವು ಇಂತಿಷ್ಟು ವರ್ಷ ಇಂಥಾ ಕಡೆಗಳಲ್ಲಿ ಇಂತಿಂಥವರಿಗೆ ಇಂತಿಂಥದ್ದನ್ನು ಕೊಡುತ್ತಿದ್ದೆವು'!! ಭಲಿಭಲಿರೇ ! ನೀವು ನಿಮ್ಮ ಸಂಸ್ಥೆಗೆ ಜಾಗ, ನೀರು, ರಸ್ತೆ, ವಿದ್ಯುತ್ತು ಮೊದಲಾದವುಗಳನ್ನು ಇದೇ ನೆಲದಿಂದ ಅಥವಾ ಈ ಪ್ರದೇಶದಿಂದ ಪಡೆದಿದ್ದೀರಿ-ಅದರಿಂದ ನಿಮ್ಮ ಸಂಸ್ಥೆಯ ಉತ್ಫನ್ನ ಬಹುಪಾಲು ಹೆಚ್ಚಿದಾಗ ಅದರಲ್ಲಿ ಅತ್ಯಲ್ಪ ಹಣವನ್ನು ಈ ತರಹದ ಕೆಲಸಕ್ಕೆ ವಿನಿಯೋಗಿಸಿದರೆ ಅದಕ್ಕೆ ಸಮಯ ಸಿಕ್ಕಾಗ ಹೇಳಿಕೊಳ್ಳಬೇಕೇನು? ಮರಳಿ ಮೂಲ ವಿಷಯಕ್ಕೆ ಬರೋಣ. ಕ್ರೆಡಿಟ್ ಕಾರ್ಡುಗಳನ್ನು ವಿಪರೀತ ಉಪಯೋಗಿಸಿ ಉಪಯೋಗಿಸಿ ಧಾರಾಳವಾಗಿ ಸಾಲಮಾಡಿಕೊಳ್ಳುವ ಜನ ಇದ್ದಾರೆ. ಸಾಲದಲ್ಲೇ ಜಾಗ, ಸಾಲದಲ್ಲೇ ಭವ್ಯ ಬಂಗಲೆ, ಸಾಲದಲ್ಲೇ ಕಾರು, ಸಾಲದಲ್ಲೇ ಇಟಾಲಿಯನ್ ಕಿಚನ್ ಕ್ಯಾಬಿನೆಟ್ಟು ಇನ್ನೇನೇನೋ ಎಲ್ಲಾ ಸಾಲದಲ್ಲೇ! ಒಂದೊಮ್ಮೆ ಮಾಡುತ್ತಿರುವ ಕೆಲಸ ಕಳೆದುಕೊಂಡುಬಿಟ್ಟರೆ ಏನಾಗಬಹುದೆಂಬ ಪರಿವೆಯೇ ಇರುವುದಿಲ್ಲ.ಗಂಡ-ಹೆಂಡತಿ ಇಬ್ಬರೂ ದುಡಿದರೂ ದುಡಿಮೆಯ ಬಹುತೇಕ ಭಾಗ ಸಾಲಗಳ ಮರುಪಾವತಿಗೆ, ಮಿಕ್ಕಿದ್ದು ಸ್ವಲ್ಪ ಯಾವುದೋ ಇನ್ಶೂರನ್ಸ್ ಮತ್ತಿನ್ನವುದೋ ಖಾಸಗೀ ಖರ್ಚು ಇದಕ್ಕೆ ಹೋಗಿ ತಿಂಗಳ ಕೊನೆಗೆ ಮತ್ತೆ ಕೈ ಖಾಲಿ ಖಾಲಿ! ಮತ್ತೆ ಕ್ರೆಡಿಟ್ ಕಾರ್ಡಿನಲ್ಲೇ ಕಾರಿಗೆ ಪೆಟ್ರೋಲ್ ಹಾಕಿಸುವ ಪ್ರಸಂಗ! ಮಹಾನಗರಗಳಲ್ಲಿ ಅತೀ ದೊಡ್ಡ ವ್ಯಕ್ತಿಯೂ ಬದುಕುತ್ತಿದ್ದಾನೆ, ಅತೀ ಚಿಕ್ಕ ಜವಾನನ ಕೆಲಸದವನೂ ಬದುಕುತ್ತಿದ್ದಾನೆ. ದೇಣಿಗೆ ಎಂದು ಬಾಗಿಲಿಗೆ ಹೋದರೆ ಇರುವ ಅಲ್ಪ ಹಣದಲ್ಲೇ ಚಿಕ್ಕಾಸನ್ನಾದರೂ ಜವಾನನಂಥವನು ನೀಡುತ್ತಾನೆಯೇ ಹೊರತು ಉನ್ನತ ಹುದ್ದೆಗಳಲ್ಲಿ ಇರುವ ಜನ ಅದಕ್ಕೆ ಮನಸ್ಸು ಮಾಡಲಾರರು! ಯಾರೋ ಒಬ್ಬ ಪುಣ್ಯಾತ್ಮ ನನಗೆ ಮಿಂಚಂಚೆ ಕಳಿಸಿದ್ದಾರೆ ಏನೆಂದರೆ ಆತನಿಗೆ ಸಂಗೀತ-ಸಾಹಿತ್ಯ-ಕಲೆ ಎಂದರೆ ಅಷ್ಟಕ್ಕಷ್ಟೇಯಂತೆ! ಸಂಗೀತ ಸಾಹಿತ್ಯ ಕಲಾ ವಿಹೀನಾಂ | ಸಾಕ್ಷಾತ್ ಪಶೂನಾಂ ಪರಪುಚ್ಚ ವಿಹೀನಃ || ಈ ಬದುಕನ್ನು ನಿಭಾಯಿಸಿಲಿಕ್ಕೆ ಬರೇ ಹಣದ ಥೈಲಿ ಇದ್ದರಾಗುವುದಿಲ್ಲ. ನೋಡಿ ಎಂತೆಂಥಾ ಎಳೆಯ ವಯಸ್ಸಿನಲ್ಲಿ ಹೃದಯಸ್ತಂಭನವಾಗಿ ಸತ್ತುಹೋಗುತ್ತಾರೆ. ಇಂತಹ ಘಟನೆಗಳು ಜಾಸ್ತಿ ಆಗುತ್ತಿವೆ ಯಾಕೆ? ಯಾಕೆಂದರೆ ಧಾವಂತದ ಜೀವನದಲ್ಲಿ ಸಾಕಷ್ಟು ಗಳಿಸಲಿಲ್ಲವಲ್ಲಾ ಎಂಬ ಹತಾಶ ಮನೋಸ್ಥಿತಿ ಅವರನ್ನು ಸದಾ ಕಾಡುತ್ತಿರುತ್ತದೆ. ಅನುಗಾಲವೂ ಒತ್ತಡದಲ್ಲೇ ಬದುಕುವ ಅವರಿಗೆ ಸಂಗೀತ ಎಂದರೇನು, ಸಾಹಿತ್ಯ ಯಾಕೆ ಬೇಕು, ಕಲೆ ಹೇಗಿರುತ್ತದೆ ಎಂಬುದರ ಬಗ್ಗೆ ಗಮನವೂ ಇಲ್ಲ, ಆಸಕ್ತಿಯೂ ಇಲ್ಲ. ಹೃದಯದ ಒತ್ತಡ ಜಾಸ್ತಿಯಾಗಿ ನೋವು ಉಲ್ಬಣಿಸಿ, ವೈದ್ಯರಲ್ಲಿಗೆ ಹೋದಾಗ ಅವರು ಹೇಳುತ್ತಾರೆ-- ವಿಶ್ರಾಂತಿ ತೆಗೆದುಕೊಳ್ಳಿ, ಮಾನಸಿಕವಾಗಿ ನಿಮಗೆ ಹಿತವೆನಿಸುವ ಜಾಗದಲ್ಲಿ ನಿರುಮ್ಮಳವಾಗಿ ಒಂದಷ್ಟು ದಿನ ಇದ್ದುಬನ್ನಿ! ಸಂಗೀತ-ಸಾಹಿತ್ಯ-ಕಲೆ ಇವು ಮೂರು ನಮ್ಮ ಜೀವನದಲ್ಲಿ ಮನಸ್ಸಿನಮೇಲೂ ತನ್ಮೂಲಕ ಹೃದಯದಮೇಲೂ ಬೀಳುವ ಭಾರವನ್ನು ಒತ್ತಡವನ್ನು ಕಮ್ಮಿ ಮಾಡುತ್ತವೆ! ಅದೇ ರೀತಿ ನಮ್ಮೊಳಗಿನ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ನಮಗೆ ಧ್ಯಾನ ಬೇಕು. ಶಾರೀರಿಕ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಮಾಡುವ ಧ್ಯಾನದಲ್ಲಿ ಮೂರನೇ ಹಂತವೇ ನಿದಿಧ್ಯಾಸನ ಕ್ರಿಯೆ! ಮೊದಲನೆಯದು ಶ್ರವಣ ಅಂದರೆ ಕೇಳುವುದು--ಯಾವುದನ್ನು? ಉತ್ತಮವಾದುದನ್ನು. ಎರಡನೆಯದು-ಮನನ ಅಂದರೆ ಕೇಳಿದ್ದನ್ನು ಬಹಳಹೊತ್ತು ಮನದಲ್ಲೇ ಪುನರಪಿ ಮೆಲುಕುಹಾಕುವುದು. ಮೂರನೆಯದು ನಿದಿಧ್ಯಾಸನ ಅಂದರೆ ನಮ್ಮೊಳಗಿನ ಆಳಕ್ಕೇ ನಾವು ಇಳಿಯುವುದು! ನಾವು ಹರನನ್ನು ಧ್ಯಾನಿಸಿದರೆ ಅಲ್ಲಿ ಹರಿಕಾಣದೇ ಇರಬಹುದು, ನಾವು ಹರಿಯನ್ನು ನೆನೆಪಿಸಿಕೊಂಡರೆ ಅಲ್ಲಿ ಗಣೇಶ ಸಿಗದೇ ಇರಬಹುದು, ಆದರೆ ಈ ಆಕಾರರೂಪೀ ಭಗವಂತನನ್ನು ಬಿಟ್ಟು ನಿರಾಕಾರ ರೂಪೀ ಭಗವಂತನಮೇಲೆ ಮನಸ್ಸುನೆಟ್ಟು ನಿರ್ವಿಷಯಧ್ಯಾನ ಮಾಡುವುದೇ ನಿದಿಧ್ಯಾಸನ ಕ್ರಿಯೆಯಾಗಿದೆ. ಅಲ್ಲಿ ಎಲ್ಲವೂ ನಿಶ್ಶಬ್ದ, ಶಾಂತ, ಪ್ರಶಾಂತ. ಅದು ಸದಾ ಶಾಂತ ಸರೋವರ. ಅಲ್ಲೊಬ್ಬ ಸೂರ್ಯ, ಅವನ ಪ್ರಕಾಶದಲ್ಲಿ ಆಸರೋವರದಲ್ಲಿ ಆತ್ಮವೆಂಬ ಹಂಸ ಈಜಾಡುತ್ತದೆ. ನಾನು ಯಾರು ಎಂಬುದಕ್ಕೆ ಅಲ್ಲಿ ಉತ್ತರ ಸಿಗುತ್ತದೆ! ಆ ನಾನು ನಿಜವಾದ ನಾನು, ಆ ನಾನುವಿಗೆ ಹೆಸರಿಲ್ಲ, ಬಣ್ಣವಿಲ್ಲ, ಶರೀರವಿಲ್ಲ, ರೂಪವಿಲ್ಲ, ಆಕಾರವಿಲ್ಲ! ಆ ನಾನುವನ್ನು ನೆನಪಿಸಿಕೊಳ್ಳಲು ಮುಂದಾದಲ್ಲಿ ಈ 'ನಾನು' ಸಹಜವಾಗಿ ಕರಗತೊಡಗುತ್ತದೆ. ಈ ನಾನು ಸಂಪೂರ್ಣ ಕರಗಿ ಆ ನಾನು ಗೋಚರಿಸಿದಾಗ ನಾವು ಮೇರೆ ಮೀರಿದ ಆನಂದವನ್ನು ಪಡೆಯಲು ಸಾಧ್ಯ. ಅಲ್ಲಿ ಎಲ್ಲವೂ ಇದೆ. ಯಾವುದನ್ನೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಬೇಕಾಗುವುದಿಲ್ಲ. ಆದರೆ ಇದು ಹೇಳಿದಷ್ಟು ಸುಲಭಕ್ಕೆ ಆಗುವ ಕೆಲಸವಲ್ಲ. ಅದಕ್ಕಾಗಿ ಮನಃಪರಿವರ್ತನೆಯಾಗಬೇಕಾಗುತ್ತದೆ. ಧ್ಯಾನಕ್ಕೆ ನಾವು ಒಗ್ಗಿಕೊಳ್ಳಬೇಕಾಗುತ್ತದೆ. ಎರಡುಕೋಣೆಗಳ ನೀಂ ಮಾಡು ಮನದಾಲಯದಿ ಹೊರ ಕೋಣೆಯಲಿ ಲೋಗರಾಟಗಳನಾಡು ತಿಮ್ಮಗುರುವಿನ ಪದ್ಯದ ಅರ್ಥದ ಆಳ ಎಲ್ಲಿದೆ ಎಂಬುದನ್ನು ತಾವು ಇಲ್ಲಿ ಸ್ವಲ್ಪ ತಿಳಿಯಬಹುದಾಗಿದೆ! ಮನಸ್ಸನ್ನು ಎರಡು ಕಂಪಾರ್ಟ್‍ಮೆಂಟ್ ರೀತಿ ಮಾಡಿಕೊಂಡು ಒಂದನ್ನು ಎಲ್ಲರೊಡನೆ ಪ್ರಾಪಂಚಿಕ ವ್ಯವಹಾರದಲ್ಲಿ ತೊಡಗಿಕೊಳ್ಳಲು ಬಳಸು ಎಂದಿದ್ದಾರೆ ಡೀವೀಜಿ. ಹೀಗೆ ನಾವು ಧ್ಯಾನ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದರಿಂದ ನಾಳೆ ಏನು ಎಂಬ ಭೀತಿ ನಮ್ಮಿಂದ ದೂರ ಸರಿಯುತ್ತದೆ. ನಮ್ಮ ಆತ್ಮಕ್ಕೆ ಪುನಶ್ಚೇತನವುಂಟಾಗಿ ನ್ಯಾಯಮಾರ್ಗದಲ್ಲಿ ಕಾರ್ಯತತ್ಪರವಾಗಲು ಅದು ಸಹಕಾರಿಯಾಗುತ್ತದೆ. 'ಬೇಕು' ಎಂಬ ಅತಿರೇಕದ ಬಯಕೆಗಳಿಗೆ ಕಡಿವಾಣ ಬಿದ್ದಾಗ ಆಯ-ವ್ಯಯದ [ಬ್ಯಾಲೆನ್ಸ್ ಶೀಟ್]ಅಢಾವೆ ಪತ್ರಿಕೆ ಸರಿಯಾಗಿ ಅನುಸರಿಸಲ್ಪಡುತ್ತದೆ. ಎಂತಹುದೇ ಪ್ರಸಂಗ ಬಂದರೂ ಮನಸ್ಸು ಅದನ್ನು ನಿಭಾಯಿಸುವ ತಾಕತ್ತನ್ನು ಪಡೆದುಕೊಳ್ಳುತ್ತದೆ. ಅಧಿಕ ಅಥವಾ ಕಮ್ಮಿ ರಕ್ತದೊತ್ತಡ, ಹೃದಯಸ್ತಂಭನ, ಮಧುಮೇಹ, ಅಲ್ಸರ್ ಮುಂತಾದ ಶಾರೀರಿಕ ಅಸೌಖ್ಯ ಸ್ಥಿತಿ ನಮ್ಮಿಂದ ದೂರವಿರಬೇಕೆಂದರೆ ನಾವು ಯೋಗ ಮತ್ತು ಧ್ಯಾನ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕು. ಜನಸಾಮಾನ್ಯರೊಡನೆ ಬೆರೆಯಬೇಕು. ನೀರೊಳಗಿದ್ದರೂ ಕೆಸವೆಯ/ತಾವರೆಯ ಎಲೆ ಒದ್ದೆಯಾಗದಿರುವಂತೆಯೇ ಸಂಸಾರದ ಲೌಕಿಕ ನೀರೊಳಗಿದ್ದರೂ ಜಂಜಾಟದ ಒದ್ದೆಯಿಂದ ಮುಕ್ತರಾಗಬಹುದಾಗಿದೆ. ಯಾವಾಗ ಅ-ದ್ವೈತ ಎಂಬುದನ್ನು ಕಾಣಲು ನಮ್ಮಿಂದ ಆಗುತ್ತದೋ ಅಂದೇ ನಮಗೆ ನಿರಾಕಾರ ಪರಮಾತ್ಮನ ಅರಿವು ಗೋಚರವಾಗುತ್ತದೆ. ಆ ದಿಸೆಯಲ್ಲಿ ಹೆಜ್ಜೆಯಿಡುತ್ತಾ ಮುಂದಕ್ಕೆ ಮುಂದಕ್ಕೆ ಸಾಗೋಣ ಎಂಬುದು ನನ್ನ ಸಲಹೆಯಾಗಿದೆ.
2021/12/07 00:31:23
https://nimmodanevrbhat.blogspot.com/2012_03_28_archive.html
mC4
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ - ವಿಕಿಸೋರ್ಸ್ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ ಬಂಡಾಯ ಸಾಹಿತ್ಯ - ಆಧುನಿಕ ಕನ್ನಡ ಸಾಹಿತ್ಯದ ಈಚಿನ ಹಂತ. ನವೋದಯ, ಪ್ರಗತಿಶೀಲ, ನವ್ಯಗಳ ಅನಂತರದ ಸಾಹಿತ್ಯ ಚಳವಳಿ. ಇದನ್ನು ನವೋತ್ತರ ಸಾಹಿತ್ಯವೆಂದೂ ಕರೆಯಲಾಗಿದೆ. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಕೇಳಿಬರುತ್ತಿರುವ, ಎಲ್ಲ ಪ್ರಗತಿಪರ ಹಾಗೂ ದಲಿತ ಬರಹಗಾರರಿಂದ ಸೃಷ್ಟಿಯಾಗುತ್ತಿರುವ ಸಾಹಿತ್ಯ. ಈ ದಶಕದಲ್ಲಿ ಅನೇಕ ಸಾಮಾಜಿಕ, ರಾಜಕೀಯ ಘಟನೆಗಳು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳನ್ನು ತಂದವು. ಬದುಕಿನಲ್ಲಿ ಉಂಟಾದ ಕೋಲಾಹಲದಿಂದಾಗಿ ಸಾಹಿತ್ಯದಲ್ಲೂ ಬದಲಾವಣೆ ಅನಿವಾರ್ಯವೆನಿಸಿ ಬಂಡಾಯದ ದನಿ ಮೊಳಗಿತು ಶತಶತಮಾನದಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಶೋಷಣೆಗೆ ಅಪಮಾನಕ್ಕೆ ಕ್ರೌರ್ಯಕ್ಕೆ ಬಲಿಯಾದ ಪ್ರಜ್ಞಾವಂತ ಲೇಖಕ ಬರೆದ ಪ್ರತಿಭಟನಾ ಸಾಹಿತ್ಯವೇ ನಿಜವಾದ ದಲಿತ ಸಾಹಿತ್ಯವೆನಿಸಿತು. ದಲಿತ ಸಾಹಿತ್ಯವನ್ನು ಒಳಗೊಂಡುದೇ ಬಂಡಾಯ ಸಾಹಿತ್ಯ. ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ; ಸಾಂಸ್ಕøತಿಕ ಬದಲಾವಣೆಗಳಿಗಾಗಿ ಸಂಸ್ಕøತಿಯಲ್ಲಿ ಪ್ರತಿಷ್ಠಾಪಿತ ಮೌಲ್ಯಗಳು ಜಡವಾದಾಗ, ಪ್ರತಿಗಾಮಿಯಾದಾಗ ಅವುಗಳ ವಿರುದ್ಧ ಹೋರಾಡುವುದು ಬಂಡಾಯ. ಅದು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಾಗ ಬಂಡಾಯ ಸಾಹಿತ್ಯ. ಈ ದಿಸೆಯಲ್ಲಿ ಸಂಘಟನೆಗೊಂಡ ಬಂಡಾಯ ಸಾಹಿತಿಗಳ ಸಮ್ಮೇಳನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸುತ್ತ, 1979 ಮಾರ್ಚ್ 10-11ರಂದು ಬೆಂಗಳೂರಿನಲ್ಲಿ ಸಮಾವೇಶಗೊಡು ಈ ಚಳವಳಿಗೆ ಒಂದು ಸ್ಪಷ್ಟರೂಪ ಕೊಡಲು ಯತ್ನ ನಡೆಸಿತು. ಪ್ರಜಾಪ್ರಭುತ್ವದ ರಕ್ಷಣೆಗೆ ಹಾಗೂ ವಿಸ್ತರಣೆಗೆ; ಶೋಷಣೆಯನ್ನು ಸಮರ್ಥಿಸುವ ಯಜಮಾನ ಸಂಸ್ಕøತಿಯ ವಿರುದ್ಧ ಹೋರಾಟಕ್ಕೆ; ಶೋಷಿತ ಜನತೆಯ ಪರವಾದ ಹೋರಾಟದ ಸಾಹಿತ್ಯ ಸೃಷ್ಟಿಗಾಗಿ ಖಡ್ಗವಾಗಲಿ ಕಾವ್ಯ ಎಂಬ ಘೋಷಣೆಗಳನ್ನು ಮೊಳಗಿಸಿತು. ಎಲ್ಲಿ ರಮ್ಯ-ನವ್ಯ ಪಂಥಗಳು ಸೋತಿವೆಯೋ ಅಲ್ಲಿ ಬಂಡಾಯ ಸಾಹಿತ್ಯ ತನ್ನ ಹೊಣೆಗಾರಿಕೆಯನ್ನು ಗುರುತಿಸಲು ಹೊರಟಿದೆ. ಬಂಡಾಯ ಸಾಹಿತ್ಯವೆಂದರೆ ಕೇವಲ ಸೌಂದರ್ಯೋಪಾಸನೆಯಲ್ಲ ಅಥವಾ ಬೌದ್ಧಿಕ ತುಡಿತವೂ ಅಲ್ಲ, ಅದೊಂದು ಸಾಮಾಜಿಕ ಹೊಣೆಗಾರಿಕೆ. ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕøತಿಯ ಮುಖ್ಯ ಅಂಶಗಳಾದ ಜಾತಿ ವರ್ಗಗಳ ವಿರುದ್ಧ; ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅನುಗೊಳಿಸುವುದೇ ಬಂಡಾಯ ಸಾಹಿತ್ಯದ ಗುರಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಸಾಂಪ್ರದಾಯಕ ಜಡತ್ವವನ್ನು ತೋರಿಸಿದಾಗ ಅದನ್ನು ವಿರೋಧಿಸುವ ಸಂಘಟನಾತ್ಮಕ ಹೋರಾಟ ಬಂಡಾಯದ್ದು. ಶೋಷಿತ ಜನತೆಯ ಪರವಾದ ನಿಲವನ್ನು ಸಾಂಸ್ಕøತಿಕ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಗೊಳಿಸುವುದು; ಮತ್ತು ಸಾಹಿತಿ ತನ್ನ ಸಾಮಾಜಿಕ ರಾಜಕೀಯ ಪ್ರಜ್ಞೆಯಿಂದ ಅಸ್ಪøಶ್ಯತೆ, ಜಾತಿಪದ್ಧತಿ, ಲಿಂಗಭೇದ, ವರ್ಗಭೇದ ನೀತಿಯನ್ನು ವಿರೋಧಿಸುವುದು ಎಂದು ತಿಳಿಸಿ ಬಂಡಾಯ ಸಾಹಿತ್ಯಕ್ಕೆ ತನ್ನದೇ ಆದ ಒಂದು ತಾತ್ವಿಕ ನೆಲೆಯಿದೆಯೆಂದು ಹೇಳಲಾಯಿತು. ಈ ಸಾಹಿತ್ಯ ಪರಂಪರೆಯನ್ನು ಒಟ್ಟಾಗಿ ವಿರೋಧಿಸುವುದಿಲ್ಲವಾದರೂ ಸಂಪ್ರದಾಯದ ಸ್ಥಗಿತತೆಯನ್ನೂ ಮಾನವ ವಿರೋಧಿ ನೀತಿಯನ್ನೂ ವಿರೋಧಿಸುತ್ತದೆ. ಪರಂಪರೆಯ ಜೊತೆಗೆ ಸಂಬಂಧ ಮತ್ತು ಮುಂದುವರಿಕೆ ಬಂಡಾಯದ ನಿಲುವಾಗಿದೆ. ಪ್ರಾಚೀನ ಸಾಹಿತ್ಯದಲ್ಲೂ ಬಂಡಾಯದ ದನಿಯನ್ನು ಗುರುತಿಸಲಾಗಿದೆ, ವಚನ, ದಾಸ, ನವೋದಯ ಸಾಹಿತ್ಯಗಳೂ ಅವುಗಳ ಮಿತಿಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬಂಡಾಯದ ಆಶಯವನ್ನು ವ್ಯಕ್ತಪಡಿಸಿರುವುದನ್ನು ಈ ಸಾಹಿತ್ಯ ಗಮನಿಸುತ್ತದೆ. ವಚನ ಸಾಹಿತ್ಯ ಯಜಮಾನ ಸಾಹಿತ್ಯದ ವಿರುದ್ಧ ಬಂಡೆದ್ದ ಸಾಹಿತ್ಯ ಚಳವಳಿಯಾಗಿದೆ. ಹೊಸಬದುಕಿನ ತುಡಿತಕ್ಕೆ ಹಾತೊರೆದ ವಚನಕಾರರು ಇದ್ದ ವ್ಯವಸ್ಥೆಯನ್ನು ಸೀಳಿ ಅದರ ಒಡಲಲ್ಲೇ ಹೊಸವ್ಯವಸ್ಥೆಯನ್ನು ನಿರ್ಮಿಸಿದ್ದು ಸಾಮಾನ್ಯದ ಸಾಧನೆಯಲ್ಲ. ಏಕದೇವೋಪಾಸನೆಯ ತಳಹದಿಯ ಮೇಲೆ ಎಲ್ಲರೂ ಸಂಘಟಿತರಾಗಿ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ ದುಡಿಯುವ ವರ್ಗಕ್ಕೊಂದು ಹೊಸಜಾಗೃತಿಯನ್ನು ತಂದುಕೊಟ್ಟರು. ಅಂದಿನ ಸಂದರ್ಭದ ಈ ಸಾಧನೆ ವಚನಕಾರರ ಬಂಡಾಯದ ಫಲವೇ ಆಗಿದೆ ಎನ್ನುತ್ತಾರೆ ಈ ಸಾಹಿತಿಗಳು. ದಾಸಸಾಹಿತ್ಯ ಪ್ರಗತಿ ಮನೋಭಾವದಿಂದ ರಚಿತವಾದುದು. ಸಾಮಾಜಿಕ ವಿಡಂಬನೆ, ಮಡಿವಂತಿಕೆಯ ವಿರೋಧಗಳನ್ನು ಪ್ರಕಟಿಸಿ ಸಾಮಾನ್ಯರ ಬದುಕನ್ನು ಹಸನು ಮಾಡಿದೆ. ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬದುಕಿನ ಜಡತ್ವಕ್ಕೆ ಚಾಟಿ ಎಸೆದು, ಮೂಢನಂಬಿಕೆ, ಜಾತಿಪದ್ಧತಿಗಳನ್ನು ವೈಯಕ್ತಿಕ ನೆಲೆಯಲ್ಲೇ ವಿರೋಧಿಸಿ ಪ್ರಗತಿಪರ ಎನಿಸಿದ್ದಾನೆ. ಇತ್ತೀಚಿನ ನವೋದಯ, ನವ್ಯ ಸಾಹಿತ್ಯ ಚಳವಳಿಗಳೂ ತಮ್ಮ ಮಿತಿಯಲ್ಲೇ ಶೋಷಣೆ, ಜಡಸಂಪ್ರದಾಯಗಳ ವಿರೋಧಿ ನಿಲುವನ್ನು ಪ್ರಕಟಿಸಿವೆ. ನವೋದಯದ ಜೊತೆಯಲ್ಲೇ ಬಂದ ಪ್ರಗತಿಶೀಲ ಚಳವಳಿ ಜನತೆ ಸಾಮಾಜಿಕ ಹೊಣೆಗಾರಿಕೆಯ ಕಡೆ ಮುಖ ಮಾಡುವಂತೆ ಮಾಡಿದೆ. ಇಷ್ಟು ದೀರ್ಘ ಪರಂಪರೆಯನ್ನು ಪಡೆದ ಈ ಸಾಹಿತ್ಯ ಹೊಸ ಸಾಂಸ್ಕøತಿಕ ಪರಂಪರೆಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ ಎನ್ನಲಾಗಿದೆ. ಬಂಡಾಯ ಸಾಹಿತ್ಯ ಎಡಪಂಥೀಯ ವಿಚಾರಧಾರೆಗೆ, ಕಲಿತ ಕಾಳಜಿಗಳಿಗೆ ಬದ್ಧವಾದ ಸಾಹಿತ್ಯವೂ ಆಗಿದೆ. ಸಾಮಾಜಿಕ ಜವಾಬ್ದಾರಿ ಲೇಖಕನಿಗೆ ಇರಬೇಕು; ಕಾಲಕ್ಕೆ ಅವನು ಬದ್ಧನಾಗಿರಬೇಕು. ಇದರಿಂದಾಗಿ ಲೇಖಕ ಆಯಾಕಾಲದ ಧೋರಣೆಗೆ ಪ್ರತಿಕ್ರಿಯಿಸುತ್ತಾನೆ. ಅಭಿವ್ಯಕ್ತಿಯಲ್ಲಿ ಯಾವ ಮಾರ್ಗವನ್ನೇ ಅನುಸರಿಸಲಿ ಕ್ರೂರವ್ಯವಸ್ಥೆಯ ವಿರೋಧಿ ನೆಲೆಯೊಂದು ಈ ಸಾಹಿತ್ಯದ ಹಿನ್ನೆಲೆಯಲ್ಲಿರುತ್ತದೆ. `ಬಂಡಾಯ ಸಾಹಿತಿಗಳು ಯಥಾಸ್ಥಿತಿವಾದದ ವಿರೋಧಿಗಳು ಸಮಾಜ ಬದಲಾವಣೆಯ ಧೋರಣೆಗೆ ಬದ್ಧರು, ಇಲ್ಲ ಜನಪರ ಹೋರಾಟಗಳೊಂದಿಗೆ ಕ್ರಿಯಾತ್ಮಕ ಸಂಬಂಧ ಬೆಳೆಸಲು ಮತ್ತು ಪ್ರಧಾನವಾಗಿ ಸಾಂಸ್ಕøತಿಕ ಕ್ಷೇತ್ರದಲ್ಲಿ ಎಡಪಂಥೀಯ ವಿಚಾರಧಾರೆಯನ್ನು ನೆಲೆಗೊಳಿಸಲು ಬದ್ಧರು. ಇನ್ನು ಈ ಸಾಹಿತ್ಯದಲ್ಲಿ ಕೃಷಿ ನಡೆಸುತ್ತಿರುವ ಪ್ರಮುಖರಲ್ಲಿ ಬರಗೂರು ರಾಮ ಚಂದ್ರಪ್ಪನವರು ಒಬ್ಬರು. ನವ್ಯದ ಕಡೆಗಾಲದಲ್ಲಿ ಬರವಣಿಗೆ ಆರಂಭಿಸಿ ನವ್ಯದ ಪ್ರಭಾವಕ್ಕೆ ಒಳಗಾಗದ ಸ್ವಂತಿಕೆಯನ್ನು ಮೆರೆದರು. ನವ್ಯವೆಂದೇ ಹೇಳಬಹುದಾದ ಮರಕುಟಿಗ ಎನ್ನುವ ಅವರ ಕವನ ಸಂಕಲನದಲ್ಲಿ ಸಾಮಾಜಿಕ ನಿಷ್ಠೆ ಕುರಿತಂತೆ ಕವಿತೆಗಳಿವೆ. ಉದಾ. ಜೈ ಒoಟಿeಥಿ ಭಾರತ. ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಸಣ್ಣ ಕಥಾಕ್ಷೇತ್ರವನ್ನು ಆರಿಸಿಕೊಂಡ ಇವರು ಸುಂಟರಗಾಳಿ; ಕಪ್ಪು ನೆಲದ ಕೆಂಪು ಕಾಲು ಕಥಾಸಂಕಲನಗಳನ್ನೂ, ಸೂತ್ರ ಹುತ್ತ; ಒಂದು ಊರಿನ ಕಥೆ; ಸೀಳು ನೆಲ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಬಡತನ, ಶೋಷಣೆ, ಮೂಢನಂಬಿಕೆ ಇವನ್ನು ಕೇಂದ್ರವಾಗಿಟ್ಟುಕೊಂಡು ಸುಂಟರಗಾಳಿಯ ಕತೆಗಳು ರಚಿತವಾಗಿವೆ. ಸಾಮಾಜಿಕ ಮತ್ತು ಸಾಂಸ್ಕøತಿಕ ವೈರುಧ್ಯಗಳು ಇವುಗಳ ಜೊತೆ ಮಾನವ ಸಂಬಂಧಗಳು ಇವುಗಳಿಂದ ಮೂಡಿ ಬರುವ ಬಂಡಾಯದ ವಿವಿಧ ಮಜಲುಗಳನ್ನು ಕಪ್ಪು ನೆಲದ ಕೆಂಪು ಕಾಲು ಕಥಾಸಂಕಲನದಲ್ಲಿ ಕಾಣಬಹುದು. ಮೇಲಿನ ಲೇಖಕರಷ್ಟೇ ಪ್ರಮುಖರಾದ ಮತ್ತೊಬ್ಬ ಬರಹಗಾರರೆಂದರೆ ಕವಿ ಸಿದ್ಧಲಿಂಗಯ್ಯನವರು, ಹೊಲೆಮಾದಿಗರ ಹಾಡು; ಸಾವಿರಾರು ನದಿಗಳು, ಪಂಚಮ, ನೆಲಸಮ ಮುಂತಾದ ಕೃತಿಗಳನ್ನು ಪ್ರಕಟಿಸಿರುವ ಈ ಕವಿ ಆವೇಶದಿಂದ ಕಾವ್ಯಕ್ರಿಯೆಯಲ್ಲಿ ತೊಡಗುತ್ತಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬ ಸಂಘಟನಾತ್ಮಕ ಧೋರಣೆಯುಳ್ಳ ಈ ಕವಿಯ ಕಾವ್ಯದ ಛಂದೋವೈವಿಧ್ಯ ಅಪೂರ್ವವಾದುದು. ಅಲ್ಲೇ ಕುಂತವರೆ ಖಂಡ ಕಾವ್ಯ ವಿಶೇಷವಾಗಿ ಉಲ್ಲೇಖಾರ್ಹವಾದುದು. ನವ್ಯ ಸಾಹಿತ್ಯದಲ್ಲಿ ಯಶಸ್ಸು ಪಡೆದು ಪರಂಪರೆಯ ಜೊತೆ ಜೊತೆಯಲ್ಲೇ ಚಿಂತನ ಶೀಲತೆಯನ್ನು ದಕ್ಕಿಸಿಕೊಂಡ ಕವಿ ಚಂದ್ರಶೇಖರ ಪಾಟೀಲರು. ತುರ್ತುಪರಿ ಸ್ಥಿತಿಯನ್ನು ವಿರೋಧಿಸಿ ಜೈಲನ್ನೂ ಕಂಡು ಇವರು ವರ್ತಮಾನಕ್ಕೆ ತೆರೆದ ಹೃದಯದವರಾಗಿ ಹೊಸ ಸಾಹಿತ್ಯಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಗಾಂಧೀಸ್ಮರಣೆ; ಓ ಎನ್ನ ದೇಶಬಾಂಧವರೆ ಮುಂತಾದ ಕವನ ಸಂಕಲಗಳನ್ನು ಪ್ರಕಟಿಸಿದರು. ಅಲ್ಲದೆ ಇವರೇ ಸಂಪಾದಿಸಿದ ಗಾಂಧಿ ಮತ್ತು ಜೂನ್ 24 ಮಾರ್ಚ್ 22 ಎಂಬ ಕವನ ಸಂಕಲನಗಳು ರಾಜಕೀಯ ಜಾಗೃತಿಯ ಪ್ರತೀಕಗಳಾಗಿವೆ. ಸಮಾಜದ ಕೆಡಕುಗಳತ್ತ ಕಣ್ಣು ಹಾಯಿಸಿ, ಅವನ್ನು ಗೇಲಿಗೆಬ್ಬಿಸಿ ವಿಡಂಬನೆಗಳ ಮೂಲಕ ಚುಚ್ಚುವುದನ್ನು ಇವರ ಕೃತಿಗಳಲ್ಲಿ ಕಾಣಬಹುದು. ಬೆಸಗರಹಳ್ಳಿ ರಾಮಣ್ಣ ಮತ್ತು ಕಾಳೇಗೌಡ ನಾಗವಾರ ಇವರು ಬಂಡಾಯ ಸಾಹಿತ್ಯದ ಸತ್ತ್ವಶಾಲೀ ಲೇಖಕರು. ಇತ್ತೀಚೆಗೆ ಪ್ರಕಟವಾದ ರಾಮಣ್ಣವನರ ಒಂದು ಹುಡುಗನಿಗೆ ಬಿದ್ದ ಕನಸು ಶೋಷಣೆಯ ವಿವಿಧ ಮುಖಗಳನ್ನು ಚಿತ್ರಿಸುತ್ತದೆ. ಜನಪದ ಭಾಷೆಯನ್ನು ದುಡಿಸಿಕೊಳ್ಳುವುದರಲ್ಲಿ ಇವರ ಕತೆಗಳು ಯಶಸ್ವಿಯಾಗಿವೆ. ಗಾಂಧಿ, ಪ್ರಜಾಪ್ರಭುತ್ವ, ಗರ್ಜನೆ, ಕತೆಗಳು ತಮ್ಮ ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಮಾಡಿವೆ. ಚನ್ನಣ್ಣ ವಾಲೀಕಾರ ಬಂಡಾಯ ಚಳವಳಿಯಲ್ಲಿ ಬರೆಯುತ್ತಿರುವ ಒಬ್ಬ ಶಕ್ತ ಲೇಖಕ. ನವೋದಯ, ನವ್ಯದ ತರುವಾಯ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಕವಿ ಹಾಗೂ ನಾಟಕಕಾರ. ಇವರ ಇತ್ತೀಚಿನ ಕೃತಿಗಳಾದ ಟೊಂಕದ ಕೆಳಗಿನ ಜನ; ಪ್ಯಾಂಥರ್ ಪದ್ಯಗಳು ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ಕೃತಿಗಳು. ಹೊರೆಯಾಲ ದೊರೆಸ್ವಾಮಿಯವರ ಕೂಳೆ, ಎಸ್.ಎಸ್. ಹಿರೇಮಠ ಅವರ ಮನುಷ್ಯನೆಲ್ಲಿ, ಇಂದೂಧರ ಹೊನ್ನಾಪುರ ಅವರ ಬಂಡಾಯ; ರಮಜಾನ ದರ್ಗಾ ಅವರ ಕಾವ್ಯ ಬಂತು ಬೀದಿಗೆ; ಅಲ್ಲಮಪ್ರಭು ಬೆಟ್ಟದೂರು ಅವರ ಇದು ನನ್ನ ಭಾರತ; ಗವಿಸಿದ್ದ ಬಳ್ಳಾರಿಯವರ ಕತ್ತಲದೇಶದ ಪದ್ಯಗಳು; ಗಂಗಾಧರಮೂರ್ತಿಯವರ ಹೂ ಅರಳುವಂಥ ಮಣ್ಣು; ರಂಗಾರೆಡ್ಡಿ ಕೋಡಿರಾಂಪುರ ಅವರ ಒಂದು ಸೊಸೈಟಿಯ ಕತೆ; ಗಂಗಾಧರ ಮೊದಲಿಯಾರ್ ಅವರ ಸೂರ್ಯ ಹುಟ್ಟಿದ ದೇಶ ಮುಂತಾದ ಕೃತಿಗಳಲ್ಲಿ ಶೋಷಣೆಯ ವಿವಿಧ ಮುಖಗಳು ಕಂಡುಬರುತ್ತವೆ. ಸಾಹಿತ್ಯದ ಪ್ರತಿಕೆಗಳಲ್ಲಿ ಅನೇಕ ಕವಿತೆಗಳನ್ನು ಪ್ರಕಟಿಸುತ್ತಿರುವ ಬಂಡಾಯ ಕವಿಗಳಿದ್ದಾರೆ. ಅವರ ಪೈಕಿ ಮುಖ್ಯರಾದವರು ಎಚ್, ಗೋವಿಂದಯ್ಯ, ಬಾಬಾಜಾನ ಅತ್ತರ, ಮಹಾಬಲೇಶ್ವರ ಕಾಟ್ರಹಳ್ಳಿ ಇಕ್ಬಾಲ್ ಹುಸೇನ್, ಹುಲ್ಲಕೆರೆ ಮಹಾದೇವ, ಸತೀಶ ಕುಲಕರ್ಣಿ, ಶಿವರಾಮು ಕಾಡನಕುಪ್ಪೆ, ಎಂ, ಶಿವನಂಜಯ್ಯ, ಅಶೋಕ ಶೆಟ್ಟರ, ಜಗದೀಶ ಮಂಗಳೂರುಮಠ, ವಿಜಯ ಪಾಟೀಲ, ಮಹೇಂದ್ರ ಪ್ರಸಾದ್, ಬಿ.ರಾಜಣ್ಣ, ಹೊ.ಮ. ಪಂಡಿತಾರಾಧ್ಯ, ರಮೇಶ ಧಾನವಾಡಕರೆ, ಚಂದ್ರಶೇಖರ ಆಲೂರು, ಆರ್ಕೆ ಮಣಿಪಾಲ, ಶ್ಯಾಮಸುಂದರ ಬಿದರಕುಂದಿ ಈ ಕವಿಗಳು ತೀಕ್ಷ್ಣವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯಿಂದ ಕವಿತೆಗಳನ್ನು ರಚಿಸುತ್ತಿದ್ದಾರೆ. (ಕೆ.ಆರ್.ಎ.ಎನ್.) "https://kn.wikisource.org/w/index.php?title=ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಬಂಡಾಯ_ಸಾಹಿತ್ಯ&oldid=75779" ಇಂದ ಪಡೆಯಲ್ಪಟ್ಟಿದೆ
2021/05/13 10:13:26
https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%AC%E0%B2%82%E0%B2%A1%E0%B2%BE%E0%B2%AF_%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF
mC4
ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ | TV9 Kannada Home » Karnataka News » ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ Published On - 19:18 PM, 22 Dec 2019 ಉಡುಪಿ: ಭಾರತೀಯ ಸಂಸ್ಕೃತಿಯಲ್ಲಿ ಗುರುಕುಲ ಪದ್ಧತಿಗೆ ವಿಶೇಷ ಸ್ಥಾನವಿದೆ. ಗುರು ಶಿಷ್ಯ ಸಂಬಂಧಕ್ಕೆ ಹಲವು ಮೌಲ್ಯಯುತ ಉದಾಹರಣೆಗಳಿವೆ. ಅಂದಿನ ಪರಂಪರೆಯನ್ನು ಉಳಿಸುವ ಸಲುವಾಗಿ ಆಯುರ್ವೇದ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿಗಳಿಹೆ ಶಿಷ್ಯೋಪನಯನ ನೆರವೇರಿಸಿದೆ. ಗುರು ಬ್ರಹ್ಮ ಗುರು ವಿಷ್ಣು.. ಗುರು ದೇವ ಮಹೇಶ್ವರ.. ಗುರುವಿನ ಗುಲಾಮನಾಗುವ ತನಕ ದೊರೆಯದ್ದನ್ನ ಮುಕುತಿ.. ಹೌದು, ಗೌರು ಮತ್ತು ಶಿಷ್ಯ ಸಂಬಂಧಕ್ಕೆ ಅಂಥಾ ಮಹತ್ವವಿದೆ. ಸನಾತನ ಸಂಸ್ಕೃತಿಯ ಗುರುವಿಗೆ ದೇವರ ಸ್ಥಾನ ನೀಡುವ ಅಪಾರ ಗೌರವವಿದೆ. ರಾಮಾಯಣ ಮಹಾಭಾರತದಿಂದ ಹಿಡಿದು ಇಂದಿಗೂ ಗುರ ಶಿಷ್ಯರ ಸಂಬಂಧಕ್ಕೆ ಮಹತ್ವದ ವ್ಯಾಖ್ಯಾನಗಳಿವೆ. ಗುರುವಿಗೆ ಗೌರವಿಸಿ ತಮ್ಮನ್ನ ಶಿಷ್ಯರನ್ನಾಗಿ ಸ್ವೀಕರಿಸಿ ಎಂಬ ಶಿಷ್ಯ ನಿವೇದನೆಯ ವಿಶಿಷ್ಠ ಕಾರ್ಯಕ್ರಮವೇ ಶಿಷ್ಯೋಪನಯನ. ಇಂಥಾ ವಿಭಿನ್ನ ಕಾರ್ಯಕ್ರಮವನ್ನ ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಗಳು ಕಳೆದ 25 ವರ್ಷಗಳಿಂದ ನಡೆಸ್ತಿವೆ. ಸಂಸ್ಥೆಗಳಿಗೆ ಹೊಸದಾಗಿ ಸೇರ್ಪಡೆಯಾಗುವ ವಿದ್ಯಾರ್ಥಿಗಳನ್ನ, ಗುರುಗಳು ಶಿಷ್ಯರನ್ನಾಗಿ ಅಧಿಕೃತವಾಗಿ ಸ್ವೀಕರಿಸಿದ್ರು. ಮುಂಜಾನೆ ಶ್ವೇತ ವಸ್ತ್ರಧಾರಿಗಳಾದ ಹೊಸ ವಿದ್ಯಾರ್ಥಿಗಳು ಧನ್ವಂತರೀ ಹೋಮದಲ್ಲಿ ಪಾಲ್ಗೊಳ್ಳುತ್ತಾರೆ. ಪೂರ್ಣಾಹುತಿ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಹೋಮಕ್ಕೆ ಹವಿಸ್ಸು ಅರ್ಪಿಸ್ತಾರೆ. ಬಳಿಕ ವಿದ್ಯಾರ್ಥಿಗಳು ಪವಿತ್ರ ಧಾರವನ್ನು ಕಟ್ಟಿಕೊಳ್ಳುತ್ತಾರೆ. ಆ ಬಳಿಕ ಗುರುಗಳ ಆಶೀರ್ವಾದ ಪಡೆಯೋ ಮೂಲಕ ಶಿಷ್ಯೋಪನಯನ ಕಾರ್ಯಕ್ರಮ ಸಂಪನ್ನಗೊಳ್ಳುತ್ತೆ. ದೇಶದಲ್ಲಿ ಅನಾದಿ ಕಾಲದಿಂದಲೂ ಶಿಕ್ಷಣ ಮತ್ತು ಗುರು ಶಿಷ್ಯ ಸಂಬಂಧಕ್ಕೆ ಬಹಳ ಮೌಲ್ಯಯುತ ಸ್ಥಾನವಿತ್ತು. ಅದನ್ನ ಕಾಪಾಡುವ ಮತ್ತು ಮುಂದಿನ ಜನಾಂಗಕ್ಕೆ ಉಳಿಸುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
2021/04/13 10:44:54
https://tv9kannada.com/karnataka/shishyopanayana-and-freshers-day-celebration-in-dharmasthala-college-of-ayurveda-55088.html
mC4
ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ | Prajavani ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ Published: 15 ಅಕ್ಟೋಬರ್ 2017, 00:58 IST Updated: 15 ಅಕ್ಟೋಬರ್ 2017, 00:58 IST ಬೆಂಗಳೂರು: ರೈತರ ಸಾಲ ಮನ್ನಾದಿಂದ ಬೊಕ್ಕಸಕ್ಕೆ ಉಂಟಾಗಿರುವ ₹ 8,165 ಕೋಟಿ ಹೊರೆ ಹೊಂದಿಸಲು ರಾಜ್ಯ ಸರ್ಕಾರ ತಿಣುಕಾಡುತ್ತಿದೆ! ಸಂಪನ್ಮೂಲ ಕ್ರೋಡೀಕರಣಕ್ಕೆ ಮೈಸೂರು ಮಿನರಲ್ಸ್‌ (ಎಂಎಂಎಲ್‌) ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗ‌ಳಿಗೆ ಸರ್ಕಾರ ದುಂಬಾಲು ಬಿದ್ದಿದೆ. ಆ ಸಂಸ್ಥೆಗಳಲ್ಲಿರುವ ಹೂಡಿಕೆ ಹೆಚ್ಚುವರಿ ಮೊತ್ತವನ್ನು ರಾಜ್ಯ ಅಪೆಕ್ಸ್‌ ಬ್ಯಾಂಕಿನಲ್ಲಿ ಠೇವಣಿ ಇಡಲು ನಿಯಮಗಳಲ್ಲಿ ಅವಕಾಶ ಇಲ್ಲ. ಆದರೂ, ಸಾಲ ಮನ್ನಾಕ್ಕೆ ಹಣ ಸರಿತೂಗಿಸುವುದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಷರತ್ತುಗಳಿಂದ ವಿನಾಯಿತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲ, ಈ ಸಂಸ್ಥೆಗಳು ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಮೊತ್ತವನ್ನು ನಿಗದಿತ ಅವಧಿಗೆ ಮೊದಲೇ ಹಿಂಪಡೆದಾಗ ಉಂಟಾಗುವ ನಷ್ಟ (ದಂಡ) ಭರಿಸಲು ತೀರ್ಮಾನಿಸಿದೆ. ತಮ್ಮಲ್ಲಿರುವ ಹೂಡಿಕೆ ಹೆಚ್ಚುವರಿ ಮೊತ್ತದಲ್ಲಿ ₹ 1,400 ಕೋಟಿ ಅಪೆಕ್ಸ್ ಬ್ಯಾಂಕಿನಲ್ಲಿ ತಕ್ಷಣ ಹೂಡಿಕೆ ಮಾಡಲು ಒಪ್ಪಿಗೆ ನೀಡುವಂತೆ ಆಗಸ್ಟ್‌ 5ರಂದೇ ಮೈಸೂರು ಮಿನರಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌ ಪ್ರಸಾದ್‌ ಪತ್ರ ಬರೆದಿದ್ದರು. ಸಾಲ ಹಣ ತಾತ್ಕಾಲಿಕವಾಗಿ ಸರಿತೂಗಿಸಲು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿರುವ ಹೂಡಿಕೆ ಹೆಚ್ಚುವರಿ ಹಣವನ್ನು ಅಪೆಕ್ಸ್‌ ಬ್ಯಾಂಕಿಗೆ ವರ್ಗಾಯಿಸುವಂತೆ ಮುಖ್ಯಮಂತ್ರಿ ನೀಡಿದ ನಿರ್ದೇಶನದ ಬಗ್ಗೆಯೂ ಆ ಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ, ಅಪೆಕ್ಸ್‌ ಬ್ಯಾಂಕಿನಲ್ಲಿ ಹಣ ಠೇವಣಿಗೆ ಸಾರ್ವಜನಿಕ ಉದ್ದಿಮೆಗಳ ಇಲಾಖೆ 2012ರಲ್ಲಿ ಹೊರಡಿಸಿದ್ದ ಎರಡು ಸುತ್ತೋಲೆಗಳು ಅಡ್ಡಿ ಆಗಿರುವುದರಿಂದ ಈ ಬಗ್ಗೆ ಸ್ಪಷ್ಠೀಕರಣ ನೀಡುವಂತೆ ಎಂಎಂಎಲ್ ಆಡಳಿತ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. 'ಈ ಸುತ್ತೋಲೆಗಳ ಪ್ರಕಾರ ಹೂಡಿಕೆ ಹೆಚ್ಚುವರಿ ಹಣ ಠೇವಣಿ ಇಡುವ ಬ್ಯಾಂಕಿನ ನಿವ್ವಳ ಮೌಲ್ಯ ₹ 500 ಕೋಟಿಗೂ ಹೆಚ್ಚು ಇರಬೇಕು. ಎನ್‌ಪಿಎ ಪ್ರಮಾಣ ಶೇ 7ಕ್ಕಿಂತಲೂ ಕಡಿಮೆ ಇರಬೇಕು. 'ಅಪೆಕ್ಸ್‌ ಬ್ಯಾಂಕಿನ ನಿವ್ವಳ ಮೌಲ್ಯ ₹ 500 ಕೋಟಿ ಇಲ್ಲ. ಅಲ್ಲದೆ, ಇದೊಂದು ಸಹಕಾರಿ ಬ್ಯಾಂಕು ಆಗಿದ್ದು, ಅನುಸೂಚಿತ ವಾಣಿಜ್ಯ ಬ್ಯಾಂಕು ಅಲ್ಲ. ಅಷ್ಟೇ ಅಲ್ಲ, ಈಗಾಗಲೇ ಹೂಡಿಕೆ ಮಾಡಿರುವ ಕಡೆಗಳಿಂದ ನಿಗದಿತ ಅವಧಿಗೂ ಮೊದಲೇ ಹಣ ಹಿಂಪಡೆದರೆ ನಷ್ಟ (ದಂಡ) ಕಟ್ಟ ಬೇಕಾಗುತ್ತದೆ' ಎಂದು ಎಂಎಂಎಲ್ ಆಡಳಿತ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಸ್ಪಷ್ಟ ಸಲಹೆ ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಆರ್ಥಿಕ ಇಲಾಖೆಯನ್ನು ಕೋರಿದ್ದಾರೆ. ಅಪೆಕ್ಸ್ ಬ್ಯಾಂಕಿನಲ್ಲಿ ಠೇವಣಿ ಇಡುವ ಹಣ ತಾತ್ಕಾಲಿಕವಾಗಿದ್ದು, ಸರ್ಕಾರ ಬಜೆಟ್‌ ಮೂಲಕ ಅಪೆಕ್ಸ್ ಬ್ಯಾಂಕಿಗೆ ಹಣ ಮರು ಪಾವತಿಸಿದಾಗ ಎಂಎಂಎಲ್‌ಗೆ ಹಣ ಹಿಂದಿರುಗಿಸಬಹುದು. ಆದ್ದರಿಂದ, ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಸುತ್ತೋಲೆಗಳಲ್ಲಿರುವ ಷರತ್ತುಗಳಿಗೆ ವಿನಾಯಿತಿ ನೀಡಲಾಗುವುದು. ಸಾಲ ಮನ್ನಾ ಅತಿತುರ್ತು ಯೋಜನೆ. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ಆರ್ಥಿಕ ಇಲಾಖೆ, ಎಂಎಂಲ್‌ಗೆ ಪತ್ರ ಬರೆದಿದಿದೆ. ಕಾರ್ಮಿಕ ಸಂಘ ವಿರೋಧ ಎಂಎಂಎಲ್‌ ನಿಧಿಯನ್ನು ರಾಷ್ಟ್ರೀಕೃತ ಬ್ಯಾಂಕುಗಳಿಂದ ಹಿಂಪಡೆದು ಅಪೆಕ್ಸ್ ಬ್ಯಾಕಿನಲ್ಲಿ ಠೇವಣಿ ಇಡುವ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ಸಂಸ್ಥೆಯ ಕಾರ್ಮಿಕ ಸಂಘ, ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ. 'ಎಂಎಂಎಲ್‌ ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡುವುದು ಸುರಕ್ಷಿತವಲ್ಲ' ಎಂದೂ ಮನವಿಯಲ್ಲಿ ಸಂಘ ತಿಳಿಸಿದೆ.
2019/09/15 20:29:42
https://www.prajavani.net/news/article/2017/10/15/526291.html
mC4
ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ! | shodhanews Home ಕವರ್ ಸ್ಟೋರಿ ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ! ಆರಂಭದಲ್ಲಿ ಜಗತ್ತನ್ನೆಲ್ಲ ಕೊರೋನಾ ಬಾಧಿಸುತ್ತಿದ್ದಾಗ ಭಾರತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಅದನ್ನೇ ತಟ್ಟೆ, ತಾಟು ಬಡಿದು ಸಂಭ್ರಮಿಸಿದ್ದೂ ಆಯ್ತು. ಒಂದು ಮಟ್ಟಿಗೆ ಲಾಕ್‌ಡೌನ್ ಅನ್ನೂ ಕೂಡಾ ಮಾಡಲಾಯ್ತು. ಭಾರತದಂಥಾ ದೇಶದಲ್ಲಿ ಹೀಗೆ ಎಲ್ಲವನ್ನೂ ಬಂದ್ ಮಾಡಿ ಜನರನ್ನು ಮನೆಯೊಳಗೆ ಕೂರಿಸೋದೆಂದರೆ ಅದೊಂದು ಕಠೋರ ಕಾರ್ಯ. ಸಾವು, ನೋವು, ಸಂಕಟಗಳಾಚೆಗೂ ಅದರಲ್ಲಿಯೂ ಒಂದು ಮಟ್ಟಕ್ಕೆ ಯಶ ಸಿಕ್ಕಿತ್ತು. ಆದರೆ ಇದೀಗ ಖುದ್ದು ಸರ್ಕಾರಗಳೇ ಕೊರೋನಾ ವೈರಸ್ಸಿಗೆ ರತ್ನಗಂಬಳಿ ಹಾಸಿ ಆಹ್ವಾನಿಸುವಂಥ ಮುಠ್ಠಾಳ ಕ್ರಮಗಳನ್ನು ಅನುಸರಿಸುತ್ತಿದೆ. ಇಂಥಾ ದರಿದ್ರದ ನೀತಿ ನಿಯಮಾವಳಿಗಳಿಂದ ದೇಶ ಯಾವ ಅಪಾಯದ ಅಂಚಿನತ್ತ ಹೊರಳುತ್ತಿದೆ ಅನ್ನೋದಕ್ಕೆ ಭಾರತದ ಪುಟ್ಟ ರಾಜ್ಯ ಗೋವಾಕ್ಕಿಂತಲೂ ಸೂಕ್ತ ಉದಾಹರಣ ಬೇರೊಂದಿಲ್ಲ. ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಭಾರತದ ಚಿಕ್ಕ ರಾಜ್ಯವಾಗಿ ಗುರುತಿಸಿಕೊಂಡಿರೋ ಗೋವಾ ಪ್ರವಾಸೋದ್ಯಮಕ್ಕೆ ಖ್ಯಾತಿ ಗಳಿಸಿಕೊಂಡಿದೆ. ವಿದೇಶಿಯರು ಬಂದು ಗುಡ್ಡೆ ಬೀಳುವ ಈ ಪ್ರದೇಶ ಪ್ರವಾಸಪ್ರಿಯರ ಪಾಲಿನ ಹಾಟ್‌ಸ್ಪಾಟ್ ಕೂಡಾ ಹೌದು. ಈ ರಾಜ್ಯದ ಅಸಲೀ ಬಂಡವಾಳವೇ ಪ್ರವಾಸೋದ್ಯಮ. ಹಾಗಿದ್ದ ಮೇಲೆ ಲಾಕ್‌ಡೌನ್ ಸಮಯದಲ್ಲಿ ಎಲ್ಲವೂ ಥಂಡಾ ಹೊಡೆದಾಗ ಹೆಚ್ಚು ಕಾಲ ಈ ರಾಜ್ಯ ಅದನ್ನು ತಡೆದುಕೊಳ್ಳಲು ಸಾಧ್ಯವಿರಲಿಲ್ಲ. ವಿಶೇಷವೆಂದರೆ, ಪ್ರವಾಸಿಗರಿಂದ ಪಿತಗುಡುತಿದ್ದರೂ ಈ ರಾಜ್ಯ ಗ್ರೀನ್ ಝೋನಿನಲ್ಲಿತ್ತು. ಇದನ್ನೇ ಮುಂದಿಟ್ಟುಕೊಂಡು ತರಾತುರಿಯಲ್ಲಿ ಗೋವಾದಲ್ಲಿ ಪ್ರವಾಸೋಧ್ಯಮಕ್ಕೆ ಚಾಲನೆ ಕೊಡಲಾಗಿತ್ತು. ಇದರ ಬಗ್ಗೆ ದೇಶಾದ್ಯಂತ ಟೀಕೆಗಳು ಕೇಳಿ ಬಂದಿದ್ದವು. ಇದು ಈಗ ಅಗತ್ಯವಿರಲಿಲ್ಲ ಎಂಬ ವಿಶ್ಲೇಷಣೆಗಳೂ ಹಬ್ಬಿಕೊಂಡಿದ್ದವು. ಈ ಹಂತದಲ್ಲಿ ಗೋವಾ ಪ್ರವಾಸೋದ್ಯಮ ಸಚಿವರು ಶ್ರೀಮಂತ ಪ್ರವಾಸಿಗರಿಗೆ ಮಾತ್ರ ಅವಕಾಶ ಕೊಡುವ ಪಡಪೋಶಿ ಹೇಳಿಕೆಯನ್ನೂ ರವಾನಿಸಿದ್ದರು. ತಮಾಶೆಯೆಂದರೆ, ಕೊರೋನಾ ವೈರಸ್ಸು ಭಾರತಕ್ಕೆ ಬಂದಿದ್ದೇ ಶ್ರೀಮಂತ ಕುಳಗಳಿಂದ. ಈ ನೆಲದ ಯಾವ ಬಡವರಿಗೂ ಗೋವಾ ಬೀಚಿಗೆ ಹೋಗಿ ಬರೀ ಕಾಚದಲ್ಲಿ ಬೋರಲು ಬಿದ್ದುಕೊಳ್ಳುವಂಥ ಶೋಕಿ ಅಮರಿಕೊಂಡಿಲ್ಲ. ಹೀಗೆ ಯಡವಟ್ಟು ಆಸಾಮಿ ಪ್ರವಾಸೋದ್ಯಮ ಸಚಿವ ಶ್ರೀಮಂತ ಪ್ರವಾಸಿಗರನ್ನು ಬೀಚಿಗೆ ಆಹ್ವಾನಿಸಿದನಲ್ಲಾ? ಅದರ ದೆಸೆಯಿಂದ ಗ್ರೀನ್ ಝೋನಿನಲ್ಲಿದ್ದ ಗೋವಾ ರೆಡ್ ಝೋನ್ ತಲುಪಿಕೊಂಡಿದೆ. ಅಲ್ಲಿನ ಕಡಲ ತಡಿಯ ತಾಪಮಾನಕ್ಕೆ ಪೈಪೋಟಿ ನೀಡುವಂತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿಕೊಳ್ಳುತ್ತಿದೆ. ಇದೀಗ ಸೇಫಾಗಿದ್ದ ಈ ರಾಜ್ಯ ತಾನೇ ತಾನಾಗಿ ಕೊರೋನಾವನ್ನು ತಬ್ಬಿಕೊಂಡಿದೆ. ಸದ್ಯಕ್ಕೆ ಅಲ್ಲಿ ಐವತ್ತೆರಡು ಕೇಸುಗಳಿದ್ದಾವೆ. ಪ್ರವಾಸೋದ್ಯಮಕ್ಕಾಗಿ ಎಲ್ಲವನ್ನೂ ಖುಲ್ಲಂಖುಲ್ಲಾ ಮಾಡಿರೋದರಿಂದ ಕೊರೋನ ಆ ರಾಜ್ಯವನ್ನು ಬೇಗನೆ ಆವರಿಸಿಕೊಳ್ಳುವ ಎಲ್ಲ ಅಪಾಯಗಳೂ ಇವೆ. ಕೇಂದ್ರ ಸರ್ಕಾರ ಕಣ್ಣೆದುರಿಗೇ ನಡೆಯುತ್ತಿರೋ ಈ ವಿದ್ಯಮಾನಗಳಿಂದಲಾದರೂ ಎಚ್ಚೆತ್ತುಕೊಳ್ಳಬಹುದೇ?
2020/08/08 20:31:46
http://shodhanews.com/2020/05/24/goa-24-5-2020/
mC4
ಈ ನಾಲ್ಕು ರಾಜ್ಯಗಳಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ | Heavy Rain Expected In These States On Sep 15 And 16 - Kannada Oneindia 36 min ago Video: ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ದಾಖಲೆ ಬರೆದ ವೈದ್ಯರಿಗೆ ಸಚಿವರಿಂದ ಸಿಹಿ 39 min ago Breaking: ಬೆಂಗಳೂರಿನ ಒಂದೇ ಕುಟುಂಬದ ಐವರು ಆತ್ಮಹತ್ಯೆ 46 min ago ನಟಿ ಚಂದನಾರಿಂದ ಬೆಂಗಳೂರು ಆರ್ಟ್ಸ್‌ & ಕ್ರಾಫ್ಟ್‌ ಮೇಳಕ್ಕೆ ಚಾಲನೆ | Published: Wednesday, September 15, 2021, 12:24 [IST] ನವದೆಹಲಿ, ಸೆಪ್ಟೆಂಬರ್ 15: ಮುಂಗಾರು ಪ್ರಭಾವದಿಂದ ಹಾಗೂ ವಾಯುಭಾರ ಕುಸಿತದ ಪರಿಣಾಮವಾಗಿ ಸೆಪ್ಟೆಂಬರ್ 15 ಹಾಗೂ 16ರಂದು ಕೆಲವು ರಾಜ್ಯಗಳು ಅಧಿಕ ಮಟ್ಟದ ಮಳೆಗೆ ಸಾಕ್ಷಿಯಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಜರಾತ್, ಮಧ್ಯ ಪ್ರದೇಶದಲ್ಲಿ ಮುಂದಿನ ಎರಡು ದಿನಗಳಲ್ಲಿ ಅಧಿಕ ಮಳೆಯಾಗಲಿದೆ. ಇದರೊಂದಿಗೆ ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 16ರಂದು ಭಾರೀ ಮಳೆಯಾಗಲಿದೆ. ಇದರಿಂದ ಆಯಾ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಲಿದೆ ಎಂದು ಮಾಹಿತಿ ನೀಡಿದೆ. ಛತ್ತೀಸ್‌ಗಡ, ಪಶ್ಚಿಮ ಬಂಗಾಳ ಹಾಗೂ ಒಡಿಶಾದ ಒಳನಾಡಿನಲ್ಲಿ ಬುಧವಾರ ಹೆಚ್ಚಿನ ಮಳೆಯಾಗಿ ಆನಂತರ ಮಳೆ ಪ್ರಮಾಣ ತಗ್ಗಲಿದೆ ಎಂದು ಅಂದಾಜು ಮಾಡಿದೆ. ಉತ್ತರ ಕೊಂಕಣ, ಮಧ್ಯ ಮಹಾರಾಷ್ಟ್ರ, ಪೂರ್ವ ಮಧ್ಯ ಪ್ರದೇಶದಲ್ಲಿ ಸೆಪ್ಟೆಂಬರ್ 15ರಂದು ಹೆಚ್ಚಿನ ಮಳೆಯಾಗಲಿದೆ ಎಂದು ತಿಳಿಸಿದೆ. ಸದ್ಯ ವಾಯುಭಾರ ಕುಸಿತದ ಪರಿಣಾಮದಿಂದಾಗಿ ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ- ಈ ನಾಲ್ಕು ರಾಜ್ಯಗಳಲ್ಲಿ ಭಾರೀ ಮಳೆ ಸೂಚನೆಯನ್ನು ನೀಡಿದೆ. ಮುಂದೆ ಓದಿ... ಗುಜರಾತ್‌ನಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ವಾಯುಭಾರ ಕುಸಿತದ ತೀವ್ರ ಪ್ರಭಾವದಿಂದಾಗಿ ಗುಜರಾತ್‌ನಲ್ಲಿ ಭಾನುವಾರದಿಂದಲೂ ಭಾರೀ ಮಳೆಯಾಗುತ್ತಿದ್ದು, ರಾಜ್‌ಕೋಟ್ ಹಾಗೂ ಜಮ್ನಾ ನಗರದಲ್ಲಿ ಅತ್ಯಧಿಕ ಮಳೆಯಾಗಿ ಪ್ರವಾಹ ಸಂಭವಿಸಿದೆ. ಸುಮಾರು ಏಳು ಸಾವಿರ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದಾಗಿ ಪ್ರಮುಖ ರಸ್ತೆಗಳು, ಗ್ರಾಮಗಳು ಜಲಾವೃತವಾಗಿವೆ. ಮುಂದಿನ ಎರಡು ದಿನಗಳವರೆಗೂ ಮಳೆ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ. ಗುಜರಾತ್ ಹಾಗೂ ಮಧ್ಯ ಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಒಡಿಶಾದಲ್ಲಿ ಮಳೆಯಿಂದ ಮೂರು ಸಾವು ಶನಿವಾರ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಒಡಿಶಾದಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರದಿಂದಲೇ ಮಳೆ ಆರಂಭವಾಗಿದ್ದು, ಮಳೆ ಸಂಬಂಧಿ ಘಟನೆಗಳಲ್ಲಿ ಇದುವರೆಗೂ ಮೂರು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ 17 ಕಡೆಗಳಲ್ಲಿ ಮಂಗಳವಾರ ಬೆಳಿಗ್ಗೆ 8.30ರವರೆಗೆ 200 ಮಿ.ಮೀ ಮಳೆ ದಾಖಲಾಗಿದೆ. ತಾಲ್ಕಚರ್ ಹಾಗೂ ಬೀರಮಹಾರಾಜಪುರದಲ್ಲಿ 300 ಎಂಎಂಗೂ ಅಧಿಕ ಮಳೆ ದಾಖಲಾಗಿದೆ. ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತ ಪ್ರಭಾವದಿಂದ ಹೆಚ್ಚಿನ ಮಳೆ ಒಡಿಶಾ, ಗುಜರಾತ್ ಹೊರತುಪಡಿಸಿ ಉತ್ತರಾಖಂಡ, ದೆಹಲಿ, ರಾಜಸ್ಥಾನದಲ್ಲಿ ಸೆಪ್ಟೆಂಬರ್ 18ರವರೆಗೂ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ. ಸೆಪ್ಟೆಂಬರ್ 17ರಂದು ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಲಿದ್ದು, ಮಳೆ ಪ್ರಮಾಣ ಇನ್ನಷ್ಟು ಅಧಿಕವಾಗಲಿದೆ ಎಂದು ತಿಳಿಸಿದೆ. ಒಡಿಶಾ, ಪಶ್ಚಿಮ ಬಂಗಾಳ ಕರಾವಳಿ ತೀರಗಳಿಗೆ ಈ ಮಾರುತಗಳು ಚಲಿಸಲಿದ್ದು, ಈ ರಾಜ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಆನಂತರ ಮಳೆ ತಗ್ಗಲಿದೆ. ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಬುಧವಾರದ ನಂತರ ಮಳೆ ತಗ್ಗಲಿದೆ ಎಂದು ತಿಳಿಸಿದೆ. ಪಂಜಾಬ್‌ನ 14 ಜಿಲ್ಲೆಗಳಲ್ಲಿ ಮಳೆ ತಗ್ಗಿರುವುದಾಗಿ ತಿಳಿಸಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆ ಮುಂದಿನ ಎರಡು ದಿನ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
2021/09/17 16:02:38
https://kannada.oneindia.com/news/india/heavy-rain-expected-in-these-states-on-sep-15-and-16-234119.html
mC4
ಪುತ್ತೂರಿನಲ್ಲೊಂದು ಮರದ ಸೌಂದರ್ಯ ಹೆಚ್ಚಿಸಿದ ಪಕ್ಷಿಗಳು.. ರಾತ್ರಿ ದೂರದಿಂದ ನೋಡಲು ಮಾತ್ರ ಇದು ಸುಂದರ ! | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 ಪುತ್ತೂರು: ಎಷ್ಟೋ ಮರಗಳಲ್ಲಿ ಪಕ್ಷಿಗಳ ವಾಸ ಇರುತ್ತೆ. ಆದರೆ ಕಾಣ ಸಿಗುವುದಿಲ್ಲ. ಕೇವಲ ಅವುಗಳ ಕೂಗು ಮಾತ್ರ ಕೇಳಿಸುತ್ತೆ. ಚಳಿಗಾಲದ ಸಮಯದಲ್ಲಿ ಮರಗಳ ಎಲೆಗಳು ಉದುರಿ ಹೋದರು ಪಕ್ಷಿಗಳ ಬಣ್ಣಗಳ ವ್ಯತ್ಯಾಸದಿಂದ ಅವು ಸರಿಯಾಗಿ ಗೋಚರಿಸದು. ಆದರೆ ಪುತ್ತೂರಿನ ಕೇಂದ್ರ ಭಾಗ ಮಹಾತ್ಮ ಗಾಂಧೀ ಪ್ರತಿಮೆ ಬಳಿಯ ಅಶ್ವತ್ಥ ಮರದ ಆಶ್ರಯದಲ್ಲಿರುವ ಬಿಳಿ ಬಣ್ಣದ ಪಕ್ಷಿಗಳು ಗೋಚರಿಸುವುದು ಮಾತ್ರವಲ್ಲ. ರಾತ್ರಿ ವೇಳೆ ಈ ಪಕ್ಷಿಗಳು ಮರದ ಸೌಂದರ್ಯವನ್ನು ಹೆಚ್ಚಿಸಿದೆ. ಕ್ಯಾಮೆರಾ ಕಣ್ಣಿಗೆ ಸಿಕ್ಕದೃಶ್ಯ ಹೌದು.. ರಾತ್ರಿ ವೇಳೆ ದೂರದಿಂದ ನೋಡುವಾಗ ಈ ಆಶ್ವತ್ಥ ಮರದಲ್ಲಿ ಏನೋ ಬಿಳಿ ಬಣ್ಣದ ಹೂವುಗಳ ಮೊಗ್ಗುಗಳು ಕಾಣಿಸುವಂತೆ ಗೋಚರಿಸುತ್ತದೆ. ಈ ಸೌಂದರ್ಯವನ್ನು ನೋಡಲು ರಾತ್ರಿ ಮತ್ತು ನಸುಕಿನ ಜಾವ ನೂರಾರು ಮಂದಿ ಬಂದು ಮನಸ್ಸಿಗೆ ನೆಮ್ಮದಿ ತಂದು ಕೊಳ್ಳುತ್ತಾರೆ. ಆದರೆ ಪಕ್ಷಿಗಳು ಇರುವ ಮರದ ಬುಡದ ಬಳಿ ಹೋದರೆ ಮಾತ್ರ ಹಕ್ಕಿಗಳ ಹಿಕ್ಕೆ ಬೀಳುವ ಸಾಧ್ಯತೆ ಇರುವುದರಿಂದ ಆದಷ್ಟು ದೂರದಿಂದಲೇ ನೋಡಿ ಆನಂದಿಸಬೇಕಾಗಿದೆ. Previous : ಬೆಂಗಳೂರು ಮುಳಿಯದಲ್ಲಿ 'ಕನ್ನಡದ ಭಾವ ಬದುಕು' ಎಂಬ ವಿಶೇಷ ಕಾರ್ಯಕ್ರಮ – ಕನ್ನಡ ವಿಶಿಷ್ಟತೆಯ ಪೇಟೆಂಟ್‌ ಆಗಬೇಕು: ನಾಗಾಭರಣ
2022/07/06 07:59:49
https://puttur.suddinews.com/archives/535810
mC4
|ತಾಯಿಯ ಕೊಂದ ತಂದೆ: ಜೈಲಿಗಟ್ಟಿದ ಮಗು! - india - News in kannada, vijaykarnataka ತಾಯಿಯ ಕೊಂದ ತಂದೆ: ಜೈಲಿಗಟ್ಟಿದ ಮಗು! ಏಜೆನ್ಸೀಸ್ | Updated: Feb 5, 2013, 12:53PM IST ಮುಂಬಯಿ: ತಾಯಿಯನ್ನು ಕೊಂದ ತಂದೆಯನ್ನು 3 ವರ್ಷದ ಪುಟಾಣಿ ಜೈಲಿಗಟ್ಟಿದ ನೈಜ ಘಟನೆಯಿದು. ತನ್ನಿಬ್ಬರು ಗೆಳೆಯರೊಂದಿಗೆ ಪತ್ನಿಯನ್ನು ಕೊಂದು, 'ಪ್ರತೀಕಾರದ ದಾಳಿ' ಎಂಬ ಕಥೆ ಕಟ್ಟಿದ ಬಿಪಿಒ ಉದ್ಯೋಗಿಯೊಬ್ಬ ಈಗ ಪೊಲೀಸ್ ವಶದಲ್ಲಿದ್ದಾನೆ. 3 ವರ್ಷದ ಮಗು ಹಾಗೂ 9 ತಿಂಗಳು ಎಳೆಯ ಸಹೋದರರಿಬ್ಬರ ಎದುರೇ ಮಹಿಳೆಯನ್ನು ಕತ್ತು ಹಿಸುಕಿ ಕೊಲ್ಲಲಾಗಿತ್ತು. ಇದನ್ನು ಮಗು ಹೇಳಿದಾಗ, ಈ ವ್ಯಕ್ತಿಯ ಕಟ್ಟು ಕಥೆ ಬಯಲಾಗಿತ್ತು. ತತ್ಪರಿಣಾಮವಾಗಿ ಘಟನೆ ನಡೆದ 12 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಲಾಗಿದೆ. ಸಲ್ಮಾನ್ ಶೇಖ್ (28) ಎಂಬ ವ್ಯಕ್ತಿ ಹೇಳಿದ ಕಥೆ ಪ್ರಕಾರ, ಆತ ಪತ್ನಿ ಆಯೇಷಾ ಹಾಗೂ ಇಬ್ಬರು ಮಕ್ಕಳೊಂದಿಗೆ ಬಾಂದ್ರಾ ರೆಕ್ಲಮೇಶನ್‌ಗೆ ತೆರಳಿದ್ದರು. ಅಲ್ಲಿ ಬೈಕಿನಲ್ಲಿ ಬಂದ ಡಕಾಯಿತರು ತಡೆದರು. ತಾನು ಅವರೊಂದಿಗೆ ಹೋರಾಡಿದೆ. ಇಬ್ಬರು ವ್ಯಕ್ತಿಗಳು ತನ್ನ ಮತ್ತು ಪತ್ನಿಯ ಕತ್ತು ಹಿಸುಕಿದಾಗ ತಾನು ಪ್ರಜ್ಞೆ ತಪ್ಪಿ ಬಿದ್ದೆ ಎಂದಿದ್ದನಾತ. ಆದರೆ, ಕಾರನ್ನು ಯಾರೂ ತಡೆಯಲಿಲ್ಲ, ಕಾರಿನಲ್ಲಿ ಯಾವುದೇ ಕಿತ್ತಾಟವೂ ನಡೆದಿಲ್ಲ ಎಂದು ಮಗು ಹೇಳಿದಾಗ, ಪೊಲೀಸರಿಗೆ ಸಲ್ಮಾನ್ ಮೇಲೆ ಶಂಕೆ ಉಂಟಾಯಿತು. ಅಲ್ಲದೆ, ಕಿತ್ತಾಟ ನಡೆದ ಕುರಿತು ಯಾವುದೇ ಕುರುಹುಗಳೂ ಸಲ್ಮಾನ್ ದೇಹದ ಮೇಲಿರಲಿಲ್ಲ. ಬಳಿಕ ಸಲ್ಮಾನ್ ಯಾರಿಗೆಲ್ಲಾ ಕರೆ ಮಾಡಿದ್ದಾನೆ ಎಂದು ಪರಿಶೀಲಿಸಿದಾಗ, ಅವನ ಸಹಚರರಾದ ಸಾದಿಕ್ ಖಾನ್ ಮತ್ತು ಶಕೀರ್ ಶೇಖ್ ಹೆಸರು ತಿಳಿಯಿತು. ವಿಚಾರಣೆ ತೀವ್ರಗೊಳಿಸಿದಾಗ ನಿಜಾಂಶ ಬಯಲಾಯಿತು. ಸಲ್ಮಾನ್ ಆಯೇಷಾಳನ್ನು ಮದುವೆಯಾದ ಬಳಿಕವೂ ತನ್ನ ದೀರ್ಘ ಕಾಲದ ಗೆಳತಿಯೊಂದಿಗೆ ಸಂಬಂಧ ಹೊಂದಿದ್ದು, ಆಕೆಯನ್ನು ಕೆಲವು ತಿಂಗಳ ಹಿಂದೆ ಮದುವೆಯಾಗಿದ್ದ. ಹೊಸ ಪತ್ನಿಯೊಂದಿಗೆ ಬಾಳಲು ಇಚ್ಛಿಸಿದ್ದ ಆತ, ಮೊದಲ ಪತ್ನಿಯನ್ನು ಕೊಲೆ ಮಾಡಲು ತೀರ್ಮಾನಿಸಿ, ದರೋಡೆಯ ಕಥೆ ಕಟ್ಟಿದ್ದ. ಆರಂಭದಲ್ಲಿ ಆಯೇಷಾಳ ಹತ್ಯೆಗೆ ಒಪ್ಪದ ತನ್ನ ಗೆಳೆಯರಿಗೆ ಸಲ್ಮಾನ್ ಈ ಕೃತ್ಯಕ್ಕಾಗಿ ತಲಾ 10 ಸಾವಿರ ರೂ. ನೀಡಿದ್ದಾನೆ. ಅವರ ಯೋಜನೆಯ ಪ್ರಕಾರ, ಇದೊಂದು 'ಸೇಡಿನ ಹತ್ಯೆ' ಎಂಬಂತೆ ಬಿಂಬಿಸುವುದಕ್ಕಾಗಿ ಸಲ್ಮಾನ್‌ನ ಒಬ್ಬ ಗೆಳೆಯ ಆಯೇಷಾಳ ತಂದೆಗೆ ಆಗಾಗ್ಗೆ ಫೋನ್ ಕರೆ ಮಾಡಿ, ಅವಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಅಂತ ಹೇಳಬೇಕಿತ್ತು. ಕಳೆದ ಭಾನುವಾರ ಬಾಂದ್ರಾಗೆ ಹೊರಟಿದ್ದ ಈ ಕುಟುಂಬದ ಜತೆ ಸಾದಿಕ್ ಮತ್ತು ಶಕೀರ್ ಸೇರಿಕೊಂಡರು. ಕಾರಿನೊಳಗೆಯೇ ಸಾದಿಕ್ ಆಯೇಷಾಳ ಕತ್ತು ಹಿಸುಕಿದ, ಸಲ್ಮಾನ್ ಆತನಿಗೆ ಸಹಾಯ ಮಾಡಿದ. ಶಕೀರ್ ಈ ಮಕ್ಕಳ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದ. ಆಯೇಷಾಳನ್ನು ಕೊಂದ ಬಳಿಕ, ಶಕೀರ್ ಮತ್ತು ಸಾದಿಕ್ ಸೇರಿಕೊಂಡು ಆಯೇಷಾ ಮತ್ತು ಸಲ್ಮಾನ್‌ರನ್ನು ಕಟ್ಟಿಹಾಕಿ ಇದೊಂದು 'ದರೋಡೆ' ಅಂತ ತೋರಿಸಲು ಪ್ರಯತ್ನಿಸಿದರು. ಕೊನೆಗೆ ಅವರು ಆಯೇಷಾಳ ತಂದೆಗೆ ಕರೆ ಮಾಡಿ, 'ನಿಮ್ಮ ಅಳಿಯ ಮತ್ತು ಮಗಳ ಮೇಲೆ ಸೇಡು ತೀರಿಸಿಕೊಂಡೆವು' ಅಂತ ಸಂದೇಶ ತಲುಪಿಸಿದರು.
2017/12/18 03:08:07
https://vijaykarnataka.indiatimes.com/news/india/-/articleshow/18347179.cms
mC4
ಡೌನ್ ಲೋಡ್ ವಿವರಗಳು: Photosynth- NASA video Photosynth - NASA video - ಕನ್ನಡ ತ್ವರಿತ ವಿವರಣೆ ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.ಈ ಪುಟದಲ್ಲಿ ತ್ವರಿತ ವಿವರಗಳು ಮುನ್ನೋಟ ಸಿಸ್ಟಂ ಅಗತ್ಯಗಳು ಸೂಚನೆಗಳು ಫೈಲ್ ಗಳನ್ನು ಕೆಳಗೆ ಡೌನ್ ಲೋಡ್ ಮಾಡಿ ತ್ವರಿತ ವಿವರಗಳು ಆವೃತ್ತಿ:1.0 ಪ್ರಕಟಿತ ದಿನಾಂಕ:07-08-07 ಭಾಷೆ:ಕನ್ನಡ ಡೌನ್ ಲೋಡ್ ಗಾತ್ರ:8.4 ಎಂಬಿ - 127.4 ಎಂಬಿ**ಡೌನ್ ಲೋಡ್ ನ ಗಾತ್ರವು ಆರಿಸಿದ ಡೌನ್ ಲೋಡ್ ಕಾಂಪನೆಂಟ್ ಗಳನ್ನು ಅವಲಂಬಿಸಿದೆ. ಭಾಷೆ ಬದಲಾಯಿಸಿ:ಅಝೆರಿ (ಲ್ಯಾಟಿನ್)ಅಫ್ರಿಕಾನ್ಸಅರೇಬಿಕ್ಅರ್ಮೇನಿಯನ್ಅಲ್ಬಾನಿಯನ್ಇಂಗ್ಲಿಷ್ಇಂಡೋನೇಷ್ಯನ್ಇಟಾಲಿಯನ್ಇನುಕ್ಟಿಟಟ್ (ಲ್ಯಾಟಿನ್)ಇಸಿಕ್ಸೋಸಾಇಸಿಜುಲಾಉಕ್ರೇನಿಯನ್ಉರ್ದುಎಸ್ಟೋನಿಯನ್ಐರಿಶ್ಐಸ್ ಲ್ಯಾಂಡಿಕ್ಕಜಕ್ಕನ್ನಡಕಿಸ್ವಾಹಿಲಿಕೊಂಕಣಿಕೊರಿಯನ್ಕ್ಯಾಟಲನ್ಕ್ಯುಯೆಚುವಾ (ಪೆರು)ಕ್ರೊವೇಷಿಯನ್ಗುಜರಾತಿಗ್ಯಾಲಿಸಿಯನ್ಗ್ರೀಕ್ಚೈನೀಸ್ (ಸರಳೀಕೃತ)ಚೈನೀಸ್ (ಸಾಂಪ್ರದಾಯಿಕ)ಚೈನೀಸ್ (ಹಾಂಕಾಂಗ್ ಎಸ್ ಎ ಆರ್)ಜಪಾನೀಸ್ಜರ್ಮನ್ಜಾಪನೀಸ್ (ಎನ್ಇಸಿ)ಜಾರ್ಜಿಯನ್ಜೆಕ್ಟರ್ಕಿಷ್ಡಚ್ಡೇನಿಷ್ತತಾರ್ತಮಿಳುತೆಲುಗುಥಾಯ್ನಾರ್ವೆಯನ್ (ನೈನಾಸ್ಕ್)ನಾರ್ವೆಯನ್ (ಬೋಕ್ಮಾಲ್)ನೇಪಾಳಿಪಂಜಾಬಿಪರ್ಷಿಯನ್ಪಾಶ್ತೋಪೋರ್ತುಗೀಸ್ (ಪೋರ್ತುಗಾಲ್)ಪೋರ್ತುಗೀಸ್ (ಬ್ರಜಿಲ್)ಪೋಲಿಷ್ಫಿನ್ನಿಷ್ಫಿಲಿಪಿನೋಫ್ರೆಂಚ್ಬಂಗಾಳಿ (ಭಾರತ)ಬಲ್ಗೇರಿಯನ್ಬಾಸ್ಕ್ಬೋಸ್ನಿಯನ್ (ಲ್ಯಾಟಿನ್)ಬೋಸ್ನಿಯನ್ (ಸೈರಿಲಿಕ್)ಮರಾಠಿಮಲಯ್ (ಮಲೇಷಿಯ)ಮಲೆಯಾಳಂಮಾಲ್ಟೆಸ್ಸಿಮಾವೋರಿಮ್ಯಾಸೆಡೋನಿಯನ್-(ಹಳೆಯ ಯುಗೋಸ್ಲಾವ್ ರಿಪಬ್ಲಿಕ್ ನ ಮ್ಯಾಸಿಡೋನಿಯ)ರಷ್ಯನ್ರೊಮೇನಿಯನ್ರೋಮನ್ಷ್ಲಕ್ಸೆಂಬರ್ಗಿಷ್ಲಾಟ್ವಿಯನ್ಲಿಥ್ವೇನಿಯನ್ವಿಯೆಟ್ನಾಮೀಸ್ವೆಲ್ಷ್ಸರ್ಬಿಯನ್ (ಲ್ಯಾಟಿನ್)ಸರ್ಬಿಯನ್ (ಸೈರಿಲಿಕ್)ಸೆತ್ಸ್ವಾನಾ (ಬೋಟ್ಸ್ವಾನಾ)ಸೆಸೊತೊ ಸಾ ಲೆಬೋವಾಸ್ಪ್ಯಾನಿಶ್ಸ್ಲೊವೆನಿಯನ್ಸ್ಲೋವಾಕ್ಸ್ವೀಡಿಶ್ಹಂಗೇರಿಯನ್ಹಿಂದಿಹೀಬ್ರೂ ಮುನ್ನೋಟPhotosynth takes a large collection of photos of a place or object, analyzes them for similarities, and displays them in a reconstructed 3-dimensional space. ಪುಟದ ಮೇಲ್ಭಾಗ ಸಿಸ್ಟಂ ಅಗತ್ಯಗಳು ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್: Windows Vista; Windows XP Embedded Service Pack 2 Windows Media Player ಪುಟದ ಮೇಲ್ಭಾಗ ಸೂಚನೆಗಳುRight-click each video and click Save Target As... Choose a folder on your computer and click Ok. ಪುಟದ ಮೇಲ್ಭಾಗ ನಿಮ್ಮ ಪ್ರೊಫೈಲನ್ನು ನಿರ್ವಹಿಸಿ | ನಮ್ಮ ಸಂಪರ್ಕ©2013 Microsoft Corporation. ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ. ನಮ್ಮನ್ನು ಸಂಪರ್ಕಿಸಿ |ಶರತ್ತುಗಳು |ವ್ಯಾಪಾರ ಚಿಹ್ನೆಗಳು |ಗೌಪ್ಯ ಹೇಳಿಕೆ
2013/06/20 02:35:42
http://www.microsoft.com/downloads/details.aspx?FamilyID=ca0915ed-3fa7-4be5-9177-33b47e16ebe0&DisplayLang=kn
mC4
78ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್ | Manmohan Singh Birth Day | PM's 78th Birth Day | Sonia Gandhi | Karunanidhi | ಮನಮೋಹನ್ ಸಿಂಗ್ | ಹುಟ್ಟುಹಬ್ಬ | ಸೋನಿಯಾ ಗಾಂಧಿ - Kannada Oneindia 33 min ago ತಂದೆಗೆ ಆಡಳಿತ ಮಂಡಳಿ ಅವಮಾನ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ 37 min ago 2014ರ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಎಕ್ಸಿಟ್ ಪೋಲ್: ಹೇಳಿದ್ದು, ಆಗಿದ್ದು! 78ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್ | Published: Monday, September 27, 2010, 14:50 [IST] ನವದೆಹಲಿ, ಸೆ. 27 : ಇಂದು 78ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರಧಾನಿ ಮನಮೋಹನ್ ಸಿಂಗ್‌ಗೆ ಹುಟ್ಟು ಹಬ್ಬದ ಸಂಭ್ರಮ. ಪ್ರಧಾನಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಹೂ ಗುಚ್ಛಗಳನ್ನು ಕಳುಹಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಪ್ರಧಾನಿ ಮನಮೋಹನ್ ಸಿಂಗ್‌ಗೆ ದೂರವಾಣಿ ಕರೆ ಮಾಡಿರುವ ಸೋನಿಯಾ ಗಾಂಧಿ, ಅವರ ಪುತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಶುಭಾಷಯ ಕೋರಿದ್ದಾರೆ. ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಪ್ರಧಾನಿ ಮನಮೋಹನ್ ಸಿಂಗ್‌ಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಕಳೆದ ವರ್ಷ ಪ್ರಧಾನಿ ಮನಮೋಹನ್ ಸಿಂಗ್ ತನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದರು. ಇದೀಗ ಪಾಕಿಸ್ತಾನದಲ್ಲಿ ರುವ ಪಶ್ಚಿಮ ಪಂಜಾಬ್‌ ನಲ್ಲಿ 1932ರ ಸೆಪ್ಟಂಬರ್ 26ರಂದು ಮನಮೋಹನ್ ಸಿಂಗ್ ಜನಿಸಿದ್ದಾರೆ.
2019/10/22 02:53:03
https://kannada.oneindia.com/news/2010/09/27/manmohan-singh-celebrates-his-78th-birthday.html
mC4
ಕ್ಷಿಪಣಿ ರಕ್ಷಣಾ ವ್ಯವಸ್ಥೆ: Latest ಕ್ಷಿಪಣಿ ರಕ್ಷಣಾ ವ್ಯವಸ್ಥೆ News & Updates, Photos & Images, Videos | Vijaya Karnataka July,18,2019, 03:03:58 ಕ್ಷಿಪಣಿ ರಕ್ಷಣಾ ವ್ಯವಸ್ಥೆ ​ಇಸ್ರೇಲ್‌ಗೆ ಅಮೆರಿಕದ ಭರಪೂರ ಸೇನಾ ನೆರವು ಮಧ್ಯಪ್ರಾಚ್ಯದ ಪರಮಾಪ್ತ ದೇಶ ಇಸ್ರೇಲ್‌ಗೆ ಅಮೆರಿಕ ದಾಖಲೆ ಪ್ರಮಾಣದ ಸೇನಾ ನೆರವು ನೀಡಿದೆ. ಇದಲ್ಲದೇ ಮುಂದಿನ ದಶಕದಲ್ಲಿ ಇಸ್ರೇಲ್‌ಗೆ ಸುಮಾರು 25.43 ಲಕ್ಷ ಕೋಟಿ ರೂ.ಗಳಷ್ಟು ಸೇನಾ ನೆರವು ನೀಡುವ ಒಪ್ಪಂದಕ್ಕೆ ಬರಲಾಗಿದೆ. ಸಿರಿಯಾ ವಿರುದ್ಧ ಏಕಪಕ್ಷೀಯ ದಾಳಿ ನಡೆಸಿದರೆ ಜೋಕೆ Sep 05, 2013, 04.42 AM ಸಿರಿಯಾ ವಿರುದ್ಧ ಏಕಪಕ್ಷೀಯವಾಗಿ ದಾಳಿ ನಡೆಸದಂತೆ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಆಕಾಶ್ ಕ್ಷಿಪಣಿ ಯಶಸ್ವಿ ಪರೀಕ್ಷೆ May 24, 2012, 09.52 PM ತನ್ನ ವಾಯುರಕ್ಷಣಾ ವ್ಯವಸ್ಥೆಯ ಕಾರ‌್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನೆಲದಿಂದ ಆಕಾಶಕ್ಕೆ ಪ್ರಯೋಗಿಸುವ ಆಕಾಶ್ ಕ್ಷಿಪಣಿಯನ್ನು ಭಾರತ ಮತ್ತೊಮ್ಮೆ ಪರೀಕ್ಷೆಗೊಳಪಡಿಸಿದೆ. ಲಂಡನ್ ಒಲಿಂಪಿಕ್ಸ್‌ಗೆ ಕ್ಷಿಪಣಿ ಭದ್ರತೆ Apr 29, 2012, 08.21 PM ಜುಲೈನಲ್ಲಿ ನಡೆಯಲಿರುವ ಲಂಡನ್ ಒಲಿಂಪಿಕ್ ಕ್ರೀಡಾಕೂಟ ಸಂದರ್ಭದಲ್ಲಿ ಒಲಿಂಪಿಕ್ ಪಾರ್ಕ್ ಸುತ್ತ ಬಹು ಹಂತಗಳ ಭದ್ರತೆ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ.
2019/07/17 21:33:59
https://vijaykarnataka.indiatimes.com/topics/%E0%B2%95%E0%B3%8D%E0%B2%B7%E0%B2%BF%E0%B2%AA%E0%B2%A3%E0%B2%BF-%E0%B2%B0%E0%B2%95%E0%B3%8D%E0%B2%B7%E0%B2%A3%E0%B2%BE-%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86
mC4
ಅಳಿಯನೊಂದಿಗೆ ಅಕ್ರಮ ಸಂಬಂಧ- ಮಹಿಳೆಯ ಕೂದಲು ಕತ್ತರಿಸುವಂತೆ ತೀರ್ಪು ನೀಡಿದ ಪಂಚಾಯಿತಿ – Public Tv ಅಳಿಯನೊಂದಿಗೆ ಅಕ್ರಮ ಸಂಬಂಧ- ಮಹಿಳೆಯ ಕೂದಲು ಕತ್ತರಿಸುವಂತೆ ತೀರ್ಪು ನೀಡಿದ ಪಂಚಾಯಿತಿ ರಾಂಚಿ: ಮಹಿಳೆ ತನ್ನ ಸೋದರಳಿಯನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಆಕೆಯನ್ನು ಮನೆಯಿಂದ ಹೊರಗೆಳೆದು, ಊರಿನ ಪಂಚಾಯಿತಿಗೆ ಕರೆ ತಂದು ತಲೆ ಕೂದಲನ್ನು ಕತ್ತರಿಸಿರುವ ಘಟನೆ ಜಾರ್ಖಂಡ್‍ನ ಕೋಡೆರ್ಮಾದಲ್ಲಿ ನಡೆದಿದೆ. ಪತಿ ಇಲ್ಲದಿದ್ದಾಗ ತನ್ನ ಸ್ವಂತ ಸೋದರಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಡೆಂಗೋಡಿಹ್ ಗ್ರಾಮದ ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಗ್ರಾಮದಲ್ಲಿ ಪಂಚಾಯಿತಿ ನಡೆಸಲಾಗಿದ್ದು, ಪಂಚಾಯತ್ ನಿರ್ಧಾರದ ಮೇರೆಗೆ ಮಹಿಳೆಯ ತಲೆಯ ಕೂದಲನ್ನು ಕತ್ತರಿಸಲಾಗಿದೆ. ಈ ಕುರಿತು ಮಹಿಳೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಪತಿ ಇಲ್ಲದಿದ್ದಾಗ 22 ವರ್ಷದ ಸೋದರಳಿಯ ಸಂದೀಪ್ ಸಾ ನನ್ನನ್ನು ಹೆದರಿಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅಲ್ಲದೆ, ಈ ಸಂಬಂಧವನ್ನು ಮುಂದುವರಿಸುವಂತೆ ಹೆದರಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ವಿಷಯ ಗ್ರಾಮಸ್ಥರಿಗೆ ತಿಳಿದ ನಂತರ ಮಹಿಳೆಯ ಮೇಲೆಯೇ ಆಪಾದನೆ ಹೊರಿಸಿದ್ದು, ಅವಳೇ ನನ್ನನ್ನು ಸಂಬಂಧಕ್ಕೆ ಆಕರ್ಷಿಸಿದ್ದಾಳೆ ಎಂದು ಆರೋಪಿಸಿದ್ದಾನೆ. ಪ್ರಕರಣದ ಕುರಿತು ತಿಳಿಯುತ್ತಿದ್ದಂತೆ ಮಹಿಳೆಯನ್ನು ಹೊರಗೆಳೆದು, ಪಂಚಾಯತ್‍ಗೆ ಕರೆತರಲಾಗಿದ್ದು, ಪಂಚಾಯತ್‍ನಲ್ಲಿ ಮಹಿಳೆಯ ತಲೆಯ ಕೂದಲನ್ನು ಕತ್ತರಿಸುವಂತೆ ಆದೇಶ ನೀಡಲಾಗಿದೆ. ಒಟ್ಟು 11 ಆರೋಪಿಗಳನ್ನು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ. Related Topics:head hairillegal relationshipjharkhandpolicePublic TVwomanಅಕ್ರಮ ಸಂಬಂಧಜಾರ್ಖಂಡ್ತಲೆ ಕೂದಲುಪಬ್ಲಿಕ್ ಟಿವಿಪೊಲೀಸರುಮಹಿಳೆ
2020/07/06 07:56:44
https://publictv.in/illegal-relationship-woman-hair-cut-police-panchayat-jharkhand/amp
mC4
ಸಫಾಯಿ ಕರ್ಮಚಾರಿಗೆ ಸೌಲಭ್ಯ ಕಲ್ಪಿಸಿ | Udayavani – ಉದಯವಾಣಿ Tuesday, 09 Mar 2021 | UPDATED: 03:27 AM IST ಸಫಾಯಿ ಕರ್ಮಚಾರಿಗೆ ಸೌಲಭ್ಯ ಕಲ್ಪಿಸಿ Team Udayavani, Feb 10, 2021, 4:08 PM IST ಮಂಡ್ಯ: ಜಿಲ್ಲೆಯಲ್ಲಿ ಬಿಡುಗಡೆಗೊಂಡ ಜೀತದಾಳುಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಗುರುತಿಸಲ್ಪಟ್ಟಿರುವ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಕೆಲಸ ಸಮರೋಪಾದಿಯಲ್ಲಿ ಆಗಬೇಕು ಎಂದು ಜಿಪಂ ಸಿಇಒ ಎಸ್‌.ಎಂ.ಜುಲ್‌ ಫಿಖಾರ್‌ ಉಲ್ಲಾ ಹೇಳಿದರು. ನಗರದ ಜಿಪಂ ಕಚೇರಿಯಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲೆಯಲ್ಲಿ ಬಿಡುಗಡೆಗೊಂಡ ಜೀತದಾಳುಗಳು ಮತ್ತು ಗ್ರಾಮೀಣ ಭಾಗದಲ್ಲಿ ಕಂಡು ಬಂದ ಅರ್ಹ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬದ್ಧತೆಯಿಂದ ಕೆಲಸ ನಿರ್ವಹಿಸಿ: ಬಿಡುಗಡೆಗೊಂಡ ಜೀತದಾಳುಗಳು ಮತ್ತು ಗ್ರಾಮಾಂತರ ಪ್ರದೇಶದ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಜೊತೆಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳುಬದ್ಧತೆಯಿಂದ ತ್ವರಿತವಾಗಿ ಕೆಲಸ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಜೀತವಿಮುಕ್ತರ ಮಾಹಿತಿಯನ್ನು ಕಡ್ಡಾಯವಾಗಿ ನಿರ್ವಹಿಸಿ ಅವರವಿಳಾಸ, ಸಂಪರ್ಕ ಸಂಖ್ಯೆಗಳು, ಅವರಿಗೆ ನೀಡಿರುವ ಸೌಲಭ್ಯಗಳ ವಿವರಗಳನ್ನು ದಾಖಲಿಸಬೇಕು.ಜೀತದಿಂದ ಬಿಡುಗಡೆಗೊಂಡ ಕುಟುಂಬಗಳ ಬಗ್ಗೆನಿಗಾ ವಹಿಸಬೇಕು ಎಂದರು. ಅರ್ಹರಿಗೆ ಅನುದಾನ ತಲುಪಿಸಿ: ಜೀತ ವಿಮುಕ್ತರು ಮತ್ತು ಸಫಾಯಿ ಕರ್ಮಚಾರಿಗಳ ಕುರಿತು ಉಪನ್ಯಾಸನೀಡಿದ ಡೈರಕ್ಟರ್‌ ಮಾರ್ಗ ಇನ್ಸ್‌ಟ್ಯೂಟ್‌ನರಾಜೇಂದ್ರನ್‌ ಪ್ರಭಾಕರ್‌, ಜೀತ ವಿಮುಕ್ತರು ಮತ್ತುಅರ್ಹ ಸಫಾಯಿ ಕರ್ಮಚಾರಿಗಳ ಪುನರ್ವಸತಿಗಾಗಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಅನುದಾನ ಬಿಡುಗಡೆಮಾಡುತ್ತಿದ್ದು, ಅರ್ಹರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿದರು. ಯಾರೊಬ್ಬರೇ ಆಗಲಿ ಕುಟುಂಬಗಳನ್ನುಜೀತಕ್ಕಿರಿಸಿಕೊಂಡು ದುಡಿಸಿಕೊಳ್ಳಬಾರದು. ಕನಿಷ್ಠವೇತನ, ಮೂಲ ಸೌಕರ್ಯಗಳನ್ನು ನೀಡದಿರುವುದು. ಸಮಾನ ವೇತನ ಪಾವತಿಸದಿರುವುದು ಹಾಗೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿಸಿಕೊಳ್ಳುವುದು ಶಿಕ್ಷಾರ್ಹ. ಚರಂಡಿಯಂಥ ಅಪಾಯಕಾರಿ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ದೈಹಿಕವಾಗಿ ತೊಡಗಿಸಿಕೊಳ್ಳಬಾರದು. ಒಂದು ವೇಳೆ ಇಂಥಪ್ರಕರಣಗಳು ಕಂಡುಬಂದಲ್ಲಿ ಅಂಥವರ ವಿರುದ್ಧಕ್ರಿಮಿನಲ್‌ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆಗೆಗುರಿಪಡಿಸಬೇಕು ಎಂದು ಹೇಳಿದರು. ಸೌಲಭ್ಯದ ಕುರಿತು ಮಾಹಿತಿ: ಸರ್ಕಾರದಿಂದಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳು, ಸಹಾಯಧನ, ಸಾಲ ಸೌಲಭ್ಯ, ಸಂಪರ್ಕಿಸಬೇಕಾದ ಕಚೇರಿ, ಆರೋಗ್ಯಕ್ಕೆ ಸಂಬಂಧಿಸಿದ ಆಯುಷ್ಮಾನ್‌ ಭಾರತ ಯೋಜನೆಯ ಪ್ರಯೋಜನಾ ಪಡೆಯುವ ಬಗ್ಗೆ, ಬ್ಯಾಂಕ್‌ಗಳಿಂದ ಸಿಗುವ ಸಹಾಯಧನ, ಸಾಲಸೌಲಭ್ಯ ಕುರಿತು ಮಾಹಿತಿ ನೀಡಲಾಯಿತು.ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಡಿಬರುವ ವಿವಿಧ ನಿಗಮಗಳ ವತಿಯಿಂದ ದೊರೆಯುವ ವಿವಿಧ ಸವಲತ್ತುಗಳನ್ನು ಕಲ್ಪಿಸುವ ಸಂಬಂಧ ಜೀತ ವಿಮುಕ್ತರು ಮತ್ತು ಅರ್ಹ ಸಫಾಯಿಕರ್ಮಚಾರಿಗಳಿಂದ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಲಾಯಿತು. ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಧನರಾಜ್‌, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಸವಿತಾ, ಯೋಜನಾ ನಿರ್ದೇಶಕರು (ಡಿಆರ್‌ಡಿಎ) ಷಣ್ಮುಗಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸೋಮಶೇಖರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
2021/03/08 21:59:59
https://www.udayavani.com/district-news/mandya-news/provide-facility-to-safai-karmacharis
mC4
"ಆಟೋ ಚಾಲಕರ ಮಾನವೀಯ ಸೇವೆ ಶ್ಲಾಘನೀಯ ' | Udayavani – ಉದಯವಾಣಿ "ಆಟೋ ಚಾಲಕರ ಮಾನವೀಯ ಸೇವೆ ಶ್ಲಾಘನೀಯ ' ಕೆ.ಸಿ.ರೋಡ್‌: ರಕ್ತದಾನ ಶಿಬಿರ Team Udayavani, Apr 30, 2019, 6:40 AM IST ಉಳ್ಳಾಲ: ಪ್ರವಾಸಿಗರನ್ನು ಸ್ವಾಗತಿಸಿ ಆತ್ಮೀಯ ಸೇವೆ ನೀಡುವ ಆಟೋ ಚಾಲಕರು ಸಮಯ ಪ್ರಜ್ಞೆಯೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಮಾನವೀಯ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಎಸ್‌ವೈಎಸ್‌ ಕೆ.ಸಿ.ರೋಡ್‌ ಘಟಕಾಧ್ಯಕ್ಷ ಉಮರಬ್ಬ ಮಾಸ್ಟರ್‌ ಹೇಳಿದರು. ಕೆ.ಸಿ.ರೋಡು ಆಟೋ ಚಾಲಕ-ಮಾಲಕರ ಸಂಘ ಹಾಗೂ ಬ್ಲಿಡ್‌ ಹೆಲ್ಪ್ಕೇರ್‌ ಕರ್ನಾಟಕದ ಜಂಟಿ ಆಶ್ರಯದಲ್ಲಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸಹಭಾಗಿತ್ವದಲ್ಲಿ ರವಿವಾರ ಕೆ.ಸಿ.ರೋಡ್‌ನ‌ಲ್ಲಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನವನಾಗಿ ಹುಟ್ಟಿದ ಬಳಿಕ ಸೇವೆ ನೀಡದಿದ್ದರೆ ಮನುಷ್ಯ ಜೀವನವೇ ನಿಷ್ಪ್ರಯೋಜಕ ಎನಿಸುತ್ತದೆ. ರಕ್ತಕ್ಕೆ ಪರ್ಯಾಯ ಎನಿಸುವಂತದ್ದು ಯಾವುದೂ ಇಲ್ಲ. ಇದನ್ನು ಅರಿತುಕೊಂಡು ಆಟೋ ಚಾಲಕರು ಶಿಬಿರ ಹಮ್ಮಿಕೊಳ್ಳುವ ಮೂಲಕ ಸೌಹಾರ್ದ ತೋರಿಸಿದ್ದಾರೆ ಎಂದರು. ಎ.ಜೆ.ಆಸ್ಪತ್ರೆಯ ಡಾ| ನಿತಿನ್‌ ಆಚಾರ್ಯ ಉದ್ಘಾಟಿಸಿದರು. ಯುಎಸ್‌ಡಬ್ಲ್ಯುಒ ಅಧ್ಯಕ್ಷ ರಹೀಂ ಯು.ಬಿ.ಎಂ., ಬ್ಲಿಡ್‌ ಹೆಲ್ಪ್ಲೈನ್‌ ಪ್ರಯೋಜಕ ನವಾಝ್ ದೇರಳಕಟ್ಟೆ, ಗೌರವಾಧ್ಯಕ್ಷ ನಝೀರ್‌ ಹುಸೈನ್‌, ಸಮಾಜ ಸೇವಕ ಅಬ್ಟಾಸ್‌ ಉಚ್ಚಿಲ್‌, ಯಾಹ್ಯಾ ಕೆ.ಬಿ., ಎ.ಜೆ. ಆಸ್ಪತ್ರೆಯ ರಕ್ತ ಪೂರೈಕೆ ವಿಭಾಗದ ವ್ಯವಸ್ಥಾಪಕ ಗೋಪಾಲಕೃಷ್ಣ, ಫಯಾಝ್ ಅಲಿ ಬೈಂದೂರು, ಲತೀಫ್‌ ಕೈರಳಿ, ರವೂಫ್‌ ಬಂದರ್‌, ಕೆ.ಎಸ್‌. ಮುಹಮ್ಮದ್‌, ಸಂಚಾಲಕ ಸಂಶುದ್ದೀನ್‌ ಉಚ್ಚಿಲ್‌, ಮುಸ್ತಫಾ ಕೆ.ಸಿ.ರೋಡು ಮೊದಲಾದವರು ಉಪಸ್ಥಿತರಿದ್ದರು. ಕೆ.ಸಿ.ನಗರ ಮಸೀದಿಯ ಖತೀಬ್‌ ಮೌಲಾನ ಹನೀಫ್‌ ಸಖಾಫಿ ದುವಾ ನೆರವೇರಿಸಿದರು. ಸಲಾಂ ಉಚ್ಚಿಲ್‌ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಅಟೋ ಚಾಲಕರಾದ ಕೆ.ಎಚ್‌. ಮುಹಮ್ಮದ್‌, ಅಹ್ಮದ್‌ ಬಾವಾ, ಮಂಜಪ್ಪ, ಇಸ್ಮಾಯಿಲ್‌ ಹಾಗೂ ಅತಿಹೆಚ್ಚು ರಕ್ತದಾನ ಮಾಡಿದ ಹೈದರಾಲಿ, ಶರೀಫ್‌ ಮಾಡೂರು, ಮುಸ್ತಫಾ ಹಿದಾಯತ್‌ ನಗರ, ಜಾವೇದ್‌ ಕೆ.ಸಿ.ನಗರ ಸಮ್ಮಾನಿಸಲಾಯಿತು.
2022/05/21 07:05:11
https://www.udayavani.com/district-news/dakshina-kannada-news/auto-drivers-human-service-is-commendable
mC4
ಹಾಫೀಜ್ ಸಯೀದ್ ಮಾಹಿತಿ ಪಿಟಿಐಗೆ ಸೋರಿಕೆ: ತನಿಖೆಗೆ ಆಗ್ರಹಿಸಿ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Mar 17, 2019, 11:07 PM IST ಇಸ್ಲಾಮಾಬಾದ್, ಮಾ.17: ತನ್ನ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಕೋರಿ ಜಮಾತುದ್ದವಾದ ವರಿಷ್ಠ ಹಾಫೀಝ್ ಸಯೀದ್‌ನ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ಮಾಹಿತಿ ಭಾರತೀಯ ಸುದ್ದಿಸಂಸ್ಥೆಗೆ ಪಿಟಿಐಗೆ ಬಹಿರಂಗಪಡಿಸಿರುವುದಕ್ಕೆ ಪಾಕಿಸ್ತಾನವು ಸಿಡಿಮಿಡಿಗೊಂಡಿದೆ. ಪಿಟಿಐಗೆ ಈ ಮಾಹಿತಿ ಹೇಗೆ ಲಭ್ಯವಾಯಿತೆಂಬ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ, ಅದು ವಿಶ್ವಸಂಸ್ಥೆಗೆ ಪತ್ರ ಬರೆದಿದೆ. ವಿಶ್ವಸಂಸ್ಥೆಯಲ್ಲಿ ವಿಷಯವನ್ನು ಸುದ್ದಿಸಂಸ್ಥೆಯೊಂದು ಪ್ರಕಟಿಸಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ದೇಶವೊಂದು ಪತ್ರ ಬರೆದಿರುವ ಅಪರೂಪದ ಪ್ರಕರಣ ಇದೆನ್ನಲಾಗಿದೆ. ''ವಿಶ್ವಸಂಸ್ಥೆಯಲ್ಲಿನ ಪಾಕ್ ರಾಯಭಾರಿ ಮಲೀಹಾ ಲೋಧಿ ಅವರು ಕಳೆದ ವಾರ ವಿಸ್ವಸಂಸ್ಥೆಗೆ ಪತ್ರವೊಂದನ್ನು ಬರೆದು, ತನ್ನ ಹೆಸರನ್ನು ಜಾಗತಿಕ ಉಗ್ರರ ಪಟ್ಟಿಯಿಂದ ಕೈಬಿಡಬೇಕೆಂಬ ಹಾಫೀಝ್ ಸಯೀದ್ ಈ ತಿಂಗಳಾರಂಭದಲ್ಲಿ ಸಲ್ಲಿಸಿದ್ದ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ಕುರಿತಾದ ಮಾಹಿತಿಯನ್ನು ಭದ್ರತಾ ಮಂಡಳಿಯ 15 ಮಂದಿ ಸದಸ್ಯರ ಸಮಿತಿಯು ಹೇಗೆ ಭಾರತದ ಸುದ್ದಿಸಂಸ್ಥೆ ಪಿಟಿಐಗೆ ಒದಗಿಸಿತೆಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಬೇಕೆಂದು ಕೋರಿದ್ದಾರೆ'' ಎಂದು ಪಾಕ್ ಸರಕಾರದ ಮೂಲವೊಂದು ತಿಳಿಸಿದೆ. ಜಾಗತಿಕ ಉಗ್ರರ ಪಟ್ಟಿಯಿಂದ ಕೈಬಿಡಲು ಕೋರಿ ಹಾಫೀಝ್ ಸಯೀದ್ ಸಲ್ಲಿಸಿದ್ದ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ವರದಿಯನ್ನು ಪಿಟಿಐ ಮಾರ್ಚ್ 7ರಂದು ಪ್ರಕಟಿಸಿತ್ತು. ಆದಾಗ್ಯೂ ಮಲಿಹಾ ಅವರು ತನ್ನ ಪತ್ರದಲ್ಲಿ ಪಿಟಿಐಯನ್ನು ಭಾರತದ ಅಧಿಕೃತ ಸುದ್ದಿಸಂಸ್ಥೆ ಎಂಬುದಾಗಿ ಬಣ್ಣಿಸಿದ್ದಾರೆ. ಮಾಜಿ ಪತ್ರಕರ್ತೆಯೂ ಆಗಿರುವ ಲೋಧಿ ಅವರು ತನ್ನ ಪತ್ರದ ಜೊತೆ ಪಿಟಿಐ ವರದಿಯನ್ನು ಒಳಗೊಂಡ ಸುದ್ದಿ ತುಣುಕುಗಳನ್ನು ಕೂಡಾ ಲಗತ್ತಿಸಿದ್ದಾರೆ.
2019/08/22 12:13:18
http://www.varthabharati.in/article/national/182665
mC4
01706. ಪ್ರಿಯವೆ ನೀ ನನಗೆ…! – ಮನದಿಂಗಿತಗಳ ಸ್ವಗತ Posted on ಏಪ್ರಿಲ್ 30, 2018 Author ನಾಗೇಶ ಮೈಸೂರುCategories ನಾಗೇಶ-ಮೈಸೂರು-ಬ್ಲಾಗ್, Nagesha Blog, nagesha-mysore-blog, Poem_ಕವನTags ನನಗೆ, ನಾಗೇಶ, ನಾಗೇಶ ಮೈಸೂರು, ನಾಗೇಶಮೈಸೂರು, ನೀ, ಪ್ರಿಯವೆ, ಮೈಸೂರು, mysore, Nagesha, Nagesha Mysore, nageshamysore
2020/03/31 16:43:53
https://nageshamysore.wordpress.com/2018/04/30/01706-%E0%B2%AA%E0%B3%8D%E0%B2%B0%E0%B2%BF%E0%B2%AF%E0%B2%B5%E0%B3%86-%E0%B2%A8%E0%B3%80-%E0%B2%A8%E0%B2%A8%E0%B2%97%E0%B3%86/
mC4
ಕಲರವ Archives - Page 3 of 3 - ConnectKannada.com ಕಲರವ Archives - Page 3 of 3 - ConnectKannada.com ಕಲರವ | KALARAVA ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ಎಮ್ಮೆ,ದನಕರು,ಕುರಿಗಳು ಹೀಗೆ ಹಿಂಡು ಹಿಂಡೇ ಸಾಕು ಪ್ರಾಣಿಗಳಿದ್ದವು. ಹಾಗಾಗಿ ಮನೆಯ ಮಕ್ಕಳಿಗೆ ಇವುಗಳೆಲ್ಲಾ ಕುಟುಂಬದ ಸದಸ್ಯರುಗಳೇ ಆಗಿದ್ದವು. ಅವುಗಳೂ ಅಷ್ಟೆ, ನಮ್ಮನ್ನು ಕಂಡರೆ ಸಾಕು ಅಷ್ಟೇ ಅಕ್ಕರೆ ... ಕಲರವ | KALARAVA 'ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು' ಬೆಳಿಗ್ಗೆಯಿಂದ ಈ ಸಾಲು ನಾಲಗೆಯಲ್ಲಿ ಕುಣಿಯುತ್ತಿತ್ತು… ಅದಕ್ಕೆ ನೆಪವಾಗಿದ್ದು ಮುಂಜಾನೆ ಕಂಡ ಥಳಥಳಿಸುತ್ತಿರುವ ಪೂರ್ಣಚಂದ್ರ. ಬಾಲಭಾಸ್ಕರ ಇನ್ನೂ ತನ್ನ ಹೊನ್ನಕರಗಳನ್ನು ಚಾಚಿರಲಿಲ್ಲ..ಮಬ್ಬು ಬೆಳಕಿದ್ದರೂ ಕ್ಯಾಮರಾ ... ಕಲರವ | KALARAVA ಊರಿನಿಂದ ಫರ್ಲಾಂಗಿನಷ್ಟು ದೂರದಲ್ಲಿ ಕಲ್ಲು ಹೊಲ ಅಂತ ಕರೆಯುವ ನಮ್ಮದೊಂದು ಹೊಲವಿತ್ತು. ನಾನು ನೋಡುವ ಕಾಲಕ್ಕೆ ಆ ಹೊಲದಲ್ಲಿ ಹಾಗೆ ಕರೆಯಬಹುದಾದಂತಹ ಕಲ್ಲುಗಳಿರಲಿಲ್ಲ. ಹಿಂದೆ ನಮ್ಮ ತಾತನೋ, ಇಲ್ಲಾ ಮುತ್ತಾತನೋ ಅದನ್ನು ...
2017/11/19 14:02:39
http://connectkannada.com/category/hungama/kalarava/page/3/
mC4
ಸುಂದರ್-ಶಾರ್ದೂಲ್ ಬೊಂಬಾಟ್ ಆಟ: ಭಾರತ 336, ಆಸ್ಟ್ರೇಲಿಯಾ 54 ರನ್ ಮುನ್ನಡೆ - HosadiganthaWeb ಸುಂದರ್-ಶಾರ್ದೂಲ್ ಬೊಂಬಾಟ್ ಆಟ: ಭಾರತ 336, ಆಸ್ಟ್ರೇಲಿಯಾ 54 ರನ್ ಮುನ್ನಡೆ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ದಿಟ್ಟ ಹೋರಾಟದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಮೂರನೇ ದಿನದಾಟದಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ ಸೆಡ್ಡು ಹೊಡೆದಿದೆ. ನಿರ್ಣಾಯಕ ಪಂದ್ಯದಲ್ಲಿ 2 ವಿಕೆಟ್‌ಗೆ 62 ರನ್‌ಗಳಿಂದ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, ದಿನದಾಟ ಮುಕ್ತಾಯಕ್ಕೆ ಸ್ವಲ್ಪ ಸಮಯವಿದ್ದಾಗ 336 ರನ್‌ಗಳಿಗೆ ಆಲೌಟ್ ಆಯಿತು.ದರಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 33 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ತಂಡ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದು, ಒಟ್ಟು 54 ರನ್ ಮುನ್ನಡೆಯಲ್ಲಿದೆ. ಭಾರತ ತಂಡ ಅಗ್ರ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಳೆದುಕೊಂಡು ಭಾರಿ ಹಿನ್ನಡೆ ಕಾಣುವ ಭೀತಿ ಎದುರಿಸುತ್ತಿದ್ದಾಗ ಶಾರ್ದೂಲ್ ಠಾಕೂರ್67 ರನ್, 115 ಎಸೆತ, 9 ಬೌಂಡರಿ, 2 ಸಿಕ್ಸರ್)-ವಾಷಿಂಗ್ಟನ್ ಸುಂದರ್(62 ರನ್, 144 ಎಸೆತ, 7 ಬೌಂಡರಿ, 1 ಸಿಕ್ಸರ್) ಜೋಡಿ 7ನೇ ವಿಕೆಟ್‌ಗೆ 123 ರನ್ ಸೇರಿಸಿತು. Previous articleರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಸಿಎಂ ತಕ್ಷಣ ಶ್ವೇತಪತ್ರ ಹೊರಡಿಸಬೇಕು: ಮಾಜಿ ಡಿಸಿಎಂ ಜಿ. ಪರಮೇಶ್ವರ್
2022/06/30 09:52:55
https://hosadigantha.com/%E0%B2%B8%E0%B3%81%E0%B2%82%E0%B2%A6%E0%B2%B0%E0%B3%8D-%E0%B2%B6%E0%B2%BE%E0%B2%B0%E0%B3%8D%E0%B2%A6%E0%B3%82%E0%B2%B2%E0%B3%8D-%E0%B2%AC%E0%B3%8A%E0%B2%82%E0%B2%AC%E0%B2%BE%E0%B2%9F%E0%B3%8D/
mC4
ಭಾರತ ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎಲ್ಲಿದೆಯೆಂದು ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ.. – HalliHudugaru December 18, 2017 By Nimma Sulochana 267 ನೀವ್​ ಅಲ್ಲಿಗೆ ಹೋದ್ರೆ ಅಲ್ಲಿನ ಸಿಬ್ಬಂದಿ ಬಂದು ನಿಮಗೆ ಫುಡ್​ ಸಪ್ಲೈ ಮಾಡಲ್ಲ. ಬದಲಿಗೆ ನಿಮಗೆ ಬೇಕಾದ ವೆರೈಟಿ ವೆರೈಟಿ ಫುಡ್​ ಸಪ್ಲೈ ಮಾಡೋದು ರೋಬೋಗಳು. ಇದು ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎನ್ನಲಾಗ್ತಿದೆ. ವೆಂಕಟೇಶ್ ರಾಜೇಂದ್ರನ್ ಹಾಗೂ ಕಾರ್ತಿಕ್ ಕನ್ನನ್ ಸೇರಿ ಈ ರೆಸ್ಟೋರೆಂಟ್ ತೆರೆದಿದ್ದಾರೆ. ಪ್ರತಿ ಟೇಬಲ್ ಗೂ ಟ್ಯಾಬ್ ಇದೆ. ಈ ಟ್ಯಾಬ್ ಮೂಲಕ ಗ್ರಾಹಕರು ಆಹಾರವನ್ನು ಆರ್ಡರ್ ಮಾಡಬೇಕು. ಅದು ನೇರವಾಗಿ ಕಿಚನ್ ತಲುಪುತ್ತದೆ. ತಕ್ಷಣ ನೀಮಗೆ ಬೇಕಾದ ಫುಡ್​ ನಿಮ್ಮ ಟೇಬಲ್​ ಬಳಿ ಬರುತ್ತೆ.ವಿದೇಶಗಳಲ್ಲಿ ಮನುಷ್ಯರ ತರ ರೋಬೋಗಳು ಹೋಟೆಲ್​ನಲ್ಲಿ ಕೆಲಸ ಮಾಡೋದನ್ನು ಕೇಳಿದ್ದೀವಿ..ಆದ್ರೆ ನಮ್ಮ ಚೆನ್ನೈಗೂ ಇಂತಹ ರೋಬೋಟ್​ಗಳು ಎಂಟ್ರಿಕೊಟ್ಟಿವೆ. ಸೆನ್ಸಾರ್​ ಮೂಲಕ ಕೆಲಸ ಮಾಡುವ ಈ ರೋಬೋಗಳು ಪ್ರತೀ ಗ್ರಾಹಕರ ಬಳಿ ಹೋಗಿ ಫುಡ್​ ಸಪ್ಲೈ ಮಾಡುತ್ತವೆ.. ಹಸಿದಿದ್ದ ಗ್ರಾಹಕರಿಗೆ ಆತ್ಮೀಯವಾಗಿ ಆಹಾರ ನೀಡುತ್ತವೆ. ಆಹಾರ ಸಿದ್ಧವಾದ ಮೇಲೆ ರೋಬೋಟ್ ಗ್ರಾಹಕರಿಗೆ ಆಹಾರವನ್ನು ಸರ್ವ್ ಮಾಡುತ್ತದೆ. ಇಲ್ಲಿರುವ ಎಲ್ಲ ರೋಬೋಟ್ ಗಳು ಬ್ಯಾಟರಿ ಮೂಲಕ ಕೆಲಸ ಮಾಡುತ್ತವೆ. ಯಾರಾದ್ರೂ ರೋಬೋಟ್ ದಾರಿಗೆ ಅಡ್ಡ ಬಂದ್ರೆ ಅದು ಅಲ್ಲೇ ನಿಲ್ಲುತ್ತದೆ. ದೇಶದಾದ್ಯಂತ ಈ ರೆಸ್ಟೋರೆಂಟ್ ಬಗ್ಗೆ ಚರ್ಚೆಯಾಗ್ತಿದೆ. ಹಾಗಾಗಿ ಮಾಲೀಕರು ಇನ್ನೂ ಅನೇಕ ಕಡೆ ಶಾಖೆ ತೆರೆಯುವ ತಯಾರಿಯಲ್ಲಿದ್ದಾರೆ.
2020/10/01 01:52:35
http://nammakolar.com/%E0%B2%AD%E0%B2%BE%E0%B2%B0%E0%B2%A4-%E0%B2%A6%E0%B3%87%E0%B2%B6%E0%B2%A6-%E0%B2%AE%E0%B3%8A%E0%B2%A6%E0%B2%B2-%E0%B2%B0%E0%B3%8B%E0%B2%AC%E0%B3%8B%E0%B2%9F%E0%B3%8D-%E0%B2%B0%E0%B3%86%E0%B2%B8/
mC4
ವಿಂಡೀಸ್‌- ಪಾಕ್‌ ಟೆಸ್ಟ್‌ ಹಣಾಹಣಿ | West Indies - Pak tie - Kannada Oneindia 11 min ago ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ ವಿಂಡೀಸ್‌- ಪಾಕ್‌ ಟೆಸ್ಟ್‌ ಹಣಾಹಣಿ ಜಾರ್ಜ್‌ಟೌನ್‌ : ವೆಸ್ಟಿಂಡೀಸ್‌ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೂರು ಟೆಸ್ಟ್‌ಪಂದ್ಯಗಳ ಕ್ರಿಕೆಟ್‌ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಮೂರು ರಾಷ್ಟ್ರಗಳು ಭಾಗವಹಿಸಿದ್ದ ಕೇಬಲ್‌ ಮತ್ತು ವೈರ್‌ಲೆಸ್‌ ಸರಣಿಯ ಫೈನಲ್ಸ್‌ನಲ್ಲಿ ವೆಸ್ಟಿಂಡೀಸ್‌ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದಿರುವ ಪಾಕಿಸ್ತಾನ ಟೆಸ್ಟ್‌ ಸರಣಿಯನ್ನೂ ತನ್ನದಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ವೆಸ್ಟಿಂಡೀಸ್‌ ತ್ರಿಕೋಣ ಸರಣಿಯಲ್ಲಾದ ಸೋಲಿ-ನ ಸೇಡು ತೀರಿ-ಸಿ-ಕೊ-ಳ್ಳು-ವ ಆತುರದಲ್ಲಿದೆ. ಪಾಕ್‌ ತಂಡಕ್ಕೆ ಗಾಯಾಳು ಆಟಗಾರರದ್ದೇ ಸಮಸ್ಯೆ. ತಂಡದ ಪ್ರಮುಖ ಬೌಲರ್‌, ಬ್ಯಾಟ್ಸ್‌ಮನ್‌ಗಳು ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಆರಂಭ ಆಟಗಾರ ಸಯೀದ್‌ ಅನ್ವರ್‌ ಮಂಡಿ ನೋವಿನ ಕಾರಣ ಮೊದಲ ಟೆಸ್ಟಿನಲ್ಲಿ ಆಡುತ್ತಿಲ್ಲ. ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಶೋಯಿಬ್‌ ಅಖ್ತರ್‌ ಮತ್ತು ಇಂಜಮಾಮ್‌ ಗಾಯಾಳುಗಳ ಪಟ್ಟಿಯಲ್ಲಿದ್ದು, ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನ. ಗಾಯದ ಮೇಲೆ ಬರೆ ಎಳೆದಂತೆ ಆಲ್‌ರೌಂಡರ್‌ ಅಬ್ದುಲ್‌ ರಜಾಕ್‌ ಕೂಡ ಮಂಗಳವಾರದಂದು ಅಭ್ಯಾಸದಲ್ಲಿ ತೊಡಗಿದ್ದಾಗ ಗಾಯಗೊಂಡಿದ್ದಾರೆ. ವೈದ್ಯರು ರಜಾಕ್‌ಗೆ ವಿಶ್ರಾಂತಿ ಸೂಚಿಸಿದ್ದಾರೆ. ವೆಸ್ಟಿಂಡೀಸ್‌ ತಂಡದಲ್ಲಿ ಗಾಯಾಳುಗಳ ಹಾವಳಿ ಇಲ್ಲದಿದ್ದರೂ, ವಿಂಡೀಸ್‌ ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಿರತೆ ಎಂಬುದೇ ಇಲ್ಲ. ಬೌಲರ್‌ಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾಲ್ಷ್‌ , ಆ್ಯಂಬ್ರೋಸ್‌ನಂಥ ಹಳಬರ ಜೊತೆಗೆ ಯುವಕರಾದ ಧಿಲ್ಲಾನ್‌, ಕಿಂಗ್‌, ರೋಸ್‌ ಉತ್ತಮವಾಗಿ ಬೌಲ್‌ ಮಾಡುತ್ತಿದ್ದಾರೆ. ವಿಂಡೀಸ್‌ ಪಂದ್ಯ ಗೆಲ್ಲ ಬೇಕಿದ್ದಲ್ಲಿ ಬೌಲರ್‌ಗಳು ವಿಜೃಂಭಿಸುವುದು ಅಗತ್ಯ.
2020/08/12 10:02:10
https://kannada.oneindia.com/news/2000/05/05/westpak.html
mC4
ದುನಿಯಾ ವಿಜಯ್‌ ವಿರುದ್ಧ ಪಾನಿಪುರಿ ಕಿಟ್ಟಿ ದೂರು | Udayavani – ಉದಯವಾಣಿ Team Udayavani, Sep 25, 2018, 11:13 AM IST ಅಪಹರಣ ಹಾಗೂ ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ ನಟ "ದುನಿಯಾ' ವಿಜಯ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷ್ಣಮೂರ್ತಿ (ಕಿಟ್ಟಿ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ ಲಿಖೀತ ದೂರು ನೀಡಿದ್ದಾರೆ.ಆ ದೂರಿನಲ್ಲಿ ವಿವರಿಸಿರುವ ಪಾನಿಪುರಿ ಕಿಟ್ಟಿ, "ನಾನು ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾಗಿದ್ದು, ಚಿತ್ರರಂಗದಲ್ಲಿ ಪಾನಿಪುರಿ ಕಿಟ್ಟಿ ಎಂದೇ ಚಿರಪರಿಚಿತನಾಗಿರುತ್ತೇನೆ. ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಸುಮಾರು 20 ವರ್ಷಗಳಿಂದ "ಮಜಲ್‌ ಪ್ಲಾನೆಟ್‌' ಎಂಬ ಜಿಮ್‌ ನಡೆಸುತ್ತಿದ್ದು, ನನ್ನ ಜಿಮ್‌ನಲ್ಲಿ ಚಿತ್ರರಂಗದ ಹಲವು ಕಲಾವಿದರು, ಸಾರ್ವಜನಿಕರು ಉತ್ತಮ ತರಬೇತಿ ಹೊಂದುವ ಮೂಲಕ ಜಿಮ್‌ ಪರಿಚಯಗೊಂಡಿದೆ. ನನ್ನ ಜಿಮ್‌ ಸಂಸ್ಥೆಯ ಬಗ್ಗೆ ಹಲವು ಕಲಾವಿದರು ಮತ್ತು ಚಿತ್ರರಂಗದವರ ಉತ್ತಮ ಅಭಿಪ್ರಾಯವಿದೆ. ನಾನು ನಡೆಸುತ್ತಿರುವ ಜಿಮ್‌ ಸಂಸ್ಥೆಗೆ ಇದುವರೆಗೂ ಯಾವುದೇ ರೀತಿಯ ಕಪ್ಪು ಚುಕ್ಕೆ ಕಂಡು ಬಂದಿಲ್ಲ. ಆದರೆ, ನಟ ದುನಿಯಾ ವಿಜಯ್‌ ಅವರು ನನ್ನ ಅಣ್ಣನ ಮಗನನ್ನು ಅಪಹಿರಸಿ, ಅವರ ಮೇಲೆ ದೈಹಿಕ ಹಲ್ಲಿ ನಡೆಸಿದ್ದಾರೆ. ಇದರಿಂದ ನನ್ನ ಅಣ್ಣನ ಮಗ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿದಾಖಲಾಗಿದ್ದಾರೆ. ಈ ಪ್ರಕರಣದಿಂದ ನನ್ನ ಜೀವನದಲ್ಲಿ ಕಪ್ಪು ಚುಕ್ಕೆ ಉಂಟಾಗಿ ನನ್ನ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವುದರಿಂದ ನನ್ನ ಬಳಿ ತರಬೇತಿಗೆ ಬರುವ ಉದಯೋನ್ಮುಖ ಕಲಾವಿದರು, ನನ್ನ ಬಗ್ಗೆ ಯೋಚಿಸುವಂತಾಗಿದೆ. ಇದೇ ರೀತಿ ಈ ಹಿಂದೆಯೂ ದುನಿಯಾ ವಿಜಯ್‌ ಅವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಪ್ರಕರಣದಲ್ಲಿ ನಾನು ಅಮಾಯಕನಾಗಿದ್ದು, ನನ್ನ ಮೇಲೆ ಯಾವುದೇ ತಪ್ಪು ಕಂಡುಬಂದಲ್ಲಿ, ನನ್ನ ಮೇಲೂ ತಾವು ಕ್ರಮ ಜರುಗಿಸಬಹುದು. ಆದ್ದರಿಂದ ವಾಣಿಜ್ಯ ಮಂಡಳಿಯು ನಟ ದುನಿಯಾ ವಿಜಯ್‌ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು' ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ, ಮುಂದಿನ ದಿನಗಳಲ್ಲಿ "ದುನಿಯಾ' ವಿಜಯ್‌ ಅವರನ್ನು ಮಂಡಳಿಗೆ ಕರೆಸಿಕೊಂಡು ಮಾತುಕತೆ ನಡೆಸುವುದಾಗಿ ಮಂಡಳಿಯ ಕಾರ್ಯದರ್ಶಿ ಭಾ.ಮ.ಹರೀಶ್‌ "ಉದಯವಾಣಿ'ಗೆ ತಿಳಿಸಿದ್ದಾರೆ.
2020/02/29 10:53:15
https://www.udayavani.com/cinema/balcony-sandalwood-news/panipuri-kitty-complains-against-duniya-vijay
mC4
ಗಿರಿ-ಶಿಖರ: February 2011 Posted by ಗಿರೀಶ್.ಎಸ್ at Monday, February 28, 2011 5 comments: Links to this post ಹೋಟೆಲಿನಲ್ಲಿ ,ಮ್ಯಾನೇಜರ್ ಆಗುವ ಅರ್ಹತೆ ಉಳ್ಳ ಹುಡುಗ ಮಾಣಿಯಾಗಿ ಅನುಭವಿಸಿದ ಕಥೆ. ಮಲೆನಾಡಿನ ಒಂದು ಹಳ್ಳಿಯ ಸ್ವಾಭಿಮಾನಿ ಹುಡುಗ..ತನ್ನ ಡಿಗ್ರಿ ಮುಗಿಸಿ ಬೃಹತ್ ಬೆಂಗಳೂರಿಗೆ ಕೆಲಸ ಹುಡುಕಲು ಬರುತ್ತಾನೆ.ಬಂದವನೇ ತನ್ನ ನೆಂಟರ ಮನೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಆಶ್ರಯ ಪಡೆಯುತ್ತಾನೆ.ತನಗೆ ಇಷ್ಟ ಇಲ್ಲದಿದ್ದರೂ ತಮ್ಮ ಮನೆಯ ಹಣಕಾಸಿನ ತೊಂದರೆ ಮತ್ತು ತನ್ನ ತಂದೆ ತಾಯಿಯ ಬಲವಂತದಿಂದಾಗಿ ತನ್ನ ನೆಂಟರ ಮನೆಯಲ್ಲಿ ಕೆಲಸ ಸಿಗುವವರೆಗೂ ಇರಲು ಒಪ್ಪಿಕೊಳ್ಳುತ್ತಾನೆ. ೨-೩ ತಿಂಗಳಾದರೂ ಎಲ್ಲೂ ಕೆಲಸ ಸಿಗದೇ ಬಹಳ ನಿರಾಸೆಗೊಂಡಿರುತ್ತಾನೆ.ಹಾಗೆ ಒಂದು ದಿನ ಇನ್ನೊಂದು ಕಂಪೆನಿಯಿಂದ ಸಂದರ್ಶನಕ್ಕೆ ಕರೆ ಬಂದಾಗ "ಏನಾದ್ರು ಮಾಡಿ ಇಲ್ಲಿ ಕೆಲಸ ಸಿಗಲೇಬೇಕು " ಅಂತ ಪಣ ತೊಟ್ಟು ಹೊರಡುತ್ತಾನೆ. ಅಷ್ಟೊತ್ತಿಗಾಗಲೇ ತಾನು ಇದ್ದ ಮನೆಯಲಿ ತುಂಬಾ ನೋವು ಅನುಭವಿಸಿರುತ್ತಾನೆ ,ಕಾರಣ ಆ ಮನೆಯಲ್ಲಿದ್ದ ತನ್ನ ವಯಸ್ಸಿನ ಇನ್ನೊಬ್ಬ ಹುಡುಗ.ಅವನಿಗೆ ಈ ಹುಡುಗ ಆ ಮನೆಯಲ್ಲಿ ಇರುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ,ಆದ್ದರಿಂದ ಒಂದು ರೀತಿಯ ಮಾನಸಿಕ ಹಿಂಸೆ ಕೊಡುತ್ತಿರುತ್ತಾನೆ.ಅದರ ಜೊತೆಗೆ ತನ್ನ ಮನೆಯಲ್ಲಿ ದುಡ್ಡಿನ ಕಷ್ಟ.ಡಿಗ್ರಿ ಮುಗಿದರೂ ತನ್ನ ಖರ್ಚಿಗೆ ಮನೆಯಲ್ಲಿ ಇನ್ನೂ ದುಡ್ಡು ಕೇಳಬೇಕೆ? ಎಂಬ ಪ್ರಶ್ನೆ.ಈ ಕಾರಣದಿಂದ ತುಂಬಾ ನೊಂದ ಈ ಹುಡುಗ ಆದಷ್ಟು ಬೇಗ ಎಲ್ಲಾದರೂ ಸರಿ ಎಂತಾದರು ಸರಿ ಒಂದು ಕೆಲಸ ಹುಡುಕಿಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಆದರೆ ಅವನ ದುರಾದೃಷ್ಟ ಆ ಕಂಪೆನಿಯಲ್ಲಿ ಕೂಡ ಕೆಲಸ ಸಿಗುವುದಿಲ್ಲ. ಸೂರ್ಯನ ಕಿರಣದಂತೆ ಮಿನುಗಬೇಕಾದಂತಹ ಈ "ಕಿರಣ " ಎಂಬ ಹುಡುಗ ಬಹಳ ಹತಾಶೆಗೊಳ್ಳುತ್ತಾನೆ.ಈ ಬೇಸರದಿಂದ ತನ್ನ ಊರಿನವರೆ ಆದ ತಮ್ಮ ಕುಟುಂಬದ ಆಪ್ತರೊಬ್ಬರ ಆಫೀಸಿಗೆ ಹೋಗುತ್ತಾನೆ,ಅವರಿಗೆ ಈ ಹುಡುಗ ತುಂಬಾ ದಿನದಿಂದ ಕೆಲಸ ಹುಡುಕುತ್ತಿದ್ದ ವಿಷಯ ಗೊತ್ತಿದ್ದರಿಂದ,ಆ ಹುಡುಗನ ಮನೆಯ ಪರಿಸ್ಥಿತಿ ತಿಳಿದಿದ್ದರಿಂದ ಕಿರಣನನ್ನು ತಮ್ಮ ಆಫೀಸಿನ ಬಳಿಯ ಒಂದು ಹೋಟೆಲಿನಲ್ಲಿ ಕೆಲಸ ಕೊಡಿಸಿದರು.ಹೇಗೂ ಬೇರೆ ಯಾವುದಾದರು ಕಂಪೆನಿಯಲ್ಲಿ ಸಿಗುವವರೆಗೂ ಇಲ್ಲೇ ಇರು ,ಮನೆಯಲ್ಲಿ ದುಡ್ಡು ಕೇಳುವುದು ತಪ್ಪುತ್ತದೆ ,ನಿನಗೂ ಖರ್ಚಿಗೆ ಆಗುತ್ತೆ ಅಂತ ಹೇಳಿ ಈ ಹುಡುಗನನ್ನು ಆ ಹೋಟೆಲಿನ ಓನರ್ ಹತ್ತಿರ ಕರೆದುಕೊಂಡು ಹೋಗುತ್ತಾರೆ.ಅವರೂ ಕೂಡ ಇವರ ಮಾತಿಗೆ ಸಮ್ಮತಿಸಿ ಆ ಹುಡುಗನಿಗೆ ತನ್ನ ಲಗೆಜನ್ನು ಮಾರನೆಯ ದಿನ ತಂದು ಕೆಲಸಕ್ಕೆ ಸೇರಿಕೊಳ್ಳಲು ಹೇಳಿ ಕಳುಹಿಸುತ್ತಾರೆ. ಡಿಗ್ರಿ ಮುಗಿಸಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರುವುದು ಅಷ್ಟೊಂದು ತರವಲ್ಲ ಎನಿಸಿತಾದರು ಒಲ್ಲದ ಮನಸಿನಿಂದ ಕೆಲಸಕ್ಕೆ ಬರಲು ಒಪ್ಪಿಕೊಂಡ ಕಿರಣನಿಗೆ ಮುಂದೇನು ಮಾಡುವುದು ಎಂದು ಬಹಳ ಕಾಡ ತೊಡಗಿತು.ಆದರು ಮಾರನೆಯ ದಿನ ತಾನು ಹೋಟೆಲಿನಲ್ಲಿ ಕೆಲಸಕ್ಕೆ ಸೇರುತ್ತಿದ್ದೇನೆ ಎಂಬ ವಿಷಯವನ್ನು ಯಾರಿಗೂ ತಿಳಿಸದೇ ,ತಾನು ಇದ್ದ ನೆಂಟರ ಮನೆಯಲ್ಲಿ ಊರಿಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ ,ತನ್ನ ತಂದೆ ತಾಯಿಗೂ ಇದನ್ನು ಹೇಳದೆ ತನ್ನ ಪಾಲಿಗೆ ನರಕವಾದ ಹೋಟೆಲ್ ಎಂಬ ಲೋಕಕ್ಕೆ ಬರುತ್ತಾನೆ.ತನ್ನ ಸ್ವಾಭಿಮಾನಕ್ಕೆ ದಕ್ಕೆ ಬರದಹಾಗೆ ಇರುತ್ತಾನೆ. ಅಲ್ಲಿ ಅವ್ನ ಕೆಲಸ ಬಿಲ್ ಮಾಡುವುದು ಮತ್ತು ದಿನದ ಕೊನೆಯಲ್ಲಿ ಅದರ ಲೆಕ್ಕವನ್ನು ತೋರಿಸುವುದು. ಮೊದಲ ದಿನ ಆ ಬಿಲ್ಲಿಂಗ್ ಸಾಫ್ಟ್ವೇರ್ ಬಗ್ಗೆ ಅಲ್ಲಿದ್ದ ಒಬ್ಬ ವೇಟರ್ ಹತ್ತಿರ ತಿಳಿದುಕೊಂಡ ಈ ಕಿರಣನಿಗೆ ಏನೋ ಒಂದು ರೀತಿಯ ಚಂಚಲತೆ ಇನ್ನೂ ಕಾಡುತಿತ್ತು.ಒಂದೆರಡು ದಿನ ಹೀಗೆ ಬಿಲ್ಲಿಂಗ್ ಮಾಡುತ್ತಾ ರಾತ್ರಿ ಅದರ ಲೆಕ್ಕವನ್ನು ಅಚ್ಚುಕಟ್ಟಾಗಿ ತೋರಿಸುತ್ತಾನೆ.೨ ದಿನ ಆದರು ಮನೆಯಲ್ಲಿ ತಾನು ಹೋಟೆಲಿನಲ್ಲಿ ಕೆಲಸ ಮಾಡುತ್ತಿರುವ ವಿಷಯ ತಿಳಿಸಿಲ್ಲ.ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಗೊಂದಲ ಮನಸಿನಲ್ಲಿ.ಹೀಗೆಲ್ಲ ಇರುವಾಗ ಆ ಹುಡುಗನಿಗೆ ನಿದ್ರೆ ಎಲ್ಲಿಂದ ಬರಬೇಕು.ಆಗೂ ಹೇಗೂ ಎರಡು ದಿನ ಕಳೆಯುತ್ತಾನೆ. ನಂತರ ಶುರು ಆಯಿತು ಮ್ಯಾನೇಜರ್ ಮತ್ತು ಓನರ್ ನಿಂದ ಕಿರಿಕಿರಿ. "ನಿನ್ನದು ಬರಿ ಬಿಲ್ ಮಾಡುವುದಷ್ಟೇ ಕೆಲಸ ಅಲ್ಲ ,ಹೋಗಿ ಗಿರಾಕಿಗಳ ಹತ್ತಿರ ಏನೇನು ಬೇಕು ಅಂತ ಆರ್ಡರ್ ತಗೊಂಡು ವೇಟರ್ ಗೆ ನೀನೆ ಚೀಟಿ ಕೊಡಬೇಕು " ಅಂತ ದಬಾಯಿಸುವುದಕ್ಕೆ ಶುರು ಮಾಡುತ್ತಾರೆ. ಮೂರನೆ ದಿನ ಸ್ವಲ್ಪ ಬದಲಾವಣೆ ಆಯಿತು ಅವನ ಕೆಲಸದಲ್ಲಿ,ಸ್ವಲ್ಪ ಜವಾಬ್ದಾರಿ ಹೆಚ್ಚಾಯಿತು.ಹಾಗೆ ಹಿಂಸೆಯೂ ಆಗುತಿತ್ತು ಆ ಹುಡುಗನಿಗೆ. ಇನ್ನೇನ್ ಮಾಡೋದು,ಗ್ರಹಚಾರ ಕೆಟ್ಟಾಗ ಇಂಥ ಪರಿಸ್ಥಿತಿ ಅನುಭವಿಸಬೇಕು ಅಂತ ಅದಕ್ಕೂ ಒಪ್ಪಿಕೊಂಡು ಆರ್ಡರ್ ತೆಗೆದುಕೊಳ್ಳಲು ಶುರು ಮಾಡುತ್ತಾನೆ ಅವನು . ಈ ಕಿರಿಕಿರಿಯ ಒಂದೆರಡು ದಿನಗಳ ನಂತರ ಒಂದು ಭಾನುವಾರ ಅಕಸ್ಮಾತ್ತಾಗಿ ತನ್ನ ಕಾಲೇಜಿನ ಇಬ್ಬರು ಗೆಳೆಯರು ಆ ಹೋಟೆಲ್ಲಿಗೆ ಕಾಫಿ ಕುಡಿಯಲು ಬರುತ್ತಾರೆ.ಅವರೂ ಕೂಡ ಈ ಹುಡುಗನ ಹಾಗೆ ಕೆಲಸ ಹುಡುಕಲು ಬೆಂಗಳೂರಿಗೆ ಬಂದು ಬೇರೆ ಕಡೆ ಕೆಲಸ ಮಾಡುತ್ತಿರುತ್ತಾರೆ.ಅವನ ಅದೃಷ್ಟಕ್ಕೆ ಆ ಸಮಯದಲ್ಲಿ ಅವನು ಕೌಂಟರ್ ಬಳಿ ಇರಲಿಲ್ಲ. ಆ ಇಬ್ಬರು ಸ್ನೇಹಿತರು ಇವನನ್ನು ನೋಡಿದ್ದೇ ತಡ "ಏ ಏನ್ ಮಚ್ಚಾ, ಏನ್ ಇಲ್ಲಿ ?ಏನ್ ಸಮಾಚಾರ ?ಹೇಗಿದೆ ಜೀವನ ?"ಅಂತ ಮಾತಿಗಿಳಿಯುತ್ತಾರೆ.ಪಾಪ ಅವರಿದೆ ಏನ್ ಗೊತ್ತು ಇವನ ಸ್ಥಿತಿ. ಆಗ ಕಿರಣನ ಮನಸಿನಲ್ಲಿ ಆದಂತಹ ಗೊಂದಲ ಒಂದೆರಡಲ್ಲ.ಮೊದಲನೆಯದು ತಾನು ಇಲ್ಲಿ ಕೆಲಸ ಮಾಡುತ್ತಿರುವ ವಿಷಯ ಅವರಿಬ್ಬರಿಗೂ ತಿಳಿಯಕೂಡದು,ಕಾರಣ ತನ್ನ ವಿಧ್ಯಾಬ್ಯಾಸಕ್ಕೆ ತಕ್ಕ ಕೆಲಸ ಇದಲ್ಲ ಹಾಗು ಅವರ ಮುಂದೆ ತನಗೆ ಅವಮಾನ ಆಗಬಹುದೆಂಬ ಯೋಚನೆ. ಎರಡನೆಯದು,ತಾನು ಇವರ ಜೊತೆ ಮಾತನಾಡುತ್ತ ನಿಂತಿರಬೇಕಾದರೆ ಯಾರಾದರು ಇವನನ್ನು ಕರೆದರೆ ಅವರಿಗೆ ಇವನ ಮೇಲೆ ಸಂದೇಹ ಬರುಬಹುದೆಂಬ ಕಸಿವಿಸಿ. ಮೂರನೆಯದು,ಇವರಿಬ್ಬರನ್ನು ಆದಷ್ಟು ಬೇಗ ಕಳುಹಿಸಬೇಕು. ಇಷ್ಟರ ನಡುವೆ ಅವನು ಅವರಿಬ್ಬರಿಗೆ "ಇಲ್ಲೇ ಪಕ್ಕದಲ್ಲೇ ನನ್ನ ನೆಂಟರೊಬ್ಬರ ಆಫೀಸ್ ಇದೆ.ಅವರನ್ನ ಮೀಟ್ ಮಾಡೋಕ್ಕೆ ಬಂದಿದ್ದೆ.ಹಾಗೆ ಕಾಫಿ ಕುಡಿಯಕ್ಕೆ ಬಂದಿದ್ದೆ "ಅಂತ ಸಮಜಾಯಿಸಿ ನೀಡಿ,ಮೂರು ಜನ ಒಂದು ಟೇಬಲಿನಲ್ಲಿ ಕೂರುತ್ತಾರೆ. ಬಂದಿರುವ ಗಿರಾಕಿಗಳ ಹತ್ತಿರ ತಾನು ಆರ್ಡರ್ ತಗೋಬೇಕಿತ್ತು,ಆದರೆ ತಾನೇ ದೊಡ್ಡ ಗಿರಾಕಿಯ ಥರಾ ತನ್ನ ಸ್ನೇಹಿತರ ಜೊತೆ ಕೂತಿದ್ದಾನೆ ಅವನು .ನಂತರ ಅಲ್ಲಿದ್ದ ಒಬ್ಬ ವೇಟರ್ ಬಂದು ಕಕ್ಕಾಬಿಕ್ಕಿಯಾಗಿ ನೋಡತೋಡಗುತ್ತಾನೆ .ಅದೇ ಸಮಯದಲ್ಲಿ ಕಿರಣ ಅವರಿಬ್ಬರಿಗೂ ಗೊತ್ತಾಗದ ಹಾಗೆ ಆ ವೇಟರ್ ಗೆ ಕಣ್ಣಿನಲ್ಲಿ ಸಂಜ್ಞೆ ಮಾಡಿ ,ಸ್ವಲ್ಪ ಹೊತ್ತು ಸುಮ್ಮನಿರುವಂತೆ ಹೇಳಿದ್ದಾಗ,ಆ ವೇಟರ್ ಕೂಡ ಅವರಿಬ್ಬರಿಗೂ ಗೊತ್ತಾಗದ ಹಾಗೆ ಒಪ್ಪಿಕೊಳ್ಳುತ್ತಾನೆ. ತನ್ನ ಗೆಳೆಯರು ಆರ್ಡರ್ ಮಾಡಿದ ಕಾಫಿ ಮತ್ತು ತಾನು ತೆಗೆಯಬೇಕಿದ್ದ ಅದರ ಬಿಲ್ಲನ್ನು ಆ ವೇಟರ್ ತಂದು ಕೊಡುತ್ತಾನೆ. ಅದರ ಜೊತೆಗೆ ಇವನು ಅವರಿಬ್ಬರ ಸಂಗಡ ಅದು ಇದು ವಿಷಯ ಮಾತಾಡುತ್ತಾನೆ,ಆದಾರು ಮನಸಿನಲ್ಲಿ ಹೆದರಿಕೆ ,"ಎಲ್ಲಿ ಮ್ಯಾನೇಜರ್ ಅಥವಾ ಓನರ್ ಬಂದು ತಾನು ಇಲ್ಲಿ ಕೂತಿರುವುದನ್ನು ನೋಡುತ್ತಾರೋ ?"ಎಂಬ ಗುಮಾನಿ.ಆ ವೇಟರ್ ಗೆ ಬೇಕಾದರೆ ಹೇಗೋ ಇವರು ತನ್ನ ಸ್ನೇಹಿತರು ಅಂತ ಹೇಳಿ ಸಮಾಧನ ಮಾಡಿದ್ದಾಗಿದೆ,ಇವನ ಕಡೆ ಇಂದ ಏನೂ ತೊಂದರೆ ಇಲ್ಲ ಎಂಬ ಸಮಾಧಾನ. ಸ್ವಲ್ಪ ಸಮಯದ ನಂತರ ಅವರಿಬ್ಬರೂ ಹೊರಟು ಹೋಗುತ್ತಾರೆ. ಹೇಗೋ ಅವರಿಬ್ಬರಿಗೂ ತಾನು ಇಲ್ಲಿ ಕೆಲಸ ಮಾಡುತ್ತಿರುವ ಸಂದೇಹ ಬರಲಿಲ್ಲ ಎಂಬ ಸಮಾಧಾನದಿಂದ ಇದ್ದರೆ,ಆ ಮ್ಯಾನೇಜರ್ ಮತ್ತು ಓನರ್ ಇಬ್ಬರೂ ಬಂದು ಆ ಹುಡುಗನ ಮೇಲೆ ರೇಗಾಡುತ್ತಾರೆ. "ನೆಟ್ಟಗೆ ಕೆಲಸ ಮಾಡೋದು ಬಿಟ್ಟು, ಫ್ರೆಂಡ್ಸ್ ಗಳ ಜೊತೆ ಹರಟೆ ಹೊಡಿತಾ ಕೂರ್ತಿಯ? ಎಷ್ಟೊತ್ತು ಮಾತಾಡೋದು ?ಸ್ವಲ್ಪ ಹೊತ್ತು ಮಾತಾಡಿ ಕಳಿಸ್ತಾರೆ ,ಅದೂ ಬಿಟ್ಟು ಇಷ್ಟೊತ್ತ ಮಾತಾಡೋದು ?ಅದೂ ಕೆಲಸ ಬಿಟ್ಟು " ಸದ್ಯ ತನ್ನ ಸ್ನೇಹಿತರ ಮುಂದೆ ಈ ಮಾತುಗಳನ್ನು ಹೇಳಲಿಲ್ಲವಲ್ಲ ಅಂತ ಸಮಾಧಾನದಿಂದ ಒಂದು ಕಡೆ ಆದ್ರೆ ,ತನಗೇನು ಬಂದಿದೆ,ಇವರ ಹತ್ತಿರ ಈ ರೀತಿ ಅನ್ನಿಸಿಕೊಳ್ಳಬೇಕು ಅಂತ ಬೇಜಾರು ಆದರೂ ಕೂಡ ಅದನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ. ಇನ್ನೂ ಏನೇನು ಅನುಭವಿಸಬೇಕು ಈ ಜನರ ನಡುವೆ ಅಂತ ಚಿಂತಿಸುತ್ತಾ ಆ ದಿನವನ್ನು ಹೇಗೋ ಕಳೆದು ಮಲಗಲು ಹೋಗುತ್ತಾನೆ.ಆದ್ರೆ ನಿದ್ರಾ ದೇವಿ ಒಲಿಯುವುದೇ ಇಲ್ಲ.ಮಲೆನಾಡಿನ ಹಚ್ಚ ಹಸಿರಿನ ನಡುವೆ ಬೆಳೆದ ಸೂರ್ಯ ರಶ್ಮಿಯಂತೆ ಹೊಳೆಯಬೇಕಾದ ಈ ಕಿರಣನ ಜೀವನದಲ್ಲಿ ಕಪ್ಪು ಕಗ್ಗತ್ತಲು ಆವರಿಸಿದಂತೆ ಭಾಸವಾಯಿತು ಅವನಿಗೆ. ಇಷ್ಟರ ನಡುವೆ ತನಗೆ ಇಂಥ ಜೀವನ ಬೇಡವೇ ಬೇಡ ಎಂದು ಆತ್ಮಹತ್ಯೆ ಮಾಡಲು ನಿರ್ಧಾರ ಮಾಡುತ್ತಾನೆ..ಆ ಯುವಕ.ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.ತಟ್ಟನೆ ತಾನು ಹೋಟೆಲಿನಲ್ಲಿ ಇರುವ ವಿಷಯವನ್ನು ತನ್ನ ತಾಯಿಗೆ ಹೇಳಲು ತಿಳಿಸಲು ಯೋಚಿಸಿ ತನ್ನ ಮನೆಗೆ ಫೋನ್ ಮಾಡಲು ತನ್ನ ಮೊಬೈಲನ್ನು ತೆಗೆದುಕೊಂಡು ನೋಡಿದಾಗ ಸಮಯ ಮಧ್ಯ ರಾತ್ರಿ ೨ ಗಂಟೆ . ಇಷ್ಟೊತ್ತಿನಲ್ಲಿ ಫೋನ್ ಮಾಡಿದರೆ ತನ್ನ ತಂದೆ ತಾಯಿ ಗಾಬರಿಗೊಳ್ಳುತ್ತಾರೆ ಎಂದು ಸುಮ್ಮನಾಗಿ ಸುಮ್ಮನೆ ನಿದ್ದೆ ಮಾಡದೆ ಹಾಗೆ ಏನೇನೋ ಯೋಚಿಸುತ್ತ ಕೂರುತ್ತಾನೆ. ಅಲ್ಲಿಗೆ ಬಂದು ಒಂದು ವಾರ ಕೆಳೆದಿದೆಯಷ್ಟೇ ನನಗೆ ಈ ರೀತಿ ಬೇಸರವಾಗಿರಬೇಕಾದರೆ ಇಲ್ಲಿ ಇರುವ ಬೇರೆ ಕೆಲಸಗಾರರು ಹೇಗೆ ಜೀವನ ಮಾಡುತ್ತಿರಬೇಕು ಎಂದು ಯೋಚಿಸುತ್ತ ಅಳುತ್ತ ಕೂತಿದ್ದಾನೆ.ಆದರೂ ಅವನ ಬಗ್ಗೆ ವಿಚಾರಿಸಲು ಅಲ್ಲಿ ತನ್ನವರು ಯಾರು ಅಂತ ಇದ್ದಾರೆ.ತನ್ನ ಕಷ್ಟ ಹೇಳಿಕೊಳ್ಳಲು ಯಾರು ಇಲ್ಲ.ತನ್ನ ಸ್ನೇಹಿತರಿಗೆ ತಾನು ತನ್ನ ನೆಂಟರ ಮನೆಯಲ್ಲಿ ಇರುವುದಾಗಿ ,ತನ್ನ ಮನೆಯವರಿಗೆ ತಾನು ತನ್ನ ಸ್ನೇಹಿತರ ಜೊತೆ ಇರುವುದಾಗಿ ಹೇಳಿಕೊಂಡು ತನ್ನ ಮೇಲೆ ಬೇಸರ ಪಟ್ಟುಕೊಂಡು ಕೂತಿರುತ್ತಾನೆ.ತಾನು ತನ್ನ ತಂದೆ ತಾಯಿಗೆ ಈ ವಿಷಯವನ್ನು ಹೇಳದೆ ಮೋಸ ಮಾಡುತಿದ್ದೆನೆಂಬ ಯೋಚನೆ. ಇಷ್ಟೆಲ್ಲಾ ಯೋಚಿಸುತ್ತ ಕುತಿರಬೇಕಾದರೆ ಆಗಲೇ ಸೂರ್ಯೋದಯ ಆಗಿತ್ತು.ಇನ್ನೇನು ೧೧ ಗಂಟೆಗೆ ಮತ್ತೆ ಕೆಲ್ಸಕ್ಕೆ ಹೋಗಬೇಕು ಅಂತ ಯೋಚಿಸುತ್ತ ತನ್ನ ತಾಯಿಗೆ ಫೋನ್ ಮಾಡಿ ಮಾತಾಡದೆ ಸುಮ್ಮನೆ ಅಳುತ್ತಿದ್ದಾನೆ, ಅತ್ತ ಹೆತ್ತ ಕರುಳಿಗೆ ತನ್ನ ಮಗ ಬೆಳಗ್ಗೆ ಬೆಳಗ್ಗೆ ಫೋನ್ ಮಾಡಿ ಅಳುತ್ತಿರುವುದನ್ನು ನೋಡಿ ಸಂಕಟ ಆಗುತ್ತಿದೆ.ಅವನ ತಾಯಿಯ ಗೋಳು ನೋಡಿ ಅವನ ತಂದೆ ಮಾತಾಡಲು ಬಯಸಿ ಫೋನ್ ತೆಗೆದುಕೊಂಡರೆ ಇನ್ನೂ ಅಳುತ್ತಿದ್ದಾನೆ.ಆ ತಂದೆಗೂ ಕೂಡ ತಮ್ಮ ಒಬ್ಬನೇ ಮಗ ಹೀಗೆ ಅಳುತ್ತಿರುವುದಕ್ಕೆ ಕಾರಣ ಗೊತ್ತಿಲ್ಲದೇ ಅವರೂ ಯೋಚನಾ ಮಗ್ಧರಾಗುತ್ತಾರೆ.ವಿಷಯ ಗೊತ್ತಿಲ್ಲದೇ ಏನು ಅಂತ ಸಮಾಧಾನ ಮಾಡುವುದು ಎಂದು ಅವರಿಗೂ ಗೊತ್ತಿಲ್ಲದೇ ಸುಮ್ಮನಿರುತ್ತಾರೆ. ನಂತರ ಆ ಹುಡುಗ ಆವರನ್ನು ನೋಡಬೇಕು ಅಂತ ಅನ್ನಿಸುತ್ತಿದೆ ಅಂತ ಹೇಳಿ ಮತ್ತೆ ಸತ್ಯವನ್ನು ಮುಚ್ಚಿಡುತ್ತಾನೆ.ಈ ಸುಳ್ಳಿನಿಂದ ಇಷ್ಟೇ ಸಮಸ್ಯೆ ಎಂಬ ಸುಳ್ಳು ನಂಬಿಕೆಯಿಂದ ಅವನ ಹೆತ್ತವರು ಸಮಾಧಾನಗೊಳ್ಳುತ್ತಾರೆ. ನಂತರ ಮತ್ತೆ ಶುರು ಆಗುತ್ತದೆ ಅವನಿಗೆ ಕಿರಿಕಿರಿ.ಹೀಗೆ ಒಂದೆರಡು ದಿನ ಕಳೆದ ಮೇಲೆ ಅವನಿಗೆ ಪರಿಚಯದ ಹುಡುಗಿಯೊಬ್ಬಳು ಹೋಟೆಲ್ಲಿಗೆ ತನ್ನ ಸ್ನೇಹಿತರೊಡನೆ ಬರುತ್ತಾಳೆ.ಮತ್ತಷ್ಟು ಕಕ್ಕಾಬಿಕ್ಕಿಯಾದ ಇವನು ಏನು ಮಾಡಲು ತೋಚದೆ ಆ ಕಡೆ ಈ ಕಡೆ ಹೊದಾದಳು ಶುರು ಮಾಡುತ್ತಾನೆ.ಇವನನ್ನು ಗಮನಿಸಿದ ಆ ಹುಡುಗಿ ಇವನನ್ನು ಮಾತಾಡಿಸಿದಾಗ ಹೀಗೆ ಕಾಫಿ ಕುಡಿಯಲು ಬಂದಿದ್ದಾಗಿಯೂ,ತಾನು ಬೇರೆಡೆಗೆ ಹೋಗಬೇಕೆಂದು ಹೇಳಿ ತಾನು ಮಲಗುತ್ತಿದ್ದ ಕೋಣೆಗೆ ಹೋಗುತ್ತಾನೆ. ಇದನ್ನು ಗಮನಿಸಿದ ಹೋಟೆಲಿನಲ್ಲಿ ಬಹಳ ದಿನದಿಂದ ಅಲ್ಲಿ ಕೆಲಸಮಾಡುತ್ತಿದ್ದ ಕುಳ್ಳ ಕೇಶವ ಅವನಲ್ಲಿಗೆ ಬಂದು "ಕೆಲಸ ಮಾಡೋದು ಬಿಟ್ಟು ಆರಾಮಾಗಿ ಇಲ್ಲಿ ಬಂದು ಕೂತಿದ್ಡಿಯ " ಅಂತ ರೇಗಾಡುತ್ತಾನೆ. "ಗಿರಾಕಿಗಳು ಜಾಸ್ತಿ ಇರಲಿಲ್ಲವಲ್ಲ,ಹಾಗೆ ತಲೆ ನೋಯುತ್ತಿತ್ತು,ಅದಕ್ಕೆ ಬಂದೆ ಅಷ್ಟೇ "ಅಂತ ಸಮಾಧಾನದಿಂದ ,ತಲೆ ತಗ್ಗಿಸಿಕೊಂಡು ಏನೋ ತಪ್ಪು ಮಾಡಿರುವನ ತರ ಹೇಳುತ್ತಾನೆ. ಅವನ ಮೆದು ಧ್ವನಿಯನ್ನು,ಅವನ ಗಂಭೀರತೆಯನ್ನು ಉಪಯೋಗಿಸಿಕೊಂಡ ಕೇಶವ ಸುಮ್ಮನೆ ವಿನಾ ಕಾರಣ ಅವನ ಮೇಲೆ ರೇಗುತ್ತಾನೆ.ಇದು ಒಂದು ರೀತಿಯಲ್ಲಿ ತಾನು ಇಲ್ಲಿ ದೊಡ್ಡ ಮನುಷ್ಯ ಎಂದು ತೋರುವ ಹಾಗಿತ್ತು. ಕೊನೆಗೆ "ಏನೂ ಕೆಲಸ ಇಲ್ಲ ಅಂದ್ರೆ ಆ ಸ್ವೀಟ್ ಶೋ ಕೇಸ್ ಧೂಳು ಹಿಡಿದಿದೆ ,ಅದನ್ನ ಒರಸು ಹೋಗು "ಅಂತ ಹೇಳಿ ಹೋಗುತ್ತಾನೆ. "ಸರಿ ಸ್ವಲ್ಪ ಹೊತ್ತು ಬಿಟ್ಟು ಹೋಗುತ್ತೀನಿ "ಅಂತ ಗೊಣಗುತ್ತಾನೆ ಕಿರಣ. ಆ ಹುಡುಗಿಯರು ಹೋಗಿರಬಹುದು ಎಂಬ ನಿರೀಕ್ಷೆಯೊಂದಿಗೆ ಸ್ವಲ್ಪ ಸಮಯ ಬಿಟ್ಟು ತನ್ನ ಕೆಲಸದ ಜಾಗಕ್ಕೆ ಬರುತ್ತಾನೆ.ಸದ್ಯ ಅವರೂ ಹೊರಟು ಹೋಗಿರುವುದನ್ನು ಗಮನಿಸಿ ಸ್ವಲ್ಪ ಸಮಾಧಾನ ಗೊಳ್ಳುತ್ತಾನೆ.ನಂತರ ಅವನು ವಹಿಸಿದ್ದ ಕೆಲಸ ಮುಗಿಸಿ ಅವನಿಗೆ ತೋರಿಸುತ್ತಾನೆ. ಇನ್ನೊಂದು ದಿನ ಒಬ್ಬ ದಡೂತಿ ಮನುಷ್ಯ ಇನ್ನೊಬ್ಬ ಹೆಂಗಸಿನ ಜೊತೆ ಬಂದು ಕೂರುತ್ತಾನೆ.ಆವರನ್ನು ಗಮನಿಸಿದ ವೇಟರ್ ಒಬ್ಬ "ಈ ವಯ್ಯ ಒಂದೊಂದ್ ದಿನ ಒಂದೊಂದ್ ಹುಡುಗಿ ಜೊತೆ ಬರ್ತಾನಪ್ಪ "ಅಂದ. ಆಗ ಇನ್ನೊಬ್ಬ ವೇಟರ್ "ಲೇ ಅವನು ಎಷ್ಟ್ ಜನದ ಜೊತೆ ಬಂದ್ರೆ ನಿನಗೆನ್ ಕಷ್ಟ ,ಸುಮ್ನೆ ಹೋಗಿ ಕೆಲಸ ನೋಡು "ಅಂತ ಆ ವೇಟರ್ ಗೆ ಹೇಳುತ್ತಾನೆ. ಇವನು ತನ್ನ ಮಾಮೂಲಿ ಕೆಲಸದಂತೆ ಅವರ ಬಳಿ ಹೋಗಿ ಆರ್ಡರ್ ತೆಗೆದುಕೊಂಡು ಬರುತ್ತಾನೆ.ಆ ಹುಡುಗನ ದುರದೃಷ್ಟ ಅವನು ಆರ್ಡರ್ ಮಾಡಿದವುಗಳನ್ನು ವೇಟರ್ ಸ್ವಲ್ಪ ಲೇಟಾಗಿ ತರುತ್ತಾನೆ.ಇದಕ್ಕೆ ಕೋಪಗೊಂಡ ಆ ದಡೂತಿ "ಲೇ ***ಮಗನೆ ಎಷ್ಟ್ ಹೊತ್ತು ಕಾಯಬೇಕು ಇಲ್ಲಿ "ಅಂತ ಪಾಪದ ಹುಡುಗನ ಕೊರಳ ಪಟ್ಟಿಗೆ ಕೈ ಹಾಕಿ ಹರಿಹಾಯುತ್ತಾನೆ.ಆಗ ಆ ಹುಡುಗ "ಸರ್ ನಾನೇನು ಮಾಡ್ಲಿ,ಸ್ವಲ್ಪ ಹೊತ್ತು ಇರ್ರಿ ,ತರುತ್ತಾರೆ "ಅಂತ ಹೇಳಿದ್ರು ,ಅವನು ಇನ್ನೂ ಕೈಯನ್ನು ಅವನ ಶರ್ಟ್ ಇಂದ ತೆಗೆದಿರುವುದಿಲ್ಲ. ಅಷ್ಟೊತ್ತಿಗೆ ಅಲ್ಲಿದ್ದ ಎಲ್ಲಾ ವೇಟರ್ ಗಳು ಬಂದು ಅವನನ್ನು ಬಿಡಿಸುತ್ತಾರೆ. ಆದರೂ ತನ್ನ ದರ್ಪವನ್ನು ಬಿಟ್ಟಿರಲಿಲ್ಲ ಆ ದಡೂತಿ ದೇಹದವನು. ಆಗ ಸಭ್ಯ ಹುಡುಗ "ಸರ್ ,ನಮಗೂ ಸ್ವಾಬಿಮನ ಅನ್ನೋದು ಇದೆ,ಸ್ವಲ್ಪ ಮಾತಾಡಬೇಕಾದರೆ ನಾಲಗೆ ಹಿಡಿತದಲ್ಲಿರಲಿ" ಅಂತ ಹೇಳುತ್ತಾನೆ. ಇನ್ನಷ್ಟು ಕೋಪಗೊಂಡ ಅವನು "ನೀನ್ ಯಾವನೋ ಅದನ್ನ ಹೇಳಕ್ಕೆ?"ಅಂತ ಹೇಳಿ ಮತ್ತೆ ಅವನ ಮೇಲೆ ಕೈ ಮಾಡುತ್ತಾನೆ. ಕೋಪಗೊಂಡ ಆ ಹುಡುಗ "ನನ್ ಮಗನೆ ನಿನ್ನ ವಯಸ್ಸಿಗೆ ಮರ್ಯಾದೆ ಕೊಟ್ಟು ಸುಮ್ಮನಿದ್ದೆ "ಅಂತ ಹೇಳಿ ತನ್ನ ಕೈ ಮುಷ್ಠಿ ಗಟ್ಟಿಗೊಳಿಸಿ ಅವನ ಮುಖಕ್ಕೆ ಒಡೆಯುತ್ತಾನೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಓನರ್ ಏನು ಮಾತಾಡದೆ ಸುಮ್ಮನಿರುತ್ತಾನೆ. ಅವನ ವಿರುದ್ಧ ಮಾತಾಡಿದರೆ ಗಿರಾಕಿ ಕಳೆದುಕೊಳ್ಳುತ್ತೀನಿ ಎಂಬ ಭಯ,ಆದರೆ ಕೊನೆಗ ಓನರ್ ಕೂಡ ಈ ಹುಡುಗನಿಗೆ "ಗಿರಾಕಿಗಳ ಜೊತೆ ಹೇಗೆ ಇರಬೇಕು ಅಂತ ಗೊತ್ತಾಗಲ್ವ ನಿಂಗೆ "ಅಂತ ಬೈಯುತ್ತಾನೆ. "ಅವನೇ ನೆಟ್ಟಗೆ ಮಾತಾಡಿದ್ರೆ ನಾನ್ಯಾಕೆ ಅವನ ಜೊತೆ ಈ ಥರ ಮಾತಾಡಲಿ "ಅಂತ ಸಮರ್ಥಿಸಿಕೊಂದರೂ ಇವನದೇ ತಪ್ಪು ಎಂಬ ರೀತಿಯಲ್ಲಿ ಮಾತಾಡುತ್ತಾರೆ. ಇದರಿಂದ ಬೇಸರಗೊಂಡ ಈ ಹುಡುಗ ಮತ್ತೆ ತನ್ನ ಕೊನೆಗೇ ಹೋಗಿ ಅಳುತ್ತ ಮಲಗುತ್ತಾನೆ.ಮತ್ತೆ ಅದೇ ಯೋಚನೆಗಳು,ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಭ್ರಮೆ.ತಂದೆ ತಾಯಿಗೆ ಮೋಸ ಮಾಡುತ್ತಿದ್ದಿನೆಂಬ ಆತಂಕ.ಕೊನೆಗೂ ತಾನು ಇಲ್ಲಿ ಇರುವುದು ಸರಿ ಇಲ್ಲ ಎಂದು ಮಾರನೆಯೇ ದಿನ ಬೆಳಗ್ಗೆ ಅಲ್ಲಿಂದ ಹೊರಡಲು ತೀರ್ಮಾನಿಸುತ್ತಾನೆ.ಆದರೆ ಎಲ್ಲಿಗೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ. ಬೆಳಗ್ಗೆ ಎದ್ದವನೇ,ಇನ್ನೂ ಯಾವ ಕೆಲಸಗಾರರು ಎದ್ದಿಲ್ಲದಿರುವುದನ್ನು ಪರೀಕ್ಷಿಸಿ ತನ್ನ ಲಗೇಜನ್ನು ಎತ್ತಿ ಕೊಂಡು ಹೊರಡುತ್ತಾನೆ.ಕೊನೆಗೇ ಮನೆಗೆ ವಾಪಸ್ಸು ಹೋಗುವುದು ಒಳ್ಳೆಯದು ಎಂದು ಮನೆಗೆ ಹೋಗುತ್ತಾನೆ.
2018/07/22 10:29:35
http://giri-shikhara.blogspot.com/2011/02/
mC4
ಮಗುವಿನಿಂದ ಲಾಕ್​ ಆಯ್ತು ಐಪ್ಯಾಡ್​, ಓಪನ್​ ಆಗೋಕೆ ಬೇಕು 48 ವರ್ಷ..! – Page 15 – Welcome to First News ವಾಷಿಂಗ್ಟನ್​: ಎಲೆಕ್ಟ್ರಾನಿಕ್​ ವಸ್ತುಗಳೇ ಹಾಗೆ ಅವು ಯಾವಾಗ ಹೇಗೆ ವರ್ಕ್​ ಆಗ್ತವೆ ಅನ್ನೋದನ್ನ ಹೇಳೋದಕ್ಕೆ ಆಗಲ್ಲ. ಯಾವಾಗ ಕೈ ಕೊಡ್ತವೆ ಅನ್ನೋದನ್ನ ಊಹಿಸೋಕು ಆಗಲ್ಲ. ಅಮೇರಿಕಾದಲ್ಲಿ ಜರ್ನಲಿಸ್ಟ್​ವೊಬ್ಬರ ಐಪ್ಯಾಡ್​​ ಮುಂದಿನ 48 ವರ್ಷಗಳವರೆಗೆ ಲಾಕ್​ ಆಗಿದೆ. ಅಂದ್ರೆ 48 ವರ್ಷದ ನಂತರವಷ್ಟೇ ಅದನ್ನ ಓಪನ್​ ಮಾಡಲು ಸಾಧ್ಯ. ಅಲ್ಲಿಯವರೆಗೂ ಅದರ ಸರಿಯಾದ ಪಾಸ್​ವರ್ಡ್​ ಹಾಕಿದ್ರೂ ಅದು ಓಪನ್​ ಆಗಲ್ಲವಂತೆ. ಇವನ್​ ಒಸ್ನೋಸ್ ಎಂಬ ಜರ್ನಲಿಸ್ಟ್​ ಸಾಮಾನ್ಯವಾಗೇ ಐಪ್ಯಾಡ್​ಗೆ ಲಾಕ್​ ಇಟ್ಟಿದ್ದರು. ಒಮ್ಮೆ ಹೊರಗೆ ಹೋಗುವಾಗ​ ಅದನ್ನ ಮನೆಯಲ್ಲೇ ಬಿಟ್ಟು ಹೋಗಿದ್ದರು. ಇವರ 3 ವರ್ಷದ ಮಗು ಆಟ ಆಡುವಾಗ ಐ ಪ್ಯಾಡ್​ ನೋಡಿ, ಅದರ ಲಾಕ್​ ಓಪನ್​ ಮಾಡಲು ಯತ್ನಿಸಿದೆ. ಪಾಸ್​ವರ್ಡ್​ ಗೊತ್ತಿಲ್ಲದಿದ್ದರೂ ಪದೇ ಪದೇ ರಾಂಗ್​ ಪಾಸ್​​ವರ್ಡ್​ ಟ್ರೈ ಮಾಡಿದೆ. ಪರಿಣಾಮ ಐಪ್ಯಾಡ್​ ಲಾಕ್​ ಆಗಿದ್ದು ಓಪನ್​ ಆಗಲು 25,536,442 ನಿಮಿಷ ಸಮಯ ಕೇಳುತ್ತಿದೆ. ಲಾಕ್​ ಆಗಿರುವ ಐಪ್ಯಾಡ್​​ನ​ ಸರಿಯಾದ ಪಾಸ್​ವರ್ಡ್​ ಕೊಟ್ಟರೂ ಓಪನ್​ ಆಗುತ್ತಿಲ್ಲ. ಅಂದ್ರೆ 2,55,36,442 ನಿಮಿಷಗಳನ್ನ ದಿನಗಳಿಗೆ ಕನ್ವರ್ಟ್​ ಮಾಡಿದ್ರೆ ಬರೋಬ್ಬರಿ ಅರ್ಧ ಶತಕವಾಗುತ್ತೆ. ಅಂದ್ರೆ 48 ವರ್ಷ 59 ದಿನ ಕಾಯಬೇಕಾಗುತ್ತೆ. ಈ ಕುರಿತು ನ್ಯೂಯಾರ್ಕ್​ ಡೈಲಿ ನ್ಯೂಸ್​ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಇವನ್​ ಒಸ್ನೋಸ್​ ಅವರ ಐಪ್ಯಾಡ್​ ಲಾಕ್​ ಓಪನ್​ ಆಗಬೇಕಾದ್ರೆ 2067 ರವರೆಗೆ ಕಾಯಬೇಕು ಅಂತಾ ಹೇಳಿದೆ. ಇನ್ನು ಈ ಬಗ್ಗೆ ಐಪ್ಯಾಡ್​ ಮೇಕರ್ಸ್​ ಸಲಹೆ ನೀಡಿದ್ದು, ಐಪ್ಯಾಡ್​ ಸೆಟ್ಟಿಂಗ್ಸ್​ ಅನ್ನ ರೀ ಸ್ಟೋರ್ ಮಾಡಿದ್ರೆ ಸರಿ ಹೋಗುತ್ತೆ. ಆದ್ರೆ ಅದರಲ್ಲಿ ಸ್ಟೋರ್​ ಆಗಿದ್ದ ಡಾಟಾ ಡಿಲೀಟ್​ ಆಗುತ್ತೆ ಅಂತಾ ತಿಳಿಸಿದ್ದಾರೆ. ಈ ಬಗ್ಗೆ ಇವನ್​ ಒಸ್ನೋಸ್​ ತನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಫೇಕ್​ ಅಂತಾ ನಿಮಗೆ ಅನ್ನಿಸ ಬಹುದು ಆದ್ರೆ ಇದು ಫೇಕ್​ ಅಲ್ಲಾ ನನ್ನ ಐಪ್ಯಾಡ್​​. ನನ್ನ ಮೂರು ವರ್ಷದ ಮಗು ಇದರ ಲಾಕ್​ ಓಪನ್​ ಮಾಡಲು ಪದೇ ಪದೇ ರಾಂಗ್​ ಪಾಸ್ವರ್ಡ್​ ಟ್ರೈ ಮಾಡಿದ ಪರಿಣಾಮ ಲಾಕ್​ ಆಗಿದೆ ಅಂತಾ ಅದರ ಫೋಟೋ ಶೇರ್​ ಮಾಡಿದ್ದಾರೆ.
2019/04/24 16:17:56
http://firstnews.tv/toddler-locks-dad-out-of-his-ipad-for-48-years/15/
mC4
ಮಾನವ ಸರಪಳಿ Archives · VIJAYAVANI - ವಿಜಯವಾಣಿ Tag: ಮಾನವ ಸರಪಳಿ ಕೇರಳದಲ್ಲಿ ಸಮಾನತೆಗಾಗಿ ಮಹಿಳಾಗೋಡೆ! ವಿಜಯವಾಣಿ ಸುದ್ದಿಜಾಲ January 2, 2019 4:00 AM HighwaysHuman WallKeralaWomenಕೇರಳಮಹಿಳೆಯರುಮಾನವ ಸರಪಳಿಹೆದ್ದಾರಿ ಕಾಸರಗೋಡು: ಸ್ತ್ರೀ-ಪುರುಷ ಸಮಾನತೆ ಹಾಗೂ ನವೋತ್ಥಾನ ಸಂದೇಶದೊಂದಿಗೆ ಕಾಸರಗೋಡಿನಿಂದ ತಿರುವನಂತಪುರವರೆಗಿನ (620 ಕಿ.ಮೀ) ಮಹಿಳಾಗೋಡೆ ಅಭಿಯಾನದಲ್ಲಿ ಮಂಗಳವಾರ ಲಕ್ಷಾಂತರ ಮಹಿಳೆಯರು ಪಾಲ್ಗೊಂಡರು. ಸಂಜೆ 3.45ಕ್ಕೆ ಮಹಿಳೆಯರು ರಸ್ತೆ ಬದಿಯಲ್ಲಿ ಸೇರಿದ್ದರು. ಕಾಸರಗೋಡಲ್ಲಿ ರಾಜ್ಯ ಆರೋಗ್ಯ ಮತ್ತು… View More ಕೇರಳದಲ್ಲಿ ಸಮಾನತೆಗಾಗಿ ಮಹಿಳಾಗೋಡೆ! ಸರ್ಕಾರ ವಿರುದ್ಧ ಎಬಿವಿಪಿ ಪ್ರತಿಭಟನೆ Bagalkot​ December 15, 2018 5:05 AM ABVPBagalkotbasaveswara circleman circleStrikeಎಬಿವಿಪಿಪ್ರತಿಭಟನೆಬಸವೇಶ್ವರ ವೃತ್ತಬಾಗಲಕೋಟೆಮಾನವ ಸರಪಳಿ ಬಾಗಲಕೋಟೆ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರ ನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ…
2019/07/18 00:37:51
https://www.vijayavani.net/tag/%E0%B2%AE%E0%B2%BE%E0%B2%A8%E0%B2%B5-%E0%B2%B8%E0%B2%B0%E0%B2%AA%E0%B2%B3%E0%B2%BF/
mC4
ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..! | Prajavani ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..! ಎರಡನೇ ಶನಿವಾರ–ಭಾನುವಾರದ ಸರ್ಕಾರಿ ರಜೆ Published: 10 ಆಗಸ್ಟ್ 2018, 19:58 IST Updated: 10 ಆಗಸ್ಟ್ 2018, 19:58 IST ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಆಡಳಿತದಲ್ಲಿ ಬಿಗಿಯಿಲ್ಲ. ಹೇಳುವವರು, ಕೇಳುವವರು ಯಾರೂ ಇಲ್ಲ. ಅಧಿಕಾರಿಗಳು ನಡೆದಿದ್ದೇ ಹಾದಿ ಎಂಬ ಸಾರ್ವಜನಿಕರ ಆರೋಪಕ್ಕೆ ಪಾಲಿಕೆ ಕಚೇರಿ ಶುಕ್ರವಾರ ಮತ್ತೊಮ್ಮೆ ಸಾಕ್ಷಿಯಾಯಿತು. 'ಶುಕ್ರವಾರ ಬೆಳಗಿನ ಅವಧಿಯೂ ಕೆಲ ಅಧಿಕಾರಿಗಳಷ್ಟೇ ಹಾಜರಿದ್ದರೇ; ಮಧ್ಯಾಹ್ನದ ಬಳಿಕ ಬಹುತೇಕ ಅಧಿಕಾರಿಗಳು ಗೈರಾಗಿದ್ದರು. ಯಾರನ್ನೂ ಕೇಳಿದರೂ ಸಮರ್ಪಕವಾಗಿ ಉತ್ತರ ನೀಡಲಿಲ್ಲ. ರಜೆಯ ಮೇಲೆ ತೆರಳಿದ್ದಾರೋ ? ಅನಧಿಕೃತವಾಗಿ ಹೊರ ಹೋಗಿದ್ದಾರೋ ? ಎಂಬುದಕ್ಕೆ ಯಾರೂ ಉತ್ತರ ನೀಡಲಿಲ್ಲ' ಎಂದು ಪಾಲಿಕೆ ಕಚೇರಿಗೆ ಕಾರ್ಯ ನಿಮಿತ್ತ ಭೇಟಿ ನೀಡಿದ್ದ ವರ್ತಕ ವಿಜಯಜೋಶಿ 'ಪ್ರಜಾವಾಣಿ' ಬಳಿ ದೂರಿದರು. 'ಶುಕ್ರವಾರ ಮಧ್ಯಾಹ್ನದ ಬಳಿಕ ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದೆ. ಈ ಸಂದರ್ಭ ವಯೋವೃದ್ಧರು ಸೇರಿದಂತೆ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜನರ ತಂಡವೇ ಪಾಲಿಕೆ ಕಚೇರಿಯಲ್ಲಿ ಬೀಡು ಬಿಟ್ಟಿತ್ತು. ಕರ ತುಂಬಲು ಹಲವರು ಬಂದಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳೇ ಇಲ್ಲದಿದ್ದುದರಿಂದ ಹಿಡಿಶಾಪ ಹಾಕಿಕೊಂಡು ಮರಳಿದರು. ವಿಜಯಪುರ ಪಾಲಿಕೆ ಇನ್ಯಾವಾಗ ಉದ್ಧಾರ ಆಗಲಿದೆ ಎಂದು ಗೊಣಗಿದವರೇ ಹೆಚ್ಚಿದ್ದರು' ಎಂದು ಜೋಶಿ ತಿಳಿಸಿದರು. ಪಾಲಿಕೆಯ ಅಧಿಕಾರಿಗಳ ಸಾಮೂಹಿಕ ಗೈರಿನ ಬಗ್ಗೆ ಕೆಲವರು ಫೇಸ್‌ಬುಕ್‌ ಲೈವ್‌ ಮಾಡಿ ಪ್ರಸಾರ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದರ ಜತೆಗೆ ಅಧಿಕಾರಿಗಳ ಗೈರಿನ ವಿಡಿಯೋ ಕ್ಲಿಪ್ಪಿಂಗ್‌ ಸಾಮಾಜಿಕ ಜಾಲತಾಣದಲ್ಲಿ ಈ ಭಾಗದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೂರು ನೀಡುವೆ: 'ತುರ್ತು ಸಭೆ ಆಯೋಜನೆಗೆ ಸಂಬಂಧಿಸಿದಂತೆ ಕೌನ್ಸಿಲ್‌ ಸೆಕ್ರೆಟರಿ ಭೇಟಿಗಾಗಿ, ಶುಕ್ರವಾರ ಮಧ್ಯಾಹ್ನ ನಾನೂ ಹಾಗೂ ಮೇಯರ್‌ ಶ್ರೀದೇವಿ ಲೋಂಗಾವಿ ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದೆವು. ಆದರೆ ಆ ಸಂದರ್ಭ ಸೆಕ್ರೆಟರಿ ಕಚೇರಿಯಲ್ಲಿರಲಿಲ್ಲ. ಫೋನಚ್ಚಿ ಕೇಳಿದರೇ ಊರಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಇದರ ಬಳಿಕ ಪಾಲಿಕೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳ ಗೈರು ಗೋಚರಿಸಿತು. ಎಷ್ಟು ಮಂದಿ ಗೈರಾಗಿದ್ದಾರೆ, ಹಾಜರಾಗಿದ್ದಾರೆ, ಸಹಿ ಹಾಕಿ ಹೋದವರು ಎಷ್ಟು ಎಂಬ ಮಾಹಿತಿಯಿಲ್ಲ. ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇವೆ' ಎಂದು ಉಪ ಮೇಯರ್‌ ಗೋಪಾಲ ಘಟಕಾಂಬಳೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
2018/12/15 11:42:34
https://www.prajavani.net/officers-absent-palike-office-564589.html
mC4
ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ | Vivekananda Kannada Medium School Tenkila Puttur Vivekananda Kannada Medium School Tenkila Puttur > News and Events > ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ ಭಾರತೀಯತೆಗೆ ಸನಾತನ ಧರ್ಮವೇ ತಳಹದಿ – ಬ್ರಹ್ಮಶ್ರೀ ಕುಂಟಾರು ರವೀಶ್‌ ತಂತ್ರಿ ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರಂತಹ ಸಾಧಕರು ಭಾರತದ ಸಂಸ್ಕಾರ, ಧರ್ಮದ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಸನಾತನ ಧರ್ಮವೇ ನಮ್ಮೆಲ್ಲಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಏಳಿಗೆಗೆ ತಳಹದಿ ಎಂದು ಸಾರಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾಕ್ಟರ್ ಜೀಯವರು, ಸನಾತನ ಧರ್ಮವೇ ಈ ದೇಶದ ಜೀವಾಳವಾಗಿದ್ದು ಈ ಕಾರಣದಿಂದಲೇ ಭಾರತವು ಪ್ರಪಂಚಕ್ಕೆ ಗುರುವಿನ ಸ್ಥಾನದಲ್ಲಿದೆ ಎಂದಿದ್ದರು. ಇಂತಹ ಸಂಸ್ಕಾರ ಸುಧೆಯನ್ನು ಸ್ವೀಕರಿಸಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ವಿದ್ಯಾಲಯಗಳೇ ದೇವಾಲಯಗಳಾದಾಗ ನಮ್ಮ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಶಾಲೆಯಲ್ಲಿ 'ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ' ಪ್ರಯುಕ್ತ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಇವರು, ಭಾರತವು ಬಣ್ಣ, ಸಂಸ್ಕೃತಿ, ಆಚರಣೆ, ಪ್ರಾಕೃತಿಕ ವೈವಿಧ್ಯತೆ ಹೀಗೆ ಎಲ್ಲದರಲ್ಲಿಯೂ ವೈಶಿಷ್ಠ್ಯತೆ ಹೊಂದಿದ್ದು, ಜಗತ್ತಿನ ಎಲ್ಲರಿಗೂ ಬೇಕಾದ ಆಹಾರ, ಜಲ, ಖನಿಜ, ತೈಲ ಎಲ್ಲವನ್ನೂ ನೀಡುವಷ್ಟು ಸಮೃದ್ಧವಾದ ಶ್ರೇಷ್ಠ ಭೂಮಿಯಾಗಿದೆ. ಇಂತಹ ಶ್ರೇಷ್ಠ ಧರ್ಮ ಹೊಂದಿದ ದೇಶದ ಬಗ್ಗೆ ನಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಹಿರಿಯರು ಮಾರ್ಗದರ್ಶನ ನೀಡಿ, ದೇಶ, ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಬೇಕು. 'ನಾನು ಏನು' ಎಂಬ ಅರಿವು ಮೂಡಿಸಿ ಅಂತಹ ಮಗುವಿನಿಂದ ಮನೆಗೆ, ಸಮಾಜಕ್ಕೆ, ದೇಶಕ್ಕೆ ತನ್ಮೂಲಕ ಸಮಸ್ತ ಜಗತ್ತಿಗೆ ಒಳಿತನ್ನು ಉಂಟುಮಾಡುವಂತಹ ವ್ಯಕ್ತಿತ್ವ ನಿರ್ಮಾಣವಾಗಲು ಶಾಲೆ ಹಾಗೂ ಹೆತ್ತವರು ಕಾರಣಕರ್ತರಾಗಬೇಕು ಎಂದು ಕರೆ ನೀಡಿದರು. ಬೆಳ್ಳಿಹಬ್ಬದ ಪ್ರಯುಕ್ತ ಬಿಡುಗಡೆಗೊಳ್ಳಲಿರುವ ಸ್ಮರಣ ಸಂಚಿಕೆಗೆ ಜಾಹಿರಾತು ನೀಡುವ ಒಪ್ಪಿಗೆ ಪತ್ರಕವನ್ನು ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಹೇರಳೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶತಂತ್ರಿ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಗೋಪಾಲ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್‌ ಕೊಂಕೋಡಿ, ಬೆಳ್ಳಿಹಬ್ಬ ಸಮಿತಿಯ ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್, ಸಂಚಾಲಕ ವಿನೋದ್‌ಕುಮಾರ್‌ ರೈ ಗುತ್ತು, ಬೆಟ್ಟಂಪಾಡಿ ಇವರು ಉಪಸ್ಥಿತರಿದ್ದರು. ತಿಳಿವಿನ ಹಾದಿಯ ಭದ್ರಬುನಾದಿಗೆಗೆ ಎಳೆಯ ಮಕ್ಕಳಿಗೆ ಪುರೋಹಿತರ ನೇತೃತ್ವದಲ್ಲಿ ಅಕ್ಷರಾಭ್ಯಾಸವು ಸಂಭ್ರಮದಿಂದ ನೆರವೇರಿತು. ದೀಪ ಬೆಳಗಿಸಿ, ಭಾರತಮಾತೆಗೆ ಪುಷ್ಪಾರ್ಚನೆಗೈದು ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಕೋಶಾಧಿಕಾರಿ ವಸಂತ ಸುವರ್ಣ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಮಾತಾಜಿಯವರು ಪ್ರಾರ್ಥನೆಗೈದರು. ಶಾಲೆಯ ಸದಸ್ಯರಾದ ರಮೇಶ್ಚಂದ್ರ ಧನ್ಯವಾದ ಸಲ್ಲಿಸಿ, ಶ್ರೀಮತಿ ಗೀತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
2018/09/20 22:28:18
http://vkms.vivekanandaedu.org/%E0%B2%B8%E0%B2%B0%E0%B2%B8%E0%B3%8D%E0%B2%B5%E0%B2%A4%E0%B2%BF-%E0%B2%B5%E0%B2%BF%E0%B2%97%E0%B3%8D%E0%B2%B0%E0%B2%B9-%E0%B2%B2%E0%B3%8B%E0%B2%95%E0%B2%BE%E0%B2%B0%E0%B3%8D%E0%B2%AA%E0%B2%A3%E0%B3%86/
mC4
"ಮಿಥುನ ರಾಶಿ ವರ್ಷ ಭವಿಷ್ಯ" 2022 ಎಚ್ಚರ – The News Updates December 17, 2021 December 17, 2021 ram pargeLeave a Comment on "ಮಿಥುನ ರಾಶಿ ವರ್ಷ ಭವಿಷ್ಯ" 2022 ಎಚ್ಚರ "ಮಿಥುನ ರಾಶಿ ಭವಿಷ್ಯ" 2022 ಎಚ್ಚರ! ನಮಸ್ಕಾರ ಸ್ನೇಹಿತರೇ, ಈ ಹೊಸ ವರ್ಷದಲ್ಲಿ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ಸಂಕ್ಷಿಪ್ತವಾಗಿ ತಿಳಿದುಕೊಳ್ಳಬಹುದಾಗಿದೆ, ಈ ಹೊಸ ವರ್ಷದಲ್ಲಿ ನಿಮ್ಮ ಪಾಲಿಗೆ ಖರ್ಚುಗಳ ವರ್ಷ ಎಂದೇ ಹೇಳಬಹುದು .ಹೌದು .! ಈ ವರ್ಷ ನಿಮಗೆ ವಿಪರೀತ ಖರ್ಚುಗಳು ಆಗುವ ವರ್ಷ. 100 ರೂಪಾಯಿಗಳನ್ನು ದುಡಿದುಕೊಂಡು ಮನೆಗೆ ಬಂದರೆ 110 ಖರ್ಚು ಮನೆ ಬಾಗಿಲಲ್ಲಿ ಕಾಯುತ್ತಾ ಕುಳಿತಿರುತ್ತದೆ. ಈ ವರ್ಷದಲ್ಲಿ ನಿನ್ನಗೆ ವಿಪರೀತ ಕೆಲಸದ ಒತ್ತಡವಿರುತ್ತದೆ .ನಿಮ್ಮ ಕೆಲಸ ಮಾತ್ರವಲ್ಲದೆ ಬೇರೆ ಅವರ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಮಾಡಬೇಕಾದ ಅನಿವಾರ್ಯತೆ ಬರುತ್ತದೆ .ಅಂದುಕೊಂಡ ಕೆಲಸಗಳು ಯಾವುದೇ ಸರಳವಾಗಿ ಆಗುವುದಿಲ್ಲ. ಪ್ರತಿಯೊಂದು ವಿಷಯಕ್ಕೂ ಸಾಕಷ್ಟು ಅಲೆದಾಡಬೇಕಾಗುತ್ತದೆ ಹಾಗೆಯೇ ವರಮಾನವು ಹೆಚ್ಚಾಗಿರುತ್ತದೆ ಜೊತೆಯಲ್ಲೇ ನಿಮ್ಮ ಅಭಿವೃದ್ದಿಯೂ ಆಗುತ್ತದೆ, ಸರಕಾರದಿಂದ ನಿರೀಕ್ಷಿಸಿದ ಸಹಕಾರ ಸಿಗುತ್ತದೆ. ಆಸ್ತಿಯ ತಕರಾರು ಅಂತ್ಯವಾಗುತ್ತದೆ.ತಾಯಿಯವರ ಆರೋಗ್ಯ ಸುಧಾರಿಸುತ್ತದೆ .ಒಳ್ಳೆಯ ಮನೆಗೆ ವಾಸ್ತವ್ಯ ಬದಲಾಯಿಸುವಿರಿ. ಆರೋಗ್ಯ ಸುಧಾರಿಸುತ್ತದೆ ಕೋರ್ಟ್ ಕೇಸುಗಳು ನಿಮ್ಮಂತೆ ಆಗುತ್ತದೆ. ಹಳೆಯ ಸಾಲಗಳು ಒಂದೊಂದೇ ಹೋಗುತ್ತೀರಿ.ಪುಣ್ಯಕ್ಷೇತ್ರಗಳಿಗೆ ಹೋಗಿ ಬರುವಿರಿ .ಪ್ರಯತ್ನಿಸಿದರೆ ಮನೆಯನ್ನು ಕಟ್ಟುವಿರಿ. ಶುಭ ಕಾರ್ಯಗಳನ್ನು ನೀವೇ ಮುಂದೆ ನಿಂತು ನಡೆಸುವಿರಿ. ಗಂಡ ಹೆಂಡತಿಯರ ನಡುವೆ ಬರುವ ಸಣ್ಣ ಪುಟ್ಟ ಮನಸ್ತಾಪಗಳನ್ನು ದೊಡ್ಡದಾಗಿಸುವುದು ಬೇಡ .ಮಕ್ಕಳ ಜತೆ ಮೃದುವಾಗಿ ವರ್ತಿಸಿ .ಮಗಳಿಗೆ ವರನನ್ನು ಹುಡುಕುವಾಗ ವರನ ಪೂರ್ವಾಪರಗಳನ್ನು ಸರಿಯಾಗಿ ವಿಚಾರಿಸಿ ಮುಂದುವರೆಯುವುದು ಒಳ್ಳೆಯದು. ಆಸ್ತಿ ಪತ್ರಗಳು ಕಳೆದು ಹೋಗದ ಹಾಗೆ ನೋಡಿಕೊಳ್ಳಬೇಕು . ದಾಕ್ಷಿಣ್ಯಕ್ಕೆ ಸಿಕ್ಕು ಯಾರಿಗೂ ಜಾಮೀನು ನೀಡುವುದಾಗಲಿ ಅಥವಾ ಸಹಾಯ ಮಾಡುತ್ತೇನೆ ಮಾತು ಕೊಡುವುದಾಗಲಿ ಮಾಡಬೇಡಿ. ಹಾಗೆ ಮಾಡಿದರೆ ತೊಂದರೆ ಕಟ್ಟಿಟ್ಟ ಬುತ್ತಿ .ಕೆಲವರಿಗೆ ಸಂತಾನ ಭಾಗ್ಯವೂ ಲಭಿಸುತ್ತದೆ .ಮಕ್ಕಳ ಉನ್ನತ ವ್ಯಾಸಂಗ ಉದ್ಯೋಗ ಮದುವೆಗೆ ಸಂಬಂಧಪಟ್ಟ ಫಲಪ್ರದವಾಗುತ್ತದೆ. ಕುಟುಂಬ ಸಮೇತರಾಗಿ ಹೋಗಿ ಹರಕೆಯನ್ನು ತೀರಿಸುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಇರಬೇಕು . ಕೆಲಸದ ಒತ್ತಡಗಳು ಇದ್ದೇ ಇರುತ್ತದೆ. ಆಗಂತುಕರೊಂದಿಗೆ ಎಚ್ಚರಿಕೆಯಿಂದ ಜಾಗ್ರತೆಯಿಂದ ಬೆರೆಯಿರಿ. ವ್ಯಾಪಾರದಲ್ಲಿ ಕೆಲವೊಂದು ಹೊಸ ಅನುಭವಗಳ ಲಭಿಸುತ್ತವೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರಿಸುವರು, ಗಂಡು ಮಕ್ಕಳ ಹುಡುಗಾಟಿಕೆಯನ್ನೂ ಕಡಿಮೆ ಮಾಡಿಕೊಂಡು ತರಗತಿಗಳಲ್ಲಿ ಪಾಠ ಪ್ರವಚನಗಳಲ್ಲಿ ಹೆಚ್ಚುವರಿ ಗಮನ ಹರಿಸುವುದು ಒಳ್ಳೆಯದು, ಗುರುವಾರದಂದು ಗುರು ಭಗವಾನನನ್ನು ಗುರು ಸ್ವರೂಪಿಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನ ಪ್ರಾರ್ಥನೆ ಶಿರಡಿ ಸಾಯಿಬಾಬಾ ಶ್ರೀಧರ್ ಆಶ್ರಮದ ದರ್ಶನಗಳನ್ನು ಮಾಡಿ ಬರುವುದು ಉತ್ತಮ.
2022/06/29 16:35:37
https://thenewsupdates.in/mithuna-rashi-varsha-bhavishya-2022-ecchara/2490/
mC4
ಅಡೋಬ್ ಇಂಡೆಸಿನ್ | ಗಾಗಿ ಉಚಿತ-ಹೊಂದಿರಬೇಕಾದ ಟೆಂಪ್ಲೆಟ್ಗಳನ್ನು ಹೊಂದಿರಬೇಕು ಕ್ರಿಯೇಟಿವ್ಸ್ ಆನ್‌ಲೈನ್ ಬಹುಪಾಲು ಗ್ರಾಫಿಕ್ ವಿನ್ಯಾಸಕರು ಎಲ್ಲಾ ರೀತಿಯ ಯೋಜನೆಗಳ ವಿನ್ಯಾಸಕ್ಕೆ ಅವನತಿ ಹೊಂದುತ್ತಾರೆ: ಸಂಪಾದಕೀಯ, ವೆಬ್ ಅಥವಾ ಮಲ್ಟಿಮೀಡಿಯಾ. ಅದಕ್ಕಾಗಿಯೇ ನಮಗೆ ಉತ್ತಮ ಫಲಿತಾಂಶಗಳನ್ನು ನೀಡುವಂತಹ ಸಂಪನ್ಮೂಲಗಳನ್ನು ಗುರುತಿಸಲು ನಾವು ಕಲಿಯುವುದು ಬಹಳ ಮುಖ್ಯ ಮತ್ತು ಹೆಚ್ಚುವರಿ ಸ್ಫೂರ್ತಿ ಏಕೆ ಅಲ್ಲ, ಅದು ಕೆಲವೊಮ್ಮೆ ಸೂಕ್ತವಾಗಿ ಬರುತ್ತದೆ. ಅಡೋಬ್ ದೈತ್ಯರು ನಮಗೆ ಎಲ್ಲಾ ರೀತಿಯ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಒದಗಿಸುತ್ತಾರೆ ಅಡೋಬ್ ಇಂಡೆಸಿನ್ ಅಡೋಬ್ ಡ್ರೀಮ್‌ವೇವರ್, ವೆಬ್ ವಿಂಡೋಗೆ output ಟ್‌ಪುಟ್ ಹೊಂದಿರುವ ಯೋಜನೆಗಳಲ್ಲಿ ಕೆಲಸ ಮಾಡಲು ಹೆಚ್ಚು ಶಿಫಾರಸು ಮಾಡಲಾಗಿದೆ. ಆದಾಗ್ಯೂ, ಇಂದು ನಾವು ಅಡೋಬ್ ಇಂಡೆಸಿನ್‌ನ ಮೊದಲ, ಟೆಂಪ್ಲೆಟ್ಗಳತ್ತ ಗಮನ ಹರಿಸಲಿದ್ದೇವೆ ಮತ್ತು ಅದೇನೆಂದರೆ, ಮುದ್ರಣವು ಅವುಗಳ .ಟ್‌ಪುಟ್‌ನಂತೆ ಮುದ್ರಿಸುವ ಎಲ್ಲಾ ರೀತಿಯ ಗ್ರಾಫಿಕ್ ಯೋಜನೆಗಳಿಗೆ ಉತ್ತಮವಾಗಿ ಸ್ಪಂದಿಸಲು ಈ ಅಪ್ಲಿಕೇಶನ್ ರಚಿಸಲ್ಪಟ್ಟಿದೆ. ಪೋಸ್ಟರ್‌ಗಳು, ಕ್ಯಾಟಲಾಗ್‌ಗಳು, ಕರಪತ್ರಗಳು, ನಿಯತಕಾಲಿಕೆಗಳು, ಪುಸ್ತಕಗಳು ಮತ್ತು ಬ್ಯಾನರ್‌ಗಳು, ವೆಬ್ ಪುಟಗಳು ಅಥವಾ ಸುದ್ದಿಪತ್ರದಂತಹ ವೆಬ್ ಯೋಜನೆಗಳಿಗಾಗಿ. ನೀವು ಈಗಾಗಲೇ ಗಮನಿಸಿರಬಹುದಾದಂತೆ, ಅನೇಕ ವೃತ್ತಿಪರರು ತಮ್ಮ ಕೆಲಸವನ್ನು ಸಮುದಾಯದೊಂದಿಗೆ ಹಂಚಿಕೊಳ್ಳಲು ನಿರ್ಧರಿಸುತ್ತಾರೆ ಮತ್ತು ಅನೇಕ ಸಂದರ್ಭಗಳಲ್ಲಿ ಯಾವುದೇ ರೀತಿಯ ಉದ್ದೇಶಗಳು ಮತ್ತು ಯೋಜನೆಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳಬಲ್ಲ ಟೆಂಪ್ಲೆಟ್ಗಳಿವೆ. ನಮ್ಮ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಸಂಪನ್ಮೂಲಗಳನ್ನು ಪಡೆಯಲು ನಾವು ಉತ್ತಮ ಸ್ಥಳೀಯ ಸಂಪನ್ಮೂಲ ಬ್ಯಾಂಕುಗಳನ್ನು ಹೊಂದಿದ್ದೇವೆ ಎಂದು ಹೆಚ್ಚು ಶಿಫಾರಸು ಮಾಡಲಾಗಿದೆ. ಅವುಗಳಲ್ಲಿ ಹಲವು ಇವೆ, ಮತ್ತು ಇಂದು ನಾವು ಒಂದನ್ನು ಮಾಡಲು ಹೊರಟಿದ್ದೇವೆ ಅಡೋಬ್ ಇಂಡೆಸಿನ್‌ಗಾಗಿ ಈ ಟೆಂಪ್ಲೆಟ್ಗಳೊಂದಿಗೆ ಅತ್ಯಂತ ಆಸಕ್ತಿದಾಯಕ ಆಯ್ಕೆ, ಎಲ್ಲಾ ಉತ್ತಮ ಗುಣಮಟ್ಟದ ಮತ್ತು ಸುಲಭವಾಗಿ ಬಳಸಬಹುದಾದ ಮತ್ತು ಸಂಪಾದಿಸಬಹುದಾದ. 1 ನೀವು ವ್ಯವಹಾರಕ್ಕೆ ಇಳಿಯುವ ಮೊದಲು ನಾವು ನಿಮಗೆ ಯಾವ ರೀತಿಯ ಶಿಫಾರಸುಗಳನ್ನು ನೀಡಬಹುದು? 2 ನೀವು ತಪ್ಪಿಸಿಕೊಳ್ಳಲಾಗದ ಅಡೋಬ್ ಇಂಡೆಸಿನ್‌ಗಾಗಿ ಟೆಂಪ್ಲೆಟ್ಗಳ ಆಯ್ಕೆ ನೀವು ವ್ಯವಹಾರಕ್ಕೆ ಇಳಿಯುವ ಮೊದಲು ನಾವು ನಿಮಗೆ ಯಾವ ರೀತಿಯ ಶಿಫಾರಸುಗಳನ್ನು ನೀಡಬಹುದು? ನಿಮ್ಮ ಸ್ವಂತ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ನೀವು ಪ್ರಯತ್ನಿಸಬೇಕು ಮತ್ತು ಈ ರೀತಿಯ ಸಂಪನ್ಮೂಲಗಳು ಯಾವಾಗಲೂ ಅವುಗಳನ್ನು ಸ್ಫೂರ್ತಿಯ ಮೂಲವಾಗಿ ಬಳಸಲು ಪ್ರಯತ್ನಿಸುತ್ತವೆ ಮತ್ತು ಅಂತಿಮ ಫಲಿತಾಂಶವು ನಿಮ್ಮಿಂದಲೇ ಆಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲು ಶಿಫಾರಸು ಮಾಡಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ. ಲೇ graph ಟ್ ಯಾವುದೇ ಗ್ರಾಫಿಕ್ ಯೋಜನೆಯ ರಚನಾತ್ಮಕ ಕಾರ್ಯವನ್ನು ಸೂಚಿಸುತ್ತದೆ ಮತ್ತು ಅದರ ಮೂಲಕ ನಾವು ಏನು ಮಾಡುತ್ತೇವೆ ಎಂಬುದು ಅಕ್ಷರಶಃ ನಮ್ಮ ಸಂಪೂರ್ಣ ಪ್ರವಚನವನ್ನು ಉಳಿಸಿಕೊಳ್ಳುವ ಅಸ್ಥಿಪಂಜರಗಳನ್ನು ರಚಿಸುವುದು, ಅದು ಯಾವ ಪ್ರಕಾರವನ್ನು ಲೆಕ್ಕಿಸದೆ. ಸಾಮಾನ್ಯವಾಗಿ ಹೇಳುವುದಾದರೆ, ಈ ರೀತಿಯ ಕೆಲಸವನ್ನು ಸ್ವಚ್ solutions ಪರಿಹಾರಗಳನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಸುಲಭವಾಗಿ ಓದಲು ಅನುವು ಮಾಡಿಕೊಡುವ ಓದಬಲ್ಲ ಪರಿಹಾರಗಳನ್ನು ರಚಿಸುವಂತೆ ಶಿಫಾರಸು ಮಾಡಲಾಗಿದೆ ಮತ್ತು ಈ ರೀತಿಯಾಗಿ ಓದುಗನು ನಮ್ಮ ವಿಷಯದ ಮೂಲಕ ಆರಾಮವಾಗಿ ಸಂಚರಿಸಬಹುದು. ವಿಭಾಗಗಳನ್ನು ಪರಿಶೀಲಿಸಿ ಅದರಲ್ಲಿ ಪ್ರಶ್ನಾರ್ಹವಾದ ಪ್ರಾಜೆಕ್ಟ್ ಅನ್ನು ರಚಿಸಲಾಗಿದೆ ಮತ್ತು ನಮ್ಮ ಪ್ರಾಜೆಕ್ಟ್ ಅನ್ನು ನಾವು ವಿಭಜಿಸುವ ಪ್ರತಿಯೊಂದು ಕ್ಷೇತ್ರಗಳು ಮತ್ತು ಅವುಗಳಲ್ಲಿ ಪ್ರತಿಯೊಂದೂ ಪೂರೈಸುವ ಕಾರ್ಯ. ಈ ಕಾರಣಕ್ಕಾಗಿ, ನಿಮ್ಮ ಕ್ಲೈಂಟ್‌ನೊಂದಿಗೆ ನೀವು ನೇರ ಸಂಪರ್ಕವನ್ನು ಸ್ಥಾಪಿಸುವುದು ಮತ್ತು ನಿಮ್ಮ ವಿನ್ಯಾಸವನ್ನು ಲಭ್ಯವಾಗುವಂತೆ ಮಾಡುವ ಮಾಧ್ಯಮದ ಅಗತ್ಯತೆಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಬಹಳ ಮುಖ್ಯ. ನಾವು ಕೆಲಸ ಮಾಡಲು ಪ್ರಯತ್ನಿಸಬೇಕೆಂದು ಹೆಚ್ಚು ಶಿಫಾರಸು ಮಾಡಲಾಗಿದೆ ಜಾಗತಿಕ ದೃಷ್ಟಿಕೋನ ಮತ್ತು ಈ ರೀತಿಯಾಗಿ ನಮ್ಮ ವಿನ್ಯಾಸವು ನಾವು ಕೆಲಸ ಮಾಡಲು ಹೊರಟಿರುವ ಯೋಜನೆಯನ್ನು ರೂಪಿಸುವ ಉಳಿದ ಗ್ರಾಫಿಕ್ ಅಂಶಗಳೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟಿದೆ. ಉದಾಹರಣೆಗೆ, ನಾವು ಕಂಪನಿಯೊಂದಕ್ಕೆ ಕೆಲವು ಫ್ಲೈಯರ್‌ಗಳನ್ನು ವಿನ್ಯಾಸಗೊಳಿಸಲು ಹೊರಟಿದ್ದರೆ, ಈ ಫ್ಲೈಯರ್‌ಗಳು ಸಂಪೂರ್ಣ ಸಾಮರಸ್ಯದಿಂದ ಮತ್ತು ಈ ಕಂಪನಿಯು ತನ್ನ ವೆಬ್‌ಸೈಟ್, ಅದರ ಲೋಗೊ, ಅದು ಬಳಸುವ ಕಾರ್ಪೊರೇಟ್ ಬಣ್ಣಗಳಲ್ಲಿ ಪ್ರಸ್ತುತಪಡಿಸುವ ನೋಟಕ್ಕೆ ಅನುಗುಣವಾಗಿರುವುದನ್ನು ನಾವು ಪ್ರಯತ್ನಿಸಬೇಕು .. ಉತ್ತಮ ಪ್ರಸ್ತಾಪವು ದೃಷ್ಟಿ ಪ್ರತಿನಿಧಿಸುವ ವ್ಯವಹಾರ ಅಥವಾ ಯೋಜನೆಯೊಂದಿಗೆ 100% ಗುರುತಿಸಬಹುದಾಗಿದೆ. ನಿಮ್ಮ ಮೊದಲ ಉದ್ಯೋಗಗಳಲ್ಲಿ ನಿಮಗೆ ಬೇಕಾಗಬಹುದು ಕೆಲವು ದೃಷ್ಟಿಕೋನ, ಏಕೆಂದರೆ ನಾವು ಕೆಲಸ ಮಾಡುತ್ತಿರುವ ಯೋಜನೆಯನ್ನು ಅವಲಂಬಿಸಿ, ನಮ್ಮ ಕೆಲಸವು ಹೆಚ್ಚು ಕಡಿಮೆ ಸಂಕೀರ್ಣವಾಗಬಹುದು. ಟೆಂಪ್ಲೇಟ್‌ಗಳು ಈ ದೃಷ್ಟಿಕೋನವಾಗಬಹುದು, ವಿಶೇಷವಾಗಿ ಅನುಪಾತಗಳು, ಆಯಾಮಗಳು ಮತ್ತು ರಚನೆಯ ವಿಷಯದಲ್ಲಿ. ವೃತ್ತಿಪರ ಮಟ್ಟದಲ್ಲಿ ಗ್ರಾಫಿಕ್ ವಿನ್ಯಾಸಕ್ಕೆ ನಿಮ್ಮನ್ನು ನಿಜವಾಗಿಯೂ ಅರ್ಪಿಸಲು ನೀವು ಬಯಸಿದರೆ, ನಿಮ್ಮ ಸ್ವಂತ ಕೃತಿಯನ್ನು ರಚಿಸಲು ಪ್ರಯತ್ನಿಸಿ (ಅದನ್ನೇ ಗ್ರಾಫಿಕ್ ಡಿಸೈನರ್ ಆಗಿರುವುದು) ಮತ್ತು ನೀವು ಕಂಡುಕೊಳ್ಳುವ ಎಲ್ಲಾ ಟೆಂಪ್ಲೆಟ್ಗಳನ್ನು ಕೇವಲ ದೃಷ್ಟಿಕೋನ ಅಥವಾ ನೀವು ಯಾವುದಕ್ಕೆ ಉದಾಹರಣೆಯಾಗಿ ಬಳಸಲು ಪ್ರಯತ್ನಿಸಿ ಮಾಡಬಹುದು. ಅಂತರ್ಜಾಲದಲ್ಲಿ ಹಲವಾರು ಬಗೆಯ ಪರಿಹಾರಗಳಿವೆ, ಅವುಗಳಲ್ಲಿ ಕೆಲವು ಉಚಿತ ಮತ್ತು ಇತರರು ಪ್ರೀಮಿಯಂ ಆಗಿರುತ್ತಾರೆ. ಸಾಮಾನ್ಯವಾಗಿ ಎರಡನೆಯದು ಹೆಚ್ಚು ವೃತ್ತಿಪರ ಫಲಿತಾಂಶಗಳನ್ನು ನೀಡುತ್ತದೆ, ಆದರೂ ಅದು ಮಾಡಬೇಕಾಗಿಲ್ಲ. ವಾಸ್ತವವಾಗಿ, ಇಂದಿನ ಆಯ್ಕೆಯಲ್ಲಿ ನೀವು ಅಪಾರ ಸಂಖ್ಯೆಯ ಪರ್ಯಾಯಗಳು ಹೇಗೆ ಇವೆ ಎಂಬುದನ್ನು ನೀವು ನೋಡಬಹುದು, ಅದು ನಾವು ಕೈಗೆಟುಕುವ ಮತ್ತು ಸುಲಭವಾಗಿ ಅನ್ವಯಿಸುವ ರೀತಿಯಲ್ಲಿ ಕಾಣಬಹುದು. ನೀವು ತಪ್ಪಿಸಿಕೊಳ್ಳಲಾಗದ ಅಡೋಬ್ ಇಂಡೆಸಿನ್‌ಗಾಗಿ ಟೆಂಪ್ಲೆಟ್ಗಳ ಆಯ್ಕೆ ಲೇ page ಟ್‌ನಲ್ಲಿ ಕೆಲಸ ಮಾಡಲು ಹೋಗುವ ಎಲ್ಲರಿಗೂ ಹೆಚ್ಚು ಶಿಫಾರಸು ಮಾಡಲಾದ ವೆಬ್ ಪುಟವಿದೆ ಮತ್ತು ಅದು ಅಡೋಬ್ ಇಂಡೆಸಿನ್‌ಗಾಗಿ ಸ್ಟಾಕ್‌ಗೆ ಮೀಸಲಾಗಿರುತ್ತದೆ. ನಿಮ್ಮಲ್ಲಿ ಕೆಲವರು ಈಗಾಗಲೇ ತಿಳಿದಿರಬಹುದು. ಈ ಪುಟ ಸ್ಟಾಕ್ ಇಂಡೆಸಿನ್ ಮತ್ತು ನೀವು ಅದನ್ನು ಬರೆಯಬೇಕೆಂದು ನಾನು ಶಿಫಾರಸು ಮಾಡುತ್ತೇವೆ ಏಕೆಂದರೆ ಖಂಡಿತವಾಗಿಯೂ ನೀವು ಯೋಚಿಸುವುದಕ್ಕಿಂತ ಹೆಚ್ಚು ಶ್ರದ್ಧೆಯಿಂದ ನಿಮಗೆ ಇದು ಅಗತ್ಯವಾಗಿರುತ್ತದೆ. ಅದರಲ್ಲಿ ನೀವು ಮುಂದುವರಿಕೆಗಳು, ಪುಸ್ತಕಗಳು, ನಿಯತಕಾಲಿಕೆಗಳು ಅಥವಾ ಕರಪತ್ರಗಳ ವಿನ್ಯಾಸಕ್ಕೆ ಸಂಪನ್ಮೂಲಗಳನ್ನು ಕಾಣಬಹುದು. ಕನಿಷ್ಠ ಮತ್ತು ಸೊಗಸಾದ ಕಾರ್ಪೊರೇಟ್ ಡಿಪ್ಟಿಚ್ ವ್ಯಾಪಾರ ಫ್ಲೈಯರ್‌ಗೆ ವಿವಿಧೋದ್ದೇಶ ಪರಿಹಾರ ಕ್ಲೀನ್ ಮತ್ತು ಕನಿಷ್ಠ ಕಾರ್ಪೊರೇಟ್ ಫ್ಲೈಯರ್ ದೊಡ್ಡ ಮೇಲ್ಮೈಗಳಿಗಾಗಿ ಜಾಹೀರಾತು ನಿಲುವು ಸ್ವಚ್ and ಮತ್ತು ಕನಿಷ್ಠ ಕಾರ್ಪೊರೇಟ್ ಕರಪತ್ರ ಕನಿಷ್ಠ ಫ್ಲೈಯರ್ ಟೆಂಪ್ಲೆಟ್ ಹಳ್ಳಿಗಾಡಿನ ನಿಯತಕಾಲಿಕ ಟೆಂಪ್ಲೆಟ್ ಫ್ಯಾಷನ್ ಯೋಜನೆಗಳಿಗಾಗಿ ವಿವಿಧ ಬಣ್ಣಗಳನ್ನು ಹೊಂದಿರುವ ಮ್ಯಾಗಜೀನ್ ಟೆಂಪ್ಲೇಟ್ ಜನರಲ್ ಮ್ಯಾಗಜೀನ್ ಟೆಂಪ್ಲೆಟ್ ಸೃಜನಶೀಲ ನಿಯತಕಾಲಿಕೆಗಳಿಗೆ ವರ್ಣರಂಜಿತ ಪ್ರಸ್ತಾಪ ಫ್ಲಾಟ್ ಶೈಲಿಯಲ್ಲಿ ಸಾಮಾಜಿಕ ಮಾಧ್ಯಮ ವರದಿಗಾಗಿ ಸಂಪಾದಿಸಬಹುದಾದ ಟೆಂಪ್ಲೇಟ್ ಸೊಗಸಾದ ಮತ್ತು ಸರಳ ಪುನರಾರಂಭ ಇನ್ಫೋಗ್ರಾಫಿಕ್ನಿಂದ ಫ್ಲಾಟ್ ಪುನರಾರಂಭ ಕನಿಷ್ಠ ಫ್ಲಾಟ್ ಪುನರಾರಂಭ ಸ್ವಚ್ and ಮತ್ತು ಸೊಗಸಾದ ಪುನರಾರಂಭ ಟೆಂಪ್ಲೆಟ್ ಐದು ಪ್ಯಾಕ್ ಪುನರಾರಂಭ ಟೆಂಪ್ಲೆಟ್ ಕಲೋನಿಸ್: ಸೊಗಸಾದ ಮತ್ತು ವಿವೇಚನಾಯುಕ್ತ ಟೆಂಪ್ಲೇಟ್ ಲೇಖನಕ್ಕೆ ಪೂರ್ಣ ಮಾರ್ಗ: ಆನ್‌ಲೈನ್ ಸೃಜನಶೀಲರು » ಜನರಲ್ » ಗ್ರಾಫಿಕ್ ಡಿಸೈನ್ » ತಿಳಿದುಕೊಳ್ಳಲೇಬೇಕು: ಉಚಿತ ವೃತ್ತಿಪರ-ಗುಣಮಟ್ಟದ ಅಡೋಬ್ ಇಂಡೆಸಿನ್ ಟೆಂಪ್ಲೇಟ್‌ಗಳು
2021/12/03 10:35:23
https://www.creativosonline.org/kn/%E0%B2%85%E0%B2%A1%E0%B3%8B%E0%B2%AC%E0%B3%8D-%E0%B2%87%E0%B2%82%E0%B2%A1%E0%B3%86%E0%B2%B8%E0%B2%BF%E0%B2%A8%E0%B3%8D%E2%80%8C%E0%B2%97%E0%B2%BE%E0%B2%97%E0%B2%BF-%E0%B2%89%E0%B2%9A%E0%B2%BF%E0%B2%A4-%E0%B2%B9%E0%B3%8A%E0%B2%82%E0%B2%A6%E0%B2%BF%E0%B2%B0%E0%B2%AC%E0%B3%87%E0%B2%95%E0%B2%BE%E0%B2%A6-%E0%B2%9F%E0%B3%86%E0%B2%82%E0%B2%AA%E0%B3%8D%E0%B2%B2%E0%B3%87%E0%B2%9F%E0%B3%8D%E2%80%8C%E0%B2%97%E0%B2%B3%E0%B3%81.html?utm_source=destacado-inside
mC4
ಕೋವಿಡ್‌: ವಿಮಾನಯಾನ ವಲಯಕ್ಕೆ ಹೆಚ್ಚು ಹಾನಿ - Kannada Muhimmath News Portal ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕವು ವಿಮಾನಯಾನ ವಲಯದ ಮೇಲೆ ಅತಿ ಹೆಚ್ಚಿನ ಪರಿಣಾಮ ಉಂಟುಮಾಡಿದೆ. ಬಹುತೇಕ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ, ವೇತನ ರಹಿತ ರಜೆ ನೀಡುವ, ವೇತನ ಕಡಿತ ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಸ್ಥಿತಿಯು ಕೋವಿಡ್‌ನಿಂದ ಸೃಷ್ಟಿಯಾಗಿದೆ. ಕೊರೊನಾ ವೈರಸ್‌ ಹರಡುವಿಕೆ ಆರಂಭವಾಗುತ್ತಿದ್ದಂತೆಯೇ ಮಾರ್ಚ್‌ 23 ರಿಂದ ಅಂತರರಾಷ್ಟ್ರೀಯ ಹಾಗೂ ಮಾರ್ಚ್‌ 25 ರಿಂದ ದೇಶಿ ವಿಮಾನ ಪ್ರಯಾಣವನ್ನು ತಾತ್ಕಾಲಿಕವಾಗಿ ರದ್ದುಮಾಡಲಾಯಿತು. ಮೇ 25 ರಿಂದ ಸೀಮಿತವಾಗಿ ದೇಶಿ ವಿಮಾನ ಹಾರಾಟ ಆರಂಭವಾಯಿತು. ಹೀಗಾಗಿ ಇಂಡಿಗೊ ಕಂಪನಿಗೆ ಮೊದಲ ಹಣಕಾಸು ವರ್ಷದಲ್ಲಿ ₹ 2,884 ಕೋಟಿ ಹಾಗೂ ಎರಡನೇ ತ್ರೈಮಾಸಿಕದಲ್ಲಿ ₹ 1,194 ಕೋಟಿ ನಷ್ಟವಾಯಿತು. ಸ್ಪೈಸ್‌ಜೆಟ್‌ ಸಹ ಮೊದಲ ತ್ರೈಮಾಸಿಕದಲ್ಲಿ ₹ 600 ಕೋಟಿ ಹಾಗೂ ಎರಡನೇ ತ್ರೈಮಾಸಿಕದಲ್ಲಿ ₹ 112 ಕೋಟಿ ನಷ್ಟ ಅನುಭವಿಸುವಂತಾಯಿತು. ದೇಶಿ ಪ್ರಯಾಣಕ್ಕೆ ಹೋಲಿಸಿದರೆ ವಿದೇಶಿ ವಿಮಾನ ಪ್ರಯಾಣದಲ್ಲಿ ಚೇತರಿಕೆಯು ಬಹಳ ನಿಧಾನವಾಗಿ ಇರುವ ಅಂದಾಜು ಮಾಡಲಾಗಿದೆ. ಇದರಿಂದ ಏರ್‌ ಇಂಡಿಯಾಕ್ಕೆ ಹೆಚ್ಚು ನಷ್ಟವಾಗಲಿದೆ. ಏಕೆಂದರೆ ಅದರ ಶೇ 60ರಷ್ಟು ವರಮಾನವು ಅಂತರರಾಷ್ಟ್ರೀಯ ಕಾರ್ಯಾಚರಣೆಯಿಂದಲೇ ಬರುತ್ತಿತ್ತು ಎಂದು ವಿಮಾನಯಾನ ಸಲಹಾ ಸಂಸ್ಥೆ ಸಿಎಪಿಎ ಈಚೆಗಷ್ಟೇ ಹೇಳಿದೆ. ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ, 2020-21ರಲ್ಲಿ ದೇಶಿ ಮತ್ತು ಅಂತರರಾಷ್ಟ್ರೀಯ ಪ್ರಯಾಣವನ್ನೂ ಒಳಗೊಂಡು ಒಟ್ಟಾರೆಯಾಗಿ 5 ಕೋಟಿಯಿಂದ 6 ಕೋಟಿ ಮಂದಿ ಪ್ರಯಾಣಿಸುವ ಅಂದಾಜು ಮಾಡಲಾಗಿದೆ. 2019-20ರಲ್ಲಿ ಒಟ್ಟಾರೆಯಾಗಿ 20 ಕೋಟಿ ಮಂದಿ ಪ್ರಯಾಣಿಸಿದ್ದರು. ಸದ್ಯ ದೇಶಿ ವಿಮಾನ ಪ್ರಯಾಣವು ಕೋವಿಡ್‌ಗೂ ಮುಂಚೆ ಇದ್ದ ಮಟ್ಟದ ಶೇ 80ರಷ್ಟಿದೆ. 2021ರ ಮಾರ್ಚ್‌ ವೇಳೆಗೆ ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪುವ ನಿರೀಕ್ಷೆ ಮಾಡಲಾಗಿದೆ.
2021/10/23 09:17:01
https://kannada.muhimmathonline.com/2020/12/blog-post_273.html
mC4
ನವಯುಗದ ಸೇವೆ ಬ್ಯಾಂಕ್ ಸನ್ನದ್ಧ | Sanjevani ಕರುನಾಡು ವಿಜಯ ಸೇನೆಯಿಂದ ಬೆಳೆ ಪರಹಾರಕ್ಕಾಗಿ ಆಗ್ರಹ Home ಜಿಲ್ಲೆ ಹುಬ್ಬಳ್ಳಿ ನವಯುಗದ ಸೇವೆ ಬ್ಯಾಂಕ್ ಸನ್ನದ್ಧ ನವಯುಗದ ಸೇವೆ ಬ್ಯಾಂಕ್ ಸನ್ನದ್ಧ ಅಳ್ನಾವರ,ಡಿ.21- ಆರು ದಶಕಗಳ ಪಯಣದಲ್ಲಿ ಗ್ರಾಹಕರ ಹಿತ ಕಾಪಾಡುವದರ ಜೊತೆಗೆ ರೂ ದೃಷ್ಟಿ ವಿಚಾರಧಾರೆ ಹಾಗೂ ಗ್ರಾಹಕ ಕೇಂದ್ರಿಕೃತ ಮತ್ತು ನಂಬಿಕೆಯ ಪರಂಪರೆ ಕಾಪಾಡಲು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ನವಯುಗದ ಸೇವೆ ನಮ್ಮ ಬ್ಯಾಂಕ್ ಸನ್ನದ್ದವಾಗಿದೆ ಎಂದು ಅಧ್ಯಕ್ಷ ಬಸವರಾಜ ತೇಗೂರ ಹೇಳಿದರು. ಇಲ್ಲಿನ ಉಮಾ ಭವನದಲ್ಲಿ ನಡೆದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ 63 ನೇ ವಾರ್ಷಿಕ ಮಹಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡನೆ ಮಾಡಿ ಮಾತನಾಡಿದ ಅವರು, ಸದಸ್ಯರ ಮತ್ತು ಗ್ರಾಹಕರ ಬದಲಾಗುತ್ತಿರುವ ಅವಶ್ಯಕತೆಗಳು ಮತ್ತು ಅನುಕೂಲಕ್ಕೆ ತಕ್ಕಂತೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರುತರ ಜವಾಬ್ದಾರಿ ಆಡಳಿತ ಮಂಡಳಿ ಸಮರ್ಥವಾಗಿ ನಿಬಾಯಿಸಿದೆ ಎಂದರು. ಸಹಕಾರ ವಲಯದ ಉನ್ನತವಾದ ಧ್ಯೇಯ ಹಾಗೂ ಮೌಲ್ಯಗಳ ಆಧಾರದ ಅಡಿಯಲ್ಲಿ ಜನರ ಆರ್ಥಿಕ ಅವಶ್ಯಕತೆ ಪೂರೈಸಿ ನೈತಿಕ ವ್ಯವಹಾರ ಪದ್ದತಿ ಅನುಸರಿಸಲಾಗಿದೆ. ಗ್ರಾಹಕರ ಹಿತ ಕಾಪಾಡುವ ಸಾಮಾಜಿಕ ಹೊಣೆಗಾರಿಕೆ ಸಮರ್ಥವಾಗಿ ನೇರವೇರಸಲು ಆಡಳಿತ ಮಂಡಳಿ ಶ್ರಮಿಸುತ್ತಿದೆ. ಕೊರೊನಾ ಕಾಲಘಟ್ಟದಲ್ಲಿ ಕೂಡಾ ನಿಗದಿತ ಗುರಿ ಮತ್ತು ಯೋಜನೆಗಳಂತೆ ಕಾರ್ಯ ನಿರ್ವಹಿಸಲಾಗಿದೆ ಎಂದರು. ಬ್ಯಾಂಕ್ ರೂ. 2.24 ಕೋಟಿ ಶೇರು ಬಂಡವಾಳ ಹೊಂದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆರ್ಥಿಕ ಕ್ಷೇತ್ರದ ಬದಲಾವಣೆ ಮಧ್ಯ ಬ್ಯಾಂಕ್ ಯಶಸ್ವಿಯಾಗಿ ಕಾರ್ಯ ನಿರ್ವಹಿದಪರಿಣಾಮ ಠೇವಣಿ ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾದಿಸಲಾಗಿದೆ. ಕಳೆದ ಸಾಲಿನ ಕೊನೆಯಲ್ಲಿ ಒಟ್ಟಾರೆ ರೂ. 54.43 ಕೋಟಿ ಇದ್ದ ಠೇವಣಿ ವರದಿ ವರ್ಷದಲ್ಲಿ ರೂ. 59.35 ಕೋಟಿ ಸಂಗ್ರಹವಾಗಿದೆ. ಇದು ಗ್ರಾಹಕರು ನಮ್ಮ ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸದ ಪ್ರತೀಕ. ರೂ. 67.37 ಕೋಟಿ ದುಡಿಯುವ ಬಂಡವಾಳ , ರೂ. 43.83 ಲಕ್ಷ ಲಾಭ ಗಳಿಸಿದೆ. ವಾರ್ಷಿಕ ವಹಿವಾಟು ರೂ. 341.65 ಕೋಟಿ ಆಗಿದೆ ಎಂದರು. ಆರ್ಥಿಕ ವ್ಯವಹಾರದ ಜೊತೆಗೆ ಸಾಮಾಜಿಕವಾಗಿ ಜವಾಬ್ದಾರಿ ತೋರಲು ಬ್ಯಾಂಕ್ ಸದಾ ಮುಂದೆ ಇದೆ. ಪ್ರತಿ ವರ್ಷ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡುತ್ತಾ ಬರಲಾಗಿದೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದೆ. ಪ್ರಧಾನ ಮಂತ್ರಿಗಳ ಕೊರೊನಾ ನಿಧಿಗೆ ರೂ. ಒಂದು ಲಕ್ಷ, ಮುಖ್ಯ ಮಂತ್ರಿಗಳ ಪ್ರವಾಹ ಸಂತ್ರಸ್ಥರ ನಿಧಿಗೆ ರೂ. 51 ಸಾವಿರ, ಅಳ್ನಾವರ ತಾಲ್ಲೂಕ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ತಾಲ್ಲೂಕ ಮಟ್ಟದ ಕ್ರೀಡಾಕೂಟಕ್ಕೆ ತಲಾ ರೂ. 5 ಸಾವಿರ ದೇಣಿಗೆ ನೀಡಲಾಗಿದೆ ಎಂದರು. ಶಾಂಭವಿ ದೇಗಾವಿಮಠ ಪ್ರಾರ್ಥಿಸಿದರು. ಹಿಂದಿನ ವಾರ್ಷಿಕ ಮಹಾಸಭೆಯ ಠರಾವುಗಳನ್ನು ಬಿ.ಜಿ.ಬಾಗೇವಾಡಿ ಓದಿದರು. ಲೆಕ್ಕ ಪರಿಶೋಧನಾ ವರದಿ, ಆರ್ಥಿಕ ತನಿಕೆಗಳ ಪರಿಗಣನೆ ವರದಿಯನ್ನು ಆರ್,ಜೆ. ಪಟ್ಟಣ ಮಂಡಿಸಿದರು. ಅಗಲಿದ ಸದಸ್ಯರ ಹಾಗೂ ಈಚೆಗೆ ನಿಧನರಾದ ಹಾಲಿ ಸದಸ್ಯ ಶಿವಾನಂದ ಹೊಸಕೇರಿ ಅವರ ಆತ್ಮಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಬಿ.ಬಿ. ತೇಗೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರೂಪೇಶ ಗುಂಡಕಲ್, ನಿರ್ದೇಶಕರಾದ ದುಂಡಮ್ಮ ತೇಗೂರ, ನಾರಾಯಣ ಗಡಕರ, ಎಸ್.ಜಿ. ಜಕಾತಿ, ಸಿ.ಕೆ ಪೋಕಾರ, ಮಧು ಬಡಸ್ಕರ್ , ಸಂಧ್ಯಾ ಅಂಬಡಗಟ್ಟಿ, ಎ.ವಿ. ಉಡುಪಿ, ಜೆ.ಆರ್. ತೊಲಗಿ, ಆರ್.ಎ. ಅಷ್ಟೇಕರ, ಎಂ.ಆರ್. ಗಾಣಿಗೇರ, ಎನ್. ಪಿ. ಹಂಜಗಿ, ಎಫ್, ಎಸ್. ಮೇದಾರ, ಎ. ಎಸ್.
2021/01/19 08:27:38
https://www.sanjevani.com/%E0%B2%A8%E0%B2%B5%E0%B2%AF%E0%B3%81%E0%B2%97%E0%B2%A6-%E0%B2%B8%E0%B3%87%E0%B2%B5%E0%B3%86-%E0%B2%AC%E0%B3%8D%E0%B2%AF%E0%B2%BE%E0%B2%82%E0%B2%95%E0%B3%8D-%E0%B2%B8%E0%B2%A8%E0%B3%8D%E0%B2%A8/
mC4
3ನೇ ಟಿ-20ಯಲ್ಲಿ ಭಾರತಕ್ಕೆ ರೋಚಕ ಗೆಲುವು : ಸರಣಿ ಜಯಿಸಿದ ಟೀಮ್ ಇಂಡಿಯಾ November 7, 2017 EnSuddi Author 0 Comments 3rd, cricket, india, match, Newzealand, t-20, tiruvanantapuram ತಿರುವನಂತಪುರಂ ನಲ್ಲಿ ನಡೆದ ಮೂರನೇ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 6 ರನ್ ರೋಚಕ ಜಯಗಳಿಸಿದೆ. ಮಳೆ ಅಡ್ಡಿಪಡಿಸಿದ ಕಾರಣದಿಂದ ತಲಾ 8 ಓವರ್ ಗಳ ಪಂದ್ಯವನ್ನು ಆಡಿಸಲಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 8 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 67 ರನ್ ಮೊತ್ತ ಸೇರಿಸಿತು. ಭಾರತದ ಪರವಾಗಿ ಮನೀಶ್ ಪಾಂಡೆ 17, ಹಾರ್ದಿಕ್ ಪಾಂಡ್ಯ 14, ವಿರಾಟ್ ಕೊಹ್ಲಿ 13 ರನ್ ಗಳಿಸಿದರು. ಕಿವೀಸ್ ಪರವಾಗಿ ಟಿಮ್ ಸೌದೀ ಹಾಗೂ ಇಷ್ ಸೋಧಿ ತಲಾ 2 ವಿಕೆಟ್ ಪಡೆದರು. ಚೇಸ್ ಮಾಡಲಿಳಿದ ನ್ಯೂಜಿಲೆಂಡ್ 8 ಓವರುಗಳಲ್ಲಿ 61 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನುಭವಿಸಿತು. ಕೊನೆಯ ಓವರಿನಲ್ಲಿ ಕಿವೀಸ್ ತಂಡಕ್ಕೆ 19 ರನ್ ಬೇಕಿತ್ತು. ಕೊನೆಯ ಓವರ್ ಬೌಲ್ ಮಾಡಿದ ಹಾರ್ದಿಕ್ ಪಾಂಡ್ಯ ರನ್ ನೀಡಿ ಭಾರತದ ಗೆಲುವಿಗೆ ಕಾರಣರಾದರು. ಜಸ್ಪ್ರೀತ್ ಬುಮ್ರಾಹ್ 2 ಹಾಗೂ ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.
2019/07/22 03:12:43
https://www.ensuddi.com/blog/2017/11/07/cricket-newzealand-india-t-20-tiruvanantapuram-3rd-match/
mC4
ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ. - ಪಂಜು | ಪಂಜು ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮಿಯ ದಿನ ಇಲ್ಲಿ ರಥೋತ್ಸವ ಮತ್ತು ಕೃಷ್ಣಾಷ್ಟಮಿಯ ದಿನ ವಿಶೇಷ ಉತ್ಸವದ ಕಾರ್ಯಕ್ರಮವಿರುತ್ತದೆ. ಇದಲ್ಲದೆ ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವಗಳನ್ನೂ ಆಚರಿಸಲಾಗುತ್ತೆ. ಆವಾಗೆಲ್ಲ ಸುತ್ತಲಿನ ಊರುಗಳ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಲರವ ರಂಗೆರಿಸುತ್ತವೆ. ಊರಿನವರೆಲ್ಲ ತಮ್ಮ ಗದ್ದೆಗಳ ನಾಟಿ ಮಾಡುವ ಮುನ್ನ ದಿನ ಮತ್ತು ನಾಟಿಯ ಕೊನೆ ದಿನ ಅನಂತಪದ್ಮನಾಭನಿಗೆ ನಾಟಿ ಸೇವೆ ಅನ್ನುವ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ಒಂದು ಪಾರಂಪರಿಕ ಆಚರಣೆ. ರಾಮಚಂದ್ರ ಉಪಾಧ್ಯರು ಈ ದೇವಸ್ಥಾನದ ಅರ್ಚಕರು. ವಂಶಪಾರಂಪರಿಕವಾಗಿ ಬಂದ ದೇವಸ್ಥಾನದ ಪೂಜಾ ಕೈಂಕರ್ಯವನ್ನು ಕಳೆದ ಐದು ದಶಕದಿಂದ ಇವರು ಶ್ರದ್ದಾಪೂರ್ವಕವಾಗಿ ನೆಡೆಸಿಕೊಂಡು ಬಂದಿದ್ದಾರೆ. ಮುಂಜಾನೆ ನಾಲ್ಕು ಗಂಟೆಗೆ ಎದ್ದು ದೇವಸ್ಥಾನದ ಬಾಗಿಲು ತೆರೆದು ಧ್ವನಿವರ್ಧಕದಲ್ಲಿ ಸುಪ್ರಬಾತ ಹಾಕಿ ಉಪಾಧ್ಯರು ದೇವರ ಪೂಜೆ ಆರಂಭಿಸುತ್ತಿದ್ದರು. ಸೂರ್ಯನ ಕಿರಣಗಳು ದೇವಳದ ಪ್ರಾಂಗಣವನ್ನು ಸ್ಪರ್ಶಿಸುತ್ತಿದ್ದಂತೆ ಆರಂಭವಾಗುವ ಭಕ್ತರ ಪ್ರವೇಶ ಮಧ್ಯಾಹ್ನ ಮಹಾಪೂಜೆಯವರೆಗೂ ಇರುತ್ತಿತ್ತು, ಮತ್ತು ಸಂಜೆ ಐದಕ್ಕೆ ಆರಂಭವಾಗುವ ದೇವರ ದರ್ಶನ ರಾತ್ರಿ ಮಹಾಪೂಜೆಯ ತನಕವೂ ಇರುತ್ತಿತ್ತು. ಆವತ್ತು ಮಂಗಳವಾರವಾಗಿದ್ದರಿಂದ ಬೆಳಿಗ್ಗೆ ಭಕ್ತರ ಸಂಖ್ಯೆ ತುಂಬಾ ಕಡಿಮೆನೇ ಇತ್ತು. ಸ್ವಲ್ಪ ಸುಧಾರಿಸಿಕೊಳ್ಳೋಣ ಅಂತ ರಾಮಚಂದ್ರ ಉಪಾಧ್ಯರು ದೇವಳದ ಗರ್ಭಗುಡಿಯ ಗೋಡೆಗೆ ಒರಗಿ ಕುಳಿತಾಗ ಮೈಮೇಲೆ ಏನೋ ಬಿದ್ದಂತಾಯಿತು. ಏನಂತ ನೋಡಿದರೆ ಗೋಡೆಯ ಸಿಮೆಂಟಿನ ಚಿಕ್ಕ ಚೂರು ಇವರ ಹೆಗಲ ನೆಲೆ ಬಿದ್ದಿತ್ತು. ಅದನ್ನು ಪರೀಕ್ಷಿಸುತ್ತಿರುವಾಗಲೇ ಇನ್ನೊಂದು ದೊಡ್ಡ ಚೂರು ಇವರ ಪಕ್ಕಕೆ ಬಿದ್ದು ಬಿಡ್ತು, ಜೊತೆಗೆ ಗೋಡೆಯ ಮಣ್ಣಿನ ದೂಳು ಸಹ ಅದನ್ನ ಹಿಂಬಾಲಿಸಿತ್ತು. ಭಯಗೊಂಡ ಉಪಾಧ್ಯರು ಗರ್ಭಗುಡಿಯ ಗೋಡೆಯನ್ನು ದಿಟ್ಟಿಸಿದರು. ಅರ್ಧ ಶತಮಾನದಿಂದ ತೆಂಗಿನಮರದ ಪಕ್ಕಾಸೆಗಳು, ಹೆಂಚುಗಳನ್ನು ಹೊತ್ತುಕೊಂಡು, ನಿಸ್ತೇಜವಾಗಿ ಗೋಡೆಯ ಮೇಲೆ ಮಲಗಿದ್ದವು. ಇವೆಲ್ಲದರ ಭಾರ ಹೊತ್ತಿದ್ದ ಗೋಡೆಗೆ ಬದುಕು ಸಾಕು ಅನ್ನಿಸಿದ್ದನ್ನು ಬಿರುಕುಗಳ ಮೂಲಕ ಉಪಾಧ್ಯರಿಗೆ ಸೂಚ್ಯವಾಗಿ ಅರುಹಿತ್ತು. ಹೌದು ಐವತ್ತು ವರ್ಷ ಹಿಂದೆ ಹುಲ್ಲಿನ ಹೊದಿಕೆಯ ದೇವಳವನ್ನು ಬಹಳಷ್ಟು ತ್ರಾಸ ಪಟ್ಟು ಹೆಂಚಿನ ಹೊದಿಕೆಗೆ ಪರಿವರ್ತಿಸಲಾಗಿತ್ತು. ಅಂದು ಜೀರ್ಣೋದ್ದಾರದ ಕೊನೆಯ ಹಂತಕ್ಕೆ ದುಡ್ಡುಸಾಲದೆ, ದೇವಳದ ಗೋಡೆಯ ಗಾರೆಯನ್ನು ಹಂತವಾಗಿ ಮುಗಿಸುವ ಹೊತ್ತಿಗೆ ಒಂದು ದಶಕವೇ ಕಳೆದಿತ್ತು. ಈಗ ಮತ್ತೆ ದೇವಳದ ಗೋಡೆಗಳು ಅಭದ್ರಗೊಂಡಿವೆ. ಬಹುಶ: ಅನಂತಪದ್ಮನಾಭ ತನಗೆ ಹೊಸ ಗುಡಿಯ ಸಂಕಲ್ಪ ಮಾಡಿದಂತಿದೆ. ಉಪಾಧ್ಯರು ಒಮ್ಮೆ ದೇವರ ಮೂರ್ತಿಯನ್ನು ದೀರ್ಘವಾಗಿ ದಿಟ್ಟಿಸಿದರು. ಪೂರ್ಣ ಮಂದಹಾಸದ ಮೂರ್ತಿಯ ಮುಖದಲ್ಲೊಂದು ನಗುವಿನ ಮಿಂಚೊಂದು ಉಪಾಧ್ಯಾಯರ ಕಣ್ಣಿಗೆ ಅಪ್ಪಳಿಸಿತು. "ಅದು ಅವನ ಸಂಕಲ್ಪ, ನಮ್ಮದೇನಿದೆ. ನಿನ್ನೆ ಉಪಾಧ್ಯರಿಗೆ ಅದರ ಕುರುಹು ತೋರಿಸಿದ್ದಾನೆ. ಅವನ ಸಂಕಲ್ಪಕ್ಕೆ ಅವನೇ ದಾರಿ ತೋರಿಸುತ್ತಾನೆ, ನಮ್ಮದೇನಿದ್ದರೂ ಬರೀ ಪ್ರಯತ್ನ ಮಾತ್ರ. ಐದಾರು ಊರಿನವರು ಅನಂತಪದ್ಮನಾಭನನ್ನು ನಂಬಿದ್ದಾರೆ, ಒಂದೆರಡು ಕೋಟಿ ಕಲೆಕ್ಷನ್ ಮಾಡುವುದು ದೊಡ್ಡ ಕೆಲಸವೇನಲ್ಲ. ಹೊಸ ದೇವಸ್ಥಾನ ನಿರ್ಮಿಸೋಣ, ಎಲ್ಲಾ ಪಕ್ಕ ಪ್ಲಾನ್ ಮಾಡಿದ್ರೆ ಮೂರೇ ತಿಂಗಳು. ಏನಂತೀರಾ ?" ದೇವಳದ ಧರ್ಮದರ್ಶಿ ಹಾಗು ಸ್ಥಳೀಯ ತಾಲೂಕು ಪಂಚಾಯಿತ್ ಸದಸ್ಯ ಶ್ರೀನಿವಾಸ ಶೆಟ್ರು ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ನುಡಿದಾಗ ಸೇರಿದ್ದ ಊರ ಪ್ರಮುಖರು ಅದಕ್ಕೆ ತಲೆತೂಗಿದರು. ಮತ್ತೆ ಮಾತು ಮುಂದುವರಿಸಿದ ಶೆಟ್ರು "ನೋಡಿ ಹಣದ ವಿಷಯ ನನಗೆ ಬಿಡಿ. ನಾನು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ ನಾಯಕ್ರು ಸೇರಿ ದೇವಸ್ಥಾನ ಕಟ್ಟಲು ಬೇಕಾದ ಫಂಡ್ ಕಲೆಕ್ಟ್ ಮಾಡ್ತೀವಿ, ಬೇರೆ ನಿರ್ಮಾಣದ ಉಸ್ತುವಾರಿನ ಉಪಾಧ್ಯಾಯರು ಮತ್ತು ಅಕ್ಕಿಮಿಲ್ಲಿನ ಸದಾಶಿವ ಕಿಣಿಯವರು ನೋಡಿಕೊಳ್ಳಲಿ. ಮತ್ತೆ ಬೇರೆ ನೀವೆಲ್ಲ ಬೇರೆ ಒಂದೊಂದು ಉಸ್ತುವಾರಿ ನೋಡಿಕೊಳ್ಳಿ. ನಾಳೇನೇ ನಮ್ಮ ಇಂಜಿನಿಯರ್ ಆದರ್ಶ ಹೆಗ್ಡೆಯನ್ನು ಕರೆಸಿ ದೇವಸ್ಥಾನದ ಪ್ಲಾನ್ ರೆಡಿ ಮಾಡುವ. ಏನಂತೀರಾ ?" ಮತ್ತೆ ಸಭೆಯನ್ನು ಕೇಳಿದರು, ಶೆಟ್ರ ಮಾತಿಗೆ ಇಲ್ಲ ಅನ್ನುವ ಮನಸ್ಸು ಯಾರಿಗೂ ಇರಲಿಲ್ಲ. ದೊಡ್ಡಮಟ್ಟದಲ್ಲಿ ದೇವಸ್ಥಾನ ಕಟ್ಟುವ ಐತಿಹಾಸಿಕ ಘೋಷಣೆ ದೇವಸ್ಥಾನದ ಪ್ರಾಂಗಣದಲ್ಲಿ ಮೊಳಗಿತು ಮತ್ತು ಸಭೆಯ ಪ್ರಯುಕ್ತ ತರಿಸಿದ್ದ ಚಹಾ ಮತ್ತು ಬಿಸ್ಕುಟ್ ಅಂಬೊಡೆಯ ತಿಂದು ಎಸೆದಿದ್ದ ಪ್ಲಾಸ್ಟಿಕ್ ತಟ್ಟೆಗಳು ಸಂಜೆಯ ತಂಗಾಳಿಗೆ ದೇವಸ್ಥಾನದ ರಥಬೀದಿಯ ತುಂಬೆಲ್ಲ ಪಥಸಂಚಲನ ನೆಡೆಸುತ್ತಿದ್ದವು. ಪೂರ್ಣ ಮಂದಹಾಸದ ಅನಂತಪದ್ಮನಾಭನ ಮುಖದಲಿ ಮಂದಹಾಸವಿತ್ತು. ಸೂರ್ಯ ಪಥ ಬದಲಾವಣೆಯ ದಿನವಾದ ಮಕರ ಸಂಕ್ರಾಂತಿಯಂದು ದೇವಸ್ಥಾನದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಯಿತು. ಜೀರ್ಣೋದ್ದಾರದ ಒಟ್ಟು ಒಂದೂವರೆ ಕೋಟಿ ಅಂದಾಜು ವೆಚ್ಚದ ನೀಲನಕ್ಷೆ ಸಿದ್ದವಾಗಿತ್ತು. ದೇವಳದ ಬಲ ಭಾಗ ದಲ್ಲಿರುವ ಪುಷ್ಕರಣಿಯ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ ಗೆ ದೇವರ ಮೂರ್ತಿಯನ್ನ ಸ್ಥಳಾಂತರಿಸಿದರು. ಉಪಾಧ್ಯರಿಗೆ ದೇವರ ಪೂಜೆಯ ಜೊತೆಗೆ ಕಟ್ಟಡ ನಿರ್ಮಾಣದ ಉಸ್ತುವಾರಿಯೂ ಹೊಣೆ ಹೊರಬೇಕಾಯಿತು. ಎಪ್ಪರ ಹರೆಯದಲ್ಲೂ ಸ್ವಲ್ಪವೂ ದಣಿವಿರದೆ ಎಲ್ಲವನ್ನು ನಿಭಾಯಿಸುತ್ತಿದ್ದರು. ಅಂದು ಉಪಾಧ್ಯರು ಬೆಳಗಿನ ಪೂಜೆ ಮುಗಿಸಿ ಉಪಹಾರ ಸೇವಿಸಲು ಮನೆಗೆ ಬಂದಾಗ ಅಚ್ಚರಿ ಕಾಡಿತ್ತು. ಅವರ ಮಗ ಪ್ರಸಾದ ಇದ್ದಕ್ಕಿದ್ದಂತೆ ಮನೆಯಲ್ಲಿ ಪ್ರತ್ಯಕ್ಷನಾಗಿದ್ದ. ಎರಡು ತಿಂಗಳ ಹಿಂದೆಯಷ್ಟೇ ರಥೋತ್ಸವ ಮುಗಿಸಿ ಹುಬ್ಬಳಿಗೆ ಕೆಲಸಕ್ಕೆ ಅಂತ ಹೋಗಿದ್ದವ ಮತ್ತೆ ಯಾಕೆ ಬಂದ, ಅದು ವಿಷಯ ತಿಳಿಸದೇ ?. ಉಪಾಧ್ಯರ ಮುಖದಲ್ಲಿ ಆತಂಕದ ಕರಿಮೋಡ ಆವರಿಸಿತ್ತು. ಹೌದು ಪ್ರಸಾದನ ವಯಸ್ಸು ನಲವತ್ತರ ಆಸುಪಾಸಿಗೆ ಬಂದಿದ್ದರೂ ಇನ್ನು ಬದುಕಲ್ಲಿ ನೆಲೆಕಾಣುವ ಹೆಣಗಾಟಕ್ಕೆ ಪೂರ್ಣವಿರಾಮ ಬಿದ್ದಿಲ್ಲ. ಜೊತೆಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇತ್ತ ಓದಲು ಆಗದೆ, ಅತ್ತ ಪುರೋಹಿತಿಗೆ ಮಾಡಲು ಒಲ್ಲದೆ ಬಿಸಿನೆಸ್ ಮಾಡ್ತೇನೆ ಅಂತ ಹಠ ಹಿಡಿದ್ದ ಮಗನಿಗೆ ತಾನು ಕೂಡಿಟ್ಟ ಹಣದಲ್ಲಿ ಹುಬ್ಬಳ್ಳಿಯಲ್ಲಿರುವ ಹೆಂಡತಿಯ ತಮ್ಮನ ಮೂಲಕ ಉಪಾಧ್ಯರು ಒಂದು ಹೋಟೆಲು ಮಾಡಿಸಿದ್ದರು. ಒಂದೈದು ವರ್ಷ ಹೋಟೆಲ್ ನೋಡೆಸುವ ಹೊತ್ತಿಗೆ ಆತ ಸುಸ್ತಾಗಿದ್ದ. ಲಾಸಾಯಿತು ಅಂತ ಅಡ್ಡದುಡ್ಡಿಗೆ ಹೋಟೆಲ್ ಮಾರಿದ್ದ. ಆಮೇಲೆ ಪ್ರಸಾದ ಅಲ್ಲಿ ಇಲ್ಲಿ ಅಂತ ಕೆಲಸ ಮಾಡುತ್ತಾ ಒಂದಷ್ಟು ವರ್ಷ ಕಾಲಹರಣ ಮಾಡಿದ್ದ. ರಥೋತ್ಸವಕ್ಕೆ ಬಂದವ ' ಸ್ಟಾರ್ ಹೋಟೆಲಿನಲ್ಲಿ ಮ್ಯಾನೇಜರ್ ಕೆಲಸ ಸಿಕ್ಕಿದೆ' ಅಂತ ಹೋದವ ಎರಡೇ ತಿಂಗಳಿಗೆ ಮರಳಿ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ. " ಅದು ಅಪ್ಪಯ್ಯ, ಆ ಸ್ಟಾರ್ ಹೋಟೆಲ್ ಶುರು ಆಪುಕೆ ಇನ್ನು ಮೂರ್ ತಿಂಗಳು ಇದೆಯಂತೆ. ಅಲ್ಲೀತನಕ ಅಲ್ಲಿದ್ದು ಏನು ಮಾಡುದು, ಇಲ್ಲಿ ಹೊಸ ದೇವಸ್ಥಾನ ಬೇರೆ ಮಾಡ್ತಾ ಇದ್ದಾರೆ, ಆ ಜವಾಬ್ದಾರಿಯೆಲ್ಲ ನೀವೇ ನೋಡ್ಕಂತ ಇದ್ರಿ ಅಂತೇ. . ಅಪ್ಪಯ್ಯಂಗೆ ಕಷ್ಟ ಆಗ್ತಾ ಇದೆ ಅಂತ ತಂಗಿ ಫೋನ್ ಮಾಡ್ದಾಗ ಹೇಳ್ದ್ಲು. ಅದ್ಕೆ ನಿಮಗೆ ಸ್ವಲ್ಪ ಸಹಾಯ ಆಗ್ಲಿ ಅಂತ ಬಂದೆ " ಮಗ ಪ್ರಸಾದನ ಮಾತು ಉಪಾಧ್ಯಾಯರಿಗೆ ಸರಿ ಅನ್ನಿಸಿತು. "ಹೌದು ಈ ಸಮಯದಲ್ಲಿ ನೀನಿದ್ರೆ ನನಗೆ ಸ್ವಲ್ಪ ನಿರಾಳ ಆಗುತ್ತೆ. " ಅಂದ ಉಪಾಧ್ಯರು ಮಗನಿಗೆ ದೇವಸ್ಥಾನದ ನಿರ್ಮಾಣದ ಯೋಜನೆಗಳ ಬಗ್ಗೆ ಉಪಹಾರ ಸೇವಿಸುತ್ತಾ ವಿವರಿಸಿದರು. ಪ್ರಸಾದ ತಂದೆಯ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ, ದೇವಸ್ಥಾನ ನಿರ್ಮಾಣದ ಉಸ್ತುವಾರಿಯನ್ನು ತಾನೇ ವಹಿಸಿಕೊಂಡು ಅದ್ಭುತವಾಗಿ ನಿಭಾಯಿಸುತ್ತಿದ್ದ, ಬೆಳಿಗ್ಗೆ ಬಂದರೆ ಮನೆಗೆ ರಾತ್ರಿನೇ ಮರಳುತ್ತಿದ್ದ, ಅಗತ್ಯ ಬಿದ್ದರೆ ತಾನೇ ಕಲ್ಲು ಮಣ್ಣು ಸಿಮೆಂಟ್ ಹೊರುತ್ತಿದ್ದ, ಗೋಡೆಗಳಿಗೆ ನೀರು ಬಿಡುತ್ತಿದ್ದ. ಒಟ್ಟಾರೆ ಜೀವನದಲ್ಲಿ ಮೊದಲ ಬಾರಿಗೆ ಊರವರ ಕೈಲಿ ಹೊಗಳಿಸಿಕೊಂಡಿದ್ದ. ಅಂದು ರಾತ್ರಿ ಗಂಟೆ ಹತ್ತಾಗಿತ್ತು. ಏಕಾದಶಿಯ ಉಪವಾಸ ಆಗಿದ್ದರಿಂದ ಒಂದು ಲೋಟ ಹಾಲು ಕುಡಿದು ಮಲಗಲು ಹೊರಟಿದ್ದ ರಾಮಚಂದ್ರ ಉಪಾಧ್ಯರಿಗೆ ಮನೆಮುಂದೆ ಶ್ರೀನಿವಾಸ ಶೆಟ್ರ ಕಾರು ಬಂದು ನಿಂತಾಗ ಅಚ್ಚರಿಯ ಜೊತೆಗೆ ಆತಂಕವು ಆಯಿತು. ಈ ರಾತ್ರಿಯಲ್ಲಿ ಯಾಕೆ ಬಂದಿದ್ದಾರೆ ಅಂತ ಅಂದುಕೊಳ್ಳುತ್ತಿರುವಾಗಲೇ ಮನೆಯೊಳಗೆ ಬಂದ ಶೆಟ್ರು " ಆತಂಕ ಬೇಡ ಉಪಾದ್ಯರೆ, " ಅಂತ ಕೈಯಲ್ಲಿದ್ದ ಕಿಟ್ ಬ್ಯಾಗನ್ನು ಕುರ್ಚಿಯಮೇಲಿಟ್ಟು, ತಾವು ಬಂದ ಕಾರಣ ವಿವರಿಸತೊಡಗಿದರು. "ಅದು ದೇವಸ್ಥಾನಕ್ಕೆ ಡೊನೇಷನ್ ಕಲೆಕ್ಟ್ ಮಾಡ್ತಾ ಇದ್ದೀನಲ್ಲ, ಹಾಗೆ ನಮ್ಮ ಎಂಪಿ ಮತ್ತು ಎಂ ಎಲ್ ಎ ಹತ್ರ ಕೇಳಿದ್ದೆ. ಅವ್ರು ಕೆಲವ್ ಕಂಟ್ರಾಕ್ಟರ್ ಮತ್ತು ರಿಯಲ್ ಎಸ್ಟೇಟ್ ನವರ ಹತ್ರ ಹೇಳಿದ್ರು. ಇವತ್ ಅವರ ಹತ್ರ ಕಲೆಕ್ಷನ್ಗೆ ಹೋಗಿದ್ದೆ. ಅವ್ರದ್ದೆಲ್ಲ ಬ್ಲಾಕ್ ಮನಿ ಅಲ್ವ, ಅದ್ಕೆ ಎಲ್ಲ ಕ್ಯಾಷಲ್ಲೇ ಕೊಟ್ಟಿದ್ದಾರೆ, ಒಟ್ಟು ಹದಿನೆಂಟು ಲಕ್ಷ ಇದೆ ಈ ಬ್ಯಾಗಿನಲ್ಲಿ. ಇದನ್ ಬ್ಯಾಂಕಿಗೆ ಹಾಕೋ ರಗಳೆ ಬೇಡ. ನಾಳೆ ನಮ್ಮ ಮೆಟೀರಿಯಲ್ ಮತ್ತು ಲೇಬರ್ ಕಂಟ್ರಾಕ್ಟರ್ ನ ಬರೋಕೆ ಹೇಳಿದ್ದೆ. ಅವರಿಗೆ ಡೈರೆಕ್ಟ್ ಕೊಟ್ಟಬಿಡುವ. ನಿಮಗೆ ಗೊತ್ತಲ್ಲ, ಎಲ್ಲ ಕಡೆ ಐಟಿ ರೇಡ್ ಆಗ್ತಾ ಇದೆ, ಅದ್ಕೆ ನಮ್ಮ ಮನೆಯಲ್ಲಿ ಇಡ್ಕೊಳ್ಳೋಕ್ಕೆ ಭಯ. ಇದೊಂದ್ ರಾತ್ರಿ ದುಡ್ಡು ನಿಮ್ಮಮನೆಯಲ್ಲೇ ಇರ್ಲಿ, ಜೋಪಾನ " ಅಂದ ಶ್ರೀನಿವಾಸ ಶೆಟ್ರು, ಉಪಾಧ್ಯರ ಹೆಂಡತಿ ಕೊಟ್ಟ ಮಜ್ಜಿಗೆ ಕುಡಿದು ಹೊರಟು ಹೋದರು. ಇತ್ತ ಉಪಾಧ್ಯರು ದೇವರ ಕೋಣೆಯಲ್ಲಿಯಲ್ಲಿ ದುಡ್ಡಿನ ಬ್ಯಾಗು ಇಟ್ಟು ಬೀಗ ಹಾಗಿ ಅಲ್ಲೇ ಹೊರಗೆ ಮಲಗಿಕೊಂಡರು. ಎಂದಿನಂತೆ ಉಪಾಧ್ಯರು ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಬಂದು ಪೂಜೆ ಆರಂಭಿಸಲು ದೇವರ ಮೂರ್ತಿಯನ್ನು ತೊಳೆಯುತ್ತಿದ್ದಾಗ ಮೊಬೈಲ್ ರಿಂಗಣಿಸಿತು. ನೋಡಿದರೆ ಮನೆಯ ನಂಬರಿಂದ ಕರೆ ಬರುತ್ತಿತ್ತು. ಕರೆ ಸ್ವೀಕರಿಸಿದ ಉಪಾಧ್ಯರು ಅತ್ತ ಕಡೆ ತಮ್ಮ ಪತ್ಮಿಯ ಅಳು ಕೇಳಿ ಗಾಬರಿಯಾದರು. ಅಳುವಿನ ಸಂಧಿಯೊಳಗೆ ತೂರಿಕೊಂಡು ಬರುತ್ತಿದ್ದ ಹೆಂಡತಿಯ ಒಂದೊಂದೇ ಮಾತುಗಳು ಉಪಾಧ್ಯರ ಬದುಕಿನ ಬೇರುಗಳನ್ನು ಕತ್ತರಿಸುತ್ತಿದ್ದವು. "ರೀ ಬೆಳಿಗ್ಗೆಯಿಂದ ಪ್ರಸಾದ ಮನೆಯಲ್ಲಿ ಕಾಣ್ತಾ ಇಲ್ಲ. ಎಲ್ಲಾ ಕಡೆ ಹುಡುಕಿದೆ, ಮೊಬೈಲ್ ಮಾತ್ರ ಮನೆಯಲ್ಲಿ ಇದೆ, ಅವನ ಬ್ಯಾಗು ಕಾಣ್ಸ್ತ ಇಲ್ಲ, ಮತ್ತೆ ದೇವರ ಕೊನೆಯಲ್ಲಿ ಇಟ್ಟಿದ ದುಡ್ಡಿನ ಬ್ಯಾಗು ಕಾಣ್ಸ್ತ ಇಲ್ಲ. ದೇವರ ಕೋಣೆ ಬೀಗ ಒಡೆದಿದೆ. ಪ್ರಸಾದ ದುಡ್ಡ್ ತಕಂಡ್ ಓಡಿ ಹೋದ ಅನ್ಸುತ್ತೆ, ಎಲ್ಲಾ ಮುಗಿತು, ದೇವ್ರೇ " ಉಪಾಧ್ಯ ಹೆಂಡತಿಯ ಅಳು ಜೋರಾಗುತ್ತಾಳೆ ಇತ್ತು. ರಾಮಚಂದ್ರ ಉಪಾಧ್ಯರಿಗೆ ಕಣ್ಣು ಕತ್ತಲೆ ಬಂದು, ಕಣ್ಣು ರೆಪ್ಪೆಗಳು ಒಂದಕ್ಕೊಂದು ಹತ್ತಿರವಾಗುತ್ತಿದ್ದ ಆ ಗಳಿಗೆಯಲ್ಲಿ ಅವರು ಒಮ್ಮೆ ದೇವರ ಮೂರ್ತಿಯತ್ತ ದೃಷ್ಟಿ ಹರಿಸಿದರು. ಪೂರ್ಣ ಮಂದಹಾಸದ ಅನಂತಪದ್ಮನಾಭನ ಮುಖದಲ್ಲಿ ಮಂದಹಾಸ ಹಾಗೆ ಇತ್ತು. . . . . !!
2020/02/23 07:50:06
http://panjumagazine.com/?p=15719
mC4
ಬ್ರಾಹ್ಮಣರನ್ನು ನಿಂದಿಸುವುದು ಒಂದು ಫ್ಯಾಶನ್ ಆಗಿದೆ – UKSuddi ಬ್ರಾಹ್ಮಣರನ್ನು ನಿಂದಿಸುವುದು ಒಂದು ಫ್ಯಾಶನ್ ಆಗಿದೆ ಬ್ರಾಹ್ಮಣರನ್ನು ಮನಸ್ಸಿಗೆ ಬಂದಂತೆ ತೆಗಳುವುದು ಹಾಗೂ ಅವರ ತೇಜೋವಧೆ ಮಾಡುವುದು ಇದೆಲ್ಲ ಇಂದಿನ ದಿನದಲ್ಲಿ ಒಂದು ಹುಚ್ಚು ಫ್ಯಾಶನ್ ಆಗಿದೆ. ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳಬೇಕಿದ್ದರೆ ಕೆಲವು ನಿಯಮಗಳು ಇವೆಯಂತೆ. ಅವುಗಳಲ್ಲಿ ಮೊದಲನೆಯದು ಬ್ರಾಹ್ಮಣರನ್ನು ನಿಂದಿಸಬೇಕು ಮತ್ತು ನಾಸ್ತಿಕತೆಯನ್ನು ಹಬ್ಬಿಸಬೇಕು. ಬುಡಮೇಲು ಮಾಡುವ ಕೃತ್ಯದಲ್ಲಿ ತೊಡಗಿಕೊಂಡವರು ಇಂದಿನ ತಥಾಕಥಿತ ಬುದ್ಧಿಜೀವಿಗಳು ಮಾತ್ರವಲ್ಲ ಇದಕ್ಕೆ ಒಂದು ಪರಂಪರೆ ಇದೆ. ಪ್ರಾಚೀನ ಕಾಲದಲ್ಲಿ 'ಚಾರ್ವಾಕರು' ಎಂಬ ಹೆಸರನ್ನು ಹೊತ್ತವರು ಇದ್ದರು. ಇವರು ಒಮ್ಮೆಲೇ ಪ್ರಸಿದ್ಧರಾಗಬೇಕೆಂದು ಬ್ರಾಹ್ಮಣರನ್ನು ನಿಂದಿಸಿದರು. ಆದರೆ ಬ್ರಾಹ್ಮಣರಿಗೆ ಏನೂ ಆಗಲಿಲ್ಲ. ಚಾರ್ವಾಕರು ಮಾತ್ರ ಹೇಳಹೆಸರಿಲ್ಲದಂತೆ ಹೋದರು. ಚಾರ್ವಾಕ ದರ್ಶನಕ್ಕೆ ಮಹತ್ವ ಸಿಗಲಿಲ್ಲ. ಇಂದೂ ಕೆಲವರು ಚಾರ್ವಾಕರ ಅನುಯಾಯಿಗಳಿದ್ದಾರೆ. ಇವರಿಗೆ ಸಂಸ್ಕೃತ, ವೇದ, ಉಪನಿಷತ್ತು, ಭಗವದ್ಗೀತೆ ಮೊದಲಾದ ವಿಷಯಗಳಲ್ಲಿ ಸಾಕಷ್ಟು ಜ್ಞಾನವಿಲ್ಲ. ಆದರೆ ಈ ಗ್ರಂಥಗಳನ್ನು ನಿಂದಿಸಿದರೆ ಏನಾದರೂ 'ಕಾಂಟ್ರವರ್ಸಿ' ಸೃಷ್ಟಿಸಬಹುದೆಂದು ಗೊತ್ತಿದೆ. ನಿಜವಾಗಿ ಬುದ್ಧಿಜೀವಿಗಳಲ್ಲಿ ಬುದ್ಧಿ ಇದೆ. ಆದರೆ ಈ ಬುದ್ಧಿ ವಿಕಾರವಾಗಿದೆ. ಯಾಕೆಂದರೆ ಅವರ ಬುದ್ಧಿಗೆ ಉತ್ತಮ ಸಂಸ್ಕಾರದ ಹಿನ್ನೆಲೆ ಇಲ್ಲ. ಇನ್ನು ಕೆಲವರು ಯಾರನ್ನೋ ಮೆಚ್ಚಿಸಲಿಕ್ಕಾಗಿ ಬ್ರಾಹ್ಮಣರನ್ನು ತೆಗಳುತ್ತಾರೆ. ಇದು 'ಬೇಳೆ ಬೇಯಿಸಿಕೊಳ್ಳುವ ರೀತಿ'. ಬ್ರಾಹ್ಮಣರನ್ನು ನಿಂದಿಸುವಾಗ ಬುದ್ಧಿಜೀವಿಗಳಿಗೆ ಇರುವ ಭರವಸೆ ಎಂದರೆ ಅವರು ಎಷ್ಟು ನಿಂದಿಸಿದರೂ ಏನೂ ಮಾಡುವುದಿಲ್ಲ. ನಮ್ಮ ಜೀವಕ್ಕಂತೂ ಅಪಾಯವಿಲ್ಲ ಎನ್ನುವುದೇ ಆಗಿದೆ. ಬ್ರಾಹ್ಮಣರು ಇಂದಿನ ದಿನದಲ್ಲಿ ಅಲ್ಪಸಂಖ್ಯಾತರು. ಅವರಲ್ಲಿ ಒಗ್ಗಟ್ಟಿನ ಅಭಾವವಿದೆ. ಬ್ರಾಹ್ಮಣ ದ್ವೇಷಕ್ಕೆ ಬುದ್ಧಿಜೀವಿಗಳಿಗೆ ಇರುವ ಎರಡು ಪ್ಲಸ್ ಪಾಯಿಂಟ್ ಇದಾಗಿದೆ. ಸರಕಾರದ ಧೋರಣೆಯನ್ನು ನೋಡಿ ಬ್ರಾಹ್ಮಣರನ್ನು ಟೀಕಿಸುವ ವ್ಯವಹಾರದವರೂ ಇದ್ದಾರೆ. ಇತ್ತೀಚೆಗೆ ಬ್ರಾಹ್ಮಣರ ನಿಂದೆಗೆ ಪ್ರತಿಯಾಗಿ ಅಭಿಪ್ರಾಯಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದು ಬುದ್ಧಿಜೀವಿಗಳ ನಿದ್ದೆಗೆಡಿಸಿದೆ ಎಂಬುದಂತೂ ಸತ್ಯ. ಬ್ರಾಹ್ಮಣರಲ್ಲಿ ಜಾಗೃತಿ ಉಂಟಾಗುತ್ತಿದೆ. ಅವರೂ ಸಹ ಎದುರೇಟು ಕೊಡಬಲ್ಲರು ಎನ್ನುವುದು ಅವರಿಗೆ ಅರ್ಥವಾಗಿದೆ. ಸೋಮಯಾಗದ ನಿಜವಾದ ವಿಷಯವನ್ನು ತಿಳಿದವರು ಈ ಪ್ರಕಾರ ಮಾತನಾಡುವುದಿಲ್ಲ. ಬುದ್ಧಿಜೀವಿಗಳಿಗೆ ಸೋಮಯಾಗ ಒಂದು ನೆಪಕ್ಕೆ ಮಾತ್ರ. ಬ್ರಾಹ್ಮಣರ ಮೇಲೆ ಗೂಬೆ ಕೂರಿಸಲು ಒಂದು ಕಾರಣ ಬೇಕಿತ್ತು ಅಷ್ಟೆ. ತಿಳಿಯದೇ ಇರುವ ವಿಷಯದಲ್ಲಿ ಮಹಾಪಂಡಿತರಂತೆ ಮಾತನಾಡಿ ತಮ್ಮ ಬಂಡವಾಳವನ್ನು ಹರಾಜು ಹಾಕಿಕೊಂಡಿದ್ದಾರೆ ಅಷ್ಟೆ. ಇಂತಹ ಬುದ್ಧಿಜೀವಿಗಳ ಹುನ್ನಾರ ಬಹುಕಾಲ ನಡೆಯುವುದಿಲ್ಲ. ಯಾಕೆಂದರೆ ಬ್ರಾಹ್ಮಣರಲ್ಲಿ ಅದರಲ್ಲಿಯೂ ವಿಶೇಷವಾಗಿ ಬ್ರಾಹ್ಮಣ ಯುವಕರಲ್ಲಿ ಜಾಗೃತಿ ಉಂಟಾಗಿದೆ.
2022/05/21 08:24:01
https://uksuddi.in/2016/05/13/538/
mC4
ಲೋಕಸಭೆಯಲ್ಲಿ ಸಿದ್ದಾರ್ಥ ಸಾವಿನ ಬಗ್ಗೆ ಚರ್ಚೆಗೆ ತಿವಾರಿ ಆಗ್ರಹ | Manish Tewari seeks debate on VG Siddhartha in the Lok Sabha - Kannada Oneindia ನವದೆಹಲಿ, ಜುಲೈ 31: "ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ವಿ..ಜಿ.ಸಿದ್ಧಾರ್ಥ ಅವರ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣವಾಗಿರಬಹುದು" ಎಂಬ ಸಂಶಯ ಹರಡುತ್ತಿದೆ. ಈ ಬಗ್ಗೆ ಕೂಡಲೇ ತನಿಖೆಗೆ ಆದೇಶಿಸಬೇಕು. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದು ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಕೇಳಿಕೊಂಡಿದ್ದಾರೆ. ಸಿದ್ದಾರ್ಥ ಬರೆದಿರುವ ಪತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಐಟಿ ಇಲಾಖೆಯ ಕಾರ್ಯನಿರ್ವಹಣೆ ಈ ಸಂಶಯವನ್ನು ಇನ್ನಷ್ಟು ಪುಷ್ಠೀಕರಿಸುತ್ತದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿ, "ವಿಜಿ ಸಿದ್ದಾರ್ಥ ಅವರ ಸಾವಿನ ಹಿಂದೆ ಐಟಿ ಇಲಾಖೆ ಕಿರುಕುಳ ಇರಬಹುದು ಎಂಬ ಅನುಮಾನಕ್ಕೆ ಉತ್ತರ ಸಿಗಬೇಕಿದೆ, ನವೋದ್ಯಮದಾರರಿಗೆ ಇದರಿಂದ ಯಾವ ಸಂದೇಶ ಹೊರ ಬರಲಿದೆ?" ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ರಾಜ್ಯಸಭೆಯಲ್ಲೂ ವಿ.ಜಿ ಸಿದ್ದಾರ್ಥ ಸಾವಿನ ಬಗ್ಗೆ ಕಾಂಗ್ರೆಸ್ ನಾಯಕರು ದನಿ ಎತ್ತಿದ್ದಾರೆ. ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಮಾತನಾಡಿ, 'ತೆರಿಗೆ ಭಯೋತ್ಪಾದನೆಗೆ ಸಿದ್ದಾರ್ಥ ಬಲಿಯಾಗಿದ್ದಾರೆ, ದೇಶದಲ್ಲಿ ಉದ್ಯಮಿಗಳನ್ನು ತೆರಿಗೆ ಇಲಾಖೆ ಯಾವ ರೀತಿ ಹಿಂಸೆ ಮಾಡುತ್ತಿದೆ ಎಂಬುದಕ್ಕೆ ಸಿದ್ದಾರ್ಥ ಸಾವು ನಿದರ್ಶನ' ಎಂದಿದ್ದಾರೆ. ಕಾಫಿ ಡೇ ಮಾಲೀಕ ಸಿದ್ದಾರ್ಥ ಸಾವಿನ ಸೂತಕದಲ್ಲಿ ಚಿಕ್ಕಮಗಳೂರಿನ ಕಾಫಿ ಡೇ ಸಂಸ್ಥೆ ತುಂಬಿದೆ. ಪ್ರತಿಷ್ಠಿತ ಎಬಿಸಿ ಕಂಪನಿ ಸೇರಿದಂತೆ ಸೇರಾಯ್ ರೆಸಾರ್ಟ್, ಅಂಬರ್ ವ್ಯಾಲಿ ಶಾಲೆ, ವಿ.ಟಿ.ಸಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಸ್ಟೇಟ್ ಕೆಲಸಕ್ಕೆ ಅಗಮಿಸಿದ ಸಾವಿರಾರು ಕಾರ್ಮಿಕರನ್ನು ವಾಪಸ್ ಕಳುಹಿಸಲಾಗಿದೆ. ಹಲವೆಡೆ ಶೋಕಾಚರಣೆಯಿಂದ ಅಘೋಷಿತ ಬಂದ್ ಆಚರಿಸಲಾಗುತ್ತಿದೆ. vg siddhartha sm krishna congress mangaluru ಎಸ್ಎಂ ಕೃಷ್ಣ ಕೆಫೆ ಕಾಫಿ ಡೇ ಮಂಗಳೂರು Congress leader Manish Tewari has given adjournment notice in the Lok Sabha on the alleged harassment by I-T officials that "led to the death of Siddhartha".
2021/06/16 23:00:50
https://kannada.oneindia.com/news/new-delhi/manish-tewari-seeks-debate-on-vg-siddhartha-in-the-lok-sabha-172666.html
mC4
|ಅಣ್ಣ, ಅಕ್ಕ ಮತ್ತು ಪ್ರಭು - literary - News in kannada, vijaykarnataka ಅಣ್ಣ, ಅಕ್ಕ ಮತ್ತು ಪ್ರಭು Updated: May 6, 2012, 01:09AM IST ವಚನ ಚಳವಳಿ ಸೃಷ್ಟಿಸಿದ ನೂರಾರು ಪ್ರತಿಭೆಗಳಲ್ಲಿ ಕನ್ನಡ ಜನ ಸಮುದಾಯದ ಮನೋಕೋಶದಲ್ಲಿ ಆತ್ಮೀಯವಾಗಿ ನೆಲೆ ನಿಂತಿರುವವರು ಮೂವರು ಮಾತ್ರ. ಅವರೇ ಬಸವಣ್ಣ, ಅಕ್ಕಮಹಾದೇವಿ ಮತ್ತು ಅಲ್ಲಮ ಪ್ರಭು. ಈ ಆಪ್ತತೆ ಸಾಧ್ಯವಾಗಿದ್ದು ಹೇಗೆ ಎನ್ನುವುದೊಂದು ಕೌತುಕದ ವಿದ್ಯಮಾನ. ಈ ಸಂಬಂಧಗಳು ಈಗಲೂ ಆ ಸಾತತ್ಯವನ್ನು ಕಾಪಾಡಿಕೊಂಡಿರುವುದು ಅಸಾಧಾರಣ. * ಡಾಎಂ. ಚಿದಾನಂದಮೂರ್ತಿ 'ಅಣ್ಣ', 'ಅಕ್ಕ'ಗಳು ರಕ್ತಸಂಬಂಧ ಸೂಚಕಗಳು; 'ಪ್ರಭು' ಕೂಡ ಸಂಬಂಧ ಸೂಚಕ- ಆದರೆ ಅದು ಸಾಮಾಜಿಕ; ಒಬ್ಬ ವ್ಯಕ್ತಿ ಯಾವನಲ್ಲಿ ಗೌರವ ಇಟ್ಟಿರುವನೋ ಅವನೇ 'ಪ್ರಭು'. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅಣ್ಣ, ಅಕ್ಕ, ಪ್ರಭು ಎಂದೊಡನೆ ಸಹಜವಾಗಿ ಜ್ಞಾಪಕಕ್ಕೆ ಬರುವುದು ಬಸವಣ್ಣ, ಅಕ್ಕಮಹಾದೇವಿ ಮತ್ತು ಅಲ್ಪಮಪ್ರಭು. ಈ ಮೂವರನ್ನು ಜ್ಞಾಪಿಸುವ ಆ ಮೂರು ಸಂಬಂಧ ಸೂಚಕಗಳ ಬಳಕೆಯ ಹಿಂದಿನ ಭಾವನಾತ್ಮಕತೆಯನ್ನು ವಿಶ್ಲೇಷಿಸುವುದು ಈ ಪ್ರಬಂಧದ ಮುಖ್ಯ ಉದ್ದೇಶ. ಬಸವಣ್ಣನ ಬದುಕು, ನಡೆ, ನುಡಿ ಇವೆಲ್ಲ ಜನರಿಗೆ ತೀರಾ ಸಮೀಪವಾಗಿದ್ದುವೆಂಬುದು ಈಗ ಜಗತ್ ಪ್ರಸಿದ್ಧ. ಅವನು ಹುಟ್ಟಿನಿಂದ ಶ್ರೀಮಂತ ಬ್ರಾಹ್ಮಣನ ಮಗ; ವೃತ್ತಿಯಿಂದ ಬಿಜ್ಜಳ ಚಕ್ರವರ್ತಿಯ ಆರ್ಥಿಕ ವ್ಯವಹಾರದ ಮುಖ್ಯಸ್ಥ, ಎಂದರೆ ಭಂಡಾರಿ. ಅವನು ಅವೆಲ್ಲವನ್ನೂ ಲೆಕ್ಕಿಸದೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಕೆಳವರ್ಗದವರ ಜೊತೆ ಗುರುತಿಸಿಕೊಂಡು ಅದೇ ಕ್ಷಣದಲ್ಲಿ ಬಿಜ್ಜಳನ ಅರಮನೆಯಲ್ಲಿ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ. ಅವನು 'ಸಂಬೋಳಿ'ಗಳೆಂದೇ ಕರೆಸಿಕೊಳ್ಳುತ್ತಿದ್ದ ಅಸ್ಪೃಶ್ಯರ ಮನೆಗಳಿಗೆ ಸಂತೋಷದಿಂದ ಹೋಗಿ ಅಲ್ಲಿ ಅವರ ಜೊತೆ ಶಿವಪೂಜೆ ಮಾಡಿ, ಊಟ ಮಾಡಿದ. 'ಸಂಬೋಳಿ'ಗಳಿಗೆ ಊರಿನ ಒಳಕ್ಕೆ ಪ್ರವೇಶವಿರುತ್ತಿರಲಿಲ್ಲ. ಅವರು ಅಕಸ್ಮಾತ್ ಊರಿನ ಒಳಕ್ಕೆ ಬಂದರೂ ಕೈಲಿದ್ದ ಕೋಲನ್ನು (ಸಂಬಳಿಗೋಲು) ನೆಲಕ್ಕೆ ಕುಟ್ಟುತ್ತ 'ಸಂಬೋಳಿ, ಸಂಬೋಳಿ' (ದೂರ ಹೋಗಿ, ದೂರ ಹೋಗಿ) ಎಂದು ಕೂಗಬೇಕಿತ್ತು. ಅವರನ್ನು ಬಸವಣ್ಣ ತನ್ನ ಮನೆಗೆ ಬರಮಾಡಿಕೊಂಡ. ಇದರಿಂದ ಮೇಲ್ಜಾತಿಯವರ ತೀವ್ರ ಕೋಪಕ್ಕೆ ಪಾತ್ರನಾದ. ಶ್ರೀಮಂತನೂ ಅಧಿಕಾರಿಯೂ ಮೇಲುಜಾತಿಯವನೂ ಆಗಿದ್ದ ಬಸವಣ್ಣನ ಪ್ರಾಮಾಣಿಕ ನಡವಳಿಕೆ ಸಾಮಾನ್ಯರಿಗೆ ಅತ್ಯಂತ ಪ್ರಿಯವಾಯ್ತು: ಅವನು ಅವರಿಗೆ ಆಪ್ತನಾದ, ಆತ್ಮೀಯನಾದ, 'ಅಣ್ಣ' ಆದ. ಆ 'ಅಣ್ಣ' ಪದವು ರಕ್ತಸಂಬಂಧ ಸೂಚಕವಲ್ಲ. ಆದರೆ ಜನರಿಗೆ ರಕ್ತಸಂಬಂಧಿ ಅಣ್ಣನಿಗಿಂತಲೂ ಅವನು ಹತ್ತಿರವಾದ. ಅವನ ಸರಳ ವಚನಗಳು ಅವನ ಹೃದಯದಿಂದ ಮೂಡಿಬಂದುವಾಗಿದ್ದು ಜನ ಅವನನ್ನು ತಮ್ಮವನೆಂದೇ, ತಮ್ಮ ಬಾಂಧವನೆಂದೇ, 'ಅಣ್ಣನೆಂದೇ ಭಾವಿಸಿದರು. ಮಹಾದೇವಿ ಮಧ್ಯಮ ವರ್ಗದ ಸ್ಫುರದ್ರೂಪಿ ಹೆಣ್ಣು ಮಗಳು. ಅವಳನ್ನು 'ಕೌಶಿಕ' ಎಂದು ಕಾವ್ಯಗಳಲ್ಲಿ ಹೆಸರಿಸಲಾಗಿರುವ ಕಸಪಯ್ಯನಾಯಕ ಎಂಬ ಬಳ್ಳಿಗಾವೆ ಪ್ರದೇಶದ (ಶಿಕಾರಿಪುರ ತಾಲೂಕು) ಸಾಮಂತ ದೊರೆಯು ಮದುವೆ ಮಾಡಿಕೊಳ್ಳಲು ಒತ್ತಾಯಿಸಿದ. ಅವಳು ಮನಸ್ಸಿಲ್ಲದ ಮನಸ್ಸಿನಿಂದ ಅವನ ಜೊತೆ ಕೆಲ ಕಾಲ ಬದುಕಿದಳು. ಅವಳು ಶ್ರೀಶೈಲದ ಮಲ್ಲಿಕಾರ್ಜುನ ದೈವದ ಭಕ್ತಳಾಗಿದ್ದಳು ಮಾತ್ರವಲ್ಲ, ಅವನೇ ತನ್ನ ನಿಜವಾದ ಗಂಡ ಎಂದು ನಂಬಿದ್ದವಳು. ಒಂದು ಘಟ್ಟದಲ್ಲಿ ಅವಳಿಗೂ ಕಸಪಯ್ಯ ನಾಯಕನಿಗೂ ಭಿನ್ನಾಭಿಪ್ರಾಯ ಉಂಟಾಗಿ, ತಾನು ತೊಟ್ಟಿದ್ದ ಶ್ರೀಮಂತ ವೇಷಭೂಷಣಗಳನ್ನೆಲ್ಲ ತ್ಯಜಿಸಿ, ಸರಳ ಉಡುಪು ಧರಿಸಿ, ಅವನ ಸಂಗವನ್ನೂ ತ್ಯಜಿಸಿ ವೈರಾಗ್ಯಪರತೆಯಿಂದ ಶ್ರೀಶೈಲಕ್ಕೆ ಹೋದಳು. ಒಬ್ಬ ಪ್ರಭಾವಶಾಲಿ ಶ್ರೀಮಂತ ಸಾಮಂತನ ರಾಣಿಯಾಗಿದ್ದವಳು ವಿರಾಗಿಯಾಗಿ ಅವನನ್ನು ಅಷ್ಟೇ ಅಲ್ಲ, ಸಾಂಸಾರಿಕ ಜೀವನವನ್ನೇ ತ್ಯಜಿಸಿ ಅರಮನೆಯಿಂದ ಹೊರಗೆ ಬಂದು ಏಕಾಂಗಿಯಾಗಿ ಅಲೆದಾಡಿದ್ದು ಆ ಕಾಲಕ್ಕೆ ಬಹುದೊಡ್ಡ ಜೀವಂತ ಕತೆಯಾಗಿರಬೇಕು. ಅವಳ ಬಾಯಿಂದ ಅಪ್ರಯತ್ನಪೂರ್ವಕವಾಗಿ ಹೊರಬಿದ್ದ ವಚನಗಳು ಜನರ ಹೃದಯವನ್ನು ಮಿಡಿದವು. ಅವಳು ಕಲ್ಯಾಣಕ್ಕೆ ಹೋಗಿ ಬಸವ, ಅಲ್ಲಮ, ಚನ್ನಬಸವ ಇತ್ಯಾದಿ ಶ್ರೇಷ್ಠರನ್ನು ಭೇಟಿ ಮಾಡಿ, ಅವರ ಮೆಚ್ಚುಗೆ ಪಡೆದು ಶ್ರೀಶೈಲಕ್ಕೆ ಹೋಗಿ ಅಲ್ಲಿನ ಕದಳಿ ವನದಲ್ಲಿ ಸಾಧನೆ ಮಾಡಿ ಶಿವೈಕ್ಯಳಾದಳು. ಅವಳು ದೈವನಿಷ್ಠೆ, ಧೈರ್ಯ, ತ್ಯಾಗಗಳಿಂದ ಜನರಿಗೆ 'ಅಕ್ಕ' ಆದಳು. ಅಲ್ಲಮ ಕೆಳವರ್ಗಕ್ಕೆ, ಬಹುಶಃ ಶೂದ್ರ ವರ್ಗಕ್ಕೆ ಸೇರಿದ ಜನಾಂಗದಲ್ಲಿ ಹುಟ್ಟಿ ಬೆಳೆದ ಒಬ್ಬ ಕಲಾವಿದ. ದೇವಾಲಯದ 'ದಾಸಿ'ಯರ ನರ್ತನಕ್ಕೆ ಅನುಗುಣವಾಗಿ ಮೃದಂಗ ವಾದ್ಯ ನುಡಿಸುತ್ತಿದ್ದ ನಿಪುಣ. ಅವನ ಆರಾಧ್ಯ ದೇವನಾದ ಗೊಗ್ಗೇಶ್ವರ ದೇವಾಲಯಕ್ಕೆ ಬಂದ ಕಾಮಲತೆ ಎಂಬ ವೈಶ್ಯ ವರ್ಗದ ಶ್ರೀಮಂತ ಸುಂದರಿಯಿಂದ ಆಕರ್ಷಿತನಾದ. ಮೇಲ್ಜಾತಿಯ ಹೆಣ್ಣನ್ನು ಕೆಳಜಾತಿಯ ಗಂಡು ಪ್ರೀತಿಸಿ ಮದುವೆಯಾಗುವುದು 12ನೇ ಶತಮಾನದ ಸಾಂಪ್ರದಾಯಿಕ ಸಮಾಜಕ್ಕೆ ಪ್ರಿಯವಾಗಲಿಲ್ಲ. ಈ ಮಧ್ಯೆ ಯೌವನದಲ್ಲಿಯೇ ಅಕಾಲ ಮರಣ ಹೊಂದಿದ ಪ್ರಿಯತಮೆ ಕಾಮಲತೆಯ ಅಗಲಿಕೆಯ ನೋವು ಅವನಲ್ಲಿ ಲೌಕಿಕ ಜೀವನದ ಬಗ್ಗೆ ಜುಗುಪ್ಸೆಯನ್ನು ಉಂಟುಮಾಡಿ ವೈರಾಗ್ಯದತ್ತ ಪ್ರೇರೇಪಿಸಿತು. ಅವನು ಸಾಧಕನಾಗಲು ಭೂಗತ ದೇವಾಲಯದ ಅನಿಮಿಷನ ಅಸ್ತಿ ಪಂಜರದ ಕೈಲಿದ್ದ ಶಿವಲಿಂಗವು ದೊರಕಿದ್ದು ಪ್ರೇರಣೆಯಾಯಿತು. ಪ್ರೀತಿಯ ಅಗಲಿಕೆಯ ನೋವನ್ನು ಭಕ್ತಿಯಾಗಿ, ವೈರಾಗ್ಯವಾಗಿ ಪರಿವರ್ತಿಸಿಕೊಂಡ. ಒಬ್ಬ ಯೋಗಿಯಾಗಿ, ಅಂತರ್ಮುಖಿಯಾಗಿ ಭಾರತಾದ್ಯಂತ ಸಂಚರಿಸಿದ. ಅವನು ಕಾಮಲತೆಯ ಅಕಾಲಿಕ ಸಾವಿನಿಂದ ಅನುಭವಿಸಿದ ಯಾತನೆ ಅವನು ಮುಂದೆ ಲೌಕಿಕ ಜೀವನದ ಜೊತೆ ಬೆರೆಯಲು ಅಡ್ಡಿಯಾಯಿತು. ಅವನ ಬಾಯಿಂದ ಹೊರಟ ವಚನಗಳು ಒಬ್ಬ ಅದ್ಭುತ ಸಾಧಕನ, ಯೋಗಿಯ ನಿಗೂಢ ಭಾಷೆಯವು. ಅವನ ವಚನಗಳು ಜನಸಾಮಾನ್ಯರನ್ನು ತಲುಪುವುದು ಕಷ್ಟವಾದರೂ ಅವನು ಒಬ್ಬ ಸಾಧಕನಾಗಿ, ಸಿದ್ಧನಾಗಿ ಜನರನ್ನು ಆಕರ್ಷಿಸಿದ; ಜನರ ಮನಸ್ಸನ್ನು ಗೆದ್ದ. ಜನರ ಅಪಾರ ಗೌರವ, ಭಕ್ತಿಯನ್ನು ಸಂಪಾದಿಸಿದ. ಅವನು ಜನತೆಗೆ 'ಪ್ರಭು' ಆದ: 'ಪ್ರಭುದೇವ'ನೂ ಆದ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಮನಸ್ಸು ಬಸವ, ಮಹಾದೇವಿ, ಅಲ್ಲಮರ ಹೆಸರುಗಳ ಜತೆ ಅಣ್ಣ, ಅಕ್ಕ, ಪ್ರಭು ಈ ಸಂಬಂಧ ಸೂಚಕಗಳನ್ನು ಸೇರಿಸಿರುವುದು ಬಹು ಅರ್ಥಪೂರ್ಣವಾಗಿ ತೋರುತ್ತದೆ. ಬಸವ, ಮಹಾದೇವಿ, ಅಲ್ಲಮ- ಇವು ಅವರ ಹುಟ್ಟು ಹೆಸರುಗಳು. ಅವರ ಕಾಲದಲ್ಲೇ ಜನಸಾಮಾನ್ಯರು ಅವರನ್ನು ಅಣ್ಣ, ಅಕ್ಕ, ಪ್ರಭು ಎಂದು ಭಾವಿಸಿದ್ದು ಮುಂದಿನ ಶತಮಾನಗಳಲ್ಲೂ ಮುಂದುವರಿಯಿತು. ಇದು ಒಂದು ಸಾಮೂಹಿಕ ಕ್ರಿಯೆ. ಅಣ್ಣ, ಅಕ್ಕ, ಪ್ರಭು ಈ ಪದಗಳನ್ನು ಬೇರೆ ಶರಣರ ವಿಷಯದಲ್ಲಿ ಬಳಸಿದ್ದರೂ ಅವು ಒಟ್ಟಾರೆ ಹೆಚ್ಚಾಗಿ ಜನಮಾನಸಕ್ಕೆ ಸೂಚಿಸುವುದು ಬಸವ, ಮಹಾದೇವಿ, ಅಲ್ಲಮರನ್ನು. ಇಂದಿಗೂ ಬಸವಣ್ಣನ 'ಕಳ ಬೇಡ, ಕೊಲ ಬೇಡ...', 'ಉಳ್ಳವರು ಶಿವಾಲಯ ಮಾಡುವರು...'; ಅಕ್ಕಮಹಾದೇವಿಯ 'ಅಕ್ಕ ಕೇಳವ್ವ ಅಕ್ಕಯ್ಯ, ನಾನೊಂದ ಕನಸ ಕಂಡೆ...' ಇಂತಹ ವಚನಗಳು ಅತಿ ಜನಪ್ರಿಯ; ಅವು ಜನರ ಭಾವನಾತ್ಮಕ ಹೃದಯವನ್ನು ತಟ್ಟುತ್ತವೆ. ಅಂತಹ ಯಾವುದೇ ವಚನವೂ ಅಲ್ಲಮ ಪ್ರಭುವಿನಲ್ಲಿ ಕಾಣಿಸದು. ಅಲ್ಲಮನ ವಚನಗಳು ಏಕಾಂಗಿ ಸಾಧಕನ ಆಧ್ಯಾತ್ಮಿಕ ಲೋಕವನ್ನು ತೆರೆದಿಡುತ್ತವೆ. ಅವು ನಿಜವಾಗಿಯೂ ಅರ್ಥವಾಗುವುದು ಕೆಲವರಿಗೆ. ಅಣ್ಣ, ಅಕ್ಕ, ಪ್ರಭು ಈ ಸಾಮಾನ್ಯ ಪದಗಳು 12ನೇ ಶತಮಾನದ ಶರಣರ ಹಿನ್ನೆಲೆಯಲ್ಲಿ ವಿಶೇಷ ಅರ್ಥವಂತಿಕೆ ಪಡೆಯುತ್ತವೆ. ಬಸವ, ಮಹಾದೇವಿ, ಅಲ್ಲಮ ಇವರು ಕ್ರಮವಾಗಿ ಕನ್ನಡ ಜನತೆಯ ಅಣ್ಣ, ಅಕ್ಕ, ಪ್ರಭು. ಇಂದಿಗೂ ಆ ಮೂವರು ಶರಣ ಚಳವಳಿಯ, ವಚನ ಸಾಹಿತ್ಯದ ಸಾರಸರ್ವಸ್ವ, ಪ್ರಾತಿನಿಧಿಕ. ಈಗಲೂ ಜನತೆ ಬಸವಣ್ಣ, ಅಕ್ಕಮಹಾದೇವಿಯರ ಜತೆ ಆಗಾಗ್ಗೆ ಆತ್ಮೀಯತೆಯಿಂದ ಪರಸ್ಪರ ಮಾತನಾಡುತ್ತಾರೆ; ಅಲ್ಲಮ ಪ್ರಭುದೇವರ ಬಾಯಿಂದ ಬರುವ ಮಾತುಗಳನ್ನು ವಿರಳವಾಗಿ ಭಕ್ತಿಯಿಂದ ಆಲಿಸುತ್ತಾರೆ.
2017/11/21 12:12:13
https://vijaykarnataka.indiatimes.com/lavalavk/weekly-magazine/literary/-/articleshow/13006905.cms
mC4
ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್ – Karavali Kirana ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್ ನವದೆಹಲಿ: ಪಾಕಿಸ್ತಾನದಲ್ಲೊಬ್ಬ ಹೊಸ ಬ್ಯಾಟಿಂಗ್ ಮಾಂತ್ರಿಕ ಹುಟ್ಟಿಕೊಂಡಿದ್ದಾನೆ. 22 ವರ್ಷದ ಬಾಬರ್ ಅಜಮ್ ಅವರನ್ನು ವಿಶ್ವ ಕ್ರಿಕೆಟ್ ಲೋಕದ ರೈಸಿಂಗ್ ಸ್ಟಾರ್ ಎಂದು ಕರೆಯಲಾಗುತ್ತಿದೆ. ಪಾಕಿಸ್ತಾನದ ಮುಖ್ಯ ಕೋಚ್ ಮಿಕಿ ಆರ್ಥರ್ ಅವರಂತೂ ಬಾಬರ್ ಅಜಂ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿದ್ದಾರೆ. "ಮುಂದಿನ ದಿನಗಳಲ್ಲಿ ಈತ ಅಸಾಮಾನ್ಯ ಕ್ರಿಕೆಟಿಗನಾಗುತ್ತಾನೆ. ಈತನ ವಯಸ್ಸಿನಲ್ಲಿ ಕೊಹ್ಲಿ ಆಡುತ್ತಿದ್ದ ರೀತಿಯನ್ನು ನೆನಪಿಸುವಂತಿದೆ ಬಾಬರ್ ಆಟ," ಎಂದು ಮಿಕಿ ಆರ್ಥರ್ ಹೇಳಿದ್ದಾರೆಂದು ಪಾಕ್'ನ ಎಕ್ಸ್'ಪ್ರೆಸ್ ಟ್ರಿಬೂನ್ ಪತ್ರಿಕೆ ವರದಿ ಮಾಡಿದೆ. ಪಾಕ್'ನ ಜೂನಿಯರ್ ಕ್ರಿಕೆಟ್'ನಿಂದ ಬೆಳೆದು ಬಂದಿರುವ ಬಾಬರ್ ಅಜಂ ಗಳಿಸಿರುವ ಹಾಗೂ ಗಳಿಸುತ್ತಿರುವ ರನ್'ಗಳೇ ಈತನ ಪ್ರತಿಭೆಗೆ ಕೈಗನ್ನಡಿಯಾಗಿವೆ. ವರ್ಷದ ಹಿಂದೆ ಏಕದಿನ ಕ್ರಿಕೆಟ್'ಗೆ ಕಾಲಿಟ್ಟ ಬಾಬರ್ ಅಜಂ 18 ಪಂದ್ಯಗಳಿಂದ ಈಗಾಗಲೇ 3 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾನೆ. ಈತ ಬರೋಬ್ಬರಿ 52.11 ಸರಾಸರಿಯಲ್ಲಿ 886 ರನ್ ಗಳಿಸಿದ್ದಾನೆ. ಎರಡು ತಿಂಗಳ ಹಿಂದೆ ಟೆಸ್ಟ್ ಕ್ರಿಕೆಟ್'ಗೆ ಅಡಿಯಿಟ್ಟ ಈತ 3 ಪಂದ್ಯಗಳಿಂದ 51.44 ಸರಾಸರಿಯಲ್ಲಿ 232 ರನ್ ಪೇರಿಸಿದ್ದಾನೆ. ಮೊನ್ನೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಈತ ಅಜೇಯ 90 ರನ್ ಗಳಿಸಿ ಗಮನ ಸೆಳೆದಿದ್ದಾನೆ. ತಾಂತ್ರಿಕವಾಗಿ ನಿಪುಣನಾಗಿರುವ ಬಾಬರ್ ಅಜಂ ಬಹಳ ಸ್ಥಿತ ಪ್ರಜ್ಞ. ಈತನ ಈ ಗುಣವೇ ಈತನ ರನ್ ಬೇಟೆಗೆ ಸಹಾಯವಾಗಿದೆ. ಕಮ್ರಾನ್ ಅಕ್ಮಲ್ ಮತ್ತು ಉಮರ್ ಅಕ್ಮಲ್ ಅವರ ಸಂಬಂಧಿಯಾಗಿರುವ ಬಾಬರ್ ಅಜಂ ಪಾಕಿಸ್ತಾನದ ಭವಿಷ್ಯದ ಬ್ಯಾಟಿಂಗ್ ತಾರೆ ಎಂಬುದು ಬಹುತೇಕ ನಿಶ್ಚಿತವಾಗಿದೆ.
2019/03/25 05:53:52
http://karavalikirana.com/82696
mC4
ಅಧಿಕಾರಿ ಕುಟುಂಬಕ್ಕೆ ಮೀಸಲು ಬೇಕೆ? | Udayavani – ಉದಯವಾಣಿ Monday, 28 Sep 2020 | UPDATED: 12:12 AM IST ಅಧಿಕಾರಿ ಕುಟುಂಬಕ್ಕೆ ಮೀಸಲು ಬೇಕೆ? ಹೊಸದಿಲ್ಲಿ: ಸರಕಾರದ ಉನ್ನತ ಹುದ್ದೆಯಲ್ಲಿರುವ ಎಸ್‌ಸಿ, ಎಸ್‌ಟಿ ಸಮುದಾಯದ ಉದ್ಯೋಗಸ್ಥರ ಕುಟುಂಬ ಸದಸ್ಯರಿಗೆ ಬಡ್ತಿಯಲ್ಲಿ ಮೀಸಲು ಏಕೆ? ಇತರ ಹಿಂದುಳಿದ ವರ್ಗ (ಒಬಿಸಿ)ದವರಲ್ಲಿ ಸರ್ಕಾರಿ ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಮೀಸಲು ವ್ಯಾಪ್ತಿಯಿಂದ ಹೊರಗೆ ಇಟ್ಟಂತೆ, ಎಸ್‌ಸಿ ಎಸ್‌ಟಿ ಸಮುದಾಯಕ್ಕೂ ಕೆನೆಪದರದ ನಿಯಮವನ್ನು ಅನ್ವಯಿಸುವಂತೆ ಮಾಡಬಾರದೇಕೆ? ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟಿದ್ದು ಸುಪ್ರೀಂಕೋರ್ಟ್‌. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಬಡ್ತಿಯಲ್ಲಿ ಮೀಸಲು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ಸದಸ್ಯರಿರುವ ಸಾಂವಿಧಾನಿಕ ಪೀಠ ಈ ಪ್ರಶ್ನೆ ಹಾಕಿತು. "ಆರಂಭಿಕ ಹಂತದಲ್ಲಿ ಮೀಸಲು ಇರುವುದೇನೋ ಸರಿ. ಒಬ್ಬ ವ್ಯಕ್ತಿ ಮೀಸಲು ವ್ಯವಸ್ಥೆಯಿಂದಲೇ ರಾಜ್ಯ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಏರುತ್ತಾನೆ ಎಂದಿಟ್ಟುಕೊಳ್ಳಿ. ಆತನ ಕುಟುಂಬ ಸದಸ್ಯರನ್ನೂ ಹಿಂದುಳಿದವರು ಎಂದು ಪರಿಗಣಿಸಿ ಬಡ್ತಿಯಲ್ಲಿ ಮೀಸಲು ನೀಡುವುದು ಸರಿಯೇ? ಐಎಎಸ್‌ ಅಧಿಕಾರಿಯ ಮರಿಮೊಮ್ಮಗನಿಗೂ ಮೀಸಲು ಅಗತ್ಯವಿದೆಯೇ . ಒಂದು ಬಾರಿ ಮೊದಲನೇ ದರ್ಜೆ ಅಧಿಕಾರಿ ಹುದ್ದೆಗೆ ಹಿಂದುಳಿದ ವರ್ಗದ ವ್ಯಕ್ತಿ ಬಂದಾಗ ಆತನಿಗೆ ನೀಡಲಾಗಿದ್ದ ಮೀಸಲು ವ್ಯವಸ್ಥೆ ಮುಕ್ತಾಯಗೊಳ್ಳುತ್ತದೆ' ಎಂದಿದೆ ಸುಪ್ರೀಂಕೋರ್ಟ್‌.
2020/09/27 18:44:04
https://www.udayavani.com/news-section/national-news/should-chief-secretarys-family-get-quota-questions-supreme-court
mC4
ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ | Prajavani ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ ಚಾಮರಾಜನಗರ: '14ನೇ ಶತಮಾನದ ಶಿವಶರಣರ ಸಾಲಿನಲ್ಲಿ ದಿವ್ಯ ಜ್ಯೋತಿಯಾಗಿ ಪ್ರಜ್ವಲಿಸಿದ ಹೇಮರಡ್ಡಿ ಮಲ್ಲಮ್ಮ ಅವರ ದೈವಭಕ್ತಿ, ತಪಸ್ಸು, ತ್ಯಾಗ ಇಂದಿನ ಸಮಾಜಕ್ಕೆ ಅನುಕರಣೀಯ' ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನೀಗೂರಮೇಶ್‌ ಹೇಳಿದರು. ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯಭಾಷಣ ಮಾಡಿದರು. ಮನುಷ್ಯ ಸಾಧನೆಯಿಂದ ಅಥವಾ ಬದುಕಿನಿಂದ ಮಾತ್ರ ಶಾಶ್ವತವಾಗಿ ಉಳಿಯುತ್ತಾನೆ. ಆದರೆ, ಹೇಮರಡ್ಡಿ ಮಲ್ಲಮ್ಮ ಅವರು ಬದುಕನ್ನೇ ಸಾಧನೆಯಾಗಿ ತೋರಿಸಿಕೊಟ್ಟಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು. ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವಾಗಿ ಆರಾಧಿಸುತ್ತಿದ್ದ ಮಲ್ಲಮ್ಮ, ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೆ ಸಾಂಸಾರಿಕ ಬದುಕಿನೊಂದಿಗೆ ಸಾಗುತ್ತಲೇ ಸದ್ಗತಿ ಹೊಂದಿದಳು. ಜೀವನವಿಡೀ ಕಷ್ಟಗಳನ್ನು ಎದುರಿಸಿದರೂ, ತನಗೆ ನೋವುಂಟು ಮಾಡಿದವರ ಹಿತ ಬಯಸಿದಳು. ಸದಾ ಶಿವನನ್ನು ಸ್ಮರಿಸುತ್ತಿದ್ದಳು ಎಂದರು. ನಗರಸಭೆ ಅಧ್ಯಕ್ಷೆ ಎಸ್‌.ಎನ್.ರೇಣುಕಾ ಮಾತನಾಡಿ, ಮಲ್ಲಿಕಾರ್ಜುನನ ಪರಮ ಭಕ್ತೆಯಾದ ಮಲ್ಲಮ್ಮಳಿಗೆ ಗಂಡನ ಮನೆಯಲ್ಲಿ ಅತ್ತೆ ಹಾಗೂ ಗಂಡನ ಸಹೋದರರ ಹೆಂಡತಿಯರು ಕಿರುಕುಳ ನೀಡುತ್ತಿದ್ದರು. ಆ ಎಲ್ಲ ನೋವನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದ ಮಲ್ಲಮ್ಮನ ಸಹಾಯಕ್ಕೆ ಈಶ್ವರನೇ ಭೂಮಿಗಿಳಿದು ಬರುತ್ತಾನೆ. ಆಕೆಯ ಭಕ್ತಿಗೆ ಮೆಚ್ಚಿ ದರ್ಶನ ನೀಡುತ್ತಾನೆ ಎಂದರು. ಮಲ್ಲಮ್ಮಳ ಸಾಮಾಜಿಕ, ನೈತಿಕ ಕಳಕಳಿಯನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಸಕ್ತ ವರ್ಷದಿಂದ ಆಕೆಯ ಜಯಂತಿಯನ್ನು ರಾಜ್ಯದಾದ್ಯಂತ ಆಚರಿಸುತ್ತಿದೆ ಎಂದು ತಿಳಿಸಿದರು. ಸಮಾಜದಲ್ಲಿ ಹೆಣ್ಣು ಮಕ್ಕಳು ಹೇಗೆ ಸಾಧನೆ ಮಾಡಬೇಕು ಎಂಬುದನ್ನು ಮಲ್ಲಮ್ಮ ತೋರಿಸಿಕೊಟ್ಟಿದ್ದಾಳೆ. ಜೀವನದಲ್ಲಿ ತಾಳ್ಮೆ ಮೈಗೂಡಿಸಿಕೊಂಡು ಜಾಣತನದಿಂದ ನಮ್ಮ ವಿರೋಧಿಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್‌, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಸದಸ್ಯ ಸಿ.ಎಸ್. ಬಾಲರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್, ಉಪಕಾರ್ಯದರ್ಶಿ ಮುನಿರಾಜಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಜೆ.ಎಂ. ರೂಪಾ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲ್ಲೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಡಿ. ನಾಗವೇಣಿ ಹಾಜರಿದ್ದರು. ಹೇಮರಡ್ಡಿ ಮಲ್ಲಮ್ಮ ಅವರ ಜೀವನ ಚರಿತ್ರೆಯನ್ನು ಜನಪದಗೀತೆ, ಕಥೆ, ಪುರಾಣಗಳಲ್ಲಿ ಸಮೃದ್ಧವಾಗಿ ಬೆಳೆಸಿದ್ದಾರೆ. ಅವರ ಜೀವನ ಸಂದೇಶ ಯುವಜನರು ಪಾಲಿಸಬೇಕು
2019/01/22 00:36:30
https://www.prajavani.net/news/article/2017/06/07/497151.html
mC4
ಸಿದ್ದರಾಮಯ್ಯ, ಎಚ್ ಡಿಕೆ ಚೀಪ್‌ ಪಾಪ್ಯುಲಾರಿಟಿ ಬಿಡಲಿ: ಸಚಿವ ಕಾರಜೋಳ | udayavani ಸಿದ್ದರಾಮಯ್ಯ, ಎಚ್ ಡಿಕೆ ಚೀಪ್‌ ಪಾಪ್ಯುಲಾರಿಟಿ ಬಿಡಲಿ: ಸಚಿವ ಕಾರಜೋಳ 01:44 PM Oct 06, 2021 | Team Udayavani | ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಮುಖ ರಾಜಕಾರಣಿಗಳು. ಚೀಪ್ ಪಾಪ್ಯುಲಾರಿಟಿ ಸಲುವಾಗಿ ಮೀಡಿಯಾಗಳಲ್ಲಿ ಬರಲು ಏನೇನೋ ಹೇಳಬಾರದು. ಆರೆಸ್ಸೆಸ್ ಸಂಸ್ಕೃತಿ ಗೊತ್ತಿಲ್ಲದವರು ಏನೇನೋ ಹೇಳುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು. ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರನ್ನೋ ಖುಷಿ ಪಡಿಸುವ ಸಲುವಾಗಿ ಏನೇನೋ ಹೇಳಿಕೆ ಕೊಟ್ಟರೆ ಅರ್ಥವಿರಲ್ಲ. ಆರೆಸ್ಸೆಸ್ ನವರು ದೇಶ ಭಕ್ತರು ಎಂಬುದು ಮೊದಲು ಗೊತ್ತಿರಬೇಕು. ಅವರಿಗೆ ಬೇರೆ ರೀತಿ ಕಳಂಕ ಹಚ್ಚಲು ಪ್ರಯತ್ನ ಮಾಡಿದರೆ ಅದು ಹತ್ತುವುದಿಲ್ಲ. ದೇಶದ ಉದ್ದಗಲಕ್ಕೂ ರಾಷ್ಟ್ರ ಪ್ರೇಮ ಹುಟ್ಟಿಹಾಕುವ ಕೆಲಸ ಆರೆಸ್ಸೆಸ್ ಮಾಡುತ್ತಿದೆ. ಆರೆಸ್ಸೆಸ್ ನವರು ಯಾವುದೂ ಕೆಟ್ಟ ಕೆಲಸ ಇವತ್ತಿನವರೆಗೂ ಮಾಡಿಲ್ಲ. ದೇಶಕ್ಕಾಗಿ ಪ್ರಾಣ ತೆತ್ತ ಸಂಸ್ಥೆ ಆರೆಸ್ಸೆಸ್ ಎಂದು ಕಾರಜೋಳ ಹೇಳಿದರು. ಇದನ್ನೂ ಓದಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜ್ಯಕ್ಕೆ: ಆತ್ಮೀಯವಾಗಿ ಸ್ವಾಗತಿಸಿದ ಸಿಎಂ ಆರ್‌ಎಸ್‌ಎಸ್ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆಗೆ ಕಾರಜೋಳ ಪ್ರತಿಕ್ರಿಯಿಸಿದ ಅವರು, ಸಂಘ ಪರಿವಾರದವರು ಐಎಎಸ್, ಐಪಿಎಸ್ ಆಗಿದ್ದಾರೆ ಅಂತಾ ಹೇಳುವುದು ಸುಳ್ಳು‌. ಹತಾಶರಾಗಿ ಈ ರೀತಿ ಹೇಳಿಕೆ ಕೊಡಬಾರದು. ಅವರ ಗೌರವಕ್ಕೆ ಧಕ್ಕೆ ಬರುತ್ತದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಹೇಳಿಕೆ ಕೊಡವುದು ಗೌರವ ಅಲ್ಲ ಎಂದು ಕಾರಜೋಳ ತಿರುಗೇಟು ನೀಡಿದರು.
2021/12/04 10:12:11
https://m.udayavani.com/article/govind-karajola-at-belagavi/1132972?utm=relatednews
mC4
ಡಾ.ಚಂದ್ರಶೇಖರ ಕಂಬಾರ- ಕೆಲ ರಸನಿಮಿಷಗಳು – ಸುರಹೊನ್ನೆ by Prakash Deshpande, pradesh.hkr@gmail.com · January 3, 2019 ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ. ನನಗೆ ಚಂದ್ರಶೇಖರ ಕಂಬಾರ ಸಾಹಿತ್ಯದ ಪರಿಚಯವಾದುದು ನನ್ನ ಕಾಲೇಜಿನ ದಿನಗಳಲ್ಲಿ 1970 ರಿಂದ 1974 ರ ಅವಧಿಯಲ್ಲಿ. ಚಿಕ್ಕಂದಿನಿಂದಲೂ ಓದುವ ಬರೆಯುವ ಗೀಳು ಹಚ್ಚಿಕೊಂಡಿದ್ದ ನಾನು ಆಗ ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಕಥೆ,ಕವನಗಳನ್ನು ಬಿಡದೆ ಓದುತ್ತಿದ್ದೆ.ಅದಕ್ಕೆ ಕಾರಣ ಎರಡು. ಮೊದಲನೆಯದು ಅವರು ನನ್ನ ತಾಲೂಕಿನವರೆಂದ, ಎರಡನೆಯದು‌ ಅವರ ಬರವಣಿಗೆಯಲ್ಲಿ ನಮ್ಮ ನೆಲದ ಮಣ್ಣಿನ ವಾಸನೆ ಹೊಡೆಯುತ್ತಿದ್ದುದು. ಆಗಿನಿಂದಲೂ ನನಗೆ ಅವರ ಬಗ್ಗೆ ವಿಶೇಷ ಗೌರವ.ಅವರನ್ನು ಪ್ರಥಮಸಲ ಭೇಟಿ ಮಾಡಿದ್ದು 1976 ರಲ್ಲಿ,ಗೋಕಾಕದಲ್ಲಿ. ನಮ್ಮ ಕರ್ನಾಟಕ ಸಂಘದ ಕಾರ್ಯಕ್ರಮವೊಂದಕ್ಕೆ ಹಿರಿಯ ಸಾಹಿತಿ ಕೃಷ್ಣಮೂರ್ತಿ ಪುರಾಣಿಕ ಅವರನ್ನು ಆಹ್ವಾನಿಸಲೆಂದು ಗೋಕಾಕನ ಅವರ ಮನೆಗೆ ಹೋದಾಗ ಅಲ್ಲಿ ಕಂಬಾರರನ್ನು ನೋಡಿದ್ದೆ.ನನ್ನನ್ನು ಕಂಬಾರರಿಗೆ ಪರಿಚಯಿಸಿದ ಪುರಾಣಿಕರು ಇವನೂ ನನ್ನ ಶಿಷ್ಯನೇ ಎಂದಿದ್ದರು.ಪುರಾಣಿಕ ಅವರ ಜತೆಗೆ ನಾನು ಕಂಬಾರ ಅವರನ್ನೂ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದೆ. ಸಂತೋಷದಿಂದಲೇ ಬರಲು ಒಪ್ಪಿದ್ದರು. ಹುಕ್ಕೇರಿಯಲ್ಲಿ ಆ ವರ್ಷ ನಾವು ಏರ್‍ಪಡಿಸಿದ್ದ ಒಂದು ವಾರ ಕಾಲದ ನಾಟಕೋತ್ಸವವನ್ನು ಕಂಬಾರ ಅವರೇ ಉದ್ಘಾಟಿಸಿದ್ದರು.ಅಂದಿನಿಂದ ನನ್ನ ಹಾಗೂ ಕಂಬಾರ ಅವರ ನಡುವಿನ ಸ್ನೇಹ ಸಂಬಂಧ ಹಾಗೆಯೆ ಬೆಸಗೊಳ್ಳುತ್ತ,ಗಟ್ಟಿಗೊಳ್ಳುತ್ತ ಬಂದಿದೆ.ಕಳೆದ ನಲವತ್ತೆರಡು ವರ್ಷಗಳ ನನ್ನ ಅವರ ಸಂಬಂದ ಕೇವಲ ಸಾಹಿತ್ಯ,ಯಾವೋ ಕರ್ಯಕ್ರಮಗಳಿಗೆ ಸೀಮೀತವಲ್ಲ.ಅದನ್ನೂ ಮೀರಿದ್ದು,ವೈಯುಕ್ತಿಕ ನೆಲೆಗಟ್ಟಿನದು,ಕೌಟುಂಬಿಕತೆಯದು.ಅವರ ಸುಪುತ್ರ ರಾಜಶೇಖರ ಅವರಿಂದಾಗಿ ಅದು ಮತ್ತಷ್ಟು ಹೆಪ್ಪುಗಟ್ಟಿದೆ. ಕಂಬಾರ ಅವರು ಏನೂ ಇಲ್ಲದಿದ್ದಾಗಿನಿಂದ ಈಗೆಲ್ಲವೂ ಆಗಿರುವವರೆಗೆ ಅವರದು ನನ್ನದು ಒಡನಾಟ.ಅವರೊಬ್ಬರಷ್ಟೇ ಅಲ್ಲ, ಅವರ ಕುಟುಂಬೀಯರೊಂದಿಗೂ ಕೂಡ. ನಮ್ಮಕುಟುಂಬಕ್ಕೂ ಅವರಿಗೂ ಅವಿನಾಭಾವ ಸಂಬಂಧ.ಈ ಭಾಗಕ್ಕೆ ಬಂದರೆ ಹುಕ್ಕೇರಿಗೆ ಬಂದು ನಮ್ಮನೆಯಲ್ಲಿ ಊಟ ಅಥವಾ ಉಪಾಹಾರ ಮಾಡಿ ಮನೆಯವರೊಂದಿಗೆ ಹರಟಿ ವಿಶ್ರಾಂತಿ ಪಡೆದು ಹೊರಡುವದು ಅವರ ಪದ್ಧತಿ. ಬಹಿರಂಗವಾಗಿ ಅವರು ಡಾ.ಚಂದ್ರಶೇಖರ ಕಂಬಾರ.ಆದರೆ ಆಪ್ತರಿಗೆ ಚಂದ್ರಪ್ಪ,ಖಾಸಾ ದೋಸ್ತರಿಗೆ,ಆತ್ಮಿಯರಿಗೆ ಚಂದ್ರು.ನನಗೆ ಗುರು ಸ್ಥಾನದಲ್ಲಿ,ಹಿತೈಷಿ,ಮಾರ್ಗದರ್ಶಿ. ಸೀದಾಸಾದಾ ವ್ಯಕ್ತಿತ್ವ, ಸರಳ ನೇರನಡೆನುಡಿ. ಎಷ್ಟೇ ದೊಡ್ಡವರಾದರೂ ಎನಿತೂ ಅಹಂಭಾವವಿಲ್ಲ.ಬೆಳಗಾವಿಯ ಲಿಂಗರಾಜ ಕಾಲೇಜಿನ ಉಪನ್ಯಾಸಕ ಅಥವಾ ಬೆಂಗಳೂರು ವಿವಿ.ಯ ಪ್ರಾಧ್ಯಾಪಕರಾಗಿದ್ದಾಗಿನ ಸರಳತೆಯೇ ಹಂಪಿ ಕನ್ನಡ ವಿವಿಯ ಕುಲಪತಿಯಾಗಿದ್ದಾಗಲೂ ಇತ್ತು.ಮಾತೂ ಕೂಡ ಸೌಮ್ಯಬಿರುನುಡಿ ಗೊತ್ತೇ ಇಲ್ಲಪ್ಯಾಂಟು ಶರ್ಟು ಧರಿಸಿದರು ಅಷ್ಟೇ,ಧೋತರ ಉಟ್ಟು ನೆಹರು ಶರ್ಟು ಧರಿಸಿದರೂ ಅಷ್ಟೇ ಸರಳತೆಯ ಪ್ರತೀಕ ಅವರು.ತಲೆಯ ಮೇಲೊಂದು ರುಮಾಲು ಸುತ್ತುಕೊಂಡಾಗಲಂತೂ ಅವರೊಬ್ಬ ಥೇಟ ಊರ ಗೌಡರಂತೆ ಕಂಗೊಳಿಸುತ್ತಾರೆ.ಸಣ್ಣವರೊಂದಿಗೆ ಸಣ್ಣವರಾಗಿದೊಡ್ಡವರೊಂದಿಗೆ ದೊಡ್ಡವರಾಗಿ ಎಲ್ಲರೊಂದಿಗೆ ಸಮ್ಮಿಳಿತರಾಗುವ ಕಂಬಾರರು ಈಗಲೂ ವರ್ಷಕ್ಕೊಂದೆರಡು ಸಲ ತಮ್ಮ ಊರು ಘೋಡಗೇರಿಗೆ ಬರುವದನ್ನು ತಪ್ಪಿಸುವದಿಲ್ಲ.ಬೆಳಗಾವಿ ಧಾರವಾಡಕ್ಕೆ ಬಂದರೆ ಆಯಿತು.ಘೋಡಗೇರಿಗೆ ಅವರು ಬಂದುಹೋಗುವದು ನಿಕ್ಕಿ. ಹುಕ್ಕೇರಿ ತಾಲೂಕಿನ ಘೋಡಗೇರಿ ಹಿಡಕಲ್ ಅಣೆಕಟ್ಟು ಪ್ರದೇಶದ ತಪ್ಪಲಿನಲ್ಲಿರುವ ಘಟಪ್ರಭೆ ಹಾಗೂ ಹಿರಣ್ಯಕೇಶಿ ನದಿಗಳ ಸಂಗಮದ ಮಡಿಲಲ್ಲಿರುವ ಸಮೃದ್ಧ ಹಸಿರು,ಕಬ್ಬಿನ ಗದ್ದೆಗಳ ಮಧ್ಯೆ ಸುಖವಾಗಿ ನಲಿವ ಊರು.ಕಂಬಾರರದು ಇಲ್ಲಿ ಕಮ್ಮಾರಿಕೆಯ ಮನೆತನ.ಅವರ ಸೋದರರ ಮಕ್ಕಳು ಈಗಲೂ ಇಲ್ಲಿ ಕಮ್ಮಾರಿಕೆ ನಡೆಸುತ್ತಾರೆ.ಊರ ನಡುವಿರುವ ಕಮ್ಮಾರ ಸಾಲೆಯೇ ಚಂದ್ರುವಿನ ಮೊದಲ ಜಾನಪದ ಪಾಠಶಾಲೆ.ಚಿಕ್ಕವರಿದ್ದಾಗ ಅಪ್ಪನೊಂದಿಗೆ ಇಲ್ಲೇ ತಿದಿ ಜಗ್ಗುತ್ತ ಒಮ್ಮೊಮ್ಮೆ ಶಾಲೆಯ ಕಡೆಗೆ ಮುಖ ಮಾಡುತ್ತ,ಬೆನ್ನು ತೋರಿಸುತ್ತ ಬೆಳೆದವರು.ಘೋಡಗೇರಿಗೆ ಬಂದರೆ ಮೊಟ್ಟಮೊದಲು ಅವರು ಭೇಟಿ ನೀಡುವದು ಗ್ರಾಮ ದೇವರು ಗಜಲಿಂಗೇಶ್ವರ – ಬೀರಪ್ಪ ದೇವರ ಮಂದಿರಕ್ಕೆ.ಈ ಗುಡಿಗೆ ಹೋಗಬೇಕಾದರೆ ಅವರು ಕಲಿತ ಕನ್ನಡ ಶಾಲೆಯ ಮುಂದಿನಿಂದಲೇ ಹೋಗಬೇಕು.ಆಗ ತಮ್ಮ ಜತೆಗಿದ್ದವರಿಗೆ ಅವರು ನೋಡ್ರಿ,ಇದ ನಾ ಕಲತ ಸಾಲಿ‌ಎಂದು ಹೆಮ್ಮೆಯಿಂದ ಹೇಳುತ್ತಾರೆ.ಗುಡಿಯ ಆವರಣದ ಮುಂದೆಯೇ ಮುಸ್ಲಿಮ್ ದರ್ಗಾ ಇದೆ.ಅಲ್ಲೂ ಒಂದು ನಿಮಿಷ ನಿಂತು ನಮಸ್ಕರಿಸಿ ಮತ್ತೆ ಹೇಳುತ್ತಾರೆ. ಹಿಂದೂ ಮುಸ್ಲಿಮ್ ಭಾವೈಕ್ಯತೆ ಅಂದ್ರ ಇದ ನೋಡ್ರಿ.ಮುಂದೆ ದೇವರಿಗೆ ಹೋಗಿ ನಮಸ್ಕರಿಸಿ ಪ್ರದಕ್ಷಿಣೆ ಹಾಕಿ ಪೂಜಾರಿಯ ಕೈಗೆ ಕೆಲ ನೋಟುಗಳ ದಕ್ಷಿಣೆ ಇಟ್ಟು ಹೊರಬಂದು ಊರೊಳಗೆ ಹೋಗುತ್ತಿರುವಾಗ ಅವರ ಖಾಸಾಗೆಳೆಯರು,ಚಡ್ಡಿ ದೋಸ್ತರು ಓಣಿಗಳಲ್ಲಿ ಭೇಟಿಯಾಗುತ್ತಿರುತ್ತಾರೆ.ಅವರೊಂದಿಗೆ ಅವರು ಸಲಿಗೆಯಿಂದ ಮಾತನಾಡುತ್ತ ಏನೋ ಭೂಷಿ,ಏನೋ ಶಿರಸು,ಏನೋ ಸಿದ್ದಪ್ಪ ಹ್ಯಾಂಗಿದ್ದಿಯೋ ಎಂದು ಕೇಳುತ್ತ ಅವರ ಹಾಗೂ ಅವರ ಮನೆಮಂದಿಯ ಯೋಗಕ್ಷೇಮ ವಿಚಾರಿಸುತ್ತ ಮಾತನಾಡುವದನ್ನು ಕೇಳುವದೇ ಒಂದು ಆನಂದ.ತಮ್ಮ ಮನೆಗೆ ಬಾರೋ ಎಂದವರಿಗೆ ಮತ್ತೊಮ್ಮೆ ಬಂದಾಗ ಬರ್‍ತೀನೋ………. ಅವಂಗ ನಾ ಕೇಳಿದಂತ ಹೇಳ‌ಎಂದು ಹೇಳಿ ತಮ್ಮ ಮನೆಗೆ ಹೋಗುತ್ತಾರೆ.ಅಲ್ಲಿ ಕುಟುಂಬೀಯರ ಜತೆ ಕೂತು ನಾಲ್ಕು ಮಾತು ಆಡಿ ಎಲ್ಲರ ಯೋಗಕ್ಷೇಮ ಕೇಳಿ ಮನೆ ದೇವರ ಜಗಲಿಗೆ ಹೋಗಿ ನಮಸ್ಕರಿಸಿ ಹೊರಬಂದು ತಮ್ಮ ಕಮ್ಮಾರ ಸಾಲೆ ನೋಡಿ ಅದು ಚನ್ನಾಗಿ ನಡೆದಿರುವದನ್ನು ಕೇಳಿ ಖುಷಿಪಟ್ಟು ಹೊರಡುವದು ಪಕ್ಕದ ಸಾವಳಗಿ ಮಠಕ್ಕೆ. (ಚಿತ್ರ:ಘೋಡಗೇರಿಯಲ್ಲಿ ತಮ್ಮ ಜಿಗರಿ ದೋಸ್ತ ಶ್ರೀಶೈಲಪ್ಪ ಮಗದುಮ್ ಅವರೊಂದಿಗೆ ಡಾ.ಕಂಬಾರರು). ಮೇಲ್ನೋಟಕ್ಕೆ ಮಸೀದಿ,ಒಳಗಡೆ ವೀರಶೈವ ಲಿಂಗಾಯತ್ ಸ್ವಾಮಿಗಳ ಗದ್ದುಗೆ – ನಾಡಿನ ಹಿಂದೂ ಮುಸ್ಲಿಮ್ ಸಾಮರಸ್ಯದ ಸೇತುವೆಯಾಗಿರುವ ಸಾವಳಗಿ ಮಠ ಕಂಬಾರರ ಜೀವನದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸಿದೆ.ಮಠಕ್ಕೆ ಹೋದಕೂಡಲೆ ಮೊದಲು ಈ ಮಠದ ಹಿಂದಿನ ಸ್ವಾಮಿಗಳಾಗಿದ್ದ ಶ್ರೀ ಸಿದ್ದರಾಮ ಸ್ವಾಮಿಗಳವರ ಗದ್ದುಗೆಯ ದರ್ಶನ.ಈ ಸ್ವಾಮಿಗಳವರ ಬಗ್ಗೆ ಅವರಿಗೆ ಅಪಾರ ಭಕ್ತಿ.ಮಠದ ಹಿಂದಿರುವ ಆವರಣದಲ್ಲಿರುವ ಗದ್ದುಗೆಗೆ ಬರಿಗಾಲಲ್ಲಿ ಹೋಗಿ ಭಕ್ತಿಯಿಂದ ಗದ್ದುಗೆಯ ಮುಂದೆ ನಿಂತು ಹದಿನೈದಿಪ್ಪತ್ತು ನಿಮಿಷ ಧ್ಯಾನಿಸಿ ಸಾಷ್ಟಾಂಗ ನಮಸ್ಕರಿಸಿ ಪ್ರದಕ್ಷಿಣೆ ಹಾಕಿ ಗದ್ದುಗೆಯಿಂದ ಪ್ರೇರಣೆ ಪಡೆದು ಹೊರಡುವ ಅವರ ಮುಖದಲ್ಲಿ ಧನ್ಯತೆಯ ಭಾವ ಕಾಣಬಹುದು.ಇದು ಅವರ ಭಕ್ತಿಯ,ಕೃತಜ್ಞತೆಯ ರೀತಿ. ನಾಡಿನ ಖ್ಯಾತ ಕಾದಂಬರಿಕಾರ.ಕಾದಂಬರಿ ಋಷಿ ಕೃಷ್ಣಮೂರ್ತಿ ಪುರಾಣಿಕ ಅವರ ಬಗ್ಗೆಯೂ ಕಂಬಾರರಿಗೆ ಅತ್ಯಂತ ಪ್ರೀತಿಯ ಗೌರಾವದರಗಳಿವೆ.ಪುರಾಣಿಕರು ಗೋಕಾಕದ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದವರು ಕಂಬಾರರಿಗೂ ಆತ್ಮೀಯ ಗುರುಗಳು.ಇವರಲ್ಲಿಯ ಸಾಹಿತ್ಯದ ಪ್ರತಿಭೆ ಗುರುತಿಸಿ ಅದು ಬೆಳೆಯಲು ಕಾರಣರಾಗಿ ಪ್ರೋತ್ಸಾಹಿಸಿದವರೇ ಕೃಷ್ಣಮೂರ್ತಿ ಪುರಾಣಿಕರು.ಬಡತನದಲ್ಲಿದ್ದ ಚಂದ್ರು ಆರ್ಥಿಕ ತೊಂದರೆಯಿಂದ ಹೈಸ್ಕೂಲಿಗೆ ಹೋಗಲಾರದ ಸಂಧರ್ಭದಲ್ಲಿ ಅವನನ್ನು ಶಾಲೆಗೆ ಕರೆಸಿಕೊಂಡು ಫೀಜು ನೀಡಿ ಹಣಕಾಸು ಸಹಾಯ ಮಾಡಿ ಸಾವಳಗಿ ಮಠದ ಸ್ವಾಮಿಗಳಿಗೆ ಅವನನ್ನು ಮಠದಲ್ಲಿಟ್ಟುಕೊಳ್ಳುವಂತೆ ಹೇಳಿ ಶಿಕ್ಷಣ ಮುಂದುವರೆಸಲು ಸಹಕರಿಸಿದವರೇ ಪುರಾಣಿಕರು.ಸಾವಳಗಿ ಸ್ವಾಮಿಗಳು ಹಾಗೂ ಕೃಷ್ಣಮೂರ್ತಿ ಪುರಾಣಿಕರು ಕಂಬಾರರ ಜೀವನದ ದಿಕ್ಕನ್ನೇ ಬದಲಿಸಿದವರು.ಮುಂದೆ ಬೆಳಗಾವಿಗೆ ಲಿಂಗರಾಜ ಕಾಲೇಜಿಗೆ ಬಂದಾಗ ಅಲ್ಲಿ ಕನ್ನಡದ ಉಪನ್ಯಾಸಕರಾಗಿದ್ದ ಎಸ್.ಎಸ್.ಭೂಸನೂರಮಠ ಅವರು ಇವರ ಸಾಹಿತ್ಯಿಕ ಗುರುಗಳು.ಅಂತೆಯೇ ಕಂಬಾರರು ಈ ಮೂವರನ್ನು ಸ್ಮರಿಸದ ದಿನವಿಲ್ಲ.ತಮಗೆ ಸಹಾಯ ಮಾಡಿದವರನ್ನು ಮೇಲಿಂದಮೇಲೆ ನೆನೆಯುತ್ತ,ಅವರ ಉಪಕಾರ ಸ್ಮರಿಸುತ್ತ ಅವರಿಂದಾಗಿ ನಾನು ಈ ಮಟ್ಟಕ್ಕೆ ಬಂದೆ ಎಂದು ನಾಲ್ಕು ಜನರಲ್ಲಿ ಹೇಳಿಕೊಳ್ಳುವದು ಅವರ ದೊಡ್ಡಗುಣಕ್ಕೆ ಸಾಕ್ಷಿ.ಸಭೆ ಸಮಾರಂಭಗಳಲ್ಲೂ ಕೂಡ ಇವರುಗಳನ್ನು ಹೃದಯದುಂಬಿ ಸ್ಮರಿಸುತ್ತಾರೆ.ಕೃತಜ್ಞತೆಯ ಸಾಗರ ಚಂದ್ರಶೇಖರ ಕಂಬಾರರು. ಘೋಡಗೇರಿಗೆ ಹೋಗುವಾಗಲೆಲ್ಲ ಅವರು ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚುತ್ತ, ಜತೆಯಲ್ಲಿರುವವರಿಗೆ ಅದನ್ನು ಹಂಚುತ್ತ ಲಾವಣಿಪದ ಗುನುಗುತ್ತ ಹೊಸ ಬದಲಾವಣೆಗೆ ತಮ್ಮೂರಿನ ಪರಿಸರ ತರೆದುಕೊಂಡಿರುವದಕ್ಕೆ ಬೆರಗಾಗುತ್ತ ಅದಕ್ಕೆ ಖುಷಿಪಡುವ ಕಂಬಾರ ಅವರನ್ನು ನೋಡುವದು,ಖುಷಿಯ ಆ ಕ್ಷಣಗಳಲ್ಲಿ ಅವರು ಜಾನಪದ ಹಾಡು ಹಾಡುವದನ್ನು ಕೇಳುವದು ನಿಜಕ್ಕೂ ಒಂದು ಅಪೂರ್ವ ಸಂತಸದ ಅನುಭವ.ಅವರೊಂದಿಗಿನ ಆ ಕ್ಷಣಗಳು ಅವರ್ಣನೀಯ. ಕಂಬಾರರ ಬಾಲ್ಯ,ಮಕ್ಕಳ ಜೀವನ ಅಷ್ಟೇನೂ ಸಂತೋಷವಾಗಿರಲಿಲ್ಲ.ಅವರುಹುಡುಗನಗಿದ್ದಾಗ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಗಿದ್ದ ಬಯಲಾಟ,ದೊಡ್ಡಾಟಗಳು ಅವರ ಬದುಕಿಗೆ ಸಾಹಿತ್ಯದ ಸ್ಪರ್ಷ ನೀಡಿದವು.ಇವರ ತಂದೆ ಬಸವಣ್ಣೆಪ್ಪ ಸ್ವಾತಂತ್ರ್ಯಹೊರಾಟಗಾರರಲ್ಲದಿದ್ದರೂ ಹೋರಾಟಗಾರರ ಸಂಪರ್ಕದಲ್ಲಿದ್ದರು.ಘೋಡಗೇರಿಯ ಗುಡ್ಡಗಳಲ್ಲಿ ಅವಿತಿರುತ್ತಿದ್ದ ಸ್ವಾ.ಹೋರಾಟಗಾರರಿಗೆ ಊಟ ಕೊಡುವದು,ಅವರ ಸಂದೇಶವನ್ನು ಬೇರೆ ಸ್ವಾ.ಹೋರಾಟಗಾರರಿಗೆ ಮುಟ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದರು.ಇವರ ತಂದೆ ಹಿರಿಯ ಸ್ವಾ.ಹೋರಾಟಗಾರ ಅಣ್ಣೂಗುರೂಜಿ ಅವರ ಶಿಶ್ಯ ಅಣ್ಣೂಗುರೂಜಿ ಅವರು ತಾಸುಗಟ್ಟಲೇ ಭಾಷಣ ಮಾಡುತ್ತಿದ್ದುದನ್ನು,ಅವರ ಭಾಷಣಕ್ಕಾಗಿ ಜನರು ತಾಸುಗಟ್ಟಲೇ ಕಾಯ್ದು ಕುಳಿತಿರುತ್ತಿದ್ದುದನ್ನು ಕಂಬಾರರು ಈಗಲೂ ಸ್ಮರಿಸಿಕೊಳ್ಳುತ್ತಾರೆ.ಅವರ ತಾಯಿ ಚನ್ನವ್ವ ಹೇಳುತ್ತಿದ್ದ ಜನಪದ ಕತೆಗಳು,ಹಾಡುಗಳು,ಊರುಕೇರಿಗಳಲ್ಲಿ ಕೇಳುತ್ತಿದ್ದ ಲಾವಣಿ,ಬೀಸುವ ಕಲ್ಲಿನ ಹಾಡುಗಳು,ಸೋಬಾನ,ಗೀಗೀ ಪದಗಳು,ಹಂತಿಯ ಹಾಡುಗಳು, ಸಣ್ಣಾಟಗಳು, ಪಾರಿಜಾತ, ರಾಧಾನಾಟ ಇವೆಲ್ಲ ಎಳೆಯ ಚಂದ್ರುವಿನ ಹೃದಯದಲ್ಲಿ ಜಾನಪದ ಸಾಹಿತ್ಯದ ಬೀಜಾಂಕುರ ಮಾಡಿದವು,ಮೆದುಳಿನಲ್ಲಿ ಸಾಹಿತ್ಯದ ಬೇರು ಮೂಡಿಸಿದವು.ಆಗಿನಿಂದಲು ಅವರ ಮನಸ್ಸಿನಲ್ಲಿ ಜಾನಪದ ಲೋಕ ಅನಾವರಣಗೊಳ್ಳಲಾರಂಭಿಸಿತ್ತು. ಮುಂದಿದು ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಮೂಡಿಸಿತು.ಕಾವ್ಯ,ಜಾನಪದ, ನಾಟಕ, ಸಿನಿಮಾ, ಕಥೆ, ಕಾದಂಬರಿ, ಹೀಗೆ ಹತ್ತು ಹಲವಾರು ಪ್ರತಿಭೆಗಳ ಸಾಗರ ಕಂಬಾರರು. 2012 ರಲ್ಲಿ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಯಿತು.ಇದರ ಹೊಸದರಲ್ಲೇ ಅವರು ಬೆಳಗಾವಿ,ಹುಕ್ಕೇರಿಗೆ ಬಂದಿದ್ದರು.ನಮ್ಮ ಮನೆಗೆ ಬಂದಾಗ ಆಗಷ್ಟೇ ನಮ್ಮಲ್ಲಿ ಮೊದಲ ಮೊಮ್ಮಗ ಜನಿಸಿದ್ದ.ಅವನಿಗಿನ್ನೂ ಹೆಸರಿಟ್ಟಿರಲಿಲ್ಲ.ಸರ,ನೀವ ಬಂದದ್ದ್ ಛಲೊ ಆತು,ನಮ್ಮ ಮೊಮ್ಮಗ್ಗ ಒಂದ ಛಂದ ಹೆಸರ ಹೇಳ್ರಿ ಎಂದೆ.ಇದಕ್ಕೆ ನನ್ನ ಹೆಂಡತಿ,ಮಗ,ಸೊಸೆ ಎಲ್ಲರೂ ದನಿಗೂಡಿಸಿದರು.ಆತ ಬಿಡ, ಅವಂಗ ಅಮೋಘವರ್ಷ ಅಂತ ಹೆಸರಿಡರಿ‌ಎಂದು ಹೇಳಿದರು.ಅಷ್ಟೇ ಅಲ್ಲ ಮೂರು ತಿಂಗಳ ಮೊಮ್ಮಗನ್ನು ತಮ್ಮ ತೊಡೆಯ ಮೇಲಿರಿಸಿಕೊಂಡು ಏನಪಾ ಅಮೋಘವರ್ಷ‌ಎಂದು ಕರೆದು ಹೆಸರಿಟ್ಟೇಬಿಟ್ಟರು.ಈ ಹೆಸರೇ ಅವನಿಗೀಗ ಶಾಶ್ವತ.ನಾನು ಯಾವಾಗಲದರೂ ಫೋನಾಯಿಸಿದಾಗ ಇಲ್ಲವೆ ಅವರೇ ಫೋನಿಸಿದಾಗ ಮೊದಲು ಅವರು ಕೇಳುವದು ಅವನನ್ನೇ ಏನಂತಾನ ನಮ್ಮ ಅಮೋಘವರ್ಷ,ಸಾಲಿಗೆ ಹೋಗ್ತಾನೊ ಇಲ್ಲೊ‌ಎಂದು ಅಕ್ಕರೆಯಿಂದ ಕೇಳುತ್ತಾರೆ. (ಚಿತ್ರ:ತಾವು ಹೆಸರಿಟ್ಟ ಅಮೋಘವರ್ಷನೊಂದಿಗೆ ಡಾ.ಕಂಬಾರ.) 2013ರಲ್ಲಿ ನಾನು ನನ್ನ ಪತ್ರಿಕಾ ಜೀವನದ ಕೆಲ ಮಹತ್ವದ ಘಟನೆಗಳ ಪುಸ್ತಕ ಪ್ರತ್ಯಕ್ಷಕ್ಕೆ ನಾನು ಕೇಳಿದಾಗ ತುಂಬ ಸಂತೋಷದಿಂದ ಹೊನ್ನುಡಿ ಬರೆದುಕೊಟ್ಟರು.ಇನ್ನಷ್ಟು ಬರೀರಿ ಎಂದು ಪ್ರೋತ್ಸಾಹಿಸಿ ಮತ್ತೆ ಬರೆಯಲು ಪ್ರೇರಣೆ ನೀಡಿದರು.ತಾವು ಗೌರವಿಸುವ ಹಿರಿಯ ಸ್ವಾತಂತ್ರ್ಯಯೋಧ ಅಣ್ಣೂಗುರೂಜಿ ಅವರ ಬಗೆಗೂ ಬರೀರಿ ಎಂದು ಹೇಳಿದ್ದರು.ಅದೂ ಕೂಡ ಸಾಕಾರವಾಯಿತು.ನಾಡಿನ ಸುವಿಖ್ಯಾತ ಶಿಕ್ಷಣ ಸಂಸ್ಥೆ ಕೆ.ಎಲ್.ಇ.ತನ್ನ ಶತಮಾನೋತ್ಸವದ ಅಂಗವಾಗಿ ಪ್ರಕಟಿಸಿದ ನೂರು ಪುಸ್ತಕಗಳಲ್ಲಿ ಅಣ್ಣುಗುರೂಜಿಯೂ ಒಂದು.ಇದನ್ನು ಬಿಡುಗಡೆ ಮಾಡಿದವರು ಕೂಡ ಆ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಡಾ.ಚಂದ್ರಶೇಖರ ಕಂಬಾರ ಅವರೇ. ಕಂಬಾರರು ನಮ್ಮ ಜಿಲ್ಲೆಗೆ ಬಂದರೆ ಆಯಿತು.ಅವರು ಇಲ್ಲಿ ಬಂದಾಗಿನಿಂದ ತಿರುಗಿ ಬೆಂಗಳೂರಿಗೆ ಹೋಗುವವರೆಗೂ ನಾನು ಅವರ ಜತೆಯಲ್ಲಿರಬೇಕು.ನಾನಿದ್ದೆನೆಂದರೆ ಆಯಿತು ಅವರ ಮನೆಯವರಿಗೆ ಯಾವ ಕಾಳಜಿಯೂ ಇರುವದಿಲ್ಲ.ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕಂಬಾರರು ಅಲ್ಲಿಯ ಹೊಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು.ಆ ರಾತ್ರಿ ನಾನು ಅನಿವಾರ್ಯವಾಗಿ ಹುಕ್ಕೇರಿಗೆ ಹಿಂದಿರುಗಬೇಕಾಗಿತ್ತು.ಮರುದಿನ ಮುಂಜಾನೆ ಘೋಡಗೇರಿ,ಸಾವಳಗಿ ಮಠಕ್ಕೆ ಹೋಗಬೇಕಿತ್ತು.ನನಗೆ ಊರಿಗೆ ಹೋಗಲು ಅವರು ಹೇಳಿದರು.ಅವರ ಜತೆಗಿರಲು ನಾನು ನನ್ನ ಓರ್ವ ಕಾರ್ಯಕರ್ತ ಅಕ್ರಮ್ ಎಂಬಾತನಿಗೆ ಹೇಳಿದ್ದೆ.ಹೊಟೆಲ್ ಕೋಣೆಯಲ್ಲೇ ಮಲಗಿರಲು ಹೇಳಿ ಕೊನೆಯಲ್ಲಿ ಚಹ ತಯಾರಿಸುವ ವಿಧಾನವನ್ನೂ ಅವನಿಗೆ ಹೇಳಿಕೊಟ್ಟು ಮುಂಜಾನೆ ಬೇಗನೆ ಎದ್ದು ಚಹ ಮಾಡಿಕೊಡುವಂತೆ ತಾಕೀತು ಮಾಡಿ ಬಂದಿದ್ದೆ.ಮರುದಿನ ಮುಂಜಾನೆ ನಾನು ಬೆಳಗಾವಿಗೆ ಹೋಗಿ ಹೊಟೆಲ್‌ದಲ್ಲಿ ಕಂಬಾರ ಅವರನ್ನು ಭೇಟಿ ಮಾಡಿದೆ.ನಾನು ನನ್ನ ಕಾರ್ಯಕರ್ತ ಅಕ್ರಮ್ ನಿಮಗೆ ಚಹ ಮಾಡಿಕೊಟ್ಟನೊ ಹೇಗೆಂದು ವಿಚಾರಿಸುತ್ತಿದ್ದಾಗ ಅಕ್ರಮ್ ಹೇಳಿದ ಇಲ್ಲ, ಸರ ಅವರೇ ಚಹ ತಯಾರಿಸಿ ನನ್ನೆಬ್ಬಿಸಿ ನನಗೂ ಕೊಟ್ಟು ತಾವೂ ಕುಡಿದರು.ಸಾರಿ‌ಎಂದ.ಅಷ್ಟರಲ್ಲಿ ಕಂಬಾರರು ಹೇಳಿದರು ಅಂವಾ ಅರಾಮ ಮಲಕೊಂಡಿದ್ದಾ ಸುಳ್ಳ ಯಾಕ ಅಂವಗ ಎಬಿಸಿ ಚಹಾ ಮಾಡಸೋದು ಅಂತ ನಾನ್ ಮಾಡಿ ಅಂವಗ ಕೊಟ್ನಿ ನನ್ನ ಚಹಾ ಛಲೋ ಆಗಿತ್ತಿಲ್ಲೋ‌ಎಂದರು.ಇದು ಅವರ ಸಹೃದಯವಂತಿಕೆ. ನಾನೂ ಸಾಹಿತ್ಯ ಪ್ರೇಮಿ.ಏನೆಲ್ಲ ಓದುತ್ತಿರುತ್ತೇನೆ.ಇತ್ತಿಚೆಗೆ ಕಂಬಾರರು ಬರೆದ "ಮೊಹಮ್ಮದ ಗವಾನ" ನಾಟಕ ಓದಿದ ಮೇಲೆ ದೇಶ,ರಾಜ್ಯದಲ್ಲೇ ಸಾಕಷ್ಟು ಜನ ರಾಜ ಮಹಾರಾಜರು ಆಗಿಹೋಗಿದ್ದು ಅವರಲ್ಲಿ ಯಾವೊಬ್ಬನ ಮೇಲೆ ನಾಟಕ ಬರೆಯೋದು ಬಿಟ್ಟು ವಿದೇಶಿ ರಾಜನ ಮೇಲೆ ಏಕೆ ನಾಟಕ ಬರೆದರು?ಎಂಬ ಪ್ರಶ್ನೆ ನನ್ನ ತಲೆ ತಿನ್ನುತ್ತಿತ್ತು.ಕಳೆದ ಅಕ್ಟೋಬರದಲ್ಲಿ ಸಾವಳಗಿ ಮಠದ ಜಾತ್ರೆಗೆ ಬಂದಿದ್ದಾಗ ನನ್ನ ತಲೆ ತಿನ್ನುತ್ತಿದ್ದ ಪ್ರಶ್ನೆಯನ್ನು ಅವರ ಮುಂದಿಟ್ಟೆ.ಏ,ದೇಶಪಾಂಡೆ,ನಿಮ್ಮ ರಾಜ ಮಹಾರಾಜರೊಳಗ ಯಾರಾದರೂ ಪಂಢರಪುರ ವಿಠ್ಠಲನ್ನ ಮಾತಾಡಿಸಿದಾವ್ರು ಇದ್ದಾರೇನು?ಮಹಮ್ಮದ ಗವಾನ ವಿಠ್ಠಲನ ಭಕ್ತ ಆಗಿದ್ದಾ ಅಂವಗ ದರ್ಶನಾ ಕೊಟ್ಟಿದ್ದಾ,ಅವ್ನ ಜೋಡಿ ಮಾತಾಡಿದ್ದಾ.ಇಂಥಾವಂದು ನಾಟಕಾರಿ ಅದು ಎಂದು ವಿವರಿಸಿದಾಗ ನನಗೇನೋ ಸಮಾಧಾನ. ಕಂಬಾರರೊಂದಿಗಿನ ಆತ್ಮೀಯ ಒಡನಾಟದ ಬುತ್ತಿಗಂಟು ಬಿಚ್ಚುತ್ತ ಹೋದಂತೆಲ್ಲ ಅದರ ಕೆನೆಕೆನೆ ಮೊಸರಿನ ಸುವಾಸನೆ ಹರಡುತ್ತಲೇ ಹೋಗಿ ಇನ್ನಷ್ಟು ಸವಿಯಬೇಕೆನಿಸುತ್ತದೆ.ಮೊಗೆಯುತ್ತ ಹೋದಂತೆಲ್ಲ ಸಿಹಿಯಾಗಿ ಹತ್ತಿರವಾಗುತ್ತಲೇ ಹೋಗುತ್ತಾರೆ ಕಂಬಾರರು.ಕನ್ನಡದ ಈ ಮೇರು ಸಾಹಿತಿಗೆ ಭಾರತೀಯ ನೋಬೆಲೆಂದೇ ಪರಿಗಣಿತವಾಗಿರುವ ಜ್ಞಾನಪೀಠಪ್ರಶಸ್ತಿ ಬಂದದ್ದು ಕನ್ನಡ ಸಾಹಿತ್ಯದ ಮೇರು ಶಿಖರಕ್ಕೊಂದು ಹೊನ್ನ ಕಲಶವನ್ನಿಟ್ಟಂತೆ ಆಗಿತ್ತು.ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಯೋಗ ಈ ಹಿಂದೆಯೇ ಬರಬೇಕಿತ್ತು ಐದು ವರ್ಷಗಳ ಹಿಂದೆ ಇದಕ್ಕಾಗಿ ಅವರ ಹೆಸರು ಕೂಡ ಪ್ರಸ್ತಾಪವಾಗಿ ಕೈ ಬಿಟ್ಟು ಹೋಗಿತ್ತು.ಇದು ಅವರಿಗೆ ಸ್ವಲ್ಪು ಬೇಜಾರುಂಟು ಮಾಡಿತ್ತು ಸಹ.ಈಗ ಈ ಸುಯೋಗ ಒದಗಿಬಂದಿದೆ. 1993 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದಾಗ ಚಂದ್ರಶೇಖರ ಕಂಬಾರ ಅವರನ್ನೇ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಸಿ ವಿಜೃಂಭಣೆಯಿಂದ ಮೆರವಣಿಗೆ,ಸಮ್ಮೇಳನ ಮಾಡಿದ್ದೆವು.ಆಗ ನಾನೇ ಕಸಾಪ ತಾಲೂಕು ಅಧ್ಯಕ್ಷನಾಗಿದ್ದೆ.ಈಗ ಧಾರವಾಡದಲ್ಲಿ ಅ.ಭಾ.ಕ.ಸಾ.ಸಮ್ಮೇಳನಕ್ಕೆ ಡಾ.ಚಂದ್ರಶೇಖರ ಕಂಬಾರ ಅವರು ಸರ್ವಾಧ್ಯಕ್ಷರಾಗಿರುವದು ನಾನು ಈಗಲೂ ಕಸಾಪದ ಹುಕ್ಕೇರಿ ತಾಲೂಕು ಅಧ್ಯಕ್ಷನಾಗಿರುವದು ಕಾಕತಾಳೀಯವೇ ಸರಿ.ನನಗಿದೊಂದು ಅಭಿಮಾನ.ತಾಯ ನೆಲದಲ್ಲಿ ಅಂದು ಜ್ಞಾನಪೀಠಪ್ರಶಸ್ತಿ ಸ್ವೀಕರಿಸಿದ್ದ ಡಾ.ಚಂದ್ರಶೇಖರ ಕಂಬಾರ ಅವರು ಈಗ ಧಾರವಾಡದ ಸಾಹಿತ್ಯ ಕೃಷಿಯ ಮಾಗಿದ ಮಣ್ಣಿನಲ್ಲಿ ಅ.ಭಾ.ಕ.ಸಾ.ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡಿರುವದು ನಮ್ಮ ಬೆಳಗಾವಿ ಜಿಲ್ಲೆಗೆ,ನನ್ನ ಹುಕ್ಕೇರಿ ತಾಲೂಕಿಗೆ ಸಂದ ಅಪೂರ್ವ ಗೌರವ.ಅವರ ಸ್ನೇಹತ್ವ,ಮಾರ್ಗದರ್ಶನ ನನಗೆ ಲಭಿಸಿರುವದು ನನ್ನಲ್ಲಿ ಧನ್ಯತಾ ಭಾವ ಮೂಡಿಸಿದೆ. ಇಂಥ ಕಂಬಾರ ಅವರ ಊರಿಗೆ ಸರ್ಕಾರ ಏನೂ ಮಾಡಿಲ್ಲವೆಂದು ಊರಿನವರು ದೂರುತ್ತಾರೆ.ಇದಕ್ಕೆ ಉತ್ತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಘೋಡಗೇರಿಯಲ್ಲಿ ಡಾ.ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಭವನವನ್ನು 30 ಲಕ್ಷ.ರೂ.ವೆಚ್ಚದಲ್ಲಿ ನಿರ್ಮಿಸಹೊರಟಿದ್ದುನವ್ಹಂಬರ.ದಿ.19 ಕ್ಕೆ ಇದಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಸಾಪ ಹುಕ್ಕೇರಿ ತಾಲೂಕು ಘಟಕದ ಉಸ್ತುವಾರಿಯಲ್ಲಿ ಇದರ ಕಾಮಗಾರಿಯನ್ನೂ ಈಗ ಪ್ರಾರಂಭಿಸಲಾಗಿದೆ.ನಾಡಿನ ಹಿರಿಯ ಖ್ಯಾತನಾಮ ಸಾಹಿತಿಗಳ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸುವ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರ ಮಹಾತ್ವಾಕಾಂಕ್ಷೆಯ ಯೋಜನೆಗೆ ರಾಜ್ಯದಲ್ಲಿಯೇ ಮೊದಲು ಹುಕ್ಕೇರಿ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ.ನನ್ನ ಕಸಾಪ ಅಧ್ಯಕ್ಷತೆಯ ಅವಧಿಯಲ್ಲೇ ನನ್ನ ನೇತೃತ್ವದಲ್ಲೇ ಇದು ಜಾರಿಗೊಳ್ಳುತ್ತಿರುವದು ನನಗೆ ಅಭಿಮಾನದ್ದು. (ಚಿತ್ರ: ಕಸಾಪ ನಿರ್ಮಿಸುತ್ತಿರುವ ಡಾ.ಚಂದ್ರಶೇಖರ ಕಂಬಾರ ಭವನದ ನಿವೇಶನ ವೀಕ್ಷಿಸುತ್ತಿರುವ ಡಾ.ಕಂಬಾರರು.ಕಸಾಪ ಹುಕ್ಕೇರಿ ತಾಲೂಕು ಅಧ್ಯಕ್ಷ,ಪತ್ರಕರ್ತ ಪ್ರಕಾಶ ದೇಶಪಾಂಡೆ ಮತ್ತಿತರರು) ಕೈಲಾಸ ಕೈ ಮುಗಿದು ಭೂಲೋಕಕ್ಕಿಳಿಸಿ ಸಾವಿರದ ಶರಣವ್ವ ಕನ್ನಡ ತಾಯಿಯ ಸುಪುತ್ರ ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಶಿಖರ ಸೂರ್ಯನಿಗೆ,ಕನ್ನಡ ಜಾನಪದ ಗಾರುಡಿಗನಿಗಿದೋ ಶತಶತ ನಮನ,ಸಾಸಿರಸಾಸಿರ ಅಭಿನಂದನ.ಇಂಥ ಸಾಹಿತ್ಯ ಕುಲಪುತ್ರನನ್ನು ಪಡೆದ ಬೆಳಗಾವಿ ಜಿಲ್ಲೆ,ಹುಕ್ಕೇರಿ ತಾಲೂಕು ಧನ್ಯ. – ಟಿ ಪ್ರಕಾಶ ದೇಶಪಾಂಡೆ , ಹುಕ್ಕೇರಿ Tags: Dr.Chandrashekhara KambaraJananapeetha AwardeeKannada literatureಡಾ.ಚಂದ್ರಶೇಖರ ಕಂಬಾರಹುಕ್ಕೇರಿ ಸಾಕಷ್ಟು ಮಾಹಿತಿಗಳಿಂದ ತುಂಬಿ ತುಳುಕಾಡೊ ಲೇಖನ, ಕಂಬಾರರ ಬಗೆಗಿನ ಅನೇಕ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳುವ ಹಾಗಾಯಿತು . ಕಂಬಾರರ ಸೀದಾ ಸಾದಾ ವ್ಯಕ್ತಿತ್ವದ ಪರಿಚಯ ಸೊಗಸಾಗಿದೆ. ತುಂಬಿದ ಕೊಡ ತುಳುಕಾಡೋದಿಲ್ಲ . ಕಂಬಾರರ ಮೇರು ವ್ಯಕ್ತಿತ್ವದ ಪರಿಚಯವಾಯಿತು . Notice: It seems you have Javascript disabled in your Browser. In order to submit a comment to this post, please write this code along with your comment: 975e1b54e04258d2e323e78b0b720aa5
2019/06/19 01:54:38
http://surahonne.com/?p=22248
mC4
ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು | go stargazing in India at these spots - Kannada Nativeplanet »ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು Updated: Friday, May 18, 2018, 14:59 [IST] ಮಕ್ಕಳಾಗಿರುವಾಗ ನಾವೆಲ್ಲರೂ ಆಕಾಶದಲ್ಲಿ ಹೊಳೆಯುತ್ತಿರುವ ಆ ಬೆಳ್ಳಿ ಚುಕ್ಕಿ ಏನೆಂದು ಆಶ್ಚರ್ಯ ಪಟ್ಟಿರುತ್ತೇವೆ. ಆ ಚಂದಿರ, ನಕ್ಷತ್ರಗಳು ಮತ್ತು ಉಪಗ್ರಹಗಳನ್ನು ತೋರಿಸುತ್ತಾ ನಮ್ಮ ಅಜ್ಜಿ ತಾತಂದಿರು ನಮಗೆ ತಿನ್ನಿಸುತ್ತಿದ್ದರು. ಆದರೆ ಪ್ರಪಂಚದ ಕೆಲವು ಭಾಗವನ್ನು ನಾವು ನಿಜವಾಗಿಯೂ ಅರ್ಥ ಮಾಡಿಕೊಂಡಿದ್ದೇವಾ ಎನ್ನುವ ಪ್ರಶ್ನೆ ಇಂದಿಗೂ ನಮ್ಮನ್ನು ಕಾಡುವುದು ಸಹಜ. ಬಾಹ್ಯಾಕಾಶ ಸಿನೆಮಾ ಮತ್ತು ಸಾಕ್ಷ್ಯಚಿತ್ರಗಳನ್ನು ವೀಕ್ಷಿಸುವ ಮೂಲಕ ನಿಗೂಢ ಆಕಾಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ನಮ್ಮ ವಯಸ್ಕರಿಗಿಂತ ಸ್ವಲ್ಪ ಉತ್ತಮ ಮಟ್ಟದಲ್ಲಿದ್ದೇವೆ ಇದನ್ನು ನಮಗೆ ಅರ್ಥ ಮಾಡಿಸುವಲ್ಲಿ ನಾಸಾ ಅನುಕೂಲಮಾಡಿಕೊಟ್ಟಿವೆ. ಒಮ್ಮೆ ನೀವು ದೂರದ ಗ್ರಹಗಳು ನಕ್ಷತ್ರಗಳು ಮತ್ತು ಅವುಗಳಿಗೆ ಸಂಭಂಧಿಸಿದ ಅಂಟಿಕೊಂಡಿರುವ ವಿಷಯಗಳ ಬಗ್ಗೆ ತಿಳಿಯುವ ಕುತೂಹಲಕರ ಮಕ್ಕಳಲ್ಲಿ ಒಬ್ಬರಾಗಿದ್ದರೆ ಭಾರತದ ಈ ಅದ್ಭುತವಾದ ಸ್ಥಳಗಳಲ್ಲಿ ನಕ್ಷತ್ರ ವೀಕ್ಷಣೆ ಮಾಡುವುದರ ಮೂಲಕ ನಕ್ಷತ್ರದೊಂದಿಗೆ ನಿಮ್ಮ ಗುಪ್ತ ಸಂಭಾಷಣೆ ನಡೆಸಿ. 1. ನುಬ್ರಾ ಕಣಿವೆ- ಲೇಹ್ ಲಡಾಖ್ ನೀವು ನಿಗೂಢವಾದ ಬಾಹ್ಯಾಕಾಶದ ಚಿಂತನೆಯಿಂದ ಆಕರ್ಷಿತರಾದರೆ ಮತ್ತು ಅದಕ್ಕಿಂತಲೂ ಹೆಚ್ಚಾಗಿರುವುದು ನುಬ್ರಾ ಕಣಿವೆ ಖಂಡಿತವಾಗಿ ನಿಮ್ಮ ಸಮಯವನ್ನು ಉತ್ಸಾಹದಿಂದ ಕಳೆಯಲು ಉತ್ತಮವಾದ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಯಾವುದೇ ಮಾಲಿನ್ಯವಿಲ್ಲದೆ, ಲೇಹ್ ಲಡಾಖ್ ನ ನುಬ್ರಾದ ಸುಂದರವಾದ ಕಣಿವೆ ಅದ್ಭುತ ಅವಕಾಶಗಳನ್ನು ನೀಡುತ್ತದೆ. ಈ ಪ್ರದೇಶವು ಮಾಲಿನ್ಯರಹಿತವಾಗಿದ್ದು ನಕ್ಷತ್ರ ವಿಕ್ಷಣೆ ಮಾಡಲು ಲೇಹ್ ಲಡಾಖ್ ನಲ್ಲಿರುವ ಈ ಸುಂದರವಾದ ನುಬ್ರಾ ಕಣಿವೆಯು ಒಂದು ಅತ್ಯಂತ ಉತ್ತಮವಾದ ಅವಕಾಶಗಳನ್ನು ಒದಗಿಸಿಕೊಡುತ್ತದೆ. ನೀವು ಇಲ್ಲಿ ಮೇಲೆ ನೋಡಿದರೆ ಚಂದ್ರನು ಹೊಳೆಯುವ ನಕ್ಷತ್ರಗಳು ಮತ್ತು ಮೋಡಗಳ ಜೊತೆಗೆ ಆಟವಾಡುವುದನ್ನು ಕಾಣಬಹುದಾಗಿದೆ. ಈ ಸುಂದರವಾದ ನೋಟವನ್ನು ನೋಡಲು ಉತ್ತಮವಾದ ಮಾರ್ಗವೆಂದರೆ ಈ ಪ್ರದೇಶಗಳಲ್ಲಿ ಶಿಬಿರ ಹೂಡುವುದಾಗಿದೆ. ತೆರೆದ ಟೆಂಟ್ ಗಳನ್ನು ಹಾಕಿಕೊಂಡು ಈ ನಕ್ಷತ್ರಗಳನ್ನು ರಾತ್ರಿಯೆಲ್ಲಾ ನೋಡಬಹುದಾಗಿದೆ. ಇದೊಂದು ದೇಶದ ಪ್ರಮುಖವಾದ ನಕ್ಷತ್ರವೀಕ್ಷಣೆಯ ಸ್ಥಳವಾಗಿದೆ. ರಾತ್ರಿಯನ್ನು ನಕ್ಷತ್ರಗಳ ಅಡಿಯಲ್ಲಿ ಕಳೆಯಲು ನುಬ್ರಾ ಕಣಿವೆಯು ಅಸಂಖ್ಯಾತ ಆಯ್ಕೆಗಳನ್ನು ನೀಡುತ್ತದೆ. 2. ಕೂರ್ಗ್- ಕರ್ನಾಟಕ M. A. Kaleem ಕೂರ್ಗ್ ನಲ್ಲಿ ನೀವು ನಕ್ಷತ್ರ ವೀಕ್ಷಣೆ ಮಾಡಿಕೊಂಡು ಅನೇಕ ರಾತ್ರಿಗಳನ್ನು ಕಳೆಯಬಹುದಾಗಿದೆ ಇಲ್ಲಿ ಇದು ಅತ್ಯಂತ ಸುಂದರವಾದುದಾಗಿದೆ! ನಿಮ್ಮ ಕಣ್ಣಿಗೆ ತಂಪನ್ನು ನೀಡುವ ಒಂದು ಸುಂದರವಾದ ಸ್ಥಳದ ಜೊತೆಗೆ ಹೊಳೆಯುವ ನಕ್ಷತ್ರಗಳನ್ನೂ ಇಲ್ಲಿ ವೀಕ್ಷಿಸಬಹುದಾಗಿದೆ. ಕೂರ್ಗ್ ನಿಮಗೆ ಕೆಲವು ಅವಕಾಶಗಳನ್ನು ನೀಡುತ್ತವೆ ಇದರಿಂದಾಗಿ ನೀವು ನಕ್ಷತ್ರಭರಿತ ಆಕಾಶದ ಭವ್ಯ ಮೇಲಾವರಣದಲ್ಲಿ ನಿಮ್ಮ ರಾತ್ರಿಯನ್ನು ಶಾಂತಿಯುತವಾಗಿ ಕಳೆಯಬಹುದಾಗಿದೆ. ಸ್ವಲ್ಪ ಕ್ಷಣ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಸುಂದರವಾದ ಪರ್ವತಗಳ ಮರೆಯಿಂದ ನಕ್ಷತ್ರಗಳು ಇಣುಕುವ ದೃಶ್ಯಗಳು, ಜಲಪಾತದಿಂದ ಕೆಳಗೆ ಬೀಳುವಾಗ ಆಗುವ ನೀರಿನ ಸದ್ದು, ನಿಮ್ಮ ಮೂಗಿಗೆ ಬಡಿಯುವ ಕಾಫಿ ಬೀಜದ ಸುವಾಸನೆ ಇವೆಲ್ಲವನ್ನೂ ಒಂದು ಕ್ಷಣ ಕಲ್ಪನೆ ಮಾಡಿಕೊಳ್ಳಿ . ಈ ಅಸಾಧಾರಣವಾದ ಸೌಂದರ್ಯತೆಯಲ್ಲಿ ನೀವು ನಿಮ್ಮ ಎಲ್ಲಾ ಚಿಂತೆಗಳನ್ನೂ ಮರೆತುಬಿಡುವಿರಿ. ನೀವು ಕೂರ್ಗ್ ನ ಕಾಡಿನ ತೆರೆದ ಛಾವಣಿಯಲ್ಲಿ ಕ್ಯಾಂಪಿಂಗ್ ಮಾಡುವಿರಿ ಎಂದಾದರೆ ನಿಮ್ಮ ಜೊತೆ ಟೆಂಟ್ ಹಾಕುವ ಸಾಮಗ್ರಿಗಳನ್ನು ನಿಮ್ಮೊಂದಿಗೆ ಒಯ್ಯಿರಿ. 3. ನೀಲ್ ದ್ವೀಪ- ಅಂಡಮಾನ್ ಮತ್ತು ನಿಕೋಬಾರ್ Srikantamedia ಜೀವನದಲ್ಲಿ ಕೆಲವೇ ಕೆಲವು ಅನುಭವಗಳು ಅಗಾಧವಾದೂದಾಗಿರುತ್ತವೆ ಮತ್ತು ನೀವು ಈ ತಿಳಿಯದೇ ಇರುವ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿರುವಿರಿ ಎಂಬ ಅನುಭವಕ್ಕೆ ಒಳಗಾಗುವಿರಿ. ಅಂಡಮಾನ್ ಮತ್ತು ನಿಕೋಬಾರಿನ ನೀಲ್ ದ್ವೀಪದಲ್ಲಿ ನಕ್ಷತ್ರ ವೀಕ್ಷಣೆ ಮಾಡುವಾಗ ಇಂತಹುದೇ ಒಂದು ಅನುಭವಕ್ಕೊಳಗಾಗುವಿರಿ. ಒಂದು ನಿಗೂಢವಾದ ಚೌಕಟ್ಟು, ಬಿಳಿ ಮಣ್ಣಿನ ಬೀಚ್ ಗಳು, ದಟ್ಟವಾದ ಹಸಿರು ಕಾಡುಗಳು ಸಮುದ್ರದ ಶಬ್ದ ಮತ್ತು ಆಕಾಶದ ಮೇಲಿರುವ ಲಕ್ಷ ಕೋಟಿ ನಕ್ಷತ್ರಗಳು ಅದ್ಭುತ ದೃಶ್ಯಕ್ಕೆ ಕಾರಣವಾಗುತ್ತವೆ. ಇಲ್ಲಿ ಆಕಾಶವು ರಾತ್ರಿಯಲ್ಲಿ ಕಪ್ಪನೆ ಬಣ್ಣಕ್ಕೆ ತಿರುಗುವ ಬದಲು ನೀಲಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಈ ಬಣ್ಣವು ನಿಮ್ಮ ಹೃದಯವನ್ನು ಕದಿಯುವುದರಲ್ಲಿ ಸಂಶಯವೇ ಇಲ್ಲ! ಈ ದ್ವೀಪವು ಇದು ನಕ್ಷತ್ರದ ಬೆಳಕಿನಲ್ಲಿರುವ ಹೊಳೆಯುವ ಆಕಾಶಕ್ಕೆ ಪ್ರಸಿದ್ಧವಾಗಿದೆ . ಈ ತಾಣವು ನಕ್ಷತ್ರ ವೀಕ್ಷಣೆ ಮಾಡುವ ಜಗತ್ತಿನಾದ್ಯಂತದ ಜನರಿಂದ ತುಂಬಿರುತ್ತದೆ. ಇಲ್ಲಿಗೆ ಜನರು ನೀಲಾಕಾಶಯುಕ್ತ ಪರಿಸರವನ್ನು ವೀಕ್ಷಣೆ ಮಾಡುವ ಸಲುವಾಗಿ ಭೇಟಿ ಕೊಡುತ್ತಾರೆ. ಸಮುದ್ರದ ವೈಶಾಲ್ಯತೆಯು ಆಕಾಶದಲ್ಲಿ ನೀಲಿ ಬಣ್ಣದ ಜೊತೆ ಮಿಲನವಾದಾಗ, ಈ ದ್ವೀಪವನ್ನು ನೀಲಿ ಮತ್ತು ಸುಂದರವಾಗಿಸುವುದಲ್ಲದೆ ಈ ಸ್ಥಳದಲ್ಲಾಗುವ ಕಂಗೆಡಿಸುವ ಸೌಂದರ್ಯವನ್ನು ನೀವು ಕಲ್ಪಿಸಿಕೊಳ್ಳಬಹುದು. 4. ಪಾಂಗೊಂಗ್ ಟಸ್ಸೋ - ಲೇಹ್, ಲಡಾಖ್ ನಕ್ಷತ್ರಗಳನ್ನು ಮತ್ತು ಚಂದ್ರನನ್ನು ವೀಕ್ಷಿಸುವ ಅಭಿಮಾನಿಗಳಿಗೆ ಲೇಹ್ ಲಡಾಖ್ ನಲ್ಲಿರುವ ಪಾಂಗೋಂಗ್ ಟಸ್ಸೊ ಒಂದು ಕನಸ್ಸಿನ ಸ್ಥಳವಾಗಿದೆ. ಕ್ಷೀರ ಪಥವನ್ನು ವೀಕ್ಷಿಸುವ ದೇಶದ ಪ್ರಮುಖ ಸ್ಥಳಗಳಲ್ಲಿ ಈ ಸ್ಥಳವೂ ಒಂದಾಗಿದೆ. ಹಿಮಾಲಯ ಪರ್ವತವನ್ನು ಬಿಟ್ಟು ನಿಮ್ಮ ಮತ್ತು ನಕ್ಷತ್ರಗಳ ನಡುವೆ ಇನ್ನೊಂದು ಯಾವುದೂ ಇಲ್ಲಿ ಇರುವುದಿಲ್ಲ. ನಕ್ಷತ್ರಭರಿತ ನೋಟವು ನಿಮ್ಮನ್ನು ಭೂಮಿಯ ಒಂಟಿತನದ ಜೀವನವನ್ನು ಮರೆಸುವಂತೆ ಮಾಡುತ್ತದೆ ಮತ್ತು ನೀವು ಜೀವಂತವಾಗಿರುವ ಅನುಭವನನ್ನು ನೀಡುತ್ತದೆ. ಮಂಜುಗಡ್ಡೆಯ ಮೋಡಗಳಲ್ಲಿ ಎತ್ತರವಾಗಿ ಮತ್ತು ಮುಕ್ತವಾಗಿ ಹಾರುವ ಹಕ್ಕಿಗಳಂತೆ ಮತ್ತು ಆಕಾಶದೆತ್ತರದಲ್ಲಿಯ ಆ ಹೊಳೆಯುವ ಚುಕ್ಕೆಗಳನ್ನು ಸಂಪರ್ಕಿಸುವಂತೆ ನೀವು ಆಕಾಶದಲ್ಲಿ ನಿಮ್ಮ ಸ್ವಂತವಾದ ಒಂದು ರಚನೆಯನ್ನು ರಚಿಸುವ ಅನುಭವವನ್ನು ನೀಡುತ್ತದೆ. ಕೆಲವು ವಿವರಿಸಲಾಗದ ವಸ್ತುಗಳ ಚಿತ್ರಗಳನ್ನು ರಚಿಸುವುದು ಅಥವಾ ನಿಮ್ಮ ಪ್ರೀತಿ ಪಾತ್ರರ ಹೆಸರನ್ನು ಆ ನಕ್ಷತ್ರಗಳಲ್ಲಿ ಒಂದಕ್ಕೆ ಇಡಬಹುದು ಒಟ್ಟಿಗೆ ಇಡೀ ಆಕಾಶವೇ ಇಲ್ಲಿ ನಿಮ್ಮದಾಗಿರುತ್ತದೆ ! 5. ಸ್ಪಿತಿ ಕಣಿವೆ- ಹಿಮಾಚಲ ಪ್ರದೇಶ Wazzername9 ಅಸಂಖ್ಯಾತ ನಕ್ಷತ್ರಗಳು ಇಡೀ ಆಕಾಶದಲ್ಲಿ ಆವರಿಸಿಕೊಂಡಿರುವಾಗ ಇಡೀ ಆಕಾಶವು ಹೊಳೆಯುವಂತೆ ಕಾಣುತ್ತದೆ. ಇದಕ್ಕಾಗಿ ನೀವು ಮಾಡಬೇಕಾದುದೇನೆಂದರೆ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಇಲ್ಲಿಯ ಚಿತ್ರಣವನ್ನು ನಿಮ್ಮ ಮನಸ್ಸಿನಲ್ಲಿ ಖಾಯಂ ಆಗಿ ಸೆರೆಹಿಡಿಯಬೇಕಾದುದು! ಹಿಮಾಚಲ ಪ್ರದೇಶದಲ್ಲಿರುವ ಸ್ಪಿತಿ ಕಣಿವೆಯು ತನ್ನ ಕನಸಿನ ಲೋಕವನ್ನು ತನ್ನ ಸ್ವಚ್ಚವಾದ ಆಕಾಶ ಮತ್ತು ಕಡಿಮೆ ಜನಸಂಖ್ಯೆಯಿರುವ ಈ ಸ್ಥಳವು ಇಂತಹುದೇ ಒಂದು ಅವಕಾಶವನ್ನು ನೀಡುತ್ತದೆ ಈ ಅನುಭವವನ್ನು ಹೊಂದಲು ಸಾಕಷ್ಟು ಜನರು ನಕ್ಷತ್ರಗಳ ಸೌಂದರ್ಯವನ್ನು ವೀಕ್ಷಿಸುವ ಪ್ರತಿಕ್ಷೆ ಮಾಡುತ್ತಾರೆ. ನಕ್ಷತ್ರ ವೀಕ್ಷಕರು ಮತ್ತು ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಜಾಗಕ್ಕೆ ಭೇಟಿ ನೀಡುತ್ತಾರೆ ಮತ್ತು ಇಲ್ಲಿ ಇಡೀ ರಾತ್ರಿ ಇದ್ದು ನಕ್ಷತ್ರ ಅಥವಾ ಕ್ಷೀರ ಪಥದ ಶೂಟಿಂಗ್ ಮಾಡಲು ಸೂಕ್ತವಾದ ಅವಕಾಶಕ್ಕೆ ಕಾಯುತ್ತಿರುತ್ತಾರೆ. ಪದಗಳು ನಿಜವಾಗುವ ಈ ಸ್ಪಿತಿ ಕಣಿವೆಗೆ ಭೇಟಿ ಕೊಟ್ಟು ಇಲ್ಲಿಯ ಸಹಜವಾದ ಸೌಂದರ್ಯವನ್ನು ನೋಡಲು ಬನ್ನಿ! 6. ಜೈಸಲ್ಮೇರ್ , ರಾಜಸ್ಥಾನ Const.crist ಜೈಸಲ್ಮೇರ್‍ ಅಂದರೆ ಹೊಂಬಣ್ಣದ ಮರಳು ಮತ್ತು ಸೂರ್ಯಾಸ್ತ ಮತ್ತು ಒಂಟೆಗಳು ಮಾತ್ರ ಎಂದು ಕೊಂಡಿರುವಿರಾ! ಹಾಗಿದ್ದಲ್ಲಿ ಜೈಸಲ್ಮೇರ್‍ ಇದಕ್ಕಿಂತಲೂ ಹೆಚ್ಚಿನದನ್ನು ಹೊಂದಿದೆ. ಈ ಸ್ಥಳದಲ್ಲಿಯೇ ನಕ್ಷತ್ರಗಳು ಮರುಭೂಮಿಯ ವಿಸ್ತಾರವಾದ ತೋಳಿನಲ್ಲಿ ಕಾಣಿಸಿಕೊಳ್ಳುವಂತಹುದು. ಇದೊಂದು ಸುವರ್ಣಾವಕಾಶವಾದ ದೃಶ್ಯವನ್ನು ಒದಗಿಸುತ್ತದೆ ಮತ್ತು ನಿಮಗೆ ಮರುಭೂಮಿಗಳಲ್ಲಿ ಕ್ಯಾಂಪಿಂಗ್ ಮಾಡುವ ಅನುಭವವನ್ನು ಒದಗಿಸುತ್ತದೆ. ಜೈಸಲ್ಮೇರ್ನಲ್ಲಿರುವ ಥಾರ್ ಮರುಭೂಮಿ ರಾತ್ರಿಯಲ್ಲಿ ಅತ್ಯಂತ ಶಾಂತಿಯುತವಾದುದಾಗಿದ್ದು ಚಂದ್ರ ಮತ್ತು ಲಕ್ಷಾಂತರ ನಕ್ಷತ್ರಗಳು ರಾತ್ರಿ ಆಕಾಶವನ್ನು ಆವರಿಸಿದಾಗ, ಮರುಭೂಮಿಯ ಉತ್ಕೃಷ್ಟತೆಯು ಜಾಸ್ತಿ ಯಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಆಕಾಶವನ್ನು ವೀಕ್ಷಿಸುವ ಪ್ರೇಮಿಗಳು ರಾತ್ರಿ ಸಫಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಅವರು ಬಯಸಿದಲ್ಲಿ ಇಲ್ಲಿಯ ಮರಳಿನಲ್ಲಿ ಕ್ಯಾಂಪ್ ಕೂಡಾ ಮಾಡಬಹುದು. ಮತ್ತು ಮನಮೋಹಕ ದೃಶ್ಯವನ್ನು ವೀಕ್ಷಿಸಬಹುದಾಗಿದೆ.
2019/10/16 17:39:32
https://kannada.nativeplanet.com/travel-guide/go-stargazing-in-india-at-these-spots-002771.html
mC4
ಅಮೆಜಾನ್‌ನಲ್ಲೂ ಕೂಡ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ | Amazon India Planning To Ban Single-Use Plastic - Kannada Oneindia | Updated: Friday, September 27, 2019, 16:39 [IST] ನವದೆಹಲಿ, ಸೆಪ್ಟೆಂಬರ್ 5: ಅಮೆಜಾನ್‌ನಲ್ಲೂ ಕೂಡ ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಚಿಂತನೆ ನಡೆಸಿದೆ. 2020ರ ಜೂನ್ ಒಳಗೆ ಈ ಯೋಜನೆ ಅನುಷ್ಠಾನಕ್ಕೆ ತರುವುದಾಗಿ ಕಂಪನಿಯ ಆಡಳಿತ ಮಂಡಳಿಯು ತಿಳಿಸಿದೆ. ಅಮೆಜಾನ್ ಇಂಡಿಯಾ 2019ರ ಅಂತ್ಯದ ವೇಳೆಗೆ ದೇಶಾದ್ಯಂತ ಪೇಪರ್ ಪ್ಯಾಕಿಂಗ್‌ಗೆ ಆದ್ಯತೆ ನೀಡುತ್ತದೆ ಎಂದು ಅಮೆಜಾನ್ ಅಧಿಕಾರಿ ಅನಿಖ್ ಸಕ್ಸೇನಾ ತಿಳಿಸಿದ್ದಾರೆ. ಸಂಪೂರ್ಣ ಮರು ಬಳಕೆ ಮಾಡಬಹುದಾದ, ಪರಿಸರ ಸುರಕ್ಷಿತ ವಸ್ತುಗಳನ್ನು ಮಾತ್ರ ಪ್ಯಾಕಿಂಗ್ ಮಾಡಲು ಬಳಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಮೆಜಾನ್ ತನ್ನ ವಸ್ತುಗಳನ್ನು ಪ್ಯಾಕಿಂಗ್ ಮಾಡಲು ಹೆಚ್ಚು ಪ್ಲಾಸ್ಟಿಕ್ ಮತ್ತು ಥರ್ಮೋಕೋಲ್ ಬಳಕೆ ಮಾಡುತ್ತಿದೆ ಎಂಬ ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2022ರ ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್‌ಗಳ ಬಳಕೆಯನ್ನು ರದ್ದುಗೊಳಿಸುವ ಯೋಜನೆಯನ್ನು ಪ್ರಕಟಿಸಿದ್ದರು. ಪ್ರಧಾನಿ ಈ ನಿರ್ಧಾರ ಘೋಷಿಸಿ ಕೆಲವೇ ದಿನಗಳಲ್ಲಿ ಎರಡು ಬೃಹತ್ ಕಂಪನಿಗಳು ಪ್ಲಾಸ್ಟಿಕ್‌ಗೆ ಗುಡ್‌ಬೈ ಹೇಳಲು ಮುಂದಾಗಿದೆ. ಕಳೆದ ವಾರ ಫ್ಲಿಪ್‌ಕಾರ್ಟ್ ಸಹ ಇದೇ ಮಾದರಿಯ ಪ್ಲಾಸ್ಟಿಕ್ ಬಳಕೆಯನ್ನು ಶೇ.25ರಷ್ಟು ಕಡಿತಗೊಳಿಸಿದೆ. 2021ರ ಮಾರ್ಚ್ ರ ವೇಳೆಗೆ ತನ್ನದೇ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ದೇಶದ ಜನರಲ್ಲಿ ಆ.15ರಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. amazon plastic narendra modi ಅಮೆಜಾನ್ ಪ್ಲಾಸ್ಟಿಕ್ ನರೇಂದ್ರ ಮೋದಿ Amazon India said on Wednesday it would replace all single use plastic in its packaging by June 2020 with paper cushions,
2020/04/02 19:52:39
https://kannada.oneindia.com/news/new-delhi/amazon-india-planning-to-ban-single-use-plastic-175081.html
mC4
ಶುಕ್ರವಾರ, 3 ಸೆಪ್ಟಂಬರ್ 2021 (15:19 IST) ಈ ಸಂದರ್ಭ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ "ದೇಶ ವಿಭಜನೆಯ ನಂತರ ನಡೆದ ಅತ್ಯಂತ ಕೆಟ್ಟ ಮತೀಯ ಹಿಂಸಾಚಾರವನ್ನು ಇತಿಹಾಸ ಹಿಂದಿರುಗಿ ನೋಡಿದಾಗ, ಸೂಕ್ತ ತನಿಖೆ ನಡೆಸಲು ತನಿಖಾ ಏಜನ್ಸಿಯ ವೈಫಲ್ಯವು ಪ್ರಜಾಪ್ರಭುತ್ವದ ಕಾವಲುಗರರಿಗೆ ಖಂಡಿತವಾಗಿಯೂ ಯಾತನೆ ನೀಡಲಿದೆ,'' ಎಂದು ಹೇಳಿದೆ. ತನಿಖೆಗೆ ಅಗತ್ಯ ಮೇಲ್ವಿಚಾರಣೆಯನ್ನು ಹಿರಿಯ ಅಧಿಕಾರಿಗಳು ನಡೆಸದೇ ಇರುವ ಬಗ್ಗೆ ಟೀಕಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್, ತನಿಖೆಯ ಕುರಿತು ಪ್ರಾಮಾಣಿಕ ಉದ್ದೇಶವಿಲ್ಲದೆ ತೆರಿಗೆದಾರರ ಹಣವನ್ನು ಪೋಲು ಮಾಡಿದ್ದಾರೆ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಖುಲಾಸೆಗೊಂಡವರಲ್ಲಿ ಹುಸೈನ್ ಅವರ ಸೋದರ ಶಾ ಆಲಂ ಹಾಗೂ ಶಾದಬ್ ಮತ್ತು ರಶೀದ್ ಸೈಫಿ ಸೇರಿದ್ದರು. ಫೆಬ್ರವರಿ 2020ರಲ್ಲಿ ದಿಲ್ಲಿಯ ಚಾಂದ್ ಬಾಘ್ ಪ್ರದೇಶದಲ್ಲಿ ಅಂಗಡಿಯೊಂದರಲ್ಲಿ ದಾಂಧಲೆಗೈದ ಪ್ರಕರಣದಲ್ಲಿ ಅವರು ಆರೋಪ ಎದುರಿಸುತ್ತಿದ್ದರು. ದಿಲ್ಲಿ ಹಿಂಸಾಚಾರ ಕುರಿತ 750 ಪ್ರಕರಣಗಳಲ್ಲಿ ನ್ಯಾಯಾಲಯದ ಮುಂದೆ 150 ಪ್ರಕರಣಗಳಿವೆ ಹಾಗೂ ಇಲ್ಲಿಯ ತನಕ 35 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ವಿಚಾರಣೆ ಆರಂಭಗೊಂಡಿಲ್ಲ ಎಂಬ ಒಂದೇ ಕಾರಣಕ್ಕೆ ಹಲವಾರು ಆರೋಪಿಗಳು ಕಳೆದ ಒಂದೂವರೆ ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆಂಬುದನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
2021/10/23 12:09:36
https://m-kannada.webdunia.com/article/news-in-kannada/the-court-said-it-would-create-distress-for-democratic-guards-121090300039_1.html
mC4
ಸಿದ್ಧಾಂತಗಳು ಮರಿಚೀಕೆಯಾದಾಗ…: ಡಾ. ಮಲ್ಲಿನಾಥ ಎಸ್. ತಳವಾರ - ಪಂಜು 'ಅಕ್ಷರಗಳಿಂದ ಏನೂ ಆಗುವುದಿಲ್ಲ' ಎಂಬ ಸಿನಿಕತನದ ಜೊತೆಗೆ 'ಅಕ್ಷರಗಳಿಂದ ಏನೆಲ್ಲಾ ಆಗಬಹುದು' ಎಂಬ ಸಕರಾತ್ಮಕ ಚಿಂತನೆಯು ವಾಗ್ದೇವಿಯ ಮಡಿಲಲ್ಲಿ ಹಚ್ಚ ಹಸಿರಾಗಿದೆ. ಇದು ನಿತ್ಯ ಹರಿದ್ವರ್ಣವಾಗಬೇಕಾದರೆ ಸಾಹಿತ್ಯವು ಮನುಷ್ಯನ ಅಂತರಂಗಕ್ಕೆ, ಅವನ ಅಂತರ್ಲೋಕಕ್ಕೆ ಸಂಬಂಧಪಟ್ಪಿರಬೇಕಾಗುತ್ತದೆ. ಇದು ಕೇವಲ ಉದರ ನಿಮಿತ್ತವಾಗಿ ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ಈ ಕಾರಣಕ್ಕಾಗಿಯೇ 'ಸಾಹಿತ್ಯ ಅನಂತಕಾಲಕ್ಕೆ ಸಂಬಂಧಪಟ್ಟಿದ್ದು, ತತ್ಕಾಲಕಲ್ಲ' ಎನ್ನಲಾಗುತ್ತದೆ. ಇದಕ್ಕೆ ಬೇಕಾಗಿರುವುದು ಮನುಷ್ಯತ್ವ. ಮನುಷ್ಯತ್ವವೇ ಈ ಜಗತ್ತಿನ ಅತ್ಯುತ್ತಮವಾದ ತಾತ್ವಿಕ ತಿರುಳು. ಇಲ್ಲಿ ತತ್ ಕ್ಷಣ ಫಲದ ಪ್ರಲೋಭನೆ ಸರಿಯಲ್ಲ. ಬರಹ ಮತ್ತು ಸಹೃದಯಿ ಮೀನು ಮತ್ತು ನೀರಿನಂತೆ ಇರಬೇಕು. ಇದು ಸಾಧ್ಯವಾಗಬೇಕಾದರೆ ಪಾಶ್ಚಾತ್ಯ ಕಾವ್ಯ ಮೀಮಾಂಸಕರಾದ ಎಡ್ವರ್ಡ್ ಬುಲ್ಲೊರವರ 'ಮಾನಸಿಕ ದೂರ' ಎಂಬ ಸಿದ್ಧಾಂತವನ್ನು ಕವಿ ಮತ್ತು ಸಹೃದಯ ಓದುಗರಿರ್ವರೂ ಅನುಸರಿಸಬೇಕಾಗುತ್ತದೆ. ನಾವು ಇಂದು ಉಸಿರಾಡುತ್ತಿರುವ ಕಾಲ ಸಂಕ್ರಮಣ ಕಾಲ. ಹಳೆಯ ಕಟ್ಟುಗಳೆಲ್ಲ ಕಳಚಿ ಬೀಳುತ್ತ, ಹೊಸ ವಿಲಕ್ಷಣ ಕಟ್ಟುಗಳು ದಿನಕ್ಕೊಂದರಂತೆ ಉದಯಿಸುತ್ತಿರುವ ಕಾಲ. ದುರಾಸೆ, ಭ್ರಷ್ಟಾಚಾರ, ಅಂತರಂಗ ಮೌಲ್ಯಗಳ ನಿರಸನ.. ಇವುಗಳನ್ನು ನಾವು ಅನುದಿನವೂ ಅನುಭವಿಸುತಿದ್ದೇವೆ! 'ಕೈ ಕೆಸರಾಗದೆ ಬಾಯಿ ಮೊಸರಾಗಬೇಕು' ಎನ್ನುವ ತತ್ ಕ್ಷಣ ಫಲಾಪೇಕ್ಷೆಯನ್ನು ರಾಜಕೀಯದಿಂದ ಕಲಿಯುತ್ತ ಬಂದಿದ್ದೇವೆ. ಕಾರಣ, ರಾಜಕೀಯಕ್ಕಿರುವ ಸಾರ್ವಭೌಮತ್ವ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಾಹಿತಿಗಳ ಮೇಲೆ ಅನುಪಮವಾದ ಜವಾಬ್ದಾರಿಯಿದೆ. ಸಾಮಾನ್ಯ ಜನರೂ ಸಹ ಸಾಹಿತಿಗಳಿಂದ ಮಾರ್ಗದರ್ಶನ ಬಯಸುತಿರುತ್ತಾರೆ. ಪರಂಪರಾಗತವಾಗಿ ಬಂದಿರುವ ಗುರುಭಾವನೆ ಇನ್ನೂ ಜೀವಂತವಿದೆ. ಈ ಹಿನ್ನೆಲೆಯಲ್ಲಿ ಕು. ಸ. ಮಧುಸೂದನ ರಂಗೇನಹಳ್ಳಿಯವರ " ಸಿದ್ಧಾಂತಗಳ ಹೇಗೆ ಕೊಲ್ಲುವೆ…?" ಎಂಬ ಕವನ ಸಂಕಲನ ಮುನ್ನೆಲೆಗೆ ಬರುತ್ತದೆ. ಪರಿಚಯದ ಬೆಸುಗೆಯನ್ನು ಅಕ್ಷರ ಲೋಕವು ತನ್ನ ಪದಗಳ ಲಾಲಿತ್ಯದಲ್ಲಿ ತುಂಬಾ ಪ್ರೀತಿಯಿಂದ ಹಿಡಿದಿಟ್ಟುಕೊಂಡು ಬಂದಿದೆ. ಇದಕ್ಕೊಂದು ಉತ್ತಮ ನಿದರ್ಶನವೆಂದರೆ ಸಂಗಾತಿ ವೆಬ್ ಪತ್ರಿಕೆಯ ಸಂಪಾದಕರಾದ ಮಧುಸೂದನ ಅವರ ಈ ಹೊತ್ತಿಗೆ. ಈ ಕಾವ್ಯದೊಡಲು ನನಗೆ ತಲುಪಿದ್ದು ಸ್ನೇಹದ ಅಂಚೆಯಲ್ಲಿ…!! ಈ ಕವನಸಂಕಲನವು ಐವತ್ತು ಬೌದ್ಧಿಕ ಕ್ಷಿತಿಜ ವಿಸ್ತರಿಸುವ ಕವಿತೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ಬುದ್ಧಿಯ ಪ್ರಾಧಾನ್ಯತೆ, ವ್ಯಂಗ್ಯ, ತೀಕ್ಷ್ಣ ಸಂವೇದನೆ, ಹುಡುಕಾಟ, ಭ್ರಮನಿರಸನ, ಸಾಮಾಜಿಕ ವ್ಯವಸ್ಥೆ, ರಾಜಕೀಯ ಜಿಜ್ಞಾಸೆ, ಮೌಲ್ಯಗಳ ಕುಸಿತ, ಸಿದ್ಧಾಂತಗಳ ಪಲ್ಲಟ, ಅಶಾಂತಿ, ಅರಾಜಕತೆ, ಸ್ತ್ರೀ ಸಂವೇದನೆ…. ಕವಿಯ ಎಡಬಿಡಂಗಿತನ ಎಲ್ಲವೂ ಅನಾವರಣಗೊಂಡಿವೆ. ಕಲೆ… ಮೂರ್ತ, ಅಮೂರ್ತದ ತೊಳಲಾಟದಲ್ಲಿ ಬಡವಾಗುತಿದೆ. ಹೊಟ್ಟೆ ತುಂಬಿದವರಿಗೆ ಅದು 'ಕಲೆಗಾಗಿ ಕಲೆ'ಯಾದರೆ, ಹಸಿದವರಿಗೆ ಅದು 'ಸಮಾಜದ ಬದಲಾವಣೆಗಾಗಿ ಕಲೆ'. ಬುದ್ಧಿವಂತನಾದ ಮಾನವ ಕಲೆಯನ್ನು ತನಗೆ ಹೇಗೆ ಬೇಕೋ ಹಾಗೆ ಅರ್ಥೈಸಿಕೊಳ್ಳುವ, ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾನೆ. ಕವಿಗಳಿಗೆ ಕಾವ್ಯ, ಸಮಾಜ ಮತ್ತು ಓದುಗ ತುಂಬಾ ಕಾಡಿದಂತಿದೆ. ಇದನ್ನು ಹಲವು ಕವಿತೆಗಳಲ್ಲಿ ಚರ್ಚಿಸಿದ್ದಾರೆ. "ಕವಿತೆಯೊಂದು ಕಟ್ಟುವ ನೆಪದಲಿ ಶಬ್ಧಗಳ ಮಾರಣಹೋಮ ಕವಿಯ ಸಮಾಧಿಯ ಮೇಲೆ ಅಪರಿಚಿತ ಓದುಗನ ಹೂಗುಚ್ಛ" ಈ ಮೇಲಿನ ಸಾಲುಗಳು ಕವಿ, ಓದುಗರ ಕುರಿತು ಚಿಂತನೆಗೆ ಹಚ್ಚುತ್ತವೆ. ಪ್ರತಿ ಶಬ್ಧಕ್ಕೂ ತನ್ನದೇ ಆದ ವಿಶಿಷ್ಟ ಅರ್ಥವಿರುತ್ತದೆ. ಆದರೆ ಅದನ್ನು ಅರಿಯಲೂ ಪ್ರಯತ್ನಿಸದೆ ಕವಿಯಾಗಬೇಕೆಂಬ ಮಹದಾಸೆಯಲ್ಲಿ ಶಬ್ಧಗಳ ಸಮಾಧಿ ಮೇಲೆ ಹೂವನ್ನು ನೆಡಲು ಮುಂದಾಗುತ್ತಿರುವುದನ್ನು ಇಲ್ಲಿ ಗುರುತಿಸಲಾಗಿದೆ. ಕವಿಗೆ ಸಾಮಾಜಿಕ ಕಳಕಳಿ, ಬದ್ಧತೆ, ಸೂಕ್ಷ್ಮ ಸಂವೇದನೆ, ಅಧ್ಯಯನ… ಎಲ್ಲವೂ ಇರಬೇಕು ಎಂಬುದೇ ಈ ಸಾಲುಗಳ ಧ್ವನಿಯಾಗಿದೆ. ಸಮಾಜದ ಕೂಸಾದ ಕವಿಗೆ ಸಮಾಜ ಇನ್ನಿಲ್ಲದಂತೆ ಕಾಡಿದೆ. ಇಲ್ಲಿಯ ಹೆಚ್ಚಿನ ಕವನಗಳು ಸಮಾಜದ ಓರೆ ಕೊರೆಗಳನ್ನು ಬಯಲಿಗೆಳೆಯುತ್ತವೆ. ಇವು ಕವಿ ಮಧುಸೂದನ ರವರ ಸೂಕ್ಷ್ಮ ಸಂವೇದನೆಗೆ ಸಾಕ್ಷಿಯಾಗಿವೆ. ಮೌಲ್ಯಗಳು ಬಿಕರಿಯಾಗುತ್ತ ಇಂದು ಮೂಲೆಗುಂಪಾಗುತ್ತ ಸಾಗಿವೆ. ಇದರತ್ತ ಕವಿ ಸಾತ್ವಿಕವಾದ ಕೋಪವನ್ನು ವ್ಯಕ್ತಪಡಿಸಿದ್ದಾರೆ. "ದ್ರೋಹ ಊರುಗೋಲಾಗಿ ವಂಚನೆ ದಾರಿದೀಪವಾಗಿ ಕಳ್ಳಕಾಕರೆಲ್ಲ ಕೋಟೆಗಳ ಕಟ್ಟಿ ಮೆರೆಯಲು ಸತ್ಯವಂತರು ಸಾಯದೆಲೆ ಸ್ಮಶಾನ ಸೇರಿರಲು…." ಈ ಚರಣಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ಮುಖವಾಡವನ್ನೇ ಕಳಚಿಟ್ಟಿವೆ. ಸಂಸ್ಕಾರದ ಕೊರತೆ, ಅಂಕಗಳಿಗಾಗಿ ಓದುವ ಗೀಳು, ಸ್ವಾರ್ಥದ ಪರಮಾವಧಿ, ಸಮಯಸಾಧಕತೆಯಲ್ಲಿ ಅರಳುವ ಸಂಬಂಧಗಳು…. ಇವೆಲ್ಲವು ಮೌಲ್ಯಗಳ ಸ್ಥಾನಪಲ್ಲಟಕ್ಕಾಗಿ ತುದಿಗಾಲಲ್ಲಿ ನಿಂತಿವೆ. " ಒಳ್ಳೆಯವರಿಗೆ ಇದು ಕಾಲವಲ್ಲ" ಎನ್ನುವ ಸೂಕ್ತಿಯು ಇಡೀ ಮನುಕುಲದ ಅಸಹಾಯಕತೆಯನ್ನೇ ಅಣಕಿಸುವಂತಿದೆ! 'ಕಷ್ಟಕಾಲದಲ್ಲೊಂದು ಗಪದ್ಯ' ಕವನವು ಮೌಲ್ಯಗಳ ಕಣ್ಣಾಮುಚ್ಚಾಲೆಗೆ ಹಿಡಿದ ಕೈಗನ್ನಡಿಯಾಗಿದೆ. ನಮ್ಮ ಪುರಾಣದ ಆದರ್ಶ ವ್ಯಕ್ತಿಗಳು ನಡೆದು ಬಂದ ದಾರಿಯು ಇಂದು ಕಳೆಗುಂದುತಿದೆ. ಸತ್ಯ ಹರಿಶ್ಚಂದ್ರನ ನಾಡಿನಲ್ಲಿಂದು ಹರಿಶ್ಚಂದ್ರನ ಸವತಿಯ ಮಕ್ಕಳದೆ ಕಾರುಬಾರು ನಡೆದಿದೆ! "ಸತ್ಯ ಹೇಳಿದವರು ಅಮರರಾಗುತ್ತಾರೆಂಬ ಅಮರಕಥಾಕೋಶದ ಕಥೆಗಳಿಗೀಗ ಅಂತ ಮಾನ್ಯತೆಯೇನಿಲ್ಲ ಸುಳ್ಳು ಹೇಳುವವರ ರಾಜ್ಯದೊಳಗೆ ಬಟ್ಟೆ ಹಾಕಿಕೊಂಡು ಬಡಿಸಿಕೊಳ್ಳುವುದು ಅಚ್ಚರಿಯ ವಿಷಯವೇನಲ್ಲ…." ಎನ್ನುವ ಪಂಕ್ತಿಗಳು ನಮ್ಮ ಇತಿಹಾಸ ಮತ್ತು ವಾಸ್ತವ ಲೋಕವನ್ನು ಮುಖಾಮುಖಿಯಾಗಿಸುತ್ತವೆ. ದುರ್ಬಲರಿಗೆ ಶಕ್ತಿ ತುಂಬುವ ಸೋಗಲಾಡಿತನದಲ್ಲಿ ತಾವೇ ಬಲಿಷ್ಠರಾಗಿ ಅನ್ಯಾಯ ಮಾಡುತ್ತಿರುವ ಸಮಾಜ ಸುಧಾರಕರ ದಂಡು ತೀವ್ರವಾಗಿ ಬೆಳೆಯುತ್ತಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದರೂ ತಪ್ಪು ಅಂತ ಹೇಳಿ ನಿಷ್ಠೂರವಾಗಲು ಬಯಸುತ್ತಿಲ್ಲ. ರಕ್ಷಣಾತ್ಮಕ ಆಟಕ್ಕೆ ಮನಸೋತು ಸ್ವಾರ್ಥದ ಬಿಲದಲ್ಲಿ ಸಂಸಾರ ನಡೆಸುವವರ ಸಂಖ್ಯೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗುತ್ತಿರುವುದು ಆತಂಕಕಾರಿ ಹಾಗೂ ಕಳವಳಕಾರಿ. ಮನಃಸಾಕ್ಷಿ ಎಂಬುದು ಇಂದು ಕೇವಲ ಒಂದು ಶಬ್ದವಾಗಿ, ಶಬ್ದಕೋಶದಲ್ಲಿ ಆಶ್ರಯ ಪಡೆದುಕೊಂಡಿದೆ!! ಬಂಡವಾಳ ಶಾಹಿ ವ್ಯವಸ್ಥೆ ಹಾಗೂ ರಾಜಕೀಯ ಪ್ರಭುತ್ವ ಮನುಷ್ಯನ ಮಾತುಗಳನ್ನು ಅಡಗಿಸಬಹುದು. ಆದರೆ ಅವನು ಮೌನವನ್ನಲ್ಲ…! ವ್ಯಕ್ತಿಯನ್ನು ಕೊಲ್ಲಬಹುದೆ ಹೊರತು ಆ ವ್ಯಕ್ತಿಯ ವ್ಯಕ್ತಿತ್ವವನ್ನಲ್ಲ. ಈ ಹಿನ್ನೆಲೆಯಲ್ಲಿ " ಸಿದ್ಧಾಂತಗಳ ಹೇಗೆ ಕೊಲ್ಲುವೆ" ಶೀರ್ಷಿಕೆಯ ಕವನ ಓದುಗರನ್ನು ಬಡಿದೆಬ್ಬಿಸುತ್ತದೆ. "ಕುಡಿಯುವ ನೀರು ತುಟ್ಟಿಯಾಗಿದೆ ತೀರಾ ಬಾಯಾರಿಕೆಯಾದರೆ ಬೇಸರವೇಕೆ ಬಡವರ ರಕ್ತವಿದೆ" ಎನ್ನುವ ಸಾಲುಗಳು ರಾಜಪ್ರಭುತ್ವದ ಸುಂದರ ವಿಡಂಬನೆಗೆ ಮೂಕ ಸಾಕ್ಷಿಯಾಗಿವೆ. ಅಂತೆಯೇ ಇಲ್ಲಿ ಕವಿ "ಮನುಷ್ಯರ ಇಲ್ಲವಾಗಿಸಲು ಬಂದೂಕು ಸಾಕು ಸಿದ್ಧಾಂತಗಳ ಹೇಗೆ ಕೊಲ್ಲುವೆ.?" ಎಂದು ಪ್ರಶ್ನಿಸಿದ್ದಾರೆ. ಇಂತಹ ಹಲವಾರು ಘಟನೆಗಳನ್ನು ನಮ್ಮ ಪರಂಪರೆಯು ಸಾವಧಾನವಾಗಿ ಮುನ್ನಡೆಸಿಕೊಂಡು ಬರುತ್ತಿದೆ..!! ಇದಕ್ಕೊಂದು ಉತ್ತಮ ಉದಾಹರಣೆ " ಸಾಕಾಗುವುದಿಲ್ಲ ಮೂರು ಗುಂಡುಗಳು" ಎನ್ನುವ ಕವನ. ಇದು ಗೌರಿ ಲಂಕೇಶ್ ಅವರ ಕೊಲೆಯನ್ನು ಪ್ರಶ್ನಿಸುವಂತೆ ಮೂಡಿಬಂದಿದೆ. ಅಂತೆಯೇ ಕಾವ್ಯವು ಈ ರೀತಿಯಲ್ಲಿ ಕೊನೆಗೊಂಡಿದೆ. "ಲಕ್ಷೋಪಲಕ್ಷ ಕೊರಳುಗಳು ದನಿಯೆತ್ತಿ ಹಾಡಿದವು ನಾನೂ ಗೌರಿ" ಈ ಉಸಿರುಗಟ್ಟಿಸುವ ಜಾಲಕ್ಕೆ ಜಾಗತೀಕರಣ, ಹಣದ ಅಮಲು ಸಾಥ್ ನೀಡುತ್ತಿರುವುದು ದುರಂತವಾದರೂ ಸತ್ಯ. ಜೀವಸಂಕುಲದಲ್ಲಿ ಮನುಷ್ಯ ಶ್ರೇಷ್ಠ ಪ್ರಾಣಿಯಾದರೂ ಅವನ ಉಸಿರಿಗೆ ಬೆಲೆಯೇ ಇಲ್ಲದಂತಾಗಿದೆ. ಹೆಣಗಳ ರಾಶಿ ನಮ್ಮ ಫಲವತ್ತಾದ ಭೂಮಿಯಲ್ಲಿ ಅನುದಿನವೂ ನಡೆಯುತ್ತಲೆ ಇದೆ. "ಸತ್ತು ಹೋದವರ ಹೆಣ ಹೊರುವವರದೇ ಕಾರುಬಾರು…" ರಾಜಕೀಯ ಎಂದ ಕೂಡಲೇ ವಂಚನೆ, ಅನ್ಯಾಯ, ಅಸತ್ಯ, ಅಪಪ್ರಚಾರ, ಸ್ವಜನ-ಸ್ವಜಾತಿ ಪಕ್ಷಪಾತ ಇವುಗಳ ಬೀಭತ್ಸ ಚಿತ್ರಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಡಾ. ಜಾನ್ಸನ್ ರವರ ಸೂಕ್ತಿ "ರಾಜಕೀಯ ಎಂದರೆ ಫಟಿಂಗನ ಕೊನೆಯ ಆಸರೆ" ಎಂಬುದು ನಮ್ಮಲ್ಲಿ ಬಹುತೇಕರಿಗೆ ಅಕ್ಷರಶಃ ನಿಜ ಅನಿಸುವುದುಂಟು. ಪ್ರಜಾಪ್ರಭುತ್ವದ ಮೂಲ ಬಲ ಜನರ ಮತ. ಪರಮಾಧಿಕಾರ ಜನರಿಗೆ ಸೇರಿದ್ದು. ನಾವು ರಾಜಕೀಯದಲ್ಲಿ ನಿರಾಸಕ್ತರಾದರೆ ನಮ್ಮ ಕರ್ತವ್ಯಕ್ಕೆ ನಾವು ವಿಮುಖರಾದಂತೆಯೆ ಸರಿ. ಈ ಹಿನ್ನೆಲೆಯಲ್ಲಿ ರಾಜಕೀಯ ಸ್ಥಿತಿಗತಿಗಳ ಕುರಿತು ಪ್ರತಿಯೊಬ್ಬ ನಾಗರಿಕನೂ ಚಿಂತನ-ಮಂಥನ ಮಾಡುವುದು ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಈ ನೆಲೆಯಲ್ಲಿ ಹಲವು ಕವನಗಳು ಓದುಗರನ್ನು ಜಿಜ್ಞಾಸೆಗೆ ನೂಕುತ್ತವೆ. ಓಲೈಕೆ…. ಇಂದು ಎಲ್ಲ ರಂಗಗಳಲ್ಲಿ ವಿಪರೀತ ಎನಿಸುವಷ್ಟು ಆಕ್ರಮಿಸಿಕೊಂಡಿದೆ. ಅದರಲ್ಲೂ ರಾಜಕೀಯದಲ್ಲಂತೂ ತುಸು ಹೆಚ್ಚೇ ಅನಬಹುದು. ಇದನ್ನು ಕವಿ ಹೃದಯ ಈ ರೀತಿಯಲ್ಲಿ ದಾಖಲಿಸಿದೆ. 'ದೇವಪ್ರಸಾದವೇ ಸೈ ಇವರುಗಳಿಗೆ ರಾಜಕುವರನ ಹೇಲು!' ಈ ನಡವಳಿಕೆ ಎಷ್ಟರಮಟ್ಟಿಗೆ ಮನುಷ್ಯನ ವ್ಯಕ್ತಿತ್ವವನ್ನು ಆಪೋಶನ ತೆಗೆದುಕೊಂಡಿದೆ ಎಂದರೆ ಮಾನಸಿಕ ಗುಲಾಮಗಿರಿ ಸಾಮಾನ್ಯವಾಗಿ ಹೋಗುವಷ್ಟರ ಮಟ್ಟಿಗೆ! "ದಣಿಗೆ ಪಥ್ಯವಾಗುವುದಿಲ್ಲ ಪ್ರಜೆಗಳಿಗೆ ಸುಳ್ಳು ಅರ್ಥವಾಗುವುದಿಲ್ಲ" ಇಲ್ಲಿ ಕವಿಗಳು ತುಂಬಾ ಸರಳವಾಗಿ ಓದುಗರ ಮನವನ್ನು ತಟ್ಟಿದ್ದಾರೆ. ಆಳರಸರ ಆಸೆಗೆ ಮಿತಿಯೇ ಇಲ್ಲ. ಅವರಿಗೆ ಎಲ್ಲವೂ ಬೇಕು. ಆದರೆ ಅವರಿಗೆ ಹಕ್ಕಿಯ ಹಾಡು, ನದಿಯ ಜಾಡು ಮಾತ್ರ ಸಿಕ್ಕದಿರಲಿ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪ್ರಜಾಪ್ರಭುತ್ವವು ಸಕಾರಾತ್ಮಕತೆಗಿಂತಲೂ ನಕಾರಾತ್ಮಕವಾಗಿಯೆ ಚರ್ಚೆಯಲ್ಲಿದೆ. ಇದನ್ನು " ಬಹುಮತದ ಅಂಧತ್ವ" ಕವನದಲ್ಲಿ ಕಾಣಬಹುದು. "ಬಹುಮತವುಳ್ಳವರು ಹೇಳಿದ್ದನ್ನೆಲ್ಲ ಸರಿಯೆಂದು ಒಪ್ಪಿಕೊಂಡು ಕಾಲ ನೂಕುವ ಇವತ್ತಿನ ಸಮಾಜದಲ್ಲಿ ಅದು ತಪ್ಪು…" ಇದರಿಂದಾಗಿಯೇ 'ಸಂಖ್ಯಾಬಲ ಉಳ್ಳವರು ಹೇಳಿದ್ದೇ ಸರಿ' ಎಂಬ ಅಲಿಖಿತ ನಿಯಮ ಇಂದು ನಮ್ಮ ಮಧ್ಯೆ ಜಾರಿಯಲ್ಲಿದೆ. "ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠ ಮಾದರಿಯ ವ್ಯವಸ್ಥೆ ಎಂದೇನಿಲ್ಲ. ಅಲ್ಲಿಯೂ ಇತಿಮಿತಿಗಳಿವೆ. ಆದರೆ ಇನ್ನುಳಿದವು ಅದಕ್ಕಿಂತಲೂ ಕೆಟ್ಟ ಮಾದರಿಯವು!'' ಎಂಬ ಚರ್ಚಿಲ್‍ರವರ ಮಾತಿನ ಮರ್ಮವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ. ದೇಶಭಕ್ತಿ…. ಪ್ರತಿಯೊಬ್ಬ ಭಾರತೀಯನ ಆಂತರ್ಯದಲ್ಲಿ ಇರಬೇಕಾದದ್ದು. ಆದರೆ ದುರಂತವೆಂದರೆ ಇಂದು ಇದು ರಾಜಕೀಯ ಪಕ್ಷಗಳ ದಾಳವಾಗುತ್ತಿರುವುದು! ಇದರ ಕುರಿತೂ ಶ್ರೀಯುತರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೊಂದು ನಿದರ್ಶನವೆಂದರೆ " ದ್ರೋಹ ಮತ್ತು ಭಕ್ತಿ" ಎಂಬ ಕವನ. "ದೇಶವೆನ್ನುವುದು ರಕ್ತಮಾಂಸಗಳಿಂದ ಮಾಡಿದ ಮನುಷ್ಯರಿಂದಾಗಿದ್ದೆಂದು ಭಾವಿಸಿ ಮತ್ತವರ ಸುಖದುಃಖ ನೋವು ನಲಿವುಗಳು ಎಲ್ಲರದೂ…." ಅಂತೆಯೇ ದೇಶಭಕ್ತಿ ಎನ್ನುವುದು ಹೇಳಿ-ಕೇಳಿ ಬರುವಂತದ್ದಲ್ಲ, ಅದು ಸಂಸ್ಕಾರದಿಂದ ಮಾತ್ರ ಬರಲು ಸಾಧ್ಯ. ಮನುಷ್ಯನ ಅಲ್ಪತನದಿಂದಲೆ ಮನುಕುಲವು ಇಂದು ವಿನಾಶದತ್ತ ಸಾಗುತ್ತಿದೆ. ಬೌದ್ಧಿಕತೆಯೇ ಇಲ್ಲಿ ಗರಗಸವಾಗುತಿದೆ. ಅಂತೆಯೇ ಕವಿಗಳು ಇಲ್ಲಿ "ನಮ್ಮ ಚಿತೆಗೆ ನಾವೇ ಸಿದ್ಧತೆ ಮಾಡಿಕೊಳ್ಳುವ ಪರಿಪಾಠವಿರುವುದು ಮನುಷ್ಯರಲ್ಲಿ ಮಾತ್ರವೆನಿಸುತ್ತದೆ!" ಎಂದಿದ್ದಾರೆ. ಮನುಷ್ಯ ವೈಜ್ಞಾನಿಕವಾಗಿ ತೆರೆದುಕೊಳ್ಳುತ್ತ ಹೋದಂತೆ ಆತ್ಮಾವಲೋಕನ ಮಾಡಿಕೊಳ್ಳುವುದನ್ನೇ ಮರೆತಿದ್ದಾನೆ. "ಹಸಿವಿನ ಬಗ್ಗೆ ಮಾತಾಡುತ್ತಲೇ ಭರ್ಜರಿಯಾಗಿ ಉಣ್ಣುತ್ತಿರುತ್ತಾರೆ ಸಮಾನತೆಯ ಬಗ್ಗೆ ಮಾತಾಡುತ್ತಲೇ ದುರ್ಬಲರ ತುಳಿಯುತ್ತಿರುತ್ತಾರೆ.." ಬದ್ಧತೆ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಮನುಷ್ಯ ಬಹು ಬೇಗನೆ ಪರಿಸ್ಥಿತಿಯ ಕೈಗೊಂಬೆಯಾಗುತ್ತಾನೆ. ಇದನ್ನು " ವಿಪರ್ಯಾಸ" ಕವಿತೆಯಲ್ಲಿ ಗುರುತಿಸಬಹುದು. "ನ್ಯಾಯ ಕೇಳುವ ರಭಸದಲ್ಲಿ ಅನ್ಯಾಯದ ದಾಳವಾಗಿ ಬಿಡುತ್ತೇವೆ" ಇಂಥಹ ಹತ್ತು ಹಲವಾರು ಕವನಗಳೊಂದಿಗೆ ಸ್ತ್ರೀ ಸಂವೇದನೆ, ಅಲೌಕಿಕ ಜೀವನ, ಧಾರ್ಮಿಕ ಬೀಭತ್ಸ, ಕೋವಿಡ್ ೧೯,.. ಕುರಿತಂತೆಯೂ ಕವಿತೆಗಳಿದ್ದು, ಓದುಗರ ವೈಚಾರಿಕ ಮಟ್ಟವನ್ನು ಎತ್ತರಿಸುವಂತಿವೆ. " ಸಿದ್ಧಾಂತಗಳ ಹೇಗೆ ಕೊಲ್ಲುವೆ..?" ಕವನಸಂಕಲನವನ್ನು ಅಮೂಲಾಗ್ರವಾಗಿ ಗಮನಿಸಿದಾಗ ಇಲ್ಲಿಯ ಕವನಗಳ ಮೇಲೆ 'ನವ್ಯ' ಕಾವ್ಯದ ದಟ್ಟ ಪ್ರಭಾವ ಇರುವುದು ಕಂಡು ಬರುತ್ತದೆ. ಮುಕ್ತ ಛಂದೋಬದ್ಧದಲ್ಲಿ ಇಲ್ಲಿಯ ಕವನಗಳಿದ್ದು, ಪದ್ಯದ ದಾಟಿಗಿಂತಲೂ ಗದ್ಯದ ಛಾಯೆಯನ್ನೇ ಹೆಚ್ಚು ಹೊಂದಿವೆ. ಹಲವು ಕವನಗಳು ಕಥನ ಕಾವ್ಯದಂತೆ ದೀರ್ಘವಾಗಿವೆ. ಕವಿಗೆ, ಕಾವ್ಯಕ್ಕೆ ಮೂಲ ಸಾಧನವೇ ಭಾಷೆ. ಇಲ್ಲಿ ಕವಿ ಮಧುಸೂದನ ರವರು ಭಾಷೆಯನ್ನು ಸಶಕ್ತವಾಗಿ ಬಳಸಿಕೊಂಡಿದ್ದಾರೆ. 'ಮುದಿ ಬಿಸಿಲು', 'ಸೊರಗಿದ ಹಗಲು',… ದಂತಹ ಪದಗಳು ವಿಶೇಷವೆನಿಸುತ್ತವೆ. ಇದರೊಂದಿಗೆ ಇಲ್ಲಿಯ ಹಲವು ಚರಣಗಳು 'ಹೇಳಿಕೆ' ಗಳಂತೆ ಕಂಡು ಬರುತ್ತವೆ. 'ಸತ್ಯ ಬರೆದ ಕವಿಯ ಕೊಲ್ಲುವ ಇರಾದೆಯಲಿ' 'ಸತ್ತವರೆಲ್ಲ ಸತ್ಯ ಹೇಳಿದವರೆ ಎನ್ನುವುದಕ್ಕೂ ಪುರಾವೆಯಿಲ್ಲ' 'ನನ್ನದೇ ಜನ ಬೆನ್ನಿಗೆ ಚೂರಿ ಇರಿದೂ ನಗುತ್ತಾರೆ' 'ನೂರಾಎಂಟರ ಗಾಡಿಗೊ ಇನ್ನಿರದ ಬೇಡಿಕೆ' ಮನಸ್ಸಿಗೆ ಬಾಳಿನ ಅನುಭವಗಳನ್ನು ಆಯ್ದು ಇಟ್ಟುಕೊಳ್ಳುವ ಶಕ್ತಿ, ಸಾಮರ್ಥ್ಯವಿದೆ. ತನಗೆ ಬೇಕಾದುದನ್ನು-ಅದು ಅಹಿತವಾಗಿರಲಿ- ಅಥವಾ ಅದು ಹಿತವಾಗಿರಲಿ ಉಳಿಸಿಕೊಂಡು ಉಳಿದುದನ್ನು ಮರೆತುಬಿಡುತ್ತದೆ. ಜೀವನದ ಮೇಲೆ ಮೇಲೆಯೆ ತೇಲಿ ಹೋಗುವ ಹಲವರಿಗೆ ಗಹನ ವಿಷಯಗಳು ಹಿಡಿಸುವುದಿಲ್ಲ. ಅಂತವರನ್ನೂ ಸಹ ಅಂತರ್ಮುಖಿಗಳನ್ನಾಗಿ ಮಾಡಿ, ಬಾಳಿನ ತಿರುಳನ್ನು ಅವರು ಸವಿಯುವಂತೆ ಈ ಕವನ ಸಂಕಲನ ಮಾಡಲಿಯೆಂದು ಆಶಿಸುತ್ತ, ನನ್ನ ಚಿಂತನ ಲಹರಿಗೆ ವಿರಾಮ ನೀಡುವೆನು.
2021/03/02 23:59:30
https://panjumagazine.com/?p=17797
mC4
ಜನವರಿ ಮೊದಲ ವಾರದಲ್ಲಿ ಸ್ವಚ್ಛ ಸರ್ವೇಕ್ಷಣೆ ಸ್ವಚ್ಛತಾ ಆಪ್ ಬಳಕೆ ಹೆಚ್ಚಿಸಿ- ಪಾಲಿಕೆ ಮೇಯರ್ ಕವಿತಾ ಸನಿಲ್ | V4News ಸ್ವಚ್ಚ ಸರ್ವೇಕ್ಷಣ 2018 ರಲ್ಲಿ ಮಂಗಳೂರು ನಗರ ಗರಿಷ್ಠ ಅಂಕ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ತಮ್ಮ ಮೊಬೈಲ್‌ಗಳಲ್ಲಿ ಸ್ವಚ್ಚತಾ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಮಂಗಳೂರು ಪಾಲಿಕೆ ಸಾರ್ವಜನಿರಿಗೆ ಮನವಿ ಮಾಡಿದೆ. ಮಂಗಳೂರಿನ ಪಾಲಿಕೆ ಸಭಾಂಗಣದಲ್ಲಿ ಸ್ವಚ್ಚ ಸರ್ವೇಕ್ಷಣೆ -2018 ರ ಭಿತ್ತಿಪತ್ರವನ್ನು ಮೇಯರ್ ಕವಿತಾ ಸನಿಲ್ ಬಿಡುಗಡೆಗೊಳಿಸಿದರು. ತದ ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ ಪಾಲಿಕೆ ಅಯುಕ್ತ ಮಹಮ್ಮದ್ ನಜೀರ್ ಮಾತನಾಡಿ, ತ್ಯಾಜ್ಯ ಸಂಗ್ರಹಣೆ, ನಗರದ ಸ್ವಚ್ಚತೆ , ಮನೆ ಮನೆ ಕಸ ಸಂಗ್ರಹಣೆ, ನಗರದಲ್ಲಿ ಸಮರ್ಪಕ ಶೌಚಾಲಯಗಳ ಲಭ್ಯತೆ , ನಗರದ ಸ್ವಚ್ಚತೆಯ ಕುರಿತು ನಾಗರಿಕರ ಕಳಕಳಿ ಸೇರಿದಂತೆ ನಾಗರಿಕರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ತ್ಯಾಜ್ಯ ಸಂಗ್ರಹಣೆ, ನೀರು ಪೂರೈಕೆ ಸೇರಿದಂತೆ ಯಾವುದೇ ಲೋಪವಾದಲ್ಲಿ ನಾಗರಿಕರು ಈ ಆಪ್ ಮೂಲಕ ದೂರು ನೀಡಬಹುದಾಗಿದೆ ಎಂದು ತಿಳಿಸಿದರು. ಶಾಸಕ ಜೆ.ಆರ್.ಲೋಬೋ ಮಾತನಾಡಿ, ಎಲ್ಲಾ 60 ವಾರ್ಡ್‌ಗಳಲ್ಲಿ ಜನವರಿ 16 ರಿಂದ ಕಸ ವಿಂಗಡನೆ ಆರಂಭವಾಗಲಿದ್ದು, ನಾಗರಿಕರು ಮನೆಯಿಂದಲೇ ಹಸಿ ಕಸ, ಒಣಕಸ ಬೇರ್ಪಡಬೇಕೆಂದರು.ಈ ವೇಳೆ ರಾಮಕೃಷ್ಣ ಮಿಷನ್‌ನ ಪ್ರತಿನಿಧಿ ರಾಮಕೃಷ್ಣ , ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಮೊದಲಾದವರು ಉಪಸ್ಥತರಿದ್ದರು. Previous : ರಾಷ್ಟ್ರೀಯ ಹೆದ್ದಾರಿ 66 ರ ದುರಸ್ತಿ ಕಾರ್ಯಕ್ಕೆ ಒತ್ತಾಯ ಡಿವೈ‌ಎಫ್‌ಐನಿಂದ ಅಣಕು ಶವಯಾತ್ರೆ ಬೈಕಂಪಾಡಿಯಿಂದ ಜೋಕಟ್ಟೆ ಜಂಕ್ಷನ್‌ವರೆಗೆ ಮೆರವಣಿಗೆ
2018/03/18 17:34:18
http://www.v4news.com/%E0%B2%95%E0%B2%B0%E0%B2%BE%E0%B2%B5%E0%B2%B3%E0%B2%BF/%E0%B2%9C%E0%B2%A8%E0%B2%B5%E0%B2%B0%E0%B2%BF-%E0%B2%AE%E0%B3%8A%E0%B2%A6%E0%B2%B2-%E0%B2%B5%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B8%E0%B3%8D%E0%B2%B5%E0%B2%9A/
mC4
5 ದಿನಗಳ ಬಳಿಕ ಚಂದ್ರ ಶೋಧಕ ನೌಕೆಯ ಕೆಲಸ ಪುನರಾರಂಭ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jan 11, 2019, 9:19 PM IST ಬೀಜಿಂಗ್, ಜ. 11: ಐದು ದಿನಗಳ ನಿದ್ದೆಯಿಂದ ಎದ್ದ ಚೀನಾದ ಚಂದ್ರ ಶೋಧಕ ನೌಕೆ 'ಯುಟು-2' ಗುರುವಾರ ಚಂದ್ರನ ಕತ್ತಲ ಭಾಗದಲ್ಲಿ ಮತ್ತೆ ಕೆಲಸದಲ್ಲಿ ತೊಡಗಿದೆ. ''ಮಧ್ಯಾಹ್ನದ ನಿದ್ದೆ ಮುಗಿದಿದೆ. ಅದು ಎಚ್ಚೆತ್ತು ಚಲನೆಯಲ್ಲಿ ತೊಡಗಿದೆ'' ಎಂದು ಸಾಮಾಜಿಕ ಜಾಲ ತಾಣ 'ವೈಬೊ'ದಲ್ಲಿರುವ 'ಯುಟು-2' ಪುಟದಲ್ಲಿ ಹೇಳಲಾಗಿದೆ. ಶೋಧ ನೌಕೆಯು ಶನಿವಾರ 200 ಡಿಗ್ರಿ ಸೆಲ್ಸಿಯಸ್‌ನತ್ತ ಸಾಗುತ್ತಿದ್ದ ಉಷ್ಣತೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ನಿಷ್ಕ್ರಿಯ ಸ್ಥಿತಿಗೆ ಜಾರಿತ್ತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ)ಯ 'ಚೀನಾ ಚಂದ್ರ ಶೋಧಕ ಕಾರ್ಯಕ್ರಮ' ಹೇಳಿತ್ತು. 140 ಕಿಲೋಗ್ರಾಂ ಭಾರದ ಯುಟು-2 ತನ್ನ ಚಟುವಟಿಕೆಗಳನ್ನು ಆರಂಭಿಸಿದ್ದು, ಶೋಧ ನೌಕೆಯ ಮಾತೃ ನೌಕೆಯ ಚಿತ್ರಗಳನ್ನು ತೆಗೆದಿದೆ. ಯುಟು-2 ಚಂದ್ರ ಶೋಧ ನೌಕೆಯನ್ನು ಹೊತ್ತ ಮಾತೃ ನೌಕೆ 'ಚಾಂಗ್'ಇ-4' ಜನವರಿ 3ರಂದು ಚಂದ್ರನ ಭೂಮಿಗೆ ಕಾಣದ ಮಗ್ಗುಲಲ್ಲಿ ಇಳಿದಿರುವುದನ್ನು ಸ್ಮರಿಸಬಹುದಾಗಿದೆ.
2019/06/25 08:12:25
http://www.varthabharati.in/article/antaraashtriya/172327
mC4
ಮೋದಿ ಮರು ನಾಮಕರಣ ಅಸ್ತ್ರ: ಊರುಗಳ ಹೆಸರು ಬದಲಾವಣೆ ಪ್ರಕ್ರಿಯೆ ಹೇಗಾಗುತ್ತೆ ಗೊತ್ತಾ? ಯಾವುದೇ ಊರು, ನಗರಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ. ಜತೆಗೆ, ಸೂಕ್ತ ಕಾರಣವನ್ನೂ ರಾಜ್ಯ ಸರಕಾರ ಮನವಿ ಜತೆಗೆ ನೀಡಬೇಕಿದೆ. ಅನಾಣ್ಯೀಕರಣ, ಜಿಎಸ್‌ಟಿ ಹೆಸರಿನಲ್ಲಿ ದುಬಾರಿ ತೆರಿಗೆಗಳು, ಇಂಧನ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಹೀಗೆ ಹಲವು ಜ್ವಲಂತ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿರುವ ಕೇಂದ್ರದ ಬಿಜೆಪಿ ಸರಕಾರ, 'ಮರು ನಾಮಕರಣ' ಎಂಬ ಅಸ್ತ್ರ ಪ್ರಯೋಗವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿದೆ. ವರದಿಗಳ ಪ್ರಕಾರ, ಇನ್ನೂ 48 ಊರುಗಳ ಮರು ನಾಮಕರಣಕ್ಕೆ ಅನುಮತಿ ಕೋರಿದ ಅರ್ಜಿಗಳ ವಿಚಾರದಲ್ಲಿ ಕೇಂದ್ರ ಗೃಹ ಇಲಾಖೆ ತೀರ್ಮಾನ ತೆಗೆದುಕೊಳ್ಳಲಿದೆ. ಇದರಲ್ಲಿ ಹಳ್ಳಿಗಳಿಂದ ಹಿಡಿದು ಜಿಲ್ಲೆಗಳು ಹಾಗೂ ನಗರಗಳು ಸೇರಿವೆ. ಮರು ನಾಮಕರಣ ಕೋರಿ ಬಂದಿರುವ ಅರ್ಜಿಗಳು ಬಂದ ರಾಜ್ಯಗಳ ಪೈಕಿ ಬಹುಪಾಲು ಬಿಜೆಪಿ ಆಳ್ವಿಕೆಯ ರಾಜ್ಯಗಳಾಗಿವೆ. ಇದರಲ್ಲಿ ಡಿಸೆಂಬರ್‌ 7ರಂದು ಮತದಾನ ನಡೆಯಲಿರುವ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಇಲ್ಲಿಂದ ಒಟ್ಟು 26 ಮರು ನಾಮಕರಣ ಕೋರಿದ ಅರ್ಜಿಗಳು ಬಂದಿವೆ. ಇದರಲ್ಲಿ ಮೂರಕ್ಕೆ ಇತ್ತೀಚೆಗಷ್ಟೆ ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿದೆ ಎಂದು 'ದಿ ಟೆಲಿಗ್ರಾಫ್' ವರದಿ ಮಾಡಿದೆ. ನಂತರದ ಸ್ಥಾನದಲ್ಲಿ ಹರಿಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಒರಿಸ್ಸಾ ರಾಜ್ಯಗಳಿವೆ. ಆಗಸ್ಟ್‌ ತಿಂಗಳಿನಲ್ಲಿ, ರಾಜಸ್ಥಾನನದ ಮಿಯಾಂಕ್ ಕ ಬಾರಾ ಎಂಬ ಊರಿನ ಹೆಸರಿನ್ನು ಮಹೇಶ್ ನಗರ ಅಂತಲೂ, ಇಸ್ಲಾಂ ಪುರವನ್ನು ಪಿಚನ್ವ ಖುರ್ದ್‌ ಅಂತಲೂ, ಸಲೇಮಬಾದ್‌ ಹೆಸರನ್ನು ಶ್ರಿ ನಿಂಬಾರ್ಕ್ ತೀರ್ಥ ಅಂತಲೂ ಬದಲಾಯಿಸಲು ಅನುಮತಿ ನೀಡಲಾಗಿತ್ತು. "ಮುಸ್ಲಿಂ ಹಿನ್ನೆಲೆಯ ಹೆಸರುಗಳನ್ನು ಹೊಂದಿರುವ ಕಾರಣಕ್ಕೆ ಈ ಊರುಗಳಿಗೆ ಹೆಣ್ಣು ಕೊಡುವವರು ಮುಂದೆ ಬರುತ್ತಿರಲಿಲ್ಲ. ಹೊರಗಿನಿಂದ ನೋಡುವವರಿಗೆ ಈ ಊರುಗಳಲ್ಲಿ ಮುಸ್ಲಿಮರೇ ತುಂಬಿದ್ದಾರೆ ಅನ್ನಿಸುತ್ತಿತ್ತು. ಹೀಗಾಗಿ ಅವುಗಳ ಮರುನಾಮಕರಣಕ್ಕೆ ಅನುಮತಿ ನೀಡಲಾಗಿದೆ,'' ಎಂದು ಗೃಹ ಇಲಾಖೆ ಅಧಿಕಾರಿಗಳು ರಾಜಸ್ಥಾನದ ಮೇಲಿನ ಮೂರು ಹೆಸರು ಬದಲಾವಣೆಗೆ ಸಮಜಾಯಿಷಿ ನೀಡಿದ್ದರು. ಉಳಿದ 23 ಹೆಸರುಗಳ ಬದಲಾವಣೆ ಕುರಿತು ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದೆ. ಯಾವುದೇ ಊರು, ನಗರಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ. ಜತೆಗೆ, ಸೂಕ್ತ ಕಾರಣವನ್ನೂ ರಾಜ್ಯ ಸರಕಾರ ಮನವಿ ಜತೆಗೆ ನೀಡಬೇಕಿದೆ. ರಾಜಸ್ಥಾನದ ಬಿಜೆಪಿ ಸರಕಾರ ಮದುವೆ ವಿಚಾರವನ್ನು ಮುಂದಿಟ್ಟು ಅನುಮತಿ ಕೋರಿದೆ. ಅನುಮತಿ ಕೋರಿ ಉಳಿದ ರಾಜ್ಯಗಳಿಂದ ಬಂದಿರುವ ಅರ್ಜಿಗಳಲ್ಲಿ ನಾನಾ ಕಾರಣಗಳನ್ನು ಮುಂದಿಡಲಾಗಿದೆ. ಉದಾಹರಣೆಗೆ, ಹರಿಯಾಣದ 'ಗಂದಾ' ಎಂಬ ಹಳ್ಳಿ ಹೆಸರನ್ನು ಬದಲಾವಣೆ ಮಾಡಲು ರಾಜ್ಯ ಸರಕಾರ ಕೋರಿದೆ. ಕಾರಣ, ಹಿಂದಿಯಲ್ಲಿ ಗಂದಾ ಎಂದರೆ ಕೊಳೆ ಎಂಬರ್ಥವನ್ನು ನೀಡುತ್ತದೆ. ಹೀಗಾಗಿ ಈ ಹೆಸರನ್ನು 'ಶುದ್ಧ' ಹೆಸರಿನೊಂದಿಗೆ ಮರು ನಾಮಕರಣ ಮಾಡಲು ಅಲ್ಲಿನ ಸರಕಾರ ಅರ್ಜಿ ಸಲ್ಲಿಸಿದೆ. ಒರಿಸ್ಸಾದ ಒಂದು ಹಳ್ಳಿಯ ಹೆಸರನ್ನು ಕರ್ತವ್ಯದ ವೇಳೆ ಸಾವನ್ನಪ್ಪಿದ ಊರಿನ ಸಿಆರ್‌ಪಿಎಫ್‌ ಯೋಧನ ಹೆಸರಿಗೆ ಬದಲಾಯಿಸಲು ಕೋರಿ ಅರ್ಜಿ ಸಲ್ಲಿಸಲಾಗಿದೆ. ಹೀಗೆ, ಮರು ನಾಮಕರಣಕ್ಕೆ ನಾನಾ ರೀತಿಯ ಕಾರಣಗಳನ್ನು ಮುಂದಿಡಲಾಗುತ್ತಿದೆ. ವರದಿಗಳ ಪ್ರಕಾರ, 2017ರ ಜನವರಿಯಿಂದ 2018ರ ಫೆಬ್ರವರಿ ನಡುವೆ ಒಟ್ಟು 27 ಮರುನಾಮಕರಣ ಕೋರಿದ ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಅರ್ಜಿಗಳು ಬಂದ ನಂತರ ಗೃಹ ಇಲಾಖೆ ಸ್ಥಳೀಯ ಅಂಚೆ ಕಚೇರಿ, ರೈಲ್ವೆ ಇಲಾಖೆಗಳನ್ನು ಸಂಪರ್ಕಿಸಿ ಸಾಧ್ಯತೆಗಳನ್ನು ಪರಿಶೀಲಿಸಬೇಕಿದೆ. ನಂತರ ಅನುಮತಿ ನೀಡುತ್ತದೆ. ಇಂಥಹದ್ದೊಂದು ಹೆಸರುಗಳ ಮರುನಾಮಕರಣ ಪ್ರಕ್ರಿಯೆಗೆ ಚಾಲನೆ ನೀಡಿದವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ಅವರ ಸರಕಾರ ಕಳೆದ ವರ್ಷ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಉತ್ತರ ಪ್ರದೇಶದ ಮೊಘಲ್‌ಸರಾಯಿ ರೈಲ್ವೆ ನಿಲ್ದಾಣದ ಹೆಸರನ್ನು ಜನಸಂಘದ ನಾಯಕ ದೀನ್‌ದಯಾಳ್‌ ಉಪಾಧ್ಯಾಯ ಹೆಸರಿಗೆ ಬದಲಿಸಲು ಯೋಗಿ ಸರಕಾರ ಮೊದಲು ಅರ್ಜಿ ಸಲ್ಲಿಸಿತ್ತು. ಸಹಜವಾಗಿಯೇ ಜನಸಂಘದಿಂದ ಬಿಜೆಪಿ ಆಗಿ ಬದಲಾದ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಅನುಮತಿ ನೀಡಿತ್ತು. ಅಲ್ಲಿಂದ ಮುಂದೆ ಉತ್ತರ ಪ್ರದೇಶದ ಫೈಝಾಬಾದ್‌ ಜಿಲ್ಲೆಯನ್ನು ಅಯೋಧ್ಯೆಯಾಗಿ, ಅಲಹಾಬಾದ್‌ನ್ನು ಪ್ರಯಾಗ್‌ರಾಜ್‌ ಆಗಿ ಬದಲಾಯಿಸಲು ಅನುಮತಿ ದೊರೆಯಿತು. ಮರುನಾಮಕರಣ ವಾದ ಸರಣಿ: ಬಿಜೆಪಿ ಸರಕಾರದ ಈ ಮರುನಾಮಕರಣ ಪ್ರಕ್ರಿಯೆ ಸಾಕಷ್ಟು ತಮಾಷೆಯನ್ನೂ ಹುಟ್ಟು ಹಾಕಿದೆ. ವಾಸ್ಗೊ ಡ ಗಾಮ ಹೆಸರನ್ನು 'ವಾಸುದೇವ್‌ ಮಾಮ' ಎಂದು ಬದಲಿಸಬೇಕು ಎಂಬ ತಮಾಷೆಗಳಿಂದ ಆರಂಭವಾಗಿ, ಸ್ವತಃ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ 'ಶಾ' ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂಬಲ್ಲಿವರೆಗೆ ವಾದ ಸರಣಿಯನ್ನು ಈ ಪ್ರಕ್ರಿಯೆ ಹುಟ್ಟು ಹಾಕಿದೆ. ಬಿಜೆಪಿ ಜ್ವಲಂತ ಸಮಸ್ಯೆಗಳಿಂದ ಜನರನ್ನು ದೂರ ಸೆಳೆಯಲು ಇಂತಹ ಗಿಮಿಕ್‌ಗಳನ್ನು ನಡೆಸುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಹೀಗಿದ್ದೂ, ಮರು ನಾಮಕರಣ ಪ್ರಕ್ರಿಯೆ ಅಸಾಧ್ಯ ವೇಗವೊಂದನ್ನು ಪಡೆದುಕೊಂಡಿದೆ. ವಾದ ವಿವಾದಗಳನ್ನು ಬೆನ್ನಿಗಿಟ್ಟುಕೊಂಡೇ ಕೇಂದ್ರ ಗೃಹ ಇಲಾಖೆ ತನ್ನ ಮುಂದಿರುವ ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಹೀಗಾಗಿ ಈ ವರ್ಷ ಕಳೆಯುವ ಹೊತ್ತಿಗೆ ಕನಿಷ್ಟ 48 ಊರು, ನಗರ, ಜಿಲ್ಲೆಗಳ ಹೆಸರು ಬದಲಾಗಲಿವೆ. 2014ರ ಚುನಾವಣೆ ಪ್ರಚಾರದ ಮೇಲೆ ಜನರಿಗೆ ನೀಡಿದ 'ಅಚ್ಚೆ ದಿನ್' ಆಶ್ವಾಸನೆ ಕಾರ್ಯರೂಪಕ್ಕೆ ಬಂದು, ದೇಶವಾಸಿಗಳ ಬದುಕು ಬದಲಾಯಿತೋ, ಇಲ್ಲವೋ ಗೊತ್ತಿಲ್ಲ. ಆದರೆ, ಮನಸ್ಸು ಮಾಡಿದರೆ ತಾವು ವಾಸಿಸುವ ಊರಿನ ಹೆಸರನ್ನು ಬದಲಾಯಿಸಿಕೊಳ್ಳಬಹುದು ಎಂಬ ಭರವಸೆಯನ್ನು ಬಿಜೆಪಿ ಸರಕಾರಗಳು ಹಾಗೂ ಕೇಂದ್ರ ಸರಕಾರ ನೀಡಿದೆ. ಅದೂ ಚುನಾವಣೆಯನ್ನು ಎದುರಿಗೆ ಇಟ್ಟುಕೊಂಡು ಎಂಬುದು ವಿಶೇಷ.
2019/04/18 12:33:28
https://www.samachara.com/cover-story/2018/11/12/who-is-permitting-renaming-process-that-hits-india
mC4
ಶರಣ್ ಸಿನಿಮಾಗೆ ಯೋಗರಾಜ್ ಭಟ್ ಹಾಡು | Sharan Kannada Film | Yograj Bhat Lyrics | Arjun Janya Music | ಶರಣ್ ಕನ್ನಡ ಚಿತ್ರ | ಯೋಗರಾಜ್ ಭಟ್ ಸಾಹಿತ್ಯ | ಸಂಗೀತ ಅರ್ಜುನ್ ಜನ್ಯ - Kannada Filmibeat ಶರಣ್ ಸಿನಿಮಾಗೆ ಯೋಗರಾಜ್ ಭಟ್ ಹಾಡು | Published: Wednesday, February 27, 2013, 11:51 [IST] ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಈಗಾಗಲೆ ಗೀತಸಾಹಿತ್ಯದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಅವರು ಹೆಣೆದಂತಹ ಹಾಡುಗಳು ಈಗಾಗಲೆ ಸಿಕ್ಕಾಪಟ್ಟೆ ಹಿಟ್ ಆಗಿವೆ. ಈಗವರು ಮತ್ತೊಂದು ಹಾಡನ್ನು ಶರಣ್ ಚಿತ್ರಕ್ಕಾಗಿ ಧಾರಾಳವಾಗಿ ಬರೆದುಕೊಟ್ಟಿದ್ದಾರೆ. 'ರ್ಯಾಂಬೊ' ಚಿತ್ರದ ಯಶಸ್ಸಿನ ನಂತರ ಹಾಸ್ಯನಟ ಶರಣ್ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ "ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು..." ಎಂಬ ಹಾಡನ್ನು ಬರೆದಿದ್ದಾರೆ. ಶರಣ್ ಹಾಗೂ ಸಾಧುಕೋಕಿಲ ಅಭಿನಯಿಸಿದ ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೈಸೂರು ಲ್ಯಾಂಪ್ಸ್ ನಲ್ಲಿ ಬಾರೊಂದರ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಿತು. ಚಿತ್ರದ ಸಿಂಬಲ್ ವಿಭಿನ್ನ, ವಿನೋದ, ವಿಸ್ಮಯ ಎಂದು ಅಂದುಕೊಳ್ಳಬಹುದು. ಎರಡು ಎಂದಾದರೂ ಭಾವಿಸಕೊಳ್ಳಬಹುದು ಎನ್ನುತ್ತಾರೆ ಶರಣ್. ಸಂಪೂರ್ಣ ಹಾಸ್ಯಮಯ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಎಸ್.ಆರ್.ಎಸ್ ಮಿಡಿಯಾ ವಿಷನ್ ಎಂಬ ಲಾಂಛನದಲ್ಲಿ ಆನಂದ್ ಆಡಿಯೋ ಮೋಹನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀನಾಥ್ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಚಿತ್ರಕ್ಕೆ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಶರಣ್, ಅಸ್ಮಿತಾ ಸೂದ್, ತಬಲನಾಣಿ, ಅವಿನಾಶ್, ರಮೇಶ್ ಭಟ್, ಸಾಧುಕೋಕಿಲಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ) Read more about: ಯೋಗರಾಜ್ ಭಟ್ ಶರಣ್ ಸಾಧು ಕೋಕಿಲ ಹಾಡು yogaraj bhat sharan sadhu kokila song A prominent Kannada film director, producer, screenwriter Yograj Bhat also recognised as a lyricist. He rendered lyrics to lyrics to Sharan's upcoming film (V symbol). Recently the song picturised at Mysore lamps. Arjun Janya scores music.
2021/09/23 14:04:26
https://kannada.filmibeat.com/music/yograj-bhat-rendered-lyrics-to-sharan-film-071874.html
mC4
ಕನ್ನಡ ಅಧ್ಯಯನ ಕೇಂದ್ರ | Bangalore University Home / ಕನ್ನಡ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ 1918 ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಯನ ಕೇಂದ್ರ ವನ್ನು ಸ್ಥಾಪಿಸಲಾಯಿತು. ಜೆ.ಪಿ.ರಾಜರತ್ನಂ ರಂತಹ ಕನ್ನಡ ಸಾಹಿತ್ಯ ಪ್ರಕಾಶಕರು ವಿಭಾಗದಲ್ಲಿ ಕಲಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ 1964 ರಲ್ಲಿ ಸ್ಥಾಪಿತವಾದಾಗ ಪ್ರೊ. ಆರ್.ಎಸ್. ಮುಗಾಲಿ ವಿಭಾಗದ ಮುಖ್ಯಸ್ಥರಾದರು. ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯದ ಮೊದಲ ಇತಿಹಾಸಕಾರರಾಗಿದ್ದರು. 1973 ರಲ್ಲಿ ವಿಭಾಗವನ್ನು ಜ್ಞಾನಭಾರತಿ ಆವರಣಕ್ಕೆ ಸ್ಥಳಾಂತರಿಸಲಾಯಿತು. ಡಾ. ಜಿ.ಎಸ್.ಶಿವರುದ್ರಪ್ಪನವರು ವಿಭಾಗದ ಮುಖ್ಯಸ್ಥರಾದರು ವಿಭಾಗಕ್ಕೆ ಕನ್ನಡ ಅಧ್ಯಯನ ಕೇಂದ್ರ ಎಂದು ಹೆಸರಿಸಲಾಯಿತು. ಕನ್ನಡ ಅಧ್ಯಯನ ಕೇಂದ್ರವು ಕನ್ನಡ ಸಾಹಿತ್ಯ ಮತ್ತು ವಿದ್ವಾಂಸರ ಕಲಾಕಾರರಿಂದ ಪೋಷಿಸಲ್ಪಟ್ಟಿದೆ. ಕವಿತೆ.ವಿಮರ್ಶೆ, ಭಾಷಾಶಾಸ್ತ್ರ, ಜಾನಪದ ಮತ್ತು ಸಾಂಸ್ಕೃತಿಕ ಅಧ್ಯಯನಗಳಂತಹ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಜಿ.ಎಸ್. ಶಿವರುದ್ರಪ್ಪ ಅವರನ್ನು ರಾಷ್ಟ್ರ ಕವಿ ಎಂಬ ಬಿರುದು ನೀಡಿ ಗೌರವಿಸಿದೆ. ಜಿ.ಎಸ್.ಎಸ್.ಕಂಬಾರ್, ಡಾ.ನಾಗರಾಜ್, ಚಿದಾನಂದ ಮೂರ್ತಿ ಇವರುಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಂಬಾರ ರವರಿಗೆ ಕಬೀರ್ ಸಮ್ಮಾನ್ ಮತ್ತು ಪದ್ಮಶ್ರಿ ಬಿರುದು ನೀಡಿ ಗೌರವಿಸಲಾಗಿದೆ. ಆವರು M.L.C ಆಗಿ ಸೇವೆ ಸಲ್ಲಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ಪ್ರಸಿದ್ಧ ಚಲನಚಿತ್ರ ತಯಾರಕರು ಮತ್ತು ಬರಹಗಾರರು ಅವರ ಚಲನಚಿತ್ರಗಳಲ್ಲಿ ಬಂಡಾಯ ಚಳುವಳಿಯನ್ನು ಮುನ್ನಡೆಸಿದಕ್ಕಾಗಿ ಅವರ ಚಲನಚಿತ್ರಗಳು ಪ್ರಶಸ್ತಿ ಪಡೆದಿವೆ. ನಮ್ಮ ವಿಭಾಗದ ಬೋಧಕರಾದ ಸಿದ್ದಲಿಂಗಯ್ಯನವರು ಕೆ.ಬಿ.ಎ ಅಧ್ಯಕ್ಷರಾದರು. ಅವರು ದಲಿತ ಚಳುವಳಿಯ ಮಂಚೂಣಿಯಲ್ಲಿದ್ದರು ಅವರು ಎಂ.ಎಲ್.ಸಿ ಮತ್ತು ಕೆ.ಡಿ.ಎ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ನಾಲ್ಕು ಪ್ರಾಧ್ಯಾಪಕರು ಮತ್ತು ಮೂರು ಸಹಾಯಕ ಪ್ರಾಧ್ಯಾಪಕರನ್ನು ಒಳಗೊಂಡಿರುವ ಏಳು ಶಿಕ್ಷಕರ ತಂಡವನ್ನು ವಿಭಾಗವು ಹೊಂದಿದೆ. ಅ. ಕಾಲಕಾಲಕ್ಕೆ ಸಮಯದೊಂದಿಗಿನ ವೇಗ ಮತ್ತು ಪಠ್ಯಕ್ರಮದ ಆಕಾರ ಉಳಿಸಿಕೊಳ್ಳಲು ಆ. ಹೊಸ ಸಾಹಿತ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗಳ ಭಾಗವಾಗಿ ಹೊಸ ಆಲೋಚನೆಗಳನ್ನು ಪ್ರಾರಂಭಿಸುವಲ್ಲಿ ಮುನ್ನಡೆ ಸಾಧಿಸುವುದು. ಇ. ಹೊಸ ಪರಿಕಲ್ಪನಾ ಮತ್ತು ಸೈದ್ಧಾಂತಿಕ ವಿಧಾನಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು. ಈ. ಸಾಹಿತ್ಯ ಮತ್ತು ಸಮಾಜದ ನಡುವೆ ಅರ್ಥಪೂರ್ಣ ಕೊಂಡಿ ಸ್ಥಾಪಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು. ಅಧ್ಯಕ್ಷರು: ಡಾ. ಸಿ. ನಾಗಭೂಷಣ ಅವಧಿ: 01.02.2020 ರಿಂದ 31.01.2022 ದೂರವಾಣಿ ಸಂಖ್ಯೆ: 080 – 22961618 ಇಮೇಲ್ ಐಡಿ: kannada@bub.ernet.in 1. ಕನ್ನಡ ಎಂ.ಎ 2. ತುಲನಾತ್ಮಕ ಸಾಹಿತ್ಯ ಅಧ್ಯಯನಗಳು ಎಂ.ಎ (ತೌಲಾನಿಕ ಕನ್ನಡ) 3. ಶಾಸನದಲ್ಲಿ ಸ್ನಾತಕೋತ್ತರ ಡಿಪ್ಲೊಮೊ 4. ಜಾನಪದದಲ್ಲಿ ಸ್ನಾತಕೋತ್ತರ ಡಿಪ್ಲೊಮೊ 5. ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮೊ (ಲಿಂಗ್ವಿಸ್ಟಿಕ್ಸ್) 1 ಮತ್ತು 2 : 4 ಸೆಮಿಸ್ಟರ್ ಗಳು (2 ವರ್ಷಗಳು) 3 ರಿಂದ 5: 2 ಸೆಮಿಸ್ಟರ್ (1 ವರ್ಷ) ಈ . ತೆಗೆದುಕೊಳ್ಳುವ ಸೀಟುಗಳು 1) ಜ್ಞಾನಭಾರತಿ – 60 + ಅಧಿಕ ಶುಲ್ಕ ಸೀಟುಗಳು - 10 ಸ್ನಾತಕೋತ್ತರ ಕೇಂದ್ರ ಕೋಲಾರ – 40 2) 10 ಸೀಟುಗಳು 3 ರಿಂದ 5 : ತಲಾ 20 ಕನ್ನಡ ಎಂ.ಎ ಮತ್ತು ತುಲನಾತ್ಮಕ ಸಾಹಿತ್ಯ ಅಧ್ಯಯನಗಳು ಎಂ.ಎ (ತೌಲಾನಿಕ ಕನ್ನಡ) ಪದವಿಗೆ ಅರ್ಹತೆಗಳು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಮಾದ್ವಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಕನಿಷ್ಠ40% ಅಂಕಗಳನ್ನು ಮತ್ತು ಸಂಬಂಧಪಟ್ಟ ಐಚ್ಚಿಕ ವಿಷಯದಲ್ಲಿ ಕನಿಷ್ಠ ಶೇ. 50% ಅಂಕಗಳನ್ನು ಪಡೆದಿದ್ದರೆ ಈ ವ್ಯಾಸಂಗ ಕ್ರಮದ ನೋಂದಣಿಗೆ ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಬಿ.ಎ., / ಬಿಎಸ್ಸಿ/ಬಿಕಾಂ/ಪದವಿ ಪಡೆದವರಾಗಿದ್ದು ಸಂಬಂಧಪಟ್ಟ ಭಾಷಾ ವಿಷಯದಲ್ಲಿ ಶೇ. 55% ರಷ್ಟು ಅಂಕಗಳನ್ನು ಗಳಿಸಿ ಜೊತೆಗೆ ಕನ್ನಡ ರತ್ನ ಅಥವಾ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೆ ನೋಂದಣಿಗೆ ಅರ್ಹರಾಗಿರುತ್ತಾರೆ. ಶಾಸನದಲ್ಲಿ ಸ್ನಾತಕೋತ್ತರ ಡಿಪ್ಲೊಮೊ: ಅಭ್ಯರ್ಥಿಯು ಸ್ನಾತಕೋತ್ತರ ಪರೀಕ್ಷೆಗಳಾದ ಕನ್ನಡ, ಇತಿಹಾಸ, ಪ್ರಾಚೀನ ಇತಿಹಾಸ, ಪ್ರಾಕ್ತನ ಶಾಸ್ತ್ರ, ಪ್ರಾಚ್ಯಶಾಸ್ತ್ರ,, ಯಾವುದಾದರೂ ಒಂದರಲಿ ತೇರ್ಗಡೆಯಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ ಕನಿಷ್ಠ 55% ರಷ್ಟು ಅಂಕಗಳನ್ನು ಹಾಗೂ ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಟ 50% ರಷ್ಟು ಅಂಕಗಳನ್ನು ಸ್ನಾತಕೋತ್ತರ ಪದವಿಯಲ್ಲಿ ಪಡೆದಿರಬೇಕು. ಜಾನಪದದಲ್ಲಿ ಸ್ನಾತಕೋತ್ತರ ಡಿಪ್ಲೊಮೊ: ಅಭ್ಯರ್ಥಿಯು ಸ್ನಾತಕೋತ್ತರ ಪರೀಕ್ಷೆಗಳಾದ ಕನ್ನಡ, ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ ವಿಷಯಗಳಲ್ಲಿ ತೇರ್ಗಡೆಯಾಗಿರುವವರು ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ ಕನಿಷ್ಠ 55% ರಷ್ಟು ಅಂಕಗಳನ್ನು ಹಾಗೂ ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಟ 50% ರಷ್ಟು ಅಂಕಗಳನ್ನು ಸ್ನಾತಕೋತ್ತರ ಪದವಿಯಲ್ಲಿ ಪಡೆದಿರಬೇಕು. ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮೊ (ಲಿಂಗ್ವಿಸ್ಟಿಕ್ಸ್): ಅಭ್ಯರ್ಥಿಯು ಸ್ನಾತಕೋತ್ತರ ಪದವಿಗಳಾದ ಕನ್ನಡ, ಸಾಹಿತ್ಯ ಅಥವಾ ಬೇರೆ ಭಾಷೆಯ ಸಾಹಿತ್ಯ ತೇರ್ಗಡೆಯಾಗಿರುವವರು ಅರ್ಹರಾಗಿರುತ್ತಾರೆ. ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ ಕನಿಷ್ಠ 55% ರಷ್ಟು ಅಂಕಗಳನ್ನು ಹಾಗೂ ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಟ 50% ರಷ್ಟು ಅಂಕಗಳನ್ನು ಸ್ನಾತಕೋತ್ತರದಲ್ಲಿ ಪಡೆದಿರಬೇಕು. 1 ಡಾ. ಎಂ. ಸುಮಿತ್ರ ಎಂ.ಎ: ಪಿಹೆಚ್.ಡಿ ಪ್ರಾಧ್ಯಾಪಕರು ಜಾನಪದ ಅಧ್ಯಯನ, ಅಧುನಿಕ ಸಾಹಿತ್ಯ, ಕವಿಗಳು, ವಿಮರ್ಶೆ ಪ್ರೊಫೈಲ್ 2 ಡಾ. ಹೆಚ್. ಎಲ್. ನಟರಾಜ್ ಎಂ.ಎ: ಪಿಹೆಚ್.ಡಿ ಪ್ರಾಧ್ಯಾಪಕರು ತುಲನಾತ್ಮಕ ಸಾಹಿತ್ಯ ಪ್ರೊಫೈಲ್ 3 ಡಾ. ಬಿ ಗಂಗಾಧರ ಎಂ.ಎ: ಪಿಹೆಚ್.ಡಿ ಪ್ರಾಧ್ಯಾಪಕರು ಜನಪದ ಸಾಹಿತ್ಯ, ಅಧುನಿಕ ಸಾಹಿತ್ಯ, ಪುರಾತನ ಕನ್ನಡ ಸಾಹಿತ್ಯ ಮತ್ತು ಟೀಕೆ ಪ್ರೊಫೈಲ್ 4 ಡಾ. ಸಿ. ಬಿ. ಹೊನ್ನುಸಿದ್ಧಾರ್ಥ ಎಂ.ಎ: ಪಿಹೆಚ್.ಡಿ ಸಹಾಯಕ ಪ್ರಾಧ್ಯಾಪಕರು ಜನಪದ, ಕವಿತೆಗಳ ವಿಮರ್ಶೆ, ಆಧುನಿಕ ಸಾಹಿತ್ಯ ಪ್ರೊಫೈಲ್
2021/05/18 17:24:30
https://bangaloreuniversity.ac.in/kannada-studies/
mC4
ಅಂಬಾನಿ ಪ್ರಧಾನಿ ಆದ್ರೆ ಅವನ ಮನೆಗೆ ಸೂಟ್ಕೇಸ್ ತಗೊಂಡು ಯಾರು ಹೋಗ್ತಾರೆ?- ಕುನಾಲ್ ಕಮ್ರಾ ವೈರಲ್ ಕಾಮಿಡಿ ಶೋ - TruthIndia ಮೋದಿಯ ಕುರಿತು ಹಾಸ್ಯ ಮಾಡಿದರೆ ಅದು ಹೇಗೆ ಧರ್ಮದ್ರೋಹವಾಗುತ್ತದೆ? ಮೋದಿಜಿಯ ಹೆಸರು ಧರ್ಮವೇ? ಮೋದಿ ಈಗ ಅತಿವೇಗವಾಗಿ ಬೆಳೆಯುತ್ತಿರುವ ವ್ಯಕ್ತಿಯಾಗಿಬಿಟ್ಟಿದ್ದಾನೆ ಮಾರಾಯ್ರೆ... ಅವ ಸಿಎಂ ಆಗಿದ್ದ, ನಂತರ ಪಿಎಂ ಆದ, ಈಗ ಧರ್ಮವಾಗಿ ಬೆಳೆದುಬಿಟ್ಟಿದ್ದಾನೆ! ಚುನಾವಣೆ ಇನ್ನೇನು ಕೆಲವೇ ವಾರಗಳು ಬಾಕಿ ಇರುವಾಗ ಕಾಮಿಡಿಯನ್ ಕುನಾಲ್ ಕಮ್ರಾ ಹೊಸ ಪ್ರಸ್ತಾಪ ದೇಶದ ಮುಂದಿಟ್ಟಿದ್ದಾರೆ. ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುವ ಅವರ ವಿಶಿಷ್ಟ ಶೈಲಿಯ ಈ ಮಾತುಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದರೆ ಯೂಟ್ಯೂಬ್‍ನಲ್ಲಿ ಸುಮಾರು 50 ಲಕ್ಷ ಜನರು ವೀಕ್ಷಿಸಿದ್ದಾರೆ. ಕುನಾಲ್ ಕಾಮ್ರಾ ಮಾತುಗಳ ಬರಹ ರೂಪವನ್ನು ಇಲ್ಲಿ ನೀಡಿದ್ದೇವೆ. ಸ್ನೇಹಿತ್ರೇ, ಒಂದು ವಿಷ್ಯ ಹೇಳಿ, ಇದು ನಂಗೂ, ಅಂಬಾನಿಗೂ ಮಧ್ಯೆ ಇರುವ ವಿಷಯ ಆಗಿರೋವಾಗ…. ಇದರಲ್ಲಿ ಮೋದಿಜಿಗೇನು ಕೆಲಸ ಅಲ್ವಾ? ನಾನು ಅಂಬಾನಿಗೇ ಏಕೆ ನೇರವಾಗಿ ವೋಟ್ ಹಾಕಬಾರದು? ನಮ್ಮಿಬ್ಬರ ಮಧ್ಯೆ ಸಮಸ್ಯೆ ಏನಿಲ್ಲವಲ್ಲಾ… ಹಂಗಿದ್ ಮೇಲೆ ಅಂಬಾನಿಯನ್ನೇ ಪ್ರಧಾನಿ ಮಾಡಿದ್ರಾಯ್ತು ಬಿಡಿ.. ಅಂಬಾನಿಯ ಬಳಿ ಬೇಕಾದ್ದೇಲ್ಲಾ ಸಿಗುತ್ತಲ್ಲಾ.. ಮೆಟ್ರೋ… ಬಟ್ಟೆಬರೆ… ಪೆಟ್ರೋಲ್, ವೈಫೈ… ಎಲ್ಲಾ ಇದೆಯಲ್ಲಾ… ವೈಫೈನಂತೂ ಫ್ರೀಯಾಗೇ ಕೊಟ್ಟುಬಿಟ್ಟಿದ್ದಾನಲ್ಲ… ಇಂತಹ ದಯಾಳು ಮನುಷ್ಯನ್ನ ನಾನೆಂದೂ ನೋಡೇ ಇರಲಿಲ್ಲ ಬಿಡಿ! ಮಗನಿಗೆ ಒಂದು ಕೆಲಸ ಬೇಕಂತ ಕೇಳಿದರೆ, ಇಡೀ ದೇಶಕ್ಕೇ ವೈಫೈ ಕೊಟ್ಟುಬಿಟ್ಟ ನೋಡಿ… ಈಗ ಪೂರಾ ದೇಶವೇ ಒಂದು ಕೈಯಲ್ಲಿ ಫೋನ್ ಹಿಡಿದು ಕುಂತುಬಿಟ್ಟಿದೆ ನೋಡಿ!!! ಆದ್ದರಿಂದ ಕಾರ್ಪೊರೇಟ್ ಸಂಸ್ಥೆಗಳೇ ಚುನಾವಣೆಗಳಲ್ಲಿ ಮುಖಾಮುಖಿಯಾಗಬೇಕು ಅಂತ ನಾನು ಯೋಚಿಸ್ತೀನಿ ನೋಡ್ರಿ… ಮುಖೇಶ್ ಅಂಬಾನಿ, ರತನ್ ಟಾಟಾ ಇವರಿಬ್ರೂ ಚುನಾವಣೆಲೀ ಎದುರಾದ್ರೆ.. ಆಗ ಅದು ಒಂದು ಒಳ್ಳೇ ಎಲೆಕ್ಷನ್ ಆಗತ್ತೆ… ಅವರಿಬ್ರೂ ಯಾವುದರ ಬಗ್ಗೆ ಮಾತಾಡ್ತಾರೆ ಮಾತಾಡ್ತಾರೆ? ಬರೀ ಅಭಿವೃದ್ಧಿಯ ಬಗ್ಗೆ, 'ವಿಕಾಸ್' ಬಗ್ಗೆ ಮಾತಾಡ್ತಾರೆ ನೋಡ್ತಿರಿ.. ಯಾಕಂದ್ರೆ ಅವರಿಗೆ ಬೇರೇನೂ ಗೊತ್ತೇ ಇಲ್ಲ. ರತನ್ ಟಾಟಾ ಉತ್ತರಪ್ರದೇಶಕ್ಕೂ ಹೋಗೋದಿಲ್ಲ, ಅಲ್ಲಿ ಒಂದು ರೂಮಿನ ತುಂಬಾ ಜನರನ್ನ ನೋಡಿ ಹಾರಾಡೋದೂ ಇಲ್ಲ.. "ಮಂದಿರ ಇಲ್ಲೇ ಕಟ್ತೇವೆ" ಅಂತ ಕೂಗಾಡೋ ಸೀನೂ ಇಲ್ಲ. "ಮಂದಿರ ಇಲ್ಲೇ…" ಎಂದು ಅರಚುವುದು ರತನ್ ಟಾಟಾರಂತಹ ಪಾತ್ರಕ್ಕೆ ಒಗ್ಗದ ಘೋಷಣೆ ಅಲ್ವೇ! ರತನ್ ಟಾಟಾ ಸೂಟಿನಲ್ಲಿ ಹೋಗಿ "ಮಂದಿರವನ್ನ ಇಲ್ಲೇ…" ಎಂದು ರ್ಯಾಲಿಯಲ್ಲಿ ಅರಚುವುದನ್ನ ಕಲ್ಪಿಸಿಕೊಳ್ಳಲೂ ಆಗದು… ಛೇ ಛೇ ಛೇ! ಅದೆಲ್ಲಾ ಆಗೋದೇ ಇಲ್ಲ… ಆಗ ನಾವೇ ಹೇಳಬೇಕಾಗತ್ತೆ… 'ಅಂಕಲ್, ನೀವು ಸ್ವಲ್ಪ ಹಾಗೇ ಅಲ್ಲೇ ಕುಳಿತುಬಿಡಿ, ಕೂಗುವುದನ್ನ ನಾವು ನೋಡ್ಕೊಳ್ತೀವಿ' ಅಂತ… ಉತ್ತರಪ್ರದೇಶಕ್ಕೆ ಯಾವನೇ ಹೋದರೂ, "ಮಂದಿರವನ್ನ ಇಲ್ಲೇ ಕಟ್ತೇವೆ" ಅಂತ ಗಂಟಲು ಹರಿದುಹೋಗುವಂತೆ ಅರಚುತ್ತಾನೆ… ಅದ್ಯಾಕೋ ಯಾರೂ ಅಷ್ಟೇ ಉತ್ಸಾಹವನ್ನ ಅಲ್ಲಿ ಮೆಟ್ರೋ ನಿರ್ಮಾಣಕ್ಕೆ ತೋರುವುದಿಲ್ಲ, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸಂಗ್ರಹಿಸಿಡಲು ತೋರಿಸುವುದಿಲ್ಲ. ಆದರೆ ಇವರಾರೂ "ಮಂದಿರ ಇಲ್ಲೇ…" ಅಂತ ಅರಚುವುದನ್ನ ಮಾತ್ರ ನಿಲ್ಲಿಸೋದೇ ಇಲ್ಲ! ಉತ್ತರಪ್ರದೇಶದ ಶೇ.40ರಷ್ಟು ಜನರಿಗೆ ಕಕ್ಕಸು ಮನೆ ಇಲ್ಲ. ಇವರು ಇಷ್ಟೊಂದು ಪ್ರಸಾದ ತಿನ್ನಿಸಿಬಿಟ್ಟರೆ ಅದನ್ನು ಹೊರಹಾಕುವುದಾದರೂ ಎಲ್ಲಿ ಸ್ವಾಮಿ!? ಏನಂತೀರಾ? ಇನ್ನೂ ಹೆಚ್ಚೆಂದರೆ ಯಾವನೋ ಒಬ್ಬ ರತನ್ ಟಾಟಾ ತರ ಕೂಗಾಡಬಹುದು, "ನ್ಯಾನೋ ಘಟಕವನ್ನ ಇಲ್ಲೇ ತರ್ತೀವಿ…" ಅಂತ! ಜನ ಯಾಕೆ ಹೀಗೆ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದಾರೆ? ಅದಕ್ಕೇನಂತೆ, ತನ್ರಪ್ಪಾ… ಮಂದಿರವನ್ನ ಇನ್ನೂ ಕಟ್ಟಿಲ್ಲವಲ್ಲಾ, ತನ್ನಿ… ಅಂಬಾನಿಯೇ ನಮ್ಮ ಪ್ರಧಾನಿಯಾಗಿಬಿಟ್ರೆ ಭ್ರಷ್ಟಾಚಾರ ಎಲ್ಲಿಂದ ಬಂತು ನೀವೇ ಹೇಳಿ? ಅಂಬಾನಿ ಪ್ರಧಾನಿ ಆದ್ರೆ ಸೂಟ್ಕೇಸ್ ಅವನ ಮನೆಗೆ ತಗೊಂಡು ಯಾರು ಹೋಗ್ತಾರೆ? "ನಾಲ್ಕು ಕೋಟಿಯ ನನ್ನ ಟೆಂಡರ್ ಬಾಕಿ ಇದೆ, ಸ್ವಲ್ಪ ಈ ಬಗ್ಗೆ ನೋಡಿ ಸಾರ್" ಅಂತ ಯಾವನಾದರೂ ಸೂಟ್ ಕೇಸ್ ಹಿಡಿದು ಅಂಬಾನಿಯ ಬಳಿ ಹೋದ ಅಂತಾನೇ ಇಟ್ಟುಕೊಳ್ಳಿ… ಆಗ ಅಂಬಾನಿ ಅವನನ್ನು ಕರೆದು, "ಮಗನೆ, ಬಾ ಇಲ್ಲಿ. ನೋಡು, 2014ರಿಂದ 4 ಸಾವಿರ ಕೋಟಿ ರೂಪಾಯಿ ನನ್ನಲ್ಲೇ ಇದೆ, ನನ್ನ ಜೇಬಿನಲ್ಲೇ ಇದೆ. ಅಗೋ ಅಲ್ಲಿ, ಸ್ವಿಮ್ಮಿಂಗ್ ಪೂಲ್ ನಲ್ಲಿ ಕಾಣ್ತಿದ್ದಾರಲ್ಲಾ ಅಂಕಲ್, ಸರಿಯಾಗಿ ನೋಡು ಅವರೇ ಮೋದೀಜಿ…" ಅಂತ ಹೇಳ್ತಾನೆ. ಅಂಬಾನಿ ಸೌತ್ ಬಾಂಬೆಯಲ್ಲಿ ಮನೆ ಕಟ್ಟಿದ್ದಾನಲ್ಲಾ, ಆ ಮನೆಯನ್ನ ನೀವು ನೋಡಿದ್ದೀರಾ? ಅದು ಎತ್ತರವಾಗಿ ನೆಟ್ಟಗೆ ನಿಂತಿರುವ 'ವಿಕಾಸ್' ಎಂಬುದು ಗೊತ್ತಿದೆಯೇನು? ಆತ ಬಹಳ ತಗ್ಗಿಬಗ್ಗಿ ನಡೆಯೋ ಮನುಷ್ಯನಂತೆ… ಪಾಪ! ಆ ಮನೆಯೊಳಗೆ ಮೊದಲು ಮೂರು ವರ್ಷ ವಾಸ ಮಾಡಲೇ ಇಲ್ಲವಂತೆ! ಏಕೆಂದರೆ ಅದರ ವಾಸ್ತು ಸರಿ ಇರಲಿಲ್ಲವಂತೆ… ಅಯ್ಯೋ! ನೀನು ಅಂಬಾನಿ ಕಣಯ್ಯಾ.. ನಿನಗೆ ವಾಸ್ತು ಗೀಸ್ತು ನಿಂಗೇನ್ ಮಾಡೋಕೆ ಸಾಧ್ಯ ಮಾರಾಯ? ವಾಸ್ತು ಏಜೆಂಟ್ ನಿನ್ನ ಮನೆಯ ಬಾಗಿಲಿಗೆ ಬಂದು ಹೇಳ್ತಾನೆ, "ಸಾರ್, ಕಮೋಡ್ ಈ ಕಡೆ ಹಾಕೋಣ, ನೀವು ಹೂಂ ಅಂದರೆ ನಾನು ಈಗಲೇ, ಈ ಕ್ಷಣದಲ್ಲೇ ಅದನ್ನು ಸರಿಪಡಿಸಿಬಿಡುತ್ತೇನೆ. ಅದನ್ನ ನಾನೇ ಮಾಡಿಕೊಡ್ತೀನಿ ಸಾರ್.." ಅಂತ. ನನಗನ್ನಿಸತ್ತೆ, ಅಂಬಾನಿ ಪ್ರಧಾನಿಯಾಗಬೇಕು, ಆಗ ನೀತಾ ಅಂಬಾನಿ ದೇಶದ ಮೊದಲ ಮಹಿಳೆಯಾಗ್ತಾಳೆ. ಇದು ಈಗಿನ ಅಮಿತ್ ಶಾ ನನ್ನೂ ದಾಟಿ ಭಾರಿ ಮುಂದೆ ಹೋದಂತಾಗುತ್ತದೆ!!! ನಮ್ಮ ಈಗಿನ ಪ್ರಥಮ ಮಹಿಳೆ ಜೈಲ್ ಗೆ ಹೋಗಿ ಬಂದಿದ್ದಾಳೆ… ನಮ್ಮ ದೇಶದಲ್ಲಿ ಹೀಗೂ ಆಗುತ್ತದೆಯೇ!? (ಮೋದಿ – ಅಮಿತ್ ಶಾ ಕುರಿತ ವ್ಯಂಗ್ಯವಿದು...) ನಾನು ಹೀಗೆಲ್ಲಾ ಹೇಳುತ್ತಾ ಹೋದರೆ ಜನ ನನ್ನನ್ನು ಧರ್ಮದ್ರೋಹಿ ಅಂತಾರೆ… ಅರೆ! ಸ್ನೇಹಿತರೆ, ಮೋದಿಯ ಕುರಿತು ಹಾಸ್ಯ ಮಾಡಿದರೆ ಅದು ಹೇಗೆ ಧರ್ಮದ್ರೋಹವಾಗುತ್ತದೆ? ಮೋದಿಜಿಯ ಹೆಸರು ಧರ್ಮವೇ? ಮೋದಿ ಈಗ ಅತಿವೇಗವಾಗಿ ಬೆಳೆಯುತ್ತಿರುವ ವ್ಯಕ್ತಿಯಾಗಿಬಿಟ್ಟಿದ್ದಾನೆ ಮಾರಾಯ್ರೆ… ಅವ ಸಿಎಂ ಆಗಿದ್ದ, ನಂತರ ಪಿಎಂ ಆದ, ಈಗ ಧರ್ಮವಾಗಿ ಬೆಳೆದುಬಿಟ್ಟಿದ್ದಾನೆ! ಈ ರೀತಿಯಲ್ಲಿ ರಿಲಾಯೈನ್ಸ್ ಸಂಸ್ಥೆ ಕೂಡ ಬೆಳೆದಿಲ್ಲ!!! ಕೆಲವರು ನನ್ನನ್ನು ಧರ್ಮವಿರೋಧಿ ಎನ್ನುತ್ತಾರೆ… ನಾನು ಧಾರ್ಮಿಕ ಮನುಷ್ಯ ಕಣ್ರೀ… ಅದಕ್ಕೆ ಸಾಕ್ಷಿ ಕೂಡ ಕೊಡಬಹುದು… ಸಣ್ಣ ವಯಸ್ಸಿನವನಾಗಿದ್ದಾಗ ನಾನು ಗಂಟೆ ಬಾರಿಸುತ್ತಿದ್ದೆ. ಅದರ ಫೋಟೋ ಇದೆ, ನಿಜವಾದ್ದು, ಅದು ಮೋದಿಯ ಡಿಗ್ರೀ ತರಹವಲ್ಲ, ನಿಜವಾದ ಫೋಟೋ ಮಾರಾಯ್ರೆ! ಪ್ರತಿ ಸಲ ಆರತಿ ಎತ್ತುವಾಗ ನಾನು ಗಂಟೆ ಬಾರಿಸುತ್ತಿದ್ದೆ.. ನನ್ನ ಅಮ್ಮ ನನಗೆ ಹೇಳುತ್ತಿದ್ದಳು, ಧರ್ಮ ನಿನ್ನನ್ನು ರಕ್ಷಿಸುತ್ತದೆ ಎಂದು. ನಿಜಕ್ಕೂ ಅದು ಒಳ್ಳೆಯ ವಿಚಾರವೇ. ಆದರೆ ನಾನು ಬೆಳೆದಂತೆ ನಾಯಕರು ನನಗೆ ನೀನು ಧರ್ಮವನ್ನು ರಕ್ಷಿಸಬೇಕೆಂದು ಹೇಳಲು ಶುರು ಮಾಡಿದರು! ಅರೆ, ಈ ಬದಲಾವಣೆ ಆಗಿದ್ದಾದರೂ ಯಾವಾಗ ಸ್ವಾಮಿ? ಸಮಯಕ್ಕೆ ಸರಿಯಾಗಿ ನನಗೆ ನನ್ನ ಮೊಬೈಲ್ ಬಿಲ್ ಕಟ್ಟಲಿಕ್ಕೇ ಆಗುತ್ತಿಲ್ಲ… ಇನ್ನು ನಾನು ಈ ಧರ್ಮರಕ್ಷಣೆಯ ಕೆಲಸವನ್ನ ಹೇಗೆ ಮಾಡಲಿ? ಭಗವಂತ ಅಷ್ಟು ಸರ್ವಶಕ್ತನಾದರೆ ಅವನಿಗೇಕೆ ನನ್ನಂತ ಹುಲುಮಾನವನ ಅವಶ್ಯಕತೆಯೋ ನಾ ಕಾಣೆ… ನಮಗೇ ಅಲ್ಲವೇ ಅವನ ಅಗತ್ಯವಿರುವುದು? ನಮ್ಮ ಭಗವಂತ ಆ ಕಾಲದಲ್ಲೇ ಭಾರತ ಮತ್ತು ಶ್ರೀಲಂಕಾ ಮಧ್ಯೆ ಸೇತುವೆ ಕಟ್ಟಿದ್ದನಂತೆ… ಅದೂ ಎಲ್ & ಟಿ ಕಂಪನಿ ಇಲ್ಲದೆಯೇ!!! ಈಗ ಎಲ್ & ಟಿ ಇದ್ದರೂ ಅವನ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲವೇ??? ಛೇ!
2022/05/20 13:33:42
https://kannada.truthindia.news/2019/03/16/kunal-kamra-standup-comedy/
mC4
ಜಿಯೋ ಸಿಮ್‌ನ್ನು ಇ-ಸಿಮ್‌ ಆಗಿ ಪರಿವರ್ತಿಸುವುದು ಹೇಗೆ..? | Getting A Jio e-SIM For iPhone 11: My Experience - Kannada Gizbot ಆಪಲ್‌ ತನ್ನ ಐಫೋನ್‌ಗಳಿಗೆ 2018ರಿಂದ ಇ-ಸಿಮ್‌ ಬೆಂಬಲವನ್ನು ನೀಡುತ್ತಿದೆ. ಇದುವರೆಗೂ ಐದು ಐಫೋನ್‌ ಮಾದರಿಗಳು ಭಾರತದಲ್ಲಿ ಡ್ಯುಯಲ್‌ ಸಿಮ್‌ ನೆಟ್‌ವರ್ಕ್‌ನ್ನು ಬೆಂಬಲಿಸುತ್ತಿವೆ. ಆದರೆ, ಐಫೋನ್‌ನಲ್ಲಿ ಡ್ಯುಯಲ್‌ ಸಿಮ್‌ ಬಳಕೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಂತೆ ಸುಲಭವಾಗಿಲ್ಲ. ಏಕೆಂದರೆ, ಭಾರತದಲ್ಲಿ ಏರ್‌ಟೆಲ್‌ ಮತ್ತು ಜಿಯೋ ಮಾತ್ರ ಇ-ಸಿಮ್‌ ಸೇವೆಯನ್ನು ನೀಡುತ್ತಿವೆ, ಅದರಲ್ಲೂ, ಏರ್‌ಟೆಲ್‌ ಕೇವಲ ಪೋಸ್ಟ್‌ಪೇಡ್‌ ಗ್ರಾಹಕರಿಗೆ ಮಾತ್ರ ಇ-ಸಿಮ್‌ ಸೇವೆಯನ್ನು ಪರಿಚಯಿಸಿದ್ದು, ಸ್ಟೋರ್‌ಗೆ ಹೋಗದೆ ಏರ್‌ಟೆಲ್‌ ಇ-ಸಿಮ್‌ನ್ನು ಕನ್ಫೀಗರ್‌ ಮಾಡಬಹುದಾಗಿದೆ. ಆದರೆ, ಜಿಯೋ ನೆಟ್‌ವರ್ಕ್‌ನಲ್ಲಿ ಇ-ಸಿಮ್‌ ಕನ್ಫೀಗರ್‌ ಮಾಡಲು ಒಂದಿಷ್ಟು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಡಿಜಿಟಲ್‌ ಸ್ಟೋರ್‌ನಲ್ಲಿ ಇ-ಸಿಮ್‌ ಮೈ ಜಿಯೋ ಸ್ಟೋರ್‌ನಲ್ಲಿ ನಿಮ್ಮ ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸುವ ವ್ಯವಸ್ಥೆ ಇಲ್ಲ. ಆದರೆ, ನಿಮ್ಮ ಹತ್ತಿರದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ನಲ್ಲಿ ನೀವು ಇ-ಸಿಮ್‌ ಪಡೆಯಬಹುದಾಗಿದ್ದು, ಐಫೋನ್‌ಗಾಗಿ ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸಿಕೊಳ್ಳಬಹುದು. ಭೌತಿಕ ಸಿಮ್‌ನಿಂದ ಇ-ಸಿಮ್‌ಗೆ ಬದಲಾವಣೆ ಮಾಡಿಕೊಳ್ಳಲು ದೀರ್ಘಾವದೀ ಸಮಯವೇನು ಬೇಕಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೇವಲ 10 ನಿಮಿಷ ಸಾಕು. ಹೌದು, ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗೆ ಇ-ಸಿಮ್‌ ಅಗತ್ಯವಿರುವ ಐಫೋನ್‌ನ ಐಎಂಇಐ ಸಂಖ್ಯೆಯನ್ನು ನೀಡಬೇಕಾಗುತ್ತದೆ. ನಂತರ ನೀವು ಒಟಿಪಿ ಸಂಖ್ಯೆಯನ್ನು ಸ್ವೀಕರಿಸಲಿದ್ದು, ಅದನ್ನು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳಿ. ಹಾಗೂ ನಿಮ್ಮ ಭಾವಚಿತ್ರ ಹಾಗೂ ವಿಳಾಸದ ಪುರಾವೆಯನ್ನು ನೀಡಬೇಕಾಗುತ್ತದೆ. ಇದೆಲ್ಲಾ ಪ್ರಕ್ರಿಯೆ ಮುಗಿದು ನಿಮ್ಮ ಇ-ಸಿಮ್‌ ಸಕ್ರಿಯಗೊಳ್ಳಲು 10 ನಿಮಿಷ ಕಾಲಾವಕಾಶ ಬೇಕಾಗಬಹುದು. ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸಲು ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ನಲ್ಲಿ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಇದು ಸಂಪೂರ್ಣ ಉಚಿತ ಸೇವೆಯಾಗಿದೆ. ಇನ್ನು, ನೀವು ಇ-ಸಿಮ್‌ ಪಡೆಯಲು ಹೋಗುವಾಗ ಆಧಾರ್‌ ಕಾರ್ಡ್‌ನಂತಹ ವಿಳಾಸದ ಪುರಾವೆಯನ್ನು ತೆಗೆದುಕೊಂಡು ಹೋಗಿ, ಇದರ ಜೊತೆ ಯಾವ ಸಂಖ್ಯೆಯನ್ನು ಇ-ಸಿಮ್‌ ಆಗಿ ಬದಲಾಯಿಸುತ್ತೀರೋ ಆ ಮೊಬೈಲ್‌ ಸಂಖ್ಯೆಯನ್ನು ತೆಗೆದುಕೊಂಡು ಹೋಗಿ. ಏಕೆಂದರೆ, ಬದಲಾವಣೆಯ ಪ್ರಕ್ರಿಯೆಗೆ ಒಟಿಪಿ ಅವಶ್ಯವಿದ್ದು, ನಮೂದಿಸಬೇಕಾಗುತ್ತದೆ. ಜಿಯೋ ರಿಚಾರ್ಜ್‌ ಪ್ಲಾನ್ಸ್‌ ಇ-ಸಿಮ್‌ಗೆ ಪ್ರತ್ಯೇಕವಾಗಿ ಯಾವುದೇ ರಿಚಾರ್ಜ್‌ ಪ್ಲಾನ್‌ಗಳು ಇಲ್ಲ. ನಿಮ್ಮ ಭೌತಿಕ ಸಿಮ್‌ನ ಯೋಜನೆಗಳೇ ಇಲ್ಲಿಯೂ ಮುಂದುವರೆಯಲಿದೆ. ಇನ್ನು, ಇ-ಸಿಮ್‌ನ್ನು ಭೌತಿಕ ಸಿಮ್‌ ಆಗಿ ಪರಿವರ್ತಿಸುವುದು ಸುಲಭವಾಗಿದ್ದು, ಅಮೀಪದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಿ, ಉಚಿತವಾಗಿ ಇ-ಸಿಮ್‌ನಿಂದ ಭೌತಿಕ್‌ ಸಿಮ್‌ಗೆ ಬದಲಾಯಿಸಿಕೊಳ್ಳಬಹುದು. Here is a complete process on how to get a Jio e-SIM card in India and how to use an e-SIM on an iPhone 11, iPhone 11 Pro, iPhone XR, and the iPhone XS.
2020/06/01 02:10:30
https://kannada.gizbot.com/news/getting-a-jio-e-sim-for-iphone-11-my-experience-022152.html?utm_medium=Desktop&utm_source=GB-KN&utm_campaign=Left_Include
mC4
ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್-ಹಾಕಿ: ಭಾರತದ ಫೈನಲ್ ಕನಸು ಭಗ್ನ..! – Prasthutha ಟೋಕಿಯೋ ಒಲಿಂಪಿಕ್ಸ್-ಹಾಕಿ: ಭಾರತದ ಫೈನಲ್ ಕನಸು ಭಗ್ನ..! ಟೋಕಿಯೋ, ಆ,2: 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ತಂಡ ಸೆಮಿಫೈನಲ್ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಬೆಲ್ಜಿಯಂಗೆ ಶರಣಾಗಿದೆ. ಡಿಫೆನ್ಸ್ ನಲ್ಲಿ ಪದೇ ಪದೇ ಎಡವಿದ ಭಾರತ, ಸಾಲು ಸಾಲು ಪೆನಾಲ್ಟಿ ತೆತ್ತು ತನ್ನ ಫೈನಲ್ ಪಯಣದ ಕನಸನ್ನು ಭಗ್ನವಾಗಿಸಿತು. ಜರ್ಮನಿ – ಆಸ್ಟ್ರೇಲಿಯಾ ನಡುವಿನ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಸೋಲುವ ತಂಡದ ವಿರುದ್ಧ ಭಾರತ ಕಂಚಿನ ಪದಕಕ್ಕಾಗಿ ಪಂದ್ಯವನ್ನಾಡಲಿದೆ. ಪಂದ್ಯ ಆರಂಭವಾಗಿ ಎರಡನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್​ ಅವಕಾಶವನ್ನು ಬೆಲ್ಜಿಯಂನ ಫೆಲಿಕ್ಸ್ ಡಿನೇಯರ್ ಮೊದಲ ಗೋಲಾಗಿ ಪರಿವರ್ತಿಸಿದರು. ಪಂದ್ಯದ ಒಂಬತ್ತನೇ ನಿಮಿಷದಲ್ಲಿ ಹರ್ಮನ್​ ಪ್ರೀತ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು. ಟೂರ್ನಿಯಲ್ಲಿ ತಮ್ಮ ಐದನೇ ಗೋಲು ದಾಖಲಿಸಿದ ಹರ್ಮನ್ ​ಪ್ರೀತ್, ಭಾರತಕ್ಕೆ ಸಮಬಲ ಸಾಧಿಸಲು ನೆರವಾದರು. ಮೊದಲಗೋಲು ದಾಖಲಾದ ಎರಡು ನಿಮಿಷದ ಅಂತರದಲ್ಲೇ ಮಂದೀಪ್ ಸಿಂಗ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬೆಲ್ಜಿಯಂ ಆಟಗಾರರು ಇದಕ್ಕೆ ಮೇಲ್ಮನವಿ ಸಲ್ಲಿಸಿ, ಮಂದೀಪ್ ತಮ್ಮ ಹಾಕಿ ಸ್ಟಿಕ್ಕಿನ ಬೆನ್ನಿನ ಭಾಗದಲ್ಲಿ ಗೋಲು ಹೊಡೆದಿದ್ದಾರೆ ಎಂದಿದ್ದರು. ಆದರೆ, ರೆಫರಿ ಭಾರತದ ಪರವಾಗಿ ತೀರ್ಪಿತ್ತರು. ನಾಲ್ಕನೇ ಅವಧಿಯಲ್ಲಿ ಬೆಲ್ಜಿಯಂನ ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತೊಂದು ಗೋಲು ಬಾರಿಸಿ ಬೆಲ್ಜಿಯಂಗೆ 3-2ರ ಮುನ್ನಡೆ ತಂದಿತ್ತರು. ಪಂದ್ಯಾವಳಿಯ 11ನೇ ಗೋಲು ಬಾರಿಸಿದ ಹೆನ್ರಿಕ್ಸ್ ಪಂದ್ಯದಲ್ಲಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರು. ಸಾಲು ಸಾಲು ಪೆನಾಲ್ಟಿ ಕಾರ್ನರ್ ಮಾಡಿದ ಭಾರತಕ್ಕೆ ಹಿನ್ನಡೆಯಾಯಿತು. ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತೊಂದು ಗೋಲು ಬಾರಿಸಿ 4-2ರ ಮುನ್ನಡೆಗೆ ಕಾರಣರಾದರು. ಕೊನೆಯಲ್ಲಿ ಮತ್ತೊಂದು ಗೋಲು ಬಾರಿಸಿದ ಬೆಲ್ಜಿಯಂ 5-2ರ ಮುನ್ನಡೆ ಕಂಡು ಗೆಲುವಿನ ನಗೆ ಬೀರಿತು. ಬೆಲ್ಜಿಯಂ ತಂಡವು ಇಂದು ನಡೆಯಲಿರುವ ಮತ್ತೊಂದು ಸೆಮಿಫೈನಲ್​ ನಲ್ಲಿ ಸೆಣಸಲಿರುವ ಜರ್ಮನಿ ಮತ್ತು ಆಸ್ಟ್ರೇಲಿಯಾದ ನಡುವಿನ ವಿಜೇತರನ್ನು ಫೈನಲ್​ ನಲ್ಲಿ ಎದುರಿಸಲಿದೆ. ಸೋತ ತಂಡವು, ಭಾರತದೊಂದಿಗೆ ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದೆ.
2021/09/18 01:56:11
https://prasthutha.com/tokyo-olympics-hockey-indias-final-dreamwrecked/
mC4
ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ – ವಿಜಯವಾಣಿ ವಿಜಯವಾಣಿ ದೇಶ ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ Friday, 13.10.2017, 5:22 PM ವಿಜಯವಾಣಿ ಸುದ್ದಿಜಾಲ No Comments ನವದೆಹಲಿ: ಸ್ವರ್ಗವೇ ಧರೆಗಿಳಿದಿದೆ ಎಂದು ಬಿಂಬಿಸಿ ಭಾರತೀಯ ರಿಯಲ್ ಎಸ್ಟೇಟ್​ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆ್ಯಂಬಿ ವ್ಯಾಲಿಯನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲು ಮತ್ತೆ ಯಾವುದೇ ಖರೀದಿದಾರರು ಮುಂದೆ ಬಂದಿಲ್ಲ. ಆದರೆ ಈ ಬಾರಿ ಕಾರಣ ವಿಚಿತ್ರವಾಗಿದೆ ಸಹಾರಾ ಕಂಪನಿಯ ಮಾಲೀಕ ಸುಬ್ರತಾ ರಾಯ್​ ಹಾಗೂ ಕಂಪನಿಯ ಉಳಿದ ನಿರ್ದೇಶಕರೇ ಹರಾಜು ಪ್ರಕ್ರಿಯೆಗೆ ಅಡ್ಡಿ ಪಡಿಸಿದರೆಂದು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI) ಹೇಳಿದೆ. SEBI ಪರ ವಕೀಲ ಅರವಿಂದ್​ ದತ್ತರ್​, ನ್ಯಾಯಮೂರ್ತಿಗಳಾದ ದೀಪಕ್​ ಮಿಶ್ರಾ, ರಂಜನ್​ ಗೋಗೊಯ್ ಮತ್ತು ಎ ಕೆ ಸಿಕ್ರಿಯವರಿದ್ದ ನ್ಯಾಯಪೀಠದ ಮುಂದೆ ಹಾಜರಾಗಿ ಆ್ಯಂಬಿ ವ್ಯಾಲಿ ಖರೀದಿಸಲು ಯಾರು ಮುಂದೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಹರಾಜು ಪ್ರಕ್ರಿಯೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ರಾಯ್ ಹಾಗೂ ಇತರ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸವಂತೆ SEBI ನ್ಯಾಯ ಪೀಠವನ್ನು ಕೋರಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಈ ರೀತಿಯ ವರ್ತನೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಿಗೆ ಮುಂದಿನ 48 ಗಂಟೆಗಳಲ್ಲಿ ಆ್ಯಂಬಿ ವ್ಯಾಲಿಯನ್ನು ಸಂಪೂರ್ಣವಾಗಿ SEBI ಗೆ ಒಪ್ಪಿಸ ಬೇಕು ಮತ್ತು ಕಂಪನಿಗೆ ನೇಮಿಸಿರುವ ತೀರ್ಪುಗಾರರು ಹಾಗೂ ನ್ಯಾಯಮೂರ್ತಿ ಎ ಕೆ ಓಕಾ ಅವರ ಮಾರ್ಗದರ್ಶನದಲ್ಲಿ ಹರಾಜು ಪ್ರಕ್ರಿಯೆ ನಡೆಸ ಬೇಕು ಎಂದು ನ್ಯಾಯಪೀಠ ಹೇಳಿದೆ. ಸಹಾರಾ ಗ್ರೂಪ್​ ಆ್ಯಂಬಿ ವ್ಯಾಲಿಯ ಲಿಮಿಟೆಡ್​ನ ಎಲ್ಲ ವ್ಯವಹಾರಗಳನ್ನು ನಿಲ್ಲಿಸಿದ ಮೇಲೆ ಮಹಾರಾಷ್ಟ್ರ ಪೊಲೀಸರು ಆ್ಯಂಬಿ ವ್ಯಾಲಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)
2018/09/21 07:00:51
http://vijayavani.net/global-auctioning-of-saharas-aamby-valley-failed-sebi-tells-supreme-court-to-take-action/
mC4
"ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ"; ನಗುತ್ತಲೇ ತಿವಿದ ಡಿವಿಎಸ್ | DV Sadananda Gowda Reaction On Mangaluru Video Released By Hd Kumaraswamy - Kannada Oneindia 1 min ago ಕೊರೊನಾ ಬೆನ್ನಲ್ಲೇ ಹಂದಿ ಜ್ವರದ ಭೀತಿ: ಬಾಗಿಲು ಮುಚ್ಚಿದ ಸಾಫ್ಟ್‌ವೇರ್ ಕಂಪೆನಿ 32 min ago ಪಾಕ್ ಪರ ಘೋಷಣೆ; ಅಮೂಲ್ಯ ಲಿಯೋನ್ ವಿರುದ್ಧ ವ್ಯಾಪಕ ಪ್ರತಿಭಟನೆ 43 min ago ರಾಮೇನಹಳ್ಳಿಯಲ್ಲಿ ಶಿವರಾತ್ರಿ ಮರುದಿನ ನಡೆಯುತ್ತದೆ ಅದ್ಧೂರಿ ರಥೋತ್ಸವ | Updated: Saturday, January 11, 2020, 12:52 [IST] ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿರವರು ಬಿಡುಗಡೆ ಮಾಡಿರುವ ವಿಡಿಯೋ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿ.ಡಿಗಳು ರಾಜಕೀಯದಲ್ಲಿರುವ ಹಲವರಿಗೆ ತಮ್ಮ ರಾಜಕೀಯದ ಅಸ್ತಿತ್ವದ ಸ್ವತ್ತುಗಳಾಗಿ ಪರಿವರ್ತನೆಯಾಗಿವೆ. ಯಾವುದೋ ಫೇಕ್ ಸಿಡಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡೋದು. ಆಮೇಲೆ ಅದರ ಹಿಂದೆ ಯಾರೂ ಹೋಗುವುದಿಲ್ಲ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿಗಳ ಸಂಖ್ಯೆ ನೋಡಿದ್ರೆ ಇಷ್ಟು ಹೊತ್ತಿಗೆ ಅದೆಷ್ಟೋ ಜನರು ಜೈಲಿಗೆ ಹೋಗಬೇಕಿತ್ತು" ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಅಲ್ಲದೇ, "ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. "ಘಟನೆ ನಡೆದ ಕೆಲವು ದಿನಗಳಲ್ಲೇ ಸಿಡಿ ಬಿಡುಗಡೆ ಮಾಡಬಹುದಿತ್ತು. ಆದರೆ ತಮ್ಮ ರಾಜಕೀಯ ಮೆಟ್ಟಿಲು ಕುಸಿಯುತ್ತಿರುವ ಸಮಯದಲ್ಲಿ ಕುಮಾರಸ್ವಾಮಿ ಮಾಡುತ್ತಿರುವ ಕಾರ್ಯಾಚರಣೆ ಇದು. ಇದರ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ" ಎಂದರು. ವಕೀಲರ ಭವನದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, "ಗೂಟದ ಕಾರು ಬಿಟ್ಟು ಸ್ವಂತ ಕಾರಿನಲ್ಲಿ ಹೋದರೆ ಕೆಲವರಿಗೆ ನಿರಾಸೆಯಾಗುವುದು ಸಹಜ. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ" ಎಂದರು. ಸಂಪುಟ ರಚನೆ ವಿಚಾರವಾಗಿಯೂ ಮಾತನಾಡಿ, "ನಾವು ಅನರ್ಹರಾಗಿದ್ದ ಶಾಸಕರಿಗೆ ಮಾತು ಕೊಟ್ಟಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ. ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂಗೆ ಬಿಟ್ಟಿದ್ದು" ಎನ್ನುವ ಮೂಲಕ ಎಲ್ಲಾ ನೂತನ ಶಾಸಕರಿಗೆ ಸಚಿವ ಸ್ಥಾನ ಸಿಗುವ ಕುರಿತಂತೆ ಪರೋಕ್ಷವಾಗಿ ಸುಳಿವು ನೀಡಿದರು. video kumaraswamy jds politics mandya ಕುಮಾರಸ್ವಾಮಿ ಜೆಡಿಎಸ್ ರಾಜಕೀಯ ಮಂಡ್ಯ HD Kumaraswamy released video only to get advantage for his political life. There is nothing in that cd said central minister dv sadananda gowda in mandya,
2020/02/21 05:59:16
https://kannada.oneindia.com/news/mandya/dv-sadananda-gowda-reaction-on-mangaluru-video-released-by-hd-kumaraswamy-182762.html?utm_source=articlepage-Slot1-7&utm_medium=dsktp&utm_campaign=citylinkslider
mC4
ಅಖಂಡ ಕರ್ನಾಟಕವಾಗಿ ಉ.ಕ. ಅಭಿವೃದ್ಧಿಯಾಗಲಿ: ಮಹಾಗಣಪತಿ | Kannadamma Home ಧಾರವಾಡ ಅಖಂಡ ಕರ್ನಾಟಕವಾಗಿ ಉ.ಕ. ಅಭಿವೃದ್ಧಿಯಾಗಲಿ: ಮಹಾಗಣಪತಿ ಅಖಂಡ ಕರ್ನಾಟಕವಾಗಿ ಉ.ಕ. ಅಭಿವೃದ್ಧಿಯಾಗಲಿ: ಮಹಾಗಣಪತಿ ಕನ್ನಡಮ್ಮ ಸುದ್ದಿ-ಧಾರವಾಡ: ಶಿಕ್ಷಣವೆಂದರೆ ಪ್ರಶ್ನೋತ್ತರವಲ್ಲ ಮಕ್ಕಳ ಉಜ್ವಲ ಭವಿಷ್ಯವನ್ನು ಅಪೇಕ್ಷಿಸುವ ಸರಕಾರ ಇತ್ತೀಚೆಗೆ ತೆರೆದ ಪುಸ್ತಕ ಪರೀಕ್ಷೆ ಕುರಿತ ಹೇಳಿಕೆ ಒಪ್ಪುವಂತದ್ದಲ್ಲ ಎಂದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ 'ಎಳೆಯರ ಗೆಳೆಯ' ಮಾಸ ಪತ್ರಿಕೆ ಸಂಪಾದಕ ಮಹಾಗಣಪತಿ ಬಿಳಿಮಗ್ಗದ ಅಭಿಪ್ರಾಯಪಟ್ಟರು. ಚನ್ನಮ್ಮ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪ ಅಯೋಜಿಸಿದ್ದ ಮಕ್ಕಳ ಮಂಟಪದ ಪ್ರಸಕ್ತ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿದರು. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಪ್ರತ್ಯೇಕ ರಾಜ್ಯ ಕೂಗು ಬೇಡ. ಅಖಂಡ ಕರ್ನಾಟಕವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಬೇಕು ಮತ್ತು ಕರ್ನಾಟಕ ಏಕೀಕರಣದ ಆಶಯ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಮೇಲಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ ಕರ್ನಾಟಕ ಏಕೀಕರಣಗೊಳ್ಳುವಲ್ಲಿ ದೊಡ್ಡ ಪಾತ್ರ ವಹಿಸಿದ್ದು, ಹೊಸಗನ್ನಡದ ದಿಕ್ಕು ಬದಲಿಸುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ ಎಂದರು. ಕÀ.ವಿ.ವ. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿದ ಚೆನ್ನಮ್ಮನ ನಾಡು ಕಿತ್ತೂರು. ಸ್ವಾಭಿಮಾನದ ಕಿಚ್ಚನ್ನು ಮಕ್ಕಳು ಬೆಳೆಸಿಕೊಂಡು, ಪ್ರಾಮಾಣಿಕವಾಗಿ ಜೀವನದಲ್ಲಿ ಮುಂದೆ ಬಂದಾಗ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ದೇಶವು ನನಗೆ ಏನು ಕೊಟ್ಟಿದೆ ಎನ್ನದೇ ದೇಶಕ್ಕಾಗಿ ನಾನು ಏನು ಮಾಡಬಲ್ಲೆ ಎನ್ನುವ ಗುರಿಯಿಟ್ಟುಕೊಳ್ಳಬೇಕು ಎಂದರು. ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ದೇಶವು ಕೇವಲ ಭೌತಿಕ ಸಂಪತ್ತು ಹೆಚ್ಚಿಸಿದರೆ ಸಾಲದು. ಮಕ್ಕಳೆಂಬ ಜೀವಂತ ಸಂಪತ್ತನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಮಕ್ಕಳ ಬದುಕಿಗೆ ಮಾರ್ಗದರ್ಶನ ಚಿಂತನೆಯ ಮತ್ತು ಪ್ರೋತ್ಸಾಹದ ನಿಟ್ಟಿನಲ್ಲಿ ಮಕ್ಕಳ ಮಂಟಪದ ಮೂಲಕ ಪ್ರಸಕ್ತ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಚನ್ನಮ್ಮನ ಕಿತ್ತೂರಿನಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ, ಸಿ.ವಾಯ್. ಫರೀಟ, ಸಿ.ಎಸ್. ನಾಗಶೆಟ್ಟಿ, ಶಶಿಭೂಷಣ ದೊಡವಾಡ, ಮಹಾಲಕ್ಷ್ಮೀ ಪೂಜಾರ, ಬಸಪ್ಪ ಶೆಲ್ಲಿಕೇರಿ ಉಪಸ್ಥಿತರಿದ್ದರು. ಡಾ. ಶೇಖರ ಹಲಸಗಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಸಿ.ಎಂ. ದೇಶನೂರ ವಂದಿಸಿದರು.
2022/01/21 11:07:46
https://kannadamma.net/223156/
mC4
ಕನ್ನಡಕ ಪ್ರಕರಣಗಳು, ಕನ್ನಡಕ ಬಟ್ಟೆ, ಆಪ್ಟಿಕಲ್ ಚೌಕಟ್ಟುಗಳು - ಸಹ-ನೋಡಿ ನಾವು ಕೈಗಾರಿಕೆಯಲ್ಲಿದ್ದೇವೆ, ಆದ್ದರಿಂದ ನೀವು ಆಗುವುದಿಲ್ಲ ಕನ್ನಡಕ-ಪ್ರಕರಣಗಳು ಕನ್ನಡಕ-ಬಟ್ಟೆ ನಮ್ಮ ಕಂಪನಿಯೊಂದಿಗೆ ಸಹಕರಿಸಲ್ಪಟ್ಟಿದೆ, ನಾವು ಪ್ರಕಾಶಮಾನವಾದ ಜಗತ್ತನ್ನು ನೋಡುತ್ತೇವೆ! ಆಪ್ಟಿಕಲ್ ಉದ್ಯಮದಲ್ಲಿ ಕನ್ನಡಕ, ಕನ್ನಡಕ ಪ್ರಕರಣಗಳು ಮತ್ತು ಕನ್ನಡಕ ಪರಿಕರಗಳ ಪ್ರಮುಖ ತಯಾರಕರಲ್ಲಿ ವುಕ್ಸಿ ಸಿಒ-ಸೀ ಪ್ಯಾಕಿಂಗ್ ಒಂದು. 09 ನವೆಂಬರ್ ಗ್ಲಾಸ್ಟೆಕ್ - ಹೊಸ ಸವಾಲುಗಳು ಅಕ್ಟೋಬರ್ 20 ರಿಂದ 22 ರವರೆಗೆ ಗ್ಲ್ಯಾಸ್ಟೆಕ್ ವರ್ಚುಯಲ್ ಈಗ ಮತ್ತು ಮುಂಬರುವ ಗ್ಲ್ಯಾಸ್ಟೆಕ್ ನಡುವಿನ ಅಂತರವನ್ನು ಜೂನ್ 2021 ರಲ್ಲಿ ಯಶಸ್ವಿಯಾಗಿ ನಿವಾರಿಸಿದೆ. ಡಿಜಿಟಲ್ ಜ್ಞಾನ ವರ್ಗಾವಣೆ, ಪ್ರದರ್ಶಕರಿಗೆ ಕಾದಂಬರಿ ಪ್ರಸ್ತುತಿ ಸಾಧ್ಯತೆಗಳು ಮತ್ತು ಹೆಚ್ಚುವರಿ ವರ್ಚುವಲ್ ನೆಟ್‌ವರ್ಕಿಂಗ್ ಆಯ್ಕೆಗಳನ್ನು ಒಳಗೊಂಡಿರುವ ಇದರ ಪರಿಕಲ್ಪನೆಯೊಂದಿಗೆ, ಇದು ಮನವರಿಕೆಯಾಗಿದೆ ... 01 ನವೆಂಬರ್ ಲಾಫ್ಟ್ ಐವೇರ್ ಪ್ರದರ್ಶನಗಳು ನ್ಯೂಯಾರ್ಕ್ ನಗರ, ಲಾಸ್ ವೇಗಾಸ್ ಮತ್ತು ಈಗ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾರ್ಷಿಕವಾಗಿ ನಡೆಯುವ ಪ್ರಧಾನ ಸ್ವತಂತ್ರ ಐಷಾರಾಮಿ ಕನ್ನಡಕ ಕಾರ್ಯಕ್ರಮಗಳಾಗಿವೆ. 2000 ರಿಂದ, LOFT ಈವೆಂಟ್‌ಗಳು ವಿಶ್ವದಾದ್ಯಂತದ ಅತ್ಯಂತ ವಿಶೇಷ ಮತ್ತು ಅತ್ಯಾಧುನಿಕ ವಿನ್ಯಾಸಕರನ್ನು ಪ್ರದರ್ಶಿಸಿವೆ. ನಾವು ಸಮಾನ ಮನಸ್ಕ, ಸ್ವತಂತ್ರ ವಿನ್ಯಾಸಕರ ಗುಂಪು ... 30 ಅಕ್ಟೋಬರ್ ಚೀನಾ ಯುರೋಪ್ ಅಂತರರಾಷ್ಟ್ರೀಯ ವ್ಯಾಪಾರ ಡಿಜಿಟಲ್ ಪ್ರದರ್ಶನ ಬೀಜಿಂಗ್‌ನಲ್ಲಿ ನಡೆಯಿತು ಚೀನಾ ಸಿಸಿಪಿಐಟಿ, ಚೀನಾ ಚೇಂಬರ್ ಆಫ್ ಇಂಟರ್ನ್ಯಾಷನಲ್ ಕಾಮರ್ಸ್ ಮತ್ತು ಚೀನಾ ಸರ್ವಿಸ್ ಟ್ರೇಡ್ ಅಸೋಸಿಯೇಷನ್ ​​ಜಂಟಿಯಾಗಿ ಬೆಂಬಲಿಸಿದ ಚೀನಾ ಯುರೋಪ್ ಇಂಟರ್ನ್ಯಾಷನಲ್ ಟ್ರೇಡ್ ಡಿಜಿಟಲ್ ಎಕ್ಸಿಬಿಷನ್ ಈ ವರ್ಷದ ಅಕ್ಟೋಬರ್ 28 ರಂದು ಬೀಜಿಂಗ್ನಲ್ಲಿ ನಡೆಯಿತು. ಈ ಪ್ರದರ್ಶನವು ಸಿನೋ-ಯುರೋಪಿಯನ್ ಡಿಪ್ಲೊನ 45 ನೇ ವರ್ಷದ ನೆನಪಿಗಾಗಿ ...
2022/01/23 11:29:52
http://kn.coseeoptical.com/
mC4
ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ | The Scent of Green Papaya show in Bangalore on July 16 - Kannada Filmibeat ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ ಗಾಢ ಮಸಾಲೆ ಬೆರೆಸಿದ ಆಹಾರಗಳನ್ನು ತಿನ್ನುವವನಿಗೆ ತುಂಗಾ ನೀರಿನ ರುಚಿ ತಿಳಿಯುವುದಿಲ್ಲ. ಅಬ್ಬರದ ಸಂಗೀತ ಗಳನ್ನು ರೂಢಿಸಿಕೊಂಡವನಿಗೆ ಜಲತರಂಗದ ಧ್ವನಿಗಳು ತಟ್ಟುವದಿಲ್ಲ. ಸೀಗೆಕಾಯಿ ಪುಡಿ ತಯಾರಿಸುವವನಿಗೆ ಮಲ್ಲಿಗೆಯ ಕಂಪು ಗೊತ್ತಾಗುವದಿಲ್ಲ. ಫುಟ್ಬಾಲ್‌ ಆಟಗಾರನಿಗೆ ಹೂವಿನ ಪಕಳೆಯಾಂದು ಮೈಮೇಲೆ ಬಿದ್ದಿದ್ದು ಅರಿವಾಗುವದಿಲ್ಲ. ಪಟ್ಟು ಸೀರೆಗಳನ್ನೇ ಉಡುವವಳಿಗೆ ಕೇರಳದ ಹಾಲುಬಿಳುಪಿನ ರೇಷ್ಮೆ ಸೀರೆಯ ಸೊಗಸು ಕಾಣುವದಿಲ್ಲ. ಸಿನಿಮಾ ಎಂದರೆ ಅದಕ್ಕೊಂದು ಅದ್ಭುತವಾದ ಕತೆಯಿರಬೇಕು, ಆರ್ಭಟ ಸಂಗೀತವಿರಬೇಕು, ವಿಶಿಷ್ಟ ಪಾತ್ರಗಳಿರಬೇಕು, ದೇಶ ವಿದೇಶಗಳ ಸುಂದರ ತಾಣಗಳಲ್ಲಿ ಚಿತ್ರಿಸಿರಬೇಕು- ಹೀಗೆ ನಮ್ಮ ಮನಸ್ಸಿನಲ್ಲಿ ಸಿನಿಮಾದ ವ್ಯಾಖ್ಯಾನ ಮಾಡಿಕೊಂಡಿರುತ್ತೇವೆ. ಆದರೆ ಅಂತಹ ನಂಬಿಕೆಗಳನ್ನೆಲ್ಲಾ ಪೊಳ್ಳಾಗಿಸುವಂತೆ ಬರೀ ನಿತ್ಯ ಬದುಕಿನ ನಾಜೂಕಿನ ಸಂಗತಿಗಳನ್ನು ಹಿಡಿದಿಡುವ ಚಿತ್ರ 'ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ'. 1951 ಮತ್ತು 1961ರ ಕಾಲಘಟ್ಟದ ವಿಯಟ್ನಾಮಿನ ಒಂದು ಮಧ್ಯಮ ವರ್ಗದ ಕುಟುಂಬದ ಚಿತ್ರಣವನ್ನು ಕೊಡುವ ಈ ಚಿತ್ರ ತನ್ನ ಸರಳತೆ ಮತ್ತು ಸೂಕ್ಷ್ಮತೆಗಳಿಂದಲೇ ನಮ್ಮನ್ನು ಆಕರ್ಷಿಸುತ್ತದೆ. ಇಂತಹ ಸರಳ ಸುಂದರ ಬದುಕಿನ ಮೇಲೆ ಅಮೆರಿಕನ್ನರು ಬಾಂಬಿನ ಮಳೆಗರೆದರಲ್ಲ ಎಂಬ ಸಂಕಟ ಚಿತ್ರದಲ್ಲಿಲ್ಲದಿದ್ದರೂ ನಿಮ್ಮನ್ನು ಕಾಡುತ್ತದೆ. ಈ ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ವಿಧವೆಯಿದ್ದಾಳೆ, ಎಳೆಯ ಮಗಳನ್ನು ಕಳೆದುಕೊಂಡ ತಾಯಿಯಿದ್ದಾಳೆ, ಮನೆಯ ಹಣವನ್ನೇ ದೋಚಿಕೊಂಡು ಓಡಿಹೋಗಿ ಮಜಾ ಮಾಡುವ ಮನೆಯ ಯಜಮಾನನಿದ್ದಾನೆ, ಮುಪ್ಪಿನಲ್ಲಿಯೂ ತನ್ನ ಯೌವನದ ಹುಡುಗಿಯನ್ನು ಕಂಡು ಖುಷಿ ಪಡುವ ಮುದುಕನಿದ್ದಾನೆ. ಆದರೆ ಯಾವೊಂದು ಸಂಗತಿಯೂ ಇಲ್ಲಿ ಆರ್ಭಟವಾಗುವದಿಲ್ಲ. ಚಿತ್ರ ಮುಗುಳ್ನಗೆಯನ್ನು ಚಿತ್ರಿಸುತ್ತದೆ, ಅಟ್ಟಹಾಸವನ್ನಲ್ಲ. ಕಣ್ಣಿನ ತೇವವನ್ನು ಚಿತ್ರಿಸುತ್ತದೆ, ಕಣ್ಣೀರಧಾರೆಯನ್ನಲ್ಲ. ಮೌನಸಂಗೀತವನ್ನು ಚಿತ್ರಿಸುತ್ತದೆ, ಐಟಂ ನಂಬರನ್ನಲ್ಲ. ಇದೇ ಭಾನುವಾರ (16ನೇ ಜುಲೈ 2006) ಬೆಳಗ್ಗೆ 11:00 ಗಂಟೆಗೆ 'ಲೇಸ್‌ ಫಿಲ್ಮ್ಸ್‌ ' ಸಂಸ್ಥೆಯು ಈ ಸಿನಿಮಾವನ್ನು ಸುಚಿತ್ರಾ ಸಭಾಂಗಣದಲ್ಲಿ ತೋರಿಸಲಿದ್ದಾರೆ. ಆದರೆ ಈ ಸಿನಿಮಾ ಎಲ್ಲರಿಗೂ ಅಲ್ಲ. ಇರುವೆಯಾಂದು ತನ್ನ ಗಾತ್ರಕ್ಕಿಂತಲೂ ಹೆಚ್ಚಿನ ಆಹಾರವನ್ನು ಉರುಳಿಸಿಕೊಂಡು ಹೋಗುವದನ್ನು ಕಂಡು ಅಚ್ಚರಿಪಡುವವರಿಗೆ. ಪಪಾಯಿ ಕಾಯಿಯಲ್ಲಿ ನಾಜೂಕಿನಲ್ಲಿ ಜೋಡಿಸಿಟ್ಟಂತೆ ಕಾಣುವ ಹಾಲು ಬಿಳಿಪಿನ ಬೀಜಗಳನ್ನು ಕಂಡು ಸಂಭ್ರಮಿಸುವವರಿಗೆ. ಎಳೆಯ ಎಲೆಯ ಮೇಲೆ ಎಳೆ ಹಸಿರು ಕಪ್ಪೆಯಾಂದು ಕೆಳಗೆ ಬೀಳದೆ ಓಡಾಡುವುದನ್ನು ಕಂಡು ಖುಷಿಪಡುವವರಿಗೆ. ಮಾತಿಗಿಂತಲೂ ಮೌನದಲ್ಲಿ ಹೆಚ್ಚಿನ ಅರ್ಥವನ್ನು ಕಾಣುವವರಿಗೆ.
2021/07/24 21:10:08
https://kannada.filmibeat.com/news/150706papaya.html
mC4
ಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ "ಹೆಂಡ್ರಿಕ್‌ ವಾನ್‌ ರೀಡ್‌" – CPUS ಭಾರತದ ಸಸ್ಯವಿಜ್ಞಾನದ ಪಿತಾಮಹಾ ಎಂದು ಹೆಸರಾದ "ವಿಲಿಯಂ ರಾಕ್ಸ್‌ಬರ್ರಾ" ಅವರಿಗಿಂತಲೂ ಒಂದು ಶತಮಾನಕ್ಕೂ ಮೊದಲೆ, 17ನೆಯ ಶತಮಾನದಲ್ಲಿಯೇ ಯಾವುದೇ ಶಿಕ್ಷಣವಿಲ್ಲದ ಡಚ್‌ ಸೈನ್ಯಾಧಿಕಾರಿಯೊಬ್ಬರು ಭಾರತದಲ್ಲಿ ನೆಲೆಸಿ ಏಶಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪ್ರದೇಶದ ಸಸ್ಯಸಂಪತ್ತಿನ ವಿವರಗಳನ್ನು ದಾಖಲಿಸಿದ್ದರು. ಸಸ್ಯವಿಜ್ಞಾನವಿನ್ನೂ ಅರಳುತ್ತಿದ್ದ ಸಮಯದಲ್ಲೇ ಕೇವಲ ಜನಾಂಗೀಯ ಗ್ರಹಿಕೆಯನ್ನು ಆಧರಿಸಿ "ಮಲಬಾರಿನ ತೋಟ"ಎಂಬರ್ಥದ"ಹಾರ್ಟಸ್‌ ಮಲಬಾರಿಕಸ್‌" ಎಂದೇ ಜಗದ್ವಿಖ್ಯಾತವಾದ ಮಲಬಾರ್ ಅಥವಾ ಕೇರಳವನ್ನೊಳಗೊಂಡ ಪಶ್ಚಿಮ ಘಟ್ಟಗಳ ಗಿಡ-ಮರಗಳ ವಿವರವಾದ ದಾಖಲೆಯನ್ನು ಕೇವಲ ತಮ್ಮ ಬೆರಗು ಮತ್ತು ಶ್ರದ್ಧೆ ರೂಪಿಸಿ ಸಸ್ಯವಿಜ್ಞಾನವನ್ನು ಕಟ್ಟಿದ ಮಹಾನ್‌ ವ್ಯಕ್ತಿ "ಹೆಂಡ್ರಿಕ್ ವಾನ್‌ ರೀಡ್‌‌". ಹೆಂಡ್ರಿಕ್‌ ವಾನ್‌ ರೀಡ್‌ ನೆದರ್‌ ಲ್ಯಾಂಡಿನವರು. ಡಚ್‌ ಈಸ್ಟ್‌ ಇಂಡಿಯಾ ಕಂಪನಿಯ ಮೂಲಕ, ಒಂದು ರೀತಿಯಲ್ಲಿ ಅನಾಥರಾಗಿ ಭಾರತಕ್ಕೆ ಬಂದು ಇಲ್ಲಿನ ಸಸ್ಯಸಂಗತಿಗಳಿಗೆ ಅದ್ವಿತೀಯವಾದ ಕಾಣಿಕೆಯನ್ನು ಕೊಟ್ಟರು. ಕಡೆಗೆ ಇಲ್ಲಿನ ಮಣ್ಣಲ್ಲಿ ಬೆರೆತು ಒಂದಾದರು. ಮೂರು ದಶಕಗಳಿಗೂ ಹೆಚ್ಚು ಕಾಲ ಇಲ್ಲಿದ್ದು ಮಲಬಾರಿನ ಸಸ್ಯಸಂಪತ್ತಿಗೆ ಬೆರಗಾಗಿ, ಮನಸೋತು, ಯಾವುದೇ ಮೂಲ ಸಸ್ಯವೈಜ್ಞಾನಿಕ ಅಥವಾ ಹೆಚ್ಚಿನ ಶಿಕ್ಷಣವಿಲ್ಲದಿದ್ದರೂ, ಜನಪದದ ಹಿನ್ನೆಲೆಯನ್ನು ಇಟ್ಟುಕೊಂಡು, ಸ್ಥಳೀಯ ಜನರ ಒಡನಾಟದಿಂದ ಅರಿತು 742 ಗಿಡ-ಮರಗಳ ಸಚಿತ್ರ ವಿವರಗಳನ್ನು"ಹಾರ್ಟಸ್‌ ಇಂಡಿಕಸ್‌ ಮಲಬಾರಿಕಸ್‌" ಎಂದು ಲ್ಯಾಟಿನ್‌ ಭಾಷೆಯಲ್ಲಿ ದಾಖಲಿಸಿದವರು. ಅಷ್ಟೇ ಅಲ್ಲ, ಸಸ್ಯವಿಜ್ಞಾನದ ವರ್ಗೀಕರಣ ಮತ್ತು ನಾಮಕರಣ ಪಿತಾಮಹಾ ಕಾರ್ಲ್ಸ್‌ ಲಿನೆಯಾಸ್‌ ಅವರಿಗೂ ಮೊದಲು ಈ ಕೆಲಸ ಮಾಡಿದ್ದಲ್ಲದೆ, ಅವರಿಗೂ ಪ್ರೇರಣೆಯಾಗಿದ್ದ ವ್ಯಕ್ತಿ. ವಾನ್‌ ರೀಡ್‌ ಎಂದೇ ಪರಿಚಿತರಾದ ಅವರ ಪೂರ್ಣ ಡಚ್‌ ಹೆಸರು ಹೆಂಡ್ರಿಕ್‌ ಅಡ್ರಿಯನ್‌ ವಾನ್‌ ರೀಡ್‌ ಟಾಟ್‌ ಡ್ರಾಕಸ್ಟೈನ್‌ (Hendrik Adrian van Rheede tot Draakestein). ಭಾರತದಲ್ಲಿ ವಸಾಹತುಗಳನ್ನು ನಿರ್ಮಿಸಿದವರಲ್ಲಿ ಬ್ರಿಟೀಷರು, ಫ್ರೆಂಚರೂ, ಪೋರ್ಚುಗೀಸರು ತಮ್ಮ ಪಳೆಯುಳಿಕೆಗಳ ಮೂಲಕ ಅಲ್ಲಲ್ಲಿ ಕುರುಹುಗಳನ್ನು ಬಿಟ್ಟಿದ್ದರೆ, ಡಚ್ಚರ ಕುರುಹುಗಳು ಅಷ್ಟೊಂದು ಕಾಣಿಸುವಂತೆ ಜನಪ್ರಿಯವಾಗಿಲ್ಲ. ಹದಿನಾರು ಹದಿನೇಳನೆಯ ಶತಮಾನದ ಪೋರ್ಚುಗೀಸರ ಹಿಂದೆಯೇ ಡಚ್ಚರೂ ಭಾರತಕ್ಕೆ ಬಂದು ಮಲಬಾರಿನಲ್ಲಿ ಒಂದಷ್ಟು ನೆಲೆಯಾದವರು. ಅವರಲ್ಲಿ ಕೇವಲ ಸೈನಿಕನಾಗಿ 1656-57ರಲ್ಲಿ ಭಾರತಕ್ಕೆ ಬಂದ ವಾನ್‌ ರೀಡ್‌ ಮಲಬಾರಿನ ಹಸಿರಿನ ಭವ್ಯತೆಗೆ ಮನಸೋತು, ಬೆರಗಾಗಿ, ಪ್ರೀತಿಯಿಂದ ಮಲಬಾರಿನ ಜನರ ಜೊತೆಗೆ ಬೆರೆತು ಸಸ್ಯಗಳ ಕುರಿತು ಕಲಿತರು. ಇಲ್ಲಿನ ಗಿಡ-ಮರಗಳ ಬಗ್ಗೆ ಕಲಿಯಲೆಂದೇ, ಪಶ್ಚಿಮ ಕರಾವಳಿಯ ಉದ್ದಕ್ಕೂ ಸಂಚರಿಸಿ, ಶ್ರದ್ಧೆಯಿಂದ "ಮಲಬಾರಿನ ತೋಟ (Hortus Malabaricus)" ಎಂಬ ಅತ್ಯಂತ ಮಹತ್ವದ ದಾಖಲೆಯನ್ನು ನಿರ್ಮಿಸಿದವರು. ಹೆಚ್ಚಿನ ತಿಳಿವಿಗಾಗಿ ಪೂರ್ವ ಕರಾವಳಿಯಲ್ಲೂ ಅಡ್ಡಾಡಿ ಕೋರಮಂಡಲ ತೀರದ ಸಸ್ಯರಾಶಿಯನ್ನೂ ಅರಿತುಕೊಂಡರು. "ಹೆಂಡ್ರಿಕ್ ವಾನ್‌ ರೀಡ್‌‌" ನೆದರ್‌ ಲ್ಯಾಂಡ್‌ನ ಅಮಸ್ಟರ್‌ಡಾಂನಲ್ಲಿ 1636ರ ಮಾರ್ಚ್‌ 14ರಂದು ಉತ್ತಮ ಕುಟುಂಬವೊಂದರ ಏಳು ಜನ ಮಕ್ಕಳಲ್ಲಿ ಕೊನೆಯ ಮಗುವಾಗಿ ಜನಿಸಿದರು. ಅವರ ತಾಯಿ ಎಲಿಸಬತ್‌ ಅವರು ಹೆಂಡ್ರಿಕ್‌ ರೀಡ್‌ ಒಂದು ವರ್ಷದ ಮಗುವಾಗಿರುವಾಗಲೇ ತೀರಿಕೊಂಡರು. ತಂದೆ ಅರ್ನೆಸ್ಟ್‌ ರೀಡ್‌ ಅವರೂ ಕೂಡ ಹೆಂಡ್ರಿಕ್‌ ಇನ್ನೂ ನಾಲ್ಕು ವರ್ಷದ ಪುಟ್ಟ ಹುಡುಗನಾಗಿದ್ದಾಗಲೇ ತಮ್ಮ ಜೀವನಯಾತ್ರೆಯನ್ನು ಮುಗಿಸಿದರು. ಬಹುಶಃ ಒಡಹುಟ್ಟಿದವರ ಜೊತೆಗೂ ಅಂತಹಾ ಹೊಂದಾಣಿಕೆಯಾಗದ ಕಾರಣದಿಂದಲೋ ಏನೋ ವಾನ್‌ ರೀಡ್‌ 14 ವರ್ಷದವರಾಗಿದ್ದಾಗಲೇ ಮನೆಯನ್ನು ತೊರೆದು ಅನಾಥರಾದರು. ಮತ್ತೆ ಹಿಂದಿರುಗಿ ನೋಡಲಿಲ್ಲ. ಮುಂದೆ ತಮ್ಮ 20ನೆಯವಯಸ್ಸಿಗೆ ಡಚ್‌ ಈಸ್ಟ್‌ ಇಂಡಿಯಾ ಕಂಪನಿಯ ಸೈನ್ಯಕ್ಕೆ ಸೇರಿದರು. ಅಲ್ಲಿ ಅವರು ಯೊಹನ್‌ ಬಕ್ಸ್‌ ವಾನ್‌ ಹೆರೆಂತಲ್ (Johan Bax van Herenthals) ಎಂಬ ನಿಸರ್ಗ ತಜ್ಞರ ಕೆಳಗೆ ಕೆಲಸ ನಿರ್ವಹಿಸುವುದರ ಮೂಲಕ ಭಾರತೀಯ ಸಸ್ಯವಿಜ್ಞಾನ ಪರಂಪರೆಗೆ ಒಂದು ವರವಾಗಿ ಪರಿಣಮಿಸಿದರು. ಯೊಹನ್‌ ಬಕ್ಸ್‌ ಅವರು ಜನಾಂಗೀಯ ಅಥವಾ ಜನಪದ ಸಸ್ಯವಿಜ್ಞಾನ (Ethnobotany) ದ ಹರಿಕಾರರಲ್ಲಿ ಒಬ್ಬರು. ಅವರ ಮೂಲಕ ಭಾರತದ ಪಶ್ಚಿಮ ತೀರದ ಡಚ್‌ ಮಲಬಾರ್‌ಗೆ ಬಂದ ವಾನ್‌ ರೀಡ್‌, ಅವರ ಜೊತೆ ನಿಸರ್ಗದ ಆಸಕ್ತಿಯನ್ನು ರೂಢಿಸಿಕೊಂಡದ್ದಲ್ಲದೆ, ತಮ್ಮ ಮಾನವ ಪ್ರೀತಿಯ ಗುಣಗಳಿಂದ ಡಚ್‌ ಕಾಲೊನಿಯ ಆಡಳಿತದಲ್ಲೂ ಹೆಸರು ಮಾಡಿದರು. ಕೊಚ್ಚಿನ್‌ನ ರಾಜಮನೆತನಕ್ಕೆ ಪೋರ್ಚುಗೀಸರಿಂದ ರಕ್ಷಣೆಯನ್ನು ಕೊಟ್ಟು, ಸ್ಥಳೀಯ ಮಲಬಾರಿನ ಪ್ರೀತಿಯನ್ನು ಗಳಿಸಿದರು. ಮುಂದೆ 1669 ರಿಂದ 1676ರ ನಡುವೆ ಡಚ್‌ ಮಲಬಾರಿನ ಗವರ್ನರ್‌ ಆಗಿ ಮುಂದಾಳತ್ವವನ್ನು ವಹಿಸಿದರು. ಅಲ್ಲಿನ ಜನರಿಗೆ ತಮ್ಮ ಸುತ್ತಲಿನ ಗಿಡ-ಮರಗಳ ತಿಳಿವನ್ನು ತಾವೂ ಕಲಿಯುವ ಮೂಲಕ ಅವರಲ್ಲಿ ಒಬ್ಬರಾದರು. ಆಗ ತಮಗಿದ್ದ ಅಧಿಕಾರವನನ್ನು ಬಳಸಿ ಮಲಬಾರಿನ ಗಿಡ-ಮರಗಳ ದಾಖಲೆಯಲ್ಲಿ ತೊಡಗಿದರು. ಡಚ್‌ ಆಡಳಿತ ಸಂಪ್ರದಾಯವೂ ಸಹಾ ನಿಸರ್ಗ ಸ್ನೇಹಿ ತಿಳಿವಳಿಕೆಗಳಲ್ಲಿ ಆಸಕ್ತಿಯಿದ್ದು, ವಾನ್‌ ರೀಡ್‌ ಅವರ ಸಸ್ಯಪ್ರೀತಿಗೆ ಅದರಿಂದಲೂ ಸಹಾಯವಾಯಿತು. ಸುಮಾರು 30 ವರ್ಷಗಳ ಕಾಲ ವಾನ್‌ ರೀಡ್‌ ಅವರು ಸ್ಥಳಿಯರ ನೆರವಿನಿಂದ ಗಿಡ-ಮರಗಳ ಸಚಿತ್ರ ದಾಖಲೆಯನ್ನು ರೂಪಿಸಿದರು. ಅದು ಮುಂದೆ 1678ರಿಂದ 1693ರ ನಡುವೆ 12 ಸಂಪುಟಗಳಲ್ಲಿ ಪ್ರಕಟವಾಯಿತು. 1656-57ರಲ್ಲಿ ಭಾರತಕ್ಕೆ ಬಂದ ವಾನ್‌ ರೀಡ್‌ ಇಲ್ಲಿನ ಆಲದ ಮರ ಮುಂತಾದ ಬೃಹತ್‌ ವೃಕ್ಷಗಳನ್ನೂ, ಮರಗಳಂತೆ ಬೆಳೆದ ಬಳ್ಳಿಗಳನ್ನೂ ಕಂಡು ಬೆರಗಾದವರು. ಇಲ್ಲಿನ ಸಸ್ಯ ಸಮೃದ್ಧತೆಯನ್ನು ದಾಖಲು ಮಾಡುತ್ತಾ ಮುಂದೆ ತಮ್ಮ ಜೀವಿತದ ಕೊನೆಯ ಕ್ಷಣದವರೆಗೂ ಇಲ್ಲಿಯೆ ಬ್ರಹ್ಮಚಾರಿಯಾಗಿಯೇ ಇದ್ದರು. ಓರ್ವ ಅನಾಥ ಹೆಣ್ಣು ಮಗುವನ್ನು ಸಾಕು ಮಗಳಾಗಿ ಸ್ವೀಕರಿಸಿದ್ದರು. ಕಡೆಗೊಮ್ಮೆ ಮಲಬಾರ್‌ ನಿಂದ ಗುಜರಾತ್‌ನ ಸೂರತ್‌ಗೆ ಹಡಗಿನಲ್ಲಿ ಪಯಣಿಸುವಾಗ ಮುಂಬೈಯ ತೀರದ ಬಳಿಯ 1691ರ ಡಿಸೆಂಬರ್‌ 15 ರಂದು ತೀರಿಕೊಂಡಿದ್ದರು. ತಮ್ಮ 14ನೆಯ ವಯಸ್ಸಿನಲ್ಲಿ ಮನೆಯನ್ನು ತೊರೆದು ಸೈನ್ಯಕ್ಕೆ ಸೇರಿ, ಭಾರತಕ್ಕೆ ಬಂದು ಒಂಟಿಯಾಗಿಯೇ ಬೆಳೆದರು. ಕೇವಲ ಜನಪದ-ಸಸ್ಯಪ್ರೀತಿಯಲ್ಲಿ ಜೀವನವನ್ನು ಕಂಡುಕೊಂಡರು. ಗುಜರಾತ್‌ನ ಸೂರತ್‌ನಲ್ಲಿರುವ ಡಚ್‌ ಸ್ಮಶಾನದಲ್ಲಿ ಅವರ ಸಾಕು ಮಗಳು ಫ್ರಾನ್ಸಿನ್‌ ಡಚ್‌ ಪ್ರಮುಖರ ಸಮ್ಮುಖದಲ್ಲಿ 2ನೆಯ ಜನವರಿ 1692ರಂದು ಅವರನ್ನು ಸಮಾಧಿ ಮಾಡಿದಳು. ಮೂರು ಶತಮಾನಗಳನ್ನು ಸವೆಸಿ ಅಲಕ್ಷ್ಯಕ್ಕೆ ಒಳಗಾಗಿರುವ ಈ ಡಚ್‌ ಸ್ಮಶಾನವನ್ನು ಸೂರತ್‌ನಲ್ಲಿ ಈಗಲೂ ನೋಡಬಹುದು. ಹೆಂಡ್ರಿಕ್‌ ವಾನ್‌ ರೀಡ್‌ ಮಲಬಾರಿನ 742 ಗಿಡ-ಮರಗಳ ಸುದೀರ್ಘ ವಿವರಗಳನ್ನು, ಪ್ರತೀ ಸಸ್ಯದ ಪುಟ್ಟ-ಪುಟ್ಟ ವಿವರಗಳಿಂದ ರಚಿಸಿದ್ದಾರೆ. ಉದಾಹರಣೆಗೆ ಸಸ್ಯದ ಭಾಗಗಳಾದ ಕಾಂಡ, ರೆಂಬೆ-ಕೊಂಬೆಗಳು, ಎಲೆ, ಹೂವಿನ ಭಾಗಗಳು, ಹಣ್ಣಿನ ವಿವರಗಳು, ಬೀಜ ಮತ್ತಿತರ ಯಾವುದೇ ಭಾಗದ ಸೂಕ್ಷ್ಮ ವಿವರಗಳು, ಇಡಿಯಾದ ಸಸ್ಯದ ಆಕಾರವನ್ನೂ ಸೇರಿಸಿದ್ದಾರೆ. ಅದರ ನೆಲೆ ಮತ್ತು ಹಬ್ಬುವ ಅಥವಾ ಬೆಳೆಯುವ ರೀತಿ ರಿವಾಜು, ಹೀಗೆ ಪ್ರತೀ ಸಸ್ಯದ ಸಣ್ನ-ಪುಟ್ಟ ವಿವರಗಳೆಲ್ಲವೂ ವಿವರವಾಗಿ ದಾಖಲಾಗಿವೆ. ವೈಜ್ಞಾನಿಕ ನಾಮಕರಣವನ್ನು ಒಳಗೊಳ್ಳದಿದ್ದರೂ ಕೂಡ "ಹಾರ್ಟಸ್‌ ಮಲಬಾರಿಕಸ್‌" ಆ ಕಾಲದ ಅತ್ಯಂತ ವಿವರವಾದ ಸಸ್ಯಸಂಗತಿಗಳ ಮಾಹಿತಿಯಾಗಿರುತ್ತದೆ. ಸ್ಥಳೀಯ ಹೆಸರು, ಜೊತೆಗೆ ಅರಾಬಿಕ್‌, ಸಂಸ್ಕೃತ, ಕೊಂಕಣಿಯ ಹೆಸರುಗಳನ್ನೂ ಅದು ಒಳಗೊಂಡಿದೆ. ಅದು ಏಶಿಯದ ಸಸ್ಯ ಸಂಪತ್ತಿನ ಮೊಟ್ಟ ಮೊದಲ ಅಧಿಕೃತವಾದ ಹಾಗೂ ನಿಖರವಾದ ದಾಖಲೆ ಎಂದರೆ "ಹಾರ್ಟಸ್‌ ಮಲಬಾರಿಕಸ್‌". ಅದರಲ್ಲಿ ದೊರಕುತ್ತಿರುವ ವಿವರಗಳು ಈ ಕಾಲಕ್ಕೂ ದಾಖಲೆಗಾಗಿ ಮುಂದೆ ಯಾವುದೇ ಕಾಲಕ್ಕೂ ಮಾದರಿಯಾಗಬಲ್ಲಂತಹವು. ಯಾವುದೇ ಶಿಕ್ಷಣವಿಲ್ಲದೆಯೂ ಕೇವಲ ಬೆರಗಿಗೆ, ಉತ್ಸುಕನಾಗಿ ತೊಡಗಿಕೊಂಡದ್ದರ ಫಲ-"ಹಾರ್ಟಸ್‌ ಮಲಬಾರಿಕಸ್‌" ಎಂದೇ ಖ್ಯಾತವಾದ"ಹಾರ್ಟಸ್‌ ಇಂಡಸ್‌ ಮಲಬಾರಿಕಸ್‌" ಹಾರ್ಟಸ್‌ ಮಲಬಾರಿಕಸ್‌ನ ರಚನೆಯ ವಿವರಗಳು ಹೆಂಡ್ರಿಕ್‌ ವಾನ್‌ ರೀಡ್‌ ರಚಿಸಿದ ಇದರ ಸಸ್ಯವಿವರಗಳು ಆತನ ಒಟ್ಟಾರೆ ಶೃದ್ಧೆಯ ಫಲ. ಇದು ಒಟ್ಟು 742 ಸಸ್ಯಗಳನ್ನು ಒಳಗೊಂಡಿದ್ದು 12 ಸಂಪುಟಗಳಲ್ಲಿದೆ. ಪ್ರತೀ ಸಂಪುಟವು ಸುಮಾರು 500 ಪುಟಗಳನ್ನು ಹೊಂದಿದೆ. ಪ್ರತೀ ಸಸ್ಯವೂ ಅದರ ಎಲ್ಲಾ ಪ್ರಮುಖ ಭಾಗಗಳ ಚಿತ್ರಗಳನ್ನು ಒಳಗೊಂಡಿದೆ, ಜೊತೆಗೆ ಅದನ್ನು ಕುರಿತಂತಹಾ ಜನಪದ ಸಂಗತಿಗಳನ್ನೂ ಸಹಾ. ಇವುಗಳು ಅದರ ಅಹಾರದ ಬಳಕೆ, ಔಷಧೀಯ ವಿವರಗಳೇ ಮುಂತಾದ ವಿಷಯಗಳನ್ನು ಒಳಗೊಂಡಿವೆ. ಎಲ್ಲವೂ ಸಚಿತ್ರವಾಗಿ ವಿವರಿಸಲ್ಪಟ್ಟಿವೆ. ಸ್ವತಃ ವಾನ್‌ ರೀಡ್‌ ಬಹುಪಾಲು ಚಿತ್ರಗಳನ್ನು ಬರೆದಿದ್ದಾರೆ. ಅಲ್ಲದೆ ನಾಲ್ಕು ಜನ ಸ್ಥಳೀಯ ಕಲಾವಿದರನ್ನು ಅದಕ್ಕೆಂದೇ ನೇಮಕ ಮಾಡಿಕೊಂಡಿದ್ದರೆಂದೂ ತಿಳಿದು ಬರುತ್ತದೆ. ಇದರ ಜೊತೆಗೆ ಈ ದಾಖಲೆಯು ಒಟ್ಟು 794 ತಾಮ್ರದ ಅಚ್ಚಿನಿಂದ ಮಾಡಲ್ಪಟ್ಟ ಚಿತ್ರವಿವರಗಳನ್ನೂ ಒಳಗೊಂಡಿವೆ. ಜೊತೆಗೆ ಅನೇಕ ಗಿಡ-ಮರಗಳ ಬಳಕೆಯ ಬಗೆಗೆ ಸ್ಥಳಿಯ ಜ್ಞಾನ ಪರಂಪರೆಯನ್ನು ಕೂಡ ದಾಖಲೆಯಲ್ಲಿ ಬಳಸಿಕೊಳ್ಳಲಾಗಿದೆ. ಸುಮಾರು 30 ವರ್ಷಗಳ ಕಾಲ, 100 ಜನರನ್ನು ಬಳಸಿಕೊಂಡು ನಿರ್ಮಿಸಿದ್ದಾರೆ ಎಂಬುದಾಗಿ ದಾಖಲೆಗಳು ತಿಳಿಸುತ್ತವೆ. ಇವರೆಲ್ಲರೂ ಸಸ್ಯ ಸಂಗ್ರಹವಲ್ಲದೆ, ಸಸ್ಯಗಳ ಮಾಹಿತಿಯ ಸಂಗ್ರಹಣೆ, ಪರಾಮರ್ಶನ ಇತ್ಯಾದಿ ಕೆಲಸಗಳಲ್ಲಿ ಸಹಾಯ ಮಾಡಿದವರು. ಇಡೀ ಕೆಲಸವು ವಾನ್‌ ರೀಡ್‌ ಅವರಿಂದ ಪರಿಕಲ್ಪನೆಗೊಂಡು, ಅವರ ಮಾರ್ಗದರ್ಶನದಲ್ಲಿಯೇ ನಡೆಯಿತು. ವಾನ್‌ ರೀಡ್‌ ಅದನ್ನು ಕಡೆಗೆ ಆ ಕಾಲದ ಶಿಷ್ಟ ಭಾಷೆಯಾಗಿದ್ದ ಲ್ಯಾಟಿನ್‌ ನಲ್ಲಿ ರಚಿಸಿ ರೂಪಿಸಿದರು. ಈ ಸಂಪುಟಗಳಲ್ಲಿನ ಸಸ್ಯಗಳ ಔಷಧೀಯ ಗುಣಗಳ ವಿವರಗಳಿಗಾಗಿ "ಇಟ್ಟಿ ಅಚ್ಯುತನ್‌" ಎಂಬ ಪಾರಂಪರಿಕ ವೈದ್ಯರು ಪೂರ್ಣ ಪ್ರಮಾಣದಲ್ಲಿ ಸಹಾಯ ಮಾಡಿದ್ದ ಬಗ್ಗೆ ವಿವರಗಳಿವೆ. ಈತ ಆ ಕಾಲದಲ್ಲಿ ಅಲ್ಲಿ "ಅಸ್ಪೃಶ್ಯ"ರಾಗಿದ್ದ 'ಇಳವರ್‌" ಜನಾಂಗದವರು. ಇವರದು ಪಾರಂಪರಿಕ ವೈದ್ಯಕೀಯ ಸೇವೆ ಮಾಡುವ ಮನೆತನವಾಗಿತ್ತು. ಇವರ ಜೊತೆಗೆ ಪರಾಮರ್ಶನಕ್ಕಾಗಿ "ರಂಗಾ ಭಟ್ಟ" ವಿನಾಯಕ ಭಟ್ಟ" ಮತ್ತು"ಅಪ್ಪು ಭಟ್ಟ" ಎಂಬ ಬ್ರಾಹ್ಮಣ ಆಯುರ್ವೇದ ವೈದ್ಯರೂ ಕೂಡ ಸಹಾಯ ಮಾಡಿದ್ದಾರೆ. ಈ ಎಲ್ಲರ ಹೆಸರುಗಳನ್ನೂ ಲ್ಯಾಟಿನ್‌ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಸಂಪುಟದ ಮುನ್ನುಡಿಯಲ್ಲಿ ಪ್ರಸ್ತಾಪಿಸಿ ಅವರನ್ನು ನೆನಪಿಸಿಕೊಳ್ಳಲಾಗಿದೆ. "ಹಾರ್ಟಸ್‌ ಮಲಬಾರಿಕಸ್‌" ಸಂಪುಟಗಳು ಆ ಕಾಲಕ್ಕೆ ಸ್ಥಳಿಯ ಜನರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಒಳಗೊಂಡದ್ದಲ್ಲದೆ, ಬಹುಶಃ ಆಗ ದಾಖಲಿದ್ದ ಸಂಸ್ಕೃತ ಮುಂತಾದ ಮೂಲಗಳನ್ನು ಪರಾಮರ್ಶಿಸಿ, ದಾಖಲಿಸಲಾಗಿದೆ. ಮೊಟ್ಟ ಮೊದಲು ಮಲೆಯಾಳದ ಜನರ ಮಾಹಿತಿಯನ್ನು ಪೋರ್ಚುಗೀಸ್‌ ಭಾಷೆಯಲ್ಲಿ ದಾಖಲಿಸಿ, ನಂತರ ಅದನ್ನು ಲ್ಯಾಟಿನ್‌ನಲ್ಲಿ ಸ್ವತಃ ಹೆಂಡ್ರಿಕ್‌ ವಾನ್‌ ರೀಡ್‌, -ಪ್ರಾಯಶಃ ಕೆಲವು ಸಹಾಯಕರಿಂದ_ ಅನುವಾದಿಸಿ ಬರೆದಿದ್ದಾರೆ. ಅದೆಲ್ಲವೂ ನೆದರ್‌ ಲ್ಯಾಂಡ್‌ನ ಅಮಸ್ಟರ್‌ಡಾಂನಿಂದ 12 ಸಂಪುಟಗಳಲ್ಲಿ ಪ್ರಕಟವಾಗುತ್ತದೆ. ಕೊನೆಯ ಸಂಪುಟ ಮಾತ್ರ ವಾನ್‌ ರೀಡ್‌ ಅವರ ಮರಣಾನಂತರ ಪ್ರಕಟವಾದರೆ ಉಳಿದ ಹನ್ನೊಂದು ಸಂಪುಟಗಳೂ ಆತನ ಜೀವಿತದ ಅವಧಿಯಲ್ಲಿಯೇ ಪ್ರಕಟವಾದವು. ಅತ್ಯಂತ ವಿಶ್ವಾಸರ್ಹವಾದ ದಾಖಲೆಯಾಗಿ "ಹಾರ್ಟಸ್‌ ಮಲಬಾರಿಕಸ್‌" ಜೀವಿ ವಿಜ್ಞಾನದಲ್ಲಿ ಜೀವಿಗಳ ವರ್ಗೀಕರಣ ಮತ್ತು ನಾಮಕರಣವು ಅತಿ ಪ್ರಮುಖವಾದ ಘಟ್ಟ. ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಒಂದು ಆಕರ್ಷಕ ಮಾದರಿಯನ್ನು ಕೊಟ್ಟವರು ಜೀವಿವರ್ಗೀಕರಣ ಮತ್ತು ನಾಮಕರಣ ಪಿತಾಮಹರೆಂದೇ ಖ್ಯಾತರಾದ ಸ್ವೀಡಿಶ್‌ ಜೀವಿವಿಜ್ಞಾನಿ ಕಾರ್ಲ್ಸ್‌ ಲಿನೆಯಾಸ್‌. ಅವರು ತಮ್ಮ ಜೀವಿತದ ಅವಧಿಯಲ್ಲಿ ಈ ಅತ್ಯಂತ ಪ್ರಮುಖವಾದ ಕೆಲಸಕ್ಕೆ ನಂಬಿಕೊಂಡದ್ದು ಸ್ವತಃ ಕಂಡ ಜೀವಿ ಮಾದರಿಗಳನ್ನು ಅಥವಾ ಸೂಕ್ಷ್ಮವಾದ ವಿವರಗಳನ್ನೂ ಒಳಗೊಂಡ ಚಿತ್ರಗಳನ್ನು ಮಾತ್ರ! ಸ್ವತಃ ಪರಿಶೀಲಿಸಿ ನೋಡಲು ತಮ್ಮ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದಲ್ಲದೆ, ಆ ಸಮಯಕ್ಕಾಗಲೇ ಪ್ರಕಟವಾಗಿದ್ದ ಕೆಲವು ಸಚಿತ್ರ ಸಂಪುಟಗಳನ್ನು ಪರಾಮರ್ಶಿಸಿ ಅಧ್ಯಯನಕ್ಕೆ ಒಳಪಡಿಸಿದ್ದರು. ಅಂತಹಾ ಸಂಪುಟಗಳಲ್ಲಿ ಲ್ಯಾಟಿನ್‌ ಭಾಷೆಯ "ಹಾರ್ಟಸ್‌ ಮಲಬಾರಿಕಸ್‌" ಕೂಡ ಒಂದು. ಲಿನೆಯಾಸ್‌ ಅವರು ವಾನ್‌ ರೀಡ್‌ ಅವರನ್ನು ಅದೆಷ್ಟು ಮೆಚ್ಚಿಕೊಂಡಿದ್ದರೆಂದರೆ, ಅವರು ತಾವು ಪರಾಮರ್ಶಿಸಿ ಒಪ್ಪಿಕೊಂಡಿದ್ದ ಜರ್ಮನಿಯ ಸಸ್ಯವಿಜ್ಞಾನಿ "ಯೋಹಾನ್‌ ಡಿಲೇನ್‌" ಮತ್ತು ಫ್ರಾನ್ಸಿನ "ಚಾರ್ಲಸ್‌ ಪ್ಲಮೇರ್‌" ಹಾಗೂ ಹೆಂಡ್ರಿಕ್‌ ವಾನ್‌ ರೀಡ್‌ ಅವರ ದಾಖಲೆಗಳಲ್ಲಿ ರೀಡ್‌ ಅವರನ್ನು ಮೊದಲ ಸ್ಥಾನದಲ್ಲಿ ಇಟ್ಟು ಗೌರವಿಸಿದ್ದರಂತೆ. ಸ್ವತಃ ತಮ್ಮ "ಜಿನೆರಾ ಪ್ಲಾಂಟೆರಂ (Genera Plantarum)" ದಾಖಲೆಯಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ. ವಾನ್‌ ರೀಡ್‌ ಅವರ ದಾಖಲೆಯು ಲಿನೆಯಸ್‌ ಅವರಿಗೆ ಭಾರತದ ಒಟ್ಟಾರೆಯ ಸಸ್ಯ ಸಂಪತ್ತಿನ ನಿಖರವಾದ ಮಾಹಿತಿಯು ದೊರೆತದ್ದಲ್ಲದೆ, ಅದರಲ್ಲಿ ಆತ್ಯಂತಿಕ ವಿವರಗಳು ಸಚಿತ್ರವಾಗಿ ಉನ್ನತವಾಗಿದ್ದು ಪ್ರಶಂಸೆಗೆ ಒಳಗಾಗಿವೆ. ಅದರ ಜೊತೆಗೆ ಮತ್ತೊಂದು ಮಹತ್ವದ ಸಂಗತಿ ಎಂದರೆ, ಭಾರತದ ಸಸ್ಯಗಳ ಅದರಲ್ಲೂ ಮಾನವ ಬಳಕೆಯ ವಿವರಗಳು ಮಲೆಯಾಳಂ ಮೂಲದಿಂದ, ಅಥವಾ ತಮಿಳು ಮೂಲದಿಂದ ಹೆಚ್ಚು ಪರಿಚಯವಾಗಿರಲು ವಾನ್‌ ರೀಡ್‌ ಅವರ ದಾಖಲೆಯೇ ಕಾರಣ. ಇಂದಿಗೂ ತೆಂಗು, ಹಲಸು, ಮಾವು ಮುಂತಾದ ಅನೇಕ ಪದಗಳು ಮಲೆಯಾಳಂ ಮೂಲದವು. ತೆಂಗು, ಮಲೆಯಾಳಂನ "ತೆಂಗೈ"ನಿಂದ ಬಂದಿದ್ದರೆ, ಜಾಕ್‌ "ಚಕ್ಕಾ"ದಿಂದಲೂ ಹಾಗೂ ಮಾಂಗೊ "ಮಾಂಗಾ"ದಿಂದ ಬಂದಿದೆ. ಹೀಗೆ ಶಿಕ್ಷಣವೇ ಇಲ್ಲದ 20-21 ವರ್ಷದ ಹುಡುಗನೊಬ್ಬ ಭಾರತಕ್ಕೆ ಬಂದು ಕೇವಲ ಆಸಕ್ತಿ ಹಾಗೂ ಸ್ಥಳೀಯ ಜನರ ಒಡನಾಟದಿಂದ ಕಲಿತ ಕಾರಣದಿಂದ ಬೃಹತ್‌ ದಾಖಲೆಯನ್ನು ಸಸ್ಯವಿಜ್ಞಾನಕ್ಕೆ ಕೊಟ್ಟಿದ್ದು ದೊಡ್ಡ ಪವಾಡ. ವಾನ್‌ ರೀಡ್‌ ಅವರು ಒಂಟಿಯಾಗಿ ಬ್ರಹ್ಮಚಾರಿಯಾಗಿದ್ದು, ಸೇವೆ ಹಾಗೂ ಆಸಕ್ತಿಯನ್ನೇ ಮೂಲವಾಗಿಟ್ಟು ದುಡಿದು ಭಾರತದಲ್ಲೇ ಮಣ್ಣಾದ ಮಹಾನ್‌ ನಿಸರ್ಗ ಪ್ರೇಮಿ. (ಬ್ರಿಟನ್ನಿನ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ 13ನೆಯ ಶತಮಾನದಿಂದ 19ನೆಯ ಶತಮಾನದವರೆಗೂ ವಿವಿಧ ಮಾದರಿಗಳಲ್ಲಿ ದಾಖಲಾದ ಸಸ್ಯವಿವರಗಳನ್ನು "Medicinae Plantae- Healing Plants Through Time" ಎಂಬುದಾಗಿ ಡಿಜಿಟಲ್‌ ದಾಖಲೆಯೊಂದನ್ನು ರೂಪಿಸಿದೆ. ಇದರಲ್ಲಿರುವ ಸುಮಾರು 40 ಸಸ್ಯಸಂಗ್ರಹಗಳ ದಾಖಲೆಗಳಲ್ಲಿ "ಹಾರ್ಟಸ್‌ ಮಲಬಾರಿಕಸ್‌" ಕೂಡ ಒಂದು. ಇದೊಂದು ಡಿಜಿಟಲ್‌ ಎಕ್ಸಿಬಿಷನ್‌ ಆಗಿದ್ದು, ಅದರ ಪ್ರತಿಯೊಂದೂ ಪುಟ್ಟ ವಿವರಣೆಯೊಂದಿಗೆ ಪ್ರದರ್ಶಿಲ್ಪಟ್ಟಿವೆ. ಅದನ್ನು ಆನ್‌ ಲೈನ್‌ ಮೂಲಕ https://bit.ly/2Wq9F7B ಲಿಂಕ್‌ ನಲ್ಲಿ ನೋಡಿ ತಿಳಿಯಬಹುದು). ಇದೆಲ್ಲವೂ ಲ್ಯಾಟಿನ್‌ ಭಾಷೆಯ "ಹಾರ್ಟಸ್‌ ಮಲಬಾರಿಕಸ್‌" ಕಥೆಯಾದರೆ, ಸುಮಾರು 300 ವರ್ಷಗಳ ನಂತರ ಅದನ್ನು ಅಷ್ಟೇ ಶ್ರದ್ಧೆಯಿಂದ 35ವರ್ಷಗಳ ಕಾಲ ಪರಾಮರ್ಶಿಸಿ, ವೈಜ್ಞಾನಿಕ ವಿವರಗಳ ಸಹಿತ "ಇಂಗ್ಲೀಷ್‌ ಹಾಗೂ "ಮಲೆಯಾಳಂ" ಭಾಷೆಗೆ ಅನುವಾದಿಸಿದವರು ನಮ್ಮವರೇ ಆದ ಕೇರಳದ ಡಾ. ಮಣಿಲಾಲ್‌ (Professor Kattungal Subramaniam Manilal) ಅವರು. ಪ್ರೊ. ಮಣಿಲಾಲ್‌ ಹಾರ್ಟಸ್ ಮಲಬಾರಿಕಸ್‌ ನ‌ ಎಲ್ಲಾ ಗಿಡ-ಮರಗಳನ್ನೂ ಮತ್ತೊಮ್ಮೆ ಸ್ಥಳಿಯವಾಗಿ ಕಂಡದ್ದಲ್ಲದೆ, ಅವುಗಳ ವಿಶೇಷಗಳನ್ನೂ ಅಧ್ಯಯನ ಮಾಡಿ ಆಧುನಿಕ ವೈಜ್ಞಾನಿಕ ಹೆಸರುಗಳನ್ನೂ ಸೇರಿಸಿದವರು ಅಂತರರಾಷ್ಟ್ರೀಯ ಸಸ್ಯವರ್ಗೀಕರಣ ಸಂಸ್ಥೆಯಿಂದ ಗುರುತಿಸಲ್ಪಟ್ಟ ಅತ್ಯಂತ ಪ್ರಮುಖ ಭಾರತೀಯ ವಿಜ್ಞಾನಿ. ಇವರ ಇಂಗ್ಲೀಷ್‌ ಅನುವಾದದಿಂದ 325 ವರ್ಷಗಳ ನಂತರ ಜಗತ್ತಿಗೆ ತೆರೆದುಕೊಂಡ ಅತ್ಯಂತ ಮಹತ್ವದ ಘಟನೆಯು ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್‌ ಕಲಾಂ ಅವರಿಂದ ಲೋಕಾರ್ಪಣೆಗೊಂಡರೂ ಪ್ರಕಾಶಕರಾಗಿದ್ದ ಕೇರಳ ವಿಶವ್ವಿದ್ಯಾಲಯವು ಡಾ. ಮಣಿಲಾಲ್‌ ಅವರನ್ನು ಬಿಡುಗಡೆ ಸಮಾರಂಭಕ್ಕೆ ಕರೆತರದೆ ವಂಚಿಸಿತ್ತು. ಇಷ್ಟೇ ಅಲ್ಲ ಪ್ರೊ. ಮಣಿಲಾಲ್‌ ಅವರೂ ಸಹಾ ವಾನ್‌ ರೀಡ್‌ ಅವರಂತೆ ಪಶ್ಚಿಮ ಘಟ್ಟಗಳ ಉದ್ದಗಲಕ್ಕೂ ಅಡ್ಡಾಡಿ ಮೂರು ದಶಕಗಳನ್ನು ಸವೆಸಿ ಸೇವೆ ಮಾಡಿ ಜಗತ್ತಿನ ಸಸ್ಯಪ್ರೇಮಿಗಳನ್ನು ತಲುಪಿದ್ದರೂ, ಅವರ ಹೆಸರನ್ನೇ ಬಿಡುವಂತಹ ಪ್ರಕಾಶನ ಹುನ್ನಾರದ ಜೊತೆಗೆ ಅವರ ಸಸ್ಯಪ್ರೀತಿಯ ಇತರೇ ಮಹತ್ವದ ವಿವರಗಳನ್ನು ಮುಂದೆ ನೋಡೋಣ. ಅದೇ ಒಂದು ದೊಡ್ಡ ಕಥೆ… ಕೃಷಿಯ ನೊಬೆಲ್‌ -ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಪುರಸ್ಕೃತ ಡಾ. ರತ್ತನ್‌ ಲಾಲ್‌ ಭಾಗ್ಯ ತೆಗ್ಗೆಳ್ಳಿ 13 May 2020 Reply ಬಹಳ ಅಮೂಲ್ಯವಾದ ಮಾಹಿತಿ ಇದೆ..ಸಸ್ಯ ಶಾಸ್ತ್ರ ಎಂದಕೂಡಲೇ ನಮಗೆ ತಕ್ಷಣಕ್ಕೆ ನೆನಪಾಗುವವರು ಲಿನ್ನೇಯಸ್ ಮಾತ್ರ..ವ್ಯಾನ್ ರೀಡ್ ಅವರ ಹೆಸರು ಕೇಳಿರಲಿಲ್ಲ..ಶಾಲಾ ಶಿಕ್ಷಣವಿಲ್ಲದ ಮತ್ತು ತನ್ನದಲ್ಲದ ಭಾರತದ ಭೂಮಿಯಲ್ಲಿ ಸಸ್ಯಗಳಧ್ಯಯನಕ್ಕಾಗಿ ತನ್ನ ಜೀವತೇದ ಮಹಾನ್ ಚೇತನವನ್ನು ಪರಿಚಯಿದಿದ ಲೇಖನ ಓದಿ ಧನ್ಯತಾ ಭಾವ ಉತ್ಪತ್ತಿ ಆಯ್ತು ಸರ್.. ಸಂಗ್ರಹಯೋಗ್ಯ ಲೇಖನ..
2022/01/22 14:55:41
https://cfpus.org/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3%E0%B2%B5%E0%B2%BF%E0%B2%B2%E0%B3%8D%E0%B2%B2%E0%B2%A6%E0%B3%86%E0%B2%AF%E0%B3%82-%E0%B2%AC%E0%B3%86%E0%B2%B0%E0%B2%97%E0%B3%81-%E0%B2%AE/
mC4
ಪುಟ:Mysore-University-Encyclopaedia-Vol-1-Part-1.pdf/೧೩೨ - ವಿಕಿಸೋರ್ಸ್ ಪುಟ:Mysore-University-Encyclopaedia-Vol-1-Part-1.pdf/೧೩೨ ನೀಡಿದರು. ಭ್ರೂಣದ ಬೆಳವಣಿಗೆಯ ಕಾಲದಲ್ಲಿ ಉದಯಿಸುವ ನಡುಮೂಲಪದರ, ದೇಹದೊಳಗಿನ ಅವಕಾಶವಾದ ಸೀಲೋಮ್ ಬಗ್ಗೆ ಇವರು ನಡೆಸಿದ ಸಂಶೋಧನೆಗಳು ಅತಿ ಮುಖ್ಯವಾದವು. ಅಲ್ಲದೆ ಇವರು ಕೃತಕ ಫಲವಂತಿಕೆಯ ಕ್ರಿಯೆಯನ್ನೂ ಜೀವಿಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದರು. ಭ್ರೂಣಶಾಸ್ತ್ರ ಸಂಶೋಧನೆಗಳಿಗೆ ಹೊಸ ರೂಪವನ್ನು ಕೊಟ್ಟ ಒಂದು ಹೊಸ ತತ್ವವೆಂದರೆ ಬೆಳವಣಿಗೆಯ ಯಾಂತ್ರಿಕ ನಿಯಮಬದ್ಧತೆಯ ತತ್ವ. ಇದರಂತೆ ಭ್ರೂಣದ ಬೆಳವಣಿಗೆಯನ್ನು ಪ್ರಯೋಗಕ್ಕೆ ಒಳಪಡಿಸಿ ಅದರ ಪ್ರತಿಯೊಂದು ಹಂತವನ್ನೂ ವೈಜ್ಞಾನಿಕ ಯಂತ್ರೋಪಕರಣಗಳ ಸಹಾಯದಿಂದ ವಿವರವಾಗಿ ಪರೀಕ್ಷಿಸಿ ನೋಡಬಹುದು. ಭ್ರೂಣದ ಬೆಳವಣಿಗೆ ಯಾಂತ್ರಿಕವಾಗಿ ನಿಯಮಬಧ್ಧವಾಗಿ ಸಾಗುವ ಕ್ರಿಯೆ. ಈ ಕ್ರಿಯೆಯನ್ನು ಯಾಂತ್ರಿಕ ತತ್ವಗಳ ಮೂಲಕ ವಿವರಿಸಬಹುದು. ಭ್ರೂಣದ ಬೆಳವಣಿಗೆಯ ಯಾವುದಾದರೊಂದು ಹಂತ ಮುಂದಿನ ಇನ್ನೊಂದು ಅನುಕ್ರಮ ಹಂತಕ್ಕೆ ನಾಂದಿ. ಆ ಇನ್ನೊಂದು ಹಂತ ಭ್ರೂಣದ ವಿಭೇಧೀಕರಣದ ಮತ್ತೊಂದು ಹಂತದ ಹಾದಿಯಾಗುತ್ತದೆ. ಈ ರೀತಿ ಭ್ರೂಣದ ಬೆಳವಣಿಗೆ ಯಾಂತ್ರಿಕವಾಗಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುತ್ತದೆ. ಇದನ್ನೇ ಬೆಳವಣಿಗೆಯ ಯಾಂತ್ರಿಕತೆಯೆನ್ನುವುದು. ಅಂಡಾಣು ವೀರ್ಯಾಣುವಿನೊಡನೆ ಮಿಲನವಾಗಿ ಯಾಂತ್ರಿಕವಾಗಿ ಬದಲಾಗುತ್ತಾ ಭ್ರೂಣವಾಗಿ ಬೆಳೆದು ಮುಂದೆ ಪ್ರಬುದ್ಧಜೀವಿಯಾಗಿ ವಿಕಸಿಸಿ ಮತ್ತೆ ತನ್ನ ಅಂಗಾಂಗಗಳಲ್ಲಿ ಲೈಂಗಿಕ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಈ ಲೈಂಗಿಕಕೋಶಗಳು ಮತ್ತೆ ಮಿಲನಗೊಂಡು ತಮ್ಮ ಪೀಳಿಗೆಯನ್ನು ಮುಂದುವರಿಸುತ್ತವೆ. ಇದು ನಿರಂತರ. ಭ್ರೂಣಶಾಸ್ತ್ರದ ವಿಕಾಸಕ್ಕೆ ಆಗಸ್ಟ್ ವೀಸ್ ಮನ್ ನ ಕೊಡುಗೆಯೂ ಸಹಾಯ ಮಾಡಿದೆ. ಈತನು ಕೀಟಗಳ ಹಾಗೂ ಇತರ ಅಕಶೇರುಕಗಳ ಅಂಡಾಣುಗಳು ಬೆಳೆಯುವ ವಿಧಾನವನ್ನು ಅಭ್ಯಾಸ ಮಾಡಿದನು. ಈ ಜೀವಿಗಳ ಫಲಿತ ಅಂಡಾಣು ವಿಭಜನೆ ಹೊಂದುತ್ತಾ ಹೋಗುವುದನ್ನು ಪರಿಶೀಲಿಸಿದನು. ಆ ವಿಭಜನೆಯಿಂದಾಗಿ ಜೀವಕೋಶಗಳ ಸಂತತಿಯಲ್ಲಿ ಕೆಲವೇ ಜೀವಕೋಶಗಳು ಪ್ರಬುದ್ಧಜೀವಿಯ ಅಂಡಾಣು ಜನಾಂಗಗಳನ್ನು ಕೊಡುತ್ತವೆಯೆಂಬುದನ್ನು ಕಂಡುಕೊಂಡನು. ಉದಾಹರಣೆಗೆ ಜಂತುಹುಳುಗಳಲ್ಲಿ(ಆಸ್ಕಾರಿಸ್) ಎರಡನೇ ಕ್ಲೀವೇಜ್ ಕ್ರಿಯೆಯಿಂದ ಉತ್ಪತ್ತಿಯಾದ ಒಂದು ಕೋಶ ಮತ್ತೆಲ್ಲ ಕೋಶಗಳಿಂದ ಸ್ವಲ್ಪ ಸರಿದು ಮುಂದೆ ಆ ಜೀವಿಯ ಜನನಾಂಗವಾಗುವುದನ್ನು ವಿವರಿಸಿದನು. ಈ ಜನನಾಂಗ ವೃಷಣವಾಗಬಹುದು ಅಥವಾ ಅಂಡಾಶಯವಾಗಬಹುದು. ಇನ್ನುಳಿದ ಜೀವಕೋಶಗಳು ಪ್ರಾಣಿಯ ಶರೀರರಚನೆಗೆ ಸಹಾಯಮಾಡುತ್ತವೆಯೇ ವಿನಾ ಸಂತಾನೋತ್ಪತ್ತಿ ಕ್ರಿಯೆ ಅವುಗಳಿಂದ ಸಾಧ್ಯವಿಲ್ಲ. ಆದುದರಿಂದ ಈತ ಜೀವಿಯ ಶರೀರದಲ್ಲಿ ಎರಡು ಅಂಗಗಳನ್ನು ಗುರುತಿಸಿದನು. ಮೊದಲನೆಯದು ಸಂತಾನೋತ್ಪತ್ತಿಯಲ್ಲಿ ಭಾಗವಹಿಸುವ ಭಾಗ; ಎರಡನೆಯದು, ಈ ಸಂತಾನೋತ್ಪತ್ತಿ ವಿಭಾಗಕ್ಕೆ ಸಹಾಯ ಮಾಡುವ ಮಿಕ್ಕ ಶರೀರಭಾಗ. ಅವನು, ಸಂತಾನೋತ್ಪತ್ತಿ ಮಾಡುವ ಭಾಗ ಶರೀರದ ಇತರ ಭಾಗದ ಉಪಜೀವಿ ಇದ್ದಂತೆ ಎಂದು ಪ್ರತಿಪಾದಿಸಿದನು. ಆದ್ದರಿಂದ ವೀಸ್ ಮನ್, ಜೀವಿಗಳು ಅಮರವಲ್ಲದಿದ್ದರೂ ಆ ಸಂತಾನೋತ್ಪತ್ತಿಯ ಭಾಗ ಅಮರವಾದದ್ದೆಂದು ಸಾರಿದ. ಅಕಶೇರುಕ ಭ್ರೂಣಶಾಸ್ತ್ರದ ಮುನ್ನಡೆಗೆ ಮೊಸಾಯಿಕ್ ತತ್ವವೂ ಸಹಾಯಮಾಡಿದೆ. ಹಿಸ್ ಪ್ರತಿಪಾದಿಸಿದ ಈ ತತ್ವವನ್ನು ವಿಲ್ ಹೆಲ್ಮ್ ರೂಕ್ಸ್ ಎತ್ತಿ ಹಿಡಿದ. ಬೆಳವಣಿಗೆಯ ಪೂರ್ವಾವಸ್ಥೆಯಲ್ಲಿರುವ ಅಂಡಾಣುವಿನೊಳಗಿರುವ ಕೋಶರಸದಲ್ಲಿ ವಿವಿಧ ಭಾಗಗಳು ಪದರಗಳಂತಿದ್ದು ಮುಂದೆ ಆಯಾ ಅಂಗಗಳನ್ನು ಕೊಡುತ್ತವೆ ಎಂಬುದು ಈ ಮೊಸಾಯಿಕ್ ತತ್ವದ ತಿರುಳು. ಅಂಡಾಣು ಇನ್ನೂ ಅಂಡಾಶಯದೊಳಗಿರುವಾಗಲೇ ಅದರಲ್ಲಿ ಕೆಲವು ವಿಶಿಷ್ಟ ಭಾಗಗಳು ಉದಯವಾಗುತ್ತವೆಯೆಂದು ರೂಕ್ಸ್ ತಿಳಿಸಿದ. ಈ ತತ್ವವನ್ನು ಊರ್ಜಿತಗೊಳಿಸುವುದಕ್ಕಾಗಿ ಕಶೇರುಕ ಹಾಗೂ ಅಕಶೇರುಕ ಅಂಡಾಣುಗಳನ್ನು ಅನೇಕ ವಿಧವಾದ ಪ್ರಯೋಗಗಳಿಗೆ ಒಳಪಡಿಸಿ ಅದರ ಬೆಳವಣಿಗೆಯನ್ನು ಪ್ರತಿಹಂತದಲ್ಲಿಯೂ ಪರಿಶೀಲಿಸಿದ. ರೂಕ್ಸ್ ಮುಖ್ಯವಾಗಿ ಕಪ್ಪೆಗಳ ಮೊಟ್ಟೆಗಳ ಮೇಲೆ ಪ್ರಯೋಗಗಳನ್ನು ನಡೆಸಿದ. ನಿಶೇಚಿತ ಅಂಡಾಣುವಿನ ಪ್ರತಿ ಭಾಗವನ್ನೂ ಭೌತಿಕವಾಗಿ ಹಾಗೂ ರಾಸಾಯನಿಕವಾಗಿ ವಿಶ್ಲೇಶಿಸಿ ಅದರಲ್ಲಿ ಪ್ರಾಣಿವಲಯ ಹಾಗೂ ಆಹಾರ ವಲಯವನ್ನು ಗುರುತಿಸಿದ. ನಿಶೇಚಿತ ಅಂಡಾಣುವಿನಿಂದ ಉತ್ಪತ್ತಿಯಾದ ಜೀವಕೋಶಗಳ ಜೀವರಸವನ್ನೂ, ಜೀವಕೋಶಗಳ ಭಾಗಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಕೋಶ ವಿಭಜನೆಯ ಕ್ರಿಯೆ ಮುಂದುವರಿದಂತೆ ಹಿಂದಿದ್ದ ಕೋಶಗಳಿಂದ ಉದಯವಾದ ಹೊಸ ಕೋಶಗಳು ಚಿಕ್ಕದಾಗಿರುವುದನ್ನು ಹಾಗೂ ಅವುಗಳಲ್ಲಿ ಕೆಲವು ನರಮಂಡಲ ಕೆಲವು ಮಾಂಸಖಂಡ, ಇತ್ಯಾದಿ ಭಾಗಗಳಾಗಿ ಬೆಳೆಯುವುದನ್ನು ಕಂಡುಕೊಂಡ. ಈ ರೀತಿಯ ಸಮಗ್ರ ಪರಿಶೀಲನೆಯನ್ನು ಹಿಮ್ಮುಖವಾಗಿ ಕೊಂಡೊಯ್ದು ಅಂಡಾಣುವಿನೊಳಗಿನ ಕೋಶರಸದ ವಿವಿಧ ಭಾಗಗಳಿಗೆ ಸಂಬಂಧ ಕಲ್ಪಿಸಿದ. ಮೊಸಾಯಿಕ್ ತತ್ವವನ್ನು ಪರಿಶೀಲಿಸಲು ವಿವಿಧ ಪ್ರಭೇಧಗಳ ಜೀವಿಗಳ ಅಂಡಾಣುಗಳನ್ನು ಪ್ರಯೋಗಕ್ಕೊಳಪಡಿಸಲಾಯಿತು. ಕೆಲವು ಜೀವಿಗಳ ಅಂಡಾಣು ಮೊಸಾಯಿಕ್ ತತ್ವವನ್ನು ಪರಿಪಾಲಿಸಿದರೆ ಮತ್ತೆ ಕೆಲವು ಜೀವಿಗಳ ಅಂಡಾಣುಗಳು ಈ ತತ್ವಕ್ಕೆ ಹೊರತಾಗಿದ್ದವು. ಆದುದರಿಂದ ಮೊಸಾಯಿಕ್ ತತ್ವವನ್ನು ಸಂಪೂರ್ಣವಾಗಿ ಎಲ್ಲಾ ಜೀವಿಗಳಿಗೂ ಅನ್ವಯಿಸುವುದು ಕಷ್ಟ. ಬಹುತೇಕ ಅಕಶೇರುಕ ಜೀವಿಗಳು ಮೊಸಾಯಿಕ್ ಅಂಡಾಣುವನ್ನು ಹೊಂದಿವೆ. ಮತ್ತೆ ಕೆಲವೇ ಅಕಶೇರುಕಗಳು ಇದಕ್ಕೆ ವಿರುದ್ಧವಾದ ರೀತಿಯ ಅಂಡಾಣುಗಳನ್ನು ಹೊಂದಿವೆ. ಈ ರೀತಿಯ ಮೊಟ್ಟೆಗಳನ್ನು ವಿಧಿಬದ್ಧ ಅಂಡಾಣುಗಳು ಎಂದು ಹೇಳುತ್ತಾರೆ. ವಿಧಿಬದ್ಧ ಅಂಡಾಣುಗಳ ಕೋಶರಸ ಮೊಸಾಯಿಕ್ ಅಂಡಾಣುಗಳ ಕೋಶರಸದಂತೆ ನಾನಾ ವಲಯಗಳನ್ನು ಹೊಂದಿಲ್ಲ. ಇಲ್ಲಿ ವಿಭಜನೆಯಾದ ನಿಶೇಚಿತ ಅಂಡಾಣುವಿನ ಕೋಶಗಳನ್ನು ಬೇರ್ಪಡಿಸಿ ಬೆಳೆಸಿದರೆ ಅವು ಎರಡು ಲಾರ್ವಾಗಳಾಗಿ ಬೆಳೆಯುವುದು ಕಂಡುಬಂತು. ಇನ್ನೂ ಮುಂದುವರೆದ ಪ್ರಯೋಗಗಳು ಜೈಗೋಟ್ ವಿಭಜನೆಯಿಂದ ೪ ಜೀವಕೋಶಗಳು ಹುಟ್ಟಿಬಂದ ಅವಸ್ಥೆಯಲ್ಲಿ ಅವುಗಳನ್ನು ಬೇರ್ಪಡಿಸಿ ೪ ಲಾರ್ವಾಗಳನ್ನು ಬೆಳೆಸಿರುವುದೂ ಉಂಟು. ಅಂದಮೇಲೆ ಈ ನಿಶೇಚಿತ ಅಂಡಾಣುಗಳ ಕೋಶರಸದಲ್ಲಿ ಜೈಗೋಟ್ ವಿಭಜನೆಯ ಪ್ರಥಮ ಹಂತದ ಪ್ರತಿಯೊಂದು ಕೋಶಗಳಲ್ಲಿಯೂ ಸಂಪೂರ್ಣ ಜೀವಿಯಾಗಲು ಬೇಕಾದ ಪರಿಕರಗಳೆಲ್ಲವೂ ಕಂಡುಬರುತ್ತವೆ. ಆದರೆ ಮೊಸಾಯಿಕ್ ಅಂಡಾಣುಗಳಲ್ಲಿ ಈ ರೀತಿ ಇಲ್ಲ. ಮೃದ್ವಂಗಿಗಳ ಹಾಗೂ ವಲಯವಂತಗಳ ಅಂಡಾಣುಗಳು ಮೊಸಾಯಿಕ್ ಅಂಡಾಣುಗಳಿಗೆ ಉತ್ತಮ ಉದಾಹರಣೆ. ಕಠಿಣಚರ್ಮಿಗಳಾದ ನಕ್ಷತ್ರಮೀನುಗಳು, ಕಡಲ ಕುಡಿಕೆಗಳು ವಿಧಿಬದ್ಧ ಮೊಟ್ಟೆಗಳನ್ನು ಹೊಂದಿವೆ. ಕಾನ್ ಕ್ಲಿನ್ ಈ ಅಂಡಾಣುಗಳ ಜೈಗೋಟ್ ಅವಸ್ಥೆಯಲ್ಲಿ ನಡೆಯುವ ವಿಭಜನೆಯನ್ನು ನಿರ್ದಿಷ್ಟ ಹಾಗೂ ಅನಿರ್ದಿಷ್ಟ ಎಂದು ಎರಡು ರೀತಿಯಾಗಿ ವಿಂಗಡಿಸಿದ್ದಾನೆ. ಇಷ್ಟೆಲ್ಲಾ ಪ್ರಯೋಗಗಳು ನಡೆದಿದ್ದರೂ ರೂಕ್ಸ್ ಪ್ರತಿಪಾದಿಸಿದ ಮೊಸಾಯಿಕ್ ತತ್ವ ಇನ್ನೂ ಜೀವಂತವಾಗಿ ಉಳಿದಿದೆ. ಈ ತತ್ವಕ್ಕೆ ಪ್ರಯೋಗಗಳ ಸಾಕ್ಷ್ಯಾಧಾರ ಹೆಚ್ಚಾಗಿ ಅಕಶೇರುಕ ಜೀವಿಗಳ ಮೊಟ್ಟೆಗಳಲ್ಲಿ ಕಂಡುಬಂದಿದೆ. ಮೃದ್ವಂಗಿಗಳ ಮತ್ತು ವಲಯವಂತಗಳ ಮೊಟ್ಟೆ ಬೆಳೆಯುವಾಗ ಕಂಡುಬರುವ ವೈಶಿಷ್ಟ್ಯಗಳನ್ನು, ಗರ್ಭಕಟ್ಟಿದ ಮೊಟ್ಟೆಯಿಂದ ಉದಯವಾದ ಪ್ರತಿ ಜೀವಕೋಶಗಳ ಬೆಳವಣಿಗೆಯನ್ನು, ಅವು ಮುಂದೆ ಕೊಡುವ ಅಂಗಗಳನ್ನು ನಿರ್ದಿಷ್ಟವಾಗಿ ಗುರುತಿಸಲಾಗಿದೆ. ಇದಕ್ಕೆ ಕೋಶವಂಶಾವಳಿ ಎನ್ನುವರು. ಈ ಬೆಳವಣಿಗೆಯ ಹಂತಗಳ ಅಧ್ಯಯನದಿಂದ ಅಕಶೇರುಕ ಭ್ರೂಣಶಾಸ್ತ್ರ ಬಹುವಾಗಿ ಪುಷ್ಟಿಗೊಂಡಿತು. ನಿಶೇಚಿತ ಅಂಡಾಣುವಿನ ವಿಭಜನೆಯಿಂದ ಹುಟ್ಟಿಬರುವ ಬ್ಲಾಸ್ಟುಲ ಅವಸ್ಥೆಯಲ್ಲಿ ಬರುವ ಜೀವಕೋಶಗಳ ವಿವಿಧ ಭಾಗಗಳು ಮುಂದೆ ಬೆಳೆಯುವ ಭ್ರೂಣ ಇಂಥ ಅಂಗವನ್ನೇ ಕೊಡುತ್ತದೆ ಎಂಬುದನ್ನು ಪತ್ತೆಹಚ್ಚುವುದು ಈಗ ಸಾಧ್ಯವಾಗಿದೆ. ಜೈಗೋಟ್ ವಿಭಜನೆಯಿಂದ ಉತ್ಪತ್ತಿಯಾಗುವ ಜೀವಕೋಶಗಳ ಪ್ರಾಥಮಿಕ ವಿಭಜನಾಹಂತವನ್ನು ಗುರುತಿಸಿ ಹಾಗೂ ಪ್ರಾಥಮಿಕ ಹಂತದಲ್ಲಿದ್ದ ಜೀವಕೋಶಗಳನ್ನು ಗುರುತಿಟ್ಟುಕೊಂಡು ಅವುಗಳ ಬೆಳವಣಿಗೆಯನ್ನು ನೇರವಾಗಿ ಜೀವಿ ರೂಪುಗೊಳ್ಳುವವರೆಗೂ ಪರಿಶೀಲಿಸಿ ಅದು ಕೊನೆಯ ಘಟ್ಟದಲ್ಲಿ ಏನಾಗುತ್ತದೆಂಬುದನ್ನು ಅರಿಯುವುದೇ ಕೋಶವಂಶಾವಳಿಯ ಅಭ್ಯಾಸ. ಇದು ಭ್ರೂಣಶಾಸ್ತ್ರಕ್ಕೆ ಮಾತ್ರ ಸೀಮಿತವಲ್ಲ. ಜೀವಕೋಶಶಾಸ್ತ್ರಕ್ಕೂ ಸೇರಿದೆ. ಈ ಅಭ್ಯಾಸದಿಂದಾಗಿ ರೂಕ್ಸ್ ನ ಮೊಸಾಯಿಕ್ ತತ್ವಕ್ಕೆ ಹೆಚ್ಚಿನ ವೈಜ್ಞಾನಿಕ ಬೆಲೆ ದೊರಕಿತು. ಪ್ರಾಯೋಗಿಕ ಬೆಳವಣಿಗೆಯ ಹಂತದಲ್ಲಿ ಈ ಕೋಶವಂಶಾವಳಿಯನ್ನು ಗುರುತಿಸಲಾಯಿತು. ಅಮೇರಿಕದ ಜೀವಕೋಶಶಾಸ್ತ್ರಜ್ಞರಾದ ಕಾಕ್ಲಿನ್, ಹ್ಯಾರಿಸನ್, ರೋಯೆಬ್ ಬ್ರಾಷೆ, ಹೆರ್ಟ್ ವಿಗ್, ವೀಸ್ ಮನ್ ಮುಂತಾದವರು ರೂಕ್ಸ್ ತತ್ವವನ್ನು ಒಪ್ಪಿಕೊಂಡರು. ಇವರು ಸಾಮಾನ್ಯವಾಗಿ ಅಕಶೇರುಕ ಗುಂಪಿನ ಎಲ್ಲಾ ವಂಶದ ಪ್ರಭೇಧಗಳ ಬೆಳವಣಿಗೆಯಲ್ಲೂ ಕೋಶವಂಶಾವಳಿಯನ್ನು ಗುರುತಿಸಬಹುದು ಎಂಬ ತೀರ್ಮಾನಕ್ಕೆ ಬಂದರು. ಕೆಲವು ಕಶೇರುಕಗಳೂ ಕೋಶವಂಶಾವಳಿಯನ್ನು ಹೊಂದಿವೆ ಎಂಬುದಾಗಿಯೂ ತಿಳಿಸಿದರು.ಕೋಶವಂಶಾವಳಿಯನ್ನು ಸಂಪೂರ್ಣವಾಗಿ ಅರಿಯಬೇಕಾದರೆ ಮೊಟ್ಟೆಯೊಳಗೆ ಇರುವ ವಿವಿಧ ವಲಯಗಳನ್ನು ಗುರುತಿಸಿಕೊಳ್ಳಬೇಕು. ವಿವಿಧ ವಲಯಗಳಲ್ಲಿರುವ ರಾಸಾಯನಿಕ ವಸ್ತುಗಳನ್ನು ಅರ್ಥಮಾಡಿಕೊಳ್ಳಬೇಕು. ಯುಗ್ಮಜದ ವಿಭಜನೆಯಿಂದಾಗಿ ಹುಟ್ಟಿಬರುವ ಬ್ಲಾಸ್ಟುಲ ಹಾಗೂ ಗ್ಲಾಸ್ಟುಲ ಅವಸ್ಥೆಗಳಲ್ಲಿ ಮೊಟ್ಟೆಯ ವಿವಿಧವಲಯಗಳಿಂದ ಉಂಟಾಗುವ ಕೋಶಗಳ ಭಾಗಗಳನ್ನು ಗುರುತಿಸಿಕೊಳ್ಳಬೇಕು. ಈ ರೀತಿಯ ನಿರ್ದಿಷ್ಟ ಭಾಗಗಳ ಗುರುತಿನಿಂದಾಗಿ ಈ ಭಾಗಗಳಲ್ಲಿರುವ ಜೀವಕೋಶಗಳು ಮುಂದೆ ಯಾವ ಅಂಗಕಟ್ಟನ್ನು ಅಥವಾ ಅಂಗವನ್ನು ಕೊಡುತ್ತವೆ ಎಂಬುದನ್ನು ಪ್ರಯೋಗಗಳ ಮೂಲಕ ಅರಿಯುತ್ತ ಆ ಕೋಶಸಂತತಿಯ ಗತಿಯನ್ನೇ ಅನುಕ್ರಮವಾಗಿ ಪತ್ತೆ ಹಚ್ಚಿದಲ್ಲಿ ಕೊನೆಯ ಹಂತದಲ್ಲಿ ಅದು ಯಾವ ಅಂಗವನ್ನು ಕೊಡುತ್ತದೆಂದು ಗುರುತಿಸಬಹುದು. ಪ್ರಾಯೋಗಿಕ ಭ್ರೂಣಶಾಸ್ತ್ರದಲ್ಲಿ ಇಂತಹ ಅಧ್ಯಯನಗಳು ಹೊಸಬೆಳಕನ್ನು ಚೆಲ್ಲಿವೆ. ಇಂದು ಯಾವುದೇ ಅಕಶೇರುಕದ ಕೋಶವಂಶಾವಳಿಯನ್ನಾದರೂ ಅರ್ಥಮಾಡಿಕೊಳ್ಳಬಹುದು. ಪಾಲಿಗಾರ್ಡಿಯಸ್, ಪಟೆಲ್ಲಾ ಮುಂತಾದ ಪ್ರಭೇಧಗಳಲ್ಲಿ ಇದನ್ನು ಪೂರ್ಣವಾಗಿ ಅಧ್ಯಯನಮಾಡಲಾಗಿದೆ. "https://kn.wikisource.org/w/index.php?title=ಪುಟ:Mysore-University-Encyclopaedia-Vol-1-Part-1.pdf/೧೩೨&oldid=153243" ಇಂದ ಪಡೆಯಲ್ಪಟ್ಟಿದೆ
2021/01/27 11:22:42
https://kn.wikisource.org/wiki/%E0%B2%AA%E0%B3%81%E0%B2%9F:Mysore-University-Encyclopaedia-Vol-1-Part-1.pdf/%E0%B3%A7%E0%B3%A9%E0%B3%A8
mC4
ಆಲಿಯಾ ಹುಟ್ಟುಹಬ್ಬಕ್ಕೆ ರಣಬೀರ್ ಸರ್ಪ್ರೈಸ್ ಏನು?? - ಆಲಿಯಾ ಹುಟ್ಟುಹಬ್ಬಕ್ಕೆ ರಣಬೀರ್ ಸರ್ಪ್ರೈಸ್ ಏನು?? ಬಾಲಿವುಡ್ ನಲ್ಲಿ ಹೊಸ ಜೋಡಿಯೊಂದು ಸುದ್ದಿ ಮಾಡ್ತಿದೆ. ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಹೆಸರು ಕೇಳಿ ಬಂದಿದೆ. ದೀಪಿಕಾ, ಕತ್ರಿನಾ ನಂತ್ರ ಈಗ ಆಲಿಯಾ ಹೆಸರು ರಣಬೀರ್ ಜೊತೆ ಸೇರಿದೆ. ಸದ್ಯ ಈ ಜೋಡಿ ಬ್ರಹ್ಮಸ್ತ್ರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದೆ. ರಣಬೀರ್ ಹಾಗೂ ಚಿತ್ರ ನಿರ್ದೇಶಕ ಅಯಾನ್, ಆಲಿಯಾಗೆ ದೊಡ್ಡ ಸರ್ಪ್ರೈಸ್ ನೀಡಲಿದ್ದಾರಂತೆ. ದಿನಪೂರ್ತಿ ಶೂಟಿಂಗ್ ಮಾಡುವ ಆಲಿಯಾ ಸಂಜೆ ಚಿತ್ರ ತಂಡದ ಜೊತೆ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾಳಂತೆ. ಈ ಬಾರಿ ಮನೆಯಿಂದ ದೂರವಿರುವ ಕಾರಣ ಆಕೆ ಹುಟ್ಟಹಬ್ಬವನ್ನು ವಿಶೇಷವಾಗಿ ಆಚರಿಸಲು ರಣಬೀರ್ ಮುಂದಾಗಿದ್ದಾನೆ. ಮಾರ್ಚ್ 15ರಂದು ಆಲಿಯಾ ಭಟ್ 25ನೇ ವಸಂತಕ್ಕೆ ಕಾಲಿಡ್ತಿದ್ದಾಳೆ. ಆಕೆ ಹುಟ್ಟುಹಬ್ಬಕ್ಕೆ ಯಾರು ಏನು ತಯಾರಿ ಮಾಡಿದ್ದಾರೋ ಗೊತ್ತಿಲ್ಲ. ರಣಬೀರ್ ಕಪೂರ್ ಮಾತ್ರ ಭರ್ಜರಿ ತಯಾರಿ ನಡೆಸಿದ್ದಾನಂತೆ. ಬಲ್ಗೇರಿಯಾದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಸೆಟ್ ನಲ್ಲಿಯೇ ಆಲಿಯಾ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾಳೆ.
2021/09/28 14:33:14
https://suddisamachaara.com/2018/03/14/aliya-birthday/
mC4
ಪಠಾಣ್‌ ಕೋಟ್ ದಾಳಿ : ತನಿಖೆಗೆ ಬಂತು ಪಾಕ್‌ ತಂಡ | Pathankot probe : Pak's JIT to get NIA briefing today - Kannada Oneindia » ಪಠಾಣ್‌ ಕೋಟ್ ದಾಳಿ : ತನಿಖೆಗೆ ಬಂತು ಪಾಕ್‌ ತಂಡ Updated: Monday, March 28, 2016, 10:16 [IST] ಬೆಂಗಳೂರು, ಮಾರ್ಚ್ 28 : ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆ ನಡೆಸಲು ಆಗಮಿಸಿರುವ ಪಾಕ್‌ ತಂಡ ಇಂದು ಎನ್‌ಐಎ ಅಧಿಕಾರಿಗಳನ್ನು ಭೇಟಿ ಮಾಡಲಿದೆ. ತನಿಖಾ ತಂಡ ಪಠಾಣ್‌ ಕೋಟ್‌ಗೆ ಭೇಟಿ ನೀಡಲಿದ್ದು, ನಿಗದಿತ ಪ್ರದೇಶಗಳ ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ. ಐವರು ಸದಸ್ಯರ ಪಾಕಿಸ್ತಾನದ ತನಿಖಾ ತಂಡ (ಜೆಐಟಿ) ಭಾನುವಾರ ನವದೆಹಲಿಗೆ ಆಗಮಿಸಿದೆ. ತನಿಖಾ ತಂಡಕ್ಕೆ 7 ದಿನಗಳ ವೀಸಾ ನೀಡಲಾಗಿದ್ದು, ಅಷ್ಟರೊಳಗೆ ಮಾಹಿತಿ ಸಂಗ್ರಹಣೆ ಮಾಡಿಕೊಂಡು, ತಂಡ ಪಾಕ್‌ಗೆ ವಾಪಸ್ ಆಗಲಿದೆ. [ಪಠಾಣ್ ಕೋಟ್ ದಾಳಿ : ಉಗ್ರರ ಚಿತ್ರ ಬಿಡುಗಡೆ] ಸೋಮವಾರ ತಂಡ ದೆಹಲಿಯಲ್ಲಿರುವ ಎನ್‌ಐಎ ಕಚೇರಿಗೆ ಭೇಟಿ ನೀಡಲಿದೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸುತ್ತಿದ್ದು, ಪಾಕ್ ತಂಡಕ್ಕೆ ಇದುವರೆಗಿನ ತನಿಖೆಯ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ನೀಡಲಿದ್ದಾರೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?] ಪಠಾಣ್ ಕೋಟ್‌ಗೆ ಭೇಟಿ : ಪಾಕ್ ತನಿಖಾ ತಂಡ ಎನ್‌ಐಎ ಕಚೇರಿಗೆ ಭೇಟಿ ನೀಡಿದ ಬಳಿಕ ಪಠಾಣ್ ಕೋಟ್ ವಾಯುನೆಲೆಗೆ ಭೇಟಿ ನೀಡಲಿದೆ. ವಾಯುನೆಲೆಯ ನಿಗದಿತ ಪ್ರದೇಶಗಳಿಗೆ ಭೇಟಿ ನೀಡಲು ಮಾತ್ರ ತನಿಖಾ ತಂಡಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಭಾರತ ಸ್ಪಷ್ಟಪಡಿಸಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್] ಪಾಕ್ ತನಿಖಾ ತಂಡದ ಜೊತೆ ಎನ್‌ಐಎ ಅಧಿಕಾರಿಗಳ ತಂಡವೂ ಪಠಾಣ್‌ ಕೋಟ್‌ ವಾಯುನೆಲೆಗೆ ಭೇಟಿ ನೀಡಲಿದೆ. ದಾಳಿ ನಡೆದ ಸ್ಥಳಗಳ ಪರಿಶೀಲನೆಗೆ ಮಾತ್ರ ಪಾಕ್ ತಂಡಕ್ಕೆ ಅನುಮತಿ ನೀಡಲಾಗಿದೆ. ಭದ್ರತೆಯ ಕಾರಣದಿಂದಾಗಿ ವಾಯುನೆಲೆಯ ಸೂಕ್ಷ್ಮ ಪ್ರದೇಶಗಳನ್ನು ಪರಿಶೀಲನೆ ನಡೆಸಲು ಅನುಮತಿ ಕೊಟ್ಟಿಲ್ಲ. ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಿಂದ ಕೇವಲ 40 ಕಿ.ಮೀ.ದೂರದಲ್ಲಿರುವ ಪಠಾಣ್ ಕೋಟ್ ವಾಯುನೆಲೆ, ದೇಶದ ಮಹತ್ವದ ಸೇನಾ ನೆಲೆಯಾಗಿದೆ. ಸುಮಾರು 75 ಎಕರೆ ಪ್ರದೇಶದಲ್ಲಿರುವ ವಾಯುನೆಲೆ ಮೇಲೆ ಪಾಕಿಸ್ತಾನದ ಕಣ್ಣಿದೆ. 1965, 1971ರ ಭಾರತ-ಪಾಕ್ ನಡುವಿನ ಯುದ್ಧದ ಸಮಯದಲ್ಲಿಯೂ ಪಾಕಿಸ್ತಾನ ಈ ವಾಯುನೆಲೆ ಮೇಲೆ ದಾಳಿ ಮಾಡಿತ್ತು. ಆದ್ದರಿಂದ, ಎಲ್ಲಾ ಪ್ರದೇಶಗಳ ಭೇಟಿಗೆ ಅನುಮತಿ ಕೊಟ್ಟಿಲ್ಲ. Read in English: Pak's JIT to get NIA briefing today A team of the National Investigation Agency will brief the members of the Joint Investigation Team from Pakistan about the Pathankot attack probe. The JIT which arrived in New Delhi on Sunday with a 7 day visa. The JIT will visit the Pathankot air base where it has been granted restricted access.
2017/10/21 13:57:02
https://kannada.oneindia.com/news/india/pathankot-probe-pak-s-jit-to-get-nia-briefing-today-102167.html
mC4
ಜಿಲ್ಲೆಯ ಸರ್ಕಾರಿ-ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ: ಜಿಲ್ಲಾಧಿಕಾರಿ | Udayavani – ಉದಯವಾಣಿ Monday, 19 Apr 2021 | UPDATED: 12:35 PM IST Team Udayavani, Mar 2, 2021, 4:07 PM IST ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ 3ನೇ ಹಂತದ ಕೋವಿಡ್‌-19 ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್‌.ಲತಾ ಸೋಮವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ 60 ವರ್ಷದ ಮೇಲ್ಪಟ್ಟ ವಯೋ ವೃದ್ಧರೊಬ್ಬರಿಗೆ ಲಸಿಕೆ ಹಾಕಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, 3ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು, 45 ರಿಂದ 59 ವರ್ಷದ ಒಳಗಿನ ಸಹ ಅಸ್ವಸ್ಥತೆ (ಕೋಮೊರ್ಬಿಡಿಟೀಸ್‌) ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತದೆ. ನಾಗರಿಕ ಕೇಂದ್ರೀಕತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಗುಂಪಿನವರಲ್ಲಿ, ಮೊದಲನೇ ಮತ್ತು ಎರಡನೇ ಹಂತದ ಲಸಿಕಾ ಕರಣದಲ್ಲಿ ಬಿಟ್ಟು ಹೋದ ಅಥವಾ ಲಸಿಕೆಪಡೆಯದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಸಹ ಈ ಹಂತದಲ್ಲಿ ಸೂಚಿತ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌-19 ಲಸಿಕೆ ಪಡೆಯಬಹುದು ಎಂದರು. ಸರ್ಕಾರಿ 5, ಖಾಸಗಿ ಆಸ್ಪತ್ರೆ 2: ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಕಬಾಡೆ ಮಾತನಾಡಿ, ನಗರದ ಸರಕಾರಿ ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ಜಿಲ್ಲೆಯ ಐದು ಸಾರ್ವಜನಿಕ ಆಸ್ಪತ್ರೆ ಹಾಗೂ ಎರಡು ಖಾಸಗಿ ಆಸ್ಪತ್ರೆಯಲ್ಲಿ ಮೂರನೇ ಹಂತದ ಕೋವಿಡ್‌ಲಸಿಕಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ಚಿಕ್ಕಬಳ್ಳಾಪುರದ ನಗರದಲ್ಲಿರುವ ಜಿಲ್ಲಾಸ್ಪತ್ರೆ,ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ ಮತ್ತು ಶಿಡ್ಲಘಟ್ಟದಲ್ಲಿರುವ ಸಾರ್ವಜನಿಕ ಆಸ್ಪತ್ರೆ, ಗೌರಿಬಿದನೂರಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರದಲ್ಲಿರುವ ಅನನ್ಯ ಸ್ಪೆಷಾಲಿಟಿ ಮತ್ತು ಚಿಂತಾಮಣಿಯಲ್ಲಿರುವ ಡೆಕ್ಕನ್‌ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಮಾರ್ಗಸೂಚಿ ಯಂತೆ ಮೂರನೇ ಹಂತದ ಕೋವಿಡ್‌ ಲಸಿಕೆ ಹಾಕಲಾಗುತ್ತಿದೆ. ದಾಖಲೆ ಜೊತೆ ಬನ್ನಿ: ಫಲಾನುಭವಿಗಳು ಲಸಿಕಾ ಕೇಂದ್ರಗಳಿಗೆ ಬರುವಾಗ ಆಧಾರ್‌ ಕಾರ್ಡ್‌, ಎಲೆಕ್ಷನ್‌ ಕಾರ್ಡ್‌, ಆನ್‌ಲೈನ್‌ನಲ್ಲಿ ನೋಂದಾ ಯಿಸುವಾಗ ಕೇಳುವ ಐಡಿ ಕಾರ್ಡ್‌, ವಯಸ್ಕರು,ವೈದ್ಯರಿಂದ ಪಡೆದ ದಾಖಲೆ ತರಬೇಕು. ಆರೋಗ್ಯಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ತಮ್ಮ ಎಂಪ್ಲಾಯೆಟ್‌ಸರ್ಟಿಫಿಕೇಟ್‌, ಅಫೀಷಿಯಲ್‌ ಐಡೆಂಟಿಟಿ ಕಾರ್ಡ್ ನೊಂದಿಗೆ ಬಂದು ಲಸಿಕೆ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದರು. 100 ರೂ. ಸರ್ವಿಸ್‌ ಚಾರ್ಜ್‌: ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‌ಅನ್ನು ರೂ.250ದರದಲ್ಲಿ ನೀಡಲಾಗತ್ತದೆ. ಇದರಲ್ಲಿ ರೂ. 100 ಸರ್ವಿಸ್‌ ಚಾರ್ಜ್‌ ಆಗಿರುತ್ತದೆ ಮತ್ತು ರೂ.150ಲಸಿಕೆ ಡೋಸ್‌ನ ದರವಾಗಿರುತ್ತದೆ. ಇದನ್ನುಭಾರತ ಸರ್ಕಾರದ ನಿದಿಷ್ಟ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸದ ದಿನಗಳಲ್ಲಿ ಲಸಿಕೆ ನೀಡಲಾಗುವುದು. ಮಾರ್ಚ್‌ 1 ರಿಂದ ಮಧ್ಯಾಹ್ನ12 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆಲಸಿಕೆ ನೀಡಲಾಗುವುದು. ಪ್ರತಿ ಲಸಿಕಾ ಕೇಂದ್ರಗಳಲ್ಲಿ200 ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಜಿಪಂ ಅಧ್ಯಕ್ಷಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ರಮೇಶ್‌, ಜಿಲ್ಲಾ ಕ್ಷಯರೋಗನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್‌ ಬಾಬು,ಚಿಕ್ಕಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿಡಾ.ಮಂಜುಳಾ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮತ್ತು ವೈದ್ಯರಿಂದ ಪ್ರಮಾಣ ಪತ್ರ ಪಡೆದ 45-59 ವರ್ಷದ ಸಹ ಅಸ್ವಸ್ಥತೆ ಹೊಂದಿರುವ ವಯಸ್ಸಿನವರಿಗೆ ಲಸಿಕೆ ನೀಡಲಾಗು ವುದು. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವಾರದಲ್ಲಿ 4 ದಿನಗಳಾದ ಸೋಮವಾರ, ಬುಧವಾರ,ಶುಕ್ರವಾರ ಮತ್ತು ಶನಿವಾರ ಲಸಿಕೆ ನೀಡಲಾಗುವುದು.– ಆರ್‌.ಲತಾ, ಜಿಲ್ಲಾಧಿಕಾರಿ
2021/04/19 07:07:57
https://www.udayavani.com/district-news/chikkaballapura-news/covid-vaccine-in-govt-and-private-hospital
mC4
ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ | ಪ್ರಜಾವಾಣಿ ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ ನ್ಯಾಷನಲ್‌ ಹೆರಾಲ್ಡ್‌ ಹಗರಣ: ಸಂಸತ್‌ನಲ್ಲಿ ಗದ್ದಲ, ನಡೆಯದ ಕಲಾಪ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮಂಗಳವಾರ ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದರು ಲೋಕಸಭೆಯಲ್ಲಿ ನಡೆಸಿದ ಗದ್ದಲದ ನೇತೃತ್ವ ವಹಿಸಿದ್ದರು. ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮಂಗಳವಾರ ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದರು ಲೋಕಸಭೆಯಲ್ಲಿ ನಡೆಸಿದ ಗದ್ದಲದ ನೇತೃತ್ವ ವಹಿಸಿದ್ದರು. 'ದ್ವೇಷದ ರಾಜಕಾರಣ' ನಡೆಸಲಾಗುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಸಂಸದರೂ ಪ್ರತಿಭಟನೆ ನಡೆಸಿದರು. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಕಾಂಗ್ರೆಸ್‌ ಗದ್ದಲದಿಂದಾಗಿ ಯಾವುದೇ ಕಲಾಪ ನಡೆಯಲಿಲ್ಲ. 'ನಿರಂಕುಶಾಧಿಕಾರಕ್ಕೆ ಧಿಕ್ಕಾರ, ದ್ವೇಷ ರಾಜಕಾರಣ ನಡೆಯದು' ಎಂದು ಘೋಷಣೆ ಕೂಗಿ ಕಾಂಗ್ರೆಸ್‌ ಸಂಸದರು ಗದ್ದಲ ಎಬ್ಬಿಸಿದರು. ಯಾವ ವಿಚಾರಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬುದನ್ನು ಕಾಂಗ್ರೆಸ್‌ನ ಯಾವುದೇ ಸಂಸದರು ಸ್ಪಷ್ಟಪಡಿಸಲಿಲ್ಲ. ಆದರೆ 'ನ್ಯಾಷನಲ್ ಹೆರಾಲ್ಡ್‌' ಪ್ರಕರಣದಲ್ಲಿ ಸೋನಿಯಾ ಮತ್ತು ಇತರ ಆರೋಪಿಗಳ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದ ಮರು ದಿನ ಈ ಗದ್ದಲ ನಡೆದಿದೆ. ಒಂದೇ ದಿನದಲ್ಲಿ ಕಾಂಗ್ರೆಸ್‌ ಸದಸ್ಯರು ಇಷ್ಟೊಂದು ಆಕ್ರೋಶಗೊಳ್ಳಲು ಕಾರಣವಾದ ಅಂಶವಾದರೂ ಏನು ಎಂದು ಪ್ರಶ್ನಿಸಿ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾಜೀವ್ ಪ್ರತಾಪ್‌ ರೂಡಿ ಕೆಣಕಿದರು. 'ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳಲು ದೇಶ ಬಯಸುತ್ತಿದೆ. ಸಮಸ್ಯೆ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಸಮಸ್ಯೆಯನ್ನು ಆಲಿಸಲು ನಾವು ಸಿದ್ಧರಿದ್ದೇವೆ. ಅವರವರ ಅಸನಗಳಿಗೆ ಹಿಂದಿರುಗಿ ಸಮಸ್ಯೆಯನ್ನು ಹೇಳಲಿ' ಎಂಬ ರೂಡಿ ಅವರ ಮನವಿಯನ್ನು ಕಾಂಗ್ರೆಸ್‌ ಸಂಸದರು ಕಿವಿಗೇ ಹಾಕಿಕೊಳ್ಳಲಿಲ್ಲ. 'ಸಮಸ್ಯೆ ಏನು ಎಂಬುದನ್ನು ಹೇಳಿ, ಅದನ್ನು ಕೇಳಲು ಸಿದ್ಧ' ಎಂಬ ಸ್ಪೀಕರ್‌ ಮನವೊಲಿಕೆಗೂ ಕಾಂಗ್ರೆಸ್‌ ಸದಸ್ಯರು ಬೆಲೆ ನೀಡಲಿಲ್ಲ. ರಾಜ್ಯಸಭೆಯಲ್ಲೂ 'ದ್ವೇಷ ರಾಜಕಾರಣ': ದೇಶದಲ್ಲಿ ದ್ವೇಷ ರಾಜಕಾರಣದ ವಾತಾವರಣ ಇರುವುದು ನೋವು ತಂದಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು. ಕಳೆದ ಒಂದೂವರೆ ವರ್ಷ ಅವಧಿಯಲ್ಲಿ ಭಾರತವನ್ನು 'ವಿರೋಧ ಪಕ್ಷ ಮುಕ್ತ' ದೇಶವನ್ನಾಗಿ ಮಾಡಲು ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ, 'ಕಾಂಗ್ರೆಸ್‌ ಮುಕ್ತ ಭಾರತ' ಎಂಬ ಘೋಷಣೆಯನ್ನು ಹೊರಡಿಸಿತ್ತು. ಇದು ಚುನಾವಣೆ ಸಂದರ್ಭಕ್ಕಷ್ಟೇ ಸೀಮಿತ. ಒಂದು ಬಾರಿ ಸರ್ಕಾರ ರಚನೆಯಾದ ಮೇಲೆ ಅಭಿ ವೃದ್ಧಿ ಮತ್ತು ಬಡತನ ನಿರ್ಮೂಲನೆಗೆ ಗಮನ ಹರಿಸುತ್ತದೆ ಎಂದುಕೊಂಡಿದ್ದೆವು. ಆದರೆ ಸರ್ಕಾರ ಈಗ ಕಾಂಗ್ರೆಸ್‌ ಮುಕ್ತ ಭಾರತ ಅಲ್ಲ, ವಿರೋಧ ಪಕ್ಷ ಮುಕ್ತ ಭಾರತ ಮಾಡಲು ಹೊರಟಿದೆ ಎಂದು ಆಜಾದ್‌ ಟೀಕಿಸಿದರು. ಕಾನೂನು ಎದುರಿಸಿ: ಜೇಟ್ಲಿ (ಪ್ರಜಾವಾಣಿ ವರದಿ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ನಡೆಸುತ್ತಿದೆ ಎಂಬ ಕಾಂಗ್ರೆಸ್‌ ಆರೋಪವನ್ನು ಸರ್ಕಾರ ತಿರಸ್ಕರಿಸಿದೆ. ಸೋನಿಯಾ ಮತ್ತು ರಾಹುಲ್ ಅವರಿಗೆ ನ್ಯಾಯಾಲಯ ನೋಟಿಸ್‌ ನೀಡಿದೆ. ಈಗ ಅವರಿಬ್ಬರೂ ಅನಗತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಕಾಂಗ್ರೆಸ್‌ ಮಾಡಿರುವ 'ಗಂಭೀರ' ಆರೋಪದ ಬಗ್ಗೆ ಸದನದಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ. ವಾಸ್ತವಾಂಶವನ್ನು ಸಂಸತ್ತಿನಲ್ಲಿ ಮಂಡಿಸೋಣ ಎಂದು ಜೇಟ್ಲಿ ಹೇಳಿದ್ದಾರೆ. ಸಂಸತ್‌ ಕಲಾಪಕ್ಕೆ ಕಾಂಗ್ರೆಸ್‌ ಸಂಸದರು ಅಡ್ಡಿಪಡಿಸಿರುವುದನ್ನು ಟೀಕಿಸಿದ ಅವರು, ಸೋನಿಯಾ, ರಾಹುಲ್ ಸೇರಿ ಪಕ್ಷದ ಮುಖಂಡರು ನ್ಯಾಯಾಲಯವನ್ನು ಎದುರಿಸಬೇಕು ಎಂದು ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ಯಾರು ತಪ್ಪಿತಸ್ಥರು, ಯಾರು ಪ್ರಾಮಾಣಿಕರು ಎಂಬುದನ್ನು ಸಂಸತ್ತು ಅಥವಾ ಮಾಧ್ಯಮಗಳು ನಿರ್ಧರಿಸಲು ಭಾರತ 'ಹುಸಿ ಜನತಂತ್ರ' ಅಲ್ಲ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ. 'ಖಾಸಗಿ ದೂರು ದಾಖಲಾಗಿದೆ. ಸರ್ಕಾರಕ್ಕೂ ಅದಕ್ಕೂ ಸಂಬಂಧ ಇಲ್ಲ. ಹೈಕೋರ್ಟ್‌ ಅವರ ಅರ್ಜಿಯನ್ನು ವಜಾ ಮಾಡಿ ವಿಚಾರಣೆ ಎದುರಿಸಿ ಎಂದಿದೆ. ಈ ದೇಶದಲ್ಲಿ ಕಾನೂನಿನಿಂದ ಯಾರಿಗೂ ರಕ್ಷಣೆ ಇಲ್ಲ. ಅವರು ಮುಂದಿನ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಬಹುದು ಅಥವಾ ವಿಚಾರಣೆ ಎದುರಿಸಬಹುದು' ಎಂದು ಜೇಟ್ಲಿ ಹೇಳಿದ್ದಾರೆ. ನಾನು ಇಂದಿರಾ ಗಾಂಧಿ ಸೊಸೆ. ನಾನು ಯಾರಿಗೂ ಹೆದರುವುದಿಲ್ಲ. ಕಾಂಗ್ರೆಸ್‌ ಮುಖಂಡರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನೋಟಿಸ್‌ ನೀಡಿದ್ದು ಸರ್ಕಾರವಲ್ಲ, ನ್ಯಾಯಾಂಗ. ಹಾಗಾಗಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿ.
2018/03/25 03:25:07
http://www.prajavani.net/news/article/2015/12/09/371381.html
mC4
ವಿಡಿಯೋ | 'ಮನ್‌ಮರ್ಝಿಯಾ' ಹಿಂದಿ ಸಿನಿಮಾ ತಾರೆಯರೊಂದಿಗೆ ಮಾತುಕತೆ ಅಭಿಷೇಕ್ ಬಚ್ಚನ್‌, ವಿಕ್ಕಿ ಕೌಶಾಲ್ ಮತ್ತು ತಾಪಸಿ ಪನ್ನು ಅಭಿನಯದ 'ಮನ್‌ಮರ್ಝಿಯಾ' ಹಿಂದಿ ಸಿನಿಮಾ ಸೆಪ್ಟೆಂಬರ್‌ 14ರಂದು ತೆರೆಕಾಣಲಿದೆ. ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ತಾರೆಯರು ತಮ್ಮ ಸಿನಿಮಾ ಹಾಗೂ ಮತ್ತಿತರ ಸಂಗತಿಗಳ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ ಅನುರಾಗ್ ಕಶ್ಯಪ್ ನಿರ್ದೇಶನದ ತ್ರಿಕೋನ ಪ್ರೇಮಕಥೆ 'ಮನ್‌ಮರ್ಝಿಯಾ' ಇದೇ ತಿಂಗಳ 14ರಂದು ತೆರೆಕಾಣಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್, ತ್ರಿಕೋನ ಪ್ರೇಮ ಕತೆಯ ಸುಳಿವು ನೀಡಿತ್ತು. ಕರಾರುಗಳಿಲ್ಲದೆ ಪ್ರೀತಿಸುವ ಇಬ್ಬರು ಪ್ರೇಮಿಗಳು, ಜವಾಬ್ದಾರಿಗಳ ಗೋಜಿಗೆ ಬೀಳದೆ ಬರಿ ಪ್ರೀತಿಗೆ ಸೀಮಿತವಾಗಿ ಉಳಿದು ಬಿಡುವ ಇನಿಯ, ಈ ಎಲ್ಲ ಬೆಳವಣಿಗೆಯ ನಡುವೆಯೇ ಬಾಳಸಂಗಾತಿಯನ್ನು ಹುಡುಕಿ ಭಾರತಕ್ಕೆ ಬರುವ ರೂಬಿ, ರೂಮಿಯನ್ನು ನೋಡುತ್ತಲೇ ಮದುವೆಗೆ ಸಜ್ಜಾಗುತ್ತಾನೆ. ಇತ್ತ ಬೇಜವಾಬ್ದಾರಿ ಪ್ರಿಯತಮ, ಅತ್ತ ನೀನೇ ಬೇಕೆನ್ನುವ ರೂಬಿ, ಇಬ್ಬರ ಪ್ರೀತಿ ನಡುವಣ ನಾಯಕಿ ಗೊಂದಲಕ್ಕೀಡಾಗುತ್ತಾಳೆ. ಮುಂದೆ ತಾನು ಯಾರನ್ನು ಬಾಳಸಂಗಾತಿಯಾಗಿ ಆಯ್ದುಕೊಳ್ಳುತ್ತಾಳೆ ಎನ್ನುವುದು ಕತೆಯ ಜೀವಾಳ. ಸೆಪ್ಟೆಂಬರ್‌ 14ರಂದು ಚಿತ್ರ ತೆರೆಕಾಣುತ್ತಿದೆ. ಚಿತ್ರತಂಡ ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿದೆ, ಬೆಂಗಳೂರಿನಲ್ಲಿ ನಡೆದ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ಚಿತ್ರದ ತಾರೆಯರು ಭಾಗಿಯಾಗಿದ್ದರು. ಇದನ್ನೂ ಓದಿ : ವೈರಲ್ ಆಯ್ತು ಅಳಿಯ ಅಹಿಲ್‌ ಜೊತೆಗಿನ ಸಲ್ಮಾನ್ ಖಾನ್‌ ಆರ್ಟ್‌ ವಿಡಿಯೋ 'ಮನ್‌ಮರ್ಝಿಯಾ' ಚಿತ್ರದ ಮೂಲಕ ಅಭಿಷೇಕ್‌ ಬಚ್ಚನ್ ಎರಡು ವರ್ಷಗಳ ನಂತರ ಬೆಳ್ಳಿತೆರೆಗೆ ವಾಪಸಾಗಿದ್ದಾರೆ. ಉತ್ತಮ ಪಾತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ನಟಿ ತಾಪ್ಸಿ ಪನ್ನು, ಇದೀಗ ಬಾಲಿವುಡ್‌ನ ಬೇಡಿಕೆಯ ತಾರೆ. ಪ್ರಯೋಗಶೀಲ ಪಾತ್ರಗಳಲ್ಲಿ ನಟಿಸುತ್ತಿರುವ ಅವರು, ಅನುರಾಗ್‌ ಕಶ್ಯಪ್‌ ನಿರ್ದೇಶನದ 'ಮನ್‌ಮರ್ಝಿಯಾ' ಚಿತ್ರದ ಬಗ್ಗೆ ಅಪಾರ ಭರವಸೆಯಿಂದ ಮಾತನಾಡುತ್ತಾರೆ. ಆನಂದ್ ಎಲ್ ರಾಯ್‌ ನಿರ್ಮಾಣದ ಈ ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ. Bollywood ಬಾಲಿವುಡ್‌ Anurag Kashyap Abhishek Bachchan ಅಭಿಷೇಕ್ ಬಚ್ಚನ್‌ Vicky Kaushal ವಿಕ್ಕಿ ಕೌಶಾಲ್‌ ಅನುರಾಗ್ ಕಶ್ಯಪ್‌ Manmarziyaan ಮನ್‌ಮರ್ಝಿಯಾ
2018/11/21 02:28:03
https://www.thestate.news/entertainment/2018/09/11/chitchat-with-manmarziyaan-actors
mC4
ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ – EESANJE / ಈ ಸಂಜೆ ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ October 23, 2016 Sri Raghav Aravind malagatti, central college, seminar ಬೆಂಗಳೂರು, ಅ.23-ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ತರುವುದು ಸೇರಿದಂತೆ ದಲಿತರಿಗೆ ಭೂಮಿ ನೀಡಬೇಕು ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ.ಅರವಿಂದ ಮಾಲಗತ್ತಿ ಒತ್ತಾಯಿಸಿದರು. ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದಲಿತರಿಗೆ ಭೂಮಿ, ಮನೆ, ನಿವೇಶನ ಹಾಗೂ ಉದ್ಯೋಗ ವಿಚಾರ ಸಂಕಿರಣ ಹಾಗೂ ನೀಲಿ ಬಾನಿನಲ್ಲಿ ಕೆಂಪು ಸೂರ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರಿಗೆ ಭೂಮಿ, ಮನೆ, ನಿವೇಶನದ ಅಗತ್ಯವಿದೆ. ಉದ್ಯೋಗ ನೀಡಿದರೆ ಮನೆಯನ್ನು ಅವರೇ ಸಂಪಾದಿಸಿಕೊಳ್ಳುತ್ತಾರೆ. ಈ ದಿಸೆಯಲ್ಲಿ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಹಾಗೂ ಸರ್ಕಾರಿ ಒಡೆತನದ ಭೂಮಿಯನ್ನು ಕೃಷಿಗೆ ನೀಡುವ ಮೂಲಕ ದಲಿತರಿಗೆ ಉದ್ಯೋಗ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಇಂದು ವಿಶ್ವವಿದ್ಯಾನಿಲಯಗಳಲ್ಲಿ ಪೇಮೆಂಟ್‌ಸೀಟ್‌ಗಳ ಹಾವಳಿ ಹೆಚ್ಚಾಗಿದೆ. ಹಣ ಕೊಟ್ಟು ಸೀಟು ಗಿಟ್ಟಿಸಿದವರು ನಾಳೆ ಉದ್ಯೋಗವನ್ನು ಖರೀದಿ ಮಾಡುತ್ತಾರೆ. ಮೆರಿಟ್ ಎಂಬ ಸೋಗಲಾಡಿತನದಿಂದ ಹೊರಬಂದು ದಲಿತರಿಗೆ ವಿದ್ಯೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಆದ್ಯತೆ ನೀಡಬೇಕಿದೆ ಎಂದರು. ಮೀಸಲಾತಿಯಿಂದ ಪ್ರತಿಭಾ ಪಲಾಯನವಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ವಿದೇಶಕ್ಕೆ ಹೋಗುವವರಿಗೆ ಡಾಲರ‍್ಸ್ ಮೇಲಿನ ದುರಾಸೆ ಹೆಚ್ಚಾಗಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಭೂಮಿಯನ್ನು ರಾಷ್ಟ್ರೀಕರಣ ಮಾಡಿ ರಾಜಕೀಯ ವಲಯದಲ್ಲಿ ಮೀಸಲಾತಿ ನೀಡಿ ಸರ್ಕಾರಿ ಒಡೆತನದ ಕೃಷಿ ಪದ್ದತಿಯನ್ನು ಜಾರಿಗೆ ತನ್ನಿ ಎಂದು ಆಗ್ರಹಿಸಿದರು. ಕನಕನನ್ನು ಕೃಷ್ಣ ಮಠದಿಂದ ಹೊರಗಟ್ಟಿದ್ದರು. ನಾವೆಲ್ಲ ಅಲ್ಲಿಗೆ ಹೋದಾಗ ಚರ್ಚಿಸಿದ್ದೆವು. ನಂತರ ಕನಕನನ್ನು ಒಳಗಿಡಲಾಯಿತು. ಇದೀಗ ಕನಕ ಕೋಟೆಯೊಳಗೆ ಬಂಯಾದಂತಾಗಿದ್ದಾನೆ. ಬಂಧನದಲ್ಲಿ ನರಳುತ್ತಿದ್ದಾನೆ. ಅಲ್ಲಿಂದ ಬಿಡುಗಡೆಗೊಳಿಸುವ ಅಗತ್ಯತೆ ಹೆಚ್ಚಾಗಿದೆ ಎಂದರು. ಉಡುಪಿ ಮಠಕ್ಕೆ ದಲಿತರನ್ನು ಕರೆಸಿಕೊಳ್ಳುವುದು ಜಾತ್ಯತೀತರು ಎಂದು ಹೇಳಿಸಿಕೊಳ್ಳುವುದಕ್ಕೆ ಹೊರತು ಮತ್ತೇನೂ ಅಲ್ಲ ಎಂದು ಹೇಳಿದರು. ಗಾಂಜಿ ಅವರು ಲೋಟ, ರೋಟಿ, ಬೇಟಿ ಮೂಲಕ ದಲಿತರನ್ನು ತಮ್ಮಂತೆ ಭಾವಿಸಲು ಹೇಳಿದ್ದರು. ಇದರರ್ಥ ಕುಡಿಯುವ ನೀರು ಬಳಸುವ ಲೋಟ, ಊಟ ಹಾಗೂ ಬೇಟಿ ಎಂಬುದು ಸಂಬಂಧ ಬೆಳೆಸುವ ಅರ್ಥವಾಗಿದ್ದು, ನೀರು ಊಟ ಮಾಡಲು ತಾರತಮ್ಯ ನೀತಿ ಇರಬಾರದು. ಅಸ್ಪೃಶ್ಯರು ಅಥವಾ ದಲಿತರು ಎಂಬುದರಿಂದ ಹೊರಬರಬೇಕು. ಜೊತೆಗೆ ಸಂಬಂಧ ಬೆಳೆಸಿ ಈ ಎಲ್ಲ ಪದ್ದತಿಗಳಿಗೂ ತಿಲಾಂಜಲಿ ಹಾಡಬೇಕು ಎಂದು ಹೇಳಿದ್ದರು. ಆದರೆ ಅಂಬೇಡ್ಕರ್ ಅವರು ಬೇಟಿ ಒಂದೇ ಸಾಕು, ಸಂಬಂಧ ಬೆಳೆಸಿದರೆ ತಾನಾಗಿಯೇ ಲೋಟ, ರೋಟಿ ಸಂಪರ್ಕ ಬೆಳೆಯುತ್ತದೆ ಎಂದು ಪ್ರತಿಪಾದಿಸಿದ್ದರು. ದಲಿತರ ಬಗೆಗಿನ ಇಂಥ ಧೋರಣೆಗಳು ದೂರಾಗಬೇಕಿದೆ ಎಂದರು. ಸಮಾರಂಭದಲ್ಲಿ ಕರ್ನಾಟಕ ವೆಲ್‌ಫೇರ್ ಅಸೋಸಿಯೇಷನ್ ಆಫ್ ಎಸ್ಸಿ-ಎಸ್ಟಿ ಎಂಪ್ಲಾಯೀಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಸಿ.ವೀರಣ್ಣ, ಕಾರ್ಯದರ್ಶಿ ಎಸ್.ಆನಂದಮೂರ್ತಿ, ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೌರವಮ್ಮ, ಡಿವೈಎಫ್‌ಐ ಮುಖಂಡ ನಂಜೇಗೌಡ, ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿ ಕಾರ್ಮಿಕರ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರ, ದಲಿತ ಹಕ್ಕುಗಳ ಸಮಿತಿ ಸಹಸಂಚಾಲಕ ಎನ್.ನಾಗರಾಜ್, ಅಧ್ಯಕ್ಷೆ ಮಾಯೂಶ್ರೀ ಮತ್ತಿತರರು ಹಾಜರಿದ್ದರು.
2019/02/19 06:59:05
http://www.eesanje.com/2016/10/23/%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%92%E0%B2%A1%E0%B3%86%E0%B2%A4%E0%B2%A8%E0%B2%A6-%E0%B2%AD%E0%B3%82%E0%B2%AE%E0%B2%BF-%E0%B2%95%E0%B3%83%E0%B2%B7%E0%B2%BF/
mC4
ಜಾಮಿಯಾ ಮಿಲ್ಲಿಯಾ ಅಕಾಡಮಿಯ 30 ಮಂದಿ ಯುಪಿಎಸ್‌ಸಿ ತೇರ್ಗಡೆ | Vartha Bharati- ವಾರ್ತಾ ಭಾರತಿ Updated : 03.44PM IST ವಾರ್ತಾ ಭಾರತಿ Aug 05, 2020, 9:55 AM IST ಹೊಸದಿಲ್ಲಿ : ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡಮಿ (ಆರ್‌ಸಿಎ)ಯಲ್ಲಿ ತರಬೇತಿ ಪಡೆದ 30 ಅಭ್ಯರ್ಥಿಗಳು ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆರ್‌ಸಿಎಯಲ್ಲಿ ವಾಸ್ತವ್ಯವಿದ್ದು ತರಬೇತಿ ಪಡೆದ 25 ಮಂದಿ ಹಾಗೂ ಕೇಂದ್ರದ ಅಣಕು ಸಂದರ್ಶನ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಐದು ಮಂದಿ ತೇರ್ಗಡೆಯಾಗಿದ್ದಾರೆ. ಇದು ದೇಶದ ಯಾವುದೇ ತರಬೇತಿ ಕೇಂದ್ರದಿಂದ ಆಯ್ಕೆಯಾದ ಗರಿಷ್ಠ ಸಂಖ್ಯೆಯಾಗಿದೆ ಎಂದು ಜಾಮಿಯಾ ಮಿಲ್ಲಿಯಾ ಅಧಿಕಾರಿ ವಿವರಿಸಿದ್ದಾರೆ. ರುಚಿ ಬಿಂದಾನ್ 39ನೇ ರ್ಯಾಂಕ್ ಪಡೆದಿದ್ದು, ಈ ಬಾರಿ ಆರ್‌ಸಿಎನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಯುಪಿಎಸ್ಸಿಗೆ ಆಯ್ಕೆಯಾದ 30 ಮಂದಿಯ ಪೈಕಿ ಆರು ಮಂದಿ ಮಹಿಳೆಯರು. ನಾಗರಿಕ ಸೇವಾ ಪರೀಕ್ಷಾ ಆಕಾಂಕ್ಷಿಗಳಿಗೆ ಆರ್‌ಸಿಎ ಉಚಿತವಾಗಿ ತರಬೇತಿ ನೀಡುತ್ತದೆ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರ ಅವಕಾಶ ಇರುತ್ತದೆ. ಮಹಿಳಾ ಅಭ್ಯರ್ಥಿಗಳು ಕೂಡಾ ತರಬೇತಿಗೆ ಅರ್ಹರಾಗಿದ್ದು, ಅವರಿಗೂ ಜಾಮಿಯಾ ಉಚಿತ ಕೋಚಿಂಗ್ ಮತ್ತು ಹಾಸ್ಟೆಲ್ ಸೌಲಭ್ಯ ಕಲ್ಪಿಸುತ್ತದೆ.
2020/09/27 10:14:51
http://www.varthabharati.in/article/national/253800
mC4
ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್ | It was easier to bowl during our younger days: Sri Lankan spin legend Muttiah Muralitharan | Kannadaprabha.com ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್ Published: 16 Apr 2018 11:38 AM IST | Updated: 16 Apr 2018 11:47 AM IST ಕೋಲ್ಕತ್ತಾ: "ಯುವಕರಾಗಿದ್ದಾಗ ಬೌಲಿಂಗ್ ನನಗೆ ಕಷ್ಟವೆನಿಸಿರಲಿಲ್ಲ. ನಾವು ಆಟವಾಡುವಾಗ ಬೌಲಿಂಗ್ ಸುಲಭವಿತ್ತು. ಈಗ ಬೌಲ್ ಮಾಡುವುದು ಸುಲಭವಲ್ಲ " ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ಗಳಿಕೆಯ ಶ್ರೀಲಂಕಾ ಪ್ರಸಿದ್ದ ಕ್ರಿಕೆಟಿಗ ಮುತ್ತಯ್ಯ ಮುರಳಿಧರನ್ ಹೇಳಿದರು. "ನಾವು ಹೆಚ್ಚು ಟಿ20 ಪಂದ್ಯವಾಡಿಲ್ಲ. ಈಗಿನವರಂತೆ ಹೆಚ್ಚು ಸಿಕ್ಸರ್ ಹೊಡೆದಿಲ್ಲ. ಈಗ ಆಟ ವಿಕಸನಗೊಂಡಿದೆ" ಅವರು ಹೇಳಿದ್ದಾರೆ. 133 ಪಂದ್ಯಗಳಿಂದ 800 ಟೆಸ್ಟ್ ವಿಕೆಟ್ ಪಡೆದ ಮುರಳಿಧರನ್ 1996 ರ ವಿಶ್ವಕಪ್ ಗೆದ್ದ ಕ್ಷಣ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಕ್ಷಣವಾಗಿದೆ ಎಂದು ಹೇಳಿದರು."1996 ರ ವಿಶ್ವ ಕಪ್ ಜಯವನ್ನು ನಾನು ಸಂಭ್ರಮಿಸುತ್ತೇನೆ ಏಕೆಂದರೆ ಅದು ಶ್ರೀಲಂಕಾದ ಕ್ರಿಕೆಟ್ ಗೆ ಬಹಳ ಮುಖ್ಯವಾದುದು." ರೂಪಾ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಶ್ರೀಲಂಕಾ ಬೌಲರ್ ಮುರಳಿಧರನ್ ಬಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭಾರತದ ಕ್ರಿಕೆಟಿಗ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಕೌಟುಂಬಿಕ ವ್ಯವಹಾರದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ಸನ್ ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಮ್ಮ ಹದಿಹರೆಯದ ದಿನಗಳಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಆರಾಧಿಸುತ್ತಿದ್ದದ್ದಾಗಿ ನೆನೆಸಿದರು. ಭಾರತವು 2010 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ ವಿಲ್ಲಿಯನ್ಸನ್ ಮೊಟ್ಟ ಮೊದಲ ಬಾರಿಗೆ ಸಚಿನ್ ಅವರನ್ನು ಭೇಟಿಯಾಗಿದ್ದರು."ಎದುರಾಳಿಯ ಶಿಬಿರದಲ್ಲಿ ಅವರನ್ನು ಕಾಣಲು ಬಹಳ ಅಡೆತಡೆಗಳಿದ್ದವು. ಕ್ರೀಡಾಂಗಣದಲ್ಲಿ ನಾನು ಅವರ ಆಟ ವೀಕ್ಷಿಸುತ್ತಿದ್ದೆ. ಅವರು ಹೇಗೆ ಅಷ್ಟು ಚೆನ್ನಾಗಿ ಆಡುವರೆನ್ನುವುದು ಅನನಗೆ ತಿಳಿಯಬೇಕಿತ್ತು. ಇದು ನಿಜವಾಗಿಯೂ ಉತ್ತಮ ಅನುಭವ" ಎಂದು ವಿಲಿಯಮ್ಸನ್ ಹೇಳಿದರು. ನಾನಾಗ 19 ಅಥವಾ 20 ವರ್ಷ ವಯಸ್ಸಿನವನಾಗಿದ್ದೆ ಕ್ರಿಕೆಟ್ ದಂತಕಥೆ ಸಚಿನ್, ದ್ರಾವಿಡ್, ವಿವಿಎಸ್ ಲಕ್ಷ್ಮಣ್ ತಂಡದಲ್ಲಿದ್ದರು ಇಂತಹ ಅದ್ಭುತ ಜನರು ಮತ್ತು ಆಟದ ಬಗ್ಗೆ ಮಾತನಾಡಲು ಬಹಳ ಇಷ್ಟವಾಗುತ್ತದೆ" ಅವರು ಹೇಳಿದ್ದಾರೆ. ಶಿಖರ್ ಧವನ್ ಮಾತನಾಡಿ "ನಾನು ಯಾವಾಗಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ. ಕ್ರಿಕೆಟ್ ಬದುಕಿನ ಬಳಿಕ ತಾನು ನನ್ನ ತಂದೆಯ ವ್ಯ್ವಹಾರದಲ್ಲಿ ತೊಡಗಿಕೊಳ್ಳಲಿದ್ದೇನೆ.ಪಂಜಾಬಿಗಳು ತಮ್ಮ ವ್ಯವಹಾರವನ್ನು ಪ್ರೀತಿಸುತ್ತಾರೆ. ಇದು ನಮ್ಮ ರಕ್ತದಲ್ಲಿದೆ" ಎಂದರು. Topics : Muttiah Muralitharan, bowling, Sri Lanka, Sachin Tendulkar, ಮುತ್ತಯ್ಯ ಮುರಳೀಧರನ್, ಬೌಲಿಂಗ್, ಶ್ರೀಲಂಕಾ, ಸಚಿನ್ ತೆಂಡೂಲ್ಕರ್
2018/07/22 16:34:38
http://media.kannadaprabha.com/cricket/it-was-easier-to-bowl-during-our-younger-days-sri-lankan-spin-legend-muttiah-muralitharan/314256.html
mC4
ಬಾಲಕಿ ಆತ್ಮಹತ್ಯೆ: 'ಮಗಳ ಸಾವಿಗೆ ಪ್ರಿಯಕರ' ಕಾರಣ ಎಂದ ಪೋಷಕರು – Savi Kannada News ಶಿವಮೊಗ್ಗ: ಹೊಸನಗರ ತಾಲೂಕಿನ ನಗರ ಕರಿಮನೆ ಗ್ರಾಪಂ ವ್ಯಾಪ್ತಿಯ ಚಾಲಕ ಸುಧಾಕರ್ ಮತ್ತು ಮಮತಾ ದಂಪತಿ 'ತಮ್ಮ ಪುತ್ರಿ ಸಹನಾಳ (17) ಸಾವಿಗೆ ಪ್ರಿಯಕರ ಪ್ರಶಾಂತ್‌ ಕಾರಣ' ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೊಸನಗರದ ಹೋಲಿ ರೆಡಿಮರ್ ಶಾಲೆಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ತಮ್ಮ ಮಗಳು ಸಹನಾಳನ್ನು ಪ್ರೀತಿಸುವಂತೆ ಸುಮಾರು 27 ವರ್ಷದ ಪ್ರಶಾಂತ್‌ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೆಳಗಿನ ಕನ್ನಳ್ಳಿ ವಾಸಿ ವಾಸಪ್ಪಗೌಡರ ಮಗನಾದ ಕೆ.ವಿ.ಪ್ರಶಾಂತ್ ನನ್ನ ಮಗಳ ಮೊಬೈಲ್ ನಂಬರ್‌ಗೆ ಮೆಸೇಜ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾನೆ. ನನ್ನ ಮಗಳು ತನಗಾಗುತ್ತಿದ್ದ ಕಿರಿಕಿರಿಯನ್ನು ನನ್ನ ಹೆಂಡತಿಯ ಹತ್ತಿರ ಸಾಕಷ್ಟು ಬಾರಿ ಹೇಳಿಕೊಂಡಿದ್ದಳು ಎಂದು ಆರೋಪಿಸಿದ್ದಾರೆ. ನಾನು ಮತ್ತು ನನ್ನ ಪತ್ನಿ ಮಮತಾ ನನ್ನ ಮಗಳ ಹಿಂದೆ ಬೀಳಬೇಡ, ಮಾನಸಿಕ ಹಿಂಸೆ ನೀಡಬೇಡ ಎಂದು ಪ್ರಶಾಂತನಿಗೆ ಸಾಕಷ್ಟು ಬಾರಿ ಬುದ್ಧಿ ಮಾತುಗಳನ್ನು ಹೇಳಿದ್ದೆವು. ಆದರೂ ಪ್ರತಿ ದಿನ ನನ್ನ ಮಗಳಿಗೆ ಕಿರುಕುಳ ನೀಡಿ ನನ್ನನೂ ಪ್ರೀತಿಸದಿದ್ದರೆ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಪ್ರಶಾಂತ ಹಿಂಸೆ ನೀಡಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಈ ಘಟನೆಗೆ ನನ್ನ ಮಗಳು ಈತನ ಕಾಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮೇ 22 ರಂದು ನಮ್ಮ ಹಳೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಷ ಕುಡಿದಿದ್ದು ನಂತರ ವಾಸದ ಮನೆಗೆ ಬಂದು ತಾಯಿಯ ಬಳಿ ನಾನು ವಿಷ ಕುಡಿದಿದ್ದೇನೆಂದು ಹೇಳಿದ್ದಾಳೆ. ತಕ್ಷಣ ಸಹನಾಳನ್ನು ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಜೂನ್ 2 ರಂದು ಆಸ್ಪತ್ರೆಯಲ್ಲಿ ಸಹನಾಳನ್ನು ಸಮಾಧಾನವಾಗಿ ವಿಚಾರಿಸಿದಾಗ ವಿಷ ಕುಡಿಯಲು ಪ್ರಶಾಂತ್ ಕಾರಣವೆಂದು ನಡೆದ ಘಟನೆ ಬಾಯ್ಬಿಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೇ ಜೂನ್ 3 ರಂದು ಪ್ರಾಣ ಬಿಟ್ಟಿದ್ದಾಳೆ. ನನ್ನ ಮಗಳ ಸಾವಿಗೆ ಕಾರಣರಾದ ಪ್ರಶಾಂತ್‌ನನ್ನು ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಬೇಕೆಂದು ಮಗಳನ್ನು ಕಳೆದುಕೊಂಡ ದಂಪತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸಹನಾಳು ವಿಷ ಕಡಿದ ವಿಷಯ ತಿಳಿದ ಅಪರಾಧಿ ಪ್ರಶಾಂತ್‌ರವರು ಕಣ್ಮರೆಯಾಗಿದ್ದು ಗ್ರಾಮಸ್ಥರು ಆತನನ್ನು ತಕ್ಷಣ ಹುಡುಕಿ ಬಂಧಿಸಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ. The post ಬಾಲಕಿ ಆತ್ಮಹತ್ಯೆ: 'ಮಗಳ ಸಾವಿಗೆ ಪ್ರಿಯಕರ' ಕಾರಣ ಎಂದ ಪೋಷಕರು appeared first on News First Kannada.
2021/07/28 19:02:46
https://savikannada.in/%E0%B2%AC%E0%B2%BE%E0%B2%B2%E0%B2%95%E0%B2%BF-%E0%B2%86%E0%B2%A4%E0%B3%8D%E0%B2%AE%E0%B2%B9%E0%B2%A4%E0%B3%8D%E0%B2%AF%E0%B3%86-%E0%B2%AE%E0%B2%97%E0%B2%B3-%E0%B2%B8%E0%B2%BE%E0%B2%B5/
mC4
ಶಿಖರಸೂರ್ಯ : ಕನಕಪುರಿ : ಹತ್ತು – ಕಣಜ ಶಿಖರಸೂರ್ಯ : ಕನಕಪುರಿ : ಹತ್ತು Home/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ/ಡಾ. ಚಂದ್ರಶೇಖರ ಕಂಬಾರ/ಶಿಖರಸೂರ್ಯ : ಕನಕಪುರಿ : ಹತ್ತು ಕುದುರೆ ದಣಿದಿತ್ತು. ಒಂದು ವಾರದಿಂದ ಓಡುತ್ತಲೇ ಇದ್ದ ಕುದುರೆ ರಾತ್ರಿ ಯಾವುದಾದರೂ ಹಟ್ಟಿ ಸಿಕ್ಕರೆ ಒಂದೆರಡು ಗಂಟೆ ನಿದ್ದೆ ಮಾಡಿದ್ದರೇ ಹೆಚ್ಚು, ಅಷ್ಟರಲ್ಲಿ ಸವಾರ ಬಂದು ಹತ್ತಿ ಪಕ್ಕೆಗೆ ಒದೆಯುತ್ತಿದ್ದ. ಹಗಲು ಹೊತ್ತಿನಲ್ಲಾದರೆ ಜನ ಇಲ್ಲದ ಸ್ಥಳದಲ್ಲಿ ತುಸು ಹೊತ್ತು ತಂಗಿ ಹುಲ್ಲು ಮೇದು, ನೀರು ಕುಡಿದು ಮತ್ತೆ ಓಡಬೇಕು. ಪ್ರಯಾಣದ ಕೊನೆಕೊನೆಗಂತೂ ಕುದುರೆಯ ಕಣ್ಣು ಸಂಕೋಚಗೊಂಡು ಮನಸ್ಸಿಲ್ಲದೆ ತೆರೆದಂತೆ ಕಾಣುತ್ತಿದ್ದ. ಬಿಟ್ಟೂ ಬಿಡದೆ ಓಡಿ ಬಂದುದರಿಂದ ಕುದುರೆ ಮತ್ತು ಸವಾರ ಇಬ್ಬರ ಮೈತುಂಬ ಧೂಳಡರಿ, ಬಟ್ಟೆ ಬರೆ ಹೊಲಸಾಗಿ ಇಬ್ಬರ ಮುಖಗಳಲ್ಲೂ ಧೂಳಿನಲ್ಲಿ ಉರುಳಾಡಿದ ಶವದ ಕಳೆಯಿತ್ತು. ಕುದುರೆ ಎಲ್ಲಿಗೆ ಹೊರಟಿದೆ ಎಂದು ತಿಳಿಯುವಷ್ಟು ಚೈತನ್ಯ ಸವಾರನಿಗಿರಲಿಲ್ಲ. ಸವಾರ ನಿರ್ದೇಶಿಸಲಿಲ್ಲವಾದರೂ ತನ್ನ ಯಜಮಾನನ ಮನೆ ಯಾವುದೆಂದು ತಿಳಿದುದರಿಂದ, ಸಂಶಯವಿಲ್ಲದೆ ತರುಮರಗಳಿರುವ ಪ್ರಾಂಗಣಕ್ಕೆ ಕುದುರೆ ಬಂದು ನಿಂತಿತು. ಕಲ್ಲಿನಲ್ಲಿ ಕಟ್ಟಿದ ಎರಡಂತಸ್ತಿನ, ಚಿತ್ತಾರದ ಬಾಗಿಲುಳ್ಳ, ದಪ್ಪ ಮರದಲ್ಲಿ ಮಾಡಿದ ಕಿಟಕಿಗಳುಳ್ಳ, ನೋಡಿದರೆ ಗೌರವಸ್ಥ ಶ್ರೀಮಂತರ ಮನೆಯೆಂದು ಗೊತ್ತಾಗುವಂಥ ಮನೆ ಅದು. ಮನೆಯ ಸೇವಕ ಕುದುರೆಯನ್ನು ಕಂಡವನೇ ಅಪರಿಚಿತ ಸವಾರ ನನ್ನ ನೋಡಿ ಪುನಃ ಕುದುರೆಯನ್ನು ಗುರುತಿಸಿ "ಕುದುರೆಯೇನೋ ನಮ್ಮದೇ, ಆದರೆ ಈತ ಯಾರು? ಯಾಕೆ? ಹ್ಯಾಗೆ?" ಎಂದು ಬೆರಗಾಗಿ ಒಡೆಯರಿಗೆ ತಿಳಿಸಲು ದೊಡ್ಡ ಮನೆಗೋಡಿದ. ಒಡೆಯನೂ ತೊಲೆಬಾಗಿಲಲ್ಲಿ ನಿಂತು ಕುದುರೆ ಮತ್ತು ಸವಾರನನ್ನೇ ಬೆರಗಿನಿಂದ ನೋಡುತ್ತ ''ಕುದುರೆ ಒಯ್ದವನೇ ಬೇರೆ: ತಂದವನೇ ಬೇರೆ! ನಿಧಾನವಾಗಿ ತಿಳಿದರಾಯ್ತು, ಅವ ಬರಲಿ'' ಎಂದು ಕಟ್ಟೆಯ ಮೇಲೆ ಕಾಲುಗಳನ್ನು ಇಳಿಬಿಟ್ಟು ಕೂತ. ಸೊಂಟದ ದೋತ್ರ, ಹೆಗಲ ಮೇಲೊಂದು ಕೈಬಟ್ಟೆ ಬಿಟ್ಟು ಮೈಮೇಲೆ ಬೇರೆ ಬಟ್ಟೆಗಳಿರಲಿಲ್ಲ. ಕಿವಿಯಲ್ಲಿ ದೊಡ್ಡ ಓಲೆ, ದೊಡ್ಡ ತಲೆಯ ಹಿಂದೆ ಕೂದಲಿದ್ದು ಬೆನ್ನು, ಭುಜದ ಮೇಲೆ ಒರಗಿದ್ದವು. ಬೆರಳುಗಳಲ್ಲಿ ಬಣ್ಣದ ಉಂಗುರಗಳಿದ್ದು ನೀಳವಾದ ಕೈಗಳನ್ನು ಕೊಂಚ ಉಬ್ಬಿದ ಹೊಟ್ಟೆಯ ಮೇಲೆ ಇಟ್ಟುಕೊಂಡು ಆಗಂತುಕನನ್ನೇ ನೋಡುತ್ತ ಕೂತ. ''ಇವನ್ಯಾರೋ! ನಮ್ಮ ಕುದುರೆಯೇನೋ ಬಂತು ಸೈ, ಹೊಳೆಯ ಏನಾದ?'' ಎಂದು ಇನ್ನೊಮ್ಮೆ ಯೋಚಿಸಿ ''ಗೊತ್ತಾದೀತು'' ಅಂತ ಮತ್ತೊಮ್ಮೆ ಸಮಾಧಾನ ಮಾಡಿಕೊಂಡು ಕೂರುವಷ್ಟರಲ್ಲಿ ಜಯಸೂರ್ಯ ಕುದುರೆಯಿಂದಿಳಿದ. ಸೇವಕ ಕುದುರೆ ಹಿಡಿದುಕೊಂಡು ಅದರ ಒಡಲ ಸುತ್ತ ಕಟ್ಟಿದ ಪಟ್ಟಿಯನ್ನೂ ಕೊರಳ ಪಟ್ಟಿಯನ್ನೂ ಸಡಿಲಿಸಿದ. ಜೊಲ್ಲಿನಿಂದ ಅಂಟಂಟಾದ ಕಡಿವಾಣವನ್ನು ಅದರ ಬಾಯಿಂದ ಹೊರತೆಗೆದು ಪಾಗಾದತ್ತ ಕರೆದೊಯ್ದ. ಜಯಸೂರ್ಯ ಈ ಕಡೆ ಬಂದ. ಎತ್ತರವಾದ, ತಾಮ್ರ ಬೆರೆತ ಉಕ್ಕಿನ ದೇಹದ, ಠೀವಿಯ ನಡಿಗೆಯ, ದಪ್ಪ ಹುಬ್ಬಿನ, ಕಿವಿಗೂದಲಿನ ವಿಲಕ್ಷಣ ಮುಖದ, ದಣಿದುದರಿಂದ ಓದಲಾಗದ ಕಣ್ಣುಳ್ಳ ಜಯಸೂರ್ಯನ ನೋಡಿ-ಇವನ್ಯಾವನೋ ದೊಡ್ಡ ಮನುಷ್ಯನೇ ಇರಬೇಕು-ಅಂದುಕೊಂಡ, ಯಜಮಾನ. ಸೊಂಟದ ದಟ್ಟಿ ಮತ್ತು ಹೆಗಲ ಕಂಬಳಿ ವಿನಾ ಬೇರೆ ಬಟ್ಟೆಯಿರಲಿಲ್ಲ. ಧೂಳಡರಿದ ನೀಳ ಕೂದಲು ಭುಜದ ಮ್ಯಾಲೊರಗಿ ನಡಿಗೆಯ ಲಯಾನುಸಾರ ನಲುಗುತ್ತಿದ್ದವು. ಕುದುರೆ ಇಳಿದಾಗಿನಿಂದ ತನ್ನಲ್ಲಿಗೆ ಬರುವ ತನಕ ಆ ಈ ಕಡೆ ನೋಡದೆ ಆಗಂತುಕನನ್ನೇ ನೋಡುತ್ತ ಕೂತ. ಬಿಲಿಸಲಿನಲ್ಲಿ ಬಂದುದರಿಂದ ಅವನ ಮುಖ ಕೆಂಪೇರಿತ್ತು. ಬೆವರಿನಿಂದ ಒದ್ದೆಯಾದ ಅವನ ಕಣ್ಣು ಹೆಚ್ಚಾಗಿಯೇ ಹೊಳೆಯುತ್ತಿದ್ದವು. ಆತ ಬರುತ್ತಲೂ ಕೂತೇ ಇರಬೇಕೆಂಬ ನಿಲುವು ಸಡಲಿ ಇದ್ದು ಬಾಗಿಲಿಗೆ ಬಂದ. ಯಜಮಾನನ ಮನೆಯೆದುರು ಬಾವಿಗೆ ಹೋಗಿ ನೀರು ತಕ್ಕೊಂಡು ಕೈಕಾಲು ತೊಳೆದುಕೊಂಡು ಮುಖ ಶುದ್ಧಿ ಮಾಡಿಕೊಂಡು ಬಂದು ಆಗಂತುಕ ಕೇಳಿದ: "ಅರ್ಥಕೌಶಲ ನೀವೇನೊ?" ಎಂದೊಂದು ಆಸನ ತೋರಿಸಿ ಕೂರಲಿಕ್ಕೆ ಸನ್ನೆ ಮಾಡಿದ. ಜಯಸೂರ್ಯನಿಗೆ ಇಷ್ಟು ಉಪಚಾರ ಸಾಕಾಯ್ತು, ಹೋಗಿ ಕೂತ. "ನಿಮ್ಮ ಸೇವಕ ಹೊಳೆಯ ಎಂಬಾತನನ್ನು ಹುಲಿ ಮುರಿಯಿತು. ನಾನೂ ಸಹಾಯ ಮಾಡಲಾಗಲಿಲ್ಲ. ನಾನಲ್ಲಿಗೆ ತಲುಪಿ ಹುಲಿಯನ್ನ ಓಡಿಸಿದಾಗ ಅವನಾಗಲೇ ಅರೆಜೀವವಾಗಿದ್ದ. ನಿಮಗೆ ತಲುಪಿಸಲು ಇದಿಷ್ಟನ್ನು ಕೊಟ್ಟ ತಗೊಳ್ಳಿ." -ಎಂದು ಹೇಳಿ ಒಂದು ಗಂಟನ್ನು ಕೊಟ್ಟ. ಅರ್ಥಕೌಶಲ ತಗೊಂಡು ನೋಡಿದ. ತಾನು ಸೇವಕರಿಗೆಂದು ಕೊಡುವ ತನ್ನ ಹೆಸರು ಬರೆದ ಕಠಾರಿಯಿತ್ತು. ಗಂಟಿನಲ್ಲಿ ಹಣವಿದೆಯೆಂದು ಗೊತ್ತಾಯ್ತು. ಬಿಚ್ಚಲಿಲ್ಲ. ಸೇವಕಿ ಆಗಲೇ ಬಾಯಾರಿಕೆಗೆ ಮುಂದೆ ಇಟ್ಟು ಹೋಗಿದ್ದಳು. ಅರ್ಥಕೌಶಲನೇ ಬೆಲ್ಲದ ಬಟ್ಟಲು ಮತ್ತು ನೀರಿನ ಚೊಂಬನ್ನು ತೋರಿಸಿ 'ಬಾಯಾರಿಕೆಗೆ' ಅಂದ. ಜಯಸೂರ್ಯ ಬೆಲ್ಲದ ಸಣ್ಣ ಕರಣಿಯನ್ನ ಬಾಯಿಗೆ ಒಗೆದುಕೊಂಡು ಚೊಂಬನ್ನೆತ್ತಿ ಗಟ ಗಟ ನೀರು ಕುಡಿದ. ಅಲ್ಲಿದ್ದವರು ತನ್ನನ್ನೇ ನೋಡುತ್ತಿರುವುದನ್ನು ಗಮನಿಸುತ್ತ ಬಾಯೊರೆಸಿಕೊಂಡ. ಅರ್ಥಕೌಶಲ ಮಾತ್ರ ಇನ್ನೂ ಕುತೂಹಲದಲ್ಲಿಯೇ ಇದ್ದ. ಕಣ್ಣು ಸಂಕೋಚಗೊಳಿಸಿ ಹರಿತವಾದ ನೋಟವನ್ನ ಇವನ ಹೃದಯದಲ್ಲಿ ನಾಟಿಸಿ ಇವನರಿಯದಂಗೆ ನೋಡಲು ಹಾರೈಸುತ್ತಿದ್ದ. ಜಯಸೂರ್ಯ ಇದನ್ನ ಗಮನಿಸಿ ಮುಂದುವರೆಸಿದ: "ನಿಮ್ಮ ಸೇವಕ ಹೊಳೆಯನ ಕುದುರೆಯಿಂದ ನನಗೆ ಸಹಾಯವಾಯಿತು. ನಾನು ಕವಿರಾಜ. ನಿಮ್ಮ ರಾಜರಿಗೆ ಜಡ್ಡಿದೆಯೆಂದು ಕೇಳಿದೆ. ಅವಕಾಶವಾದರೆ ಮದ್ದು ಕೊಡುವಾ ಅಂತ ಬಂದೆ." ಅಂದ. "ಶಿಖರಸೂರ್ಯ?" "ಪೂರ್ತಿ ಹೆಸರು?" "ಶಿಖರಸೂರ್ಯ ಹೆಗಡೆ" ಭೇಟಿಯಾದವರ ಮೇಲೆ ಭೌತಿಕ ಪ್ರಭಾವ ಬೀರಿ ಅವರಲ್ಲಿ ಸ್ನೇಹೋಲ್ಲಾಸಗಳನ್ನ ಉಂಟು ಮಾಡುವ ಒಂದು ಕಲೆ ಜಯಸೂರ್ಯನಲ್ಲಿತ್ತು. ಅದನ್ನ ಈಗ ಸರಿಯಾಗಿಯೇ ಉಪಯೋಗಿಸಿದ್ದ. ಅರ್ಥಕೌಶಲ ತನ್ನ ಮಾತನ್ನು ಆಸಕ್ತಿಯಿಂದ ಆಲಿಸುತ್ತಿದ್ದಾನೆಂದು ಗೊತ್ತಿದ್ದೂ ತಾನು ಮಾತ್ರ ಯಾರನ್ನೂ ಒಲಿಸಿಕೊಳ್ಳಲು ಆತುರನಾಗಿಲ್ಲೆಂಬಂತೆ ಮಾತಾಡಿದ. ಅರ್ಥಕೌಶಲ ನಂಬಲಿಲ್ಲ. "ವಿಶ್ರಾಂತಿ ಆಗಲಿ, ಆಮೇಲೆ ಮಾತಾಡುವಾ" ಎಂದು ಹೇಳಿ ತನ್ನ ಖಾಸಗಿ ಅತಿಥಿಗೃಹದ ಮಹಡಿಗೆ ಕರೆದೊಯ್ಯುವಂತೆ ಅಲ್ಲಿದ್ದ ಸೇವಕನಿಗೆ ಹೇಳಿದ. ಇಬ್ಬರೂ ಹೋದಮೇಲೆ ಅರ್ಥಕೌಶಲ ತನಗೆ ಕೊಟ್ಟ ಗಂಟಿನಲ್ಲಿಯ ಹಣವ ಎಣಿಸಿದ. ಸರಿಯಾಗಿ ಮುನ್ನೂರು ಹಣ ಇತ್ತು. ಆದ್ದರಿಂದ ಈತ ಹೊಳೆಯನನ್ನು ಉದ್ದೇಶಪೂರ್ವಕ ಕೊಂದು ಬಂದವನಲ್ಲವೆಂದು ನಂಬಿಕೆಯಾಯಿತು. ಇನ್ನಿವನ ವೈದ್ಯವಿದ್ಯೆ, ರಾಜನ ಜಡ್ಡಿಗೆ ವೈದ್ಯನಾಗಿ ಒಂದು ಅವಕಾಶ ಕೊಟ್ಟು ನೋಡುವುದರಲ್ಲಿ ಹಾನಿಯೇನೂ ಇಲ್ಲವೆನ್ನಿಸಿತು. ಇಂದಿನ ಸಂಜೆ ಅರಮನೆಗೆ ಕರೆದೊಯ್ದು ರಾಜರ ಭೇಟಿ ಮಾಡಿಸಿ ರಾತ್ರಿ ಧರ್ಮಶಾಲೆಗೋ, ಅತಿಥಿಗೃಹಕ್ಕೋ ಅಟ್ಟಿದರಾಯಿತೆಂದು ಅರ್ಥಕೌಶಲ ಅಂದುಕೊಂಡ. ಎರಡೇ ಕಿಡಕಿಗಳಿದ್ದ ಕಲ್ಲಿನ ದೊಡ್ಡ ಕೋಣೆಯಲ್ಲಿ ಮಂಚದ ಮೇಲೆ ಅಡ್ಡಾಗಿ ಜಯಸೂರ್ಯ ಚಿಂತಿಸಿದ. ಈ ದಿನ ಅನಿರೀಕ್ಷಿತವಾದ ಅನೇಕ ಮಾತಗಳು ಅವನ ಬಾಯಿಂದ ಬಂದಿದ್ದವು. ತನ್ನನ್ನು ಶಿವಾಪುರದ ಗವಿಯಲ್ಲಿ ಕಂಡವರ್ಯಾರೂ ಇಲ್ಲಿಗೆ ಬರಲಾರೆಂದು ನಂಬಿಕೆ ಇದ್ದರೂ ಅರ್ಥಕೌಶಲ ತನ್ನ ಹೆಸರನ್ನು ಎರಡು ಬಾರಿ ಯಾಕೆ ಕೇಳಿದ? ಮನುಷ್ಯ ಮೂಬೆರಿಕಿ. ಪ್ರಾಯ ಮಾಗಿ ಕೊಬ್ಬಿದ ಮುಖದಲ್ಲಿ ನೀಳ ಮೂಗು, ಹೆಂಗಸರಿಗಿರುವಂಥ ಕೊರೆದ ಹಾಗಿದ್ದ ಹುಬ್ಬು, ಸದಾ ಏನಾದರೊಂದು ಹೊಸದನ್ನು ಹುಡುಕುವ ಕಣ್ಣುಗಳು, ಎದುರಿನವರನ್ನು ಭೇದಿಸಿ ನೋಡುವ ಅವನ ಆಸಕ್ತಿ-ಇವುಗಳ ಬಗ್ಗೆ ಚಿಂತಿಸುತ್ತಲೇ ಜಯಸೂರ್ಯ ಕೊಂಚ ಹೊತ್ತು ಅಡ್ಡಾದ. ಬೆಳ್ಳಿಯಿಂದ ಒದೆ ತಿಂದು, ಕುರುಮುನಿಯಿಂದ ಏಟು ತಿಂದು ಓಡಿ ಬರುವಾಗ ಜಯಸೂರ್ಯ ಯೋಚನೆ ಮಾಡಿದ್ದು: ದೂರದೂರಕ್ಕೆ ಶಿವಾಪುರದ ಯಾರೂ, ಅಂದರೆ ಗಾಳಿ ಕೂಡ ಸುಳಿಯದಲ್ಲಿ ಬದುಕಬೇಕೆಂದು, ಬದುಕಿ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ. ನಾಲ್ಕು ರಾತ್ರಿ ಮೂರುಗಹಲು ಓಡಿ ಬಂದು ಕಾಡಿನಲ್ಲಿ ವಿಶ್ರಾಂತಿ ತಗೊಳ್ಳುತ್ತಿದ್ದಾಗ ಅರ್ಥಕೌಶಲನ ಸೇವಕ ಹೊಳೆಯ ಸಿಕ್ಕ. ಪರಿಚಯವಾಯಿತು. ಕನಕಪುರಿಯ ವಿಷಯ, ಅರ್ಥಕೌಶಲ ಮತ್ತು ರಾಜನ ವಿಚಾರ ಗೊತ್ತಾಯಿತು. ಹೊಳೆಯನನ್ನು ಕೊಂದು ಅವನದೇ ಕುದುರೆಯೇರಿ ಇಲ್ಲಿಗೆ ಬಂದಿದ್ದ. ಶಿವಪಾದನಿಗೆ ಎಲ್ಲಾ ದೇಶಗಳಲ್ಲಿ ಶಿಷ್ಯರಿದ್ದುದರಿಂದ ಅವರಿಗೆ ಗೊತ್ತಾಗಬಾರದೆಂದೂ, ಅದಕ್ಕಾಗಿ ತನ್ನ ಹೆಸರು ಬದಲಿಸಬೇಕೆಂದೂ ಯೋಚಿಸಿದ್ದ. ಆದರೆ ತನ್ನ ಹೆಸರು "ಶಿಖರಸೂರ್ಯ" ಎಂದು ಮಾತ್ರ ಯೋಚಿಸಿದ್ದವನು 'ಹೆಗಡೆ' ಎಂದು ಸೇರಿಸಿದ್ದು ಅರ್ಥಕೌಶಲನ ಮನೆಗೆ ಬಂದ ಮೇಲೆಯೇ. ಓಡಿಬರುವಾಗ ಹಗಲು ರಾತ್ರಿ ಅನ್ನಲಿಲ್ಲ. ನಿದ್ದೆ ನೀರಡಿಕೆ ಅನ್ನಲಿಲ್ಲ. ಕಲ್ಲು ಮುಳ್ಳು ಕಂಟಿ ಅನ್ನಲಿಲ್ಲ. ಅಷ್ಟೆಲ್ಲ ಕಷ್ಟಪಟ್ಟು ಬಂದವನಿಗೆ ಇಲ್ಲೇನು ಕಾದಿದೆಯೋ ಎಂದು ಚಿಂತೆಯಿಂದಲೇ ಅಡ್ಡಾದ. ಇನ್ನು ಮೆಲೆ ನಾವೂ ಅವನನ್ನ ಶಿಖರಸೂರ್ಯ ಎಂದೇ ಕರೆಯೋಣ. By kanaja|2013-01-13T08:22:20+05:30January 13, 2013|ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಚಂದ್ರಶೇಖರ ಕಂಬಾರ|0 Comments
2021/06/16 17:48:10
https://kanaja.karnataka.gov.in/%E0%B2%B6%E0%B2%BF%E0%B2%96%E0%B2%B0%E0%B2%B8%E0%B3%82%E0%B2%B0%E0%B3%8D%E0%B2%AF-%E0%B2%95%E0%B2%A8%E0%B2%95%E0%B2%AA%E0%B3%81%E0%B2%B0%E0%B2%BF-%E0%B2%B9%E0%B2%A4%E0%B3%8D%E0%B2%A4%E0%B3%81/
mC4
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಎಣ್ಣೆ ಪಾರ್ಟಿ: ಸಿಸಿಬಿಯ 8 ಸಿಬ್ಬಂದಿ ಎತ್ತಂಗಡಿ | themangaloremirror.in ಮಂಗಳೂರು ಜನವರಿ 31: ಕರ್ತವ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ಆರೋಪಿಯೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ 8 ಮಂದಿ ಪೊಲೀಸರನ್ನು ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್​ ಆಯುಕ್ತ ಶಶಿಕುಮಾರ್ ತನಿಖೆಗೆ ಆದೇಶ ಹೊರಡಿಸಿದ್ದಾರೆ. ನಗರದ ಕುತ್ತಾರು ಬಳಿಯ ಬಾರ್​ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸಿಸಿಬಿ ಘಟಕದ 8 ಸಿಬ್ಬಂದಿ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಹಾಡಹಗಲೇ ಎಣ್ಣೆ ಪಾರ್ಟಿ ಮಾಡಿದ್ದರು. ಬಾರ್ ಬಳಿ ಸರ್ಕಾರಿ ವಾಹನ ನಿಲ್ಲಿಸಿ ಪಾರ್ಟಿ ಮಾಡಿದ್ದ ಆರೋಪ ಕೇಳಿಬಂದಿತ್ತು. ಜೊತೆಗೆ, ಸಿಸಿಬಿ ಪೊಲೀಸರ ಪಾರ್ಟಿ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪೊಲೀಸ್‌‌‌‌‌ ಆಯುಕ್ತ ಎನ್‌‌.ಶಶಿಕುಮಾರ್‌ ಅವರು, ಎಂಟು ಸಿಸಿಬಿ ಪೊಲೀಸರ ವಿರುದ್ದ ಶಿಸ್ತು ಕ್ರಮಕೈಗೊಂಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ಐಎಎಸ್‌‌‌ ಹಾಗೂ ಐವರು ಕಾನ್‌‌ಸ್ಟೇಬಲ್‌‌‌‌ಗಳನ್ನು ನಗರ ಪೊಲೀಸ್‌ ಕಮೀಷನರೇಟ್‌‌‌ನ ಬೇರೆ ಬೇರೆ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ. ಸಿಸಿಬಿ ಘಟಕದ 8 ಸಿಬ್ಬಂದಿ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಆದೇಶದಂತೆ ಮೂವರು ಐಎಎಸ್‌‌‌ ಹಾಗೂ ಐವರು ಹೆಡ್‌ ಕಾನ್‌‌ಸ್ಟೇಬಲ್‌‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೊಣಾಜೆ, ಬಜ್ಪೆ, ಉತ್ತರ, ಕಂಕನಾಡಿ, ಮಂಗಳೂರು ದಕ್ಷಿಣ, ಉರ್ವ ಹಾಗೂ ಬರ್ಕೆ ಪೊಲೀಸ್‌ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಮೂವರು ಎಎಸ್ಐಗಳು ಹಾಗು ಐದು ಮಂದಿ ಮುಖ್ಯ ಪೇದೆಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಟ್ಟಿಂಗ್ ಆರೋಪಿ ಜೊತೆ ಪಾರ್ಟಿ ಮಾಡಿರುವುದು ಇಲಾಖೆಗೆ ಮುಜುಗರ ತರುವಂತಹದ್ದು, ಇದರಿಂದ ಇಲಾಖೆ ಮೇಲಿನ ನಂಬಿಕೆಗೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2021/04/15 01:37:49
https://themangaloremirror.in/8-police-person-transfered-over-alleged-drinks-party-with-criminals/
mC4
ಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ | Prajavani ಸಂಪಾದಕೀಯ Updated: 13 ಮೇ 2020, 07:07 IST ಕೊರೊನಾ ವೈರಾಣು ಪಸರಿಸುವಿಕೆ ತಡೆಯುವ ಉದ್ದೇಶದಿಂದ ಒಂದೂವರೆ ತಿಂಗಳ ಹಿಂದೆ ಹೇರಲಾದ ಲಾಕ್‌ಡೌನ್‌ನಿಂದಾಗಿ ದೇಶದ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. 'ಎಲ್ಲಿರುವಿರೋ ಅಲ್ಲಿಯೇ ಇರಿ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ಹೇಳಿದ್ದರು. ಕಣ್ಣಿಗೆ ಕಾಣದ ವೈರಿಯ ವಿರುದ್ಧದ ಹೋರಾಟದಲ್ಲಿ ಇದು ಅನಿವಾರ್ಯ ಎಂದು ಜನರು ಅದನ್ನು ಪಾಲಿಸಿದ್ದರು. ಆದರೆ, ಎಲ್ಲೆಲ್ಲೋ ಇರುವವರು ಅಲ್ಲಲ್ಲೇ ಇರುವುದು ಎಷ್ಟು ತ್ರಾಸದಾಯಕ ಎಂಬುದು ಲಾಕ್‌ಡೌನ್‌ ಮತ್ತೆ ಮತ್ತೆ ವಿಸ್ತರಣೆಯಾದಾಗ ಅರಿವಾಗುತ್ತಾ ಹೋಯಿತು. ಜನ ಮತ್ತು ಜೀವನೋಪಾಯ, ವ್ಯಾಪಾರೋದ್ಯಮ ಮತ್ತು ಅರ್ಥ ವ್ಯವಸ್ಥೆಗಳೆಲ್ಲವೂ ತಾಳತಪ್ಪಿ, ಕೊರೊನಾಕ್ಕಿಂತ ದೊಡ್ಡ ಸಂಕಷ್ಟದತ್ತ ಸಾಗುತ್ತಿದ್ದೇವೆ ಎಂಬುದರ ಸೂಚನೆಗಳು ಇತ್ತೀಚಿನ ಕೆಲ ವಾರಗಳಲ್ಲಿ ಸಿಕ್ಕಿವೆ. ಎಲ್ಲೆಲ್ಲೋ ಇದ್ದವರು ಮನೆ ಸೇರುವ ತವಕದಲ್ಲಿ ತಮಗೆ ಮತ್ತು ತಮ್ಮಿಂದ ಇತರರಿಗೆ ಕೊರೊನಾ ಸೋಂಕು ತಗುಲಬಹುದು ಎಂಬುದನ್ನೇ ಮರೆತರು. ಭಾರತದಂತಹ ಅರ್ಥ ವ್ಯವಸ್ಥೆಯಲ್ಲಿ ಕಾರ್ಮಿಕರು ಅಮೂಲ್ಯ. ಆದರೆ, ಅಂತಹ ಕಾರ್ಮಿಕರು ನೂರಾರು ಕಿಲೊಮೀಟರ್‌ ನಡೆದು, ಸೈಕಲ್ ತುಳಿದು ಊರು ಸೇರಬೇಕಾದ ಸ್ಥಿತಿ, ಈ ಅನಿವಾರ್ಯ ಪಯಣದಲ್ಲಿ ಎದುರಿಸಿದ ತೊಂದರೆಗಳು, ಕೆಲವರು ಜೀವವನ್ನೇ ತೆತ್ತ ಉದಾಹರಣೆಗಳೂ ನಮ್ಮ ಮುಂದೆ ಈಗ ಇವೆ. ಹಳಿ ತಪ್ಪಿರುವ ವ್ಯವಸ್ಥೆಯನ್ನು ಇನ್ನಾದರೂ ಹಳಿಗೆ ತಾರದಿದ್ದರೆ, ಜನಜೀವನದ ಮೇಲೆ ಈಗಾಗಲೇ ಬಿದ್ದಿರುವ ಮತ್ತು ಮುಂದೆ ಬೀಳಲಿರುವ ಹೊಡೆತವನ್ನು ತಾಳಿಕೊಳ್ಳುವುದು ಈ ದೇಶಕ್ಕೆ ಸುಲಭ ಸಾಧ್ಯವಲ್ಲ. ಹಾಗಾಗಿಯೇ, ಒಂದು ವಾರದಿಂದ ನಿರ್ಬಂಧಗಳಲ್ಲಿ ತುಸು ಸಡಿಲಿಕೆ ಆಗಿದೆ. ಆದರೆ, ಈ ದಿನಗಳಲ್ಲಿ, ಕೋವಿಡ್‌–19 ಪ್ರಕರಣಗಳು ದೃಢಪಡುತ್ತಿರುವ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆಯಾಗಿದೆ. ಇದು ಆಡಳಿತ ನಡೆಸುತ್ತಿರುವವರಲ್ಲಿ ದ್ವಂದ್ವ ಮತ್ತು ಕಳವಳ ಮೂಡಿಸಿರುವ ಸಾಧ್ಯತೆಗಳಿವೆ. ಪ್ರಧಾನಿ ಜತೆಗೆ ಮುಖ್ಯಮಂತ್ರಿಗಳು ಸೋಮವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಇದು ವ್ಯಕ್ತವಾಗಿದೆ. ಆರ್ಥಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಾರಿಗೆ ಆರಂಭವಾಗಲೇಬೇಕಿದೆ ಎಂಬ ವಿಚಾರದಲ್ಲಿ ಮುಖ್ಯಮಂತ್ರಿಗಳಲ್ಲಿ ಸಹಮತ ಕಾಣಿಸಿಲ್ಲ. ಸೋಮವಾರದಿಂದ 15 ಮಾರ್ಗಗಳಲ್ಲಿ 30 ರೈಲುಗಳ ಸೇವೆ ಆರಂಭವಾಗಿದೆ. ಈ ರೈಲು ಸಂಚಾರಕ್ಕೆ ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣದ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅಂತರರಾಜ್ಯ ಸಾರ್ವಜನಿಕ ಸಾರಿಗೆ ಶುರುವಾಗಲಿ ಎಂದು ಗೋವಾ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ. ಸಾರ್ವಜನಿಕ ಸಾರಿಗೆಗೆ ಅವಕಾಶ ಕೊಡಿ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಕೋರಿದ್ದಾರೆ ಎಂದು ವರದಿಯಾಗಿದೆ. ಆರ್ಥಿಕ ಚಟುವಟಿಕೆಗೆ ಚಾಲನೆ ನೀಡಲು ಮಾತ್ರವಲ್ಲ, ಎಲ್ಲೆಲ್ಲೋ ಸಿಲುಕಿಕೊಂಡಿರುವವರು ತಮ್ಮ ಗಮ್ಯ ಸೇರಲು ಕೂಡ ಸಾರ್ವಜನಿಕ ಸಾರಿಗೆಯನ್ನು ಆರಂಭಿಸಬೇಕಿದೆ. ಲಾಕ್‌ಡೌನ್‌ನಿಂದಾಗಿ ಅಪರಿಚಿತ ನಗರದಲ್ಲಿ ಸಿಲುಕಿಕೊಂಡ ಕಾರ್ಮಿಕರು ಊರಿಗೆ ಮರಳಲು ಸರ್ಕಾರವೇ ಶ್ರಮಿಕ ರೈಲು ವ್ಯವಸ್ಥೆ ಮಾಡಿದೆ. ಬಹಳಷ್ಟು ಮಂದಿ ವಲಸೆ ಕಾರ್ಮಿಕರು ಈಗ ಊರು ಸೇರಿಕೊಂಡಿದ್ದಾರೆ. ಗ್ರಾಮಗಳ ಜನರು ದುಡಿಯಲು ಬಾರದೇ ಇದ್ದರೆ ಪಟ್ಟಣ, ನಗರಗಳ ಕಾರ್ಖಾನೆಗಳ ಯಂತ್ರ ತಿರುಗುವುದಿಲ್ಲ. ಎಲ್ಲವೂ ಸಹಜ ಸ್ಥಿತಿಯತ್ತ ಹೊರಳುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವುದು ಕೂಡ ಭಾವನಾತ್ಮವಾಗಿ ಬಹಳ ಮುಖ್ಯ. ಸರಕು ಸಾಗಾಟ ಮತ್ತು ಜನ ಸಂಚಾರವು ಅರ್ಥವ್ಯವಸ್ಥೆಯ ಜೀವನಾಡಿ ಇದ್ದಂತೆ. ಹಾಗಾಗಿ, ಸಾರ್ವಜನಿಕ ಸಾರಿಗೆಯನ್ನು ಆರಂಭಿಸುವ ದಿಸೆಯಲ್ಲಿ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕು. ಕೊರೊನಾ ಪಿಡುಗು ಹರಡುವ ವೇಗ ಮತ್ತು ವಿಧಾನಗಳೆರಡನ್ನೂ ಗಮನದಲ್ಲಿ ಇರಿಸಿಕೊಂಡೇ ಈ ನಿರ್ಧಾರ ಕೈಗೊಳ್ಳಬೇಕು. ಬಸ್ಸು, ರೈಲು ಮತ್ತು ಈ ಎರಡರ ನಿಲ್ದಾಣಗಳು ಎಷ್ಟು ಕೊಳಕಾಗಿರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಈಗಿನ ಸನ್ನಿವೇಶದಲ್ಲಿಯೂ ಅದೇ ಕೊಳಕುತನವನ್ನು ಮುಂದುವರಿಸಿದರೆ ಅದಕ್ಕೆ ತೆರಬೇಕಾದ ಬೆಲೆಯನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ, ನಿಲ್ದಾಣಗಳು, ರೈಲು, ಬಸ್ಸುಗಳನ್ನು ಸ್ವಚ್ಛಗೊಳಿಸಬೇಕು, ಸೋಂಕುಮುಕ್ತಗೊಳಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಸೋಂಕು ಒಂದೂರಿನಿಂದ ಇನ್ನೊಂದು ಊರಿಗೆ ಸಾಗುತ್ತಿಲ್ಲ ಎಂಬುದನ್ನು ಖಾತರಿ‍ಪಡಿಸಿಕೊಳ್ಳಬೇಕು. ಅತ್ಯಂತ ಆರೋಗ್ಯಕರವಾದ, ಗರಿಷ್ಠ ಎಚ್ಚರದ ಪ್ರಯಾಣ ಸಾಧ್ಯವಾಗುವಂತೆ ಸರ್ಕಾರಗಳು ನೋಡಿಕೊಳ್ಳಬೇಕು. ಜನ ಕೂಡ ಸಣ್ಣ ಉದಾಸೀನಕ್ಕೂ ಎಡೆಮಾಡಿಕೊಡದೆ ಜಾಗೃತರಾಗಿರಬೇಕು. ಸಾರ್ವಜನಿಕ ಸಾರಿಗೆ ಆರಂಭಿಸುವ ಬಗ್ಗೆ ರಾಜ್ಯಗಳಲ್ಲಿ ಒಮ್ಮತ ಇಲ್ಲ. ಹಾಗಾಗಿ, ಯಾವೆಲ್ಲ ಜಾಗರೂಕತೆ ಇರಬೇಕು ಎಂಬ ಮಾರ್ಗಸೂಚಿಯನ್ನು ಕೇಂದ್ರವೇ ಸಿದ್ಧಪಡಿಸುವುದು ಒಳಿತು. '); $('#div-gpt-ad-727225-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-727225'); }); googletag.cmd.push(function() { googletag.display('gpt-text-700x20-ad2-727225'); }); },300); var x1 = $('#node-727225 .field-name-body .field-items div.field-item > p'); if(x1 != null && x1.length != 0) { $('#node-727225 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-727225').addClass('inartprocessed'); } else $('#in-article-727225').hide(); } else { _taboola.push({article:'auto', url:'https://www.prajavani.net/op-ed/editorial/start-public-transportation-and-maximize-covid-19-coronavirus-awareness-in-society-727225.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-727225', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-727225'); }); googletag.cmd.push(function() { googletag.display('gpt-text-300x20-ad2-727225'); }); // Remove current Outbrain //$('#dk-art-outbrain-727225').remove(); //ad before trending $('#mob_rhs1_727225').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-727225 .field-name-body .field-items div.field-item > p'); if(x1 != null && x1.length != 0) { $('#node-727225 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-727225 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-727225'); }); } else { $('#in-article-mob-727225').hide(); $('#in-article-mob-3rd-727225').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-727225','#in-article-733622','#in-article-733319','#in-article-733036','#in-article-732683']; var twids = ['#twblock_727225','#twblock_733622','#twblock_733319','#twblock_733036','#twblock_732683']; var twdataids = ['#twdatablk_727225','#twdatablk_733622','#twdatablk_733319','#twdatablk_733036','#twdatablk_732683']; var obURLs = ['https://www.prajavani.net/op-ed/editorial/start-public-transportation-and-maximize-covid-19-coronavirus-awareness-in-society-727225.html','https://www.prajavani.net/op-ed/editorial/tushar-mehta-solicitor-general-of-india-editorial-public-interest-litigation-supreme-court-of-india-733622.html','https://www.prajavani.net/op-ed/editorial/infection-testing-carelessness-in-terms-of-quick-results-733319.html','https://www.prajavani.net/op-ed/editorial/agricultural-crisis-needs-implementation-prioritized-733036.html','https://www.prajavani.net/op-ed/editorial/discussion-about-classical-kannada-language-732683.html']; var vuukleIds = ['#vuukle-comments-727225','#vuukle-comments-733622','#vuukle-comments-733319','#vuukle-comments-733036','#vuukle-comments-732683']; // var nids = [727225,733622,733319,733036,732683]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2020/06/05 13:46:03
https://www.prajavani.net/op-ed/editorial/start-public-transportation-and-maximize-covid-19-coronavirus-awareness-in-society-727225.html
mC4
ಮೊಜ್ ಅಪ್ಲಿಕೇಶನ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ? | How To Download Videos On Your Smartphone From Moj App - Kannada Gizbot ಸದ್ಯ ಈ ಫೋನ್‌ಗಳು ಮೊಬೈಲ್‌ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿವೆ 46 min ago ಸೈಬರ್‌ ಕ್ರೈಮ್‌ ದಾಳಿಗೆ ಒಳಗಾದವರಲ್ಲಿ ಭಾರತೀಯರೇ ಹೆಚ್ಚು! 1 hr ago ಸದ್ಯ ಈ ಫೋನ್‌ಗಳು ಮೊಬೈಲ್‌ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿವೆ! 24 hrs ago ಕಳೆದು ಹೋದ ಸ್ಮಾರ್ಟ್‌ಫೋನ್‌ನಲ್ಲಿನ ನಿಮ್ಮ ವಾಟ್ಸಾಪ್‌ ಅಕೌಂಟ್‌ ಮತ್ತೆ ಪಡೆಯುವುದು ಹೇಗೆ? 1 day ago ರಿಯಲ್‌ಮಿ C25 ಫಸ್ಟ್‌ ಲುಕ್: ಬಜೆಟ್‌ ದರದಲ್ಲಿ ಜಬರ್ದಸ್ತ್ ಕಾರ್ಯವೈಖರಿಯ ಫೋನ್! | Published: Friday, March 5, 2021, 16:47 [IST] ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ಶಾರ್ಟ್‌ ವಿಡಿಯೋ ಪ್ಲಾಟ್‌ಫಾರ್ಮ್ ಮೊಜ್ ಆಪ್‌ ಹೆಚ್ಚಿನ ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ಫಿಲ್ಟರ್‌ಗಳು, ಸ್ಟಿಕ್ಕರ್‌ಗಳು ಮತ್ತು ಹೆಚ್ಚಿನ ಫೀಚರ್ಸ್‌ಗಳ ಆಯ್ಕೆಗಳೊಂದಿಗೆ 15 ಸೆಕೆಂಡುಗಳ ವೀಡಿಯೊಗಳನ್ನು ರಚಿಸುವ ಸಾಮರ್ಥ್ಯವನ್ನು ಮೊಜ್ ಅಪ್ಲಿಕೇಶನ್ ಹೊಂದಿದೆ. ಶೇರ್‌ಚಾಟ್ ಒಡೆತನದ ಮೋಜ್‌ ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಆಗಿದೆ. ಹೌದು, ಸ್ವದೇಶಿ ಶಾರ್ಟ್‌ ವಿಡಿಯೋ ಅಪ್ಲಿಕೇಶನ್‌ ಮೊಜ್‌ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚಿನ ವಿಡಿಯೋ ಕ್ರಿಯೆಟರ್ಸ್‌ ಇದ್ದಾರೆ ಎಂದು ಮೊಜ್ ಅಪ್ಲಿಕೇಶನ್ ಹೇಳಿಕೊಂಡಿದೆ. ಈ ಅಪ್ಲಿಕೇಶನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಬಹುದು ಮತ್ತು ಶೇರ್‌ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಿರುವುದರಿಂದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಅಷ್ಟೆ ಅಲ್ಲ ಮೊಜ್‌ ಅಪ್ಲಿಕೇಶನ್‌ ವೀಡಿಯೋಗಳನ್ನ ಡೌನ್‌ಲೋಡ್‌ ಸಹ ಮಾಡಬಹುದಾಗಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ. ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ಹಲವು ಮಾದರಿಯ ಶಾರ್ಟ್‌ ವಿಡಿಯೋ ಅಪ್ಲಿಕೇಶನ್‌ಗಳು ಬಿಡುಗಡೆ ಆಗಿವೆ. ಇದರಲ್ಲಿ ಮೊಜ್‌ ಅಪ್ಲಿಕೇಶನ್‌ ಕೂಡ ಒಂದು. ಇದು ಸ್ವದೇಶಿ ಅಪ್ಲಿಕೇಶನ್‌ ಆಗಿದ್ದು, ಹೆಚ್ಚಿನ ಜನರನ್ನು ಆಕರ್ಷಿಸಿದೆ. ಇನ್ನು ಈ ಅಪ್ಲಿಕೇಶನ್‌ ಬಳಸಿ ವಿಡಿಯೋ ಕ್ರಿಯೆಟ್‌ ಮಾಡುವುದಷ್ಟೇ ಅಲ್ಲ, ವಿಡಿಯೋ ಶೇರ್‌ ಮಾಡುವ ಅವಕಾಶ ಕೂಡ ಇದೆ. ಇದಲ್ಲದೆ ವಿಡಿಯೋ ಡೌನ್‌ಲೋಡ್‌ ಸೌಲಭ್ಯ ಕೂಡ ಇದೆ. ಮೊಜ್‌ ಅಪ್ಲಿಕೇಶನ್‌ನಲ್ಲಿ ನೀವು ರಚಿಸಿರುವ ನಿಮ್ಮ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಬೇಕು ಎನಿಸುವುದು ಸಾಮಾನ್ಯ. ಆದ್ರಿಂದ ಮೊಜ್‌ ಅಪ್ಲಿಕೇಶನ್‌ನಲ್ಲಿ ವಿಡಿಯೋ ಡೌನ್‌ಲೋಡ್‌ ಮಾಡಬೇಕಾದ್ರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ. ಹಂತ:1 ಮೊಜ್ ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊವನ್ನು ಆಯ್ಕೆ ಮಾಡಿ. ಹಂತ:2 ನಂತರ ಬಾಣದ ಐಕಾನ್ ಕ್ಲಿಕ್ ಮಾಡಿ, ಅದು ಬಲಭಾಗದಲ್ಲಿ ಕೆಳಭಾಗದಲ್ಲಿ ಗೋಚರಿಸುತ್ತದೆ. ಹಂತ:3 ಇದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲು ನೀವು ಆರಿಸಬಹುದಾದ 'ಶೇರ್' ಟ್ಯಾಬ್ ಅನ್ನು ತೆರೆಯಬೇಕು. ಇದರಲ್ಲಿ "ಡೌನ್‌ಲೋಡ್" ಆಯ್ಕೆಯನ್ನು ಸಹ ತೋರಿಸಲಿದೆ. ಹಂತ:4 ಇದರ ಮೇಲೆ ಕ್ಲಿಕ್ ಮಾಡಿ, ಅದರ ನಂತರ ಅಪ್ಲಿಕೇಶನ್ ನಿಮ್ಮ ಸಾಧನದಲ್ಲಿ ಫೋಟೋಗಳು, ಮಾಧ್ಯಮ ಮತ್ತು ಫೈಲ್‌ಗಳನ್ನು ಪ್ರವೇಶಿಸಲು "ಅನುಮತಿಸು" ಕ್ಲಿಕ್ ಮಾಡಿ. ಹಂತ:5 ನಂತರ ನಿಮ್ಮ ಡಿವೈಸ್‌ನಲ್ಲಿ ವೀಡಿಯೊ ಡೌನ್‌ಲೋಡ್ ಮಾಡಲು ಪ್ರಾರಂಭಿಸಲಿದೆ. ಹಂತ:6 ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ನೀವು "ನಿಮ್ಮ ಫೋನ್ ಗ್ಯಾಲರಿಗೆ ಪೋಸ್ಟ್ ಡೌನ್‌ಲೋಡ್ ಮಾಡಲಾಗಿದೆ" ಎಂದು ಬರೆಯುವ ಅಧಿಸೂಚನೆಯನ್ನು ಪಡೆಯುತ್ತೀರಿ. ಹಂತ:7 ನಂತರ ವೀಡಿಯೊ ವೀಕ್ಷಿಸಲು, ನಿಮ್ಮ ಫೋನ್‌ನಲ್ಲಿ ಗ್ಯಾಲರಿಯನ್ನು ತೆರೆಯಿರಿ ಮತ್ತು ವೀಡಿಯೊಗಳ ಆಲ್ಬಮ್‌ಗೆ ಹೋಗಿ. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ, ಫೋನ್‌ನ ಗ್ಯಾಲರಿಯಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲಾಗುತ್ತದೆ. ಇದು ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನಂತರ ಆಫ್‌ಲೈನ್‌ನಲ್ಲಿ ನೋಡುವುದನ್ನು ಸುಲಭಗೊಳಿಸುತ್ತದೆ. ಇನ್ನು ಮೊಜ್ ಅಪ್ಲಿಕೇಶನ್ ಈಗ 15 ಭಾಷೆಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಪಂಜಾಬಿ, ಪಂಜಾಬಿ, ಮಲಯಾಳಂ, ಬಂಗಾಳಿ ಭಾಷೆಗಳು ಸೇರಿದಂತೆ ಹೆಚ್ಚಿನ ಭಾಷೆಗಳು ಬೆಂಬಲಿಸಲಿವೆ. ಲಿಪ್ ಸಿಂಕ್ ವೀಡಿಯೊಗಳು, ಸಾಮಾನ್ಯ ವೀಡಿಯೊಗಳು, ಸ್ಪೆಷಲ್‌ ಎಫೆಕ್ಟ್‌ ವೀಡಿಯೊಗಳು, ಸ್ಟಿಕ್ಕರ್‌ಗಳು ಮತ್ತು ಎಮೋಟಿಕಾನ್‌ಗಳೊಂದಿಗೆ ಮಾಡಬಹುದು. ಜೊತೆಗೆ ಇದು ಪ್ರಯಾಣದಲ್ಲಿರುವಾಗ ವೀಡಿಯೊಗಳನ್ನು ಎಡಿಟ್‌ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. Moj app, which is an Indian short video making app lets you download videos as well. Here's how to download Moj app videos on Android and iOS.to know more visit to kannada.gizbot.com
2021/04/19 22:06:21
https://kannada.gizbot.com/how-to/how-to-download-videos-on-your-smartphone-from-moj-app-026097.html?utm_medium=Desktop&utm_source=GZ-KN&utm_campaign=Similar-Topic-Slider
mC4
ಬೇರೆಡೆ ಬಾಳುವುದೇ ಈ ರಸಬಾಳೆ? | Prajavani ಬೇರೆಡೆ ಬಾಳುವುದೇ ಈ ರಸಬಾಳೆ? ಜನಗೂಡು ರಸಬಾಳೆ' ರಾಜ್ಯದ ವಿಶಿಷ್ಟ ಹಣ್ಣಿನ ತಳಿ. ಅನನ್ಯ ರುಚಿ ಹಾಗೂ ಸುವಾಸನೆಯಿಂದಾಗಿ ಇದು ವಿಶ್ವ ಪ್ರಸಿದ್ಧಿ ಪಡೆದಿದೆ. ಹೇರಳ ಪೌಷ್ಟಿಕಾಂಶ ಹೊಂದಿರುವ ಈ ಹಣ್ಣಿಗೆ ವ್ಯಾಪಕ ಬೇಡಿಕೆ ಇದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ರಾಜನಂತೆ ಮೆರೆದಿದ್ದ ರಸಬಾಳೆಗೆ ಪನಾಮಾ ಸೊರಗು ರೋಗ ಮಾರಕವಾಗಿ ಪರಿಣಮಿಸಿತ್ತು. ಬ್ಯಾಕ್ಟೀರಿಯಾದಿಂದ ಬರುವ ಈ ರೋಗದಿಂದ ಗಿಡಗಳು ಸೊರಗಿ ಹೋಗುತ್ತಿದ್ದವು. ಗಿಡಗಳಿಗೆ ಪದೇಪದೇ ರೋಗ ಬರುವುದು, ಇಳುವರಿ ಹಾಗೂ ಆದಾಯ ಕಡಿಮೆ ಎಂಬ ಕಾರಣಕ್ಕೆ ರೈತರು ರಸಬಾಳೆಯನ್ನು ಕೈಬಿಟ್ಟು, ಆರ್ಥಿಕವಾಗಿ ಲಾಭ ತರುವ ಏಲಕ್ಕಿ ಬಾಳೆಯನ್ನು ನೆಚ್ಚಿಕೊಂಡರು. ಇದರ ಪರಿಣಾಮ ನೂರಾರು ಎಕರೆಗಳಲ್ಲಿ ಬೆಳೆಯುತ್ತಿದ್ದ ರಸಬಾಳೆ, ನಾಲ್ಕೈದು ಎಕರೆಗಳಿಗೆ ತಗ್ಗಿತು. ಇದು ಹೀಗೇ ಮುಂದುವರಿದರೆ ಭೌಗೋಳಿಕ ಮಹತ್ವ ಹೊಂದಿರುವ ಈ ಹಣ್ಣಿನ ತಳಿಯೇ ನಶಿಸಿಹೋಗುವ ಅಪಾಯವಿದೆ ಎಂಬ ಆತಂಕ ಕೃಷಿ ತಜ್ಞರದ್ದು.ರಸಬಾಳೆಗೆ ಕಾಯಕಲ್ಪ ನೀಡಿ, ಮುಂದಿನ ಪೀಳಿಗೆಗೆ ಅದರ ರುಚಿ ಹಾಗೂ ಸುವಾಸನೆಯನ್ನು ದಾಟಿಸುವ ಸಾಮೂಹಿಕ ಪ್ರಯತ್ನಗಳೂ ನಡೆಯುತ್ತಿವೆ. ಕೆಲ ತೋಟಗಾರಿಕಾ ತಜ್ಞರು ಹಾಗೂ ರೈತರು ನಂಜನಗೂಡು ರಸಬಾಳೆಯನ್ನು ಸಂರಕ್ಷಿಸಿ, ಬೆಳೆಸಲು ಪಣ ತೊಟ್ಟಿದ್ದಾರೆ. ರಸಬಾಳೆಗೆ ಮತ್ತೊಮ್ಮೆ ಕಾಯಕಲ್ಪ ನೀಡಲು ಮುಂದಾದವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ಮುಖ್ಯಸ್ಥ ಡಾ.ಬಿ.ಎನ್. ಸತ್ಯನಾರಾಯಣ. ಅವರ ಆಸಕ್ತಿಯ ಫಲವಾಗಿ 2007ರಲ್ಲಿ ಕೇಂದ್ರ ಸರ್ಕಾರದ ₹1 ಕೋಟಿ ಧನಸಹಾಯದೊಂದಿಗೆ 'ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ'ವನ್ನು (ಟಿಶ್ಯೂ ಕಲ್ಚರ್ ಲ್ಯಾಬ್) ಸ್ಥಾಪಿಸಲಾಯಿತು. ಪ್ರಯೋಗಾಲಯದ ಉಸ್ತುವಾರಿ ವಹಿಸಿದ್ದ ಅವರು, ಅವನತಿಯ ಅಂಚಿನಲ್ಲಿರುವ ವಿಶ್ವ ಪ್ರಸಿದ್ಧ ನಂಜನಗೂಡು ರಸಬಾಳೆಯನ್ನು ಅಂಗಾಂಶ ಕೃಷಿ ಪದ್ಧತಿ ಮೂಲಕ ಅಭಿವೃದ್ಧಿಪಡಿಸಿದ್ದರು. ರಸಬಾಳೆ ಬೆಳೆಯುವ ತೋಟಗಳಿಗೆ ಹೋಗಿ ಬಾಳೆಯ ಕಾಂಡಗಳನ್ನು ತಂದು ಸಣ್ಣ ಭಾಗಗಳನ್ನಾಗಿ ಮಾಡಲಾಗುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಾಟಲಿಗಳಲ್ಲಿ ಸಸಿಗಳಿಗೆ ಅಗತ್ಯ ಇರುವ ಆಹಾರವನ್ನು (ಉದಾ-ನೈಟ್ರೋಜನ್, ಫಾಸ್ಪರಸ್, ಪೊಟ್ಯಾಶಿಯಂ, ಆಕ್ಸಿನ್ಸ್) ತುಂಬಲಾಗುತ್ತದೆ. ಕಾಂಡದಿಂದ ಪಡೆದ ಚಿಕ್ಕ ಭಾಗವನ್ನು ಬಾಟಲಿಯಲ್ಲಿಟ್ಟು ಕೆಲವು ದಿನಗಳ ನಂತರ ಹೊರತೆಗೆದು ಇನ್ನೊಂದು ಬಾಟಲಿಯಲ್ಲಿ ಹಾಕುತ್ತಾರೆ. ಹೀಗೆ ಸಸಿಯನ್ನು ಪೋಷಿಸಿ ಬೆಳೆಸಲಾಗುತ್ತದೆ. 'ಒಂದು ಬಾಳೆಯ ಕಾಂಡವನ್ನು ಪಡೆದು ಅದರಿಂದ ಲಕ್ಷ ಸಸಿಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಸಂಖ್ಯೆ ಹೆಚ್ಚಿದಂತೆಲ್ಲ ಬಾಳೆಯ ಗಿಡದ ಗುಣಮಟ್ಟ ಕುಸಿದು ರೈತರಿಗೆ ನಷ್ಟವಾಗುವುದನ್ನು ತಪ್ಪಿಸಲು 800 ಸಸಿಗಳನ್ನು ಮಾತ್ರ ಮಾಡುತ್ತೇವೆ' ಎಂದು ಹೇಳುತ್ತಾರೆ ಡಾ.ಸತ್ಯನಾರಾಯಣ. ರಸಬಾಳೆಗೆ ಈ ಹಿಂದೆ ಇದ್ದ ಪ್ರಸಿದ್ಧಿಯನ್ನು ಮರುಕಳಿಸುವಂತೆ ಮಾಡುವುದು ಸತ್ಯನಾರಾಯಣ ಅವರ ಮಹತ್ವಾಕಾಂಕ್ಷೆಗಳಲ್ಲಿ ಒಂದು. ಆದರೆ, ಅದಕ್ಕೆ ರೈತರಿಂದ ನಿರೀಕ್ಷಿತ ಬೆಂಬಲ, ಪ್ರೋತ್ಸಾಹ, ಸಹಕಾರ ದೊರೆತಿಲ್ಲ ಎಂಬುದು ಅವರ ಅನಿಸಿಕೆ. 'ನಂಜನಗೂಡು ರಸಬಾಳೆ ತಿನ್ನಲು ಮೃದುವಾಗಿರುತ್ತದೆ. ಈ ಹಣ್ಣನ್ನು ತಿಂದಾಗ ಸಿಗುವ ತೃಪ್ತಿ, ಪಚ್ಚ ಬಾಳೆ ತಿಂದಾಗ ಸಿಗುವುದಿಲ್ಲ. ನಂಜನಗೂಡು ಭಾಗದಲ್ಲಿ 1965ರಲ್ಲಿ 400–500 ಎಕರೆ ಪ್ರದೇಶದಲ್ಲಿ ರಸಬಾಳೆಯನ್ನು ಬೆಳೆಯಲಾಗುತ್ತಿತ್ತು. ಆದರೆ, ಈಗ 3–4 ಎಕರೆಯಷ್ಟು ಪ್ರದೇಶದಲ್ಲೂ ರಸಬಾಳೆ ಗಿಡಗಳು ಸಿಗುವುದು ಕಷ್ಟ' ಎನ್ನುತ್ತಾರೆ ಅವರು. ರೈತರು ಕಬಿನಿ ನದಿ ನೀರನ್ನು ಬಳಸಿ ಬಾಳೆಯನ್ನು ಬೆಳೆಯುತ್ತಿದ್ದರು. ಇಲ್ಲಿನ ಮಣ್ಣು, ನದಿ ನೀರಿನಲ್ಲಿರುವ ವಿಶಿಷ್ಟ ಸತ್ವದಿಂದಾಗಿ ರಸಬಾಳೆ ಅನನ್ಯ ರುಚಿ ಹಾಗೂ ಸುವಾಸನೆ ಹೊಂದಿದೆ ಎಂದು ರೈತರು ಭಾವಿಸಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪನಾಮಾ ಸೊರಗು ರೋಗ ಕಾಣಿಸಿಕೊಂಡಿತ್ತು. ಇದರಿಂದ ರೈತರು ಬೆಳೆ ಬೆಳೆಯುವುದನ್ನೇ ಕಡಿಮೆ ಮಾಡಿದ್ದರು. 'ರಸಬಾಳೆಯ ರೋಗನಿರೋಧಕ ಗುಣವನ್ನು ಹೆಚ್ಚಿಸುವುದು, ಉತ್ತಮ ಇಳುವರಿ ನೀಡುವ ಸಸಿಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಒಂದೇ ಕಾಂಡದಿಂದ ಹೆಚ್ಚಿನ ಸಸಿಗಳನ್ನು ಬೆಳೆಸಲು ಸಂಶೋಧನೆ ನಡೆಸಿದೆವು. ಇದಕ್ಕೆ ಪೂರಕವಾದ ಆಧುನಿಕ ಪ್ರಯೋಗಾಲಯವನ್ನು ಸ್ಥಾಪಿಸಿದೆವು. 1 ಲಕ್ಷ ಸಸಿಗಳನ್ನು ಬೆಳೆಸುವಂತಹ ತಂತ್ರಜ್ಞಾನ ನಮ್ಮಲ್ಲಿ ಲಭ್ಯವಿದೆ. ಆದರೆ, ರೈತರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸತ್ಯನಾರಾಯಣ. 'ಈವರೆಗೆ ರಸಬಾಳೆಯ 70 ಸಾವಿರ ಸಸಿಗಳನ್ನು ರೈತರಿಗೆ ವಿತರಿಸಿದ್ದೇವೆ. ಆರಂಭದಲ್ಲಿ ನಂಜನಗೂಡು ತಾಲ್ಲೂಕಿನ ರೈತರಿಗೆ ಮಾತ್ರ ಈ ಸಸಿಗಳನ್ನು ವಿತರಿಸಲು ನಿರ್ಧರಿಸಿದ್ದೆವು. ಬೇರೆ ಭಾಗದಲ್ಲಿ ಬೆಳೆದರೆ ಅದು ತನ್ನ ಗುಣವನ್ನು ಕಳೆದುಕೊಳ್ಳಬಹುದು ಎಂಬ ಆತಂಕ ನಮ್ಮದಾಗಿತ್ತು. ಮುಂದೆ ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಕನಕಪುರ ತಾಲ್ಲೂಕಿನ ರೈತರಿಗೆ ಸಸಿಗಳನ್ನು ನೀಡಿದ್ದೇವೆ. ನಂಜನಗೂಡು ಭಾಗದಲ್ಲಿ ಬೆಳೆದ ಬೆಳೆಗೂ, ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಬೆಳೆದ ರಸಬಾಳೆಯ ರುಚಿ ಹಾಗೂ ಸುವಾಸನೆಗೂ ಗಮನಾರ್ಹ ವ್ಯತ್ಯಾಸವೇನೂ ಕಂಡುಬಂದಿಲ್ಲ' ಎಂದು ಹೇಳುತ್ತಾರೆ. 'ರೈತರಿಂದ ಬರುವ ಬೇಡಿಕೆಯನ್ನು ನೋಡಿಕೊಂಡು ನಾವು ಸಸಿಗಳನ್ನು ಬೆಳೆಸುತ್ತೇವೆ. ನರ್ಸರಿಗಳಲ್ಲಿ ಇರುವಂತೆ ಸಸಿಗಳನ್ನು ಮೊದಲೇ ಬೆಳೆಸಿ ಇಟ್ಟುಕೊಂಡಿರುವುದಿಲ್ಲ. ಆರು ತಿಂಗಳ ಮೊದಲೇ ಹೇಳಿದರೆ, ಅವರ ಬೇಡಿಕೆಯಷ್ಟು ಸಸಿಗಳನ್ನು ಬೆಳೆಸಿ, ವಿತರಣೆ ಮಾಡುತ್ತೇವೆ. ಕೆಲವರು 10 ಸಾವಿರ ಸಸಿಗಳನ್ನು ಬೆಳೆಸುವಂತೆ ಹೇಳಿರುತ್ತಾರೆ. ಬಳಿಕ ಮನಸು ಬದಲಿಸಿರುತ್ತಾರೆ. ಇದರಿಂದ ಸಸಿಗಳನ್ನು ಬೆಳೆಸಲು ತಗುಲಿದ ವೆಚ್ಚ, ಮಾನವ ಸಂಪನ್ಮೂಲ ಹಾಗೂ ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ನಾವು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ' ಎಂದು ವಿವರಿಸುತ್ತಾರೆ. 20 ಸಾವಿರ ಸಸಿಗಳು ಕಸದ ಬುಟ್ಟಿಗೆ 'ಬಾಳೆಯ ಸಸಿಗಳನ್ನು ಬೆಳೆಸಿದ ಬಳಿಕ ಹೆಚ್ಚೆಂದರೆ 2–3 ವಾರಗಳವರೆಗೆ ಇಟ್ಟುಕೊಳ್ಳಬಹುದು. ಬಳಿಕ ಅವುಗಳಿಗೆ ವಯಸ್ಸಾಗುತ್ತದೆ. ಅಂತಹ ಸಸಿಗಳನ್ನು ನೆಟ್ಟರೂ ಸರಿಯಾಗಿ ಬೆಳೆಯುವುದಿಲ್ಲ. ಬೆಳೆದರೂ ಹೆಚ್ಚಿನ ಇಳುವರಿ ನೀಡುವುದಿಲ್ಲ. ಎರಡು ವರ್ಷಗಳ ಹಿಂದೆ 20 ಸಾವಿರ ಸಸಿಗಳನ್ನು ಬೆಳೆಸಿದ್ದೆವು. ಆದರೆ, ಅವುಗಳನ್ನು ತೆಗೆದುಕೊಂಡು ಹೋಗಲು ರೈತರು ಮುಂದೆ ಬರಲಿಲ್ಲ. ಇದರಿಂದ ಸಸಿಗಳನ್ನು ಬಿಸಾಡಬೇಕಾಯಿತು' ಎಂದು ನೋವಿನಿಂದ ಹೇಳುತ್ತಾರೆ. ರಸಬಾಳೆ ಆರ್ಥಿಕವಾಗಿ ಲಾಭದಾಯಕ ಒಂದು ಎಕರೆಗೆ 6x6 ಅಡಿ ಅಳತೆಯಲ್ಲಿ 1,200 ಸಸಿಗಳನ್ನು ನೆಡಬಹುದು. ಎಲ್ಲ ಬಾಳೆಯಂತೆ ಇದನ್ನೂ ಬೆಳೆಸಬಹುದು. 12–14 ತಿಂಗಳಲ್ಲಿ ಫಸಲು ಬರುತ್ತದೆ. ಒಂದು ಎಕರೆಯಲ್ಲಿ ಬಾಳೆ ಬೆಳೆಯಲು ₹30 ಸಾವಿರದಿಂದ ₹50 ಸಾವಿರ ಬೇಕಾಗುತ್ತದೆ. ಫಸಲು ಚೆನ್ನಾಗಿ ಬಂದರೆ ಒಂದು ಗೊನೆಯಲ್ಲಿ 10–12 ಕೆ.ಜಿ.ಯಷ್ಟು ಹಣ್ಣು ಇರುತ್ತದೆ. ಈಗ ಒಂದು ಡಜನ್‌ ಹಣ್ಣಿನ ಬೆಲೆ ಸುಮಾರು ₹120 ಇದೆ. ಸರ್ಕಾರದ ಪ್ರೋತ್ಸಾಹ ಅಗತ್ಯ 'ರಸಬಾಳೆಯ ತಳಿಯನ್ನು ಉಳಿಸಲು ಸರ್ಕಾರ ಮುಂದಾಗಬೇಕು. ರೈತರಿಗೆ ಸಬ್ಸಿಡಿ ದರದಲ್ಲಿ ಸಸಿಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಒಮ್ಮೆಲೆ 2–3 ಲಕ್ಷ ಸಸಿಗಳನ್ನು ಬೆಳೆಸಿಕೊಡಲು ನಾವು ಸಿದ್ಧರಿದ್ದೇವೆ. ಬಾಳೆಗೆ ತಗಲುವ ಪನಾಮಾ ಸೊರಗು ರೋಗ ಬರದಂತೆ ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾಲಯದ ರೋಗಶಾಸ್ತ್ರ ವಿಭಾಗದ ತಜ್ಞರು ನೀಡುತ್ತಾರೆ. ಇದರ ಉಪಯೋಗಗಳನ್ನು ರೈತರು ಪಡೆದು ಕೊಳ್ಳಬೇಕು. ಕರಾರುವಾಕ್ಕಾಗಿ ಕೃಷಿ ಮಾಡುವುದರಿಂದ ಲಾಭ ಗಳಿಸಬಹುದು. ಇದರಿಂದ ಪಾರಂಪರಿಕ ಹಿನ್ನೆಲೆ ಹೊಂದಿರುವ ಬಾಳೆಯನ್ನು ಉಳಿಸಿದಂತೆಯೂ ಆಗುತ್ತದೆ' ಎಂದು ಸತ್ಯನಾರಾಯಣ ಸಲಹೆ ನೀಡುತ್ತಾರೆ. ಸಂಪರ್ಕಕ್ಕೆ: 080 23330153. ಭರಮಸಾಗರದ ರಸಬಾಳೆ 'ಅಂಗಾಂಶ ಕೃಷಿ ಪ್ರಯೋಗಾಲಯದಿಂದ ನಂಜನಗೂಡು ರಸಬಾಳೆಯ ಸಾವಿರ ಗಿಡಗಳನ್ನು ತೆಗೆದುಕೊಂಡು ಚಿತ್ರದುರ್ಗದ ಭರಮಸಾಗರದಲ್ಲಿ ನಾಟಿ ಮಾಡಿದ್ದೆ. ನಾನು ಬೆಳೆದ ರಸಬಾಳೆಯು ಮೂಲ ಹಣ್ಣಿನ ರುಚಿ, ಸುವಾಸನೆಯನ್ನೇ ಹೊಂದಿತ್ತು. ಆದರೆ, ಗಾತ್ರದಲ್ಲಿ ಸ್ವಲ್ಪ ಜಾಸ್ತಿ ದಪ್ಪ ಇತ್ತು' ಎನ್ನುತ್ತಾರೆ ಭರಮಸಾಗರದ ರೈತ ಶಾಂತವೀರಪ್ಪ. 'ಸಾವಯವ ಪದ್ಧತಿಯಲ್ಲಿಯೇ ಹಣ್ಣು ಬೆಳೆದಿದ್ದೆ. ಹೀಗಾಗಿ ಫಸಲು ಚೆನ್ನಾಗಿ ಬಂದಿತ್ತು. ಮಾರುಕಟ್ಟೆ ವಿಷಯಕ್ಕೆ ಬಂದಾಗ, ದುಬಾರಿ ಬೆಲೆ ಕೊಟ್ಟು ರಸಬಾಳೆಯನ್ನು ಖರೀದಿಸಲು ಮಧ್ಯವರ್ತಿಗಳು ಹಿಂದೇಟು ಹಾಕಿದ್ದರು. ಅವರು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದನ್ನು ಮನಗಂಡು, ಹಾಪ್‌ಕಾಮ್ಸ್ ಮಳಿಗೆಗಳಿಗೆ ಸರಬರಾಜು ಮಾಡಿದ್ದೆ' ಎಂದು ವಿವರಿಸುತ್ತಾರೆ. 'ರಸಬಾಳೆಗೆ ರೋಗ ಬರದಂತೆ ತಡೆಗಟ್ಟಲು ಹಲವು ಕ್ರಮಗಳನ್ನು ಅನುಸರಿಸಬೇಕು. 6 ಅಡಿ ಅಂತರದಲ್ಲಿ ಗಿಡ ನೆಡಬೇಕು. 3 ಅಡಿ ಆಳ ತೆಗೆದು 4 ಬುಟ್ಟಿ ಬೇವಿನ ಹಿಂಡಿ, ಕೆರೆಯ ಮಣ್ಣನ್ನು ಹಾಕಬೇಕು. ಆಗಾಗ ಔಷಧೋಪಚಾರ ಮಾಡಬೇಕು. ಇದಕ್ಕೆಲ್ಲ ಸಾವಧಾನ ಇರಬೇಕು. ನಮ್ಮ ರೈತರಿಗೆ ಸಾವಧಾನ ಇಲ್ಲ. ನಾಟಿ ಮಾಡಿದ ತಕ್ಷಣ ಅದರಲ್ಲಿ ಹಣ್ಣು ಬಿಡಬೇಕು, ಆದಾಯ ಬರಬೇಕು ಎಂದು ಬಯಸುತ್ತಾರೆ. ಆದರೆ, ರಸಬಾಳೆಯನ್ನು ಚೆನ್ನಾಗಿ ಉಪಚರಿಸಿದರೆ, ಅದರಿಂದ ಉತ್ತಮ ಫಸಲು, ಆದಾಯವನ್ನು ನಿರೀಕ್ಷೆ ಮಾಡಬಹುದು' ಎಂದು ಅವರು ಹೇಳುತ್ತಾರೆ. 'ಬೇರೆ ಬಾಳೆಗಿಂತ ರಸಬಾಳೆಗೆ ಬೇಗ ರೋಗ ಬರುತ್ತದೆ. ಆದರೆ, ಕೆಲ ಕ್ರಮಗಳನ್ನು ಕೈಗೊಳ್ಳುವುದರಿಂದ ಇದನ್ನು ತಡೆಗಟ್ಟಬಹುದು. ಕಾಲುವೆ ಅಥವಾ ಕೊಳವೆಬಾವಿಯ ನೀರನ್ನು ಹರಿಸುವುದರಿಂದ ರೋಗಾಣುಗಳು ಬೇಗ ಹರಡುತ್ತವೆ. ಹೀಗಾಗಿ ಹನಿ ನೀರಾವರಿ ಪದ್ಧತಿ ಅನುಸರಿಸಬೇಕು. ಯಾವುದೇ ಭೂಮಿಯಲ್ಲಿ ರಸಬಾಳೆಯನ್ನು ಎರಡು ವರ್ಷಗಳು ಬೆಳೆದ ಬಳಿಕ, ಆ ಜಾಗದಲ್ಲಿ ಬೇರೆ ಬೆಳೆ ಹಾಕಬೇಕು.ಇಲ್ಲದಿದ್ದರೆ ರೋಗ ಬೇಗ ಬರುತ್ತದೆ. ಒಂದರೆಡು ವರ್ಷಗಳ ಬಳಿಕ ರಸಬಾಳೆಯನ್ನು ಬೆಳೆಯಬಹುದು' ಎಂದು ಅವರು ಸಲಹೆ ನೀಡುತ್ತಾರೆ.
2018/07/18 14:49:22
https://www.prajavani.net/news/article/2017/08/08/511874.html
mC4
ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಿ : ಕೆ.ಎ.ಯಾಕುಬ್ ಕರೆ - Udupi Times ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಿ : ಕೆ.ಎ.ಯಾಕುಬ್ ಕರೆ ಮಡಿಕೇರಿ: ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕು ವಿಂಗಡಣೆಯಾಗದೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್ ಸಲಹೆ ನೀಡಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು, ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶೇ. 98ರಷ್ಟು ಅಲ್ಪಸಂಖ್ಯಾತರ ಮತಗಳೇ ಕಾರಣ. ಕಾಂಗ್ರೆಸ್ ಸರಕಾರವಿದ್ದಾಗ ಅಲ್ಪಸಂಖ್ಯಾತರ ಏಳಿಗೆಗಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಹಲವರು ಪಕ್ಷದಿಂದ ಫಲವನ್ನು ಪಡೆದಿದ್ದಾರೆ, ಆದರೆ ಪಕ್ಷಕ್ಕೆ ಅವರ ಕೊಡುಗೆ ಕೇವಲ ಶೂನ್ಯ ಎಂದು ಯಾಕುಬ್ ಬೇಸರ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಎ. ಕೆ. ಹ್ಯಾರಿಸ್ ಮಾತನಾಡಿ, ಪಕ್ಷದ ಹಿರಿಯ ಮುಖಂಡರ ಸಲಹೆ ಸೂಚನೆಯಂತೆ ತಾನು ಪಕ್ಷದಲ್ಲಿ ಕಾರ್ಯನಿರ್ವಹಿಲಿದ್ದೇನೆ. ತನ್ನ ಬಾಲ್ಯವನ್ನು ಹೆಚ್ಚಾಗಿ ಗ್ರಾಮದಲ್ಲಿ ಕಳೆದಿರುವುದರಿಂದ ಗ್ರಾಮಗಳ ಸಮಸ್ಯೆಗಳ ಬಗ್ಗೆ ಅರಿವಿದೆ. ಆ ನಿಟ್ಟಿನಲ್ಲಿ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಮನೆ ಮನೆಗಳಿಗೆ ತಲುಪಿಸಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು. ಅಲ್ಪಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳಿಗೆ ಇದೇ ಸಂದರ್ಭ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹ್ಯಾರಿಸ್ ಎಡಪಾಲ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದಸ ಸುರಯ್ಯ ಅಬ್ರಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಮ್ಯಾಥ್ಯು ಮತ್ತಿತರ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
2021/04/21 23:44:21
https://udupitimes.com/strengthen-congress-party-k-a-yakub/
mC4
ರಾಜ್ಯ Archives - Sanjevani ಪತಿ ನೀರಜ್​​ ಫಾರ್ಮ್​​ಹೌಸ್​ನಲ್ಲಿ ಬಿಎಸ್ ವೈ ಮೊಮ್ಮಗಳು ಡಾ. ಸೌಂದರ್ಯ‌ ಅಂತ್ಯಕ್ರಿಯೆ ರಾಜ್ಯದಲ್ಲಿ ಸೋಂಕಿಗಿಂತ ಚೇತರಿಕೆ ಪ್ರಮಾಣ ಮತ್ತಷ್ಟು ಹೆಚ್ಚಳ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಂಗಳೂರು ಅಭಿವೃದ್ಧಿ- ಸಿಎಂ Home ಸುದ್ದಿ ರಾಜ್ಯ Bangalore_Newsroom - January 28, 2022 ನಟಿ ಶ್ವೇತಾ ವಿರುದ್ಧ ಭುಗಿಲೆದ್ದ ಆಕ್ರೋಶ ಬಿ.ಎಸ್.ವೈ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆ Bangalore_Newsroom - January 28, 2022 0 ಬೆಂಗಳೂರು, ಜ.28- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ನಿವಾಸದಲ್ಲಿ ಆತ್ಮಹತ್ಯೆ ಗೆ ಡಾ. ಸೌಂದರ್ಯ... ಬೆಂಗಳೂರು,ಜ.೨೮- ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ನಿಧನರಾಗಿದ್ದಾರೆ.ಅವರಿಗೆ ೭೫ ವರ್ಷ ವಯಸ್ಸಾಗಿತ್ತು. ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಕುಟುಂಬದ ಸದಸ್ಯರು ಸೇರಿದಂತೆ ಚಿತ್ರರಂಗದ ಹಲವು ಮಂದಿಯನ್ನು ಅಗಲಿದ್ದಾರೆ.ವೈಶಾಕದ ದಿನಗಳು, ಅರಿವು, ಮನೆ... ತೆರಿಗೆ ನಮ್ದು ಉಪಯೋಗ ಮುಸಲ್ಮಾನರಿಗೆ ಬಾಗಲಕೋಟೆ,ಜ.೨೮- ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ತಂದೆ - ತಾಯಿ. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಪಕ್ಷ. ಎರಡು ಮಕ್ಕಳನ್ನ ಹೆತ್ತ ನಾವು ತೆರಿಗೆ ಕಟ್ಟಬೇಕು. ಹತ್ತು ಮಕ್ಕಳನ್ನ ಹೆತ್ತ ಮುಸಲ್ಮಾನರು ಅದರ ಉಪಯೋಗ ತಗೆದುಕೊಳ್ಳಬೇಕು ಎಂದು... ಆಶ್ರಯ ಯೋಜನೆ ವರಮಾನ ಮಿತಿ ಏರಿಕೆಗೆ ಸಿಎಂ ಸಮ್ಮತಿ ಬೆಂಗಳೂರು.ಜ೨೮-ರಾಜ್ಯ ಸರಕಾರದ ಮಹತ್ವಾಕಂಕ್ಷೆಯ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಇರುವ ವಾರ್ಷಿಕ ವರಮಾನ ಮಿತಿಯನ್ನು ರೂಪಾಯಿ ೧.೨೦ ಲಕ್ಷಕ್ಕೆ ಹೆಚ್ಚಿಸಲು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ನಿರ್ದೇಶಿಸಿದ್ದಾರೆ ಎಂದು ಗೃಹ ಸಚಿವ... Bangalore_Newsroom - January 27, 2022 0 ಬೆಂಗಳೂರು, ಜ.27 - ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ತುಸು ಇಳಿಕೆಯಾಗಿದ್ದು ಚೇತರಿಕೆ ದುಪ್ಪಟ್ಟಾಗಿದೆ. 38 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ,67 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಕಳೆದ 24... ಬೆಂಗಳೂರು,ಜ.27- ರಾಜ್ಯದಲ್ಲಿಂದು ರೂಪಾಂತರಿ ಓಮಿಕ್ರಾನ್ ಸ್ಪೋಟಗೊಂಡಿದೆ. ಇಂದು 185 ಮಂದಿಯಲ್ಲಿ ಹೊಸದಾಗಿ ಓಮಿಕ್ರಾನ್ ಕಾಣಿಸಿಕೊಂಡಿದೆ.ಇದರೊಂದಿಗೆ ಸೋಂಕಿತರ ಸಂಖ್ಯೆ 1115 ಕ್ಕೆ ಹೆಚ್ಚಳವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್... Sanjevani_Newsroom - January 27, 2022 0 ಚಾಮರಾಜನಗರ,ಜ.27- ಹನೂರು ತಾಲೂಕಿನಲ್ಲಿರುವ ಹೊಗೇನಕಲ್ ಜಲಪಾತ ನೋಡಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.ಮೈಸೂರು ಮೂಲದ ಉಮಾಶಂಕರ್ (19) ನರ್ಸಿಂಗ್ ವಿದ್ಯಾರ್ಥಿ ಮೃತ ದುರ್ದೈವಿ. ಸ್ನೇಹಿತರೊಂದಿಗೆ ಇಂದು... ಬೆಂಗಳೂರು,ಜ.27-ಹಿರಿಯ ಐಪಿಎಸ್​ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸೇರಿದಂತೆ 9 ಮಂದಿ‌ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸಿಐಡಿ ಎಸ್​ಪಿಯಾಗಿದ್ದ ರವಿ ಡಿ‌ ಚನ್ನಣ್ಣನವರ್​ ಅವ​ರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ... ಕರ್ನಾಟಕ ಸೇರಿ 3 ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣ: ಆರೋಗ್ಯ ಸಚಿವಾಲಯ ನವದೆಹಲಿ,ಜ.27- ಕರ್ನಾಟಕ ಸೇರಿದಂತೆ ದೇಶದ ಮೂರು ರಾಜ್ಯಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕರ್ನಾಟಕ ಅಲ್ಲದೆ ಮಹಾರಾಷ್ಟ್ರ ಕೇರಳದಲ್ಲಿ ಮೂರು ಲಕ್ಷಕ್ಕೂ... ಕೋವಿಶೀಲ್ಡ್, ಕೊವಾಕ್ಸಿನ್ ‌ಲಸಿಕೆಗೆ ಮಾರುಕಟ್ಟೆ ಅನುಮೋದನೆ ನೀಡಿದ ಡಿಸಿಜಿಐ ನವದೆಹಲಿ,ಜ.27-ಕೊರೊನಾ ಸೋಂಕು ತಡೆಗೆ ನೀಡಲಾಗುವ ಕೋವಿಶೀಲ್ಡ್ ಮತ್ರು ಕೊವಾಕ್ಸಿನ್ ಲಸಿಕೆಗೆ ಭಾರತೀಯ ಔಷಧ ಮಹಾನಿಯಂತ್ರಣ ನಿರ್ದೇಶನಾಲಯ ಇಂದು ಮಾರುಕಟ್ಟೆಗೆ ಅನುಮೋದನೆ ನೀಡಿದೆ.ಹೊಸ ಔಷಧಗಳು ಮತ್ತು‌‌ ಕ್ಲಿನಿಕಲ್ ಪ್ರಯೋಗಗಳ ನಿಯಮ-2019ರ ನಿಯಮ ಅಡಿಯಲ್ಲಿ ಎರಡೂ...
2022/01/29 05:01:01
https://www.sanjevani.com/category/news/state/?filter_by=featured
mC4
ಎತ್ತಿನ ಗಾಡಿಯಲ್ಲಿ ಮರಳು ಸಾಗಣೆಗೆ ಅವಕಾಶ,ಜಿ. ಪರಮೇಶ್ವರ್ | Who transport sand in bullock cart give an Opportunity G. Parameshwara - Kannada Oneindia » ಎತ್ತಿನ ಗಾಡಿಯಲ್ಲಿ ಮರಳು ಸಾಗಣೆಗೆ ಅವಕಾಶ,ಜಿ. ಪರಮೇಶ್ವರ್ ಎತ್ತಿನ ಗಾಡಿಯಲ್ಲಿ ಮರಳು ಸಾಗಣೆಗೆ ಅವಕಾಶ,ಜಿ. ಪರಮೇಶ್ವರ್ Published: Friday, February 10, 2017, 8:44 [IST] ಬೆಂಗಳೂರು, ಫೆಬ್ರವರಿ 10: ಗ್ರಾಮಾಂತರ ಪ್ರದೇಶಗಳಲ್ಲಿ ಗೃಹ ನಿರ್ಮಾಣಕ್ಕಾಗಿ ಎತ್ತಿನಗಾಡಿಗಳಲ್ಲಿ ಮರಳು ಸಾಗಣೆ ಮಾಡುವವರಿಗೆ ಪೊಲೀಸರಿಂದ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಮರಳು ಸಾಗಿಸುವ ಎತ್ತಿನ ಗಾಡಿಗಳಿಗೆ ಅವಕಾಶ ಕಲ್ಪಿಸಬೇಕು. ಈ ವೇಳೆ ಯಾವುದೇ ಕ್ರಮ ಜರುಗಿಸಿದಿರಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಶಾಸಕರಾದ ಕೆ.ಎನ್‌.ರಾಜಣ್ಣ ಕೆ. ಎಸ್‌.ಪುಟ್ಟಣ್ಣಯ್ಯ, ಚಿಕ್ಕಮಾದು, ಸಾ.ರಾ.ಮಹೇಶ್‌ ಅವರು ಗುರುವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು.[ಅಕ್ರಮ ಮರಳು ಸಾಗಣೆ : ರಾಜ್ಯಾದ್ಯಂತ ಸಿಐಡಿ ತನಿಖೆ] ಮನೆ ಕಟ್ಟಿಕೊಳ್ಳಲು ಉದ್ದೇಶಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಎತ್ತಿನ ಗಾಡಿಗಳಲ್ಲಿ ಮರಳು ಸಾಗಿಸುವಾಗ ಅವರನ್ನು ತಡೆದು ಪೊಲೀಸರು ಹಿಂಸಿಸಿ, ಬಂಧಿಸುತ್ತಿದ್ದಾರೆ ಎಂದು ಶಾಸಕರು ದೂರಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಎತ್ತಿನ ಗಾಡಿಗಳಲ್ಲಿ ಮರಳು ಸಾಗಿಸುವವರಿಗೆ ಪೊಲೀಸರಿಂದ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಎತ್ತಿನ ಗಾಡಿಯಲ್ಲಿ ಮರಳು ಸಂಗ್ರಹಣೆ ಮಾಡಿ ನಂತರ ನಗರ ಪ್ರದೇಶಗಳಿಗೆ ಸಾಗಿಸುವ ಹುನ್ನಾರವೇನಾದರೂ ಇದೆಯೇ ಎಂದು ನಾಗರಿಕರು ಯೋಚಿಸುತ್ತಿದ್ದಾರೆ. bengaluru, assembly, g parameshwara, district news, sand tranportation, ಮರಳು, ಬೆಂಗಳೂರು, ಜಿ ಪರಮೇಶ್ವರ, ವಿಧಾನಸಭೆ House construction: give an Opportunity for Who transport sand in bullock cart says Home Minister G. Parameshwara in Assembly
2017/10/20 10:35:58
https://kannada.oneindia.com/news/bangalore/who-transport-sand-bullock-cart-give-an-opportunity-g-parameshwara-113090.html
mC4
ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್‌ಗೆ 'ಅಗ್ನಿ-2' ಮೆರುಗು | ThatsKannada.com - Military might, cultural diversity showcased at Rajpath - Kannada Oneindia 2 min ago ವೆಂಕಟೇಶ್ವರ ಭಕ್ತಿ ಚಾನೆಲ್‌ಗೆ ಪತ್ರಕರ್ತೆ ಸ್ವಪ್ನ ಸುಂದರಿ ನಿರ್ದೇಶಕಿಯಾಗಿ ನೇಮಕ 7 min ago ಗಾಳಿ ಇಲ್ಲ ಮಳೆ ಇಲ್ಲ, ನೋಡುತ್ತಿದ್ದಂತೆ ಶಾಲಾ ಬಸ್‌ ಮೇಲೆ ಉರುಳಿದ ಮರ 10 min ago ಮಗುವಿನ ಶವ ಹೂಳಲು ಹಳ್ಳ ತೋಡುವಾಗ ಜೀವಂತ ಮಗು ಸಿಕ್ಕಿತು ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್‌ಗೆ 'ಅಗ್ನಿ-2' ಮೆರುಗು ದೆಹಲಿಯಲ್ಲಿ ವರ್ಣರಂಜಿತ ಪೆರೇಡ್‌, ಚೀನಾ-ಆಸ್ಟ್ರೇಲಿಯಾದಲ್ಲೂ ಜನಗಣಮನ ನವದೆಹಲಿ : ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ನೇತೃತ್ವದಲ್ಲಿ ಹಾಗೂ ಬ್ರೆಜಿಲ್‌ ಅಧ್ಯಕ್ಷ ಲೂಯಿಜ್‌ ಇನಾಷಿಯಾ ಲುಲ ಡ ಸಿಲ್ವ ಅವರ ಹಾಜರಿಯಲ್ಲಿ , ವರ್ಣರಂಜಿತ ಗಣರಾಜ್ಯೋತ್ಸವ ಆಚರಣೆ ರಾಜಧಾನಿ ದೆಹಲಿಯಲ್ಲಿ ನಡೆಯಿತು. ಮೇಜರ್‌ ಜನರಲ್‌ ಥಾಮಸ್‌ ಮ್ಯಾಥ್ಯೂ ಅವರ ನೇತೃತ್ವದಲ್ಲಿ ನಡೆದ ಪೇರೆಡ್‌ನಲ್ಲಿ ಭೂದಳ, ನೌಕಾದಳ ಹಾಗೂ ವಾಯುದಳಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಅಗ್ನಿ-2 ದೂರಗಾಮಿ ಕ್ಷಿಪಣಿ, ಪೈಲಟ್‌ರಹಿತ ವಿಮಾನ, ಲಘು ಹೆಲಿಕ್ಯಾಪ್ಟರ್‌ ಮುಂತಾದವನ್ನು ಪ್ರದರ್ಶಿಸಲಾಯಿತು. ವಿವಿಧ ಸಂದರ್ಭಗಳಲ್ಲಿ ಶೌರ್ಯ ಮೆರೆದ ಹತ್ತು ಸೈನಿಕರಿಗೆ ಪರಮವೀರ ಚಕ್ರ, ಐವರಿಗೆ ಅಶೋಕ ಚಕ್ರ ಮತ್ತು ಓರ್ವರಿಗೆ ವೀರ ಚಕ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಕಲಾಂ ಪ್ರದಾನ ಮಾಡಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ಪ್ರಧಾನಿ ವಾಜಪೇಯಿ ಅವರು ಇಂಡಿಯಾಗೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ಮರಿಸಿದರು. ಆಸ್ಟ್ರೇಲಿಯಾದಲ್ಲಿ ಕೇಸರಿ ಬಿಳಿ ಹಸಿರು : ಕ್ಯಾನ್‌ಬೆರ್ರಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯೆದುರು ಮತ್ತು ಸಿಡ್ನಿಯಲ್ಲಿನ ರಾಜತಾಂತ್ರಿಕ ಕಚೇರಿಯಲ್ಲಿ ಆಸ್ಟ್ರೇಲಿಯಾದ ಭಾರತೀಯರು ಸೋಮವಾರ ಗಣರಾಜ್ಯೋತ್ಸವ ಆಚರಿಸಿದರು. ಮೆಲ್ಬೋರ್ನ್‌, ಬ್ರಿಸ್ಬೇನ್‌, ಪರ್ತ್‌ನಲ್ಲೂ ಭಾರತದ ಧ್ವಜ ಹಾರಿಸಲಾಯಿತು. ಸಿಡ್ನಿಯಲ್ಲಿ 500ಕ್ಕೂ ಹೆಚ್ಚು ಭಾರತೀಯರು ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲಿನ ಭಾರತೀಯರು ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ವಜಾರೋಹಣ, ರಾಷ್ಟ್ರಭಕ್ತಿ ಗೀತೆಗಳ ಗಾಯನ, ಪ್ರದರ್ಶನ ಮುಂತಾದ ಕಾರ್ಯಕ್ರಮಳನ್ನು ಗಣರಾಜ್ಯೋತ್ಸವದ ಅಂಗವಾಗಿ ನಡೆಸಿದ್ದಾರೆ. ಚೀನಾದಲ್ಲೂ ಜನ ಗಣ ಮನ : 55ನೇ ಗಣರಾಜ್ಯೋತ್ಸವದ ಆಚರಣೆಯನ್ನು ಚೀನಾದ ವಿವಿಧ ಭಾಗಗಳಲ್ಲಿನ ಭಾರತೀಯರು ಸೋಮವಾರ ಆಚರಿಸಿದರು. ಚೀನಾದ ರಾಜಧಾನಿ ಬೀಜಿಂಗ್‌, ಷಾಂಘೖ ಹಾಗೂ ಹಾಂಗ್‌ಕಾಂಗ್‌ಗಳಿಂದ ಗಣರಾಜ್ಯೋತ್ಸವ ಆಚರಣೆಯ ವರದಿಗಳು ಬಂದಿವೆ.
2019/10/14 12:10:19
https://kannada.oneindia.com/news/2004/01/26/republic-day.html
mC4
ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? | ಈ ಮುಂಗಾರಿನಲ್ಲಿ ಸಕಲೇಶ್‌ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? Go to Sakleshpur in this Monsoon - Kannada Nativeplanet »ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? Updated: Wednesday, June 26, 2019, 12:15 [IST] ಮುಂಗಾರು ಆರಂಭವಾಗುವಾಗಲೇ ಸಕಲೇಶ್‌ಪುರಕ್ಕೆ ಹೋಗಬೇಕು. ಅಲ್ಲಿನ ಹಚ್ಚ ಹಸಿರಿನ ವಾತಾವರಣ ನಿಮ್ಮನ್ನು ಮಂತ್ರ ಮುಗ್ಧಗೊಳಿಸೋದರಲ್ಲಿ ಎರಡು ಮಾತಿಲ್ಲ. ಈ ಸೀಸನ್‌ನಲ್ಲಿ ಸಕಲೇಶ್‌ಪುರಕ್ಕೆ ಹೋಗಿ ಚಾರಣ ಕೈಗೊಂಡರೆ ಅಥವಾ ಪಿಕ್‌ನಿಕ್‌ ಪ್ಲ್ಯಾನ್ ಮಾಡಿದ್ರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ..? ಕಾಫಿ ತೋಟದ ನಡುವೆ, ಚುಮ್ಮು ಚುಮ್ಮು ಚಳಿ, ಮಂಜಿನ ವಾತಾವರಣ, ಹನಿ ಹನಿ ಸುರಿಯುವ ಮಳೆ ಇದೆಲ್ಲದರ ಜೊತೆಗೆ ನಿಮ್ಮ ಜೊತೆ ನಿಮ್ಮ ಸಂಗಾತಿ ಇದ್ದರೆ ಆ ಅನುಭವವನ್ನು ಬಣ್ಣಿಸಲಸಾಧ್ಯ. PC: Ravi Mundkur ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಸಕಲೇಶಪುರವು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ. ಪಟ್ಟಣವು ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಇದು ಸಮುದ್ರಮಟ್ಟದಿಂದ 949 ಮೀಟರ್ (3113 ಅಡಿ)ಎತ್ತರವಿದೆ. ಹೇಮಾವತಿ ನದಿಯು ಸಕಲೇಶಪುರ ಪಟ್ಟಣದಲ್ಲಿ ಹರಿಯುತ್ತದೆ . ವಾತಾವರಣ ಹೇಗಿದೆ? ಜೂನ್ ತಿಂಗಳಿನಿಂದ ಆರಂಭವಾಗುವ ಮುಂಗಾರು ಮಳೆಯೂ ಸೆಪ್ಟಂಬರ್ ವರೆಗೂ ಬಿಡುವಿಲ್ಲದೆ ಸುರಿಯುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗೂ ಚಳಿಗಾಲದ ವಾತವರಣವಿರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಹೆಚ್ಚು ಚಳಿ ಇರುತ್ತದೆ. ಸಕಲೇಶಪುರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ಪ್ರಮುಖವಾಗಿ ಕಾಫಿ, ಅಕ್ಕಿ, ಮೆಣಸು, ಏಲಕ್ಕಿ, ಶುಂಠಿ ಮತ್ತು ಚಹಾವನ್ನು ಬೆಳೆಯಲಾಗುತ್ತದೆ. ಇಲ್ಲಿ ಕಾಫೀ ತೋಟಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಪ್ರದೇಶವನ್ನು ಕಾಫೀಯ ನಾಡು ಎಂದೇ ಕರೆಯಲಾಗುತ್ತಿದೆ. 12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು? ಚಾರಣಕ್ಕೆ ಬೆಸ್ಟ್ PC:Ravi Mundkur ಬಿಸಿಲೆ ಅರಣ್ಯವ್ಯಾಪ್ತಿಯ ಎಡಕುಮರಿ, ದೋಣಿಗಾಲ್ ಮತ್ತು ಕೆಂಪುಹೊಳೆ ಪ್ರದೇಶಗಳು ಚಾರಣಕ್ಕೆ ಯೋಗ್ಯವಾಗಿದೆ. ಬಹಳಷ್ಟು ಚಾರಣಿಗರು ಇಷ್ಟಪಡುವ ಸ್ಥಳ ಇದಾಗಿದೆ. ಬಿಸಿಲೆ ಮಾರ್ಗವಾಗಿ ಚಾರಣಕ್ಕೆ ಹೊರಟರೆ ಕುಮಾರಪರ್ವತ ದಲ್ಲಿ ಚಾರಣವನ್ನು ಕೊನೆಗೊಳಿಸಬಹುದು ಆಳವಾದ ಕಣಿವೆಗಳು, ರಭಸವಾಗಿ ಹರಿಯುವ ನದಿಗಳು ಚಾರಣಕ್ಕೆ ಸೂಕ್ತವಾಗಿದೆ. PC: Dhanalakshmi .K. T ಹಾಸನಾಂಬ ದೇವಾಲಯವು ಇಲ್ಲಿನ ಪ್ರಾದೇಶಿಕ ಸಂಸ್ಕೃತಿಯನ್ನು ಶ್ರೀಮಂತವಾಗಿ ಪ್ರತಿನಿಧಿಸುವುದರಿಂದಾಗಿಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ ಮತ್ತು ಗೊರೂರು ಜಲಾಶಯಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ. ಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ PC: Shameersh ವಿಮಾನ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನ ಬಜ್ಪೆಯ ವಿಮಾನ ನಿಲ್ದಾಣ. ಅಲ್ಲಿಂದ ಬಸ್ ಮೂಲಕ ಸಕಲೇಶ್‌ಪುರಕ್ಕೆ ಹೋಗಬೇಕು. ಬಸ್ಸು : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಕಲೇಶ್‌ಪುರಕ್ಕೆ ಹೋಗುತ್ತವೆ. ರೈಲು : ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಲ್ಲಾ ರೈಲುಗಳಿಗೆ ಹೋಗುತ್ತವೆ.ಹಾಗಾಗಿ ನೀವು ಈ ಮೂರು ಮಾರ್ಗಗಳ ಮೂಲಕ ಸಕಲೇಶ್‌ಪುರ ತಲುಪಬಹುದು.
2021/05/10 19:17:55
https://kannada.nativeplanet.com/travel-guide/go-sakleshpur-in-this-monsoon-002846.html
mC4
ಸುರಕ್ಷಿತ ಅಣು ಶಕ್ತಿ: ಥೋರಿಯಮ್ — Vikaspedia ಸುರಕ್ಷಿತ ಅಣು ಶಕ್ತಿ: ಥೋರಿಯಮ್ ಏನಿದು ಥೋರಿಯಂ? ಥೋರಿಯಂ ಎಲ್ಲಿ ಲಭ್ಯ? ಸುರಕ್ಷೆ: ಭಾರತೀಯ ವಿಜ್ಞಾನಿಗಳು ಅತ್ಯಂತ ಸುರಕ್ಷಿತವಾದ ಅಣುಸ್ಥಾವರವನ್ನು ರೂಪಿಸಿದ್ದು, ಇಷ್ಟರಲ್ಲೇ ಅಂತಹ ಒಂದು ಘಟಕವನ್ನು ಮುಂಬೈ ಬಳಿಯ ತಾರಾಪುರದಲ್ಲಿ ಸ್ಥಾಪಿಸಲಿದ್ದಾರೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ದಿನ ಪತ್ರಿಕೆಗಳಲ್ಲಿ ನಾವು ಓದಿದ್ದೇವೆ. ಇಂದು ನಾಗರೀಕ ಸಮಾಜದಲ್ಲಿ ನಮಗೆ ಅಪಾರ ಪ್ರಮಾಣದ ಇಂಧನ ಬೇಕು. ದಿನೇ ದಿನೇ ಮನುಷ್ಯನ ಇಂಧನದ ಅಗತ್ಯಗಳು ಹೆಚ್ಚುತ್ತಲೇ ಇವೆ. ಈಗ ಅಸಾಂಪ್ರದಾಯಿಕ ಇಂಧನ ಮೂಲಗಳತ್ತ ಜನ ನೋಡಲು ಪ್ರಯತ್ನಿಸುತ್ತಿದ್ದಾರೆ. ಪವನ ಶಕ್ತಿ ಹಾಗೂ ಸೌರ ಶಕ್ತಿಯ ಉತ್ಪಾದನೆಗೆ ತನ್ನದೇ ಆದ ಮಿತಿಗಳುಂಟು. ಪೆಟ್ರೋಲಿಯಂ ಇಂಧನವು ಇನ್ನು ಇಪ್ಪತ್ತು ವರ್ಷಗಳು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಅವಲಂಬಿಸಬಹುದಾದ ದೊಡ್ಡ ಪ್ರಮಾಣದ ಇಂಧನದ ಅಗತ್ಯ ತುರ್ತಾಗಿದೆ. ಚೆರ್ನೋಬಿಲ್, ಥ್ರೀ-ಮೈಲ್-ಐಲ್ಯಾಂಡ್, ಹಾಗೂ ಫುಕೋಶೀಮಾದಂತಹ ಅಣುಸ್ಥಾವರ ದುರಂತಗಳನ್ನು ನೋಡಿ, ಅನುಭವಿಸಿದ ನಂತರ, "ಅಣುಸ್ಥಾವರ" ಹಾಗೂ "ಸುರಕ್ಷಿತ" ಇವೆರಡೂ ಒಂದೇ ಉಸಿರಿನಲ್ಲಿ ಹೇಳಲು ಸಾಧ್ಯವಿರದ ಇಜ್ಜೋಡು ಪದಗಳು ಎನಿಸಿವೆ. ಶಿವರಾಮ ಕಾರಂತರಿಗೂ ಅಣುಸ್ಥಾವರಗಳ ಸುರಕ್ಷೆಯ ಬಗ್ಗೆ ಎನೂ ಭರವಸೆ ಇರಲಿಲ್ಲ. ಪರಿಸರವಾದಿಗಳಿಗೆ ಬೆಂಬಲ ನೀಡಿ ಕೈಗಾ ಅಣುಸ್ಥಾವರದ ಸ್ಥಾಪನೆಯ ವಿರುದ್ಧ ಹೋರಾಟ ನಡೆಸಿದ್ದು ನಮಗೆಲ್ಲಾ ನೆನಪಿದೆ. ಜೊತೆಗೆ ವಿಶ್ವದ ಒಟ್ಟು ಸಂಪನ್ಮೂಲದಲ್ಲಿ ಕೇವಲ 1.5% ರಷ್ಟು ಯುರೇನಿಯಂ ಹೊಂದಿರುವ ಭಾರತಕ್ಕೆ ಕಚ್ಚಾ ಸಾಮಗ್ರಿ ಆಮದು ಮಾಡಿಯಾದರೂ ಅಣುಸ್ಥಾವರ ನಡೆಸಬೇಕೆಂಬ ವ್ಯಾಮೋಹವೇಕೆ ಎಂದೂ ಅನಿಸುತ್ತದೆ. ಆದರೆ, ಇಂದು ಲಭ್ಯವಿರುವ ಅಣು ತಂತ್ರಜ್ಞಾನವು ಒದಗಿಸಬಲ್ಲ ಸುರಕ್ಷೆಗಿಂತಲೂ 200 ಪಟ್ಟು ಹೆಚ್ಚು ಕ್ಷೇಮವಾಗಿ ಅಣುಶಕ್ತಿಯನ್ನು ತಯಾರಿಸಬಲ್ಲ ಅಣುಸ್ಥಾವರಗಳನ್ನು ನಿರ್ಮಿಸಬಹುದು. ಆದರೆ ಅದರಲ್ಲಿ ಬಳಸುವ ಇಂಧನ ಯುರೇನಿಯಂ ಅಲ್ಲ, ಥೋರಿಯಂ. ಥೋರಿಯಂ ಶಕ್ತಿ ಸಾಮಥ್ರ್ಯಗಳನ್ನು ಮೊದಲು ನೋಡೋಣ. ಐದು ಸಾವಿರ ಟನ್ ಯುರೇನಿಯಂ, ಐದು ಬಿಲಿಯನ್ ಟನ್‍ಗಳಷ್ಟು ಕಲ್ಲಿದ್ದಲು ಹಾಗೂ 31 ಬಿಲಿಯನ್ ಬ್ಯಾರಲ್‍ಗಳಷ್ಟು ಪೆಟ್ರೋಲಿಯಂ ತೈಲ ಹಾಗೂ ಐದು ಟ್ರಿಲಿಯನ್ ಘನ ಮೀಟರ್‍ಗಳಷ್ಟು ನೈಸರ್ಗಿಕ ಅನಿಲ ಇವೆಲ್ಲವೂ ಒಟ್ತಿಗೆ ನೀಡಬಲ್ಲ ಶಕ್ತಿಯನ್ನು ಕೇವಲ ಐನೂರು ಟನ್ ಥೋರಿಯಮ್ ನೀಡಬಲ್ಲದು. ಯುರೇನಿಯಂ, ಚಿನ್ನ ಅಥವಾ ಪ್ಲಾಟಿನಂನಷ್ಟು ಅಪರೂಪ ಹಾಗೂ ದುಬಾರಿ ವಸ್ತುವಾದರೆ, ಥೋರಿಯಂ, ಸೀಸ (ಲೆಡ್) ದಷ್ಟು ಅಗ್ಗ ಮತ್ತು ಹೇರಳವಾಗಿ ಸಿಗಬಲ್ಲ ವಸ್ತು. ಕೇವಲ ಒಂದೇ ಒಂದು ರೇರ್ ಅರ್ಥ್ ಗಣಿಯಲ್ಲಿ ಸಿಗಬಹುದಾದ ಥೋರಿಯಮ್ ಇಡೀ ಪ್ರಪಂಚದ ಇಂಧನ ಅವಶ್ಯಕತೆಗಳನ್ನು ಪೂರೈಸ ಬಲ್ಲದು. ಥೋರಿಯಂನ ಅರ್ಥ ಆಯುಷ್ಯ 14 ಬಿಲಿಯನ್ ವರ್ಷಗಳು. ಹೀಗಾಗಿ ಅದು ಅತ್ಯಂತ ಕನಿಷ್ಟ ರೇಡಿಯೋ ಆ್ಯಕ್ಟಿವ್ ಆಗಿರುತ್ತದೆ. ಥೋರಿಯಂ ನಿಂದ ಪರಮಾಣು ಆಯುಧಗಳನ್ನು ಮಾಡಲು ಸಾಧ್ಯವಿಲ್ಲ!! ಭೂಮಿಯಲ್ಲಿ ಸೀಸ (ಲೆಡ್) ಸಿಗುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಥೋರಿಯಂ ಲಭ್ಯವಿದೆ. ಭೂಮಿಯಲ್ಲಿ ಲಭ್ಯವಿರುವ ಥೋರಿಯಂ ಶಕ್ತಿ ಮೌಲ್ಯವು ಭೂಮಿಯಲ್ಲಿರುವ ಎಲ್ಲಾ ಯುರೇನಿಯಂ, ಹಾಗೂ ಪೆಟ್ರೋಲಿಯಂ ಇಂಧನಗಳ ಒಟ್ಟು ಸಾಮಥ್ರ್ಯಕ್ಕಿಂತ ಹೆಚ್ಚು. ಕೇವಲ ಒಂದು ಟನ್ ಥೋರಿಯಂ 200 ಟನ್ ಗಳಷ್ಟು ಯುರೇನಿಯಂ ನಷ್ಟು ಸಮಾನ. ಒಂದು ಪೌಂಡ್ ಥೋರಿಯಂ ಶಕ್ತಿಯು ಮೂರು ಮಿಲಿಯನ್ ಪೌಂಡ್ ಕಲ್ಲಿದ್ದಲಿಗೆ ಸಮ!! ಸರಾಸರಿ ಒಬ್ಬ ಅಮೆರಿಕನ್ ಒಂದು ವರ್ಷದ ಕಾಲದಲ್ಲಿ ಬಳಸುವ ವಿದ್ಯುತ್‍ನ ಪ್ರಮಾಣದಷ್ಟು ಇಂಧನವನ್ನು ಒಂದು ಒಳ್ಳೆಯ ಸೇಬಿನ ಗಾತ್ರದ (3.5" ಡಯಾಮೀಟರ್) ಥೋರಿಯಂನಿಂದ ಎಂಟು ಸಾವಿರ ವರ್ಷಗಳ ಕಾಲ ಪಡೆಯಬಹುದು. ಥೋರಿಯಂ ಪ್ಲಾಸ್ಮಾ ಬ್ಯಾಟರಿ ಹೊಂದಿದ ಕಾರನ್ನು ನೀವು ಕೊಂಡರೆ, ಶೋ ರೂಮಿನಿಂದ ಹೊರ ಬಂದಾಗಿನಿಂದ ಆ ಕಾರು ಜೀರ್ಣಾವಸ್ಥೆಗೆ ಬರುವ ವರೆಗೂ ನೀವು ಮತ್ತೆ ಪೆಟ್ರೋಲ್ ಬಂಕ್ ಕಡೆ ತೆಲೆ ಹಾಕುವ ಅಗತ್ಯವಿರುವುದಿಲ್ಲ! ಥೋರಿಯಂ, ನೈಸರ್ಗಿಕವಾಗಿ ಸಿಗುವ ಸ್ವಲ್ಪ ಪ್ರಮಾಣದಲ್ಲಿ ರೇಡಿಯೋ ಆ್ಯಕ್ಟಿವ್ ಆದ ಲೋಹ. ಇದು ಶುಧ್ಧವಾಗಿರುವಾಗ ಬೆಳ್ಳಿಯಂತೆ ಅನೇಕ ತಿಂಗಳುಗಳ ಕಾಲ ಹೊಳೆಯುತ್ತಲಿರುತ್ತದೆ. ಆದರೆ ತುಕ್ಕು ಹಿಡಿದರೆ (ಗಾಳಿಯ ಪ್ರಭಾವದಿಂದ, ಥೋರಿಯಂ ಕ್ರಮೇಣ ತನ್ನ ಹೊಳಪನ್ನು ಕಳೆದುಕೊಂಡು, ಬೂದು ಬಣ್ಣಕ್ಕೂ, ಕಪ್ಪು ಬಣ್ಣಕ್ಕೂ ತಿರುಗುತ್ತದೆ. ಇದು ಅರೆ-ಆಯಸ್ಕಾಂತೀಯ ಗುಣವನ್ನು ಹೊಂದಿದೆ. ಥೋರಿಯಂ ಆಕ್ಸೈಡ್ ಅನ್ನು ಥೋರಿಯಾ ಎಂದೂ ಕರೆಯುತ್ತಾರೆ. ಇದರ ಕುದಿಯುವ ತಾಪಮಾನ 3,300 ಡಿಗ್ರಿ ಸೆಂಟಿಗ್ರೇಡ್. ನೋರ್ಸ್ ಸಂಸ್ಕೃತಿಯಲ್ಲಿ ಗುಡುಗಿನ ದೇವತೆ "ಥೋರ್" ನಿಂದ ಬಂದ ಹೆಸರು ಥೋರಿಯಮ್. ಸ್ವೀಡನ್ನಿನ ರಸಾಯನ ಶಾಸ್ತ್ರದ ವಿಜ್ಞಾನಿ ಜಾನ್ಸ್ ಜ್ಯಾಕಬ್ ಬರ್ಝಿಲಿಯಸ್ ಥೋರಿಯಮ್ ಅನ್ನು 1828ರಲ್ಲಿ ಕಂಡುಹಿಡಿದ. 1885ರಲ್ಲಿ ಲ್ಯಾಂಟರ್ನ್ ನಲ್ಲಿ ಬಳಸುವ ಮ್ಯಾಂಟಲ್ ಮಾಡಲು ಇದನ್ನು ಬಳಸಿದ ನಂತರ ಬೇರೆ ಯಾವ ಪ್ರಯೋಜನವೂ ಇದರಿಂದ ಕಂಡುಕೊಂಡಿರಲಿಲ್ಲ. ಇದರ ಪ್ರಯೋಜನಗಳು ಏನು? ಗ್ಯಾಸ್ ಲೈಟುಗಳಲ್ಲಿ ಮ್ಯಾಂಟಲ್ ಆಗಿ ಬಳಸುವುದು ಇದನ್ನೇ. ಮೆಗ್ನಿಶಿಯಮ್ ತಯಾರಿಕೆಯಲ್ಲಿ ಮಿಶ್ರ ಲೋಹವಾಗಿ ಇದನ್ನು ಬಳಸುತ್ತಾರೆ. ವಿದ್ಯುನ್ಮಾನ ವಸ್ತುಗಳಲ್ಲಿ ಟಂಗ್‍ಸ್ಟನ್ ವಯರನ್ನು ಥೋರಿಯಂ ನಲ್ಲಿ ಲೇಪನ ಮಾಡುತ್ತಾರೆ. ಎಲಕ್ಟ್ರೋಡ್ ಗಳ ವೆಲ್ಡಿಂಗ್ ನಲ್ಲಿ ಹಾಗೂ ಶಾಖನಿರೋಧಕ ಪಿಂಗಾಣಿವಸ್ತುಗಳಲ್ಲಿ ಬಳಸಲಾಗುತ್ತದೆ. ಅತಿ ಹೆಚ್ಚು ಉಷ್ಣವನ್ನು ತಡೆದುಕೊಳ್ಳಬಲ್ಲ ಪ್ರಯೋಗಾಲಯ ಪಾತ್ರೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಕ್ಯಾಮರಾಗಳಿಗೆ ಬಳಸುವ ಉತ್ತಮ ಗುಣಮಟ್ಟದ ಗಾಜಿನ ಮಸೂರಗಳನ್ನು ಹಾಗೂ ಇತರ ವೈಜ್ಞಾನಿಕ ಉಪಕರಣಗಳನ್ನು ತಯಾರಿಸಲು ಬಳಸುತ್ತಾರೆ. ಅಮೋನಿಯಾವನ್ನು ನೈಟ್ರಿಕ್ ಆಸಿಡ್ ಆಗಿ ಪರಿವರ್ತಿಸುವಲ್ಲಿ ವೇಗ ವರ್ಧಕವಾಗಿ ಬಳಸಲಾಗುತ್ತದೆ. ಪ್ರಾಚೀನ ಪಳೆಯುಳಿಕೆಗಳ ಕಾಲ ನಿರ್ಣಯಮಾಡಲು ಬಳಸಲಾಗುತ್ತದೆ. ಪರಮಾಣು ಶಕ್ತಿ ಉತ್ಪಾದನೆಯ ಪ್ರಯೋಜನದ ಮುಂದೆ ಇದರ ಬೇರೆ ಯಾವ ಪ್ರಯೋಜನಗಳೂ ಗೌಣವಾಗಿ ಕಾಣುತ್ತದೆ. ಕಳೆದ 4.5 ಬಿಲಿಯನ್ ವರ್ಷಗಳಿಂದ ಥೋರಿಯಂ ಭೂಮಿಯ ಸೃಷ್ಟಿಗಿಂತಲೂ ಮೊದಲಿನಿಂದಲೂ ಇದೆ. ಅದರ ರೇಡಿಯೋ ಆಕ್ಟಿವ್ ಸವೆತದಿಂದ ಭೂಮಿಯ ಆಂತರಿಕ ಶಾಖ ಉಂಟಾಯಿತು ಎಂದು ನಂಬಲಾಗಿದೆ. ಥೋರಿಯಂ ಎಲ್ಲ ಖಂಡಗಳಲ್ಲೂ ಲಭ್ಯ. ಸಮುದ್ರದ ತೀರದ ಮರಳಿನಲ್ಲಿ, ಕಲ್ಲುಗಳಲ್ಲಿ ಹಾಗೂ ರೇರ್ ಅರ್ಥ್‍ಗಳಲ್ಲಿ (ಮೋನಝೈಟ್‍ನಲ್ಲಿ) ಥೋರಿಯಂ ಲಭ್ಯ. ಇದರ ಗಣಿಗಾರಿಕೆ ಹಾಗೂ ಶುದ್ಧೀಕರಣ ಬಹಳ ಸುಲಭ. ಸತತ ಲೋಡ್ ಶೆಡ್ಡಿಂಗ್, ದುಬಾರಿ ವಿದ್ಯುತ್ ಬಿಲ್‍ಗಳು, ಸೌದೆ, ಕಲ್ಲಿದ್ದಲು ಉರವಲಿನಿಂದ ವಾಯುಪ್ರದೂಷ, ವಿದ್ಯುತ್ತಿಲ್ಲದೆ ನೀರಿನ ಅಸಮರ್ಪಕ ಪೂರೈಕೆ, ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತದಲ್ಲಿ ಪ್ರಪಂಚದ ಅತ್ಯಧಿಕ ಪ್ರಮಾಣದಲ್ಲಿ ಥೋರಿಯಂ ಇದೆ ಎಂಬುದು ಎಂತಹ ವ್ಯಂಗ್ಯ! ಥೋರಿಯಂ ಮಟ್ಟಿಗೆ ಹೇಳುವುದಾದರೆ, ಭಾರತವೇ ಸೌದೀ ಅರೇಬಿಯ. ಅಂದಾಜು ಟನ್ನುಗಳಲ್ಲಿ (2011) ಭಾರತ 963,000 ಅಮೆರಿಕ 440,000 ಆಸ್ಟ್ರೇಲಿಯ 300,000 ಕೆನಡಾ 100,000 ದಕ್ಷಿಣ ಆಫ್ರಿಕಾ 35,000 ಬ್ರೆಝಿಲ್ 16,000 ಮಲೇಶಿಯಾ 4,500 ಇತರ 90,000 ಒಟ್ಟು 1,913,000 ಥೋರಿಯಂ ಅಣುಸ್ಥಾವರಗಳು, ಯುರೇನಿಯಂ ಅಣುಸ್ಥಾವರಗಳ ಹಾಗೆ 'ಮೆಲ್ಟ್-ಡೌನ್' ಆಗುವುದಿಲ್ಲ. ಯುರೇನಿಯಂ ಅಣು ಸ್ಥಾವರಗಳಲ್ಲಿ ಅತಿಯಾದ ಒತ್ತಡ ಹಾಗೂ ಅತ್ಯಧಿಕ ತಾಪಮಾನಗಳು ಇರುತ್ತವೆ. ಇದರಿಂದ ಶೀತಲೀಕರನದ ಪೈಪುಗಳಲ್ಲಿ ಸೋರಿಕೆ ಕಂಡುಬರುತ್ತದೆ. ನಿಯಂತ್ರಿಸಲಾಗದ ಅಟಾಮಿಕ್ ಸ್ಫೋಟಗಳಿಗೆ ಒಳಪಡುವ ಯುರೇನಿಯಂನಿಂದ ಇದುವರೆಗೆ ಆಗಿರುವ ದುರಂತಗಳಂತೆ ಥೋರಿಯಂ ಅಣುಸ್ಥಾವರದಲ್ಲಿ ಆಗುವುದಿಲ್ಲ. ಏಕೆಂದರೆ, ಇದಕ್ಕೆ ಸಾಧಾರನ ಗಾಳಿಯ ಒತ್ತಡವಿದ್ದರೆ ಸಾಕು. ಅಂತಹ ಅಪಾಯದ ಪರಿಸ್ಥಿತಿ ಬಂದರೆ, ತಾನೇ ತಾನಾಗಿ ಶಟ್_ಡೌನ್ ಆಗುವ ವ್ಯವಸ್ಥೆ ಇರುತ್ತದೆ. ಯುರೇನಿಯಂ ಅಣುಸ್ಥಾವರದ ಹಾಗೆ ಇಲ್ಲ್ ಪವರ್ ರಾಡ್‍ಗಳನ್ನು ಬಳಸದೆ, ದ್ರವರೂಪದ ಥೋರಿಯಮ್ಮನು ಬಳಸಲಾಗುತ್ತದೆ. ಹೀಗಾಗಿ ಅವಗಢಗಳು ಉಂಟಾಗುವ ಸಾಧ್ಯತೆ ಬಂದಾಗ ದ್ರವ ಥೋರಿಯಂ ತೊಂದರೆ ಮಾಡದೆ ಡ್ರೈನ್ ಆಗಿ ಹೋಗುವಂತೆ ಸ್ವಯಂಚಾಲಿತ ತೂಬುಗಳ ವ್ಯವಸ್ಥೆ ಇರುತ್ತವೆ. ಯುರೇನಿಯಂ ಅಣುಸ್ಥಾವರಗಳು ಕೇವಲ 5% ಶಕ್ತಿಯನ್ನು ಬಳಸಿಕೊಳ್ಳುತ್ತದೆ. ನಂತರ ತ್ಯಾಜ್ಯದಲ್ಲಿ ಶೇ. 95 ರಷ್ಟು ಶಕ್ತಿ ಇನ್ನೂ ಉಳಿದಿರುತ್ತದೆ. ಇದರಿಂದಲೇ ತ್ಯಾಜ್ಯದ ವಿಲೇವಾರಿ ಸಮಸ್ಯೆ, ವಿಕಿರಣಗಳ ಬಾಧೆ ಉಂಟಾಗುವುದು. ಆದರೆ ಥೋರಿಯಂ ತ್ಯಾಜ್ಯದಲ್ಲಿ ಈ ರೀತಿಯ ಸಮಸ್ಯೆ ಇರುವುದಿಲ್ಲ. ಅದನ್ನು ಪುನರ್-ಬಳಕೆ (ರೀಸೈಕಲ್) ಮಾಡಬಹುದು. ಹೀಗೆ ರೀ ಸೈಕಲ್ ಮಾಡಿದರೆ ತ್ಯಾಜ್ಯದ ಜೀವಿತಾವಧಿಯನ್ನು 300 ವರ್ಷಗಳಷ್ಟು ಕಡಿಮೆ ಮಾಡಬಹುದು. ಜನ ನಿಬಿಡ ನಗರ ಪ್ರದೇಶಗಳಲ್ಲೇ ಇದರ ಸ್ಥಾವರಗಳನ್ನು ಕಟ್ಟಿಕೊಂಡಿದ್ದರೂ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಇಷ್ಟೆಲ್ಲಾ ಸದ್ಗುಣ ಸಂಪನ್ನನಾದ ಥೋರಿಯಂ ಬಗ್ಗೆ ನಾವು ಹೆಚ್ಚಾಗಿ ಏಕೆ ಕೇಳುತ್ತಿಲ್ಲ? ಚರಿತ್ರೆಯಲ್ಲಿ ಅನೇಕ ನಿಗೂಢ ಘಟನೆಗಳು ನಡೆದಿವೆ, ಅನೇಕ ರಾಜಕೀಯ ನಿರ್ಧಾರಗಳನ್ನೂ ಒಳಗೊಂಡಂತೆ, ಯು.ಎಫ್.ಓ. ಗಳಿಂದ ಹಿಡಿದು ಅತೀಂದ್ರಿಯ ಶಕ್ತಿಗಳ ತನಕ, ಎಷ್ಟೋ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಪ್ರಪಂಚದಲ್ಲಿ ತಯಾರಿಸಿದ ಮೊಟ್ಟ ಮೊದಲ ಕಾರು ವಿದ್ಯುತ್ ಕಾರ್ ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಜನರಲ್ ಮೋಟಾರ್ಸ್ ನವರು ತಯಾರಿಸಿ ಭೋಗ್ಯಕ್ಕೆ ಮಾರುತ್ತಿದ್ದ ಸುಮಾರು ಐದು ಸಾವಿರ ವಿದ್ಯುತ್ ಕಾರುಗಳನ್ನು ಹಿಂದೆ ಪಡೆದು ಕ್ರಷ್ ಮಾಡಿ ಧ್ವಂಸ ಮಾಡಿದುದರ ಹಿಂದೆ ಪೆಟ್ರೋಲ್ ಮಾಫಿಯಾದ ಕೈವಾಡ ಇದ್ದಿತು. ಒಂದು ವೇಳೆ ಜನರಲ್ ಮೋಟಾರ್ಸ್ ನವರು ತೈಲ ವ್ಯಾಪಾರಿಗಳ ಪ್ರಲೋಭನೆಗೆ ಬೀಳದೆ ಇದ್ದಿದ್ದರೆ, ಇಂದು ಪ್ರಪಂಚಲ್ಲಿ ಎಲ್ಲೆಡೆ ಮಾಲಿನ್ಯ ರಹಿತವಾದ ವಿದ್ಯುತ್ ಕಾರುಗಳೇ ಇರುತ್ತಿದ್ದವು ಹಾಗೂ ಅರಬ್ ದೇಶಗಳ ಮೇಲೆ ಈ ರೀತಿಯ ಅವಲಂಬನೆ ಆಗುತ್ತಿರಲಿಲ್ಲ. 1960ರ ದಶಕದಲ್ಲೇ ಥೋರಿಯಮ್ ಮೋಲ್ಟನ್ ಸಾಲ್ಟ್ ರಿಯಾಕ್ಟರ್ ಅಣು ಸ್ಥಾವರವನ್ನು ಅಮೆರಿಕದ ಓಕ್ ರಿಜ್ ನ್ಯಾಷನಲ್ ಲ್ಯಾಬೊರೆಟರಿಯಲ್ಲಿ ಥೋರಿಯಂ ಅಣುಸ್ಥಾವರವನ್ನು ಸ್ಥಾಪಿಸಿದರು. ಆದರೆ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅದಕ್ಕೆ ನೀಡುತ್ತಿದ್ದ ಆರ್ಥಿಕ ಬೆಂಬಲವನ್ನು ನಿಲ್ಲಿಸಿದನು. ಅಣುಸ್ಥಾವರಗಳನ್ನು ಸಾರ್ವಜನಿಕg ಹಿತಕ್ಕಾಗಿ ಬಳಸಬೇಕೆಂಬ ಉದ್ದೇಶ ಅಮೆರಿಕದಂತಹ ದೇಶಕ್ಕೂ ಇರಲಿಲ್ಲ. ಅದು ಮುಖ್ಯವಾಗಿ ತನ್ನ ಸೇನಾ ಶಕ್ತಿಯ ವರ್ಧನೆಗೆ ಮಾತ್ರ ಬಳಸಬೇಕು ಎಂದು ಭಾವಿಸಿತ್ತು. ಥೋರಿಯಂ ನಲ್ಲಿ ಅಣುಬಾಂಬ್ ನಂತಹ ವಿಧ್ವಂಸಕ ಶಸ್ತ್ರಾಸ್ತ್ರಗಳನ್ನು ಮಾಡಲು ಸಾಧ್ಯವಿಲ್ಲವೆಂದು ತಿಳಿದಾಗ ಕ್ರಮೇಣ ಅದಕ್ಕೆ ಉತ್ತೇಜನ ನೀಡುವುದನ್ನು ನಿಲ್ಲಿಸಲಾಯಿತು. ಒಂದು ವೇಳೆ ಅದನ್ನು ಮುಂದುವರೆಸಿಕೊಂಡು ಹೋಗಿದ್ದಿದ್ದರೆ, ಚೆರ್ನೋಬಿಲ್, ಫುಕೋಶೀಮಾದಂತಹ ದುರಂತಗಳು ಸಂಭವಿಸುತ್ತಲೇ ಇರಲಿಲ್ಲ. ನಮ್ಮ ಪ್ರಪಂಚ ಈ ವೇಳೆಗೆ ಇನ್ನಷ್ಟು ಸುಭಿಕ್ಷವಾಗಿರುತ್ತಿತ್ತು. ಆದರೆ ಮತ್ತೆ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲಿಯಂ ತೈಲಗಳಿಗೆ ಭಾರೀ ಹೊಡೆತ ಬೀಳುತ್ತಿತ್ತು. ಹೀಗಾಗಿ ಅರಬ್ ಪ್ರಪಂಚ ಇದು ಊರ್ಜಿತವಾಗದಂತೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ನಮ್ಮ ದೇಶವನ್ನು ವಿಜ್ಞಾನಿಗಳು ಉದ್ಧಾರ ಮಾಡಬಲ್ಲರು. ರಾಜಕಾರಣಿಗಳು ಅವರ ಉದ್ದೇಶಗಳನ್ನು ಹಾಳುಗೆಡವದಿದ್ದರೆ ಅದೇ ಒಂದು ದೊಡ್ಡ ಉಪಕಾರ. ಅದೃಷ್ಟವಶಾತ್, ಪ್ರಪಂಚದ ಬೇರೆಲ್ಲೂ ಇರದ ಪ್ರಮಾಣದಲ್ಲಿ ಥೋರಿಯಂ ನಿಕ್ಷೇಪಗಳು ಹೊಂದಿದೆ. ಈಗಷ್ಟೇ ಅಪಾಯರಹಿತ ಅಣು ಸ್ಥಾವರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿರುವ ನಮ್ಮ ವಿಜ್ಞಾನಿಗಳಿಗೆ , ಅದನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಸಮಯ ಬೇಕಿದೆ. ಸರ್ಕಾರಗಳು ಈ ಬೆಳವಣಿಗೆಗೆ ಬೇಕಿರುವ ಅನುದಾನಗಳನ್ನು ನೀಡುವ ಔದಾರ್ಯತೆ ಮತ್ತು ದೂರದೃಷ್ಟಿಯನ್ನು ಹೊಂದಿರಬೇಕಿದೆ. ತೈಲ ಇಂಧನಕ್ಕೆ ನಮ್ಮ ದೇಶ ವ್ಯಯ ಮಾಡುತ್ತಿರುವ ಹಣ ಉಳಿದರೆ, ಹಾಗೂ ಥೋರಿಯಂ ಅನ್ನು ಕಚ್ಚಾ ವಸ್ತುವಾಗಿ ರಫ್ತು ಮಾಡುವ ಬದಲು ಇಂಧನದ ರೂಪದಲ್ಲಿ ನೆರೆ ದೇಶಗಳಿಗೆ ಮಾರಾಟ ಮಾಡಿದರೆ ನಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದರಲ್ಲಿ ಅನುಮಾನವಿಲ್ಲ. ಆದರೆ ಎಲ್ಲವೂ ಸರಾಗವಾಗಿ ನಡೆದರೆ ಅದನ್ನು ಭಾರತ ಎನ್ನಲು ಆಗುವುದಿಲ್ಲ. ಅಕ್ರಮ ಗಣಿಗಾರಿಕೆ.- ಲೂಟಿ ದಕ್ಷಿಣ ಅಮೆರಿಕಾದಲ್ಲಿ ಬೊಲೀವಿಯ ಒಂದು ಸುಂದರ ದೇಶ. ಆದರೆ ಆರ್ಥಿಕವಾಗಿ ಅದು ಎಂದೂ ಮುಂದೆ ಬಂದಿಲ್ಲ. ವಿಶ್ವದಲ್ಲೇ ಅತ್ಯಂತ ಹೆಚ್ಚು ಪ್ರಮಾಣದ ಲಿಥಿಯಮ್ ಹೊಂದಿರುವ ಬೊಲಿವಿಯಾ ಸರ್ಕಾರ ಬುದ್ಧಿವಂತಿಕೆ ತೋರಿ ತನ್ನ ಇಂಧನಗಳ ಸೂಕ್ತ ಬಳಕೆ ಮಾಡಿದರೆ ಹೇಗೆ ಉತ್ತಮ ಸ್ಥಿತಿಗೆ ಬರಬಹುದೋ, ಅದೇ ರೀತಿ ನಮ್ಮ ದೇಶದ ಥೋರಿಯಂ ನಿಕ್ಷೇಪಗಳನ್ನು ರಾಷ್ಟ್ರವು ತಕ್ಷಣ ತನ್ನ ವಶಕ್ಕೆ ಪಡೆದು, ತಾರಾಪುರ ಅಣುಸ್ಥಾವರದ ಮಾದರಿಯಲ್ಲೇ ಇನ್ನೂ ಅನೇಕ ಅಣುಸ್ಥಾವರಗಳನ್ನು ಕೇರಳ ಹಾಗೂ ಆಂಧ್ರವನ್ನು ಒಳಗೊಂಡಂತೆ ಪೂರ್ವ ಕರಾವಳಿಯ ಉದ್ದಕ್ಕೂ ಸ್ಥಾಪಿಸಿದರೆ ನಮ್ಮ ದೇಶ ಸುಭಿಕ್ಷವಾಗುವುದರಲ್ಲಿ ಅನುಮಾನವಿಲ್ಲ. ಭಾರತದಲ್ಲಿ ಅನೈತಿಕ ಗಣಿಗಾರಿಕೆ: ಒಬ್ಬ ಸಾಧಾರಣ ವ್ಯಕ್ತಿಯ ಕಲ್ಪನೆಗೂ ನಿಲುಕದ ಪ್ರಮಾಣದಲ್ಲಿ ಅವ್ಯವಹಾರವು ದಕ್ಷಿಣ ಭಾರತದಲ್ಲಿ ನಡೆದಿದ್ದರೂ ಇದು ಯಾವ ಅಲೆಗಳನ್ನೂ ಎಬ್ಬಿಸದೇ ಗುಟ್ಟಾಗಿ ಮುಚ್ಚಿಹೋಗಿದೆ. ಎನ್.ಡಿ.ಎ. ಸರ್ಕಾರ ಕೇಂದ್ರಲ್ಲಿದ್ದಾಗ, ಮೋನಝೈಟ್, ಝೆರ್ಕಾನ್, ಸಿಲಿಮನೈಟ್, ಗಾರ್ನೆಟ್, ಇಲ್ಮೆನೈಟ್, ನಂತಹ ಹೆವಿ ಮಿನರಲ್‍ಗಳು ತಮಿಳುನಾಡು ಹಾಗೂ ಕೇರಳ ಕರಾವಳಿಯ ಮರಳಿನಲ್ಲಿ ಶ್ರೀಮಂತವಾಗಿ ದೊರೆಯುತ್ತದೆ. ಇದರಲ್ಲಿ ಪರಮಾಣು ಶಕ್ತಿ ನೀಡಬಲ್ಲ ಥೋರಿಯಮ್ ಹೇರಳವಾಗಿರುತ್ತದೆ. ಉಕ್ಕು, ವಿದ್ಯುನ್ಮಾನ, ಆಭರಣ ತಯಾರಿಕೆ, ಹಾಗು ಪಿಂಗಾಣಿ ತಯಾರಿಕೆಯಲ್ಲಿ ಇವುಗಳ ಪಾತ್ರ ಪ್ರಮುಖವಾದದ್ದು. ಐ.ಇ.ಆರ್. ಎಲ್. ಹೊರತು ಪಡಿಸಿ ಇವುಗಳ ಗಣಿಗಾರಿಕೆ ಬೇರೆ ಯಾರೂ ಮಾಡುವಂತಿಲ್ಲ. 1998ರಲ್ಲಿ ಮರಳು ಗಣಿಗಾರಿಕೆಯನ್ನು ಖಾಸಗೀಯವರಿಗೆ ಬಿಟ್ಟುಕೊಟ್ಟಿತು. ಇದಕ್ಕೆ ಎರಡು ಪರವಾನಗಿಗಳು ಬೇಕಿತ್ತು. ಒಂದು ಮರಳು ಗಣಿಗಾರಿಕೆ ಮಾಡುವುದಕ್ಕೆ, ಹಾಗೂ ಅಣು ವಸ್ತುಗಳನ್ನು ನಿಭಾಯಿಸಲು, ಮರಳ ಗಣಿಗಾರಿಕೆ ವೇಳೆ ಸಿಕ್ಕ ಮೋನಝೈಟ್ ಅನ್ನು ಸಂರಕ್ಷಿತ ಸ್ಥಳದಲ್ಲಿ ರಾಶಿ ಹಾಕಿ, ಮರಳನ್ನು ತೆಗೆದುಕೊಂಡು ಹೋಗಬಹುದಿತ್ತು. 2006 ರಲ್ಲಿ ಈ ನಿಯಮವನ್ನು ಇನ್ನಷ್ಟು ಸರಳೀಕರಿಸಿ, ಮೇಲೆ ತಿಳಿಸಿದ ರೇರ್ ಅರ್ಥ್ ಗಳ ಪಟ್ಟಿಯಿಂದ ಅನೇಕ ಹೆಸರುಗಳನ್ನು ತೆಗೆದು, ಒಂದೇ ಪರವಾನಗಿ ಸಾಕಾಗುವಂತೆ ಮಾಡಿದರು. ಇದರ ಪರಿಣಾಮವಾಗಿ ಖಾಸಗೀ ಗಣೀಮಾಲೀಕರು, ಮೋನೋಝೈಟ್ ಒಂದನ್ನು ಬಿಟ್ಟು ಬೇರೆ ಎಲ್ಲ ಮಿನರಲ್ ಹಾಗೂ ಮರಳನ್ನು ರಫ್ತು ಮಾಡಬಹುದಾಯಿತು. ಆದರೆ ಖಾಸಗೀ ಕಂಪನಿಯೊಂದು ಅನೈತಿಕವಾಗಿ ಥೋರಿಯಂ ರಫ್ತು ಮಾಡುತ್ತಿದೆ. 2002ರಿಂದ 2012 ರೊಳಗೆ ಸುಮಾರು 2.1 ಮಿಲಿಯನ್ ಟನ್ ಗಳಷ್ಟು ಥೋರಿಯಂ ಸಂಪನ್ನ ಮರಳು ನಾಪತ್ತೆಯಾಗಿದೆ. ಅಂದರೆ, ಸುಮಾರು 2,35,000 ಟನ್‍ಗಳ ಥೋರಿಯಂ. ಇಂಧನದ ಲೆಕ್ಕದಲ್ಲಿ ಹೇಳುವುದಾದರೆ, ಇಂದು ಇಡೀ ಭಾರತ ಬಳಸುತ್ತಿರುವ ಇಂಧನದ ಪ್ರಮಾಣದಲ್ಲಿ, ಇನ್ನು 700 ವರ್ಷಗಳ ಕಾಲ ಬಳಸಬಹುದಾದಷ್ಟು ಪ್ರಮಾಣದ ಥೋರಿಯಂ ಲೂಟಿಯಾಗಿದೆ. ಇನ್ನೊಂದು ರೀತಿ ಹೇಳುವುದಾದರೆ, ಇಷ್ಟು ಇಂಧನದಲ್ಲಿ ಇಡೀ ಪ್ರಪಂಚದ ಎಲ್ಲ ಇಂಧನ ಅಗತ್ಯಗಳನ್ನೂ 36 ವರ್ಷಗಳಕಾಲ ನಿಭಾಯಿಸಬಹುದಿತ್ತು. ಅಣುಶಕ್ತಿ ವಿಭಾಗಕ್ಕೆ ಸಂಬಂಧಿಸಿದ ಐ.ಆರ್.ಇ.ಎಲ್. (ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್) ಎಂಬ ಸಾರ್ವಜನಿಕ ವಲಯವು ಥೋರಿಯಮ್ ಸಮೃದ್ಧವಾಗಿರುವ ಮೋನಝೈಟ್ ಮರಳನ್ನು ಗಣಿಗಾರಿಕೆ ಮಾಡಿ ಕೇವಲ ಮೂರು ವರ್ಷಗಳಲ್ಲಿ 5 ಟನ್‍ಗಳಷ್ಟನ್ನು ರಫ್ತು ಮಾಡಿದೆ. ವಿಜ್ಞಾನಿಗಳಿಗೆ, ಸರ್ಕಾರಕ್ಕೆ ತನ್ನ ನಿಕ್ಷೇಪಗಳ ಮಹತ್ವ ತಿಳಿಯುವುದಕ್ಕಿಂತ ಮೊದಲು ಗಣಿ-ಧಣಿಗಳಿಗೆ ತಿಳಿದುಹೋಗಿ ದೇಶದ ಸಂಪತ್ತನ್ನು ಅವರ ಸ್ವಾರ್ಥಕ್ಕಾಗಿ ಲೂಟಿ ಹೊಡೆದು ಮಾರಿಕೊಳ್ಳುತ್ತಿರುವುದು ನಮ್ಮ ದೇಶದ ದುರಂತ. ಥೋರಿಯಂ ನಮ್ಮ ದೇಶದ ಆರ್ಥಿಕಸ್ಥಿತಿಯನ್ನು ವಿಶ್ವದ ಮುಂದುವರೆದ ದೇಶಗಳ ಮಟ್ಟಕ್ಕೆ ಕೊಂಡೊಯ್ಯ ಬಲ್ಲ ಸಂಪತ್ತು. ಮುಂಬೈ ಬಳಿಯ ಅಣುಸ್ಥಾವರವು ನಿಧಾನವಾಗಿ ತಲೆಯೆತ್ತಿ ಕಾರ್ಯಾಚರಣೆ ಪ್ರಾರಂಭವಾಗುವ ಹೊತ್ತಿಗೆ ನಮ್ಮ ದೇಶದ ಥೋರಿಯಂ ಚೈನಾ ಸೇರಿದ್ದರೆ, ಮತ್ತೆ ಮೇಲೇರುವ ಅವಕಾಶ ತಪ್ಪಿಹೋಗುತ್ತದೆ. ಕಡೇಪಕ್ಷ ಆರು ಕಂಪನಿಗಳು ಈ ರಫ್ತಿನಲ್ಲಿ ತೊಡಗಿದೆ. ಹಿಂದೂಸ್ಥಾನ್ ಮೈಕ ಮಾರ್ಟ್, ಸ್ವರ್ನಿಮ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್, ವಿ. ಆರ್. ಎಸ್. ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್, ಎಸ್. ಎನ್. ಇಂಡಸ್ಟ್ರೀಸ್, ಪ್ರೈ. ಲಿ, ಎಸ್, ಜೆ, ಎಂಟರ್ ಪ್ರೈಸಸ್, ವಿವೇಕಾನಂದ ಗ್ರೂಪ್, ಕಲ್ಯಾಣ್ ಇಂಟರ್‍ನ್ಯಾಶನಲ್ ಕಂಪನಿಗಳು ರಾಜಾರೋಷವಾಗಿ ವೆಬ್ ಸೈಟ್‍ಗಳಲ್ಲಿ ತಮ್ಮ ದಂಧೆಯ ಜಾಹೀರಾತುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದೇಶ ಅದನ್ನು ಮೌನವಾಗಿ ನೋಡುತ್ತಿದೆ. ಅರವತ್ತು ಲಕ್ಷ ಕೋಟಿ ರೂಪಾಯಿಗಳ ಮೊತ್ತದ ಥೋರಿಯಂ ಅಕ್ರಮ ಗಣಿಗಾರಿಕೆ ಮತ್ತು ರಫ್ತು ಪ್ರಕರಣ ಇನ್ನೂ ವಿಚಾರಣೆ ಆಗಬೇಕಿದೆ. ಬೆಳಕಿಗೆಗ್ ಬಂದದ್ದು ಇಷ್ಟಾದರೆ ಬೆಳಕಿಗೆ ಬಾರದೆ ಇನ್ನೆಷ್ಟು ನಡೆದು ಹೋಗಿದೆಯೋ ದೇವರೇ ಬಲ್ಲ.
2022/05/26 14:45:44
https://kn.vikaspedia.in/energy/energy-basics/cb8cc1cb0c95ccdcb7cbfca4-c85ca3cc1-cb6c95ccdca4cbf-thoriyam
mC4