text
stringlengths
411
79.6k
ಭಾಷೆಯೊಂದರ ಬೌದ್ಧಿಕ ಮತ್ತು ಸಾಮಾಜಿಕ ವಿಕಾಸವನ್ನು ಅರಿಯಲು ನಮ್ಮ ಪೂರ್ವಸೂರಿಗಳ ಕೃತಿಗಳನ್ನು ಅಧ್ಯಯನ ಮಾಡುವುದು ಅತ್ಯಂತ ಪರಿಣಾಮಕಾರಿಯಾದ ವಿಧಾನ. ಗತದ, ತಾವು ಬದುಕಿರುವ ವರ್ತಮಾನ ಕಾಲದ ಹಾಗೂ ಭಾಷೆ-ನಾಡಿನ ಭವಿಷ್ಯದ ಕುರಿತು ಈ ಲೇಖಕರು ಹೇಗೆ ಯೋಚಿಸಿದರೆಂದು ಇದರಿಂದ ನಮಗೆ ತಿಳಿಯಬಲ್ಲುದು. ಅವರ ಚಿಂತನಾಕ್ರಮದ ಹಿಂದೆ ಯಾವ ಸಂಗತಿಗಳು ಪ್ರಭಾವ ಬೀರಿದವು ಮತ್ತು ವೈಚಾರಿಕ ಪರಂಪರೆಯನ್ನು ಕಟ್ಟುವಲ್ಲಿ ಅವು ಎಂತಹ ಪಾತ್ರವನ್ನು ವಹಿಸಿದವು ಎಂಬುದನ್ನು ಸಹ ಇವು ನಮಗೆ ತಿಳಿಸಿಕೊಡುತ್ತವೆ. ಇಂಥ ಓದು ಮತ್ತು ಅಧ್ಯಯನಗಳು ಇತ್ಯರ್ಥಗೊಳ್ಳದ ವಿಷಯಗಳನ್ನು ಮತ್ತೆ ಚರ್ಚೆಯ ಮುನ್ನೆಲೆಗೆ ತರಲು, ಪೂರ್ಣಗೊಂಡಿವೆ ಎಂಬ ಸಂಗತಿಗಳನ್ನು ಹೊಸದೊಂದು ಆಯಾಮದಲ್ಲಿ ನೋಡಲು ಹೊಸ ಅವಕಾಶವನ್ನು ಒದಗಿಸಬಲ್ಲವು. ಇಂತಹ ಪ್ರಕ್ರಿಯೆಗಳ ಮೂಲಕವೇ ನಾವು ಪೂರ್ವಗ್ರಹಗಳಿಂದ ಮುಕ್ತರಾಗಿ, ನಿಜವಾದ ಅರ್ಥದಲ್ಲಿ ಒಂದು ಉನ್ನತ ಬೌದ್ಧಿಕ ಪರಂಪರೆಯ ವಾರಸುದಾರರಾಗಲು ಸಾಧ್ಯ. ’ಗುಣಿ’ ಅರ್ಥದಲ್ಲಿ ಓದು ಮನುಷ್ಯರನ್ನು ಪ್ರಜಾಸತ್ತಾತ್ಮಕಗೊಳಿಸುವ ಕ್ರಿಯೆ. ಸಂಸ್ಕೃತಿಗೆ ಸಂಬಂಧಿಸಿದಂತೆ ಉಂಟಾಗುವ ಮಾನಸಿಕ ದೂರ, ಸಾಮಾಜಿಕ ಕಂದರ, ಬೌದ್ಧಿಕ ಕೀಳರಿಮೆಗಳು ಕರಗಿ ಒಂದು ಸಮಾಜದಲ್ಲಿ ಎಲ್ಲರೂ ಮುಖ್ಯ ಎಂಬ ಅರಿವು ಪ್ರಜಾಸತ್ತೆಯ ನಿಜವಾದ ಗುಣಗಳಾದರೆ ಪರಂಪರೆಯ ಓದು ಆ ಬಗೆಯ ಅವಕಾಶವನ್ನು ಒದಗಿಸಬಲ್ಲದು. ಇಂತಹ ಓದಿನ ಸರಣಿಯೊಂದನ್ನು ಋತುಮಾನ ಆರಂಭಿಸುತ್ತಿದೆ. ಹಳೆಯ ಮರೆತುಹೋದ ಆದರೆ ಇಂದಿನ ತಲೆಮಾರು ಅಗತ್ಯವಾಗಿ ಓದಬೇಕಾದ ಬರಹಗಳು ಈ ಸರಣಿಯಲ್ಲಿ ಪ್ರಕಟವಾಗುತ್ತವೆ . ಪ್ರತಿ ಬರಹವನ್ನು ಸೂಚಿಸಲು ನಾವು ವಿವಿಧ ಸಮಕಾಲೀನ ಲೇಖಕರನ್ನು ಕೇಳಿಕೊಳ್ಳಲಿದ್ದೇವೆ . ಈ ಸರಣಿಯ ಮೊದಲ ಬರಹವನ್ನು ಸೂಚಿಸಿದ್ದು ಕೇಶವ ಮಳಗಿಯವರು. ಕಬ್ಬಿಣದ ಕಡಲೆಯಂಥ ವಿಷಯಗಳನ್ನು ತಮ್ಮ ವಿನೋದಿಂದ ಲೇಪಿತವಾದ ವಿದ್ವತ್ತಿನ ಮೂಲಕ ಪಸರಿಸಿದ, ಸಮಾಜ ಮತ್ತು ವ್ಯಕ್ತಿಗಳ ಬಗ್ಗೆ ಸದಾ ತುಡಿವ ಅಂತಃಕರಣಗಳನ್ನು ಹೊಂದಿದ್ದ ಪಂಜೆ ಮಂಗೇಶರಾಯರಿಗಿಂತ ಸೂಕ್ತ ಲೇಖಕ ಇನ್ನೊಬ್ಬರಿರಲಾರರು. ಆಧುನಿಕ ಕನ್ನಡ ಗದ್ಯಕ್ಕೆ ಚಿನ್ನದ ಮೆರಗನ್ನು ತಂದ ಪಂಜೆಯವರು ಕವಿ ಮುದ್ದಣ್ಣನ ಕುರಿತಾಗಿ ಬರೆದ ಲೇಖನವೊಂದರಿಂದ ಈ ಸರಣಿ ಆರಂಭಗೊಳ್ಳುತ್ತಿರುವುದು ಚೇತೋಹಾರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೮೯೨ನೆಯ ಇಸವಿಯ ತನಕ ನಂದಳಿಕೆ ಲಕ್ಷ್ಮೀನಾರಾಯಣಪ್ಪನವರ ಹೆಸರು ಮೇಲಕ್ಕೆ ಬಂದಿರಲಿಲ್ಲ. ಅಂದಿನವರ ಅಭಿಪ್ರಾಯದಲ್ಲಿ ಕನ್ನಡ ವಾಙ್ಮಯವು ಸೋಮೇಶ್ವರ ಶತಕ, ಕನ್ನಡ ಭಾರತ, ತೊರವೆಯ ರಾಮಾಯಣ, ಜೈಮಿನಿ ಭಾರತ, ಚನ್ನಬಸವ ಪುರಾಣ ಎಂಬೀ ಪಂಚಕಾವ್ಯಗಳಲ್ಲಿ ಕೊನೆಗೊಂಡು ಸಾಮಾನ್ಯರ ಕೈಗೆ ಸಿಲುಕದ “ಗೂಡಾದ್ಗೂಢರಹಸ್ಯ” ಎಂಬುದಾಗಿ ಭಾವಿಸಲ್ಪಟ್ಟಿತ್ತು. ಬಿ.ಎ. ವರೆಗೆ ಕನ್ನಡ ಓದಿದ ಕೆಲವರ ಹೊರತು ಉಳಿದವರು ಪಂಪರಾಮಾಯಣ ಎಂದರೆ, ಪಂಪಾಕ್ಷೇತ್ರದ ರಾಮ ಕಥೆಯಾಗಿರಬೇಕೆ೦ದು ಊಹಿಸಿದ್ದರು. ನಮ್ಮ ಜಿಲ್ಲೆಯೊಳಗಣ ಕನ್ನಡ ಪಾಂಡಿತ್ಯವು ಗೆರೆಸೊಪ್ಪೆ ಶಾಂತಯ್ಯ, ಪಾರ್ತಿ ಸುಬ್ಬಯ್ಯ ಎಂಬುವರ ಯಕ್ಷಗಾನ ಪ್ರಸಂಗಗಳ ಅರ್ಥಾನುವಾದಗಳಲ್ಲಿಯೂ ವಿಸ್ತರ ವಿವರಣೆಗಳಲ್ಲಿಯೂ ವಿಜೃಂಭಿಸುತ್ತಿತ್ತು. ಕವಿತಾ ಪ್ರೌಢಿಮೆಯು “ಮಧುರರಸ ಝರಿಯ” ತರಂಗದಲ್ಲಿ ತೇಲಾಡದೆ ಪ್ರಾಸ ವೈಚಿತ್ರ್ಯದ ರಾಟೆಯಲ್ಲಿ ತಲೆತಿರುಗುವಂತೆ ಉರುಳಿಸುತ್ತಿತ್ತು. ಮೈಸೂರಿನ ಬಿ. ವೆಂಕಟಾಚಾರ್ಯರ ಒಂದೆರಡು ಕಾದಂಬರಿಗಳು ಉಡುಪಿಯಲ್ಲಿ ನುಸುಳಿಕೊ೦ಡಿದ್ದರೂ, ಅವು “ಅತಿ ಭಕ್ತಿಯಿ೦ ಬಿಡದೋದಿ ಕೇಳ್ವ ಸಜ್ಜನರಿಷ್ಟಾರ್ಥಮ೦ ಕುಡುವ ಪುಣ್ಯಕಥೆಗಳಂತೆ” ಜನಪ್ರೀತವಾಗಿರಲಿಲ್ಲ. “ಕರ್ನಾಟಕದ ರಾಗರಾಗಿಣಿಗಳ ಅವಸ್ಥೆಯಂ ಪೇಳ್ವದೇಂ?” “ಭಿನ್ನಸಂಧಿಯಿಂ ಪಾಡಲೆಂತು ಅ೦ಗಮಿಂತು ಭಿನ್ನ ಭಿನ್ನಮಾದುದು”. ಹೀಗಾದುದರಿ೦ದ ನಮ್ಮ ಜಿಲ್ಲೆಯೊಳಗಿನ ನಾಟ್ಯರಂಗವು ಬಸವಪ್ಪ ಶಾಸ್ತ್ರಿ ಕೃತ ಕನ್ನಡ ಶಾಕು೦ತಳ ನಾಟಕಕ್ಕೆ ಎಡೆಗೊಡದೆ, ಅಣ್ಣಾಜಿ ಕಿರ್ಲೋಸ್ಕರರ ಮರಾಟಿ ನಾಟಕಗಳಿಂದ ಆಕ್ರಮಿಸಲ್ಪಟ್ಟಿತ್ತು. ಕನ್ನಡದ ಮೇಲಿನ ಮಮತೆಯಿ೦ದ ಮರಾಟಿ ನಾಟಕಗಳನ್ನು ಪರಿವರ್ತಿಸಿ ಕರ್ನಾಟಕ ಭಾಷಾ ಸೇವೆಯನ್ನು ಕೈಲಾದಷ್ಟು ಮಾಡುತ್ತಿದ್ದ ಶ್ರೀಯುತ ಕುಬೇರ ಪಾಂಡುರಂಗರಾಯರ ಉದ್ಯಮದ ಬೆಳಕೊಂದು ಶ್ರೀಯುತ ಮಳಲಿ ಸುಬ್ಬರಾಯರ ಸಂಗೀತ ಕೃಷ್ಣಜನ್ಮಾದಿ ಮರಾಟಿ ನಾಟಕಗಳ ಸು೦ಟುರುಗಾಳಿಯಲ್ಲಿ ಫುರುಫುರಿಸುತ್ತಿತ್ತು. ಕನ್ನಡ ವಾರ್ತಾ ಪತ್ರಗಳಲ್ಲಿ “ಸುದರ್ಶನ”ವೆಂಬ ಹೆಸರುಳ್ಳ ಉಡುಪಿಯ ಒ೦ದು ಮಾಸಪತ್ರಿಕೆಯು ಮೂರು ತಿಂಗಳುಗಳಿಗೆ ಒಂದು ಸಲ ಅರೆಜೀವದಿಂದ ಹೊರಡುತ್ತಿತ್ತು. ನಮ್ಮ ಜಿಲ್ಲೆಯಲ್ಲಿ ಕನ್ನಡದ ಪರಿಸಿತಿಯು ಹೀಗಿರಲು, ೧೮೯೩ ನೆಯ ಇಸವಿಯಲ್ಲಿ ನಾನು ಬ೦ಟವಾಳದಲ್ಲಿದ್ದಾಗ ನನ್ನ ಸ್ನೇಹಿತನ ಕೈಯಲ್ಲಿದ್ದ ಒಂದು ಪುಸ್ತಕವು ನನ್ನ ಕಣ್ಣಿಗೆ ಬಿತ್ತು. ನಾನು ಅದನ್ನು ಕೈಯಲ್ಲಿ ಹಿಡಿದು ನೋಡಿದೆನು. ಅದು ಅಚ್ಚಾದದ್ದು-ಸುದರ್ಶನ ಮಾಸಪತ್ರಿಕೆಯು ಹೊರಡುವ ಪ್ರಭಾಕರ ಮುದ್ರಾ ಯಂತ್ರದಲ್ಲಿ. ಅದರ ಮುದ್ರಣ ಕಾರ್ಯವು ಆ ಕಾಲಕ್ಕೆ ಪರಿಷ್ಕಾರವಾಗಿಯೇ ಇತ್ತು. ಪುಸ್ತಕದ ಹೆಸರು ಕುಮಾರ ವಿಜಯ ಪ್ರಸಂಗ; ರಚಿತವಾದದ್ದು- ನಂದಳಿಕೆ ಲಕ್ಷ್ಮೀನಾರಾಯಣಪ್ಪನವರಿಂದ. ನಾನು ಪುಸ್ತಕವನ್ನು ತೆರೆದು ನೋಡಲು, “ಆಳಿಯಲರಂ ಗಿಳಿ ಪಣ್ಣಂ ತಳಿರಂ ಪಿಕನೊಲ್ವತೆರದಿ ಕುಜದೊಳ್‌ ಕೃತಿಯೊಳ್‌! ವಿಳಸಿತ….. “ ಎ೦ಬೀ ಪದ್ಯವಿತ್ತು . ಪುಸ್ತಕದ ಪ್ರಥಮ ಪುಟದಲ್ಲಿ ಒಂದು ಕ೦ದ ಪದ್ಯವನ್ನು ಹೀಗೆ ಪ್ರತ್ಯೇಕವಾಗಿ ಎತ್ತಿಟ್ಟಿದ್ದು ನನಗೆ ನೂತನವಾಗಿ ತೋರಿತು. ಅದರಲ್ಲಿಯೂ ಆ ವರ್ಷದ ನನ್ನ ಪಠ್ಯಪುಸ್ತಕದಲ್ಲಿದ್ದ ಆ ಕಂದ ಪದ್ಯವೇ ಈ ಮುಖಪತ್ರದಲ್ಲಿ ಎದ್ದುನಿಂತದ್ದರಿಂದ, ನಾನು ಪುಸ್ತಕದ ಮುಖಪತ್ರವನ್ನು ಮತ್ತೂ ಮತ್ತೂ ಓದಿದೆನು. ಯಾವಾಗ ಷಡಕ್ಷರಿ ಮಹಾಕವಿಯ ಶಬರಶ೦ಕರ ವಿಳಾಸದೊಳಗಿನ ಆ ಕಂದ ಪದ್ಯದ ಜತೆಯಲ್ಲಿ ನನ್ನ ನಾಲಗೆಯಿಂದ ಕುಮಾರ ವಿಜಯ ಪ್ರಸಂಗಕಾರರಾದ ನಂದಳಿಕೆ ಲಕ್ಷ್ಮೀನಾರಾಯಣಪ್ಪನವರ ದೊಡ್ಡ ಹೆಸರು ಹೊರಹೊಮ್ಮಿತೋ ಆಗಲೇ ನಮ್ಮ ಜಿಲ್ಲೆಯಲ್ಲಿ ಇರತಕ್ಕ ಕನ್ನಡ ಕವಿಗಳ ವಿಷಯವಾಗಿ ನನ್ನಲ್ಲಿದ್ದ ಕಣ್ಣಿನ ಮಸುಕು ಕಳಚಿಹೋಯಿತು; ಕರ್ನಾಟಕ ವಿಚೂತನವನ್ನು ದಾಟಿ ಷಡಕ್ಷರಿಯ ಗಿರಿದುರ್ಗವನ್ನು ಮುಟ್ಟಿದ ಮಹನೀಯರು ನಮ್ಮ ಜಿಲ್ಲೆಯಲ್ಲಿ ಇದಾರೆಂಬ ಬೆಳಕು ತೋರಿತು; ಅದರೊಂದಿಗೆ ಕುಮಾರ ವಿಜಯವನ್ನು ಓದಿ ಮುಗಿಸಬೇಕೊಬ ಲವಲವಿಕೆಯು ಒತ್ತೊತ್ತಿ ಬಂದಿತು. ನಾನು ಆ ಪುಸ್ತಕವನ್ನು ಓದಿ ಓದಿ ಮರುಳಾದೆನು; ಅದರೊಳಗಿನ ಹಾಡುಗಳನ್ನು ಹಾಡಿ ಹಾಡಿ ಉರುಹಾಕಿದೆನು; ಅದರೂಳಗಿನ ನಿರರ್ಗಳವಾದ ಯಮಕಗಳನ್ನೂ, ಪ್ರಾಸಗಳನ್ನು ಹೆಕ್ಕಿ ಹೆಕ್ಕಿ ತಲೆಯಲ್ಲಿ ತೂರಿಕೊಂಡೆನು; ಕಳವೆಂದು ತಿಳಿಯದೆ ಪರಪದಾರ್ಥದ ಬಲದಿಂದ ತುಂಡು ಪದಗಳನ್ನು ಕಟ್ಟಿ ಅವನ್ನು ನಾನೇ ಹಾಡಿ, ಅವಕ್ಕೆ ನಾನೇ ಹಿಗ್ಗಿಕೊಂಡೆನು. ನಂದಳಿಕೆ ಲಕ್ಷ್ಮೀನಾರಣಪ್ಪನವರು ಕನ್ನಡ ದೇವಿಯ ದೇವಸ್ಥಾನದ ಹೊರಸುತ್ತಿನಲ್ಲಿಯೇ ನಿಂತುಕೊಂಡು ಯಕ್ಷಗಾನ ಸೇವೆಯನ್ನು ಮಾಡುವ ಭಾಗವತರಂತೆ ಇರದೆ, ಆ ಸರಸ್ವತಿಯ ಸಾನ್ನಿಧ್ಯವನ್ನು ಸದ್ಯದಲ್ಲಿಯೇ ಸೇರತಕ್ಕ ಶುದ್ಧೋಪಾಸಕರೆ೦ದು ನಾನು ಭಾವಿಸುತ್ತ ಬಂದೆನು. ಕುಮಾರ ವಿಜಯ ಬಿಟ್ಟರೆ ಪ್ರಸ೦ಗವಿಲ್ಲ. ನಂದಳಿಕೆಯವರನ್ನು ಬಿಟ್ಟರೆ ಕವಿಯಿಲ್ಲ- ಹೀಗೆ ಬಹುಕಾಲದ ವರೆಗೆ ನನ್ನ ಅಭಿಪ್ರಾಯವಾಯಿತು. ಸಾಲದುದಕ್ಕೆ ಈ ಅಭಿಪ್ರಾಯವನ್ನೇ ನಾನು ೧೮೯೫ರಲ್ಲಿ ಮೆ||ಸಿ.ಡಿ.ಕೆ. ಪಿ೦ತೋ, ಬಿ.ಎ. ಬಿ.ಎಲ್‌ ಎಂಬವರ ಅಧ್ಯಕ್ಷತೆಯಲ್ಲಿ ಜರುಗಿದ ಒಂದು ಸಭೆಯಲ್ಲಿ ಓದಿದ ಉಪನ್ಯಾಸದಲ್ಲಿ ತಂದು ಹಾಕಿ, ನಂದಳಿಕೆಯವರ ಸಭೆಯಲ್ಲಿ ಬೆಳೆಯ ಸಿರಿಯನ್ನು ಮೊಳೆಯಲ್ಲಿಯೇ ತೋರಿಸತಕ್ಕ ಕುಮಾರ ವಿಜಯ ಗ್ರಂಥವನ್ನು ಪ್ರಶಂಸಿಸಿದೆನು. “ಕುಮಾರ ವಿಜಯವು” ಯಕ್ಷಗಾನ ಪ್ರಸಂಗವಾಗಿದ್ದರೂ ನನ್ನ ದೃಷ್ಟಿಯಲ್ಲಿ ಅದಕ್ಕೆ ಇರುವಷ್ಟು ಮಹತ್ವವು ನಂದಳಿಕೆಯವರ ಇತರ ಗ್ರಂಥಗಳಿಗೆ ಇರುವುದಿಲ್ಲ. ಅದ್ಭುತ ರಾಮಾಯಣ, ಶ್ರೀ ರಾಮ ಪಟ್ಟಾಭಿಷೇಕ, ರಾಮಾಶ್ಚಮೇಧಗಳು ಏಕ ಕವಿಕೃತವೊ ಅಲ್ಲವೊ ಎಂಬುದು ವಾದಗ್ರಸ್ತ ಸಂಗತಿಯಾಗಿದೆ. ಆದರೆ ಕುಮಾರ ವಿಜಯದ ಮೇಲೆ ಈ ಅನುಮಾನದ ನೆರಳೂ ಇಲ್ಲ. ಕವಿಯು ತನ್ನ ಹೆಸರನ್ನು ಮರೆಸಿಕೊ೦ಡು ರಚಿಸಿದ ಆ ಗ್ರಂಥಗಳು “ಶಿವನ ಜಟಾಜೂಟದಿಂ ಕೆಳಗೆ ಜಗುಳ್ದು” ಗುಪ್ತಗಾಮಿನಿಯಾಗಿ ಹರಿಯುವ “ಗಂಗಾ ಸಲಿಲ ಬಿ೦ದುಗಳಂತೆ ಗುಪ್ತಚಾರಿತ್ರ ಗಂಧಮ೦ ತಾಳ್ದಿದುವು”. ಈ ಗುಪ್ತಚಾರಿತ್ರ ಗ್ರಂಥವನ್ನು ಹೊರತ೦ದು ಗಮಗಮಿಸುವಂತೆ ಚೆಲ್ಲುವುದಕ್ಕೆ ಕುಮಾರ ವಿಜಯವೇ ಅವರ ಗ್ರಂಥಗಳಲ್ಲಿ ಒತ್ತಾಸೆ ಮಾಡುತ್ತದೆ. ಆ ಗ್ರಂಥಾದಿಯಲ್ಲಿಯ ಶ್ರೀ ಕೃಷ್ಣ ಪರವಾದ ನಾಂದೀ ಶ್ಲೋಕವೂ ಅದರ ಅಂತ್ಯದಲ್ಲಿಯ ಉಡುಪಿ ಚ೦ದ್ರ ಮೌಳೀಶ್ವರ ಮಂಗಲ ಸ್ತೋತ್ರವೂ ಲಕ್ಷ್ಮೀನಾರಾಯಣಪ್ಪನವರು ಉಡುಪಿಯ ಸ್ಮಾರ್ತಕವಿ ಎ೦ಬುದಕ್ಕೆ ಸಾಕ್ಷಿಗಳಾಗಿವೆ. ಅವರು ತಮ್ಮ ಹುಟ್ಟೂರಾದ ನಂದಳಿಕೆಯನ್ನು ಬಿಟ್ಟು ಯಾವಾಗ ಉಡುಪಿಗೆ ಒಕ್ಕಲು ಹೋದರೆಂಬುದು ಅಲ್ಲಿಯ ಜನರಿಗೆ ಗೊತ್ತಿಲ್ಲ. ದಕ್ಷಿಣ ಕನ್ನಡದ ಇತರ ಗ್ರಾಮಗಳಂತೆ ನಂದಳಿಕೆಯು ಬಹು ಸುಂದರವಾದ ಹಳ್ಳಿಯಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಏರುತಗ್ಗುಗಳು, ಇವುಗಳ ನಡುವೆ ಹೊಲಗದ್ದೆಗಳು, ಅವುಗಳ ಪಕ್ಕದಲ್ಲಿ ಮಳೆಗಾಲದಲ್ಲಿ ನೀರುತುಂಬಿ ಹರಿಯುವ ತೋಡುಗಳು, ಗದ್ದೆಗಳ ತೆವರಿಗಳಲ್ಲಿ ತಲೆತೂಗುವ ತೆಂಗುಗಳು, ತೆಂಗಿನ ಗರಿಯ ಮಾಡುಗಳ ಹುಲ್ಲುಚಾವಣಿಯಿ೦ದ ಹೊಳೆಯುವ ಗುಡಿಕಟ್ಟುಗಳು – ಇವುಗಳಿಂದ ನಂದಳಿಕೆಯು ಅತ್ಯಂತ ರಮಣೀಯವಾಗಿದೆ. ೧೯೧೫ ನೆಯ ಇಸವಿಯಲ್ಲಿ ನಾನು ನಂದಳಿಕೆಗೆ ಹೋಗಿದ್ದಾಗ ಅಲ್ಲಿಯ ಗ್ರಾಮ ದೇವಸ್ಥಾನದ ಪಡುಗಡೆಯಲ್ಲಿ ಈಗ ಪಾಳು ಬಿದ್ದಿರುವ ಒ೦ದು ಮನೆಯಲ್ಲಿ ಅವರು ಜನಿಸಿದರೆ೦ತಲೂ, ರಾಮ ಹೆಗ್ಗಡೆಯೆಂಬುವರು ನಡೆಸುತ್ತಿದ್ದ ಹಳ್ಳಿಯ ಶಾಲೆಯಲ್ಲಿ ಅವರಿಗೆ ಓನಾಮವಾಯಿತೆ೦ತಲೂ ನನಗೆ ತಿಳಿದು ಬಂದಿತು. ನಂದಳಿಕೆಯವರು ಯಾವ ಜಾತಿಯವರೆಂದು ನಾನು ಹೇಳುವ ಹಾಗಿಲ್ಲ. ಖುಷಿಯ ಕುಲವನ್ನೂ, ನದಿಯ ಮೂಲವನ್ನೂ ಹುಡುಕುವುದು ಸರಿಯಲ್ಲವೆನ್ನುತ್ತಾರೆ; ಖುಷಿಯ ಕುಲದಂತೆ ಕವಿಯ ಜಾತಿಯನ್ನು- ಇಂದಿನ ಬ್ರಾಹ್ಮಣ, ಬ್ರಾಹ್ಮಣೇತರ ಎಂಬ ತರ್ಕ ತಿಕ್ಕಾಟಗಳ ಕಾಲದಲ್ಲಿ – ಚರ್ಚಾಸ್ಪದವಾಗಿ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ನಂದಳಿಕೆಯ ಲಕ್ಷ್ಮೀನಾರಾಯಣಪ್ಪನವರು ದಕ್ಷಿಣ ಕನ್ನಡ ಜಿಲ್ಲೆಯವರು; ಮೂಗುತಿಯ ಮುತ್ತು ಎಲ್ಲಿ ಹುಟ್ಟಿದರೇನು? ಎಲ್ಲಿ ಬೆಳೆದರೇನು? ಅದು ಕನ್ನಡದ ಮೈಕಾಂತಿಯನ್ನೇ ಏರಿಸಿಬಿಟ್ಟಿತೆ೦ದು ಹೇಳಿದರೆ ಸಾಲದೆ? ನಾರಾಯಣಪ್ಪನವರು ನಂದಳಿಕೆಯ ಹಳ್ಳಿಯ ಶಾಲೆಯಲ್ಲಿ ಐದಾರು ವರ್ಷಗಳವರೆಗೆ ಓದಿರಬಹುದಾದರೂ, ಅವರ ಪಾಂಡಿತ್ಯಕ್ಕೆ ಆ ವಿದ್ಯಾಭ್ಯಾಸವು ಕಾರಣವಾಗಿರಲಿಕ್ಕಿಲ್ಲ. ಹಳ್ಳಿಯ ಶಾಲೆಯು ಅವರಿಗೆ ಅಕ್ಷರಾಭ್ಯಾಸವನ್ನು ಮಾಡಿಸಿರಬಹುದು. ಆದರೆ ಅಂಗೈ ಅಗಲದಷ್ಟು ಇರುವ ಕೊಠಡಿಯೊಳಗೆ ಮಕ್ಕಳ ಚಟುವಟಿಕೆಯನ್ನು ಸೆರೆಹಾಕಿ, ಹೆಸರು ಹೇಳಿದರೆ ಓಕರಿಕೆಯಾಗುವ ತುಂಡು ಪಾಠಗಳ ಗುಟುಕುಗಳನ್ನು ಅವರ ಬಾಯಿಗೆ ಕೊಟ್ಟು, ಅವರನ್ನು ಹಾರಬಿಡದೆ ಪರಾವಲಂಬನದಿಂದ ಜೀವಿಸುವ ಹಾಗೆ ಮಾಡುವಂಥ ಹಳ್ಳಿ ಶಾಲೆಗಳ ಆ ಏರ್ಪಾಡು ಜನ್ಮದ ಧ್ಯೇಯವನ್ನು ಬೇರೊಂದಾಗಿ ಮಾಡಿ, ಜ್ಞಾನಾರ್ಜನೆಯನ್ನು ಸ್ಪರ್ಧೆಯಿಂದ ಕಲಂಕಿಸಿ, ನಮ್ಮ ಮನೋಭಾವನೆಗಳನ್ನು ಅಸ್ವಾಭಾವಿಕವಾದ ಕಾಲುವೆಗಳಲ್ಲಿ ಹರಿಯುವಂತೆ ಮಾಡಿ, ಜನ ಜೀವನದಿಂದ ಫಲವತ್ತಾಗತಕ್ಕ ವಾಙ್ಮಯ ಪ್ರದೇಶವನ್ನು ಪಾಳುಬೀಳುವಂತೆ ಮಾಡುವುದರಿಂದ, ಈ ಹಳ್ಳಿಯ ಶಾಲೆಯ ವಿದ್ಯಾಭ್ಯಾಸದಿಂದ ನಾರಾಯಣಪ್ಪನವರು ದೊಡ್ಡ ಕವಿಯಾದರೆಂದು ಯಾರಾದರೂ ಹೇಳಿದರೆ ನಾನು ಒಪ್ಪಲಾರೆನು. ಅವರ ಶಿಕ್ಷಣವು ಈಗಲೂ ನಮ್ಮ ಹಳ್ಳಿಗಳಲ್ಲಿ ವಾಡಿಕೆಯಾಗಿರುವ ಹಳೆಯ ‘ಕಿಂಡರ್‌ ಗಾರ್ಟನ್‌’ ಕ್ರಮವನ್ನು ಅನುಸರಿಸಿತ್ತು. ಈ ಕ್ರಮದಲ್ಲಿ ಇಡೀ ಗ್ರಾಮವೇ ಪಾಠಶಾಲೆ, ಹಳ್ಳಿಯವರೆಲ್ಲರೂ ವಿದ್ಯಾರ್ಥಿಗಳು, ಭಗವ೦ತನ ಸಾನ್ನಿಧ್ಯ ಪ್ರಾಪ್ತಿಯೇ ಧ್ಯೇಯವು. ಆ ಧ್ಯೇಯಕ್ಕೆ ಹೊಂದಿಕೊಂಡು ದೇವಸ್ಥಾನದಲ್ಲಿ ಪುರಾಣಶ್ರವಣ; ಆ ಪುರಾಣ ಪುರುಷರ ಪರವಾಗಿ ಕಟ್ಟಿದ್ದ ಯಕ್ಷಗಾನ ಪ್ರಸಂಗ; ಪ್ರಸಂಗದ ಹಾಡುಗಳನ್ನು ಅಭಿನಯಿಸಿ ತೋರಿಸುವ ದಶಾವತಾರದ ಬೈಲಾಟಗಳು; ಶಿವರಾತ್ರಿ ಕೃಷ್ಣ ಜಯಂತಿ ಇತ್ಯಾದಿಯಾದ ಹಬ್ಬ ಹುಣ್ಣಿಮೆಗಳ ನೆವದಿಂದ ಪ್ರಾಚೀನ ವೀರರ ಪೂಜೆ; ಪೂಜಿಸಲಿಕ್ಕೆ ಬೇಕಾದ ಗೌರಿ, ಗಣೇಶ, ಅನಂತ, ದುರ್ಗಾದಿ ಬಿಂಬಗಳ ನಿರ್ಮಾಣ; ದೀಪಾವಳಿ ರಥೋತ್ಸವಾದಿ ಕಾಲದಲ್ಲಿ ಕಲಶ ಕುರುಜುಗಳ ಮತ್ತು ಮಕುಟಮಂಟಪಗಳ ಶೃ೦ಗಾರರಚನೆ; ಹಳ್ಳಿಯ ಅಯನ ಆರಾಟಗಳ ಮೂಲಕ ವ್ಯಾಯಾಮಯುಕ್ತವಾಗಿ ದೊರೆಯವ ಸೃಷ್ಟಿ ನಿರೀಕ್ಷಣ- ಹೀಗೆ ಸರ್ವತೋಮುಖವಾಗಿರುವ ಆರ್ಯ ವಿದ್ಯಾಭ್ಯಾಸದಲ್ಲಿ ನಾರಾಯಣಪ್ಪನವರ ಭಾವಿ ಪಾಂಡಿತ್ಯದ ಮೂಲವನ್ನು ಕಂಡುಹಿಡಿಯಬೇಕು. ನಾರಾಯಣಪ್ಪನವರು ಇಂಗ್ಲೀಷ್‌ ಕಲಿಯುವುದಕ್ಕಾಗಿ ನಂದಳಿಕೆಯನ್ನು ಬಿಟ್ಟು ಉಡುಪಿಗೆ ಹೋದರೆಂಬುದಕ್ಕೂ, ಇಂಗ್ಲಿಷ್‌ ಶಾಲೆಯನ್ನು ಸೇರಿದ ಎರಡು ವರ್ಷಗಳಲ್ಲಿಯೇ ಹಣದ ಆಡಚಣೆಯಿಂದ ಶಾಲೆಯನ್ನು ಬಿಟ್ಟರೆಂಬುದಕ್ಕೂ ಸಾಕಾದಷ್ಟು ಆಧಾರವಿದೆ. ೧೮೮೭ ರವರೆಗೆ ಅವರು ಉಡುಪಿಯಲ್ಲಿ ಏನು ಮಾಡುತ್ತಿದ್ದರೆಂಬುದು ಊಹಾಸ್ಪದವಾಗಿದೆ. ಬಹುಶಃ ಈ ಅವಧಿಯಲ್ಲಿ ಕೃಷ್ಣಾಪುರ ಮಠದ ಆಚಾರ್ಯರಿಂದ ಸಂಸ್ಕೃತದ ಪರಿಚಯವನ್ನೂ, ಶ್ರೀಯುತ ಮಳಲಿ ಸುಬ್ಬರಾಯರಿಂದ ಇಂಗ್ಲಿಷ್‌ ಭಾಷಾಜ್ಞಾನವನ್ನೂ ಸಂಪಾದಿಸಿರಬಹುದು. ಆದರೆ ಅವರ ಮನಸ್ಸು ಕನ್ನಡಕ್ಕೆ ಒಲಿದಷ್ಟು ಸಂಸ್ಕೃತಕ್ಕೆ ಒಲಿಯಲಿಲ್ಲ. “ಏಂ ಭೋಜ ಪ್ರಬಂಧಂ? ವಿಕ್ರಮ ವಿಜಯಂ? ಮಹಾವೀರಚರಿತಂ?” “ಇಸ್ಸಿ! ಇವಱೊಳೆ ನಗೞ್ಕಱುಲ್ಲ೦” ಈ ಅವಧಿಯಲ್ಲಿ ಅವರು ತುಳು ಭಾಷೆಯ ಪದಗಳನ್ನು ಕಟ್ಟಿ ಅವುಗಳನ್ನು ತಮ್ಮ ಗೆಳೆಯರ ಕೂಟದಲ್ಲಿ ರಸಿಕನಂತೆ ಹಾಡುವುದನ್ನೊ, ಉಡುಪಿಯ ನಾಟಕಮಂಡಳಿಯವರ ನಾಟಕಗಳಲ್ಲಿ ಒಂದೊಂದು ಸಲ ವಿದೂಷಕನ ವೇಷದಿ೦ದ ಸಭಿಕರನ್ನು ವಿನೋದಗೊಳಿಸುವುದನ್ನೋ, ‘ತಾಳಮದ್ದಳೆ’ ಇರುವ ರಾತ್ರಿಯಲ್ಲಿ ನೆರೆಮನೆಯನ್ನು ಸೇರಿಕೊಂಡು ಅರ್ಥ ಹೇಳುವುದನ್ನೋ, ಉಡುಪಿಯ ಪರ್ಯಾಯ ಎಂಬ ಉತ್ಸವ ಕಾಲದಲ್ಲಿ “ನೆಲದ ಕೆಲಬಲದಿ ಘಟ್ಟಿಸೆ ನಿಂದ ರನ್ನಗಂಬಂಗಳ ಮೇಲೆ ಬಿಗಿದಿಹ ಸಮುನ್ನತ ಮಹಾ ಮಂಡಪಗಳಂ ಚೆಲ್ವಾದ ಬೀದಿಗಳಲ್ಲಿ” ತಿರುಗಾಡುತಿರುವುದನ್ನೋ ನಾವು ಊಹಿಸಬೇಕಾಗುತ್ತದೆ. ಸುಮಾರು ಈ ಕಾಲದಲ್ಲಿಯೇ ಅವರು ಉಡುಪಿಯ ಬೋರ್ಡು ಸ್ಕೂಲಿನ ಲೈಬ್ರರಿಯಲ್ಲಿದ್ದ ‘ಶಬ್ದಮಣಿ ದರ್ಪಣ’ ‘ಛಂದೋಂಬುದಿ’ ‘ಅನುಭವಾಮೃತ’ ‘ಪ್ರಾಕ್ಕಾವ್ಯಮಾಲಿಕೆ’ ಎಂಬೀ ಪುಸಕಗಳನ್ನು ಓದಿ; ಅವುಗಳನ್ನು ಕರತಲಾಮಲಕವಾಗಿ ಮಾಡಿರಬೇಕು. ಹೀಗೆ ನೆಲದಡಿಯಲ್ಲಿಯ ಸಸ್ಯಾಹಾರವನ್ನು ಸಂಗ್ರಹಿಸಿ ಬೆಳೆಯುತ್ತಲಿದ್ದ ಪಾಂಡಿತ್ಯದ ಬೀಜಾಂಕುರವು ಬಡತನದ ಕಲ್ಲೆಡೆಯಲ್ಲಿ ಸಿಕ್ಕಿಕೊಂಡು ಮೇಲಕ್ಕೆ ಏಳಲಾರದೆ ಬಿಸಿಲ ಮೊರೆಯನ್ನು ಕಾಣಲಾರದೆ ಅಲ್ಲಲ್ಲೇ ಸುಳಿದಾಡುತ್ತಿತ್ತು. ದೈವವಶಾತ್‌ ಹಿಂದೂ ಮುದ್ರಣಾಲಯದ ಚಾಲಕರು ಕೈಕೊಟ್ಟು ‌ಕಲ್ಲನ್ನು ಈಚೆಗೆ ಉರುಳಿಸಿಬಿಟ್ಟರು! ನಾರಾಯಣಪ್ಪನವರ ‘ರೇವತಿ ಕಲ್ಯಾಣ’ ‘ಕುಮಾರ ವಿಜಯ’ ಎಂಬೀ ಎರಡು ಯಕ್ಷಗಾನ ಪ್ರಸಂಗಗಳು ಪ್ರಕಾಶಕ್ಕೆ ಬಂದುವು. ನಂದಳಿಕೆಯವರ ಇತರ ಗ್ರಂಥಗಳಿಗಿ೦ತ ಕುಮಾರ ವಿಜಯಕ್ಕೆ ಹೆಚ್ಚಿನ ಮಹತ್ವವನ್ನು ನಾನು ಕೊಡುತ್ತೇನೆಂದುದಾಗಿ ನಾನು ಹಿಂದೆ ಹೇಳಿರುವೆನಷ್ಟೆ. ನಂದಳಿಕೆಯವರಿಗೆ ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯ ಪರಿಚಯವನ್ನು ತಕ್ಕಷ್ಟು ಮಾಡಿಕೊಟ್ಟ ಪೂರ್ವೋಕ್ತ ಶ್ರೀಯುತ ಮಳಲಿ ಸುಬ್ಬರಾಯರನ್ನು ಕುರಿತು ಹೀಗೆಂದು ಉಲ್ಲೇಖವಿದೆ. “ಸರ್ಪಭೂಷನ ಭಕ್ತ ಕವಿತಾ ದರ್ಪಣಾಬ್ಧಿಗಭೀರ ಗುರುವೆನಿ ಸಿರ್ಪ ಮಳಲಿ ಸುಬ್ಬರಾಯರಿಗರ್ಪಿಸುವೆನು” ಈ ಮಳಲಿ ಸುಬ್ಬರಾಯರೇ ಉಡುಪಿಯ ಬೋರ್ಡ್‌ ಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದು, ಅನಂತರ ನಂದಳಿಕೆಯವರು ಕುಂದಾಪುರದ ಹೈಸ್ಕೂಲಿನಲ್ಲಿ ಅಂಗಸಾಧನೆಯ ಉಪಾಧ್ಯಾಯ ಕೆಲಸದಲ್ಲಿ ಇದ್ದಾಗ ಇವರ ಜೊತೆಯ ಉಪಾಧ್ಯಾಯರಾದರು. ಈ ಸುಬ್ಬರಾಯರ ಅನುಮೋದನದಿಂದ ನಂದಳಿಕೆಯವರು ಸುಮಾರು ೧೮೯೮ ರಲ್ಲಿ “ತಾಂಡವ ಮುನಿಯ ಕಥೆ” ಎಂಬ ತೊರವೆಯ ರಾಮಾಯಣದೊಳಗಿನ ಕೆಲವು ಪದ್ಯಗಳಿಗೆ ಟಿಪ್ಪಣಿಯನ್ನು ಬರೆದರೆಂದು ನಾನು ಕೇಳಿರುತ್ತೇನೆ. ನಂದಳಿಕೆಯವರು ಉಡುಪಿಯಲ್ಲಿ ಉಳಿದುಕೊಂಡ ನಂತರ ೧೮೯೩ ರವರೆಗೆ ಕನ್ನಡ ಸಾಹಿತ್ಯ ಸಂಪಾದನೆಯಲ್ಲಿ ಎಲ್ಲಿಯತನಕ ಹೋಗಿದ್ದರೆಂಬುದನ್ನು ಶೋಧಿಸುವುದಕ್ಕೆ ಕುಮಾರ ವಿಜಯವು ತಕ್ಕಷ್ಟು ಬೆಳಕನ್ನು ಚೆಲ್ಲುತ್ತದೆ. ಪ್ರಸಂಗದ ಅನೇಕ ಹಾಡುಗಳ ಧಾಟಿಯನ್ನು ತೋರಿಸುವುದಕ್ಕೆ ಇಟ್ಟ ಸೊಲ್ಲುಗಳು, ಉಡುಪಿಯ ಮಾನಪತ್ರವಾದ ಸುದರ್ಶನದಲ್ಲಿ ಪ್ರಕಟವಾಗುತ್ತಿದ್ದ ತುಂಡು ಪದಗಳ ಚರಣಗಳು, ಇಲ್ಲವೆ ನಂದಳಿಕೆಯವರೇ ಕಟ್ಟಿದ ತುಳು ಹಾಡುಗಳ ಭಾಗಗಳು, ಇಲ್ಲವೆ ಉಡುಪಿಯಲ್ಲಿ ಅಂದು ಆಡಿಸಿ ತೋರಿಸುತ್ತಿದ್ದ ಮರಾಟಿ ಪದಗಳ ಪಲ್ಲವಿಗಳು, ಇಲ್ಲವೆ ಪ್ರಚಾರದಲ್ಲಿದ್ದ ಇತರ ಪ್ರಸಂಗಗಳೊಳಗಿನ ಹಾಡುಗಳು ಇದರಿಂದ ಯಕ್ಷಗಾನ ಪ್ರಸಂಗಕ್ಕೆ ಬೇಕಾದ ಹಾಡುಗಳನ್ನು ಯಾವ ಧಾಟಿಯಲ್ಲಾದರೂ ಕಟ್ಟುವುದಕ್ಕೂ ಹಾಡುವುದಕ್ಕೂ ಅವರು ತಮ್ಮ ೨೦ನೆಯ ವಯಸ್ಸಿನೊಳಗೆ ಶಕ್ತರಾಗಿದ್ದರೆ೦ದು ಹೇಳಬೇಕಾಗುತ್ತದೆ. ಕುಮಾರ ವಿಜಯದೊಳಗಿನ ಯಮಕಗಳನ್ನೂ, ಶಾಂತಪ್ರಾಸಗಳನ್ನೂ ಲಕ್ಷಿಸಿದರೆ, ಲಕ್ಷ್ಮೀಶನ ಜೈಮಿನಿ ಭಾರತವು ಅವರಿಗೆ ಮುಖೋದ್ಗೀತವಾಗಿರಬಹುದೆಂಬ ಹಾಗೆ ತೋರುತ್ತದೆ. ಈ ಅಭಿಪ್ರಾಯವು ರಾಮಪಟ್ಟಾಭಿಷೇಕವನ್ನೂ ರಾಮಾಶ್ವಮೇಧವನ್ನೂ ಓದುತ್ತಲೇ ಇನ್ನೂ ಬಲಗೊಳ್ಳುತ್ತದೆ. ಹಳೆಯ ಯಕ್ಷಗಾನ ಪ್ರಸಂಗಗಳಲ್ಲಿ ಹುಡುಕಿದರೆ ದೊರೆಯದ ‘ಮಾಳ್ಕೆ, ಕಾಗೆ, ಇರಲೊಡಂ, ಪೊಡಮಟ್ಟು’ ಮೊದಲಾದ ಹಳೆಗನ್ನಡ ವ್ಯಾಕರಣ ಮರ್ಯಾದೆಗಳೂ, ‘ಪೊಸದೇಸೆ’ ‘ಕುಂಬಿಡು’ ‘ಬೆಸನ’ ಮೊದಲಾದ ಶಬ್ಧ ಪ್ರಯೋಗಗಳೂ ಅವರು ಅ೦ದು ಮಾಡಿದ್ದ ಪ್ರಾಚೀನ ಗ್ರಂಥ ಪರಿಚಯವನ್ನು ಸೂಚಿಸುತ್ತದೆ. ಕುಮಾರ ವಿಜಯದಲ್ಲಿ ಹೇರಳವಾಗಿ ಕಂಡುಬರುವ ಇಂತಹ ಹಳೆಗನ್ನಡ ವ್ಯಾಕರಣ ಪ್ರಯೋಗಗಳು ಶಬ್ದಮಣಿ ದರ್ಪಣ ಭಾಷಾ ಭೂಷಣಗಳ ಪುರಶ್ಚರಣೆಯಿಂದ ಅವರ ಬಾಯಿ ಮೀರಿ ಸಿಡಿದು ಬಿದ್ದ ಹಾಗೆ ತೋರುತ್ತವೆಯೇ ಹೊರತು ವ್ಯಾಕರಣ ಪಾಂಡಿತ್ಯದ ಗರ್ವೋದ್ರೇಕದಿಂದ ಇಟ್ಟ ಹಾಗೆ ಕಾಣುವುದಿಲ್ಲ. “ಪಾಲಿಸುಗೆ ಪಾರ್ವತೀಪರಮೇಶರುಂ” “ಅತ್ರಿಭ್ರುಗು ದುರ್ವಾಸ ವಿಶ್ವಾಮಿತ್ರರೆನೆ…” ಇತ್ಯಾದಿ ಮಾತುಗಳು ಸಂಸ್ಕತದಲ್ಲಿ ಕಾವ್ಯದವರೆಗಾದರೂ ಹೋಗಿರಬೇಕೆಂಬ ಅನುಮಾನವನ್ನು ಹೊರಡಿಸುತ್ತದೆ. ಇದರೊಳಗಿನ. ಕಂದ ಪದ್ಯಗಳಲ್ಲಿ ನಗಣ, ಸಗಣಗಳು ಬರಬೇಕಾದಲ್ಲಿ ಬರುವುದಿಲ್ಲವೆಂಬುದು ನಿಜ. ಆದರೆ ಈ ಛಂದೋಲೋಪವು ನಮ್ಮ ಜಿಲ್ಲೆಯ ಕಂದ ಪದ್ಯ ಗಳಲ್ಲಿ ಬಹುಕಾಲದವರೆಗೆ ಸಾಮಾನ್ಯವಾಗಿತ್ತು. ಕುಮಾರ ವಿಜಯದ ದೆಸೆಯಿಂದ ಲಕ್ಷ್ಮೀನಾರಾಯಣಪ್ಪನವರ ಹೆಸರು ನನ್ನ ಕಿವಿಯಲ್ಲಿ ಆಗಾಗ ಜಿನುಗುತ್ತಾ ಇದ್ದರೂ, ೧೮೯೫ರವರೆಗೆ ನನಗೂ ಅವರಿಗೂ ಯಾವ ತರದ ಪತ್ರ ವ್ಯವಹಾರವೂ ನಡೆದಿರಲಿಲ್ಲ. ಹೀಗಿರಲು ೧೮೯೫ನೆಯ ಜುಲೈ ಮಾಸದಲ್ಲಿ ಮಂಗಳೂರ ಗವರ್ನಮೆಂಟ್‌ ಕಾಲೇಜಿನಲ್ಲಿ ಕನ್ನಡಕ್ಕಾಗಿ ತಿಂಗಳಿಗೆ ೨೦ ರೂಪಾಯಿ ಸಂಬಳದ ಕನ್ನಡ ಪಂಡಿತನ ಕೆಲಸಕ್ಕೆ ಒಂದು ಏರ್ಪಾಡಾಯಿತು. ಯಾರಿಗೂ ಬೇಡವಾದ ಈ ಉದ್ಯೋಗಕ್ಕೆ ನಾವಿಬ್ಬರೇ ಅರ್ಜಿದಾರರಾಗಿದ್ದೆವು. ಕನ್ನಡ ಅರಿಯದ ಇಂಗ್ಲಿಷ್‌ ಹೆಡ್‌ ಮಾಸ್ತರನೊಬ್ಬನು ಕನ್ನಡ ಬಲ್ಲ ನಾರಾಯಣಪ್ಪನವರನ್ನು ಬಿಟ್ಟು, ಇಂಗ್ಲಿಷ್‌ ಬರುತ್ತದೆಂಬ ಕಾರಣದ ಮೇಲೆ ಆ ಜಾಗವನ್ನು ನನಗೆ ಕೊಟ್ಟರು. ಇದರ ಮರ್ಮವನ್ನು ತಿಳಿಯದ ನಾರಾಯಣಪ್ಪನವರು ನಾನೇನೋ ಕನ್ನಡ ವಾಚಸ್ಪತಿಯಾಗಿರಬಹುದೆಂದು ನೆನಸಿ, ನನ್ನನ್ನು ಅಭಿನಂದಿಸಿ ಒಂದು ಪತ್ರವನ್ನು ಬರೆದರು. ನಾನು ಪ್ರತ್ಯುತ್ತರವನ್ನು ಬರೆಯುವಾಗ, ‘ಬತ್ತದ ಸಿಪ್ಪೆಯನ್ನು ಕುಟ್ಟತಕ್ಕ ಒನಕೆಯನ್ನು ಕನ್ನಡ ಬರಹವನ್ನು ಬರೆಸುವುದಕ್ಕೆ ತಂದರು; ಚಿತ್ರ ಬಿಡಿಸುವ ಬಣ್ಣದ ಗರಿಯನ್ನು ಕಿವಿಯ ತುರಿಕೆಗೆ ಕುಗ್ಗೆ ಕಡ್ಡಿಯನ್ನಾಗಿ ಮಾಡಿದರು’ ಎಂದು ಹೇಳಿ, ನಮ್ಮಿಬ್ಬರೊಳಗಿನ ಅಂತರವನ್ನು ಸ್ಪಷ್ಟಪಡಿಸಿದರು. ಸುಮಾರು ಇದೇ ಕಾಲದಲ್ಲಿ ಶ್ರೀಯುತ ಎಂ.ಎ. ರಾಮಾನುಜ ಅಯ್ಯ೦ಗಾರ್ಯರೂ, ಎಸ್‌. ಜಿ. ನರಸಿಂಹಾಚಾರ್ಯರೂ ಕನ್ನಡ ವಾಙ್ಮಯದ ಬೀಗಮುದ್ರೆಯನ್ನು ಒಡೆದು, ಅಮೂಲ್ಯವಾದ ಕರ್ನಾಟಕ ಕೃತಿರತ್ನಗಳನ್ನು ಕಾವ್ಯಮಂಜರಿ ಎಂಬ ಮಾಸಪತ್ರದ ಮೂಲಕವಾಗಿ ಕನ್ನಡಿಗರಿಗೆ ದಾನಮಾಡುವ ಪ್ರಚಾರಕ ಕಾರ್ಯವನ್ನು ಕೈಗೊಳ್ಳುವಂಥವರಾದರು. ಅವರು ಬೆಳಕಿಗೆ ತಂದ ಉತ್ಕೃಷ್ಟ ಗಂಥಗಳನ್ನು ಮದ್ರಾಸ್‌ ಯೂನಿವರ್ಸಿಟಿಯವರು ಪಠ್ಯಪುಸ್ತಕಗಳನ್ನಾಗಿ ನಿಯಮಿಸಿ, ಅವರ ಸತ್ಕಾರ್ಯಕ್ಕೆ ತಕ್ಕಷ್ಟು ಆಶ್ರಯ ಕೊಡುವಂಥವರಾದರು. ಎಫ್‌.ಎ. ಪರೀಕ್ಷೆಗೆ ೧೮೯೬ ರಲ್ಲಿ ರತ್ನಕರಾಧೀಶ್ವರ. ಶತಕವೂ, ಚಿಕ್ಕದೇವರಾಜ ವಂಶಾವಳಿಯೂ, ೧೮೯೮ ರಲ್ಲಿ ಶ್ರೀ ರಾಮ ಪಟ್ಟಾಭಿಷೇಕವೂ, ಅದ್ಭುತ ರಾಮಾಯಣವೂ ಪಠ್ಯಪುಸ್ತಕಗಳಾಗಿದ್ದು, ಅದನ್ನು ಕಲಿಸುವ(ಕಲಸುವ?) ಕೆಲಸವು ನನ್ನ ಮೇಲೆ ಬಿದ್ದಿತ್ತು. ಪಟ್ಟಾಭಿಷೇಕದ ಒಂದೆರಡು ಚರಣಗಳ ಅರ್ಥಾನುವಾದವು ನನ್ನನ್ನು ಸೋಲಿಸಿಬಿಟ್ಟದ್ದರಿಂದ, ನನಗೆ ಬಗೆಹರಿಯದ ಕೆಳಗೆ ಕಾಣಿಸಿದ ಭಾಗಗಳಲ್ಲಿ ಒಂದರ ಅರ್ಥವನ್ನೂ, ಮತ್ತೊಂದರಲ್ಲಿ ಬಿಟ್ಟು ಹೋದ ಪದಗಳನ್ನೂ ಹೇಳಿಕೊಡಬೇಕಾಗಿ ನಾನು ನಂದಳಿಕೆಯವರಿಗೆ ಕಾಗದ ಬರೆದನು. ಆಗ ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು ಅದರ ಗಂಥಕರ್ತರೆಂದು ನನಗೆ ಕನಸಿನಲ್ಲಿ ಕೂಡ ಸಂಶಯವು ಹುಟ್ಟಿರಲಿಲ್ಲ. ೧. ತಂಬೆಲರ್ಸೋಂಕೆ ಬಳ್ಕುವ ಲತಾಂಗಮದಿಱುಸಿ ಲಂ ಬೇರೆ ತೆಡೆದುಂಟೆ ೩.೫೩ ೨. ಪೊಸ ಸೊಗವ ನೀನುಂಡುದೇ ಕೊಡೆಯ ನಿನ್ನನುಭವಕೆ . . . ಮೇದಿನಿಯ . . . ರಾಘವ ೪.೨೯ ಮರುಟಪ್ಪಾಲಿಗೆ ಅವರ ಉತ್ತರವು ಬಂದಿತು. “ಇಱುಸಿಲ್” ಎಂಬ ಶಬ್ದಕ್ಕೆ ಅರ್ಥವನ್ನು ಕೊಟ್ಟು, ಅದರ ಸಮರ್ಥನಕ್ಕಾಗಿ ಶಬ್ದಮಣಿ ದರ್ಪಣದ ಪುಟಸಂಖ್ಯೆಗೆ ನನ್ನ ಲಕ್ಷ್ಯವನ್ನು ಎಳೆದಿದ್ದ ಒಂದು ಟಿಪ್ಪಣಿಯು ಪತ್ರದಲ್ಲಿ ಇತ್ತು. ಗ್ರಂಥಪಾತವೆಂದು ಮೂಲದಲ್ಲಿ ಬಿಟ್ಟುಹೋದ ಪದಗಳು ಬಹುಶಃ ಇಂಥವುಗಳಾಗಿರಬಹುದೆಂದು ಅವರು ಪತ್ರದಲ್ಲಿ ನಿರ್ದೇಶಿಸಿದ್ದರು. ಆ ಪದಗಳನ್ನು ನಾನು ಮರೆತುಬಿಟ್ಟದ್ದೂ ಪತ್ರದ ವಿಷಯದಲ್ಲಿ ಅಜಾಗರೂಕನಾದದ್ದೂ ಎಷ್ಟೋ ಶೋಚನೀಯವಾಗಿದೆ ಎಂದು ನಾನು ಹೇಳಬೇಕಾಗಿಲ್ಲ. ನನಗೆ ಮೊದಲಿನಿಂದಲೇ ನಂದಳಿಕೆಯವರ ಮೇಲಿದ್ದ ಗೌರವವು ದ್ವಿಗುಣವಾಯಿತು. ನನಗಿದ್ದ ಗೌರವವನ್ನು ಶ್ರುತಪಡಿಸಿ, ಕುಮಾರ ವಿಜಯವನ್ನು ಶ್ಲಾಘಿಸಿ ನಾನು ಮತ್ತೊಂದು ಕಾಗದವನ್ನು ಬರೆದೆನು. ಅವರು ಆ ಪ್ರಶಂಸನೆಯನ್ನು ಕಿವಿಯ ಮೇಲೆ ಹಾಕಿಕೊಳ್ಳದೆ, ಪ್ರತ್ಯುತ್ತರದಲ್ಲಿ ಅದರ ಪ್ರಸ್ತಾವನೆಯನ್ನೇ ಬಿಟ್ಟುಬಿಟ್ಟು ನನ್ನ ಅವಗಾಹನೆಗಾಗಿ ‘ಮತ್ತೊಂದು ಪುಸ್ತಕವನ್ನು ಕಳುಹಿಸಿರುತ್ತೇನೆ; ಗ್ರಂಥವು ಯೋಗ್ಯವೆಂದಿದ್ದರೆ ಅದನ್ನು ಮುದ್ರಿಸುವುದಕ್ಕೆ ಸಾಧ್ಯವಿದೆಯೇ’ ಎಂಬುದಾಗಿ ಬರೆದು ಆ ಪತ್ರದೊಂದಿಗೆ ೧೮೯೮ನೆಯ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಹಸ್ತಪ್ರತಿಯನ್ನು ನನಗೆ ಕಳುಹಿಸಿಕೊಟ್ಟರು. ಇದೇ- ರಾಮಾಶ್ವಮೇಧದ ಅವರ ಹಸ್ತಪ್ರತಿ; ಮುಂದೆ ಕಾವ್ಯ ಕಲಾನಿಧಿಯಲ್ಲಿ ಪ್ರಕಟವಾದ ರಾಮಾಶ್ವಮೇಧದ ಮಾತೃಕೆಯು ಕೂಡ ಇದೇ ಹಸ್ತಪ್ರತಿಯೆಂದು ನಾನು ನೆನಸುತ್ತೇನೆ. ನನ್ನಲ್ಲಿಗೆ ಕಳುಹಿಸಲಾದ ಪ್ರತಿಯಲ್ಲಿ ಸುಮಾರು ೫೦೦ ಪುಟಗಳು ಇದ್ದಿರಬಹುದು. ಮುತ್ತಿನಂತೆ ದುಂಡಗಾದ ಬರಹ, ಮೋಡಿ ಇಲ್ಲ, ತಪ್ಪು ತಿದ್ದುಪಾಟುಗಳು ಕಡಿಮೆ. ಹೀಗಾದುದರಿಂದ ಕೈಬರಹವಾದರೂ ಅದನ್ನು ಓದುವುದಕ್ಕೆ ನನಗೆ ತೊಡಕಾಗಲಿಲ್ಲ. ನಾನು ಓದತೊಡಗಿದ್ದೇ ಸರಿ, ಹಸಿವು ನಿದ್ದೆ ಬಿಟ್ಟು, ಅದನ್ನು ಆದ್ಯಂತವಾಗಿ ಎರಡು ದಿವಸದೊಳಗೆ ಮುಗಿಸಿ, ಪುನಃ ಓದುವುದಕ್ಕೆ ಹತ್ತಿದೆನು. ಓದಿದಷ್ಟಕ್ಕೆ ಇನ್ನೂ ಓದಬೇಕೆಂಬ ಆಸೆಯಾಗಿ, ಕಂಡಕ೦ಡವರನ್ನು ಕರೆದು ಅವರ ಮುಂದೆ ‘ವಾಚಕಮಾಡಿದೆನು’. ಆದರೂ ಅದನ್ನು ರಚಿಸಿದವರು ನಂದಳಿಕೆ ಲಕ್ಷ್ಮೀನಾರಾಯಣಪ್ಪನವರಾಗಿರಬಹುದೆಂಬ ಶಂಕೆಯು ನನ್ನ ಮೂಢ ಮನಸ್ಸಿಗೆ ಮೂರು ತಿಂಗಳ ತನಕ ಹೊಳೆಯದೆ ಹೋಯಿತು. ನಾನು ಪತ್ರ ಸಮೇತವಾಗಿ ಆ ಹಸ್ತಪ್ರತಿಯನ್ನು ಅವರಿಗೆ ಹಿಂದಕ್ಕೆ ಕಳುಹಿಸಿದೆನು. ಪತ್ರದಲ್ಲಿ ನನ್ನ ಅಭಿಪ್ರಾಯವು ಇತ್ತು. ಮನೋರಮೆಯು ಗ್ರಂಥದ ವಿಷಯವಾಗಿ ಮುದ್ದಣ್ಣನೊಡನೆ ಯಾವ ಮಾತುಗಳನ್ನು ಆಡಿದಳೋ ಆ ಮಾತುಗಳನ್ನೇ ಇಟ್ಟು, “ಮುದ್ದಣ್ಣನ ಹೆಸರಿನಂತೆ ಮುದ್ದುಮುದ್ದಾಯಿತು, ಹಿಂದಿಲ್ಲ ಮುಂದಿಲ್ಲ” ಎಂಬುದಾಗಿ ಕೊಂಡಾಡಿ, “ಗಾಜನ್ನು ಮೆಚ್ಚುವ ಕಾಲದಲ್ಲಿ ವಜ್ರವು ಬಿಕರಿಯಾಗುವುದು ದುರ್ಲಭವಾದ್ದರಿಂದ, ಅಚ್ಚು ಹಾಕಿಸಿದಲ್ಲಿ ‘ಕೈಟಿತ್ತಿನ ಕಾಸಲಾ ಪೋ೦ಂಡ- ಮೈಟಿತ್ತಿನ ಮಾಸಲಾ ಪೋಂಡ’ ಎಂಬ ತುಳು ಗಾದೆಯಂತೆ ಆಗುವ ಸಂಭವವಿದೆ. ಎಂಬಿತ್ಯಾದಿಯಾಗಿ ನನ್ನ ಅಭಿಪ್ರಾಯವನ್ನು ವೇದ್ಯವರಿಸಿದೆನು. ಇದೇ ಪತ್ರದಲ್ಲಿ ರಾಮಾಶ್ವಮೇಧದಿಂದ ಅನೇಕ ವಾಕ್ಯಗಳನ್ನು ಉದ್ದರಿಸಿಟ್ಟು ಅವುಗಳ ಅರ್ಥಾನ್ವಯಗಳನ್ನು ನನಗೆ ಹೇಳಿಕೊಡಬೇಕೆಂಬುದಾಗಿಯೂ ಅಪೇಕ್ಷಿಸಿದೆನು. ಈ ಪತ್ರಕ್ಕೆ ಉತ್ತರವು ಬರಲೇ ಇಲ್ಲ. ಉತ್ಸಾಹ ಭಂಗದಿ೦ದಲೋ, ಅನಾದರಣೆಯಿಂದಲೋ, ಇನ್ನು ಯಾವ ಕಾರಣದಿಂದಲೊ ಅವರು ಬಹುಕಾಲದವರೆಗೆ ನನಗೆ ಪತ್ರ ಬರೆಯುವುದನ್ನು ನಿಲ್ಲಿಸಿಬಿಟ್ಟರು. ಕ್ರಮೇಣ ರಾಮಾಶ್ವಮೇಧವು ಕಾವ್ಯ ಕಲಾನಿಧಿಯಲ್ಲಿ ಪ್ರಕಟವಾಯಿತು. ಅಚ್ಚುಹಾಕಿದ ಸಂಪೂರ್ಣ ಪುಸ್ತಕವು ನನ್ನ ಕೈಗೆ ಬೀಳುತ್ತಲೆ ನಾನು ಗ್ರಂಥಕರ್ತೃವಿನ ವಿಚಾರ ಮಾಡತೊಡಗಿದೆನು. ರಾಮಾಶ್ಚಮೇಧದ ಕವಿಯು ತುಳು ನಾಡಿನವನು ಎಂದು ಊಹಿಸುವುದಕ್ಕೆ ನನಗೆ ಕಷ್ಟವಿರಲಿಲ್ಲ. ಗ್ರಂಥದಲ್ಲಿ ಎಲ್ಲೆಲ್ಲಿಯೂ ಕಣ್ಣಿಗೆ ಹೊಳೆಯುವ ‘ಪೊಲಿ’ ‘ಕುರು೦ಬಿಲ್‌’ ‘ಆರಾಟ’ ‘ಬಸದಿ’ ‘ಇ೦ದ್ರ’ ಮೊದಲಾದ ತುಳು ಶಬ್ದಗಳು ಸಾಕಷ್ಟು ಹೇರಳವಾಗಿದ್ದವು. ಕುಮಾರ ವಿಜಯದಲ್ಲಿರುವ ಒಂದೆರಡು ಮಾತುಗಳೇ ಈ ಗಂಥದಲ್ಲಿ ಇದ್ದುದರಿಂದ, ನಂದಳಿಕೆಯವರೇ ರಾಮಾಶ್ವಮೇಧದ ಕವಿಯಾಗಿರಬಹುದೆಂಬ ಸಂಶಯವು ಹುಟ್ಟಿತು. ಗ್ರಂಥವನ್ನು ಅಗೆದಷ್ಟಕ್ಕೆ ಈ ಶಂಕೆಯು ಬಲವಾಗುತ್ತ ಬಂದಿತು. ಗ್ರಂಥದ ಸರಣಿ, ವಿಸ್ತರಣ ಕ್ರಮ, ಸಂವಿಧಾನ, ಅಷ್ಟೇಕೆ- ಗ್ರಂಥವು ಆಧುನಿಕವಾಗಿ ತೋರುವಷ್ಟು ಅಪೂರ್ವತೆಯಿಂದ ಬರೆಯಲ್ಪಡುವುದಕ್ಕೆ ಕಾರಣವಾದ ಆ ಕಾಲದ ಪರಿಸ್ಥಿತಿಯ ಸ್ಫುಟವಾದ ಚಿತ್ರವೇ ನನ್ನ ಮನಸ್ಸಿನಲ್ಲಿ ಎದ್ದು ನಿಂತಿತು. ಕುಮಾರ ವಿಜಯವನ್ನು ಬರೆದ ಲಕ್ಷ್ಮೀನಾರಾಯಣಪ್ಪನವರೇ ಅದ್ಭುತ ರಾಮಾಯಣ, ಶ್ರೀ ರಾಮ ಪಟ್ಟಾಭಿಷೇಕ, ಶ್ರೀ ರಾಮಾಶ್ವಮೇಧ ಎ೦ಬ ಗ್ರಂಥತ್ರಯವನ್ನು ಬೇರೆ ಬೇರೆ ಹೆಸರಿನಿಂದ ರಚಿಸುವುದಕ್ಕೆ ಕಾರಣಗಳು ಇಲ್ಲದೆ ಇರಲಿಲ್ಲ. ಕುಮಾರ ವಿಜಯವು ಪ್ರಸಿದ್ಧ ಯಕ್ಷಗಾನ ಪ್ರಸಂಗವಾಗಿದ್ದರೂ ಅದು ಅವರು ಬದುಕಿದ್ದಾಗ ಜನಪ್ರೀತವಾಗದೆ ಹೋಯಿತು. ಅದು ನವೀನ ಕಥೆಯಾಗಿದ್ದುದರಿ೦ಂದಲೊ, ಅಥವಾ ಅದರೊಳಗಿನ ಹಾಡುಗಳ ಧಾಟಿಗಳು ಆಗ ವಾಡಿಕೆಯಲ್ಲಿಲ್ಲದ್ದುದರಿ೦ದಲೊ, ಅಥವಾ ಗ್ರಂಥದಲ್ಲಿಯ ಹಳೆಗನ್ನಡ ಪದಗಳೂ ಪ್ರಯೋಗಗಳೂ ಹಳ್ಳಿಯವರ ತಲೆಗೆ ಹತ್ತಲಾರದಷ್ಟು ಕ್ಲಿಷ್ಟವಾದುದರಿ೦ದಲೋ, ಅಥವಾ ಈಗಿನ ಕವಿಗಳೆಲ್ಲಾ ನರಕವಿಗಳೆಂಬುದಾಗಿ ರೂಢಿಯಲ್ಲಿರುವ ತಪ್ಪು ಅಭಿಪ್ರಾಯದಿ೦ಂದಲೋ ಕುಮಾರ ವಿಜಯದ ೨,೦೦೦ ಪ್ರತಿಗಳಲ್ಲಿ ಹೆಚ್ಚಿನವು ಹಾಗೆಯೇ ರಾಶಿಯಾಗಿ ಬಿದ್ದಿದ್ದವು. ಗ್ರಂಥವನ್ನು ಬರೆದರೆ ಅದನ್ನು ‘ನೂತನ ಕವಿತೆಯೆಂದು ಕುಂದಿಟ್ಟು’ ಜರೆಯುವವರೇ ಹೊರತು ‘ಮತ್ಸರವನುಳಿದು ಅದನ್ನು ಆಲಿಸುವವರು’ ಇರಲಿಲ್ಲ. ನಿಂತ ಸ್ಥಳದಿ೦ದ ದೂರವಿರುವ ಬೆಟ್ಟವು ಬಹು ರಮ್ಯವೆಂದು ಹೇಗೆ ನೆನಸುತ್ತಾರೋ ಹಾಗೆಯೇ ತಮ್ಮ ಕಾಲಕ್ಕಿಂತ ಹಿ೦ದೆ ಬಹುದೂರ ಆಗಿಹೋದ ಕವಿಗಳೆಲ್ಲಾ ವರಕವಿಗಳೆಂದು ಭಾವಿಸುವುದು ಎಲ್ಲೆಲ್ಲಿಯೂ ವಾಡಿಕೆಯಾಗಿದೆ. ಹೊಸಕವಿ ಎ೦ಬ ಅವಹೇಳನಕ್ಕೆ ಆಸ್ಪದ ಕೊಡದೆ ಹೊಸ ಗ್ರಂಥವನ್ನು ಬರೆದು ಪ್ರಕಟಿಸುವ ಉಪಾಯವು ಯಾವುದು? ಈ ವಿಚಾರವು ನಂದಳಿಕೆಯವರಲ್ಲಿ ಯಾವಾಗ ಎದ್ದಿತೋ ಆ ಸಮಯಕ್ಕೆ ಸರಿಯಾಗಿ ಶ್ರೀಯುತ ಎಂ.ಎ. ರಾಮಾನುಜಯ್ಯಂಗಾರ್ಯರು ಪ್ರಚಾರ ಪಡಿಸಿದ ರತ್ನಾಕರಾಧೀಶ್ವರ ಶತಕವು ನಂದಳಿಕೆಯವರ ಕೈಗೆ ಬಿದ್ದಿತು. ನಮ್ಮ ಜಿಲ್ಲೆಯ ಮೂಡಬಿದರೆಯ ಪ್ರಾಂತದವನಾದ ಆ ಕವಿಯ ನಿಜವಾದ ಹೆಸರು ತಿಳಿಯಬರುವುದಿಲ್ಲವೆ೦ಬುದಾಗಿಯೂ, ಶೃಂಗಾರ ಕವಿ, ರಾಜಹ೦ಸ ಎಂಬಿವು ಆತನು ಇಟ್ಟುಕೊಂಡ ಹೆಸರುಗಳೆಂಬುದಾಗಿಯೂ ಶತಕದ ಪೀಠಿಕೆಯಲ್ಲಿದ್ದ ಅಭಿಪ್ರಾಯವು ನಂದಳಿಕೆಯವರಿಗೆ ಹೆಸರು ಬದಲಾಯಿಸಿಕೊಳ್ಳುವುದಕ್ಕೆ ಕಲಿಸಿಕೊಟ್ಟಿದ್ದರೂ ಇರಬಹುದು. ಗ್ರಂಥವನ್ನು “ಆವ ಧಾಟಿಯೊಳ್‌ ಪೇಱ್ವುದು? ಪದ್ಯದೊಳ್‌ ಪೇಱ್ವುದೋ ಗದ್ಯದೊಳ್‌ ಪೇಱ್ವುದೋ ಪದ್ಯ೦ ವದ್ಯಂ, ಗದ್ಯ೦ ಹೃದ್ಯಂ, ಹೃದ್ಯಮಪ್ಪಗದ್ಯದೊಳೆ ಪೇಱ್ವುದು” ಪದ್ಯದಲ್ಲಿ ಹೇಳಿದರೆ ಕನ್ನಡದ ಸೊಗಸನಱುಯಲಾರ್ತೆ ನಿಲ್ಲೆನಗೆ… ಸಕ್ಕದ ಚೆಲ್ವಿಂದ ನೀರಿಳಿಯದ ಗಂಟಲೊಳ್‌ ಕಡಬು ತುರುಕಿದಂತಾಗುವುದು. ಅಂದಿನ ‘ಪಾಳ್‌ ಬಣ್ಣನೆಯನ್ನು’ ತರಬೇಕಾಗುವುದು. ಇಂಥ ಕೃತಿಯನ್ನು ಯಾರು ಮೆಚ್ಚುವರು? ಯಾರು ಉಡುಗೊರೆ ಕೊಡುವರು? ಆ ರಗಳೆಯ ದಿನಗಳು ಎಷ್ಟೋ ಹಿ೦ದಕ್ಕೆ ಕಳೆದುಹೋದುವು. ಈ ಕಾಲವು ವೆಂಕಟಾಚಾರ್ಯರ ಕಾದಂಬರಿಗಳ ಕಾಲ. ಅವರ ವಿಷವೃಕ್ಷವು ಗ್ರಂಥಮಾಲೆಯಲ್ಲಿ ಪ್ರಕಟವಾಗಿ ನಮ್ಮ ನಂದಳಿಕೆಯವರನ್ನು ಮುಗ್ಧರನ್ನಾಗಿ ಮಾಡಿದೆ. ಕಮಲಮುಖಿಗೂ ಅವಳ ಗಂಡನಿಗೂ ನಡೆದ ಸಂಭಾಷಣೆಯು ಅವರ ಮನಸಿನಲ್ಲಿ ರೂಪುಗೊಂಡಿದೆ. ಈ ರೇಖೆಗಳಿಂದ ಮೇಲಕ್ಕೆ ಎದ್ದ ಚಿತ್ರವೇ ಮುದ್ದಣ ಮನೋರಮೆ ಎಂಬ ದಂಪತಿಗಳು. ಹಳೆಯ ಗ್ರಂಥಗಳ ಹೊಗಳುಭಟ್ಟರನ್ನು ಮೆಚ್ಚಿಸುವುದಕ್ಕೆ ಇಂದಿನ ಕಾದಂಬರೀ ನಿರೂಪಣ ಪದ್ಧತಿಯೇ ತಕ್ಕದಾದ ಉಪಾಯವೆಂಬುದನ್ನು ಅವರು ವಿಷವೃಕ್ಷ, ಶೂರಸೇನೆ ಚರಿತ್ರೆ, ಜಯರಾಜ ಸಿ೦ಹ ಚರಿತ್ರೆಗಳನ್ನು ಓದಿದ ಕೂಡಲೇ ಗೊತ್ತು ಮಾಡಿಕೊ೦ಡು ಆ ನೂತನ ಮಾರ್ಗದಲ್ಲಿ ಹರಿಯತಕ್ಕ ಭಾಷೆಯನ್ನು ಪೋಷಿಸುವುದಕ್ಕೆ ಯೋಚಿಸಿರಬೇಕು. ಪುರಾಣ ಕಥೆಯನ್ನು ಮುದ್ರಾಮ೦ಜೂಷದ ಹೊಸಗನ್ನಡದಲ್ಲಿ ಹೇಳಿದರೆ, ಮೈಸೂರು ವಿದ್ವಾಂಸರಿಗೆ ಆದರಣೀಯವಾಗುವುದೋ ಎ೦ಬ ಅನುಮಾನ; ದುರ್ಗೇಶ ನಂದಿನಿಯಂತಹ ನವೀನ ಕಥೆಯನ್ನು ಹಳೆಗನ್ನಡದಲ್ಲಿ ಬರೆದು ಮಂಗಳೂರಿನವರನ್ನು ಮೆಚ್ಚಿಸುವ ಎಂದರೆ, ನೂತನ ಕಥಾ ಸೃಷ್ಟಿಯನ್ನು ಮಾಡುವಷ್ಟು ಪ್ರತಿಭೆಯು ತನ್ನಲ್ಲಿ ಉಂಟೋ, ಇಲ್ಲವೋ ಎ೦ಬ ಅಪನಂಬಿಕೆ; ಇವೆರಡನ್ನೂ ತಪ್ಪಿಸಿಕೊಳ್ಳುವುದಕ್ಕೆ ದಾರಿ ಯಾವುದು? ಹಳೆಯ ಕತೆಯನ್ನು ಹೊಸ ಆಯದಲ್ಲಿ ಕಟ್ಟಿ, ಇತ್ತ ಹೊಸ ಶೈಲಿಯೂ ಅಲ್ಲ, ಅತ್ತ ಹಳೆ ಶೈಲಿಯೂ ಅಲ್ಲ, ಇವೆರಡರ ನಡುವಣ ಸರಣಿಯನ್ನು ಒದಗಿಸಿಕೊಳ್ಳಬೇಕಾಯಿತು. ಈ ಸರಣಿಯನ್ನು ಕಲ್ಪಿಸಿಕೊಳ್ಳುವುದಕ್ಕೆ ಚಿಕ್ಕದೇವರಾಜ ವಂಶಾವಳಿಯನ್ನು ತೆರೆದದ್ದಾಯಿತು. ಅದರ ಹಳೆಗನ್ನಡವು ತಲೆ ಒಡೆಯುವಷ್ಟು ಗಟ್ಟಿ: ವಾಣೀ ವಿಲಾಸ ಗ್ರಂಥಗಳನ್ನು ಬಿಚ್ಚಿದ್ದಾಯಿತು. ಇದರ ಕನ್ನಡವು ಬೆರಳು ಬಿಗಿಯದಷ್ಟು ಪೆಡಸು. ಏನು ಮಾಡಬೇಕಾಯಿತು? ಒಂದರ ಕಾಠಿನ್ಯವನ್ನೂ ಮತ್ತೊಂದರೆ ಶೈಥಿಲ್ಯವನ್ನೂ ತೆಗೆದುಹಾಕಿ, ಅವೆರಡನ್ನೂ ಹೊಸೆದು, ತುಳು ನುಡಿಗಳನ್ನೂ ಕನ್ನಡ ಮಾತುಗಳನ್ನೂ ಸಂದರ್ಭಕ್ಕನುಸಾರವಾಗಿ ಹಳಗನ್ನಡದಿ೦ದ ತಿರುಪಿ, ಎಷ್ಟು ಅರ್ಥಭಾರವನ್ನು ಹಾಕಿದರೂ ಕಡಿದುಹೋಗದಂತೆ ಹಳೆಯ ವ್ಯಾಕರಣ ಸೂತ್ರಗಳಿಂದ ಗಂಟಿಕ್ಕಿ, ತನ್ನದೇ ಆದ ಒ೦ದು ಅಪೂರ್ವ ಭಾಷಾ ಸರಣಿಯನ್ನು ನಿರ್ಮಿಸಿದರು. ಕಿವಿಯಲ್ಲಿ ಮ೦ಜುಳವಾಗಿ ಧ್ವನಿಸಿ ಎದೆಯನ್ನು ತಣ್ಣಗೆ ತೋಯಿಸಿ, ಮನಸ್ಸನ್ನು ತಣಿಸುವ ಎಣೆಯಿಲ್ಲದ ಈ ಭಾಷಾಸರಣಿಯು ಇವರನ್ನೇ ಒಲಿದು, ಇವರನ್ನೇ ವರಿಸಿ, ವಿಧೇಯಳಾದ ದಾಸಿಯಂತೆ ಇವರ ವಶವಾಗಿ ಹೋಯಿತು. ನಾನು ರಾಮಾಶ್ವಮೇಧದ ವಿಷಯವಾಗಿ ಮೇಲೆ ನಿರೂಪಿಸಿದ್ದ ಆಧಾರಗಳನ್ನು ಸಂಕೋಚವಾಗಿ ಹೇಳಿ, ೧೯೦೦ನೆಯ ಫೆಬ್ರವರಿ ಸುಮಾರಕ್ಕೆ ಮತ್ತೊಂದು ಪತ್ರವನ್ನು ಅವರಿಗೆ ಬರೆದೆನು. ಅದಕ್ಕೆ ಅವರು “ನಾನು ತ್ವರೆಯಲ್ಲಿ ಮ೦ಗಳೂರಿಗೆ ಬರುವವನಿದ್ದೇನೆ, ಆಗ ಮುಖತಃ ಮಾತನಾಡೋಣ” ಎಂಬುದಾಗಿ ತಿಳಿಸಿದರು. ಅವರ ಆಗಮನವನ್ನೇ ಎದುರ್ನೋಡುತ್ತಿದ್ದ ನನಗೆ ಏಪ್ರಿಲ್‌ ತಿಂಗಳಿನ ಒ೦ದು ದಿನ ಸಾಯಂಕಾಲ ಮಂಗಳೂರು ಇಂಗ್ಲಿಷ್‌ ‘ಇಗರ್ಜಿಯ” ಬಲಗಡೆಯ ಮೈದಾನಿನಲ್ಲಿ ಅವರ ಭೇಟಿಯಾಯಿತು. ಸುಮಾರು ೫ ಅಡಿ ಎತ್ತರದ, ಎಣ್ಣೆ ಕಪ್ಪು ಬಣ್ಣದ, ತಕ್ಕಷ್ಟು ಅಗಲದ ಹಣೆಯ, ಕಳೆಗುಂದಿದ ಮೋರೆಯ, ಹರೆಯದ ಕುರುಹುಗಳಿಲ್ಲದೆ ಶಾಂತವಾಗಿರುವ ಮುಖಮುದ್ರೆಯ ಲಕ್ಷ್ಮೀನಾರಾಯಣಪ್ಪನವರನ್ನು ನಾನು ಕಣ್ಣಾರೆ ಕಂಡೆನು. ಕನ್ನಡದ ಪ್ರಸ್ತಾಪವು ಬರುವುದಕ್ಕೆ ಹೊತ್ತು ಹೋಗಲಿಲ್ಲ. ನಾನು ಗದಾಯುದ್ಧದ ಮಾತು ಎತ್ತಿದೆನು; ಕೂಡಲೇ ಒಳಗಿದ್ದ ಉತ್ಸಾಹವು ಚಿವುಟಿದಂತಾಯಿತು; “ಜತುಗೇಹಾನಲದಿ೦ . . .” ಎಂಬ ಚರಣವನ್ನು ಪ್ರಾರ೦ಭಿಸಿ, ಸುಮಾರು ೨೫ ಪದ್ಯಗಳನ್ನು ಹಾಡುವವರೆಗೆ ಅವರ ಉತ್ಸಾಹವು ನಿಲ್ಲಲಿಲ್ಲ. ತರುವಾಯ ನಾನು ಗ್ರಂಥತ್ರಯಗಳ ವಿಚಾರವನ್ನು ತಂದುಹಾಕಿ, “ಇದಕ್ಕೆ ಏನು ಹೇಳುವಿರಿ? ನಾನು ಬರೆದುದು ಸರಿಯಲ್ಲವೇ?” ಎಂದು ಕೇಳಿದೆನು. ಅವರು. ನಗುತ್ತ ಎರಡು ನಿಮಿಷಗಳ ಮೇಲೆ “ಯದ್ಭಾವ೦ ತದ್ಭವತಿ” ಎಂದು ನುಡಿದು ತಮ್ಮ ಸಂಭಾಷಣೆಯನ್ನು ಸ್ಕೂಲುಗಳಲ್ಲಿ ಕನ್ನಡ ಕಲಿಸುವ ಕ್ರಮದ ಕಡೆಗೆ ತಿರುಗಿಸಿ, ನನ್ನ ಪ್ರಶ್ನೆಯನ್ನು ತಮ್ಮ ನಗುವಿನಲ್ಲಿ ತೇಲಿಸಿಬಿಟ್ಟರು. ಮೈಯ ಜಾಡ್ಯದ ನಿಮಿತ್ತವಾಗಿ ಅವರು ಮಂಗಳೂರಿಗೆ ಬ೦ದಿದ್ದರೆಂದು ನನಗೆ ಗೊತ್ತಾಯಿತು. ನಾನು ಅವರನ್ನು ಕಂಡದ್ದು ಇದೇ ಮೊದಲು, ಈ ಮೊದಲಿನ ದರ್ಶನವೇ ಕೊನೆಯ ದರ್ಶನವಾಯಿತು. ಅನಂತರ ಅವರು ಬಹಳ ವರ್ಷ ಬದುಕಲಿಲ್ಲ. ಅವರ ಅಕಾಲ ಮರಣದ ದುಃಖಕರವಾದ ಸಮಾಚಾರವು ಸುವಾಸಿನೀ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. ಪತ್ರಿಕೆಯ ಸಂಪಾದಕರಾಗಿದ್ದ ಶ್ರೀಯುತ ಬೆನಗಲ ರಾಮರಾಯರು ತಮ್ಮ ಅಗ್ರ ಲೇಖನದಲ್ಲಿ ಅವರ ಗುಣ ಕಥನವನ್ನು ಮಾಡಿ, ಅವರ ನಿಧನದಿಂದ ಕನ್ನಡಕ್ಕೆ ತಗಲಿದ ಹಾನಿಯನ್ನು ವಿಸ್ತರಿಸಿ ಬರೆದರು. ಆ ಸಂದರ್ಭದಲ್ಲಿಯೇ ಉಡುಪಿಯ ‘ಚಕ್ರಧಾರಿ’ ಎಂಬ ಹೆಸರಿನಿಂದ ‘ಜೋಜೋ’ ಮಾತಿನ ಮೇಲೆ ಟಿಪ್ಪಣವನ್ನು ಒಮ್ಮೆ ಸುವಾಸಿನಿಯಲ್ಲಿ ಬರೆದವರು ಲಕ್ಷ್ಮೀನಾರಾಯಣಪ್ಪನವರೇ ಎ೦ಬುದಾಗಿ ಶ್ರೀ ರಾಮರಾಯರು ಬಿಚ್ಚಿ ಹೇಳಿ, ನಂದಳಿಕೆಯವರೇ ಆ ಗ್ರಂಥತ್ರಯಗಳ ಕವಿಗಳೆಂಬುದನ್ನು ಸೂಚಿಸಿದರು. ಈ ವಿಚಾರವನ್ನು ಸುವಾಸಿನಿಯ ಅಗ್ರ ಲೇಖನವು ಕನ್ನಡಿಗರ ಲಕ್ಷ್ಯಕ್ಕೆ ತಂದೊಡ್ಡಿದುದರಲ್ಲಿ ಒಂದು ಪಾಲು ನನಗೂ ಇತ್ತು. ಈ ಸಂದಿಗ್ಧ ವಿಷಯವನ್ನು ಕುರಿತು ಆ ಮಾಸಪತ್ರಿಕೆಯ ಆನಂತರ ಸಂಚಿಕೆಗಳಲ್ಲಿ ಲೇಖಗಳು ಕಾಣುವುದಿಲ್ಲವಾದರೂ, ರಾಮಾಶ್ಚಮೇಧದ ಮೇಲೆ ಯಾರೋ ಇಬ್ಬರಿಂದ ಪ್ರಕಟವಾದ ಒಂದು ವಿಮರ್ಷೆಯು ರಾಮಾಶ್ವಮೇಧವನ್ನು ಮೈಸೂರಲ್ಲಿ ಓದತೊಡಗಿದ್ದರೆಂಬುದಕ್ಕೆ ಸಾಕ್ಷಿಯಾಗಿತ್ತು. ಆ ರಾಮಾಶ್ವಮೇಧವು ನಾರಾಯಣಕೃತ ಗ್ರಂಥವೆಂದರೆ ಕಿಡಿಕಿಡಿಯಾಗುತ್ತಿದ್ದ ಮಂಗಳೂರು ಸೆಂಟ್ ಎಲೋಶಿಯಸ್ ಕಾಲೇಜು ಪಂಡಿತರು ಸುವಾಸಿನಿಯ ಅಭಿಪ್ರಾಯವನ್ನು ಒಪ್ಪಿಕೊಂಡು, ಆ ಶಾಲೆಯ ಅಧಿಕಾರಿಗಳ ಮೂಲಕ ಕಾವ್ಯ ಕಲಾನಿಧಿಯ ಸಂಪಾದಕರಿಗೆ ತಿಳಿಸಲು ಶ್ರೀಯುತ ಎಂ.ಎ. ರಾಮಾನುಜಯ್ಯಂಗಾರ್ಯರು ‘ಈ ಚರ್ಚಾಸ್ಪದವಾದ ವಿಷಯವನ್ನು ನಾರಾಯಣಪ್ಪನವರ ಮಿತ್ರರಿಗೆ ಬಿಟ್ಟಿರುತ್ತೇವೆ’ ಎಂಬುದಾಗಿ ಮೊದಲು ಇಟ್ಟುಕೊಂಡ ಅಭಿಪ್ರಾಯವನ್ನು ಬಿಟ್ಟು, ಅದ್ಭುತ ರಾಮಾಯಣದ ದ್ವಿತೀಯ ಮುದ್ರಣದಲ್ಲಿ ‘ಇವರೇ ಗ್ರಂಥಕರ್ತರಾಗಿದ್ದರೂ ಇರಬಹುದು. ಇವರಷ್ಟು ಸಮರ್ಥರಾದ ಕವಿಗಳು ಈಗ ಇಲ್ಲವೇ ಇಲ್ಲವೆಂದು ಹೇಳಬಹುದು. ಇವರ ಪದಶಕ್ತಿಯು ಅದ್ಭುತವಾದುದು. ಗದ್ಯ ಗ್ರಂಥಗಳೇ ವಿರಳವಾಗಿದ್ದ ಕಾಲದಲ್ಲಿ ಇಂತಹ ಉತ್ಕೃಷ್ಟ ಗ್ರಂಥಗಳನ್ನು ಬರೆದು ಮಾಡಿದ ಇವರ ಉಪಕಾರವು ಕನ್ನಡ ದೇಶದಲ್ಲಿ ಮರೆಯತಕ್ಕುದಾಗಿಲ್ಲ’ ಎಂಬುದಾಗಿ ಹೊಗಳಿದರು. ರಾಮಾಶ್ವಮೇಧದ. ವಿಷಯವಾಗಿ ಇಂಡಿಯನ್‌ ರಿವ್ಯೂ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟವಾದ ಒಂದು ಮನೋರಂಜಕವಾದ ಇಂಗ್ಲಿಷ್‌ ಲೇಖವು ಆ ಗ್ರಂಥದ ಪರಿಚಯವನ್ನು ಇಂಗ್ಲಿಷ್‌ ವಾಚಕರ ಲಕ್ಷ್ಮಕ್ಕೆ ತ೦ದುದನ್ನು ಆಲೋಚಿಸಿದರೆ, ರಾಮಾಶ್ಚಮೇಧವು ಆಗಲೇ ಸಕಲರಿಗೂ ಆದರಣೀಯವಾಗುತ್ತ ಬರಹತ್ತಿತೆಂಬುದು ವ್ಯಕ್ತವಾಗುತ್ತದೆ. ಕವಿಗಳೂ, ಚಿತ್ರಕರೂ, ಶಿಲ್ಪಿಗಳೂ ಇಹಲೊಕದಿಂದ ಹೊರಟು ಹೋಗುವುದಕ್ಕೆ ಮುಂಚಿತವಾಗಿಯೇ ಪ್ರಸಿದ್ಧಿಗೆ ಏರಿದ ಅವರ ಕೃತಿಗಳ ಸಂಗತಿಯನ್ನು ಇತಿಹಾಸವು ಹೇಳುತ್ತದೆ. ಈ ಕೃತಿಗಳಲ್ಲಿ ಹೆಚ್ಚಿನವುಗಳು ಅರಸರ ಆಶ್ರಯ, ಹಣವಂತರ ಸಹಾಯ, ಸ್ಫಮತಸ್ಥರ ಪಕ್ಷಪಾತಗಳ ಬಲದಿಂದ ಬಿರುಸುಗಳಂತೆ ಬೆಳಬೆಳಗಿ ಬಾನಿಗೆ ಏರಿ, ಏರಿದ ಹಾಗೆ ಕೆಳಕ್ಕೆ ಬಿದ್ದು, ಕತ್ತಲಲ್ಲಿ ಕಾಣದೆ ಹೋಗುತ್ತವೆ. ಒ೦ದೆರಡು ಮಾತ್ರವೇ (ಅಂಬಿಗನ ಪಳಿವಾತು, ಬಿಯದಂ ಬರೆದ ಕಬ್ಬ, ಕುಱುಂಬನ ಬಯಲ್ನುಡಿ) ಚಿರ ಜೀವಿಗಳಾಗಿ ಬದುಕಿ ಲೋಕಯಾತ್ರೆಯಲ್ಲಿ ನಮಗೆ ಬೆಳಕನ್ನು ಕೊಡುತ್ತವೆ. ಇಂಥ ಮಹಾ ವರಕವಿಗಳ ತಾರಾಮಂಡಲವನ್ನು ಮುಟ್ಟುವಷ್ಟು ಉನ್ನತವಾದ ಪ್ರತಿಭೆ, ಉದಾತ್ತವಾದ ವಿಚಾರಗಳು, ಉತ್ತಮವಾದ ವಿಷಯಜ್ಞಾನ ಇವು ಲಕ್ಷ್ಮೀನಾರಾಯಣಪ್ಪನವರ ಗಂಥಗಳಲ್ಲಿ ಕಡಮೆ. ಅವರು ಕನ್ನಡ ಗ್ರಂಥಗಳ ಗ೦ಧಗಾಳಿ ಸೋಂಕದ, ಕನ್ನಡ ವಿದ್ವಾಂಸರ ಸುಳಿವು ಕಾಣದ, ಕನ್ನಡ ಪ್ರಾಂತದಿಂದ ಬಹು ದೂರವಾದ ತುಳು ನಾಡಿನ ಬಂಜರು ನೆಲದಲ್ಲಿ ತನ್ನಷ್ಟಕ್ಕೆ ಚಿಗುರಿದ ಗ೦ಧದ ಸಸಿಯಂತೆ ಇದ್ದು, ಬಲಿತು ಬೆಳೆಯುವ ಮೊದಲೇ ಬಿದ್ದುಹೋದರು. ಹೀಗಾದುದರಿ೦ಂದ ಅವರ ಅದ್ಭುತವಾದ ಪದಶಕ್ತಿ, ಅನ್ಯಾದೃಶವಾದ ವಾಕ್ಸರಣಿ, ಹೊಸತನ್ನು ಹಳೆಯದಾಗಿಯೂ, ಹಳೆಯದನ್ನು ಹೊಸದಾಗಿಯೂ ಮಾಡುವ ಮಾಟಗಾರಿಕೆ ಮನಸ್ಸಿಗೆ ಅಸಹ್ಯವಾಗದ ಶೃಂಗಾರ, ಕಲ್ಲೆದೆಯನ್ನು ಕರಗಿಸತಕ್ಕ ಕರುಣೆ, ಇವುಗಳ ನರುಗಂಪೇ ಮೂಗಿಗೆ ಬರುತ್ತದೆ. ರನ್ನ ಜನ್ನಾದಿಗಳ ಕವಿತಾ ಸೌಗ೦ಧವೂ, ಶ್ರೀಯುತ ರವೀ೦ದ್ರನಾಥರ ಪುಷ್ಪಗಂಧವೂ ಈ ಕೃತಿಗಳಲ್ಲಿ ಇಲ್ಲವೆ೦ದು ತೋರಿದರೂ, ೨೦೦ ವರ್ಷಗಳ ಈಚೆಯಿಂದ ಮುಳ್ಳುಪೊದೆಯಾಗಿ ಬಿದ್ದಿದ್ದ ಕನ್ನಡ ತೋಟವು ರಾಮಾಶ್ವಮೇಧದಂತಹ ಒಂದು ಹೂವನ್ನಾದರೂ ಲೋಕಕ್ಕೆ ಕೊಟ್ಟಿತೆಂಬುದಕ್ಕೆ ನಾವು ಹೆಚ್ಚಳಪಡಬೇಕು. ಗ್ರಂಥಕಾರರ ಆಯುಷ್ಕಾಲದಲ್ಲಿ ಅವರನ್ನು ಕಣ್ಣೆತ್ತಿ ನೋಡದ ಜನರು ಅವರ ಅವಸಾನಾನ೦ಂತರ ಪ್ರಸಿದ್ಧಿಗೆ ಬರುವ ಅವರ ಕೃತಿಗಳನ್ನು, ಮೆಲ್ಲಮೆಲ್ಲನೆ ಓದತೊಡಗುವ ಕಾರಣದಿಂದ ವಾಙ್ಮಯವು ಕ್ರಮೇಣ ಕಣ್ಣಿಗೆ ಕಾಣದಂತೆ ಮಾರ್ಪಡುವುದೆಂಬ ಹೇಳಿಕೆಗೆ ರಾಮಾಶ್ವಮೇಧವು ಒಂದು ದೃಷ್ಟಾಂತವಾಗಿದೆ. ಶ್ರೀಯುತ ಮುಳಿಯದ ತಿಮ್ಮಪ್ಪಯ್ಯನವರ “ಚಂದ್ರಾವಳಿ”ಯು ರಾಮಾಶ್ವಮೇಧದ ಅಚ್ಚಿನಲ್ಲಿ ಎರಕಹೊಯ್ದ ಗಂಥ. ಆರ್. ವೆ೦ಕಟಸುಬ್ಬರಾಯರ ಎಂಬುದರ ಕನ್ನಡ ಅನುವಾದದಲ್ಲಿ ಗಂಡ ಹೆಂಡಿರು ತಮ್ಮೊಳಗೆ ಪರಸ್ಪರ ಸಂಬೋಧಿಸಿಕೊಳ್ಳುವ ಮೆಚ್ಚಿನ ಮಾತುಗಳು ಬಹುಶಃ ಮುದ್ದಣ ಮನೋರಮೆಯರ “ಒಲ್ಮೆಯ ನುಡಿಗಳೇ” . ರಾಮಾಶ್ಚಮೇಧವು ಕೈಗೆ ಸಿಕ್ಕದೆ ಹೋಗಿದ್ದರೆ, “ಶ್ರೀನಿವಾಸನ” ನವಿಲ್ಗರಿಯ ಚಿತ್ರದ ಕಡ್ಡಿಯು ವೆಂಕಟಾಚಾರ್ಯರ ಕಾದಂಬರೀ ಭಾಷಾ ಮಾರ್ಗಕ್ಕೆ ತಿರುಗುತ್ತಿತ್ತೋ ಏನೋ, ಯಾರಿಗೆ ಗೊತ್ತು? ಇನ್ನೂ ಶ್ರೀಯುತ ಡಿ.ವಿ.ಗುಂಡಪ್ಪನವರ ಮುತ್ತುಗಳಂತಿರುವ ಮಾತುಗಳಲ್ಲಿಯೂ, ರತ್ನಗಳ೦ತಿರುವ ಪದ್ಯಗಳಲ್ಲಿಯೂ ಮಿನುಗುವ ಬಣ್ಣ ಬಣ್ಣದ ಛಾಯೆಗಳು ರಾಮಾಶ್ವಮೇಧವು ಬೆಳಕಿಗೆ ಬಂದುದರ ‘ಪ್ರತಿಫಲವೊ’ ಎಂಬ ಅನುಮಾನವಾಗುತ್ತದೆ. ಇಂಗ್ಲಿಷ್‌ ವಿದ್ಯೆಯ ಹುಳಿಯಿ೦ಂದ ನಮ್ಮ ನಾಲಗೆಯು ಕನ್ನಡವನ್ನು ‘ಸವಿದು ನೋಡದೆ’ ಅದು ಹಾಳು, ಹೊಲಸು ಎ೦ದು ಹಳಿಯುತ್ತ ಬರುತ್ತಿದ್ದ ಕಾಲದಲ್ಲಿ, ಸಾಹಿತ್ಯ ಪರಿಷತ್ತು, ಕನ್ನಡ ಏಕೀಕರಣ ಮಂಡಳವೂ ಕನ್ನಡ ವಿಜಯದ್ವಜವನ್ನು ಎತ್ತಿಹಿಡಿದು ಶಂಖನಾದವನ್ನು ಮಾಡುವ ಮೊದಲೇ ‘ತಿರುಳ್ಗನ್ನಡದಲ್ಲಿ ಬಿಗುಪು ಇದೆ, ಇಂಪು ಇದೆ; ಧನಿ ಇದೆ, ಧಾಟಿ ಇದೆ; ಜೀವಾಳ ಇದೆ, ಜೀವಕಳೆ ಇದೆ; ನಾನು ಕೇಳಿದ್ದೇನೆ, ಕಂಡಿದ್ದೇನೆ- ಬೇಕಾದರೆ ಕೊಡುತ್ತೇನೆ’ ಎಂದು ತಾಯಿಯನ್ನು ಕಾಣದ ಗುಡ್ಡದ ಮರೆಯ ಕರುವಿನ ಕೂಗಿನಿಂದ ಕೂಗಿ, ನಮ್ಮ ಕಿವಿಗಳನ್ನು ನಿಮಿರಿಸುವ ಹಾಗೆ ಮಾಡಿದ ಪುಣ್ಯವು ಅದ್ಭುತ ರಾಮಾಯಣ, ರಾಮಾಶ್ಚಮೇಧಗಳನ್ನು ವಿರಚಿಸಿದ‌ ಕೈಲಾಸವಾಸಿ ನಂದಳಿಕೆ ಲಕ್ಷ್ಮೀನಾರಾಯಣಪ್ಪನವರ ಸೆರಗಿಗೆ ಬೀಳಲಿ! ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು ಯಶಶ್ಶೇಷರಾದರು. ಯಾವ ವಿದ್ವಾಂಸರ ಪುರಸ್ಕಾರವನ್ನು ಪಡೆಯುವುದಕ್ಕಾಗಿ ಅವರು ತಮ್ಮ ಹೆಸರನ್ನು ಆಗಾಗ ಬೇರ್ಪಡಿಸಿದರೋ, “ತಿರುಳ್ಳನ್ನಡಿನಡಿದಾವರೆಯ ಬಂಡುಣಿಗಳಪ್ಪ” ಯಾವ ‘ಕನ್ನಡ ಕಬ್ಬಿಗರ ಮನೆಯೂಳಿಗದವನೆಂದು’ ತೋರಿಸಿಕೊಂಡರೋ, “ಜಗದಿ ಪುಟ್ಟಿದವರಿಗೆ ಮನದ ಬಯಕೆ ಪಿರಿದು” ಆದುದರಿಂದ “ಕನ್ನಡತಿಯೊರೆದ ನುಡಿಯೆಂದಿದಂ ಭಾವಿಸದೆ ಕನ್ನಡಿಗನೊರೆದ ನುಡಿಯೆಂದು ಸಂಭಾವಿಪುದೆಂದು” ಯಥಾರ್ಥವಾಗಿ ಯಾವ ವಿದ್ವಜ್ಜನರೊಂದಿಗೆ ಬೇಡಿಕೊ೦ಂಡರೋ, ಆ ಮೈಸೂರು ಕರ್ನಾಟಕಾಭಿಮಾನಿಗಳೇ ಲಕ್ಷ್ಮೀನಾರಾಯಣಪ್ಪನವರ ಯಶಸ್ಸಿನ ಸಮಾರಾಧನೆಯನ್ನು ಕೈಕೊಂಡು, ಅವರ ವಿಷಯವಾದ ಉಪನ್ಯಾಸಗಳನ್ನೂ, ಅವರ ಚಿತ್ರ ಸ್ಥಾಪನೆಯನ್ನೂ, ಅವರ ಹೆಸರಿನಲ್ಲಿ ಪದಕಗಳನ್ನೂ ಉಚಿತಗಳನ್ನೂ ಅಟ್ಟು ಅಳವಡಿಸುತ್ತಿದ್ದಾಗ- ಅವರು ಜನಿಸಿದ ಜಿಲ್ಲೆಯಲ್ಲಿಯೇ ಜನಿಸಿ, ಅವರು ಇದ್ದ ಕಾಲದಲ್ಲಿಯೇ ಇದ್ದು ಅವರು ಬರೆದ ಗ್ರಂಥಗಳಿಂದ ಉತ್ಕರ್ಷಗೊಂಡ ನನ್ನ೦ಥವನು ಆ ಯಶಸ್ಸಿನ ಸಮಾರಾಧನೆಗಾಗಿ ಅವರ ಹೊರಗಿನ ಜೀವನ ಕ್ರಮವನ್ನೂ ಒಳಗಿನ ಆಂತರ್ಯ ಸ್ಥಿತಿಯನ್ನೂ, ತೆರೆದು ತೋರಿಸಲಿಕ್ಕೆ ಸಹಾಯಕವಾದ ಅವರ ಚರ್ಯೆ‌ ಚೇಷ್ಟೆಗಳನ್ನೂ, ಸುಖದುಃಖದ ಸಂದರ್ಭಗಳನ್ನೂ, ನಡೆನುಡಿಗಳನ್ನೂ ಕಾಗದ ಪತ್ರಗಳ ಅಧಾರದಿಂದ ಬರೆದಿದ್ದರೆ ಈ ಲೇಖವು ಎಷ್ಟು ರುಚಿಯಾಗುತ್ತಿತ್ತು! ಆದರೆ ಮಾಡುವುದೇನು? ನನ್ನಲ್ಲಿ ಬೇಕಾದ ಸಂಗ್ರಹವೂ ಇಲ್ಲದೆ ಬರೆಯುವ ಶಕ್ತಿಯೂ ಸಾಲದೆ ಕೈ||ಲಕ್ಷ್ಮೀನಾರಾಯಣಪ್ಪನವರ ವಿಷಯವಾಗಿ ನನಗೆ ಗೊತ್ತಿದ್ದಷ್ಟನ್ನೂ ಕಲಸಿ, ಈ ಗೊಡ್ಡು ಸಾರನ್ನು ಮಾಡಬೇಕಾಗಿ ಬಂದಿತು. ಸತ್ತವರ ಆತ್ಮವು ಸ್ಮರಿಸಿದ ಮಾತ್ರಕ್ಕೆ ಕೆಳಕ್ಕೆಇಳಿಯುತ್ತದೆಂಬ ಒಂದು ಹಿರಿಯರ ಹೇಳಿಕೆ ಇದೆ. ಸತ್ತವನ ಆತ್ಮವು ತಿರುಗಿ ಜನ್ಮಕ್ಕೆ ಬೀಳಬಾರದೆಂಬ ಅಭಿಪ್ರಾಯದಿಂದ ಸತ್ತವನನ್ನು ಸ್ಮರಿಸುವುದೇ ಕಡಿಮೆ, ಆತನು ಉಂಡಿದ್ದ ತಟ್ಟೆ, ಉಟ್ಟಿದ್ದ ಬಟ್ಟೆ, ಹಿಡಿದಿದ್ದ ಕಡ್ಡಿ, ಬರೆದಿದ್ದ ಕಾಗದ ಮುಂತಾದುವುಗಳನ್ನು ಅವನ ಹಿಂದೆಯೇ ದಾನಮಾಡಿ ಬಿಡುವುದು ರೂಢಿಯಾಗಿದೆ. ಮೃತನ ವಿಷಯವಾಗಿ ಮಾತುಕಥೆಯನ್ನು ಆಡರು; ಆತನ ಹೆಸರನ್ನು ಉಚ್ಚರಿಸಲೊಲ್ಲರು; ಮೃತನ ಹೆಸರುಳಿಯದಂತೆ ಮಾಡುವ ಈ ಪದ್ಧತಿಯ ಕೆಲಸವನ್ನು ನಮ್ಮಲ್ಲಿ ಸಹಜವಾಗಿರುವ ಆಲಸ್ಯವೂ, ಬಡತನವೂ ಸ೦ಪೂರ್ಣ ಮಾಡುತ್ತದೆ. ಇದರ ದೆಸೆಯಿಂದ ಮಹನೀಯರ ಚರಿತೆಗೆ ಬೇಕಾದ ಲೇಖನ ಸಾಮಾಗ್ರಿಗಳಿಗೆ ನಮ್ಮಲ್ಲಿ ದೊಡ್ಡ ಅಭಾವವೆಂದು ವಿಷಾದಿಸಬೇಕಾಗಿದೆ. ಆದರೆ ಇನ್ನೊಂದು ದೃಷ್ಟಿಯಿಂದ ನೋಡಿದರೆ, ಈ ಪದ್ಧತಿಯು ಅಷ್ಟೊಂದು ಹಾಳೆಂದು ತಿಳಿಯಲಾಗದು. ಅದು ಅಸೂಯೆಯ ಬಾಯನ್ನು ಮುಚ್ಚುತ್ತದೆ; ಹಗೆಯ ಕೈಯ್ಯನ್ನು ಕಟ್ಟುತ್ತದೆ. ಸದ್ಗತಿಯನ್ನು ಪಡೆದವರು ಈ ಜನ್ಮದಲ್ಲಿದ್ದಾಗ ಮಾಡಿದ ಕಾರ್ಯಾಕಾರ್ಯಗಳ ವಿಮರ್ಶೆಯನ್ನೂ, ಅವರ ವಿವಿಧ ಆಲೋಚನೆಗಳ ಪರಿಶೀಲನವನ್ನೂ, ಅವರ ಉದ್ದೇಶ ಧ್ಯೇಯಗಳ ವಿಚಾರವನ್ನೂ ಮಾಡುವುದಕ್ಕೆ ನಮಗೇನು ಅಧಿಕಾರ? ಅಧಿಕಾರವಿದ್ದರೂ ಆ ಅಧಿಕಾರವನ್ನು ನಡಿಸುವಾಗ ಅಧಿಕಾರಿಯ ರಾಗದ್ವೇಷಗಳಿ೦ದ ಮೃತನ ಹೆಸರಿನ ಮೇಲೆ ಸಲ್ಲದ ಭೂಷಣೆಯೊ ಇಲ್ಲದ ದೂಷಣೆಯೊ ಬೀಳಲಿಕ್ಕಿಲ್ಲವೆಂದು ಹೇಗೆ ಹೇಳಬಹುದು? ಹೀಗಾದುದರಿಂದ ಕೈ||ನಂದಳಿಕೆ ಲಕ್ಷ್ಮೀನಾರಾಯಣಪ್ಪನವರಲ್ಲಿ ನನಗಿದ್ದ ಅಭಿಮಾನದಿಂದ ಬರೆಯಲ್ಪಟ್ಟ ಈ ಲೇಖದಲ್ಲಿ ಅವರ ಹೆಸರಿನ ಮೇಲೆ ನನ್ನ ಕೈಯಿಂದ ಪ್ರಮಾದವಶಾತ್‌ ಮಸಿಯ ಬೊಟ್ಟು ಬಿದ್ದಿದ್ದರೆ, ಅದನ್ನು ತೊಡೆದು ಬಿಡಬೇಕಾಗಿ ವಾಚಕರೊಡನೆ ಬಿನ್ನಯಿಸುತ್ತೇನೆ. (ಪ್ರಬುದ್ಧ ಕರ್ನಾಟಕ: ೧೯೨೯) Like this: Like Loading... Posted in ಚಿಂತನ, ಬರಹ Bookmark the permalink. Post navigation ← Previous Next → 2 comments to “ಇಂದಿಗೂ ಕರೆಂಟು : ಪಂಜೆ ಮಂಗೇಶರಾಯರು ಬರೆದ ಲೇಖನ “ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು”” ರಘುನಂದನ May 14, 2020 at 11:21 am ಹಳಬರ, ದೊಡ್ಡವರ ಬರಹಗಳನ್ನು ಹತ್ತು ಜನರ ಓದಿಗೆ ಒದಗಿಸಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಋತುಮಾನದ ಬಳಗಕ್ಕೆ ತುಂಬ ಥ್ಯಾಂಕ್ಸ್. ಪಂಜೆಯವರ ಈ ಬರಹದಲ್ಲಿ ಎಂಥ ಓಘವಿದೆ, ಓಜಸ್ಸಿದೆ, ವಿನಯವಿದೆ! ಈ ಬರಹವನ್ನು ಸಂಪಾದಕರ ಗಮನಕ್ಕೆ ತಂದ ಮಳಗಿಯವರಿಗೂ ತುಂಬ ಥ್ಯಾಂಕ್ಸ್. ಬರಹದ ಉದ್ದಕ್ಕೂ ಚಂದದ ಹಲವು ಮಾತಿದೆ. ಅಂಥ ಮಾತಿನ ಪೈಕಿ ಒಂದು ಮಾತು: ಅಂಬಿಗನ ಪೞವಾತು, ಬಿಯದಂ ಬರೆದ ಕಬ್ಬ, ಕುಱುಂಬನ ಬಯಲ್ನುಡಿ ಒಗಟಿನಂತಿದೆಯಲ್ಲವೆ ಆ ಮಾತು? ಅದರ ಮರ್ಮ ಕೆಲವರಿಗೆ ಗೊತ್ತಾಗದೇ ಇರಬಹುದು. ಹಾಗಾಗಿ ವಿವರಿಸುತ್ತಿದ್ದೇನೆ. ಆ ಮಾತಿನ ಅರ್ಥ: ಅಂಬಿಗನ ಪೞವಾತು = ಅಂಬಿಗನ ಜ್ಞಾನಪೂರಿತವಾದ, ಪ್ರಾಚೀನವಾದ, ಗುಣಮಟ್ಟದಲ್ಲಿ ಹಿರಿದಾದ ಮಾತು. ಅರ್ಥಾತ್, ಇಲ್ಲಿ, ಪೞವಾತು ಅಂದರೆ ವೇದ. ಬಿಯದಂ ಬರೆದ ಕಬ್ಬ = ವ್ಯಾಧನು ಬರೆದ ಕಾವ್ಯ ಕುಱುಂಬನ ಬಯಲ್ನುಡಿ = ಕುರುಬನ ಬಯಲು ನುಡಿ. ವಿಸ್ತಾರವಾದ ಧ್ವನಿಶಕ್ತಿಯುಳ್ಳ, ಅನಂತವಾದ ನುಡಿ. ಅರ್ಥಾತ್, ಸಾವಿಲ್ಲದ, ಅಜರಾಮರವಾದ ನುಡಿ. ಅಂಬಿಗನೆಂದರೆ ವೇದವ್ಯಾಸ , ಅಂಬಿಗಳಾದ ಯೋಜನಗಂಧಿಯಲ್ಲಿ ಹುಟ್ಟಿದವನು. ವ್ಯಾಧನೆಂದರೆ ವಾಲ್ಮೀಕಿ. ಕುರುಬನೆಂದರೆ…? ಇನ್ನು ಯಾರು? ಕಾಳಿದಾಸ. ಒಂದು ಸಂದೇಹ. ಬೆಳ್ನುಡಿ ಎಂದಿರಬೇಕಾದ್ದು ಬಯಲ್ನುಡಿ ಎಂದು ಮೂಡಿಬಿಟ್ಟಿದೆಯೋ? ಓರಿಯಂಟ್ ಲಾಂಗ್‍ಮನ್ ಅವರು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿರುವ ಪಂಜೆಯವರ ಬರಹಗಳ ಪೈಕಿ ನಾಲ್ಕನೆಯ ಸಂಪುಟದಲ್ಲಿ ಈ ಪ್ರಬಂಧವಿದೆ. ಅಲ್ಲಿಯೂ ಕುರುಬನ ನುಡಿಯನ್ನು ಕುರಿತ ಈ ಮಾತು ಬಯಲ್ನುಡಿ ಎಂದೇ ಅಚ್ಚಾಗಿದೆ. ಆದರೂ ಅದು ಪಂಜೆಯವರ ಮೂಲಲೇಖನದಲ್ಲಿ ಬೆಳ್ನುಡಿ ಎಂದೇ ಆಗಿದ್ದು, ಪ್ರಕಟಗೊಳ್ಳುವಾಗ ಬಯಲ್ನುಡಿ ಎಂದು ಅಚ್ಚಾಗಿಬಿಟ್ಟಿತೇ ಎಂಬ ಅನುಮಾನವಿದೆ ನನಗೆ. ಯಾಕೆಂದರೆ, ಓರಿಯಂಟ್ ಲಾಂಗ್‍ಮನ್ ಅವರು ಹೊರತಂದಿರುವ ಆ ಸಂಪುಟಗಳಲ್ಲಿ ಅಲ್ಲಲ್ಲಿ ಇಂಥ ಅಚ್ಚಿನ ತಪ್ಪುಗಳಿವೆ. ಬೆಳ್ನುಡಿ ಅಂದರೆ ಸವಿಯಾದ ನುಡಿ, ಪ್ರಕಾಶಮಾನವಾದ ನುಡಿ. ಕಾಳಿದಾಸನ ಕಾವ್ಯಕ್ಕೆ ಬೆಳ್ನುಡಿ ಅನ್ನುವ ಮೆಚ್ಚಿಗೆಯ ಮಾತು ಒಪ್ಪುತ್ತದೆ. ಅಲ್ಲದೆ, ಮುದ್ದಣನ ರಾಮಾಶ್ವಮೇಧಂ ಕಾವ್ಯದಲ್ಲಿ ಮುದ್ದಣ, ಮನೋರಮೆಯರ ಸಂವಾದದ ಕಡೆಕಡೆಯಲ್ಲಿ ಈ ಮಾತು ಬರುತ್ತದೆ:
ನಾನು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಅಂತ ಯಾವ ಹೆಣ್ಣಿಗೆ ತಾನೇ ಇಷ್ಟ ಇರಲ್ಲ? ಪಾರ್ಲರ್ ಗೆ ಅಂತ ಹಣವನ್ನು ಖರ್ಚು ಮಾಡುವ ಬದಲು ನಮ್ಮ ಮನೆಯಲ್ಲೇ ಇರುವ ದಿನನಿತ್ಯ ಬಳಸುವ ಪದಾರ್ಥಗಳನ್ನು ಬಳಸಿ, ಸ್ವಾಭಾವಿಕವಾಗಿ ನಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಅನ್ನುವವರಿಗೆ ಇಲ್ಲಿದೆ ಟಿಪ್ಸ್ ನೋಡಿ: ಮೊದಲಿಗೆ ಎಲ್ಲಾ ಹುಡುಗಿಯರ ಸಮಸ್ಯೆ ಎಂದರೆ ಬಿಸಿಲಲ್ಲಿ ಹೋಗಿ ಸ್ಕಿನ್ ಟ್ಯಾನ್ ಆಗಿದೆ ಅನ್ನುವುದು. ಅಂತಹವರಿಗೆ ಕೆಲವು ಸುಲಭ ಟಿಪ್ಸ್ ಅಕ್ಕಿ ಹಿಟ್ಟಿಗೆ ಸ್ವಲ್ಪ ಮೊಸರು ಅರಿಶಿನ ಮಿಕ್ಸ್ ಮಾಡಿ ಟ್ಯಾನ್ ಆಗಿರೋ ಕಡೆಗೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಲ್ಲಿ ತೊಳೆದರೆ ಟ್ಯಾನ್ ಕಡಿಮೆ ಆಗುತ್ತೆ. ಒಂದು ಸರಿ ಮಾಡಿ ಸುಮ್ಮನಾದ್ರೆ ಇದರ ಪ್ರಯೋಜನ ಕಡಿಮೆ. ವಾರದಲ್ಲಿ 2 ರಿಂದ 3 ಸರಿ ನಿರಂತರವಾಗಿ ಈ ರೀತಿ ಮಾಡೋದರಿಂದ ಸ್ಕಿನ್ ಟ್ಯಾನ್ ಅನ್ನೋದು ಕ್ರಮೇಣ ಕಡಿಮೆಯಾಗುತ್ತೆ. ಇನ್ನು ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಖ ಎಣ್ಣೆ ಚರ್ಮ ಆಗ್ಬಿಡುತ್ತೆ. ಅದಕ್ಕೆ, ಕಡ್ಲೆ ಹಿಟ್ಟಿಂದ ಮುಖ ತೊಳುದ್ರೆ ಒಳ್ಳೆದು. ಕಾಫಿ ಪೌಡರ್ ಎಲ್ಲಾರ ಮನೇಲೂ ಖಂಡಿತ ಇದ್ದೇ ಇರುತ್ತೆ. ಒಂದು ಟೀ ಸ್ಪೂನ್ ಕಾಫಿ ಪೌಡರ್ ಗೆ ಒಂದು ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ ಇಪ್ಪತ್ತು ನಿಮಿಷ ಬಿಟ್ಟು ತೊಳಿದ್ರೆ ಗ್ಲೊಯಿಂಗ್ ಫೇಸ್ ನಿಮ್ಮದಾಗುತ್ತೆ. *ಪಪ್ಪಾಯ, ಮೊಸರು, ಜೇನುತುಪ್ಪ ಇಷ್ಟನ್ನು ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಹಾಕಿ ಇಪ್ಪತ್ತು ನಿಮಿಷ ಬಿಟ್ಟು ವಾಶ್ ಮಾಡಿ. ಇನ್ನು ಬೇಸಿಗೆಲಿ ಕೂದಲನ್ನು ಸಹ ಕಾಪಡ್ಕೊಳ್ಬೇಕಾಗುತ್ತೆ. ತಲೆ ಹೊಟ್ಟು ಆಗಿದೆ, ಕೂದಲು ತುಂಬಾ ಉದುರುತ್ತೆ, ಬಿಳಿ ಕೂದಲು ಆಗಿದೆ, ಕೂದಲು ಬೆಳೀತಾ ಇಲ್ಲ – ಹೀಗೆ ನಾನಾ ರೀತಿಯ ಸಮಸ್ಯೆ ಬೇಸಿಗೆಯಲ್ಲಿ ಇದ್ದದ್ದೇ. ಬಾಹ್ಯವಾಗಿ ಹೇಗೆ ಆರೈಕೆ ಮಾಡ್ತಿವೋ ಅದಕ್ಕಿಂತ ಮುಖ್ಯವಾಗಿ ಆಂತರಿಕವಾಗಿ ನಮ್ಮ ದೇಹವನ್ನು ಆರೈಕೆ ಮಾಡಿದ್ರೆ ನಮ್ಮ ಸೌಂದರ್ಯ ನ ದೀರ್ಘ ಕಾಲದವರೆಗೂ ಕಾಪಾಡಿಕೊಳ್ಳಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ನಾವು ತಿನ್ನೊ ಆಹಾರ ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತೆ. ದೇಹದಲ್ಲಿ ವಿಟಮಿನ್ ಕೊರೆತೆಯಿಂದ ತ್ವಚೆ ಹಾಗೂ ಕೂದಲಿನ ಸಮಸ್ಯೆ ಉಂಟಾಗುತ್ತೆ. ಹಾಗಾಗಿ ಒಳ್ಳೆಯ ಆಹಾರ ಪದ್ದತಿ, ಹಣ್ಣು, ತರಕಾರಿ ಹೀಗೇ ಆದಷ್ಟು ಆರೋಗ್ಯಕರವಾದ ಪೌಷ್ಟಿಕ ಆಹಾರ ಸೇವಿಸಬೇಕು. ಎಲ್ಲಾದಕ್ಕಿಂತ ಮುಖ್ಯವಾಗಿ ಹೆಚ್ಚು ನೀರು ಕುಡಿಬೇಕು. ಇನ್ನು ಕೂದಲಿನ ಸಮಸ್ಯೆಗೆ ಪರಿಹಾರ ಹೇಳೊದಾದ್ರೆ -ವಾರಕ್ಕೆ 3 ರಿಂದ 4 ದಿನ ಕೂದಲನ್ನು ತೊಳಿಬೇಕು. ಮೆಂತೆನ ರಾತ್ರಿ ಇಡಿ ನೆನಸಿ ಮಾರನೇ ದಿನ ಬೆಳಿಗ್ಗೆ ಮೊಸರು ಹಾಕಿ ರುಬ್ಬಿ ತಲೆಗೆ ಹಚ್ಚೊದ್ರಿಂದ ತಲೆಹೊಟ್ಟಿನ ಸಮಸ್ಯೆ ಕಡಿಮೆ ಆಗುತ್ತೆ. ಬಿಳಿ ಕೂದಲಿಗೆ ರಾಸಾಯನಿಕ ಬಣ್ಣ ಹಚ್ಚುವ ಬದಲು ನೈಸರ್ಗಿಕ ವಾಗಿ ಸಿಗುವ ಮೆಹಂದಿ ಹಚ್ಚುವುದರಿಂದ ದೇಹದಲ್ಲಿ ಇರೋ ಉಷ್ಣ ಕಡಿಮೆ ಆಗಿ ದೇಹ ತಂಪಾಗಿರುತ್ತೆ. ಅಷ್ಟೇ ಅಲ್ಲ, ಬಿಳಿ ಕೂದಲು ಮುಚ್ಚುತ್ತೆ. ತಪ್ಪದೇ ನೀವು ರೆಗ್ಯುಲರ್ ಆಗಿ ಬಳಸೋ ಎಣ್ಣೆನ ಸ್ನಾನಕ್ಕಿಂತ ಒಂದು ಗಂಟೆ ಮುಂಚೆ ತಲೆ ಕೂದಲಿಗೆ ಹಚ್ಚಿ ಸ್ನಾನ ಮಾಡಿ. ಎಣ್ಣೆ ಹಚ್ಚದೆ ತಲೆಗೆ ಸ್ನಾನ ಮಾಡೊದ್ರಿಂದ ಕೂದಲು ಒರಟಾಗುವುದಷ್ಟೇ ಅಲ್ಲದೆ ಹಾಗು ಕವಲು ಬರುತ್ತೆ. ಇನ್ನು ಕೂದಲು ಬೇಗ ಉದ್ದ ಬೆಳಿಬೇಕು ಅಂದ್ರೆ ಈರುಳ್ಳಿ ರಸವನ್ನು ತಲೆ ಬುಡಕ್ಕೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಈ ರೀತಿ ವಾರಕ್ಕೆ ಮೂರರಿಂದ ನಾಲ್ಕು ಸಲ ಮಾಡಿ. ಬೇಸಿಗೆಯಲ್ಲಿ ಆರೋಗ್ಯ ಕಾಪಾಡೋಕೆ ಹಾಗೂ ಬಿಸಿಲಿನ ಬೇಗೆಗೆ ದೇಹವನ್ನು ತಂಪಾಗಿಡಲು – ಅತಿ ಹೆಚ್ಚು ನೀರು ಕುಡಿಯಿರಿ. ನಿಂಬೆ ಹಣ್ಣು, ಸೌತೆಕಾಯಿ ಗಳಂತಹ ಪದಾರ್ಥಗಳನ್ನು ಹೆಚ್ಚಾಗಿ ಬಳಸಿ. ರಾಸಾಯನಿಕ ಪೇಯಗಳಿಂದ ದೂರವಿರಿ. ಆದಷ್ಟೂ ಹಣ್ಣು , ಹಣ್ಣಿನ ಜ್ಯೂಸ್, ಮಜ್ಜಿಗೆ ಹಾಗೂ ಹಸಿ ತರಕಾರಿ ಹೆಚ್ಚು ಬಳಸಿ. ಬೆಳಿಗ್ಗೆ ಟೀ ಕಾಫಿ ಬದಲು ರಾಗಿ ಗಂಜಿಗೆ ಮಜ್ಜಿಗೆ ಸೇರಿಸಿ ಕುಡಿಯಿರಿ. ಇದು ನಿಮ್ಮ ದೇಹವನ್ನು ದಿನವಿಡೀ ತಂಪಾಗಿ ಇಡಲು ಸಹಾಯ ಮಾಡುತ್ತೆ ಜೊತೆಗೆ ಬೇಸಿಗೆ ಕಾಲಕ್ಕೆ ದೇಹಕ್ಕೆ ಅಗತ್ಯವಾಗಿ ಬೇಕಾದ ರೀತಿಯ ಶಕ್ತಿ ಕೂಡ ಸಿಗುತ್ತೆ. ದಿನಕ್ಕೆ ಒಂದರ್ಧ ಗಂಟೆಯಾದರೂ ವಾಕ್ ಮಾಡಿ. ಯೋಗ, ಏರೋಬಿಕ್ಸ್ ಇನ್ನೂ ಉತ್ತಮ. ಉಪ್ಪು, ಕಾರ , ಹೊರಗಿನ ತಿಂಡಿ, ಕುರುಕಲು ತಿಂಡಿಗಳಿಂದ ಆದಷ್ಟು ದೂರ ಇರಿ ನೆನಪಿಡಿ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ‌. ರಾಸಾಯನಿಕ ಸೌಂದರ್ಯ ವರ್ಧಕಗಳಿಂದ ಆದಷ್ಟು ದೂರ ಇರಿ. ನೈಸರ್ಗಿಕವಾದ ಆಹಾರ ಪದಾರ್ಥಗಳು, ನೈಸರ್ಗಿಕ ಸೌಂದರ್ಯ ವರ್ಧಕಗಳನ್ನು ಬಳಸಿ. ಆರೋಗ್ಯವಾಗಿರಿ.
ಬಾಲಿವುಡ್‌ನ ಕ್ಯೂಟ್ ಕಪಲ್ ಅಂತ ಕರೆಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಸುಮಾರು 6 ವರ್ಷಗಳ ಕಾಲ ಇಬ್ಬರೂ ಪ್ರೀತಿಯಲ್ಲಿದ್ದರು. ಆದರೀಗ ಇಬ್ಬರು ಬೇರೆ ಆಗುವ ನಿರ್ಧಾರ ಮಾಡಿ ದೂರ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ. Shruiti G Krishna Bengaluru, First Published Jul 27, 2022, 1:46 PM IST ಸಿನಿಮಾರಂಗದಲ್ಲಿ ಲವ್, ಡೇಟಿಂಗ್, ಮದುವೆ, ಬ್ರೇಕಪ್ ಎಲ್ಲಾ ಕಾಮನ್. ಸಿನಿ ಸೆಲೆಬ್ರಿಟಿಗಳ ಈ ವಿಚಾರಗಳು ಆಗಾಗ ಸುದ್ದಿಯಲ್ಲಿರುತ್ತವೆ. ಆದರೆ ಈ ಬಗ್ಗೆ ಸೆಲೆಬ್ರಿಟಿಗಳು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ಜೊತೆಗೆ ವೈಯಕ್ತಿಕ ವಿಚಾರಗಳು ಆಗಾಗ ಸುದ್ದಿಯಾಗುತ್ತಿರುತ್ತೆ. ಇದೀಗ ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಸದ್ದು ಮಾಡುತ್ತಿದೆ. ಬಾಲಿವುಡ್‌ನ ಕ್ಯೂಟ್ ಕಪಲ್ ಅಂತ ಕರೆಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಯಾವತ್ತೂ ಡೇಟಿಂಗ್ ವಿಚಾರವನ್ನು ಅಧಿಕೃತ ಗೊಳಿಸಿರಲಿಲ್ಲ. ಹಾಗಂತ ಇಬ್ಬರ ನಡುವಿನ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಸುಮಾರು 6 ವರ್ಷಗಳ ಕಾಲ ಇಬ್ಬರೂ ಪ್ರೀತಿಯಲ್ಲಿದ್ದರು. ಆದರೀಗ ಇಬ್ಬರು ಬೇರೆ ಆಗುವ ನಿರ್ಧಾರ ಮಾಡಿ ದೂರ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ. ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿರುವ ಪ್ರಕಾರ, ದಿಶಾ ಮತ್ತು ಟೈಗರ್ ಈಗ ಒಂಟಿಯಾಗಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಟೈಗರ್ ಮತ್ತು ದಿಶಾ ಈಗ ಒಟ್ಟಿಗೆ ಇಲ್ಲ. ಇಬ್ಬರು ದೂರ ಆಗಲು ಅವರ ನಡುವೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ, ಆದರೆ ಇಬ್ಬರೂ ಇದೀಗ ಒಂಟಿಯಾಗಿದ್ದಾರೆ ಎಂದು ವರದಿ ಮಾಡಿದ್ದಾರೆ. ಬಾಘಿ 2 ತಾರೆಗಳು, ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಹೈಪ್ ಮಾಡುತ್ತಿದ್ದರು. ಆದರೀಗ ತಮ್ಮ ಸಂಬಂಧದ ಬಗ್ಗೆ ಯಾವಾಗಲೂ ಮೌನವಾಗಿರುತ್ತಾರೆ. ಟೈಗರ್‌ ಆಪ್ತರು ಹೇಳುವ ಪ್ರಕಾರ ದಿಶಾ ಜೊತೆ ದೂರ ಆದ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಟೈಗರ್ ಆಪ್ತ, 'ಕಳೆದ ಕೆಲವು ವಾರಗಳ ಹಿಂದೆ ಅಷ್ಟೆ ನಮಗೆ ಇಈ ಬಗ್ಗೆ ಗೊತ್ತಾಗಿದೆ. ಅವರು ನಿಜವಾಗಿಯೂ ನಮ್ಮಲ್ಲಿ ಯಾರೊಂದಿಗೂ ಅದರ ಬಗ್ಗೆ ಮಾತನಾಡಿಲ್ಲ. ಅವರು ಲಂಡನ್‌ ನಲ್ಲಿ ತಮ್ಮ ಪ್ರವಾಸ ಮತ್ತು ತನ್ನ ಕೆಲಸದ ಮೇಲೆ ಕೇಂದ್ರೀಕರಿಸಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರೇಕಪ್ ನಿಂದ ಯಾವುದೇ ಪರಿಣಾಮ ಬೀರಿಲ್ಲ' ಎಂದಿದ್ದಾರೆ ಎಂದು ಆಂಗ್ಲ ವೆಬ್ ಸೈಟ್ ವರದಿ ಮಾಡಿದೆ. ಬ್ರೇಕಪ್ ಬಳಿಕವೂ ದಿಶಾ ಮತ್ತು ಟೈಗರ್ ಇಬ್ಬರೂ ಪರಸ್ಪರ ಸ್ನೇಹಿತರಾಗಿ ಮುಂದುವರೆದಿದ್ದಾರೆ ಎಂದು ಮೂಲಗಳು ಹೇಳಿವೆ. ನಿಜಕ್ಕೂ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರಾ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಬಾರ್ಬಿ ಡಾಲ್ ಆಗಿ ಬದಲಾದ ಹಾಟ್ ಬ್ಯೂಟಿ ದಿಶಾ; ಮಿನಿ ಡ್ರೆಸ್ ಫೋಟೋ ವೈರಲ್ ಟೈಗರ್ ಶ್ರಾಫ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿ ಗಷ್ಟೆ ಟೈಗರ್, ಸ್ಕ್ರೂ ಧೀಲಾ ಸಿವಿಮಾವನ್ನು ಅನೌನ್ಸ್ ಮಾಡಿದರು. ಧರ್ಮ ಪ್ರೊಡಕ್ಷನ್ಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. 3 ನಿಮಿಷಗಳ ಆಕ್ಷನ್ ವೀಡಿಯೊದೊಂದಿಗೆ ಹೊಸ ಸಿನಿಮಾ ಘೋಷಿಸಿದರು. ಇದನ್ನು ನೋಡಿದ ದಿಶಾ, ಟೈಗರ್‌ಗಾಗಿ ಉತ್ಸುಕರಾಗಿದ್ದರು ಮತ್ತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಅವಳು 'ಕಾಯಲು ಸಾಧ್ಯವಿಲ್ಲ. ಟೈಗರ್ ಯು ಆರ್ ಫೈರ್' ಎಂದು ಬರೆದುಕೊಂಡಿದ್ದರು. Bollywood Love Story: ದಿಶಾ ಪಟಾನಿ ಜೊತೆ ಟೈಗರ್ ಶ್ರಾಫ್ ಪ್ರೇಮ್ ಕಹಾನಿ! ಇನ್ನು ದಿಶಾ ಪಟಾನಿ ಸದ್ಯ ಏಕ್ ವಿಲನ್ ರಿಟರ್ನ್ ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ. ಈಗಾಗಲೇ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಮೈಸೂರು, ಜೂ.೫- ಮೈಸೂರಿನ ಎಸ್‌ಬಿ ಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ) ಕಾಲೇಜಿನ ಡಾ. ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮೊದಲ ಪದವಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಪೂಜಾ ಭಾಗವತ್ ಸ್ಮಾರಕ ಮಹಾ ಜನ ಸ್ನಾತಕೋತ್ತರ ಕೇಂದ್ರದ ವಿವಿಧ ವಿಷಯಗಳಲ್ಲಿ ಒಟ್ಟು ೨೭೪ ವಿದ್ಯಾರ್ಥಿಗಳು ಪದವಿ ಪಡೆದರು. ಇವರಲ್ಲಿ ೪೦ ವಿದ್ಯಾರ್ಥಿಗಳು ಉನ್ನತ ಶ್ರೇಣ ಯಲ್ಲಿ, ೨೩೨ ವಿದ್ಯಾರ್ಥಿ ಗಳು ಪ್ರಥಮ ದರ್ಜೆ ಹಾಗೂ ಇಬ್ಬರು ವಿದ್ಯಾರ್ಥಿ ಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪದವಿ ಪ್ರದಾನ ಭಾಷಣ ಮಾಡಿದ ಆಂಧ್ರಪ್ರದೇಶ ಗುಂಟೂರಿನಲ್ಲಿರುವ ವಿಜ್ಞಾನ ಫೌಂಡೇಶನ್ ಫಾರ್ ಸೈನ್ಸ್, ಟೆಕ್ನಾಲಜಿ ಅಂಡ್ ರಿಸರ್ಚ್ (ಡೀಮ್ಡ್) ವಿಶ್ವವಿದ್ಯಾ ನಿಲಯದ ಕುಲಪತಿ ಡಾ.ಪಿ.ನಾಗಭೂಷಣ್ ಉನ್ನತ ಶ್ರೇಣ ಹಾಗೂ ಪದವಿ ಪಡೆದ ೧೦ ವಿದ್ಯಾರ್ಥಿ ಗಳಿಗೆ ಪೂಜಾ ಭಾಗವತ್ ಸ್ಮಾರಕ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಸಿ.ಕೆ.ರೇಣುಕಾರ್ಯ ದತ್ತಿ ಪದಕ ಹಾಗೂ ೫,೦೦೦ ರೂ.ಗಳ ನಗದು ಬಹುಮಾನ ಮತ್ತು ರಾಮಣ್ಣ ವಿ. (ದಿ. ಶ್ರೀ ಸುಕೃತ್ ಅವರ ಹೆಸರಿನಲ್ಲಿ) ಇಬ್ಬರು ವಿದ್ಯಾರ್ಥಿಗಳಿಗೆ ೧,೦೦೦ ರೂ.ಗಳ ನಗದು ಬಹಮಾನ ನೀಡಿ, ಗೌರವಿಸಿದರು. ನಂತರ ಮಾತನಾಡಿದ ಅವರು, ಇಂದಿನ ತಾಂತ್ರಿಕ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಾವು ಯಂತ್ರೋಪಕರಣಗಳಿಗೆ ತಲೆ ಬಾಗುತ್ತಿದ್ದೇವೆ. ಇದು ನಮ್ಮನ್ನು ಸೃಜನಶೀಲ ವ್ಯಕ್ತಿತ್ವ, ಆಲೋಜಿಸುವ ಗುಣ ಗಳನ್ನು ಕುಂಠಿತಗೊಳಿಸುತ್ತಿದೆ. ವಿದ್ಯಾರ್ಥಿಗಳು ಮಹತ್ತರವಾದ ಮಹತ್ವಾಕಾಂಕ್ಷೆಗಳನ್ನು ಉಳ್ಳವರಾಗ ಬೇಕು. ಪ್ರತಿಯೊಬ್ಬರೂ ಪರಿಶ್ರಮದಿಂದ ಯಶಸ್ಸನ್ನು ಕಾಣಬೇಕೇ ಹೊರತು, ಕೇವಲ ಮಹತ್ವಾಕಾಂಕ್ಷೆಯಿAದಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್‌ಕುಮಾರ್ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಂಸ್ಥೆ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೫ಕ್ಕಿಂತ ಹೆಚ್ಚಿನ ಅಂಕ ಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ಒಟ್ಟು ಕೋರ್ಸ್ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ವಿಶೇಷಚೇತನ, ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ಮತ್ತು ಸೇನೆಯಿಂದ ನಿವೃತ್ತಿ ಹೊಂದಿರುವವರ ಮಕ್ಕಳಿಗೆ ಕೋರ್ಸ್ ಶುಲ್ಕದಲ್ಲಿ ಶೇ.೨೫ ವಿನಾಯಿತಿ. ಕ್ರೀಡೆ ಮತ್ತು ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ಕೋರ್ಸ್ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದರು. ಸAಸ್ಥೆ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯ ಲಕ್ಷಿö್ಮÃ ಮುರಳೀಧರ್, ಕಾಲೇಜಿನ ಪರೀಕ್ಷಾ ನಿಯಂ ತ್ರಣಾಧಿಕಾರಿ ಆರ್.ಮಂಜುನಾಥ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರಮೇಶ್ ಹಾಗೂ ಸಂಸ್ಥೆ ಆಡಳಿತಾಧಿಕಾರಿ ಪ್ರೊ. ಪಿ.ಸರೋಜಮ್ಮ, ಖಜಾಂಚಿ ಎನ್.ವಿಜಯಕುಮಾರ್ ಹಾಗೂ ಅಡ್ವೆöÊಸರಿ ಕಮಿಟಿ ಮತ್ತು ಆಡಳಿತ ಮಂಡಳಿ ಸದಸ್ಯರು ಮತ್ತು ಶ್ರೀಮತಿ ಲಕ್ಷಿö್ಮÃಭೂಷಣ್ ಉಪಸ್ಥಿತರಿದ್ದರು. ಕಾಲೇಜಿನ ಶೈಕ್ಷ ಣ ಕ ಡೀನ್ ಡಾ. ಶ್ರೀಧರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯ ಅತಿಥಿಗಳನ್ನು ಪೂರ್ಣ ಕುಂಭದೊAದಿಗೆ ಸ್ವಾಗತಿಸಲಾಯಿತು. ಕು. ಅನನ್ಯ ಭುವನ್ ಮತ್ತು ತಂಡ ನಾಡಗೀತೆ ಹಾಡಿದರು. ಪೂಜಾ ಭಾಗವತ್ ಸ್ಮಾರಕ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ಸ್ವಾಗತಿಸಿ ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಆರ್. ಜಯ ಕುಮಾರಿ ವಂದಿಸಿದರು. ಅಧ್ಯಾಪಕರಾದ ಶ್ರೀಮತಿ ಗೀತಾ, ಸುನೀಲ್ ಮತ್ತು ಶ್ರೀಮತಿ ರಚನಾ ಕಾರ್ಯ ಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಅಧ್ಯಾಪ ಕರು, ಅಧ್ಯಾಪಕೇತರರು, ಪೋಷಕರು, ವಿದ್ಯಾರ್ಥಿ ಗಳು, ಎನ್‌ಎಸ್‌ಎಸ್, ಎನ್‌ಸಿಸಿ ಕೆಡೆಟ್‌ಗಳು, ಕಾಲೇಜಿನ ಸ್ವಯಂಸೇವಕ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರು ಹಾಗೂ ವಿಶೇಷ ಆಹ್ವಾನಿತರು ಹಾಜರಿದ್ದರು.
’ಪತ್ರಕರ್ತರಾಗಿ ಬರುವವರು ಸಾಹಿತ್ಯ, ಸಂಸ್ಕೃತಿ ಇತ್ಯಾದಿ ಓದಿಕೊಂಡಿರುವುದಿಲ್ಲ. ಇತ್ತೀಚೆಗಂತೂ ಬರುವ ಪತ್ರಕರ್ತರಿಗೆ ರಾಜಕೀಯ ಪರಿಜ್ಞಾನವೂ ಇರುವುದಿಲ್ಲ,’ ಎಂಬ ಮಾತುಗಳನ್ನು ಕೇಳುತ್ತಿದ್ದೇವೆ. ಪತ್ರಕರ್ತ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದ ಯುವಕನಿಗೆ ಪಂಪ, ರನ್ನ ಗೊತ್ತಿಲ್ಲ ಎಂಬ ದಿಗ್ಭ್ರಮೆಯನ್ನು ಸಂಪಾದಕರೊಬ್ಬರು ಬರೆದುಕೊಂಡಿದ್ದರು. ಅವರ ಪತ್ರಿಕೆಯೇ ಇತ್ತೀಚೆಗೆ ವರದಿಗಾರರು/ಉಪ ಸಂಪಾದಕರು ಬೇಕಾಗಿದ್ದಾರೆ ಎಂಬ ಜಾಹಿರಾತಿನಲ್ಲಿ ವಯಸ್ಸಿನ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಿದ್ದಾರೆ. ಈ ವಯಸ್ಸಿನಲ್ಲಿ ಬರುವ ಯುವಕರಿಗೆ ಪಂಪ, ರನ್ನ ಹೇಗೆ ಗೊತ್ತಾಗಲು ಸಾಧ್ಯ? ಅದೃಷ್ಟವಶಾತ್ ತೆಳ್ಳಗೆ, ಬೆಳ್ಳಗೆ ನೋಡಲು ಚೆಂದ ಇರಬೇಕು ಎಂದು ಹೇಳದಿರುವುದು ನಮ್ಮ ಪುಣ್ಯ ಎಂದೇ ಭಾವಿಸಬೇಕಾಗಿದೆ. ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ. ಅವರು ಆಯಾ ಎಡಿಷನ್‌ಗಳ ಫೇಜ್ ತುಂಬಿಸುತ್ತಾ ಹೋಗಬೇಕು. ಹೀಗೆ ನಿವ್ವಳ ಗುಡ್ಡೆ ಹಾಕುವ ಕೆಲಸಕ್ಕೆ ವರದಿಗಾರರು ಬೇಕಾಗಿದ್ದಾರೆ ಹೊರತು ಅವರು ಹೇಗೆ ಬರೆಯಬಲ್ಲರು? ಅವರಲ್ಲಿ ಒಳನೋಟ ಇರುವ ಬರವಣಿಗೆ ತೆಗೆಯಲು ಸಾಧ್ಯವೇ? ಅವರನ್ನು ಹೇಗೆ ಮಾನಿಟರ್ ಮಾಡಬೇಕು. ಸಿದ್ಧಗೊಳಿಸಬೇಕು ಎಂಬ ಕಳಕಳಿ ಈಗ ಯಾವ ಪತ್ರಿಕೆಯಲ್ಲೂ ಉಳಿದಿಲ್ಲ. ಉಪ ಸಂಪಾದಕರು/ ಜಿಲ್ಲಾ ವರದಿಗಾರರು ಕೂಡಾ ಸ್ಥಳೀಯ ಪೇಜು ತುಂಬಿಸುವವರಾಗಿಯೇ ಹೋಗಿದ್ದಾರೆ. ಬಿಡಿ ಸುದ್ದಿಗಾರರಂತೂ ಒಂದೆರಡು ಫೋಟೋ, ಎರಡುಮೂರು ಸುದ್ದಿ ಹಾಕಿ, ನಿಟ್ಟಿಸಿರು ಬಿಡುತ್ತಾರೆ. ಈ ಪೇಜ್ ನೋಡಿಕೊಳ್ಳುವ ಉಪ ಸಂಪಾದಕ ಮಹಾಶಯರು ಬೇಗನೇ ಪೇಜು ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿ ಬಣವಿ ತರಹ ಸುದ್ದಿಗಳನ್ನು ಜೋಡಿಸಿ, ಕೈ ತೊಳೆದು ಕೊಂಡು ಹೋಗಿ ಬಿಡುತ್ತಾರೆ. ಈ ಎಡಿಷನ್ ಹಾವಳಿಯಿಂದ ಈ ಸ್ಥಳೀಯ ಪೇಜ್‌ಗಳು ಎಷ್ಟು ಹಾಳಾಗಿವೆ ಎಂದರೆ ಅಲ್ಲಿ ಕಾಗುಣಿತ ದೋಷ ಸೇರಿದಂತೆ ಪತ್ರಿಕೆಗಳಿಗೆ ಇರುವ ತನ್ನದೇ ಆದ ಭಾಷೆಯೇ (ಸ್ಟೈಲ್‌ಷೀಟ್) ಮಾಯವಾಗಿ ಹೋಗಿರುತ್ತದೆ. ನಮ್ಮ ಬಳ್ಳಾರಿ ಜಿಲ್ಲೆಯ ಉದಾಹರಣೆಯನ್ನು ತೆಗೆದುಕೊಂಡರೆ ಪ್ರಜಾವಾಣಿ ಎರಡು ಪುಟಗಳನ್ನು ಬಳ್ಳಾರಿ ಜಿಲ್ಲೆಗೆ ಮೀಸಲಿಟ್ಟಿದೆ (2-3ನೇ ಪೇಜ್‌ಗಗಳು). ಜಾಹಿರಾತು ಹೆಚ್ಚಾದರೆ ಮತ್ತೇ ಎರಡು ಪೇಜ್‌ಗಳನ್ನು ಹೆಚ್ಚಿಗೆ ಕೊಡುತ್ತದೆ. ವಿಜಯ ಕರ್ನಾಟಕದ್ದಂತೂ ಇನ್ನೂ ವಿಚಿತ್ರ. ಯಾವ ಪುಟದಲ್ಲಿ ಯಾವುದು ಲೋಕಲ್, ಯಾವುದು ಸ್ಟೇಟ್ ನ್ಯೂಸ್ ಎಂದು ಗೊತ್ತಾಗದಷ್ಟು ಮಿಕ್ಸ್ ಮಾಡಿ ಹಾಕಲಾಗಿರುತ್ತೆ. ಕೆಲವೊಮ್ಮೆ ಮುಖ ಪುಟದಲ್ಲಿ ಬಂದಿರುವ ಸುದ್ದಿ ಇನ್ನೊಂದು ಎಡಿಷನ್‌ನಲ್ಲಿ ಮಂಗಮಾಯ ಆಗಿರುತ್ತದೆ. ಕನ್ನಡಪ್ರಭ, ಉದಯವಾಣಿಯದು ಕೂಡಾ ಇದೇ ಕಥೆ. ಗಣಿಗಾರಿಕೆಯ ಉಬ್ಬರ ಇರುವಾಗ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿತವಾದ ಅನೇಕ ಅಂಶಗಳನ್ನು ಬಿಡಿ ಸುದ್ದಿಗಾರರು ಬರೆದಿದ್ದಾರೆ. ಈ ಸುದ್ದಿಗಳು ಬಂದಿವೆ ಕೂಡಾ. ರಾಜ್ಯಮಟ್ಟದ ಸುದ್ದಿಯನ್ನಾಗಿ ಮಾಡಬಹುದಾದ ಗಮನ ಸೆಳೆಯುವ ಸುದ್ದಿಗಳೇ ಅವು. ಬರೆಯುವ ಶೈಲಿಯಲ್ಲಿ ಹೆಚ್ಚುಕಡಿಮೆ ಇರಬಹುದು. ಡೆಸ್ಕ್‌ನಲ್ಲಿ ಇರುವ ಉಪ ಸಂಪಾದಕರು ಅದರ ಮಹತ್ವ ನೋಡಿ, ಪುನಃ ಬರೆಸಿ, ಅದನ್ನು ರಾಜ್ಯ ಸುದ್ದಿಯನ್ನಾಗಿ ಮಾಡಬೇಕಿತ್ತು. ಆದರೆ ಪೇಜ್ ತುಂಬಿಸುವ ಧಾವಂತ, ಬಿಡಿ ಸುದ್ದಿಗಾರರ ಬಗ್ಗೆ ಇರುವ ಉಪೇಕ್ಷೆ ಎಲ್ಲವೂ ಸ್ಥಳೀಯ ಪೇಜ್‌ಗಳಲ್ಲಿ ಬಂದು ಅಂತಹ ಸುದ್ದಿಗಳು ಕಳೆದು ಹೋಗಿ ಬಿಡುತ್ತವೆ. ಎಷ್ಟು ಸುದ್ದಿಗಳು ಹೀಗೆ ಕಳೆದು ಹೋಗಿವೆ? ರಾಜ್ಯಮಟ್ಟದ ಸುದ್ದಿಗಳಿಗಾಗಿ ಎಷ್ಟು ಪೇಜ್‌ಗಳನ್ನು ಮೀಸಲಿಟ್ಟಿವೆ. ಯಾವುದು ರಾಜ್ಯದ ಸುದ್ದಿ? ಇದು ಒಂದು ಪ್ರಶ್ನೆಯಾದರೆ ಮತ್ತೊಂದು ಅಂಕಣಕೋರರ ಹಾವಳಿ. ಪ್ರಜಾವಾಣಿಯನ್ನು ಹೊರತು ಪಡೆಸಿ, ಉಳಿದ ದಿನ ಪತ್ರಿಕೆಗಳನ್ನು ನೋಡಿ ಅಲ್ಲಿ ಮುಕ್ಕಾಲು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದು ಈ ಅಂಕಣಕಾರರೇ ಸಾಗುವಳಿ ಮಾಡುತ್ತಿರುತ್ತಾರೆ. ಈ ಅಂಕಣಕೋರರ ಹಾವಳಿಯಿಂದಾಗಿ ಜಿಲ್ಲಾ ವರದಿಗಾರರು, ಉಪ ಸಂಪಾದಕರು ಕೂಡಾ ಏನೂ ಬರೆಯದ ಸ್ಥಿತಿ ನಿರ್ಮಾಣವಾಗಿದೆ. ಇರುವ ಸ್ಥಳೀಯ ಪೇಜ್‌ಗಳಲ್ಲಿಯೇ ಅವರು ಕೃಷಿ ಮಾಡಲಾರಂಭಿಸುತ್ತಾರೆ. ಬೈಲೈನ್ ಹಾಕಿಕೊಂಡು ಚರಂಡಿ, ಟ್ರಾಫಿಕ್, ಹಂದಿಗಳ ಹಾವಳಿ ಎಂದೆಲ್ಲಾ ಬರೆದುಕೊಳ್ಳುತ್ತಾರೆ. ಅಂಕಣಕೋರನೊಬ್ಬ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದು ಕೇಳಿ, ಅಯ್ಯೋ ಎಲ್ಲಿಗೆ ಬಂತು ಜರ್ನಲಿಸಂ ಪ್ರತಾಪ ಅಂತಾ ಲೊಚಗುಡುವುದು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯ? ಹೀಗೆ ಪ್ರಶ್ನೆಗಳು ಸಾಕಷ್ಟು ಎದ್ದು ಬರುತ್ತವೆ. ಒಡನೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬುದು ಸಹ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ. This entry was posted in ಪರಶುರಾಮ್ ಕಲಾಲ್, ಮಾಧ್ಯಮ, ಸಾಮಾಜಿಕ and tagged ಅಂಕಣಕಾರರು, ಉದಯವಾಣಿ, ಕನ್ನಡಪ್ರಭ, ದಿನಪತ್ರಿಕೆ, ಪತ್ರಕರ್ತ, ಪ್ರಜಾವಾಣಿ, ವರದಿಗಾರರು, ವಿಜಯಕರ್ನಾಟಕ, ಸಂಯುಕ್ತಕರ್ನಾಟಕ, ಸುದ್ದಿ on November 5, 2011 by admin.
ಮೊದಲನೆಯದಾಗಿ ಮೇಷ ರಾಶಿ. ಮೇಷ ರಾಶಿಯವರಿಗೆ ಈ ದಿನದಂದು ನಿಮ್ಮ ವೈವಾಹಿಕ ಜೀವನದಲ್ಲಿ ಮಧುರತೆ ಇರುತ್ತದೆ. ನೀವು ಕುಟುಂಬ ಅಥವಾ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಹೊಂದಿರುತ್ತೀರಿ. ಇದರೊಂದಿಗೆ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸೌಲಭ್ಯ ದೊರೆಯಲಿದ್ದು ಬಂಧು-ಮಿತ್ರರನ್ನು ಭೇಟಿಯಾಗುವ ಅವಕಾಶವೂ ದೊರೆಯಲಿದೆ. ಆರ್ಥಿಕವಾಗಿ ನಿಮ್ಮ ಸ್ಥಾನವು ತೃಪ್ತಿಕರ ವಾಗಿರುತ್ತದೆ. ವೃಷಭ ರಾಶಿ: ವೃಷಭ ರಾಶಿಯವರಿಗೆ ಈ ದಿನದಂದು ಮಕ್ಕಳ ಸಹಾಯವು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ದೇವರ ಜ್ಞಾನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಶೈಕ್ಷಣಿಕ ರಂಗದಲ್ಲಿ ನಿರಂತರ ಪ್ರಯತ್ನ ದಿಂದಾಗಿ ನೀವು ಕೆಲವು ವಿಶೇಷ ವ್ಯಕ್ತಿಗಳ ಮಾರ್ಗದರ್ಶನವನ್ನು ಪಡೆಯುತ್ತೀರಿ. ಮತ್ತು ನಿಮ್ಮ ಕುಟುಂಬ ದಿಂದ ಕೆಲವು ಸಂತೋಷದ ಸುದ್ದಿಗಳನ್ನು ಪಡೆಯಲಿದ್ದೀರಿ. ಮಿಥುನ ರಾಶಿ ಈ ದಿನ ನಿಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ. ಆಯೋಜನೆಯ ಯೋಜಿಸಲು ಪಡುತ್ತದೆ. ಆದ್ದರಿಂದ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಕೋಪವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡದಿದ್ದರೆ ನೀವು ಒಳ್ಳೆಯ ದಿನವನ್ನು ಹೊಂದಿರುತ್ತೀರಿ. ಕರ್ಕಾಟಕ ರಾಶಿ ಈ ದಿನ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ನೀವು ಇತರರೊಂದಿಗೆ ಸೌಹಾರ್ದತೆಯ ನಡುವಳಿಕೆಯನ್ನು ನಡೆಯುತ್ತಿರುತ್ತದೆ. ಅಲ್ಲದೆ ವಿದೇಶ ಪ್ರವಾಸವನ್ನು ಆರಂಭಿಸುವಿರಿ. ಕೆಲಸದ ನಿಮಿತ ದೂರದ ಪ್ರಯಾಣ ಸಾಧ್ಯ. ಹಣವನ್ನು ಹೂಡಿಕೆ ಮಾಡಲು ನಿಮ್ಮ ದಿನವು ಪರಿಪೂರ್ಣವಾಗಿರುತ್ತದೆ. ಇದರ ಹೊರತಾಗಿ ನೀವು ಹಣವನ್ನು ಪಾಲಿಸಿ ಮತ್ತು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಸಿಂಹ ರಾಶಿ ಸಿಂಹ ರಾಶಿಯವರು ಈ ದಿನ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ಮಾನಸಿಕ ಆಲಸ್ಯವು ಕೊನೆಗೊಳ್ಳುತ್ತದೆ. ಕನ್ಯಾ ರಾಶಿ ಈ ದಿನ ನಿಮ್ಮ ವ್ಯಾಪಾರದಲ್ಲಿ ಲಾಭಗಳು ಪಡೆಯುವ ಸಾಧ್ಯತೆಗಳು ಇವೆ ಆರೋಗ್ಯವು ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ತುಲಾ ರಾಶಿ ತುಲಾ ರಾಶಿಯವರಿಗೆ ಈ ದಿನದಂದು ನೀವು ಮನೆಯಿಂದ ಹೊರಗೆ ಸುತ್ತಾಡು ವಿರಿ. ಇದು ನಿಮಗೆ ತುಂಬಾ ಮನರಂಜನೆ ನೀಡುತ್ತದೆ. ಕಾರ್ಯದಲ್ಲಿ ನಿಮಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ. ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರಿಗೆ ಈ ದಿನ ವಿದ್ಯಾರ್ಥಿಗಳು ಅಧ್ಯಾಯದಲ್ಲಿ ಉತ್ತಮ ಸಾಧನೆಯನ್ನು ಮಾಡುವರು. ಯಾರಿಗೂ ಸಾಲವನ್ನು ನೀಡುವುದನ್ನು ತಪ್ಪಿಸಿ. ನಿಮ್ಮ ಜೀವನವೂ ವ್ಯಾಪಾರ ಮತ್ತು ಹಣಕ್ಕಾಗಿ ಶ್ರಮಿಸುತ್ತಿದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇರುತ್ತದೆ. ಧನಸ್ಸು ರಾಶಿ ಧನಸ್ಸು ರಾಶಿಯವರಿಗೆ ಈ ದಿನ ಕೆಲಸದ ಕ್ಷೇತ್ರದಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ನಿಮ್ಮ ವಿರುದ್ಧ ಯಾವುದೇ ಸತ್ಯ ಅಥವಾ ಸುಳ್ಳು ಆರೋಪ ಬಂದರೂ ಕೂಡ ಮಾಡಬಹುದು. ಅಲ್ಲದೆ ನೀವು ಚರ್ಚೆಗಳಿಂದ ದೂರ ಇರುವುದು ಸೂಕ್ತ. ಮಕರ ರಾಶಿ ಮಕರ ರಾಶಿಯವರಿಗೆ ಈ ದಿನ ನೀವು ಉತ್ತಮ ಪ್ರಶಸ್ತಿಯೊಂದಿಗೆ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಪೋಷಕರ ವಾತ್ಸಲ್ಯವನ್ನು ಪಡೆಯುತ್ತೀರಿ. ಕುಂಭ ರಾಶಿಯವರಿಗೆ ಅದೃಷ್ಟ ನಿಮ್ಮ ಜೊತೆಗಿದೆ. ಕುಟುಂಬದ ಕಡೆಯಿಂದ ಸಂತೋಷದ ಸಂದರ್ಭಗಳು ಉಳಿಯುತ್ತವೆ. ಮೀನ ರಾಶಿ ಮೀನ ರಾಶಿಯವರಿಗೆ ಈ ದಿನ ಅದೃಷ್ಟವು ನಿಮ್ಮ ಪ್ರತಿಭೆಯೊಂದಿಗೆ ಜಾಗೃತಗೊಳ್ಳುತ್ತದೆ. ಮತ್ತು ನೀವು ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಪ್ರೇಮ ಸಂಬಂಧಗಳಲ್ಲಿ ಸೂಕ್ಷ್ಮತೆಯನ್ನು ಕಾಣಬಹುದು. ಆದ್ದರಿಂದ ನೀವು ಚಿಂತನಶೀಲ ವಾಗಿ ಮಾತನಾಡಬೇಕು. ನಿಮ್ಮ ಸಂಗಾತಿಯೊಂದಿಗೆ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳಿ. ಶ್ರೀ ರಾಘವೇಂದ್ರ ಸ್ವಾಮಿಗಳು ಅರ್ಚಕ ಮನೆತನದವರು ಹಾಗೂ ಪ್ರಧಾನ ಗುರುಗಳು ಮೊಬೈಲ್ ಸಂಖ್ಯೆ 9538866755 ಇವರು ದುರ್ಗಾ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಅನಾರೋಗ್ಯ ಸಂಬಂಧಿಸಿದ ಸಮಸ್ಯೆಗಳು ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಂಜನಾ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕೂಡಲೇ ಕರೆ ಮಾಡಿ 9538866755. Share this: Twitter Facebook Like this: Like Loading... Continue Reading Previous ಇಡೀ ವಿಶ್ವ ಚಿತ್ರರಂಗ ಕಂಡ ಸುಪ್ರಸಿದ್ಧ ದಕ್ಷಿಣ ಭಾರತದ ಈ ನಿರ್ದೇಶಕನ ಮೇಲೆ ಬಾಲಿವುಡ್ ಬೆಡಗಿ ಕೆಂಡಕಾರಿದ್ದಾರೆ..! Next ರೀಲ್ ಬದುಕಿಗಿಂತ ರಿಯಲ್ ಆಗಿ ಹೀರೋ ಆಗೇ ಬದುಕು ನಡೆಸುತ್ತೇನೆ ಎಂದು ನಟನೆಗೆ ಗುಡ್ ಬೈ ಹೇಳಿ ಸೈನ್ಯಕ್ಕೆ ಸೇರಿದ ಖ್ಯಾತ ನಟಿ.. ಇವರೇ ನೋಡಿ
ಟ್ವಿಟರ್, ಗೂಗಲ್‌ನ ಉದ್ಯೋಗ ಕಡಿತದ ಬೆನ್ನಲ್ಲೇ ಈಗ ‘ಪರ್ಸನಲ್ ಕಂಪ್ಯೂಟರ್’ ಮತ್ತು 'ಲ್ಯಾಪ್‌ಟಾಪ್‌'ಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ 2025ರ ಅಂತ್ಯದ ವೇಳೆಗೆ 6,000ಕ್ಕೂ ಹೆಚ್ಚು ಉದ್ಯೋಗ ಕಡಿತಗೊಳಿಸಲು 'ಹೆವ್ಲೆಟ್ ಪ್ಯಾಕರ್ಡ್' (ಎಚ್‌ಪಿ) ಕಂಪನಿ ಮುಂದಾಗಿದೆ. ಕಡಿತಗೊಳ್ಳಲಿರುವ ಉದ್ಯೋಗ ಸಂಖ್ಯೆ ಸಂಸ್ಥೆಯ ಜಾಗತಿಕ ಉದ್ಯೋಗಿಗಳ ಪೈಕಿ ಸರಿಸುಮಾರು ಶೇ.12ರಷ್ಟಾಗುತ್ತದೆ ಎಂದು ಕಂಪ್ಯೂಟರ್ ತಯಾರಿಕಾ ಸಂಸ್ಥೆ ಮಂಗಳವಾರ (ನ. 22) ತಿಳಿಸಿದೆ. “ಪ್ರಸ್ತುತ ಎಚ್‌ಪಿ ಕಂಪನಿಯಲ್ಲಿ ಸುಮಾರು 61,000 ಉದ್ಯೋಗಿಗಳಿದ್ದು, ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ 2025ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಶೇ.10ರಷ್ಟು ಉದ್ಯೋಗ ಕಡಿತ ಮಾಡಲಾಗುವುದು” ಎಂದು ಕಂಪನಿ ತಿಳಿಸಿದೆ. ತನ್ನ ಉತ್ಪನ್ನಗಳಿಗೆ ಉದ್ಯಮ ಮತ್ತು ಗ್ರಾಹಕರಿಂದ ಬೇಡಿಕೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸುತ್ತಿರುವ ಎಚ್‌ಪಿ ಮೊದಲ ತ್ರೈಮಾಸಿಕದಲ್ಲಿ ಕಡಿಮೆ ಲಾಭವನ್ನು ಅಂದಾಜಿಸಿದೆ. “2022ನೇ ಆರ್ಥಿಕ ವರ್ಷದಲ್ಲಿ ನಾವು ಎದುರಿಸಿದ ಅನೇಕ ಸವಾಲುಗಳು 2023ರಲ್ಲೂ ಮುಂದುವರಿಯಲಿವೆ” ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮೇರಿ ಮೈಯರ್ಸ್ ಹೇಳಿದ್ದಾರೆ. “ಉದ್ಯೋಗ ಕಡಿತದ ಜೊತೆಗೆ ತಂತ್ರಜ್ಞಾನ ವೆಚ್ಚವನ್ನು ಕೂಡ ಕಡಿತಗೊಳಿಸಲಾಗುವುದು. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ” ಎಂದು ಎಚ್‌ಪಿ ಸಿಇಒ ಎನ್ರಿಕ್ ಲೋರೆಸ್ ಹೇಳಿದ್ದಾರೆ. ಕಂಪನಿಯು ಸುಮಾರು 1 ಬಿಲಿಯನ್ ಡಾಲರ್ ಕಾರ್ಮಿಕ ವೆಚ್ಚ ಉಳಿಸಲು ಮುಂದಾಗಿದ್ದು, ಇದರಲ್ಲಿ ಕಾರ್ಮಿಕೇತರ ಮತ್ತು ಪುನರ್‍‌ರಚನೆ ಮತ್ತು ಇತರ ವೆಚ್ಚಗಳು ಕೂಡ ಸೇರಿವೆ. 2023ರಲ್ಲಿ 600 ಮಿಲಿಯನ್ ಡಾಲರ್‍‌ ಹಾಗೂ ಉಳಿದಿದ್ದನ್ನು ಮುಂದಿನ ವರ್ಷಗಳಲ್ಲಿ ಉಳಿಸುವ ನಿರೀಕ್ಷೆಯಿದೆ. ಇಂಟೆಲ್‌ನಲ್ಲೂ ಉದ್ಯೋಗ ಕಡಿತ? ಪರ್ಸನಲ್ ಕಂಪ್ಯೂಟರ್‍‌ಗೆ ಬೇಡಿಕೆ ಕುಸಿದಿರುವುದು 'ಇಂಟೆಲ್ ಕಾರ್ಪ್' ಮೇಲೆ ಕೂಡ ಪರಿಣಾಮ ಬೀರಿದೆ. ಇಂಟೆಲ್ ಕೂಡ ಮುಂದಿನ ದಿನಗಳಲ್ಲಿ ಉದ್ಯೋಗ ಕಡಿತಗೊಳಿಸಲು ಯೋಜಿಸುತ್ತಿದೆ. ಇಂಟೆಲ್ ಈ ವರ್ಷದ ಜುಲೈ ವೇಳೆಗೆ 1,13,700 ಉದ್ಯೋಗಿಗಳನ್ನು ಹೊಂದಿದ್ದು, ಸಾವಿರಾರು ನೌಕರರನ್ನು ಮನೆಗೆ ಕಳುಹಿಸಲು ಕಂಪನಿ ಯೋಜಿಸಿದೆ. ಕಂಪನಿಯು ಮಾರಾಟ ಮತ್ತು ಮಾರುಕಟ್ಟೆ ಸೇರಿದಂತೆ ಕೆಲವು ವಿಭಾಗಗಳಲ್ಲಿ ಸುಮಾರು ಶೇ. 20ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಬಹುದು. ಕಂಪನಿಯ ‘ಪಿಸಿ ಪ್ರೊಸೆಸರ್’ಗಳ ಬೇಡಿಕೆಯು ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದು ಇಂಟೆಲ್‌ನ ಮುಖ್ಯ ವ್ಯವಹಾರವಾಗಿದ್ದು, ಈ ವಲಯದ ಬೇಡಿಕೆ ಕುಸಿತ ಕಂಪನಿಗೆ ದೊಡ್ಡ ಸವಾಲಾಗಿದೆ. ‘ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಇಂಕ್‌'ನಂತಹ ಪ್ರತಿಸ್ಪರ್ಧಿಗಳಿಗೆ ತನ್ನ ಮಾರುಕಟ್ಟೆ ಪಾಲನ್ನು ಬಿಟ್ಟುಕೊಟ್ಟಿರುವ ಇಂಟೆಲ್ ಇದೀಗ ಇದನ್ನು ಗಳಿಸಲು ಶತ ಪ್ರಯತ್ನ ನಡೆಸುತ್ತಿದೆ. ಜುಲೈನಲ್ಲಿ ಇಂಟೆಲ್, 2022ರಲ್ಲಿನ ತನ್ನ ಮಾರಾಟವು ನಿರೀಕ್ಷಿಸಿದ್ದಕ್ಕಿಂತ ಸರಿಸುಮಾರು 11 ಬಿಲಿಯನ್ ಡಾಲರ್ ಕಡಿಮೆಯಾಗಲಿದೆ ಎಂದು ಎಚ್ಚರಿಸಿತ್ತು. ಈ ಸುದ್ದಿ ಓದಿದ್ದೀರಾ? ಟ್ವಿಟರ್‌- ಮೆಟಾ ನಂತರ ಗೂಗಲ್‌ ಸರದಿ; 10 ಸಾವಿರ ಮಂದಿ ವಜಾಗೆ ಸಿದ್ಧತೆ ಕಳೆದ ಒಂದು ತಿಂಗಳಲ್ಲೇ ಟ್ವಿಟರ್, ಅಮೆಜಾನ್, ಸಿಸ್ಕೊ ಸೇರಿದಂತೆ ಅನೇಕ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಉದ್ಯೋಗಿಗಳನ್ನು ಬಲವಂತವಾಗಿ ಕೆಲಸದಿಂದ ವಜಾಗೊಳಿಸಿದ ಆರೋಪದ ಮೇರೆಗೆ ಅಮೆಜಾನ್ ಇಂಡಿಯಾಗೆ ಕಾರ್ಮಿಕ ಆಯುಕ್ತರು ಸಮನ್ಸ್ ಜಾರಿಗೊಳಿಸಿದ್ದಾರೆ. ಅಧಿಕಾರಿಗಳು ಬುಧವಾರ ಬೆಂಗಳೂರಿನ ಉಪ ಮುಖ್ಯ ಕಾರ್ಮಿಕ ಆಯುಕ್ತರ ಎದುರು ಹಾಜರಿರಬೇಕು ಎಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.
ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಯ ಪ್ರಥಮ ಟ್ರಿಪ್‌ನ ಪರಿಶೀಲನೆ ಸಭೆ ನಡೆಸಿದ ಮುಜರಾಯಿ, ಹಜ್‌ ಮತ್ತು ವಕ್ಪ್‌ ಸಚಿವೆ ಶಶಿಕಲಾ ಜೊಲ್ಲೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದ ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಪ್ರವಾಸಕ್ಕೆ ಎರಡು ತಿಂಗಳ ಬ್ರೇಕ್ ನೀಡಲಾಗುತ್ತಿದೆ. ಉತ್ತರ ಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಡಿಸೆಂಬರ್‌ ತಿಂಗಳ ಬದಲಾಗಿ ಜನವರಿ ತಿಂಗಳಿನಲ್ಲಿ ಮುಂದಿನ ಟ್ರಿಪ್‌ಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಪ್‌ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಯ ಪ್ರಥಮ ಟ್ರಿಪ್‌ನ ಪರಿಶೀಲನೆ ಸಭೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ತಿಂಗಳಲ್ಲಿ ಮೂರನೇ ಟ್ರಿಪ್‌ ಆರಂಭಿಸಲಾಗುತ್ತದೆ ಎಂದರು. ಉತ್ತರ ಭಾರತದಲ್ಲಿ ಡಿಸೆಂಬರ್‌ ಮತ್ತು ಜನವರಿ ತಿಂಗಳ ಆರಂಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುತ್ತದೆ. ಡಿಸೆಂಬರ್‌ 5 ರ ನಂತರ ಉಷ್ಣಾಂಶವು ರಾತ್ರಿಯ ಹೊತ್ತು 5 ಡಿಗ್ರಿ ಸೆಲ್ಸಿಯಸ್‌ ಗೆ ತಲುಪುತ್ತದೆ. ಜನವರಿ ತಿಂಗಳಲ್ಲಿ ಕಾಶಿ ದರ್ಶನ: ಇಷ್ಟು ತೀವ್ರ ಚಳಿಯನ್ನು ದಕ್ಷಿಣ ಭಾರತದ ಜನರು ತಡೆದುಕೊಳ್ಳುವುದು ಬಹಳ ಕಷ್ಟ. ಹಾಗೂ ಐಆರ್‌ಸಿಟಿಸಿ ಉತ್ತರ ಭಾರತದ ಕಡೆಯ ತನ್ನ ಎಲ್ಲ ಪ್ರವಾಸಿ ರೈಲುಗಳನ್ನ ದಕ್ಷಿಣ ಮತ್ತು ಪಶ್ಚಿಮ ಭಾರತದ ಕಡೆಗೆ ಮಾರ್ಪಾಡು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕಾಶಿ ದರ್ಶನ ರೈಲನ್ನು ಡಿಸೆಂಬರ್‌ ಬದಲಾಗಿ ಜನವರಿ ತಿಂಗಳಲ್ಲಿ ಯೋಜಿಸುವಂತೆ ಐಆರ್‌ಸಿಟಿಸಿ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ. ನಮ್ಮ ಯಾತ್ರಾರ್ಥಿಗಳಲ್ಲಿ ಹೆಚ್ಚಿನ ಜನರು ಹಿರಿಯ ನಾಗರೀಕರಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ಜನವರಿ ತಿಂಗಳ 20 ರ ನಂತರ 3 ನೇ ಟ್ರಿಪ್‌ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು. ಕಾಶಿ ದರ್ಶನ ಶೇಕಡಾ 90 ರಷ್ಟು ಹಿರಿಯ ನಾಗರಿಕರು: ಕಾಶಿ ದರ್ಶನ ರೈಲು ಯಾತ್ರೆಯ ಎರಡೂ ಟ್ರಿಪ್‌ಗಳಲ್ಲಿ ಶೇಕಡಾ 90 ರಷ್ಟು ಹಿರಿಯ ನಾಗರಿಕರು ಪಾಲ್ಗೊಂಡಿದ್ದಾರೆ. ಹಲವಾರು ಕುಟುಂಬಗಳು ತಮ್ಮ ಪೋಷಕರನ್ನ ಈ ಕಾಶಿಯಾತ್ರೆಗೆ ಕಳುಹಿಸುತ್ತಿದ್ದಾರೆ. ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಈ ಯಾತ್ರೆಯ ಅನುಕೂಲವನ್ನು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ಸಚಿವರು ತಿಳಿಸಿದರು. ಕಾಶಿ ಯಾತ್ರೆಗೆ ಪ್ರತ್ಯೇಕ ಅನುದಾನ:ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ಸಹಾಯಧನ ಹಾಗೂ ರೈಲು ಯಾತ್ರೆಗೆ ಪ್ರತ್ಯೇಕ ಅನುದಾನವಿದೆ. ಯಾವುದೇ ಇನ್ನಿತರ ಯೋಜನೆಗಳ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿಲ್ಲ. ಕಾಶಿ ಯಾತ್ರೆಗೆ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ರೈಲು ಯಾತ್ರೆ ಯಾವುದೇ ತೊಂದರೆ ಇಲ್ಲದೇ ಮುಂದುವರೆಯಲಿದೆ ಎಂದು ಸಚಿವರ ತಿಳಿಸಿದರು. ಚಾರ್‌ಧಾಮ್‌ ಮತ್ತು ಮಾನಸ ಸರೋವರ ಯಾತ್ರಾರ್ಥಿಗಳ ಸಹಾಯಧನಕ್ಕೆ ಅರ್ಜಿ: ಚಾರ್‌ಧಾಮ್‌ ಯಾತ್ರೆ ಇತ್ತೀಚಿಗೆ ಮುಗಿದಿದ್ದು, ನಮ್ಮ ಇಲಾಖೆಯ ಕಾಲಾವಧಿಯಂತೆಯೇ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಯಾವಾಗಲೂ ನವೆಂಬರ್‌ ತಿಂಗಳಲ್ಲಿ ಪ್ರಾರಂಭವಾಗಿ, ಏಪ್ರಿಲ್‌ ತಿಂಗಳವರೆಗೆ ನಡೆಯುತ್ತದೆ. ಈ ಯೋಜನೆಗೂ ಸರಕಾರದ ಸಹಾಯಧನವಿದ್ದು, ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಚಾರ್‌ಧಾಮ್‌ ಯಾತ್ರೆ ಇತ್ತೀಚಿಗೆ ಮುಗಿದಿರುವ ಹಿನ್ನಲೆಯಲ್ಲಿ ಅರ್ಜಿಗಳನ್ನು ಅಹ್ವಾನಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಎರಡನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ ಸಚಿವರಿಂದ ಆತ್ಮೀಯ ಬೀಳ್ಕೊಡುಗೆ:ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ಯೋಜನೆಯ ಎರಡನೇ ಟ್ರಿಪ್‌ ಇಂದಿನಿಂದ ಪ್ರಾರಂಭವಾಯಿತು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟ ಯಾತ್ರಾರ್ಥಿಗಳಿಗೆ ಮಾನ್ಯ ಸಚಿವರ ನೇತೃತ್ವದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾ ಅನುರಾಧ ಶುಭ ಹಾರೈಸಿ ಬೀಳ್ಕೊಡುಗೆ ನೀಡಿದರು. ಇಂತಹ ಕಾರ್ಯಕ್ರಮದ ಮೂಲಕ ರಾಜ್ಯ ಸರಕಾರ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಅತಿಥಿಗಳು ಹರ್ಷ ವ್ಯಕ್ತಪಡಿಸಿದರು.
ಸಮಾಜದ ಶಾಂತಿ ಹಾಳು ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮೇಲೂ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಪಿಎಫ್ಐ ಸಂಘಟನೆ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ, "ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಪಿಎಫ್ಐನಂತೆಯೇ ಆರ್‌ಎಸ್‌ಎಸ್‌ನವರೂ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ. ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಸಂಸ್ಥೆಗಳು ಹಿಂದು,‌ ಮುಸ್ಲಿಮ್ ಯಾರದ್ದೇ ಆಗಿರಲಿ ಮುಲಾಜಿಲ್ಲದೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತಲೇ ಬಂದಿದ್ದನ್ನು ಪುನರುಚ್ಚರಿಸುತ್ತೇನೆ. ಜಾತಿ, ಧರ್ಮಗಳ ಆಧಾರದ ಪಕ್ಷಪಾತ, ಪೂರ್ವಗ್ರಹಗಳಿಂದ ಸರ್ಕಾರ ವರ್ತಿಸಬಾರದು ಎನ್ನುವುದಷ್ಟೇ ನನ್ನ ಸಲಹೆ.#PFIBan — Siddaramaiah (@siddaramaiah) September 28, 2022 "ಸಮಾಜಕ್ಕೆ ಕಂಟಕವಾಗಿರುವವರು ಯಾರೇ ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸಾಮರಸ್ಯ ಹಾಳು ಮಾಡುತ್ತಿರುವವರ ಮೇಲೆ ಯಾವಾಗ ಕ್ರಮ ಕೈಗೊಂಡರೂ ಉತ್ತಮವೇ. ಈ ಮಾತನ್ನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಸುದ್ದಿ ಓದಿದ್ದೀರಾ? : ಪಿಎಫ್‌ಐ ನಿಷೇಧ | ವಿಧ್ವಂಸಕ ಕೃತ್ಯಗಳಿಗೆ ದೇಶದಲ್ಲಿ ಅವಕಾಶವಿಲ್ಲ: ಸಿಎಂ ಬೊಮ್ಮಾಯಿ "ನಾವು ನುಡಿದಂತೆ ನಡೆದಿದ್ದೇವೆ ಎನ್ನುವ ಬಿಜೆಪಿಗರು, ಇಷ್ಟು ದಿನ ಬ್ಯಾನ್ ಮಾಡುವ ಕ್ರಮವನ್ನೇಕೆ ತೆಗೆದುಕೊಂಡಿರಲಿಲ್ಲ" ಎಂದು ಅವರು ಕಿಡಿಕಾರಿದ್ದಾರೆ.
ದೇಶದ್ರೋಹ ಕಾನೂನಿನ ರದ್ದತಿಗೆ ಮಾಜಿ ಪ್ರಧಾನಿ ನೆಹರೂ ಹೇಗೆ ಪ್ರಯತ್ನ ಮಾಡಿದ್ದರು ಎಂಬುದಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಿವರಿಸಿದಾಗ ಸಾಲಿಸಿಟರ್‌ ಜನರಲ್‌ ಅವರು ಪ್ರತಿಕ್ರಿಯಿಸಿದರು. Pandit Jawaharlal Nehru (Centre), Kapil Sibal (Left) and SG Tushar Mehta (Right) Bar & Bench Published on : 11 May, 2022, 6:25 am “ನಾವು ಸಂವಿಧಾನೋತ್ತರ ಕಾಲದಲ್ಲಿದ್ದೇವೆ. ದೇಶದ್ರೋಹ ನಿಬಂಧನೆಯು ಆಕ್ಷೇಪಣೀಯವಾಗಿದ್ದು, ಇದರಿಂದ ನಾವು ಆದಷ್ಟು ಬೇಗ ಹೊರಬರಬೇಕು ಎಂದು ಪಂಡಿತ್‌ ಜವಹರಲಾಲ್‌ ನೆಹರೂ ಹೇಳಿದ್ದರು” ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಹೇಳಿದರು. ಭಾರತೀಯ ದಂಡ ಸಂಹಿತೆ ಸೆಕ್ಷನ್‌ 124ಎ ಅಡಿ ದೇಶದ್ರೋಹವನ್ನು ಅಪರಾಧೀಕರಿಸುವ ಸಿಂಧುತ್ವವನ್ನು ಪ್ರಶ್ನಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು. ಸಿಬಲ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಹಾಲಿ ಕೇಂದ್ರ ಸರ್ಕಾರವು ದೇಶದ್ರೋಹ ಅಪರಾಧೀಕರಿಸುವುದನ್ನು ನಿರ್ಬಂಧಿಸಲು ಕಾರ್ಯಪ್ರವೃತ್ತವಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಕಳಕಳಿ ಹೊಂದಿದ್ದು, ಐಪಿಸಿ ಸೆಕ್ಷನ್‌ 124ಎ ಅನ್ನು ಪುನರ್‌ಪರಿಶೀಲಿಸಲು ಕೇಂದ್ರ ಸರ್ಕಾರದ ನಿರ್ಧರಿಸಿದೆ ಎಂಬುದನ್ನು ಉಲ್ಲೇಖಿಸಿದರು. “ನೆಹರೂ ಅವರಿಂದ ಏನನ್ನು ಮಾಡಲಾಗಲಿಲ್ಲವೋ ಅದನ್ನು ಹಾಲಿ ಕೇಂದ್ರ ಸರ್ಕಾರ ಮಾಡುತ್ತಿದೆ. ಆಗ ಪಂಡಿತ್‌ ನೆಹರೂ ಅವರು ಏನನ್ನು ಮಾಡಲಾಗಲಿಲ್ಲವೋ ಅದನ್ನು ನಾವು ಈಗ ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಮೆಹ್ತಾ ಹೇಳಿದರು. ಇದಕ್ಕೆ ಸಿಬಲ್‌ ಅವರು “ಇಲ್ಲವೇ ಇಲ್ಲ. ನೀವು ಅದನ್ನು ಮಾಡುತ್ತಿಲ್ಲ. ದೇಶದ್ರೋಹ ಕಾನೂನನ್ನು ನೀವು ಬೆಂಬಲಿಸುತ್ತಿದ್ದೀರಿ. ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದೀರಿ ಮಿಸ್ಟರ್‌ ಮೆಹ್ತಾ” ಎಂದರು. Also Read ಸೆಕ್ಷನ್ 124 ಎ ಮರುಪರಿಶೀಲನೆ ಆಗುವವರೆಗೆ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಬಹುದೇ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ ಮುಂದುವರಿದು ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸಿದ ಸಿಬಲ್‌ ಅವರು “ಪ್ರೀತಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹಿಂಸಾಚಾರಕ್ಕೆ ಯಾವುದೇ ಪ್ರಚೋದನೆ ಇಲ್ಲದಿರುವವರೆಗೆ ಅಸಮಾಧಾನವನ್ನು ವ್ಯಕ್ತಪಡಿಸಲು ಯಾವುದೇ ವ್ಯಕ್ತಿ ಸ್ವತಂತ್ರರಾಗಿರಬೇಕು” ಎಂದರು. ಕೇಂದ್ರ ಸರ್ಕಾರವು ಐಪಿಸಿ ಸೆಕ್ಷನ್‌ 124ಎ ಅನ್ನು ಪುನರ್‌ಪರಿಶೀಲಿಸುವವರೆಗೆ ಬಾಕಿ ಇರುವ ದೇಶದ್ರೋಹ ಪ್ರಕರಣಗಳನ್ನು ಬಾಕಿ ಇಡುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಬಹುದು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದು, ಇಂದು ತನ್ನ ನಿಲುವು ತಿಳಿಸುವಂತೆ ಸೂಚಿಸಿತು.
ನಿಮ್ಮಗಳ ಕೃಪಾಶೀರ್ವಾದದಿಂದ ಕರ್ನಾಟಕದ ನಾವೆಲ್ಲ ಜನತೆ ಆರೋಗ್ಯದಿಂದಿದ್ದೇವೆ...ನೀವು ಸಹ ಆರೋಗ್ಯದಿಂದ ಇರುವುವಿರೆಂದು ಭಾವಿಸುತ್ತೇನೆ. ಈ ರೀತಿಯ ಪತ್ರಗಳು, ಸಾರ್ವಜನಿಕರಿಂದ ಬರುವ ಪತ್ರಗಳು ನಿಮಗೇನೂ ಹೊಸದಲ್ಲ ಮತ್ತು ಈ ನನ್ನ ಪತ್ರಕ್ಕೆ ತಮ್ಮಿಂದ ಯಾವುದೇ ಉತ್ತರ ದೊರೆಯುತ್ತದೆ ಎಂಬ ಆಶಾಭಾವನೆಯನ್ನು ಕೂಡ ನಾನು ಹೊಂದಿಲ್ಲ. ನಿಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಕಾಯಕದಲ್ಲಿ ನನ್ನದೂ ಒಂದು ಪಾಲಿರುವುದರಿಂದ ಈ ಪತ್ರವನ್ನು ನಿಮಗೆ ಬರೆಯುವ ಅನಿವಾರ್ಯತೆ ಇಂದು ನನ್ನ ಮುಂದಿದೆ. ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಇದನ್ನು ಓದುವ ಕೃಪೆತೋರಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ನನಗೆ ತಿಳುವಳಿಕೆ ಬಂದ ಮೇಲೆ, ಕರ್ನಾಟಕ ರಾಜ್ಯ ರಾಜಕಾರಣವನ್ನು ನೋಡುತ್ತ ಬಂದಿದ್ದೇನೆ. ಆದರೆ ರಾಜಕೀಯದ ನಿಜವಾದ ಖದರು ಏನು ಎಂದು ನಮಗೆಲ್ಲ ಅರ್ಥವಾಗಿದ್ದು, ಕರ್ನಾಟಕ ರಾಜ್ಯ ರಾಜಕಾರಣದ ಚುಕ್ಕಾಣಿಯನ್ನು ನಿಮ್ಮ ಪಕ್ಷ ಹಿಡಿದ ಮೇಲೆಯೇ. ಅಧಿಕಾರವನ್ನು ವಹಿಸಿಕೊಂಡ ನಂತರ ಮೊದಲ ಮೂರು ವರ್ಷಗಳ ಕಾಲ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ರಾಜ್ಯಭಾರಮಾಡಿ ಅದೆಷ್ಟು ಸಲ ರೆಸಾರ್ಟ್ ರಾಜಕಾರಣಕ್ಕೆ ಮುನ್ನುಡಿಯನ್ನು ಬರೆದರೋ, ಅದೆಷ್ಟು ಸಲ ಮಾಧ್ಯಮದ ಮುಂದೆ ಕಣ್ಣೀರು ಹಾಕಿ ಇಂತಹ ತಪ್ಪನ್ನು ಇನ್ನು ಮುಂದೆ ಪುನರಾವರ್ತಿಸುವುದಿಲ್ಲ ಎಂದು ಹೇಳಿದರೋ, ಎಲ್ಲ ಅವಘಡಗಳಿಗೆ "ಇದು ಮಾಧ್ಯಮಗಳ" ಪಿತೂರಿ ಎಂಬ ಶೀರ್ಷಿಕೆಗಳನ್ನು ಕೊಟ್ಟರೋ...ಕ್ಷಮಿಸಿ ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ. ತಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಸಲೀಸಾಗಿ ಸಾಗಿಸಿ ಬಿಡಬಹುದು ಎಂಬುದನ್ನು ಅದ್ಭುತವಾಗಿ ಕರಗತ ಮಾಡಿಕೊಂಡಿರುವ ಯಡಿಯೂರಪ್ಪನವರು, ಮೊದಲಿನಿಂದಲೂ ಅಂದರೆ ಅಧಿಕಾರಕ್ಕೆ ಬಂದ ದಿನದಿಂದಲೂ ಸಾಬೀತು ಪಡಿಸುತ್ತ ಹೋದರು. ಅದನ್ನು ತಮ್ಮ ಅಧಿಕಾರ ಹೋದ ನಂತರವೂ ಸಾಧಿಸುತ್ತಿದ್ದಾರೆ. ಲೋಕಾಯುಕ್ತದ ವರದಿಯನ್ನು ನಮ್ಮ ಸರಕಾರ ಇನ್ನೂ ಅಂಗೀಕರಿಸಿಲ್ಲ ಹಾಗೆಯೇ ತಿರಸ್ಕರಿಸಿಯೂ ಇಲ್ಲ. ಹಾಗಿದ್ದ ಪಕ್ಷದಲ್ಲಿ ಅವರು ಜೈಲು ಸೇರಿರುವುದು ಲೋಕಾಯುಕ್ತ ವರದಿ ಆಧಾರಿತ ಎಂದು ಹೇಗೆ ಹೇಳುತ್ತೀರಿ? ಒಬ್ಬ ಸಾಮಾನ್ಯ ಪ್ರಜೆ ಕೂಡ ಅರ್ಥ ಮಾಡಿಕೊಳ್ಳ ಬಲ್ಲ ಈ ಪ್ರಕರಣ, ನೀವು ಜೈಲಿಗೆ ಹೋಗಿದ್ದು ಖಾಸಗೀ ದೂರಿನ ಕಾರಣದಿಂದಾಗಿಯೇ ಹೊರತು, ಲೋಕಾಯುಕ್ತ ವರಧಿಯ ಆಧಾರದ ಮೇಲೆ ಅಲ್ಲ. ಬಹುಷಃ ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗಬಹುದೆಂಬ ಸಿದ್ಧಾಂತಕ್ಕೆ ನೀವು ಜೋತು ಬಿದ್ದಿರಬಹುದು. ಹಿಂದೆ ಅನೇಕ ಸಂದರ್ಭಗಳಲ್ಲಿ ವಿರೋಧ ಪಕ್ಷದವರು, ಮಾಧ್ಯಮದವರು, ಬಳ್ಳಾರಿಯಲ್ಲಿನ ಆಡಳಿತ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದಾಗ, ನೀವು ಹಾಗಾಗಲು ಸಾಧ್ಯವೇ ಇಲ್ಲ. ಅಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ನಮ್ಮ ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಸಹಿಸದವರು ಹೀಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂಬ ಪುಕಾರುಗಳನ್ನು ತೇಲಿ ಬಿಟ್ಟಿರಿ. ಇದನ್ನು ನೀವೊಬ್ಬರೇ ಮಾಡಲಿಲ್ಲ, ಬದಲಿಗೆ ನಿಮ್ಮ ಎಲ್ಲ ಶಿಷ್ಯ ಬಳಗ ಕಂಡ ಕಂಡಲ್ಲೆಲ್ಲ ಗಂಟಲು ಹರಿಯುವಂತೆ ಕಿರುಚಾಡುತ್ತ ಹೇಳಿದರು. ಪರಿಸ್ಥಿತಿಗಳು ಬದಲಾದವು, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಗಳು ಬಂದರು. ನಿಮ್ಮ ಸುಪರ್ದಿಯಲ್ಲೇ ಅವರು ಇನ್ನೂ ರಾಜ್ಯಭಾರ ಮಾಡುತ್ತಿದ್ದಾರೆ. ಅವರೂ ಸಹ ನಿಮ್ಮ ಮಾತುಗಳನ್ನೇ ಪುನರಾವರ್ತಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಗೂಂಡಾ ರಾಜ್ಯವಿದೆ ಎಂಬ ಮಾತುಗಳು ನಿಮ್ಮಿಂದ ಮಾತ್ರವಲ್ಲ, ಬಳ್ಳಾರಿಯಲ್ಲಿ ಉಪಚುನಾವಣೆ ಘೋಷಣೆಯಾದದ್ದೇ ತಡ, ನಿಮ್ಮ ಪಕ್ಷದ ಎಲ್ಲ ನಾಯಕರ ಬಾಯಿಂದ ಈ ಅಣಿಮುತ್ತುಗಳು ಉದುರಲಾರಂಭಿಸಿದವು. ರೆಡ್ಡಿಗಳನ್ನು ಬೆಳಸಿದವರು ನೀವೇ ಅಲ್ಲವೇ? ಅವರ ತಾಳಕ್ಕೆ ತಕ್ಕಂತೆ ನೀವು ಕುಣಿದಿರಿ. ಅವರನ್ನು ಬೇಕಾದಂತೆ ಬಳಸಿಕೊಂಡಿರೆ, ಅವರು ನಿಮ್ಮ ವಿರುದ್ಧ ತಿರುಗಿ ಬಿದ್ದಾಗ ಮಾಧ್ಯಮಗಳ ಮುಂದೆ ಬಂದು ಕಣ್ಣೀರುಹಾಕಿದಿರಿ... ಮರುದಿನವೇ ಅವರೊಂದಿಗೆ ಎಲ್ಲ ನಾಯಕರೂ ಸೇರಿ, ವಿಜಯದ ಸಂಕೇತದ ಚಿತ್ರವನ್ನು ಮಾಧ್ಯಮಗಳಿಗೆ ತೇಲಿ ಬಿಟ್ಟಿರಿ. ಒಟ್ಟಾರೆಯಾಗಿ ನೀವು ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನತೆಗೆ ಏನು ಸಂದೇಶವನ್ನು ಕೊಡಲು ಹೊರಟಿದ್ದಿರಿ? "ಆಪರೇಷನ್ ಕಮಲ" ಎಂಬ ಅಕ್ರಮಗಳಿಗೆ ಕೈಹಾಕಿ, ಮೂರುವರೆ ವರ್ಷಗಳಲ್ಲಿ ನಮ್ಮ ನಾಡಿನ ಜನ ಹಿಂದೆಂದೂ ಕಾಣದಷ್ಟು ಉಪಚುನಾವಣೆಗಳನ್ನ ಕಂಡರು. ರಾಜ್ಯಕ್ಕೆ ಸ್ಥಿರ ಸರ್ಕಾರವನ್ನ ನೀಡಬೇಕು ಅನ್ನುವ ಒಂದೇ ಉದ್ದೇಶದಿಂದ "ಆಪರೇಷನ್ ಕಮಲ" ನಡೆಸಿದ ನಿಮ್ಮ ಪಕ್ಷ, ಜನ ಸಾಮಾನ್ಯರು ಬೆವರು, ರಕ್ತ ಸುರಿಸಿ ಗಳಿಸಿ, ಕಟ್ಟಿದ ತೆರಿಗೆ ಹಣದಿಂದ ಮೋಜು ಮಸ್ತಿ ಉಡಾಯಿಸಿದ ಪರಿಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಇಂತಹ ಅಕ್ರಮ ಚಟುವಟಿಕೆಗಳಿಗೆ ನೀವೇ ಅಲ್ಲವೇ ರೆಡ್ಡಿಗಳ ಬೆಂಗಾವಲಾಗಿ ನಿಂತಿದ್ದು. ಅಂದೇಕೆ ಅವರನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ? ಅದೂ ಸಾಲದೆಂಬಂತೆ ಬಳ್ಳಾರಿ ಉಪಚುನಾವಣೆಯ ನಾಮಪತ್ರ ಸಲ್ಲಿಕೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ, ಶ್ರೀರಾಮುಲು ಹಿಂದೆ ಬಿ-ಫಾರ್ಮ್ ಹಿಡಿದುಕೊಂಡು ನಿಮ್ಮ ಇಡೀ ಪಕ್ಷ ಅಲೆದಾಡಿತು. ಆಗಲೂ ಕೂಡ ನಿಮಗೆ ಅವರ ಅಕ್ರಮಗಳು, ಗೂಂಡಾಗಿರಿಯ ದರ್ಶನವಾಗಲೇ ಇಲ್ಲವೇ? ಹೇಗೆ ನಂಬೋದು? ಯಾವಾಗ ಶ್ರೀರಾಮುಲು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಕರಾರು ತೆಗೆದರೋ, ಅವರ ಎಲ್ಲ ಗೂಂಡಾಗಿರಿಯ ದರ್ಶನ ನಿಮಗೆಲ್ಲ ಒಮ್ಮೆಲೇ ಅವಿರ್ಭವಿಸತೊಡಗಿದವು. ರಾಜಕಾರಣದಲ್ಲಿ ಯಾರೂ ಖಾಯಂ ಮಿತ್ರರೂ ಅಲ್ಲ ಶತ್ರುಗಳೂ ಅಲ್ಲ. ಗೊತ್ತು.. ಈ ಮಾತು ಚೆನ್ನಾಗಿ ಗೊತ್ತು... ಆದರೆ ಇಲ್ಲಿ ನಡೆಯುತ್ತಿರುವುದು ರಾಜಕೀಯ ಅಲ್ಲ. ಇದು ನಮ್ಮ ನಾಡಿನ ಸಮಸ್ತ ಜನತೆಯ ಕಿವಿಯ ಮೇಲೆ ಹೂವನ್ನಿಟ್ಟು, ಅವರನ್ನು ಮೂರ್ಖರನ್ನಾಗಿಸುತ್ತಿದ್ದೀರಿ. ಬಳ್ಳಾರಿ ಉಪಚುನಾವಣೆಯ ನಂತರ ರಾಜ್ಯ ರಾಜಕೀಯ ಪರಿಸ್ಥಿತಿ ಅಧೋಗತಿಗೆ ಇಳಿಯಲಿದೆ. ಮತ್ತೆ ಚುನಾವಣೆಯನ್ನು ನಾವೆಲ್ಲ ಎದುರಿಸಬೇಕಾಗುತ್ತದೆ. ಆಗೇನು ಕಾರಣ ಕೊಡುತ್ತೀರಿ ನಮಗೆ? ಮತ್ತೆ ನಿಮ್ಮನ್ನು ಕ್ಷಮಿಸುವಂತೆ ಗೋಗರೆಯುತ್ತೀರಾ? ಈ ತಪ್ಪು ಮತ್ತೊಮ್ಮೆ ಆಗಲಾರದು ಎಂದು ಅಂಗಲಾಚುತ್ತೀರಾ? ಒಂದು ಕೆಲಸ ಮಾಡಿ.... ನಿಮ್ಮ ಯಾವ ಯಾವ ಕೆಲಸಗಳಿಗೆ ಅಥವಾ ನೀವು ಮಾಡುವ ಯಾವ ಯಾವ ಕೆಲಸಗಳಿಗೆ ನಾವು ನಿಮ್ಮನ್ನು ಕ್ಷಮಿಸಬೇಕು ಎಂದು ಒಂದು ಪಟ್ಟಿ ಸಿದ್ಧ ಮಾಡಿ ಅದನ್ನ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಬಿಡಿ. ಅಂದರೆ ನಿಮ್ಮ ನಿಲುವು ನಮಗೆ ಸ್ಪಷ್ಟವಾಗುತ್ತದೆ. ಈ ಎಲ್ಲ ಅವಘಡಗಳಿಗೆ ಮುಖ್ಯ ಕಾರಣವೆಂದರೆ ನಮ್ಮ ವಿರೋಧ ಪಕ್ಷಗಳು. ಯಾವುದೇ ಸಿದ್ಧಾಂತಕ್ಕೆ ಬದ್ಧವಾಗಿರದೇ, ಅವೂ ಸಹ ತಮ್ಮ ಆಂತರಿಕ ಕಚ್ಚಾಟಗಳಿಂದ, ಗುಂಪುಗಾರಿಕೆಗಳಿಂದ ಸಮರ್ಥ ವಿಪಕ್ಷಗಳಾಗಲೇ ಇಲ್ಲ. ನಮ್ಮಲ್ಲಿ ಅನೇಕ ಸಮಸ್ಯೆಗಳಿಗೆ... ನೆರೆ ಸಂತ್ರಸ್ತರಿಗೆ ಇನ್ನೂ ಸರಿಯಾಗಿ ಆಸರೆ ಮನೆಗಳು ಸಿಕ್ಕಿಲ್ಲ. ಶಾಲಾ ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಒದ್ದಾಡುತ್ತಿವೆ.... ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.. ಇಂತಹ ಅನೇಕ ಸಮಸ್ಯೆಗಳು ನಮ್ಮ ತಲೆತಿನ್ನುತ್ತಿದ್ದಾಗ..ರಾಜ್ಯದ ಆಡಳಿತ ಯಂತ್ರವನ್ನು ಸಂಪೂರ್ಣ ಸ್ಥಗಿತಗೊಳಿಸಿ, ಒಂದು ಯಕಶ್ಚಿತ್ ಉಪ ಚುನಾವಣೆಗೆ ಎಲ್ಲ ಮಂತ್ರಿ ಮಹೋದಯರನ್ನ ಕರೆದುಕೊಂಡು ಬಳ್ಳಾರಿಯಲ್ಲಿ ಠಿಕಾಣಿ ಹೂಡಿದ ನಿಮ್ಮ ರಾಜ್ಯಭಾರದಲ್ಲಿ ಬದುಕುತ್ತಿರುವ ನಾವೇ ಧನ್ಯರು....
ದೆಹಲಿ: ಭಾರತವನ್ನು ಗೋರಕ್ಷ ಮೋದಿ ಮತ್ತು ಹಿಂದುಗಳಿಂದ ಮೋಕ್ಷ ನೀಡಲಾಗುವುದು. ಇದನ್ನು ತಡೆಯಲು ಯಾವನಿಂದಲೂ ಸಾಧ್ಯವಿಲ್ಲ. ನರೇಂದ್ರ ಮೋದಿಗೆ ತಾಕತ್ತಿದ್ದರೇ ಹಿಂದೂಸ್ಥಾನದಲ್ಲಿ ಮುಸ್ಲಿಂ ಧ್ವಜ ಹಾರಾಡುವುದನ್ನು ತಡೆಯಲಿ ಎಂದು ಅಲ್‌ಕೈದಾ ಕಾಶ್ಮೀರ ಘಟಕ ಅನ್ಸರ್ ಘಜಾವತ್ ಉಲ್ ಹಿಂದ್‌ನ ಉಗ್ರ ಝಾಕೀರ್ ಮುಸಾ ಸವಾಲು ಹಾಕಿದ್ದಾನೆ. ಭಾರತದಲ್ಲಿ ಇಸ್ಲಾಾಂ ಧರ್ಮ ಸ್ಥಾಾಪನೆ ಖಚಿತ. ಹಿಂದೂ ಆಡಳಿತಗಾರರನ್ನು ಕಟ್ಟಿ ಎಳೆದೊಯ್ಯುವ ಕಾಲ ಬರಲಿದೆ. ಸರಪಳಿ ಹಾಕಿ ದರದರನೆ ಎಳೆದೊಯಲಾಗುವುದು ಎಂದು ಆಡಿಯೋದಲ್ಲಿ ಹೇಳಿದ್ದು, ಈ ಮಾತುಗಳು ಯ್ಯೂಟೂಬ್‌ನಲ್ಲಿ ಬಹಿರಂಗವಾಗಿವೆ. ರೋಯಿಂಗ್ ಹ್ಯಾಾಮ್ ಮುಸ್ಲಿಂರನ್ನು ಕಾಶ್ಮೀರದಿಂದ ಗಡೀಪಾರು ಮಾಡುವುದಕ್ಕೂ ಎಚ್ಚರಿಕೆ ನೀಡಿದ್ದಾನೆ. ಗೋ ಪೂಜಕ ನರೇಂದ್ರ ಮೋದಿ ರಾಜಕಾರಣದ ಮೂಲಕ ಎಷ್ಟೇ ಶಕ್ತಿ ಸಂಪಾದಿಸಿದರೂ ಇಸ್ಲಾಂ ರಾಷ್ಟ್ರ ಸ್ಥಾಪನೆ ತಡೆಯಲು ಸಾಧ್ಯವಿಲ್ಲ ಎಂದು ಉರ್ದು ಭಾಷೆಯಲ್ಲಿ ಬಿಡುಗಡೆಯಾಗಿರುವ ಆಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾಾನೆ. ಭಾರತದ ಸೇನೆ, ಕಾಶ್ಮೀರ ಪೊಲೀಸರು, ಸರಕಾರದ ಅಧಿಕಾರಿಗಳು, ರಾಜತಾಂತ್ರಿಕ ಕಚೇರಿಗಳು ನಮ್ಮ ಗುರಿ. ಅಲ್ಲದೇ ಜಿಹಾದಿ ಹೋರಾಟಕ್ಕೆೆ ಅಡ್ಡಿಯಾಗುವ ಯಾವುದೇ ವ್ಯಕ್ತಿಯನ್ನು ಬೀಡುವುದಿಲ್ಲ ಎಂದು ಶಪಥಗೈದಿದ್ದಾನೆ. ಪಾಕಿಸ್ತಾನದ ವಿರುದ್ಧವೂ ಆಕ್ರೋಶ ಪಾಕಿಸ್ತಾನವನ್ನು ಇಸ್ಲಾಾಂ ಜಿಹಾದ್ ಹೋರಾಟಗಾರರಿಗೆ ಮೋಸ ಮಾಡಿದೆ. ಅಮೆರಿಕವನ್ನು ಮೆಚ್ಚಿಸಲು ಪಾಕಿಸ್ತಾನ ಕಾಶ್ಮೀರಿ ಜಿಹಾದ್ ಹೋರಾಟಗಾರರಿಗೆ ಅನ್ಯಾಯ ಮಾಡಿದೆ. ಪಾಕಿಸ್ತಾನ ಸರಕಾರ ಜಿಹಾದ್ ತರಬೇತಿ ಶಿಬಿರ ಮುಚ್ಚಿದ್ದಲ್ಲದೇ, ಕಾಶ್ಮೀರಿ ಹೋರಾಟಗಾರರಿಗೆ ಬೆಂಬಲ ನೀಡದೇ ಬೆನ್ನಿಗೆ ಚೂರಿ ಹಾಕಿದೆ. ಜೀಹಾದ್ ಹೋರಾಟಕ್ಕೆೆ ಹುತಾತ್ಮರ ರಕ್ತ ಮತ್ತು ಅಲ್ಲಾನ ಆಶೀರ್ವಾದ ಇದ್ದರೇ ಸಾಕು ಎಂದು ಪಾಕಿಸ್ತಾನದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಯಾರೀ ಉಗ್ರ ಮೂಸಾ? ಕಾಶ್ಮೀರದ ಜಿಹಾದಿ ಉಗ್ರ ಝಾಕೀರ್ ರಶೀದ್ ಭಟ್ ಹಿಜ್ಬುಲ್ ಮುಜಾಹಿದ್ದೀನ್ ಮೂಲಕ ಉಗ್ರ ಚಟುವಟಿಕೆ ಆರಂಭಿಸಿದ. ನಂತರ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಹೊರಬಂದಿದ್ದ. ಅಲ್‌ಕೈದಾ ಉಗ್ರ ಸಂಘಟನೆಗೆ ಬೆಂಬಲಿಸಿ, ಕಾಶ್ಮೀರದಲ್ಲಿ ಹೊಸ ಹರ್ಕತ್ ಉಲ್ ಮುಜಾಹಿದ್ದೀನ್ ಮತ್ತು ಕಾಶ್ಮೀರ್ ತಾಲಿಬಾನ್ ಎಂಬ ಸಂಘಟನೆಗಳನ್ನು ಸ್ಥಾಪಿಸಿದ. ಬುರ್ಹಾನ್ ಮುಜಾಫರ್ ವಾನಿ ಹತ್ಯೆೆ ನಂತರ ಆತನ ಪಟ್ಟಕ್ಕೆೆ ಈತನೇ ಎಂದು ಬಿಂಬಿಸಲಾಗಿದೆ.
Kannada News » National » Congress’ G23 leaders urge Sonia Gandhi to appoint new president to the party immediately ARB ಕೂಡಲೇ ಪಕ್ಷಕ್ಕೆ ಹೊಸ ಅಧ್ಯಕ್ಷನನ್ನು ಆರಿಸುವಂತೆ ಸೋನಿಯಾ ಗಾಂಧಿಯನ್ನು ಆಗ್ರಹಿಸಿದ್ದಾರೆ ಜಿ23 ನಾಯಕರು ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ), ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕಾದ ಸೋಲಿನ ಹೊಣೆ ಹೊತ್ತುಕೊಳ್ಳುವ ಮತ್ತು ಸಾಂಸ್ಥಿಕ ಚುನಾವಣೆಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಬೇಕೆಂದು ಭಿನ್ನಮತೀಯ ನಾಯಕರು ಆಗ್ರಹಿಸುತ್ತಿದ್ದಾರೆ. ಗುಲಾಂ ನಬಿ ಆಜಾದ ಮತ್ತು ಕಪಿಲ್ ಸಿಬಲ್ TV9kannada Web Team | Edited By: Arun Belly Mar 11, 2022 | 11:31 PM ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಭಾರತದ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ದಿಕ್ಕೆಡುವಂತೆ ಮಾಡಿದೆ. ಉತ್ತರಪ್ರದೇಶದಲ್ಲಂತೂ (Uttar Pradesh) ಅದು ನಾಮಾವಶೇಷ ಇಲ್ಲದಂತಾಗಿದೆ. 2017 ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗೆದ್ದಿತ್ತು ಈ ಸಲ ಅದಕ್ಕಿಂತ 5 ಕಡಿಮೆ ಸ್ಥಾನಗಳನ್ನು ಗೆದ್ದಿದೆ! ಪಕ್ಷದ ಏಳಿಗೆಗಾಗಿ ದಶಕಗಳಿಂದ ಬೆವರು ಸುರಿಸಿರುವ ಹಿರಿಯ ನಾಯಕರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಾಳೆಯದಲ್ಲಿ (Congress Camp) ಭಿನ್ನಮತೀಯರು ಅಂತ ಗುರುತಿಸಿಕೊಂಡಿರುವ ಜಿ23 ನಾಯಕರು ತೀವ್ರ ಅಸಮಾಧಾನಗೊಂಡಿದ್ದು, ಆದಷ್ಟು ಬೇಗ ಪಕ್ಷಕ್ಕೆ ಒಬ್ಬ ಹೊಸ ಅಧ್ಯಕ್ಷನನ್ನು ಆರಿಸುವಂತೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಆಗ್ರಹಿಸಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಅತ್ಯಂತ ನೀರಸ ಪ್ರದರ್ಶನ ನೀಡಿ ಶೋಚನೀಯ ಸ್ಥಿತಿಯಲ್ಲಿರುವ ಪಕ್ಷವನ್ನು ಪುನಶ್ಚೇತಗೊಳಿಸುವ ಕಾರ್ಯ ಕೂಡಲೇ ಆರಂಭಿಸಬೇಕಿದೆ, ಪಕ್ಷದಲ್ಲಿ ಕೆಲ ಆಮೂಲಾಗ್ರ ಬದಲಾವಣೆಗಳನ್ನು ಮಾಡಬೇಕಿದೆ ಎಂದು ಈ ನಾಯಕರು ಹೇಳುತ್ತಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಒಂದು ತುರ್ತು ಸಭೆ ಕರೆಯುವಂತೆ ಜಿ23 ನಾಯಕರು ಹಂಗಾಮಿ ಆಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ದಯನೀಯ ಪ್ರದರ್ಶನಕ್ಕೆ ಯಾರು ಹೊಣೆಗಾರರು ಅನ್ನೋದು ನಿರ್ಧಾರವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ), ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕಾದ ಸೋಲಿನ ಹೊಣೆ ಹೊತ್ತುಕೊಳ್ಳುವ ಮತ್ತು ಸಾಂಸ್ಥಿಕ ಚುನಾವಣೆಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಬೇಕೆಂದು ಭಿನ್ನಮತೀಯ ನಾಯಕರು ಆಗ್ರಹಿಸುತ್ತಿದ್ದಾರೆ. ಏತನ್ಮಧ್ಯೆ, ಪಕ್ಷದ ಸಂಸದರಾದ ಕಪಿಲ್ ಸಿಬ್ಬಲ್, ಆನಂದ್ ಶರ್ಮ ಮತ್ತು ಮನೀಶ್ ತಿವಾರಿ ಅವರು ಶುಕ್ರವಾರ ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ಸಭೆ ನಡೆಸಿದರು. ಮೂಲಗಳ ಪ್ರಕಾರ, ನಾಯಕರು ಪಕ್ಷದ ಕಳಪೆ ಪ್ರದರ್ಶನ ಮತ್ತು ಭವಿಷ್ಯದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. 2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 2022 ರಲ್ಲಿ ಕೇವಲ 18 ಸ್ಥಾನ ಗೆಲ್ಲುವಲ್ಲಿ ಮಾತ್ರ ಯಶ ಕಂಡಿದೆ. ಅರವಿಂದ ಕೇಜ್ರಿವಾಲ ನೇತೃತ್ವದ ಆಪ್ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲಬಾರಿಗೆ ಈ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಮುಂಬರುವ ಕೆಲ ದಿನಗಳಲ್ಲಿ ಸೋನಿಯಾ ಗಾಂಧಿ ಅವರು ಸಿಡಬ್ಲ್ಯೂಸಿ ಸಭೆ ಕರೆಯುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್​ಗೆ ಈಗ ನಾಯಕರೇ ಇಲ್ಲ, ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಅದು ನಿರ್ನಾಮವಾಗಲಿದೆ: ಯಡಿಯೂರಪ್ಪ
Thành Phố Hạ Long ಹೆದ್ದಾರಿಗಳಲ್ಲಿ ಅಪಘಾತಗಳು, ವಾಹನಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಘಟನೆಗಳನ್ನು ತಪ್ಪಿಸಲು ಶಾಲಾ ವಾಹನಗಳೂ ಸೇರಿದಂತೆ ಸುಮಾರು 6.87 ಲಕ್ಷ ಸಾರ್ವಜನಿಕ ಸಾರಿಗೆ ವಾಹನಗಳಿಗೆ ವಾಹನ ಚಲನೆ ನಿಗಾ ಉಪಕರಣಗಳು (ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್ ಡಿವೈಸ್) ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಾಂಶಗಳು ಕೇಂದ್ರ ಸಹಭಾಗಿತ್ವದ ಈ ಯೋಜನೆಗೆ ₹30 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಇದಕ್ಕೆ ಕೇಂದ್ರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40 ರಷ್ಟು ಅನುದಾನ ನೀಡುತ್ತದೆ. ರಾಜ್ಯದ ಸಾರ್ವಜನಿಕ ಸಾರಿಗೆ ಸೇವೆಯಲ್ಲಿರುವ ಬಸ್‌ಗಳು, ಕ್ಯಾಬ್‌, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಸೇರಿ ವಿವಿಧ ರೀತಿಯ ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ ಈ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಲಾಗುವುದು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದ್ದು,ಅದರ ಪ್ರಕಾರ ಎಲ್ಲ ರಾಜ್ಯಗಳಿಗೂ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಲು ನೆರವು ನೀಡುತ್ತಿದೆ. ಇದಕ್ಕೆ ಕ್ಲೌಡ್‌ ಸರ್ವಿಸ್‌ ಸೇವೆಯನ್ನೂ ಕೇಂದ್ರವೇ ನೀಡುತ್ತದೆ. ಪ್ರಯೋಜನ : ವಾಹನಗಳು ನಿಗದಿತ ವೇಗದಲ್ಲಿ ಮತ್ತು ನಿಗದಿತ ರಸ್ತೆಯಲ್ಲಿ ಸಾಗುತ್ತಿದೆಯೇ? ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲ್ಲಿಸಿದ್ದಾರೆಯೇ? ವಾಹನ ಸಂಚಾರದಲ್ಲಿ ಅನಗತ್ಯ ವಿಳಂಬವಾಗುತ್ತಿದೆಯೇ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆಯೇ ಮುಂತಾದ ಚಟುವಟಿಕೆಗಳನ್ನು ನಿಯಂತ್ರಣ ಕೊಠಡಿಗಳಿಂದ ಗಮನಿಸಲಾಗುವುದು ಮತ್ತು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ವೇಗದಲ್ಲಿ ಚಲಿಸಿ ಅಪಘಾತಕ್ಕೆ ಕಾರಣವಾಗುತ್ತಿವೆ. ಇಂತಹ ಅಪಘಾತಗಳನ್ನು ನಿಯಂತ್ರಿಸಲು ವಾಹನಗಳು ಸಂಚರಿಸುತ್ತಿರುವ ಹಾದಿಯ ಮೇಲೆ ಕಣ್ಣಿಟ್ಟು ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಿದೆ.
ಮಗು ಜನಿಸಿದ ಕೆಲವೇ ದಿನಗಳಲ್ಲಿ ಕರುಳಬಳ್ಳಿ(ಹೊಕ್ಕಳು ಬಳ್ಳಿ) ಬೀಳುತ್ತದೆ. ಅದನ್ನು ಕ್ಯಾನ್ಸರ್‌ ರೋಗಿಗಳ ಔಷದಿಗೆ ಬಳಸಿಕೊಳ್ಳಲಾಗುತ್ತದೆ. ಕರ್ನಾಟಕ ಒಂದರಲ್ಲೆ 70..80 ಸಾವಿರ ಜನರು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಕೂಡ ಎಲ್ಲೆಡೆ ನಡೆಯುತ್ತಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟು ಕೊಂಡು "2 nd ಲೈಫ್" ಚಿತ್ರ ತಯಾರಾಗಿದೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದೆ. ಜೀವನದಲ್ಲಿ ಯಾವುದೋ ದೊಡ್ಡ ಅನಾಹುತ ನಡೆದು ಅದರಿಂದ ಪಾರಾದಾಗ ಎಲ್ಲರೂ ಹೇಳುವುದು. ನಿನ್ನ ಹೊಸಜೀವನ ಆರಂಭವಾಗಿದೆ ಅಂತ. ಈ ರೀತಿಯ ಘಟನೆ ಚಿತ್ರದಲ್ಲಿ ನಡೆಯುವುದರಿಂದ ಚಿತ್ರಕ್ಕೆ "2nd ಲೈಫ್" ಅಂತ ಹೆಸರಿಡಲಾಗಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ರಾಜು ದೇವಸಂದ್ರ ಚಿತ್ರದ ಕುರಿತು ವಿವರಣೆ ನೀಡಿದರು. ನಾನು ಈ ಹಿಂದೆ "ಸ್ವಾರ್ಥ ರತ್ನ" ಎಂಬ ಚಿತ್ರದಲ್ಲಿ ‌ಅಭನಯಸಿದ್ದೆ. ಈಗ "2 nd ಲೈಫ್" ಚಿತ್ರದಲ್ಲಿ ನಟಿಸಿದ್ದೇನೆ. ನಾನು ಮೂಲತಃ ಆಡಿಟರ್. ಮಂಜುಳಾ ರಮೇಶ್ ಅವರು ಬರೆದಿರುವ ಈ ಚಿತ್ರದ ಕಥೆ ಹಿಡಿಸಿತು. ಪಿ.ಆರ್.ಕೆ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಪ್ರೋತ್ಸಾಹಿಸಿ ಎಂದರು ನಾಯಕ ಆದರ್ಶ ಗುಂಡುರಾಜ್. ಈ‌ ಚಿತ್ರದಲ್ಲಿ ನನ್ನದು ಕುರುಡಿಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಸಿಂಧೂ ರಾವ್ ತಿಳಿಸಿದರು. ಸಂಗೀತ ನಿರ್ದೇಶಕ ಆರವ್ ರಿಶಿಕ್, ಛಾಯಾಗ್ರಹಕ ರಮೇಶ್ ಕೊಯಿರ, ನಟ ಶಿವಪ್ರದೀಪ್ ಹಾಗೂ ಸಹ ನಿರ್ಮಾಪಕ - ನಟ ರುದ್ರಮುನಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಮುಂಬೈನಲ್ಲಿ ಸುಮಾರು ಒಂದು ವಾರ ಸಮಯ ಕಳೆದ ಪ್ರಿಯಾಂಕಾ ಇದೀಗ ಗಂಡನ ಮನೆಗೆ ವಾಪಾಸ್ ಆಗಿದ್ದಾರೆ. ಅಮೆರಿಕಾಗೆ ಹಾರಿದ ಪ್ರಿಯಾಂಕಾ ತನ್ನ ತವರಿನ ಬಗ್ಗೆ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪತಿ ನಿಕ್ ಜೋನಸ್ ಜೊತೆ ವಿದೇಶದಲ್ಲೇ ನೆಲೆಸಿರುವ ಪ್ರಿಯಾಂಕಾ ಭಾರತಕ್ಕೆ ಬರದೆ 3 ವರ್ಷಗಳಾಗಿತ್ತು. ಕೊರೊನಾ ಬಳಿಕ ಗ್ಲೋಬಲ್ ಸ್ಟಾರ್ ತನ್ನ ತವರಿನ ಕಡೆ ಮುಖ ಮಾಡಿರಲಿಲ್ಲ. ಆದರೆ ಇತ್ತಿಚಿಗಷ್ಟೆ ಪಿಗ್ಗಿ ಭಾರತಕ್ಕೆ ಮರಳಿದ್ದರು. ಮುಂಬೈನಲ್ಲಿ ಸುಮಾರು ಒಂದು ವಾರ ಸಮಯ ಕಳೆದ ಪ್ರಿಯಾಂಕಾ ಇದೀಗ ಗಂಡನ ಮನೆಗೆ ವಾಪಾಸ್ ಆಗಿದ್ದಾರೆ. ಅಮೆರಿಕಾಗೆ ಹಾರಿದ ಪ್ರಿಯಾಂಕಾ ತನ್ನ ತವರಿನ ಬಗ್ಗೆ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಪ್ರಿಯಾಂಕಾ ಭಾರತಕ್ಕೆ ಬಂದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಒಂದೊಂದು ದಿನದ ವಿಡಿಯೋವನ್ನು ಸಹ ಪ್ರಿಯಾಂಕಾ ಶೇರ್ ಮಾಡುತ್ತಿದ್ದರು. ಪಿಗ್ಗಿಯ ಮುಂಬೈ ಎಂಟ್ರಿಯಿಂದ ಎಕ್ಸಿಟ್ ವರೆಗೂ ಎಲ್ಲಾ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕಳೆದೆರಡು ದಿನಗಳಲ್ಲಿ, ನನಗೆ ತೋರಿದ ಎಲ್ಲಾ ಪ್ರೀತಿ ಮತ್ತು ಬೆಂಬಲದಿಂದ ನಾನು ತುಂಬಾ ಭಾವುಕನಾಗಿದ್ದೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಇಲ್ಲಿನ ಊಟ, ಜಾಗ, ಸ್ನೇಹಿತರನ್ನೆಲ್ಲಾ ಭೇಟಿಯಾದ ಪ್ರಿಯಾಂಕಾ ಒಂದಿಷ್ಟು ನೆನೆಪುಗಳನ್ನು ಹೊತ್ತು ಗಂಡನ ಮನೆಗೆ ತೆರಳಿದರು. ಕೊರೊನಾ ನಂತರ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಿಯಾಂಕಾ ಮಗಳು ಮಾಲ್ತಿ ಮೇರೆಯನ್ನು ಸ್ವಾಗತಿಸಿದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು. ಮಗಳನ್ನು ಸಹ ಜೊತೆಯಲ್ಲೇ ಕರೆದುಕೊಂಡು ಬರುತ್ತಾರೆ ಎಂದು ಅಭಿಮಾಮನಿಗಳು ಅಂದುಕೊಂಡಿದ್ದರು. ಆದರೆ ಪ್ರಿಯಾಂಕಾ ಒಬ್ಬರೇ ಮುಂಬೈಗೆ ಬಂದಿದ್ದರು. ಒಂದು ವಾರದ ಬಳಿಕ ಪ್ರಿಯಾಂಕಾ ಅಮೆರಿಕಾಗೆ ವಾಪಾಸ್ ಆಗಿದ್ದಾರೆ. ಸದ್ಯ ಪ್ರಿಯಾಂಕಾ ಸಿನಿಮಾಗಳ ಜೊತೆಗೆ ಮಗಳ ಆರೈಕೆಯಲ್ಲೂ ನಿರತರಾಗಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನೇಕ ಪ್ರಾಜೇಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಟ್ಸ್ ಆಲ್ ಕಮ್ಮಿಂಗ್ ಬ್ಯಾಕ್ ಟು ಮಿ, ಸಿಟಾಡೆಲ್ ಸಿನಿಮಾಗಳನ್ನು ಮುಗಿಸಿದ್ದಾರೆ.
ಶ್ರೀರಾಮ ಮತ್ತು ಶ್ರೀಕೃಷ್ಣ ಹಾಗೂ ಇನ್ನೂ ಅನೇಕ ಮಹಾಪುರುಷರನ್ನು ಅವತಾರಪುರುಷರೆಂದು ಆರಾಧಿಸುವ ಪರಂಪರೆ ನಮ್ಮ ದೇಶದಲ್ಲಿದೆ.ಅವರ ಪುಣ್ಯಕಥೆಗಳನ್ನು ಪುನಃಪುನಃ ಕೇಳಿ ಧನ್ಯರಾಗಬೇಕೆಂದು ಬಯಸುವ ಭಕ್ತರೂ ಅಸಂಖ್ಯ. ಒಟ್ಟಾರೆ ಅವತಾರದ ಪರಿಕಲ್ಪನೆಯು ನಮ್ಮ ಭಾರತೀಯ ಜೀವನದ ಒಂದು ಅವಿಭಾಜ್ಯ ಅಂಗ. ಆದರೆ ಅವತಾರದ ಯತಾರ್ಥತೆಯ ಬಗ್ಗೆಯೇ ಪ್ರಶ್ನೆಗಳೂ ಇಲ್ಲದಿಲ್ಲ. 1.ವಿಶ್ವವ್ಯಾಪಕನಾದ ದೇವರಿಗೆ ಅವತಾರವೆನ್ನುವುದು ಸರಿಯಲ್ಲ.ಅವತರಿಸುವುದು ಎಂದರೆ ಇಳಿದುಬರುವುದು ಎಂದರ್ಥ.ಹಾಗೆ ಇಳಿದುಬಂದರೆ ಅವನು ಹಿಂದೆ ಇದ್ದ ಜಾಗವು ಬರಿದಾಗುವುದೇ? ಅವನು ಇಲ್ಲದ ಜಾಗವೇ ಇಲ್ಲ.ಆಗ ಅವನು ಒಂದೆಡೆಯಿಂದ ಇನ್ನೊಂದೆಡೆಗೆ ಇಳಿದುಬರುವುದು ಎಂದರೆ ಅರ್ಥಹೀನವಲ್ಲವೇ? ಹಾಗಾಗಿ ಭಗವಂತನಿಗೆ ಆಗಮನ ನಿರ್ಗಮನಗಳಿಲ್ಲ. 2.ಅವತಾರವೆಂದರೆ ಮನುಷ್ಯ ಇತ್ಯಾದಿ ಜನ್ಮಗಳನ್ನು ತಾಳುವುದು.ಆದರೆ ಹಾಗೆ ಹೇಳುವುದು ಭಾರತೀಯ ಶಾಸ್ತ್ರಚಿಂತನೆಗೇ ವಿರುದ್ಧವಾದದ್ದು.ಏಕೆಂದರೆ ಹುಟ್ಟು-ಸಾವುಗಳು ವಿಕಾರಗಳು.ಅವತಾರವಾದವನ್ನು ಒಪ್ಪಿದರೆ ಭಗವಂತನಿಗೆ ವಿಕಾರವನ್ನು ಆರೋಪಿಸಿದಂತಾಗುತ್ತದೆ.ಅದು ಸರಿಯಲ್ಲ.ಅವಿಕಾರಾಯ ಶುದ್ಧಾಯ ಎಂದು ಅವನನ್ನು ಸ್ತುತಿಸುತ್ತೇವೆ. 3.ಭಗವಂತನು ಎಲ್ಲರೊಳಗೂ ಇರುವ ಅಂತರ್ಯಾಮಿ.ಆದ್ದರಿಂದ ದುಷ್ಟನಿಗ್ರಹ,ಅಧರ್ಮದ ನಾಶವನ್ನು ಅವತರಿಸಿಯೇ ಮಾಡಬೇಕೆಂದಿಲ್ಲ.ಅವನು ಸರ್ವಶಕ್ತ,ಸರ್ವಜ್ಞ.ಒಳಗಿನಿಂದಲೇ ದುಷ್ಟರ ಬುದ್ಧಿಯಲ್ಲಿ ಪರಿವರ್ತನೆ ತರಬಲ್ಲ.ಆದ್ದರಿಂದ ಅವತಾರದ ಆವಶ್ಯಕತೆಯೇ ಇಲ್ಲವಲ್ಲ ?. 4.ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ಆದರ್ಶ ಮಾನವರೆಂದು ಗೌರವಿಸಿ ಅನುಸರಿಸಿದರೆ ಸಾಲದೇ? ಎನ್ನುವುದು ಕೆಲವರ ವಾದ. ಆದರೆ ದೈವತ್ವವನ್ನು ಅಳೆಯಲು ಅತೀಂದ್ರಿಯ ದೃಷ್ಟಿ ಬೇಕು ಎನ್ನುವುದು ಋಷಿಗಳ ಅನುಭವಾತ್ಮಕವಾದ ನಿರ್ಣಯ. “ದೃಶ್ಯತೇ ಜ್ಞಾನಚಕ್ಷುರ್ಭಿಃ ತಪಶ್ಚಕ್ಷುರ್ಭಿರೇವಚ,,,,” ಜೊತೆಗೆ, ಪ್ರತ್ಯಕ್ಷಾನುಭವ,ಯುಕ್ತಿ-ತರ್ಕ ಮತ್ತು ಆಪ್ತವಾಕ್ಯ (ಅನುಭವಿಗಳ ನೈಜಕಥನ) ಇವುಗಳನ್ನು ಆಧರಿಸಿಯೇ ನಾವು ನಿಜವನ್ನು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ. ಅವತಾರದ ವಿಷಯದಲ್ಲಿ ಜ್ಞಾನಿಗಳ ಅನುಭವದ ಗಾಥೆಯನ್ನೂ,ಆ ಅನುಭವಕ್ಕೆ ಹೊಂದುವ ಯುಕ್ತಿಯನ್ನೂ, ಇವೆರಡನ್ನೂ ಆಧರಿಸಿರುವ ಆಪ್ತ(ಸತ್ಯ)ವಚನಗಳನ್ನೂ ಭಾರತೀಯ ಸಾಹಿತ್ಯದಲ್ಲಿ ವಿಪುಲವಾಗಿ ಕಾಣುತ್ತೇವೆ.ಜೊತೆಗೆ ಭಿನ್ನ ಭಿನ್ನ ಕಾಲ-ದೇಶಗಳಲ್ಲಿ ಅವತಾರಪುರುಷರ ದರ್ಶನಾದಿ ಅನುಭವಗಳು ಸಾಧಕರಲ್ಲಿ ಕಂಡುಬಂದಿರುವ ಇತಿಹಾಸ ಕೂಡ ಇದೆ. ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತತಮವಾಗಿ ಮೇಲಿನ ಪ್ರಶ್ನೆಗಳ ಸಮಾಧಾನಕ್ಕೆ ಯತ್ನಿಸೋಣವಂತೆ. ಭಗವಂತನಿಗೆ ಪಾರಮಾರ್ಥಿಕವಾಗಿ ಏರಿಕೆ,ಇಳಿಕೆ ಯಾವುದೂ ಇಲ್ಲ. ಅವನು ಸರ್ವತ್ರ ಸದಾ ಪರಿಪೂರ್ಣನು.ಕರ್ಮಸಂಬಂಧದಿಂದ ಉಂಟಾಗುವ ಹುಟ್ಟೂ ಅವನಿಗೆ ವಾಸ್ತವವಾಗಿ ಇಲ್ಲ. ಅವನಿಗೆ ಅವತಾರವನ್ನು ಹೇಳಿರುವುದು ಔಪಚಾರಿಕ ಅರ್ಥದಲ್ಲಿ ಮಾತ್ರ.ಅವನು ತನ್ನ ಸಂಕಲ್ಪದಿಂದ ಇಲ್ಲಿ ಯಾವಾಗ ಜೀವಿಗಳಿಗೆ ವ್ಯಕ್ತಪಡುತ್ತಾನೆಯೋ ಆಗ ಅದು ಅವನ ‘ಅವತಾರ’ ಎಂದು ಕರೆಯಲಾಗಿದೆ.ಹೀಗೆ ಭಗವಂತನ ಅವತಾರವು ಅಭಿವ್ಯಕ್ತಿಯೇ ಹೊರತು ವಾಸ್ತವವಾದ ಇಳಿತವಲ್ಲವಾದ್ದರಿಂದ ಅವನ ಪೂರ್ಣತೆ ವ್ಯಾಪಕತೆಗಳಿಗೆ ವಿರೋಧವೇನೂ ಇಲ್ಲ. ಹುಟ್ಟುಸಾವುಗಳನ್ನು ವಿಕಾರವೆಂದು ಕರೆಯುವ ಶಾಸ್ತ್ರಗಳು ಭಗವಂತನನ್ನು ಅಜಾಯಮಾನೋ ಬಹುಧಾ ವಿಜಾಯತೇ-ಅಂದರೆ ಹುಟ್ಟದೆಯೇ ಹುಟ್ಟುತ್ತಾನೆ ಎನ್ನುತ್ತವೆ. ಅಂದರೆ ಅವನು ತನ್ನ ಸಂಕಲ್ಪಕ್ಕೆ ಅನುಗುಣವಾಗಿ ಅಭಿವ್ಯಕ್ತನಾಗುತ್ತಾನೆಯೇ ಹೊರತು ಜನ್ಮಾಂತರದ ಕರ್ಮಗಳ ಕಾರಣದಿಂದಲ್ಲ. ಆದ್ದರಿಂದ ವಿಕಾರವೆಂಬುದು ಅವನಿಗೆ ಅನ್ವಯಿಸುವುದಿಲ್ಲ. ಅಂತರ್ಯಾಮಿಯಾಗಿ ತನ್ನ ಸಂಕಲ್ಪವನ್ನು ಪೂರೈಸಿಕೊಳ್ಳುವುದು ಸರ್ವಶಕ್ತನಾದ ಅವನಿಗೆ ಅಸಾಧ್ಯವೇನಲ್ಲ. ಹಾಗೆಂದು ಭಕ್ತರ ಅಂತರ್ಬಾಹ್ಯ ದೃಷ್ಟಿಗೆ ಗೋಚರನಾಗಿ,ಪರಮನಯನೋತ್ಸವಕಾರಣನಾಗಿ ಅವರನ್ನು ಉದ್ಧಾರ ಮಾಡುವ ಸ್ವಾತಂತ್ರ್ಯ ಅವನಿಗಿಲ್ಲವೆ ? ಅವತಾರಪುರುಷರು ಧ್ಯಾನಕ್ಕೆ ಶುಭಾಶ್ರಯರಾಗಿ ಉಪಾಸಕರಿಗೆ ಭೋಗ-ಮೋಕ್ಷಗಳನ್ನು ಅನುಗ್ರಹಿಸುವ ಶಕ್ತಿಯುಳ್ಳವರಾಗಿರುತ್ತಾರೆ. ಅವತಾರಕ್ಕೆ ಪೂರ್ವದಲ್ಲೂ, ಅವತಾರಕಾಲದಲ್ಲೂ ಮತ್ತು ಉಪಸಂಹಾರದ ನಂತರವೂ ಅವರ ಸತ್ತೆಯು-ಪ್ರಭಾವವು ಒಂದೇ ತೆರನಾಗಿರುತ್ತದೆ. ಅದೇ ತಾನು ಒಬ್ಬ ಜೀವಿಯಾಗಿದ್ದು ತನ್ನ ಸಾಧನೆಯಿಂದ ಸಿದ್ಧಿಯನ್ನು ಪಡೆದವನಿಗೆ ಆ ಮಟ್ಟದ ಸಾಮರ್ಥ್ಯವಿರುವುದಿಲ್ಲ. ಇನ್ನು ಆದರ್ಶವಾದ ಜೀವನವನ್ನು ನಡೆಸಿರುವ ನಾಯಕನಾಗಿದ್ದಲ್ಲಿ ಅವನ ಅನುಕರಣೆಯಿಂದ ಜನರು ಧಾರ್ಮಿಕರಾಗಬಹುದು ಅಷ್ಟೆ. ಹೀಗೆ ಅವತಾರದ ಪರಿಕಲ್ಪನೆಯು ಅತೀಂದ್ರಿಯ ಅನುಭವಸಂಪನ್ನರ ಕಾರಣದಿಂದ ಭಾರತೀಯರ ಜೀವನವನ್ನು ಹಾಸುಹೊಕ್ಕಾಗಿ ವ್ಯಾಪಿಸಿಕೊಂಡಿದೆ.
ಮೈಸೂರು: ಮೈಸೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚಾಗಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಇವರು, ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017-18ನೇ ದ್ವಿಚಕ್ರ ವಾಹನಗಳ ಕಳ್ಳತನ ಕಡಿಮೆಯಾಗಿದೆ. 2013ರಲ್ಲಿ 378, 2014ರಲ್ಲಿ 334, 2015ರಲ್ಲಿ 340, 2016ರಲ್ಲಿ 414, 2017ರಲ್ಲಿ 305 ಪ್ರಕರಣಗಳು ದಾಖಲಾಗಿದ್ದರೆ, ಪ್ರಸಕ್ತ ವರ್ಷದ ಜನವರಿಯಲ್ಲಿ 17, ಫೆಬ್ರವರಿಯಲ್ಲಿ 14, ಮಾರ್ಚ್‍ನಲ್ಲಿ 17, ಏಪ್ರಿಲ್‍ನಲ್ಲಿ 18, ಮೇನಲ್ಲಿ 29 ಹಾಗೂ ಜೂನ್ ತಿಂಗಳ ಇಂದಿನವರೆಗೆ 23 ಸೇರಿದಂತೆ ಒಟ್ಟು 118 ದ್ವಿಚಕ್ರ ವಾಹನಗಳ ಕಳ್ಳತನವಾಗಿದೆ ಎಂದು ವಿವರಿಸಿದ್ದಾರೆ. ಹೊಸ ಕಳ್ಳರ ಕೈವಾಡದ ಶಂಕೆ: ಪ್ರಸಕ್ತ ವರ್ಷದ ಮೇ ಹಾಗೂ ಜೂನ್ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇದರ ಹಿಂದೆ ಯಾವುದೋ ನೂತನ ಕಳ್ಳರ ಗುಂಪಿನ ಕೈವಾಡವಿರುವ ಶಂಕೆಯಿದ್ದು, ಪತ್ತೆ ಹಚ್ಚಲು ವಿಶೇಷ ಕ್ರಮಗಳೊಂದಿಗೆ ಸಕ್ರಿಯರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. ನಿಯಂತ್ರಣಕ್ಕೆ ವಿಶೇಷ ಕ್ರಮ: ದ್ವಿಚಕ್ರ ವಾಹನ ಕಳ್ಳತನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ `ಆಪರೇಷನ್ ಚೀತಾ’ ಕಾರ್ಯಾಚರಣೆ ಆರಂಭಿಸಲಾಗಿದ್ದು, ಸಂಚಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಒಟ್ಟಾಗಿ ವಾಹನಗಳ ತಪಾಸಣೆ ನಡೆಸಲಿದ್ದಾರೆ. ನಗರದ ರಾತ್ರಿ ಗಸ್ತನ್ನು ಸಂಪೂರ್ಣವಾಗಿ ಪುನರ್ ರಚನೆ ಮಾಡಿ `ಆಪರೇಷನ್ ಈಗಲ್’ ಸಕ್ರಿಯಗೊಳಿಸಲಾಗಿದೆ. ದ್ವಿಚಕ್ರ ವಾಹನಗಳು ಹೆಚ್ಚು ಕಳ್ಳತನವಾಗುವ ಸ್ಥಳಗಳಲ್ಲಿ ಸಾದಾ ಉಡುಪಿನಲ್ಲಿರುವ ಪೊಲೀಸರು ನಿರಂತರ `ಆಪರೇಷನ್ ಡೀಲ್ ಕಾಯ್’ ನಡೆಸಲಿದ್ದಾರೆ. ಪಾರ್ಕಿಂಗ್ ಸ್ಥಳಗಳಲ್ಲಿ ಲಾಕ್ ಮಾಡದೆ ನಿಲ್ಲಿಸಿರುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಮಾಲೀಕರಿಗೆ ತಿಳುವಳಿಕೆ ನೀಡಿ, ದಾಖಲೆಗಳನ್ನು ಪರಿಶೀಲಿಸಿ, ಹಿಂದಿರುಗಿಸುವ ಕಾರ್ಯವನ್ನು ಮುಂದುವರಿಸಲಾಗಿದೆ. ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರಮುಖ ಪಾರ್ಕಿಂಗ್ ಸ್ಥಳಗಳಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗುವುದು. ಕಳುವಾದ ವಾಹನಗಳ ಪತ್ತೆಗೆ ಅಪರಾಧ ವಿಭಾಗದ ನುರಿತ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿರುವ ನಗರ ಪೊಲೀಸ್ ಆಯುಕ್ತರು, ಸಾರ್ವಜನಿಕರು ತಮ್ಮ ವಾಹನಗಳನ್ನು ಸುರಕ್ಷಿತ ಸ್ಥಳಗಳಲ್ಲಿ, ಸೂಕ್ತ ಲಾಕಿಂಗ್ ವ್ಯವಸ್ಥೆಯೊಂದಿಗೆ ನಿಲುಗಡೆ ಮಾಡುವ ಮೂಲಕ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಯಾರಿಗಾದ್ರು ಫೋನ್ ಮಾಡಿದಾಗ ನೆಟ್‌ವರ್ಕ್‌ ಸಿಗದೇ ಅಥವಾ ಅವರ ಫೋನ್ ಸ್ವಿಚ್‌ ಆಫ್‌ ಆಗಿದ್ದಾಗ ಕೇಳಿ ಬರುವ ಒಂದೇ ಒಂದು ಸಂದೇಶ ಅಂದ್ರೆ ಅದು ವಾಯ್ಸ್ ಮೇಲ್ (voicemail) ಕಳಿಸಲು ಒಂದನ್ನು ಕ್ಲಿಕ್ ಮಾಡಿ ಎಂಬುದು. ಈ ಅನುಭವ ಮೊಬೈಲ್ ಹೊಂದಿರುವ ಪ್ರತಿಯೊಬ್ಬರಿಗೂ ಆಗಿರುತ್ತದೆ. ಆದರೆ ಭಾರತದಲ್ಲಿ ಆಲ್‌ ಮೋಸ್ಟ್ ಶೇಕಡ 5 ಜನರು ಸಹ ವಾಯ್ಸ್ ಮೇಲ್(voicemail) ಬಳಕೆ ಮಾಡುವುದಿಲ್ಲ. ಅಲ್ಲದೇ ಮೊಬೈಲ್‌ ನಲ್ಲಿ ವಾಯ್ಸ್ ಮೇಲ್ ಫೀಚರ್ ಅನ್ನೇ ಯಾರು ಸಹ ಬಳಸುವುದೇ ಇಲ್ಲ. ಇದಕ್ಕೆ ಕಾರಣಗಳಲ್ಲಿ ಇಷ್ಟವಿಲ್ಲದೇ ಇರಬಹುದು ಹಾಗೂ ವಾಯ್ಸ್‌ಮೇಲ್ ಬಳಕೆ ಹೇಗೆ ಮತ್ತು ಅದರ ಉಪಯೋಗ ತಿಳಿಯದೇ ಇರಬಹುದು. ಆದ್ದರಿಂದ ವಾಯ್ಸ್ ಮೇಲ್ ಬಗ್ಗೆ ಒಂದಷ್ಟು ಉಪಯುಕ್ತ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಅಂದಹಾಗೆ ಎಲ್ಲಾ ಟೆಲಿಕಾಂಗಳು ಸಹ ವಾಯ್ಸ್ ಮೇಲ್(voicemail) ಸೇವೆಯನ್ನು ಹೊಂದಿದ್ದು ಬಳಕೆ ಮಾಡುವುದು ಅತೀ ಸುಲಭ. ಫೋನ್ ಕರೆ ಬಿಲ್‌ ಗಿಂತಲೂ ವಾಯ್ಸ್ ಮೇಲ್ ಸೇವೆ ಬಿಲ್ ಕಡಿಮೆ. ಈ ಲೇಖನದಲ್ಲಿ ವೊಡಾಫೋನ್ ಬಳಕೆದಾರರು ಕೇವಲ ಐದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ವಾಯ್ಸ್‌ಮೇಲ್ ಸೇವೆಯನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ. ದಿನನಿತ್ಯ ಹಲವು ಮುಖ್ಯ ಕರೆಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ, ನನಗೆ ಕರೆ ಮಾಡಿದವರು ಯಾರು ಎಂದು ತಿಳಿಯಲು ಅಥವಾ ನೀವೆ ಇನ್ನೊಬ್ಬರಿಗೆ ಕರೆ ಮಾಡಿದಾಗ ಕರೆ ಕನೆಕ್ಟ್ ಆಗದಿದ್ದಲ್ಲಿ ವಾಯ ಮೇಲ್ ಕಳುಹಿಸಿಲು ವಾಯ್ಸ್‌ಮೇಲ್ ಅನುಕೂಲ. ವೊಡಾಫೋನ್ ಬಳಕೆದಾರರು ವಾಯ್ಸ್‌ಮೇಲ್ ಸೇವೆ ಆಕ್ಟಿವೇಟ್‌ ಮಾಡಿಕೊಳ್ಳಲು ಈ ಕೆಳಗಿನ 4 ಹಂತಗಳನ್ನು ಅನುಸರಿಸಿ 1. ವೊಡಾಫೋನ್ ಬಳಕೆದಾರರು ನಿಮ್ಮ ಮೆಸೇಜ್ ಬಾಕ್ಸ್‌ ನಲ್ಲಿ ACT VMS ಎಂದು ಟೈಪ್‌ ಮಾಡಿ 199 ಗೆ ಎಸ್‌ಎಂಎಸ್‌ ಕಳುಹಿಸಿ. 2. ಮೇಲೆ ತಿಳಿಸಿದಂತೆ ಸಂದೇಶ ಕಳುಹಿಸಿದ ನಂತರ ಒಂದು ರೀಪ್ಲೇ ಎಸ್‌ಎಂಎಸ್‌ ವಾಯ್ಸ್‌ಮೇಲ್‌ ಸೇವೆ ಖಚಿತ ಮಾಡಲು 1 ಟೈಪಿಸಿ ಎಂದು ಹಾಗೂ ತಿಂಗಳಿಗೆ ಎಷ್ಟು ಚಾರ್ಚ್ ಆಗುತ್ತದೆ ಎಂಬುದರ ಸಹಿತ ಬರುತ್ತದೆ. ಅದಕ್ಕೆ 1 ಅನ್ನು ಟೈಪಿಸಿ ರೀಪ್ಲೇ ಮಾಡಿ. 3 ವಾಯ್ಸ್‌ಮೇಲ್ ಸೇವೆ ಆಕ್ಟಿವೇಟ್ ಆದ ಬಗ್ಗೆ ನಿಮಗೆ ಪುನಃ ಟೆಲಿಕಾಂ ಆಪರೇಟರ್‌ನಿಂದ 30 ನಿಮಿಷದಲ್ಲಿ ಸೇವೆಯನ್ನು ಆರಂಭಿಸಬಹುದು ಎಂದು ಎಸ್‌ಎಂಎಸ್‌ ಬರುತ್ತದೆ. 4. ಮುಂದಿನ ಹಂತದಲ್ಲಿ ನಿಮ್ಮ ವಾಯ್ಸ್‌ಮೇಲ್‌ ಸೇವೆಗೆ ಪಾಸ್‌ವರ್ಡ್‌ ಮತ್ತು ಇತರೆ ಸೆಟ್ಟಿಂಗ್ಸ್‌ಗಳನ್ನು ನಿಮಗೆ ಬೇಕಾದಂತೆ ಅಳವಡಿಸಿಕೊಳ್ಳಬಹುದು. ವಾಯ್ಸ್‌ಮೇಲ್ ಅಪ್‌ಗ್ರೇಡ್‌ನಿಂದ ಲಭ್ಯವಾಗುವ ಹೆಚ್ಚಿನ ಫೀಚರ್‌ಗಳು -ಉತ್ತಮ ಬಳಕೆ ಸ್ನೇಹಿ ಫೀಚರ್‌ಗಳು -ಹೊಸ ವಾಯ್ಸ್‌ ಮೆಸೇಜ್ ಸ್ವೀಕರಿಸಿದಾಗ ಎಸ್‌ಎಂಎಸ್‌ ಅಲರ್ಟ್‌ -ವಾಯ್ಸ್‌ಮೇಲ್ ಪೂರ್ಣವಾದಾಗ ಎಸ್‌ಎಂಎಸ್‌ ಅಲರ್ಟ್‌ -ಬಹುಮುಖ್ಯವಾದ ವಾಯ್ಸ್‌ಮೇಲ್ ಗಳನ್ನು ಉಳಿಸಿಕೊಳ್ಳಲು ಆಯ್ಕೆಗಳು If you daily receiving many calls and missing important ones, and always trying to find out who called you for what ?, Get Voice mail it will give you easy life. Four Steps To Enable VoiceMail Service On Your Vodafone Mobile.
ಈಚೆಗಷ್ಟೇ ನಾನು ಗುರುವಿನ ಶಕುಂತಳಾ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹಾಕಿಕೊಂಡಿದ್ದ ಟಿಪ್ಪಣಿಗಳಾಧಾರದ ಮೇಲೆ ಅವರ ಬಗೆಗೆ ಬರೆದಿದ್ದೆ. ಆ ಬರಹದ ಕಡೆಯ ಸಾಲುಗಳಿಂದ ಅವರ ಈ ವರೆಗಿನ ಬರವಣಿಗೆಯ ಅವಲೋಕನ ಮಾಡುತ್ತೇನೆ. "ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ." ಹೀಗೆ ಬರೆಯುತ್ತಿದ್ದಾಗ ನನಗೆ ಗುರುವಿನ ಮಿಕ್ಕ ಕೃತಿಗಳ ಪರಿಚಯವಿರಲಿಲ್ಲ. ಅವರ ಕಾದಂಬರಿ ಬಿಳಿಯ ಚಾದರ ಬಿಡುಗಡೆಯಾಗಿರಲಿಲ್ಲ ಹಾಗೂ ಅವರ ಎರಡೂ ಪುಸ್ತಕಗಳಾದ ನಿರ್ಗುಣ ಮತ್ತು ಪ್ರಬಂಧಗಳ ಸಂಕಲನವಾದ ವೈದ್ಯ-ಮತ್ತೊಬ್ಬ ನಾನು ಓದಿರಲಿಲ್ಲ. ಈಗ ನಾನು ಅವುಗಳೆಲ್ಲವನ್ನೂ ಓದಿದ್ದೇನೆ. ಓದಿದ ನಂತರವೂ ನನ್ನ ಮೇಲಿನ ಅಭಿಪ್ರಾಯದಲ್ಲಿ ಮೂಲಭೂತ ಬದಲಾವಣೆಯೇನೂ ಆಗಿಲ್ಲ. ಆದರೂ ಒಬ್ಬ ಲೇಖಕನ ಕಾಳಜಿಗಳು ಹಾಗೂ ಬರಹಗಾರ ತೆರೆದುಕೊಳ್ಳುವ ರೀತಿಯಬಗ್ಗೆ ಕೆಲ ಒಳನೋಟಗಳನ್ನು ನಾನು ಈ ಹೊಸ ಓದಿನ ಮೂಲಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಗುರುವಿನ ಮೊದಲ ಪುಸ್ತಕ ನಿರ್ಗುಣವನ್ನ ಒಂದು ಮಹತ್ವದ ಡೆಬ್ಯು - ಅದ್ಭುತವಾದ ಮೊದಲ ಪುಸ್ತಕ - ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಬಹುಶಃ ಎಲ್ಲ ಹೊಸ ಲೇಖಕರಂತೆ ಗುರು ತಮ್ಮದೇ ಧ್ವನಿಯನ್ನೂ ವ್ಯಕ್ತಿತ್ವವನ್ನೂ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆ ಸಂಕಲನದಲ್ಲಿ ಗುರು ತಮ್ಮ ಕಾಳಜಿಗಳನ್ನೂ ಕಥನ ಶೈಲಿಯನ್ನೂ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನಿರ್ಗುಣದಲ್ಲಿರುವ ಕಥೆಗಳು ಒಳಗಿರುವ ತಹತಹವನ್ನೆಲ್ಲಾ ಕಕ್ಕಬೇಕೆನ್ನುವ ಅತೀ ಬರವಣಿಗೆಯ ಕಥೆಗಳೆನ್ನಿಸುತ್ತವೆ. ಈ ಅತೀ ಬರವಣಿಗೆ ಮತ್ತು ಕೆಲಮಟ್ಟಿಗೆ ’ಕಾಳಜಿ’ಗಳ ಕೃತಕತೆ ಓದುಗ ವಲಯವನ್ನು [ಕಥಾಸ್ಪರ್ಧೆಯ ತೀರ್ಪುಗಾರರು, ವಿಮರ್ಶಕರು, ಬರವಣಿಗೆಯನ್ನು ಗಮನಿಸಬೇಕಾದ ಸಂಪಾದಕರು, ಸಂಪಾದಕರಿಗೆ ಓಲೆಯನ್ನು ಬರೆಯಬಹುದಾದ ಎಕ್ಟಿವಿಸ್ಟ್ ಓದುಗರು, ಹೀಗೆ] ಮನಸ್ಸಿನಲ್ಲಿ ಇಟ್ಟು ಬರೆದಾಗ ಉಂಟಾಗುತ್ತದೆ. ಬಹುಶಃ ಲೇಖಕರಾಗಿ ನಾವೆಲ್ಲರೂ ಈ ಪ್ರಕ್ರಿಯೆಯ ಮೂಲಕವೇ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಅನ್ನಿಸುತ್ತದೆ. ಈ ವಿಕಸನದ ಪ್ರಕ್ರಿಯೆಯಲ್ಲಿ ಎಲ್ಲೋ ಬೇರೊಬ್ಬರ ಅಭಿಪ್ರಾಯ ಹೇಗೆ ಬರಬಹುದು ಅನ್ನುವುದಿಕ್ಕಿಂತ ತನಗೆ ಏನು ಹೇಳಬೇಕಾಗಿದೆ ಅನ್ನುವ ಘಟ್ಟಕ್ಕೆ ಬಂದಾಗಲೇ ಲೇಖಕನ ಮೂಲಭೂತ ಶೈಲಿ ಮತ್ತು ಕಾಳಜಿಗಳು ತೆರೆದುಕೊಳ್ಳುತ್ತವೆಯೇನೋ. ಒಬ್ಬ ಲೇಖಕ ಆ ಮೊದಲ ಘಟ್ಟದಿಂದ ಎರಡನೆಯ ಘಟ್ಟಕ್ಕೆ ಎಷ್ಟು ಬೇಗ ಸೀಮೋಲ್ಲಂಘನ ಮಾಡಬಹುದೋ ಅಷ್ಟುಬೇಗ ಸಾರಸ್ವತ ಲೋಕ ಆತನನ್ನು ಗಮನಿಸುತ್ತದೆ. ಆದರೆ ಆ ಗಮನವನ್ನು ಸೆಳೆಯಲು ಇಂಥ ಸೀಮೋಲ್ಲಂಘನ ಮಾಡಿದ ಲೇಖಕನಲ್ಲಿ ಮೂಲಭೂತವಾದ ಸೃಜನಶೀಲತೆ ಮತ್ತು ನಿಜವಾದಂತಹ ನಂಬಿಕೆಗಳಿರಬೇಕು. ಎಷ್ಟೋ ಲೇಖಕರು ಈ ಸೀಮೋಲ್ಲಂಘನ ಮಾಡಲಾರದೆಯೇ ಮೊದಲ ಘಟ್ಟದಲ್ಲಿಯೇ ತಮ್ಮ ಮೆಚ್ಚುಗೆಯನ್ನು ಹೊರಪ್ರಪಂಚದಿಂದ ಬಯಸುತ್ತಲೇ ’ಜನಪ್ರಿಯ’ರಾಗುವ ನೆಲೆಯಲ್ಲಿ ನಿಂತುಬಿಡುತ್ತಾರೆ - ಈ ಸಾಲಿನಲ್ಲಿ ನನಗೆ ತಕ್ಷಣ ಮನಸ್ಸಿಗೆ ತಟ್ಟುವ ಲೇಖಕ ನಾಗತಿಹಳ್ಳಿ ಚಂದ್ರಶೇಖರ. ನಾಗತಿಹಳ್ಳಿಗೆ ಭಾಷೆಯ ಮೇಲಿನ ಪ್ರಭುತ್ವವೂ ಇತ್ತು, ಜೀವನಾನುಭವದ ಭಿನ್ನತೆಯ ದೊಡ್ಡ ಬುತ್ತಿಯೂ ಇತ್ತು, ಆದರೆ ನಾಗತಿಹಳ್ಳಿ ಈ ಸೀಮೋಲ್ಲಂಘನ ಮಾಡದೆಯೇ ಬೇರೊಂದು ದಾರಿಯನ್ನು ಹಿಡಿದರು. ಗುರು ತಮ್ಮ ಶಕುಂತಳಾ ಮತ್ತು ಬಿಳಿಯ ಚಾದರ ಪುಸ್ತಕಗಳ ಮೂಲಕ ಸಾಹಿತ್ಯಿಕವಾಗಿ ಆ ಸೀಮೋಲ್ಲಂಘನವನ್ನು ಮಾಡಿದ್ದಾರೆ. ಹೀಗೆ ಅವರು ತಮ್ಮ ಸೃಜನಶೀಲಲೋಕದಲ್ಲಿ ಈ ಸೀಮೋಲ್ಲಂಘನವನ್ನು ಸಾಧಿಸಿದ್ದರೂ ಅವರ ’ವೈದ್ಯ ಮತ್ತೊಬ್ಬ’ ಒಬ್ಬ ಲೇಖಕನ ಮೊದಲ ಕೃತಿಯ ಎಲ್ಲ ಮಿತಿಗಳನ್ನೂ ಒಳಗೊಂಡಿದೆ. ಅವರ ಪ್ರಬಂಧಗಳಲ್ಲಿ ಅನೇಕ ಗಂಭೀರ ಕಾಳಜಿಗಳಿವೆಯಾದರೂ ಅವುಗಳ ಚರ್ಚೆಯನ್ನು ಗುರು ಏರಿಸಬೇಕಾದ ಎತ್ತರಕ್ಕೆ ಏರಿಸದೆಯೇ ಬಿಟ್ಟುಬಿಡುತ್ತಾರೆ. ಒಂದು ಥರದಲ್ಲಿ ಗುರುವಿನ ವೃತ್ತಿಯಾದ ವೈದ್ಯಕೀಯರಂಗ [ವೈದ್ಯ] - ಹಾಗೂ ಪ್ರವೃತ್ತಿಯ ಕಲೆ-ಸಾಹಿತ್ಯದ [ಇನ್ನೊಬ್ಬ] ಬಗ್ಗೆ ಬರೆಯುತ್ತಾ ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲಾಗದ ದ್ವಂದ್ವದಲ್ಲಿ ಗುರು ಇದ್ದಾರಾದರೂ, ಒಂದೊಂದೇ ಬಿಡಿ ಲೇಖನವನ್ನು ಓದಿದಾಗ ಅವರು ಒಂದು ತಕ್ಷಣದ ನಿಲುವನ್ನು ತೆಗೆದುಕೊಂಡು ಒಂದು ತೀರ್ಮಾನವನ್ನೂ ಕೊಟ್ಟುಬಿಡುತ್ತಿರುವಂತೆ ನಮಗೆ ಕಾಣಿಸುತ್ತದೆ. ಒಟ್ಟಾರೆ ಅವರ ತಲ್ಲಣ ಮಾರುಕಟ್ಟೆಯ ನೀತಿ ಹೀನ ಲಾಭಕೇಂದ್ರಿತ [ಅ]ಸಿದ್ಧಾಂತದ ಬಗ್ಗೆ ಇರುವುದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಅದಕ್ಕೆ ಸಮಾಧಾನವನ್ನು ಎಡಪಂಥೀಯರು ಮಾರುಕಟ್ಟೆಯಾಚೆಯ ಸರಕಾರೀ ರಂಗ ’ಸ್ಟೇಟ್’ನಲ್ಲಿ ಕಂಡುಕೊಂಡು ಮಾರುಕಟ್ಟೆಯನ್ನು ತಿರಸ್ಕರಿಸುವ ನಿಲುವನ್ನೂ ಗುರು ಒಪ್ಪುತ್ತಿರುವಂತೆ ಕಾಣುವುದಿಲ್ಲ. ಹೀಗಾಗಿ ಸಿದ್ಧಾಂತವೇ ಇಲ್ಲದ ಮಾರುಕಟ್ಟೆಯಲ್ಲಿಯೇ ಅವರು ಎಥಿಕಲ್ ಪ್ರವೃತ್ತಿಯನ್ನು ಕಂಡುಕೊಳ್ಳಬೇಕೆಂಬ ತೀರ್ಮಾನವನ್ನು ಮಾಡಿ ಅದಕ್ಕೆ ದಾರಿಯನ್ನು ಹುಡುಕುತ್ತಿರುವ ಹಾಗೂ ಆ ನಿಟ್ಟಿನಲ್ಲಿ ಸಫಲರಾಗದೆಯೇ ಚಡಪಡಿಸುತ್ತಿರುವಂತೆ ಕಾಣುತ್ತಾರೆ. ಒಂದು ಥರದಲ್ಲಿ, ಗುರುವಿಗೆ ಸಮಸ್ಯೆ ಏನೆಂಬುದು ಗೊತ್ತು, ಅದಕ್ಕೆ ಅವರದೇ ತಕ್ಷಣ ಉತ್ತರವನ್ನೂ ಅವರು ಕಂಡುಕೊಂಡಿದ್ದಾರೆ - ಆದರೆ ಆ ಉತ್ತರ ಸಮಸ್ಯೆಯ ಸಂದರ್ಭಕ್ಕೆ ಸಮಂಜಸವಾದದ್ದೇ ಅಲ್ಲವೇ ಅನ್ನುವ ದ್ವಂದ್ವವನ್ನು ಅವರು ಪರಿಷ್ಕರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ, ಅಷ್ಟೇ ಅಲ್ಲ ಅವರ ’ಪ್ರಿಸ್ಕ್ರಿಪ್ಷನ್’ಗಳು ಕನ್ವಿಂಸಿಂಗ್ ಆಗಿಲ್ಲ. ಅವರ ಪ್ರಬಂಧಗಳ ಪ್ರಯೋಗವನ್ನು ಮೇಲಿನ ಸೀಮೋಲ್ಲಂಘಾನವನ್ನು ಹುಡುಕುತ್ತಿರುವ ಪ್ರಯೋಗಗಳಾಗಿಯೇ ನಾವು ನೋಡಬೇಕಾಗಿದೆ. ಹೀಗಾಗಿಯೇ ಅವರು ದಂತವೈದ್ಯನ ಕ್ಲಿನಿಕ್ಕನ್ನೂ, ಅವನ ತಲ್ಲಣವನ್ನೂ, ವೈದ್ಯಕೀಯರಂಗದಲ್ಲೂ ಮೆಕ್‍ಡೊನಲ್ಡ್ ಥರದ ಸಮರೂಪತೆಯನ್ನೂ ತರಬಹುದಾದ ಆಶಯವನ್ನು ಅವರು ಮಾರುಕಟ್ಟೆಯ ಸೂತ್ರದಡಿಯಲ್ಲಿಯೇ ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಸಮಸ್ಯೆಯ ಪದರಗಳು ಅತೀ ಜಟಿಲವಾಗಿರುವಾಗ ಅದನ್ನು ಚರ್ಚಿಸುವುದೇ, ಬಿಡಿಸಿನೋಡುವುದೇ ಅದರ ಸಮಾಧಾನದತ್ತ ಒಂದು ಹೆಜ್ಜೆ ಅನ್ನುವುದನ್ನು ಗುರು ಮನಗಂಡಾಗ, ಹಾಗೂ ಪ್ರತಿಯೊಂದಕ್ಕೂ ಈಗಿನಿಂದೀಗಲೇ ಸಮಾಧಾನ ನೀಡಬೇಕೆಂಬ ತುರ್ತನ್ನು ಗುರು ಮೀರಿದಾಗ ಅವರು ಅವರ ವೈದ್ಯ ಮತ್ತೊಬ್ಬನ - ಸೀಮೋಲ್ಲಂಘನ ಮಾಡುತ್ತಾರೆ. ಗುರುವಿನ ಕೃತಿಗಳ ಹಿನ್ನೋಟವನ್ನು ನಾವಿಟ್ಟುಕೊಂಡರೆ ಅವರು ನಿರ್ಗುಣದಲ್ಲಿ ಈ ರೀತಿಯ ಸೀಮೋಲ್ಲಂಘನಕ್ಕೆ ತಯಾರಿ ಮಾಡುತ್ತಿರುವುದು ನಮಗೆ ಕಾಣುತ್ತದೆ. ಈ ಕಥೆಗಳ ಕಾಲಘಟ್ಟದಲ್ಲಿ ಎಷ್ಟು ಭಾರತದಲ್ಲಿ ಬರೆದವು, ಎಷ್ಟು ಕಥೆಗಳು ಅವರು ವಿದೇಶಕ್ಕೆ ಹೋಗಿ ಅಲ್ಲಿನ ಜೀವನವನ್ನು ನೋಡಿದ ನಂತರ ಬರೆದವು ಅನ್ನುವುದು ನನಗೆ ತಿಳಿಯದು. ಆದರೆ ಗುರು ಅವರ ಕಥೆಗಳ ಸಂದರ್ಭ ಭಾರತದಿಂದಾಚೆ ಹೋದ ಕೂಡಲೇ ಒಂದು ವಿಶಿಷ್ಟ ಪ್ರತಿಭೆಯನ್ನು ತೋರುವುದನ್ನು ನಾವು ನೋಡಬಹುದು. ಅವರ ಮಧ್ವ ವಿಜಯದಂತಹ ಕಥೆಗಳು ವಿಫಲಗೊಂಡಂತೆ ಅನ್ನಿಸುವುದು ಬಹುಶಃ ಅವು ಗುರುವಿನ ವೈಯಕ್ತಿಕ ಅನುಭವ ಕ್ಷೇತ್ರಕ್ಕಿಂತ ದೂರವಾಗಿರುವುದರಿಂದಲೇ ಇರಬಹುದು. ಉದಾಹರಣೆಗೆ ಅದ್ಭುತವಾದ ಕಥೆಯಾಗಬಹುದಾಗಿದ್ದ ’ಬರಿದೇ ಬಾರಿಸದಿರೋ ತಂಬೂರಿ’ ಒಂದು ವಾಚ್ಯ ಬಾಲಿಶ ಕಥೆಯಾಗುವುದು ಗುರು ಮೊದಲೇ ಒಂದು ’ಮೆಸೇಜ್’ ಕೊಡಬೇಕೆಂದು ನಿರ್ಧರಿಸಿ ಹೊರಟಿರುವ ಪ್ರವೃತ್ತಿಯನ್ನು ತೋರಿಸಿರುವುದರಿಂದ ಅನ್ನಿಸುತ್ತದೆ. ಹೀಗಾಗಿ ಗುರುವಿನ ಈ ಎರಡೂ ಕೃತಿಗಳನ್ನು ತಯಾರಿಯ ಕೃತಿಗಳೆಂದು ಪರಿಗಣಿಸಿ ಮಿಕ್ಕೆರಡು ಕೃತಿಗಳನ್ನು ಮಹತ್ವವನ್ನು ನಾವು ಚರ್ಚಿಸಬೇಕು. ’ವೈದ್ಯ ಮತ್ತೊಬ್ಬ’ದಲ್ಲಿರುವ ವೈದ್ಯಕೀಯ ತಲ್ಲಣಗಳನ್ನು ಅವರು ಶಕುಂತಳಾ ಮತ್ತು ಬಿಳಿಯ ಚಾದರದಲ್ಲಿ ಅಡಕಗೊಳಿಸಿದಾಗ ಆ ತಲ್ಲಣಗಳಿಗೆ ಒಂದು ಚೌಕಟ್ಟು ಸಿಗುತ್ತಿರುವುದು ಕಾಣಿಸುತ್ತದೆ. ಹೀಗಾಗಿ ಅವರ ಮೂಲ ತಲ್ಲಣಗಳಿಗೆ ಸರ್ವವ್ಯಾಪ್ತಿಯ ಸಮಾಧಾನವಿಲ್ಲ ಎನ್ನುವುದನ್ನು ನಾವು ಮನಗಾಣುತ್ತೇವೆ, [ಅದನ್ನು ಗುರು ಇನ್ನೂ ಮನಗಾಣಬೇಕಾಗಿದೆ]. ಎಲ್ಲ ತಲ್ಲಣಗಳಿಗೂ ಸಂದರ್ಭೋಚಿತವದ ಪರಿಹಾರಗಳೂ, ಹಾಗೂ ಅನೇಕ ಸಂದರ್ಭೋಚಿತ ಪರಿಹಾರಗಳು ಸರ್ವವ್ಯಾಪ್ತಿಯ ಪರಿಹಾರಗಳಿಗೆ ಆಂತರಿಕವಾಗಿ ವಿರುದ್ಧವಾಗಿರುವುದನ್ನೂ ನಾವು ಕಾಣಬಹುದು. ಒಂದು ರೀತಿಯಿಂದ ಸರಳೀಕರಿಸಿ ಹೇಳಬೇಕೆಂದರೆ ಗುರುವಿನ ಮೂಲ ಕಾಳಜಿಗಳು ನಿರಂತರವಾಗಿ ಎದುರಾಗುವ ದ್ವಂದ್ವಗಳನ್ನು ಪರಿಹರಿಸಿಕೊಳ್ಳುವುದೂ, ಮತ್ತು ಆ ಪರಿಹಾರಗಳಲ್ಲಿ ಒಂದು ಪದ್ಧತಿಯಿದೆಯೇ ಎಂದು ಶೋಧಿಸುವುದೂ ಆಗಿದೆ. ಸಮಾಜದ ನಿಟ್ಟಿನಲ್ಲಿ, ದೇಶಾಂತರದ ಕ್ಯಾನ್ವಾಸಿನಲ್ಲಿ ಗುರು ತಮ್ಮ ಬರವಣಿಗೆಯ ಚೌಕಟ್ಟನ್ನು ಸೃಷ್ಟಿಸುತ್ತಾರಾದರೂ ಅವರ ಮೂಲಸೆಲೆಯಿರುವುದು ವೈಯಕ್ತಿಕವಾಗಿ. ಈ ಮೂಲಸೆಲೆಯನ್ನು ಅವರು ಶಕುಂತಳಾ ಸಂಗ್ರಹದಲ್ಲಿ ತೋರಿಸಿದ್ದರಾದರೂ ಅದು ಬಿಳಿಯ ಚಾದರದಲ್ಲಿ ಎದ್ದು ಕಾಣುತ್ತದೆ. ’ವೈದ್ಯ ಮತ್ತೊಬ್ಬ’ದಲ್ಲಿ ಗುರು ತೆಗೆದುಕೊಂಡಿರುವ ನಿಲುವುಗಳು ಒಮ್ಮೊಮ್ಮೆ ಬಾಲಿಶ ಎನ್ನಿಸಲು ಅವರ ಬಿಳಿಯ ಚಾದರದ ಪದರಗಳೇ ಸಾಕ್ಷಿ ಎನ್ನಿಸಿವೆ. ’ಬಿಳಿಯ ಚಾದರ’ದಲ್ಲಿ - ಶಕುಂತಳಾದಲ್ಲಿರುವಂತೆಯೇ ಒಂದು ರೀತಿಯ ಡಾರ್ಕ್ ಹ್ಯೂಮರ್ ಇದೆ. ಎಲ್ಲವನ್ನೂ ಒಂದು ಕಾನೂನಿನ ಚೌಕಟ್ಟಿನಲ್ಲಿಟ್ಟು ತಗಾದೆಗೆ ತರುವ ಲಿಟಿಗೆಂಟ್ ಸೊಸೈಟಿಯ ಕುಹಕ - ಗೋರಿಯಲ್ಲಿ ಒಂದು ಕಾಲಿಟ್ಟಿದ್ದರೂ ಕಥಾನಾಯಕ ಶ್ರೀಧರನ ಮೇಲೆ ಕೇಸು ಹಾಕಿ ಹಣ ಕೊಳ್ಳೆ ಹೊಡೆವ ಪಿತೂರಿಯ ನಡುವೆ [ಅಪಘಾತ ಎನ್ನುವ ಭಾಗ, ಪುಟ ೧೪೮] ಕಾಣಿಸುತ್ತದೆ. ಶಕುಂತಳಾದಲ್ಲಿ ಪ್ರಾರಂಭವಾದ - ಕುಟುಂಬ- ಅದರೊಳಗಿನ ಸಂಬಂಧಗಳು, ಸಮಾಜದಲ್ಲಿನ ಸಂಬಂಧಗಳ ಸೂಕ್ಷ್ಮ ಹಾಗೂ ತುಂಡಾಗುತ್ತಿರುವ ಎಳೆಗಳ ತಲ್ಲಣವನ್ನು ಗುರು ’ಬಿಳಿ ಚಾದರ’ದಲ್ಲಿ ಸಶಕ್ತವಾಗಿ ಮುಂದುವರೆಸುತ್ತಾರೆ. ’ಬಿಳಿಯ ಚಾದರ’ದಲ್ಲಿರುವ ಎಲ್ಲ ಪಾತ್ರಗಳೂ ಏಕಾಂಗಿಗಳು. ಯಾರಿಗೂ ಯಾವುದೇ ಸಂಬಂಧಗಳ ಬಗ್ಗೆ ಭಾವೋದ್ವೇಗವಿಲ್ಲ. ಎಲ್ಲವೂ ಲಾವಾದೇವಿಯ ಒಂದು ಹಂತದಲ್ಲೇ ಉಳಿದುಬಿಡುತ್ತದೆ. ಎಲ್ಲ ಪಾತ್ರಗಳಿಗೂ ಖಾಸಗೀ ನಿಟ್ಟಿನಲ್ಲಿ ಮೌಲ್ಯಗಳ ಎಥಿಕಲ್ ದ್ವಂದ್ವಗಳು. ಆದರೆ ಅದಕ್ಕೆ ಸಮಾಜದ ಒಂದು ಹಂದರ ಒಗ್ಗದೇ ಸಮಾಜದ ಸ್ಥರದಲ್ಲಿ ಸಾಮಾಜಿಕ ಮೌಲ್ಯಗಳ ಚೌಕಟ್ಟಿನಲ್ಲಿ ಪರಿಷ್ಕಾರ ಒಂದೂ ಪಾತ್ರಕ್ಕೆ ಸಿಗದಿರುವುದೂ, ಖಾಸಗೀ ನಿಟ್ಟಿನಲ್ಲಿಯೇ ಆ ತಲ್ಲಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂಬ ಒಂದು ಏಲಿಯನೇಟೆಡ್ ಧ್ವನಿಯನ್ನು ಗುರು ತೋರಿಸುತ್ತಾರೆ. ಸಾಮೂಹಿಕ ಸ್ಥರದಲ್ಲಿ ಸಂಬಂಧಗಳನ್ನು ಇರಿಸಿ ನೋಡುವ ಮೊದಲಿನ ಕಥೆಗಳಾದ ಮಧ್ವ ವಿಜಯ, ನಿರ್ಗುಣ, ವಿಚ್ಛಿನ್ನ, ಪ್ರವೇಶದಂತಹ ಕಥೆಗಳಲ್ಲಿ ಖಾಸಗೀ ನಿರ್ಧಾರಗಳನ್ನು ಪಾತ್ರಗಳು ತೆಗೆದುಕೊಂಡರೂ ಸಾಮಾಜಿಕ ನೀತಿ ನಿಯಮಗಳ ದೊಡ್ಡ ಕ್ಯಾನ್ವಾಸಿನಲ್ಲಿ ಅದನ್ನು ಪರೀಕ್ಷಿಸುವುದಲ್ಲದೇ ಅದನ್ನು ಆ ಮಟ್ಟದಲ್ಲಿ ಇತರ ಪಾತ್ರಗಳೊಂದಿಗೆ ಚರ್ಚಿಸುವ ವಾಚ್ಯವನ್ನು ಗುರು ತೋರಿಸುತ್ತಾರೆ. ಆದರೆ ಶಕುಂತಳಾಕ್ಕೆ ಬರುವ ವೇಳೆಗೆ ಇದು ಇನ್ನಷ್ಟು ಖಾಸಗಿಯಾಗುತ್ತಾ ಹೋಗುತ್ತದೆ. ಹೀಗಾಗಿ ಬೀಜ, ಅಲಬಾಮಾದ ಅಪನವಾಯು, ದೇಜಾವೂ, ಕಥೆಗಳನ್ನು ಅವರು ಹೆಚ್ಚು ಖಾಸಗಿಯಾಗಿಸುತ್ತಲೇ ದೊಡ್ಡ ಸಾಮಾಜಿಕ ಕಡಿವಾಣಗಳು - ನಿಯಮಗಳನ್ನು ಕುಹಕದ ದೃಷ್ಟಿಯಿಂದ ನೋಡಲು ಪ್ರಾರಂಭಿಸುತ್ತಾರೆ. ’ಬಿಳಿಯ ಚಾದರ’ದ ವೇಳೆಗೆ ಈ ಕೊಂಡಿಗಳೆಲ್ಲ ಕಳಚಿಬಿದ್ದು ಏಕಾಂಗಿತನದ ಏಲಿಯೇಷನ್ನಿನ ತಾರಕಕ್ಕೆ ಗುರು ತಮ್ಮ ಪಾತ್ರಗಳನ್ನು ತಂದುಬಿಟ್ಟಿದ್ದಾರೆ. ’ಬಿಳಿಯ ಚಾದರ’ದಲ್ಲಿನ ಮುಖ್ಯ ಪಾತ್ರಗಳಾದ ಶ್ರೀಧರ, ರಶ್ಮಿ, ಬೆಟ್ಟಿ, ಘೂಗೆ, ನಾಗೇಶ, ಮತ್ತು ತಾಯಿಯರ ಪಾತ್ರಗಳನ್ನು ಪ್ರಾತಿನಿಧಿಕವಾಗಿ ನಾವು ತೆಗೆದುಕೊಂಡರೆ ಎಲ್ಲರೂ ಒಂದು ನಿಟ್ಟಿನ ಎಥಿಕಲ್ ಡೈಲೆಮಾಗಳನ್ನು ಎದುರಿಸುತ್ತಲೇ, ತಮ್ಮ ಸುತ್ತು ಸಮಾಜವೇ ಇಲ್ಲವೇನೋ ಅನ್ನುವಂತೆ ಖಾಸಗಿಯಾಗಿ ನಿರ್ಧಾರಗಳನ್ನು ಒಂದು ಅವ್ಯಕ್ತ ಸ್ವಾರ್ಥಪರತೆಯಿಂದ ತೆಗೆದುಕೊಳ್ಳುತ್ತಿದ್ದಾರೆ. ಶ್ರೀಧರ ಬೆಟ್ಟಿಯ ಸಂಬಂಧದಲ್ಲಿನ್ನಿನ ವ್ಯಾವಹಾರಿಕತೆ ಮತ್ತು ಅವರುಗಳ ನಡುವೆ ಬರುವ ಬೆಟ್ಟಿಯ ಬಸಿರನ್ನು ಉಳಿಸಬೇಕೋ ಇಲ್ಲವೋ ಅನ್ನುವ ಚರ್ಚೆ ಖಾಸಗೀ ಅನುಕೂಲತೆ ಮತ್ತು ನಂಬಿಕೆಗಳ ಆಧಾರವಾಗಿಯೇ ಇದೆ. ಆ ಬಸಿರನ್ನು ಉಳಿಸಬೇಕೆನ್ನುವ ಬೆಟ್ಟಿಯ ನಿರ್ಧಾರ ಸಂಬಂಧಗಳ ತುರ್ತಿನಿಂದಾಗಲೀ, ತನಗೊಂದು ಮಗು ಬೇಕೆಂಬ ತೀವ್ರತೆಯಿಂದಾಗಲೀ ಕೂಡಿಯೇ ಇಲ್ಲ. ಹಾಗೆಯೇ ಶ್ರೀಧರನಿಗೂ ಆ ಬಗ್ಗೆ ಒಂದು ಸ್ಪಷ್ಟ ನಿಲುವಿಲ್ಲ. ಆ ಮಗುವಿಗೆ ತಾನು ತಂದೆಯಾಗಲು ಸಿದ್ಧ ಎಂದು ಅವನು ಬೆಟ್ಟಿಗೆ ಹೇಳುವಾಗಲೂ ಅವನಿಗೆ ಆಂತರ್ಯದ ನಂಬುಕೆಗಳಿಲ್ಲ. ಅವಳು ತನ್ನ ಈ ಪ್ರಸ್ತಾಪವನ್ನು ಬೇಡವೆಂದರೂ ಮನಸ್ಸಿಗೆ ಏನೂ ಆಗಲಾರದೆಂಬ ವ್ಯಾವಹಾರಿಕತೆ ಆ ಪಾತ್ರದಲ್ಲಿ ಕಾಣಿಸುತ್ತದೆ. ಬೆಟ್ಟಿಯ ಪಾತ್ರವೂ ಒಂದು ನಂಬಿಕೆಯ ತೀವ್ರತೆಯ ಆಧಾರದ ಮೇಲೆ ನಿಂತಿರುವಂತೆ ನಮಗನ್ನಿಸುವುದಿಲ್ಲ. ಶ್ರೀಧರ-ರಶ್ಮಿಯರ ತಾಯಿಯ ಪಾತ್ರದ ಬಗ್ಗೆ ನಮಗೆ ನೇರ ಪರಿಚಯವಾಗಗಿದ್ದರೂ ಆಕೆಯೂ ಸಮಾಜದ ಕೊಂಡಿಗಳನ್ನು ತೊರೆದು ತಮ್ಮದೇ ಕಂಫರ್ಟ್ ಜೋನಿನಲ್ಲಿ ತಮ್ಮ ಪರಿಷ್ಕಾರವನ್ನು ಕಂಡುಕೊಳ್ಳುತ್ತಾರೆ. ರಶ್ಮಿಯೂ ತನ್ನ ಸಾಫ್ಟ್-ವೇರ್ ಕೆಲಸ, ನಾಗೇಶನ ಜೊತೆಗಿನ ಸಂಬಂಧದ ನಿರ್ಲಿಪ್ತತೆಯ ನಡುವೆ ತನಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಒಂದು ನಿಲುವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಶ್ರೀಧರನ ಮೆಡಿಕಲ್ ಜೀವನಕ್ಕೂ ಅವನ ಅವಳಿಯಾದ ರಶ್ಮಿಯ ಸಾಫ್ಟ್-ವೇರ್ ಜೀವನಕ್ಕೂ ಗುರು ಹಾಕುವ ಈ ಕೊಂಡಿ ಅವರ ಮಿಕ್ಕೆಲ್ಲ ಸಂಬಂಧಗಳಿಗಿಂತ ಬಲವಾದ ಕೊಂಡಿಯಗುತ್ತದೆ. ಆದರೆ ಆ ಕೊಂಡಿಯಲ್ಲೂ ಕಡೆಗೆ ನಮಗೆ ಕಾಣುವುದು ನಿರರ್ಥಕತೆಯೇ. ಮಿಂಚಿನಂತೆ ಬಂದು ’ಮೇರಾ ಭಾರತ್ ಮಹಾನ್’ ಅನ್ನುವ ಅಧ್ಯಾಯದಲ್ಲಿ ಮಾಯವಾಗುವ ನಾಗೇಶನ ಪಾತ್ರವೂ ಈ ಅರ್ಥಹೀನತೆಯನ್ನೇ ಪ್ರದರ್ಶಿಸುತ್ತದೆ. ಅವನು ಅಮೆರಿಕೆಗೆ ಯಾಕೆ ಬಂದ, ಹೇಗೆ ಕೆಲಸ ಮಾಡಿದ, ಯಾಕೆ ಕೆಲಸ ಕಳೆದುಕೊಂಡ, ಭಾರತಕ್ಕೆ ಯಾಕೆ ಮರುಳಿದ ಅನ್ನುವುದಕ್ಕೆಲ್ಲಕ್ಕೂ ಮೇಲಿಂದ ಮೇಲೆ ಕಾರಣಗಳು ಸಿಕ್ಕರೂ ಯಾವುದರಲ್ಲೂ ತೀವ್ರತೆ ನಮಗೆ ಕಾಣುವುದಿಲ್ಲ. ನಮಗೆ ಸಹಜವಾದ, ವಯಸ್ಸಾದ ಮುದಿ ’ದಂಪತಿ’ಗಳನ್ನು ಕಾರಿನಲ್ಲಿ ಕೂಡಿಸಿ ಆಸ್ಪತ್ರೆಗೆ ಒಯ್ಯುವ ಮಾನವೀಯ ಕ್ರಿಯೆಯ ಧನ್ಯತಾಭವವೂ ಹೇಗೆ ದಕ್ಕಲಾರದೆಂಬ ಸಿನಿಕ ದೃಷ್ಟಿಯನ್ನು ನಾವು ನಂಬುವ ರೀತಿಯಲ್ಲಿ ಸಮರ್ಥವಾಗಿ ಚಿತ್ರಿಸುವಲ್ಲಿ ಗುರು ಯಶಸ್ವಿಯಾಗುತ್ತಾರೆ. ಹೀಗೆ ಸಮಕಾಲೀನ ’ಡೆವಲಪ್ಡ್’ ಬದುಕಿನ ಅರ್ಥಹೀನತೆಯನ್ನು ಚಿತ್ರಿಸುತ್ತಲೇ ಸಮಕಾಲೀನ ಬದುಕಿನ ಕಠೋರ ಅಣಕವಾಡನ್ನು ಆತ ನಮ್ಮ ಮುಂದಿಡುತ್ತಾರೆ. ಇದು ಅಮೆರಿಕದ ಸಾಮಾಜಿಕ ಪರಿಸರದಲ್ಲೇ ಆಗಬಹುದಾದ ಕಾದಂಬರಿ. ಇಲ್ಲಿನ ಪಾತ್ರಗಳೆಲ್ಲವೂ ಹೆಚ್ಚಿನಂಶ ಭಾರತೀಯ ಪಾತ್ರಗಳೇ. ಹೀಗಾಗಿ ಆ ಪಾತ್ರಗಳಿಗೆ ಅಮೆರಿಕದ ಸಮಾಜದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಸಾಮಾಜಿಕ ತುರ್ತು ಇಲ್ಲ. ಆದರೂ ಅವರುಗಳು ಅಂಥದೇ ನಿರ್ಧಾರಗಳನ್ನು ಸಹಜವೆನ್ನಿಸುವಂತೆ ತೆಗೆದುಕೊಳ್ಳುತ್ತಾರೆ. ಇದು ಈಗಿನ ತಲೆಮಾರು ಎದುರಿಸುತ್ತಿರುವ ಒಂಟಿತನದ ತಲ್ಲಣದ ಒಂದು ಮಜಲೇ. ಈ ಕಥೆ ಭಾರತದಲ್ಲಿಯೇ ಆಗಬಹುದಿತ್ತು. ಇಲ್ಲಿಯ ಪರಿಸರದಲ್ಲೇ ಗುರು ಇದನ್ನು ಸಮರ್ಥವಾಗಿ ಬರೆಯಲೂ ಬಹುದಿತ್ತು. ಆದರೆ ಅದನ್ನು ನಾವು ಒಂದು ಸಮಸ್ಯೆ ಎಂದು ಇನ್ನೂ ಒಪ್ಪಿಕೊಳ್ಳುವ ಮನಸ್ಥಿತಿಗೆ ತಲುಪಿಲ್ಲವೇನೋ. ಹೀಗಾಗಿಯೇ ಅಮೆರಿಕದ ಪರಿಸರ ಈ ಕಥೆಗೆ ಮುಖ್ಯವಾಗುತ್ತದೆ., ಶಕುಂತಳಾ ಬಗ್ಗೆ ಬರೆಯುತ್ತಾ ನಾನು ಈ ಮಾತುಗಳನ್ನು ಹೇಳಿದ್ದೆ: ಅವರ ಭಾಷಾಪ್ರಯೋಗದಲ್ಲಿ ಎಲ್ಲಿಯೂ ಕೃತಕತೆ ಕಾಣುವುದಿಲ್ಲ. ಹಿಂದೆ ರಘುನಾಥ.ಚ.ಹಾ. ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಐ.ಟಿ, ಮ್ಯಾನೇಜ್‌ಮೆಂಟ್‌ ಪರಿಸರದಿಂದ ಕನ್ನಡದಲ್ಲಿ ಕಥೆಗಳು ಯಾಕೆ ಬರುತ್ತಿಲ್ಲ - ಅದರ ಅನುಭವ ಕನ್ನಡಕ್ಕೆ ಸಹಜವಲ್ಲವೇ ಅನ್ನುವ ಪ್ರಶ್ನೆ ಬಂದಿತ್ತು. ಆಗ ಮಾತನಾಡಿದ ವಿವೇಕ ಅಲ್ಲಿನ ನುಡಿಗಟ್ಟನ್ನು ಕನ್ನಡಕ್ಕೆ ತರುವುದರಲ್ಲಿನ ಕಷ್ಟಗಳನ್ನು ವಿವರಿಸಿದ್ದ - ಉದಾಹರಣೆಗೆ "ಲೆಟ್ಸ್ ಜಿಪ್‌ಇಟ್" ಅನ್ನುವಂತಹ ಪದಪ್ರಯೋಗವನ್ನು-ಆ ಸಂದರ್ಭವನ್ನು ಕನ್ನಡ ಕಥೆಗಳಲ್ಲಿ ಹೇಗೆ ತರುವುದು ಅನ್ನುವ ಬಿಕ್ಕಟ್ಟನ್ನು ಅವನು ವಿವರಿಸಿದ್ದ. ಆದರೆ ಈ ಬಿಕ್ಕಟ್ಟು ಗುರುಗೆ ಇದ್ದಂತಿಲ್ಲ. ಇಂತಹ ಭಾಷಾಪ್ರಯೋಗವನ್ನು ಓದುಗ ಅರ್ಥಮಾಡಿಕೊಳ್ಳುತ್ತಾನೆಂಬ ನಂಬಿಕೆಯೊಂದಿಗೆ ಅವರು ಬರೆಯುತ್ತಾರೆ. ಆದರೆ ಬಿಳಿಯ ಚಾದರದಲ್ಲಿ ಗುರು ನನ್ನ ಈ ಮಾತುಗಳ ಮೇಲೆ ಸೇಡು ತೀರಿಸಿಕೊಳ್ಳಲೋ ಏನೋ ಅನ್ನುವಂತೆ ಧನ್ವಂತರಿ, ಪ್ರಣಪಾಲಕ, ಪಾಳಯ, ಮೃದುಯಂತ್ರಿ, ತೊಡೆಮೇಲಿಗ [ಲ್ಯಾಪ್‍ಟಾಪ್], ಗೋಡೆ ಬೀದಿಯ ಸಾಪ್ತಾಹಿಕ [ವಾಲ್ ಸ್ಟ್ರೀಟ್ ಜರ್ನಲ್] ಇಂಥಹ ಪದಪ್ರಯೋಗಗಳನ್ನು ಮಾಡುತ್ತಾರೆ. ಅದನ್ನು ಅರ್ಥಮಾಡಿಕೊಳ್ಳಲು ನಾವು ಅದರ ಇಂಗ್ಲೀಶ್ ತರ್ಜುಮೆಯ ಶರಣು ಪಡೆಯಬೇಕಿರುವ ವ್ಯಂಗ್ಯವನ್ನು ಇಲ್ಲಿ ಗಮನಿಸಬೇಕಾಗಿದೆ. ಈ ಪದಪ್ರಯೋಗ ಯಾವುದೋ ಉದ್ದೇಶದಿಂದಲೇ ಗುರು ಮಾಡಿರಬೇಕು. ಆದರೆ ಅದೇನೆಂದು ನಮಗೆ ವೇದ್ಯವಾಗದೇ ಒಂದು ಗಿಮಿಕ್ಕಿನಂತೆಯೂ, ಕಾದಂಬರಿಯ ಗಂಭೀರತೆಗೆ ಧಕ್ಕೆಯಾಗುವಂತೆಯೂ ಇದೆ. ಈ ಒಂದು ಆಕ್ಷೇಪಣೆಯನ್ನು ಹೊರತುಪಡಿಸಿದರೆ ಪುಸ್ತಕದಿಂದ ಪುಸ್ತಕಕ್ಕೆ ಗುರು ಅವರ ತೀವ್ರಗತಿಯ ಬೆಳವಣಿಗೆಯನ್ನು ನಾವು ಕಾಣಬಹುದಾಗಿದೆ. ಏಲಿಯನೇಷನ್ ಅನ್ನು ಕನ್ನಡದ ಸಂದರ್ಭದಲ್ಲಿ ಅರ್ಥೈಸುವತ್ತ ಗುರುವಿನ ದೇಣಿಗೆ ಮಹತ್ವದ್ದು. ಇದೊಂದು ಇವರ ಬರವಣಿಗೆಗೇ ವಿಶಿಷ್ಟವಾದದ್ದೂ ಹೌದು. ಆದರೆ ಕನ್ನಡ ಸಾಹಿತ್ಯದ ದಿಕ್ಕನ್ನು ತಿರುಗಿಸುವ, ಒಂದಿಷ್ಟು ಗುದ್ದುವ ಶಕ್ತಿ ಇನ್ನೂ ಗುರು ಬರವಣಿಗೆಗೆ ಬಂದಿಲ್ಲ. ಆದರೆ ಮಧ್ಯಮವರ್ಗದ ತಲ್ಲಣಗಳು, ವಿದೇಶದಲ್ಲಿರುವ ತಲ್ಲಣಗಳು, ನಗರೀಕರಣದ, ಜಾಗತೀಕರಣದ ತಲ್ಲಣಗಳನ್ನು ಗುರು ಯಾವ ಪಾಪಪ್ರಜ್ಞೆಯೂ ಇಲ್ಲದೇ ಚಿತ್ರಿಸುತ್ತಾರೆ. ನವ್ಯದ ನಂತರ ಬಂದ ದಲಿತ, ಪ್ರಗತಿಪರ ಚಳುವಳಿಗಳು ಇಂಥ ತಲ್ಲಣಗಳಿಗೆ ಆಸ್ಪದವಿಲ್ಲದಂತೆ, ಈ ಪ್ರಯೋಗಗಳು ತುಚ್ಛ ಎನ್ನುವಂತೆ ನೋಡುತ್ತಿದ್ದ ಸಂದರ್ಭವನ್ನು ನಾವು ಈಗ ಮೀರಿದ್ದೇವೆ ಅನ್ನಿಸುತ್ತದೆ. ಒಟ್ಟಾರೆ ಗುರುವಿನ ಕೃತಿಗಳ ಗಂಭೀರ ಚರ್ಚೆಯಾಗುತ್ತಿದ್ದರೆ ಅದು ಇಂಥ ಒಂದು ಜಾಗತೀಕರಣದ ತಲ್ಲಣವನ್ನು ಕಡುಬಡವರಲ್ಲದವರು, ಗ್ರಾಮೀಣ ಪ್ರದೇಶದಲ್ಲಿ ಇಲ್ಲದವರು ಹೇಗೆ ಎದುರಿಸುತ್ತಾರೆ, ಅವರ ತಲ್ಲಣಗಳಿಗೂ ಹೇಗೆ ಮುಖ್ಯವಾದದ್ದು ಅನ್ನುವುದನ್ನ ನಿರೂಪಿಸುತ್ತದೆ. ಈ ನಿಟ್ಟಿನಲ್ಲಿ ಒಂದು ಸಾಚಾ ಧ್ವನಿಯನ್ನು ಗುರು ಒದಗಿಸಿಕೊಟ್ಟಿದ್ದಾರೆ. ಹೀಗಾಗಿ ಅವರು ಸಾಹಿತ್ಯದ ಪರಂಪರೆಯಲ್ಲಿ ಒಂದು ಮುಖ್ಯ ಕೊಂಡಿಯಾಗಿ ನಿಲ್ಲುತ್ತಾರೆ.
ಜಗತ್ತು ಭಾರತದತ್ತ ಮೆಚ್ಚುಗೆ ಮತ್ತು ಅಚ್ಚರಿಯಿಂದ ನೋಡುತ್ತಿಲ್ಲ. ಅದೇ ವೇಳೆ, ಸ್ವತಂತ್ರವಾಗಿ ಯೋಚಿಸಬಲ್ಲ ಮತ್ತು ನೋಡಬಲ್ಲ ಭಾರತೀಯರತ್ತಲೂ ಅದು ನೋಡುತ್ತಿಲ್ಲ. ಭಾರತವು ಔಪಚಾರಿಕವಾಗಿ ಸ್ವತಂತ್ರ ದೇಶವಾದರೂ, ಭಾರತೀಯರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಂಸ್ಥಿಕವಾಗಿ ಕಡಿಮೆ ಸ್ವಾತಂತ್ರವನ್ನು ಹೊಂದಿದ್ದಾರೆ. ಹಾಗಾಗಿ, ನಾವು ಮುಂದೆ ಮಾಡಬೇಕಾದ ಕೆಲಸ ತುಂಬಾ ಇದೆ. ‘‘ಜಗತ್ತು ಭಾರತದತ್ತ ನೋಡುತ್ತಿದೆ’’ ಎಂಬುದಾಗಿ ಇತ್ತೀಚಿನ ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನಮಗೆ ಪದೇ ಪದೇ ಹೇಳುತ್ತಿದ್ದಾರೆ. ಈ ಮಾತುಗಳು ಅಥವಾ ಅವುಗಳ ಹಿಂದಿ ಅವತರಣಿಕೆಯು ಮಾರ್ಚ್‌ನಲ್ಲಿ ಪ್ರಧಾನಿ ಮಾಡಿದ ಭಾಷಣಗಳಲ್ಲಿ ಕೇಳಿಸಿದವು (ಬಹುಷಃ ಅವರು ಅಂದು ಈ ಮಾತುಗಳನ್ನು ಭಾರತ ‘ಉತ್ಪಾದನಾ ದೈತ್ಯ’ವಾಗಿದೆ ಎಂಬರ್ಥದಲ್ಲಿ ಹೇಳಿರಬಹುದು). ‘‘ಜಗತ್ತು ಭಾರತದ ಸ್ಟಾರ್ಟ್-ಅಪ್ (ನವ ಉದ್ಯಮಗಳು)ಗಳನ್ನು ಮುಂದಿನ ಭವಿಷ್ಯವಾಗಿ ನೋಡುತ್ತಿದೆ’’ ಎಂಬುದಾಗಿ ಅವರು ಮೇ ತಿಂಗಳಲ್ಲಿ ಹೇಳಿದರು. ಬಳಿಕ ಜೂನ್‌ನಲ್ಲಿ, ‘‘ಜಗತ್ತು ಇಂದು ಭಾರತದ ಸಾಮರ್ಥ್ಯವನ್ನು ನೋಡುತ್ತಿದೆ ಮತ್ತು ಅದರ ಸಾಧನೆಯನ್ನು ಪ್ರಶಂಸಿಸುತ್ತಿದೆ’’ ಎಂದು ಹೇಳಿದರು. ಹಾಗೂ, ಜುಲೈಯಲ್ಲಿ ಉತ್ತರಪ್ರದೇಶದಲ್ಲಿ ಎಕ್ಸ್‌ಪ್ರೆಸ್‌ವೇಯೊಂದನ್ನು ಉದ್ಘಾಟಿಸಿದ ಸಂದರ್ಭದಲ್ಲೂ ಅವರು ಈ ಮಾತುಗಳನ್ನು ಪುನರಾವರ್ತಿಸಿದರು. ಜಗತ್ತು ಭಾರತದತ್ತ ನೋಡುತ್ತಿದೆ ಎನ್ನುವುದೇನೋ ಸರಿ. ಆದರೆ, ಅದು ಮೆಚ್ಚುಗೆಯಿಂದಲೇ ನೋಡುತ್ತಿದೆ ಎಂಬುದಾಗಿ ಭಾವಿಸಬೇಕಾಗಿಲ್ಲ. ಆಕಾರ್ ಪಟೇಲ್‌ರ ಪುಸ್ತಕ ‘ಪ್ರೈಸ್ ಆಫ್ ದ ಮೋದಿ ಈಯರ್ಸ್’ನ್ನು ಓದಿದಾಗ ಇದು ಮನದಟ್ಟಾಗುತ್ತದೆ. ಈ ಪುಸ್ತಕದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಜಾಗತಿಕ ಸೂಚ್ಯಂಕಗಳ ಪಟ್ಟಿಯಿದೆ ಹಾಗೂ ಈ ಸೂಚ್ಯಂಕಗಳಲ್ಲಿ ನಮ್ಮ ದೇಶದ ನಿರ್ವಹಣೆ ಹೇಗಿದೆ ಎನ್ನುವ ವಿವರಗಳಿವೆ. ಬಹುತೇಕ ಈ ಎಲ್ಲಾ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಕೆಳಗಿದೆ ಅಥವಾ ಕರುಣಾಜನಕವೆನ್ನುವಷ್ಟು ತಳದಲ್ಲಿದೆ. ಹಾಗಾಗಿ, ವಾಸ್ತವವಾಗಿ ಜಗತ್ತು ನಮ್ಮ ಬಗ್ಗೆ ಏನನ್ನು ತಿಳಿಯಲು ಬಯಸುತ್ತದೆ ಎನ್ನುವುದು, ಪ್ರಧಾನಿ ಏನು ಹೇಳಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಬಹುಶಃ ವಿರುದ್ಧವಾಗಿರಬಹುದು ಅನಿಸುತ್ತದೆ. ಉದಾಹರಣೆಗೆ; ಭಾರತ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ 85ನೇ ಸ್ಥಾನದಲ್ಲಿ, ಅಂತರ್‌ರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಜಾಗತಿಕ ಹಸಿವು ಸೂಚ್ಯಂಕದಲ್ಲಿ 94ನೇ ಸ್ಥಾನದಲ್ಲಿ, ವಿಶ್ವ ಆರ್ಥಿಕ ವೇದಿಕೆಯ ಮಾನವ ಬಂಡವಾಳ ಸೂಚ್ಯಂಕದಲ್ಲಿ 103ನೇ ಸ್ಥಾನದಲ್ಲಿ ಮತ್ತು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 131ನೇ ಸ್ಥಾನದಲ್ಲಿದೆ ಎಂಬುದಾಗಿ ತನ್ನ ಪುಸ್ತಕದಲ್ಲಿ ಪಟೇಲ್ ಹೇಳುತ್ತಾರೆ. ಈ ಪೈಕಿ ಹೆಚ್ಚಿನ ಸೂಚ್ಯಂಕಗಳಲ್ಲಿ, 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತದ ಸ್ಥಾನ ಮತ್ತಷ್ಟು ಕುಸಿದಿದೆ. ಜಗತ್ತು ನಮ್ಮ ಬಗ್ಗೆ ಏನು ಭಾವಿಸುತ್ತದೆ ಎನ್ನುವುದೇನೋ ಮುಖ್ಯ. ಆದರೆ ನಮ್ಮ ಬಗ್ಗೆಯೇ ನಾವು ಏನು ಭಾವಿಸಿದ್ದೇವೆ ಎನ್ನುವುದು ಬಹುಶಃ ಅದಕ್ಕಿಂತಲೂ ಹೆಚ್ಚು ಮುಖ್ಯ. ಹಾಗಾಗಿ, ಬ್ರಿಟಿಷ್ ವಸಾಹತು ಆಳ್ವಿಕೆಯಿಂದ ನಾವು ಪಡೆದ ಸ್ವಾತಂತ್ರದ 75ನೇ ವಾರ್ಷಿಕ ದಿನದ ಸಂದರ್ಭದಲ್ಲಿ ನಾವು ನಮ್ಮನ್ನೇ ಕೇಳಿಕೊಳ್ಳಬೇಕಾಗಿದೆ: ಭಾರತ ಹೇಗಿದೆ? ಭಾರತೀಯರು ಹೇಗಿದ್ದಾರೆ? ದೇಶವಾಗಿ ಮತ್ತು ಜನತೆಯಾಗಿ, ಎಷ್ಟರಮಟ್ಟಿಗೆ ನಾವು ಸಂವಿಧಾನದಲ್ಲಿ ಅಡಕವಾಗಿರುವ ಆದರ್ಶಗಳನ್ನು ಈಡೇರಿಸಿದ್ದೇವೆ? ಮತ್ತು ನಮ್ಮ ಸ್ವಾತಂತ್ರಕ್ಕಾಗಿ ಹೋರಾಡಿದವರ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ತಂದಿದ್ದೇವೆ? 2015ರಲ್ಲಿ ನಾನು ಭಾರತವನ್ನು ‘ಚುನಾವಣೆ ಮಾತ್ರ ಇರುವ ಪ್ರಜಾಪ್ರಭುತ್ವ’ ಎಂಬುದಾಗಿ ಬಣ್ಣಿಸಿದ್ದೆ. ಚುನಾವಣೆಗಳೇನೋ ನಿಯಮಿತವಾಗಿ ನಡೆಯುತ್ತದೆ, ಆದರೆ ಅವುಗಳ (ಚುನಾವಣೆಗಳ) ನಡುವಿನ ಅವಧಿಯಲ್ಲಿ, ನಮ್ಮಿಂದ ಆಯ್ಕೆಯಾದವರಿಂದ ಯಾವುದೇ ನೈಜ ಉತ್ತರದಾಯಿತ್ವ ಇರುವುದಿಲ್ಲ ಎನ್ನುವುದನ್ನು ನಾನು ಈಮೂಲಕ ಹೇಳಿದ್ದೆ. ಸಂಸತ್ತು, ಮಾಧ್ಯಮಗಳು, ನಾಗರಿಕ ಸೇವೆ ಎಷ್ಟೊಂದು ಪರಿಣಾಮಹೀನವಾಗಿವೆ ಅಥವಾ ರಾಜಿಗೊಳಗಾಗಿವೆ ಎಂದರೆ ಅವುಗಳು ಅಧಿಕಾರದಲ್ಲಿರುವ ಪಕ್ಷದ ಅತಿರೇಕಗಳಿಗೆ ಯಾವುದೇ ತಡೆಯನ್ನು ಹೇರುವುದಿಲ್ಲ. ಹಾಗಾಗಿ, ಈಗ, ‘ಚುನಾವಣೆ ಮಾತ್ರ ಇರುವ ಪ್ರಜಾಪ್ರಭುತ್ವ’ದಲ್ಲಿ ‘ಚುನಾವಣೆ ಮಾತ್ರ’ ಎಂಬ ಸಕಾರಾತ್ಮಕ ಅಂಶವನ್ನೂ ಸಮರ್ಥಿಸಿಕೊಳ್ಳುವುದು ಕಷ್ಟವೆಂದು ಅನಿಸುತ್ತಿದೆ. ಚುನಾವಣಾ ಬಾಂಡ್ ಯೋಜನೆಯ ಅಪಾರದರ್ಶಕತೆ, ಚುನಾವಣಾ ಆಯೋಗದ ಪಕ್ಷಪಾತಪೂರಿತ ನಡವಳಿಕೆ ಮತ್ತು ಜನರಿಂದ ಆಯ್ಕೆಯಾಗಿರುವ ರಾಜ್ಯ ಸರಕಾರಗಳನ್ನು ಬಲಪ್ರಯೋಗ ಮತ್ತು ಹಣಬಲದಿಂದ ಉರುಳಿಸುತ್ತಿರುವುದನ್ನು ನೋಡಿದಾಗ, ಚುನಾವಣೆಗಳೂ ಸಂಪೂರ್ಣವಾಗಿ ಮುಕ್ತ ಮತ್ತು ನ್ಯಾಯೋಚಿತವಾಗಿಲ್ಲ ಅನಿಸುತ್ತದೆ. ಅಂತೆಯೇ, ಅವುಗಳ ಫಲಿತಾಂಶವನ್ನು ಯಾವತ್ತೂ ಗೌರವಿಸಲಾಗುತ್ತದೆ ಎನ್ನುವ ನಂಬಿಕೆಯನ್ನೂ ಇಟ್ಟುಕೊಳ್ಳಬೇಕಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ಪ್ರಭುತ್ವವು ಭಿನ್ನಮತವನ್ನು ಹೆಚ್ಚಿನ ನಿರ್ದಯದಿಂದ ದಮನಿಸುತ್ತಿದೆ. ಸರಕಾರವೇ ನೀಡಿರುವ ಅಂಕಿಅಂಶಗಳ ಪ್ರಕಾರ, 2016 ಮತ್ತು 2020ರ ನಡುವಿನ ಅವಧಿಯಲ್ಲಿ ಕಠೋರ ಕಾನೂನುಬಾಹಿರ (ಚಟುವಟಿಕೆಗಳ) ತಡೆ ಕಾಯ್ದೆಯಡಿ 24,000ಕ್ಕೂ ಅಧಿಕ ಭಾರತೀಯರನ್ನು ಬಂಧಿಸಲಾಗಿದೆ. ಈ ಪೈಕಿ ಒಂದು ಶೇಕಡಕ್ಕಿಂತಲೂ ಕಡಿಮೆ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದೆ. ಉಳಿದ ಶೇ. 99 ಜನರ ಜೀವನವನ್ನು ನಿರ್ದಿಷ್ಟ ಸಿದ್ಧಾಂತವೊಂದರ ಆಧಾರದಲ್ಲಿ ಕಾರ್ಯಾಚರಿಸುತ್ತಿರುವ ಹಾಗೂ ಭ್ರಮೆಗೆ ಒಳಗಾಗಿರುವ ಸರಕಾರಿ ವ್ಯವಸ್ಥೆಯೊಂದು ನಾಶಗೊಳಿಸಿದೆ. ಮಾಧ್ಯಮಗಳ ಮೇಲೆ ನಡೆಯುತ್ತಿರುವ ದಾಳಿಯೂ ತೀವ್ರಗೊಂಡಿದೆ. ಈಗ ಆಕಾರ್ ಪಟೇಲ್ ತನ್ನ ಪುಸ್ತಕವನ್ನು ಪರಿಷ್ಕರಿಸುವುದಾದರೆ, ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಅವರು ಭಾರತಕ್ಕೆ 142ರ ಬದಲು 150ನೇ ಸ್ಥಾನವನ್ನು ನೀಡಬಹುದೇನೋ! ಈ ದೌರ್ಜನ್ಯದ ವಾತಾವರಣದಲ್ಲಿ, ಉನ್ನತ ನ್ಯಾಯಾಂಗವು ಹೆಚ್ಚಿನ ಸಂದರ್ಭಗಳಲ್ಲಿ ನಾಗರಿಕರಿಗೆ ವಿರುದ್ಧವಾಗಿ ಹಾಗೂ ಪ್ರಭುತ್ವದ ಪರವಾಗಿ ನಿಂತಿರುವುದು ಅತ್ಯಂತ ನಿರಾಶಾದಾಯಕ ಸಂಗತಿಯಾಗಿದೆ. ಹಾಗಾಗಿ, ಪ್ರತಾಪ್ ಭಾನು ಮೆಹ್ತಾ ಇತ್ತೀಚೆಗೆ ಬರೆದಿರುವಂತೆ, ‘‘ಸುಪ್ರೀಂ ಕೋರ್ಟ್ ಈಗ ಹಕ್ಕುಗಳ ಸಂರಕ್ಷಕನಾಗುವ ಬದಲು ನಾಗರಿಕರ ಹಕ್ಕುಗಳಿಗೆ ಎದುರಾಗಿರುವ ದೊಡ್ಡ ಬೆದರಿಕೆಯಾಗಿದೆ’’. (https://indianexpress.com/article/opinion/columns/pratap-bhanu-mehta-by-upholding-pmla-sc-puts-its-stamp-on-kafkas-law-8057249/). ‘‘ಪ್ರಧಾನಿ ನರೇಂದ್ರ ಮೋದಿಯವರ ಬಹುಸಂಖ್ಯಾತ ಆಳ್ವಿಕೆಗೆ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಶರಣಾಗಿದೆ’’ ಎಂದು ಸಂವಿಧಾನ ತಜ್ಞ ಅನೂಜ್ ಭುವಾನಿಯ ಹೇಳುತ್ತಾರೆ. ‘‘ಮೋದಿ ಆಡಳಿತದ ಅವಧಿಯಲ್ಲಿ, ಸರಕಾರದ ಅತಿರೇಕಗಳಿಗೆ ತಡೆ ಹೇರುವ ತನ್ನ ಸಾಂವಿಧಾನಿಕ ಪಾತ್ರವನ್ನು ನಿಭಾಯಿಸುವಲ್ಲಿ ಸುಪ್ರೀಂ ಕೋರ್ಟ್ ವಿಫಲವಾಗಿದ್ದಷ್ಟೇ ಅಲ್ಲ, ಅದು ಮೋದಿ ಸರಕಾರದ ಕಾರ್ಯಸೂಚಿಯ ‘ಚಿಯರ್‌ಲೀಡರ್ (ಹುರಿದುಂಬಿಸುವವರು)’ ಆಗಿಯೂ ಕೆಲಸ ಮಾಡಿದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ. ಪ್ರಭುತ್ವದ ಕಾನೂನುಬಾಹಿರ ಕೃತ್ಯಗಳ ವಿರುದ್ಧ ನಾಗರಿಕರಿಗೆ ರಕ್ಷಣೆ ಕೊಡುವ ತನ್ನ ಕೆಲಸವನ್ನು ಅದು ನಿಲ್ಲಿಸಿದೆ ಮಾತ್ರವಲ್ಲ, ಪ್ರಭುತ್ವದ ಸೂಚನೆಯಂತೆ ನಾಗರಿಕರ ಮೇಲೆ ಬೀಸಬಹುದಾದ ಶಕ್ತಿಶಾಲಿ ಖಡ್ಗವಾಗಿಯೂ ಅದು ವಾಸ್ತವವಾಗಿ ಕೆಲಸ ಮಾಡಿದೆ (ನೋಡಿ: https://scroll.in/article/979818/the-crisis-of-legitimacy-plaguing-the-supreme-court-in-modi-era-is-now-hidden-in-plain-sight). ಭಾರತೀಯರು ಮುಕ್ತವಾಗಿ ರಾಜಕೀಯದ ಬಗ್ಗೆ ಮಾತನಾಡು ವುದು ಕಡಿಮೆ; ಮುಕ್ತವಾಗಿ ಸಾಮಾಜಿಕವಾಗಿ ಮಾತನಾಡುವುದಂತೂ ಇನ್ನೂ ಕಡಿಮೆ. ಬ್ರಿಟಿಷರು ನಮ್ಮ ನೆಲವನ್ನು ಬಿಟ್ಟು ಹೋದ 75 ವರ್ಷಗಳ ಬಳಿಕವೂ ನಮ್ಮ ಸಮಾಜವು ಆಳವಾಗಿ ಶ್ರೇಣೀಕೃತವಾಗಿದೆ. 1950ರಲ್ಲಿ ಭಾರತೀಯ ಸಂವಿಧಾನವು ಜಾತಿ ಮತ್ತು ಲಿಂಗ ತಾರತಮ್ಯವನ್ನು ಕಾನೂನುಬಾಹಿರಗೊಳಿಸಿತು. ಆದರೆ ಅದು ಈಗಲೂ ಅದೇ ಉತ್ಕಟತೆಯಿಂದ ಮುಂದುವರಿಯುತ್ತಿದೆ. ಮೀಸಲಾತಿ ವ್ಯವಸ್ಥೆಯು ಉತ್ಸಾಹಿ ದಲಿತ ವೃತ್ತಿಪರರ ವರ್ಗವೊಂದನ್ನು ಸೃಷ್ಟಿಸಲು ಸಹಾಯ ಮಾಡಿತಾದರೂ, ಸಾಮಾಜಿಕ ಬದುಕಿನ ಹೆಚ್ಚಿನ ಕ್ಷೇತ್ರಗಳಲ್ಲಿ ಜಾತಿ ಪೂರ್ವಾಗ್ರಹ ಮುಂದುವರಿಯುತ್ತಿದೆ. ಜಾತಿ ವಿನಾಶಕ್ಕಾಗಿ ಬಿ.ಆರ್. ಅಂಬೇಡ್ಕರ್ ಕರೆ ನೀಡಿ ದಶಕಗಳೇ ಸಂದರೂ, ತುಂಬಾ ಕಡಿಮೆ ಸಂಖ್ಯೆಯಲ್ಲಿ ಅಂತರ್‌ಜಾತಿ ಮದುವೆಗಳು ನಡೆಯುತ್ತಿವೆ. ಭಾರತೀಯ ಸಮಾಜವು ಇನ್ನೂ ಎಷ್ಟು ಸಂಪ್ರದಾಯಸ್ಥವಾಗಿಯೇ ಉಳಿದಿದೆ ಎನ್ನುವುದನ್ನು ಇದು ತೋರಿಸುತ್ತದೆ. ಲಿಂಗ ಸಮಾನತೆಯ ವಿಚಾರದಲ್ಲಿ, ಅಪೇಕ್ಷಿತ ಮಟ್ಟಕ್ಕಿಂತ ಎಷ್ಟು ಕೆಳಗೆ ನಾವಿದ್ದೇವೆ ಎನ್ನುವುದನ್ನು ಎರಡು ಅಂಕಿಸಂಖ್ಯೆಗಳು ಹೇಳುತ್ತವೆ. ಮೊದಲನೆಯದು, ವ್ಯವಸ್ಥೆಯಲ್ಲಿ ಮಹಿಳಾ ಕೆಲಸಗಾರರ ಪ್ರಮಾಣ. ಇದು ಸುಮಾರು ಶೇ. 20 ಆಗಿದೆ. ಇದು, ವಿಯೆಟ್ನಾಮ್ ಮತ್ತು ಚೀನಾವನ್ನು ಬಿಡಿ, ಬಾಂಗ್ಲಾದೇಶಕ್ಕಿಂತಲೂ ತುಂಬಾ ಕಡಿಮೆಯಾಗಿದೆ. ಎರಡನೆಯದು, ಜಾಗತಿಕ ಲಿಂಗ ತಾರತಮ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ. ಇದರಲ್ಲಿ ಭಾರತ (2022 ಜುಲೈಗೆ ಅನ್ವಯಿಸುವಂತೆ) 146 ದೇಶಗಳ ಪೈಕಿ 135ನೇ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಬದುಕುಳಿಯುವಿಕೆ ಸೂಚ್ಯಂಕದಲ್ಲಿ ಭಾರತ ತೀರಾ ಕೆಳಸ್ಥಾನ (146)ದಲ್ಲಿದೆ. ಸಮಾಜದಿಂದ ನಾನೀಗ ಸಂಸ್ಕೃತಿ ಮತ್ತು ಧರ್ಮದ ಕಡೆಗೆ ಹೋಗುತ್ತೇನೆ. ಇಲ್ಲಿನ ಪರಿಸ್ಥಿತಿಯೂ ಆಶಾದಾಯಕವಾಗಿಯೇನೂ ಇಲ್ಲ. ಈ ಕ್ಷೇತ್ರದಲ್ಲಿ ಸರಕಾರ ಮತ್ತು ಹೊಡೆದು ಓಡುವ ಗುಂಪುಗಳು ವಿಧಿಸುತ್ತಿರುವ ನಿಯಮಗಳು ದಿನೇ ದಿನೇ ಹೆಚ್ಚುತ್ತಿವೆ. ಭಾರತೀಯರು ಏನನ್ನು ತಿನ್ನಬಹುದು, ಏನನ್ನು ಧರಿಸಬಹುದು, ಎಲ್ಲಿ ವಾಸಿಸಬಹುದು, ಏನು ಬರೆಯಬಹುದು ಮತ್ತು ಅವರು ಯಾರನ್ನು ಮದುವೆಯಾಗಬಹುದು ಎಂಬ ಬಗ್ಗೆ ಈ ಗುಂಪುಗಳು ನಿಯಮಗಳನ್ನು ಜಾರಿಗೊಳಿಸುತ್ತಿವೆ. ಬಹುಶಃ ಈ ಪೈಕಿ ಅತ್ಯಂತ ಕಳವಳಕಾರಿಯಾಗಿರುವ ಸಂಗತಿಯೆಂದರೆ, ಭಾರತೀಯ ಮುಸ್ಲಿಮರನ್ನು ಮಾತಿನಲ್ಲಿಯೂ, ಆಚಾರದಲ್ಲಿಯೂ ಕೆಟ್ಟದಾಗಿ ಬಿಂಬಿಸುವುದು. ಇಂದಿನ ಭಾರತದಲ್ಲಿ ರಾಜಕೀಯ ಮತ್ತು ವೃತ್ತಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಅತ್ಯಂತ ಕಡಿಮೆಯಾಗಿದೆ. ಕೆಲಸದ ಸ್ಥಳಗಳು ಮತ್ತು ಮಾರುಕಟ್ಟೆ ಸ್ಥಳಗಳಲ್ಲಿ ಅವರನ್ನು ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ ಹಾಗೂ ಟೆಲಿವಿಶನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ತಮಾಷೆ ಮಾಡಲಾಗುತ್ತಿದೆ. ಅವರು ಅನುಭವಿಸುವ ಸಂಕಷ್ಟ ಮತ್ತು ಅವಮಾನಕ್ಕೆ ನಾವು ಸಾಮೂಹಿಕವಾಗಿ ನಾಚಿಕೆಪಟ್ಟುಕೊಳ್ಳಬೇಕಾಗಿದೆ. ಸಂಸ್ಕೃತಿಯಿಂದ ನಾನು ಆರ್ಥಿಕತೆಯತ್ತ ಹೊರಳುತ್ತೇನೆ. ಆರ್ಥಿಕತೆಯನ್ನು ಮತ್ತಷ್ಟು ಉದಾರೀಕರಣಗೊಳಿಸುವ ಭರವಸೆಯನ್ನು ನೀಡಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು. ಆದರೆ ವಾಸ್ತವಿಕವಾಗಿ, 1991ರ ಆರ್ಥಿಕ ಸುಧಾರಣೆಗಳು ಯಾವ ರಕ್ಷಣಾತ್ಮಕತೆ (protectionism)ಯನ್ನು ಕೊನೆಗೊಳಿಸಲು ಬಯಸಿದ್ದವೋ, ಒಂದು ರೀತಿಯ ಅದೇ ರಕ್ಷಣಾತ್ಮಕತೆಗೆ ಅವರು ವಾಪಸಾಗಿದ್ದಾರೆ. ಈ ಒಳಮುಖ ತಿರುವು ದೇಶಿ ಉದ್ಯಮಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ವ್ಯವಸ್ಥೆಯನ್ನೂ ಸೃಷ್ಟಿಸಲಿಲ್ಲ. ಇದಕ್ಕೆ ಬದಲಾಗಿ, ಸರಕಾರದ ಕೆಲವೇ ಕೆಲವು ಆಪ್ತ ಕೈಗಾರಿಕೋದ್ಯಮಿಗಳು ಸರಕಾರದ ಕಳಂಕಿತ ಬಂಡವಾಳಶಾಹಿ ನೀತಿಯ 2ಎ ಮಾದರಿಯ ಪ್ರಯೋಜನ ಪಡೆದರು. ಹೀಗೆಂದು ಭಾರತ ಸರಕಾರದ ಮಾಜಿ ಆರ್ಥಿಕ ಸಲಹೆಗಾರರೊಬ್ಬರು ಬಣ್ಣಿಸಿದ್ದಾರೆ. ಪ್ರಭುತ್ವವನ್ನು ಈಗ ಮತ್ತೆ ಅಧಿಕಾರಶಾಹಿಯ ಹಿಡಿತಕ್ಕೆ ಒಪ್ಪಿಸಲಾಗಿದೆ. ತೆರಿಗೆ ಮತ್ತು ಸುಂಕ ಇಲಾಖೆಗಳ (ಮತ್ತು ಇತರ ಇಲಾಖೆಗಳ) ಅಧಿಕಾರಿಗಳಿಗೆ ಹಿಂದೆ ಕೈತಪ್ಪಿ ಹೋಗಿದ್ದ ಅಧಿಕಾರಗಳನ್ನು ಮರಳಿ ನೀಡಲಾಗಿದೆ. ಈ ನವೀಕೃತ ಲೈಸನ್ಸ್ -ಪರ್ಮಿಟ್ ರಾಜ್‌ನ ದುಷ್ಪರಿಣಾಮಗಳನ್ನು ಮುಖ್ಯವಾಗಿ ಸಣ್ಣ ಉದ್ಯಮಿಗಳು ಅನುಭವಿಸುತ್ತಿದ್ದಾರೆ. ಈ ನಡುವೆ, ನಿರುದ್ಯೋಗ ದರವು ಏರಿದೆ. ಆದರೆ ಭಾರತೀಯ ಕೆಲಸಗಾರರ ಕೌಶಲ ಮಟ್ಟ ಕುಸಿದಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅರ್ಥಶಾಸ್ತ್ರಜ್ಞರ ಗುಂಪೊಂದು ತಯಾರಿಸಿದ ವಿಶ್ವ ಅಸಮಾನತೆ ವರದಿ 2022ರ ಪ್ರಕಾರ, ಭಾರತದಲ್ಲಿ ಜನಸಂಖ್ಯೆಯ ಅತಿ ಶ್ರೀಮಂತ ಒಂದು ಶೇಕಡಾ ಮಂದಿ ರಾಷ್ಟ್ರೀಯ ಆದಾಯದ ಶೇ. 22ನ್ನು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. ಆದರೆ, ಅತಿ ಬಡವ ಶೇ. 50 ಮಂದಿಯ ಪಾಲು ಕೇವಲ ಶೇ. 13 ಮಾತ್ರ. 2021 ಜುಲೈಯಲ್ಲಿ ಮುಕೇಶ್ ಅಂಬಾನಿಯ ಸಂಪತ್ತು 80 ಬಿಲಿಯ ಡಾಲರ್ (ಸುಮಾರು 6.36 ಲಕ್ಷ ಕೋಟಿ ರೂಪಾಯಿ) ಆಗಿತ್ತು. ಅವರ ಸಂಪತ್ತು ಹಿಂದಿನ ವರ್ಷಕ್ಕಿಂತ 15 ಬಿಲಿಯ ಡಾಲರ್ (ಸುಮಾರು 1.19 ಲಕ್ಷ ಕೋಟಿ ರೂಪಾಯಿ)ನಷ್ಟು ಹೆಚ್ಚಾಗಿತ್ತು. ಆ ವರ್ಷ ಗೌತಮ್ ಅದಾನಿಯ ಸಂಪತ್ತಿನಲ್ಲಿ ಅಗಾಧ ಹೆಚ್ಚಳವಾಗಿತ್ತು. ಅವರ ಸಂಪತ್ತು ಹಿಂದಿನ ವರ್ಷ ಇದ್ದ 13 ಬಿಲಿಯ ಡಾಲರ್ (ಸುಮಾರು 1.03 ಲಕ್ಷ ಕೋಟಿ ರೂಪಾಯಿ)ನಿಂದ 55 ಬಿಲಿಯ ಡಾಲರ್ (ಸುಮಾರು 4.37 ಲಕ್ಷ ಕೋಟಿ ರೂಪಾಯಿ)ಗೆ ಏರಿಕೆಯಾಯಿತು. ಅದಾನಿಯ ವೈಯಕ್ತಿಕ ಸಂಪತ್ತು ಈಗ 110 ಬಿಲಿಯ ಡಾಲರ್ (ಸುಮಾರು 8.75 ಲಕ್ಷ ಕೋಟಿ ರೂಪಾಯಿ). ಹಿಂದಿನಿಂದಲೂ ಭಾರತದ ಆದಾಯ ಮತ್ತು ಸಂಪತ್ತು ವಿತರಣೆಯಲ್ಲಿ ತೀವ್ರ ಅಸಮಾನತೆಯಿತ್ತು. ಈಗ ದೇಶವು ದಿನೇ ದಿನೇ ಹೆಚ್ಚೆಚ್ಚು ಅಸಮಾನ ಸಮಾಜವಾಗಿ ಮಾರ್ಪಡುತ್ತಿದೆ. ಗಾತ್ರ ಅಥವಾ ಗುಣಮಟ್ಟ- ಯಾವುದೇ ಆಧಾರದಲ್ಲಿ ನಿರ್ಧರಿಸಿದರೂ, ‘ಭಾರತ 75’ರ ಅಭಿವೃದ್ಧಿ ವರದಿ ಖಂಡಿತವಾ ಗಿಯೂ ಮಿಶ್ರವಾಗಿರುತ್ತದೆ. ಖಂಡಿತವಾಗಿಯೂ, ಈ ವೈಫಲ್ಯಗಳಿಗೆ ಪ್ರಸಕ್ತ ಸರಕಾರವೊಂದನ್ನೇ ಸಂಪೂರ್ಣ ಹೊಣೆಯಾಗಿಸಲು ಸಾಧ್ಯವಿಲ್ಲ. ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಪೋಷಿಸಿರಬಹುದು ಹಾಗೂ ಧಾರ್ಮಿಕ ಮತ್ತು ಭಾಷಾ ವೈವಿಧ್ಯತೆಗೆ ಉತ್ತೇಜನ ನೀಡಿರಬಹುದು. ಅನಕ್ಷರತೆಯನ್ನು ಹೋಗಲಾಡಿಸಲು ಮತ್ತು ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ಅದು ಅಗಾಧ ಕೆಲಸ ಮಾಡಿತು. ಅದು ಇದೇ ತೀವ್ರತೆಯಲ್ಲಿ ಭಾರತೀಯ ಉದ್ಯಮಿಗಳ ಮೇಲೂ ಹೆಚ್ಚಿನ ನಂಬಿಕೆಯನ್ನು ಇರಿಸಬೇಕಾಗಿತ್ತು. ತಾನು ಯುದ್ಧ ಕಾಲದಲ್ಲಿ ಸಮರ್ಥ ನಾಯಕಿ ಎನ್ನುವುದನ್ನು ಇಂದಿರಾ ಗಾಂಧಿ ಸಾಧಿಸಿ ತೋರಿಸಿದರು. ಆದರೆ ಅವರ ಸರಕಾರವು ಸ್ವಾಯತ್ತ ಸಂಸ್ಥೆಗಳನ್ನು ತನ್ನ ಅಧೀನಕ್ಕೆ ಒಳಪಡಿಸಿತು ಮತ್ತು ಆರ್ಥಿಕತೆಯ ಮೇಲೆ ಸರಕಾರಿ ನಿಯಂತ್ರಣವನ್ನು ಬಲಗೊಳಿಸಿತು. ಅಷ್ಟೇ ಅಲ್ಲ, ಅವರು ರಾಜಕೀಯ ಪಕ್ಷವೊಂದನ್ನು ಕುಟುಂಬದ ಕಂಪೆನಿಯಾಗಿ ಪರಿವರ್ತಿಸಿದರು ಮತ್ತು ತನ್ನ ಸುತ್ತ ಅತಿರಂಜಿತ ವ್ಯಕ್ತಿತ್ವವೊಂದನ್ನು ಕಟ್ಟಿ ಬೆಳೆಸಿದರು. ಇವುಗಳೆಲ್ಲವೂ ನಮ್ಮ ರಾಜಕೀಯ ಬದುಕು ಮತ್ತು ನಮ್ಮ ಆರ್ಥಿಕ ಭವಿಷ್ಯಕ್ಕೆ ಗಂಭೀರ ಹಾನಿ ಮಾಡಿತು. ನರೇಂದ್ರ ಮೋದಿ ಸಂಪೂರ್ಣ ಸ್ವಯಂನಿರ್ಮಿತ ಹಾಗೂ ಅತ್ಯಂತ ಕಠಿಣ ಪರಿಶ್ರಮಿ ರಾಜಕಾರಣಿಯಾಗಿರಬಹುದು. ಆದರೆ, ಅವರು ಇಂದಿರಾ ಗಾಂಧಿಯ, ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ಒಳಪಡಿಸುವ ಧೋರಣೆ ಮತ್ತು ಸರ್ವಾಧಿಕಾರಿ ಪ್ರವೃತ್ತಿಗಳನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ತನ್ನದೇ ಆದ ಆರೆಸ್ಸೆಸ್-ಪ್ರೇರಿತ ಬಹುಸಂಖ್ಯಾತ-ಪ್ರಧಾನ ವಿಶ್ವನೋಟವನ್ನು ಹೊಂದಿದ್ದಾರೆ. ಹಾಗಾಗಿ, ಮೋದಿಯವರ ಪರಂಪರೆಯನ್ನು ಅವರ ಭಕ್ತಗಡಣ ಈಗ ಹೇಗೆ ವಿಮರ್ಶಿಸುತ್ತಿದೆಯೋ, ಇತಿಹಾಸಕಾರರು ಅದಕ್ಕಿಂತ ತುಂಬಾ ಹೆಚ್ಚು ಕಠಿಣವಾಗಿ ವಿಮರ್ಶಿಸುತ್ತಾರೆ. ಭರವಸೆ ಮತ್ತು ಸಾಮರ್ಥ್ಯಗಳ ನಡುವಿನ ಅಂತರವನ್ನು ವಿಶ್ಲೇಷಿಸುವಾಗ, ಈ ಅಂತರಗಳಿಗೆ ಶಕ್ತಿಶಾಲಿ ಮತ್ತು ಪ್ರಭಾವಿ ವ್ಯಕ್ತಿಗಳು ಹಾಗೂ ಅವರ ನೇತೃತ್ವದ ಸರಕಾರಗಳ ಕೃತ್ಯಗಳಲ್ಲಿ (ಮತ್ತು ಕುಕೃತ್ಯಗಳಲ್ಲಿ) ನಾವು ವಿವರಣೆಗಳನ್ನು ಹುಡುಕಬಹುದಾಗಿದೆ. ಅಥವಾ ಇದಕ್ಕೆ ನಾವು, ‘ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಮೂಲತಃ ಅಪ್ರಜಾಸತ್ತಾತ್ಮಕವಾಗಿರುವ ಭಾರತೀಯ ಮಣ್ಣಿಗೆ ಮೇಲು ಹೊದಿಕೆ ಹೊದಿಸಿದಂತೆ’ ಎಂಬ ಅಂಬೇಡ್ಕರ್‌ರ ಟಿಪ್ಪಣಿಯ ಆಧಾರದಲ್ಲಿ ಸಮಾಜಶಾಸ್ತ್ರೀಯ ವಿವರಣೆಯೊಂದನ್ನೂ ನೀಡಬಹುದಾಗಿದೆ. ಬಹುಶಃ ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಇತಿಹಾಸದಲ್ಲಿ ಹಾಸುಹೊಕ್ಕಾಗಿರುವ ವಿವಿಧ ರೂಪಗಳ ಸ್ವಾತಂತ್ರಹೀನತೆಯನ್ನು ಗಣನೀಯವಾಗಿ ತಗ್ಗಿಸಲು ಏಳೂವರೆ ದಶಕಗಳು ತೀರಾ ಅಲ್ಪ ಕಾಲಾವಧಿಯಾಗಿದೆ. ಏನೇ ಆದರೂ, ನಮ್ಮ ನಾಯಕರು ನಮ್ಮ ಪರವಾಗಿ ನೀಡುವ, ಜಂಭಕೊಚ್ಚಿಕೊಳ್ಳುವ ರೂಪದಲ್ಲಿರುವ ಹೇಳಿಕೆಗಳಿಗೆ ನಾವು ಮಾರುಹೋಗದಿರೋಣ. ಇಂಥ ಹೇಳಿಕೆಗಳು ಮುಂದಿನ ದಿನಗಳಲ್ಲಿ ದೊಡ್ಡದಾಗಿ ಕೇಳಿಬರಲಿವೆ. ಜಗತ್ತು ಭಾರತದತ್ತ ಮೆಚ್ಚುಗೆ ಮತ್ತು ಅಚ್ಚರಿಯಿಂದ ನೋಡುತ್ತಿಲ್ಲ. ಅದೇ ವೇಳೆ, ಸ್ವತಂತ್ರವಾಗಿ ಯೋಚಿಸಬಲ್ಲ ಮತ್ತು ನೋಡಬಲ್ಲ ಭಾರತೀಯರತ್ತಲೂ ಅದು ನೋಡುತ್ತಿಲ್ಲ. ಭಾರತವು ಔಪಚಾರಿಕವಾಗಿ ಸ್ವತಂತ್ರ ದೇಶವಾದರೂ, ಭಾರತೀಯರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಂಸ್ಥಿಕವಾಗಿ ಕಡಿಮೆ ಸ್ವಾತಂತ್ರವನ್ನು ಹೊಂದಿದ್ದಾರೆ. ಹಾಗಾಗಿ, ನಾವು ಮುಂದೆ ಮಾಡಬೇಕಾದ ಕೆಲಸ ತುಂಬಾ ಇದೆ.
ಕಡಿದಾಳು ಶಾಮಣ್ಣ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಆಪ್ತ ಗೆಳೆಯ. ಸ್ವಾಭಿಮಾನಿ ರೈತರು, ಜೀವ ಸಂಕುಲಗಳ ಸಂಗಾತಿ. ಅಪೂರ್ವ ಸ್ನೇಹಜೀವಿ. ಜಾತ್ಯಾತೀತ ಮನೋಧರ್ಮದ ಮಾನವತಾವಾದಿ. ಕರ್ನಾಟಕದ ರೈತ ಚಳುವಳಿಯ ಗಾಂಧಿ. ನಮ್ಮ ಸಂಸ್ಕೃತಿ ಕಂಡ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ. ನಮ್ಮವ ಎನ್ನಬಹುದಾದ ಎಲ್ಲರ ಮನುಷ್ಯ. ಪ್ರೊ. ಜಿ ಎಚ್ ನಾಯಕ್: ನಾಯಕರು ಕನ್ನಡ ಸಾಹಿತ್ಯ ಕಂಡಿರುವ ಮೇರು ವಿಮರ್ಶಕ, ವಿಮರ್ಶೆಯ ಗುರು. ಕೇವಲ ಸಾಹಿತಿಯಲ್ಲ; ಕನ್ನಡ ಸಂಸ್ಕೃತಿಯ ಸತ್ವದ ಸಂಕೇತ-ಧೀಮಂತ ವಕ್ತಾರ. ಬದುಕಿ ಬರೆದ, ಅಂದಂತೆ ನಡೆದುಕೊಂಡ ಒಂದು ಸಾತ್ವಿಕ ತೇಜಸ್ಸು. ಅವರ ಬರಹ ಕರ್ನಾಟಕದ ’ನಿಜದನಿ’. ಜಿ ಎಚ್ ನಾಯಕರೇ ಬೇರೆ. ಅವರಂತೆ ಬದುಕಿದವರು ಬೇರೆ ಇಲ್ಲ. ತನಗನ್ನಿಸಿದ್ದನ್ನೇ ಹೇಳುವ ನೇರವಾದಿ, ಛಲವಾದಿ ಅವರು. ಪ್ರೀತಿಸಿದವರನ್ನು ತೀರಾ ಹಚ್ಚಿಕೊಳ್ಳುವ ಮನಸ್ಸು. ನಾಯಕರು ಬೇಂದ್ರೆಯವರ ಕವನಗಳನ್ನು ಸೊಗಸಾಗಿ ಹಾಡುತ್ತಾರೆಂದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ನಿಜದನಿ, ನಿರಪೇಕ್ಷ, ವಿನಯ ವಿಮರ್ಶೆ ಇವು ನಾಯಕರ ಹಲವಾರು ವಿಮರ್ಶಾ ಕೃತಿಗಲಲ್ಲಿ ಕೆಲವು. ದೇವನೂರು ಮಹಾದೇವ: ಕರ್ನಾಟಕ ಕಂಡ ಶ್ರೇಷ್ಠ ಸಾಹಿತಿ ಹಾಗು ಚಿಂತಕ. ಬಡವರ ನೋವನ್ನು ಎದೆಯೊಳಗೆ ಇಟ್ಟು ಕೊಂಡು ಸಮ ಸಮಾಜದ ಕನಸು ಕಾಣುತ್ತಾ ಬಂದ ಯೋಗಿ. ಅವರು ಬರೆದದ್ದು ಕಡಿಮೆ ಆದರೆ ಬರೆದದ್ದೆಲ್ಲಾ ಚಿನ್ನ, ಬದುಕಿದ್ದೆಲ್ಲವೂ ತಪಸ್ಸು. ಅವರ ಕುಸುಮಬಾಲೆ, ಒಡಲಾಳ ಕನ್ನಡದ ಅತ್ಯಂತ ಶ್ರೀಮಂತ ಕೃತಿಗಳ ಸಾಲಿನಲ್ಲಿ ಸೇರಿವೆ. ದೇಮಾ ಎಂದರೆ ಅದು ಕರ್ನಾಟಕದ ಒಂದು ಬರಹದ ಮಹಾ ಮಾದರಿ ಹಾಗು ಬದುಕಿನ ಮಹಾಮಾದರಿ. ಡಾ. ಹಿಶಿರಾ: ನಮ್ಮ ಕಾಲದ ಬಹುಮುಖ್ಯ ಜಾನಪದ ತಜ್ನರು, ಗಂಭೀರ ದೇಸೀ-ಸಂಸ್ಕೄತಿ ಚಿಂತಕರು, ೮೦ರ ದಶಕದ ರೈತ ಹೋರಾಟಕ್ಕೆ ಸಂಪೂರ್ಣ ದನಿಕೊಟ್ಟ ಸಾಹಿತಿ. ನೆಲಮೂಲವಾದ ವೈಚಾರಿಕ ಆಕೄತಿಗಳನ್ನು ವರ್ತಮಾನದ ಸಂದರ್ಭಕ್ಕೆ ಸೄಜನಶೀಲವಾಗಿ ಸಜ್ಜುಗೊಳಿಸುವ ದಿಕ್ಕಿನಲ್ಲಿ ಕ್ರಿಯಾಶೀಲರು. ಎಲ್ಲ ತರಹದ ಜೀವವಿರೋಧಿ ಸಿಧ್ಧಾಂತಗಳನ್ನೂ ಸಾರಾಸಗಟು ಸುಟ್ಟು ಬಿಡಬೇಕೆಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಇವರ ಬರಹಗಳು ಹರಳುಗಟ್ಟುತ್ತವೆ. ೨೫ಕ್ಕೂ ಹೆಚ್ಚು ಕೄತಿಗಳನ್ನು ರಚಿಸಿದ್ದಾರೆ. ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೄತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೄತಿ ಇವು ಇವರ ಮುಖ್ಯ ಕೄತಿಗಳು. ಡಾ. ಎಚ್. ಎಸ್. ರಾಘವೇಂದ್ರರಾವ್: ವಿಮರ್ಶಕ, ಕಥೆಗಾರ, ಅನುವಾದಕರಾಗಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಕೊಟ್ಟಿರುವ ಶ್ರೀ ರಾವ್ ಮೆಲು ಮಾತಿನ ಸಜ್ಜನ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ೩೬ ವರ್ಷಗಳ ಕಾಲ ಉಪನ್ಯಾಸಕರಾಗಿದ್ದು, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ನಿವೃತ್ತಿಯ ನಂತರ ಸಂಪೂರ್ಣವಾಗಿ ಓದು-ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ೨೨ಕ್ಕೂ ಹೆಚ್ಚು ಕೃತಿಗಳಲ್ಲಿ ವಿಶ್ಲೇಷಣೆ, ನಿಲುವು ಇವು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ವಿ. ಎಮ್. ಇನಾಂದಾರ್ ಪ್ರಶಸ್ತಿ ವಿಜೇತ ವಿಮರ್ಶಾ ಕೃತಿಗಳು. ಇವರ ಜನ ಗಣ ಮನ ಪ್ರವಾಸ ಕಥನ ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ಬಾಲ ಮೇಧಾವಿ, ಶಿಕ್ಷಣ ಮತ್ತು ಜೀವನ, ಪ್ರೀತಿಸುವುದೆಂದರೆ..., ಕಲೆಯಲ್ಲಿ ಮಾನವತಾವಾದ ಇವು ಇವರ ಕೆಲವು ಬಹುಮುಖ್ಯ ಅನುವಾದಿತ ಕೃತಿಗಳು. ಕೆ. ವಿ. ತಿರುಮಲೇಶ್: ಮೂಲತಃ ಕೇರಳದ ಕಾಸರಗೋಡಿನವರಾದ ಪ್ರೊಫ಼ೆಸರ್ ಕೆ ವಿ ತಿರುಮಲೇಶ್ ಕನ್ನಡದ ಬಹು ಮುಖ್ಯಕವಿ ಮತ್ತು ವಿಮರ್ಶಕರಲ್ಲೊಬ್ಬರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್ ನಲ್ಲಿ ಪ್ರಾಧ್ಯಪಕರಾಗಿ ನಿವೃತ್ತಿ ಹೊಂದಿ ಈಗ ಯೆಮೆನ್ ನಲ್ಲಿ ಇಂಗ್ಲಿಷ್ ಅಧ್ಯಾಪನ ಮಾಡುತ್ತಿದ್ದಾರೆ. ಇವರ ೨೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ. ಮೀರಾ ನಾಯಕ್: ಮಹಿಳಾಪರ ಹೋರಾಟಗಾರ್ತಿ, ಪ್ರಬಂಧಕಾರ್ತಿ. ಮೈಸೂರಿನಲ್ಲಿ ಸಕ್ರಿಯವಾಗಿರುವ 'ಸಮತಾ' ಪ್ರಗತಿಪರ ಸಂಘಟನೆಯ ಸ್ಥಾಪಕ ಸದಸ್ಯೆ ಮತ್ತು ಅತ್ಯಂತ ಕ್ರಿಯಾಶೀಲ ಮಹಿಳೆ. ಬಲ್ಲವರೆಲ್ಲರಿಗೂ ಪ್ರೀತಿಯ "ಮೀರಕ್ಕ". ಡಾ. ಬಂಜಗೆರೆ ಜಯಪ್ರಕಾಶ: ಕರ್ನಾಟಕದ ಬಹು ಮುಖ್ಯ ಪ್ರಗತಿಪರ ಚಿಂತಕ. ಕವಿ, ಸಂಸ್ಕೃತಿ ಚಿಂತಕ, ಅನುವಾದಕ, ವಿಮರ್ಶಕ, ಅಂಕಣಕಾರರಾಗಿ ತಮ್ಮ ಆಸಕ್ತಿಗಳ ವೈವಿಧ್ಯತೆಯನ್ನು ಅಭಿವ್ಯಕ್ತಿಸುತ್ತಿದ್ದಾರೆ. ಪೂರ್ಣಾವಧಿ ಬರಹಗಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಕ್ರಿಯಾಶೀಲರಾಗಿದ್ದಾರೆ. ಈವರೆಗೆ ಕನ್ನಡದಲ್ಲಿ ೧೫ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹೂವಾ', `ನಾಳೆಗಾದರು ಸಿಗದೆ ನಿನ್ನ ತಾವಿನ ಗುರುತು', `ಬಾಗ್ ಬಹಾದುರ್ನ ಸಾವು', `ಉಲಿಯ ಉಯ್ಯಲೆ', `ನಿಲ', `ಕನ್ನಡ ರಾಷ್ಟ್ರೀಯತೆ', `ಇದೇ ರಾಮಾಯಣ' ಮುಂತಾದವು ಇವರ ಮುಖ್ಯ ಕೃತಿಗಳು. `ತಲೆಮಾರು', `ದೇಗುಲದಲ್ಲಿ ದೆವ್ವ', `ಪಾಪ ನಿವೇದನೆ' ಮುಂತಾದವು ಇವರ ಅನುವಾದಿತ ಕೃತಿಗಳು. ಚ. ಸರ್ವಮಂಗಳ: ಪ್ರಬುಧ್ಧ ಕವಿಯತ್ರಿ, ವಿಮರ್ಶಕಿ ಹಾಗು ಪ್ರಬಂಧಕಾರ್ತಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ’ಅಮ್ಮನ ಗುಡ್ಡ’ ಇವರ ಮನ್ನಣೆಯ ಕವನ ಸಂಕಲನ. ಮಹಿಳೆಯರ ಪರ ಕಾಳಜಿ ಹೊಂದಿರುವಂತಹ ಬರಹಗಾರ್ತಿ. ಡಾ. ಪಂಡಿತಾರಾಧ್ಯ: ಪಂಡಿತರು ಎಂದರೆ ಪ್ರಾಮಾಣಿಕ, ಶ್ರದ್ಧಾವಂತ, ಮುಕ್ತ ಮನುಷ್ಯ. ನಿರಂತರವಾಗಿ ಕನ್ನಡ ಭಾಷೆಯನ್ನು ಪ್ರೀತಿಸುವ, ಪ್ರೇಮಿಸುವ, ಒಡನಾಡುವ ಸಂಗಾತಿಯನ್ನಾಗೇ ಮಾಡಿಕೊಂಡು ಕನ್ನಡ ನಾಡಿನ ಉದ್ದಗಲಕ್ಕೂ ತಮ್ಮ ಕನ್ನಡ ಸಂಸಾರವನ್ನು ಹೂಡಿಕೊಂಡು ಎಲ್ಲರನ್ನೂ ಕನ್ನಡ ಬಳಸಲು-ಬೆಳೆಸಲು ಆಹ್ವಾನಿಸುತ್ತಾ ಬದುಕುತ್ತಿರುವ ವಿಶ್ವ ಕುಟುಂಬಿ. ಕನ್ನಡವಿಲ್ಲದೆ ಪಂಡಿತರಿಲ್ಲ- ಇದು ಅವರ ಮನೋಧರ್ಮ. ಅವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಜಾಣಗೆರೆ ವೆಂಕಟರಾಮಯ್ಯ: ಹಿರಿಯ ಕನ್ನಡ ಪತ್ರಕರ್ತ, ಕನ್ನಡಕಾಗಿ ಸದಾ ಹೋರಾಟನಿರತ ಭಾವುಕ. ಪ್ರಕಟವಾಗಿರುವ ಇವರ ೧೭ ಪುಸ್ತಕಗಳಲ್ಲಿ ನನ್ನ ನೆಲ ನನ್ನ ಜನ, ಕಥೆ ಮುಗಿಸಿದ ನಾಯಕ, ಪ್ರಪಾತ ಇವು ಕೆಲವು ಕಥಾ ಸಂಕಲನಗಳು. ದಡ, ನೆಲೆ, ಗರ, ಮಹಾನದಿ ಇವು ಅವರ ಕಾದಂಬರಿಗಳು. ಅವರ ಮಹಾನದಿ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಜಾಣಗೆರೆ ಅವರು ಲಂಕೇಶ್ ಪತ್ರಿಕೆ, ಈ ಸಂಜೆ, ಅಭಿಮಾನಿ, ನಮ್ಮ ನಾಡುಗಳಂತಹ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಮಾರ್ದನಿ, ಕರುನಾಡ ಸಂಜೆ, ಜಾಣಗೆರೆ ಪತ್ರಿಕೆ ಇವು ಇವರ ಸಂಪಾದಕತ್ವದಲ್ಲಿ ಮೂಡಿ ಬಂದ ಪತ್ರಿಕೆಗಳು. ಪದ್ಮಾ ಶ್ರೀರಾಮ್: ಮೈಸೂರಿನ ಬಹುತೇಕ ಪುಟಾಣಿಗಳಿಗೆ ಪಕ್ಷಿ-ಹೂವಿನ ಕಥೆ ಹೇಳಿ ಪರಿಚಯಿಸುವ ಆಂಟಿ ಅಂತಲೇ ಚಿರಪರಿಚಿತರು. ಸಸ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಇವರ ಆಸಕ್ತಿ ಪಕ್ಷಿಗಳು-ಸಸ್ಯಸಂಕುಲ-ಹೂವುಗಳು ಇವಕ್ಕಷ್ಟೇ ಸೀಮಿತವಲ್ಲದೆ ಸಾಹಿತ್ಯ-ಸಂಗೀತ-ಚಾರಣ-ಪ್ರವಾಸ-ಓದು ಮತ್ತು ಬರಹದ ಕಡೆಗೂ ಪಸರಿಸಿಕೊಂಡಿದೆ. ದಿವಂಗತ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು (೧೯೫೪-೨೦೧೦): ಮೂವತ್ತು ವರ್ಷಗಳ ಅನುಭವವಿರುವ ಕರ್ನಾಟಕದ ತಜ್ಷ ಶಸ್ತ್ರವೈದ್ಯರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ನಂತರ, ಎಡಿನ್ ಬರೋ ಮತ್ತು ಗ್ಲಾಸ್ಗೋ ವಿಶ್ವವಿದ್ಯಾಲಯಗಳಿಂದ ಎಫ್.ಆರ್.ಸಿ.ಎಸ್. ಪದವಿಗಳನ್ನು ಗಳಿಸಿದರು. ಯುನೈಟೆಡ್ ಕಿಂಗಡಮ್ ಮತ್ತು ಸೌದಿ ಅರೇಬಿಯಾಗಳಲ್ಲಿ ಹಲವು ವರ್ಷಗಳು ಕೆಲಸ ಮಾಡಿದ ನಂತರ ಬೆಂಗಳೂರಿಗೆ ಹಿಂದಿರುಗಿ ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿಸ್ಟ್ ಮತ್ತು ಜನರಲ್ ಸರ್ಜನ್ ಆಗಿ ಪ್ರಸಿದ್ಧರಾಗಿದ್ದರು. ಡಾ ಚಕ್ಕೆರೆ ಶಿವಶಂಕರ್: ಜಾನಪದ ಕಣಜ. ಚಿಂತನೆ ಸಂಘಟನೆ ಸಂಯೋಜನೆ ಆಡಳಿತದಲ್ಲಿ ಜಾನಪದವನ್ನು ಕರತಲಾಮಲಕ ಮಾಡಿಕೊಂಡಿರುವ ವ್ಯಕ್ತಿ. ದಿವಂಗತ ಶ್ರೀ ಎಚ್ ಎಲ್ ನಾಗೇಗೌಡರಿಂದ ಸ್ಥಾಪಿತವಾದ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಜನಪದ ಕಲೆ, ಸಾಹಿತ್ಯ ಮತ್ತು ವಿಶ್ಲೇಷಣೆಯಲ್ಲಿ ಜೀವಪರ ನಿಲುವನ್ನು ಉಳ್ಳ ವ್ಯಕ್ತಿ. ಅವರ ಲೆಕ್ಕದಲ್ಲಿ ಜಾನಪದ ತಿಳುವಳಿಕೆ, ಜಾನಪದ ಗ್ರಹಿಕೆ, ಜನಪದ ಕಲಾ ಪ್ರವೇಶ, ಮಹಾ ಕಾವ್ಯ ಲೇಖನಗಳು, ಗೊರವರ ಸಂಸ್ಕೃತಿ ಇತ್ಯಾದಿ ಹಲವು ಕೃತಿಗಳಿವೆ, ಕರ್ನಾಟಕದ ಸಮಗ್ರ ಜನಪದ ಮಾಹಿತಿ ಇದೆ. ಡಾ. ಪ್ರೀತಿ ಶುಭಚಂದ್ರ: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯನ ಸಂಸ್ಥೆಯಲ್ಲಿ ರೀಡರ್ ಆಗಿದ್ದಾರೆ. ವಚನ ಸಾಹಿತ್ಯ, ಜೈನ ಸಾಹಿತ್ಯ, ವಿಮರ್ಶೆ ಮತ್ತು ಮಹಿಳಾ ಅಧ್ಯಯನ ಇವರ ವಿಶೇಷ ಆಸಕ್ತಿಯ ಕ್ಷೇತ್ರಗಳು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾದ "ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು" ಇವರ ಹಲವು ಮುಖ್ಯ ಕೃತಿಗಳಲ್ಲೊಂದು. ಡಾ. ಉಷಾಕಿರಣ: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕಿ. ಕೃಷಿ ವಿಜ್ನಾನ ಕುರಿತ ಕನ್ನಡ ಪುಸ್ತಕಗಳ ಪ್ರಕಟಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಸವೇಶ್ವರ ಮತ್ತು ಪ್ರತಿಮಾ ನಿರ್ಮಿತಿ, ವಚನಗಳಲ್ಲಿ ಪ್ರತಿಮೆಗಳು, ವಚನ ಮಾಣಿಕ್ಯ ಕೋಶ ಇವು ಇವರ ಪ್ರಕಟಿತ ಕೃತಿಗಳ ಪಟ್ಟಿಯಲ್ಲಿ ಸೇರುತ್ತವೆ. ಬಿ. ಎಸ್. ನಾಗರತ್ನ: ಮೈಸೂರಿನ ಪೂಜಾ ಭಾಗವತ್-ಮಹಾಜನ ಸಂಸ್ಥೆಯ ಪ್ರಾಂಶುಪಾಲರಾಗಿದ್ದಾರೆ. ಜನಪದ ಪರಿಶೀಲನ, ಊರಮ್ಮ ಮಾರಮ್ಮ, ಪಂಚಪಟಿಯ ಗಿಣಿ, ಅಂಕಲು ತೆನೆ ಇವರ ಹಲವು ಪ್ರಕಟಿತ ಕೃತಿಗಳು. ಈ ಕವಯತ್ರಿ ಮಹಿಳಾಪರ ಚಳುವಳಿಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಸ್. 'ರಂಗಧರ' : ಕರ್ನಾಟಕದ ಜನಪದ ಕಲೆಗಳು, ಕಲಾವಿದರ ಬದುಕಿನ ಕ್ಷಣಗಳಿಗೆ ಆಪ್ತ ಕಿಂಡಿ ಕೊರೆದುಕೊಡಲು ಒಪ್ಪಿರುವ ಪ್ರೀತಿಯ ಮಿತ್ರ. ದಮಯಂತಿ: ಹಳ್ಳಿ ಅಡಿಗೆ, ಆರೋಗ್ಯಕರ ಅಡಿಗೆಗಳೆಂದರೆ ಇವರಿಗೆ ತುಂಬಾ ಪ್ರೀತಿ. ಬಹಳ ಶುಚಿ-ರುಚಿಯಾಗಿ ಅಡುಗೆ ಮಾಡುತ್ತಾರೆ. ಬಿ.ಎಸ್. ಶಿವಪ್ರಕಾಶ್ : ನಮ್ಮ ಪತ್ರಕರ್ತ ಮಿತ್ರ. ಬೆಂಗಳೂರಿನವರು. ಕನ್ನಡ-ಕರ್ನಾಟಕದ ವಿಷಯಗಳ ಬಗ್ಗೆ ಬಹಳ ಕಾಳಜಿ, ಭಾವಾರೋಷದಿಂದ ಬರೆಯುತ್ತಾರೆ. ಪಕ್ಷಿ ವೀಕ್ಷಣೆ, ಪ್ರಯಾಣ, ಓದು ಇವರ ಪ್ರೀತಿಯ ಹವ್ಯಾಸಗಳು. ಟೋನಿ: ಅನುಭವೀ ಹವ್ಯಾಸೀ ಪತ್ರಕರ್ತ. ಗುಂಬಜ್ ಒಂದರ ಯಾವುದೋ ಮೇಲ್ಮೂಲೆಯಲ್ಲಿ ಸದ್ದಿಲ್ಲದೇ ಕುಳಿತು ಸುತ್ತಮುತ್ತಲನ್ನೆಲ್ಲ ಮೌನವಾಗಿ ಪರಿವೀಕ್ಷಿಸಿ, ತನ್ನಷ್ಟಕ್ಕೇ ಮಾತಾಡಿಕೊಳ್ಳುವ ಪಾರಿವಾಳ. ಉತ್ಕಟ ಭಾವುಕ ಮತ್ತು ತೀರ ಸಜ್ಜನ. ಸಹನಾ: ಬೆಂಗಳೂರಿನ ಪತ್ರಕರ್ತ ಮಿತ್ರ. ಕನ್ನಡದ ಜನಪ್ರಿಯ ಟಿವಿ ಚಾನೆಲ್ ಒಂದರಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ, ರಾಜಕೀಯ ನಾಯಕರು-ಇತರೆ ಹೋರಾಟಗಳ ನಾಯಕರುಗಳನ್ನು ಅಭ್ಯಸಿಸುವುದು, ವ್ಯವಸಾಯ, ಟ್ರಾವೆಲಿಂಗ್ ಇವರ ಹವ್ಯಾಸಗಳು. ರೂಪ ಹಾಸನ: ಕವಿಯತ್ರಿ, ಅಂಕಣ ಬರಹಗಾರ್ತಿ. 'ಪ್ರೇರಣಾ ವಿಕಾಸ ವೇದಿಕೆ' ಎಂಬ ಮಕ್ಕಳ ಸ್ವಯಂಸೇವಾ ಸಂಸ್ಥೆಯೊಂದನ್ನು ಹುಟ್ಟು ಹಾಕಿ, ಮಕ್ಕಳ ಮಾನಸಿಕ-ಬೌದ್ಧಿಕ ವಿಕಾಸಕ್ಕಾಗಿ, ಅವರಲ್ಲಿ ಸಾಹಿತ್ಯಿಕ ಹಾಗು ಭಾಷಾಸಕ್ತಿ ಮೂಡಿಸಲು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಒಂದಿಷ್ಟು ಹಸಿಮಣ್ಣು, ಬಾಗಿಲಾಚೆಯ ಮೌನ, ಕಡಲಿಗೆಷ್ಟೊಂದು ಬಾಗಿಲು ಇವು ಅವರ ಕೆಲವು ಪ್ರಕಟಿತ ಕವನ ಸಂಕಲನಗಳು. ಲಹರಿ, ಹೇಮೆಯೊಡಲಲ್ಲಿ ಅವರ ಅಂಕಣ ಬರಹದ ಸಂಕಲನಗಳು. ಜಿ.ಶ್ರೀನಿವಾಸಯ್ಯ: ಚಿಕ್ಕಬಳ್ಳಾಪುರದ ಎಸ್.ಎಸ್.ಎಲ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಜಿ. ಶ್ರೀನಿವಾಸಯ್ಯ ಅವರು ಜಾನಪದ ಚಿತ್ರಗಳ, ವಸ್ತುಗಳ, ಅಭ್ಯಾಸಕರು. ಜಾನಪದ ಸಂಶೋಧನೆ ನಡೆಸಿರುವ ಯುವ ಬರಹಗಾರ. ವ್ಯಂಗ್ಯ ಹಾಗೂ ರೇಖಾ ಚಿತ್ರಕಾರ. ಕಥೆ, ಕವನ ರಚನೆ, ಅನುವಾದ, ಜಾನಪದ ಸಂಪಾದನೆ ಇವು ಇವರ ಹವ್ಯಾಸಗಳು. ಇವರು ಮಾತು ಮೌನದ ನಡುವೆ, ಚಿಕ್ ಚಿಕ್ಕೋರ್ಗೆ ಚಿಕ್ ಚಿಕ್ ಹಾಡು, ತೆಲುಗನ್ನಡ ಕಥಲು ಈ ಕೃತಿಗಳಿಗೆ ಮುಖಪುಟ, ರೇಖಾಚಿತ್ರ, ವ್ಯಂಗ್ಯಚಿತ್ರ ಇತ್ಯಾದಿಗಳನ್ನು ಒದಗಿಸಿಕೊಟ್ಟಿದ್ದಾರೆ. ಈಶ್ವರಚಂದ್ರ ಪಿ: ಆಯಾಮಕ್ಕಾಗಿ ಕರ್ನಾಟಕದ ಸುದ್ದಿಗಳ ವಿಶೇಷ ವರದಿಗಾರರು. ಶಶಾಂಕ್ ಶೆಟ್ಟಿ: ಅಟ್ಲಾಂಟನಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಓದುವುದು-ಸಂಗೀತ ಕೇಳುವುದು-ಪ್ರಯಾಣ ಇವರ ಹವ್ಯಾಸಗಳು. ಡಾ. ತೇಜಸ್ವಿ ಶಿವಾನ೦ದ್: ಈ ಯುವ ವಿಜ್ನಾನಿ ಬೆ೦ಗಳೂರಿನಲ್ಲಿರುವ ಜಿಡ್ಡು ಕ್ರಿಷ್ಣಮೂರ್ತಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದಾರೆ. ತು೦ಬಾ ಜೀವನ ಪ್ರೀತಿಯ ವ್ಯಕ್ತಿ. ಅಷ್ಟೇ ಉತ್ಕಟವಾಗಿ ಪರಿಸರವನ್ನೂ ಪ್ರೀತಿಸುತ್ತಾರೆ. ಪಕ್ಷಿ ವೀಕ್ಷಣೆ, ಪರ್ಯಟನೆ, ಬರವಣಿಗೆ, ಹಾಡುಗಾರಿಕೆ ಇವರ ಹಲವು ಹವ್ಯಾಸಗಳು. ಎಸ್. ಸಿರಾಜ್ ಅಹಮದ್: ಪ್ರಗತಿಪರ ಯುವ ಬರಹಗಾರ. ವಿಮರ್ಶೆ ಇವರ ವಿಶೇಷ ಆಸಕ್ತಿ. ಪ್ರಸ್ತುತ ಡಾ. ರಾಜೇಂದ್ರ ಚೆನ್ನಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದಾರೆ. ಬೇಲಾ ಮರವ೦ತೆ: ಬೇವು ಮತ್ತು ಆಲದ ಮರಕ್ಕೆ ಮದುವೆ ಮಾಡಿಸಿದ ಮೇಲೆ ಇವರು ಹುಟ್ಟಿದ್ದ೦ತೆ. ಇತ್ತೀಚೆಗೆ ಅಮೆರಿಕಾಗೆ ಬ೦ದು ನೆಲೆಸಿದ್ದಾರೆ. ವ್ಯಾಸ೦ಗ ಮು೦ದುವರಿಸಿದ್ದಾರೆ. ಜನರನ್ನು ಅಭ್ಯಸಿಸುವುದು, ಸಂಗೀತ ಕೇಳುವುದು ಇವರ ಹವ್ಯಾಸಗಳು. ವಿವೇಕ್ ವಿಶ್ವನಾಥ್: ಸಾಫ್ಟ್ ವೇರ್ ಉದ್ಯೋಗಿ. ಹೈಕಿಂಗ್, ಬರೆಯುವುದು, ಸ್ಯಾನ್ ಆಂಟೋನಿಯೋ ’ಸ್ಪರ್ಸ್’ ಗಳ ಬ್ಯಾಸ್ಕೆಟ್ ಬಾಲ್ ಗೇಮ್ ನೋಡುವುದು ಇವರ ಮೆಚ್ಚಿನ ಹವ್ಯಾಸಗಳು. ನವೀನ್ ಪಿ. ದಾಸ್: ಸಾಫ್ಟ್ವೇರ್ ವೇರ್ ಉದ್ಯೋಗಿ. ನ್ಯೂಯಾರ್ಕ್ ನಲ್ಲಿ ವಾಸ. ಕೇರಮ್ ಆಡುವುದು ಮತ್ತು ಹಳೆಯ ಕನ್ನಡ-ಹಿಂದಿ ಸಿನೆಮಾಗಳನ್ನು ನೋಡುವುದು ಇವರ ಹವ್ಯಾಸ.
September 15, 2021 September 15, 2021 ram pargeLeave a Comment on ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಇಂಥ ಕನಸು ಬಿದ್ದರೆ ನಿಮ್ದು ಬಲೆ ಅದೃಷ್ಟ ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಇಂಥ ಕನಸು ಬಿದ್ದರೆ ನಿಮ್ದು ಬಲೆ ಅದೃಷ್ಟ ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಈಕನಸು ಬಿದ್ದವರು ಬಹಳ ಅದೃಷ್ಟವಂತರು ಜ್ಯೋತಿಷ್ಯವನ್ನು ಬಲವಾಗಿ ನಂಬುವಂತೆ ಕನಸುಗಳನ್ನು ನಂಬಲಾಗುತ್ತದೆ ಅದಕ್ಕೆ ಸ್ವಪ್ನ ಶಾಸ್ತ್ರ ಎನ್ನುವ ವಿಭಾಗವಿದೆ ಈ ಸ್ವಪ್ನಗಳು ಮುಂಬರುವ ಒಳ್ಳೆ ಕೆಟ್ಟದ್ದನ್ನು ಸೂಚನೆಯಾಗಿರುತ್ತದೆ ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿದೆ ಸ್ವಪ್ನ ಶಾಸ್ತ್ರದಲ್ಲಿ ಲೇಖನವಾದ ಈ ಒಂದು ವಿಷಯ ನಾವು ಹೇಳ್ತೀವಿ ಕೇಳಿ ಇಂತಹ ಕನಸು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬೀಳುತ್ತಂತೆ ಇಂತಹವೊಂದು ಕನಸು ಬಿತ್ತು ಅನ್ಕೊಂಡ್ರೆ ನಿಮಗೆ ಮುಂದೆ ಅದೃಷ್ಟವೇ ಅದೃಷ್ಟ ಇಂತಹ ಕನಸುಬಿದ್ದರೆ ನೀವು ಅದೃಷ್ಟವಂತರು ಸರಿ ಅಂತ ಹೇಳುತ್ತೆ ಸ್ವಪ್ನ ಶಾಸ್ತ್ರ ಪ್ರತಿಯೊಬ್ಬರೂ ಮಲಗಿದಾಗ ಕನಸು ಬೀಳುತ್ತೆ ಹುಟ್ಟುವ ರಿಂದ ಸಾಯುವ ತನಕ ಪ್ರತಿಯೊಬ್ಬರಿಗೂ ಕನಸು ಬೀಳುತ್ತೆ ಕೆಲವರಿಗೆ ಬೀಳುವ ಕನಸು ನೆನಪಿನಲ್ಲಿ ಬರುವುದಿಲ್ಲ ಹಾಗೆ ಬಿದ್ದಂತಹ ಕನಸುಗಳನ್ನು ನೆನಪಿಗೆ ತಂದುಕೊಳ್ಳುವುದು ಒಳ್ಳೆಯದು ಯಾಕೆಂದರೆ ಈಗ ಮುಂದೆ ನಡೆಯುವ ಕೆಲವು ಘಟನೆಗಳ ಮಾರ್ಗ ಸೂಚನೆಯಾಗಿರುತ್ತದೆ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ಅದರಲ್ಲೂ ಈ ಲಕ್ಷದಲ್ಲಿ ಬೀಳುವ ಈ ಒಂದು ಕನಸು ಯಾವುದು ಅಂದರೆ ಬೆಟ್ಟದಲ್ಲಿ ನೀರು ಕುಡಿದಂತೆ ಅದು ನಮಗೆ ಕಂಡರೆ ಅದು ಬಹಳ ಶುಭಕರ ಎಂದು ಹೇಳಲಾಗುತ್ತದೆ ನೀವು ಪಶ್ಚಿಮಘಟ್ಟಕ್ಕೆ ಹೋದರೆ ಅಲ್ಲಿರುವ ಬೆಟ್ಟದಲ್ಲಿ ನೀರಿನ ಬಗ್ಗೆ ಗಳಿರುವ ನಿನ್ನ ನೀವು ನೋಡಿರುತ್ತೀರಿ ಆದರೆ ಅಂತಹ ಬಗ್ಗೆಗಳು ಅಂತಹ ನೀರಿನಲ್ಲಿ ಅಂತಹ ಬೆಟ್ಟದಲ್ಲಿ ಹುಬ್ಬು ಅಂತಹ ನೀರು ಬರುವುದು ನಮ್ಮ ಕನಸಿನಲ್ಲಿ ಬಹಳ ಅಪರೂಪ ಒಂದು ವೇಳೆ ಇದು ಬಂದರೆ ಅದು ತುಂಬಾ ಅದೃಷ್ಟವನ್ನು ತರುವಂತಹ ಸೂಚನೆ ಅಂತಹ ಹೇಳುತ್ತೆ ಸ್ವಪ್ನ ಶಾಸ್ತ್ರ ಇನ್ನು ಕನಸಿನಲ್ಲಿ ದೇವರು ಕಂಡರೆ ರಾಜ ಬಿಡಿ ಬಟ್ಟೆ ಮಹಿಳೆ ಕಾಣಿಸಿಕೊಂಡರೆ ಅದು ಕೂಡ ಬಾಳಷ್ಟು ಶುಭದಾಯಕ ಎನ್ನಲಾಗುತ್ತದೆ ಈ ರೀತಿ ಕನಸು ಬೀಳುವುದು ತುಂಬಾನೇ ಅಪರೂಪ ಮತ್ತು ಕನಸಿನಲ್ಲಿ ದೇವರು ಬರುವುದು ತುಂಬಾ ಅಪರೂಪ ಹಾಗೇನಾದರೂ ಬಂದರೆ ಒಳ್ಳೆಯ ಸುದ್ದಿ ಬರುತ್ತೆ ಇನ್ನು ಗುರುಗಳು ಸಹ ಕಾಣಿಸಿಕೊಂಡರೆ ತುಂಬಾ ಒಳ್ಳೆಯದಾಗುತ್ತೆ ಹಾಗೆ ಬಿಳಿ ಬಟ್ಟೆ ಧರಿಸುವ ಮಹಿಳೆಯು ಕಂಡರೆ ಅದು ಕೂಡ ತುಂಬಾ ಶುಭಕರವಾದ ಕನಸು ಈಕನಸು ಲಕ್ಷದಲ್ಲಿ ಬೀಳುವ ಒಬ್ಬರಿಗೆ ಮಾತ್ರ ಕನಸು ಎಂದು ಹೇಳಲಾಗುತ್ತದೆ ಇನ್ನು ಸ್ವಪ್ನದಲ್ಲಿ ಬಂದರೆ ಕಾಡುವಂತಹ ಕನಸು ಸಿಂಹ ಕುದುರೆ ಶ್ರಾವಣ ಹೂವು ಮೊಸರು ಅಕ್ಕಿ ರೈನ್ಬೋ ಜೂಜು ಮಳೆ ಇಂತಹವು ಕಾಣಿಸಿಕೊಂಡರೆ ಮುಂದಿನ ದಿನಗಳಲ್ಲಿ ಆರ್ಥಿಕ ವೃದ್ಧಿ ಆಗಲಿದೆ ಎಂಬ ಅರ್ಥ ಗೌರವ ಹಣ ಯಶಸ್ವಿ ಕೂಡ ಸಿಗುತ್ತದೆ ಇಂತಹ ಸ್ವಪ್ನಗಳು ಬೀಳುವುದು ತುಂಬಾನೇ ಅಪರೂಪ ಆದರೆ ನಿಮಗಿಂತ ಸ್ವಪ್ನ ಆಗಿತ್ತು ಅಂತ ಅಂದ್ಕೊಂಡ್ರೆ ನೀವು ಖಂಡಿತವಾಗಿಯೂ ಅದೃಷ್ಟಶಾಲಿ ಎಂಬುವುದು ಹೇಳಲು ಮಾತೆ ಇಲ್ಲ ಇದೇ ಸ್ವಪ್ನ ಶಾಸ್ತ್ರ ದಲ್ಲಿ ಇರುವ ಹಲವು ವಿಷಯಗಳು ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855
Kannada News » World » Russia Ukraine War Gas Pipeline Leak Referendum in Donetsk Russia America Wants Modi to Follow his statement to end war Russia Ukraine War: ಯೂರೋಪ್​ಗೆ ತೈಲ ಪೂರೈಸುವ ಪೈಪ್​ಲೈನ್​ ಸೋರಿಕೆ, ಇದು ರಷ್ಯಾ ಮಾಡಿದ ಮೋಸ ಎಂದ ಜರ್ಮನಿ ಜರ್ಮನಿ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಆರ್ಥಿಕವಾಗಿ ಕುಸಿದರೆ ಅದರ ಪರಿಣಾಮವನ್ನು ಯೂರೋಪ್ ಮಾತ್ರವಲ್ಲ; ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ಎದುರಿಸಬೇಕಾಗುತ್ತದೆ. ರಷ್ಯಾದಿಂದ ಯುರೋಪ್​ಗೆ ಇಂದನ ಸರಬರಾಜು ಮಾಡುವ ಪೈಪ್​ಲೈನ್​ನಲ್ಲಿ ಸೋರಿಕೆಯಾಗುತ್ತಿದೆ. TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Sep 29, 2022 | 8:23 AM ಯುದ್ಧಭೂಮಿಯಲ್ಲಿ ರಷ್ಯಾ ಪಡೆಗಳನ್ನು ಉಕ್ರೇನ್ ಸೇನೆ ಹಿಮ್ಮೆಟ್ಟಿಸಿದ ನಂತರ ರಷ್ಯಾ ದೊಡ್ಡಮಟ್ಟದಲ್ಲಿ ಸೇನೆಗೆ ಯುವಕರನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಸೇನೆಯನ್ನು ಪುನರ್​ಸಂಘಟಿಸಿ ಮತ್ತೊಮ್ಮೆ ಉಕ್ರೇನ್ ವಿರುದ್ಧ ದಾಳಿ ನಡೆಸುವ ಯೋಜನೆ ರೂಪಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಕ್ರೇನ್​ಗೆ ಬೆಂಬಲ ನೀಡಿರುವ ದೇಶಗಳನ್ನು ಶಿಕ್ಷಿಸಲೆಂದು ರಷ್ಯಾ ಪರೋಕ್ಷ ಯುದ್ಧವನ್ನೂ ಆರಂಭಿಸಿದೆ. ಜರ್ಮನಿ, ಬ್ರಿಟನ್ ಸೇರಿದಂತೆ ಹಲವು ಪ್ರಮುಖ ದೇಶಗಳಿಗೆ ಇಂಧನ ಪೂರೈಸುವ ಬಾಲ್ಟಿಕ್ ಸಮುದ್ರದಲ್ಲಿ ಹರಡಿಕೊಂಡಿರುವ ವಿಶಾಲ ಪೈಪ್​ಲೈನ್ ಜಾಲದಲ್ಲಿ ರಂಧ್ರ ಬಿದ್ದಿದೆ. ತಮ್ಮನ್ನು ಮಣಿಸಲೆಂದು ರಷ್ಯಾ ಮಾಡಿರುವ ಮೋಸದ ಕೆಲಸ ಇದು ಎಂದು ಐರೋಪ್ಯ ದೇಶಗಳು ಆರೋಪಿಸಿದ್ದು, ಹಲವು ದೇಶಗಳಲ್ಲಿ ಇಂಧನ ಬಳಕೆ ಮೇಲೆ ಮಿತಿ ಹೇರಲಾಗಿದೆ. ಮನೆಗಳನ್ನು ಬಿಸಿಯಾಗಿಡಲು ಬಳಸುವ ಉಪಕರಣಗಳಿಗೆ ನೈಸರ್ಗಿಕ ಅನಿಲವೇ ಬೇಕು. ಆದರೆ ಅಷ್ಟರೊಳಗೆ ಗ್ಯಾಸ್ ಪೈಪ್​ಲೈನ್ ಸರಿಯಾಗುವುದು ಅಸಾಧ್ಯ ಎನಿಸಿದೆ. ಹೀಗಾಗಿ ಮುಂದಿನ ಚಳಿಗಾಲ ಕಳೆಯುವುದು ಹೇಗೆ ಎಂಬ ಚಿಂತೆ ಅಲ್ಲಿನ ಜನರನ್ನು ಕಾಡುತ್ತಿವೆ. ವಿದ್ಯುತ್​ ಉತ್ಪಾದನೆಗೂ ರಷ್ಯಾದಿಂದ ಬರುವ ಕಚ್ಚಾತೈಲ ಹಾಗೂ ನೈಸರ್ಗಿಕ ಅನಿಲವನ್ನೇ ಜರ್ಮನಿ ಸೇರಿದಂತೆ ಹಲವು ಐರೋಪ್ಯ ದೇಶಗಳು ನೆಚ್ಚಿಕೊಂಡಿದ್ದವು. ಆದರೆ ಇದೀಗ ಪೂರೈಕೆ ಅಸ್ತವ್ಯಸ್ತಗೊಂಡಿರುವುದರಿಂದ ಕೈಗಾರಿಕೆ ಉತ್ಪಾದನೆಗೂ ಧಕ್ಕೆಯಾಗಿದ್ದು, ಜರ್ಮನಿ ಸೇರಿದಂತೆ ವಿಶ್ವದ ಹಲವು ಬಲಾಢ್ಯ ಆರ್ಥಿಕತೆಗಳಲ್ಲಿ ಹಿಂಜರಿತದ ಭೀತಿ ಆವರಿಸಿದೆ. ಜರ್ಮನಿ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಆರ್ಥಿಕವಾಗಿ ಕುಸಿದರೆ ಅದರ ಪರಿಣಾಮವನ್ನು ಯೂರೋಪ್ ಮಾತ್ರವಲ್ಲ; ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ಎದುರಿಸಬೇಕಾಗುತ್ತದೆ. ಉತ್ತರ ಪೊಲೆಂಡ್​ನ ಸ್ವೀಡನ್ ಮತ್ತು ಡೆನ್ಮಾರ್ಕ್​ ಆರ್ಥಿಕ ವಲಯದ ಸಾಗರದಲ್ಲಿ ದೊಡ್ಡಮಟ್ಟದ ನೀರ್ಗುಳ್ಳೆಗಳು ಸಾಗರದಲ್ಲಿ ಕಾಣಿಸಿಕೊಂಡಿವೆ. ಯೂರೋಪ್​ಗೆ ಇಂಧನ ಪೂರೈಕೆಯಾಗುವ ನಾರ್ಡ್​ ಸ್ಟ್ರೀಮ್ 1 ಮತ್ತು 2ರ ಕೊಳವೆ ಮಾರ್ಗಗಳಲ್ಲಿ ಸೋರಿಕೆಯಾಗುತ್ತಿರುವುದನ್ನು ಇದು ದೃಢಪಡಿಸಿದೆ. ಈ ಎರಡೂ ಪೈಪ್​ಲೈನ್​ಗಳನ್ನು ರಷ್ಯಾದ ‘ಗಾಜ್​ಪ್ರೊಮ್’ ಕಂಪನಿ ನಿರ್ವಹಿಸುತ್ತಿದೆ. ‘ಇದು ಆಕಸ್ಮಿಕವಾಗಿ ಆಗಿರುವುದಲ್ಲ. ನಮ್ಮ ದೇಶಗಳನ್ನು ಚಳಿಗಾಲದಲ್ಲಿ ನರಳಿಸಿ, ಮಣಿಸಬೇಕೆಂದು ಮಾಡಿರುವ ಉದ್ದೇಶಪೂರ್ವಕ ಕೃತ್ಯ’ ಎಂದು ಡೆನ್ಮಾರ್ಕ್​ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್​ಸೆನ್ ಹೇಳಿದ್ದಾರೆ. ಯುದ್ಧದ ಯುಗವಲ್ಲ: ಸಲಹೆ ಕೊಟ್ಟ ಮೋದಿಗೆ ಮುಂದಿನ ಹೆಜ್ಜೆ ಇಡಲು ಅಮೆರಿಕ ತಾಕೀತು ಉಜ್ಬೆಕಿಸ್ತಾನದ ಸಮರ್​ಖಂಡ್​ನಲ್ಲಿ ಇತ್ತೀಚೆಗೆ ನಡೆದಿದ್ದ ಶಾಂಘೈ ಸಹಕಾರ ಒಕ್ಕೂಟ (Shanghai Cooperation Summit) ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಅವರಿಗೆ ‘ಇದು ಯುದ್ಧದ ಯುಗವಲ್ಲ. ನೀವು ನೆರೆಯ ದೇಶವನ್ನು ಬಲಪ್ರಯೋಗದಿಂದ ಗೆಲ್ಲಲು ಆಗುವುದಿಲ್ಲ’ ಎಂದು ಸಲಹೆ ಮಾಡಿದ್ದರು. ಮೋದಿ ಅವರ ನೇರ ಮಾತು ಮತ್ತು ದಿಟ್ಟ ನುಡಿಯನ್ನು ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳು ಸ್ವಾಗತಿಸಿದ್ದವು. ಆದರೆ ಸಮಾವೇಶದ ನಂತರ ರಷ್ಯಾ ಯುದ್ಧ ಸಿದ್ಧತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಸುಮಾರು 3 ಲಕ್ಷದಷ್ಟು ಮೀಸಲು ಯೋಧರಿಗೆ ಮತ್ತೆ ಸೇನಾ ಸೇವೆಗೆ ಹಾಜರಾಗುವಂತೆ ಆದೇಶ ಹೊರಡಿಸಿದ್ದಲ್ಲದೇ, ಅಣ್ವಸ್ತ್ರ ಪ್ರಯೋಗದ ಬೆದರಿಕೆಯನ್ನೂ ಹಾಕಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ, ಪುಟಿನ್​ಗೆ ಸಲಹೆ ನೀಡಿದ ನರೇಂದ್ರ ಮೋದಿ ಅವರಿಗೆ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗುವಂತೆ ತಾಕೀತು ಮಾಡಿದೆ. ‘ಬಹಿರಂಗವಾಗಿಯಾದರೂ ಸರಿ, ಖಾಸಗಿಯಾಗಿಯಾದರೂ ಸರಿ. ಯುದ್ಧ ನಿಲ್ಲಬೇಕು ಎನ್ನುವ ಸಂದೇಶವನ್ನು ಎಲ್ಲರೂ ರಷ್ಯಾಗೆ ರವಾನಿಸಬೇಕಿದೆ’ ಎಂದು ಅಮೆರಿಕದ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ಭಾರತಕ್ಕೆ ಸಂದೇಶ ರವಾನಿಸಿದ್ದಾರೆ. ಉಕ್ರೇನ್​ನ ವಿವಿಧೆಡೆ ಜನಮತಗಣನೆ ಉಕ್ರೇನ್-ರಷ್ಯಾ ಗಡಿಯಲ್ಲಿರುವ ಡೊನೆಟ್​ಸ್ಕ್, ಲುಹಾಂಕ್, ಝಪೊರಿಖ್​ಖಿಯಾ ಮತ್ತು ಖೆರೊಸನ್​ ಪ್ರಾಂತ್ಯಗಳಲ್ಲಿ ರಷ್ಯಾ ಆಡಳಿತವು ಸೇನೆಯ ಬಂದೂಕಿನ ನೆರಳಿನಲ್ಲಿ ಇತ್ತೀಚೆಗೆ ಮತದಾನದ ಮೂಲಕ ಜನಮತಗಣನೆ ನಡೆಸಿತು. ಮತದಾನದ ಫಲಿತಾಂಶ ಪ್ರಕಟಿಸಿರುವ ರಷ್ಯಾ, ಈ ಎಲ್ಲ ಪ್ರಾಂತ್ಯಗಳು ರಷ್ಯಾದೊಂದಿಗೆ ಸೇರಲು ಇಚ್ಛಿಸಿವೆ ಎಂದು ರಷ್ಯಾದ ಆಡಳಿತ ಘೋಷಿಸಿತು. ರಷ್ಯಾ ನಡೆಸಿರುವ ಜನಮತಗಣನೆಯನ್ನು ಪಕ್ಷಪಾತ ಮತ್ತು ದುರುದ್ದೇಶದ ಕ್ರಮ ಎಂದು ಉಕ್ರೇನ್ ತಳ್ಳಿಹಾಕಿದೆ. ಆದರೆ ಈ ನಾಲ್ಕೂ ಪ್ರಾಂತ್ಯಗಳನ್ನು ಶೀಘ್ರ ರಷ್ಯಾದ ಅಧಿಕೃತ ಭಾಗವಾಗಿಸಿಕೊಳ್ಳಲು ರಷ್ಯಾದಲ್ಲಿ ಪ್ರಯತ್ನಗಳು ಅಂತಿಮ ಹಂತಕ್ಕೆ ತಲುಪಿವೆ. ಕಳೆದ ಫೆಬ್ರುವರಿ ತಿಂಗಳಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಗೆಲುವು ಹೊಯ್ದಾಡುತ್ತಿದೆ. ಆದರೆ ರಷ್ಯಾದ ನಿರೀಕ್ಷೆಗೆ ವ್ಯತಿರಿಕ್ತವಾಗಿ ಉಕ್ರೇನ್ ವೀರಾವೇಶದಿಂದ ಹೋರಾಡುತ್ತಿದ್ದು, ರಷ್ಯಾ ಸೇನೆಯನ್ನು ಸಾವಿರಾರು ಕಿಲೋಮೀಟರ್ ಪ್ರದೇಶಗಳಷ್ಟು ಹಿಮ್ಮೆಟ್ಟಿಸಿದೆ. ರಷ್ಯಾದಂಥ ಬಲಾಢ್ಯ ದೇಶದ ಎದುರು ಉಕ್ರೇನ್ ಗೆಲ್ಲಬಹುದು ಎಂಬ ನಿರೀಕ್ಷೆ ಬಲಗೊಂಡ ನಂತರ ವಿಶ್ವದ ಹಲವು ದೇಶಗಳಿಂದ ಉಕ್ರೇನ್​ಗೆ ನೆರವು ಹರಿದುಬರುತ್ತಿದೆ. ರಷ್ಯಾ ಮತ್ತು ಅಮೆರಿಕ ಎನ್ನುವ ಸ್ಥಿತಿಗೆ ಪ್ರಸ್ತುತ ಈ ಯುದ್ಧವು ತಲುಪಿದ್ದು, ಜಗತ್ತಿನ ಹಲವು ದೇಶಗಳಲ್ಲಿ ಇಂಧನ ಮತ್ತು ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ.
ಶ್ರೀ ನಿಮಿಷಾಂಭ ದೇವಿ ಜ್ಯೋತಿಷ್ಯ ಪೀಠ.. ಜ್ಯೋತಿಷ್ಯ ವಿದ್ವಾನ್ ಶ್ರೀ ಶ್ರೀನಿವಾಸ ಮೂರ್ತಿ.. 99005 55458, 30 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಮೇಷ ರಾಶಿ.. ನೀವು ಇಂದು ನಿರೀಕ್ಷಿಸುತ್ತಿರುವುದು ನಿಜವಾಗುವುದಿಲ್ಲ. ನೀವು ಚೇತರಿಕೆಗೆ ಸಮಯವನ್ನು ತೆಗೆದುಕೊಳ್ಳುತ್ತಿದ್ದರೆ ಅದು ನಿಮಗೆ ಉತ್ತಮವಾಗಿರುತ್ತದೆ. ಆದರೆ ಇಂದು ಯಾರಿಗೂ ಯಾವುದೇ ಭರವಸೆಗಳನ್ನು ನೀಡದ ಒಂದು ವಿಷಯವನ್ನು ನೋಡಿಕೊಳ್ಳಿ. ಇಂದು ನೀವು ಒಳ್ಳೆಯದನ್ನು ಮಾಡಲು ಯೋಚಿಸುತ್ತಿರುವುದು ನಿಮಗೆ ಹಾನಿ ಮಾಡುತ್ತದೆ. ಇದಲ್ಲದೆ, ಕುಟುಂಬದೊಂದಿಗೆ ಎಲ್ಲೋ ಹೋಗುವ ಕಾರ್ಯಕ್ರಮವನ್ನು ಸಹ ಮುಂದೂಡಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ವೃಷಭ ರಾಶಿ.. ನೀವು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡಿದರೆ, ಇಂದು ನಿಮ್ಮ ಭುಜದ ಮೇಲೆ ಕೆಲವು ಹೆಚ್ಚುವರಿ ಕೆಲಸಗಳನ್ನು ನೀವು ಹೊಂದುವಂತೆ ಮಾಡುತ್ತದೆ. ಮತ್ತೊಂದೆಡೆ, ನೀವು ಉದ್ಯೋಗದಲ್ಲಿದ್ದರೆ, ನಿಮಗೆ ಹೊಸ ಕೆಲಸವನ್ನು ನಿಯೋಜಿಸಬಹುದು. ದೇಶೀಯ ಸಮಸ್ಯೆಗಳ ವಿಷಯವೂ ಅಲ್ಲಿ ಹೆಚ್ಚಾಗಬಹುದು. ಆದರೆ ಅಂತಹ ಪರಿಸ್ಥಿತಿಯಲ್ಲಿ ಅಸಮಾಧಾನಗೊಳ್ಳಬೇಡಿ, ಆದರೆ ಹಿರಿಯರ ಅಭಿಪ್ರಾಯವನ್ನು ತೆಗೆದುಕೊಳ್ಳಿ, ನಿಮ್ಮ ಸಮಸ್ಯೆ ಕೂಡ ಸ್ವಲ್ಪ ಮಟ್ಟಿಗೆ ಪರಿಹರಿಸಲ್ಪಡುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಮಿಥುನ ರಾಶಿ.. ಇಂದು ನೀವು ಕೆಲವು ಜವಾಬ್ದಾರಿಯುತ ಕೆಲಸವನ್ನು ಪಡೆಯಲಿದ್ದೀರಿ. ಇದು ನಿಮಗೆ ಕೆಲವು ತೊಂದರೆಗಳನ್ನು ಉಂಟುಮಾಡಬಹುದು. ಆದರೆ ನೀವು ತಾಳ್ಮೆಯಿಂದಿದ್ದರೆ, ಅದರಿಂದ ನೀವು ಒಳಿತನ್ನು ಅನುಭವಿಸುವಿರಿ. ಈ ಸಂಜೆ ನಡೆಯುವಾಗ ಇದ್ದಕ್ಕಿದ್ದಂತೆ ಪ್ರೀತಿಪಾತ್ರರನ್ನು ಭೇಟಿಯಾಗಬಹುದು. ಅಲ್ಲದೆ, ನೀವು ತಕ್ಷಣ ಅವರಿಗೆ ಸಹಾಯ ಮಾಡಬೇಕಾಗಬಹುದು. ವ್ಯವಹಾರದಲ್ಲಿ ಕೆಲವು ತೊಂದರೆಗಳು ಎದುರಾಗುತ್ತವೆ, ಆದರೆ ಇದರ ಹೊರತಾಗಿಯೂ ನೀವು ನಿಮ್ಮನ್ನು ದುರ್ಬಲರೆಂದು ಪರಿಗಣಿಸುವುದಿಲ್ಲ. ಮುಂದಿನ ಸಮಯವು ನಿಮಗೆ ಸಂತೋಷವನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಕಟಕ ರಾಶಿ.. ಇಂದು, ಕಟಕ ರಾಶಿಯ ಜನರಿಗೆ ವಿಶೇಷ ಸಲಹೆಯನ್ನು ಪಡೆಯುವ ದಿನ. ಅಂದರೆ, ಇಂದು, ಹಠಾತ್ ಆರೋಪಕ್ಕೆ ಗುರಿಯಾಗುವಾಗ, ಯಾವುದೇ ತಪ್ಪು ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ತೊಂದರೆಗಳು ಹೆಚ್ಚಾಗಬಹುದು. ಯಾರಿಗೂ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಮಾಡದಿರಿ. ಅಂದರೆ, ನಿಮ್ಮ ಹೊರತಾಗಿ ಇತರರ ಬಗ್ಗೆ ಉತ್ತಮವಾಗಿ ಯೋಚಿಸುವುದು ಉತ್ತಮ. ನೀವು ಇಂದು ಮಾಡುವ ಕೆಲಸಕ್ಕೆ ಇತರರು ಅಡ್ಡಿಪಡಿಸದಂತೆ ನೋಡಿಕೊಳ್ಳಿ. ಇಂದು, ಹೊಸ ವ್ಯವಹಾರ ಅಥವಾ ಒಪ್ಪಂದವನ್ನು ಸಹ ರಚಿಸಲಾಗುತ್ತಿದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಸಿಂಹ ರಾಶಿ.. ಇಂದು, ಸಿಂಹ ರಾಶಿ ಚಿಹ್ನೆಯ ಜನರು ನಿಮ್ಮ ಸುತ್ತಲಿನ ಪರಿಸರದ ಮೇಲೆ ನಿಗಾ ಇಡುವುದು ಸೂಕ್ತ. ನಿಮಗೆ ಯಾವಾಗ ಬೇಕಾದರೂ ಹಾನಿ ಮಾಡುವವರ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಇದರ ಹೊರತಾಗಿ, ವ್ಯಾಪಾರಸ್ಥರೂ ಸಹ ಜಾಗರೂಕರಾಗಿರಬೇಕು, ಅಂದರೆ ವ್ಯವಹಾರದಲ್ಲಿ ಯಾವುದೇ ರಿವೇಂಜ್‌ ಅಥವಾ ದ್ವೇಷ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ನಿಮಗೆ ಅದು ಹಾನಿಯನ್ನುಂಟು ಮಾಡಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಕನ್ಯಾ ರಾಶಿ.. ಯಾರಾದರೂ ನಿಮಗೆ ಪ್ರೀತಿಯ ಕೈಗಳನ್ನು ವಿಸ್ತರಿಸುತ್ತಿದ್ದರೆ, ನಿಮ್ಮ ಜೀವನವನ್ನು ನೋಡಿಕೊಂಡು ನಂತರ ಅವರಿಗೆ ಉತ್ತರಿಸಿ. ಏಕೆಂದರೆ ಅವರು ನಿಮ್ಮ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿರಬಹುದು. ಇಂದು, ನಿಮ್ಮ ಕೆಲಸದ ಪ್ರದೇಶದಲ್ಲೂ ನೀವು ಕೆಲವು ಬದಲಾವಣೆಗಳನ್ನು ಮಾಡಬೇಕಾಗಬಹುದು. ಈ ಬದಲಾವಣೆಯು ಖಂಡಿತವಾಗಿಯೂ ನಿಮಗೆ ಕೆಲವು ಉತ್ತಮ ಫಲಿತಾಂಶಗಳನ್ನು ತರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಕುಟುಂಬಕ್ಕೆ ಸಂಬಂಧಿಸಿದಂತೆ ನಿಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇಲ್ಲದಿದ್ದರೆ ದೂರವಿರಬೇಕಾದ ಸನ್ನಿವೇಶಗಳು ಹೆಚ್ಚಾಗುತ್ತವೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ತುಲಾ ರಾಶಿ.. ನೀವು ಪ್ರೇಮಿಯ ವಿಷಯದ ಬಗ್ಗೆ ಗೊಂದಲಕ್ಕೊಳಗಾಗಿದ್ದರೆ ಅಥವಾ ಅಸಮಾಧಾನಗೊಂಡಿದ್ದರೆ, ನಿಮ್ಮ ಅಸಹಾಯಕತೆ ಅಥವಾ ಅಸಾಮರ್ಥ್ಯವನ್ನು ನೀವು ಸ್ಪಷ್ಟವಾಗಿ ಹೇಳಬೇಕು. ಈ ತೊಂದರೆಗಳು ಶೀಘ್ರದಲ್ಲೇ ಮುಗಿಯುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಪ್ರಮುಖ ಪತ್ರಿಕೆಗಳನ್ನು ಕೆಲಸದ ಪ್ರದೇಶದಲ್ಲಿ ಇರಿಸಿ. ಇಲ್ಲದಿದ್ದರೆ ಯಾರಾದರೂ ಸಾಕಷ್ಟು ತೊಂದರೆಗೆ ನಿಮ್ಮನ್ನು ಸಿಲುಕಿಸಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ವೃಶ್ಚಿಕ ರಾಶಿ.. ನೀವು ಇಂದು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ, ನಿಮ್ಮ ಸುತ್ತಲಿನ ಜನರ ಸಹಾಯವನ್ನು ಪಡೆಯಿರಿ. ಬಹುಶಃ ಇವುಗಳಲ್ಲಿ ಯಾವುದಾದರೂ ನಿಮಗೆ ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ. ನಿಮ್ಮ ದೃಷ್ಟಿಯಲ್ಲಿ ನೀವು ಏನು ಮಾಡಬೇಕೋ ಅದನ್ನು ಸಮಯಕ್ಕೆ ಸರಿಯಾಗಿ ಮಾಡಿ. ಅಳಿಯನ ಕಡೆಯಿಂದ ಯಾವುದರ ಬಗ್ಗೆಯೂ ವಿವಾದ ಉಂಟಾಗಬಹುದು. ಆದ್ದರಿಂದ ಜಾಗರೂಕರಾಗಿರಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಧನಸ್ಸು ರಾಶಿ.. ಇಂದು ನೀವು ನಿಮ್ಮ ಕೆಲಸವನ್ನು ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ತಪ್ಪಿಸಬೇಕು. ಏಕೆಂದರೆ ನೀವು ಸಮಯಕ್ಕೆ ಯಾವುದೇ ಹೆಜ್ಜೆ ಇಡದಿದ್ದರೆ, ನಿಮ್ಮ ಕೆಲಸವೂ ಹಾಳಾಗಬಹುದು. ಇಂದು, ಮಕ್ಕಳ ಶಿಕ್ಷಣದ ಮನಸ್ಸಿನಲ್ಲಿ ಸಂತೋಷ ಅಥವಾ ಯಾವುದೇ ಸ್ಪರ್ಧೆಯಲ್ಲಿ ಅಕಾಲಿಕ ಯಶಸ್ಸಿನ ಸುದ್ದಿ ಸಿಗುತ್ತದೆ. ಸ್ಥಗಿತಗೊಂಡ ಯಾವುದೇ ಕೆಲಸವು ಸಂಜೆ ಪೂರ್ಣಗೊಳ್ಳುತ್ತದೆ. ರಾತ್ರಿಯಲ್ಲಿ ಪ್ರೋತ್ಸಾಹಿಸುವ ಚಟುವಟಿಕೆಗಳಲ್ಲಿ ಭಾಗಿಯಾಗುವ ಭಾಗ್ಯವನ್ನು ನೀವು ಪಡೆಯುತ್ತೀರಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಮಕರ ರಾಶಿ.. ನಿಮ್ಮ ಹಳೆಯ ಸಂಕಲ್ಪವನ್ನು ಪೂರೈಸುವ ದಿನ ಇಂದು. ನೀವು ದೇವತೆಯ ದೇವಾಲಯದಲ್ಲಿ ಪ್ರತಿಜ್ಞೆ ಕೋರಿದ್ದರೆ, ಅದಕ್ಕೆ ಸಿದ್ಧರಾಗಿ. ನೀವು ಒಂದು ವಿಷಯವನ್ನು ದೀರ್ಘಗೊಳಿಸಲು ಪ್ರಯತ್ನಿಸುತ್ತಿರುವಂತೆ, ಭವಿಷ್ಯದಲ್ಲಿ ನಿಮ್ಮ ಸಮಸ್ಯೆಗಳು ಮತ್ತು ವೆಚ್ಚಗಳು ಹೆಚ್ಚಾಗುತ್ತವೆ. ಆದಾಗ್ಯೂ, ಮುಂಬರುವ ಸಮಯದಲ್ಲಿ ನಿಮಗಾಗಿ ಒಂದು ಒಳ್ಳೆಯ ಸುದ್ದಿ ಕಾಯುತ್ತಿದೆ. ರಾಜ್ಯದ ಪ್ರತಿಷ್ಠೆ ಹೆಚ್ಚಾಗುತ್ತದೆ. ಮಗುವಿನ ಜವಾಬ್ದಾರಿಯನ್ನು ಪೂರೈಸಬಹುದು. ಪ್ರಯಾಣ ಮತ್ತು ಪ್ರಯಾಣದ ಪರಿಸ್ಥಿತಿ ಆಹ್ಲಾದಕರ ಮತ್ತು ಪ್ರಯೋಜನಕಾರಿಯಾಗಿದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಕುಂಭ ರಾಶಿ.. ಬಹಳ ಸಮಯದ ನಂತರ, ನಿಮ್ಮ ದಿನಚರಿ ಜೀವನವು ಬದಲಾಗುತ್ತಿದೆ. ನೀವು ಹೊಸ ಸ್ಥಾನ ಅಥವಾ ಗೌರವವನ್ನು ಪಡೆಯುತ್ತಿದ್ದರೆ, ಅದನ್ನು ಸ್ವೀಕರಿಸಲು ನೀವು ವಿಳಂಬ ಮಾಡಬಾರದು. ಇಲ್ಲಿಂದ ನಿಮಗಾಗಿ ಪ್ರಚಾರದ ಬಾಗಿಲು ತೆರೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಒಳ್ಳೆಯ ಸುದ್ದಿಗಳ ಚಿಹ್ನೆಗಳು ಸಹ ಕಂಡುಬರುತ್ತವೆ. ಹೊಸ ಆದಾಯದ ಮೂಲಗಳನ್ನು ರಚಿಸಲಾಗುವುದು. ಇಂದು ಮಾತಿನ ಮೃದುತ್ವವು ನಿಮಗೆ ಗೌರವವನ್ನು ನೀಡುತ್ತದೆ. ಶಿಕ್ಷಣ ಮತ್ತು ಸ್ಪರ್ಧೆಯಲ್ಲಿ ವಿಶೇಷ ಯಶಸ್ಸನ್ನು ಸಾಧಿಸಲಾಗುವುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಮೀನಾ ರಾಶಿ.. ಇಂದು ನೀವು ಎಲ್ಲೋ ಹೋಗಬೇಕಾಗಬಹುದು ಅಥವಾ ಯಾವುದೋ ಔತಣಕೂಟಕ್ಕೆ ಹೋಗುವ ಸಾಧ್ಯತೆಗಳಿವೆ. ಆದರೆ ಇಂದು, ಕ್ಷುಲ್ಲಕತೆಯ ಕೂಗಿನಿಂದ ದೂರವಿರಿ ಮತ್ತು ಹೆಮ್ಮೆಯ ವ್ಯಕ್ತಿಯೊಂದಿಗೆ ನಿಮ್ಮನ್ನು ಎದುರಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ. ಈ ಮಧ್ಯಾಹ್ನದ ನಂತರ, ಕಾನೂನು ವಿವಾದ ಅಥವಾ ಮೊಕದ್ದಮೆಯಲ್ಲಿನ ಗೆಲುವು ನಿಮ್ಮ ಸಂತೋಷದ ಕಾರಣವಾಗಬಹುದು. ಇಂದು ನಿಮ್ಮ ಶುಭ ವೆಚ್ಚಗಳು ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 Post Views: 209 Post navigation ಚಾಮುಂಡೇಶ್ವರಿ ತಾಯಿ ನೆನೆದು ಇಂದಿನ‌ ರಾಶಿಫಲ ತಿಳಿಯಿರಿ.. ಸಿಗಂದೂರು ಚೌಡೇಶ್ವರಿ ತಾಯಿ ನೆನೆದು ಇಂದಿನ‌ ರಾಶಿಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆಯೋಜನೆ ಮಾಡಿದ್ದ ಆಜಾದಿ ಕಾ ಅಮೃತ ಮಹೋತ್ಸವ ಭಾಗವಾಗಿ ಹರ್‌ ಘರ್‌ ತಿರಂಗ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು. ಈಗಾಗಲೇ ಈ ಅಭಿಯಾನ ಅದ್ಭುತ ಯಶಸ್ಸು ಕಂಡಿದೆ. Aug 9, 2022, 7:04 PM IST ಬೆಂಗಳೂರು (ಆ.9): ಹರ್ ಘರ್ ತಿರಂಗ ಅಭಿಯಾನ ನಿಮಗೆಲ್ಲ ಗೊತ್ತಿದೆ. ಕೇಂದ್ರ ಸರ್ಕಾರ ಹರ್ ಘರ್ ತಿಂರಂಗ ಅಭಿಯಾನವನ್ನು ಆರಂಭಿಸಿದೆ. ಮೋದಿ ನೇತೃತ್ವದ ಈ ಅಭಿಯಾನ ಈಗ ದೇಶಾದ್ಯಂತ ಯಶಸ್ಸು ಕಂಡಿದೆ. ಹಾಗಿದ್ದರೆ, ಏನಿದು ಅಭಿಯಾನ ಯಾವ ಉದ್ದೇಶವನ್ನಿಟ್ಟುಕೊಂಡು ಈ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಅನ್ನೋದರ ಮಾಹಿತಿ ಇಲ್ಲಿದೆ. ಕೇಂದ್ರ ಸರ್ಕಾರ ಆರಂಭಿಸಿರೋ ಈ ಅಭಿಯಾನವನ್ನು ಯಶಸ್ವಿಯಾಗಿಸೋ ಜವಾಬ್ದಾರಿಯನ್ನು ರಾಷ್ಟ್ರೀಯ ಜನತಾ ಪಕ್ಷ ಹೊತ್ತುಕೊಂಡಿದೆ. ಈ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷ ದೊಡ್ಡ ಮಟ್ಟದಲ್ಲಿ ನಿಭಾಯಿಸುತ್ತದೆ. ಆ ಕಾರಣದಿಂದಾಗಿಯೇ ಇಂದು ಹರ್‌ ಘರ್‌ ತಿರಂಗಾ ಅಭಿಯಾನದ ಬಗ್ಗೆ ದೇಶದ ಮೂಲೆಮೂಲೆಗಳಲ್ಲೂ ಮಾಹಿತಿ ಸಿಕ್ಕಿದೆ. Independence Day: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯರು ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನದ ಕುರಿತು ಮಾತನಡುವ ವೇಳೆ ಆಗಸ್ಟ್ 2ನೇ ತಾರೀಕಿನ ಕುರಿತು ಇನ್ನೊಂದು ಪ್ರಮುಖ ವಿಚಾರವನ್ನು ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ದೇಶದ ಧ್ವಜವನ್ನು ಡಿಪಿ ಮಾಡಿಕೊಳ್ಳುವುದರೊಂದಿಗೆ ದೇಶದ ಪ್ರತಿ ಮನೆಯ ಮೇಲೂ ತಿರಂಗಾ ಹಾರಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದರು.
July 9, 2022 July 9, 2022 ram pargeLeave a Comment on ಶ್ರೀ ಅಮರೇಶ್ವರ ದೇವರ ಕೃಪೆ ಈ ರಾಶಿಯವರಿಗೆ ಇಂದಿನ ವಿಶೇಷ ದಿನ ಭವಿಷ್ಯ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512 ಮೊದಲಿಗೆ ಮೇಷ ರಾಶಿ ಧನ ಹಾನಿಯಿಂದ ಹೆಚ್ಚಿನ ತೊಂದರೆ ಇಲ್ಲದಾದರೂ ಸ್ವಲ್ಪ ಆದರೂ ತೊಂದರೆ ಇರುತ್ತದೆ ಅವಶ್ಯಕತೆಗಳು ಹೆಚ್ಚಾಗುತ್ತದೆ ನಿಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತೀರಾ ಕೌಟುಂಬಿಕ ಕಾರ್ಯವನ್ನು ನಿರ್ಲಕ್ಷಿಸಬೇಡಿ ವೃಷಭ ರಾಶಿ ಆದಿ ತಪ್ಪಿಸಲು ಪ್ರಯತ್ನಿಸುವಿರಿ ಬೇರೆಯವರಿಗೆ ಮಡಿಯದೆ ದಿಟ್ಟತನದಿಂದ ಕೆಲಸವನ್ನು ನಿರ್ವಹಿಸಿ ಧನಾವೃತಿಯಾಗುತ್ತದೆ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ ಮಿಥುನ ರಾಶಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುತ್ತದೆ ಅಪವಾದಕ್ಕೆ ಗುರಿಯಾಗುವ ಸಂಭವವಿದೆ ಹಿರಿಯರ ಸಲಹೆ ಪಡೆಯಿರಿ ಕಟಕ ರಾಶಿ ಅತಿಯಾದ ಮಾತು ಅಪಾಯಕ್ಕೆ ಕಾರಣ ಕಾರ್ಯ ಹಾನಿ ಆಗುವ ಸಾಧ್ಯತೆ ಇದೆ ವ್ಯವಹಾರದಲ್ಲಿ ತಜ್ಞರ ಸಹಾಯವನ್ನು ಪಡೆಯಿರಿ ಇಂದು ನಿಮಗೆ ವರ್ಗಾವಣೆ ಆಗುವ ಯೋಗವಿದೆ ಸಿಂಹ ರಾಶಿ ಮಾನ ಸನ್ಮಾನಗಳು ನಿಮಗೆ ದೊರೆಯುತ್ತದೆ ಇಂದು ಉದ್ಯೋಗದಲ್ಲಿ ಅಸಮಾಧಾನ ಕಂಡುಬರುತ್ತದೆ ಕನ್ಯಾ ರಾಶಿ ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡಿ ಸಹಚರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ಬರಬಹುದು ಸ್ವಲ್ಪ ಎಚ್ಚರದಿಂದ ಇರಿ ತುಲಾ ರಾಶಿ ಇಂದು ಧೈರ್ಯದಿಂದ ಕಾರ್ಯವನ್ನು ಸಾಧಿಸುತ್ತೀರಾ ಅನೇಕ ರೀತಿಯ ಯೋಗಗಳು ಕೂಡಿಬರುತ್ತದೆ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ ವೃಶ್ಚಿಕ ರಾಶಿ ವ್ಯವಹಾರದಲ್ಲಿ ಹಾನಿ ಕಂಡುಬರುತ್ತದೆ ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ ಸಹೋದರರು ಮಿತ್ರರು ಬೆನ್ನೆಲುಬಾಗಿ ನಿಲ್ಲುತ್ತಾರೆ ನೀವು ಮಾಡುವ ಕೆಲಸ ಉತ್ತಮ ಫಲ ನೀಡುತ್ತದೆ ಧನಸ್ಸು ರಾಶಿ ಇಂದು ನಿಮಗೆ ಆರ್ಥಿಕ ಅಭಿವೃದ್ಧಿಯಲ್ಲಿ ಆನೆಯಾಗುವ ಸಾಧ್ಯತೆ ಇದೆ ಕರ್ತವ್ಯವನ್ನು ಸಮರ್ಥಕವಾಗಿ ನಿರ್ವಹಿಸುತ್ತೀರಾ ಯಾವುದೇ ಕಾರ್ಯವನ್ನು ನಿರ್ಲಕ್ಷಿಸಬೇಡಿ ಮಕರ ರಾಶಿ ಇಂದು ನಿಮಗೆ ಅಲೆದಾಟದ ಸಾಧ್ಯತೆ ಹೆಚ್ಚಿದೆ ನಂಬಿಕೆ ಹಾಳಾಗದಂತೆ ಇಂದು ಹೆಚ್ಚಿನ ಪ್ರಯತ್ನ ಮಾಡುತ್ತೀರಾ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ ವ್ಯವಹಾರದಲ್ಲಿ ಎಚ್ಚರದಿಂದ ಇರಿ ಕುಂಭ ನೌಕರಿಯಲ್ಲಿ ಕಿರಿಕಿರಿ ಬಡ್ತಿ ಸಿಗುತ್ತದೆ ಅತಿಯಾದ ಮಾತು ಆಡುತ್ತೀರಾ ಅನಾವಶ್ಯಕವಾದ ಮಾತು ನಿಮಗೆ ಕಂಟಕ ಮಹಿಳೆ ಮತ್ತು ಮಕ್ಕಳು ಇಂದು ಹೆಚ್ಚಿನ ಸಂತೋಷದಿಂದ ಇರುತ್ತಾರೆ ಮೀನ ರಾಶಿ ಯುವಕರು ಇಂದು ಯುವತಿಯರನ್ನು ಮಾತಿನಿಂದ ಮರಳು ಮಾಡಿ ಗೆಲ್ಲುತ್ತಾರೆ ನಿಮ್ಮ ನಿರ್ಧಾರಗಳಿಂದ ಮನ್ನಣೆ ಸಿಗುತ್ತದೆ ಇಂದು ಜವಾಬ್ದಾರಿ ನಿರ್ವಹಣೆ ಸಿಗುತ್ತದೆ ಬದುಕಿನತ್ತ ಗಮನಹರಿಸಲು ವ್ಯವಧಾನ ಮಾಡಬೇಕು
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬ್ರಿಟನ್ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ನಡುವೆ ಜಾಗತಿಕ ನಾವೀನ್ಯತಾ ಪಾಲುದಾರಿಕೆ (ಜಿಐಪಿ) ಯ ತಿಳುವಳಿಕೆ ಪತ್ರಕ್ಕೆ ಘಟನೋತ್ತರವಾಗಿ ಅನುಮೋದನೆ ನೀಡಿದೆ. ಉದ್ದೇಶಗಳು: ಈ ಒಪ್ಪಂದದ ಮೂಲಕ ಭಾರತ ಮತ್ತು ಬ್ರಿಟನ್ ಜಾಗತಿಕ ನಾವೀನ್ಯತಾ ಸಹಭಾಗಿತ್ವವನ್ನು ಪ್ರಾರಂಭಿಸುತ್ತವೆ. ಈ ಸಹಭಾಗಿತ್ವವು ಮೂರನೇ ದೇಶಗಳಲ್ಲಿ ತಮ್ಮ ಆವಿಷ್ಕಾರಗಳನ್ನು ಹೆಚ್ಚಿಸಲು ಭಾರತೀಯ ನಾವೀನ್ಯಕಾರರಿಗೆ ನೆರವಾಗುತ್ತದೆ ಮತ್ತು ಆ ಮೂಲಕ ಈ ದೇಶಗಳು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ಸ್ವಯಂ ಸುಸ್ಥಿರವಾಗಲು ಸಹಾಯ ಮಾಡುತ್ತದೆ. ಇದು ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಸಹ ಪೋಷಿಸುತ್ತದೆ. ಜಿಐಪಿ ಆವಿಷ್ಕಾರಗಳು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಸಂಬಂಧಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಆ ಮೂಲಕ ಸ್ವೀಕರಿಸುವ ದೇಶಗಳು ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಮೂಲ ಧನಸಹಾಯ, ಅನುದಾನ, ಹೂಡಿಕೆಗಳು ಮತ್ತು ತಾಂತ್ರಿಕ ನೆರವಿನ ಮೂಲಕ, ಸಹಭಾಗಿತ್ವವು ಭಾರತೀಯ ಉದ್ಯಮಿಗಳು ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಆಯ್ಕೆ ಮಾಡಲು ಅವುಗಳಿಗೆ ನಾವೀನ್ಯತಾ ಅಭಿವೃದ್ಧಿ ಪರಿಹಾರಗಳನ್ನು ನೀಡಲು ಸಹಾಯ ಮಾಡುತ್ತದೆ. ಜಿಐಪಿ ಅಡಿಯಲ್ಲಿ ಆಯ್ಕೆ ಮಾಡಲಾದ ನಾವೀನ್ಯತೆಗಳು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯನ್ನು ವೇಗಗೊಳಿಸುತ್ತದೆ ಮತ್ತು ಜನಸಂಖ್ಯೆಯ ಬಹುತೇಕರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಹೀಗಾಗಿ ಸ್ವೀಕರಿಸುವ ದೇಶಗಳಲ್ಲಿ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಗಡಿಯಾಚೆಗಿನ ನಾವೀನ್ಯತೆ ವರ್ಗಾವಣೆಗಾಗಿ ಜಿಐಪಿ ಮುಕ್ತ ಮತ್ತು ಅಂತರ್ಗತ ಇ-ಮಾರುಕಟ್ಟೆ (ಇ-ಬಜಾರ್) ಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಫಲಿತಾಂಶ ಆಧಾರಿತ ಪರಿಣಾಮ ಮೌಲ್ಯಮಾಪನದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಆ ಮೂಲಕ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಉತ್ತೇಜಿಸುತ್ತದೆ. *** (Release ID: 1716265) Visitor Counter : 85 Read this release in: English , Urdu , Hindi , Marathi , Bengali , Punjabi , Gujarati , Odia , Telugu , Malayalam ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜಾಗತಿಕ ನಾವೀನ್ಯತಾ ಪಾಲುದಾರಿಕೆ ಕುರಿತು ಭಾರತ ಮತ್ತು ಬ್ರಿಟನ್ ನಡುವಿನ ಒಪ್ಪಂದಕ್ಕೆ ಸಂಪುಟದ ಘಟನೋತ್ತರ ಅನುಮೋದನೆ Posted On: 05 MAY 2021 12:22PM by PIB Bengaluru ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬ್ರಿಟನ್ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ನಡುವೆ ಜಾಗತಿಕ ನಾವೀನ್ಯತಾ ಪಾಲುದಾರಿಕೆ (ಜಿಐಪಿ) ಯ ತಿಳುವಳಿಕೆ ಪತ್ರಕ್ಕೆ ಘಟನೋತ್ತರವಾಗಿ ಅನುಮೋದನೆ ನೀಡಿದೆ. ಉದ್ದೇಶಗಳು: ಈ ಒಪ್ಪಂದದ ಮೂಲಕ ಭಾರತ ಮತ್ತು ಬ್ರಿಟನ್ ಜಾಗತಿಕ ನಾವೀನ್ಯತಾ ಸಹಭಾಗಿತ್ವವನ್ನು ಪ್ರಾರಂಭಿಸುತ್ತವೆ. ಈ ಸಹಭಾಗಿತ್ವವು ಮೂರನೇ ದೇಶಗಳಲ್ಲಿ ತಮ್ಮ ಆವಿಷ್ಕಾರಗಳನ್ನು ಹೆಚ್ಚಿಸಲು ಭಾರತೀಯ ನಾವೀನ್ಯಕಾರರಿಗೆ ನೆರವಾಗುತ್ತದೆ ಮತ್ತು ಆ ಮೂಲಕ ಈ ದೇಶಗಳು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ಸ್ವಯಂ ಸುಸ್ಥಿರವಾಗಲು ಸಹಾಯ ಮಾಡುತ್ತದೆ. ಇದು ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಸಹ ಪೋಷಿಸುತ್ತದೆ. ಜಿಐಪಿ ಆವಿಷ್ಕಾರಗಳು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಸಂಬಂಧಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಆ ಮೂಲಕ ಸ್ವೀಕರಿಸುವ ದೇಶಗಳು ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಮೂಲ ಧನಸಹಾಯ, ಅನುದಾನ, ಹೂಡಿಕೆಗಳು ಮತ್ತು ತಾಂತ್ರಿಕ ನೆರವಿನ ಮೂಲಕ, ಸಹಭಾಗಿತ್ವವು ಭಾರತೀಯ ಉದ್ಯಮಿಗಳು ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಆಯ್ಕೆ ಮಾಡಲು ಅವುಗಳಿಗೆ ನಾವೀನ್ಯತಾ ಅಭಿವೃದ್ಧಿ ಪರಿಹಾರಗಳನ್ನು ನೀಡಲು ಸಹಾಯ ಮಾಡುತ್ತದೆ. ಜಿಐಪಿ ಅಡಿಯಲ್ಲಿ ಆಯ್ಕೆ ಮಾಡಲಾದ ನಾವೀನ್ಯತೆಗಳು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯನ್ನು ವೇಗಗೊಳಿಸುತ್ತದೆ ಮತ್ತು ಜನಸಂಖ್ಯೆಯ ಬಹುತೇಕರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಹೀಗಾಗಿ ಸ್ವೀಕರಿಸುವ ದೇಶಗಳಲ್ಲಿ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಗಡಿಯಾಚೆಗಿನ ನಾವೀನ್ಯತೆ ವರ್ಗಾವಣೆಗಾಗಿ ಜಿಐಪಿ ಮುಕ್ತ ಮತ್ತು ಅಂತರ್ಗತ ಇ-ಮಾರುಕಟ್ಟೆ (ಇ-ಬಜಾರ್) ಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಫಲಿತಾಂಶ ಆಧಾರಿತ ಪರಿಣಾಮ ಮೌಲ್ಯಮಾಪನದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಆ ಮೂಲಕ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಉತ್ತೇಜಿಸುತ್ತದೆ.
ಜಾಹೀರಾತು ಫಲಕ ಅಳವಡಿಸಲು ಸ್ಥಳೀಯ ಸಂಸ್ಥೆಯ ಸಕ್ಷಮ ಅಧಿಕಾರಿಯಿಂದ ಲಿಖಿತ ಅನುಮತಿ ಪಡೆಯಬೇಕು. ಆದರೆ, ಅನುಮತಿ ಪಡೆಯದೇ ವಿಧಾನಸೌಧ ಆವರಣ ಸೇರಿದಂತೆ ವಿವಿಧೆಡೆ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್, ಪೋಸ್ಟರ್‌ ಅಳವಡಿಸಲಾಗುತ್ತಿದೆ ಎಂದು ಆಕ್ಷೇಪ. Karnataka High Court Bar & Bench Published on : 14 Nov, 2022, 2:19 pm ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಕೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಅವರು ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಆಡಳಿತಾಧಿಕಾರಿಯೂ ಆದ ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಜಾಹೀರಾತು ಫಲಕ ಅಳವಡಿಸಬೇಕಾದರೆ ಸ್ಥಳೀಯ ಸಂಸ್ಥೆಯ ಸಕ್ಷಮ ಅಧಿಕಾರಿಯಿಂದ ಲಿಖಿತ ಅನುಮತಿ ಪಡೆಯಬೇಕು. ಆದರೆ, ಅನುಮತಿ ಪಡೆಯದೇ ವಿಧಾನಸೌಧ ಆವರಣ ಸೇರಿದಂತೆ ನಗರದ ವಿವಿಧ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್, ಪೋಸ್ಟರ್‌ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ನಗರದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಜೊತೆಗೆ, ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠವು ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಯನ್ನು ತಡೆಯಬೇಕು ಎಂದು ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ಅಳವಡಿಸಿರುವ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಅನಧಿಕೃತವಾಗಿ ಅಳವಡಿಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಸೇರಿದಂತೆ ಇದೇ ವಿಚಾರವಾಗಿ 2017ರಿಂದಲೂ ಹೈಕೋರ್ಟ್ ಕಾಲಕಾಲಕ್ಕೆ ಅನೇಕ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶವನ್ನು ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಅಧಿಕಾರಿಗಳು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಉದ್ದೇಶಪೂರ್ವಕವಾಗಿಯೇ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ನಗರದಲ್ಲಿ ಅನಧಿಕೃತ ಜಾಹೀರಾತುಗಳ ಅಳವಡಿಕೆ ಹೆಚ್ಚಿದೆ. ಅದರಲ್ಲೂ ರಾಜಕಾರಣಿಗಳ ಫೋಟೋಗಳನ್ನು ಎಲ್ಲೆಂದರಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅನಧಿಕೃತ ಜಾಹೀರಾತು ಅಳಡಿಕೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣದ ದಾಖಲಿಸಲು ಮತ್ತು ದಂಡ ವಸೂಲಿ ಮಾಡಲು ಅವಕಾಶವಿದೆ. ಆದರೆ, ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧಕ ಸೂಕ್ತ ಕ್ರಮ ಜರುಗಿಸಲು ನಿರ್ಲಕ್ಷ್ಯ ವಹಿಸುತ್ತಿದಾರೆ. ಆ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದ್ದಾರೆ. ಆದ್ದರಿಂದ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಅರ್ಜಿಯಲಿನ ಇತರೆ ಆರೋಪಿಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ.
ಹೊಸದಿಲ್ಲಿ: ” ಪ್ರತಿಪಕ್ಷಗಳ ಪ್ರಬಲ ಒಗ್ಗಟ್ಟಿ” ಗಾಗಿ ಪಕ್ಷದಿಂದ ದೂರ ಸರಿಯುವುದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಉಪಾಧ್ಯಕ್ಷ ಯಶವಂತ್ ಸಿನ್ಹಾ ಅವರು ಮಂಗಳವಾರ ಘೋಷಿಸಿದರು. ಈ ಕುರಿತು ಟ್ವೀಟ್‌ ಮಾಡಿರುವ ಸಿನ್ಹಾ, “ಮಮತಾಜಿ ಅವರು ಟಿಎಂಸಿಯಲ್ಲಿ ನನಗೆ ಗೌರವ ಹಾಗೂ ಪ್ರತಿಷ್ಟೆ ಕೊಟ್ಟಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಈಗ ಒಂದು ದೊಡ್ಡ ರಾಷ್ಟ್ರೀಯ ಉದ್ದೇಶಕ್ಕಾಗಿ ನಾನು ಪಕ್ಷದಿಂದ ದೂರ ಸರಿಯುವ ಸಮಯ ಬಂದಿದೆ. ವಿರೋಧ ಪಕ್ಷಗಳ ಪ್ರಬಲ ಏಕತೆಗಾಗಿ ಕೆಲಸ ಮಾಡುತ್ತೇನೆ. ಅವರು (ಮಮತಾ ಬ್ಯಾನರ್ಜಿ) ನನ್ನ ಕ್ರಮವನ್ನು ಒಪ್ಪುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಬರೆದಿದ್ದಾರೆ. ಟಿಎಂಸಿ ತ್ಯಜಿಸಲು ನಿರ್ಧರಿಸಿರುವ ಕೇಂದ್ರದ ಮಾಜಿ ಸಚಿವ ತಮ್ಮನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲು ವಿರೋಧ ಪಕ್ಷದ ನಾಯಕರ ಒಂದು ಗುಂಪು ಮಾಡಿದ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ಸುಳಿವು ನೀಡಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಟಿಎಂಸಿ ಸಿನ್ಹಾ ಅವರ ಹೆಸರನ್ನು ಸೂಚಿಸಿತ್ತು. ಬಿಜೆಪಿಯ ಮಾಜಿ ನಾಯಕ ಹೆಚ್ಚು ಸ್ವೀಕಾರಾರ್ಹ ಮುಖವಾಗಿ ಹೊರಹೊಮ್ಮಲು ಮೊದಲು ಟಿಎಂಸಿ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಒತ್ತಾಯಿಸಿದ್ದವು ಎನ್ನಲಾಗಿದೆ.
ನವೆಂಬರ್ ತಿಂಗಳಲ್ಲಿ, ನಾಲ್ಕು ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಿವೆ ಮತ್ತು ಗುರುವು ತನ್ನ ಪಥವನ್ನು ಬದಲಾಯಿಸುತ್ತಿದೆ. ಇದರೊಂದಿಗೆ, ಈ ತಿಂಗಳು ಚಂದ್ರಗ್ರಹಣವೂ ಸಂಭವಿಸುತ್ತಿದೆ, ಇದು ಜ್ಯೋತಿಷ್ಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ವೃಶ್ಚಿಕ ರಾಶಿಯಲ್ಲಿ ಶುಕ್ರ, ವೃಷಭ ರಾಶಿಯಲ್ಲಿ ಹಿಮ್ಮುಖ ಹಂತದಲ್ಲಿರುವ ಮಂಗಳ, ವೃಶ್ಚಿಕ ರಾಶಿಯಲ್ಲಿ ಬುಧ ಮತ್ತು ಸೂರ್ಯ ಕೂಡ ಬದಲಾಗಲಿದ್ದು, ಇದರಿಂದ ಬುಧಾದಿತ್ಯ ಮತ್ತು ಲಕ್ಷ್ಮ ನಾರಾಯಣ ಯೋಗ ಕೂಡ ರೂಪುಗೊಳ್ಳುತ್ತದೆ. ಇದರ ನಂತರ, ಗುರು ಗ್ರಹವು ತನ್ನದೇ ಆದ ಮೀನ ರಾಶಿಯಲ್ಲಿ ತನ್ನ ವೇಗವನ್ನು ಬದಲಾಯಿಸುತ್ತದೆ ಮತ್ತು ದಾರಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಾಶಿಚಕ್ರ ಚಿಹ್ನೆಗಳ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ. ಈ ಗ್ರಹಗಳ ಸ್ಥಾನ ಬದಲಾವಣೆಯೊಂದಿಗೆ, ನಕ್ಷತ್ರಗಳ ಸ್ಥಾನದೊಂದಿಗೆ ಈ ತಿಂಗಳು ವೃಷಭ ರಾಶಿಯವರಿಗೆ ಭವಿಷ್ಯ ಹೇಗಿರಲಿದೆ ಎಂಬುದನ್ನ ಈ ಲೇಖನದಲ್ಲಿ ನೋಡೋಣ. ವೃಷಭ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ನೀವು ದೀರ್ಘಕಾಲದವರೆಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ಯೋಜನೆ ಮುಂದುವರಿಯಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳುವ ಅವಕಾಶ ಪಡೆಯುತ್ತೀರಿ. ವ್ಯಾಪಾರ ಮಾಡುವವರಿಗೆ ತಿಂಗಳ ಆರಂಭವು ತುಂಬಾ ಒಳ್ಳೆಯದು. ಈ ಸಮಯದಲ್ಲಿ ನೀವು ನಿರೀಕ್ಷಿತ ಫಲಿತಾಂಶ ಪಡೆಯಬಹುದು. ತಿಂಗಳ ಮಧ್ಯದಲ್ಲಿ ಕೆಲವು ಪ್ರಮುಖ ವ್ಯವಹಾರ ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮ ವ್ಯವಹಾರವನ್ನು ವಿದೇಶದಲ್ಲಿ ವಿಸ್ತರಿಸಲು ಯೋಜಿಸುತ್ತಿದ್ದರೆ ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳ ಆದಾಯ ಹೆಚ್ಚಾಗಬಹುದು. ತಿಂಗಳ ಮಧ್ಯದಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಪ್ರಯಾಣವು ಬಹಳ ಮುಖ್ಯವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉದ್ಯೋಗದಲ್ಲಿ ಬದಲಾವಣೆ ಬಯಸುತ್ತಿರುವ ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಸುದ್ದಿ ಸಿಗಬಹುದು. ದೊಡ್ಡ ಕಂಪನಿಯಲ್ಲಿ ಅವಕಾಶ ಸಿಗುವ ಸಾಧ್ಯ್ಯತೆ ಇದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಲಿದೆ. ಆದಾಯ ಹೆಚ್ಚಲಿದೆ. ತಾಳ್ಮೆ ಮತ್ತು ಸಂಯಮದಿಂದ ಕೆಲಸ ಮಾಡಿದರೆ ಎಲ್ಲಾ ಕೆಲಸಗಳು ಕೈಗೂಡುತ್ತವೆ. ಕೋಪ ಮತ್ತು ವಾದಗಳನ್ನು ತಪ್ಪಿಸಿ. ನೀವು ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯುತ್ತೀರಿ. ಪ್ರವಾಸಕ್ಕೆ ಹೋಗಬಹುದು. ಉದ್ಯಮಿಗಳು ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿದೇಶಿ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಮಗುವಿನ ಕಡೆಯಿಂದ ಸಂತೋಷ ಇರುತ್ತದೆ. ಮಕ್ಕಳೊಂದಿಗೆ ಈ ಸಮಯವನ್ನು ಬಹಳ ಸಂತೋಷದಿಂದ ಕಳೆಯುವಿರಿ. ನಿಮ್ಮ ದಿನಚರಿಯನ್ನು ನೀವು ನಿಯಮಿತವಾಗಿ ಇಟ್ಟುಕೊಳ್ಳಬೇಕು. ಆದಾಗ್ಯೂ ಇನ್ನೂ ಹೆಚ್ಚಿನ ಮಾಹಿತಿಗಾಗಿ ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ನಿಮ್ಮ ವೈಯಕ್ತಿಕ ಜಾತಕ ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.
ಬೆಂಗಳೂರು: ಫೇಸ್‌ಬುಕ್‌ ‘ ನಲ್ಲಿ ತುಳು ಹಾಗೂ ತುಳು ಭಾಷಿಕರನ್ನು ಅವಾಚ್ಯ, ಅಶಬ್ಧ, ಅಸಂವಿಧಾನಿಕ ಪದಗಳಿಂದ ನಿಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ಜಾನ್‌ ನನ್ನು ಕರವೇ ಅಧ್ಯಕ್ಷ ಟಿ.ಎ ನಾರಾಯಣ ಗೌಡ ಉಚ್ಚಾಟಿಸಿ, ಆದೇಶ ಹೊರಡಿಸಿದ್ದಾರೆ. ಕನ್ನಡದ ಸೋದರ ಭಾಷೆಯಾದ ತುಳು ಭಾಷೆ ಮತ್ತು ತುಳುನಾಡಿನ ಜನರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಅಪಾರ ಗೌರವ ಹೊಂದಿದೆ. ತುಳು ಮತ್ತು ಕೊಡವ ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ನೀಡಲು 8ನೇ ಪರೀಚ್ಛೇದಕ್ಕೆ ಸೇರಿಸುವಂತೆ ಕರವೇ ಕೇಂದ್ರ ಸರಕಾರವನ್ನು ಹಲವು ಬಾರಿ ಒತ್ತಾಯಿಸಿದೆ ಎಂದು ನಾರಾಯಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕನ್ನಡಪರ ಹೋರಾಟಗಳ ಕುರಿತಾಗಿ ಅತ್ಯಂತ ಕೀಳು ಶಬ್ದಗಳಲ್ಲಿ ನಿಂದನೆ ಮಾಡುವ ಕೆಲಸ ಕನ್ನಡಿಗರಿಂದಲೇ ನಡೆಯುತ್ತಿರುವುದು ನೋವಿನ ಸಂಗತಿ. ಕರವೇ ಕಾರ್ಯಕರ್ತ ಜಾನ್‌ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದು ತಪ್ಪಾಗಿದೆ. ಇದು ಜಾನ್ ಹೇಳಿಕೆಯೇ ಹೊರತು ಕರ್ನಾಟಕ ರಕ್ಷಣಾ ವೇದಿಕೆ ನಿಲುವಲ್ಲ. ಆದ್ದರಿಂದ ತುಳು ಭಾಷೆ ಬಗ್ಗೆ ಅವಹೇಳನಕಾರಿ ಶಬ್ದ ಬಳಸಿರುವ ಜಾನ್‌ ಅವರನ್ನು ಕರವೇಯಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ. ಕರವೇ ಮುಖಂಡರಿಂದಲೇ ಛೀಮಾರಿ ಜಾನ್ ಕರವೇ ಫೇಸ್ ಬುಕ್ ಹೆಸರಿನ ಈತ ತುಳು ಭಾಷೆ ವಿರುದ್ಧ ಕೆಟ್ಟ ಪದಗಳನ್ನು ಬಳಸಿದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಕರವೇ ಮುಖಂಡರೇ ಜಾನ್ ಗೆ ಛೀಮಾರಿ ಹಾಕಿದ್ದರು. ಅಲ್ಲದೇ ತುಳುನಾಡಿನ ಸಂಘಟನೆಗಳು ಮತ್ತು ಕೊಡವ ಸಂಘಟನೆಗಳು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.
ಕಳೆದ ಹಲವು ತಿಂಗಳಿಂದ ಈ ಬಲಪಂಥೀಯ, ಎಡ ಪಂಥೀಯ ವಾದಗಳ ಸಂಕೋಲೆಯಲ್ಲಿ ಸಿಲುಕಿ ನಲುಗುತ್ತಿರುವ ದೇಶದ ಎರಡು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿವೆ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಪ್ರತಿಷ್ಠೆಯಿಂದಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳು ಹೊತ್ತಿ ಉರಿಯುತ್ತಿವೆ. ಕಳೆದ ತಿಂಗಳು 15 ರಂದು ಪೌರತ್ವ ಕಾನೂನಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದಾಗ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲದೊಳಗೆ ಏಕಾಏಕಿ ನುಗ್ಗಿದ್ದ ಪೊಲೀಸರು ಗೂಂಡಾವರ್ತನೆ ತೋರಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ, ಗೋಲಿಬಾರ್ ಸಹ ಮಾಡಿ ಪೈಶಾಚಿಕವಾಗಿ ನಡೆದುಕೊಂಡಿದ್ದರು. ಅಂದಿನಿಂದ ಇಂದಿನವರೆಗೆ ವಿವಿಗೆ ಪೊಲೀಸರ ಸರ್ಪಗಾವಲನ್ನು ಹಾಕಲಾಗಿದೆ. ವಿವಿಗೆ ಹೋಗಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ವಿವಿಯ ಸಿಬ್ಬಂದಿ ವರ್ಗ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ವಿಶ್ವವಿದ್ಯಾಲಯವೀಗ ಆತಂಕ-ಭೀತಿಯನ್ನು ಹುಟ್ಟಿಸುವಂತಹ ವಾತಾವರಣದಲ್ಲಿದೆ. ಇದರ ಪರಿಣಾಮ ವಿವಿಯ ವಿವಿಧ ಕೋರ್ಸ್ ಗಳಿಗೆ ನಡೆಯುತ್ತಿದ್ದ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಪರೀಕ್ಷೆಗಳು ಕೆಲವು ದಿನಗಳಿಂದ ನಡೆಯುತ್ತಿದ್ದವು. ಆದರೆ, ಸೋಮವಾರ ವಿದ್ಯಾರ್ಥಿಗಳು ತಮ್ಮ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅಲ್ಲಿನ ಉಪಕುಲಪತಿಗೆ ಘೆರಾವ್ ಹಾಕಿದ್ದರಿಂದ ಏಕಾಏಕಿ ಪರೀಕ್ಷೆಗಳನ್ನೇ ರದ್ದು ಮಾಡುವ ನಿರ್ಧಾರವನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕೈಗೊಂಡಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದು, ಮತ್ತೆ ಇನ್ನೆಷ್ಟು ದಿನಕ್ಕೆ ಪರೀಕ್ಷೆಗಳನ್ನು ನಡೆಸುತ್ತಾರೋ? ಫಲಿತಾಂಶ ಬರುವುದು ಯಾವಾಗಲೋ? ತಮ್ಮ ಮುಂದಿನ ಶೈಕ್ಷಣಿಕ ಅಥವಾ ವೃತ್ತಿ ಬದುಕಿಗೆ ಇದು ಮಾರಕವಾಗಲಿದೆ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ. ಡಿಸೆಂಬರ್ 15 ರಂದು ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಜಾಮಿಯಾ ಮಿಲಿಯಾ ವಿವಿ ಆವರಣದ ಸಮೀಪ ಬಸ್ ಗಳಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಇದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಲಾಠಿ ಪೆಟ್ಟಿನಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ವಿವಿಯೊಳಗೆ ಹೋದರು. ಆದರೆ, ಅಲ್ಲಿ ನಡೆದದ್ದೇ ಬೇರೆಯದ್ದಾಗಿತ್ತು. ಸಾಮಾನ್ಯವಾಗಿ ಯಾವುದೇ ಶಿಕ್ಷಣ ಸಂಸ್ಥೆಯೊಳಗೆ ಖಾಕಿ ಪಡೆ ಅಂದರೆ ಪೊಲೀಸರು ಪ್ರವೇಶಿಸಬೇಕಾದರೆ ಆಯಾ ಸಂಸ್ಥೆಯ ಪೂರ್ವಾನುಮತಿ ಬೇಕಾಗುತ್ತದೆ. ಆದರೆ, ಪೊಲೀಸರು ವಿವಿಯ ಯಾವುದೇ ಅನುಮತಿಗೂ ಕಾಯದೇ ವಿದ್ಯಾರ್ಥಿಗಳನ್ನು ಕಳ್ಳರ ರೀತಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಮನಸೋಇಚ್ಛೆ ಥಳಿಸಿದ್ದರು. ಪೊಲೀಸರ ಕ್ರೌರ್ಯ ಹೇಗಿತ್ತೆಂದರೆ, ಲೈಬ್ರರಿಗೂ ನುಗ್ಗಿದ ಪೊಲೀಸರು ತಮ್ಮ ಪಾಡಿಗೆ ಓದುತ್ತಾ ಕುಳಿತ್ತಿದ್ದ ವಿದ್ಯಾರ್ಥಿಗಳನ್ನು ಹೊರಗೆ ಎಳೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದರಲ್ಲಿ ವಿದ್ಯಾರ್ಥಿನಿಯರು, ವಿವಿಯ ಭದ್ರತಾ ಸಿಬ್ಬಂದಿಯನ್ನೂ ಬಿಡದೇ ಅವರ ಮೇಲೂ ಲಾಠಿ ಬೀಸುವ ಮೂಲಕ ಕ್ರೌರ್ಯವನ್ನು ಮೆರೆದರು. ಈ ಘಟನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತಾದರೂ ಇದುವರೆಗೂ ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಲಿಲ್ಲ. ಒತ್ತಡಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆಂಬ ಗುಮಾನಿ ಇರುವುದರಿಂದ ವಿದ್ಯಾರ್ಥಿ ಸಮೂಹ ಸೋಮವಾರ ಎಫ್ಐಆರ್ ದಾಖಲು ಮಾಡುವಂತೆ ಒತ್ತಡ ಹೇರಲಿ ಎಂಬ ಕಾರಣಕ್ಕೆ ವಿವಿ ಉಪಕುಲತಿಗೆ ಘೆರಾವ್ ಮಾಡಿದೆ. ಪೊಲೀಸರು ಉದ್ದೇಶಪೂರ್ವಕವಾಗಿಯೇ ಸಿಸಿಟಿವಿ ಕ್ಯಾಮೆರಾಗಳ ನೆಟ್ವರ್ಕ್ ಅನ್ನು ನಾಶ ಪಡಿಸಿ ನಂತರ ವಿದ್ಯಾರ್ಥಿಗಳ ಮೇಲೆ ಟಿಯರ್ ಗ್ಯಾಸ್ ಸಿಡಿಸಿದ್ದಾರೆ, ಸ್ಟನ್ ಗ್ರೆನೇಡ್ ಎಸೆದಿದ್ದಾರೆ. ಅಂದರೆ ಇದರರ್ಥ ಪೊಲೀಸರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಬೇಕೆಂದು ಮೊದಲೇ ನಿರ್ಧರಿಸಿ ಬಂದಂತಿದ್ದರು. ಪೊಲೀಸರ ಈ ಪೈಶಾಚಿಕ ಕೃತ್ಯವನ್ನು ಉಪಕುಲಪತಿ ನಜ್ಮಾ ಅಖ್ತರ್ ಅವರು ತೀವ್ರವಾಗಿ ಖಂಡಿಸಿದ್ದರು. ಅಲ್ಲದೇ, ಪೊಲೀಸರು ವಿವಿಯೊಳಗೆ ಪ್ರವೇಶಿಸಲು ವಿವಿಯ ಅನುಮತಿಯನ್ನೇ ಕೇಳಿರಲಿಲ್ಲ, ವಿವಿ ಕೂಡ ಅನುಮತಿ ನೀಡಿರಲಿಲ್ಲ. ಹೀಗಾಗಿ ಪೊಲೀಸರು ವಿಶ್ವವಿದ್ಯಾಲಯವನ್ನು ಕಾನೂನು ಬಾಹಿರವಾಗಿ ಪ್ರವೇಶ ಮಾಡಿರುವುದು ಸ್ಪಷ್ಟವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್ ಘೋಷ್ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ ನಡೆಸುತ್ತಿದ್ದ ವಿಷಯ ತಿಳಿದಿದ್ದರೂ ಪೊಲೀಸರು ವಿಶ್ವವಿದ್ಯಾಲಯ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿಗಾಗಿ ವಿವಿಯ ಬಾಗಿಲಲ್ಲಿ ಕಾಯುತ್ತಾ ಕುಳಿತ್ತಿದ್ದರು. ಏಕೆಂದರೆ, ಹಲ್ಲೆ ಮಾಡುತ್ತಿದ್ದವರು ಸಂಘ ಪರಿವಾರ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಕಾರ್ಯಕರ್ತರು. ಹಲ್ಲೆಗೊಳಗಾದವರು ಎಡ ಪಕ್ಷ ಬೆಂಬಲಿತ ವಿದ್ಯಾರ್ಥಿಗಳು. ಅಂದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಅಂಗವಾದ ಕಾರಣಕ್ಕೆ ಎಬಿವಿಪಿ ಎಷ್ಟೇ ಆಟಾಟೋಪ, ಪುಂಡಾಟ ಮಾಡುತ್ತಿದ್ದರೂ ಅದನ್ನು ತಡೆಯಲು ಪೊಲೀಸರು ಮನಸು ಮಾಡಲಿಲ್ಲ. ಆಗ ಮಾತ್ರ ಪೊಲೀಸರಿಗೆ ವಿವಿ ಪ್ರವೇಶಿಸಲು ಪೂರ್ವಾನುಮತಿ ಬೇಕಿತ್ತು. ಅಲ್ಲದೇ, ಎಬಿವಿಪಿ ಕಾರ್ಯಕರ್ತರ ಪುಂಡಾಟ ಮುಗಿದು ಅವರು ಪರಾರಿಯಾದ ನಂತರ ಅನುಮತಿ ಸಿಕ್ಕಿತು ಎಂದು ಪೊಲೀಸರು ಆವರಣದೊಳಕ್ಕೆ ಬಂದು ಶಾಸ್ತ್ರಕ್ಕೆಂಬಂತೆ ಅಲ್ಲಿ ನೆರೆದಿದ್ದವರನ್ನು ಚದುರಿಸಿದರು. ಆದರೆ, ಜಾಮಿಯಾ ವಿವಿ ವಿಚಾರದಲ್ಲಿ ಪೊಲೀಸರಿಗೆ ಯಾರದೇ ಅನುಮತಿ ಬೇಕಿರಲಿಲ್ಲ. ಏಕೆಂದರೆ, ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಅವರು ಪ್ರತಿಭಟನೆ ನಡೆಸುತ್ತಿದ್ದುದು ಕೇಂದ್ರ ಸರ್ಕಾರದ ಸಿಎಎ ಕಾನೂನಿನ ವಿರುದ್ಧ. ಹೀಗಾಗಿ ಪ್ರತಿಭಟನಾಕಾರರನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕೆಂದುಕೊಂಡೇ ಪೊಲೀಸರು ವಿವಿಯೊಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂಬುದು ಬಹಿರಂಗ ಗುಟ್ಟಾಗಿದೆ. ವಿದ್ಯಾರ್ಥಿಗಳ ನಿಯೋಗಗಳು ಹಲವು ಬಾರಿ ಉಪಕುಲಪತಿಗಳನ್ನು ಭೇಟಿ ಮಾಡಿ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದ ಮೊರೆ ಹೋಗಬೇಕು ಮತ್ತು ಪ್ರತಿಭಟನೆಗಳು ನಡೆದಿರುವುದರಿಂದ ಪರೀಕ್ಷೆಗೆ ಸಿದ್ಧರಾಗಲು ಸಾಧ್ಯವಾಗಿಲ್ಲದಿರುವುದರಿಂದ ಪರೀಕ್ಷೆಗಳನ್ನು ಮುಂದೂಡಬೇಕೆಂದು ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಉಪಕುಲಪತಿಗಳು ಯಾವುದೇ ತೀರ್ಮಾನಗಳನ್ನು ಕೈಗೊಳ್ಳದಿದ್ದುದರಿಂದ ವಿದ್ಯಾರ್ಥಿಗಳು ಸೋಮವಾರ ನೇರವಾಗಿ ಅವರ ಕಚೇರಿಗೆ ತೆರಳಿ ತಮ್ಮ ಬೇಡಿಕೆಗಳನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ ಪರೀಕ್ಷೆಗಳನ್ನು ಮುಂದೂಡುವ ನಿರ್ಧಾರಕ್ಕೆ ಬಂದಿದೆ.
ಮಡಿಕೇರಿ, ನ. ೨೩: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಮಡಿಕೇರಿ ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ದತ್ತಿ ಪ್ರದಾನ ಹಾಗೂ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮವು ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ತಾ.೨೫ರ ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿಗಳಾದ ಡಾ. ಯತೀಶ್ ಉಳ್ಳಾಲ್ ನೆರವೇರಿಸಲಿದ್ದಾರೆ. ನವೋದಯ ವಿದ್ಯಾಲಯದ ಉಪನ್ಯಾಸಕ ದಾಸಣ್ಣನವರ ಎರಡು ಕೃತಿಗಳಾದ "ಕಣ್ಣ ಹಿಂದಿನ ಕಡಲು" ಕವನ ಸಂಕಲನ ಮತ್ತು "ಅಕ್ಕತಂಗ್ಯಾರು" ಕಥೆಗಳ ಪುಸ್ತಕವು ಬಿಡುಗಡೆಗೊಳ್ಳಲಿವೆ. ಜಿಲ್ಲೆಯ ಕವಿ, ಸಾಹಿತಿ ಮತ್ತು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಕಾಜೂರು ಸತೀಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಾನಪದ ನೃತ್ಯ ಸ್ಪರ್ಧೆ ಬಹುಮಾನ ವಿತರಣೆ ಹಾಗೂ ೨೦೨೧-೨೨ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ೧೦ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಬಿ.ಎಂ. ಇಂಚರಳಿಗೆ ಟಿ.ಪಿ. ರಮೇಶ್ ದತ್ತಿನಿಧಿ ಸನ್ಮಾನ, ಗೌರವ ಸಮರ್ಪಣೆ ಮತ್ತು ನಗದು ಬಹುಮಾನ ನೀಡಲಾಗುತ್ತದೆ.
ರಾಜ್ಯೋತ್ಸವದ ಸಂಭ್ರಮ ಸಡಗರ! ಈ ರಸಪ್ರಶ್ನೆಯನ್ನು ಉತ್ತರಿಸಿ ಕರ್ನಾಟಕದ ನಾಡು ನುಡಿ ಸಂಸ್ಕೃತಿಯ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಿ! Read more » Categories ಇತರ ವಿಷಯಗಳ ರಸಪ್ರಶ್ನೆ Categories Categories Select Category test (21) ಆದರ್ಶ ಮಕ್ಕಳು (91) ಅಧ್ಯಯನ ಹೇಗೆ ಮಾಡಬೇಕು (18) ಒಳ್ಳೆಯ ಹವ್ಯಾಸಗಳು (31) ದೂರದರ್ಶನದ ದುಷ್ಪರಿಣಾಮಗಳು (1) ದಿನಚರಿ (7) ನಿಮ್ಮ ಜ್ಞಾನ ಹೆಚ್ಚಿಸಿ (8) ಇತರ ವಿಷಯಗಳ ರಸಪ್ರಶ್ನೆ (1) ಇತಿಹಾಸದ ಬಗ್ಗೆ ರಸಪ್ರಶ್ನೆ (1) ದೇವತೆಗಳ ಮಾಹಿತಿ ನೀಡುವ ರಸಪ್ರಶ್ನೆ (2) ಪುರಾಣ ಕಥೆಗಳ ಬಗ್ಗೆ ರಸಪ್ರಶ್ನೆ (1) ಹಬ್ಬ-ಉತ್ಸವಗಳ ಬಗ್ಗೆ ರಸಪ್ರಶ್ನೆ (3) ರಾಷ್ಟ್ರ ಮತ್ತು ಧರ್ಮಪ್ರೇಮಿಗಳಾಗಿ (5) ವ್ಯಕ್ತಿತ್ವ ವಿಕಸನ (12) ಸಂಸ್ಕಾರ (10) ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ (2) ಇತಿಹಾಸದ ಸುವರ್ಣ ಪುಟಗಳು (129) ಋಷಿಮುನಿಗಳು (19) ಐತಿಹಾಸಿಕ ಕೋಟೆಗಳು (13) ಕ್ರಾಂತಿಕಾರರು ಮತ್ತು ರಾಷ್ಟ್ರಪುರುಷರು (45) ತೇಜಸ್ವಿ ರಾಜರು (15) ಭವ್ಯ ಭಾರತ (7) ವಿಶೇಷ ದಿನಗಳು (6) ಕನ್ನಡ ರಾಜ್ಯೋತ್ಸವ (1) ಗಣರಾಜ್ಯೋತ್ಸವ (2) ಸ್ವಾತಂತ್ರ್ಯೋತ್ಸವ (3) ಸಂತರು (15) ಸ್ಫೂರ್ತಿಗೀತೆಗಳು (9) ತಮ್ಮ ಅಭಿಪ್ರಾಯಗಳು (1) ನಮ್ಮ ಬಗ್ಗೆ (2) ಪಾಲಕರು (19) ಆದರ್ಶ ಪಾಲಕರಾಗುವುದು ಹೇಗೆ ? (4) ಮಕ್ಕಳ ಪೋಷಣೆ (8) ಮಕ್ಕಳ ಸಮಸ್ಯೆಗಳು (3) ಮಕ್ಕಳಲ್ಲಿ ಸುಸಂಸ್ಕಾರಗಳು ಬೆಳಿಸಿ (4) ಪಾಲ್ಗೊಳ್ಳಿ (1) ಬಣ್ಣ ಹಚ್ಚಿರಿ (5) ಭಾಷೆ (1) ರಾಷ್ಟ್ರ ಮತ್ತು ಸಂಸ್ಕೃತಿ (116) ಗೋಮಾತೆಯ ಮಹತ್ವ (1) ತೀರ್ಥಕ್ಷೇತ್ರಗಳು ಮತ್ತು ದೇವಸ್ಥಾನಗಳು (26) ಅಷ್ಟವಿನಾಯಕ (1) ದತ್ತ ಕ್ಷೇತ್ರಗಳು (8) ಮಾತೃಭಾಷೆ ಮಹತ್ವ (10) ಕನ್ನಡ ರಕ್ಷಣೆ (2) ದೇವವಾಣಿ ಸಂಸ್ಕೃತ (8) ವಾತಾವರಣ ವಿಶೇಷಾಂಕ (12) ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು (62) ಗುರುಪೂರ್ಣಿಮೆ (2) ದತ್ತ ಜಯಂತಿ (6) ದೀಪಾವಳಿ (14) ಪಟಾಕಿಗಳ ದುಷ್ಪರಿಣಾಮ (2) ಶುಭಾಷಯಪತ್ರಗಳು (2) ನವರಾತ್ರಿ (4) ಯುಗಾದಿ (ಹಿಂದೂ ಹೊಸವರ್ಷ) (4) ರಾಮನವಮಿ (1) ಶಿವರಾತ್ರಿ (6) ಶ್ರೀ ಗಣೇಶ ಚತುರ್ಥಿ (8) ಹನುಮಾನ ಜಯಂತಿ (1) ಹೋಳಿ (4) ವಿಡಿಯೋ ಗ್ಯಾಲರಿ (33) ವಿಶೇಷ ಲೇಖನ (2) ಶಿಕ್ಷಕರು (15) ಪ್ರಾಚೀನ ಶಿಕ್ಷಣ ಪದ್ಧತಿ (6) ಶಿಕ್ಷಕರ ಕರ್ತವ್ಯ (6) ಶಿಕ್ಷಣ ಹೇಗಿರಬೇಕು? (3) ಶೋಧನೆ (1) ಸಣ್ಣ ನೀತಿ ಕಥೆಗಳು (121) ಇತರ ಕಥೆಗಳು (26) ಋಷಿಮುನಿಗಳ ಕಥೆಗಳು (3) ಗುರುಶಿಷ್ಯರ ಕಥೆಗಳು (12) ದೇವರ ಕಥೆಗಳು (20) ಶ್ರೀ ಗಣಪತಿಯ ಕಥೆಗಳು (2) ಶ್ರೀರಾಮನ ಕಥೆಗಳು (1) ರಾಜರ ಕಥೆಗಳು (11) ರಾಷ್ಟ್ರಪುರುಷರ ಕಥೆಗಳು (12) ಸಂತರ ಕಥೆಗಳು (32) ಹಬ್ಬದ ಕಥೆಗಳು (5) ಸಂಪರ್ಕ (1) ಸ್ತೋತ್ರ, ಆರತಿ ಮತ್ತು ಶ್ಲೋಕಗಳು (51) ಆರತಿ (1) ನಾಮಜಪ (6) ಶ್ಲೋಕಗಳು (10) ಸ್ತೋತ್ರಗಳು (19) ಶ್ರೀ ಗಣಪತಿಯ ಸ್ತೋತ್ರಗಳು (10) ಹುಟ್ಟು ಹಬ್ಬ (1) About Us ‘Hindu Janajagruti Samiti’ (HJS) was established on 7th October 2002 for Education for Dharma, Awakening of Dharma, Protection of Dharma, Protection of the Nation and Uniting Hindus.
ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಮಳೆ ಅಡ್ಡಿಯಾಗಿದೆ. ಇದರ ಪರಿಣಾಮ ಮೊದಲ ಏಕದಿನ ಪಂದ್ಯದ ಟಾಸ್ ವಿಳಂಭವಾಗಿದೆ. Suvarna News First Published Oct 6, 2022, 1:38 PM IST ಲಖನೌ(ಅ.06): ಭಾರತ ಹಾಗೂ ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿ ಬೆನ್ನಲ್ಲೇ ಇದೀಗ ಹೈವೋಲ್ಟೇಜ್ ಏಕದಿನ ಸರಣಿ ಆರಂಭಗೊಂಡಿದೆ. ಆದರೆ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮಳೆಯಿಂದಾಗಿ ಲಖನೌ ಪಂದ್ಯದ ಟಾಸ್ ವಿಳಂಭವಾಗಿದೆ. ಭಾರಿ ಮಳೆ ಸುರಿಯುತ್ತಿರುವ ಕಾರಣ ಪಂದ್ಯ ಆರಂಭವೂ ಮತ್ತಷ್ಟು ತಡವಾಗಲಿದೆ. ಭಾರಿ ಮಳೆರಾಯ ಸದ್ಯ ಬ್ರೇಕ್ ನೀಡಿದ್ದಾನೆ. ಆದರೆ ಮೈದಾನಕ್ಕೆ ಹಾಕಿರುವ ಕವರ್ ತೆಗೆದಿಲ್ಲ. ಹೀಗಾಗಿ ಪಂದ್ಯ ಆರಂಭ ವಿಳಂಬವಾಗಲಿದೆ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡ ಟೀಂ ಇಂಡಿಯಾ ಪ್ರಮುಖ ಆಟಗಾರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಏಕದಿನ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ. ದಿನೇಶ್ ಕಾರ್ತಿಕ್, ರಿಷಬ್ ಪಂತ್ ಸೇರಿದಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಭಾರತದ ಕ್ವೀನ್ ಸ್ವೀಪ್ ಸರಣಿ ಗೆಲುವಿಗೆ ರೋಸೋ ಬ್ರೇಕ್, ಅಂತಿಮ ಪಂದ್ಯದಲ್ಲಿ ಸೋಲಿನ ಶಾಕ್ ಟೀಂ ಇಂಡಿಯಾ ಸಂಭವನೀಯ ತಂಡ ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್ ಸೌತ್ ಆಫ್ರಿಕಾ ಸಂಭವನೀಯ ತಂಡ ಕ್ವಿಂಟನ್ ಡಿ ಕಾಕ್, ಜನ್ನೆಮನ್ ಮಲನ್, ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ ಟಿ20 ಸರಣಿಯಲ್ಲಿ ಸೌತ್ ಆಫ್ರಿಕಾ ಆರಂಭಿಕ 2 ಪಂದ್ಯ ಸೋತು ಸರಣಿ ಕೈಚೆಲ್ಲಿತು. ಆದರೆ ಅಂತಿಮ ಪಂದ್ಯದಲ್ಲಿ ನೀಡಿದ ಪ್ರದರ್ಶನ ಸೌತ್ ಆಫ್ರಿಕಾ ಆತ್ಮಿವಿಶ್ವಾಸ ಹೆಚ್ಚಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ದಿಟ್ಟ ಹೋರಾಟ ನೀಡುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿತ್ತು. ಇದೀಗ ಏಕದಿನ ಸರಣಿಯಲ್ಲೂ ಸೌತ್ ಆಫ್ರಿಕಾ ಅದೇ ಪ್ರದರ್ಶನ ಮುಂದುವರಿಸಲು ಸಜ್ಜಾಗಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಯುಕೆ ಮೂಲದ ಗ್ರೀನ್ ಕಾಫಿ ಟ್ರೇಡಿಂಗ್ ಕಂಪನಿ ಓಲಂ ಸ್ಪೆಷಾಲಿಟಿ ಕಾಫಿ ತನ್ನ ಹೆಸರನ್ನು ಬದಲಾಯಿಸಿದೆ ಕೋವೊಯಾ. ಕಂಪನಿಯು ಆಗಿದೆ ಇಂದು ಹೊಸ ಬ್ರಾಂಡ್ ಅನ್ನು ಪರಿಚಯಿಸುತ್ತಿದೆಕಣ್ಣು ಮತ್ತು ಸೂರ್ಯನ ಚಿತ್ರಣದೊಂದಿಗೆ ಲೋಗೋವನ್ನು ಅನಾವರಣಗೊಳಿಸುವುದು ಮತ್ತು ಸಹಯೋಗ ಮತ್ತು ಪ್ರಯಾಣ ಎಂಬ ಪದಗಳ ಪೋರ್ಟ್‌ಮ್ಯಾಂಟಿಯು. “ಕೋವಾಯಾ ನಮ್ಮ ವ್ಯವಹಾರದ ಮೂಲಾಧಾರವಾಗಿರುವ ಸಹಯೋಗದ ಕಲ್ಪನೆಯನ್ನು ಸಂಯೋಜಿಸುತ್ತದೆ, ಮತ್ತು ಸಮುದ್ರಯಾನ, ಇದು ಪ್ರತಿ ಕಪ್ ಕಾಫಿಯ ಹಿಂದಿನ ಕಥೆಯನ್ನು ಮಾತ್ರವಲ್ಲದೆ ಪ್ರತಿಯೊಂದು ರೀತಿಯ ಕಾಫಿ ಪ್ರಯಾಣದ ಬಗ್ಗೆಯೂ ಹೇಳುತ್ತದೆ” ಎಂದು ಕೋವೊಯಾ ಯುನೈಟೆಡ್ ಸ್ಟೇಟ್ಸ್ ವ್ಯವಸ್ಥಾಪಕ ನಿರ್ದೇಶಕ ರಾಬ್ ಸ್ಟೀಫನ್ ಹೇಳಿದರು. ಇಂದು ಪ್ರಕಟಣೆ. “ಕಾಫಿ ಯಾವಾಗಲೂ ಸಹಕಾರಿ ಪ್ರಯಾಣವಾಗಿದೆ.” ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ನಾದ್ಯಂತ ರೋಸ್ಟರ್‌ಗಳಿಗೆ ಹಸಿರು ಕಾಫಿ ಸೇವೆಗಳೊಂದಿಗೆ ಪ್ರಾವಿಡೆನ್ಸ್, ರೋಡ್ ಐಲೆಂಡ್ ಮತ್ತು ಲಿವರ್‌ಪೂಲ್, UK ಯಲ್ಲಿ ಕಛೇರಿಗಳನ್ನು ನಿರ್ವಹಿಸುವ ಕೊವೊಯಾಗೆ ಮರುಬ್ರಾಂಡಿಂಗ್ ಯಾವುದೇ ಪ್ರಮುಖ ಕಾರ್ಯಾಚರಣೆಯ ಬದಲಾವಣೆಗಳನ್ನು ಒಳಗೊಂಡಿಲ್ಲ. ರೋಡ್ ಐಲೆಂಡ್‌ನಲ್ಲಿರುವ ಕೋವೊಯಾ ಕಚೇರಿಗಳು. ಕೃಪೆ ಫೋಟೋ. ಕಂಪನಿಯು ನೇರವಾಗಿ ಗ್ರಾಹಕರಿಗೆ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಮತ್ತು ಇತರ ನೇರ ಚಾನಲ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಬದಲಾವಣೆಯನ್ನು ತಿಳಿಸುತ್ತದೆ ಎಂದು ಸ್ಟೀಫನ್ DCN ಗೆ ತಿಳಿಸಿದರು. “ನಾವು ಮುಂದುವರಿಯುತ್ತಿರುವಾಗ ಗಮನವು ಪ್ರಮುಖ ಕಾರ್ಯಾಚರಣೆಯ ಬದಲಾವಣೆಗಳಿಗಿಂತ ಒತ್ತು ನೀಡುತ್ತದೆ, ಆದರೂ ನಮ್ಮ ಕಾರ್ಯಾಚರಣೆಗಳು ಖಂಡಿತವಾಗಿಯೂ ಪ್ರಭಾವ ಬೀರುತ್ತವೆ” ಎಂದು ಸ್ಟೀಫನ್ ಹೇಳಿದರು. “ಸಂಬಂಧಗಳು, ಕಥೆಗಳು ಮತ್ತು ಪ್ರಯಾಣಗಳು ಪ್ರಮುಖ ಮೌಲ್ಯಗಳಾಗಿವೆ ಎಂದು ನಾವು ಅದನ್ನು ‘ನೆನಪಿಸಿಕೊಳ್ಳುವುದು’ ಎಂದು ಕರೆಯುತ್ತಿದ್ದೇವೆ.” Covoya ಒಂದು ವಿಶೇಷ-ಕಾಫಿ-ಕೇಂದ್ರಿತ ಅಂಗಸಂಸ್ಥೆಯಾಗಿದೆ ಆಫಿ (ಹಿಂದೆ ಓಲಂ ಆಹಾರ ಪದಾರ್ಥಗಳು, ಕಂಪನಿಯು “ofi” ಶೈಲಿಯಲ್ಲಿದೆ), ಇದು ಕೃಷಿ-ವ್ಯಾಪಾರ ದೈತ್ಯದಿಂದ ಹೊರಹೊಮ್ಮಿದ ಕಾರ್ಯಾಚರಣಾ ಗುಂಪು ಓಲಂ ಗ್ರೂಪ್ ಹಿಂದಿನ ವರ್ಷ. ನಿಮ್ಮ ಕಾಫಿ ವ್ಯಾಪಾರವು ಹಂಚಿಕೊಳ್ಳಲು ಸುದ್ದಿಗಳನ್ನು ಹೊಂದಿದೆಯೇ? DCN ನ ಸಂಪಾದಕರಿಗೆ ಇಲ್ಲಿ ತಿಳಿಸಿ. DCN ನಿಂದ ಇನ್ನಷ್ಟು ನಿಕ್ ಬ್ರೌನ್ ನಿಕ್ ಬ್ರೌನ್ ರೋಸ್ಟ್ ಮ್ಯಾಗಜೀನ್‌ನ ಡೈಲಿ ಕಾಫಿ ನ್ಯೂಸ್‌ನ ಸಂಪಾದಕರಾಗಿದ್ದಾರೆ. ಟ್ಯಾಗ್‌ಗಳು: ಬ್ರ್ಯಾಂಡಿಂಗ್, ಕೊವೊಯಾ, ಹಸಿರು ಕಾಫಿ, ಆಮದುದಾರರು, ಲಿವರ್‌ಪೂಲ್, ಮಾರ್ಕೆಟಿಂಗ್, ಓಫಿ, ಓಲಂ, ಓಲಂ ಆಹಾರ ಪದಾರ್ಥಗಳು, ಓಲಂ ಗ್ರೂಪ್, ಪ್ರಾವಿಡೆನ್ಸ್, ರೋಡ್ ಐಲೆಂಡ್, ರಾಬ್ ಸ್ಟೀಫನ್, ಯುಕೆ
ಕರ್ನಾಟಕದ ಸಂಸ್ಕೃತಿಯ ಭಾಗವಾದ ದಸರಾ ಬೊಂಬೆ ಪೂಜೆಯನ್ನು ಇಷ್ಟು ದೂರದ ಆಸ್ಟ್ರೇಲಿಯಾ ದೇಶದಲ್ಲೂ ನಮ್ಮವರು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ. ಹೀಗೊಂದು ಬಾರಿ ಸಹೃದಯರೊಬ್ಬರ ಮನೆಗೆ ಆಹ್ವಾನಿತರಾಗಿ ಹೋಗಿ ಬೊಂಬೆ ಪ್ರದರ್ಶನವನ್ನು ಕಾಣುವ ಸೌಭಾಗ್ಯ ನಮ್ಮದಾಯಿತು. ಪ್ರದರ್ಶಿಸಿದ ಬೊಂಬೆಗಳು ಇಲ್ಲಿನ ಮಟ್ಟಿಗಂತೂ ಅದ್ಭುತವಾಗಿತ್ತು. ಒಂದು ದೊಡ್ಡ ಕೋಣೆಯನ್ನೇ ಅದಕ್ಕಾಗಿ ಮೀಸಲಿಟ್ಟಿದ್ದರು. ವಿಶಿಷ್ಠ ಬೊಂಬೆಗಳನ್ನು ಹೊಂದಿಸಿಕೊಂಡು, ಜೋಪಾನವಾಗಿಟ್ಟು ಪ್ರದರ್ಶಿಸಲು ತೆಗೆದುಕೊಂಡ ಸಮಯ ಮತ್ತು ಶ್ರಮ ಶ್ಲಾಘನೀಯವೇ ಸರಿ. ವಿವರವಾಗಿ ಗಮನಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವಂತಿದ್ದಿತು. ನೋಡ ನೋಡುತ್ತಾ, ಇದು ಸಂಸ್ಕೃತಿಯ ಭಾಗವೇನೋ ಸರಿ, ಆದರೆ ಇದರ ಅರ್ಥವೇನಿರಬಹುದು? ನಮ್ಮ ಧರ್ಮದ ಭಾಗ ಹೇಗಾಗಬಹುದು? ಅಥವಾ ಇದೊಂದು ಬರಿಯ ಅರ್ಥಹೀನ ಮಕ್ಕಳಾಟಿಕೆಯೇ ಎಂದೆಲ್ಲ ಮನಸ್ಸಿನಲ್ಲಿ ಜಿಜ್ಞಾಸೆ. ಏನಿದರ ಉದ್ದೇಶ? ಯಾವ ಯಾವ ಬೊಂಬೆಗಳನ್ನಿಟ್ಟಿದ್ದಾರೆಂದು ಗಮನಿಸಿದರೆ, ಇಲ್ಲದೇ ಇರುವುದೇ ಇಲ್ಲ. ದೇವರುಗಳು, ರಾಜ ರಾಣಿ, ಮನುಷ್ಯರು, ಹೀಗೆ ಒಂದು ಊರನ್ನೇ ಸೃಷ್ಟಿಸಿದ್ದರು. ಪ್ರಾಣಿಗಳು, ಪಕ್ಷಿಗಳು, ಮರಗಿಡಗಳು, ಬೆಟ್ಟ ಗುಡ್ಡಗಳು ಇನ್ನೂ ಏನೇನೋ. ಏನಾದರೂ ಇಲ್ಲದಿದ್ದಲ್ಲಿ ಅದು ಬೇಡವೆಂದಲ್ಲ ಅದು ಹೊಂದಿಸಿಕೊಳ್ಳಲಾಗಿಲ್ಲದಿರಬಹುದೇನೋ ಅಷ್ಟೇ. ಗಮನವಿಟ್ಟು ನೋಡಿದರೆ ನಮ್ಮ ಸುತ್ತಲಿನ, ನಾವು ಕಂಡ ವಿಶ್ವದ ಸೂಕ್ಷ್ಮ ರೂಪವನ್ನೇ ಸೃಷ್ಟಿಸುವ ಪ್ರಯತ್ನ ಮಾಡಿರಬಹುದೆನಿಸಿತು. ವಿಶ್ವವನ್ನು ಪೂಜಿಸುವುದೆಂದರೆ ಇದೆಲ್ಲದರ ಅರ್ಥ ಸಿಕ್ಕಿದಂತಾಯಿತು. ಪೂಜಿಸುವುದು ದೇವರನ್ನು ಮಾತ್ರ ಅಲ್ಲವೇ? ಹಿಂದೂ ಧರ್ಮದ ಪ್ರಕಾರ ದೇವರೇ ವಿಶ್ವವಾಗಿ ತೋರಿಕೊಳ್ಳುತ್ತಿದ್ದಾನೆ (ಎಳ್ಳು ಕೊನೆಯ ಮುಳ್ಳು ಮೊನೆಯ ಪೊಳ್ಳು ಬಿಡದೆ ಒಳಗೆ ಹೊರಗೆ ಎಲ್ಲಾ ಠಾವಿನಲ್ಲೂ ಚಿನ್ಮಯನಿದ್ದಾನೆ). ಬೇರೆ ಧರ್ಮದವರು ಹೇಳುವಂತೆ ಜಗತ್ತನ್ನು ಸೃಷ್ಟಿಸಿ ಬೇರೆಲ್ಲೋ ಅಥವಾ ಸ್ವರ್ಗದಲ್ಲಿ ಕುಳಿತಿರುವುದಲ್ಲ ಅಥವಾ ಮನುಷ್ಯರ ಭೋಗಕ್ಕೆಂದೇ ವಿಶ್ವದಲ್ಲಿ ಎಲ್ಲವನ್ನೂ ಸೃಷ್ಟಿ ಮಾಡಿರುವುದಲ್ಲ. ಬೊಂಬೆ ಪೂಜೆಯಲ್ಲಿದೆ ಹಿಂದೂ ಧರ್ಮದ ವೈಶಿಷ್ಠ್ಯಪೂರ್ಣ ಅರ್ಥ. ವಿಶ್ವದಲ್ಲಿ ಹುಟ್ಟಿ ತೋರಿಕೊಳ್ಳುತ್ತಿರುವುದೆಲ್ಲ ಭಗವಂತನ ಅವಿಭಾಜ್ಯ ಅಂಗವಾದ ‘ಪ್ರಕೃತಿ’ಯೆನ್ನುತ್ತಾರಲ್ಲವೇ? ಪ್ರಕೃತಿಯು ದೇವಿ ಸ್ವರೂಪವೇ ಆಗಿರುವುದರಿಂದ ದೇವಿಯ ಆರಾಧನೆಗೇ ಮೀಸಲಾದ ಹಿಂದೂಗಳ ದೊಡ್ಡ ಹಾಗೂ ದೀರ್ಘ ಹಬ್ಬವಾದ ನವರಾತ್ರಿಯಲ್ಲಿಯೇ ಬೊಂಬೆ ಪೂಜೆ ಮಾಡುವುದು, ಎಷ್ಟು ಅರ್ಥಪೂರ್ಣವೆನ್ನುವುದನ್ನು ಗಮನಿಸಬಹುದಲ್ಲವೇ? “ಅನಂತ ರೂಪ ಅನಂತ ನಾಮ ಆದಿ ಮೂಲ ನಾರಾಯಣ” ಎಂದು ಪ್ರಾರಂಭವಾಗುವ ಭಜನೆಯ ಹಾಡೊಂದರಲ್ಲಿ, “ವಿಶ್ವ ತೈಜಸ ಪ್ರಾಜ್ಞ ಸ್ವರೂಪ ಹೇ ಕೃಪಾಸಿಂಧು ಕೃಷ್ಣಾ” ಎಂದಿದೆ. ನಮ್ಮೊಳಗಿರುವ ಭಗವಂತ, ಜಾಗೃತ್, ಸ್ವಪ್ನ, ಮತ್ತು ಸುಷುಪ್ತಿಯ ಅವಸ್ಥೆಗಳಲ್ಲಿ ವಿಶ್ವ, ತೈಜಸ ಮತ್ತು ಪ್ರಾಜ್ಞನೆಂಬ ಮೂರು ಸ್ವರೂಪಗಳಲ್ಲಿರುತ್ತಾನೆ ಎನ್ನುತ್ತಾರೆ (ಮಾಂಡೂಕ್ಯ ಉಪನಿಷತ್ ೯-೧೦-೧೧). ಜಾಗ್ರತ್ ಅವಸ್ಥೆಯಲ್ಲಿ ವಿಶ್ವನಾಗಿ ತೋರಿಕೊಳ್ಳುತ್ತಿರುವ ವಿಷ್ಣುವನ್ನೇ ಬೊಂಬೆ ಪೂಜೆಯಲ್ಲಿ ಪೂಜಿಸುತ್ತಿರಬಹುದೇ! ವಿಷ್ಣು ಎಂದರೆ ಭಗವಂತನ ವಿಶ್ವ ವ್ಯಾಪಕ ತತ್ವವೇ ಅಲ್ಲವೇ. "ವಿಶ್ವವು ದರ್ಪಣದಲ್ಲಿ ನೋಡಿದ ನಗರಿಯಂತೆ, ಆತ್ಮ ಮಾಯೆಯಿಂದ ಕನಸಿನಲ್ಲಿ ನೋಡಿದಂತೆ ಹೊರಗೆ ಇರುವ ಹಾಗೆ ಕಂಡರೂ ಇದರ ಮೂಲವಿರುವುದು ನಮ್ಮೊಳಗೆ. ಭಗವಂತನ ಕೃಪೆಯಿಂದ ಆತ್ಮ ಜ್ಞಾನವಾದೊಡನೆ (ಎಚ್ಚರವೆಂಬ ಕನಸಿನಿಂದ ಎಚ್ಚರಗೊಂಡಂತೆ) ಈ ಸತ್ಯದ ಸಾಕ್ಷಾತ್ಕಾರವಾಗುತ್ತದೆ”(ಆಚಾರ್ಯ ಶಂಕರರ ದಕ್ಷಿಣಾಮೂರ್ತಿ ಸ್ತೋತ್ರ). ಹೊರಗೆ ತೋರಿಕೊಳ್ಳುತ್ತಿರುವ ವಿಶ್ವವು ನಮ್ಮೊಳಗಿರುವ ಪ್ರಜ್ಞಾರೂಪಿ ಜ್ಯೋತಿರ್ಲಿಂಗದಿಂದ ಹೊಮ್ಮುತ್ತಿರುವ ಬಿಂಬ ಮಾತ್ರವೇ ಎಂಬ ಅರಿವು ಮೂಡಿದಾಗ ಬೊಂಬೆ ಹಬ್ಬದ ಸೂಕ್ಷ್ಮ ವಿಶ್ವದ ಪೂಜೆಯು ಶಿವ ಪೂಜೆಯಾಗಿಯೇ ಮಾರ್ಪಡುತ್ತದೆ ಅಲ್ಲವೇ? ಹೀಗೆ ದಸರಾ ಬೊಂಬೆ ಪೂಜೆಯೆಂದರೆ ಜಗನ್ಮಾತೆಯ ಆರಾಧನೆ, ವಿಷ್ಣುವಿನ ಆರಾಧನೆ ಹಾಗೂ ಶಿವನ ಆರಾಧನೆಯೂ ಸಹಾ. ಇದೇ ಅಲ್ಲವೇ ನಮ್ಮ ಧರ್ಮದ ಸಾರ ಸರ್ವಸ್ವ. ಈ ದೇವರುಗಳು ಅವರ ಅವತಾರಗಳು ಹಾಗೂ ಪರಿವಾರವನ್ನು ತಾನೇ ನಾವು ಹೆಚ್ಚಾಗಿ ಪೂಜಿಸುವುದು. ಮೇಲ್ನೋಟಕ್ಕೆ ಬಾಲಿಷವೆನಿಸುವ ಬೊಂಬೆ ಪೂಜೆಯು ಎಷ್ಟು ಅರ್ಥಗರ್ಭಿತ ಆಚರಣೆ ಎನಿಸುವುದಿಲ್ಲವೇ? ಮತ್ತಷ್ಟು ಲೇಖನಗಳು ಲೇಖಕರ ಪರಿಚಯ ಶ್ರೀ. ಅಶೋಕ್ ಕುಮಾರ್ ಹೆಚ್ಚಾಗಿ ಆಧ್ಯಾತ್ಮ ವಿಷಯದಲ್ಲಿ ಆಸಕ್ತರಾದ ಶ್ರೀ ಅಶೋಕ್ ರವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆಯೂ ಹೆಚ್ಚು ಅಭಿಮಾನ ವುಳ್ಳವರು.ಸಿಡ್ನಿಯಲ್ಲಿ ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ ಹೊರತಂದ ಹೆಗ್ಗಳಿಕೆ ಇವರದ್ದು. ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಲೇಖನ, ಭಾಷಣ, ಚಿಂತನೆ ನೀಡುವ ಅಶೋಕ ಅವರು ಅನೇಕ ಬರಹ ನಮ್ಮ ವೆಬ್ಸೈಟ್ ಗೆ ಕೀರ್ತಿ ತಂದಿದೆ.
ಸ್ಟೀಫನ್ ಪ್ರಯೋಗ್ ಕನ್ನಡ ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿ ಪರಿಚಿತ. ``ದೀಪು ಗೆಳೆಯರ ಬಳಗ`` ಎಂಬ ಕಿರುಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ಟೀಫನ್ ಪ್ರಯೋಗ್ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ನಾನು ಸಂಗೀತ ವಿಭಾಗದಲ್ಲಿ ಹಲವು ಸಿನಿಮಾಗಳಿಗೆ ಕಾರ್ಯ ನಿರ್ವಹಿಸಿದ್ದೇನೆ. ``ಪ್ಯಾರಿಸ್ ಪ್ರಣಯ`` ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿ ಸಹ ಬಂದಿದೆ. ತಮಿಳಿನಲ್ಲೂ ಕೆಲವು ಚಿತ್ರಗಳಿಗೆ ಸಂಗೀತ ನೀಡಿದ್ದೀನಿ. ಕೊರೋನ ಸಮಯದಲ್ಲಿ ನನಗೆ ನಿರ್ದೇಶನದತ್ತ ಒಲವಾಯಿತು. ಆದರೆ ನನಗೆ ನಿರ್ದೇಶನದ ಬಗ್ಗೆ ಹೆಚ್ಚು ತಿಳಿದಿಲ್ಲ. ಹಾಗಾಗಿ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಆನ್ ಲೈನ್ ಮೂಲಕ ನಿರ್ದೇಶನದ ಕಾರ್ಯವೈಖರಿ ಕಲಿತೆ. ಅತ್ಯುತ್ತಮ ಕೋರ್ಸ್ ಅದು. ನನಗೆ ತುಂಬಾ ಉಪಕಾರವಾಯಿತು. ಆನಂತರ ನಾಲ್ಕೈದು ಕಥೆ ಸಿದ್ದಮಾಡಿಕೊಂಡು ನನ್ನ ಆಪ್ತ ಸ್ನೇಹಿತರ ಬಳಿ‌ ಚರ್ಚಿಸಿದೆ. ಎಲ್ಲರೂ ಈ ಕಥೆಯನ್ನೇ ಆಯ್ಕೆ ಮಾಡಿದರು. ರಂಗಭೂಮಿಯ ಸಾಕಷ್ಟು ಕಲಾವಿದರು "ದೀಪು ಗೆಳೆಯರ ಬಳಗ"ದಲ್ಲಿ ಅಭಿನಯಿಸಿದ್ದಾರೆ. ನಾನೇ ಸಂಗೀತವನ್ನು ನೀಡಿದ್ದೀನಿ. ಇದರಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ನಾನು, ನಿಜಜೀವನದಲ್ಲಿ ಅನುಭವಿಸಿದ್ದೀನಿ ಅಂದರೆ ತಪ್ಪಾಗಲಾರದು. ಹಿರಿತೆರೆಯಲ್ಲೂ ಎರಡು ಚಿತ್ರಗಳನ್ನು ನಿರ್ದೇಶಿಸಲಿದ್ದೇನೆ.‌ ಸದ್ಯದಲ್ಲೇ ಆ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದರು ನಿರ್ದೇಶಕ ಸ್ಟೀಫನ್ ಪ್ರಯೋಗ್. ದೀಪು ಪಾತ್ರ ಮಾಡಿರುವ ರೂಪಾಂತರ ತಂಡದ ವರುಣ್ ಕುಮಾರ್ ಅವಕಾಶ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು. ಕಿರುಚಿತ್ರದಲ್ಲಿ ಅಭಿನಯಿಸಿರುವ ಪ್ರಶಾಂತ್, ಭರತ್ ಕುಮಾರ್, ಉಮಾ ಹಾಗೂ ಸತೀಶ್ ಚೌಹಾನ್ ತಮ್ಮ ಪಾತ್ರ ಹಾಗೂ ಕಿರುಚಿತ್ರದ ಬಗ್ಗೆ ಮಾಹಿತಿ ನೀಡಿದರು. ಸ್ಟೀಫನ್ ಪ್ರಯೋಗ್ ಕಥೆ, ಚಿತ್ರಕಥೆ ಬರೆದು, ಸಂಗೀತ ನೀಡಿ ನಿರ್ದೇಶಿಸಿರುವ ಈ ಕಿರುಚಿತ್ರಕ್ಕೆ ಗಂಗಾಧರ್ ತಲಕಾಡ್ ಹಾಗೂ ಪ್ರಶಾಂತ್ ತಲಕಾಡ್ ಅವರ ಛಾಯಾಗ್ರಹಣವಿದೆ. ವರುಣ್ ಕುಮಾರ್, ವಿಸ್ಮಿತ್ ರಾಜ್, ಪ್ರಾಶಾಂತ್, ಉಮಾ, ಸತೀಶ್ ಚೌಹಾನ್, ಭರತ್, ಕೆ.ಎಸ್.ಡಿ.ಎಲ್ ಚಂದ್ರು, ಭರತ್ ಕುಮಾರ್, ವೆಂಕಟಾಚಲ, ರಾಜಕುಮಾರ್ ಅಸ್ಕಿ ಹಾಗೂ ದೇಸಿ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನ್ಯಾಯೋಚಿತ ಸರಾಸರಿ ಗುಣಮಟ್ಟ (ಎಫ್.ಎ.ಕ್ಯೂ) ಮಾನದಂಡದ ಸೋಯಾಬೀನ್ ಉತ್ಪನ್ನವನ್ನು ಪ್ರತಿ ಕ್ವಿಂಟಲ್‍ಗೆ 4,300 ರೂ.ನಂತೆ ಖರೀದಿಸಲು ಧಾರವಾಡ, ಉಪ್ಪಿನಬೇಟಗೇರಿ ಮತ್ತು ಕಲಘಟಗಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. Sathish Kumar KH First Published Nov 16, 2022, 7:50 PM IST ಧಾರವಾಡ (ನ.16): 2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನ್ಯಾಯೋಚಿತ ಸರಾಸರಿ ಗುಣಮಟ್ಟ (ಎಫ್.ಎ.ಕ್ಯೂ) ಮಾನದಂಡದ ಸೋಯಾಬೀನ್ ಉತ್ಪನ್ನವನ್ನು ಪ್ರತಿ ಕ್ವಿಂಟಲ್‍ಗೆ 4,300 ರೂ.ನಂತೆ ಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಸರ್ಕಾರದಿಂದ ಧಾರವಾಡ ಉಪ್ಪಿನಬೇಟಗೇರಿ ಮತ್ತು ಕಲಘಟಗಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಎಫ್.ಎ.ಕ್ಯೂ (FAQ)ಗುಣಮಟ್ಟದ ಸೋಯಾಬೀನ್ ಉತ್ಪನ್ನವನ್ನು ಖರೀದಿಸಲು ರೈತರಿಂದ ಅವರ ಆಧಾರ ಗುರುತಿನ ಚೀಟಿ (Adhar card)ಯ ಮೂಲ ಪ್ರತಿ (ಪರಿಶೀಲಿಸಿದ ನಂತರ ಮರಳಿಸಲಾಗುವುದು) ಹಾಗೂ ನಕಲು ಪ್ರತಿ ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡನೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲುಪ್ರತಿ ಪಡೆಯಲಾಗುತ್ತದೆ. ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್ ಉತ್ಪನ್ನ ಹೊಂದಿದ ರೈತರ ನೋಂದಣಿಯನ್ನು (Farmer Registration) ಈ ಆದೇಶ ಹೊರಡಿಸಿದ 45 ದಿನಗಳ ವರೆಗೆ ಅಂದರೆ ಡಿ.23 ರವರೆಗೆ ಹಾಗೂ ಉತ್ಪನ್ನ ಖರೀದಿ ಅವಧಿಯನ್ನು 90 ದಿನಗಳ ವರೆಗೆ ಅಂದರೆ 2023 ರ ಫೆ.6ರವರೆಗೆ ನಿಗಧಿ ಪಡಿಸಲಾಗಿದೆ. ನೋಂದಣಿ ಕಾರ್ಯದ ಜೋತೆಗೆ ಖರೀದಿ (purchase) ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೆಸರು ಖರೀದಿ ವಿಳಂಬ: ತಹಸೀಲ್ದಾರ್‌ ಕಚೇರಿಗೆ ರೈತರ ಮುತ್ತಿಗೆ ಸೋಯಾಬೀನ್ ಖರೀದಿ ಕೇಂದ್ರಗಳನ್ನು ಧಾರವಾಡ ಎಪಿಎಂಸಿಯ (APMC) ಮುಖ್ಯ ಮಾರುಕಟ್ಟೆ ಪ್ರಾಂಗಣದ ಧಾರವಾಡ (Dharawad)ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಮೊ: 9916259625), ಉಪ್ಪಿನ ಬೇಟಗೇರಿಯ (Uppina Betageri) ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ (ಮೊ: 9620048221) ಮತ್ತು ಕಲಘಟಗಿ (Kalaghatagi)ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದ ಕಲಘಟಗಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಮೊ: 7259216552) ಗಳಲ್ಲಿ ಆರಂಭಿಸಲಾಗಿದೆ. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಖರೀದಿ ಕೇಂದ್ರಗಳಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್ ಉತ್ಪನ್ನ ಖರೀದಿಸಲಾಗುವುದು. ಬಾಗಿಲು ಮುಚ್ಚಿದ ಹೆಸರು ಖರೀದಿ ಕೇಂದ್ರಗಳು! ಯಾವುದೆ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೊಗಬಾರದು ರೈತರೆ ನೇರವಾಗಿ ಇದರ ಉಪಯೋಗ ಪಡೆದುಕೊಳ್ಳಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಧಾರವಾಡ ಮತ್ತು ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳನ್ನು, ಶಾಖಾ ವ್ಯವಸ್ಥಾಪಕರನ್ನು ಅಥವಾ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳದ ಹುಬ್ಬಳ್ಳಿ ಶಾಖೆ (0836-2374837)ಯನ್ನು ಸಂಪರ್ಕಿಸಬಹುದು. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ರಂಗವು ಮತ್ತು ‘ಡಲ್ಲಾಸ್‍ನ ಮಲ್ಲಿಗೆ ಕನ್ನಡ ಕೂಟದ ಸಹಯೋಗದೊಂದಿಗೆ, ಟೆಕ್ಸಸ್ ರಾಜ್ಯದ, ಗ್ರೇಪ್ ವೈನ್ ನಗರದ, ಗ್ರೇಪ್ ವೈನ್ ಸಭಾಂಗಣದಲ್ಲಿ, ಏಪ್ರಿಲ್ ತಿಂಗಳ 15,16,17ರಂದು ನಡೆಸುತ್ತಿರುವ ಸಾಹಿತ್ಯದ ಸುಗ್ಗಿ ಹಬ್ಬಕ್ಕೆ ನಿಮ್ಮೆಲ್ಲರಿಗೂ ಆದರದ ಸ್ವಾಗತ. ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ವಿವರಗಳಿಗಾಗಿ ಈ ತಾಣಕ್ಕೆ ಭೇಟಿಕೊಡಿ. ‘ಬರೆದಿದ್ದಾss ತನ್ನಿ – ಓದಾನಾss ಬನ್ನಿ..!! ’ ಇದು ಬರಹಗಾರರ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆ. ಸ್ವರಚಿತ ಕವನ, ಪ್ರಬಂಧ, ಹಾಸ್ಯ ಲೇಖನ, ಚುಟುಕುಗಳನ್ನು ಸಭಿಕರೆದುರಿಗೆ ಪ್ರಸ್ತುತಪಡಿಸಲು ಇದೊಂದು ಸುವರ್ಣಾವಕಾಶ!! * ಈ ಸಮ್ಮೇಳನದ ವಿಷಯ ‘ಜನಪದ’.ಎಂದಿರುವುದರಿಂದ ನಿಮ್ಮ ಪ್ರಸ್ತುತಿ ಆ ಬಗ್ಗೆ ಇದ್ದರೆ ಚೆನ್ನ.. ಆದರೆ ಕಡ್ಡಾಯವಲ್ಲ ವಿಷಯದ ಅಯ್ಕೆ ನಿಮ್ಮದು. *ಗದ್ಯ, ಪದ್ಯ, ಹನಿಗವನ, ಯಾವುದೇ ಪ್ರಕಾರವಾದರೂ ಆಗಬಹುದು. ಆದರೆ, ಅದು ನಿಮ್ಮ ಸ್ವಂತದ ರಚನೆಯಾಗಿರಬೇಕು. * ಗದ್ಯ ಬರಹಕ್ಕೆ ಐದು ನಿಮಿಷಗಳು, ಕವನಕ್ಕೆ ನಾಲ್ಕು ನಿಮಿಷಗಳ ಮಿತಿ ಇರುತ್ತದೆ. ‘ಸಾಹಿತ್ಯ ಸಂಭ್ರಮದ ಈ ವೇದಿಕೆ ನಿಮ್ಮನ್ನು ಎದುರುಗೊಳ್ಳಲು ಕಾತರದಿಂದ ಕಾಯುತ್ತಿದೆ. ನಿಮ್ಮ ಕವನ, ಪ್ರಬಂಧ, ಹನಿಗವನಗಳನ್ನು ಸಹೃದಯಿ ಪ್ರೇಕ್ಷಕರ ಸಮಕ್ಷಮದಲ್ಲಿ ಓದಿ, ಅವರ ಮನಸೂರೆಗೊಳ್ಳುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿರೆಂಬುದು ನಮ್ಮ ಕಳಕಳಿಯ ಕೋರಿಕೆ.
ಅಮೆರಿಕಾದ ಕೋವೋವ್ಯಾಕ್ಸ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ನಡೆಸಲು ಸೀರಂ ಸಂಸ್ಥೆಗೆ ಅನುಮತಿ ನೀಡಬಾರದು ಎಂದು ತಜ್ಞರ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಅಮೆರಿಕಾದಲ್ಲಿ ನೋವೋವ್ಯಾಕ್ಸ್ ಹೆಸರಿನಲ್ಲಿ ತಯಾರಿಸಲಾಗಿರುವ ಲಸಿಕೆಯನ್ನು ಭಾರತದಲ್ಲಿ ಕೋವೋವ್ಯಾಕ್ಸ್ ಹೆಸರಿನಲ್ಲಿ ತರಲು ಸೀರಂ ಸಂಸ್ಥೆ ಮುಂದಾಗಿತ್ತು. ಆದರೆ ಇದೀಗ ಸೀರಂ ಸಂಸ್ಥೆಯ ನಡೆಯ ಬಗ್ಗೆ ಗರಂ ಆಗಿರುವ ತಜ್ಞರು, ಕೋವೋವ್ಯಾಕ್ಸ್ ಲಸಿಕೆಯನ್ನು ದೇಶದ 2 ರಿಂದ 17 ವರ್ಷದೊಳಗಿನ ಮಕ್ಕಳ ಮೇಲೆ 2 ಹಾಗೂ 3ನೇ ಹಂತದ ಪ್ರಯೋಗ ನಡೆಸಬಾರದು ಎಂದು ಸೂಚಿಸಿದ್ದಾರೆ. ದೇಶದ 10 ಕೇಂದ್ರಗಳಲ್ಲಿ 12 ರಿಂದ 17 ವರ್ಷದ 460 ಮಕ್ಕಳು ಹಾಗೂ 2 ರಿಂದ 11 ವರ್ಷದ 920 ಮಕ್ಕಳ ಮೇಲೆ ಕೋವೋವ್ಯಾಕ್ಸ್ ಲಸಿಕೆ ಪ್ರಯೋಗಕ್ಕೆ ಅವಕಾಶ ಕಲ್ಪಿಸುವಂತೆ ಜೌಷಧ ನಿಯಂತ್ರಣ ಆಯೋಗಕ್ಕೆ ಸೀರಂ ಮನವಿ ಸಲ್ಲಿಸಿತ್ತು. ಈ ಮನವಿ ಕುರಿತಂತೆ ಪರಿಶೀಲನೆ ನಡೆಸಿರುವ CDSO ( Central Drugs Standard Control Organisation ) ನ SEC ( Subject Expert committee) ಈ ಲಸಿಕೆಯನ್ನು ಯಾವುದೇ ರಾಷ್ಟ್ರಗಳು ಅನುಮೋದಿಸಿಲ್ಲ. ಜೊತೆಗೆ ಈಗಾಗಲೇ ಈ ಲಸಿಕೆಯ ಪ್ರಯೋಗ ವಯಸ್ಕರ ಮೇಲೆ ನಡೆಯುತ್ತಿದೆ. ಈ ಪ್ರಯೋಗದ ಯಾವುದೇ ಮಾಹಿತಿಯನ್ನು ಸಂಸ್ಥೆ ಕೊಟ್ಟಿಲ್ಲ. ಹೀಗಾಗಿ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ಬೇಡ ಎಂದು ತಜ್ಞರು ಹೇಳಿದ್ದಾರೆ. Share6TweetSendShare Discussion about this post Related News Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ಭುಸ್ಸೆಂದು ಕಪ್ಪುಕಪ್ಪಾಗಿ ಬಿಸಿಯುಸಿರು ಬಿಡುತ್ತ ತಿರುವುಗಳು ತುಂಬಿದ ಹಾದಿಯನ್ನು ಹತ್ತಿ ಸಾಗಿದ ಕೆಂಪು ಬಸ್ಸು ಕರೆಕ್ಟಾಗಿ ಎಂಟೂ ಇಪ್ಪತ್ತಕ್ಕೆ ಅಡ್ಕದ ಬಸ್ ಸ್ಟಾಪಿಗೆ ಬಂದು ನಿಂತಿತು. ಬ್ಯಾಗು ಹೊತ್ತುಕೊಂಡು ಅದರಿಂದಿಳಿದವಳು ಅಲ್ಲೇ ನಿಂತು ಸುತ್ತ ಕಣ್ಣಾಡಿಸಿದಳು. ವರ್ಷವರ್ಷ ಅಪ್ಪ-ಅಮ್ಮನೇ ಬೆಂಗಳೂರಿಗೆ ಬರುತ್ತಿದ್ದರು. ತನಗೆ ರಜಗಳ ಕೊರತೆಯಿದ್ದು, ಮಗನಿಗೆ ರಜದಲ್ಲೂ ಕ್ಲಾಸುಗಳು, ಕ್ಯಾಂಪುಗಳು ಇತ್ಯಾದಿ ಇದ್ದ ಕಾರಣ ಊರಕಡೆಗೆ ಐದು ವರ್ಷದಿಂದೀಚೆಗೆ ತಲೆ ಹಾಕಿರಲಿಲ್ಲ. ಬಂದಾಗೆಲ್ಲ ಕಾರಲ್ಲಿ ಬರುತ್ತಿದ್ದ ಕಾರಣ ಅಡ್ಕದ ಪುಟ್ಟ ಪೇಟೆಯಾಗಲೀ, ಮನುಷ್ಯರಾಗಲೀ ಗಮನಕ್ಕೆ ಬರುತ್ತಿರಲಿಲ್ಲ. ಇವತ್ತು ನೋಡುತ್ತಿರುವಾಗ ಎಲ್ಲವೂ ಹೊಸಹೊಸದಾಗಿದೆ. ಎಂದೋ ನೋಡಿದ ಬಣ್ಣಮಾಸಿದ ಬಸ್ಟಾಪು ಕೇಸರಿ ಬಣ್ಣ ಮೆತ್ತಿಕೊಂಡಿದೆ. ಅದರ ಪಕ್ಕದ ಆಲದ ಮರ ಇನ್ನಷ್ಟು ದೊಡ್ಡದಾಗಿ ನೆರಳು ನೆರಳಾಗಿ ಹಬ್ಬಿದೆ. ಆಗ ಮೂರ್ನಾಕು ಪುಟ್ಟ ಅಂಗಡಿಗಳಿದ್ದ ಅಡ್ಕ ಈಗ ಎರಡು ಕಮರ್ಶಿಯಲ್ ಕಾಂಪ್ಲೆಕ್ಸುಗಳು ಹುಟ್ಟಿಕೊಂಡು ದೊಡ್ಡದಾಗಿದೆ. ಟೈಲರ್ ಶಾಪುಗಳು, ಮೊಬೈಲು ಅಂಗಡಿ, ಹೋಟೆಲು, ಮೆಡಿಕಲ್ಲು, ದಿನಸಿ ಅಂಗಡಿ, ಒಂದು ಪುಟಾಣಿ ಸುಪರ್ ಮಾರ್ಕೆಟು —ತರತರದ ಅಂಗಡಿಗಳಿದ್ದು ಹೆಚ್ಚಿನವಕ್ಕೆ ಈಗಷ್ಟೇ ಬೆಳಗಾಗುತ್ತಿದೆ. ಇಲ್ಲಿಂದ ಮನೆಗೆ ಐದು ಕಿಲೋಮೀಟರ್. ಬಸ್ಸಲ್ಲಿ ಹೋಗುವುದಾ ಇಲ್ಲ ಆಟೋ ಮಾಡಲಾ? ಆಟೋ ಆದರೆ ಸೀದಾ ಮನೆಗೇ ಹೋಗುತ್ತದೆ. ಬಸ್ಸಾದರೆ ಮತ್ತೊಂದು ಕಿಲೋಮೀಟರ್ ನಡೆಯಬೇಕು, ಲಗೇಜ್ ಜೊತೆಗೆ ಕಷ್ಟವಾಗ್ತದೇನೋ... ಯೋಚನೆ ಮಾಡುತ್ತ ಆಟೋ ಸ್ಟಾಂಡಿನಲ್ಲಿ ನಿಂತಿದ್ದ ಎರಡು ಆಟೋಗಳ ಕಡೆ ಕಣ್ಣು ಹಾಯಿಸಿದಳು. ಡ್ರೈವರುಗಳಿಬ್ಬರೂ ಇವಳೆಡೆಗೇ ನೋಡುತ್ತಿದ್ದರು. ಅವರಲ್ಲೊಬ್ಬ ಗಡ್ಡ ಬಿಟ್ಟುಕೊಂಡು ಎಡಬದಿಗೆ ಕ್ರಾಪ್ ಮಾಡಿಕೊಂಡಿದ್ದ ಚೂಪುಕಣ್ಣಿನಾತ. ಇವಳು ಅವನ ಕಡೆ ನೋಡಿದಾಗ ಅದಕ್ಕೇ ಕಾಯ್ತಿದ್ದವನ ಹಾಗೆ ನಕ್ಕ. ಇವನನ್ನೆಲ್ಲೋ ನೋಡಿದ್ದೀನಲ್ಲ? ಅಷ್ಟರಲ್ಲಿ ಇನ್ನೊಬ್ಬ ಆಟೋ ಡ್ರೈವರ್ ಅವಳೆಡೆಗೆ ಸರಿದು ಬಂದ. ಕೇಳಿದ: “ನೀವು ಗಣೇಶ ಮಾಷ್ಟ್ರ ಮಗಳಲ್ಲವಾ?” “ಹೌದು…” ಅಂದಳು, ಹೇಗೆ ಗೊತ್ತು ಅನ್ನುವ ಪ್ರಶ್ನೆಯನ್ನು ನುಂಗಿಕೊಂಡಳು. ಚಿಕ್ಕ ಊರು, ಎಲ್ಲರಿಗೂ ಎಲ್ಲರನ್ನೂ ಗೊತ್ತಿರ್ತದೆ. “ಅಕ್ಕಾ ನಾನು ಶ್ಯಾಮ, ನಿಮಿಗೆ ನನ್ನ ಗುರ್ತ ಸಿಕ್ಲಿಲ್ವಾ?” ಓಹೋ… ಇವನನ್ನು ನೋಡಿದ್ದು ಎಂದೋ ಚಿಕ್ಕಂದಿನಲ್ಲಿ. ತೋಟದ ಕೆಲಸಕ್ಕೆ ಲಚ್ಚಿಮಿ ಬರುವಾಗ ಅಮ್ಮನ ಜತೆ ಇವನೂ ಬಂದು ಆಟವಾಡಿಕೊಂಡಿರುತ್ತಿದ್ದ. “ಹಾ... ಶ್ಯಾಮ, ನೀನು ಚಿಕ್ಕವನಿರುವಾಗ ನೋಡಿದ್ದಲ್ವಾ, ಗುರ್ತು ಸಿಗ್ಲಿಲ್ಲ,” ಅಂತ ನಕ್ಕಳು. “ಮನೆಗೆ ಹೋಗೂದಲ್ವ, ನಾ ಬಿಡ್ತೇನೆ ನಿಮ್ಗೆ, ಬನ್ನಿ,” ಅಂತ ಕರೆದಾಗ ಅವಳಿಗೂ ಸಮಸ್ಯೆ ಪರಿಹಾರವಾದಂತಾಯಿತು. ಅವಳ ಲಗೇಜ್ ಎತ್ತಿ ದುರ್ಗಾಪರಮೇಶ್ವರಿ ಅಂತ ಬರೆದ ಆಟೋದ ಹಿಂದೆ ಕಂಪಾರ್ಟ್ಮೆಂಟಲ್ಲಿಟ್ಟು ಅವಳನ್ನೂ ಹತ್ತಿಸಿಕೊಂಡು ಹೊರಟ ಶ್ಯಾಮ. ದಟ್ಟ ಕಾಡಿನ ನಡುವೆ ಗುಡ್ಡ ಹತ್ತಿ ಇಳಿದು ಹಾವಿನಂತೆ ಹಾಯುವ ಕಿತ್ತುಹೋದ ಐದು ಕಿಲೋಮೀಟರ್ ಡಾಂಬರು ಹಾದಿಯುದ್ದಕ್ಕೂ ಅವನ ಕಥೆ ಹೇಳಿಕೊಂಡ. ಅಪ್ಪ ತೀರಿಕೊಂಡಿದ್ದು, ಅಕ್ಕಂದಿರ ಮದುವೆ ಜವಾಬ್ದಾರಿ ಎಲ್ಲ ಇವನ ಮೇಲೆಯೇ ಬಂದು ಡಿಗ್ರಿ ಓದಲಾಗದೆ ಕೈಬಿಟ್ಟಿದ್ದು. ಆಮೇಲೆ ಅದೇ ಊರಿನ ಕಾಪರೇಟಿವ್ ಬ್ಯಾಂಕಿನಲ್ಲಿ ಸಾಲ ತಗೊಂಡು ಆಟೋ ತಗೊಂಡಿದ್ದು ಇತ್ಯಾದಿ. ಅವನ ಮಾತೇನೋ ಕೇಳುತ್ತಿದ್ದರೂ ಅವಳಲ್ಲಿನ ಕುತೂಹಲ ಮಾತ್ರ ಹೆಡೆಬಿಚ್ಚಿ ಕೂತಿತ್ತು. ಕೊನೆಗೆ ಕೇಳಿಯೇ ಬಿಟ್ಟಳು, “ಅಲ್ಲಿದ್ದ ಇನ್ನೊಂದು ಆಟೋ ಯಾರ್ದು?” “ಮೋಞಿ ಬ್ಯಾರಿ ಮಗ ಅಬೂಬಕರ್ ದು,” ಅಂತಂದ ಶ್ಯಾಮ. ಓಹ್, ಅಬೂಬಕರ್… ಇಪ್ಪತ್ತು ವರ್ಷಗಳ ಹಿಂದೆ ನೋಡಿದ್ದು ಅವನನ್ನ. ಎಷ್ಟು ಬದಲಾಗಿದ್ದಾನೆ… ಒಂಬತ್ತು ಗಂಟೆಗೆ ಹತ್ತು ನಿಮಿಷ ಇದ್ದಂತೆ ಆಟೋ ಮನೆ ಮುಟ್ಟಿತು. ಹೇಳದೆಯೇ ಬಂದವಳನ್ನು ಕಂಡು ಅಮ್ಮ-ಅಪ್ಪನಿಗೆ ಆಶ್ಚರ್ಯ ಖುಷಿ ಒಟ್ಟಿಗೇ ಆಯ್ತು. “ಎಲ್ಲಿ, ಒಬ್ಳೇ ಬಂದ್ಯಾ ಕೂಸೆ, ಪುಳ್ಳಿ ಎಲ್ಲಿ” ಅಂತ ಅಪ್ಪ ಕೇಳಿದರು. “ಮಂಗ್ಳೂರಲ್ಲಿ ಆಫೀಸಿನವರ ಕಡೆಯಿಂದ ಕಾನ್ಫರೆನ್ಸ್ ಉಂಟಪ್ಪ, ಅದಕ್ಕೇ ಅರ್ಜೆಂಟಿಗೆ ಒಬ್ಳೇ ಬಂದೆ, ಮಗ ಬೆಂಗ್ಳೂರಲ್ಲೇ ಇದಾನೆ ಅವನಪ್ಪನೊಟ್ಟಿಗೆ, ನಾ ನಾಡಿದು ವಾಪಸ್ ಹೋಗ್ಬೇಕು,” ಅಂದಳು. ಲಗೇಜು ಒಳಗಿಟ್ಟು ಅಮ್ಮ ಮಾಡಿಕೊಟ್ಟ ಚಾ ಕುಡಿದ ಶ್ಯಾಮ ತಿಂಡಿ ಕೊಡಹೊರಟರೆ “ಇಲ್ಲ ಅಕ್ಕ, ಭಜನಾಮಂಡಳಿ ಮೀಟಿಂಗ್ ಉಂಟು, ಲೇಟ್ ಆಯ್ತು,” ಅಂದ. ಎಂತ ಭಜನಾಮಂಡಳಿ ಅಂತ ಕೇಳಿದ್ದಕ್ಕೆ ಶ್ಯಾಮ ಹೇಳಿದ. "ದುರ್ಗಾಪರಮೇಶ್ವರಿ ಭಜನಾಮಂಡಳಿ ಅಂತ ಅಕ್ಕ. ಎರಡು ವರ್ಷ ಆಯ್ತು ಸುರುವಾಗಿ. ಪ್ರತಿ ಶುಕ್ರವಾರ ಭಜನೆ ಮಾಡ್ತೇವೆ. ಈ ವರ್ಷ ಯಕ್ಷಗಾನ ಉಂಟು. ಊರಲ್ಲಿ ಏನೇ ಧಾರ್ಮಿಕ ಕಾರ್ಯಕ್ರಮ ಇದ್ರೂ ಸಹಾಯ ಮಾಡ್ತೇವೆ." ಗ್ರಾಮ ಪಂಚಾಯತು ಅಧ್ಯಕ್ಷರಿಗೆ ಇವರನ್ನು ಕಂಡರೆ ಪ್ರೀತಿಯಿರುವುದರಿಂದ ಗವರ್ಮೆಂಟಿನ ಬೇರೆ ಬೇರೆ ಯೋಜನೆಗಳನ್ನ ಜನಗಳಿಗೆ ತಲುಪಿಸಲಿಕ್ಕೂ ಇವರನ್ನು ಸೇರಿಸಿಕೊಳ್ಳುತ್ತಾರಂತೆ. "ಅಂತೂ ವರ್ಷ ಇಡೀ ಬಿಸಿ ಇರ್ತೇವೆ ಅಕ್ಕ" ಅಂತಂದ. ನೂರೈವತ್ತು ರೂಪಾಯಿ ಆಟೋಚಾರ್ಜ್ ತಗೊಂಡು “ನನ್ನ ನಂಬರು ಅಣ್ಣೇರ ಹತ್ರ ಇದೆ, ಬೇಕಾದಾಗ ಫೋನ್ ಮಾಡಿ ಅಕ್ಕ,” ಅಂತ ಹೇಳಿ ಹೊರಟುಹೋದ. ಅವ ಹೋದಮೇಲೆ ಅಮ್ಮ ಇನ್ನೊಂದು ವಿಷಯ ಗುಟ್ಟಿನ ದನಿಯಲ್ಲಿ ಹೇಳಿದರು. ಪಕ್ಕದ ಊರಿನಲ್ಲಿ ಒಬ್ಬ ಬ್ಯಾರಿ ಆಟೋ ಡ್ರೈವರ್ ಕಾಲೇಜು ಹೋಗುತ್ತಿದ್ದ ಹುಡುಗಿಯೊಬ್ಬಳನ್ನು ಚಙ್ಗಾಯ ಮಾಡಿ (ಪಟಾಯಿಸಿ) ಕೆಡಿಸಿಬಿಟ್ಟನಂತೆ. ಇದು ಊರೆಲ್ಲ ಗೊತ್ತಾಗಿ ದೊಡ್ಡ ಗಲಾಟೆಯೇ ಆಯಿತಂತೆ. ಆಮೇಲೆ ಎರಡು ದಿನ ಬಿಟ್ಟು ಅವನ ಹೆಣ ಮಂಜೂರಿನ ಹತ್ತಿರವಿರುವ ಬೀಚಲ್ಲಿ ಸಿಕ್ಕಿತಂತೆ. ಆ ಹುಡುಗಿ ಮನೆಯೊಳಗಿಂದ ಆಚೆಗೇ ಬಂದಿಲ್ಲವಂತೆ. ಇದಾದ ಸಮಯದಲ್ಲಿ ಭಜನಾಮಂಡಳಿಯ ಹುಡುಗರೆಲ್ಲ ಮನೆಮನೆಗೆ ಬಂದು ಯಾರೂ ‘ಅವರ’ ಆಟೋಗಳಲ್ಲಿ ಹೋಗಬೇಡಿ, ಹೆಚ್ಚು ಕಮ್ಮಿ ಆದರೆ ಕಷ್ಟ, ಯಾವ ಆಟೋದಲ್ಲಿ ದೇವರ ಹೆಸರು ಅಥವಾ ಧ್ವಜ ಇರುತ್ತದೆಯೋ ಅಂತದಕ್ಕೆ ಮಾತ್ರ ಹತ್ತಬೇಕು ಅಂತ ತಾಕೀತು ಮಾಡಿ ಹೋಗಿದ್ದರಂತೆ. ಇವೆಲ್ಲ ವಾಟ್ಸಾಪಿನಲ್ಲಿಯೂ ಬಂದಿತ್ತಂತೆ. ಅಮ್ಮ ಕತೆ ಹೇಳಲು ಶುರು ಮಾಡಿದರೆ ಹೊತ್ತು ಹೋಗಿದ್ದೇ ಗೊತ್ತಾಗೂದಿಲ್ಲ. ಅದರಲ್ಲಿ ಅರ್ಧಕ್ಕರ್ಧ ಗಾಳಿಸುದ್ದಿ ಅಂತ ಗೊತ್ತಿದ್ದರೂ ಒಂದು ದಿನಕ್ಕೆ ಬಂದವಳಿಗೆ ಅಮ್ಮನ ಕೈಲಿ ವಾದ ಯಾಕೆ ಅಂತ ಎಲ್ಲದಕ್ಕೂ ಹೂಂಕುಟ್ಟುತ್ತ ಕೇಳಿದಳು. ಅಪ್ಪ ಕೇಳಿದ ಲೋಕಾಭಿರಾಮದ ಪ್ರಶ್ನೆಗಳಿಗೆ ಉತ್ತರ ನೀಡುತ್ತ, ಮರುದಿನದ ಕಾನ್ಫರೆನ್ಸಿಗೆ ಬೇಕಾದ ವಿಚಾರಗಳನ್ನು ರೆಡಿ ಮಾಡುತ್ತ, ಅಮ್ಮನ ಕೈಲಿ ಉಪಚಾರ ಮಾಡಿಸಿಕೊಳ್ಳುತ್ತ ಊರ ಸುದ್ದಿಯೆಲ್ಲ ಕೇಳುತ್ತ ದಿನ ಕಳೆಯಿತು. ನಾಳೆ ಮಂಗಳೂರಿಗೆ ಹೋಗಬೇಕಲ್ಲ. ಆಟೋದಲ್ಲಿ ಅಡ್ಕದ ತನಕ ಹೋಗಿ ಅಲ್ಲಿಂದ ಬಸ್ಸಲ್ಲಿ ಹೋಗುವುದು ಒಳ್ಳೇದು. ಅಮ್ಮನ ಹತ್ತಿರ ಆಟೋ ಕರೆಯಲು ಹೇಳಿದಳು. ಆಮೇಲೆ ಅದೇನೋ ಹೊಳೆದಂತಾಗಿ ಅಮ್ಮನಿಗೆ ಕೇಳಿದಳು: “ನೀನು ಯಾವಾಗ್ಲೂ ಹೋಗೂದು ಯಾರ ಆಟೋದಲ್ಲಿ ಅಮ್ಮ?” ಅಮ್ಮ ಹೇಳಿದ್ಲು. “ಈಗೆಲ್ಲಾ ಶ್ಯಾಮನ ಆಟೋನೇ.” “ಹಂಗಾರೆ ಮೊದಲೆಲ್ಲ?” “ಅಬೂಬಕರ್ ಅಂತ... ಅವ ನಿನ್ನ ಕ್ಲಾಸ್ ಮೇಟ್ ಅಂತೆ ಅಲ್ವಾ, ಒಂದ್ ಸರ್ತಿ ಹೇಳಿದ್ದ ನಂಗೆ.. ಅವ ಚಂದಕ್ಕೆ ಮಾತಾಡ್ತಿದ್ದ. ತುಂಬ ಸಹಾಯ ಮಾಡ್ತಿದ್ದ. ಅವನಪ್ಪ ಅಂಗಡಿ ಮೋಞಿಬ್ಯಾರಿ, ನೆನಪುಂಟಲ್ಲ… ಬೇಕಾದಾಗೆಲ್ಲ ಅಬೂಬಕರ್ ಅಥವಾ ಶ್ಯಾಮ ಇಬ್ರಲ್ಲಿ ಒಬ್ರಿಗೆ ಫೋನ್ ಮಾಡ್ತಿದ್ದೆ. ಈಗ ಅಬೂಬಕರ್ ಗೆ ಫೋನ್ ಮಾಡೂದಿಲ್ಲ, ಆ ಹುಡುಗಿ ಗಲಾಟೆ ಎಲ್ಲ ಆದ ಮೇಲೆ.” ಅವಳು ಕೆಲ ಸೆಕೆಂಡು ಅಳೆದು ಸುರಿದು ಕೊನೆಗಂದಳು: "ಅಬೂಬಕರಿಗೇ ಫೋನ್ ಮಾಡಮ್ಮ, ನಾಳೆ ಅವನ ಆಟೋದಲ್ಲಿಯೇ ಹೋಗ್ತೇನೆ. ಕ್ಲಾಸ್ಮೇಟಲ್ವಾ, ಮಾತಾಡಿದ ಹಾಗೂ ಆಯ್ತು.” "ಶ್ಯಾಮನಿಗೇ ಹೇಳೂದು ಬೇಡ್ವಾ?” “ಯಾಕಮ್ಮ ಅಬೂಬಕರ್ ಸರಿಯಿಲ್ವಾ, ನಿನ್ ಜತೆ ಏನಾದ್ರೂ ಗಲಾಟೆ ಆಗಿತ್ತಾ?” ಅಂತ ಕೇಳಿದಳು. ಅಮ್ಮ "ಹಾಗೇನಿಲ್ಲ, ಅವನಿಗೇ ಹೇಳ್ತೇನೆ," ಅಂದರು. ಅಬೂಬಕರ್ ಗೆ ಫೋನ್ ಮಾಡಿ “ಇದು ಗಣೇಶ ಮಾಸ್ತ್ರ ಮನೆಯಿಂದ, ನಾಳೆ ಬೇಗ ಆರೂವರೆಗೆ ಮನೆ ಹತ್ರ ಬಾ,” ಅಂದರು. ಫೋನಿಟ್ಟು ಬರುತ್ತಾನಂತೆ ಅಂತಂದು ಅಡಿಗೆಮನೆಗೆ ನಡೆದರು. ಸಂಧ್ಯಾವಂದನೆ ಮುಗಿಸಿ ಬಂದ ಅಪ್ಪನ ಜತೆ ಕೂತು ಅವಳು ಊಟ ಮುಗಿಸಿದಳು. ಮೋಞಿ ಬ್ಯಾರಿ ಅಪ್ಪನ ಬೀಡಿ ದೋಸ್ತಿ ಕೂಡ. ಪ್ರತಿ ರಂಜಾನಿನ ಸಮಯ ಖರ್ಜೂರ ಗೋಡಂಬಿ ಎಲ್ಲ ತಂದುಕೊಡೋರು, ಇತ್ತೀಚೆಗೆ ನಿಂತಿದೆಯಂತೆ ಆ ಪದ್ಧತಿ, ಅಪ್ಪ ನೆನಪಿಸಿಕೊಂಡರು. “ಅವನಿಗೂ ವಯಸ್ಸಾಯ್ತು, ನಂಗೂ ವಯಸ್ಸಾಯ್ತು, ಇನ್ನೆಲ್ಲಿಗೆ ಆಚೀಚೆ ಓಡಾಡೂದು?” ಅಪ್ಪನ ಮಾತು ಕೇಳುತ್ತಿದ್ದರೂ ಅವಳ ತಲೆ ಇನ್ನೆಲ್ಲೋ ಓಡಾಡ್ತಿತ್ತು. ಅಬೂಬಕರ್ ಆಟೋನೇ ಬೇಕಂತ ಯಾಕೆ ಕರೆಸಿದೆ ತಾನು? ಬೆಳಿಗ್ಗೆ ಅವನ ಹೆಸರು ಕೇಳಿದಾಗಿಂದ ಮನಸಿನೊಳಗೆ ಸುಳಿದಾಡುತ್ತಿರುವ ಚಳಿಗಾಳಿಯ ಗುರಿಯೇನು? *** ಅವಳಮ್ಮ ಅಂದುಕೊಂಡಂತೆ ಅವ ಅವಳಿಗೆ ಬರೀ ಕ್ಲಾಸ್ ಮೇಟ್ ಮಾತ್ರವಾಗಿರಲಿಲ್ಲ. ಅವನೆಂದರೆ ಮಿಠಾಯಿ. ಅವನೆಂದರೆ ಬಲೂನು. ಅವಳು ಮೋಞಿಯವರ ಅಂಗಡಿಗೆ ಮನೆಸಾಮಾನಿಗಂತ ಹೋಗಲಾರಂಭಿಸಿದ್ದು ಎಂಟನೇ ಕ್ಲಾಸಿರಬೇಕಾದರೆ. ಅಬೂಬಕರ್ ಅಂಗಡಿ ಕೌಂಟರಲ್ಲಿದ್ದರೆ ಅವಳಿಗೊಂಥರಾ ಖುಷಿ. ಅವನು ಇರುವ ಹೊತ್ತು ನೋಡಿಯೇ ಅವಳು ಅಂಗಡಿಗೆ ಹೋಗುತ್ತಿದ್ದುದೂ ಇದೆ. ಹಾಗೆ ಹೋದಾಗ ಮನೆ ಸಾಮಾನು ಜತೆ ಅವಳಿಗಿಷ್ಟದ ಮಿಠಾಯಿ ನಾಕು ಬೇಕಂತ ಕೇಳಿದರೆ ಅವನು ಆರು ಹಾಕಿರುತ್ತಿದ್ದ. ಅವಳಿಗೆ ಬುಗ್ಗೆಯೆಂದರೆ ಇಷ್ಟ ಅಂತ ಅವನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೊಂದು ಸಲ ಬಲೂನು ಕೂಡ ಹಾಕಿರುತ್ತಿದ್ದ. ಒಂದು ಸಲವೂ ಬುಗ್ಗೆ ಊದಿ ಅವನಿಗೆ ತೋರಿಸುವ ಅವಕಾಶ ಮಾತ್ರ ಅವಳಿಗೆ ಸಿಕ್ಕಿರಲಿಲ್ಲ. ಬಸ್ಸಲ್ಲಿ ಶಾಲೆಗೆ ಹೋಗಬೇಕಾದರೆ ಅವಳಿಗಿಂತ ಕರೆಕ್ಟಾಗಿ ಎರಡು ಸೀಟು ಹಿಂದೆ ನಿಂತಿರುತ್ತಿದ್ದ, ಬಸ್ಸಿನ ಕನ್ನಡಿಯಲ್ಲಿ ಅವಳನ್ನೇ ನೋಡುತ್ತಿರುತ್ತಿದ್ದ. ಬಸ್ಸು ಖಾಲಿ ಇದ್ದಾಗ ಅವಳ ಹಿಂದಿನ ಸೀಟಲ್ಲಿ ಜಾಗ ಹಿಡಿದು ಕೂತು ಅವಳನ್ನು ಎದುರುಗಡೆಯ ಅಥವಾ ಸೈಡಿನ ಕನ್ನಡಿಯಲ್ಲಿ ನೋಡುತ್ತಿದ್ದ. ಅವಳು ಕನ್ನಡಿಯಲ್ಲಿಯೇ ಅವನನ್ನು ನೋಡಿದ ತಕ್ಷಣ ದೃಷ್ಟಿ ತಪ್ಪಿಸಿಕೊಳ್ಳುತ್ತಿದ್ದ. ಮೊದಮೊದಲು ಇದೊಂದು ಆಟವಾಗಿತ್ತು. ಆಮೇಲೆ ಅವಳಿಗೂ ಅವನು ಕನ್ನಡಿಯಲ್ಲಿ ನನ್ನನ್ನು ನೋಡಲಿ, ನಾನೂ ಅವನನ್ನು ನೋಡಬೇಕು ಅಂತನಿಸಲು ಶುರುವಾದಾಗ ಮಾತ್ರ ಸ್ವಲ್ಪ ಭಯವಾಗ್ತಿತ್ತು. ಅಜ್ಜಿಗೆ ಕೋಪ ಬಂದಾಗ, “ಹೆಣ್ಣೆ ನೀ ಒಂದಿನ ಬ್ಯಾರಿಯೊಟ್ಟಿಗೆ ಓಡಿ ಹೋಗ್ತೀ ನೋಡು,” ಅನ್ನುತ್ತಿದ್ದರಲ್ಲ, ಅದು ಗಂಟೆಯಂತೆ ಕಿವಿಯಲ್ಲಿ ಕೇಳಿಸುತ್ತಿತ್ತು. ಅಕ್ಕಪಕ್ಕದಲ್ಲಿದ್ದವರಿಗೆ ಯಾರಿಗಾದರೂ ಈ ಕಣ್ಣಾಟಗಳು ಗೊತ್ತಾದರೆ ಚೆನ್ನಾಗಿರುವುದಿಲ್ಲ ಅಂತ ಅರಿವು ಇದ್ದ ಕಾರಣ ಎಲ್ಲವೂ ಹದತಪ್ಪದೆ ಸಾಗಿತು. ಶಾಲೆಯಲ್ಲಿ ಕತೆ ಬೇರೆಯೇ ಇತ್ತು. ಕೊಎಜುಕೇಶನ್ ಆದರೂ ಆ ಕಾಲಕ್ಕೆ ಹುಡುಗರು-ಹುಡುಗಿಯರು ಮಾತಾಡುವುದು ಅಪರೂಪ. ಹಾಗಾಗಿ ಇವರಿಬ್ಬರು ಶಾಲೆಯೊಳಗೆ ಭಯಂಕರ ಸೀರಿಯಸ್. ನೋಡುವುದು ಇರಲಿ, ಒಬ್ಬರಿಗೊಬ್ಬರು ಓಡಾಡಿದ ಗಾಳಿಯೂ ತಾಗದಷ್ಟು ದೂರದಲ್ಲಿರ್ತಿದ್ರು. ಅವ ಓದಿನಲ್ಲಿ ಅಷ್ಟೇನೂ ಇಲ್ಲದಿದ್ದರೂ ಕಬಡ್ಡಿಯಲ್ಲಿ, ಕ್ರಿಕೆಟಿನಲ್ಲಿ ಜೋರು. ಅವ ಆಡ್ತಿರಬೇಕಾದ್ರೆ ಇವಳು ದೂರದಲ್ಲಿ ಬೇರೆ ಹುಡುಗಿಯರ ಜತೆ ನಿಂತು ನೋಡಿ ಮನಸಿನಲ್ಲಿಯೇ ಸಪೋರ್ಟ್ ಮಾಡ್ತಿದ್ಲು. ಹೂವಿನೊಳಗೆ ಪರಿಮಳ ಎಲ್ಲಿದೆಯೆಂದು ಕೇಳಿದರೆ ಹೇಳಲಾಗುವುದೇ? ಅವರ ನಡುವಿನ ಅರೇಂಜ್ಮೆಂಟು ಹಾಗಿತ್ತು. ಇದ್ದೂ ಇಲ್ಲದ ಹಾಗೆ, ಮುಟ್ಟಿಯೂ ಮುಟ್ಟದ ಹಾಗೆ. ಒಂಬತ್ತನೇ ಕ್ಲಾಸಿನ ಕೊನೆಯಲ್ಲಿ ವಾರ್ಷಿಕೋತ್ಸವದ ದಿವಸ ಇವಳಿಗೆ ಕ್ಲಾಸಲ್ಲಿ ಎಲ್ಲರಿಗಿಂತ ಮಾರ್ಕ್ಸ್ ಜಾಸ್ತಿ ಬಂದಾಗ, ಸ್ಟೇಜ್ ಮೇಲೆ ಹೋಗಿ ದತ್ತಿ ಬಹುಮಾನಗಳು ಪಡೆಯುವಾಗ ಅವನ ಕಣ್ಣುಗಳು ದೂರದಿಂದಲೇ ನಗುತ್ತ ಖುಷಿಪಡುತ್ತಿರುವುದು ಅರಿವಾಗಿ ಮೆತ್ತಗೆ ಬೆವರಿದ್ದಳು. ವಾರ್ಷಿಕೋತ್ಸವದ ಮರುದಿನ ಶಾಲೆಯಲ್ಲಿ ಅವಳು ಲೈಬ್ರರಿಯಲ್ಲಿ ಯಾವುದೋ ಪುಸ್ತಕ ಹುಡುಕುತ್ತಿರಬೇಕಾದರೆ ಅಬೂಬಕರ್ ಕಾಣಿಸಿದ. ಎಂದೂ ಲೈಬ್ರರಿಗೆ ಮುಖ ಮಾಡಿ ನಿಲ್ಲದವ ಇವತ್ತು ಇಲ್ಲಿ ಯಾಕೆ ಅಂತ ಅವಳು ಯೋಚಿಸುತ್ತಿರಬೇಕಾದರೆ ಅವಳ ಎದುರಿಗೇ ಬಂದ. ಕೈಯಲ್ಲೊಂದು ಪೊಟ್ಟಣವಿತ್ತು. ತಗೋ ಎಂಬಂತೆ ಕೈಚಾಚಿದ. ಮುಖದಲ್ಲಿ ಎಂದಿನ ನಗುವಿರಲಿಲ್ಲ. ಅವಳು ಗಲಿಬಿಲಿಯ ನಡುವೆಯೇ ಕೈಚಾಚಿ ಅದನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಅವಳ ಮುಖ ನೋಡಿ, ತಕ್ಷಣ ತಿರುಗಿ ಪುಸ್ತಕಗಳನ್ನು ನೋಡುವಂತೆ ನಟಿಸುತ್ತಾ ಕಪಾಟುಗಳನ್ನು ದಾಟಿ ಹೊರಟೇಹೋದ. ಅವಳ ಎದೆಬಡಿತ ಜೋರಾಯ್ತು. ಏನಿರ್ತದೋ ಪೊಟ್ಟಣದಲ್ಲಿ, ಐ ಲವ್ಯೂ ಅಂತ ಬರೆದಿರುವ ಪ್ರೇಮ ಪತ್ರ ಇರಬಹುದಾ ಅಂತ ಸ್ಟ್ರಾಂಗಾಗಿ ಸಂಶಯ ಬಂತು. ಆದರೆ ಅವ ಅಷ್ಟೆಲ್ಲ ಬರೆಯುವಷ್ಟು ಜೋರಾಗಿರ್ತಾನಾ ಅಂತ ಗೊತ್ತಿರಲಿಲ್ಲ. ಇಲ್ಲಿ ತೆರೆಯುವುದು, ಓದುವುದು ಬೇಡ ಎಂದು ಮೆಲ್ಲಗೆ ಯೂನಿಫಾರ್ಮಿನ ಜೇಬಿಗೆ ಅದನ್ನು ಜಾರಿಸಿದಳು. ಬಸ್ಸಿಂದ ಮನೆಗೆ ಹೋಗುವ ದಾರಿಯಲ್ಲಿ ಮರವೊಂದರ ಕೆಳಗೆ ಕುಳಿತು ಪೊಟ್ಟಣ ಬಿಚ್ಚಿ ನೋಡಿದಳು. ಎರಡು ಮಿಠಾಯಿ ಮತ್ತೆ ಒಂದು ಬಲೂನು. ಅಷ್ಟೇ. ಪತ್ರವೇನೂ ಇರಲಿಲ್ಲ. ಆದರೆ ಬಲೂನು ಮಾತ್ರ… ಹಾರ್ಟ್ ಶೇಪಲ್ಲಿತ್ತು. ಈತರದ್ದಕ್ಕೆ ಆವಳು ತಯಾರಾಗಿಯೇ ಇದ್ದರೂ ಅದನ್ನು ನೋಡಿದ ಕ್ಷಣ ಮಾತ್ರ ಅವಳಿಗೆ ಎಂದೂ ಮರೆಯಲಾಗದು. ಕಾಲಡಿಯಲ್ಲಿನ ನೆಲವೆಲ್ಲ ಅಲೆಗಳು ಸೆಳೆದುಕೊಂಡ ಮರಳಂತೆ ಕುಸಿದುಕೊಂಡು ಹೋಗಿ, ಎಲ್ಲವೂ ವೇಗವಾಗಿ ಕೊಚ್ಚಿ ಹೋದಂಗಾಗಿ, ಎದೆಯೊಳಗೆ ಏನೇನೋ ಆಗಿ… ಹೇಳತೀರದ ಸಿಹಿವೇದನೆ, ಸಂಭ್ರಮ. ಆಮೇಲೆ ದಾರಿಯುದ್ದಕ್ಕೂ ಮತ್ತು ಮನೆಯಲ್ಲೂ ಯೋಚನೆಗಳೋ ಯೋಚನೆಗಳು. ನಾಳೆ ಸಿಗ್ತಾನೆ ಮತ್ತೆ, ನಾನೇನಾದರೂ ಹೇಳಬೇಕು ಅಂತ ಅಂದ್ಕೊಂಡಿರ್ತಾನಾ? ಏನು ಹೇಳುವುದು? ಹೇಳಬೇಕೇ ಬೇಡವೇ? ನಾನಿನ್ನೂ ಒಂಬತ್ತನೇ ಕ್ಲಾಸು, ಏನು ಹೇಳಬಹುದು ಹೇಳಿದರೆ? ತಲೆಬಿರಿಯುವಷ್ಟು ಯೋಚನೆ ಮಾಡಿ ಮಾಡಿ ಮಾಡಿ ಕೊನೆಗೊಂದು ನಿರ್ಧಾರಕ್ಕೆ ಬಂದಳು. ಒಂದು ಪೇಪರಲ್ಲಿ ಬರೆದಳು. “ನಂಗೆ ಮಿಠಾಯಿ, ಬಲೂನ್ ತುಂಬಾ ಇಷ್ಟ ಅಂತ ನಿಂಗೆ ಹೇಗೆ ಗೊತ್ತು? ನಂಗೆ ನಿನ್ ಜತೆ ಮಾತಾಡ್ಬೇಕು.” ಮರುದಿನ ಮೂಡುಕೆಂಪಾದಾಗ ರಾತ್ರಿಯಿಡೀ ನಿದ್ದೆಮಾಡದೆ ಇವಳ ಕಣ್ಣೂ ಕೆಂಪಾಗಿತ್ತು. ಬರೆದ ಪತ್ರವನ್ನು ಅವನಿಗೆ ಕೊಡಲಿಕ್ಕೆಂದು ಲಂಗದ ಜೇಬಿನಲ್ಲಿ ಹಾಕಿಕೊಂಡು ಸಿದ್ಧವಾಗಿ ಶಾಲೆಗೆ ಹೋದಳು. ಆದರೆ ಅವ ಮಾತ್ರ ಎಲ್ಲೂ ಕಾಣಲಿಲ್ಲ. ಅವ ಮತ್ತೆಂದೂ ಶಾಲೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಶಾಲೆ ಬಿಟ್ಟು ಎಲ್ಲಿಯೋ ಹೋದನೆಂದು ಎಲ್ಲರೂ ಹೇಳುತ್ತಿದ್ದುದು ಕೇಳುತ್ತಿತ್ತು. ಸ್ವಲ್ಪ ದಿನ ಇವಳಿಗೆ ಖಾಲಿಖಾಲಿಯೆನಿಸಿತು. ಆ ಬಲೂನು ಸುಮ್ಮನೇ ಕೊಟ್ಟಿರಬೇಕು, ಅದಕ್ಕೆ ನಾನೇ ಏನೋ ಅರ್ಥ ಕಟ್ಟಿಕೊಂಡೆ ಅನಿಸಿತು. ಹಾಗೇನಾದರೂ ಸೀರಿಯಸ್ ಇದ್ದಿದ್ರೆ ಬರೆದೋ ಬಾಯಲ್ಲೋ ತಿಳಿಸಿರುತ್ತಿದ್ದನೇನೋ. ತಾನು ಬರೆದ ಚೀಟಿ ಅಮ್ಮ ಅಪ್ಪನಿಗೆ ಸಿಕ್ಕಿದರೆ ಏನಾದೀತೋ ಅಂತ ಹೆದರಿ ಹರಿದು ಬಿಸಾಕಿದಳು. ಆ ಮೇಲೆ ಹತ್ತನೇ ತರಗತಿ ಶುರುವಾಯ್ತು. ಓದುವುದು ಬರೆಯುವುದರ ನಡುವೆ ಅಬೂಬಕರ್ ಹಳೆಯ ಪುಸ್ತಕದ ನಡುವೆ ಸೇರಿಸಿಟ್ಟ ಹೂವಿನ ಹಾಗೆ ಕಳೆದುಹೋದ. ಇವೆಲ್ಲಾ ಆಗಿ ಇಪ್ಪತ್ತು ವರ್ಷಗಳಾಗಿವೆ. ಬಾಳ ಹಾದಿಯಲ್ಲಿ ಅವೆಷ್ಟೋ ನಿಲ್ದಾಣಗಳು ಬಂದುಹೋಗಿವೆ. ನೆನೆದಷ್ಟೂ ಮುಗಿಯದಷ್ಟು ಪ್ರೀತಿಮಳೆ ಸುರಿಸುವ ಗಂಡ, ಹೋದಲ್ಲಿ ಬಂದಲ್ಲಿ ಹಿಂದೆ ಮುಂದೆ ಸುತ್ತುವ ಮಗ... ಈಗ ಹಳೆಯದೆಲ್ಲ ಬರಿಯ ಮಿಠಾಯಿ ನೆನಪು ಮಾತ್ರ. ರೈಲಲ್ಲಿ ಹೋಗ್ತಾ ಯಾವುದೋ ಸ್ಟೇಶನಲ್ಲೊಂದು ಅಂಗಡಿ, ಅದರಲ್ಲಿ ಮಿಠಾಯಿಗಳು. ಇಳಿದು ತಿಂತೀವಿ. ಅದೇ ಸ್ಟೇಶನ್ ನನ್ನ ಫೈನಲ್ ಸ್ಟೇಶನ್ ಅಂತ ಅಂದ್ಕೊಂತೀವಾ? ಈ ಥರ ಮಿಠಾಯಿ ಸ್ಟೇಶನ್ ಅವೆಷ್ಟೋ? ಅವನೂ ಮುಂದೆ ಹೋಗಿರ್ತಾನೆ. ನಾನೂ ಕೂಡ. ನೆನಪುಗಳಷ್ಟೇ ಮಿಂಚುಹುಳಗಳ ಥರ ಹೊಳೀತಿರ್ತವೆ. ಅವತ್ತು ಕಾಣೆಯಾದ ಹುಡುಗ ನಾಳೆ ಸಿಗ್ತಾನೆ. ಆವತ್ತು ಮಾತಾಡಬೇಕೆಂದುಕೊಂಡಿದ್ದು ಚರಿತ್ರೆಯ ಕಸದಬುಟ್ಟಿ ಸೇರಿದೆ. ಈಗ ಮಾತಾಡಲಿಕ್ಕೇನಾದರೂ ಉಳಿದಿದೆಯಾ? ನನಗ್ಯಾಕೆ ಈ ಹುಚ್ಚು ಬುದ್ಧಿ? ಯೋಚಿಸುತ್ತ ಮಲಗಿದವಳಿಗೆ ಹಿಂದಿನ ರಾತ್ರಿ ನಿದ್ದೆಯಿಲ್ಲದೆ ಸುಸ್ತಾಗಿತ್ತಲ್ಲ, ನಿದ್ದೆ ಯಾವಾಗ ಬಂತೋ ತಿಳಿಯಲಿಲ್ಲ. *** ಬೆಳಿಗ್ಗೆ ಆರೂವರೆಗೆ ಸರಿಯಾಗಿ ಆಟೋ ತಗೊಂಡು ಬಂದ ಅಬೂಬಕರ್. ಲ್ಯಾಪ್ಟಾಪ್ ಬ್ಯಾಗ್ ಇಟ್ಟುಕೊಂಡು ಆಟೋ ಹತ್ತಿದಳು. ಕಳಿಸಿಕೊಡಲು ನಿಂತಿದ್ದ ಅಮ್ಮನಿಗೆ “ಬರ್ತೀನಮ್ಮ.” ಅಂದಳು. “ಬರಲಾ ಅಕ್ಕ,” ಅಬೂಬಕರ್ ಕೂಡ ಅಂದ, ಆಟೋ ಹೊರಡಿಸಿದ. ಎರಡು ನಿಮಿಷಗಳಾಯ್ತು. ಪದವಿಗೆ ಹೋಗಲು ಬೇಕಾದ್ದು ಇಪ್ಪತ್ತು ನಿಮಿಷ. ಅವನು ತುಟಿಪಿಟಕ್ ಅನ್ನದೆ ಡ್ರೈವ್ ಮಾಡುತ್ತಿದ್ದ. ಹೋಗುವ ಹಾದಿಯ ಅಕ್ಕಪಕ್ಕದ ಮರಗಳಿಂದ ಹೆಸರುತಿಳಿಯದ ಹಕ್ಕಿಗಳು ಹಾಡು ಶುರುಮಾಡಿದ್ದವು. ಜೇನ್ನೊಣಗಳು ರೊಯ್ಯನೆ ಹಾರುತ್ತಿದ್ದವು. ಆದರೆ ಅವರ ನಡುವೆ ಆಟೋದ ಗಡಗಡ ಶಬ್ದ, ಅಸಹಜವೆನಿಸುವಂತಹ ಮೌನದ ಜೊತೆಗೆ ಅದ್ಯಾವುದೋ ಗಾಜಿನ ಗೋಡೆ ಬಂದು ಕುಳಿತಂತೆ ಅನಿಸಿತು ಅವಳಿಗೆ. ಅದನ್ನು ಮುರಿಯಬೇಕೆಂಬ ಆತುರಕ್ಕೆ ತಾನೇ ಮಾತು ಶುರುಮಾಡಿದಳು. “ಮೋಞಿ ಬ್ಯಾರಿ ಹೇಗಿದ್ದಾರೆ?” “ಚೆನ್ನಾಗಿದ್ದಾರೆ. ವಯಸ್ಸಾಯ್ತು ಹಾಗಾಗಿ ಆಚೆಗೆ ಬರೂದು ಕಮ್ಮಿ.” “ಅಂಗಡಿ ವ್ಯಾಪಾರ ಎಲ್ಲ ಹೇಗುಂಟು ಈಗ?” “ಜನ ಎಲ್ಲದಕ್ಕೂ ಜಾಸ್ತಿ ಅಡ್ಕಕ್ಕೇ ಹೋಗ್ತಾರೆ, ಜತೆಗೆ ನಾರಾಯಣ ಮೂಲ್ಯನ ಅಂಗಡಿ ಬಂದಾಗಿಂದ ನಮ್ಮ ಅಂಗಡಿಗೆ ವ್ಯಾಪಾರ ಕಮ್ಮಿಯಾಯ್ತು. ಅಂಗಡಿ ಮುಚ್ಚಿ ಒಂದು ವರ್ಷ ಆಯ್ತು.” ಹೀಗೆ ಚಿಕ್ಕಪುಟ್ಟದೆಲ್ಲ ಮಾತಾಡಿ ಆದ ಮೇಲೆ ಮುಖ್ಯವಾದ ಪ್ರಶ್ನೆಗೆ ಉತ್ತರ ಬೇಕಿತ್ತು. “ನೀನು ಶಾಲೆ ಬಿಟ್ಟು ಎಲ್ಲಿಗೆ ಹೋಗಿದ್ದೆ?” “ಅಣ್ಣನ ಜತೆ ದುಬೈಗೆ ಹೋದೆ, ಅಲ್ಲಿ ಒಂದು ಹೋಟೆಲಲ್ಲಿ ಸಪ್ಲೈಯರ್ ಆಗಿದ್ದೆ. ಒಂದು ನಾಕು ವರ್ಷ ದುಡಿದೆ, ಆಮೇಲೆ ಅಲ್ಲಿರ್ಲಿಕ್ಕಾಗ್ಲಿಲ್ಲ, ವಾಪಸ್ ಬಂದೆ.” ನೀವು ಏನು ಮಾಡ್ತಿದೀರಿ ಅಂತ ಕೇಳಿದ. ಹತ್ತನೇ ಕ್ಲಾಸಾದ ಮೇಲೆ ಪಿಯುಸಿ, ಡಿಗ್ರಿ, ಮಾಸ್ಟರ್ಸ್ ಎಲ್ಲ ಮುಗಿಸಿ ಕೆಲಸ ಸಿಕ್ಕಿ ಬೆಂಗಳೂರಿಗೆ ಹೋದವರೆಗಿನ ಕತೆ ಸಂಕ್ಷಿಪ್ತವಾಗಿ ಹೇಳಿ ಮುಗಿಸಬೇಕಾದರೆ ಪದವು ಬಂತು. “ಸಂಜೆ ಇರ್ತೀಯಾ, ನಾ ಬರೂದು ಆರು ಗಂಟೆಯಾಗ್ಬಹುದು,” ಅಂತ ಕೇಳಿದಳು. ಇರ್ತೀನಿ ಅಂದ. **** ಕಾನ್ಫರೆನ್ಸಿನಲ್ಲಿ ಅವಳ ಪ್ರೆಸೆಂಟೇಶನ್ ಮುಗಿದ ಮೇಲೆ ಉಳಿದಿದ್ದೆಲ್ಲ ಬೋರಿಂಗ್ ಆಗಿತ್ತು. ಎಲ್ಲಾ ಮುಗಿಸಿ ಮನೆಗೆ ವಾಪಸ್ ಹೊರಟು, ಆರೂಕಾಲಕ್ಕೆ ಅಡ್ಕದಲ್ಲಿ ಬಂದಿಳಿದಳು. ಶ್ಯಾಮ ಮತ್ತೆ ಅಬೂಬಕರ್ ಇಬ್ಬರ ಆಟೋಗಳೂ ಅಲ್ಲಿದ್ದು ಅವಳಿಗೆ ಫಜೀತಿಗಿಟ್ಟುಕೊಂಡಿತು. ಆಗಿದ್ದಾಗಲಿ ಎಂದು ಅಬೂಬಕರ್ ಆಟೋಕ್ಕೆ ಹತ್ತಿದಾಗ ಶ್ಯಾಮ ಅವಳನ್ನೇ ನೋಡುತ್ತಿದ್ದುದರ ಅರಿವಾಗಿತ್ತು. ಹೇಗಿತ್ತು ಹೋದ ಕೆಲಸ ಅಂತ ಕೇಳಿದ ಅಬೂಬಕರ್. ಚೆನ್ನಾಗಿತ್ತು ಅಂದಳು. ಶಾಲೆ ಅದು ಇದು ಅವರು ಇವರು ಅಂತ ಕಾಡುಹರಟೆ ಶುರುವಾಯಿತು. ಕತ್ತಲು ಕವಿಯಲಾರಂಭಿಸಿತ್ತು, ಕಾಡಿನೊಳಗಿಂದ ಮಿಡತೆಗಳ ಕಿರಿಚಾಟ ತೂರಿಬರುತ್ತಿತ್ತು. ಅರ್ಧದಾರಿಗೆ ಬಂದಿರಬಹುದು, ಅಬೂಬಕರ್ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿ ಗಾಡಿ ಯಾಕೋ ಸ್ವಲ್ಪ ನಿಧಾನ ಮಾಡಿದ. ಸ್ವಲ್ಪ ದೂರದಲ್ಲಿ ಯಾರೋ ಇಬ್ಬರು ಕಾವಿಬಣ್ಣದ ಪಂಚೆಯುಟ್ಟವರು ನಿಂತಿದ್ದುದು ಕಾಣಿಸಿತು. ಆಟೋ ನಿಲ್ಲಿಸುವಂತೆ ಸನ್ನೆ ಮಾಡಿದರು, ನಿಲ್ಲಿಸಿದ. ಅವರು ಆಟೋದೊಳಗೆ ಕಣ್ಣುತೂರಿಸಿದರು. ಅವರಲ್ಲೊಬ್ಬ “ನೀವು ಯಾರು, ಎಲ್ಲಿಗೆ ಹೋಗ್ತಿದೀರಿ,” ಅಂತ ಕೇಳಿದ. “ಗಣೇಶ ಮಾಸ್ತ್ರ ಮಗಳು, ಮನೆಗೆ ಹೋಗ್ತಾ ಇದೇನೆ.” “ಹೀಗೆ ಒಬ್ಬೊಬ್ರೇ ಯಾಕೆ ಹೋಗ್ತಿದೀರಿ?” ಅಂತ ನೇರವಾಗಿಯೇ ಕೇಳಿದ ಒಬ್ಬ, ಅಬೂಬಕರನ್ನೇ ಸೋಡುತ್ತ. “ಇಲ್ಲ, ಇವ ನನ್ನ ಕ್ಲಾಸ್ಮೇಟು, ಚಿಕ್ಕಂದಿನಿಂದಲೇ ಚೆನ್ನಾಗಿ ಪರಿಚಯ, ನಮ್ಮ ಮನೆಗೆಲ್ಲ ಬರ್ತಾ ಇದ್ದ ಇವನು, ಇವನಪ್ಪ ನಮ್ಮಪ್ಪ ಫ್ರೆಂಡ್ಸು,” ಅಂದಳು. ಹಾಗೇ ನೀವು ಯಾರು ಆಂತ ಕೇಳಿದಳು. ಅವರಲ್ಲೊಬ್ಬ "ನಾವು ದುರ್ಗಾಪರಮೇಶ್ವರಿ ಭಜನಾ ಮಂಡಳಿಯವ್ರು.." ಅಂದ. "ನೀವು ಒಬ್ರೇ ಇದ್ರಿ ಅಲ್ವಾ, ಅದಿಕ್ಕೆ ನಿಲ್ಲಿಸಿ ಕೇಳಿದ್ದು" ಅಂತ ಒತ್ತಿ ಹೇಳಿದ. ಅಬೂಬಕರ್ ಸೌಜನ್ಯದಿಂದ ನಕ್ಕ, “ಜಾಗ್ರತೆ ಕರ್ಕೊಂಡು ಹೋಗ್ತೇನೆ ಅಣ್ಣ,” ಅಂದ. ಅವರಿಗಿನ್ನೇನು ಹೇಳಬೇಕು ಗೊತ್ತಾಗಲಿಲ್ವೇನೋ ಅನ್ನುವಂತೆ, “ಸರಿ, ಜಾಗ್ರತೆ ಹೋಗಿ,” ಅಂತ ಬದಿಗೆ ಸರಿದರು, ಆಟೋ ಮುಂದೆ ಸಾಗಿತು. ಅವಳು ನಡೆದುದನ್ನು ನೆನೆಸಿಕೊಳ್ಳುತ್ತ ಕೂತಿದ್ದಳು. ತಲೆಯಲ್ಲಿ ಏನೇನೋ ಲೆಕ್ಕಾಚಾರ ನಡೆದಿತ್ತು. ಸ್ವಲ್ಪ ಹೊತ್ತಿನ ಮೇಲೆ ಮೌನ ಮುರಿದ ಅಬೂಬಕರ್, ನಗುತ್ತ ಕೇಳಿದ, “ನಾನು ನಿಮ್ಮನೆಗೆ ಯಾವಾಗ ಬಂದದ್ದು?” ಅವಳೂ ನಗು ಜೋಡಿಸಿದಳು. “ಅಮ್ಮ ಹೇಳ್ತಿದ್ರು ನೀನ್ ಬರ್ತಿದ್ದೆ ಅಂತ.” “ಅದು ಈಗ, ಆಗ ಅಲ್ವಲ್ಲ?” “ಆಗ ಅಂತಂದ್ರೆ ಯಾವಾಗ?" ಅವನ ಪ್ರಶ್ನೆಯಲ್ಲಿ ೯ಗತಾತಿನ ತುಂಟತನವೆಲ್ಲ ಹೆಪ್ಪುಗಟ್ಟಿದಂತೆನಿಸಿ ಅವಳಿಗೆ ಎದೆಯೊಳಗೆ ಏನೋ ಭಾರವಾದದ್ದು ಕೂತಂತೆನಿಸಿತು. ಆದರೆ ಆಷ್ಟಕ್ಕೆಲ್ಲ ಮಾತು. ಮರೆತಂತೆ ಕೂತರೆ ಹೇಗೆ? 'ಈಗೇನು ಹೇಳ್ಬಾರದಿತ್ತಾ, ಸ್ಸಾರಿ...” ಅಂತ ಪ್ರತ್ಯುತ್ತರ ಕೊಟ್ಟವಳನ್ನು ಆಟೋದ ಕನ್ನಡಿಯಲ್ಲಿಯೇ ನೋಡಿ ನಕ್ಕ ಅಬೂಬಕರ್. ಇವಳೂ ಕನ್ನಡಿಯಲ್ಲಿಯೇ ಅವನನ್ನು ನೋಡಿ ನಕ್ಕಳು. ಆ ಕ್ಷಣಕ್ಕೆ ಆಟೋದ ಕನ್ನಡಿ ಬಸ್ಸಿನ ಕನ್ನಡಿಯಾಯಿತು. ನೆನಪುಗಳು ಮತ್ತೆ ಗರಿಬಿಚ್ಚಿ ಕುಣಿದವು. ಕಾಣದ ಗಾಜಿನ ಗೋಡೆ ಸೀಳಿ ಬಂದ ತಂಗಾಳಿಯೊಂದು ಅವರ ನಡುವಲ್ಲಿ ಹಿತವಾಗಿ ಮನೆಮಾಡಿತು. ಮಾತಾಡಿದರೆ ಎಲ್ಲಿ ಆ ಕ್ಷಣದ ನವಿರು ಕಳೆದುಹೋಗುತ್ತದೋ, ಆಗಷ್ಟೇ ಅರಳಿದ ಹೂವೊಂದರ ಕೋಮಲ ಪಕಳೆಗಳು ಎಲ್ಲಿ ಬಾಡಿಹೋಗುವವೋ ಎಂದು ಹೆದರಿದವರಂತೆ ಇಬ್ಬರೂ ಸುಮ್ಮನಾದರು. ಸ್ವಲ್ಪ ಹೊತ್ತಿನ ಮೌನದ ನಂತರ ಮತ್ತೆ ಅವನೇ ಮಾತು ಮುಂದುವರಿಯಿದ. ಅವನ ಮನೆಯಲ್ಲಿ ಹೆಂಡತಿ, ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಇವರು ಹೋಗುತ್ತಿದ್ದ ಸ್ಕೂಲಿಗೇ ಹೋಗುತ್ತಿದ್ದಾರೆ, ದೊಡ್ಡವ ಮೂರನೇ ಕ್ಲಾಸು, ಚಿಕ್ಕವಳು ಒಂದನೇ ಕ್ಲಾಸು. ಜೀವನಕ್ಕೆ ಆಟೋ. ಮತ್ತೆ ಮನೆಯಲ್ಲಿ ಜೇನು ಸಾಕಿದ್ದಾನೆ, ಜೇನು ವ್ಯಾಪಾರ ಮಾಡ್ತಾರೆ. "ಆತರದ್ದು ಜೇನು ಚೆನ್ನಾಗಿರ್ತದೆ, ಬೆಂಗ್ಳೂರಲ್ಲಿ ಎಷ್ಟು ದುಡ್ಡು ಕೊಟ್ರೂ ಸಿಗೂದಿಲ್ಲ", ಅಂದಳು. ಅಷ್ಟರಲ್ಲಿ ಮನೆ ಬಂತು. "ನಾಳೆ ಸಂಜೆ ನಾ ಹೊರಡ್ತೇನೆ. ಮನೆಯಿಂದ ಮಂಜೂರಿಗೆ ಡ್ರಾಪ್ ಮಾಡ್ತೀಯಾ," ಅಂತ ಕೇಳಿದಳು. ಬರ್ತೇನೆ ಅಂದ. ದುಡ್ಡು ನಾಳೆ ತಗೊಳ್ತೇನೆ ಅಂತ ಹೊರಟುಹೋದ. ಅಮ್ಮ ಶ್ಯಾಮನಿಗೆ ಕರೆದ ಹಾಗೆ ಕರೆದು ಕಾಫಿ ಕೊಡಲಿಲ್ಲ ಅನ್ನುವುದು ಅವಳು ಗಮನಿಸದಿರಲಾಗಲಿಲ್ಲ. ಹಾಗೆಯೇ ಹಾದಿಯಲ್ಲಿ ಸಿಕ್ಕ ಕಾವಿಧಾರಿಗಳು ಯಾಕೆ ಹಾಗಂದರು, ಏನಾಯ್ತು ಅನ್ನುವುದರ ಬಗ್ಗೆ ಇಬ್ಬರೂ ಮಾತಾಡಲಿಲ್ಲ ಅನ್ನುವುದೂ ಅವಳಿಗೆ ತಲೆಯಲ್ಲುಳಿಯಿತು. **** ಮರುದಿವಸ ಸಂಜೆ ಅವಳು ಮಂಗಳೂರಿಗೆ ಹೋಗಿ ಬೆಂಗಳೂರು ಬಸ್ ಹಿಡಿಯಬೇಕಿತ್ತು. ಸಂಜೆ ಐದೂವರೆಗೆ ಬಂದ ಅಬೂಬಕರ್. ಅಮ್ಮ-ಅಪ್ಪ ಕಟ್ಟಿಕೊಟ್ಟ ಉಪ್ಪಿನಕಾಯಿ, ಹಪ್ಪಳ ಎಲ್ಲ ಎತ್ತಿಕೊಂಡು ಬಾಯ್ ಹೇಳಿ ಆಟೋ ಹತ್ತಿ ಕೂತಳು, ಹೊರಟರು. ನೆನ್ನೆಯ ನೆನಪು ಹಿತವಾಗಿ ಕಾಡ್ತಿತ್ತು. ಮಾತುಗಳ ರೂಪ ಕೊಡಲು ಆಗದಿದ್ದ ವಿಚಾರ ಮನದಲ್ಲಿ ಹಾಗೇ ಕೂತಿತ್ತು. ಇವತ್ತು ಏನು ಮಾತಾಡುವುದೋ ಗೊತ್ತಾಗಲಿಲ್ಲ. ಏನಾದ್ರೂ ಕೇಳಲಾ ಅಂತ ಮನಸೆಂದರೆ, ಬೇಡ ಸುಮ್ಮನಿರು ಅಂತ ಬುದ್ಧಿ ತಿವಿಯಿತು. ಬೇಕಾದ್ದೆಲ್ಲ ಇದೆ ಜೀವನದಲ್ಲಿ, ಆದರೂ ಹೃದಯವನ್ನ ಬಣ್ಣದ ಚಿಟ್ಟೆಯಂತೆ ಹಾರಬಿಡ್ತಿದೀಯ ಅಂತ ತನಗೆ ತಾನೇ ಬೈದುಕೊಂಡಳು. ಆತನೇ ಮಾತು ಶುರುಮಾಡಿದ. ಇತ್ತೀಚಿನ ದಿನಗಳಲ್ಲಿ ಊರು ಹೇಗೆ ಬದಲಾಗಿದೆ ಅಂತ ಹೇಳಿದ. ಮನುಷ್ಯ ಮನುಷ್ಯರ ನಡುವೆ ಬೆಳೆದಿರುವ ಗೋಡೆಗಳು… ಕಾರಣವಿಲ್ಲದೇ ಸಂಶಯದಿಂದ ಇರಿಯುವ ಕಣ್ಣುಗಳು… ಬಡವರ ಹೊಟ್ಟೆಮೇಲೆ ಹೊಡೆಯುವ ಸುಳ್ಳುಸುದ್ದಿಗಳು… ಅವನೂ ಮಂಜೂರಿನಲ್ಲಿ ಹೆಣ ಸಿಕ್ಕ ಕತೆ ಹೇಳಿ ಅದರಿಂದ ಬೇರೆ ಮುಸ್ಲಿಂ ಮತ್ತೆ ಹಿಂದೂ ಆಟೋ ಡ್ರೈವರುಗಳ ಜೀವನ ಹೇಗೆ ಬದಲಾಯಿತು ಅಂತ ಬಿಡಿಸಿ ಬಿಡಿಸಿ ಹೇಳಿದ. ರಾಜಕೀಯ ಮತ್ತೆ ಧರ್ಮಗಳಿಗೆ ಸಂಬಂಧಿಸಿದ ಮಾತೆಂದರೆ ಮೂರು ಮೈಲು ದೂರ ಸರಿಯುತ್ತಿದ್ದ ಆಕೆಗೆ ಇದಕ್ಕೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಇನ್ನು ಸ್ವಲ್ಪ ದಿನಕ್ಕೆ ಹೊಟ್ಟೆಪಾಡು ನಡೆಯಬೇಕಾದರೆ ಈ ಊರು ಬಿಟ್ಟು ಕಾಸರಗೋಡಿಗೋ ಮಂಜೂರಿಗೋ ಹೋಗುವುದು ಬೇಸರದ ವಿಚಾರವಾದರೂ ಅನಿವಾರ್ಯವಾಗುತ್ತದೋ ಏನೋ ಅಂತಂದಾಗ ಅವನ ಜೀವನಕ್ಕೆ ತಟ್ಟಿದ ಬಿಸಿಯ ಅರಿವು ಅವಳಿಗಾಯಿತು. ಅವನ ಸುಂಟರಗಾಳಿಯೊಳಗೆ ಸಿಕ್ಕ ನಾವೆಯಂತ ಬದುಕು ತನ್ನ ಏರ್ ಕಂಡೀಶನ್ಡ್ ಜಗತ್ತಿಗಿಂತ ತುಂಬಾ ದೂರದಲ್ಲಿರುವುದರ ಅರಿವು ಬಿಸಿಗಾಳಿಯಂತೆ ಅವಳಿಗೆ ರಾಚಿತು. ಏನು ಹೇಳಬೇಕೋ ತಿಳಿಯದಿರುವಾಗ ಏನೇ ಹೇಳಿದ್ರೂ ಕೃತಕವಾಗಿರ್ತದೆ ಅಂತ ಸುಮ್ಮನಿದ್ದಳು. “ಇವೆಲ್ಲ ಹೇಳಿ ನಿಮ್ಗೆ ಬೋರ್ ಮಾಡಿದ್ನೇನೋ ಸಾರಿ,” ಅಂದ. “ಇಲ್ಲ ಬೋರ್ ಆಗಿಲ್ಲ, ನಂಗೆ ಈತರ ಸಮಸ್ಯೆಗಳು ಗೊತ್ತೇ ಇಲ್ವಲ್ಲ, ಏನ್ ಮಾಡಿದ್ರೆ ಸರಿ ಅಂತ ಗೊತ್ತಿಲ್ಲ, ಏನು ಹೇಳ್ಬೇಕು ಅಂತ್ಲೂ ಗೊತ್ತಿಲ್ಲ,” ಅಂತಂದಳು. ಅವನೂ ತಲೆಯಲ್ಲಾಡಿಸಿದ. ಆಮೇಲೆ ಸಣ್ಣಪುಟ್ಟ ವಿಚಾರಗಳು ಮಾತಾಡ್ತ ಮಾತಾಡ್ತ ಹಾದಿ ಮುಂದೆ ಸಾಗಿ, ಬೇಡಬೇಡವೆಂದರೂ ಮಂಜೂರು ಬಂತು. ಬಸ್ಟ್ಯಾಂಡಿನಾಚೆಗೆ ಆಟೋ ನಿಲ್ಲಿಸಿದ. ಅವಳು ಇಳಿದಳು. ಲಗೇಜ್ ಇಳಿಸಿದ್ದಾಯಿತು. ಎರಡೂ ದಿನದ್ದು ಸೇರಿಸಿ ದುಡ್ಡು ಕೊಟ್ಟಳು. ಬನ್ನಿ ಒಳಗೆ ಬಿಡ್ತೇನೆ ಅಂತ ಲಗೇಜಿಗೊಂದು ಕೈ ಸೇರಿಸಿಕೊಂಡು ಬಸ್ಟ್ಯಾಂಡಿನೊಳಗೆ ಬಂದ ಅಬೂಬಕರ್. ಅವಳನ್ನು ಬಸ್ಸಿಗೆ ಹತ್ತಿಸಿದ. ಈಗ ಬಂದೆ ಅಂತ ಆಚೆಗೆ ಹೋಗಿ ಬಂದವನ ಕೈಲಿ ಒಂದು ಪುಟಾಣಿ ಬಟ್ಟೆ ಬ್ಯಾಗಿತ್ತು. ಅದನ್ನವಳಿಗೆ ಕಿಟಿಕಿಯಿಂದಲೇ ಕೊಟ್ಟ. ಅವಳಿಗಾಗ ದೇಜಾವೂ ಫೀಲಿಂಗ್... ಏನಿದು ಅಂತ ಕೇಳಬೇಕಂತಲಾಗಲೀ, ತೆಗೆದು ನೋಡಬೇಕೆಂತಲಾಗಲೀ ಅನಿಸಲಿಲ್ಲ. ಮಾತು ಮರೆತುಹೋಗಿತ್ತು. ಅದನ್ನು ಮಡಿಲಲ್ಲಿಟ್ಟುಕೊಂಡು ಬಸ್ಸಿನಾಚೆಗೆ ಕೆಂಪಗಾಗುತ್ತಿದ್ದ ಆಕಾಶವನ್ನೂ ಅವನನ್ನೂ ನೋಡುತ್ತ ಅವಳು ಕುಳಿತರೆ ಅವ ಕಿಟಿಕಿಯಲ್ಲಿ ಕಾಣುತ್ತಿದ್ದ ಅವಳ ಕೈಯ ಉಂಗುರ ನೋಡುತ್ತ ನಿಂತಿದ್ದ. ಈ ಮೌನದಲ್ಲಿ ವರ್ಷಾನುಗಟ್ಟಲೆಯ ಬಾಂಧವ್ಯಕ್ಕಿರುವ ಬೆಚ್ಚನೆಯಿತ್ತು. ಹೀಗೆ ಅದೆಷ್ಟು ಹೊತ್ತು ಕಳೆಯಿತೋ. ಇದ್ದಕ್ಕಿದ್ದಂತೆ ತೂರಿಬಂದ ಕಂಡಕ್ಟರನ ಸೀಟಿ ಶಬ್ದಕ್ಕೆ ಮ್ಯಾಜಿಕ್ ಒಡೆದುಹೋಯಿತು. ಅವನೇ ಕೈಬೀಸಿ ನಕ್ಕ, ಸಿಗುವ ಇನ್ನೊಮ್ಮೆ ಅಂದ. ಅವಳೂ ಬಾಯ್ ಮಾಡುತ್ತಿದ್ದಂತೇ ಬಸ್ ಹೊರಟಿತು. ಬಸ್ ಸ್ಟ್ಯಾಂಡ್ ತಿರುವು ದಾಟಿ ಬಸ್ ಆಚೆಗೆ ಹೋಗುತ್ತಿದ್ದಂತೆ, ಬರೀ ಪಡೆದುಕೊಳ್ಳುವುದೇ ಆಯಿತಲ್ಲ ಇವನ ಕೈಲಿ, ಎಂದೂ ಏನೂ ಕೊಡಲೇ ಇಲ್ಲವೆಂದು ತೀವ್ರವಾಗಿ ಅನಿಸಿಬಿಟ್ಟು ಹೇಳಲರಿಯದ ಭಾವವೊಂದು ಕಾಡಿತು. ಹಾಗೇ ಬ್ಯಾಗಿಗೆ ಕಟ್ಟಿದ್ದ ದಾರ ಬಿಚ್ಚಿ ಏನಿದೆ ಅಂತ ನೋಡಿದರೆ ಒಳಗಿತ್ತು, ಅವಳಂದುಕೊಂಡ ಹಾಗೆಯೇ, ಅದೇ ಹಳೆಯ ಅವಳಿಗಿಷ್ಟದ ಮಿಠಾಯಿ ಒಂದು ಡಜನ್… ಮತ್ತೆ ಹೊಸದಾಗಿ ಒಂದು ಜೇನಿನ ಬಾಟಲ್. ಹಾರ್ಟ್ ಶೇಪಿನ ಬಲೂನ್ ಮಾತ್ರ ಇರಲಿಲ್ಲ. Posted by Shree at 8:52 AM Labels: ಕಥೆ 1 comment: sunaath said... ಶ್ರೀ ಮೇಡಮ್, ನಿಮ್ಮ ಈ ಕತೆ ‘ಬಲೂನು’ ತುಂಬ ಇಷ್ಟವಾಯಿತು. ಏಕೆ, ಅಂತೀರಾ? ಕತೆಯ ಥೀಮ್ ಸಲುವಾಗಿ ಅಂತ ನಾ ಹೇಳ್ತಿಲ್ಲ. ಆದರೆ, ಆ ಕಥೆಯನ್ನು ಹೇಳಿದ ರೀತಿ ತುಂಬ ಚೆನ್ನಾಗಿದೆ. ಎರಡನೆಯದಾಗಿ, ಕಥೆಯಲ್ಲಿ ನಡುನಡುವೆ ಬರುವ ಹೇಳಿಕೆಗಳು ತುಂಬ ಸುಂದರವಾಗಿವೆ, ಆಕರ್ಷಕವಾಗಿವೆ, ಚಿತ್ತಾಪಹಾರಿಯಾಗಿವೆ, ವಾಸ್ತವಿಕವಾಗಿವೆ. ಅವುಗಳನ್ನು ಇಲ್ಲಿ ಲಿಸ್ಟ್ ಮಾಡಲು ನಾನು ಬಯಸುವುದಿಲ್ಲ! ಕಥೆಯ ಕೊನೆಯಂತೂ ಅದ್ಭುತ! ಬಲೂನಿನಂತೆ ಗಾಳಿಯಲ್ಲಿ ಹಾರಾಡಿದ ನಿಮ್ಮ ಕಥೆ, ಅದೇ ಅನುಭವವನ್ನು ಓದುಗನಿಗೆ ಕೊಡುತ್ತದೆ. ಅಭಿನಂದನೆಗಳು.
ಕರ್ನಾಟಕದಲ್ಲಿ ಸರಕಾರ ಬದಲಾಗಿ ಒಂಭತ್ತು ತಿಂಗಳು ಆಗುತ್ತಾ ಬಂದಿದೆ. ಸಾಮಾನ್ಯವಾಗಿ ಒಂಭತ್ತು ತಿಂಗಳು ಆಗುತ್ತಾ ಬಂದರೆ ಗುಡ್ ನ್ಯೂಸ್ ಯಾವಾಗ ಎಂದು ನೋಡಿದವರು ಕೇಳುತ್ತಾರೆ. ಆದರೆ ಸದ್ಯದ ನಮ್ಮ ರಾಜ್ಯ ಸರಕಾರವನ್ನು ನೋಡಿದರೆ ಗುಡ್ ಕೂಡ ಇಲ್ಲ, ನ್ಯೂಸ್ ಕೂಡ ಇಲ್ಲ ಎನ್ನುವ ಪರಿಸ್ಥಿತಿ. ನಾನೇಕೆ ಹಾಗೆ ಹೇಳುತ್ತಿದ್ದೇನೆ ಎಂದು ನೀವು ಕೇಳಬಹುದು. ಬೇಕಾದರೆ ನೀವೆ ನೋಡಿ. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಸಿಂಪಲ್ ಉದಾಹರಣೆಗಳನ್ನು ತೆಗೆದುಕೊಳ್ಳೋಣ. ಆರ್ ಟಿಒ ಕಚೇರಿಯಲ್ಲಿ ನಿಮ್ಮ ಹಳೆ ಡ್ರೈವಿಂಗ್ ಲೈಸೆನ್ಸ್ ಅನ್ನು ಸ್ಮಾರ್ಟ್ ಕಾರ್ಡ್ ಗೆ ಬದಲಾಯಿಸಲು ನೀವು ನಿರ್ಧರಿಸಿದ್ದಿರಿ ಎಂದು ಇಟ್ಟುಕೊಳ್ಳೋಣ. ಅಲ್ಲಿ ಆರ್ ಟಿಒ ಕಚೇರಿಯಲ್ಲಿ ಸ್ಮಾರ್ಟ್ ಕಾರ್ಡ್ ಮಾಡುವ ಕೆಲಸವನ್ನು ಹೊರಗುತ್ತಿಗೆಗೆ ಕೊಟ್ಟಿದ್ದಾರೆ. ನೀವು ನೇರ ದಾರಿಯಲ್ಲಿ ಹೋದರೆ ಕನಿಷ್ಟ 2-3 ತಿಂಗಳು ಆದರೂ ಅವರು ತೆಗೆದುಕೊಳ್ಳುತ್ತಾರೆ. ಅದೇ ನೀವು ಬ್ರೋಕರ್ ಅವರನ್ನು ಹಿಡಿದುಕೊಂಡು ಹೋದರೆ 2-3 ದಿನಗಳು ಕೂಡ ಬೇಕಂತಿಲ್ಲ. ಇದು ಹೇಗೆ ಸಾಧ್ಯ. ಬ್ರೋಕರ್ ಗಳು ಹೋದ ಕೂಡಲೇ ಆರ್ ಟಿಒ ಕಚೇರಿಯವರೆಗೆ ಎರಡು ಇದ್ದ ಕೈಗಳು ನಾಲ್ಕು ಆಗುತ್ತಾ? ಆರ್ ಟಿಒ ಕಚೇರಿಯಿಂದ ಸ್ವಲ್ಪ ದೂರ ನಡೆದುಕೊಂಡು ಬಂದರೆ ಅಲ್ಲಿ ನಿಮಗೆ ತಾಲೂಕು ಪಂಚಾಯತ್ ಕಚೇರಿ ಸಿಗುತ್ತದೆ. ಅಲ್ಲಿ ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಸಹಿತ ಇತರ ಅನೇಕ ಉಪಯುಕ್ತ ಪ್ರಮಾಣಪತ್ರಗಳನ್ನು ಮಾಡಿಕೊಡಲಾಗುತ್ತದೆ. ಆದರೆ ಯಾವಾಗ? ನೀವು ಗಾಂಧಿಮಾರ್ಗದಲ್ಲಿ ಹೋದರೆ ಯಾವಾಗ ಸಿಗುತ್ತದೆ ಎನ್ನುವುದು ಯಾವ ಜ್ಯೋತಿಷ್ಯಿಗೂ ಹೇಳುವುದು ಕಷ್ಟ. ಅದೇ ಬ್ರೋಕರ್ ಮೂಲಕ ಹೋದರೆ ನೀವು ನಿಮ್ಮ ಆದಾಯವನ್ನು ಲೆಕ್ಕ ಹಾಕುವಷ್ಟರ ಒಳಗೆ ಪ್ರಮಾಣಪತ್ರ ಕೈಯಲ್ಲಿ ಇರುತ್ತದೆ. ನಮ್ಮ ಸರಕಾರಿ ಕಚೇರಿಗಳಲ್ಲಿ ನೀವು ಕೆಲಸ ಮಾಡಿಸಲು ಹೋದರೆ ಅಲ್ಲಿ ತ್ರೀ ಟೈಯರ್ ಸಿಸ್ಟಮ್ ಇದೆ. ಒಂದು ಬಸ್ಸಿನ ವೇಗದಲ್ಲಿ ಮಾಡಿಸುವುದು. ಇನ್ನೊಂದು ರೈಲಿನ ವೇಗದಲ್ಲಿ ಮಾಡಿಸುವುದು. ಮತ್ತೊಂದು ವಿಮಾನದ ವೇಗದಲ್ಲಿ ಮಾಡಿಸುವುದು. ಬಸ್ಸಿನ ವೇಗ ಎಂದರೆ ನ್ಯಾಯದ ಮಾರ್ಗ. ಅದು ಎಷ್ಟು ದಿನದಲ್ಲಿ ಕೆಲಸ ಆಗುತ್ತದೆ ಎಂದು ಹೇಳುವುದು ಕಷ್ಟ. ರೈಲಿನ ವೇಗ ಎಂದರೆ ಬಸ್ಸಿಗಿಂತ ಉತ್ತಮ, ಆರಾಮದಾಯಕ ಮತ್ತು ಎಸಿ ಆದರೆ ಖರ್ಚು ಸ್ವಲ್ಪ ಜಾಸ್ತಿ. ವಿಮಾನದ ವೇಗ ಎಂದರೆ ನಿಮಗೆ ಇಂತಿಷ್ಟೇ ಸಮಯದ ಒಳಗೆ ವೇಗವಾಗಿ ಆಗಬೇಕು, ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ ಎನ್ನುವ ದಾರಿ. ಉದಾಹರಣೆಗೆ ಪಾಲಿಕೆಯ ನಗರ ಯೋಜನಾ ವಿಭಾಗಕ್ಕೆ ನೀವು ಹೋಗುತ್ತೀರಿ. ನೀವು ಬಸ್ಸಿನ ವೇಗದಲ್ಲಿ ಹೋಗಲು ತೀರ್ಮಾನಿಸಿದ್ದೀರಿ ಎಂದರೆ ನಿಮಗೆ ಒಂದು ಕಟ್ಟಡ ಕಟ್ಟಬೇಕಾದರೆ ಕಟ್ಟಡ ನಿರ್ಮಾಣ ಪರವಾನಿಗೆ ಸಿಗಲು ಕನಿಷ್ಟ 2-3 ತಿಂಗಳಾದರೂ ಬೇಕಾಗುತ್ತದೆ. ಅದೇ ನಿಮ್ಮ ಮರುದಿನ ಅರ್ಜಿ ಹಾಕಿದ ಬಿಲ್ಡರ್ ಒಬ್ಬರಿಗೆ ತಮ್ಮ ವಸತಿ ಸಮುಚ್ಚಯ ಕಟ್ಟಲು 10-15 ದಿನಗಳ ಒಳಗೆ ಅದೇ ಲೈಸೆನ್ಸ್ ಸಿಗುತ್ತದೆ. ಹೇಗೆಂದರೆ ಆ ಬಿಲ್ಡರ್ ವಿಮಾನದ ವೇಗಕ್ಕೆ ಒಪ್ಪಿಕೊಂಡಿದ್ದಾರೆ. ಎಲ್ಲವೂ ಹಾಗೆನೆ. ನೀವು ನೇರವಾಗಿ ಖಾತಾ ಮಾಡಿಸಲು ಹೋದರೆ ನಿಮಗೆ ಕನಿಷ್ಟ 21 ದಿನಗಳು ತಗಲುತ್ತವೆ. ಅದೇ ಬ್ರೋಕರ್ ಮೂಲಕ ಹೋದರೆ ಬೆಳಿಗ್ಗೆ ಹೋಗಿ ಸಂಜೆಯ ಒಳಗೆ ಆಗುತ್ತದೆ. ನೀವು ಹೋದರೆ ಚಲನ್ ಮಾತ್ರ ಕಟ್ಟಬೇಕು. ಉದಾಹರಣೆಗೆ ಹನುಮಂತನ ಹೆಸರಿನಿಂದ ರಾಮನ ಹೆಸರಿಗೆ ಆಸ್ತಿ ನೋಂದಾವಣೆ ಆಗಬೇಕು ಎಂದು ಇಟ್ಟುಕೊಳ್ಳೋಣ. ಒಂದು ವೇಳೆ ಆಸ್ತಿಯ ಮೌಲ್ಯ 37 ಲಕ್ಷ ರೂಪಾಯಿ ಆಗಿದ್ದಲ್ಲಿ ಅದಕ್ಕೆ 2% ನೊಂದಾವಣಿ ಶುಲ್ಕ ಕಟ್ಟಿದರೆ ನಿಮಗೆ 21 ದಿನಗಳಲ್ಲಿ ಕೆಲಸ ಆಗುತ್ತದೆ. ಅದೇ ನೀವು ಒಬ್ಬ ಬ್ರೋಕರ್ ಹಿಡಿದು ಅವರಿಗೆ 6-7 ಸಾವಿರ ರೂಪಾಯಿ ಕೊಟ್ಟರೆ ಕೆಲಸ ಎಷ್ಟು ಬೇಗ ಆಗುತ್ತೆ ಎಂದರೆ ನಿಮಗೆ ನಂಬಲು ಸಾಧ್ಯವಾಗುವುದಿಲ್ಲ. ಈ ಭ್ರಷ್ಟಾಚಾರದ ವ್ಯವಸ್ಥೆ ಕಾಂಗ್ರೆಸ್ ಸರಕಾರದಲ್ಲಿಯೂ ಇತ್ತು. ನಂತರ ಮೈತ್ರಿ ಸರಕಾರದಲ್ಲಿಯೂ ಮುಂದುವರೆದಿತ್ತು. ಬಿಜೆಪಿಯವರು ಇದನ್ನು ಹೊಡೆದು ಹಾಕಿ ಜನಸಾಮಾನ್ಯರಿಗೆ ಭ್ರಷ್ಟ ರಹಿತ ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ನಂಬಲಾಗಿತ್ತು. ಆದರೆ ಅವರು ಬಂದು 9 ತಿಂಗಳು ಆದರೂ ಪರಿಸ್ಥಿತಿ ಹಾಗೇ ಇದೆ. ಇದಕ್ಕೇನು ಕಾರಣ? ವಿಷಯ ಏನೆಂದರೆ ಹಸೆಮಣೆಯಲ್ಲಿ ಕುಳಿತ ಮದುಮಗ ಮಾತ್ರ ಬೇರೆಯಾಗಿದ್ದಾನೆ. ಆದರೆ ವಾಲಗ ಊದುವವರು, ಮಂತ್ರ ಹೇಳುವವರು, ಪೆಂಡಾಲ್ ಹಾಕುವವರು, ಅಡುಗೆಯವರು, ಫೋಟೋ, ವಿಡಿಯೋ ಹಿಂದಿನವರೇ ಆಗಿದ್ದಲ್ಲಿ ಮುಂಚೆ ಹೇಗಿತ್ತೋ ಅದೇ ಮುಂದುವರೆಯುತ್ತದೆ. ಇಚ್ಚಾಶಕ್ತಿ ಮತ್ತು ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ಸಾಮರ್ತ್ಯ ಯಾರಿಗೆ ಇರಬೇಕೋ ಅವರು ಎಲ್ಲರನ್ನು ಖುಷಿ ಮಾತ್ರ ಮಾಡುತ್ತಾ ಓಡಾಡುತ್ತಿದ್ದರೆ ಅತ್ತ ಚಪ್ಪರ ಬಿದ್ದು ಹೋದದ್ದು ಗೊತ್ತೆ ಆಗಲಿಕ್ಕಿಲ್ಲ!
ದಂಡುಪಾಳ್ಯದ ಪಾಪಿಗಳ ದಂಡನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿ ಛಲಪತಿ ಈಗ ಮತ್ತೆ ಬಂದಿದ್ದಾರೆ. ಈ ಬಾರಿ ಹುಬ್ಬಳ್ಳಿ ಡಾಬಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಪ್ರೀತಿ, ಮೋಸ, ಸೇಡಿನ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ದಂಡುಪಾಳ್ಯದ ಕೆಲವು ಸನ್ನಿವೇಶಗಳಲ್ಲಿ ಬರುತ್ತವೆ. ಅಲ್ಲಿ ಛಲಪತಿ ಮತ್ತೆ ದಂಡುಪಾಳ್ಯದ ಗ್ಯಾಂಗನ್ನು ಮತ್ತೆ ಮುಖಾಮುಖಿಯಾಗಲಿದ್ದಾರೆ. ಛಲಪತಿಯಾಗಿ ಆರ್ಮುಗಂ ರವಿಶಂಕರ್ ಅಬ್ಬರಿಸಿದ್ದಾರೆ. ರವಿಶಂಕರ್ ತಮ್ಮ ಪಾತ್ರದ ಬಗ್ಗೆ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ. ವಿ.ಸಿನಿಮಾಸ್ : ಹುಬ್ಬಳ್ಳಿ ಡಾಬಾದಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದೀರ ಈ ಚಿತ್ರದಲ್ಲಿ ನಿಮ್ಮ ಪಾತ್ರ ? ರವಿಶಂಕರ್ : ಹುಬ್ಬಳ್ಳಿ ಡಾಬಾ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ನನ್ನದು ಪೊಲೀಸ್ ಅಽಕಾರಿಯ ಪಾತ್ರ. ಈ ಹಿಂದೆ ದಂಡುಪಾಳ್ಯದಲ್ಲಿ ಛಲಪತಿ ಎಂಬ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೆ. ಇಲ್ಲಿಯೂ ಅದೇ ಪಾತ್ರದಲ್ಲಿ ಮತ್ತೆ ಬಂದಿ ದ್ದೇನೆ. ದಂಡುಪಾಳ್ಯದ ಗ್ಯಾಂಗ್ ನನ್ನನ್ನು ಮುಖಾಮುಖಿಯಾಗುತ್ತದೆ. ಬಳಿಕ ಏನಾಗುತ್ತದೆ ಎಂಬುದನ್ನು ತೆರೆಯಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ. ಅದನ್ನು ಸಿನಿಮಾದಲ್ಲಿಯೇ ನೊಡಿ ತಿಳಿಯಬೇಕು. ವಿ.ಸಿ : ಈ ಸಿನಿಮಾವನ್ನು ಒಪ್ಪಿಕೊಳ್ಳಲು ಕಾರಣ ? ರವಿಶಂಕರ್ : ನಿರ್ದೇಶಕ ಶ್ರೀನಿವಾಸ್ ಅವರ ಜತೆ ಈ ಹಿಂದೆ ಕೋಟೆ ಎಂಬ ಚಿತ್ರದಲ್ಲಿ ನಟಿಸಿದ್ದೆ. ಆ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರವೇ ಸಿಕ್ಕಿತ್ತು. ಅದರಲ್ಲಿ ಬರುವ ಡೈಲಾಗ್ ತುಂಬಾ ಫೇಮಸ್ ಆಗಿತ್ತು. ಆ ಬಳಿಕ ದಂಡುಪಾಳ್ಳಯ ಸಿನಿಮಾದಲ್ಲಿ ನಟಿಸಿದೆ. ಅದು ನನಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು. ಸೀರೀಸ್ ಆಗಿ ಬಂದ ದಂಡುಪಾಳ್ಯ ಹಿಟ್ ಆಯಿತು. ಆ ಬಳಿಕ ನಿರ್ದೇಶಕರು ಈ ಚಿತ್ರದ ಕಥೆಯನ್ನು ನನಗೆ ಹೇಳಿದರು. ಕಥೆ ಕೆಳಿ ನನಗೆ ತುಂಬಾ ಇಷ್ಟವಾಯಿತು. ನಟಿಸಲು ಸಂತೊಷದಿಂದಲೇ ಒಪ್ಪಿದೆ. ಇದರಲ್ಲಿಯೂ ನನಗೆ ಒಳ್ಳೆಯ ಪಾತ್ರವೇ ಸಿಕ್ಕಿದೆ. ವಿ.ಸಿ : ಚಿತ್ರದಲ್ಲಿ ಕ್ರೌರ್ಯವೂ ಇರುವಂತಿದೆಯಲ್ಲ ? ರವಿಶಂಕರ್ : ಚಿತ್ರದಲ್ಲಿ ಮರ್ಡರ್ ಮಿಸ್ಟರಿಯ ಕಥೆ ಇರುವುದರಿಂದ ಹಾಗನ್ನಿಸುತ್ತದೆ. ಇಲ್ಲಿ, ಲವ್, ಸೆಂಟಿಮೆಂಟ್ ಎಲ್ಲವೂ ಇದೆ. ಟೋಟಲಿ ಒಂದು ಥ್ರಿಲ್ಲರ್ ಕಥೆ ಚಿತ್ರದಲ್ಲಿ ಸಾಗುತ್ತದೆ. ಕುತೂಹಲ ಮೂಡಿಸುತ್ತಾ ಚಿತ್ರ ತೆರೆಯಲ್ಲಿ ಸಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಚಿತ್ರದಲ್ಲಿ ಮನರಂಜನೆಯೇ ಮುಖ್ಯವಾಗಿದೆ. ವಿ.ಸಿ : ಚಿತ್ರದ ಬಗ್ಗೆ ನಿರೀಕ್ಷೆ ಹೇಗಿದೆ ? ರವಿಶಂಕರ್ : ನಿರ್ದೇಶಕರು ಒಳ್ಳೆಯ ಕಣೆದಿದ್ದಾರೆ. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಗೂ ತಂದಿದ್ದಾರೆ. ಸಿನಿಮಾದಲ್ಲಿ ನನ್ನ ಪಾತ್ರಕ್ಕೂ ಮಹತ್ವವಿದೆ. ಹಾಗಾಗಿ ಚಿತ್ರ ಗೆಲ್ಲುವ ವಿಶ್ವಾಸವಿದೆ. ನನಗೆ ಮತ್ತಷ್ಟು ಪ್ರಸಿದ್ಧಿ ತಂದುಕೊಡಲಿದೆ ಎಂಬ ವಿಶ್ವಾಸವೂ ಇದೆ. * ಈ ಚಿತ್ರದ ಹೆಮ್ಮೆಯ ವಿಷಯವೆಂದರೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಎಂಭತ್ತರ ದಶಕದಲ್ಲಿ ಸಂಗೀತ ನೀಡಿದ್ದ, ಜನಪ್ರಿಯ ತಮಿಳು ಚಿತ್ರದ ಗೀತೆಯೊಂದರ ಟ್ಯೂನ್ ಬಳಸಿಕೊಳ್ಳಲು ನಿರ್ದೇಶಕರಿಗೆ ಅವರಿಗೆ ಅವಕಾಶ ನೀಡಿದ್ದಾರೆ. ಇದು ನಮ್ಮ ಚಿತ್ರತಂಡಕ್ಕೂ ಸಂತಸ ತಂದಿದೆ. ನಾನು ಇಳಯರಾಜ ಅವರ ಅಭಿಮಾನಿಯಾಗಿದ್ದು, ಈ ಹಾಡು ನನ್ನ ಜನಪ್ರಿಯ
ಕನ್ನಡ ಸಿನಿಮಾ ರಂಗದ ಖ್ಯಾತ ಪೋಷಕ ನಟ, ನಿರ್ಮಾಪಕ ದಿ.ಎಂ.ಪಿ ಶಂಕರ್ ಪತ್ನಿ ಮಂಜುಳಾ ಶಂಕರ್ ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ Advertisements ಕೆಲವು ದಿನಗಳ ಹಿಂದೆಯಷ್ಟೇ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸಂಬಂಧಿ ಕಾಯಿಲೆ ಕಾರಣದಿಂದಾಗಿ ಆಂಜಿಯೋಗ್ರಾಮ್ ಕೂಡ ಮಾಡಲಾಗಿತ್ತು. ದಿಢೀರ್ ಅಂತ ಮತ್ತೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ Advertisements ಎಂ.ಪಿ.ಶಂಕರ್ ಅವರು ನಟನೆಯ ಜೊತೆಗೆ ನಿರ್ಮಾಣ ಕಾರ್ಯದಲ್ಲೂ ಬ್ಯುಸಿಯಾಗಿದ್ದಾಗ ಅವರಿಗೆ ಸಾಥ್ ನೀಡಿದವರು ಮಂಜುಳ. ಶೂಟಿಂಗ್ ಸ್ಪಾಟ್ ನಲ್ಲೂ ಶಂಕರ್ ಅವರ ಜತೆ ಮಂಜುಳಾ ಅವರು ಇರುತ್ತಿದ್ದರು. ಶಂಕರ್ ಸಿನಿಮಾವನ್ನು ನೋಡಿಕೊಳ್ಳುತ್ತಿದ್ದರೆ, ಕುಟುಂಬದ ಜವಾಬ್ದಾರಿಯನ್ನು ಮಂಜುಳಾ ಅವರು ಹೊತ್ತಿದ್ದರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ Advertisements ಕನ್ನಡದ ಹೆಸರಾಂತ ನಟ ಶಂಕರ್ ಅವರು, ನಟನಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ವೀರಬಾಹು ಪಾತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿದ್ದರು. ಡಾ.ರಾಜ್ ಕುಮಾರ್ ನಟನೆಯ ಗಂಧದ ಗುಡಿ ಚಿತ್ರಕ್ಕೆ ಇದೇ ಶಂಕರ್ ನಿರ್ಮಾಪಕರು ಎನ್ನುವುದು ವಿಶೇಷ.
ಮಹಾನವಮಿಯ ಸಂದರ್ಭದಲ್ಲಿ ಮಂಗಳವಾರ ಮುಂಬೈನ ಉತ್ತರ ಬಾಂಬೆ ಸರ್ಬೋಜನಿನ್ ದುರ್ಗಾಪೂಜಾ ಪಂಡಲ್‌ಗೆ ಅನೇಕ ಗಣ್ಯರು ಆಗಮಿಸಿದರು. ಈ ಸಂದರ್ಭದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ (Rhea Chakraborty) ತಮ್ಮ ಸಹೋದರ ಶೋವಿಕ್ ಚಕ್ರವರ್ತಿ (Showik Chakraborty) ಅವರೊಂದಿಗೆ ಕಾಣಿಸಿಕೊಂಡರು. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಆತ್ಮಹತ್ಯೆ ನಂತರ, ರಿಯಾ ಮತ್ತು ಶೋವಿಕ್ ಸಾರ್ವಜನಿಕ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಬಹುಶಃ ಇದೇ ಮೊದಲು. ಇಬ್ಬರೊಂದಿಗೆ ನಟ ಆಶಿಶ್ ಚೌಧರಿ (Ashish Chowdhry) ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ ಸಾಮಾಜಿಕ ಮಾಧ್ಯಮ ಬಳಕೆದಾರರು ರಿಯಾ ಮತ್ತು ಶೋವಿಕ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ದುರ್ಗಾ ಮಾತೆಯ ಆಶೀರ್ವಾದ ಪಡೆಯಲು ಬಂದ ರಿಯಾ ಚಕ್ರವರ್ತಿ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿವೆ. ಈ ಫೋಟೋಗಳಲ್ಲಿ ಸಹೋದರ ಶೌವಿಕ್ ಚಕ್ರವರ್ತಿ ಮತ್ತು ನಟ ಆಶಿಶ್ ಚೌಧರಿ ಸಹ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈವೆಂಟ್‌ನಲ್ಲಿ ರಿಯಾ ಮತ್ತು ಶೋವಿಕ್ ಒಟ್ಟಿಗೆ ಇರುವುದನ್ನು ನೋಡಿದ ಅನೇಕರು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಕೆಲವು ಬಳಕೆದಾರರು ತಮ್ಮ ಪಾಪ ತೊಳೆಯಲು ಇಬ್ಬರೂ ಅಲ್ಲಿಗೆ ಬಂದಿದ್ದಾರೆ ಎಂದು ಬರೆದಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ನಟನ ಸಾವಿಗೆ ರಿಯಾ ಚಕ್ರವರ್ತಿ ಕಾರಣವೆಂದೇ ಹೇಳುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲಿಂಗ್‌ಗೆ ಗುರಿಯಾಗುತ್ತಿದ್ದಾರೆ. ರಿಯಾ ಚಕ್ರವರ್ತಿ ಅವರು ಪಿಂಕ್ ಕಲರ್ ಪ್ರಿಂಟೆಡ್ ಸೀರೆ ಧರಿಸಿ ದುರ್ಗಾಪೂಜಾ ಪೆಂಡಾಲ್‌ಗೆ ಆಗಮಿಸಿದ್ದರು . ಈ ಫೋಟೋಗಳಲ್ಲಿ ರಿಯಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಮಾತೆ ದುರ್ಗೆಯ ವಿಗ್ರಹದ ಮುಂದೆ ನಿಂತು ಹಲವು ಫೋಟೋಗಳಿಗೆ ಪೋಸ್ ನೀಡಿದರು. ಈ ಈವೆಂಟ್‌ನ ಆಘಾತಕಾರಿ ವಿಷಯವೆಂದರೆ ರಿಯಾ ಜೊತೆ ನಟ ಆಶಿಶ್ ಚೌಧರಿ ಇದ್ದರು, ಅವರು ರಿಯಾ ಅಥವಾ ಅವರ ಸಹೋದರ ಶೋವಿಕ್ ಅವರೊಂದಿಗೆ ಹಿಂದೆಂದೂ ಕಾನಿಸಿಕೊಂಡಿರಲಿಲ್ಲ. ಕೆಲವು ವರದಿಗಳ ಪ್ರಕಾರ ರಿಯಾ ಮತ್ತು ಆಶಿಶ್ ನಡುವೆ ಉತ್ತಮ ಸಂಬಂಧವಿದೆ. ಸುಶಾಂತ್ ಪ್ರಕರಣದ ನಂತರ ರಿಯಾ ಅವರ ಯಾವುದೇ ಚಿತ್ರಗಳನ್ನು ಹೊಂದಿಲ್ಲ. ಅವರು ಕೊನೆಯದಾಗಿ 2021 ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ 'ಚೆಹ್ರೆ' ಚಿತ್ರದಲ್ಲಿ ಕಾಣಿಸಿಕೊಂಡರು.
ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಎಸಗಲಾಗುತ್ತಿರುವ ಆರ್ಥಿಕ ಅಪರಾಧ ಹಾಗೂ ಸೈಬರ್ ಕ್ರೈಮ್ ನಿಯಂತ್ರಣ ಮಾಡುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು. ಮಂಗಳವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಗ್ನಿಶಾಮಕ, ಗೃಹ, ಪೌರ ರಕ್ಷಕ ದಳ ಹಾಗೂ ಎಸ್ ಡಿ ಆರ್ ಎಫ್ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚಿಗೆ ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ತಂತ್ರಜ್ಞಾನ ಬದಲಾದಂತೆ ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ. ಇವುಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನವನ್ನು ಮಾಡಿಕೊಳ್ಳಬೇಕು. ಈ ತಂತ್ರಜ್ಞಾನ ಬಳಕೆಗೆ ಸಂಬಂಧಪಟ್ಟಂತೆ ರೂಪಿಸಲಾಗಿರುವ ಯೋಜನೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ನೀಡಿದ್ದಾರೆ ಎಂದು ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅಗ್ನಿಶಾಮಕ ಇಲಾಖೆಯ ಕಾರ್ಯಗಳನ್ನು ವಿಶೇಷ ಅನುದಾನದ ಅಡಿ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ತುರ್ತು ಪರಿಸ್ಥಿತಿ ಮತ್ತು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಯಂತ್ರೋಪಕರಣ ಕರಿದಿಗೆ ವಿಪತ್ತು ನಿರ್ವಹಣೆ ಇಲಾಖೆಗೆ 20 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.‌ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಗಳನ್ನು ಸ್ಥಾಪಿಸುವ ಮೂಲಕ ಅಪರಾಧ ಪತ್ತೆ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು. ಕಳೆದ ಕೆಲವರ್ಷಗಳಿಂದ ಅಗ್ನಿಶಾಮಕ ಗೃಹ ಮತ್ತು ಪೌರ ರಕ್ಷಕ ದಳದ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಈ ವರ್ಷ 2015ರಿಂದ 2020 ರ ಅವಧಿಯ ವಾರ್ಷಿಕ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು ಎಂದು ಅವರು ಹೇಳಿದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪದಕ ಪ್ರದಾನ ಮಾಡಿದರು. ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣೆ ಇಲಾಖೆ ಆಯೋಜಿಸಿದ್ದ ವಸ್ತುಪ್ರದರ್ಶನವನ್ನು ಅವರು ವೀಕ್ಷಿಸಿದರು. Posted in ಪ್ರಮುಖ ಸುದ್ದಿಗಳು, ರಾಜ್ಯ ಸುದ್ದಿಗಳು, ಸುದ್ದಿಗಳು, ಹೊಸ ಸುದ್ದಿಗಳು Tags: ಅಗ್ನಿಶಾಮಕ, ಎಸ್ ಡಿ ಆರ್ ಎಫ್, ಕಾನೂನು, ಗೃಹ, ಪೊಲೀಸ್‌ ಅಧಿಕಾರಿ, ಪೌರ ರಕ್ಷಕ ದಳ, ಬಸವರಾಜ ಬೊಮ್ಮಾಯಿ
ರಾಜಸ್ಥಾನ ರಾಜಕೀಯ ದಿನಕ್ಕೊಂದು ಟ್ವಿಸ್ಟ್‌ ತೆಗೆದುಕೊಳ್ಳುತ್ತಿದ್ದು, ಅಶೋಕ್‌ ಗೆಹ್ಲೋಟ್‌ ನಿಷ್ಠರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಗೆಹ್ಲೋಟ್‌ ಅವರ 3 ನಿಷ್ಠರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದ್ದರೂ, ಗೆಹ್ಲೋಟ್‌ ಮೇಲೆ ಹೊಣೆ ಹೊರಿಸಲು ಆಗದು ಎಂದು ಸೋನಿಯಾ ಗಾಂಧಿಗೆ ನೀಡಿರುವ ವರದಿಯಲ್ಲಿ ವೀಕ್ಷಕ ಖರ್ಗೆ, ಮಾಕನ್‌ ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. Kannadaprabha News First Published Sep 28, 2022, 10:04 AM IST ಜೈಪುರ/ನವದೆಹಲಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಪಕ್ಷದ ವೀಕ್ಷಕರು ಮಂಗಳವಾರ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ, ಬಂಡಾಯದ ನೇತೃತ್ವ ವಹಿಸಿದ್ದ ಅಶೋಕ್‌ ಗೆಹ್ಲೋಟ್‌ಗೆ ಕ್ಲೀನ್‌ಚಿಟ್‌ ನೀಡಲಾಗಿದ್ದು, ಅವರ ಮೂವರು ನಿಷ್ಠರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಹಾಗೂ 10 ದಿನದಲ್ಲಿ ಉತ್ತರಿಸುವಂತೆ ನೋಟಿಸ್‌ ನೀಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ ಮಾಕನ್‌ ಸಲ್ಲಿಸಿರುವ ವರದಿಯಲ್ಲಿ ಅಶೋಕ್‌ ಗೆಹ್ಲೋಟ್‌ಗೆ ಕ್ಲೀನ್‌ಚಿಟ್‌ ನೀಡಿರುವುದು, ಅವರನ್ನೂ ಈಗಲೂ ಪಕ್ಷ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಂಧಾನ ಸೂತ್ರದ ಭಾಗವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಎ.ಕೆ. ಆ್ಯಂಟನಿ, ಸುಶೀಲ್‌ ಕುಮಾರ್‌ ಶಿಂಧೆ ಮುಂತಾದ ನಾಯಕರ ಜತೆ ಮಾತುಕತೆ ನಡೆಸಿದ್ದು, ರಾಜಸ್ಥಾನ ಬಿಕ್ಕಟ್ಟು ಬಗೆಹರಿಸಲು ಅವರನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಪಕ್ಷದ ವೀಕ್ಷಕರು ಸೋನಿಯಾಗೆ ಸಲ್ಲಿಸಿದ ವರದಿಯಲ್ಲಿ, ಅಶೋಕ್‌ ಗೆಹ್ಲೋಟ್‌ ಆಪ್ತರಾದ ಸಚಿವ ಶಾಂತಿ ಧಾರಿವಾಲ್‌, ಮುಖ್ಯ ವಿಪ್‌ ಮಹೇಶ್‌ ಜೋಶಿ ಮತ್ತು ಶಾಸಕ ಧರ್ಮೇಂದ್ರ ರಾಥೋರ್‌ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಹಾಗೂ ಇದರ ಬೆನ್ನಲ್ಲೇ ಅವರಿಗೆ ಪಕ್ಷವು ನೋಟಿಸ್‌ ಜಾರಿ ಮಾಡಿದೆ. ಶಾಸಕಾಂಗ ಪಕ್ಷದ ಸಭೆಗೆ ಪರ್ಯಾಯವಾಗಿ ಸಭೆ ಆಯೋಜಿಸುವ ಮೂಲಕ, ಈ ಮೂವರು ನಾಯಕರು ಗಂಭೀರ ಲೋಪ ಎಸಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಸಭೆಯು ಅಶೋಕ್‌ ಗೆಹ್ಲೋಟ್‌ ಅವರಿಗೆ ಅರಿವಿದ್ದೇ ನಡೆದಿದೆ ಎಂದು ವರದಿಯಲ್ಲಿ ಹೇಳಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಶಿಫಾರಸು ಮಾಡಿಲ್ಲ. ಇದನ್ನು ಓದಿ: Rajasthan CLP Meet: ತುರ್ತು ಸಭೆ ಕರೆದ ಕಾಂಗ್ರೆಸ್‌; ಇಂದು ರಾಜಸ್ಥಾನ ನೂತನ ಸಿಎಂ ಆಯ್ಕೆ..? ಸೋನಿಯಾ ಗಾಂಧಿಗೆ ಕರೆ: ಈ ನಡುವೆ ಅಶೋಕ್‌ ಗೆಹ್ಲೋಟ್‌ ಮಂಗಳವಾರ ಜೈಪುರದಲ್ಲಿ ತಮ್ಮ ಕೆಲ ಆಪ್ತ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವಿವರ ಹೊರಬಿದ್ದಿಲ್ಲವಾದರೂ, ಆಪ್ತರ ವಿರುದ್ಧ ಶಿಸ್ತು ಕ್ರಮ ಜಾರಿಯಾದರೆ ಮುಂದಿನ ನಡೆ ಸೇರಿದಂತೆ ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯ ಬಳಿಕ ಗೆಹ್ಲೋಟ್‌, ಸ್ವತಃ ಸೋನಿಯಾ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಹಾಗೂ ಈ ವಿಷಯದಲ್ಲಿ ತಮ್ಮ ತಪ್ಪಿಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ತಾವು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸಚಿನ್‌ ಪೈಲಟ್‌ ದಿಲ್ಲಿಗೆ: ರಾಜಕೀಯ ಬಿಕ್ಕಟ್ಟಿನ ನಡುವೆಯೇ ಸಿಎಂ ಸ್ಥಾನದ ಆಕಾಂಕ್ಷಿ ಸಚಿನ್‌ ಪೈಲಟ್‌ ದೆಹಲಿಗೆ ಆಗಮಿಸಿದ್ದಾರೆ. ಯಾವುದೇ ಹಿರಿಯ ನಾಯಕರೊಂದಿಗೆ ಅವರ ಸಭೆ ನಿಗದಿಯಾಗಿಲ್ಲವಾದರೂ ದಿಢೀರ್‌ ದಿಲ್ಲಿ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ನಡುವೆ ಗೆಹ್ಲೋಟ್‌ ವಿರುದ್ಧ ತಾವು ದೂರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಲೂ ಗೆಹ್ಲೋಟ್‌ ಅಧ್ಯಕ್ಷ ರೇಸಲ್ಲಿ..? ಬಂಡಾಯದ ಕಾರಣ ಗಾಂಧಿ ಕುಟುಂಬದ ಅಸಮಾಧಾನಕ್ಕೆ ತುತ್ತಾಗಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಾಂಗ್ರೆಸ್‌ ಅಧ್ಯಕ್ಷ ಚುನಾವಣಾ ಕಣದಿಂದ ಹೊರಗುಳಿದಿದ್ದಾರೆ ಎಂಬುದು ನಿರಾಧಾರ. ಅವರು ಈಗಲೂ ಕಣದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದ ಬಿಕ್ಕಟ್ಟು ಸೃಷ್ಟಿಸಿರುವ 90 ಶಾಸಕರು ಗೆಹ್ಲೋಟ್‌ ಬೆಂಬಲಿಗರಾದ್ದರಿಂದ, ಕಾಂಗ್ರೆಸ್‌ ಹೈಕಮಾಂಡ್‌ ಗೆಹ್ಲೋಟ್‌ ವಿರುದ್ಧ ತಿರುಗಿ ಬಿದ್ದಿದೆ. ಅವರನ್ನು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲ್ಲ ಎಂದು ಸುದ್ದಿಯಾಗಿತ್ತು. ಇದನ್ನೂ ಓದಿ: ಗಾಂಧಿ ಕುಟುಂಬದಿಂದ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲ್ಲ: ಗೆಹ್ಲೋಟ್‌ಗೆ ರಾಗಾ ಸ್ಪಷ್ಟನೆ ಆದರೆ, ಗೆಹ್ಲೋಟ್‌ ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬಹುದು ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ಖಚಿತಪಡಿಸಿವೆ ಎಂದು ಟಿವಿ ಚಾನೆಲ್‌ ಒಂದು ವರದಿ ಮಾಡಿದೆ. ಬಿಕ್ಕಟ್ಟಿನ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಗೆಹ್ಲೋಟ್‌ ಫೋನ್‌ನಲ್ಲಿ ಚರ್ಚೆ ನಡೆಸಿದ್ದಾರೆ.
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ: ಈ ವಾರ ಅತಿಯಾದ ಕೋಪ, ಉದರ ಶೂಲಭಾದೆ, ಆತ್ಮೀಯರಲ್ಲಿ ಕಲಹ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ, ದುಃಖದಾಯಕ ಪ್ರಸಂಗಗಳು, ನಾನಾ ರೀತಿಯ ತೊಂದರೆ, ಮನಃಕ್ಲೇಷ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ: ಈ ವಾರ ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ಬಂಧುಗಳಿಂದ ಸಹಾಯ, ಗುರು ಹಿರಿಯರ ದರ್ಶನ, ಸುವರ್ಣ ಪ್ರಾಪ್ತಿ, ಸಮಾಜದಲ್ಲಿ ಗೌರವ, ದ್ರವ್ಯಲಾಭ, ವ್ಯರ್ಥ ಧನಹಾನಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ: ಈ ವಾರ ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಸರ್ಕಾರಿ ಕೆಲಸದವರಿಗೆ ಕಷ್ಟ, ಅಶಾಂತಿ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಕಲಹ, ಶತ್ರುಗಳಿಂದ ತೊಂದರೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ: ಈ ವಾರ ತಾಯಿಯಿಂದ ಲಾಭ, ನಿವೇಶನ ಪ್ರಾಪ್ತಿ, ಸ್ನೇಹಿತರಿಂದ ನೆರವು, ಪ್ರೀತಿ ಸಮಾಗಮ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಮನಃ ಶಾಂತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ: ಈ ವಾರ ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು, ಮನಃ ಕ್ಲೇಷ, ಸಲ್ಲದ ಅಪವಾದ, ಚಂಚಲ ಮನಸ್ಸು, ನೀಚ ಜನರ ಸಹವಾಸ, ವಿಪರೀತ ವ್ಯಸನ, ಆಲಸ್ಯ ಮನೋಭಾವ, ಕಾರ್ಯ ವಿಫಲ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ: ಈ ವಾರ ಮನಸ್ಸಿನಲ್ಲಿ ಗೊಂದಲ, ವ್ಯವಹಾರದಲ್ಲಿ ಮೋಸ, ಅನಾರೋಗ್ಯ, ಅತಿಯಾದ ಭಯ, ಮಾತಿನಲ್ಲಿ ಹಿಡಿತವಿರಲಿ, ಚಂಚಲ ಮನಸ್ಸು, ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಆಕಸ್ಮಿಕ ಖರ್ಚು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ: ಈ ವಾರ ಪಿತ್ರಾರ್ಜಿತ ಆಸ್ತಿ ಲಭ್ಯ, ಇಷ್ಟ ವಸ್ತುಗಳ ಖರೀದಿ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕಾರ ಪ್ರಾಪ್ತಿ, ರಿಯಲ್ ಎಸ್ಟೇಟ್ ನವರಿಗೆ ಅಧಿಕ ಲಾಭ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಸ್ಥಗಿತ ಕಾರ್ಯಗಳ ಮುನ್ನಡೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ: ಈ ವಾರ ತಾಳ್ಮೆ ಅಗತ್ಯ, ಮಾತಿನ ಮೇಲೆ ಹಿಡಿತವಿರಲಿ, ವ್ಯವಹಾರದಲ್ಲಿ ದೃಷ್ಟಿ ದೋಷದಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಭೂಮಿ ಖರೀದಿ ಯೋಗ, ದಾಯಾದಿ ಕಲಹ, ದಾನ ಧರ್ಮದಲ್ಲಿ ಆಸಕ್ತಿ, ದೂರ ಪ್ರಯಾಣ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನ: ಈ ವಾರ ಮಾಡುವ ಕೆಲಸದಲ್ಲಿ ವಿಘ್ನ, ವಾದ-ವಿವಾದ, ದ್ರವ್ಯ ನಷ್ಟ, ವಿವಾಹಕ್ಕೆ ಅಡಚಣೆ, ಆರೋಗ್ಯ ಅಭಿವೃದ್ಧಿ, ವ್ಯರ್ಥ ಧನಹಾನಿ, ದಾಯಾದಿ ಕಲಹ, ಶತ್ರುಗಳಿಂದ ತೊಂದರೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ: ಈ ವಾರ ಶತ್ರುಬಾಧೆ, ಮಿತ್ರರಿಂದ ಮೋಸ, ಯಾರನ್ನು ನಂಬಬೇಡಿ, ಅಲ್ಪ ಲಾಭ, ಅಧಿಕ ಖರ್ಚು, ಪುತ್ರರಲ್ಲಿ ದ್ವೇಷ, ಕಲಹ, ಅನ್ಯ ಜನರಲ್ಲಿ ವೈಮನಸ್ಯ, ಅಲ್ಪ ಪ್ರಗತಿ, ತೀರ್ಥಯಾತ್ರೆ ದರ್ಶನ, ಅಕಾಲ ಭೋಜನ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ: ಈ ವಾರ ಹೊರದೇಶ ಪ್ರಯಾಣ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಕುಟುಂಬ ಸೌಖ್ಯ, ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯಕ್ಕೆ ಕಾಲು ಬೆನ್ನು ನೋವು, ಶುಭ ಸಮಾರಂಭಗಳಲ್ಲಿ ಭಾಗಿ, ಮನಃಶಾಂತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು: ಈ ವಾರ ಮನಃಶಾಂತಿ, ಸೇವಕರಿಂದ ಸಹಾಯ, ಮಾತಾ-ಪಿತೃಗಳ ಸೇವೆ, ವ್ಯಾಪಾರದಲ್ಲಿ ಲಾಭ, ಹಾರ್ದಿಕ ಪರಿಸ್ಥಿತಿಯಲ್ಲಿ ಚೇತರಿಕೆ, ವಿರೋಧಿಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಆಸಕ್ತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 112 Post navigation ಶ್ರೀ ಚಾಮುಂಡೇಶ್ವರಿ ತಾಯಿಯನ್ನು ನೆನೆದು ಇಂದಿನ ದಿನ ಭವಿಷ್ಯ ತಿಳಿಯಿರಿ.. ಮಹಾಶಿವನನು ನೆನೆದು ಇಂದಿನ ನಿಮ್ಮ ದಿನಭವಿಷ್ಯ ನೋಡಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಪ್ರಪಂಚದಲ್ಲಿ ಮೂರ್ಖರು ಅನೇಕ ವ್ಯಸನಗಳಿಗೆ ತುತ್ತಾಗಿಯೋ, ನಿದ್ರೆಯಿಂದಲೋ ಅಥವಾ ಕಲಹದಿಂದಲೋ ಕಾಲಹರಣವನ್ನು ಮಾಡುತ್ತಾರೆ. ಆದರೆ, 'ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್' – ಎಂದರೆ 'ಬುದ್ಧಿವಂತರು ಕಾವ್ಯಶಾಸ್ತ್ರಗಳನ್ನು ಓದುತ್ತಾ ಕಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ' ಎಂಬ ಮಾತನ್ನು ಗಮನಿಸಿದಾಗ ಕಾವ್ಯಪದದ ಜೊತೆ ಶಾಸ್ತ್ರಪದವನ್ನು ಸೇರಿಸಿ ಕಾವ್ಯವನ್ನು ಶಾಸ್ತ್ರವೆಂಬುದಾಗಿ ಘೋಷಿಸಿದ್ದಾರೆ. ಕಾವ್ಯಕ್ಕೆ ಶಾಸ್ತ್ರತ್ವವು ಹೇಗೆ ಸಮಂಜಸವಾದೀತೆಂಬುದನ್ನು ವಿಚಾರಿಸೋಣ. 'ಶಾಸನಾತ್ ತ್ರಾಣನಾತ್ ಚೈವ ಶಾಸ್ತ್ರಮಿತ್ಯಭಿಧೀಯತೇ' ಶಾಸ್ತ್ರವೆಂದರೆ 'ಹೀಗೆ ಮಾಡು, ಹೀಗೆ ಮಾಡಬೇಡ' ಎಂಬುದಾಗಿ ನಿರ್ದೇಶಿಸಿ, ಆ ನಿರ್ದೇಶನದಂತೆ ನಡೆದುಕೊಳ್ಳುವವರನ್ನು ಅಪಾಯದಿಂದ 'ತ್ರಾಣನ' ಎಂದರೆ ಕಾಪಾಡುವುದರಿಂದ 'ಶಾಸ್ತ್ರ'ವೆನಿಸುತ್ತದೆ. ಈ ಮಾತು ವೇದಗಳಿಗೆ, ಸ್ಮೃತಿಗಳಿಗೆ, ಧರ್ಮಸೂತ್ರಗಳಿಗೆ, ಗೃಹ್ಯಸೂತ್ರಗಳಿಗೆ ಇನ್ನಿತರ ತತ್ಸಂವಾದಿಗಳಾದ ಗ್ರಂಥಗಳಿಗೆ ಹೊಂದಿಕೊಳ್ಳುವ ವಿವರಣೆಯಾಗಿದೆ ವೇದಗಳಲ್ಲಿ, ' ಸತ್ಯಂ ವದ| ಧರ್ಮಂ ಚರ| ಸ್ವಾಧ್ಯಾಯಾತ್ ಮಾ ಪ್ರಮದಃ|' ಎಂದರೆ – 'ಸತ್ಯವನ್ನು ಹೇಳು, ಧರ್ಮವನ್ನು ಪರಿಪಾಲಿಸು, ಸ್ವಾಧ್ಯಾಯದಿಂದ ಚ್ಯುತನಾಗಬೇಡ,"' ಎಂಬ ಶಾಸನವಾಗಲೀ ಹಾಗೆಯೇ' ನಾಪ್ಸು ಮೂತ್ರಪುರೀಷಂ ಕುರ್ಯಾತ್, ನ ನಿಷ್ಠೀವೇತ್, ನ ವಿವಸನಃ ಸ್ನಾಯಾತ್', ' ನದಿ-ಕಲ್ಯಾಣಿಗಳಲ್ಲಿ ಮೂತ್ರ ಮಲ ವಿಸರ್ಜನೆಯನ್ನು ಮಾಡಬಾರದು, ಬಾಯಿ ಮುಕ್ಕಳಿಸಿ ಮತ್ತೆ ಅದೇ ನೀರಿಗೆ ಉಗುಳಬಾರದು, ವಸ್ತ್ರವಿಲ್ಲದೇ ಸ್ನಾನಾದಿಗಳನ್ನು ಮಾಡಬಾರದು' ಎಂಬ ನಿಷೇಧಗಳಾಗಲೀ, ಹೇರಳವಾಗಿ ಕಂಡುಬರುತ್ತವೆ. ಇನ್ನು ಗೃಹ್ಯಸೂತ್ರಗಳಲ್ಲಿ, ಮನ್ವಾದಿ ಧರ್ಮಶಾಸ್ತ್ರಗಳಲ್ಲಿ ವಿಧಿನಿಷೇಧಾತ್ಮಕವಾಗಿರುವ ಶಾಸನಗಳು ಹೇರಳವಾಗಿವೆ. ಉದಾಹರಣೆಗೆ ಧರ್ಮಸೂತ್ರಗಳಲ್ಲಿ 'ಸ್ವರ್ಗಕಾಮೋ ಯಜೇತ', ಎಂದರೆ, 'ಸ್ವರ್ಗಕ್ಕೆ ಹೋಗಬೇಕೆಂಬ ಇಚ್ಛೆಯುಳ್ಳವನು ಯಜ್ಞವನ್ನು ಮಾಡಬೇಕು', ಮತ್ತು 'ಅಹರಹಃ ಸಂಧ್ಯಾಮುಪಾಸೀತ'ಎಂದರೆ, 'ಪ್ರತಿನಿತ್ಯವೂ ಸಂಧ್ಯಾವಂದನೆಯನ್ನು ಮಾಡಬೇಕು'ಎಂಬ ಉಪದೇಶಗಳು ಹೇರಳವಾಗಿವೆ. ಆದ್ದರಿಂದ ಇವುಗಳನ್ನು ಅನುಸರಿಸುವುದರಿಂದ ನಿಷ್ಕಾಮಕರ್ಮದಿಂದ ಚಿತ್ತಶುದ್ದಿಯುಂಟಾವೇದಮೂಲದಲ್ಲಿ ಬೆಳಗುತ್ತಿರುವ ಪರಮಾತ್ಮದರ್ಶನವು ಲಭಿಸುತ್ತದೆ ಎಂಬ ಮಾತಿನಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಕಾವ್ಯಗಳು ಕೇವಲ ಮಹಾಪುರುಷರ ಕಥೆ, ರಾಜರಾಣಿಯರ ಕಥೆ ಮತ್ತು ಅವರ ವರ್ಣನೆ, ಋತುಗಳ ವರ್ಣನೆ, ನದಿ-ಬೆಟ್ಟ-ಗುಡ್ಡ-ಗಿಡ-ಮರ-ಸಮುದ್ರ-ಸಮರ ಮುಂತಾದವುಗಳ ವರ್ಣನೆಗಳಿಂದ ಕೂಡಿರುವುದಾಗಿವೆ. ಶೃಂಗಾರಾದಿನವರಸಗಳಿಂದಲೂ, ಉಪಮಾದಿ ಅಲಂಕಾರಗಳಿಂದಲೂ ರಸಿಕರಿಗೆ ಸಂತೋಷವನ್ನು ಉಂಟುಮಾಡುವ, ಇಂದ್ರಿಯಗಳ ಸುಖದಲ್ಲಿಯೇ ಸಫಲತೆಯನ್ನು ಕಾಣುವ, ಮನೋರಂಜನೆಯ ಸಾಧನಗಳಾಗಿವೆ.ಹೀಗಿರುವಾಗ,ಕಾವ್ಯಗಳಿಗೆ ಶಾಸ್ತ್ರತ್ವವು ಹೇಗೆ ಸಿದ್ಧಿಸುವುದೆಂಬ ವಾದ ವಿಚಾರಯೋಗ್ಯವಾಗಿದೆ. ಸನಾತನಾರ್ಯಮಹರ್ಷಿಗಳ ತಪಸ್ಯೆಯಲ್ಲಿ ಗೋಚರವಾದ ಪರಂಜ್ಯೋತಿಯ ಶಬ್ದರೂಪವೇ ಪ್ರಣವವಾಗಿದೆ. ಆ ಪ್ರಣವದಿಂದಲೇ ಗಾಯತ್ರೀ ಮಹಾಮಂತ್ರವೂ, ಅದರಿಂದಲೇ ಋಗ್-ಯಜುಸ್-ಸಾಮ-ಅಥರ್ವಗಳೆಂಬ ನಾಲ್ಕು ವೇದಗಳೂ, ವೇದಾಂಗಗಳೂ, ಉಪವೇದಗಳೂ, ಅರವತ್ತನಾಲ್ಕು ವಿದ್ಯೆಗಳೂ ಆವಿರ್ಭಾವವಾಗಿವೆಯೆಂಬುದು ಸರ್ವವಿದಿತ. ವಿದ-ಜ್ಞಾನೇ ಮತ್ತು ಯಾ-ಪ್ರಾಪಣೇ ಎಂಬ ಎರಡು ಧಾತುಗಳಿಂದ ನಿಷ್ಪನ್ನವಾಗಿರುವ 'ವಿದ್ಯಾ' ಎಂಬ ಪದವು 'ಭಗವಂತನನ್ನು ಹೊಂದಿಸುವುದು' ಎಂಬ ಅರ್ಥದಿಂದಲೇ ಕೂಡಿರುತ್ತದೆ. ಅರವತ್ತನಾಲ್ಕು ವಿದ್ಯೆಗಳಲ್ಲಿ 'ಕಾವ್ಯವಿದ್ಯೆ'ಯೂ ಒಂದಾಗಿದೆ. ಇದರಿಂದ ಕಾವ್ಯಗಳು ಪರಮಾತ್ಮನೆಡೆಗೆ ನಮ್ಮನ್ನು ತಲುಪಿಸುವಂತಹವು ಎಂಬುದು ಸಿದ್ಧವಾಗುತ್ತದೆ. ಅಲ್ಲದೆ, ಆಪಸ್ತಂಬಧರ್ಮಸೂತ್ರವು ಕಾವ್ಯವಿದ್ಯೆಯನ್ನು ಪರಿಚಯಿಸುವಾಗ 'ಅಥರ್ವಸ್ಯ ಶೇಷ ಇತ್ಯೇಕೇ' – 'ಕಾವ್ಯಗಳು ಅಥರ್ವವೇದದ ಶೇಷಗಳೆಂದು ಕೆಲವು ಋಷಿಗಳ ಮತ'ವೆಂಬುದನ್ನು ತಿಳಿಸುತ್ತದೆ. ವೇದಗಳಿಗೆ ಶಾಸ್ತ್ರತ್ವವು ಈಗಾಗಲೇ ಸಿದ್ಧವಾಗಿರುವುದರಿಂದ, ಸ್ವಾಭಾವಿಕವಾಗಿ ಅಥರ್ವವೇದದ ಶೇಷಭಾಗವಾಗಿರುವ ಕಾವ್ಯಗಳಿಗೂ ಶಾಸ್ತ್ರತ್ವವು ಸ್ವತಃ ಸಿದ್ಧವಾಗಿರುತ್ತದೆ. ಶ್ರೀರಂಗಮಹಾಗುರುಗಳು ಕಾವ್ಯಗಳ ಮರ್ಮವನ್ನು ತಿಳಿಸಿಕೊಡುತ್ತಾ, ' ಕಾವ್ಯಶಾಸ್ತ್ರದ ಆರಂಭ ಮತ್ತು ಅಂತ್ಯ ಪರಬ್ರಹ್ಮವೇ ಆಗಿದೆ. ವಿಷಯನಿರೂಪಣೆಗಿಂತಲೂ ಕವಿಯ ಮನೋಧರ್ಮ ಕಾವ್ಯದ ಉದ್ದಗಲಕ್ಕೂ ಹೇಗೆ ಹರಿದಿದೆ ಎಂಬುವುದೇ ಕಾವ್ಯದ ಜೀವಾಳ. ಕವಿಯು ಹೊರಗೆ ನೋಡಿ ಏನನ್ನು ಬರೆದನೋ ಅದು ಒಳಜೀವನಕ್ಕೂ ಅನ್ವಯವಾಗುವಂತಿರಬೇಕು. ಆಧಿಭೌತಿಕ-ಆಧಿದೈವಿಕ-ಆಧ್ಯಾತ್ಮಿಕ-ತಾಪತ್ರಯಗಳನ್ನು ನಿವಾರಿಸುವ ಶಕ್ತಿ ಕಾವ್ಯಕ್ಕಿದೆ. ಪುರುಷಾರ್ಥಗಳಾದ ಧರ್ಮ- ಅರ್ಥ-ಕಾಮ- ಮೋಕ್ಷಗಳನ್ನೂ ಕೊಡುವ ಶಕ್ತಿ ಕಾವ್ಯಕ್ಕಿದೆ' ಎಂಬ ಮಾತನ್ನು ಹೇಳುತ್ತಿದ್ದರು. ವೇದಾದಿಸರ್ವಶಾಸ್ತ್ರಗಳನ್ನು ಅವುಗಳ ಮರ್ಮವರಿತ ಗುರುಮುಖೇನ ಅಧ್ಯಯನ ಮಾಡಿದವರಿಗೆ ವೇದಾರ್ಥಗಳು ಮತ್ತದರ ಫಲಗಳು ಸ್ವಯಂ ಪ್ರಕಟವಾಗುವಂತೆ, ಕಾವ್ಯಗಳನ್ನೂ ಕೂಡ ಅವುಗಳ ಮರ್ಮವರಿತ ಸದ್ಗುರುಗಳ ಮುಖೇನ ಅಧ್ಯಯನ ಮಾಡಿದವರಿಗೂ ಈ ಫಲಗಳು ಲಭಿಸುವುದರಲ್ಲಿ ಸಂದೇಹವೇ ಇಲ್ಲ. ಭೌತಿಕಕ್ಷೇತ್ರದಲ್ಲಿ ಅಂದರೆ ಬಾಹ್ಯಜೀವನದಲ್ಲಿ ಶುದ್ಧತೆಯನ್ನು ಕಾಪಾಡಿಕೊಂಡು ಇಂದ್ರಿಯಸುಖವನ್ನು ಅನುಭವಿಸುವುದಕ್ಕೆ ಬೇಕಾದ ಶಿಕ್ಷಣವು ಕಾವ್ಯಗಳ ಅಧ್ಯಯನದಿಂದ ಲಭಿಸುತ್ತದೆ. ಹಾಗೆಯೇ, ಒಳಬದುಕಿಗೆ ಬೇಕಾದ ಮನಸ್ಸಿನ ಸಿದ್ಧತೆ ಮತ್ತು ಸೋಪಾನಗಳನ್ನು ಕಾವ್ಯಗಳು ಒದಗಿಸುತ್ತವೆ. ಕಾವ್ಯಗಳಲ್ಲಿಯೂ 'ಇದನ್ನು ಮಾಡು, ಇದನ್ನು ಮಾಡಬೇಡ'ವೆಂಬ ವಿಧಿನಿಷೇಧಗಳು ವೇದಾದಿಗಳಲ್ಲಿರುವಂತೆ ನೇರವಾಗಿ ಹೇಳಿರದಿದ್ದರೂ, ಅನೇಕ ದೃಷ್ಟಾಂತಗಳ ಮೂಲಕ,ಕಥೆಗಳ ಮೂಲಕ, ಸಂದರ್ಭಗಳ ಮೂಲಕ, ಪಾತ್ರಗಳ ನಡೆ-ನುಡಿಗಳ ಮೂಲಕ, ಕೆಲವೊಮ್ಮೆ ಅನ್ಯೋಪದೇಶಗಳ ಮೂಲಕ, ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಸೂಕ್ಷ್ಮವಾಗಿ ಉಪದೇಶಿಸಿರುವುದನ್ನು ಮತ್ತು ಈ ರೀತಿಯಾದ ಉಪದೇಶಗಳು ಕಾವ್ಯದ ಉದ್ದಗಲಕ್ಕೂ ಹಾಸುಹೊಕ್ಕಾಗಿರುವುದನ್ನು ಕಾಣುತ್ತೇವೆ. ವಾಲ್ಮೀಕಿ-ವ್ಯಾಸ-ಕಾಳಿದಾಸಾದಿಗಳ ಕಾವ್ಯಗಳಲ್ಲಿ ಬರುವ ವರ್ಣನೆಗಳೂ ಕೂಡ ಸಂಸ್ಕಾರವಂತನಾದ ಸಹೃದಯನ ಮನಸ್ಸನ್ನು ಮುಟ್ಟಿ ಎಲ್ಲವನ್ನೂ ಮರೆತು ಒಂದು ಕ್ಷಣ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವಂತೆ ಮಾಡುತ್ತವೆ ಎಂಬುದನ್ನು ಅದನ್ನನುಭವಿಸಿದ ಸಹೃದಯ ರಸಿಕರ ಅನುಭವದ ಮಾತಾಗಿದೆ. ಕಾವ್ಯಗಳನ್ನು ಓದಿ ಆಸ್ವಾದಿಸುವ ಸಹೃದಯರಿದ್ದರೆ ಅದರಿಂದ ಕವಿಗೂ ಸಂತೋಷ. 'ಅರಸಿಕೇಷು ಕವಿತ್ವನಿವೇದನಂ ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ', ಎಂದರೆ, 'ಕವಿಯ ಹೃದಯಕ್ಕೆ ಸ್ಪಂದಿಸದವರ ಮುಂದೆ ಕವಿತ್ವನಿವೇದನವನ್ನು ಮಾಡುವ ಕರ್ಮವನ್ನು ನನ್ನ ಹಣೆಯಲ್ಲಿ ಬರೆಯಬೇಡ, ಬರೆಯಬೇಡ, ಬರೆಯಬೇಡ, ಭಗವಂತ' ಎಂಬ ಕೂಗು ಕವಿಯ ಹೃದಯಾಳದ ಪ್ರಾರ್ಥನೆಯಾಗಿದೆ.ಆದ್ದರಿಂದಲೇ, ಧರ್ಮಾರ್ಥಕಾಮಮೋಕ್ಷಾಣಾಂ ವೈಚಕ್ಷಣ್ಯಂ ಕಲಾಸು ಚ | ಕರೋತಿ ಕೀರ್ತಿಂ ಪ್ರೀತಿಂ ಚ ಸಾಧು ಕಾವ್ಯನಿಷೇವಣಮ್ || ಎಂಬ ಮಾತಿನಂತೆ, 'ಕಾವ್ಯಗಳು ಧರ್ಮಾರ್ಥಕಾಮಮೋಕ್ಷಗಳನ್ನೂ, ಕಲೆಗಳಲ್ಲಿ ನೈಪುಣ್ಯವನ್ನೂ, ಕೀರ್ತಿಯನ್ನೂ, ಪ್ರೀತಿಯನ್ನೂ ಉಂಟುಮಾಡುವುದರಿಂದ ಕಾವ್ಯಗಳೆಂಬ ಪುಣ್ಯನದಿಗಳಲ್ಲಿ ಅವಗಾಹನೆ ಸಾಧು'ವೆಂಬ ಮಾತು ಪ್ರಸಿದ್ಧವಾಗಿದೆ.
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗೀತಾ' ಮೂಲಕ ಖ್ಯಾತಿ ಗಳಿಸಿರುವ ನಟಿ ಭವ್ಯಾ ಗೌಡ ಬಗ್ಗೆ ನಿಮಗೆ ಗೊತ್ತಿರದ ಒಂದಷ್ಟು ವಿಷಯಗಳು ಇಲ್ಲಿವೆ. sowmya malnad ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗೀತಾ' ಮೂಲಕ ಖ್ಯಾತಿ ಗಳಿಸಿರುವ ನಟಿ ಭವ್ಯಾ ಗೌಡಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಭವ್ಯಾ ಗೌಡ ನಟನಾ ಲೋಕಕ್ಕೆ ಬರುವುದಕ್ಕೂ ಮುನ್ನ ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದಂರಂತೆ. ಅದಕ್ಕಾಗಿ ಅರ್ಜಿಯನ್ನೂ ಕೂಡ ಹಾಕಿದ್ದರಂತೆ. ಅಷ್ಟರಲ್ಲಿ ಟಿಕ್​ಟಾಕ್​ನಲ್ಲಿ ಲಿಪ್ ಸಿಂಕ್ ವೀಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದ ಭವ್ಯಾ ಗೌಡ ಅವರಿಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬರಲು ಶುರುವಾಯಿತು. ನಂತರ ಅವರು 'ಗೀತಾ' ಧಾರಾವಾಹಿಯಲ್ಲಿ 'ಗೀತಾ' ಪಾತ್ರಕ್ಕೆ ಆಯ್ಕೆಯಾದರು. ಈ ಸೀರಿಯಲ್ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು. ಮೂಲತಃ ಬೆಂಗಳೂರಿನವರಾದ ಭವ್ಯಾ ಗೌಡ ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್, ನಟಿ ಅಮೂಲ್ಯ ಅವರ ಕಸಿನ್ ತಂಗಿ. ಇದರ ಜೊತೆಗೆ ನಟಿ ಭವ್ಯಾ ಗೌಡ 'ಡಿಯರ್ ಕಣ್ಮಣಿ' ಸಿನಿಮಾ ಮುಖಾಂತರ ಬೆಳ್ಳಿ ತೆರೆಗೆ ಕೂಡ ಕಾಲಿಡಲು ಸಜ್ಜಾಗಿದ್ದಾರೆ. ವಿಸ್ಮಯಾ ಗೌಡ ನಿರ್ದೇಶನ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ಕಿಶನ್ ಹಾಗೂ ಸಾತ್ವಿಕಾ ಜೊತೆ ಭವ್ಯಾ ಗೌಡ ಕಾಣಿಸಿಕೊಳ್ಳಲಿದ್ದಾರೆ.
ಮಡಿಕೇರಿ, ಆ. ೧೬: ಮಂಗಳೂರಿನಿAದ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದ ಯುವಕರ ಮೇಲೆ ಅಪರಿಚಿತರು ಹಲ್ಲೆ ಮಾಡಿದ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಹೊರವಲಯದ ಮಾಂದಲಪಟ್ಟಿಗೆ ತೆರಳುವ ನಡುವಿನ ನಂದಿಮೊಟ್ಟೆ ಜಂಕ್ಷನ್‌ನಲ್ಲಿ ಘಟನೆ ಸಂಭವಿಸಿದ್ದು, ಯುವಕರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಏನಿದು ಪ್ರಕರಣ.? : ಮಂಗಳೂರು ನಗರದ ಮೂವರು ಯುವಕರು ಹಾಗೂ ಈರ್ವರು ಯುವತಿಯರು ಪ್ರವಾಸಕ್ಕೆಂದು ಪ್ರವಾಸಿಗರ ಮೇಲೆ ಗುಂಪು ಹಲ್ಲೆ - ಪ್ರಕರಣ ದಾಖಲು (ಮೊದಲ ಪುಟದಿಂದ) ಪೋಷಕರ ಅನುಮತಿ ಪಡೆದು ಮಡಿಕೇರಿಗೆ ಆಗಮಿಸಿದ್ದಾರೆ. ಮಾಂದಲಪಟ್ಟಿಗೆ ತೆರಳಿ ವಾಪಸ್ ಬರುವ ಸಂದರ್ಭ ಅಪರಿಚಿತರು ಪ್ರವಾಸಿಗರಿದ್ದ ವಾಹನ ತಡೆದು ಅನ್ಯಕೋಮಿನ ಯುವತಿಯರನ್ನು ಕರೆತಂದಿದ್ದಾರೆ ಎಂಬ ವಿಷಯ ಮುಂದಿಟ್ಟು ಹಲವರು ಸೇರಿ ಯುವಕರ ಮೇಲೆ ಗುಂಪು ಹಲ್ಲೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು , ಮಂಗಳೂರಿನ ನಂದ ಕಿಶನ್, ಸಮನ್ ಫಾಜೀದ್, ಸಂಶೀರ್ ಸೇರಿ ಇಬ್ಬರು ಯುವತಿಯರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರವಾಸಿಗರು ನಾವುಗಳು ಉತ್ತಮ ಸ್ನೇಹಿತರಾಗಿದ್ದು, ಮನೆಯವರ ಅನುಮತಿಯೊಂದಿಗೆ ಬಂದಿದ್ದೇವೆ. ಅಲ್ಲಿದ್ದವರು ಅಪಾರ್ಥ ಮಾಡಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಹಲ್ಲೆ ಮಾಡಿದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಡಿವೈಎಸ್ ಪಿ ಗಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಕಾರ್ಪೊರೇಟ್ ಪ್ರಸ್ತುತ ಇಡೀ ಜಗತ್ತನ್ನು ಆಳ್ವಿಕೆ ಮಾಡುತ್ತಿರುವ ನೂತನ ವಸಾಹತುಶಾಹಿ ವ್ಯವಸ್ಥೆ (new colonial system). ಇಂದು ಇಡೀ ವಿಶ್ವವನ್ನು ಈ ಹೊಸ ವ್ಯವಸ್ಥೆ ಪರೋಕ್ಷವಾಗಿ ಆಳುತ್ತಿದೆ. ಒಂದರ್ಥದಲ್ಲಿ ಶಬ್ಧವಿಲ್ಲದ ಯುದ್ಧ ನಡೆಯುತ್ತಿದೆ. 1992ರಲ್ಲಿ ಅಂದಿನ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಮುಕ್ತ ಆರ್ಥಿಕ ವ್ಯವಸ್ಥೆಗೆ ಅಂಗೀಕಾರ ನೀಡಿದ ನಂತರ ಇಂತಹ ನೂತನ ವಸಾಹತುಶಾಹಿಗೆ ಭಾರತವೂ ಹೊರತಾಗಿಲ್ಲ. ಹೆಚ್ಚು ಓದಿದ ಸ್ಟೋರಿಗಳು ಮೈಸೂರು; ಡಿಸೆಂಬರ್‌ 8-15ರವರೆಗೆ ರಂಗಾಯಣದ ಬಹುರೂಪಿ ಕಾರ್ಯಕ್ರಮ ಅಕ್ರಮ ಹಣ ವರ್ಗಾವಣೆ; ಛತ್ತೀಸ್‌ಗಢ ಸಿಎಂ ಪಿಎ ಬಂಧನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಅಡಿಯಲ್ಲಿ ಇಂದು ಭಾರತದಲ್ಲಿ ನೂರಾರು ವಿದೇಶಿ ಕಂಪೆನಿಗಳು ಬಂಡವಾಳ ಹೂಡಿವೆ ಹಾಗೂ ದೊಡ್ಡ ದೊಡ್ಡ ಕಂಪೆನಿಗಳನ್ನು-ಕಾರ್ಖಾನೆಗಳನ್ನು ಆರಂಭಿಸಿವೆ. ಅಲ್ಲದೆ, ಇಲ್ಲಿನ ನೆಲ-ಜಲ ಮತ್ತು ಸಂಪನ್ಮೂಲಗನ್ನು ಬಳಸಿ ಸಾವಿರಾರು ಕೋಟಿ ಹಣವನ್ನು ಲಾಭವಾಗಿ ಗಳಿಸುತ್ತಿವೆ. ಆದರೆ, ಹೀಗೆ ಲಾಭ ಗಳಿಸುವ ಕಾರ್ಪೊರೇಟ್ ಕಂಪೆನಿಗಳಿಗೆ ಹತ್ತಾರು ಜವಾಬ್ದಾರಿಗಳೂ ಇವೆ. ಮುಕ್ತ ಆರ್ಥಿಕತೆಯ ಅಡಿಯಲ್ಲಿ ಭಾರತ ಯಾವ ದೇಶದಲ್ಲಿ ಬಂಡವಾಳ ಹೂಡಿದೆ ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ, ಭಾರತದಲ್ಲಿ ಬಂಡವಾಳ ಹೂಡಲು ಮುಂದಾಗುವ ವಿದೇಶಿ ಕಂಪೆನಿಗಳಿಗೇನು ಕೊರತೆ ಇಲ್ಲ. ಇಲ್ಲಿನ ಸಂಪನ್ಮೂಲಗಳನ್ನು ಅನುಭವಿಸುತ್ತಿರುವ ಕಾರ್ಪೊರೇಟ್ ಕಂಪೆನಿಗಳು ಈ ನೆಲದ ಸಾಮಾಜಿಕ ಜವಾಬ್ದಾರಿಯನ್ನೂ ಹೊರಬೇಕು ಎಂಬುದು ಪ್ರಜಾಪ್ರಭುತ್ವ ಸಮಾಜವಾದಿ ಜಾತ್ಯಾತೀತ ಗಣರಾಜ್ಯ ದೇಶದ ಕಾನೂನು ಅಥವಾ ಆಶಯ ಹೇಳುತ್ತದೆ. ಸಮಾಜದ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದವರು ಆ ಸಮಾಜಕ್ಕೆ ಅಲ್ಪವನ್ನಾದರೂ ಮರಳಿ ನೀಡುವ ಸಂತ್ಸಂಪ್ರದಾಯ ಭಾರತಕ್ಕೆ ಹೊಸದೇನಲ್ಲ. ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಜಮ್ಷೆಡ್ಪುರದ ಟಾಟಾ ಐರನ್ ಅಂಡ್ ಸ್ಟೀಲ್ ಕಂಪೆನಿ ಲಿಮಿಟೆಡ್ (ಈಗಿನ ಟಾಟಾ ಸ್ಟೀಲ್) ನೂರು ವರ್ಷಗಳಷ್ಟು ಹಿಂದೆಯೇ ಸಮಾಜಿಕ ಜವಾಬ್ದಾರಿಯನ್ನು ಸ್ವಯಂ ಪ್ರೇರಣೆಯಿಂದ ನಿರ್ವಹಿಸಿ ಇಡೀ ದೇಶಕ್ಕೆ ಮಾದರಿ ಎನಿಸಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ದೇಶದಲ್ಲಿ ಹೊಸದಾಗಿ ರಚಿಸಲಾದ ಶಾಸನವೇ “ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ” ಶಾಸನ. ಅಸಲಿಗೆ ಈ ಶಾಸನದ ಉದ್ದೇಶ-ಆದರ್ಶಗಳೇನು? ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಜವಾಬ್ದಾರಿ-ಕರ್ತವ್ಯಗಳೇನು? ನಿಜಕ್ಕೂ ಈ ಶಾಸನ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ. ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ ಶಾಸನ ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ ಶಾಸನ ದಶಕಗಳಿಂದ ಇದೆಯಾದರೂ ಇದಕ್ಕೆ ಹೆಚ್ಚಿನ ಮೌಲ್ಯ ಇರಲಿಲ್ಲ. ಅಥವಾ ಇದನ್ನು ಪರಿಣಾಮಕಾರಿಯಾಗಿ ಪಾಲಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿತ್ತು ಎನ್ನಬಹುದು. Corporate Social Responsibility (CSR) ಅರ್ಥಾತ್ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಭಾರತದಲ್ಲಿ ಸಾಂಪ್ರದಾಯಿಕವಾಗಿ ಜನೋಪಕಾರಿ ಚಟುವಟಿಕೆಯ ರೂಪದಲ್ಲಿದ್ದು ಅಷ್ಟಾಗಿ ಚರ್ಚೆಗೆ ಒಳಗಾಗದ ವಿಷಯವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಸ್ವರೂಪ ಬದಲಾಗಿದೆ. ಈ ಶಾಸನ ನೆಪಮಾತ್ರಕ್ಕೆ ಇದ್ದಾಗ್ಯೂ 2014 ಫೆಬ್ರವರಿ 27 ರಂದು ಪ್ರಕಟಗೊಂಡ ಹೊಸ Companies ACT ಈ ಶಾಸನಕ್ಕೆ ಮತ್ತಷ್ಟು ಬಲ ತಂದಿತ್ತು. ಈ Companies ACT 2013 ಸೆಕ್ಷನ್ 35 ಭಾರತದಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯನ್ನು ಕಡ್ಡಾಯಗೊಳಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತ್ತು. ಈ ಶಾಸನ 2014ರ ಏಪ್ರಿಲ್ ಮೊದಲ ದಿನದಿಂದ ಜಾರಿಗೆ ಬಂದಿದೆ. ಇದರ ಪ್ರಕಾರ 500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಬಂಡವಾಳ ಹೊಂದಿರುವ-ವಾರ್ಷಿಕ 1000 ಕೋಟಿ ರೂ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವ-ವಾರ್ಷಿಕ 5 ಕೋಟಿ ರೂ ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಗಳಿಸುವ ಕಂಪೆನಿಗಳು ತಮ್ಮ ನಿವ್ವಳ ಲಾಭದ ಶೇ.2ರಷ್ಟು ಹಣವನ್ನು CSR ಚಟುವಟಿಕೆಗಳಿಗೆ ವ್ಯಯಿಸಬೇಕು. ಅಲ್ಲದೆ, ಇದಕ್ಕಾಗಿ ಕಂಪೆನಿಯ ಆಡಳಿತ ಮಂಡಳಿಯು ಕನಿಷ್ಟ ಓರ್ವ ಸ್ವತಂತ್ರ್ಯ ನಿರ್ದೇಶಕರೂ ಸೇರಿದಂತೆ ಮೂರು ಅಥವಾ ಹೆಚ್ಚಿನ ನಿರ್ದೇಶಕರನ್ನೊಳಗೊಂಡ CSR ಕಮಿಟಿಯನ್ನು ನೇಮಿಸಬೇಕು ಎನ್ನುತ್ತದೆ ಈ ಶಾಸನ. ಏನಿದು CSR ಚಟುವಟಿಕೆ?: ವಾರ್ಷಿಕ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಗಳಿಸಲು ಕಾರ್ಪೊರೇಟ್ ಕಂಪೆನಿಗಳು ತಮ್ಮ ಲಾಭದ ಶೇ.2ರಷ್ಟು ಹಣವನ್ನು ಸಾಮಾಜಿಕ ಕೆಲಸಕ್ಕೆ ಬಳಸಲೇಬೇಕು ಎನ್ನುತ್ತದೆ Companies ACT 2013 ಸೆಕ್ಷನ್ 135. ಭಾರತದಲ್ಲಿ ನೂರಾರು ಕಾರ್ಪೊರೇಟ್ ಕಂಪೆನಿಗಳು ಇವೆ. ಈ ಪೈಕಿ ಕಳೆದ ವರ್ಷ ಅತಿಹೆಚ್ಚು ಲಾಭ ಗಳಿಸಿದ TOP-10 ಕಂಪೆನಿಗಳ ಪಟ್ಟಿಯನ್ನು ಸ್ವತಃ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಕಳೆದ ವರ್ಷ ಬಿಡುಗಡೆ ಮಾಡಿದೆ. ಈ ಮಾಹಿತಿಯ ಪ್ರಕಾರ ಕಳೆದ ವರ್ಷ ಕೇವಲ ಈ 10 ಕಂಪೆನಿಗಳು ಈ ದೇಶದಲ್ಲಿ ಗಳಿಸಿರುವ ಲಾಭದ ಪ್ರಮಾಣ ಮಾತ್ರ 223.2 ಬಿಲಿಯನ್ ಡಾಲರ್. ಅಂದರೆ ಉಳಿದ ಕಂಪೆನಿಗಳ ಲಾಭವೂ ಸೇರಿದಂತೆ ಒಂದು ವರ್ಷಕ್ಕೆ CSR FUND ಅಡಿಯಲ್ಲಿ ಸಾಮಾಜಿಕ ಕಾರ್ಯಕ್ಕೆ ಸಂಗ್ರಹವಾಗಬೇಕಾದ ಹಣ ಎಷ್ಟು? ಎಂಬುದನ್ನು ನೀವೆ ಊಹಿಸಿಕೊಳ್ಳಿ. ಹೀಗೆ ಸಂಗ್ರಹವಾಗುವ ಹಣವನ್ನು ದೇಶದ ಶಿಕ್ಷಣ, ವೈದ್ಯಕೀಯ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಳಸಬೇಕು ಎಂಬುದನ್ನೂ ಸಹ ಈ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಲಾಭದಿಂದ ಸಂಗ್ರಹಿಸುವ ಶೇ.2 ರಷ್ಟು ಹಣದಲ್ಲಿ ಇಡೀ ದೇಶದಲ್ಲಿರುವ ಎಲ್ಲಾ ಸರ್ಕಾರ ಶಾಲೆಗಳನ್ನು ಹೊಸದಾಗಿ ನಿರ್ಮಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಬಹುದು, ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರೂ ನಾಚುವಂತೆ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಬಹುದು ಎನ್ನುತ್ತವೆ ಅಂಕಿಅಂಶಗಳು. ಆದರೆ, ಇವೆಲ್ಲಾ ಈ ದೇಶದಲ್ಲಿ ಸಾಧ್ಯವಾಗಿದೆಯಾ? ಎಂದು ಹುಡುಕುತ್ತಾ ಹೋದರೆ ಹತ್ತಾರು ಹುಳುಕುಗಳು ಕಾಣಿಸಿಕೊಳ್ಳುತ್ತವೆ. ಕಾರ್ಪೊರೇಟ್ ಸಾಲಮನ್ನಾ ಎಂಬ ಗಿಮಿಕ್ CSR FUND ಅಡಿಯಲ್ಲಿ ಕಾರ್ಪೊರೇಟ್ ಕಂಪೆನಿಗಳಿಂದ ಸಾಮಾಜಿಕ ಕಾರ್ಯಕ್ಕೆ ವರ್ಷಕ್ಕೆ ಸಾವಿರಾರು ಕೋಟಿ ಸಂದಾಯವಾಗಬೇಕು. ಆದರೆ, ಈ ಹಣವನ್ನು ಸಂಗ್ರಹಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎನ್ನಲಾಗುತ್ತಿದೆ. ಈ ನಡುವೆ ಕಾರ್ಪೋರೇಟ್ ಕಂಪೆನಿಗಳು ನಷ್ಟದಲ್ಲಿವೆ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಮನ್ನಾ ಮಾಡಿರುವ ಕಾರ್ಪೊರೇಟ್ ಸಾಲ ಮಾತ್ರ 1.8 ಲಕ್ಷ ಕೋಟಿ ಎಂದರೆ ಪರಿಸ್ಥಿತಿಯನ್ನು ನೀವೆ ಊಹಿಸಬಹುದು. ನೂರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸಹ ರೈತರ ಸಾಲವನ್ನು ಮನ್ನಾ ಮಾಡಲು ಹಿಂದೂ ಮುಂದೂ ನೋಡುವ ಇದೇ ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪೆನಿಗಳ ಸಾಲವನ್ನು ಅನಾಯಾಸವಾಗಿ ಮನ್ನಾ ಮಾಡುತ್ತದೆ ಎಂದಾದರೆ ಈ ದೇಶದ ವ್ಯವಸ್ಥೆ ಮತ್ತು ಪರಿಸ್ಥಿತಿ ಯಾವ ಹಂತದಲ್ಲಿದೆ ಎಂಬುದನ್ನು ಮನಗಾಣಬಹುದು. ಇನ್ನೂ ನಿಜಕ್ಕೂ ಕಾರ್ಪೊರೇಟ್ ಕಂಪೆನಿಗಳು ಸಮಾಜಿಕ ಕಾರ್ಯಕ್ಕೆ ಹಣ ಖರ್ಚು ಮಾಡಿವೆಯೇ? ಎಂಬ ಪ್ರಶ್ನೆಗೆ ಉತ್ತರವನ್ನು ನೀವೆ ಹುಡುಕಿಕೊಳ್ಳಿ. ಖಾಸಗಿ ಲಾಭಿ: ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯನ್ನು ಲಾಭಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಕಾನೂನು ಹೇಳುತ್ತವೆ. ಆದರೆ, ವಿಪರ್ಯಾಸ ನೋಡಿ ಭಾರತದ ಮಟ್ಟಿಗೆ ಇಂದಿನ ದಿನಗಳಲ್ಲಿ ಅತ್ಯಂತ ಯಶಸ್ವಿ ಉದ್ಯಮ ಎಂದರೆ ಶಿಕ್ಷಣ ಮತ್ತು ಆರೋಗ್ಯ ವಿಭಾಗ. ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲೂ ಮುಕ್ತ ವಿದೇಶ ಹೂಡಿಕೆಗೆ ಅವಕಾಶ ಕಲ್ಪಿಸಿರುವುದು ಈ ಉದ್ಯಮ ಇನ್ನಷ್ಟು ಬೆಳೆಯಲು ಸಹಕಾರಿಯಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ವರ್ಷವೊಂದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಮಾಡಿಕೊಳ್ಳುವ ಲಾಭ ಲಕ್ಷಾಂತರ ಕೋಟಿಯನ್ನು ದಾಟುತ್ತಿದೆ. 2016ರ ಅಂಕಿಅಂಶದ ಪ್ರಕಾರ ಭಾರತದಲ್ಲಿ TOP-10 ಆಸ್ಪತ್ರೆ ಒಕ್ಕೂಟಗಳು ಒಂದು ವರ್ಷಕ್ಕೆ ಗಳಿಸಿರುವ ಲಾಭ 163 ಮಿಲಿಯನ್ ಅಮೆರಿಕನ್ ಡಾಲರ್. ಈ ಪ್ರಮಾಣ 2019ರ ವೇಳೆಗೆ ಶೇ.30 ರಷ್ಟು ಅಧಿಕವಾಗಿದೆ ಎನ್ನಲಾಗುತ್ತಿದೆ. ಇನ್ನೂ ಶಿಕ್ಷಣ ಸಂಸ್ಥೆಯ ಲಾಭ 200 ಮಿಲಿಯನ್ ಡಾಲರ್ ವ್ಯವಹಾರವನ್ನು ದಾಟುತ್ತಿದೆ ಎನ್ನುತ್ತಿವೆ ಅಧಿಕೃತ ಮಾಹಿತಿಗಳು. ಖಾಸಗಿ ವಲಯದಲ್ಲಿ ಶಿಕ್ಷಣ ಹಾಗೂ ಆಸ್ಪತ್ರೆ ಕ್ಷೇತ್ರಗಳು ಈ ಪ್ರಮಾಣದ ಲಾಭ ಗಳಿಸುತ್ತಿರುವ ಕಾರಣದಿಂದಲೇ ಇಂದು ಖಾಸಗಿ ಲಾಭಿ ಅಧಿಕವಾಗಿದೆ. ಪರಿಣಾಮ ಸಾರ್ವಜನಿಕ ವಲಯದಲ್ಲಿ ಸೇವೆ ಎಂದೇ ಪರಿಗಣಿಸಲಾಗಿರುವ ಸರ್ಕಾರಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಲಭ್ಯಗಳು ಇಲ್ಲದೆ ಇಂದು ಹಳ್ಳಹಿಡಿದಿವೆ. ಇದರ ಹಿಂದೆ ಖಾಸಗಿ ಲಾಭಿ ಇಲ್ಲ ಎಂದು ಹೇಳುವಷ್ಟು ಮತ್ತು ಅದನ್ನು ನಂಬುವಷ್ಟು ಮೂರ್ಖರಲ್ಲ ಭಾರತೀಯರು. ಇನ್ನೂ ಇದೇ ಕಾರಣಕ್ಕೆ CSR FUND ಕೂಡ ಸರಿಯಾಗಿ ಸಂಗ್ರಹಿಸಲಾಗುತ್ತಿಲ್ಲ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.
ಸರ್ವವಿಧ ಸೊಗಸು ಸಮೃದ್ಧಿಗಳ ಸಾಲುಸಾಲಿನ ಸಂಭ್ರಮಗಳಿಗೆ ಮತ್ತೊಂದು ಹೆಸರೇ ಭಾರತೀಯ ಸಂಸ್ಕೃತಿ. ಪ್ರಪಂಚದಲ್ಲಿಯೇ ಮೊತ್ತ ಮೊದಲಿಗೆ ಭಗವಂತನನ್ನು ಬೆಳಕೆಂಬುದಾಗಿ ಕಂಡು, - "ತಮಸೋ ಮಾ ಜ್ಯೋತಿರ್ ಗಮಯ" ಎಂದು ಕತ್ತಲೆಯಿಂದ ಬೆಳಕಿನತ್ತ ಸಾಗುವ ಪರಿಯನ್ನು ಸಹಸ್ರಾರು ಸಂವತ್ಸರಗಳಿಂದಲೂ ಸಾರಿಕೊಂಡು ಬಂದಿರುವ ಸರ್ವಮೂಲ-ಸಂಸ್ಕೃತಿಯಿದು. ಹೊರಬೆಳಕನ್ನು ಒಳಬೆಳಕಿಗೆ ದಾರಿದೀಪವಾಗಿಸಿದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ಎಷ್ಟಾದರೂ 'ಭಾರತ' ಎಂಬಲ್ಲಿಯ 'ಭಾ' ಎಂದರೇ ಬೆಳಕೆಂಬ ಅರ್ಥವಲ್ಲವೆ? ದೀಪಕ್ಕೆಂದೇ ಇರುವ ಹಬ್ಬದ ಹೆಗ್ಗಳಿಕೆಯನ್ನು ಹಂಚಿಕೊಳ್ಳೋಣ, ಬನ್ನಿ. ನಾನಾ ಪ್ರಶ್ನೆಗಳು ಏನಿದೀ "ಹಬ್ಬ"? ಇದೇಕಿಷ್ಟು ಹಬ್ಬಗಳು? ಇಷ್ಟು ದೇವತೆಗಳು? - ಎಂಬ ಪ್ರಶ್ನೆಗಳಲ್ಲದೆ, ಈ ಹಬ್ಬ ಎಷ್ಟು ಪ್ರಾಚೀನ? ಇದರ ಆಚರಣೆಗಳು ಎಲ್ಲಿ ಹೇಗೆ? ಇವಕ್ಕೆ ಹಿನ್ನೆಲೆಯಾದ ಪೌರಾಣಿಕ ಕಥೆಗಳೇನು? ಅವುಗಳ ತತ್ತ್ವ-ಮಹತ್ತ್ವಗಳೇನು? ಇವನ್ನು ಆಚರಿಸದ ಹಿಂದುಗಳೂ ಉಂಟೆ? – ಎಂಬೀ ಕೆಲವು ಪ್ರಶ್ನೆಗಳಿಗೆ ಸಂಕ್ಷೇಪವಾದ ಉತ್ತರಗಳನ್ನು ಕೊಡಲು ಒಂದು ಯತ್ನವಿಲ್ಲಿದೆ. ಆವಲಿ(ಅಥವಾ ಆವಲೀ)ಯೆಂದರೆ 'ಸಾಲು'. ದೀಪಗಳ ಆವಲಿಯೇ ದೀಪಾವಲಿ. ಭಾರತೀಯರ ಹಬ್ಬಗಳ ಸಾಲಿನಲ್ಲಿ ಈ ದೀಪಗಳ ಸಾಲುಗಳ ಹಬ್ಬ ಹಿರಿದಾದ ಹಬ್ಬವೇ ಸರಿ. ವ್ಯಾಪ್ತಿ ಜೈನರು, ಸಿಕ್ಖರು, ಬೌದ್ಧರು ಸಹ ಆಚರಿಸುವ ಹಬ್ಬವಿದು. ಸಿಕ್ಖ-ಜೈನ-ಬೌದ್ಧರೂ ವಾಸ್ತವವಾಗಿ ಹಿಂದುಗಳೇ ಆಗಿರುವುದರಿಂದ, ಹಿಂದುಗಳೆಲ್ಲರ ಹಬ್ಬವೇ ಈ ದೀಪಾವಳಿ. ಕನ್ನಡದಲ್ಲೇ ಇದರ ಬೇರೆ ಬೇರೆ ಅಂಗಗಳಿಗೆ ಹಟ್ಟಿಯ ಹಬ್ಬ, ಲಕ್ಕವ್ವನ ಪೂಜೆ, ಭಾವಬಿದಿಗೆ, ಅಕ್ಕನ ತದಿಗೆ, ಅಳಿಯನ ಹಬ್ಬ ಎಂದು ಮುಂತಾಗಿ ಹೆಸರುಗಳುಂಟು. ಭಾಈದೂಜ-ಭಾಉಬೀಜ-ಭಾಈತಿಲಕ, ವಿಶ್ವಕರ್ಮಪೂಜಾಗಳಲ್ಲದೆ, ಸುಖಸುಪ್ತಿಕಾ-ಸುಖರಾತ್ರಿ-ಯಕ್ಷರಾತ್ರಿಗಳೂ, ಕೌಮುದೀಮಹೋತ್ಸವ, ಧನ್ತೇರಸ್, ಧನತ್ರಯೋದಶೀ, ನರಕಚತುರ್ದಶೀ, ಬಲಿಪಾಡ್ಯಮೀ-ಬಲಿಪ್ರತಿಪದಾ-ವೀರಪ್ರತಿಪದಾ- ದೀಪಪ್ರತಿಪದಾ, ಹಾಗೂ ಭಗಿನೀದ್ವಿತೀಯಾ-ಸೋದರಬಿದಿಗೆ - ಎಂಬೀ ಅಭಿಧಾನಗಳೂ ಈ ಹಬ್ಬಗಳ ಸಾಲಿನಲ್ಲಿ ಅನ್ವಿತ. ೧೦ ದಿನಗಳ ದಸರಾ ಮುಗಿದು ೨೦ ದಿನಗಳಾದ ಮೇಲೆ ಬರುವ ೫ ದಿನಗಳ ಹಬ್ಬವಿದು. ಭಾರತದ ಎಲ್ಲ ಪ್ರಾಂತಗಳಲ್ಲೂ ಇದರ ಆಚರಣೆಯುಂಟು. ತುಳುನಾಡಿನವರು ತುಡರ್ ಪರ್ಬ ಎನ್ನುತ್ತಾರೆ. (ಸಂಸ್ಕೃತದ "ಪರ್ವ"ವೇ ಪರ್ಬವಾಗಿ ಹಬ್ಬವಾಗಿದೆ). ಸಿಂಧಿಯಲ್ಲಿ 'ದಿಯಾರೀ'. ಕಾರ್ತಿಕಮಾಸದ ಈ ದೀಪೋತ್ಸವಕ್ಕೆ ದೀಪಾಲಿಕಾ, ದೀಪ, ದೀಪಾವಲಿ, ದೀಪಾವಳಿಗಳಲ್ಲದೆ ದಿವಾಲಿ, ಬಂದೀಛೋಡ್ ದಿವಸ್, ತೀಹಾರ್, ವಂದನಾ - ಎಂದೂ ಹೆಸರುಗಳುಂಟು. ವಿದೇಶಗಳಲ್ಲಿ ನೆಲೆಸಿರುವ ಹಿಂದುಗಳೂ ಇದನ್ನಾಚರಿಸುವವರೇ. ಇಂಗ್ಲೆಂಡ್- ಅಮೆರಿಕಾಗಳಲ್ಲಿ ಸಹ ಇದಕ್ಕಿದೆ ಮಾನ್ಯತೆ. ಅಮೆರಿಕೆಯ ಜಾರ್ಜ್ ಬುಷ್, ಒಬಾಮಾಗಳು ಇದಕ್ಕೆ ಗೌರವವಿತ್ತಿರುವರು; ಬ್ರಿಟನ್ನಿನ ಪ್ರಿನ್ಸ್ ಚಾರ್ಲ್ಸ್ ಸಹ . ಭಾರತ-ನೇಪಾಳ-ಶ್ರೀಲಂಕಾಗಳಲ್ಲದೆ, ಮ್ಯಾನ್ಮಾರ್, ಮಾರಿಷಸ್, ಮಲೇಷಿಯ, ಸಿಂಗಪೂರ್ ಮುಂತಾದ ದೇಶಗಳಲ್ಲಿ ಈ ಹಬ್ಬದ ಆಚರಣೆಗಾಗಿ "ಅಧಿಕೃತರಜೆ"ಯನ್ನೇ ಘೋಷಿಸಲಾಗಿದೆ – ಉಳಿದೆಷ್ಟೋ ಹಬ್ಬಗಳಿಗೆ ಬರೀ "ನಿರ್ಬಂಧಿತ ರಜೆ"ಯಷ್ಟೇ. ದೇವಸ್ತೋಮಕ್ಕೆ ಸಲ್ಲಿಸುವ ನಮನವೇ ಆಗಿದೆ ಈ ದೀಪಸ್ತೋಮವಾದರೂ. ರಾಮ-ಕೃಷ್ಣ, ಶಿವ-ವಿಷ್ಣು, ಲಕ್ಷ್ಮೀ-ಸರಸ್ವತೀ-ಕಾಳಿ, ಹನುಮಂತ-ಕುಬೇರ-ಧನ್ವಂತರಿ-ವಿಶ್ವಕರ್ಮ, ಯಮ-ಯಮುನೆಯರು ಮುಂತಾಗಿ ಹಲವು ದೇವತೆಗಳಿಗೆ ಪೂಜೆಗಳು ಸಲ್ಲುವ ಹಬ್ಬವಿದು. ಅಸುರನಾದ ಬಲಿಗೂ, ಗೋ-ಗೋವರ್ಧನಗಳಿಗೂ ಪೂಜೆಯುಂಟು. ನಾನಾವರ್ಗದವರಿಗೆ ಇದರ ನಾನಾಂಶಗಳು ಆದರಣೀಯವಾಗಿದ್ದು, ಎಲ್ಲರ ಆಚರಣೆಗಳಲ್ಲಿಯೂ ದೀಪೋತ್ಸವ-ನವವಸ್ತ್ರಧಾರಣ- ಮಧುರಭೋಜನಗಳು ಸೇರಿಕೊಂಡೇ ಇವೆ. ಇತಿಹಾಸದ ಬೆಳಕು ಈ ಹಬ್ಬವಾರಂಭವಾದುದೆಂದು? – ಎಂಬುದನ್ನು ಹೇಳಲಸಾಧ್ಯ. ಜೈನರಂತೂ, ಮಹಾವೀರನು ನಿರ್ವಾಣವನ್ನು ಪಡೆದದ್ದೇ (ಕ್ರಿ.ಪೂ ೫೮೭) ದೀಪಾವಳಿಯಂದು; ಹದಿನೆಂಟು ರಾಜರು ಅಂದು ಅಲ್ಲಿ ಉಪಸ್ಥಿತರಿದ್ದರು - ಎನ್ನುತ್ತಾರೆ. ಪದ್ಮಪುರಾಣ, ಸ್ಕಾಂದಪುರಾಣ, ಭವಿಷ್ಯೋತ್ತರಪುರಾಣಗಳಲ್ಲಿ ಈ ಹಬ್ಬದ ಚಿತ್ರಣವಿದೆ. ೭ನೆಯ ಶತಮಾನದ ಶ್ರೀಹರ್ಷನು ಬರೆದ ನಾಗಾನಂದ ನಾಟಕದಲ್ಲಿ ದೀಪಪ್ರತಿಪದುತ್ಸವ ಎಂದಿದನ್ನು ಕರೆದಿದೆ: ವಧೂ-ವರರಿಗೆ ಉಡುಗೊರೆಗಳನ್ನಾಗ ಕೊಡುವುದನ್ನು ಸೂಚಿಸಿದೆ. ಹಾಗೆಯೇ ೯-೧೦ನೇ ಶತಮಾನಗಳಲ್ಲಿದ್ದ ರಾಜಶೇಖರನು ತನ್ನ ಕಾವ್ಯಮೀಮಾಂಸಾ ಗ್ರಂಥದಲ್ಲಿ, ಮನೆಗೆ ಸುಣ್ಣ-ಬಣ್ಣಗಳು, ಎಣ್ಣೆ-ದೀಪಗಳು, ಗೃಹಾಲಂಕಾರ, ರಸ್ತೆ-ಬೀದಿ-ಮಾರುಕಟ್ಟೆಗಳಲ್ಲೆಲ್ಲ ದೀಪಜ್ವಾಲನಗಳು ಈ ಹಬ್ಬದಲ್ಲಾಗುವುದನ್ನು ಹೇಳುತ್ತಾನೆ. ನಮ್ಮ ದೇಶಕ್ಕೆ ಬಂದ ವಿದೇಶೀಯಾತ್ರಿಕರಲ್ಲಿ ಹಲವರು ಇದನ್ನು ಉಲ್ಲೇಖಿಸಿದ್ದಾರೆ. ಇರಾನಿನ ಅಲ್-ಬಿರೂನಿ (೧೦-೧೧ನೇ ಶತಮಾನಗಳು) ತನ್ನ ತಾರೀಖ್-ಅಲ್-ಹಿಂದ್-ನಲ್ಲಿ ಕಾರ್ತಿಕಮಾಸದ ಅಮಾವಾಸ್ಯೆಯಂದು ನೆರವೇರುವ ಈ ಹಬ್ಬವನ್ನು ಉಲ್ಲೇಖಿಸಿದ್ದಾನೆ. ನಿಕೋಲೋ ಕೊಂಟಿ (೧೪-೧೫ನೇ ಶತಮಾನಗಳು) ಅಂದು ನಡೆಯುತ್ತಿದ್ದ ದೀಪಾವಳಿಯನ್ನು ವಿಸ್ತೃತವಾಗಿಯೇ ಬಣ್ಣಿಸಿದ್ದಾನೆ: "ದೇವಾಲಯಗಳ ಒಳಗೂ ಛಾವಣಿಗಳ ಮೇಲೂ ಲೆಕ್ಕವಿಲ್ಲದಷ್ಟು ದೀಪಗಳನ್ನು ಬೆಳಗಿಸುವರು. ಕುಟುಂಬದವರೆಲ್ಲ ಕಲೆಯುವರು, ನೂತನ ವಸ್ತ್ರಗಳನ್ನು ಧರಿಸುವರು, ಗಾನ-ನರ್ತನಗಳಲ್ಲಿ ತೊಡಗುವರು." ೧೬ನೇ ಶತಮಾನದಲ್ಲಿ ಶ್ರೀಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಬಂದಿದ್ದ ಡೊಮಿಂಗೋ ಪೇಸ್ ಸಹ ಮನೆಮನೆಗಳಲ್ಲೂ ದೇವಾಲಯಗಳಲ್ಲೂ ಬೆಳಗುವ ದೀಪಗಳನ್ನು ಉಲ್ಲೇಖಿಸಿದ್ದಾನೆ. ಮುಸಲ್ಮಾನರ ದೊರೆ ಅಕ್ಬರನು (೧೬ನೇ ಶತಮಾನದ ಕೊನೆ) ದೀಪಾವಳಿಯಲ್ಲಿ ಪಾಲ್ಗೊಂಡಿದ್ದನೆಂದು ಹೇಳಲಾಗುತ್ತದೆ. ಆದರೆ ಆ ಬಳಿಕ ಬಂದ ಜಹಾಂಗಿರನು (೧೭ನೇ ಶತಮಾನದ ಆದಿ) ಹೋಳಿ-ದೀಪಾವಳಿಗಳ ಆಚರಣೆಯನ್ನು ಪ್ರತಿಬಂಧಿಸಿದನು. ದೀಪಾವಳಿಯನ್ನು ಆಚರಿಸಲು ಪ್ರಯತ್ನ ಮಾಡಿದನೆಂದು ಸಿಕ್ಖರ ಗುರು ಹರಗೋಬಿಂದರನ್ನು ಗ್ವಾಲಿಯರ್ ಕೋಟೆಯ ಜೈಲಿಗೆ ಹಾಕಿದ್ದ ಆ ನೀಚನು ಅವರನ್ನು ಬಿಡುಗಡೆ ಮಾಡಿದ ದಿನವೂ ದೀಪಾವಳಿಯೇ. ಎಂದೇ, "ಬಂದೀಛೋಡ್ ದಿವಸ್" ಎಂದು ಸಿಕ್ಖರು ಅದನ್ನು ಆಚರಿಸುತ್ತಾರೆ. ೧೮ನೇ ಶತಮಾನದಿಂದಾಚೆಗೆ ಹಲವು ಪಾಶ್ಚಾತ್ತ್ಯರು ಹಲವಾರು ಅಂಶಗಳನ್ನು ದಾಖಲಿಸಿರುವುದುಂಟು. ಅವರಲ್ಲಿ ಮೊದಲಿಗನಾದ ಸರ್ ವಿಲಿಯಂ ಜೋನ್ಸ್ ಬಂಗಾಳದಲ್ಲಿ ಹಬ್ಬದ ನಾಲ್ಕು ದಿನಗಳ ಆಚರಣೆಯ ಬಗ್ಗೆ ವಿಸ್ತೃತವಾಗಿಯೇ ಬರೆದಿದ್ದಾನೆ. ಶಾಸನಗಳಲ್ಲೂ ಇತ್ತ ಶಾಸನಗಳತ್ತ ದೃಷ್ಟಿ ಹಾಯಿಸಿದರೆ, ೧೦ನೇ ಶತಮಾನದ ರಾಷ್ಟ್ರಕೂಟರ ತಾಮ್ರಪತ್ರವೊಂದರಲ್ಲಿ "ದೀಪೋತ್ಸವ"ವೆಂಬುದಾಗಿ ಇದರ ಉಲ್ಲೇಖವಿದೆ. ಧಾರವಾಡದಲ್ಲಿ ೧೨ನೆಯ ಶತಮಾನದಲ್ಲಿ ಈಶ್ವರನ ದೇವಸ್ಥಾನವೊಂದರಲ್ಲಿ ಈ ಹಬ್ಬದ ಪಾವಿತ್ರ್ಯದ ಬಗ್ಗೆ ಉಲ್ಲೇಖವಿದೆ. ೧೩ನೇ ಶತಮಾನದ ಕೇರಳರಾಜನಾದ ರವಿವರ್ಮಸಂಗ್ರಾಮಧೀರನ ಶಾಸನವೊಂದು ಶ್ರೀರಂಗಂ ದೇವಸ್ಥಾನದಲ್ಲಿ ಲಭ್ಯವಿದ್ದು, ಅದರಲ್ಲಿ "ಕಾರ್ತವೀರ್ಯ-ಸಗರ ಮುಂತಾದವರ ಕಾಲದಿಂದಲೂ ಆಚರಿತವಾಗಿರುವ" ಈ ಹಬ್ಬದ ಉಲ್ಲೇಖವಿದೆಯೆಂದು ಕೀಲ್‍ಹಾರ್ನ್ ಹೇಳುತ್ತಾರೆ. ೧೦ನೇ ಶತಮಾನದ ಸೌಂದತ್ತಿಶಾಸನದಲ್ಲಿ ದೀಪಾವಳೀ ಸಂದರ್ಭದ ಜಿನೇಂದ್ರಪೂಜೆಗೆಂದು ತೈಲದಾನವನ್ನು ಮಾಡಿರುವುದರ ದಾಖಲೆಯೂ ದೊರೆಯುತ್ತದೆ. ರಾಜಸ್ಥಾನದ ಜಲೋರೆಸ್‍ನ ಮಸೀದಿಯಲ್ಲಿ ಬಳಸಿರುವ ಜೈನದೇವಾಲಯದ ಸ್ತಂಭವೊಂದರಲ್ಲಿ ಸುವರ್ಣಶಿಖರದೊಂದಿಗಿನ ನಾಟಕರಂಗಶಾಲೆಯೊಂದನ್ನು ದೀಪಾವಳಿಯಂದು ಲೋಕಾರ್ಪಣಮಾಡಿರುವುದರ ಉಲ್ಲೇಖವಿದೆ. ದೀಪಾವಳಿಯ ಆಚರಣೆಯನ್ನು ನಿಲ್ಲಿಸಿರುವ ಪ್ರಸಂಗವೊಂದು ಸಹ ಉಂಟು. ದೀಪಾವಳಿಯ ದಿನದಂದೇ ಮೇಲುಕೋಟೆಯ ೮೦೦ ಮಂದಿ ಮಂಡ್ಯಂ ಐಯ್ಯಂಗಾರ್ಯರ ಹತ್ಯೆಯನ್ನು ನೀಚ ಟಿಪ್ಪುಸುಲ್ತಾನನು ಮಾಡಿದಂದಿನಿಂದ ಮಂಡ್ಯಂ ಐಯ್ಯಂಗಾರ್ಯರು ದೀಪಾವಳಿಯ ಆಚರಣೆಯನ್ನು ತೊರೆದಿದ್ದಾರೆ! ಆಚರಣೆ ಕಾರ್ತಿಕಮಾಸದ ಹಬ್ಬವಿದೆಂದಾದರೂ ಕೆಲವೆಡೆ ಆಶ್ವಯುಜಮಾಸವೆಂಬ ನಿರ್ದೇಶವುಂಟು. ಅದಕ್ಕೆ ಕಾರಣವಾದರೂ ಮಾಸಗಳನ್ನು ಅಮಾಂತಮಾಸ-ಪೂರ್ಣಿಮಾಂತಮಾಸಗಳೆಂದು ಎರಡು ಬಗೆಯಲ್ಲಿ ಸೂಚಿಸುವಿಕೆ. ಮಾಸದ ಹೆಸರುಗಳು ಬೇರೆಯಾದರೂ ಆಗಿನ ಕೃಷ್ಣಪಕ್ಷದ ಕೊನೆಯೆರಡು ದಿನಗಳು, ಮುಂದಿನ ಶುಕ್ಲಪಕ್ಷದ ಮೊದಲೆರಡು ದಿನಗಳು, ಮಧ್ಯದ ಅಮಾವಾಸ್ಯೆ - ಹೀಗೆ ಐದು ದಿನಗಳ ಹಬ್ಬವಿದು:ತ್ರಯೋದಶೀ-ಚತುರ್ದಶೀ-ಅಮಾವಾಸ್ಯಾ-ಪ್ರಥಮೆ-ದ್ವಿತೀಯೆಗಳಂದು. ತ್ರಯೋದಶಿ: ಅಂದು ರಾತ್ರಿ ಯಮನನ್ನು ಸಂತೋಷಪಡಿಸುವುದಕ್ಕಾಗಿ ಮನೆಯ ಹೊರಗೆ ದೀಪವನ್ನು ಹಚ್ಚಿಡಬೇಕು. ಯಮದೀಪವು ಅಪಮೃತ್ಯುನಿವಾರಕ - ಎನ್ನುತ್ತದೆ ಸ್ಕಾಂದಪುರಾಣ. ದೀಪವಿಡುತ್ತಾ "ಸೂರ್ಯಜಃ ಪ್ರೀಯತಾಂ ಮಮ" ಎನ್ನಬೇಕು: "ಸೂರ್ಯಪುತ್ರನಾದ ಯಮನು ಸಂತೋಷಗೊಳ್ಳಲಿ". ಆ ರಾತ್ರಿಯೇ ಸ್ನಾನದ ಪಾತ್ರೆಗಳನ್ನು ಫಳಫಳಹೊಳೆಯುವಂತೆ ತೊಳೆಯುವ ಕೆಲಸ; ಹಾಗೂ ಮಾರನೆಯ ದಿನದ ಸ್ನಾನದ ಸಿದ್ಧತೆಗಾಗಿ ನೀರು ತುಂಬಿಸಿಡುವುದು. ಅದೇ "ನೀರು ತುಂಬುವ ಹಬ್ಬ." ಚತುರ್ದಶಿ: ಪ್ರಾತಃಕಾಲ ಮನೆಯ ಎಲ್ಲರಿಗೂ ಅಭ್ಯಂಗಸ್ನಾನ: ಇದು ನಾರಾಯಣಪ್ರೀತಿಕರ. ಸ್ನಾನಮಾಡುವಾಗ ಅಪಾಮಾರ್ಗ (ಎಂದರೆ ಉತ್ತರಣೆ) ಎಂಬ ಗಿಡದ ಸಣ್ಣ ಕೊಂಬೆಗಳನ್ನು ಮೈಸುತ್ತಲೂ ಮತ್ತೆ ಮತ್ತೆ ಸುತ್ತಿಸುವರು. "ಅಪಾಮಾರ್ಗವೇ ನನ್ನ ಪಾಪವನ್ನು ಹೋಗಲಾಡಿಸು" ಎಂದು ಕೇಳಿಕೊಳ್ಳುತ್ತಾ ಇದನ್ನು ಮಾಡತಕ್ಕದ್ದು. ಪದ್ಮಪುರಾಣವು ಹೇಳುವಂತೆ, ಅಂದು ತೈಲದಲ್ಲಿ ಲಕ್ಷ್ಮಿಯೂ, ನೀರಿನಲ್ಲಿ ಗಂಗೆಯೂ ನೆಲೆಸಿರುತ್ತಾರೆ; ಅಭ್ಯಂಗ ಮಾಡಿಕೊಂಡವರಿಗೆ ಲಾಭವೆಂದರೆ ಅಲಕ್ಷ್ಮೀಪರಿಹಾರ ಹಾಗೂ ಯಮಲೋಕದ ಅದರ್ಶನ. ಈ ಸ್ನಾನವಾದವರನ್ನು "ಗಂಗಾಸ್ನಾನವಾಯಿತೇ?" ಎಂದೇ ಕೇಳುವುದು. ಇದಾದ ಮೇಲೆ ಎಳ್ಳಿನಿಂದ ಯಮತರ್ಪಣ: ಯಮನ ಹದಿನಾಲ್ಕು ಹೆಸರುಗಳನ್ನು ಉಚ್ಚರಿಸುತ್ತಾ ಮಾಡುವುದು: ಯಮ, ಧರ್ಮರಾಜ, ಮೃತ್ಯು, ಅಂತಕ, ವೈವಸ್ವತ, ಕಾಲ, ಸರ್ವಭೂತಕ್ಷಯ, ಔದುಂಬರ, ದಧ್ನ, ನೀಲ, ಪರಮೇಷ್ಠೀ, ವೃಕೋದರ, ಚಿತ್ರ, ಚಿತ್ರಗುಪ್ತ. ಹಲವಾರು ಸ್ಥಾನಗಳಲ್ಲಿ ದೀಪವನ್ನು ಅಂದು ಹಚ್ಚುವ ಕ್ರಮವಿದೆ. ಮನೆಯ ಅಂಗಳ, ದೇವಾಲಯ, ನದಿ-ಬಾವಿಗಳು, ಉದ್ಯಾನ-ಮುಖ್ಯಬೀದಿ ಇತ್ಯಾದಿ. ಹದಿನಾಲ್ಕು ತರಕಾರಿಗಳನ್ನು ಬಳಸುವುದೂ ಉಂಟು. ಅಂದು ರಾತ್ರಿ 'ಉಲ್ಕಾದಾನ' ಮಾಡುವುದುಂಟು : ಉರಿಯುವ ಕೊಳ್ಳಿಯನ್ನು ಹಿಡಿದುಕೊಂಡು ಗತಿಸಿದವರಿಗೆ ಹಾದಿ ತೋರಲು ಈ ಕ್ರಮ. (ವಿದೇಶದಲ್ಲೆಲ್ಲೋ ಮರಣಹೊಂದಿದವರಿಗಾಗಿಯೂ ಯುದ್ಧದಲ್ಲಿ ಗತಿಸಿದವರಿಗಾಗಿಯೂ ವಿಶೇಷವಾಗಿ ಇದನ್ನು ಮಾಡುವರು - ಎಂಬುದಾಗಿ ವಿಲಿಯಂ ಜೋನ್ಸ್ ಗುರುತುಹಾಕಿಟ್ಟಿದ್ದಾನೆ). ಆ ಉಜ್ಜ್ವಲ-ಜ್ಯೋತಿಸ್ಸನ್ನು ಹಲವೆಡೆ ಪ್ರತಿಷ್ಠಿಸುವುದೂ ಉಂಟು. ಶಿವ-ವಿಷ್ಣು-ರಾತ್ರಿದೇವತೆಗಳನ್ನು ಅಂದು ಪೂಜಿಸುವರು. ಅಂದು ರಾತ್ರಿಯಷ್ಟೇ ಭೋಜನ. ಸಿಹಿಪದಾರ್ಥಗಳು ಸೇವಿಸುವುದಕ್ಕೆ ಬಾಧವಿಲ್ಲ. ಅಮಾವಾಸ್ಯೆ: ಐದುದಿನದ ಸಂಭ್ರಮದಲ್ಲಿ ಇದುವೇ ಮಧ್ಯದಿನ. ಈ ದಿನವೂ ಅಭ್ಯಂಗಸ್ನಾನವುಂಟು. ಮಾವು, ಅರಳಿ ಮುಂತಾದ ಮರಗಳ ತೊಗಟೆಯನ್ನು ಅಭ್ಯಂಗದ ನೀರಿನಲ್ಲಿ ಸೇರಿಸುವುದಿದೆ. ಸ್ನಾನವಾದವರಿಗೆ ಮನೆಯ ನಾರಿಯರಿಂದ ಆರತಿ; ಅಮಾವಾಸ್ಯೆಯಾದ್ದರಿಂದ ದೇವತಾಪೂಜೆಯೊಂದಿಗೆ ಪಿತೃಪೂಜೆ (ತರ್ಪಣವಷ್ಟಾದರೂ); ನವವಸ್ತ್ರ-ನವಾಭರಣ-ಧಾರಣ; ಸಂಗೀತದ (ಎಂದರೆ ಗೀತ-ವಾದ್ಯ-ನೃತ್ಯಗಳ) ಆಸ್ವಾದನ. ಲಕ್ಷ್ಮಿಯು ಎಚ್ಚರವಾಗಿರುತ್ತಾಳಾದ್ದರಿಂದ ಇರುಳು ಜಾಗರಣೆ ಪ್ರಶಸ್ತ. ವರ್ತಕರು ತಮ್ಮ ಆಯ-ವ್ಯಯದ ಪುಸ್ತಕಗಳನ್ನು ಪೂಜಿಸಿ, ಗ್ರಾಹಕರಿಗೆ ಸಿಹಿ ಹಂಚಿ, ಹೊಸಲೆಕ್ಕದ ಪುಸ್ತಕವನ್ನರಂಭಿಸುತ್ತಾರೆ. ಕುಬೇರನಿಗೂ ಪೂಜೆ. ಪ್ರಥಮೆ (ಪಾಡ್ಯ/ಪ್ರತಿಪತ್/ಪ್ರತಿಪದಾ): ಇದುವೆ ಬಲಿಪಾಡ್ಯಮಿಯ ದಿನ. ಐದುದಿನದ ಹಬ್ಬದಲ್ಲಿ ಮುಖ್ಯತಮವಾದ ದಿನ. ಇಂದೂ ಅಭ್ಯಂಗವು ಪ್ರಶಸ್ತವೇ. ಬಲಿರಾಜನ ಚಿತ್ರವನ್ನು ಬಿಡಿಸಿ ಸಕಲೋಪಚಾರದ ಪೂಜೆ; ಜೊತೆಗೀ ಪ್ರಾರ್ಥನೆ: "ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ | ಭವಿಷ್ಯೇಂದ್ರ ಸುರಾರಾತೇ ವಿಷ್ಣುಸಾನ್ನಿಧ್ಯದೋ ಭವ ||" ಎಂದರೆ, "ವಿರೋಚನನ ಮಗನಾದ ಬಲಿಪ್ರಭುವೇ, ನಿನಗೆ ನಮಸ್ಕಾರ. ಸುರಶತ್ರುವೇ, ಮುಂದೆ ನೀನೇ ಇಂದ್ರನಾಗತಕ್ಕವನು. ವಿಷ್ಣುಸಾಂನಿಧ್ಯವನ್ನನುಗ್ರಹಿಸು." ಆ ಬಳಿಕ ಪಗಡೆ-ಜೂಜಾಟಗಳು ಶಾಸ್ತ್ರವಿಹಿತ! ಅಂದು ಗೆದ್ದವರಿಗೆ ವರ್ಷವಿಡೀ ಜಯವಂತೆ! ಅಂದು ಶಿವ-ಪಾರ್ವತಿಯರೇ ಪಗಡೆಯಾಡಿದರಂತೆ, ಪಾರ್ವತಿಗೇ ಜಯವಾಯಿತಂತೆ! ಇದಲ್ಲದೆ ಗೋಪೂಜೆ: ಎತ್ತುಗಳಿಗೆ ಕೆಲಸದಿಂದ ವಿರಾಮ, ಹಾಗೂ ಸ್ನಾನಾಲಂಕಾರ-ಸುಭೋಜನಗಳು; ಗೋ-ಗೋವರ್ಧನ-ಗಿರಿಧರಗೋಪಾಲರಿಗೂ ಪೂಜೆ; ಸರ್ವರಿಗೂ ಅನ್ನಸಂತರ್ಪಣ. ರಾತ್ರಿ ಎಚ್ಚರವಿದ್ದು ವೀರಕ್ಷತ್ರಿಯರ ಕಥೆಗಳನ್ನಾಧರಿಸಿದ ನಾಟಕಗಳನ್ನು ಆಡಬೇಕು/ನೋಡಬೇಕು. ಬಲಿಚಕ್ರವರ್ತಿಯನ್ನು ಉದ್ದೇಶಿಸಿ ಅಂದು ಮಾಡುವ ದಾನ ಕ್ಷಯವಿಲ್ಲದ್ದು. ದ್ವಿತೀಯೆ(ಬಿದಿಗೆ): ಸೋದರಬಿದಿಗೆ-ಭ್ರಾತೃದ್ವಿತೀಯಾ-ಭಗಿನೀದ್ವಿತೀಯಾ ಎಂದೂ ಇದಕ್ಕೆ ಹೆಸರು. ಯಮ-ಯಮುನೆಯರು ಸೋದರ-ಸೋದರಿಯರು; ಸೂರ್ಯನ ಮಕ್ಕಳಾದ ಇವರ ಪ್ರೀತಿವಿಶ್ವಾಸಗಳು ಆದರ್ಶಪ್ರಾಯವಾದುವು. ಅಂದು ಯಮನು ಯಮುನೆಯ ಮನೆಗೆ ಹೋಗೆ ಅವಳ ಆತಿಥ್ಯವನ್ನು ಪಡೆದ; ಅವಳಿಗೆ ಉಡುಗೊರೆಯಿತ್ತ. ಇದರ ಅನುಸಾರ, ಸೋದರಿಯಿರುವವರು ಸ್ವಗೃಹದಲ್ಲಿ ಭೋಜನಮಾಡದೆ ಅಂದು ಅಲ್ಲೇ ಹೋಗಿ ಊಟಮಾಡಬೇಕು. (ಇಲ್ಲದವರು ಚಿಕ್ಕಪ್ಪ/ದೊಡ್ಡಪ್ಪ/ ಸ್ನೇಹಿತರ ಹೆಣ್ಣುಮಕ್ಕಳಲ್ಲಿಗೇ ಹೋಗಬಹುದು). ಆಚರಣೆಯ ಅರ್ಥ ಮೊದಲು ಬರುವ ಪ್ರಶ್ನೆ- ಹಬ್ಬಗಳು ಬೇಕೇಕೆ? ಇತರ ಪಂಥಗಳಲ್ಲಿ ಎಲ್ಲೋ ಬೆರಳೆಣಿಸುವಷ್ಟು ಹಬ್ಬಗಳಿವೆ; ಇಲ್ಲೇಕೆ ಇಷ್ಟೊಂದು? ಅವುಗಳಿಂದ ವಾಸ್ತವ ಲಾಭವುಂಟೆ? ಎಂಬುದು. ಹಬ್ಬಗಳೆಂದು ಸಂಪ್ರದಾಯವು ಹೇಳಲಿ ಬಿಡಲಿ, ಜನರು ಪಿಳ್ಳೆನೆವವನ್ನಾದರೂ ಮಾಡಿಕೊಂಡು ಏನೋ ಉತ್ಸವಗಳನ್ನಾಚರಿಸುವವರೇ. (ಉತ್ಸವಪ್ರಿಯಾಃ ಮನುಷ್ಯಾಃ). ನಾಲ್ಕುಮಂದಿ ಸೇರುವುದು; ಭಕ್ಷ್ಯಭೋಜ್ಯಗಳನ್ನು ತಿನ್ನುವುದು - ಇತ್ಯಾದಿಗಳನ್ನು ತಡೆಯುವವರಾರು? ಆದರೆ ಭಾರತೀಯ ಸಂಸ್ಕೃತಿಯಲ್ಲಿ ಇವುಗಳ ಪಾತ್ರ ವಿಶಿಷ್ಟವಾದುದು. ಜೀವನವು ಕೇವಲ "ಖಾನಾ-ಪೀನಾ-ಸೋನಾ" ಆದಲ್ಲಿ ಪ್ರಾಣಿಗಳಿಗಿಂತ ಮನುಷ್ಯ ಹೇಗೆ ಭಿನ್ನ? ಇವನ್ನೇ ಅತಿಶಯಿತವಾದ ಲಾಭಕ್ಕಾಗಿ ಬಳಸಿಕೊಳ್ಳುವುದರಲ್ಲಿ ಜಾಣತನವಿದೆ. 'ಉತ್ಸವ' ಎಂಬ ಪದವೇ ಒಂದು ತತ್ತ್ವವನ್ನು ಹೇಳುತ್ತದೆ. 'ಸವ' ಎಂದರೆ ಯಜ್ಞ. ನಮ್ಮನ್ನು ಮೇಲ್ಮುಖವಾಗಿ, ಎಂದರೆ ಉತ್ತಮಸ್ಥಿತಿಯತ್ತ ಒಯ್ಯುವ ಸವಗಳೇ ಉತ್ಸವಗಳಾಗುತ್ತವೆ. ಅಲ್ಲದೆ, ಮಾಡುವ ಒಂದೇ ಕೆಲಸವನ್ನು ಅದಕ್ಕೆ ಯುಕ್ತವಾದ ಸಮಯದಲ್ಲಿ ಮಾಡುವುದರಲ್ಲಿ ಜಾಣ್ಮೆಯಿದೆ. ಹೆಚ್ಚು ಫಲವಿದೆ. ಸಂಧ್ಯಾಕಾಲ-ಗ್ರಹಣಕಾಲಗಳು ಕೆಲಕೆಲಕೆಲಸಗಳಿಗೆ ಪ್ರಶಸ್ತವಲ್ಲವೇ?. ಹಬ್ಬ ಎಂಬ ಪದವೂ ಮಾರ್ಮಿಕ, ಸಂಸ್ಕೃತದ 'ಪರ್ವ' ದಿಂದ ಬಂದದ್ದು. ಪರ್ವವೆಂದರೆ ಗಿಣ್ಣು; ಗಿಣ್ಣು ಸಂಧಿಸ್ಥಾನ; ಅಲ್ಲಿ ರಸವು ಅಧಿಕ. ("ಪರ್ವಣಿ ಪರ್ವಣಿ ರಸವಿಶೇಷಃ"). ಕಾಲವೂ ಜಲ್ಲೆಯಂತೆ; ಅಲ್ಲಿಯ ದೀಪವೇಕೆ? ಪ್ರಕೃತ, ದೀಪಗಳನ್ನೇಕೆ ಹಚ್ಚಬೇಕು ದೇವರಿಗೆ? ದೇವರಿಗೇನು ಕಣ್ಣು ಕಾಣದೇ?: ದೀಪವನ್ನು ಹಚ್ಚುವುದು ನಮಗಾಗಿ, ದೇವರಿಗಾಗಲ್ಲ. 'ದೇವ' ಎಂಬ ಶಬ್ದಕ್ಕೆ ಅರ್ಥವೇ 'ಬೆಳಗುವವನು' ಎಂದು. ದೇವತೆಗಳೆಲ್ಲರೂ ಪ್ರಕಾಶಸ್ವರೂಪರೇ. ಮೂಲತತ್ತ್ವವು ಸ್ವಪ್ರಕಾಶವಾದದ್ದು. ನಾವು ಹಚ್ಚುವ ಸೊಡರು ಒಂದು ಸಣ್ಣದಾದ ಅಗ್ನಿ. ತೇಜೋರಾಶಿಯಾದ ಭಗವಂತನ ಮುಂದೆ ಇದೇನು? ಎಲ್ಲಿ ಸೂರ್ಯನೂ ಪ್ರಕಾಶಿಸನೋ, ಚಂದ್ರ-ನಕ್ಷತ್ರಗಳೂ ಬೆಳಗವೋ ಅಂತಹ ಆತನ ಮುಂದೆ ಈ ದೀಪವೇ? "ಬೆಳಕುಗಳಿಗೂ ಬೆಳಕು ಅತ" (ಜ್ಯೋತಿಷಾಮಪಿ ತತ್ ಜ್ಯೋತಿಃ) ಎನ್ನುತ್ತದೆ, ಗೀತೆ. ಪರಂಜ್ಯೋತಿಸ್-ಸ್ವರೂಪನ ಪ್ರತೀಕವಾಗಿಯೇ ದೀಪಗಳನ್ನು ಹಚ್ಚುವುದು. ಭಗವಂತನ ತಂಪಾದ ತಾಣವು 'ಸತ್'; ನಾವಿರುವ ತಾಪದೆಡೆ ಅಸತ್. ಅವನ ಸ್ಥಾನವು ಜ್ಯೋತಿಸ್; ನಮ್ಮದು ತಮಸ್. ಅವನೆಡೆ ಅಮೃತ; ನಮ್ಮೆಡೆ ಮೃತ್ಯು. ಎಂದೇ ಬೃಹದಾರಣ್ಯಕೋಪನಿಷತ್ತು ಅಸತ್-ತಮಸ್-ಮೃತ್ಯುಸ್ಥಾನಗಳಿಂದ ಸತ್-ಜ್ಯೋತಿಸ್-ಅಮೃತಸ್ಥಾನಗಳಿಗೆ ಒಯ್ಯೆಂದು ಕೇಳಿಕೊಳ್ಳುವುದು. ಎಂತಹ ದೀಪ? ಜ್ಯೋತಿಸ್ಸ್ವರೂಪನಾದ ಭಗವಂತನನ್ನು ಪಡೆಯಲು ಹೊರಗಣ ಹಣತೆಯೂ ಒಂದು ಸಾಧನ. ಗೌತಮಧರ್ಮಸೂತ್ರದಂತೆ "ಮೃತ್ಯುವಿನಾಶನೋ ದೀಪಃ". ಆದರೆ ಅದಕ್ಕೂ ಕ್ರಮವುಂಟು. ಜ್ವಾಲೆಯ ಆಕಾರ-ಆಯಾಮ-ವರ್ಣ-ಸ್ಥಾನ-ಸಾಧನಗಳಲ್ಲಿ ಲೆಕ್ಕಾಚಾರವುಂಟು: ಜ್ವಾಲೆಯ ಉದ್ದ ಹೆಬ್ಬೆರಳಿನಷ್ಟು; ಅಲ್ಲೂ ಗಿಣ್ಣಿನಷ್ಟು ಮಾತ್ರ; ಗಾಳಿ ಬೀಸದೆಡೆಯಲ್ಲಿ ತ್ರಿಕೋಣಾಕಾರವಾದ ಗೂಡಿನಲ್ಲಿ ಇಡಬೇಕು; ಹತ್ತಿಯ ಬತ್ತಿ ಉತ್ತಮ; ಗೋಘೃತ (ಹಸುವಿನ ತುಪ್ಪ) ಶ್ರೇಷ್ಠ. ಅದು ಕಣ್ಮನಸ್ಸುಗಳಿಗೆ ಹಿತವಾಗಿರುವಷ್ಟು ಪ್ರಮಾಣದ್ದಾಗಿರಬೇಕೆಂದು ಯೋಗಶಾಸ್ತ್ರಗಳ ಉಕ್ತಿ. ಭಕ್ತಿಯಿಂದ ಆರಂಭ; ನಮಸ್ಕಾರದೊಂದಿಗೆ ಮುಕ್ತಾಯ. ಹೀಗೆ ಕ್ರಮಬದ್ಧವಾಗಿ ಬೆಳಗಿದ ದೀಪವು ಅಪಮೃತ್ಯು-ವಿನಾಶಕವಷ್ಟೇ ಅಲ್ಲದೆ ಭಾಗವತವು ಹೇಳುವ "ವಿಷ್ಣುರಧ್ಯಾತ್ಮದೀಪಃ" ಎಂಬಲ್ಲಿಗೂ ಒಯ್ಯಬಲ್ಲುದು. ಅಧ್ಯಾತ್ಮದೀಪದತ್ತ ಸಾಗುವುದೇ ಜೀವನದ ಗುರಿ. ಈ ದೃಷ್ಟಿಯಿಂದ ನೋಡುವುದಾದರೆ ಈಗಿನ ಕಾಲದಲ್ಲಿ ವಿದ್ಯುತ್‍ಸೌಲಭ್ಯವೊದಗಿತೆಂದು ಮಾಡಿರುವ ಮಾರ್ಪಾಡುಗಳು ಪ್ರಶಂಸನೀಯವಾಗಿಲ್ಲ. ದೇವಾಲಯದ ಗರ್ಭಗೃಹವು ಭಗವಂತನನ್ನು ದರ್ಶನಮಾಡುವುದಕ್ಕೆಷ್ಟೋ ಅಷ್ಟು ಮಾತ್ರ ಬೆಳಕನ್ನು ಹೊಂದಿರತಕ್ಕದ್ದು. ಆದರೆ ವಿದ್ಯುತ್ತಿನ ಸರಬರಾಜು ಹೇರಳವಾಗಿದೆಯೆಂದೋ ಎಲ್ಲವೂ ಚೆನ್ನಾಗಿ ಕಾಣಲೆಂದೋ ಜಗಮಗಾಯಿಸುವ ದೀಪಗಳನ್ನು ಹಾಕುತ್ತಿರುವುದು ಯೋಗದೃಷ್ಟಿಯಿಂದ ಅಸಾಧುವೇ ಸರಿ. ಮತ್ತೂ ಒಂದು ಅಪಚಾರವಿದೋ: ದೀಪವು ಹತ್ತಿ-ಆರಿ-ಹತ್ತಿ-ಆರಿ ಆಗುತ್ತಿರುವಂತೆ 'ವ್ಯವಸ್ಥೆ' ಮಾಡುವುದು: ಅದು ಮನಸ್ಸಿಗೆ ಚಾಂಚಲ್ಯವರ್ಧಕ! ನಿಷ್ಕಂಪವಾದ ದೀಪವನ್ನೇ ಯೋಗಗ್ರಂಥಗಳು ಸಾರುವುದು. ಇವೆರಡೂ ಅಕ್ರಮಗಳೆಂದು ತಿಳಿಸಿಕೊಟ್ಟವರು ಯೋಗಮರ್ಮವಿದರಾದ ಶ್ರೀರಂಗಮಹಾಗುರುಗಳು. ದೀಪ-ವೈವಿಧ್ಯ ದೀವಟಿಗೆಗಳನ್ನು ಹಿಡಿದು ಪಿತೃಗಳಿಗೆ ಸದ್ಗತಿಕಾಣಿಸುವುದೂ ಉಂಟು. ಯಮನಿಗೇ ದೀಪಾರಾಧನೆಯು ಯುಕ್ತವೆನ್ನುವಾಗ ಆತನ ಪ್ರಜೆಗಳೇ ಆದ ಪ್ರಿತೃದೇವತೆಗಳಿಗೂ ದೀಪದರ್ಶನವು ಪ್ರಿಯವಾದುದೇ ಸರಿ. ಪಿತೃಗಳೆಂದರೆ ಭೂತ-ಪ್ರೇತಗಳಲ್ಲ. ಭೂತ-ಪ್ರೇತಗಳಿಗೆ ತಮಸ್ಸೇ ಇಷ್ಟ. ಎಂದೇ ಕಗ್ಗತ್ತಲೆಯಲ್ಲಿ ಆಹಾರಸೇವನೆ-ನಿದ್ರೆ ಮುಂತಾದುವುಗಳನ್ನು ಕೂಡ ಅಪ್ರಶಸ್ತವೆಂದೇ ಹೇಳಲಾಗುತ್ತದೆ. ದೀಪದಾರತಿಯನ್ನು ದೇವತೆಗಳಿಗೆ ಮಾತ್ರವಲ್ಲ, ಮನುಷ್ಯರಿಗೂ ಗೋವಿಗೂ ಮಾಡುವುದುಂಟು. ದೀಪವು ದೇವಪ್ರತಿನಿಧಿಯೆಂಬ ಭಾವನೆಯಲ್ಲಿದ್ದಲ್ಲಿ, ಅಂತರ್ಯಾಮಿಯ ಪೂಜೆಯು ನೆರವೇರುವುದಲ್ಲದೆ, ಎಷ್ಟೋ ಪೀಡೆಗಳೂ ಕಳೆಯುತ್ತವೆ. ಇದಲ್ಲದೆ ಆಕಾಶದೀಪವನ್ನೂ ಈ ಸಂದರ್ಭದಲ್ಲಿ ಬೆಳಗುವುದುಂಟು. ಆಳೆತ್ತರದ ಸ್ತಂಭದಲ್ಲಿ ಎಂಟುದಳಗಳ ಗೂಡನ್ನು ಮಾಡಿ, ಅವುಗಳ ಮಧ್ಯಕ್ಕೆ ದೀಪವನ್ನಿಡಬೇಕು. ಇಲ್ಲೂ ತತ್ತ್ವವುಂಟು: ಆಳೆತ್ತರದ ಕಂಭವೆಂದರೆ ಪುರುಷಪ್ರಮಾಣದ ಸ್ತಂಭ; ಹೃದಯದ ನೇರಕ್ಕೆ ಮಾಡಿದ ಗೂಡಿನಲ್ಲಿ ಎಂಟು ದ್ವಾರಗಳಿರಬೇಕೆನ್ನುವುದು ಅಷ್ಟದಳದ ಹೃದಯದ ಪ್ರತೀಕವೇ ಸರಿ; ಮಧ್ಯದಲ್ಲಿ ಬೆಳಕೆಂದರೆ, ಕರ್ಣಿಕಾಸ್ಥಾನದಲ್ಲಿ ಗೋಚರನಾಗುವ ಅಷ್ಟಾಕ್ಷರೀಮಂತ್ರಗೋಚರನಾದ ನಾರಾಯಣನೇ. ಆಕಾಶದೀಪದ ಮತ್ತೊಂದು ಪರಿಯೆಂದರೆ ಮನೆಗೆ ಹತ್ತಿರದಲ್ಲಿ ಯಜ್ಞಸಂಬಂಧಿಯಾದ ಮರದಿಂದ ಯಜ್ಞಸ್ತಂಭದ ಆಕಾರವನ್ನೇ ಹೊಂದಿರುವ ಕಂಬವನ್ನು ನಿರ್ಮಿಸಿ, ಅಷ್ಟದಿಶೆಗಳಿಗೆ ಬೆಳಕು ಚೆಲ್ಲುವಂತೆ ಅಷ್ಟದ್ವಾರದ ದೀಪಯಂತ್ರವನ್ನು ನಿರ್ಮಿಸಬೇಕು; ಕರ್ಣಿಕಾಸ್ಥಾನದಲ್ಲಿ ಚೆನ್ನಾಗಿ ಬೆಳಗುವ ದೀಪವನ್ನು ಹಚ್ಚಬೇಕು. ಇವಕ್ಕೂ ಪ್ರಯೋಜನಗಳುಂಟು. ಅಷ್ಟೇ ಅಲ್ಲದೆ, ದೇವರಿಗಾಗಿ ಹಚ್ಚಿದ ದೀಪವನ್ನು ಎಂದಿಗೂ ಆರಿಸಬಾರದು ("ನೈವ ನಿರ್ವಾಪಯೇದ್ ದೀಪಂ"). ಹುಟ್ಟಿದ ಹಬ್ಬವೆಂಬ ಶುಭಸಮಾರಂಭದಂದು ಕ್ಯಾಂಡಲುಗಳನ್ನು ಹಚ್ಚಿ ಉಫ್ ಎಂದು ಊದಿ ಆರಿಸುವುದೂ ಅತ್ಯಂತ ಅನಿಷ್ಟವಾದುದೇ: ಯಾರನ್ನೋ ಕುರುಡಾಗಿ ಅನುಕರಿಸಲು ಹೋಗಿ ಅಮಂಗಳವಾದದ್ದಕ್ಕೆ ತಾವೇ ಎಡೆಮಾಡಿಕೊಟ್ಟಂತಾಗಿದೆ! ನರಕಾಸುರಸಂಹಾರದ ಗುಟ್ಟು ಇದೂ ದೀಪತತ್ತ್ವಕ್ಕೆ ಸಂಬಂಧಪಟ್ಟದ್ದೇ. ನರಕಾಸುರನ ನಗರದ ಹೆಸರು ಪ್ರಾಗ್‍ಜ್ಯೋತಿಷಪುರ. ಪ್ರಾಕ್ ಎಂದರೆ ಪೂರ್ವ. ಅಸ್ಸಾಮಿನ ರಾಜ್ಯವಾದ್ದರಿಂದ ಅದು ದೇಶದ ಪೂರ್ವಭಾಗವು ಹೌದೇ. ಆದರೆ ಯೋಗಶಾಸ್ತ್ರದ ದೃಷ್ಟಿಯಿಂದ ಪ್ರಾಕ್ ಎನ್ನುವುದು ಎದುರೇ ಇರುವ, ಮುಂದುಗಡೆಯೇ ಗೋಚರಿಸುವ ಅಂಶ. ಎದುರೇ ಇರುವುದೆಂದರೆ ಇಂದ್ರಿಯಗಳಿಗೆ ವಿಷಯವಾದದ್ದು. ಇಂದ್ರಿಯಗಳು ಬಹಿರ್ಮುಖವಾದಾಗ ತೋರುವ ಬೆಳಕೇ ಪ್ರಾಗ್‍ಜ್ಯೋತಿಸ್. ಅದುವೇ ಅಂತರ್ಮುಖವಾದಾಗ ಗೋಚರವಾಗುವ ಬೆಳಕೆಂದರೆ ಪ್ರತ್ಯಗ್ಜ್ಯೋತಿಸ್ಸಾದ ಸಾಕ್ಷಾದ್ ಭಗವಂತನೇ ಆದ ಶ್ರೀಕೃಷ್ಣ. ಇಂದ್ರಿಯಗಳ ಬಹಿರ್ಮುಖಪ್ರವೃತ್ತಿಯು ಪ್ರಬಲವಾದಾಗ ಪಾಂಚಭೌತಿಕಜಗತ್ತೇ ಸರ್ವಸ್ವವಾಗಿರುತ್ತದೆ. ಈ ಐದೇ ನರಕನ ಪಂಚದುರ್ಗಗಳು. ನರಕನ ವಶದಲ್ಲಿ ಹದಿನಾರು ಸಾವಿರ ನಾರಿಯರಿದ್ದರೆಂದರೆ, ಹದಿನಾರು ಸಾವಿರ ನಾಡೀಶಕ್ತಿಗಳು ಅವನ ವಶದಲ್ಲಿದ್ದವೆಂದರ್ಥ. ವಾಸ್ತವವಾಗಿ ಈ ಅಸುರನು ನರನಾಗಲಿಲ್ಲ, ನರಕನಾದ: ಅವನ ಕೈಗೆ ಸಿಕ್ಕವರ ಪಾಲಿಗೆ ಅವನೇ ನರಕ; ಅವರ ಪಾಡು ನರಕದ ಪಾಡು. ಆತನ ಹೆಸರೇ ಅದನ್ನು ಮಾರ್ಮಿಕವಾಗಿ ಸೂಚಿಸುವುದು. 'ಕ' ಎಂಬ ಪ್ರತ್ಯಯ ಸೇರಿಸಿದರೆ ನೀಚ ಎಂಬ ಅರ್ಥಬರುವುದುಂಟು: ಶರೀರಕ = ಕುತ್ಸಿತವಾದ ಮೈ. ಕುತ್ಸಿತನಾದ ನರನೇ ನರಕ. ಆತನನ್ನು ಸಂಹರಿಸಿ, ಅವರಷ್ಟೂ ಮಂದಿಯನ್ನು ಕೃಷ್ಣನು ವಿವಾಹವಾದನೆಂದರೆ, ಭೌತಿಕವಾಗಿ ಅಷ್ಟು ಮಂದಿ ಹೆಣ್ಣುಗಳಿಗೆ ಒಂದು ನೆಲೆಗಾಣಿಸಿದ ಎಂಬರ್ಥ. ತಾತ್ತ್ವಿಕವಾಗಿ ನೋಡಿದಾಗ ಬಹಿರ್ಮುಖಪ್ರವೃತ್ತಿಗೇ ಸೆರೆಸಿಕ್ಕ ನಾಡಿಗಳು ಭೋಗದಾಸಿಯ ಸ್ಥಿತಿಯನ್ನು ತೊರೆದು ಪರಪುರುಷನೆಂದೆನಿಸದ ಪರಮಪುರುಷನ - ಅರ್ಥಾತ್ ಆತ್ಮಸಂಗದ - ಹಾದಿಯನ್ನು ಹಿಡಿಯುವಂತಾಯಿತೆಂದರ್ಥ. ಹೀಗಾಗಿ ಅಂತರ್ಮುಖಪ್ರವೃತ್ತಿಯೇರ್ಪಟ್ಟು ಭವಪಾಶದ ದೆಸೆಯಿಂದಾಗುವ ಬಿಡುಗಡೆಯನ್ನೇ ಇದು ಸೂಚಿಸುವುದು. ಅಂತರ್ಜ್ಯೋತಿಯೆಂದರೆ ಪ್ರತ್ಯಗ್‍ಜ್ಯೋತಿಯೇ. ಹೊರಬೆಳಕಾದ ಪ್ರಾಗ್‍ಜ್ಯೋತಿಷವೆಂಬುದು ಧರ್ಮವಿರೋಧಿಯಾದಲ್ಲಿ, ಅದಕ್ಕೆ ಪ್ರಹಾರವು ಸಿದ್ಧವೆಂಬುದನ್ನು ಇಲ್ಲಿ ಸ್ಪಷ್ಟಪಡಿಸಿದೆ. ಜೂಜು-ಕಳ್ಳತನಗಳು ಇವೆರಡೂ ಕೂಡ ಮನುಷ್ಯನನ್ನು ಪಾಪಭಾಗಿಯಾಗಿಸತಕ್ಕವು. ಹಾಗಿರುವಾಗ ಅವನ್ನು ಹಬ್ಬದ ದಿನ ಮಾಡುವುದು ಸರಿಯೇ? ಸಾಲದೆಂಬಂತೆ ಶಿವ-ಪಾರ್ವತಿಯರೇ ಜೂಜಾಡಿದರೆಂಬ ಕಥೆಯನ್ನು ಕಟ್ಟಿ ಅವರನ್ನೂ ನಮ್ಮ ಮಟ್ಟಕ್ಕೆ ಇಳಿಸಬೇಕೇ? - ಎಂದೂ ಪ್ರಶ್ನೆಯುಂಟು. ನಳ-ಯುಧಿಷ್ಠಿರರ ಕಥೆಗಳಲ್ಲಿ ಜೂಜೆಂಬ ಮೋಜು ಎಷ್ಟು ಕಷ್ಟಕ್ಕೀಡುಮಾಡಿತಲ್ಲವೆ? ಆದರೂ ಕೇವಲ ವಿನೋದಕ್ಕಾಗಿ ಒಮ್ಮೆ ಆಡಿದಲ್ಲಿ ಇವು ಚಟವಾಗವು. ಕ್ರಿಕೆಟ್ಟನ್ನು ಸಹ friendly match ಎಂದು ಆಡುವುದುಂಟು; ಮುಂಗೋಪಿ-ಅವಿವೇಕಿಗಳ ಕೈಗೆ ಸಿಕ್ಕರೆ ಅಲ್ಲೂ ರಂಪಾಟವಾಗುವುದೇ: ಹಾಗೆಂದು ಆ ಆಟವೇ ಬೇಡವೆಂದೇ? ಇನ್ನು ಪಾರ್ವತೀಪರಮೇಶ್ವರರ ಆಟವೆಂದರೆ ಅದು ನಮ್ಮಾಟದಂತಲ್ಲ. ವಿಷ್ಣು-ಲಕ್ಷ್ಮಿಯರು ಪಗಡೆಯಾಡುವ ಚಿತ್ರವನ್ನು ವೇದಾಂತದೇಶಿಕರು ಕೊಟ್ಟಿದ್ದಾರೆ. ತಾತ್ತ್ವಿಕದೃಷ್ಟಿ ಅಲ್ಲಿ ಸ್ಪಷ್ಟ: ಪಗಡೆಯ ಹಾಸು ತ್ರಿಗುಣಮಯವಾದುದು; ಸೃಷ್ಟಿ-ಲಯಗಳಲ್ಲಿ ಅಧಿಕೃತರಾದವರೇ ದಾಳಗಳು; ವೇದಗಳೂ ನಿತ್ಯಸೂರಿಗಳೂ ಈ ಆಟಕ್ಕೆ ಪ್ರೇಕ್ಷಕರು. ಹೀಗೆ ಜಗದಾಟವೆಲ್ಲ ಭಗವಂತನ ಲೀಲೆಯೆಂಬ ತತ್ತ್ವವನ್ನು ಇದು ಪ್ರತಿಪಾದಿಸುತ್ತದೆ. ಇನ್ನು ಶಿವನು ಸೋತ, ಪಾರ್ವತಿಯು ಗೆದ್ದಳೆಂದು ಹೇಳುವಲ್ಲಿ, ಅಭ್ಯುದಯಕ್ಕೆ ಅಧಿದೇವತೆಯಾದ ಪಾರ್ವತಿಯು ಅನುಗ್ರಹಮುಖಳಾದಳೆಂದೂ, ಲೌಕಿಕವಾದ ಏಳ್ಗೆಯನ್ನು ಬಯಸುವವರಿಗೆ ಕಾರ್ಯಸಿದ್ಧಿಸೂಚಕವಿದೆಂದೂ ತಿಳಿಯತಕ್ಕದ್ದು. ಕಳ್ಳತನದ ಆಟವನ್ನೂ ಅಂದಾಡುವುದುಂಟು. ಕಳ್ಳತನವೂ ಒಂದು ಕಲೆಯಲ್ಲವೆ? ಅದನ್ನೂ ವಿನೋದಮಾತ್ರಕ್ಕಾಗಿ ಪರಸ್ಪರವಾಗಿ ಆಡಿದಲ್ಲಿ, ಯಾರಲ್ಲಿ ಜಾಣ್ಮೆ-ಕಲಾವಂತಿಕೆಗಳಿವೆಯೆಂಬುದು ಹೊರಪಡುತ್ತದೆ. ಇವೆಲ್ಲವೂ "ಮಾತುಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ" - ಎಂದು ಹೇಳುವ ಪರಿಯೇ. ಅಧಿಕವಾಗಿ ಸಿಹಿಪದಾರ್ಥ ತಿಂದು ಆರೋಗ್ಯ ಹಾಳಾಯಿತೆಂದು ಇನ್ನು ಸಿಹಿಯನ್ನೇ ಯಾರೂ ಮಾಡಬಾರದೆಂದಾಗ್ರಹಿಸುವುದು ತರವೇ? ಅತಿಭುಕ್ತಿ-ಅತೀವೋಕ್ತಿಗಳಾದರೆ ಪ್ರಾಣಕ್ಕೇ ಸಂಚಲ್ಲವೆ? ಮಿತಿಯರಿತಲ್ಲಿ ಯಾವುದೂ ಸರಿಯೇ. ಸೋದರ-ಸೋದರೀ ಸಂಬಂಧ ಸೋದರಿಯ ಮನೆಗೆ ಸೋದರನು ಹೋಗಿಬರುವ ಕ್ರಮವನ್ನು ಯಮದ್ವಿತೀಯೆ ಎಂಬ ದಿನದಲ್ಲಿ ತಂದಿದ್ದಾರೆ. ಯಮನೇ ತನ್ನ ಸೋದರಿಯಾದ ಯಮುನೆಯ ಮನೆಗೆ ಹೋಗಿಬರುವ ದಿನವದು. ಅವರ ಸ್ಮರಣೆ ಬರುವಂತೆ ಮಾಡಿರುವುದರ ಉದ್ದೇಶವಿದು. ಇಬ್ಬರೂ ಸೂರ್ಯನ ಮಕ್ಕಳೇ ಆದರೂ, ಯಮನು ಘೋರರೂಪಿ; ಯಮುನೆಯು ಪಾಪಶಮನಿ. ಅವನು ಉಗ್ರ; ಇವಳು ಮೃದುಲೆ! ಆದರೂ ಅಂದು ಪರಸ್ಪರ ಪ್ರೀತಿಯನ್ನು ಹರಿಸುತ್ತಾರೆ. ಯಮುನೆಯು ಮಾತ್ರ ಧರ್ಮರತೆ, ಯಮನು ನಿರ್ಘೃಣ - ಎಂದೇನೂ ಅಲ್ಲ. ಇಬ್ಬರೂ ಮಾಡುತ್ತಿರುವುದೂ ಧರ್ಮಪಾಲನೆಯೇ. (ಪ್ರ)ವೃತ್ತಿ ವಿವಿಧವಾದರೂ ಲಕ್ಷ್ಯವಿಬ್ಬರದೂ ಏಕವೇ: ಇಬ್ಬರೂ ಒಂದೇ ತಂದೆಯ ಮಕ್ಕಳೇ. ತನ್ನ ನಿಗ್ರಹಬುದ್ಧಿಯಿಂದ ಜನರು ಸನ್ಮಾರ್ಗಕ್ಕೆ ಬರುವಂತೆ ಮಾಡುವವ ಯಮ; ಪಾಪತೊಳೆದು ಜನರು ಸನ್ಮಾರ್ಗಕ್ಕೆ ಬರುವಂತೆ ಅನುಗ್ರಹಬುದ್ಧಿಯಿಂದ ಮಾಡುವವಳು ಯಮುನೆ. "ಪಾಪಕರ್ಮದಲ್ಲಿ ಮನಸ್ಸು ರಮಿಸದಂತೆ ಮಾಡಪ್ಪಾ" - ಎಂದು ಯಮನಲ್ಲಿ ಪ್ರಾರ್ಥನೆ; "ಪುಣ್ಯಕರ್ಮದತ್ತ ಮನಸ್ಸು ಕ್ರಮಿಸುವಂತೆ ಮಾಡಮ್ಮಾ" - ಎಂದು ಯಮುನೆಯಲ್ಲಿ ಪ್ರಾರ್ಥನೆ. ಹೀಗೆ ಆದರ್ಶರಾದ ಸೋದರ-ಸೋದರಿಯರನ್ನು ವಂದಿಸಿ ಅವರ ಆಶೀರ್ವಾದವನ್ನು ಪಡೆದು ಅವರಂತೆ ಇರುವಂತೆ ಅನುಗ್ರಹವನ್ನು ಪಡೆಯುವುದೂ ಜೀವನದ ಒಂದು ಭಾಗ್ಯವೇ. ಬಲಿಗಾದ "ಮೋಸ" ಬಲಿಯು ಒಳ್ಳೆಯ ರೀತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದನಲ್ಲವೆ? ಆತನನ್ನು ಹೀಗೆ "ಬಲಿಹಾಕ"ಬೇಕಿತ್ತೇ? ದಾನವಿತ್ತ ದಾನವನಿಗೆ ದೇವನಿಂದಲೇ ದ್ರೋಹವೇ? ಉಪಕಾರಿಗೆ ಅಪಕಾರವೇ? - ಎಂದೆಲ್ಲ ಪ್ರಶ್ನೆಗಳು. ವಾಸ್ತವವಾಗಿ ಇಂದ್ರನ ರಾಜ್ಯವನ್ನು ಕಿತ್ತುಕೊಂಡ ಬಲಿ ಅಧರ್ಮವನ್ನೇ ಎಸಗಿದ್ದನು. ಆದ್ದರಿಂದ ಅದನ್ನು ಇಂದ್ರನಿಗೆ ಕೊಡಿಸುವ ಸಲುವಾಗಿ ವಿಷ್ಣುವು ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು, ಬಲಿಯನ್ನು ಪಾತಾಳಕ್ಕೆ ಕಳುಹಿಸಿದ್ದು. ಮೇಲ್ನೋಟಕ್ಕೆ ಇದು ಅಧೋಗತಿಯೆಂದು ಕಂಡರೂ, ಸ್ವರ್ಗಾಧಿಕವಾದ ವೈಭವವನ್ನೊಳಗೊಂಡ ಸುತಲಲೋಕದ ಆಧಿಪತ್ಯವು ಆತನಿಗೆ ದೊರಕಿದೆ. ಅದಲ್ಲದೆ ಆತನಿಗೆ ಇಂದ್ರಪದವಿಯೇ ಕಾಲಾನುಕ್ರಮದಲ್ಲಿ ದೊರೆಯಲಿದೆಯೆಂದೇ ಆತನು "ಭವಿಷ್ಯೇಂದ್ರ". ಭಗವಂತನ ಪಾದಸ್ಪರ್ಶವು ದೊರಕಬೇಕಾದರೆ ಅಹಂಕಾರವು ಮೊದಲು ಪೂರ್ತಿಯಾಗಿ ಅಳಿಯಬೇಕು; ಆದರಿಲ್ಲಿ ಶತ್ರುವಾದ ಅಹಂಕಾರದ ನಿರ್ಗಮನವೂ ಭಗವತ್ಪಾದಸ್ಪರ್ಶವೂ ಸಮಕಾಲದಲ್ಲಿ ನಡೆದಿದೆ! ಬಲಿಯು ಅಸುರನಾದರೂ ಆತನಿಗೆ ಆಸುರಭಾವವು ಮೂಡಿ ತೊಂದರೆ ಕೊಡದಿರಲು ಭಗವಂತನೇ ಆತನಿಗೆ ದ್ವಾರಪಾಲಕನಾಗಿ ತನ್ನ ಸುದರ್ಶನಚಕ್ರದ ರಕ್ಷೆಯನ್ನು ದಯಪಾಲಿಸಿದ್ದಾನೆ! ಸಾಧಾರಣನೋಟಕ್ಕೆ ಬಲಿಗಾದದ್ದು ಮೋಸವೇ. ಮಗುವು ಆಹಾರಸೇವನೆಯ ವಿಷಯದಲ್ಲಿ ತಂಟೆ-ತರಲೆ ಮಾಡಿದಾಗ ತಾಯಿಯು ಸುಳ್ಳು ಹೇಳಿ ಊಟಮಾಡಿಸುವಳಲ್ಲವೆ? ನಾಲಿಗೆಗೆ ಜೇನುತುಪ್ಪ ಸವರಿ ಔಷಧಿಯನ್ನು ರೋಗಿಯ ಬಾಯೊಳಕ್ಕೆ ವೈದ್ಯನು ಇಳಿಸುವನಲ್ಲವೆ? ಇದೆಲ್ಲವೂ ಹಾಗಾದರೆ ಮೋಸವೆನ್ನೋಣವೇ? ಮೋಸವೋ ಅಲ್ಲವೋ, ದರ್ಪದ ದಾನವನೆದುರಿಗೆ ದೇವಾಧಿದೇವನಾದವನು ಯಾಚನೆಗಾಗಿ ಕೈಚಾಚುವುದೇ? "ಯಾಚನಾಂತಂ ಹಿ ಗೌರವಂ". ಮಾನ ಕಳೆಯಿತಲ್ಲವೇ? - ಎಂದೂ ಪ್ರಶ್ನೆ. ಮತ್ತೊಬ್ಬರ ಅಥವಾ ಲೋಕದ ಏಳ್ಗೆಗೋಸ್ಕರವಾಗಿ, ಲೋಗರು ಕೀಳಾಗಿ ಕಾಣುವ ಮಾರ್ಗವನ್ನೂ ಮಹಾತ್ಮರು ಕೆಲವೊಮ್ಮೆ ಆಶ್ರಯಿಸುವುದುಂಟು. ಮಾನವೇ ಸರ್ವಸ್ವವೇ? ಕಥಾತತ್ತ್ವ ಕಥೆಯ ಮರ್ಮವೂ ಯೋಗದೃಷ್ಟಿಯಿಂದಲೇ ಗೋಚರವಾಗತಕ್ಕುದು. "ಉರೋ ವೇದಿಃ" ಎನ್ನುವಂತೆ ಹೃದಯವೇ ಬಲೀಂದ್ರನ ಯಜ್ಞವೇದಿ. ಆಸುರೀಶಕ್ತಿಯ ಎಡೆ ಮೂಲಾಧಾರ; ಆದರದು ಪ್ರವರ್ಧಮಾನವಾಗಿ ಹೃದಯಪರ್ಯಂತ ಆಕ್ರಮಿಸಿದೆ: ಅಲ್ಲೆಲ್ಲಾ ಆಸುರಭಾವವೇ ತುಂಬಿದೆ. ಆದರೀಗ ಯಜ್ಞವೇದಿಕೆಯೆನಿಸುವ ಹೃದಯಸ್ಥಾನದಲ್ಲಿ ಪರಮಾತ್ಮನಿಗಿಷ್ಟು ಜಾಗವಿತ್ತನಲ್ಲವೇ?: ಪರಮಾತ್ಮಶಕ್ತಿಯು ಬೆಳೆದು ಕ್ಷೇತ್ರವೆನಿಸುವ ಇಡೀ ಶರೀರವನ್ನೇ ಇದೋ ಭಗವನ್ಮಯವಾಗಿಸಿದೆ; ಆಸುರೀಶಕ್ತಿಯನ್ನು ಸ್ವಸ್ಥಾನದಲ್ಲಿ ಕೂರಿಸಿದೆ. ಬಲಿಯ ದೇಹವೋ ಸ್ಥಾನವೋ ಆಸುರವಾಗಿರಬಹುದು, ಆದರೆ ಭಾವವು ದೈವ್ಯವಾಗಿದೆ. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇದಿಷ್ಟೂ ತತ್ತ್ವರಹಸ್ಯವನ್ನು ಅರುಹಿದವರು. "ದಿವಿ ವಾ ಭುವಿ ವಾ ನರಕೇ ವಾ" ಎಂದು ಹೇಳುವಂತೆ, ವಾಸವು ಯಾವ ದೇಶದಲ್ಲಾದರೇನು, ಯಾವ ದೇಹದಲ್ಲಾದರೇನು?: "ನರತ್ವಂ ದೇವತ್ವಂ... ಕೀಟತ್ವಂ" - ಯಾವುದಾದರೂ ಸರಿಯೇ! ಭಗವಚ್ಚರಣ-ಸ್ಮರಣವು ಅನುಸ್ಯೂತವಾಗಿದ್ದರೆ ಅದಕ್ಕಿಂತಲೂ ಹೆಚ್ಚೇನು ಹಿರಿದೇನು?: ಗುರಿಯು ದೊರೆಯದಂತಿದ್ದಾಗ ಎಲ್ಲಿದ್ದರೇನು?; ಗುರಿಯೇ ದೊರೆತಮೇಲೆ ಎಲ್ಲಿದ್ದರೇನು?! ಭಗವಂತನನ್ನು ಆರಾಧಿಸುವುದು ಎಷ್ಟು ಪುಣ್ಯಕಾರಿಯೋ ಭಾಗವತರನ್ನು ಅರ್ಚಿಸುವುದೂ ಅಷ್ಟೇ ಪುಣ್ಯಾವಹ. ಬಲೀಂದ್ರನೂ ಪರಮಭಾಗವತನೇ: ಪೂಜೆಗೆ ಅರ್ಹನೇ. ಬಲಿಪಾಡ್ಯಮಿಯಂದು ಭುವಿಗೆ ಅತಿಥಿಯಾಗಿ ಆಗಮಿಸುವ ಆತನಿಗಂದು ಸಲ್ಲಬೇಕಾದುದು ಮಹಾರಾಜಮರ್ಯಾದೆಯೇ ಸರಿ. "ಹೊನ್ನು, ಹೊನ್ನು" ಎನ್ನುತ್ತಾ ಹೊನ್ನಾವರಿಕೆಯನ್ನು ಅಂಗಳದಲ್ಲಿ ಚೆಲ್ಲುತ್ತಾ, ಆತನಿಗೆ ಸ್ವಾಗತಮಾಡುವುದರ ಸೊಗಸೇ ಸೊಗಸಲ್ಲವೇ? ಸುವರ್ಣದ ಸುಮಗಳನ್ನು ಸಲ್ಲಿಸಲಿಕ್ಕೇ ಆತನು ಅರ್ಹನೆನಿಸಿದರೂ, ಹೊನ್ನಿನ ಹೊಳಪನ್ನಷ್ಟೇ ಹೊಂದಿರುವ ನಾವೀವ ಹೂವು ಸಹ ವರಗುಣಭರಿತವೇ: ಇತ್ತ ಆಯುರ್ವೇದದ ಪ್ರೇಕ್ಷೆಯಿಂದಲೂ ಪಿತ್ತಹರವೇ, ಅತ್ತ ಅತಿಥಿಯ ದೃಷ್ಟಿಗಂತೂ ತುಷ್ಟಿಕರವೇ. ಸಿಂಹಾಸನಕ್ಕೆಂದು ಆಹ್ವಾನಿಸುವಾಗಿನ ಈ ಹರ್ಷದ ಹೆಜ್ಜೆಯು ನೆರೆದ ಸರ್ವರ ಲೋಚನಗಳಿಗೂ ರೋಚಕವೇ. ಅತ್ತ ಬಹಿರಂಗದ ಜಗವನ್ನೆಲ್ಲ ಜಗಮಗಾಯಮಾನವಾಗಿಸಿ, ಇತ್ತ ಅಂತರಂಗದೊಳಗೆಲ್ಲ ಅನಂತದ ಅರಿವಿನ ಬೆಳಕಿನ ಹೊಳೆಯನ್ನೇ ಹರಿಯಿಸುವ, ಕಣ್ಣಿಗೂ ಮನಸ್ಸಿಗೂ ಆತ್ಮಕ್ಕೂ ಹಬ್ಬವೆನಿಸುವ, ಈ ಉತ್ತಮೋತ್ತಮ ಉತ್ಸವದಲ್ಲಿ ಉತ್ಸಾಹದಿಂದ ನಾವೆಲ್ಲರೂ ಪಾಲ್ಗೊಳ್ಳೋಣವೇ?
The dashing action hero of Kannada cinema muscular Vijay (of Dhuniya fame) has showed his simplicity on Thursday on sunny afternoon just sleeping below the tree. A piece of cloth was tied on top of the tree for the shade. Vijay was fast asleep in the afternoon and tired from hectic shooting of ‘Kanteerava’. We have seen stars staying in the caravan, going miles to take a nap in the AC rooms. Here is Vijay that was noticed by www.chitratara.com editor R Manohar when he visited Mysore on Thursday to cover assignments. ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ತನಕ್ಕೆ ಮತ್ತೊಂದು ಹೆಸರು ನಿರ್ಮಾಪಕ ರಾಮು, ಇವರು ನಿರ್ಮಿಸುವ ಯಾವುದೇ ಚಿತ್ರ ರಿಮೇಕ್ ಆಗಲಿ ಸ್ವಮೇಕ್ ಆಗಲಿ ಆ ಚಿತ್ರವು ಸಾಕಷ್ಟು ಅದ್ದೂರಿ ತನದಿಂದ ಕೂಡಿರಬೇಕು ಎಂಬುದಕ್ಕೆ ರಾಮು ಅಭಿಪ್ರಾಯ ಬೇರೆ ಭಾಷೆಗಳಿಗೆ ಪೈಪೋಟಿಯಾಗಿ ಕನ್ನಡ ಚಿತ್ರಗಳು ನಿಲ್ಲಬೇಕೆಂಬುದೆ ಇವರ ಇಚ್ಛೆ. ಇವರ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ೨೭ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. ನಿರ್ಮಾಪಕ ರಾಮು ರಾಮು ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ ಕಂಠೀರವ ಚಿತ್ರದ ಚಿತ್ರೀಕರಣವು ಮೈಸೂರಿನಲ್ಲಿ ನಡೆಯುತ್ತಿದ್ದು, ಚಿತ್ರಕ್ಕಾಗಿ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿದ್ದ ಅದ್ದೂರಿ ಸೆಟ್‌ನಲ್ಲಿ ೩೦ ಜನ ಫೈಟರ‍್ಸ್‌ಗಳೊಂದಿಗೆ ವಿಜಯ್ ಏಕಾಂಗಿಯಾಗಿ ಯಾವುದೇ ಡ್ಯೂಪ್ ಇಲ್ಲದೆ ಹೊಡೆದಾಡುವ ಮೈನವಿರೇಳಿಸುವ ಸನ್ನಿವೇಶವನ್ನು ಮುಂಬೈ ಹಾಗೂ ಮಣಿಪುರದಿಂದ ಬಂದ ವಿಶೇಷ ತರಬೇತಿ ಪಡೆದ ತಾಂತ್ರಿಕ ವರ್ಗದವರನ್ನು ಬಳಸಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದೊಂದಿಗೆ ಎಂಟು ದಿವಸಗಳ ಕಾಲ ದಾಸರಿ ಸೀನು ಛಾಯಾಗ್ರಹಣದಲ್ಲಿ ನಿರ್ದೇಶಕ ತುಷಾರ್ ರಂಗನಾಥ್ ಚಿತ್ರಿಸಿಕೊಂಡರು. ದಿನವು ಬೆಳಿಗ್ಗೆ ೬ ಗಂಟೆಗೆ ಮೊದಲ ಶಾಟ್ ತೆಗೆಯುತ್ತಿದ್ದು, ಇಡೀ ಚಿತ್ರತಂಡವು ಹುರುಪಿನಿಂದ ಸಹಕರಿಸುತ್ತಿದ್ದು, ಚಿತ್ರವು ತುಂಬಾ ಅದ್ದೂರಿಯಾಗಿ ಮೂಡಿ ಬರುತ್ತಿದೆ ಎಂದಿರುವ ನಿರ್ಮಾಪಕ ರಾಮು ನವನಟಿ ರಿಷಿಕಾಳಿಗೆ ಈ ಚಿತ್ರ ಬಿಡುಗಡೆಯಾದ ನಂತರ ಸಾಕಷ್ಟು ಬೇಡಿಕೆಯ ನಟಿ ಎನಿಸಿಕೊಳ್ಳಲಿದ್ದಾಳೆ ಎಂದು ತಿಳಿಸಿದ್ದಾರೆ. ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ, ದಾಸರೀ ಸೀನು ಛಾಯಾಗ್ರಹಣ, ಚಕ್ರೀ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಹರ್ಷನೃತ್ಯ, ನಂಜುಂಡಸ್ವಾಮಿ ಕಲೆ, ಸುನಿಲ್ ಮಹೇಶ್ ನಿರ್ದೇಶನ, ಸಹಕಾರವಿದ್ದು, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ತುಷಾರ್ ರಂಗನಾಥ್ ಹೊತ್ತಿದ್ದಾರೆ. ತಾರಾಗಣದಲ್ಲಿ, ವಿಜಯ್, ಶುಭಾಪುಂಜ, ಶ್ರೀನಿವಾಸಮೂರ್ತಿ ಸಂಗೀತ, ಸುಧಾರಾಣಿ, ಶ್ರೀಧರ್, ಅವಿನಾಶ್, ಮುಕೇಶ್ ರಿಷ್ಯಾ, ರಾಹುಲ್‌ದೇವ್ ಜಿ.ವಿ., ಸಾಧುಕೋಕಿಲ, ಬುಲೆಟ್ ಪ್ರಕಾಶ್, ಧರ್ಮ, ರೇಖಾ ಮುಂತಾದವರಿದ್ದು, ಈ ಚಿತ್ರದ ಮೂಲಕ ರಿಶಿಕಾ ಸಿಂಗ್ ಎಂಬ ನವನಟಿಯ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಲಿದೆ.
ಬೆಂಗಳೂರು(ನ.03): ‘ರಾಜ್ಯದಲ್ಲಿ ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ನಂಬಿಕೆಯನ್ನು ಹೂಡಿಕೆದಾರರು ಹೊಂದಿರುವುದರಿಂದಲೇ ದೊಡ್ಡ ಪ್ರಮಾಣದ ಹೂಡಿಕೆ ಹರಿದುಬಂದಿದೆ. ಈ ವಿಶ್ವಾಸ ನಮಗೂ ಇದೆ. ಹೀಗಾಗಿಯೇ 2025ರ ಜನವರಿಗೆ ಮುಂದಿನ ಆವೃತ್ತಿಯ ಜಾಗತಿಕ ಹೂಡಿಕೆದಾರರ ಸಮಾವೇಶವನ್ನೂ ಘೋಷಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದು ನಮ್ಮ ದೃಢ ವಿಶ್ವಾಸ. ನಾವು ಅಧಿಕಾರಕ್ಕೆ ಬಂದು ಈಗ ಒಡಂಬಡಿಕೆ ಮಾಡಿಕೊಂಡಿರುವ ಎಲ್ಲಾ ಯೋಜನೆಗಳಿಗೂ ಅನುಮೋದನೆ ನೀಡಿ ಅನುಷ್ಠಾನಗೊಳಿಸುವುದರ ಜತೆಗೆ ಉದ್ಯಮಿಗಳ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸುತ್ತೇವೆ’ ಎಂದು ಹೇಳಿದರು. ಬುಧವಾರ ಉದ್ಘಾಟನೆಗೊಂಡ ‘ಜಾಗತಿಕ ಹೂಡಿಕೆದಾರರ ಸಮಾವೇಶದ’ (ಜಿಮ್‌-2022) ಮೂಲಕ ಚುನಾವಣಾ ಸಂದೇಶ ರವಾನಿಸಿದ ಅವರು, ‘ಮುಂದಿನ ವರ್ಷದ ಮೇ ತಿಂಗಳಲ್ಲಿ ಚುನಾವಣೆ ಬರಲಿದೆ. ಹೀಗಿದ್ದರೂ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಯಾವ ಧೈರ್ಯದಿಂದ ಮಾಡುತ್ತಿದ್ದೀರಿ ಎಂಬ ಪ್ರಶ್ನೆ ಕೇಳಿ ಬಂತು. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದೇ ವಿಶ್ವಾಸದಲ್ಲಿ 2025ರ ಜನವರಿಗೆ ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶವನ್ನೂ ಘೋಷಿಸುತ್ತಿದ್ದೇನೆ. ಇದು ನಮಗೆ ಇರುವ ವಿಶ್ವಾಸ’ ಎಂದು ಹೇಳಿದರು. Invest Karnataka 2022: ಮೊದಲ ದಿನವೇ ದಾಖಲೆಯ ₹7.6 ಲಕ್ಷ ಕೋಟಿ ಹೂಡಿಕೆ! ‘ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್‌ (ಲಕ್ಷ ಕೋಟಿ) ಡಾಲರ್‌ ಆರ್ಥಿಕತೆಯ ಗುರಿಗೆ ರಾಜ್ಯದಿಂದಲೇ 1 ಟ್ರಿಲಿಯನ್‌ ಡಾಲರ್‌ ಕೊಡುಗೆ ನೀಡುತ್ತೇವೆ. ನಮ್ಮ ಉದ್ಯಮ ಸ್ನೇಹಿ ನೀತಿಗಳು, ಜನಪರ ಆಡಳಿತದಿಂದಾಗಿ ಜನ ಹಾಗೂ ಹೂಡಿಕೆದಾರರ ವಿಶ್ವಾಸ ಗಳಿಸಿದ್ದೇವೆ. ನಮ್ಮ ಸರ್ಕಾರದ ಮೇಲೆ ಉದ್ಯಮಿಗಳಿಗೆ ವಿಶ್ವಾಸವಿರುವುದರಿಂದಲೇ ಮೇ ತಿಂಗಳಲ್ಲಿ ಚುನಾವಣೆ ಇದ್ದರೂ 7 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಹರಿದುಬಂದಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 3 ತಿಂಗಳಲ್ಲಿ ಅನುಮೋದನೆ: ‘ಇನ್ವೆಸ್ಟ್‌ ಕರ್ನಾಟಕ -2022ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಹಾಕಲಾಗಿರುವ ಎಲ್ಲ ಬಂಡವಾಳ ಹೂಡಿಕೆಯ ಒಪ್ಪಂದಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, 2.80 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳದ ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಮುಂದಿನ 3 ತಿಂಗಳೊಳಗಾಗಿ ಹೂಡಿಕೆಯ ಎಲ್ಲಾ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಲಾಗುವುದು. ಕರ್ನಾಟಕದಲ್ಲಿ ಇನ್ನೂ ಹೆಚ್ಚು ಕೈಗಾರಿಕಾ ಸ್ನೇಹಿ ವಾತಾವರಣವನ್ನು ನಿರ್ಮಿಸುತ್ತೇವೆ. ಗರಿಷ್ಟಮಟ್ಟದ , ದಕ್ಷ ಹಾಗೂ ಉತ್ತಮ ಗುಣಮಟ್ಟದ ಉತ್ಪಾದಕತೆ ರಾಜ್ಯದಲ್ಲಿ ಆಗಬೇಕು ಎಂಬುದು ನಮ್ಮ ಗುರಿ’ ಎಂದರು. ವಿಶ್ವಮಟ್ಟಕ್ಕೆ ಬೆಳೆಯಬೇಕೆಂಬ ಸಂಕಲ್ಪ : ‘ಕರ್ನಾಟಕ ಏರೋಸ್ಪೇಸ್‌, ಬಯೋಟೆಕ್‌, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ರಂಗಗಳಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸ್ಟಾರ್ಚ್‌ ಅಪ್‌ ಹಾಗೂ ಯೂನಿಕಾರ್ನ್‌ ಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಭಾರತದ ಸುಮಾರು 105 ಯೂನಿಕಾರ್ನ್‌ಗಳಲ್ಲಿ ಸುಮಾರು 35 ಯೂನಿಕಾರ್ನ್‌ಗಳು ಕರ್ನಾಟಕದಲ್ಲಿವೆ. ದೇಶದ 4 ಡೆಕಾಕಾರ್ನ್‌ಗಳಲ್ಲಿ 3 ಕರ್ನಾಟಕಲ್ಲಿದೆ. ಉತ್ಪಾದನಾ ವಲಯ, ಸೇವಾ ವಲಯ, ಐಟಿಬಿಟಿ ವಲಯ, ಸ್ಟಾರ್ಚ್‌ಅಪ್‌ ವಲಯದಲ್ಲಿ ಕರ್ನಾಟಕ ಬಲಿಷ್ಠವಾಗಿದೆ. ನಮ್ಮಲ್ಲಿನ ಪ್ರತಿಷ್ಠಿತ ಕೈಗಾರಿಕೆಗಳು ವಿಶ್ವಮಟ್ಟಕ್ಕೆ ಬೆಳೆಯಬೇಕು ಎಂಬುದು ನಮ್ಮ ಸಂಕಲ್ಪ’ ಎಂದು ಹೇಳಿದರು. Invest Karnataka 2022: ದೇಶದ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ‘ಸಂಶೋಧನೆಗಳಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಅಂಡ್‌ ಡಿ) ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ. ಸಣ್ಣಗ್ಯಾರೇಜ… ನಿಂದ ಹಿಡಿದು ದೊಡ್ಡ ಸಂಸ್ಥೆಯವರೆಗೆ ಸಂಶೋಧನೆಗೆ ಒತ್ತು ನೀಡಲಾಗುವುದು. ಇದಕ್ಕೆ ಪೂರಕವಾಗಿ ಈಸ್‌ ಆಫ್‌ ಡುಯಿಂಗ್‌ ಬಿಸೆನೆಸ್‌, ಕೈಗಾರಿಕಾ ಪ್ರೋತ್ಸಾಹಕ ನೀತಿ, ಸೆಮಿಕಂಡಕ್ಟರ್‌ ನೀತಿ, ಇವಿ ನೀತಿ, ಆರ್‌ ಅಂಡ್‌ ನೀತಿ ರಾಜ್ಯದಲ್ಲಿವೆ’ ಎಂದರು. ಹೆಚ್ಚು ಉದ್ಯೋಗ ನೀಡುವ ಉದ್ದಿಮೆಗೆ ಹೆಚ್ಚು ಸಬ್ಸಿಡಿ ರಾಜ್ಯ ಶ್ರೀಮಂತವಾಗುವುದು ಮಾತ್ರವಲ್ಲ, ಇಲ್ಲಿನ ಜನ ಶ್ರೀಮಂತರಾಗಬೇಕು. ಈ ಸದುದ್ದೇಶದಿಂದ ಕರ್ನಾಟದಲ್ಲಿ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗಳಿಗೆ ಎಲ್ಲ ರೀತಿಯ ಸಬ್ಸಿಡಿಗಳನ್ನು ನೀಡಲಾಗುವುದು. ಜತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಸಬ್ಸಿಡಿಗಳನ್ನು ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಡಾನ್‌ ಮುಗಿಸೋಕೆ ಹೋಗಿ ಬರಿಗೈಲಿ ವಾಪಾಸ್‌ ಬಂದ ಚಕ್ರೆಗೆ ಏನ್‌ ಅನಿಸಿತೋ ಗೊತ್ತಿಲ್ಲ. ಅಂಡರ್‌ವರ್ಲ್ಡ್‌ನಿಂದ ದೂರ ಉಳಿಯೋಕೆ ತೀರ್ಮಾನಿಸಿದ್ದ. ಜನರ ಕೊಲ್ಲೋ ಬದಲು ಕಾಯೋ ಕೆಲಸ ಮಾಡೋಕೆ ಯೋಚನೆ ಮಾಡಿ 1996ರಲ್ಲಿ ಚುನಾವಣೆಗೆ ಗೆದ್ದು ಗೆಲುವು ಕೂಡ ಸಾಧಿಸಿದ. ಬಳಿಕ ತನ್ನ ಪತ್ನಿಯನ್ನೂ ಗೆಲ್ಲಿಸಿದ. Sep 30, 2022, 9:44 PM IST ಬೆಂಗಳೂರು (ಸೆ. 30): ಕ್ರಿಸ್ಟೋಫರ್ ಚಕ್ರವರ್ತಿ ಅಲಿಯಾಸ್ ಚಕ್ರೆಯ ಅಂಡರ್ವರ್ಲ್ಡ್ ಜರ್ನಿ ಬಗ್ಗೆ ನಾವು ಕಳೆದ 3 ದಿನಗಳಿಂದ ಹೇಳುತ್ತಲೇ ಬಂದಿದ್ದೇವೆ. ನಿನ್ನೆ ನಾವು ಚಕ್ರೆ, ಮುತ್ತಪ್ಪ ರೈ ಹಾಕಿಕೊಟ್ಟ ಸ್ಕೆಚ್ನಂತೆ ಸೆಂಟ್ರಲ್ ಜೈಲ್ ಎದುರಿಗೇ ಅಂದಿನ ಭೂಗತ ದೊರೆ ಜೈರಾಜ್‌ ಮೇಲೆ ಅಟ್ಯಾಕ್ ಮಾಡ್ತಾರೆ. ಆದ್ರೆ ಅವತ್ತು ಜೈರಾಜ್‌ನ ಟೈಂ ಚೆನ್ನಾಗಿತ್ತು. ಚಕ್ರೆ ಸೇರಿ ಏಳೆಂಟು ಮಂದಿ ಡಾನ್ ಮೇಲೆ ಅಟ್ಯಾಕ್ ಮಾಡಿದ್ರೂ ಅವರಿಗೆಲ್ಲಾ ಟಫ್ ಫೈಟ್ ಕೊಟ್ಟು ಜೀವ ಉಳಿಸಿಕೊಂಡು ಜೈಲಿನೊಳಗೆ ನುಗ್ಗಿಬಿಟ್ಟ. ಯಾವಾಗ ಜೈರಾಜ್ ತನ್ನನ್ನ ಕೊಲ್ಲೋದಕ್ಕೆ ಒಂದು ಗ್ಯಾಂಗ್ ರೆಡಿಯಾಗಿಬಿಟ್ಟಿದೆ ಅಂತ ಗೊತ್ತಾಯ್ತೋ ಆತ ಎದುರಾಳಿಗಳನ್ನ ಮುಗಿಸೋದಕ್ಕೆ ಸಜ್ಜಾಗಿಬಿಟ್ಟಿದ್ದ. ಆದರೆ, ಕೊನೆಗೆ ತಾನು ರಿವೆಂಜ್ ತೆಗೆದುಕೊಳ್ಳೋದಕ್ಕೂ ಮೊದಲೇ ಕೊಲೆಯಾಗಿಬಿಟ್ಟ. ಇತ್ತ ಡಾನ್‌ಅನ್ನು ಮುಗಿಸಲು ಹೋದ ಚಕ್ರೆ ಬರಿಗೈಯಲ್ಲಿ ವಾಪಸ್ ಬಂದ ನಂತರ ಅದೇನು ಬುದ್ಧಿ ಬಂತೋ ಏನೋ ಅಂಡರ್ ವರ್ಲ್ಡ್‌ನಿಂದ ದೂರ ಉಳಿಯಲು ನಿರ್ಧರಿಸಿಬಿಟ್ಟ. ಜನರ ಮಧ್ಯೆ ಬದುಕೋ ಮನಸು ಮಾಡಿದ. ಡಾನ್‌ ಆಗಿ ಮೆರೆದ್ರೂ, ವಿಧಿಯಾಟಕ್ಕೆ ಶರಣಾದ ಬೆಂಗಳೂರು ಭೂಗತ ಲೋಕದ ಚಕ್ರೆ! ಯಾವಾಗ ಚಕ್ರೆಗೆ ಅಂಡರ್ವರ್ಲ್ಡ್ ಸಾಕು ಅಂತೆನ್ನಿಸಿಬಿಡ್ತೋ ಸೀದಾ ಆತ ಹೋಗಿದ್ದು ತಾನು ಹುಟ್ಟಿ ಬೆಳದ ರಾಮಚಂದ್ರಪುರಕ್ಕೆ. ಅಲ್ಲಿನ ಜನರ ಪ್ರೀತಿ ಸಂಪಾದಿಸಲು ಶುರು ಮಾಡಿದ. ತಾನು ಭೂಗತಲೋಕದಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ತನ್ನ ಜನರ ಸಹಾಯಕ್ಕೆ ಬಳಸಿಕೊಂಡ. ನೋಡ ನೋಡ್ತಿದ್ದಂತೆ ರಾಮಚಂದ್ರಪುರದ ನೆಚ್ಚಿನ ಚಕ್ರೆಯಾದ. ಇನ್ನೂ ಜನರ ಪ್ರೀತಿಯನ್ನೇ ಬಂಡವಾಳವಾಗಿಟ್ಟುಕೊಂಡು ಚಕ್ರೆ 1996ರಲ್ಲಿ ಕಾರ್ಪೊರೇಷನ್ ಎಲೆಕ್ಷನ್‌ಗೆ ಕಂಟೆಸ್ಟ್ ಮಾಡ್ತಾನೆ. ಭರ್ಜರಿ ಗೆಲವೂ ಕೂಡ ದಾಖಲಿಸುತ್ತಾನೆ.
ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ (Deepika Padukone) ಆಸ್ಪತ್ರೆಗೆ ದಾಖಲಾದ ಸುದ್ದಿ ಮತ್ತು ರಣವೀರ್ ಸಿಂಗ್ (Ranveer Singh) ಜೊತೆಗಿನ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಮುಂಬೈ ವಿಮಾನ ನಿಲ್ದಾಣದಿಂದ ನಟಿಯ ವಿಡಿಯೋ ಸಖತ್‌ ವೈರಲ್‌ ಆಗಿದೆ. ದೀಪಿಕಾ ಎಲ್ಲಿಗೆ ಹೊರಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವೀಡಿಯೋ ನೋಡಿದ ಜನರು ಬೇರೆ ಬೇರೆ ರೀತಿಯ ಊಹಾಪೋಹಗಳನ್ನು ಮಾಡುತ್ತಿದ್ದಾರೆ. ಕೆಲವರು ಆಕೆಯ ಕೈಯಲ್ಲಿರುವ ಉಂಗುರವನ್ನು ನೋಡಲು ಪ್ರಯತ್ನಿಸುತ್ತಿದ್ದರೆ, ಕೆಲವರು ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ ಎಂದು ಊಹಿಸುತ್ತಿದ್ದಾರೆ. 36 ವರ್ಷದ ದೀಪಿಕಾ ಪಡುಕೋಣೆ ಅವರು 2018 ರಲ್ಲಿ 'ಬಾಜಿರಾವ್ ಮಸ್ತಾನಿ' ನಂತಹ ಅನೇಕ ಚಿತ್ರಗಳಲ್ಲಿ ತಮ್ಮ ಸಹ-ನಟ ರಣವೀರ್ ಸಿಂಗ್ ಅವರನ್ನು ವಿವಾಹವಾದರು. ಆದರೆ ಈಗ ಇವರ ನಡುವೆ ಎಲ್ಲಾ ಸರಿಯಿಲ್ಲ ಮತ್ತು ಇವರಿಬ್ಬರ ಸಂಬಂಧ ಮುರಿಯಲಿದೆ ಎಂಬ ವದಂತಿಗಳ ನಡುವೆ ದೀಪಿಕಾ ಪಡುಕೋಣೆ ತಾಯಿಯೊಂದಿಗೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ . ಕಾರಿನಿಂದ ಇಳಿದ ದೀಪಿಕಾ ತನ್ನ ತಾಯಿಯೊಂದಿಗೆ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ಪಾಪರಾಜಿಗಳಿಗೆ ನಗುವಿನೊಂದಿಗೆ ಪೋಸ್ ನೀಡುತ್ತಿದ್ದಾರೆ ಈ ಸಮಯದಲ್ಲಿ, ದೀಪಿಕಾ ಡೆನಿಮ್ ಪ್ಯಾಂಟ್‌ ಕಪ್ಪು ಬಣ್ಣದ ಹೈನೆಕ್ ಟಾಪ್‌ ಮತ್ತು ಪ್ಪು ಮತ್ತು ಬಿಳಿ ಗೆರೆಗಳ ಹಾಫ್ ಸ್ಲೀವ್ ಸ್ವೆಟರ್ ಅನ್ನು ಧರಿಸಿದ್ದಾರೆ. ತನ್ನ ಲುಕ್‌ಅನ್ನು ಪೂರ್ಣಗೊಳಿಸಲು, ದೀಪಿಕಾ ಕಪ್ಪು ಬಣ್ಣದ ಬೂಟುಗಳನ್ನುಧರಿಸಿದ್ದರು ಮತ್ತು ಅದೇ ಬಣ್ಣದ ಹ್ಯಾಂಡ್ ಬ್ಯಾಗ್ ಅನ್ನು ಸಹ ಹಿಡಿದಿದ್ದರು ದೀಪಿಕಾ ಅವರ ವೀಡಿಯೊವನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ತರತರದ ಕಾಮೆಂಟ್‌ ಮಾಡಿದ್ದಾರೆ. 'ಅವರು ಹೃದಯ ಚಿಕಿತ್ಸೆಗಾಗಿ ಯುಎಸ್‌ಗೆ ಹೋಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಅಯ್ಯೋ ಅವರ ಕೈಯಲ್ಲಿ ಮದುವೆಯ ಉಂಗುರವಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. 'ಈಗ ವಿಚ್ಛೇದನವು ಸಂಭವಿಸಲಿದೆ, ಆದ್ದರಿಂದ ರಜೆಯ ಮೇಲೆ ಹೋಗುತ್ತಿದ್ದಾರೆ' ಎಂದು ಇನ್ನೊಬ್ಬರು ಹೇಳಿದ್ದಾರೆ. ಅದೇ ಸಮಯದಲ್ಲಿ, ದೀಪಿಕಾ ಪಡುಕೋಣೆ ಪ್ಯಾರಿಸ್‌ನಲ್ಲಿ ಫ್ಯಾಷನ್ ವೀಕ್‌ಗೆ ಹಾಜರಾಗಲಿದ್ದಾರೆ ಎಂದು ಬಳಕೆದಾರರು ಊಹಿಸಿದ್ದಾರೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ 'ಬ್ರೇಕಿಂಗ್! ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಎಲ್ಲವೂ ಸರಿಯಿಲ್ಲ' ಎಂಬ ಒಂದು ಟ್ವೀಟ್ ವೈರಲ್ ಆಗಿದೆ. ಸಾಗರೋತ್ತರ ಸೆನ್ಸಾರ್ ಮಂಡಳಿಯ ಸದಸ್ಯ ಮತ್ತು ದಕ್ಷಿಣ, ಹಿಂದಿ ಮತ್ತು ಸಾಗರೋತ್ತರ ಚಲನಚಿತ್ರಗಳ ವಿವಾದಾತ್ಮಕ ವಿಮರ್ಶಕ ಉಮರ್ ಸಂಧು ಹೆಸರಿನ ಟ್ವಿಟರ್ ಹ್ಯಾಂಡಲ್‌ನಿಂದ ಈ ಟ್ವೀಟ್ ಬಂದಿದೆ. ಕಳೆದ ವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದೀಪಿಕಾ ಪಡುಕೋಣೆ ದಾಖಲಾಗಿದ್ದರು. ವರದಿಗಳ ಪ್ರಕಾರ, ಅವರು ಉದ್ವೇಗಗೊಂಡಿದ್ದರು. ಆದರೆ, ನಟಿಯ ಅನಾರೋಗ್ಯಕ್ಕೆ ಕಾರಣವೇನು? ಎಂದು ದೀಪಿಕಾ ಅಥವಾ ಅವರ ತಂಡದಿಂದ ಯಾವುದೇ ಅಪ್ಡೇಟ್ ಬಂದಿಲ್ಲ. ಕೆಲಸದ ಮುಂಭಾಗದಲ್ಲಿ ದೀಪಿಕಾ ಪಡುಕೋಣೆ ಕೊನೆಯದಾಗಿ 'ಗೆಹ್ರಾಯನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 'ಬ್ರಹ್ಮಾಸ್ತ್ರ ಮೊದಲ ಭಾಗ: ಶಿವ' ದಲ್ಲಿಯೂ ಅವರ ಒಂದು ಸಣ್ಣ ನೋಟವು ಕಂಡುಬಂದಿದೆ, ಅದರೆ ಅವರಿಗೆ ಕ್ರೆಡಿಟ್ ನೀಡಲಿಲ್ಲ. ದೀಪಿಕಾ ಮುಂಬರುವ ಚಿತ್ರಗಳಲ್ಲಿ 'ಸರ್ಕಸ್', 'ಪಠಾಣ್', 'ಪ್ರಾಜೆಕ್ಟ್ ಕೆ' ಮತ್ತು 'ಜವಾನ್' ಸೇರಿವೆ.
ಮೈಸೂರು, ಮಾ.೧೦(ಆರ್‌ಕೆ, ಎಸ್‌ಬಿಡಿ)- ಮೈಸೂರಿನಲ್ಲಿ ಬುಧವಾರ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರಿನ ಮಂಚೇಗೌಡನಕೊಪ್ಪಲು ನಿವಾಸಿ ರಾಮಕೃಷ್ಣ ಅವರ ಮಗ ಭರತ್ (೩೫) ಹಾಗೂ ಚಾಮರಾಜನಗರ ಜಿಲ್ಲೆ, ಹನೂರು ಸಮೀಪದ ಪಿ.ಜಿ.ಪಾಳ್ಯದ ಕೃಷ್ಣಪ್ಪ ಅವರ ಪುತ್ರ ಜಡೆಯಪ್ಪ ಮೃತಪಟ್ಟಿದ್ದು, ಗಾಯಗೊಂಡಿರುವ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ೧: ಮೈಸೂರು ಹೊರವಲಯದ ಗದ್ದಿಗೆ ರಸ್ತೆಯಲ್ಲಿ ಬುಧವಾರ ರಾತ್ರಿ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಭರತ್(೩೫) ಸಾವ ನ್ನಪ್ಪಿದ್ದಾರೆ. ತವರಿನಲ್ಲಿದ್ದ ಪತ್ನಿಯನ್ನು ಕರೆತರಲೆಂದು ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕಿನಲ್ಲಿ ಬೆಟ್ಟದಬೀಡು ಗ್ರಾಮಕ್ಕೆ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಬಜಾಜ್ ಪಲ್ಸರ್ ಬೈಕು, ಗದ್ದಿಗೆ ರಸ್ತೆಯ ಮಾದಳ್ಳಿ ಗ್ರಾಮದ ಬಳಿ ಡಿಕ್ಕಿ ಹೊಡೆದಿದೆ. ಪ್ಯಾಷನ್ ಪ್ರೋಗೆ ಡಿಕ್ಕಿ ಹೊಡೆದ ಬಜಾಜ್ ಪಲ್ಸರ್ ಬೈಕು, ಸುಮಾರು ೩೦ ಅಡಿ ದೂರಕ್ಕೆ ಉಜ್ಜಿ ಕೊಂಡು ಹೋಯಿತು ಎಂದು ಅಲ್ಲಿನ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯಲ್ಲಿ ಪ್ಯಾಷನ್ ಪ್ರೋ ಬೈಕ್‌ನಲ್ಲಿದ್ದ ಭರತ್ ಬಲತೊಡೆ ಬಳಿ ತೀವ್ರ ಗಾಯಗಳಾಗಿ ರಕ್ತಸ್ರಾವವಾದ ಕಾರಣ, ಅವರನ್ನು ಅಪೊಲೋ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ನಂತರ ಸುಯೋಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿ ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿ ಹೊಡೆದ ಬಜಾಜ್ ಪಲ್ಸರ್ ಬೈಕ್ ಸವಾರ ಸಹ ಗಾಯಗೊಂಡಿದ್ದು, ಆತನನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಭರತ್ ದೇಹ ವನ್ನು ವಾರಸುದಾರರಿಗೆ ಒಪ್ಪಿಸಿದರು. ಘಟನೆ ೨: ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಚಾಮ ರಾಜನಗರ ಜಿಲ್ಲೆ, ಹನೂರು ಸಮೀಪದ ಪಿ.ಜಿ.ಪಾಳ್ಯದ ಕೃಷ್ಣಪ್ಪ ಅವರ ಪುತ್ರ ಜಡೆಯಪ್ಪ ಮೃತಪಟ್ಟಿದ್ದಾರೆ. ಮೈಸೂರಿನ ಖಾಸಗಿ ಬಡಾವಣೆಯೊಂದರ ವಾಚ್‌ಮನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಬುಧವಾರ ಸಂಜೆ ಲಿಂಗಾAಬುದಿ ಪಾಳ್ಯ, ಆರ್‌ಟಿ ನಗರ ವೃತ್ತದ ಬಳಿ ಬೈಕ್‌ನಲ್ಲಿ ತೆರಳು ವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ನೆಲಕ್ಕುರುಳಿದ ಜಡೆಯಪ್ಪ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯ ಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸಿರಲಿಲ್ಲ: ಜಡೆಯಪ್ಪ ಹೆಲ್ಮೆಟ್ ಧರಿಸಿದ್ದರೆ ಪ್ರಾಣಾಪಾಯದಿಂದ ಪಾರಾಗುತ್ತಿದ್ದರು. ಹೆಲ್ಮೆಟ್ ಧರಿಸದ ಕಾರಣ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬAಧ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತವಾದಾಗ ತಲೆಗೆ ಪೆಟ್ಟು ಬೀಳುವ ಸಾಧ್ಯತೆಯೇ ಹೆಚ್ಚು. ಈ ಕಾರಣದಿಂದಲೇ ಜೀವರಕ್ಷಕ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಬಹುತೇಕ ಜನ, ಪೊಲೀಸರಿಗೆ ದಂಡ ತೆರದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಮಾತ್ರ ಹೆಲ್ಮೆಟ್ ಧರಿಸುತ್ತಾರೆ. ತಪಾಸಣೆ ನಡೆಸುತ್ತಿರುವ ಸ್ಥಳದಲ್ಲಿ ಅಥವಾ ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ಜಾಗದಲ್ಲಿ ಮಾತ್ರ ಹೆಲ್ಮೆಟ್ ಧರಿಸಿಕೊಂಡು, ನಂತರ ದ್ವಿಚಕ್ರ ವಾಹನದ ಟ್ಯಾಂಕ್ ಮೇಲಿಟ್ಟು ಅಥವಾ ಹ್ಯಾಂಡಲ್ ಅಥವಾ ಮಿರರ್‌ಗೆ ನೇತು ಹಾಕುತ್ತಾರೆ. ದಂಡ ತೆರದೆ ಹಣ ಉಳಿಸುವ ಉದ್ದೇಶಕ್ಕಷ್ಟೇ ಅಲ್ಲದೆ ಜೀವ ಉಳಿಸಿಕೊಳ್ಳುವುದಕ್ಕಾಗಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಎಸ್.ಎಲ್.ಭೈರಪ್ಪನವರ ನಾಯಿನೆರಳು ನಾನು ಎರಡನೇ ವರ್ಷ ಬಿ.ಎಫ್.ಎಸ್ಸಿ (ಬ್ಯಾಚುಲರ್ ಅಫ್ ಫಿಶರೀಸ್ ಸೈನ್ಸ್) ಯಲ್ಲಿದ್ದಾಗ ನನ್ನ ಸ್ನೇಹಿತನ ಒತ್ತಡಕ್ಕೆ ತಂದು ಓದಲು ಪ್ರಾರಂಭಿಸಿದ್ದೇ ..ಅದನ್ನು ಮುಗಿಸಿಯೇ ಮಲಗಿದ್ದು..!!! ಕಾದಂಬರಿಯ ಬರವಣಿಗೆ ಮತ್ತು ಓದಿಸಿಕೊಂಡು ಹೋಗುವ ಕಥೆ ಹಾಗೂ ಕಥೆಗಾರನ ಶೈಲಿ (ನನಗೆ ಲೇಖಕನ ಬಗ್ಗೆ ಹೆಚ್ಚು ಅರಿವು ಮೂಡಿದ್ದು ನಂತರವೇ..ಆದ್ದರಿಂದ ಭೈರಪ್ಪನವರ ಹೆಸರಿಂದ ಪ್ರೇರಿತ ಎನ್ನುವಂತಿಲ್ಲ) ನನ್ನ ಆ ನಾನ್-ಸ್ಟಾಪ್ ಮ್ಯಾರಥಾನ್ ಗೆ ಕಾರಣ. ನನ್ನ ಸ್ನೇಹಿತನಿಗೆ ಮರುದಿನ ಬೆಳಿಗ್ಗೆ.. “ಬಹಳ ಚನ್ನಾಗಿದೆಯೋ ಕಾದಂಬರಿ..” ಎಂದುದಕ್ಕೆ ..ಅವನೋ ..ಸ್ಥಬ್ಧ...!!!! “ಸಂಜೇನೇ ಅಲ್ವೇನೋ ತಂದಿದ್ದು ಲೈಬ್ರರಿಯಿಂದ..?? ಅಷ್ಟು ಬೇಗ ಓದ್ಬಿಟ್ಯಾ??” ಹುಬ್ಬೇರಿತ್ತು ಅವಂದು. ಈಗ ಅದೇ ಕಾದಂಬರಿ ಆಧಾರಿತ ಅದೇ ಹೆಸರಿನ ಚಲನಚಿತ್ರಕ್ಕೆ ಪವಿತ್ರಾ ಲೋಕೇಶ್ ಅದ್ಭುತ ಅಭಿನಯಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿದೆ ಒಂದೆರಡು ವರ್ಷಕ್ಕೆ ಹಿಂದೆ. ಕಥಾ ವಸ್ತು..ಪುನರ್ಜನ್ಮದ್ದೇ... ಹಲವಾರು ಚಲನಚಿತ್ರಗಳು ಬಂದಿವೆ..ಬಾಲಿವುಡ್, ಸ್ಯಾಂಡಲ್ವುಡ್ ಎಲ್ಲ ವುಡ್ ಗಳಲ್ಲೂ ಬಹುಶಃ. ಇವನ್ನು ಕಂಡವರಿಗೆ ಕಾಡುವುದು...ಸತ್ತಮೇಲೆ ಮನುಷ್ಯ ಮತ್ತೆ ಹುಟ್ಟುತ್ತಾನೆಯೇ..? ಪುನರ್ಜನ್ಮ ಎಂಬುವುದಿದೆಯೇ? ಅದು ಹೇಗೆ ಸಾಧ್ಯ..?? ಅಥವಾ ಇದೊಂದು ಗಿಮಿಕ್ಕೇ?? ಇತ್ಯಾದಿ... ನಮ್ಮ ಪುರಾಣಗಳು ದೇವತಾ ಸ್ವರೂಪರಿಗೆ ಅವತಾರಗಳನ್ನು ಕೊಟ್ಟು ದೇವತೆಗಳು ಹಲವಾರು ರೂಪಗಳಲ್ಲಿ ಬಂದರು ಎಂದು ಹೇಳುತ್ತವೆ. ಇಲ್ಲಿಯೂ ಕೆಲ ಅವತಾರಗಳು ತಮ್ಮ ಜನ್ಮದ ಬಗ್ಗೆ ತಾವೇ ಹೇಳುವುದು ಕಡಿಮೆಯೇ..ಉದಾಹರಣೆಗೆ ..ರಾಮಾವತಾರ...? ಆದರೆ ಅದೇ ವಿಷ್ಣುವಿನ ಅವತಾರವೆಂದೇ ಪ್ರಸಿದ್ಧಿಯಾಗಿರುವ ಬುದ್ಧ ತನ್ನ ಪುನರ್ಜನ್ಮದ ಬಗ್ಗೆ ನಿಖರವಾಗಿ ಹೇಳುತ್ತಾನೆ...ಹಾಗೆ ನೋಡಿದರೆ..ಪುನರ್ಜನ್ಮದ ಬಗ್ಗೆ ನಿಖರವಾಗಿ ಸೈದ್ಧಾಂತಿಕವಾಗಿ ನಂಬುವುದು ಬೌದ್ಧ ಧರ್ಮವೇ? ಹಿಂದೂ ಧರ್ಮ ಇದನ್ನು ಮೊದಲೇ ಪ್ರತಿಪಾದಿಸಿದೆ. ಪುನರ್ಜನ್ಮ – ಕಟ್ಟು ಕಥೆಯೇ? ವಾಸ್ತವವೇ?? ಸಾವಿನ ನಂತರ ಮತ್ತೊಂದು ಜನ್ಮ ಇದೆಯೇ? ಅದೇ ಜೀವಿ ಮತ್ತೆ ಹುಟ್ಟುತ್ತದೆಯೇ? ಎನ್ನುವುದು ಹಲವರು ಘಟನಾವಳಿಗಳನ್ನು ನೋಡಿರುವವರಲ್ಲಿ ಅಥವಾ ಕೇಳಿರುವವರಲ್ಲಿ ಕೌತುಕ ಕೆರಳಿಸುವ ಪ್ರಶ್ನೆಗಳು. ಇನ್ನು ಧರ್ಮಗಳ ಪ್ರಕಾರ, ಕೇವಲ ಹಿಂದೂ ಧರ್ಮ ಸೈದ್ಧಾಂತಿಕವಾಗಿ ಪುನರ್ಜನ್ಮವನ್ನು ಪ್ರತಿಪಾದಿಸಿತು..ಅದೇ ನಿಟ್ಟಿನಲ್ಲಿ ಬೌದ್ಧ ಧರ್ಮವೂ ಈ ನಂಬಿಕೆಯನ್ನು ಧರ್ಮ-ಸಮ್ಮತ ಮಾಡಿತು. ಬುದ್ಧ ತನ್ನ ಶಿಷ್ಯರಿಗೆ ನಿಖರವಗಿ ಈ ಬಗ್ಗೆ ಬೋಧಿಸಿದ್ದಾನೆಂದು ಉಲ್ಲೇಖವಿದೆ. ಒಟ್ಟಿನಲ್ಲಿ ಇದು ಒಂದು ಸರ್ವಕಾಲಿಕ ಕೌತುಕ ಹುಟ್ಟಿಸಿದ ಅಂಶ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿ ಹಲವಾರು ವಾದಗಳನ್ನು ನಾವು ಪರಿಗಣಿಸೋಣ. ಯಾರೋ ಒಬ್ಬರು ತಾವು ನೋಡದೇ ಇರುವ ಸ್ಥಾನ, ವ್ಯಕ್ತಿ, ಪರಿಸರ, ಘಟನಾವಳಿಯನ್ನು ನಿಖರವಾಗಿ ಹೇಗೆ ವಿವರಿಸಲು ಸಾಧ್ಯ...?? ಅದನ್ನು ಅವರು ಸ್ವತಃ ಅನುಭವಿಸದೇ?? !! ಅದರಲ್ಲೂ ನೆನಪಲ್ಲಿ ಹೆಚ್ಚು ಶೇಖರವಾಗಿರದ ಮಕ್ಕಳು ಅಸಹಜವೆಂಬಂತೆ ತಾವು ಅದಾಗಿದ್ದೆವು, ಅಲ್ಲಿದ್ದೆವು, ಅಂತಹವರ ಗಂಡನೋ ಹೆಂಡತಿಯೋ ಆಗಿದ್ದೆವು..ಎಂದೆಲ್ಲಾ ಹೇಳುವುದು ಹೇಗೆ ಸಾಧ್ಯ?? ಇನ್ನು ಪುನರ್ಜನ್ಮ ಎನ್ನುವಷ್ಟರ ಮಟ್ಟದ್ದಲ್ಲವದರೂ ನಮಗೇ ಕೆಲವೊಮ್ಮೆ ತಾವು ಮೊದಲು ಕಂಡಿರದ ಯಾವುದೋ ಸ್ಥಾನವನ್ನು ನೋಡಿದಾಗ ತೀರಾ ಪರಿಚಿತ ಎನಿಸುವುದು ಏಕೆ? ಕೆಲವರನ್ನು ಮೊದಲೇ ಕಂಡಿಲ್ಲದಿದ್ದರೂ ನಮಗೆ ಅಸಹ್ಯ ಅನಿಸುವುದೇಕೆ? ಕೆಲವರು ತೀರಾ ಹತ್ತಿರದವರು, ಮಿತ್ರರು ಎನಿಸುವುದೇಕೆ?? ಹೀಗೆ ಹತ್ತು ಹಲವು ವಿಜ್ಞಾನಕ್ಕೆ ನಿಲುಕದ ವಿಷಯ ನಮ್ಮನ್ನು ದ್ವಂದ್ವಗಳಿಗೆ ಕೆಡಹುತ್ತವೆ. ಅಮೇರಿಕೆಯ ವರ್ಜೀನಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಸ್ಟೀವನ್ ಸನ್ ತಮ್ಮ ಅಧ್ಯಯನದ ನಲವತ್ತು ವರ್ಷಗಳನ್ನು ಪುನರ್ಜನ್ಮದ ಸುತ್ತಲ ಪವಾಡ ಸದೃಶ ಘಟನಾವಳಿಗಳನ್ನು ಕೂಲಂಕುಷ ಪರಿಶೀಲನೆ ಮತ್ತು ಅಧ್ಯಯನದಲ್ಲಿ ಕಳೆದಿದ್ದಾರೆ. ಪ್ರಪಂಚದ ಹಲವಾರು ದೇಶಗಳಿಂದ ಘಟನಾವಳಿಗಳನ್ನು ಶೇಖರಿಸಿ, ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ, ಪ್ರಕಟಿಸಿದ್ದಾರೆ. ಇವರು ಪುನರ್ಜನ್ಮಿ ನೀಡಿದ ಅಹವಾಲು, ಹೇಳಿಕೆಗಳನ್ನು ಅಕ್ಷರಶಃ ಪರಿಶೀಲಿಸಿ ವೈದ್ಯಕೀಯ ದಾಖಲೆಗಳನ್ನು ತಾಳೆಹಾಕಿ ಅಧ್ಯಯನ ನಡೆಸಿದ್ದಾರೆ, ಹಲವಾರು ಇಂತಹ ಹೇಳಿಕೆಗಳು ವಾಸ್ತವವಾಗಿ ನಡೆದಿವೆ. ಇಲ್ಲಿ ಇನ್ನೊಂದು ವಾದವೆಂದರೆ, ಪುರ್ಜನ್ಮ ಇದ್ದರೂ ಆ ರೀತಿ ಜನ್ಮ ಪಡೆದವರೆಲ್ಲರಿಗೂ ಹಿಂದಿನ ಜನ್ಮದ ನೆನಪಿರುವುದಿಲ್ಲ. ಆದರೆ ಸತ್ತವರೆಲ್ಲ ಪುನರ್ಜನ್ಮ ಪಡೆಯುತ್ತಾರೆಂದೂ ಏನಿಲ್ಲವಲ್ಲ??!! ಪ್ರೊಫೆಸರ ಅಧ್ಯಯನದ ಪ್ರಕಾರ ಇಂತಹ ನಿಖರ ಪುನರ್ಜನ್ಮದ ನಿದರ್ಶನಗಳಲ್ಲಿ ತಿಳಿದು ಬಂದ ಅಂಶ, ಸತ್ತು ಮತ್ತೆ ಹುಟ್ಟಿದವರು ಅಕಾಲಿಕ ಅಥವಾ ಅತೃಪ್ತ ಅಥವಾ ಘೋರವೆನಿಸುವ ಸಾವಿಗೀಡಾದವರು ಎಂದು. ಅಂದರೆ ಯಾವುದೋ ಅವ್ಯಕ್ತ ಶಕ್ತಿ ಮೃತ ದೇಹದಿಂದ ಮತ್ತೊಂದು ದೇಹಕ್ಕೆ ವರ್ಗಾಯಿತಗೊಂಡು ಪುನರ್ಜನ್ಮದ ನೆನಪುಗಳಿಗೆ ಕಾರಣವಾಗುತ್ತದೆಯೇ?? ಅಥವಾ ಎಲ್ಲ ಪುನರ್ಜನ್ಮಿತ ಜೀವಿ ತನ್ನ ಪೂರ್ವದ ನೆನಪು ಉಳಿಸಿಕೊಂಡಿರುವುದಿಲ್ಲ ಎಂದೇ..?? ಅಥವಾ ಘೋರ ಅತೃಪ್ತ ಆತ್ಮವೇ ಪುನರ್ಜನ್ಮಕ್ಕೆ ಕಾರಣವೇ? ? ಸದ್ಯಕ್ಕೆ ಏನೂ ಹೇಳಲಾಗದು...ಸತ್ತನಂತರವೇ ಇದನ್ನು ನಿಖರವಾಗಿ ಹೇಳಲು ಸಾಧ್ಯ..ಅಂದರೆ ..???!!! ಇಸ್ಲಾಂ ಅಂತ್ಯದ ನಂತರವೂ ಜೀವ ಇದೆ ಎನ್ನುತ್ತದೆಯಾದರೂ ಪುನರ್ಜನ್ಮವೆನ್ನುವುದು ಇದೆ ಎಂದು ಒಪ್ಪುವುದಿಲ್ಲ ಏಕೆಂದರೆ ಆ ರೀತಿ ನಿರೂಪಿಸಲು ಸಾಧ್ಯವಿಲ್ಲ. ಇಸ್ಲಾಂ ಪ್ರಕಾರ ಸತ್ತವನೇ ಪುನರ್ಜನ್ಮ ಹೊಂದಿದಾತ ಎನ್ನುವುದಕ್ಕೆ ಪುರಾವೆ ಇರುವುದಿಲ್ಲ ಹಾಗೆ ಇದೆ ಎನಿಸಿದರೂ ಅದು ಕೇವಲ ಕಾಕತಾಳೀಯವಾಗಿರಬಹುದು ಎನ್ನುತ್ತದೆ. ಆದರೆ ಸಾವಿನ ನಂತರದ ಜೀವನ ಇದೆ ಎಂತಲೂ ಆ ಜೀವದಲ್ಲಿ ಸುಖ ಅಥವಾ ಕ್ರೂರ ಶಿಕ್ಷೆಗಳು ಈ ಜನ್ಮದ ನಿನ್ನ ಕರ್ಮಗಳನ್ನು ಅವಲಂಬಿಸಿದೆ ಎಂದೂ ಹೇಳುತ್ತದೆ. ನಿನ್ನ ಮರಣಾನಂತರದ ಸ್ಥಿತಿ ಸುಖದಾಯಕ ಆಗಬೇಕಾದರೆ ಈ ಜನ್ಮದಲ್ಲಿ ಒಳ್ಳೆಯ ಕರ್ಮಗಳನ್ನು ಮಾಡು ಎನ್ನುತ್ತದೆ ಆದರೆ ನೀನೇ ಮತ್ತೆ ಹುಟ್ಟಿ ಬರುವೆ ಎನ್ನುವುದಿಲ್ಲ. ನರಕ ಮತ್ತು ಸ್ವರ್ಗ, ಈ ಸಿದ್ಧಾಂತ ಬಹುಶಃ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಕಂಡು ಬರುವ ಸಮಾನ ಅಂಶ. ಕ್ರಿಸ್ಚಿಯನ್ನರೂ ಪುನರ್ಜನ್ಮದ ಬಗ್ಗೆ ನಿಖರವಾಗಿ ಏನೂ ಹೇಳುವುದಿಲ್ಲ, ಕಿಸ್ತನು ಮತ್ತೆ ಜೀವ ಪಡೆದ ಎನ್ನುವರೇ ಹೊರತು, ಪುನರ್ಜನ್ಮ ಪಡೆದ ಎಂದು ಹೇಳಿಲ್ಲ. ಇನ್ನು ಜೊರಾಸ್ಟ್ರಿಯನ್ನರು ಒಂದು ರೀತಿಯ ಜೀವ-ಮರುಕಳಿಕೆಯನ್ನು ಒಪ್ಪುವರಾದರೂ ಖಚಿತವಾಗಿ ಪುನರ್ಜನ್ಮದ ಬಗ್ಗೆ ಹೇಳಿಲ್ಲ. ಬೌದ್ಧ ಧರ್ಮ ಪುನರ್ಜನ್ಮ ಒಂದು ಸತ್ಯ ಎನ್ನುತ್ತದೆ. ಇನ್ನೂ ಮುಂದುವರೆದು, ಪುನರ್ಜನ್ಮದ ಆರು ಆಯಾಮಗಳು ಸಾಧ್ಯ ಎನ್ನುತ್ತದೆ. ಇವು ದೇವತಾ, ಗಂಧರ್ವ (ಭಾಗಶಃ ದೇವತಾ ಅಥವಾ ಅತಿಮಾನವ), ಮಾನವ, ಪಶು, ಪೈಶಾಚ ಮತ್ತು ದೈತ್ಯ (ನರಕವಾಸಿ) ಎನ್ನುತ್ತದೆ. ಇವುಗಳಲ್ಲಿ ದೇವತಾ, ಗಂಧರ್ವ ಮತ್ತು ಮಾನವ ಆಯಾಮಗಳು ಸುಖದಾಯಿಯಾದರೆ ಪಶು, ಪೈಶಾಚ ಮತ್ತು ದಾನವ ಆಯಾಮಗಳು ಪೀಡಿತ ಅಯಾಮಗಳು ಎನ್ನುತ್ತದೆ. ಮೊದಲನೆಯ ಮೂರು ಆಯಾಮಗಳು ಸುಕರ್ಮಗಳಿಗೆ ಸಿಗುವ ಫಲವಾದರೆ ದುಷ್ಕೃತ್ಯಗಳಿಗೆ ಸಿಗುವ ಫಲ ಪೀಡನಾದಾಯಕ ಆಯಾಮ. ಬುದ್ಧನ ಪ್ರಕಾರ ಆತ್ಮ ಶುದ್ಧಿ, ಯೋಗ ಸಿದ್ಧಿಹೊಂದಿದ ಜೀವಿಗೆ ತನ್ನ ಬುದ್ಧಿ ಅಥವಾ ಜ್ಞಾನವಾಹಕಗಳನ್ನು ನಿಯಂತ್ರಿಸುವ ಅಥವಾ ವರ್ಗಾಯಿಸುವ ಶಕ್ತಿಯಿರುವುದೆಂದೂ, ಅಂತಹ ಜೀವಿ ತನ್ನ ಪುನರ್ಜನ್ಮದಲ್ಲೂ ಪೂರ್ವದ ಎಲ್ಲ ಅರಿವನ್ನು ಉಳ್ಳವರಾಗಿತ್ತಾರೆಂದೂ ಇದು ಕೆಲವರಿಗೆ ಮಾತ್ರ ಸಾಧ್ಯವೆನ್ನಲಾಗಿದೆ. ಇನ್ನು ವೈಜ್ಞಾನಿಕ ನಿದರ್ಶನಗಳನ್ನು ಪರಿಶೀಲಿಸಿದವರಿಗೂ ಪುನರ್ಜನ್ಮವನ್ನು ಅಲ್ಲಗಳೆಯುವ ಯಾವಿದೇ ತರ್ಕ ಸಿಗದಿದ್ದರೂ ಇದೆಯೆನ್ನಲೂ ಸಾಕಷ್ಟು ಪುರಾವೆಗಳು ಸಿದ್ಧಾಂತಗಳು ಸಿಗುತ್ತಿಲ್ಲ. ಕೆಲವು ದಾಖಲೆಯಾಗಿರುವ ನಿದರ್ಶನಗಳನ್ನು ಗಮನಿಸೋಣ. ಅಮೇರಿಕೆಯ ಶ್ರೀಮತಿ ರೂಥ್ ಸಿಮೋನ್ಸ್ ಎನ್ನುವಾಕೆ ತನ್ನ ನೂರು ವರ್ಷಕ್ಕೂ ಹಿಂದಿನ ಐರ್ಲೆಂಡಿನ ಜನ್ಮದ ಬಗ್ಗೆ ನಿಖರ ಮಾಹಿತಿ ನೀಡಿದ್ದಾಳೆ, ಪರಿಶೀಲನೆ ನಂತರ ಈ ಎಲ್ಲ ಮಾಹಿತಿ ಅಕ್ಷರಶಃ ನಿಜವೆಂದು ತಿಳಿದುಬಂತು, ಮತ್ತೂ ಅಚ್ಚರಿಯೆಂದರೆ ಆಕೆ ಯಾವತ್ತೂ ಅಮೇರಿಕಾ ಬಿಟ್ಟು ಬೇರೆ ದೇಶಕ್ಕೆ ಹೋಗೇ ಇಲ್ಲದ್ದು. ಇನ್ನೂ ಅಶ್ಚರ್ಯದ ನಿದರ್ಶನ ಇಂಗ್ಲೇಂಡಿನ ಶ್ರಿಮತಿ ನಾವೋಮಿ ಎಂಬಾಕೆಯದು. ಈಕೆ ತನ್ನ ಹಿಂದಿನ ಎರಡು ಜನ್ಮಗಳ ವಿವರಗಳನ್ನು ನಿಖರವಾಗಿ ನೀಡಿದ್ದಾಳೆ. ತಾನು ಏಳನೇ ಶತಮಾನದಲ್ಲಿ ಐರಿಶ್ ಮಹಿಳೆಯಾಗಿ ಗ್ರೀಹಾಲ್ಘ್ ಎಂಬ ಹಳ್ಳಿಯಲ್ಲಿ ಜೀವಿಸಿದ್ದಳೆಂದೂ, ತಾನು ೧೯೦೨ ರಲ್ಲಿ ಆಂಗ್ಲ ನರ್ಸ್ ಮಹಿಳೆಯಾಗಿ ಡೌನ್ ಹಾಮ್ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದಳೆಂದು ಹೇಳಿದ್ದಾಳೆ. ಈ ಎರಡೂ ವಿವವರಗಳೂ ನಿಜವಾಗಿದ್ದವು. ನಮ್ಮಲ್ಲಿಯೇ ಬೆಂಗಳೂರಿನ ನಿಮ್ಹಾನ್ಸ್ (ಮಾನಸಿಕ ಆಸ್ಪತ್ರೆ) ನಲ್ಲಿರುವ ಮನಶಾಸ್ತ್ರಜ್ಞ ಡಾ. ಪಶ್ರೀಚಾ ಸ್ಟಿವನ ಸನ್ರ ಜೊತೆ ಅಧ್ಯಯನ ನಡೆಸಿದ ಮತ್ತು ಪುನರ್ಜನ್ಮವನ್ನು ಪರೀಕ್ಷಿಸಿದವರಲ್ಲಿ ಒಬ್ಬರು. ಅವರೇ ವಿವರಿಸಿರುವ ನಿದರ್ಶನ ಮಹಾರಾಸ್ಟ್ರದ ಉತ್ತರೆ ಎಂಬುವರ ಕುರಿತದ್ದು. ಆಕೆ ಇದ್ದಕ್ಕಿದ್ದಂತೆ ತಮಗೆ ಗೊತ್ತಿರದ ಬಂಗಾಳಿ ಭಜನ್ ಹಾಡಲು ಪ್ರಾರಂಭಿಸಿದ್ದು ಮತ್ತು ೧೧೦ ವರ್ಷಕ್ಕೆ ಹಿಂದೆ ತಾನು ಅಂದಿನ ಬಂಗಾಳದ ಚಟ್ಟೋಪಾದ್ಯಾಯ ಕುಟುಂಬದಲ್ಲಿ ಶಾರದೆಯಾಗಿದ್ದಳೆಂದೂ ಹೇಳಿದ್ದು ಇವು ನಿಜವಾಗಿದ್ದವೆಂದೂ ತಿಳಿಸಿದ್ದಾರೆ. ಇನ್ನೂ ವಿಸ್ಮಯಕಾರಿ ನಿದರ್ಶನ ಈಗಲೂ ಸೇವೆ ನಿರತ ಭೋಪಾಲಿನ ನವೀನ ಕಾಲೇಜಿನ ಪ್ರಾಂಶುಪಾಲೆ ಡಾ. ಸ್ವರ್ಣಲತಾ ತಿವಾರಿಯವರದ್ದು. ಇವರಿಗೆ ತಮ್ಮ ಮೂರು ಜನ್ಮಗಳ ವಿವರಗಳು ತಿಳಿದಿವೆ..!!!!! ಈ ನಿದರ್ಶನ ಪ್ರಪಂಚದ ಏಳು ಅಧ್ಯಯನಾಧೀನ ನಿದರ್ಶನಗಳಲ್ಲಿ ಒಂದಾಗಿದೆ. ಮೊದಲಿಗೆ ಆಕೆ ಮಧ್ಯಪ್ರದೇಶದ ಕತ್ನಿ ಎಂಬಲ್ಲಿ ನದಿಯೊಂದನ್ನು ದಾಟುವಾಗ ಒಮ್ಮೆಗೇ ನೆನಪಾದ ಪುನರ್ಜನ್ಮ ಆಗ ಆಕೆಗೆ ನಾಲ್ಕು ವರ್ಷ ವಯಸ್ಸು.. ಆಕೆ ತಾನು ಬಿಯಾ ಪಾಥಕ್ ಎಂದು ಹೇಳಿ ತಂದೆ ತಾಯಿಯರಲ್ಲಿ ಆತಂಕಕ್ಕೆ ಎಡೆಮಾಡಿ ಅವರು ಮನಶಾಸ್ತ್ರಜ್ಞರನ್ನು ಕಂಡು ತಮ್ಮ ಮಗಳಬಗ್ಗೆ ವಿಚಾರಿಸಿದಾಗ ಆಕೆ..ಪೂರ್ಣ ಆರೋಗ್ಯವಂತಳೆಂದೂ ಅವಳಿಗೆ ಪುನರ್ಜನ್ಮದ ನೆನಪು ಬಂದಿದೆಯೆಂದೂ ...ಹೇಳಿದರು.. ವಿಚಾರಿಸಿದಾಗ ಬಿಯಾ ಪಾಥಕ್ ಎಂಬಾಕೆ ಸತ್ತ ಒಂಭತ್ತು ವರ್ಷಗಳ ನಂತರ (೧೯೪೮) ಸ್ವರ್ಣಲತಾ ಹುಟ್ಟಿದೆಂದೂ ತಿಳಿದು ಬಂತು. ಬಿಯಾ ಪಾಥಕ್ ಸತ್ತು ಅಸ್ಸಾಂ ನಲ್ಲಿ ಸಿಲಹಟ್ ಎಂಬಲ್ಲಿ ೧೯೪೦ ರಲ್ಲಿ ಕಮಲೆಶ್ ಎಂಬ ಹೆಣ್ಣುಮಗಳಾಗಿ ಜನಿಸಿ ೧೯೪೭ ರಲ್ಲಿ ಹೃದಯಾಘಾತದಿಂದ ಸತ್ತಳೆಂದೂ ತಿಳಿಯಿತು. ಮೂರು ಜನ್ಮ- ಈಗಿನ- ಸ್ವರ್ಣಲತಾ (ಹುಟ್ಟಿದ್ದು ೧೯೪೮) ಅದಕ್ಕೂ ಹಿಂದೆ ಕಮಲೆಶ್ ಅಸ್ಸಾಂ ನಲ್ಲಿ (ಹುಟ್ಟಿದ್ದು ೧೯೪೦ ಸತ್ತದ್ದು ೧೯೪೭) ಅದಕ್ಕೂ ಹಿಂದೆ ಬಿಯಾ ಪಾಥಕ್ ಆಗಿ ಕತ್ನಿ, ಮಧ್ಯಪ್ರದೇಶದಲ್ಲಿ (ಸತ್ತದ್ದು ೧೯೩೯) ಸ್ವರ್ಣಲತಾರ ವಿವರಗಳನ್ನು ಸ್ಟಿವನಸನ್ ಪರಿಶೀಲಿಸಿ ಎಲ್ಲಾ ಸತ್ಯವೆಂದು ಕಂಡುಕೊಂಡಿದ್ದಾರೆ...!!! ಈ ಎಲ್ಲ ವಿಷಯಗಳನ್ನು ಎಷ್ಟು ಆಸಕ್ತಿ, ಕೌತುಕತೆಯಿಂದ ನೀವು ಓದುವಿರೋ ತಿಳಿಯದು,,,ನನಗಂತೂ ಈ ಲೇಖನವನ್ನು ಮುಗಿಸುವ ವೇಳೆಗೆ ನನ್ನದೂ ಯಾವುದಾದರೂ ಪುನರ್ಜನ್ಮವೇ ??? ಎನಿಸಲಾರಂಭಿಸಿದೆ..!!!! ಹಹಹ (ನಿಮಗೆ ಆಶ್ಚರ್ಯ ಎನಿಸಬಹುದು..ಈ ಲೇಖನ ಒಂದೇ ಉಸಿರಿನಲ್ಲಿ...ಮೂರು ತಾಸು..ಮಾಹಿತಿ ಸಂಗ್ರಹಿಸಿ ಬರೆದದ್ದು..ಪ್ರಾರಂಭ ರಾತ್ರಿ ೧೦ಕ್ಕೆ ಮುಕ್ತಾಯ ೧೨.೫೫ಕ್ಕೆ..!!!) I am thankful to Uday for a correction, also request you to forward this many of your friends for feedback.
ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಡಿ.11ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ Suvarna News First Published Nov 22, 2022, 5:57 PM IST ದಾವಣಗೆರೆ (ನ.22) : ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಡಿ.11ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ನಾಯಕ ಅಂಬಣ್ಣ ಅರೋಲಿಕರ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ (Internal reservation) ಕುರಿತು ಡಿ. 11ರೊಳಗೆ ಸರ್ಕಾರ ಕೇಂದ್ರಕ್ಕೆ ಶಿಫಾರಸು (Recommendation) ಮಾಡಿದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು. ಕೇಂದ್ರ ಸರ್ಕಾರವು ಸಂವಿಧಾನ ಪರೀಚೇದ 341(3)ಕ್ಕೆ ಕೂಡಲೇ ತಿದ್ದಪಡಿ ಮಾಡಬೇಕು. ತಮಿಳುನಾಡಿನ (Tamilnadu) ಮಾದರಿಯಲ್ಲಿ ಆರುಂಧತಿ ಸಮುದಾಯಕ್ಕೆ (Arundhati community)ಶೇ. 2.84 ಮೀಸಲಾತಿ ನೀಡಿದಂತೆ ಸುಪ್ರಿಂ ಕೋರ್ಟ್‌ ನ್ಯಾ. ಅರುಣ್‌ ಮಿಶ್ರ (Arun Mishra) ರಾಜ್ಯ ಸರ್ಕಾರಕ್ಕಿರುವ ಅಧಿಕಾರವನ್ನು ಉಪಯೋಗಿಸಿ ಪ್ರತ್ಯೇಕವಾಗಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6 ಮೀಸಲಾತಿಯನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಆಗ್ರಹಿಸಿದರು. ನ್ಯಾ.ನಾಗಮೋಹನ್‌ ದಾಸ್‌ (Nagamohan Das) ಮತ್ತು ನ್ಯಾ, ಕಾಂತರಾಜ ವರದಿ (Report)ಯನ್ನು ಬಹಿರಂಗ ಮಾಡಿ ಯಥಾವತ್ತಾಗಿ ಜಾರಿ ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳು (Political Parties) ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗರ (Madiga) ಜನಸಂಖ್ಯೆಗೆ ತಕ್ಕ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಎಲ್ಲ ಪಕ್ಷಗಳು ಕನಿಷ್ಠ 15 ಸ್ಥಾನಗಳನ್ನು ನೀಡಬೇಕು. ಕರ್ನಾಟಕ ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂ ಮಾಡಬೇಕು. ನ್ಯಾ.ಎ.ಜೆ.ಸದಾಶಿವ (AJ Sadashiava) ಆಯೋಗದ ಪರ ಹೋರಾಟಗಾರರ ಮೇಲೆ ಹೂಡಿದ ರೌಡಿಶೀಟರ್ ಪ್ರಕರಣಗಳನ್ನು ರದ್ದುಪಡಿಸಬೇಕು. ದಲಿತ ಸಂಘಟಕರ ಮೇಲೆ ದಾಖಲಾದ ಎಲ್ಲಾ ಕ್ರಿಮಿನಲ್‌ ಪ್ರಕರಣ (Criminal Case)ಗಳನ್ನು ರದ್ದುಪಡಿಸಬೇಕು. ಪರಿಶಿಷ್ಟ ಜಾತಿಗಳ ಎಸ್‌ಸಿಪಿ, ಟಿಎಸ್‌ಪಿ. ಅನುದಾನವನ್ನು ಮಾದಿಗ ಸಂಬಂಧಿತ ಅಲೆಮಾರಿ (Nomad) ಸಮುದಾಯಗಳಿಗೆ ಶೇ. 6+1 ರಂತೆ ಹಂಚಿಕೆ ಮಾಡಬೇಕು. ರಾಜ್ಯದ ಪೌರ ಕಾರ್ಮಿಕರು ಪಡೆದಿರುವ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ಕೇಶವ ಮೂರ್ತಿ, ಕುಂದವಾಡ ಮಂಜುನಾಥ್, ಹೇಮರಾಜ್, ಟಿ.ರವಿಕುಮಾರ್, ನಾಗರಾಜ್, ಭಾನುಪ್ರಕಾಶ್, ಎಂ. ರವಿ ಇತರರು ಇದ್ದರು.
ಪಂಜಾಬ್‌ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಮಾಜಿ ನಾಯಕ ‌ಕ್ಯಾಪ್ಟನ್ ಅಮರಿಂದರ್‌ ಸಿಂಗ್‌ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಈ ಮೂಲಕ ಹಲವು ದಿನಗಳ ವದಂತಿಗೆ ತೆರೆ ಎಳೆದರು. ಹೆಚ್ಚು ಓದಿದ ಸ್ಟೋರಿಗಳು ರಾಹುಲ್ ಹೇಳಿಕೆ ಬೆನ್ನಲ್ಲೇ ಪೈಲಟ್ ಜತೆಗಿನ ಗುದ್ದಾಟಕ್ಕೆ ತೆರೆ ಎಳೆದ ಗೆಹ್ಲೋಟ್ ಉಡುಪಿ; ವಿದ್ಯಾರ್ಥಿಯನ್ನು ಕಸಬ್ ಎಂದು ಸಂಬೋಧಿಸಿದ ಶಿಕ್ಷಕ ಅಮಾನತು ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ರದ್ದು ಪಡಿಸಿದ ಕೇಂದ್ರ ಪಂಜಾಬ್‌ ವಿಧಾನಸಭೆ ಚುನಾವಣೆಗೂ ಕೆಲವೇ ತಿಂಗಳ ಮುನ್ನ ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿ ಹೊರಬಂದಿದ್ದ ಅಮರಿಂದರ್‌ ಸಿಂಗ್‌, ತಮ್ಮದೇ ಪಕ್ಷ ಸ್ಥಾಪಿಸಿದ್ದರು. ಆದರೆ ವಿಧಾನಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಅಮರಿಂದರ್‌ ಪಕ್ಷಗಳು ಹೀನಾಯವಾಗಿ ಸೋಲುಂಡಿದ್ದು, ಆಮ್‌ ಆದ್ಮಿ ಜಯಭೇರಿ ಬಾರಿ ಮೊದಲ ಬಾರಿ ಅಧಿಕಾರ ಹಿಡಿದಿತ್ತು. ಲಂಡನ್‌ ನಲ್ಲಿ ಶಸ್ತ್ರಚಿಕಿತ್ಸೆ ಪಡೆದ ನಂತರ ತವರಿಗೆ ಮರಳಿದ್ದ ಅಮರಿಂದರ್‌ ಸಿಂಗ್‌ ಸೋಮವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಕೇಂದ್ರ ಸಚಿವ ಕಿರಣ್‌ ರಿಜಿಜು ಉಪಸ್ಥಿತರಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ಮಾರನೇ ದಿನವೇ 80 ವರ್ಷದ ಅಮರಿಂದರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ‌ಇದೇ ವೇಳೆ 7 ಮಾಜಿ ಶಾಸಕರು ಹಾಗೂ ಒಬ್ಬರು ಸಂಸದರು ಬಿಜೆಪಿಗೆ ಸೇರಿದರು. ಪಂಜಾಬ್‌ ನಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಡ್ರೋಣ್‌ ಗಳು ಶಸ್ತ್ರಾಸ್ತ್ರ ತಂದು ಹಾಕುತ್ತಿವೆ. ಮತ್ತೊಂದೆಡೆ ಚೀನಾ ಸಮಸ್ಯೆ ಇದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸೇರುವ ಮೂಲಕ ದೇಶದ ಭದ್ರತೆಗೆ ಬೆಂಬಲ ನೀಡಿದ್ದೇನೆ ಎಂದು ಅಮರಿಂದರ್‌ ಸಿಂಗ್‌ ಹೇಳಿದರು.
ಕರ್ನಾಟಕದ ಉತ್ಕೃಷ್ಟ ವೃತ್ತಿಗಾಯಕ ಪರಂಪರೆಗೆ ಸೇರಿದ ಗೊರವರು ತಮ್ಮ ಶೈವ ಸಂಬಂಧಿ ಸಾಂಪ್ರದಾಯಿಕ ಕುಣಿತದಲ್ಲಿ ಆಕರ್ಷಕ ಕಲಾತ್ಮಕ ಸ್ವರೂಪವನ್ನು, ಮನುಷ್ಯನ ಮೃಗೀಯ ಪ್ರವೃತ್ತಿಯನ್ನು ಏಕಕಾಲದಲ್ಲಿ ಅಭಿವ್ಯಕ್ತಿಸುತ್ತಾರೆ. ಗೊರವರು ಮೈಲಾರಲಿಂಗನ ಗುಡ್ಡರು ಅಂದರೆ ಭಕ್ತರು. ಗೊರವರನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ಗೊರವ, ಗೊಗ್ಗಯ್ಯ, ಗಡಬಡ್ಡಯ್ಯ ಎಂದೂ ಉತ್ತರ ಭಾಗದಲ್ಲಿ ಗ್ವಾರಪ್ಪ, ವಗ್ಗ, ವಾಘ್ಯಾ ಎಂದೂ ಕರೆಯುತ್ತಾರೆ. ತಲೆಯ ಮೇಲೆ ಕರಡಿ ಕೂದಲಿನ ಕುಲಾವಿ, ಕರಿಯ ಕಂಬಳಿಯ ನಿಲುವಂಗಿ, ಎದೆಗೆ ಅಡ್ಡಲಾಗಿ ಕವಡೆ ಸರಗಳ ಪಟ್ಟಿ, ಹೆಗಲಲ್ಲಿ ಜೋಳಿಗೆ, ದೋಣಿ, ಭಂಡಾರ ಚೀಲ, ಒಕ್ಕಳ ಗಂಟೆ, ತ್ರಿಶೂಲ, ನಾಗಬೆತ್ತ, ಬಲಗೈಯಲ್ಲಿ ಡಮರುಗ, ಎಡಗೈಯಲ್ಲಿ ಪಿಳ್ಳಂಗೋವಿ ಅಥವಾ ಕೊಳಲು, ಹಣೆಯಲ್ಲಿ ಢಾಳಾಗಿ ಬಳಿದ ವಿಭೂತಿ ಮತ್ತು ಕುಂಕುಮ, ಕಣ್ಣಿನ ಸುತ್ತ ವಿಭೂತಿಯ ಲೇಪ ಇವಿಷ್ಟು ಗೊರವರ ವೇಷಭೂಷಣಗಳು. ಸುಮಾರು ಹತ್ತರಿಂದ ಹನ್ನೆರಡು ಮಂದಿ ಗೊರವರು ತಮ್ಮ ಸಾಂಪ್ರದಾಯಿಕ ವೇಷಭೂಷಣ ಧರಿಸಿ ಸಮತಟ್ಟಾದ ಬಯಲಿನಲ್ಲಿ ಇಲ್ಲವೆ ಎತ್ತರದ ಕಟ್ಟೆಯ ಮೇಲೆ ಸಾಲಾಗಿ ನಿಂತರೆಂದರೆ ರುದ್ರ ರಮಣೀಯ ನೋಟವೇ ತೆರೆದುಕೊಳ್ಳುತ್ತದೆ. ಹಿರಿಯ ಗೊರವ ಕಲಾವಿದ ಕೊಳಲು ಊದಿ ತನ್ನ ಡಮರುಗವನ್ನು ಢಗ ಢಗ ಢಗ ಢಗ ಎಂದು ಸದ್ದು ಮಾಡುತ್ತಿದ್ದಂತೆಯೇ ಉಳಿದ ಎಲ್ಲಾ ಕಲಾವಿದರು ಒಟ್ಟಾಗಿ ತಮ್ಮ ಡಮರುಗಗಳನ್ನು ಬಾರಿಸಲು ಆರಂಭಿಸುತ್ತಾರೆ. ಆ ಡಮರುಗಳ ಸದ್ದಿಗೆ ತಕ್ಕಂತೆ ಮುಂದ್ಹೆಜ್ಜೆ, ಹಿಂದ್ಹೆಜ್ಜೆ ಹಾಕುತ್ತಾ ಕುಣಿಯಲಾರಂಭಿಸುತ್ತಾರೆ. ಮಧ್ಯೆ ಮಧ್ಯೆ ತಮ್ಮ ತಲೆಗೆ ಧರಿಸಿದ ಕರಡಿ ಕೂದಲಿನ ಕುಲಾವಿಯನ್ನು ತೆಗೆದು ಮುಂದೆ ಚಾಚಿದಂತೆ ಮಾಡಿ ಮತ್ತೆ ತಲೆಗೆ ಧರಿಸುತ್ತಾರೆ. ಹಿಂದೆ ಮುಂದೆ ತಿರುಗಿ ಗಿರಕಿ ಹೊಡೆಯುವುದು, ಮಂಡಲಾಕಾರದಲ್ಲಿ ಸುತ್ತುವುದು, ತಲೆಯ ಕರಡಿ ಟೊಪ್ಪಿಗೆಗಳನ್ನು ತೆಗೆದು ಮಧ್ಯದಲ್ಲಿರಿಸಿ ಅದರ ಸುತ್ತಲೂ ಕುಣಿಯುತ್ತಾರೆ. ಗೊರವರ ಕುಣಿತಕ್ಕೆ ಕೊಳಲು, ಡಮರುಗಗಳನ್ನು ಬಿಟ್ಟರೆ ಮತ್ತಾವ ಹಿಮ್ಮೇಳದ ವಾದ್ಯಗಳಿಲ್ಲ. ಡಮರುಗದ ವಿಶಿಷ್ಟವಾದ ತಾಳಲಯಗಳೊಂದಿಗೆ ಕೊಳಲಿನ ನಾದವು ಬೆರೆತು ಅದರ ಗತಿಗೆ ಅನುಗುಣವಾಗಿ ವಿವಿಧ ಭಾವಭಂಗಿಗಳಲ್ಲಿ ಕುಣಿಯುತ್ತಾರೆ. ಕುಣಿತವು ತೀವ್ರತೆಯನ್ನು ಪಡೆದುಕೊಂಡಾಗ ಅವರ ಉಡಿಗೆ ತೊಡಿಗೆಯ ರೌದ್ರತೆಯೊಂದಿಗೆ ಕುಣಿತವೂ ಸ್ಪರ್ಧಿಸುತ್ತಿದೆಯೇನೋ ಎಂಬಂತೆ ನೋಡುವವರಿಗೆ ಭಾಸವಾಗುತ್ತದೆ. ಗೊರವರ ಕುಣಿತವು ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮತ್ತು ಹಬ್ಬ ಜಾತ್ರೆ ಉತ್ಸವಗಳಂತಹ ಸಾರ್ವಜನಿಕ ಸಮಾರಂಭಗಳಲ್ಲಿಯೂ ಪ್ರದರ್ಶಿತವಾಗುತ್ತದೆ. ಮೈಲಾರಲಿಂಗನ ಒಕ್ಕಲು ಮನೆಗಳವರು ವಿಶೇಷ ಸಂದರ್ಭಗಳಲ್ಲಿ ಮಣೇವು ಸೇವೆಯನ್ನು ಆಚರಿಸುತ್ತಾರೆ. ಈ ಮಣೇವು ಸೇವೆಗೆ ಗೊರವರನ್ನು ಆಹ್ವಾನಿಸುತ್ತಾರೆ. ಕನ್ನಡ ಸೊಗಡಿನ ಹುಡುಕಾಟ (ಹಿ.ಶಿ.ರಾ.) ಮುಗ್ಗಲಮಕ್ಕಿಯ ಗುಡಿಸಲಿನಿಂದ... (ಬಿ.ಎಸ್. ನಾಗರತ್ನ) "ಆ ದಶಕ" -ಬಿಡುಗಡೆಯ ಮಾತು (ದೇವನೂರು) ಗೀತಕ್ಕನ ಭಗವದ್ಗೀತೆ (ಜಾನಕಿ ಮಂಜುನಾಥಪುರ) ಗ್ರಾಮ ಪಂಚಾಯ್ತಿ ಎಲೆಕ್ಷನ್ ಗಳ ’ಆಪರೇಷನ್’ ಗೆ ಸಜ್ಜಾಗಿರುವ ಕಮಲ ನಿಮ್ಮೇರಿಯಾ ಕಾರ್ಪೋರೇಟರ್...ಕ್ವಾರ್ಟರ್ ಶಿವ (ಬಿ.ಎಸ್.ಎಸ್.) ನಮಗೆ ಉಳಿದಿರುವ ಮಲೆನಾಡು (ಎಸ್.ಸಿರಾಜ್ ಅಹಮದ್) ಸಂಸ್ಕೃತಿ ತಿಳುವಳಿಕೆ (ಹಿ.ಶಿ.ರಾ) ಕಾವೇರಿ-ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಇತಿಹಾಸ-ಜಾಣಗೆರೆ, ಬಿ ಎಸ್ ಎಸ್ ರಾಜಕೀಯ ದಾಳವಾಗಿರುವ ಕಾವೇರಿ-’ಸಹನಾ’ ಕಾವೇರಿ ನೀರು ಹಂಚಿಕೆ- ಜಗಳಕ್ಕೆ ಪರಿಹಾರವಿದೆಯೇ?-ಬಂಜಗೆರೆ ಶಿಕ್ಷಣದಲ್ಲಿ ಕನ್ನಡ: ೧೯೯೪ರ ಭಾಷಾನೀತಿ ಆದೇಶದ ಪರಿಚಯ (ಡಾ. ಪಂಡಿತಾರಾಧ್ಯ) ಕಾವೇರಿ-ಸಂಕ್ಷಿಪ್ತ ಇತಿಹಾಸ: ಭಾಗ ೨ (ಜಾಣಗೆರೆ, ಬಿಎಸ್ಎಸ್ ) ಜಗ್ಗಲಿಗೆ ಮೇಳ(ಎಸ್. ರಂಗಧರ) ಕಾವೇರಿ ವಿವಾದಕ್ಕೆ ತಮಿಳುನಾಡಿನ ದುರಾಸೆಯೇ ಕಾರಣ-ಭಾಗ ೩ (ಜಾಣಗೆರೆ, ಬಿಎಸ್ಎಸ್ ) ಕರ್ನಾಟಕದಲ್ಲಿ ನಡೆಯುತ್ತಿದೆ ತೆಲುಗು ಸಿನೆಮಾ!(’ಸಹನಾ’) ಪೂಜಾ ಕುಣಿತ (ಎಸ್. ರಂಗಧರ) ಸಾಮಂತರ ಮೇಲೆ ಭರ್ಜರಿ ಸೇಡು ತೀರಿಸಿಕೊಂಡ ಸಾಮ್ರಾಟರು-೪ (ಜಾಣಗೆರೆ, ಬಿಎಸ್ಎಸ್ ) ಜಾತ್ಯಾತೀತ ರಾಷ್ಟ್ರದ ಸಮಗ್ರತೆಗೊಂದು ಬೆಳ್ಳಿಕಿರಣ!!(’ಸಹನಾ’) ಪಾದಯಾತ್ರೆಪ್ರಹಸನ (ಜಾನಕಿ ಮಂಜುನಾಥಪುರ) ಕಾವೇರಿ ಕಥನ ೫: ಕಾವೇರಿ ನದಿ ನೀರಿನ ವಿಚಾರಣೆ-ವಕಾಲತ್ತು (ಜಾಣಗೆರೆ, ಬಿಎಸ್ಎಸ್ ) ಕೋಲಾಟ -ಡಾ. ಚಕ್ಕೆರೆ ಶಿವಶಂಕರ್ ಶುಭ್ರವಾದ ಕರಿಯ ಕಂಬಳಿಯ ಮೇಲೆ ದೋಣಿಗಳನ್ನಿಟ್ಟು ಅದರಲ್ಲಿ ಬೆಲ್ಲ, ಕಾಯಿಚೂರು, ಕೊಬ್ಬರಿ, ಬಾಳೆಹಣ್ಣು , ಕಜ್ಜಾಯದ ಚೂರು, ಪುರಿ, ಹಲಸಿನ ತೊಳೆ ಇವೆಲ್ಲವನ್ನು ಬೆರೆಸಿ ರಸಾಯನವನ್ನು ತಯಾರಿಸಿ ಡೋಣಿಗಳಲ್ಲಿ ತುಂಬಿಡುತ್ತಾರೆ. ಗೊರವರು ತಮ್ಮ ಸಾಂಪ್ರದಾಯಿಕ ವೇಷ ಭೂಷಣಗಳೊಂದಿಗೆ ಕೊಳಲು, ಡಮರುಗ ಹಿಡಿದು ಕರಿಯ ಕಂಬಳಿಯ ಸುತ್ತ ಲಯಬದ್ದವಾಗಿ ಕುಣಿಯುತ್ತಾರೆ. ಕಾಲಿನ ಗೆಜ್ಜೆಯ ನಿಯತವಾದ ಸದ್ದಿಗೂ, ಕೈಯಲ್ಲಿನ ಡಮರುಗದ ಗಂಭೀರ ನಾದಕ್ಕೂ ಕೊಳಲಿನ ಸುಮಧುರನಾದಕ್ಕೂ ಬಾಗುತ್ತಾ, ಬಳಕುತ್ತ, ಕುಪ್ಪಳಿಸುತ್ತ, ಏಳುತ್ತ ಕಂಬಳಿಯ ಮೇಲಿರಿಸಿದ ಡೋಣಿಗಳಲ್ಲಿನ ಹಾಗೂ ರಸಾಯನವನ್ನು ತಿನ್ನುವ ಭಂಗಿಯನ್ನು ಪ್ರದರ್ಶಿಸಿರುತ್ತಾರೆ. ಇದನ್ನು ಮಣೇವು ಕುಣಿತ ಎಂದು ಕರೆಯುತ್ತಾರೆ. ಗೊರವ ಕಲಾವಿದರು ಕರ್ನಾಟಕದ ಅತ್ಯಂತ ಉತ್ಕೃಷ್ಟ ವೃತ್ತಿಗಾಯಕರು. ಹತ್ತಾರು ಖಂಡ ಕಾವ್ಯಗಳನ್ನು ಹಾಡುತ್ತಾರೆ. ಮೈಲಾರಲಿಂಗನ ಮಹಿಮೆ, ಪವಾಡ, ಪ್ರಣಯ ಪ್ರಸಂಗಗಳನ್ನು ಒಳಗೊಂಡ ಮೈಲಾರಲಿಂಗನ ಕಾವ್ಯ ಗೊರವರ ಬಳುವಳಿ. ಬೀದರ್, ಧಾರವಾಡ, ಗುಲರ್ಗಾ, ಬಳ್ಳಾರಿ, ಬೆಳಗಾವಿ, ಶಿವಮೊಗ್ಗ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ ಇಲ್ಲೆಲ್ಲಾ ಮೈಲಾರಲಿಂಗನ ಕ್ಷೇತ್ರಗಳಿವೆ; ಗೊರವರೂ ಇದ್ದಾರೆ. ಕರ್ನಾಟಕದ ಮೀಡಿಯಾ ಮೇನಿಯಾ-ಭಾಗ ೧ ಇದೊಂದು ಸುಮ್ಮನೆ ಓದಿಕೊಂಡು ನಕ್ಕು ಮರೆತುಬಿಡುವಂತಹ ಹಾಸ್ಯ ಪ್ರಸಂಗಗಳ ಬರಹ. ಇದನ್ನು ಗಂಭೀರವಾಗಿ ಪರಿಗಣಿಸಿ ತಲೆನೋವು ತಂದುಕೊಂಡರೆ ಅದಕ್ಕೆ ನಾವು ಹೊಣೆಗಾರರಲ್ಲ ಎಂದು ಹೇಳುತ್ತಾ...... ನಾವಿಂದು ನೂರಾರು ಟಿವಿ ಚಾನಲ್ಲುಗಳನ್ನು ನೋಡಬಹುದಾಗಿದೆ. ಇತ್ತೀಚೆಗೆ ಅದರಲ್ಲಿ ಇತರೆ ಮನೋರಂಜನೆಯ ಚಾನಲ್ಲುಗಳಿಗಿಂತಲೂ ಜನರಿಗೆ ಅತ್ಯಂತ ಹೆಚ್ಚಿನ ಮನೋರಂಜನೆ ನೀಡುತ್ತಿರುವುದು ನ್ಯೂಸ್ ಚಾನಲ್ಲುಗಳು. ಇತರೆ ಭಾಷೆಗಳಲ್ಲಿರುವಂತೆಯೇ ಕನ್ನಡದಲ್ಲಿಯೂ ಸುದ್ದಿಗೆಂದೇ ಹಲವಾರು ಚಾನಲ್ಲುಗಳಿವೆ. ನಮ್ಮ ಕನ್ನಡದಲ್ಲಿರುವ ಒಂದಷ್ಟು ನ್ಯೂಸ್ ಚಾನಲ್ಲುಗಳಲ್ಲಿನ ಕಾರ್ಯ ವೈಖರಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಟಿವಿ ೬೯, ಕರ್ಣ ಕಠೋರ ಟಿವಿ, ಊದುವ ಟಿವಿ, ಗಂಟೆ ಟಿವಿ, ಆ ಟಿವಿ-ಗಳು ಸದ್ಯಕ್ಕೆ ಕರ್ನಾಟಕದಲ್ಲಿ ಚಾಲ್ತಿಯಲ್ಲಿವೆ. ಇನ್ನೂ ಹಲವಾರು ನ್ಯೂಸ್ ಚಾನಲ್ಲುಗಳು ಮನೋರಂಜನೆಯ ಮಹಾಪೂರದಿಂದ ಕನ್ನಡಿಗರ ಮನತಣಿಸಲು ಸಧ್ಯದಲ್ಲೇ ಪ್ರಾರಂಭಗೊಳ್ಳುವ ಸೂಚನೆಗಳು ದಟ್ಟವಾಗಿದೆ. ಈ ಟಿ ವಿ ಚಾನಲ್ಲುಗಳು ಭಾರೀ ಪೈಪೋಟಿಯಿಂದ ಬ್ರೇಕಿಂಗ್ ನ್ಯೂಸ್, ಎಕ್ಸ್ ಕ್ಲೂಸಿವ್ ಗಳನ್ನು ನೀಡತೊಡಗಿವೆ. ಅವುಗಳಲ್ಲಿ ಬಿತ್ತರವಾಗುವ ಗಂಭೀರ ಸುದ್ದಿಗಳು, ರಾಜಕೀಯ ಚಕಮಕಿ, ಬ್ರೇಕಿಂಗ್ ಸುದ್ದಿಗಳು, ಪ್ರಾಯೋಜಿತ ಪಾನಲ್ ಡಿಸ್ಕಷನ್ ಗಳು ಹೇಗಿರುತ್ತವೆಂಬುದರ ಬಗೆಗಿನ ವಿಡಂಬನಾತ್ಮಕ ಬರಹವಿದು. ಟಿವಿ ೬೯ ಸಧ್ಯಕ್ಕೆ ಹೆಚ್ಚು ಚಾಲ್ತಿಯಲ್ಲಿರುವ ನ್ಯೂಸ್ ಚಾನಲ್ ಎಂದು ತನ್ನನ್ನು ಕರೆದುಕೊಳ್ಳುತ್ತಿದೆ. ಇದರಲ್ಲಿ ಬೆಳಿಗ್ಗೆ ವಿಲನ್ ನಂತೆ ಕಾಣಿಸಿಕೊಳ್ಳುವ ವ್ಯಕ್ಯಿ ಸಂಜೆ ಹೊತ್ತಿಗೆ ನಾಯಕನಂತೆ ಕಂಗೊಳಿಸುತ್ತಾನೆ. ಈ ಟಿವಿ ೬೯ ಯಾವಾಗ ಆರು ಅಗಿರುತ್ತದೆ ಯಾವಾಗ ಒಂಭತ್ತು ಆಗಿರುತ್ತದೆ ಹೇಳಲಾಗುವುದಿಲ್ಲ! ಸಣ್ಣದಿರಲಿ, ದೊಡ್ಡದಿರಲಿ ಬೇಗನೇ ಜನರಿಗೆ ಮುಟ್ಟಿಸಬೇಕೆಂಬ ಆತುರದಲ್ಲಿಯೇ ಈ ಟಿವಿ ಬ್ರೇಕಿಂಗ್ ನ್ಯೂಸ್ ಗಳನ್ನು ನೀಡುವ ಪರಿ ಹೇಗಿರುತ್ತದೆಂದರೆ... ಸುದ್ದಿ ನಿರೂಪಕಿ :(ವಾರ್ತೆಯನ್ನು ಓದುತ್ತಾ) "ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಮನೆ ಮಠವನ್ನೆಲ್ಲಾ ಕಳೆದುಕೊಂಡು ಬೀದಿ ಪಾಲಾಗಿರುವ ರೈತರ ಬವಣೆಯನ್ನು ಈ ವಿಶೇಷ ಕಾರ್ಯಕ್ರಮದ ಮೂಲಕ ನಾವೀಗ ನಿಮ್ಮ ಮುಂದಿಡುತ್ತಿದ್ದೇವೆ, ನಮ್ಮ ವರದಿಗಾರ ಪ್ರವಾಹ ಪೀಡಿತ ರೈತರೊಂದಿಗೆ ನಡೆಸುವ ನೇರ ಸಂದರ್ಶನ ಇದೋ ನಿಮಗಾಗಿ ಟಿ ವಿ ಸಿಕ್ಸ್ಟಿ ನೈನ್ ನಲ್ಲಿ ಮಾತ್ರ"... ರೈತನೊಬ್ಬ ದುಃಖತಪ್ತನಾಗಿ ಪ್ರವಾಹ ಪೀಡಿತನಾದ ತನ್ನ ನೆರವಿಗೆ ಸರ್ಕಾರ ಬಾರದಿದ್ದರಿಂದ ತನ್ನಿಬ್ಬರು ಎಳೇ ವಯಸ್ಸಿನ ಮಕ್ಕಳು ಚಳಿ ಮಳೆಯನ್ನು ತಾಳಲಾರದೇ ಸತ್ತ ಹೃದಯ ವಿದ್ರಾವಕ ಘಟನೆಯ ಬಗ್ಗೆ ಮಾತನಾಡಲು ಆರಂಭಿಸತೊಡಗುತ್ತಾನೆ. ಆ ಹೊತ್ತಿನಲ್ಲೇ ಟಿವಿ ಪರದೆಯ ಮೇಲೆ ಬ್ರೇಕಿಂಗ್ ನ್ಯೂಸ್ ಒಂದು ಕಾಣಿಸಿಕೊಳ್ಳುತ್ತದೆ. ರೈತನ ಮುಖ ಮರೆಯಾಗಿ -ಹುಚ್ಚು ನಾಯಿಯನ್ನು ಅಟ್ಟಾಡಿಸಿಕೊಂಡು ಕೊಂದ ಜನರು- ಎಂಬ ಸುದ್ದಿ ಪ್ರತ್ಯಕ್ಷವಾಗುತ್ತದೆ. ಕೂಡಲೇ ವಾರ್ತಾ ನಿರೂಪಕಿ ಮಧ್ಯೆ ಪ್ರವೇಶಿಸಿ "ಈಗ ಬಂದ ಸುದ್ದಿಯೆಂದರೆ ಬೆಂಗಳೂರಿನಲ್ಲಿ ಜನರನ್ನು ಕಚ್ಚಲು ಹೋಗುತ್ತಿದ್ದ ಹುಚ್ಚು ನಾಯಿಯೊಂದನ್ನು ಜನರೇ ಅಟ್ಟಾಡಿಸಿಕೊಂಡು ಕೊಂದ ಘಟನೆ ನಡೆದಿದೆ. ಅದು ನಿಜವಾಗಲೂ ಹುಚ್ಚು ನಾಯಿಯಾಗಿತ್ತೋ, ಅಥವಾ ತಲೆಕೆಟ್ಟ ಜನರು ಅದನ್ನು ಕೊಂದು ಹಾಕಿದರೋ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾವೀಗ ನಾಯಿಯನ್ನು ಕೊಂದು ಹಾಕಿರುವ ಸ್ಥಳದಲ್ಲಿಯೇ ಇರುವ ನಮ್ಮ ಪ್ರತಿನಿಧಿಯನ್ನು ನೇರವಾಗಿ ಸಂಪರ್ಕಿಸಲಿದ್ದೇವೆ"...ಎಂದು ಶುರು ಮಾಡುತ್ತಾಳೆ. ಪ್ರವಾಹದಿಂದಾಗಿ ಸಾವಿರಾರು ರೈತರು ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಳ್ಳಲು ಸಿದ್ದನಾಗಿದ್ದ ರೈತನ ಸಂದರ್ಶನ ಹುಚ್ಚು ನಾಯಿ ಸತ್ತ ಬ್ರೇಕಿಂಗ್ ಸುದ್ದಿಯಿಂದಾಗಿ ಅಲ್ಲಿಗೇ ಕಟ್ ಆಗುತ್ತದೆ. ಹುಚ್ಚು ನಾಯಿ ಸತ್ತ ಸ್ಥಳದಲ್ಲಿದ್ದ ವರದಿಗಾರ ಸತ್ತ ನಾಯಿಯ ಶವವನ್ನು ತೋರಿಸುತ್ತಾ ಅದರ ಬಗ್ಗೆ ವಿವರಣೆ ನೀಡಲಾರಂಭಿಸುತ್ತಾನೆ. ವರದಿಗಾರ: "ನೋಡಿ ಮೇಡಂ, ಈಗ ತಾನೇ ಈ ನಾಯಿ ಸತ್ತು ಬಿದ್ದಿದೆ. ನಾಯಿಯನ್ನು ಜನರು ಅಟ್ಟಾಡಿಸಿಕೊಂಡು ಹೊಡೆಯುವ ಸುದ್ದಿ ನಮ್ಮ ಕಿವಿಗೆ ಬಿದ್ದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿದೆವು. ಅಷ್ಟರಲ್ಲಿ ಜನ ಈ ನಾಯಿಯನ್ನು ಕೊಂದು ಹಾಕಿದ್ದರಿಂದ ನಮಗೆ ಅದರ ನೇರ ದೃಶ್ಯವನ್ನು ನಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಲಿಲ್ಲ, ಅದಕ್ಕಾಗಿ ನಾವು ನಮ್ಮ ವೀಕ್ಷಕರ ಕ್ಷಮೆ ಯಾಚಿಸುತ್ತೇವೆ, ನಮಗೆ ಮಾಹಿತಿ ನೀಡಿದ ವ್ಯಕ್ತಿ ನಮಗೆ ಸರಿಯಾಗಿ ವಿಳಾಸ ತಿಳಿಸುವಲ್ಲಿ ವಿಫಲನಾದುದರಿಂದ ನಾವು ಸರಿಯಾದ ಸಮಯಕ್ಕೆ ಈ ಜಾಗವನ್ನು ತಲುಪಲಾಗಲಿಲ್ಲ... ಇಲ್ಲಿ ನಮಗಿರುವ ಅನುಮಾನವೆಂದರೆ ಈ ನಾಯಿಗೆ ನಿಜವಾಯೂ ಹುಚ್ಚು ಹಿಡಿದಿತ್ತೇ ಎಂಬುದು, ನಾವು ಅದರ ಬಗ್ಗೆ ಇಲ್ಲಿಯ ಜನರನ್ನು ವಿಚಾರಿಸಿದಾಗ ಅವರು ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ...." ಆತನ ಮಾತನ್ನು ಅರ್ಧದಲ್ಲಿಯೇ ತುಂಡರಿಸಿದ ನಿರೂಪಕಿ: "ಅಲ್ಲ ಇವರೇ, ನಾಯಿಗೆ ನಿಜವಾದ ಹುಚ್ಚು ಹಿಡಿದಿತ್ತೋ ಅಥವಾ ಆ ನಾಯಿಯ ಬಗ್ಗೆ ಯಾರಿಗಾದರೂ ದ್ವೇಷವಿತ್ತೋ ಅಂತ ನನ್ನ ಪ್ರಶ್ನೆ. ಯಾಕೆಂದರೆ ಅಲ್ಲಿನ ಜನರು ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಹೇಳುತ್ತಿದ್ದೀರಿ...ಯಾತಕ್ಕಾಗಿ ಈ ಭಿನ್ನ ಅಭಿಪ್ರಾಯ ಎಂಬುದೇನಾದರೂ ನಿಮ್ಮ ಗಮನಕ್ಕೆ ಬಂದಿದೆಯಾ? ಆ ನಾಯಿ ಯಾವ ಜಾತಿಯದ್ದು? ಯಾವ ಬಣ್ಣದ್ದು? ಅದು ಸಾಕಿದ ನಾಯೋ ಅಥವಾ ಬೀದಿ ನಾಯಿಯೋ? ಅದರ ಬಗ್ಗೆ ಸಂಫೂರ್ಣ ಮಾಹಿತಿ ನೀಡ್ತೀರಾ?" ಎಂದು ಕೇಳಿದೊಡನೇ... ಆ ವರದಿಗಾರ: "ಮೇಡಂ, ನಾವು ಈ ನಾಯಿಯ ಬಗೆಗಿನ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಇಲ್ಲಿನ ಜನರನ್ನು ಕೇಳಿದಾಗ ಅವರು ’ಹೋಗ್ರೀ ಹುಚ್ಚು ನಾಯಿ ಬಗ್ಗೆ ಕೇಳ್ತೀರಲ್ರೀ’ ಎಂಬ ಉಡಾಫ಼ೆಯಿಂದ ಮಾತನಾಡುತ್ತಿದ್ದಾರೆ, ಇದರ ಬಗ್ಗೆ ತಲೆಕೆಡಿಸಿಕೊಂಡ ನಾವು ಮಾನವ ಹಕ್ಕು ಆಯೋಗದ ಗಮನಕ್ಕೆ ತಂದಾಗ ಅಲ್ಲಿದ್ದವರು ’ನೋಡ್ರೀ ಮನುಷ್ಯರ ಮೇಲೆ ದೌರ್ಜನ್ಯ ನಡೆದಲ್ಲಿ ಸ್ಪಂದಿಸುವುದು ನಮ್ಮ ಕೆಲಸ. ನಾಯಿ ನರಿಗಳ ಮೇಲೆ ನಡೆದ ಹಲ್ಲೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಪ್ರಾಣಿ ದಯಾ ಸಂಘದವರಿದ್ದಾರಲ್ಲಾ ಅವರಿಗೆ ಹೇಳಿ’ ಅಂದುಬಿಟ್ಟರು ಮೇಡಂ. ಈ ಬಗ್ಗೆ ನಾವು ಪ್ರಾಣಿ ದಯಾ ಸಂಘದವರನ್ನೂ ಸಂಪರ್ಕಿಸಿದೆವು ಮೇಡಂ...’ಬದುಕಿರುವ ಪ್ರಾಣಿಗಳ ಬಗ್ಗೆಯಷ್ಟೇ ನಮ್ಮ ಗಮನ. ಸತ್ತಿದ್ದರೆ ಕಾರ್ಪೋರೇಷನ್ನಿನವರಿಗೆ ಹೇಳಿ. ಅವರು ಎತ್ತಿ ಹಾಕ್ತರೆ ಅಂತ ಅವ್ರೂ ಉಡಾಫ಼ೆಯಿಂದ ಮಾತನಾಡಿ ಬಿಟ್ರು ಮೇಡಂ, ನಮಗೆ ಮುಂದೇನು ಮಾಡಬೇಕೆಂದು ದಿಕ್ಕು ತೋಚದೇ ಸತ್ತ ನಾಯಿಯ ಶವದ ಮುಂದೆ ನಿಂತಿದ್ದೇವೆ ಮೇಡಮ್"... ಕೂಡಲೇ ಸುದ್ದಿ ನಿರೂಪಕಿ: "ನೊಡೀ ಇವರೇ, ನೀವು ಅಲ್ಲೇ ಇರಿ. ಜಾಗ ಬಿಟ್ಟು ಕದಲಬೇಡಿ, ನಾವೀಗ ಇದರ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವ ಸಲುವಾಗಿ ನಮ್ಮ ಸ್ಟುಡಿಯೋದಲ್ಲಿರುವ ಮುಖ್ಯ ವರದಿಗಾರರನ್ನು ಸಂಪರ್ಕಿಸಲಿದ್ದೇವೆ" ಅಂತ ಅಲ್ಲಿ ಕುಳಿತಿದ್ದ ಗಡ್ಡಧಾರಿಯೊಬ್ಬರನ್ನು ಪ್ರಶ್ನೆ ಕೇಳುತ್ತಾಳೆ. "ನೋಡೀ ಇವ್ರೇ, ಒಂದು ನಾಯಿಯನ್ನು ಜನ ಅಟ್ಟಾಡಿಸಿ ಕೊಂದರೂ ಸಾರ್ವಜನಿಕರೂ ಸೇರಿದಂತೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಮಾನವ ಹಕ್ಕು ಆಯೋಗದವರು ನಾಯಿ ನರಿಗಳು ನಮಗೆ ಸಂಬಂದಿಸಿಲ್ಲ ಅಂತಾರಂತೆ ಇನ್ನು ಪ್ರಾಣಿ ದಯಾ ಸಂಘದವರು ಸತ್ತ ಪ್ರಾಣಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅಂತಾರಂತೆ, ಇನ್ನು ಕಾರ್ಪೋರೇಷನ್ನಿನವರಂತೂ ಬಿಡ್ರೀ ದಿನಕ್ಕೆ ನೂರಾರೂ ಹುಚ್ಚು ನಾಯಿಗಳು ಸಾಯ್ತವೆ ಅಂತಾರಂತೆ. ಇದರ ಹೊಣೆ ಯಾರು ಹೊರಬೇಕು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಅದಕ್ಕೆ ಸ್ಟುಡಿಯೊದಲ್ಲಿರುವ ಆ ವರದಿಗಾರ: "ಮೇಡಂ, ಇದು ಬಗೆಹರಿಯದ ಪ್ರಶ್ನೆಯಾಗಿದೆ, ಆ ನಾಯಿ ಹಲವಾರು ಜನರನ್ನು ಕಚ್ಚಿತ್ತು ಎಂಬ ಮಾಹಿತಿ ನಮಗೀಗ ಲಭ್ಯವಾಗಿದೆ. ಜನರನ್ನು ಕಚ್ಚಿದ ಮಾತ್ರಕ್ಕೆ ಅದನ್ನು ಹಾಗೆ ದಾರುಣವಾಗಿ ಚಚ್ಚಿ ಹಾಕಬೇಕೆಂದು ಕಾನೂನಿಲ್ಲ, ಆ ರೀತಿ ಅದನ್ನು ಕೊಂದು ಹಾಕಿರುವುದು ನನ್ನ ದೃಷ್ಟಿಯಲ್ಲಿ ಆಕ್ಷಮ್ಯ ಅಪರಾಧ ಮೇಡಂ"... ಅಲ್ಲಿ ದೂರದ ಉತ್ತರ ಕರ್ನಾಟಕದಲ್ಲಿ ತನ್ನ ಕರುಣಾಜನಕ ಕಥೆಯನ್ನು ಟಿ ವಿ ಯವರ ಮುಂದೆ ಹೇಳಿಕೊಳ್ಳಲು ನಿಂತಿದ್ದ ರೈತ "ಇದ್ಯಾಕ್ ಸ್ವಾಮೀ, ಸುಮ್ಮನೆ ನಿಂತ್ರೀ? ಮಾತಾಡ್ಲೋ, ಬೇಡ್ವೋ, ಅಂತ ಅಲ್ಲಿದ್ದ ವರದಿಗಾರನಿಗೆ ಕೇಳಿದ. ಕೂಡಲೇ ಆ ವರದಿಗಾರ: "ಸುಮ್ನಿರಯ್ಯಾ! ಈಗ ಬ್ರೇಕಿಂಗ್ ನ್ಯೂಸ್ ಹೋಗ್ತಾಯಿದೆ! ನಮ್ಮ ಚಾನೆಲ್ ದೇ ಫಸ್ಟ್ ನ್ಯೂಸು. ಬೆಂಗಳೂರಲ್ಲಿ ಜನ ಹುಚ್ಚು ನಾಯಿಯನ್ನು ಕೊಂದು ಹಾಕಿದ್ದಾರೆ, ಅದರ ಬಗ್ಗೆ ನಮ್ಮ ಚಾನಲ್ ನವರೆಲ್ಲಾ ಬ್ಯುಸಿಯಾಗಿದ್ದಾರೆ, ಮೊದಲು ಅದು ಮುಗೀಲಿ ಆಮೇಲೆ ನಿನ್ನ ಕಥೆ..." ಅನ್ನುತ್ತಾನೆ. ಅದಕ್ಕೆ ಆ ರೈತ "ಅಲ್ಲಾ ಸ್ವಾಮಿ ಹುಚ್ಚು ನಾಯಿ ಸಾಯದೂ ಒಂದು ಸುದ್ದಿಯಾ?? ಹೊಟ್ಟೆಗ್ ಹಿಟ್ಟಿಲ್ದೆ, ಚಳಿ ತಾಳ್ದೆ, ಕಾಯಿಲೆ ಬಿದ್ದು ನನ್ನ ಎರಡೂ ಮಕ್ಳೂ ತೀರ್ಕಂಡವೆ. ನನ್ ಕಥೆ ಕೇಳ್ದೆ ನೀವು ಹುಚ್ಚು ನಾಯಿ ಕಥೆ ಕೇಳ್ಕಂಡಿದ್ದಿರಲ್ಲಾ"... ಎಂದು ಗೋಳಾಡುತ್ತಾ ಎದ್ದು ಹೋದ. ಛಲ ಬಿಡದ ತ್ರಿವಿಕ್ರಮಿಯಂತೆ ಸುದ್ದಿ ನಿರೂಪಕಿ: "ನಾವೀಗ ನಾಯಿ ಸತ್ತ ಜಾಗದಲ್ಲಿರುವ ನಮ್ಮ ವರದಿಗಾರರನ್ನು ಭೇಟಿಯಾಗೋಣ, ನೋಡೀ ಇವರೇ, ನೀವು ಎಷ್ಟು ಹೊತ್ತಿನಿಂದ ಆ ಜಾಗದಲ್ಲಿಯೇ ಇದ್ದೀರಿ, ಸತ್ತ ನಾಯಿಯ ವಾರಸುದಾರರು ಯಾರಾದರೂ ಅಲ್ಲಿಗೆ ಬಂದರಾ, ಆ ನಾಯಿಯ ಯಾವ ಯಾವ ಜಾಗಕ್ಕೆ ಏಟು ಬಿದ್ದಿದೆ, ಅದರ ಪೋಸ್ಟ್ ಮಾರ್ಟಮ್ ಅನ್ನು ಮಾಡುತ್ತಾರೆಯೋ ಹೇಗೆ?" ನಾಯಿ ಸತ್ತ ಜಾಗದಲ್ಲಿದ್ದ ವರದಿಗಾರ: "ಮೇಡಂ ಇಲ್ಲಿ ಯಾರೂ ಸ್ಥಳದಲ್ಲಿಲ್ಲ, ನಾನು ಮತ್ತು ನಮ್ಮ ಕ್ಯಾಮರಾ ಮೆನ್ ಇಬ್ಬರೇ ಇರುವುದು, ಈ ನಾಯಿ ನನ್ನದೆಂದು ಹೇಳಿಕೊಳ್ಳಲು ಯಾರೂ ಇಲ್ಲಿಗೆ ಬಂದಿಲ್ಲ, ಈ ಹುಚ್ಚು ನಾಯಿಯು ಹಲವಾರು ಜನರಿಗೆ ಕಚ್ಚಿರುವುದರಿಂದ ಈ ನಾಯಿಯನ್ನು ತನ್ನದೆಂದು ಹೇಳಿಕೊಂಡಲ್ಲಿ ಈ ನಾಯಿಗಾದ ಗತಿಯೇ ಅವರಿಗೂ ಆಗುವ ಸಂಭವವಿರುವುದರಿಂದ ಯಾರೂ ಬಂದಿಲ್ಲ. ಇನ್ನು ಈ ನಾಯಿಯನ್ನು ಪೋಸ್ಟ್ ಮಾರ್ಟಮ್ ಮಾಡುವ ಬಗ್ಗೆ ಕೇಳಿದ್ದೀರಿ, ಅದರ ಬಗ್ಗೆ ನಾವೇನಾದರೂ ಜನರಿಗೆ ಒತ್ತಾಯಿಸಿದಲ್ಲಿ ನಾಯಿಗೆ ಬಿದ್ದಂತೆ ನಮಗೆಲ್ಲಿ ಏಟು ಬೀಳುವುದೋ ಎಂಬ ಆತಂಕದಿಂದ ನಾವದರ ಬಗ್ಗೆ ಯಾರನ್ನೂ ಕೇಳಲಿಲ್ಲ. ಇನ್ನು ಸ್ವಲ್ಪ ಹೊತ್ತು ನಾವಿಲ್ಲಿಯೇ ಇದ್ದು ಈ ನಾಯಿಯ ಬಗ್ಗೆಯೇ ವರದಿ ಮಾಡುತ್ತಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತದೋ ನಮಗೇ ಗೊತ್ತಾಗುತ್ತಿಲ್ಲ ಮೇಡಂ..." ಕೂಡಲೇ ನಿರೂಪಕಿ: "ನೋಡಿ ಇವರೇ, ಕೂಡಲೇ ನೀವು ಆ ಜಾಗ ಖಾಲಿ ಮಾಡಿ, ನಾಯಿ ಕಥೆ ಹಾಳಾಗಲಿ, ಅಲ್ಲಿ ನಮ್ಮ ಬೆಲೆ ಬಾಳುವ ಕ್ಯಾಮರಾಗಳು, ನೇರ ಪ್ರಸಾರದ ಸಲಕರಣೆಗಳಿರುವುದರಿಂದ ನೀವು ಅವುಗಳಿಗೆ ಯಾವುದೇ ಜಖಂ ಆಗದಂತೆ ಹುಶಾರಾಗಿ ಬಂದು ಬಿಡಿ" ಎಂದು ಹೇಳಿ ವೀಕ್ಷಕರತ್ತ ತಿರುಗಿ "ಪ್ರಿಯ ವೀಕ್ಷಕರೇ... ಸಮಯ ಮುಗಿಯುತ್ತಾ ಬಂದಿದೆ... ನಮ್ಮ ಇಂದಿನ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ರೈತರ ಬವಣೆಯನ್ನು ನೇರ ಪ್ರಸಾರದ ಮೂಲಕ ಅಲ್ಲಿನ ರೈತರೇ ನಿಮ್ಮ ಮುಂದಿಟ್ಟಿದ್ದಾರೆ, ಕಾರ್ಯಕ್ರಮ ವೀಕ್ಷಿಸಿದ್ದಕ್ಕೆ ತಮಗೆ ಧನ್ಯವಾದಗಳು, ಕ್ಷಣ ಕ್ಷಣದ ಸುದ್ದಿಗಾಗಿ ನೋಡ್ತಾಯಿರಿ ಟಿ ವಿ ಸಿಕ್ಸ್ಟಿ ನೈನ್" ಹುಚ್ಚು ನಾಯಿ ಸತ್ತ ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ತಮ್ಮ ಬವಣೆಯನ್ನು ಹೇಳಿಕೊಳ್ಳಲಾಗದೇ ನಿರ್ಗಮಿಸಿದ ಬಡ ರೈತರ ವಿಶೇಷ ಕಾರ್ಯಕ್ರಮ ಈ ರೀತಿಯಾಗಿ ಮುಗಿದಿತ್ತೆಂಬುದನ್ನು ಹೇಳುತ್ತಾ.... ಮುಂದಿನ ಸಂಚಿಕೆಯಲ್ಲಿ ಇತರೆ ನ್ಯೂಸ್ ಚಾನಲ್ಲುಗಳ ಮತ್ತಷ್ಟು ಬಹುಗುಣ ವಿಶೇಷತೆಗಳನ್ನು ನಿಮ್ಮ ಮುಂದಿಡಲಿದ್ದೇವೆ... ಅಲ್ಲಿವರೆಗೂ ಬ್ರೇಕಿಂಗ್ ನ್ಯೂಸ್ ಗಳ ತಾಪತ್ರಯವಿಲ್ಲದೇ ಸಮಾಧಾನವಾಗಿ ಬಾಳಿ ಎಂದು ಹಾರೈಸುತ್ತಾ... ’ಕಾವೇರಿ’ದ ಚಳುವಳಿಯಿಂದ ಅಕ್ಷರಶಃ ಹತ್ತುರಿದ ಬೆಂಗಳೂರು-ಮೈಸೂರು-ಮಂಡ್ಯ-ಜಿಲ್ಲೆಗಳು ಬಿ ಎಸ್ ಶಿವಪ್ರಕಾಶ್ (ಜನ ಕಾನೂನಿನ ವಿರುದ್ಧ ತಿರುಗಿ ಆಕ್ರೋಶಗೊಂಡು ಜನ-ಜೀವನ ಹಾನಿ ಮಾಡುವುದನ್ನು ಸರಿ ಎಂದು ನಾವು ಕಾವೇರಿ ಚಳುವಳಿಯ ವಿವರಗಳನ್ನು ಇಲ್ಲಿ ಬರೆಯುತ್ತಿಲ್ಲ. ಕರ್ನಾಟಕದ ಜನ ತಮ್ಮ ನಾಡಿಗಾಗಿ, ರೈತರಿಗಾಗಿ, ನೀರಿಗಾಗಿ, ತಮ್ಮ ಹಿತಾಸಕ್ತಿಗೆಂದು ಒಗ್ಗಟ್ಟಾಗಿ ಒಕ್ಕೊರಲಿನಲ್ಲಿ ಪ್ರತಿಭಟಿಸಿದ ಚಳುವಳಿ ಇದೊಂದೇ. ಕಾವೇರಿಗಾಗಿ ನಡೆದ ಚಳುವಳಿಯ ನಂತರ ಬೇರೆಲ್ಲೂ ಕರ್ನಾಟಕದ ಜನ ಈ ಪರಿ ಒಗ್ಗಟ್ಟಿನಿಂದ ವರ್ತಿಸಿರಲಿಲ್ಲ. ಈಗ ಬಿಡಿ. ಬಂದ್ ಗಳು, ಚಳುವಳಿಗಳು ಕೇವಲ ಒಂದೋ ಎರಡೋ ರಾಜಕೀಯ ಪಕ್ಷಗಳ, ನಾಯಕರ ಅನುಕೂಲಗಳಿಗೆ ಮಾತ್ರ ನಡೆಯುತ್ತವೆ. ಚಳುವಳಿ ಎಂಬ ಸಂಚಲನವೇ ಅರ್ಥ ಕಳೆದುಕೊಂಡಿದೆ. ಅದೂ ಒಂದು ರೋಲ್ ಕಾಲ್ ಆಗಿದೆ. ಎಷ್ಟು ಲಕ್ಷ ಅಥವಾ ಕೋಟಿ ಸುರಿದು ಎಷ್ಟು ಜನರನ್ನು ಒಟ್ಟು ಮಾಡಿ ದೊಂಬಿ ಮಾಡಬಹುದು ಎನ್ನುವುದು ಇವತ್ತಿನ ಹೋರಾಟಗಳ ಹೊಟ್ಟೆಪಾಡು. ಹಣ ಮುಖ್ಯವಾಗುತ್ತಾ ಹೋದಂತೆ, ಹೊರಗಿನ ಹಣ ದಾಹೀ ಅಥವಾ ಹಣ ಹೂಡುವ ಶಕ್ತಿಗಳು ನಾಡೊಂದಕ್ಕೆ ನುಗ್ಗಿ ಅಲ್ಲಿನ ಜನರನ್ನು ತಮ್ಮ ನಾಡಿನ ಕುರಿತಾದ ಭಾವನೆಗಳ ನಂಟಿಂದ ದೂರ ಮಾಡಿ ಜನ-ಜೀವನ ಎರಡರ ಮಧ್ಯೆ ಅರ್ಥಮಾಡಿಕೊಳ್ಳಲಾಗದ ಕಂದಕವೊಂದನ್ನು ಸೃಷ್ಟಿಸಿಬಿಡುತ್ತವೆ. ಈಗ ಹೋರಾಟ ಮಾಡುವವರು ಎಂದರೆ ಗೂಂಡಾಗಳು ಎಂದೇ ವ್ಯಾಖ್ಯಾನ. ಅದಕ್ಕೆ ಅದರದ್ದೇ ಕಾರಣಗಳೂ ಇವೆ ಬಿಡಿ.) ವಿರೋಧ ಪಕ್ಷಗಳೂ ಆಡಳಿತ ಪಕ್ಷದೊಂದಿಗೆ ಕೈಗೂಡಿಸಿದ್ದರಿಂದ ೧೯೯೧ ರ ಡಿಸಂಬರ್ ೧೨ ರಂದು ಒಕ್ಕೊರಲಿನಿಂದ ಕರಕೊಟ್ಟಿದ್ದ ರಾಜ್ಯ ಬಂದ್ ಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಡೀ ಕರ್ನಾಟಕ ಸ್ತಬ್ದಗೊಂಡಿತ್ತು. ಎಲ್ಲೆಡೆ ಸಂಪೂರ್ಣ ಬಂದ್ ಆಚರಿಸಿ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಲು ಜನತೆ ಮುಂದಾಗಿದ್ದರು. ಎಲ್ಲಾ ರಾಜಕೀಯ ಪಕ್ಷಗಳೂ, ಸಂಘ-ಸಂಸ್ಥೆಗಳೂ ಬೆಂಬಲ ಘೋಷಿಸಿದ್ದರಿಂದ ಭರ್ಜರಿಯಾಗಿ ಯಶಸ್ವಿಯಾಗತೊಡಗಿತ್ತು. ಬೆಳಿಗ್ಗೆ ೯ ಗಂಟೆ ಹೊತ್ತಿಗೆಲ್ಲಾ ಎಲ್ಲೆಡೆಯಿಂದ ಬಂದ್ ಯಶಸ್ಸಿನ ಬಗ್ಗೆ ಮಾಹಿತಿಗಳು ಬರುತ್ತಿದ್ದರೆ ರಾಜಧಾನಿ ಬೆಂಗಳೂರು ನಗರ ಇದ್ದಕ್ಕಿದ್ದಂತೆ ಬೇರೆಯದೇ ಅವತಾರಕ್ಕೆ ತಿರುಗಿಬಿಟ್ಟಿತ್ತು. ೧೦ ಗಂಟೆಗೆಲ್ಲಾ ರಾಜಾಜಿನಗರಕ್ಕೆ ಸೇರಿದ ಮಂಜುನಾಥನಗರದ ಸುತ್ತಮುತ್ತ ಬೆಂಕಿಯ ಕಿಡಿಗಳು ಹೊತ್ತಿಕೊಂಡಿದ್ದವು. ತಮಿಳು ಚಿತ್ರವನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬೆಂಕಿ ಬಿದ್ದಿತ್ತು. ಅದರ ದಟ್ಟ ಹೊಗೆ ಸುತ್ತಮುತ್ತ ಪ್ರದೇಶಗಳಿಗೆಲ್ಲಾ ರಾಚಿದಂತೆ ಕಾಣಿಸುತಿತ್ತು. ರಾಜಾಜಿನಗರದ ದೊಡ್ಡದಾದ ಟೆಕ್ಸ್ ಟೈಲ್ಸ್ ಮಳಿಗೆಗೆ ಬೆಂಕಿ ಹಾಕಲಾಗಿತ್ತು. ತಮಿಳು ದಿನ ಪತ್ರಿಕೆಯೊಂದರ ಕಚೇರಿಗೂ ಬೆಂಕಿ ತಗುಲಿತ್ತು. ರಸ್ತೆಗಳಲ್ಲಿಯೂ ನೂರಾರು ಜನರು ಹಿಂಡು ನಿಂತು ಟೈರು, ಟ್ಯೂಬು, ಸೌದೆ, ಹುಲ್ಲು, ಕಸವನ್ನು ತುಂಬಿ ಬೆಂಕಿಯಿಟ್ಟು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದರು. ರಾಜಾಜಿನಗರದ ಪ್ರಖ್ಯಾತ ಸ್ಕೂಲೊಂದರ ಮೇಲೆ ಧಾಳಿ ನಡೆದಿತ್ತು. ಮಹಾಕವಿ ಕುವೆಂಪು ರಸ್ತೆಯಲ್ಲಿಯೂ ಕೆಲವಾರು ಅಂಗಡಿ ಮುಂಗಟ್ಟುಗಳಿಗೆ ಬೆಂಕಿಯಿಡಲಾಗಿತ್ತು. ಬಿಸಿಲೇರುತ್ತಿದ್ದಂತೆಯೇ ರಾಜಾಜಿನಗರದ ಸುತ್ತಮುತ್ತಲಿದ್ದ ಪ್ರಕಾಶನಗರ, ಗಾಯಿತ್ರಿನಗರ, ಸುಬ್ರಮಣ್ಯನಗರ, ಮಂಜುನಾಥನಗರ, ಮಾಗಡಿರಸ್ತೆ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಕಮಲಾನಗರ, ಪೀಣ್ಯ, ಲಗ್ಗೆರೆ, ಮಹಾಲಕ್ಷ್ಮಿಪುರಂ ಮುಂತಾದ ಪ್ರದೇಶಗಳು ಅಕ್ಷರಶಃ ಬೆಂಕಿಯುಂಡೆಯಂತಾಗಿದ್ದವು. ಬಸವೇಶ್ವರನಗರ, ರಾಜಾಜಿನಗರ ಅಂಚೆ ಕಚೇರಿಗಳಿಗೆ ಬೆಂಕಿ ತಗುಲಿಸುವ ಪ್ರಯತ್ನಗಳು ನಡೆದಿದ್ದವು. ಮುಂದೆ ಓದಿ ಸಹನಾ ಅಪ್ಡೇಟ್ ಸಹನಾ ಇತ್ತೀಚಿಗೆ ಅಮೆರಿಕಾದಿಂದ ಹಲವು ಗೆಳೆಯರು ಬೆಂಗಳೂರಿಗೆ ಬಂದಿದ್ರು. ಸಾಕಷ್ಟು ಮಂದಿ ಅಲ್ಲಿ ಇಂಜಿನಿಯರ್ ಗಳಾಗಿ, ವೈದ್ಯರಾಗಿ, ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಮೆರಿಕದಲ್ಲಿ ಈಗಿನ ಛಳಿಯ ಪ್ರಭಾವ ದಿಂದಾಗಿ ತಿಂಗಳ ಮಟ್ಟಿಗೆ ತವರೂರಿನ ಕಡೆ ಮುಖಮಾಡಿ ಒಂದಷ್ಟು ದಿನ ಸುತ್ತಾಡಿ ಹೋಗುವುದು ಈ ಗೆಳೆಯರ ರೂಡಿ. ಸಿಕ್ಕ ಗೆಳೆಯರೊಂದಿಗೆ ಕಾಡು ಹೊಳೆ ರೆಸಾರ್ಟ್ ಸುತ್ತಾಟ, ಜೊತೆಗೆ ರಾತ್ರಿ ಪಾನ ಗೋಷ್ಠಿ ..! ಅದೆಲ್ಲ ಒಂಥರ ಸಡಗರ. ಇದು ಸಾಮಾನ್ಯವಾಗಿ ವರ್ಷಕೊಮ್ಮೆ ಆದ್ರು ನಡಿತಿರುತ್ತೆ. ಈ ರೀತಿಯ ಸಂದರ್ಭಗಳಲ್ಲಿ ಚರ್ಚೆಗೆ ಬರುವ ವಿಚಾರಗಳು ಒಂದಲ್ಲ ಹಲವಾರು. .ಒಬಾಮನಿಂದ ಹಿಡಿದು ಕಲಾಸಿಪಾಳ್ಯದ ಜಟಕಾ ಸಾಬರವರೆಗೂ ಸುದ್ದಿ ಹರಿದಾಡುತ್ತದೆ .ಆದರೆ ಈ ಬಾರಿ ಅತಿ ಹೆಚ್ಚು ಚರ್ಚೆ ಆಗಿದ್ದು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆನೇ! ಯಾವುದೇ ವಿಚಾರ ಪ್ರಸ್ತಾಪವಾದರೂ ಕೊನೆಗೆ ಬಂದು ನಿಲ್ಲುತ್ತಿದ್ದದ್ದು ಮುಖ್ಯಮಂತ್ರಿಗಳ ಭಂಡ ಗುಂಡಿಗೆ ಬಗ್ಗೆ!!! ಇವತ್ತು ನಮ್ಮ ಕರ್ನಾಟಕದಲ್ಲಿ ಭ್ರಷ್ಟಾಚಾರ, ಭೂಹಗರಣ, ಸ್ವಜನ ಪಕ್ಷಪಾತ ಒಂದು ರೆಗ್ಯುಲರ್ ವಿಷಯ ಅನ್ನೋ ರೀತಿ ಆಗಿದೆ. ನನ್ನ ಹಿಂದೆ ಇದ್ದ ಮುಖ್ಯಮಂತ್ರಿಗಳೆಲ್ಲ ಮಾಡಿರುವುದನ್ನೇ ನಾನು ಮಾಡಿದ್ದೇನೆ ಅಂತ ಮುಖ್ಯಮಂತ್ರಿ ಯಡಿಯೂರಪ್ಪ ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾರೋ ಅವರ ಸಚಿವ ಸಂಪುಟದ ಸದಸ್ಯರು ಅದನ್ನೇ ಪುನರುಚ್ಚರಿಸುತ್ತಾ ತಮ್ಮ ಕಳ್ಳತನ ಮುಂದುವರಿಸುತ್ತಾ ಇದ್ದಾರೆ. ಹಿರಿ ಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಅನ್ನೋ ಕಥೆ ಇಲ್ಲಿ. ಯಾರು ಮೊಂಡು ಹಿಡೀತಾರೋ ಅವರನ್ನ ’ಏನಪ್ಪಾ ಯಡಿಯೂರಪ್ಪನಿಂದ ಕಲಿತ್ಯಾ?!’ ಅಂತ ಜನ ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಸರ್ಕಾರ ಸುಮಾರು ದಿನದಿಂದಲೂ ತೂಗುಯ್ಯಾಲೆಯಲ್ಲೇ ಇದೆ. ಗಾತ್ರದ ಸರ್ಕಾರ ಇದ್ದರೂ ಕರ್ನಾಟಕದಲ್ಲಿ ಅಧಿಕಾರಿಗಳೇ ರಾಜ್ಯಭಾರ ನಡೆಸ್ತಿದ್ದಾರೆ, ಅಧಿಕಾರಶಾಹಿ ಮಜಬೂತಾಗಿ ಸಾಗ್ತಿದೆ. ಇವತ್ತು ಬೀಳ್ತಾರೆ ನಾಳೆ ಬೀಳ್ತಾರೆ ಸಂಜೆ ಬೀಳ್ತಾರೆ ಅಂತ ಯಡಿಯೂರಪ್ಪನವರ ಜಾರುವ ಟೈಮ್ ಗೆ ಕಾದು ಕಾದು ಕರ್ನಾಟಕದ ಜನರೂ ರೋಸಿಹೋಗಿದ್ದಾರೆ. ಹೊಸವರ್ಷದ ಜಿಲ್ಲಾ-ತಾಲೂಕು ಪಂಚಾಯ್ತಿ ಚುನಾವಣೆಯ ಫಲಿತಾಂಶ ಬಿಜೆಪಿಗೆ ಈ ಹಿಂದಿನ ಎಲ್ಲಾ ಚುನಾವಣೆಗಳಿಗಿಂತಲೂ ಹೆಚ್ಚಿನ ಸ್ಥಾನಗಳಿಸಿಕೊಟ್ಟು ಪಕ್ಷಕ್ಕೆ ಒಂದು ಕಿಕ್ ನೀಡಿದೆ. ಮುಖ್ಯವಾಗಿ ಯಡಿಯೂರಪ್ಪ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ಸಾಥ್ ನೀಡಿದೆ. ಈಗ ಯಡಿಯೂರಪ್ಪನವರ ತಲೆ ಕಾಯುತ್ತಿದೆ. ಆನೆ ನಡೆದದ್ದೇ ದಾರಿ ಎಂಬಂತೆ ಯಡಿಯೂರಪ್ಪ ಸಾಗಿದ್ದೆ ದಾರಿ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿ ಪರ್ಯಾಯ ನಾಯಕತ್ವ ಹುಡುಕುವಲ್ಲಿ ಸೋತಿರುವ ಬಿಜೆಪಿ ಮುಖಂಡರು ಈಗ ಕೇಂದ್ರ ಸರ್ಕಾರವೇ ಬೇಕಾದರೆ ಕರ್ನಾಟಕ ಸರಕಾರವನ್ನ ಉರುಳಿಸಲಿ, ಆ ಸಿಂಪತಿಯಲ್ಲೇ ಚುನಾವಣೆ ಎದುರಿಸುವ ರಾಜಕೀಯ ತಂತ್ರಗಾರಿಕೆ ಮಾಡಿದ್ದಾರೆ. ರಾಜ್ಯಪಾಲರು ಈಗ ಯಡಿಯೂರಪ್ಪ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿರುವುದು ರಾಷ್ಟ್ರ ವ್ಯಾಪ್ತಿ ಸುದ್ದಿಯಾಗಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿಗೂ ಕೂಡ ಇದು ನುಂಗಲಾರದ ತುತ್ತು. ಆದರೆ, ಕರೆಯುವ ಹಸುವಾಗಿರುವ ಯಡಿಯೂರಪ್ಪ ಸರಕಾರವನ್ನ ಕಳೆದುಕೊಳ್ಳಲು ಬಿಜೆಪಿ ರಾಷ್ಟ್ರೀಯ ನಾಯಕರು ರೆಡಿ ಇಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ನಿಲುವಿಗೆ ಬದ್ದವಾಗಿರುವ ಬಿಜೆಪಿ ನಾಯಕರು ರಾಜ್ಯಪಾಲರ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಡವನ್ನು ಹೇರಿ, ರಾಷ್ಟ್ರಪತಿಗಳಿಗೂ ದೂರು ನೀಡಿ ಈಗ ಪ್ರತಿಭಟನೆಗೆ ರಾಜ್ಯದಾದ್ಯಂತ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಯಡಿಯೂರಪ್ಪ ಮಾತ್ರ ತಮ್ಮ ವಿರುದ್ದ ಕ್ರಿಮಿನಲ್ ಮೊಕದ್ದಮೆಗೆ ಅನುಮತಿ ಆಗಿದ್ದರೂ ಜಗ್ಗದೆ ಕುಗ್ಗದೆ ದೇವಸ್ಥಾನಗಳಿಗೆ ತಿರುಗುತ್ತ ಕಾಲಹಾಕುತ್ತಿದ್ದರೆ...ಪಾಪ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ತಾವು ಕೈಗೊಂಡ ಕ್ರಮಗಳು, ಬಿಟ್ಟ ಬಾಣಗಳೆಲ್ಲ ಒಂದೊಂದಾಗಿ ನೆಲಕಚ್ಚುತ್ತಿರುವುದು ಕಂಡು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸ್-ಜೆಡಿಎಸ್ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಆರೋಪಕ್ಕೆ ಪ್ರತ್ಯಾರೋಪ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅನ್ನೋ ರೀತಿ ಯಡಿಯೂರಪ್ಪ ಎಲ್ಲರ ಬಾಯಿ ಮುಚ್ಚಿಸುವಲ್ಲಿ ನೈಪುಣ್ಯ ಮೆರೆದಿದ್ದಾರೆ. ಕಾನೂನು ಸಚಿವ ಸುರೇಶ ಕುಮಾರ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಅಲ್ಲಲ್ಲಿ ಕೇಳಿಬರುತ್ತಿದೆ. ಯಡಿಯೂರಪ್ಪನವರಿಗೆ ಅವರ ಬಗ್ಗೆ ಆಸಕ್ತಿ ಇದ್ದಂತಿಲ್ಲ. ಹಾಗೇನಾದ್ರೂ ಆದ್ರೆ ವಿ. ಎಸ್. ಆಚಾರ್ಯ ಅಥವಾ ಶೋಭಾ ಕರಂದ್ಲಾಜೆ ಕಡೆಗೇ ಅವರ ಒಲವು. ಹಾಗಾಗಿಯೇ ಈಗ ಆದಷ್ಟು ಬೇಗ ರಾಜ್ಯಕ್ಕೆ ಬಜೆಟ್ ನೀಡಿ ಚುನಾವಣೆಗೆ ಹೋಗಲು ತೀರ್ಮಾನಿಸಿದಂತಿದೆ. ಒಂದು ಪಕ್ಷ ಸುರೇಶ ಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಿದರೆ ಇರುವ ಜನರಲ್ಲಿ ಆತ ಸ್ವಲ್ಪ ಒಳ್ಳೆಯ ಇಮೇಜ್ ಇರೋ ವ್ಯಕ್ತಿ ಅನ್ನೋದರಲ್ಲಿ ಅನುಮಾನ ಇಲ್ಲ. ಆಗ ಪಕ್ಷಕ್ಕೂ ಅಲ್ಪ-ಸ್ವಲ್ಪ ಇಮೇಜ್ ಉಳಿಸಿಕೊಳ್ಳಲು ಸಾದ್ಯ ಅನ್ನೋದು ಒಂದು ಅಭಿಪ್ರಾಯ. ರಾಜ್ಯದ ಕಥೆ ಇದಾದರೆ ಕೇಂದ್ರ ದಲ್ಲಿನ ಯುಪಿಏ ಸರ್ಕಾರ ೩ಜಿ ಹಗರಣ, ಬೆಲೆ ಏರಿಕೆ, ಸಿವಿಸಿ ಆಯುಕ್ತರ ವಿವಾದ, ವಿದೇಶಗಳಲ್ಲಿ ಕಪ್ಪು ಹಣ ಮುಂತಾದ ವಿಚಾರಗಳಿಂದ ಕಂಗಾಲಾಗಿದೆ. ಕೇಂದ್ರದ ತಪ್ಪುಗಳನ್ನ ರಾಜ್ಯ ಬಿಜೆಪಿ ನಾಯಕರು ಕೆದಕುತ್ತಾ ಹುಯಿಲೆಬ್ಬಿಸಿ ರಾಜ್ಯದಲ್ಲಿ ಏನೂ ನಡೆದಿಲ್ಲ ಎಂಬ ಸಬೂಬು ಹೇಳುತ್ತಾ ಜೈ ಶ್ರೀರಾಂ ಎನ್ನುತ್ತಿದ್ದಾರೆ.
Kannada News » Entertainment » Ott » Kichcha Sudeep warns Sonu Srinivas Gowda for her behavior in Bigg Boss Kannada OTT BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​ Kichcha Sudeep | Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಅವರು ಬಿಗ್​ ಬಾಸ್​ ಮನೆಯಲ್ಲಿ ನಡೆದುಕೊಂಡ ರೀತಿಯನ್ನು ಸುದೀಪ್​ ಖಂಡಿಸಿದ್ದಾರೆ. ತಪ್ಪು ಒಪ್ಪಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ. ಸೋನು ಶ್ರೀನಿವಾಸ್ ಗೌಡ, ಕಿಚ್ಚ ಸುದೀಪ್ TV9kannada Web Team | Edited By: Madan Kumar Sep 03, 2022 | 8:38 PM ಬಿಗ್​ ಬಾಸ್​ (Bigg Boss) ಆಟ ಎಂದರೆ ಸುಲಭ ಅಲ್ಲ. ಸ್ಪರ್ಧಿಗಳ ಮೇಲೆ 24 ಗಂಟೆಯೂ ಕ್ಯಾಮೆರಾ ಇರುತ್ತದೆ. ದೊಡ್ಮನೆ ಸದಸ್ಯರ ಪ್ರತಿ ನಡೆ ಕೂಡ ಸೆರೆಯಾಗುತ್ತದೆ. ಆದ್ದರಿಂದ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಒಂದು ವೇಳೆ ಯಾರಾದರೂ ದಾರಿ ತಪ್ಪಿದರೆ ಅಂಥವರಿಗೆ ಕಿಚ್ಚ ಸುದೀಪ್​ (Kichcha Sudeep) ಅವರು ಎಚ್ಚರಿಕೆ ನೀಡುತ್ತಾರೆ. ಈ ವಾರ ಕೂಡ ಹಾಗೆಯೇ ಆಗಿದೆ. ರೀಲ್ಸ್​ ಮೂಲಕ ಫೇಮಸ್​ ಆದ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಬಿಗ್​ ಬಾಸ್​ ಮನೆಯಲ್ಲಿ ನಡೆದುಕೊಂಡ ರೀತಿ ಸುದೀಪ್​ಗೆ ಇಷ್ಟ ಆಗಿಲ್ಲ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. ಸೋನು ಮಾಡಿದ ಎಲ್ಲ ತಪ್ಪುಗಳನ್ನು ಪ್ರಸ್ತಾಪಿಸಿ, ಮುಲಾಜಿಲ್ಲದೇ ಸುದೀಪ್​ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ಮನೆಯಲ್ಲಿ ಇರುವ ಇನ್ನುಳಿದ ಸ್ಪರ್ಧಿಗಳಿಗೂ ಎಚ್ಚರಿಕೆ ನೀಡಿದಂತಿತ್ತು. ಎಲ್ಲ ಸ್ಪರ್ಧಿಗಳಿಗೂ ಆಗಾಗ ಬಿಗ್​ ಬಾಸ್​ ಕಡೆಯಿಂದ ಆದೇಶಗಳು ಬರುತ್ತವೆ. ಅದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಆದರೆ ಬಿಗ್​ ಬಾಸ್​ ನೀಡಿದ ಆದೇಶಗಳಿಗೆ ಸೋನು ಗೌಡ ಅವರು ಗೌರವ ನೀಡಿಲ್ಲ. ಅಷ್ಟೇ ಅಲ್ಲದೇ, ಬಿಗ್​ ಬಾಸ್​ಗೆ ಆವಾಜ್​ ಹಾಕುವ ರೀತಿಯಲ್ಲಿ ಅವರು ನಡೆದುಕೊಂಡಿದ್ದಾರೆ. ಇದನ್ನು ಸುದೀಪ್​ ಖಂಡಿಸಿದ್ದಾರೆ. ‘ನಿಮ್ಮ ಮಾತುಗಳು ಕ್ಯೂಟ್​ ಆಗಿ ಇರಲಿಲ್ಲ. ಬಿಗ್​ ಬಾಸ್​ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು. ಇನ್ಮುಂದೆ ನಿಮಗೆ ಬಿಗ್​ ಬಾಸ್​ ಆದೇಶವೇ ನೀಡುವುದಿಲ್ಲ ಎಂದುಕೊಳ್ಳಿ’ ಅಂತ ಸುದೀಪ್​ ಎಚ್ಚರಿಕೆ ನೀಡಿದ್ದಾರೆ. ‘ಬಿಗ್​ ಬಾಸ್ ಕನ್ನಡ ಒಟಿಟಿ’​ ಮನೆಯಲ್ಲಿ ಅಡುಗೆ ಮಾಡುವುದು ಮುಖ್ಯ ಕೆಲಸ. ಎಲ್ಲರೂ ಅಡುಗೆ ಕೆಲಸದಲ್ಲಿ ಭಾಗಿಯಾದರೆ ಒಳ್ಳೆಯದು. ಆದರೆ ಸೋನು ಶ್ರೀನಿವಾಸ್​ ಗೌಡ ಅವರು ಅಡುಗೆ ವಿಚಾರದಲ್ಲಿ ಕಳ್ಳಾಟ ಆಡಿದ್ದಾರೆ. ತಮಗೆ ಅಡುಗೆ ಬರುತ್ತದೆ ಎಂಬ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ನಾಲ್ಕನೇ ವಾರದಲ್ಲಿ ಆ ಸತ್ಯ ಬಯಲಾಗಿದೆ. ಇದನ್ನು ಗಮನಿಸಿದ ಸುದೀಪ್​ ಅವರು ನೇರವಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. View this post on Instagram A post shared by Colors Super (@colorssupertv) ಸೋನು ಗೌಡ ಅವರು ಮಾತನಾಡುವಾಗ ಪದೇ ಪದೇ ಉಗಿಯುತ್ತಾರೆ. ಅದನ್ನೂ ಸುದೀಪ್​ ಪ್ರಶ್ನಿಸಿದ್ದಾರೆ. ಮಾಡಿದ ತಪ್ಪುಗಳನ್ನು ವಾರದ ಪಂಚಾಯಿತಿಯಲ್ಲಿ ಎಲ್ಲರ ಎದುರು ಒಪ್ಪಿಕೊಂಡು ಸೋನು ಗೌಡ ಕಣ್ಣೀರು ಹಾಕಿದ್ದಾರೆ. ದೊಡ್ಮನೆಯಲ್ಲಿ ಕೆಲವರು ಬಳಸುವ ಭಾಷೆ ಕೂಡ ಸುದೀಪ್​ಗೆ ಹಿಡಿಸಿಲ್ಲ. ಆ ಬಗ್ಗೆಯೂ ಛಾಟಿ ಬೀಸಿದ್ದಾರೆ. ‘ನಿಮ್ಮಲ್ಲಿ ತುಂಬ ಜನ ಮಾತನಾಡುವ ಏಕವಚನ ನಿಜಕ್ಕೂ ಚಪ್ಪಲಿ ತಗೊಂಡು ಹೊಡೆದಂತೆ ಇರುತ್ತೆ. ಸ್ನೇಹಿತರಾದ ನಂತರ ಏಕವಚನ ಇರಬಾರದು ಅಂತಲ್ಲ. ಆದರೆ ನಿಮ್ಮ ಏಕವಚನದಲ್ಲಿ ಗೌರವ ಕಾಣಿಸಿಲ್ಲ’ ಎಂದು ಸುದೀಪ್​ ಹೇಳಿದ್ದಾರೆ.
ಬೆAಗಳೂರು, ಏ. ೫- ಉದ್ದೇಶಿತ ‘ಸರ್ಕಾರಿ ಮಾದರಿ ಶಾಲೆ’ ಗಳಲ್ಲಿ ಪ್ರಾಥಮಿಕ ಶಾಲಾ ಹಂತದಿAದಲೇ ‘ಸ್ಪೋಕನ್ ಇಂಗ್ಲಿಷ್’ ಕಲಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿ’ ಕುರಿತು ದುಂಡು ಮೇಜಿನ ಸಮ್ಮೇಳನವನ್ನು ಉದ್ಘಾಟಿಸಿ ಸಚಿ ವರು ಮಾತನಾಡಿದರು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸಲು ಕನ್ನಡ ಮಾಧ್ಯಮದ ಜೊತೆಗೆ ಸರ್ಕಾರಿ ಮಾದರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಸಲಾಗುತ್ತದೆ ಎಂದರು. ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದೊAದು ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಈ ಸಾಲಿನ ಬಜೆಟ್‌ನಲ್ಲಿ ಈ ಅಂಶವನ್ನು ಘೋಷಣೆ ಮಾಡಲಾ ಗಿದೆ. ಶಾಲೆಯ ಎಲ್ಲ ತರಗತಿಗಳಿಗೆ ಅಗತ್ಯ ಕೊಠಡಿಗಳು ಮತ್ತು ಎಲ್ಲ ಭಾಷೆ ಮತ್ತು ವಿಷಯಕ್ಕೆ ತಲಾ ಒಬ್ಬರು ಶಿಕ್ಷಕರು ಲಭ್ಯವಿರು ವಂತಹ ವ್ಯವಸ್ಥೆ ಮಾಡಲಾಗುತ್ತದೆ. ಇಂತಹ ಶಾಲೆಗಳಲ್ಲಿ ಕನ್ನಡ ಕಲಿಕೆ ಜೊತೆಗೆ ಇಂಗ್ಲೀಷ್ ಕಲಿಕೆ ಹಾಗೂ ಶಿಕ್ಷಕರಿಂದ ಸ್ಪೋಕನ್ ಇಂಗ್ಲಿಷ್ ಕಲಿಸಿಕೊಡಲಾಗುತ್ತದೆ. ಇದೇ ಸಲಹೆಯನ್ನು ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರೂ ನೀಡಿದ್ದು, ಅದನ್ನು ಸ್ವೀಕರಿಸಲಾಗುತ್ತದೆ ಎಂದು ಸಚಿವ ನಾಗೇಶ್ ನುಡಿದರು. ಖಾಸಗಿ ಶಾಲೆಗಳು ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ವ್ಯಾಮೋಹ ಬಹಳಷ್ಟು ಜನರಲ್ಲಿದೆ. ಗುಣಮಟ್ಟ ಹೇಗಾದರೂ ಇರಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು ಎನ್ನುವ ಆಸೆ ಪಾಲಕರಲ್ಲಿ ಇದೆ. ರಾಜ್ಯದಲ್ಲಿನ ಕೆಪಿಎಸ್ ಶಾಲೆಗಳಲ್ಲೂ ಕೂಡ ಇಂಗ್ಲಿಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪಾಲಕರು ಆಸಕ್ತಿ ತೋರಿಸು ತ್ತಿದ್ದಾರೆ. ಹೀಗಾಗಿ, ಮಾದರಿ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ಸ್ಪೋಕನ್ ಇಂಗ್ಲಿಷ್ ಆಗಿ ಕಲಿಸುವ ಉದ್ದೇಶವಿದೆ ಎಂದು ಹೇಳಿದರು. ಪ್ರಾಥಮಿಕ ಶಾಲಾ ಹಂತದಿAದಲೇ ಗಣ ತ ಮತ್ತು ಪರಿಸರ ಅಧ್ಯಯನ ವಿಷಯಗಳ ಪಠ್ಯ ಪುಸ್ತಕಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತಿದೆ. ಹಾಳೆಯ ಒಂದು ಬದಿ ಕನ್ನಡ ಇದ್ದರೆ, ಮತ್ತೊಂದು ಬದಿ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗುತ್ತಿದೆ. ೧ರಿಂದ ೪ನೇ ತರಗತಿವರೆಗೆ ಈ ಎರಡು ವಿಷಯಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತದೆ. ೨೦೧೯-೨೦ರಿಂದ ೨೦೨೧-೨೨ರವರೆಗೆ ಪ್ರತಿ ವರ್ಷ ಒಂದೊAದು ತರಗತಿಯಂತೆ ೧ರಿಂದ ೩ನೇ ತರಗತಿವರೆಗೆ ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತಿತ್ತು. ಈ ಶೈಕ್ಷಣ ಕ ವರ್ಷದಿಂದ ೧ರಿಂದ೪ನೇ ತರಗತಿವರೆಗೆ ಮುದ್ರಿಸಲಾಗುತ್ತಿದೆ. ಮಕ್ಕಳಿಗೆ ಪ್ರಾಥ ಮಿಕ ಶಾಲಾ ಹಂತದಿAದಲೇ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯ ಪರಿಚಯ ಆಗಬೇಕು ಎನ್ನುವ ಉದ್ದೇಶವಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸ್ಪರ್ಧಾತ್ಮಕ ಲೋಕದಲ್ಲಿ ಸ್ಪರ್ಧಿಸಲಾಗದು. ಇಂಗ್ಲಿಷ್‌ನಲ್ಲೇ ಓದಬೇಕು ಎಂಬ ಮಾನಸಿಕತೆ ಜನರಲ್ಲಿ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಶಾಲೆಗಳು ಮುಚ್ಚಿರುವುದು ಕೂಡ ಅದಕ್ಕೆ ಸಾಕ್ಷಿಯಾಗಿದೆ. ೪೭ ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಪೈಕಿ ೩,೮೦೦ ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಒಬ್ಬ ವಿದ್ಯಾರ್ಥಿ ಇರುವ ೫೬೨ ಶಾಲೆಗಳನ್ನು ರಾಜ್ಯ ಸರ್ಕಾರ ನಡೆಸುತ್ತಿದೆ ಎಂದು ನಾಗೇಶ್ ತಿಳಿಸಿದರು. ಕನ್ನಡ ಶಾಲೆಗಳ ಉಳಿವಿಗೆ ತಜ್ಞರ ಸಲಹೆಗಳನ್ನು ಸೂಚನೆಗಳನ್ನು ಸ್ವೀಕರಿಸಲಾಗುತ್ತದೆ. ಎಲ್ಲ ಸಲಹೆಗಳನ್ನು ಸ್ವೀಕರಿಸಿ ಕನ್ನಡ ಉಳಿಸಿ ಬೆಳೆಸುವ ಪ್ರಯತ್ನ ಮಾಡಲಾಗುತ್ತದೆ ಎಂದರು. ಸರಸ್ವತಿ ಸಮ್ಮಾನ್ ಪುರಸ್ಕöÈತ ಸಾಹಿತಿ ಎಸ್.ಎಲ್.ಭೈರಪ್ಪ, ಕಸಾಪ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ ಮಹಾಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಸ್ಥಳೀಯ ಮಾರುಕಟ್ಟೆಯನ್ನು ಸಬಲಗೊಳಿಸುವುದು ಮುಖ್ಯವಾಗಿತ್ತು, ಊಳಿಗಮಾನ್ಯತೆಯ ವಿರುದ್ಧ ಹೋರಾಡಲು ಮತ್ತು ಕನ್ನಡ ನಾಡಿನ ಏಳಿಗೆಗಾಗಿ ಹಾಗೂ ದೇಶ ಭಾವನೆಯನ್ನು ಅರಿತುಕೊಳ್ಳುವುದಕ್ಕಾಗಿ. ಸ್ಥಳೀಯ ಮಾರುಕಟ್ಟೆಯನ್ನು ವಸಾಹತುಶಾಹಿ ತನ್ನ ಪ್ರಾರಂಭದ ದಿನಗಳಲ್ಲಿ ತುಳಿದು ಹಾಕಿದ್ದು ಮೇಲಿನ ಪ್ರಜ್ಞೆಗಳು ಮರೆಯಾಗಿಹೋಗಲಿ ಎಂಬ ಕಾರಣದಿಂದ. (172) ಸ್ಥಳೀಯ ಮಾರುಕಟ್ಟೆಯನ್ನು ನಾಶಪಡಿಸುವುದು ಕರ್ನಾಟಕವನ್ನು ಆಕ್ರಮಿಸಿದ ಬ್ರಿಟೀಷರ ಗುರಿಗಳಲ್ಲೊಂದಾಗಿತ್ತು. ಸ್ಥಳೀಯ ಮಾರುಕಟ್ಟೆಯ ನಾಶವಾಗದೆ ಕರ್ನಾಟಕದ ಪ್ರಾಂತ್ಯದಾದ್ಯಂತ ವಸಾಹತು ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ಸಾಧಿಸಲಾಗುತ್ತಿರಲಿಲ್ಲ. ಕರ್ನಾಟಕದ ಸ್ಥಳೀಯ ಮಾರುಕಟ್ಟೆಯ ಅಸ್ತಿತ್ವವನ್ನು ನಾಶಪಡಿಸುವ ಸಲುವಾಗಿ ರಾಜಕೀಯ ಮುಖಂಡರನ್ನು ಮೊದಲು ಗುರಿಯಾಗಿಸಲಾಯಿತು. ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನಾವು ನೋಡಿದಂತೆ ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯನ್ನು ಗುರಿಯಾಗಿಸಲಾಯಿತು. ಕರ್ನಾಟಕವನ್ನು ರಾಜಕೀಯವಾಗಿ ಛಿದ್ರಗೊಳಿಸಿದ್ದು ಸ್ಥಳೀಯ ಮಾರುಕಟ್ಟೆಯ ವಿಸ್ತರಣೆಯ ಮೇಲೆ ನಕರಾತ್ಮಕ ಪರಿಣಾಮ ಉಂಟುಮಾಡಿತು. ಉತ್ಪನ್ನವೊಂದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ ತಲುಪಲು ಅನೇಕ ಕಡೆ ತೆರಿಗೆ ಮತ್ತು ಟೋಲ್ ಕಟ್ಟಬೇಕಾಯಿತು. ಇಷ್ಟೆಲ್ಲ ತೆರಿಗೆ ಕಟ್ಟಿದ ನಂತರ ಗ್ರಾಹಕನ ಕೈಸೇರುವಷ್ಟರಲ್ಲಿ ಉತ್ಪನ್ನದ ಬೆಲೆ ಹೆಚ್ಚಾಗಿಬಿಡುತ್ತಿತ್ತು ಮತ್ತು ಬ್ರಿಟೀಷ್ ಉತ್ಪನ್ನಗಳ ವಿರುದ್ಧದ ಬೆಲೆ ಸಮರದಲ್ಲಿ ಸೋತು ಮರೆಯಾಗಿಹೋದವು. ಬ್ರಿಟೀಷ್ ವಸಾಹತುಶಾಹಿಯ ಆರ್ಥಿಕ ಗುರಿಯಾಗಿದ್ದಿದ್ದು ದೇಶೀಯ ವರ್ತಕರು, ಬಂಡವಾಳಶಾಹಿ ಉತ್ಪಾದನೆಯ ವರ್ಗ ಮಾಲೀಕರು ಮತ್ತು ವಿವಿಧತೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಕಸುಬುದಾರರು. ದೇಶೀಯ ವರ್ತಕರ ಮತ್ತು ವರ್ಗ ಮಾಲೀಕರ ಪತನ ಅವರನ್ನು ಪೋಷಿಸುತ್ತಿದ್ದ ರಾಜಕಾರಣಿಗಳ ಅಂತ್ಯದೊಂದಿಗೆ ಅತಿ ಶೀಘ್ರವಾಗಿ ನಡೆದುಹೋಯಿತು. ಬ್ರಿಟೀಷ್ ಆಕ್ರಮಣದ ಕೆಲವೇ ವರುಷಗಳಲ್ಲಿ ಬಣಜಿಗ ಶೆಟ್ಟರು ಕಳಂಕದೊಂದಿಗೆ ಕುಸಿತ ಕಂಡರು. ಅವರು ಬಂಡವಾಳಶಾಹಿತನಕ್ಕೆ ಕೊಡುತ್ತಿದ್ದ ಬೆಂಬಲವೆಲ್ಲವೂ ಮರೆಯಾಗಿಹೋಯಿತು. ಎಷ್ಟರಮಟ್ಟಿಗೆ ಇದು ನಡೆಯಿತೆಂದರೆ ಜಾಗರೂಕ ಇತಿಹಾಸಕಾರರಾದ ಇರ್ಫಾನ್ ಹಬೀಬ್ ರಂತವರಿಗೂ ಕೂಡ ಇವರ ಇತಿಹಾಸದ ಬಗ್ಗೆ ಅನುಮಾನಗಳುಂಟಾಯಿತು. ಆರನೇ ಪಾವ್ಲೋವ್ ಈ ಪತನದ ಬಗ್ಗೆ ಸರಿಯಾಗಿ ತಿಳಿಸುತ್ತಾರೆ. ಅವರು ಹೇಳುತ್ತಾರೆ: “ಪ್ರತಿಯೊಬ್ಬರಿಗೂ ನಿರ್ದಿಷ್ಟ ಕೆಲಸ ಹಂಚಿದ ಕೈಗಾರಿಕೆಯ ಪತನ ಅಥವಾ ನಾಶವನ್ನು ಲೆಕ್ಕಕ್ಕೆ ತೆಗೆದುಕೊಂಡರೆ……..ಚಿಕ್ಕ ಪುಟ್ಟ ಬಂಡವಾಳಶಾಹಿಗೆ ಅಥವಾ ಉತ್ಪಾದನಾ ವಲಯಕ್ಕೆ ಭಾರತದ ಆ ಸಂದರ್ಭದಲ್ಲಿ ನೆಲೆ ಕಂಡುಕೊಳ್ಳುವ ಯಾವ ಅವಕಾಶಗಳೂ ಇರಲಿಲ್ಲ ಎನ್ನುವುದರ ಅರಿವಾಗುತ್ತದೆ.” (173) ಬಂಡವಾಳಶಾಹಿತನದ ಬರುವಿಕೆಯಯನ್ನು ಸೂಚಿಸುವಂತಹ, ಉತ್ಪಾದನೆ ಸಂಘಟನೆಯಲ್ಲಿನ ಮುಂದುವರೆದ ರೂಪಗಳನ್ನು ತೊಡೆದು ಹಾಕಲಾಯಿತು. ಇದರೊಂದಿಗೆ, ಸ್ಥಳೀಯ ಮಾರುಕಟ್ಟೆಯನ್ನು ಒಟ್ಟಾಗಿಸಿ ಕೇಂದ್ರೀಕೃತಗೊಳಿಸಿದ ರಾಜಕೀಯ ಶಕ್ತಿಗಳನ್ನು ಸೋಲಿಸುವುದರ ಜೊತೆಗೆ, ಈ ಒಗ್ಗಟ್ಟಿಗೊಂದು ಸುಭದ್ರ ಆರ್ಥಿಕ ಬುನಾದಿಯನ್ನಾಕಿದ್ದ ಸಾಮಾಜಿಕ ವರ್ಗಗಳನ್ನು ಒಡೆಯಲಾಯಿತು. ಈ ವರ್ಗಗಳ ನಾಶದೊಂದಿಗೆ, ಬ್ರಿಟೀಷ್ ವಸಾಹತುಶಾಹಿಯ ಆರ್ಥಿಕ ಗುರಿಗಳು ಹೆಚ್ಚು ಕಡಿಮೆ ಗೆದ್ದಂತಾಗಿತ್ತು. ಸಶಕ್ತ ವರ್ತಕ ವರ್ಗದ ಸೋಲು ಮತ್ತು ನಂತರ ಬಂಡವಾಳಶಾಹಿ ಉತ್ಪಾದನೆಯ ನಾಶದ ನಂತರ ಸ್ಥಳೀಯ ಮಾರುಕಟ್ಟೆಯನ್ನು ಒಟ್ಟಾಗಿಟ್ಟ ಪ್ರಮುಖ ವರ್ಗವೇ ಇಲ್ಲವಾಗಿತ್ತು. ನಂತರದ ದಿನಗಳಲ್ಲಿ ಕಸುಬುದಾರರ ಮೇಲೆ ನಡೆಸಿದ ದಾಳಿ ಅದಾಗಲೇ ಪಾರ್ಶ್ವವಾಯು ಪೀಡಿತವಾಗಿದ್ದ ಕರ್ನಾಟಕದ ಸ್ಥಳೀಯ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲು ನಡೆಸಿದ ಕಾರ್ಯವಾಗಿತ್ತಷ್ಟೇ. ಇದು ಬ್ರಿಟೀಷ್ ಬಂಡವಾಳಶಾಹಿತನದ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸುವುದಕ್ಕಾಗಿ ಮಾಡಿದ ಕೆಲಸವಷ್ಟೇ. ಏನಾಯಿತೆಂಬುದನ್ನು ಮಾರ್ಟಿನ್ ಕಾರ್ನಾಯ್ ಈ ರೀತಿ ವಿವರಿಸುತ್ತಾರೆ: “ಇದು ವಸಾಹತುಶಾಹಿ ಬೆಳೆಸಿದ ಮೂಲಭೂತ ಸಂಬಂಧ. ರಫ್ತು ಮಾಡುವ ದೇಶವಾಗಿದ್ದ ಭಾರತ ಆಮದು ಮಾಡಿಕೊಳ್ಳುವ ದೇಶವಾಯಿತು; ಉತ್ಪಾದಕ ರಾಷ್ಟ್ರವಾಗಿ ಚಿಗುರುತ್ತಿದ್ದ ಭಾರತ ಮತ್ತೆ ಪೂರ್ಣ ಕೃಷಿ ದೇಶವಾಗುವೆಡೆಗೆ ಮರಳಿತು, ನಗರಗಳ ಜನಸಂಖೈ ಕಡಿಮೆಯಾಗಿಬಿಟ್ಟಿತು, ರೈತರು ಚಿಕ್ಕ ಚಿಕ್ಕ ಜಮೀನುಗಳ ಮೇಲೆ ಅವಲಂಬಿತರಾದರು ಮತ್ತವರು ಉತ್ಪಾದನೆ ಹಸಿವನ್ನು ಕೊಂಚ ನೀಗಿಸುತ್ತಿತ್ತು. ಇದೆಲ್ಲವನ್ನೂ ಉಪಯೋಗಿಸಿಕೊಂಡು “ಪ್ರಗತಿಪರ” ಬ್ರಿಟನ್ನನ್ನು ಕಟ್ಟಲಾಯಿತು. 1850ರಷ್ಟರಲ್ಲಿ ಬ್ರಿಟನ್ನಿನ ಹತ್ತಿ ರಫ್ತಿನ ನಾಲ್ಕನೇ ಒಂದಂಶದಷ್ಟು ಭಾರತದ ಮಾರುಕಟ್ಟೆಗೇ ಹೋಗುತ್ತಿತ್ತು. ಇಂಗ್ಲೆಂಡಿನ ಜನಸಂಖೈಯ ಎಂಟನೇ ಒಂದಂಶದಷ್ಟು ಜನರಿಗೆ ಉದ್ಯೋಗ ನೀಡಿದ್ದ ಹತ್ತಿ ಉದ್ಯಮ ರಾಷ್ಟ್ರದ ಆದಾಯಕ್ಕೆ ಹನ್ನೆರಡನೇ ಒಂದಂಶದಷ್ಟು ಕಾಣ್ಕೆ ನೀಡುತ್ತಿತ್ತು.” (174) ದೇಶೀಯ ವರ್ತಕರ ನಾಶ ಮತ್ತು ಬಂಡವಾಳಶಾಹಿ ಉತ್ಪಾದನೆಯ ಪ್ರಾರಂಭದಿಂದಾದ ತಕ್ಷಣದ ಪರಿಣಾಮವೆಂದರೆ ಕರ್ನಾಟಕದೊಳಗಿದ್ದ ವಿವಿಧ ಬಂಧಗಳನ್ನು ಕಡಿದುಹಾಕಿದ್ದು. ಕರ್ನಾಟಕದಲ್ಲಿ ಪ್ರದೇಶದ ಆಧಾರದಲ್ಲಿ ವಿಭಿನ್ನವಾಗಿದ್ದ ಮಾರುಕಟ್ಟೆಯನ್ನು ಕೃಷಿ ಮತ್ತು ಕೈಗಾರಿಕೆ ಒಂದುಗೂಡಿಸಿತ್ತು, ಈ ಒಗ್ಗಟ್ಟಿನ ಬಂಧವನ್ನು ಮೊದಲು ಕಡಿಯಲಾಯಿತು. ಉತ್ತರವನ್ನು ದಕ್ಷಿಣದಿಂದ ಬೇರ್ಪಡಿಸಲಾಯಿತು, ಪೂರ್ವವನ್ನು ಪಶ್ಚಿಮದಿಂದ. ಸ್ಥಳೀಯ ಮಾರುಕಟ್ಟೆಯನ್ನು ಹೀಗೆ ಛಿದ್ರಪಡಿಸಿದ್ದು ಕರ್ನಾಟಕವನ್ನು ರಾಜಕೀಯವಾಗಿ ವಿಭಾಗಿಸಿಬಿಟ್ಟ ಪ್ರತಿಧ್ವನಿಯಾಗಿತ್ತು. ಹತ್ತಿ ಬೆಳೆಗಾರರ ಮತ್ತು ನೇಕಾರರ ನಡುವಿನ ಬಂಧ, ಬೀಜೋತ್ಪಾದಕರ ಮತ್ತು ಎಣ್ಣೆ ತೆಗೆಯುವವರ ನಡುವಿನ ಬಂಧ, ಕುರಿ ಸಾಕುವವರು ಮತ್ತು ಕಂಬಳಿ ನೇಯುವವರ ನಡುವಿನ ಬಂಧವನ್ನು ಕೊನೆಗಾಣಿಸಲಾಯಿತು. ಕೆಲಸವನ್ನು ಪ್ರದೇಶದ ಆಧಾರದಲ್ಲಿ ಹಂಚಿಕೊಂಡಿದ್ದನ್ನು ಮತ್ತು ಅದರೊಂದಿಗೆ ಉತ್ಪಾನೆಯಲ್ಲಿ ಮೂಡುತ್ತಿದ್ದ ತಜ್ಞತೆಯನ್ನು ನಾಶಪಡಿಸಲಾಯಿತು; ಒಂದು ಕಾಲದಲ್ಲಿ ಆರ್ಥಿಕ ಮುನ್ನಡೆಗೆ ಕಾರಣವಾಗಿದ್ದ ಅಂಶಗಳೆಲ್ಲವೂ ಈಗಿನ ಉತ್ಪಾದಕರಿಗೆ ಶಾಪದಂತೆ ಮಾಡಲಾಯಿತು. ಉತ್ಪಾದಕತೆಗೆ ಬೇಕಿದ್ದ ಬಂಧದ ನೇಯಿಗೆ ಈಗ ನೇಣಿನ ಕುಣಿಕೆಯಂತಾಗಿ ಕತ್ತಿಗೆ ಸುತ್ತಿಕೊಂಡಿತ್ತು. ರೈತರು ಮತ್ತು ಕಸುಬುದಾರರು ಈ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಪ್ರಯತ್ನಪಟ್ಟು ಕೊನೆಗೆ ಊಳಿಗಮಾನ್ಯತೆಯನ್ನಪ್ಪಿಕೊಂಡಿದ್ದ ಹಳ್ಳಿಗಳಿಗೆ ಮರಳಿದರು. ಸ್ಥಳೀಯ ಮಾರುಕಟ್ಟೆಯಲ್ಲಿದ್ದ ಕೃಷಿ – ಕೈಗಾರಿಕೆ – ಕೃಷಿ ಚಕ್ರದ ನಿರಂತರತೆಯನ್ನು ಮುರಿದು ಹಾಕಿದ್ದು ವಸಾಹತುಶಾಹಿಯ ಮಧ್ಯಪ್ರವೇಶದಿಂದಾದ ಮತ್ತೊಂದು ಪ್ರಮುಖ ವಿರೂಪ. ಈ ನೈಸರ್ಗಿಕ ನಿರಂತರತೆಯು ಒಂದು ವಲಯದ ಅಭಿವೃದ್ಧಿ ಮತ್ತೊಂದರ ಅಭಿವೃದ್ಧಿಯನ್ನು ಪೋಷಿಸುತ್ತಿತ್ತು. ಕೃಷಿಯಲ್ಲಿನ ಈ ಪ್ರವೃತ್ತಿ ನಿಧಾನವಾಗಿ ರೈತರ ತರ್ಕಬದ್ಧ ಎಚ್ಚರಿಕೆಗೆ ಕಾರಣವಾಗಿತ್ತು ಮತ್ತು ಕನ್ನಡ ದೇಶದ ಏಳ್ಗೆಗೆ ಕಾಣ್ಕೆ ನೀಡಿತು. ವ್ಯಾಪಾರ ಮತ್ತು ಉತ್ಪಾದನೆಯ ಮೇಲೆ ದಾಳಿ ನಡೆಸಿದ ವಸಾಹತುಶಾಹಿ ಕೃಷಿ ಮತ್ತು ಕೈಗಾರಿಕೆ ನಡುವಿನ ಈ ಸಂಬಂಧವನ್ನು ಮುರಿದು ಹಾಕಿತು. ಒಂದೆಡೆ ಪರಸ್ಪರರ ಮೇಲೆ ಅವಲಂಬಿತವಾಗಿದ್ದ ಕೃಷಿ ಮತ್ತು ಕೈಗಾರಿಕೆಯನ್ನು ಬಿಕ್ಕಟ್ಟಿಗೆ ದೂಡಿದ ವಸಾಹತುಶಾಹಿ ಮತ್ತೊಂದೆಡೆ ಈ ಮುರಿದುಹಾಕುವಿಕೆಯ ಕಾರಣದಿಂದಲೇ ವಸಾಹತುಶಾಹಿ ಕರ್ನಾಟಕದ ಮಾರುಕಟ್ಟೆಯನ್ನು ತನ್ನ ವ್ಯಾಪಾರಕ್ಕಾಗಿ ಪ್ರವೇಶಿಸುವುದು ಸಾಧ್ಯವಾಯಿತು. ನಮ್ಮ ಕೃಷಿಯನ್ನು ತಮ್ಮ ಉತ್ಪಾದನೆಯ ಆಸಕ್ತಿಗಳಿಗನುಗುಣವಾಗಿ ಗುಲಾಮನನ್ನಾಗಿಸಿಕೊಂಡಿತು. ಸ್ಥಳೀಯ ಮಾರುಕಟ್ಟೆಯ ಮೇಲಾದ ಮತ್ತೊಂದು ಪರಿಣಾಮವೆಂದರೆ ನಗರ ಪ್ರದೇಶಗಳ ಕೊಳೆಯುವಿಕೆ. ಈ ಪರಿಣಾಮ ಎಷ್ಟು ಮಾರಣಾಂತಿಕವಾಗಿತ್ತೆಂದರೆ ನಗರೀಕರಣದ ಪ್ರಕ್ರಿಯೆ ಮತ್ತೆ ಕರ್ನಾಟಕದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕನಿಷ್ಟ ಒಂದು ಶತಮಾನವಾದರೂ ಬೇಕಿತ್ತು. ಆದರೀ ಸಲ ಇದು ವಸಾಹತುಶಾಹಿ ಶೋಷಣೆ ಮತ್ತು ವಿರೂಪಗೊಂಡ ಬಂಡವಾಳಶಾಹೀ ಅಭಿವೃದ್ಧಿಯ ಶರತ್ತಿನ ಮೇಲೆ ನಡೆಯಬೇಕಿತ್ತು. ನಗರಗಳ ಕುಸಿತದ ರೀತಿಯನ್ನು ವಿವರಿಸಲು ನಮ್ಮಲ್ಲಿ ಅಂಕಿಸಂಖೈಗಳು ಇಲ್ಲವಾದರೂ ನಗರ ಕೇಂದ್ರಗಳು ಅತೀ ಶೀಘ್ರವಾಗಿ ವಿಸರ್ಜಿಸಿದ್ದರ ಬಗ್ಗೆ ಅನುಮಾನಗಳು ಬೇಡ. ಟಿಪ್ಪು ಸುಲ್ತಾನನ ಸೋಲಿನ ನಂತರದ ಕೆಲವೇ ತಿಂಗಳುಗಳಲ್ಲಿ ಶ್ರೀರಂಗಪಟ್ಟಣ ಚಿತ್ರವಿಚಿತ್ರವಾಗಿ, ಅದರ ಜನಸಂಖೈ ಒಂದೂವರೆ ಲಕ್ಷದಿಂದ ಮೂವತ್ತು ಸಾವಿರಕ್ಕೂ ಕಡಿಮೆಯಾಗಿಬಿಟ್ಟಿತು ಎಂದು ಬುಚನನ್ ತಿಳಿಸುತ್ತಾನೆ. ರಾಜಕೀಯ ಮತ್ತು ಆಡಳಿತದ ಕೇಂದ್ರವಾಗಿದ್ದ ಶ್ರೀರಂಗಪಟ್ಟಣ ಇದೊಂದೇ ಉದ್ದೇಶಕ್ಕೆ ತೊಂದರೆ ಅನುಭವಿಸಲಿಲ್ಲ, ಸೈನ್ಯವನ್ನು ವಿಸರ್ಜಿಸಿದ್ದು ಸೈನಿಕರೇ ಹೆಚ್ಚಿದ್ದ ಶ್ರೀರಂಗಪಟ್ಟಣದ ಜನಸಂಖೈಯನ್ನು ಕಡಿಮೆಯಾಗಿಸಿಬಿಟ್ಟಿತು. ಗಂಜಾಂ ಶಹರ ನಗರ ಮಾರುಕಟ್ಟೆಯಾಗಿ ಬೆಳೆಯುತ್ತಿದ್ದುದಕ್ಕೆ ಸಿಗುತ್ತಿದ್ದ ಎಲ್ಲಾ ಉಲ್ಲೇಖಗಳು ಆಕ್ರಮಣದ ನಂತರದ ಕೆಲವೇ ವರುಷಗಳಲ್ಲಿ ಸಿಗದಂತಾಗಿಬಿಟ್ಟಿತು. 1852ರಲ್ಲಿ ಶ್ರೀರಂಗಪಟ್ಟಣದ ಜನಸಂಖೈ ಕೇವಲ 12,744. (175) 1834ರಲ್ಲಿ ಮೆಕಲಾಯ್ ನ ಶ್ರೀರಂಗಪಟ್ಟಣದ ಭೇಟಿಯ ಬಗ್ಗೆ ಶಾಮ ರಾವ್ ಬರೆಯುತ್ತಾರೆ: “ಇಲ್ಲಿ (ಶ್ರೀರಂಗಪಟ್ಟಣದಲ್ಲಿ) ಮೆಕಲಾಯ್ ರೆಸಿಡೆನ್ಸಿಯ ಅಧಿಕಾರಿಯನ್ನು ಭೇಟಿಯಾದ, ಈ ಅಧಿಕಾರಿ ಮೆಕಲಾಯ್ ಗೆ ನೋಡಬೇಕಾದಂತಹ ಎಲ್ಲವನ್ನೂ ತೋರಿಸಲು ನೇಮಕಗೊಂಡಿದ್ದ. ಕೋಟೆ ಸಂಪೂರ್ಣವಾಗಿದ್ದರೂ ನಗರ ಜನರಹಿತವಾಗಿತ್ತು ಎಂಬುದನ್ನಾತ ನೋಡಿದ. ನಗರವು ಮೌನವಾಗಿತ್ತು, ಪಾಳುಬಿದ್ದಿತ್ತು. ಟಿಪ್ಪುವಿನ ಅರಮನೆ ನೆಲಸಮವಾಗುವಂತಿತ್ತು. ಆವರಣಗಳನ್ನು ಕಳೆ ಮತ್ತು ಹೂವುಗಳು ಆವರಿಸಿಕೊಂಡುಬಿಟ್ಟಿದ್ದವು…..” (176) 1855ರಲ್ಲಿ ಪ್ರಕಟವಾದ ದಕ್ಷಿಣ ಭಾರತದ ಗೆಝೆಟೀರ್ ನಗರ ಸಂಪೂರ್ಣ ನಾಶವಾಗಿದ್ದರ ಬಗ್ಗೆ ಮಾತನಾಡುತ್ತದೆ. “ಒಂದು ಕಾಲದಲ್ಲಿ ಮೈಸೂರಿನ ಪಶ್ಚಿಮಘಟ್ಟದಲ್ಲಿದ್ದ ಹೆಚ್ಚು ಜನಸಂಖೈಯ ನಗರವಾಗಿತ್ತದು…….. ಆ ಜಾಗ ಶಕ್ತಿಯ ಸಂಕೇತವಾಗಿತ್ತು, ಜನಸಾಂದ್ರತೆಯ ಪ್ರದೇಶವಾಗಿತ್ತು, ಅದರ ಪಳೆಯುಳಿಕೆಗಳು ಸೂಚಿಸುವಂತೆ……ಈಗದು ಒಂದು ಸಾಧಾರಣ ಹಳ್ಳಿ.” (177) ಈ ಚಿತ್ರಣ ಆತ್ಮಕಲಕುವಂತದ್ದು. ಈ ಸಮಯದ ಬೆಂಗಳೂರಿಗೆ ಸಂಬಂಧಪಟ್ಟ ಅಂಕಿಸಂಖೈಗಳು ದಾರಿತಪ್ಪಿಸುವುದು ಹೆಚ್ಚು. 1849 – 50ರಲ್ಲಿ ನಡೆದ ಒಟ್ಟಾರೆ ಗಣತಿ ನಗರ ಅರ್ಧಕರ್ಧ ಕಡಿಮೆಯಾಗುವುದನ್ನು ಸೂಚಿಸಿದರೆ, ಬೆಂಗಳೂರಿಗೆ ಸಂಬಂಧಪಟ್ಟ ದಾಖಲೆಗಳು ಬ್ರಿಟೀಷ್ ಸೈನ್ಯ ಮತ್ತು ಹಳೆಯ ಪೇಟೆಯನ್ನು ಸೇರಿಸಿದರೆ ನಗರ ಮತ್ತಷ್ಟು ಹೆಚ್ಚಾಗಿರುವುದನ್ನು ಸೂಚಿಸುತ್ತಿತ್ತು. ಗಣತಿಯ ಅಂಶಗಳು ತಪ್ಪೆಂದು ತೋರಿಸುತ್ತಿತ್ತು. ಈ ಸಮಯದಲ್ಲಿ ಜನಸಂಖೈ ಹೆಚ್ಚಾದ ಒಂದೇ ಪ್ರದೇಶವೆಂದರೆ ಅದು ಮೈಸೂರು. ಕೈಗೊಂಬೆ ರಾಜನ ಮತ್ತವನ ಆಪ್ತರ ಪೀಠವಾಗಿದ್ದ ಮೈಸೂರು ಕೀವುಗಟ್ಟಿದ ಗಾಯದಂತೆ ಬೆಳೆಯುತ್ತಿತ್ತು.
ಒಪ್ಪಂದದ ಅವಧಿ ಮುಗಿದಿದ್ದರೂ 2017ರಿಂದ ಅದೇ ಗುತ್ತಿಗೆದಾರ ಕಂಪೆನಿ ತೂಗುಸೇತುವೆಯ ನಿರ್ವಹಣೆ ಮಾಡುತ್ತಿತ್ತು ಎಂಬುದನ್ನು ಪೀಠ ಗಮನಿಸಿತು. Gujarat High Court Bar & Bench Published on : 15 Nov, 2022, 3:24 pm ಖಾಸಗಿ ಗುತ್ತಿಗೆದಾರರೊಡನೆ ಈ ಮೊದಲ ಒಪ್ಪಂದದ ಅವಧಿ ಮುಕ್ತಾಯಗೊಂಡ ನಂತರವೂ ಮೂರು ವರ್ಷಗಳವರೆಗೂ ಮೋರ್ಬಿ ತೂಗು ಸೇತುವೆಯ ನಿರ್ವಹಣೆಗೆ ಏಕೆ ಅನುಮತಿ ನೀಡಲಾಗಿತ್ತು ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಗುಜರಾತ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಒಪ್ಪಂದದ ವಿವರ ಇರುವ ಕಡತವನ್ನು ವಶಕ್ಕೆ ಪಡೆದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಸರ್ಕಾರಕ್ಕೆ ತಾಕೀತು ಮಾಡಿತು. "ಯಾವ ಆಧಾರದ ಮೇಲೆ ಮೊದಲ ಒಪ್ಪಂದದ ಅವಧಿ ಮುಗಿದ ನಂತರ ಸೇತುವೆಯನ್ನು ಮೂರು ವರ್ಷಗಳ ಕಾಲ ಗುತ್ತಿಗೆದಾರರಿಗೆ ನಿರ್ವಹಣೆ ಮಾಡಲು ಅನುಮತಿ ನೀಡಲಾಯಿತು? ಈ ಎಲ್ಲಾ ಪ್ರಶ್ನೆಗಳ ವಿವರಗಳನ್ನು ಎರಡು ವಾರಗಳ ನಂತರ ನಡೆಯಲಿರುವ ಮುಂದಿನ ವಿಚಾರಣೆ ಹೊತ್ತಿಗೆ ಅಫಿಡವಿಟ್‌ನಲ್ಲಿ ಸಲ್ಲಿಸಬೇಕು" ಎಂದು ಅದು ಆದೇಶಿಸಿತು. ಗುಜರಾತ್‌ನ ಮೋರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ʼಜುಲ್ಟು ಪುಲ್ʼ ಹೆಸರಿನ 141 ವರ್ಷದ ತೂಗು ಸೇತುವೆ ಖಾಸಗಿ ನಿರ್ವಾಹಕರಾದ ಒರೆವಾ ಗ್ರೂಪ್ ದುರಸ್ತಿ ಕಾಮಗಾರಿ ಬಳಿಕ ಅಂದರೆ ಅಕ್ಟೋಬರ್ 30ರಂದು ಕುಸಿದುಬಿದ್ದು ನೂರಾರು ಜನ ಸಾವನ್ನಪ್ಪಿದ್ದರು. ಸಾರ್ವಜನಿಕರ ಓಡಾಟಕ್ಕೆ ಮುಕ್ತವಾದ ನಾಲ್ಕೇ ದಿನಗಳಲ್ಲಿ ಸೇತುವೆ ಕುಸಿದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅದರ ಮುಖ್ಯ ಕಾರ್ಯದರ್ಶಿ, ಮೋರ್ಬಿ ನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ (ಯುಡಿಡಿ), ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಪಕ್ಷಕಾರರನ್ನಾಗಿ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಸರ್ಕಾರ ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರದಿಂದ ವರದಿ ಕೇಳಿದ್ದ ನ್ಯಾಯಾಲಯ ಘಟನೆಯ ಕುರಿತು ಪ್ರತ್ಯೇಕ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಸೂಚಿಸಿತ್ತು.
ನ್ಯೂಯಾರ್ಕ್: ಅಮೆರಿಕಾದಲ್ಲಿ 2019ರಿಂದ ನಾಪತ್ತೆಯಾಗಿರುವ 6 ವರ್ಷದ ಬಾಲಕಿಯನ್ನು, ಮನೆಯ ಮಹಡಿಗೆ ಹೋಗುವ ಮೆಟ್ಟಿಲಿನ ಕೆಳಗಿದ್ದ ರಹಸ್ಯ ಕತ್ತಲು ಕೋಣೆಯಲ್ಲಿ ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೈಸ್ಲೀ ಶುಲ್ಟಿಸ್ ಎಂಬ 6 ವರ್ಷದ ಬಾಲಕಿ 2019ರಿಂದ ನಾಪತ್ತೆಯಾಗಿದ್ದಳು. ಮಗುವಿನ ಪೋಷಣೆಗೆ ಸಂಬಂಧಿಸಿದಂತೆ ಕಾನೂನು ಕಟ್ಟಲೆಯಲ್ಲಿ ಹಿನ್ನಡೆ ಅನುಭವಿಸಿರುವ ಮಗುವಿನ ಜೈವಿಕ ಪೋಷಕರಾದ ಕಿಂಬರ್ಲಿ ಹಾಗೂ ಕಿರ್ಕ್ ಮಗುವನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ 2.50 ವರ್ಷಗಳ ಹುಡುಕಾಟದ ಬಳಿಕ, ಮಗು ಸುಮಾರು 240 ಕಿ.ಮೀ. ದೂರದ ಸ್ಪೆನ್ಸರ್ ನಗರದಲ್ಲಿ ರಹಸ್ಯ ಸ್ಥಳದಲ್ಲಿ ಇದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಆ ಪ್ರದೇಶಕ್ಕೆ ಧಾವಿಸಿರುವ ಪೊಲೀಸರು ಅಲ್ಲಿನ ಮನೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಶೋಧ ನಡೆಸಿದ್ದಾರೆ. ಆಗ ಮನೆಯ ಮಹಡಿಯ ಮೆಟ್ಟಿಲಿನ ಕೆಳಗಡೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ರಹಸ್ಯ ಕೋಣೆಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಅಪಹರಣ ಮಾಡಿದ್ದ ಕಿಂಬರ್ಲಿ ಕೂಡಾ ಆ ಕತ್ತಲ ಕೋಣೆಯಲ್ಲಿ ಅಡಗಿದ್ದಳು ಎಂದು ಪೊಲೀಸ್ ಮುಖ್ಯಸ್ಥ ಜೋಸೆಫ್ ಸಿನಾಗ್ರಾ ಹೇಳಿದ್ದಾರೆ. ಇದಕ್ಕೂ ಮುನ್ನ ಹಲವಾರು ಬಾರಿ ಈ ಮನೆಗೆ ಬಂದು ಪೊಲೀಸರು ಶೋಧ ನಡೆಸಿದರೂ ಮನೆಯವರು ನಮ್ಮೊಡನೆ ಬಾಲಕಿ ಇಲ್ಲ ಎಂದು ಸುಳ್ಳು ಹೇಳಿದ್ದರು. ಪುತ್ರಿ ಎಲ್ಲಿದ್ದಾಳೆ ಎಂಬ ಮಾಹಿತಿಯಿಲ್ಲ ಎಂದು ಬಾಲಕಿಯ ತಂದೆ ಹೇಳಿದ್ದರು. ಈಗ ಮಗುವನ್ನು ಪತ್ತೆಹಚ್ಚಲಾಗಿದ್ದು ಆರೋಗ್ಯವಾಗಿದೆ. ಪೊಲೀಸರು ಬಾಲಕಿಯನ್ನು ಕತ್ತಲು ಕೋಣೆಯಿಂದ ಹೊರಗೆ ಕರೆತಂದಾಗ ಆಕೆ ತನಗೆ ಮೆಕ್‌ಡೊನಾಲ್ಡ್‌ನ ಊಟ ತರಿಸಿಕೊಡುವಂತೆ ಕೋರಿದ್ದಳು ಎನ್ನಲಾಗಿತ್ತು. ಅಜ್ಜನ ಮನೆಯಲ್ಲಿ ಮಗುವನ್ನು ಅಡಗಿಸಿಡಲಾಗಿತ್ತು. ಮಗುವಿನ ಪ್ರಾಣಕ್ಕೆ ಅಪಾಯ ತರುವ, ಅಪರಾಧ ಎಸಗಿರುವ ಹಾಗೂ ನ್ಯಾಯಾಲಯದ ಪ್ರಕ್ರಿಯೆಗೆ ಅಡ್ಡಿಪಡಿಸಿದ ಪ್ರಕರಣದ ಮೇಲೆ ಪೋಷಕರ ವಿರುದ್ಧ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರು ಪೆಟ್ಟಿಗೆ, ನಾಲ್ಕು ಪಾತ್ರದಾರಿಗಳು, ೬೦ ದಿನಗಳ ಮೂರು ಸಾವಿರ ಮೈಲುಗಳ ಅಮೆರಿಕ ಪ್ರವಾಸ, ಹದಿಮೂರು ರಾಜ್ಯಗಳ್ಲಲಿ ೧೫ ನಗರಗಳ ಹದಿನಾರು ಸ್ಥಳಗಳ್ಲಲಿ ವಾರಾಂತ್ಯದ ಎಂಟು ದಿನಗಳ್ಲಲಿ, ಎರಡು ನಾಟಕಗಳ ಹದಿನೈದು ಪ್ರದರ್ಶನ…. ಅಬ್ಬಾ ! ಅದೊಂದು ರೋಚಕ ಅನುಭವ… ಕಬ್ಬನ್ ಪಾರ್ಕ್ ಸೆಂಚುರಿ ಕ್ಲಬ್‌ನ ಅಂಗಳದ್ಲಲಿ ಗೋಬಿಮಂಚುರಿ ಮ್ಲೆಲುತ್ತಾ ಸಾಗರೋತ್ತರ ‘ರಂಗ ಪಯಣ’ದ ಅನುಭವವನ್ನು ರಂಗಭೂಮಿ ಕಲಾವಿದರಾದ ಲಕ್ಷ್ಮಿ ಚಂದ್ರಶೇಖರ್, ಸುಂದರ್‌ರಾಜ್, ಗಜಾನನ ನಾಯಕ್, ರಾಮಕೃಷ್ಣ ಕನ್ನರ್ಪಾಡಿ ವಿವರಿಸಿದ ಪರಿಯಿದು. ಹೀಗಿದ್ದರೆ ಹೇಗೆ ನಾಟದ ದೃಶ್ಯದಲ್ಲಿ ಸುಂದರ್ ರಾಜ್ ಮತ್ತು ಲಕ್ಷ್ಮಿ ಚಂದ್ರಶೇಖರ್ ಈ ಹೊಸ ಪ್ರಯತ್ನಕ್ಕಾಗಿ ಆರು ತಿಂಗಳ ಕಾಲ ತಾಲೀಮು ನಡೆಸ್ದಿದೆವು. ಪ್ರವಾಸಕ್ಕಾಗಿಯೇ ‘ನಾಟಕದ ಪರಿಕರಗಳನ್ನು’ ಸಿದ್ಧಗೊಳಿಸ್ದಿದೆವು. ಎಲವೂ ಫೋಲ್ಡಬಲ್ ಮತ್ತು ಪೋರ್ಟ್‌ಬಲ್. ವಸ್ತುಗಳಿಗೆ ತಕ್ಕಂತ ಪೆಟ್ಟಿಗೆಗಳು. ಇಷ್ಟ್ಲೆಲ ಇದರೂ ಪ್ರವಾಸದ್ಲಲ್ಲೆಲೂ ಒಂದಿಂಚೂ ಆಚೀಚೆಯಾಗಲ್ಲಿಲ’ ಎನ್ನುತ್ತ ಗೆಲುವಿನ ನಗೆಬೀರಿದರು ಲಕ್ಷ್ಮಿ ಮೇಡಮ್. ನಾಲ್ಕು ಕಲಾವಿದರು ೨೫ ಪಾತ್ರಗಳು. ‘ರತ್ನನ್ ಪರಪಂಚ’ ನಾಟಕದ್ಲಲಿ ಒಟ್ಟು ಇಪ್ಪತ್ತೈದು ಪಾತ್ರಗಳು. ಇಷ್ಟೂ ಪಾತ್ರಗಳನ್ನು ನಾಲ್ಕು ಮಂದಿ ಅಭಿನಯಿಸ್ದಿದು ಈ ಪ್ರವಾಸ ವಿಶೇಷ. ‘ಸುಂದರ್ ನಾಲ್ಕೈದು ಪಾತ್ರ ಮಾಡಿದರು. ಒಂದೊಂದು ಪಾತ್ರ ಒಂದೂವರೆ ನಿಮಿಷದ್ಲಲಿ ವೇಷ-ಬಣ್ಣ ಬದಲಾಯಿಸಿಕೊಳ್ಳುತ್ತ್ದಿದರು. ನಿಜಕ್ಕೂ ಇದೊಂದು ಥ್ರಿಲ್’ ಲಕ್ಷ್ಮಿ ಮೇಡಮ್ ಮತ್ತೆ ಅನುಭವದ ನೆನಪಿಗೆ ಜಾರಿದರು ಎಲ್ಲವೂ ಇದು ನಾಟಕ ಮಾಡೋದು ವಿಶೇಷವಲ್ಲ. ಗ್ರೀನ್ ರೂಮ್, ಸೈಡ್‌ವಿಂಗ್, ಲೈಟಿಂಗ್ ಹೀಗೆ.. ಯಾವ ವ್ಯವಸ್ಥೆಯೂ ಸರಿಯ್ಲಿಲದ ಪುಟ್ಟ ರಂಗ ಸಜ್ಜಿಕೆ ಮೇಲೆ ನಾಟಕ ಪ್ರದರ್ಶನ ನಿಜಕ್ಕೂ ಒಂದು ಸವಾಲು. ಇಂಥ ವಾತಾವರಣದ್ಲಲೇ ಹದಿನೈದು ಪ್ರದರ್ಶನಗಳನ್ನು ನೀಡ್ದಿದೇವೆ’ ಎನ್ನುವ ಕ್ರಿಯೇಟಿವ್ ತಂಡ್ದದು ಒಂದು ಮಟ್ಟಿಗೆ ‘ದೊಡ್ಡ ಸಾಧನೆಯೇ ಸರಿ’. ವರ್ಷಗಳ ನಂತರ ನಕ್ಕ್ದಿದೇ ನಕ್ಕ್ದಿದು..! ಕರ್ನಾಟಕದ್ಲಲಿ ೭೫ ಯಶಸ್ವಿ ಪ್ರದರ್ಶನಗಳನ್ನು ಕಂಡ ‘ಹೀಗಾದರೆ ಹೇಗೆ?’ ನಾಟಕ ನೋಡಿದವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕ್ದಿದೇ ನಕ್ಕ್ದಿದು. ‘ಬಹಳ ವರ್ಷಗಳ ಮೇಲೆ ಹೀಗೆ ನಗುತ್ತ್ದಿದೇವೆ’ ಎಂದು ನಮ್ಮ ಪ್ರೇಕ್ಷಕರು ಉದ್ಗರಿಸ್ದಿದು ಪ್ರದರ್ಶನದ ಸಾರ್ಥಕತೆಗೆ ಹಿಡಿದ ಕನ್ನಡಿಯಾಗಿತ್ತು. ವಿಶೇಷ ಅಂದ್ರೆ ಕನ್ನಡ ಅರ್ಥವಾಗದ ‘ಬಿಳಿಯ’ರೂ ಕೂಡ ಚಪ್ಪಾಳೆ ತಟ್ಟ್ದಿದು, ಅವರ ಮಕ್ಕಳು ಗಪ್‌ಚಿಪ್ ಆಗಿ ಕುಳಿತು ನಾಟಕ ನೋಡ್ದಿದು, ಇವ್ಲೆಲ ಮರೆಯಲಾಗದ ನೆನಪುಗಳು ಎಂದ ಮೇಡಮ್ ಮಾತಿಗೆ ಸುಂದರ್, ಗಜಾನನ, ರಾಮಕೃಷ್ಣ ಜೊತೆಯಾದರು. ಶಹಬ್ಬಾಸ್, ಬನ್ನಿ ಮತ್ತೆ! ‘ಆಸ್ಕರ್ ಪ್ರಶಸ್ತಿ ನೀಡಬೇಕಾದ ಪ್ರದರ್ಶನ’ ಎಂದು ಉದ್ಗರಿಸಿದರೆ, ಇನ್ನು ಕೆಲವರು ‘ನಾವು ಬೆಂಗಳೂರಿಗೆ ಬಂದಾಗ ಕನ್ನಡ ನಾಟಕಗಳನ್ನು ತಪ್ಪದೇ ನೋಡುತ್ತೇವೆ’ ಎಂದರು. ಅನೇಕ ಕನ್ನಡ ಒಕ್ಕೂಟಗಳು ‘ಮತ್ತೆ ಬನ್ನಿ’ ಎಂದು ಆಹ್ವಾನ ನೀಡಿದವು. ಸ್ಥಳೀಯ ಕನ್ನಡ ಪತ್ರಿಕೆಗಳು ನಾಟಕಗಳ ಬಗ್ಗೆ ಪ್ರಶಂಸಾತ್ಮಕ ವಿಮರ್ಶೆ ಪ್ರಕಟಿಸಿದವು. ಅಷ್ಟರ ಮಟ್ಟಿಗೆ ನಮ್ಮ ನಾಟಕಗಳು ಅಲಿನ ಕನ್ನಡಿಗರ ಮೇಲೆ ಪರಿಣಾಮ ಬೀರಿದವು’ ಎಂದರು ಲಕ್ಷ್ಮಿ ಚಂದ್ರಶೇಖರ್. Posted on ಜೂನ್ 19, 2010 ಜುಲೈ 8, 2010 Categories ಕಲೆ ಮತ್ತು ಸಂಸ್ಕೃತಿTags ನಾಟಕ, ಪತ್ರಿಕೆ, ಸುಂದರರಾಜ್, ಹೀಗಾದ್ರೆ ಹೇಗೆLeave a comment on ಸಾಗರೋತ್ತರದಲ್ಲಿ ‘ರಂಗ ಪಯಣ’ Blog at WordPress.com. Privacy & Cookies: This site uses cookies. By continuing to use this website, you agree to their use.
ಮುಂಬೈ (ಪಿಟಿಐ): ಉದ್ಯಮಿ ವಿಜಯ್ ಮಲ್ಯ ಅವರು ಸಾಲ ದುರ್ಬಳಕೆ ಮಾಡಿದ್ದಾರೆ ಎಂಬ ಜಾರಿ ನಿರ್ದೇಶನಾಲದ(ಇ.ಡಿ) ಆರೋಪವನ್ನು ಪ್ರಶ್ನಿಸಿ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಸಂಸ್ಥೆ ಸೋಮವಾರ ಕೋರ್ಟ್‌ ಮೆಟ್ಟಿಲೇರಿದೆ. ಇ.ಡಿ ಆರೋಪವನ್ನು ‘ಸುಳ್ಳು ಹಾಗೂ ದೋಷಯುಕ್ತ’ ಎಂದು ಟೀಕಿಸಿರುವ ಕಿಂಗ್‌ಫಿಷರ್‌, ಇಲ್ಲಿನ ಹಣ ಲೇವಾದೇವಿ ವಿಶೇಷ ನ್ಯಾಯಾಲಯದಲ್ಲಿ ಈ ಕುರಿತು ಅರ್ಜಿ ಸಲ್ಲಿಸಿದೆ. ‘ಇ.ಡಿ ಆರೋಪಗಳು ಸುಳ್ಳು ಹಾಗೂ ದೋಷಯುಕ್ತ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರುವ ದೃಷ್ಟಿಯಿಂದ ಅರ್ಜಿ ಸಲ್ಲಿಸಿದ್ದೇವೆ’ ಎಂದು ಕಿಂಗ್‌ಫಿಷರ್ ಪರ ವಕೀಲ ಪ್ರಣವ್ ಬಡೆಕಾ ಅವರು ತಿಳಿಸಿದ್ದಾರೆ. ಐಡಿಬಿಐ ಬ್ಯಾಂಕಿನ ₹900 ಕೋಟಿ ಸಾಲದ ಹಣ ಲೇವಾದೇವಿ ಪ್ರಕರಣದ ಸಂಬಂಧ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಪಿ.ಆರ್. ಭವ್ಕೆ ಅವರು ನಡೆಸುತ್ತಿದ್ದಾರೆ. ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ ಪಡೆದ ಸಾಲದಲ್ಲಿ ₹430 ಕೋಟಿಯನ್ನು ವಿದೇಶದಲ್ಲಿ ಆಸ್ತಿ ಖರೀದಿಗೆ ‌ಬಳಸಿಕೊಂಡಿದ್ದಾರೆ ಎಂಬುದು ಮಲ್ಯ ವಿರುದ್ಧದ ಆರೋಪ.
ಯೋಗರಾಜ್ ಭಟ್ಟರು ಪ್ರೀತಿ ಮಾಡಿಸೋಕೆ ಹೊರಟರೆ ಹಾಗೇ.. ಗಣೇಶ್, ದಿಗಂತ್, ರಾಜೇಶ್ ಕೃಷ್ಣ ಅವರಿಗೆಲ್ಲ ಪ್ರೇಮ ಪಾಠ ಕಲಿಸಿದ ಲವ್ ಮೇಷ್ಟ್ರು ಭಟ್ಟರು. ಈ ಬಾರಿ ಭಟ್ಟರ ಕೈಗೆ ಸಿಕ್ಕಿರುವ ಉದಯೋನ್ಮುಖ ಪ್ರೇಮಿ ಪವನ್ ಕುಮಾರ್. ಗಾಳಿಪಟ 2 ಚಿತ್ರದ ಉದಯೋನ್ಮುಖ ಪ್ರೇಮಿಯಾಗಿ ನಟಿಸಿರುವುದು ಲೂಸಿಯಾ ಪವನ್. ಹೀರೋ ಆಗಿ ಅವರಿಗಿದು ಮೊದಲ ಸಿನಿಮಾ. ಇಲ್ಲಿ ಅವರು ಕಾಲೇಜ್ ಸ್ಟೂಡೆಂಟ್ ಆಗಿ ಲೆಕ್ಚರರ್`ಗೇ ಲೈನ್ ಹಾಕ್ತಾರೆ. ಸ್ಟೂಡೆಂಟ್ ಲವ್ ಮಾಡೋಕೆ ಕಷ್ಟವಾಗಿ ಲೆಕ್ಚರರ್ ಶರ್ಮಿಳಾ ಮಾಂಡ್ರೆ ಮನೆಯ ಬಾಗಿಲು ಕ್ಲೋಸ್ ಮಾಡ್ತಾರೆ. ಮನಸ್ಸಿನ ಬಾಗಿಲೂ ಕ್ಲೋಸ್ ಆಗಿ ಹೋಯ್ತಾ.. ಆಗಸ್ಟ್ 12ಕ್ಕೆ ಥಿಯೇಟರಿಗೆ ಹೋದರೆ ಪೂರ್ತಾ ಕಥೆಯನ್ನ ಅಲ್ಲೇ ಹೇಳ್ತಾರೆ ಯೋಗರಾಜ್ ಭಟ್ರು. ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ , ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್ ಜೋಡಿ ಜೋಡಿಯಾಗಿ ನಟಿಸಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಅಂದಹಾಗೆ ನಾಳೆ ಅಂದ್ರೆ ಜುಲೈ 31ಕ್ಕೆ ಗಾಳಿಪಟ 2 ಚಿತ್ರದ ಟ್ರೇಲರ್ ಹಾರಿಸಲಿದ್ದಾರೆ. ಪ್ರಾಯಶಃ.. ಇಂತ ಹಾಡು ಬಂದು ವರ್ಷಗಳಾಗಿರಬಹುದು.. ನಾನು ಬದುಕಿರಬಹುದು.. ಪ್ರಾಯಶಃ ಇಲ್ಲ ಕನಸಿರಬಹುದಿದು.. ಪ್ರಾಯಶಃ ಇಲ್ಲ ಸರಿ ಇರಬಹುದು. ಭಾಗಶಃ ಇಲ್ಲ ಸೆರೆ ಇರಬಹುದಿದು. ಮೂಲತಃ ಜೀವ ವಿಲವಿಲ ಎನ್ನುತಲೇ ಒಲವನು ಹುಡುಕುತಿದೆ.. ಪ್ರಾಯಶಃ.. ಹಾಡಿನ ಸಾಹಿತ್ಯ ಕೇಳಿದವರಿಗೆ ಇದು ಜಯಂತ ಕಾಯ್ಕಿಣಿಯವರದ್ದೇನೋ ಅನ್ನಿಸಿದರೂ.. ಅದು ಸುಳ್ಳು. ಸಾಹಿತ್ಯ ಯೋಗರಾಜ್ ಭಟ್ಟರದು. ಇತ್ತೀಚೆಗೆ ಇಂತಹ ಮಾಧುರ್ಯದ ಗೀತೆಗಳನ್ನು ಬರೆಯದೆ ಸ್ವಲ್ಪ ದೂರವೇ ಉಳಿದಿದ್ದ ಕವಿ ಯೋಗರಾಜ್ ಭಟ್ ಮತ್ತೊಮ್ಮೆ ಬಂದಿದ್ದಾರೆ. ಪ್ರಾಯಶಃ.. ಗಾಳಿಪಟ 2 ಚಿತ್ರದ ಹಾಡು ರಿಲೀಸ್ ಮಾಡಿದ ಕಿಚ್ಚ ಸುದೀಪ್ ಇಂತಹ ಹಾಡನ್ನು ಕೇಳದೆ ಯಾವುದೋ ಕಾಲವಾಗಿತ್ತು ಎಂದ ಮಾತಿನಲ್ಲಿ ಪ್ರಾಯಶಃ ಅತಿಶಯೋಕ್ತಿ ಇರಲಿಲ್ಲ. ಭಟ್ಟರ ಭಾವತೀವ್ರತೆಯ ಪದಗಳಿಗೆ ಪ್ರಾಯಶಃ ಅದ್ಭುತ ಸಂಗೀತ ಕೊಟ್ಟಿರೋದು ಅರ್ಜುನ್ ಜನ್ಯ ಅವರಾದರೆ.. ಪ್ರಾಯಶಃ ಅಷ್ಟೇ ತೀವ್ರತೆಯಿಂದ ಹಾಡಿರೋದು ಸೋನು ನಿಗಮ್. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ ಗಾಳಿಪಟ 2, ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್-ಶರ್ಮಿಳಾ ಮಾಂಡ್ರೆ ಜೋಡಿಯಾಗಿರೋ ಚಿತ್ರದಲ್ಲಿ ಚೆಂದದ ಪ್ರೇಮಕಥೆಯೊಂದು ಕೈ ಬೀಸಿ ಕರೆಯುತ್ತಿದೆ.
The team of 'Chemistry of Kariappa', Dr Manjunath is upset with the film's hero for not co-operating with the team and for not promoting the film. 'Chemistry of Kariappa' was released on the 15th of February and is running to packed houses. However, Chandan Achar who is the hero of the film is not to be seen anywhere. Dr Manjunath says the team had invited the hero for the promotions and success meet of the film. However, the hero gave same reasons and backed out of the event. 'Chemistry of Kariappa' stars Tabla Nani, Chandan Achar, Suchendra Prasad and others. Producer Manjunath is also seen in a prominent role in the film. The film is based on a real incident and talks about the story of a father and a son. The film is written and directed by Kumar. Shiva Sena is the cinematographer, while Arav Rithik is the music director. Chemistry Of Kariappa, Is A ‘sensual’ Comedy Based on a true incident which occurred in Mandya district, Dr. Manjunath who made Samyuktha 2 returns with his second production venture - Chemistry of Kariappa. This one launches actor Chandan Achar of Kirik Party fame as hero. The film which revolves around four main characters - a father, his wife, son and his daughter in law. Tabla Nani plays the father's role while Sanjana Anand, also a debutant is paired opposite Chandan. “It is based on true incident which took place in a village in Mandya. Not just the comedy but the movie reflects human sense and sensibilities. The censor board has given a clean U/A, and the distributors were impressed with the movie along with digital rights already being sold out for its unique content,” says Dr. Manjunath, who also plays an important role in the movie as the lawyer. The crux of the movie which releases in not less than 50 centres, is about the the newly married man who is being suspected by his wife for being impotent. It's a complete laughter ride which comes with a message in the end, the team reveals. Chemistry Of Kariappa' On February 15th Actor-producer Dr Manujnath who was last seen in 'Samyukta 2' is back with a new film called 'Chemistry of Kariappa' and the film is all set to be released on the 15th of February. 'Chemistry of Kariappa' stars Tabla Nani, Chandan Achar, Suchendra Prasad and others. Producer Manjunath is also seen in a prominent role in the film. The film is based on a real incident and talks about the story of a father and a son. The film is written and directed by Kumar. Shiva Sena is the cinematographer, while Arav Rithik is the music director. Chemistry Of Kariyappa Movie Review: Chitraloka Rating 3.5/ 5* It was a laughter Friday for sandalwood this week with the release of two movies which are high on humour. While Kirik Party director Rishab Shetty nailed it with Bell Bottom, Chandan Achar who made it big with Kirik Party as an actor has made an impressive debut with Chemistry of Kariyappa. The chemistry we are talking about has nothing to do with any kind of chemical reactions but an unique reaction concerning relationship between a man and his wife. A strange reaction which needs a balancing stir to contain it before it explodes causing irreparable loss to the loved ones. That apart, it also dwells upon the bond between a father and his son. Based on a true incident which occurred in Mandya district, the makers of this film have given it a humours touch to it to deliver an all important message to the society. The reel chemistry is a simple story that of Uttara Kumara (Chandan Achar), the son of Kariyappa played by Tabla Nani. As the father is worried over his son's growing age and unable to get his marriage fixed, Uttara Kumara finally finds a girl for himself. They soon fall in love and get married. But the actual chemistry is when the wife sends a divorce notice. When the actual reason behind seeking divorce becomes public, the action shifts to courtroom. The producer Dr. Manjunath who plays the lawyer fights for the cause. Despite the existence of jokes dealing with double entendres, Kariyappa's intention for a good cause serves purpose to the seriousness of the subject. A chemistry for life with a hint of comedy offers a good entertainment in the end. ಕರಿಯಪ್ಪನ ಕಚಗುಳಿಗೆ ನಗ್ರಪ್ಪೋ ನಗ್ರಿ ಈ ನನ್ಮಗ ಬೈಕ್ ಕೊಡಿಸ್ತೀನಿ ಅಂದಾಗ್ಲೂ ಗೇರ್ ಇಲ್ಲದ ಗಾಡಿನೇ ಬೇಕು. ಕಾರ್ ಕೊಡಿಸ್ತೀನಿ ಅಂದಾಗ್ಲೂ ಗೇರ್ ಇಲ್ಲದ ಕಾರ್ ಬೇಕು ಅಂದ. ನಂಗೊಂದು ಡೌಡು. ಇವನಿಗೆ ಗೇರು........ ಇಂತಹ ಕಚಗುಳಿ ಇಡುವ ಡೈಲಾಗುಗಳ ಜೊತೆ ಜೊತೆಯಲ್ಲೇ ಮನಸ್ಸಿನಲ್ಲೊಂದು ಪ್ರಶ್ನೆ ಹುಟ್ಟಿಸುವ ತಾಕತ್ತು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿದೆ. ಕಿರಿಕ್ ಪಾರ್ಟಿ ಚಂದನ್, ಸಂಜನಾ ಆನಂದ್ ಜೋಡಿಗೆ ಅತ್ತೆ-ಮಾವನಾಗಿರುವುದು ಅಪೂರ್ವ ಮತ್ತು ತಬಲಾ ನಾಣಿ. ಕಾಂಬಿನೇಷನ್ ಬೊಂಬಾಟ್. ನಿರ್ದೇಶಕ ಕುಮಾರ್, ಚಿತ್ರವನ್ನು ಕಾಮಿಡಿಯಾಗಿಯೇ ಹೇಳಬೇಕೆಂದು ನಿರ್ಧರಿಸಿರೋದ್ರಿಂದ ಇಡೀ ಚಿತ್ರದಲ್ಲಿ ಕಚಗುಳಿಯೋ ಕಚಗುಳಿ. ಕರಿಯಪ್ಪನ ಕೆಮಸ್ಟ್ರಿ ಇವತ್ತಿಂದಲೇ ಚಿತ್ರಮಂದಿರದಲ್ಲಿ ಗೊತ್ತಾಗಲಿದೆ. ಜಸ್ಟ್ ಎಂಜಾಯ್. ಕರಿಯಪ್ಪನ ಕೆಮಿಸ್ಟ್ರಿಗೆ ಸೊಸೆಯೇ ಚಾಲೆಂಜ್..! ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿ ನಿಜಕ್ಕೂ ಹೀರೋ ಯಾರು..? ನೋ ಡೌಟ್, ಅದು ಚಂದನ್ ಆಚಾರ್ಯ. ಅವರು ಕರಿಯಪ್ಪನ ಮಗ. ಜಗಳ ಶುರುವಾಗೋದು.. ಅವರ ಮತ್ತು ಅವರ ಹೆಂಡತಿ ಜೊತೆ. ಅರ್ಥಾತ್ ಸಂಜನಾ ಜೊತೆ. ಆದರೆ, ನಿಜವಾದ ಕಥೆ ಇರೋದು ಮಾವ ಮತ್ತು ಸೊಸೆ ನಡುವೆ. ಯೆಸ್.. ಮಾವನಾಗಿ ನಟಿಸಿರುವ ತಬಲಾ ನಾಣಿ, ಸೊಸೆಯಾಗಿ ನಟಿಸಿರುವ ಸಂಜನಾರ ಜುಗಲ್‍ಬಂದಿ, ಅವರಿಬ್ಬರ ನಡುವೆ ಪರದಾಡುವ ಚಂದನ್, ಅಮ್ಮ ಕಮ್ ಅತ್ತೆಯಾಗಿ ನಟಿಸಿರುವ ಅಪೂರ್ವ.. ಹೀಗೆ ಎಲ್ಲರ ನಡುವೆ ನಡೆಯುವ ಆಟವೇ ಕೆಮಿಸ್ಟ್ರಿ ಆಫ್ ಕರಿಯಪ್ಪ. ನಿರ್ದೇಶಕ ಕುಮಾರ್, ಚಿತ್ರದ ಬಗ್ಗೆ ತುಂಬಾ ಸ್ಪಷ್ಟವಾಗಿದ್ದಾರೆ. ತಾನು ಹೇಳಬೇಕಾದ್ದನ್ನು ಕಾಮಿಡಿ ಜಾಡಿನಲ್ಲೇ ಹೇಳಬೇಕು ಎಂದು ಅದಕ್ಕೆ ತಕ್ಕಂತೆಯೇ ಕತೆ, ಚಿತ್ರಕತೆ, ಸಂಭಾಷಣೆ, ಸನ್ನಿವೇಶ ಸೃಷ್ಟಿಸಿದ್ದಾರೆ. ನಾಳೆಯಿಂದ ಕೆಮಿಸ್ಟ್ರಿ ಗೊತ್ತಾಗಲಿದೆ. ಕರಿಯಪ್ಪನ ಕ್ರಿಟಿಕಲ್ ಕೀರ್ತನೆಗಳು ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್, ಈಗ ಕ್ರಿಟಿಕಲ್ ಕೀರ್ತನೆಗಳ ಮೂಲಕ ಬರುತ್ತಿದ್ದಾರೆ. ಅಂದಹಾಗೆ ಇಲ್ಲಿಯೂ ಕರಿಯಪ್ಪ ಚಿತ್ರದಲ್ಲಿದ್ದಂತೆ ಕೋರ್ಟು, ಕಚೇರಿ ಸೀನುಗಳಿವೆ. ಐಪಿಎಲ್ ಬೆಟ್ಟಿಂಗ್ ದಂಧೆಯ ಕಥೆಯಿದೆ. ಇಷ್ಟಿದ್ದರೂ.. ಇದೂ ಕೂಡಾ ಕಾಮಿಡಿ ಡ್ರಾಮಾ. ತಬಲಾ ನಾಣಿ, ಸುಚೇಂದ್ರ ಪ್ರಸಾದ್ ಕಾಂಬಿನೇಷನ್ ಕಂಟಿನ್ಯೂ ಆಗಿದ್ದು, ರಾಜೇಶ್ ನಟರಂಗ, ತರಂಗ ವಿಶ್ವ, ಧರ್ಮ, ಯಶಸ್ ಅಭಿ, ಅರುಣ್ ಬಾಲರಾಜ್ ಮೊದಲಾದವರು ನಟಿಸಿದ್ದಾರೆ. ಐಪಿಎಲ್ ಶುರುವಾಗುವ ಹೊತ್ತಿನಲ್ಲೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಕರಿಯಪ್ಪನ ಬಾಕ್ಸಾಫೀಸ್ ಕೆಮಿಸ್ಟ್ರಿಯೂ ಬೊಂಬಾಟು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಬಾಕ್ಸಾಫೀಸ್‍ನಲ್ಲಿ ಗೆದ್ದಿದೆ. 2ನೇ ವಾರದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ, ಬಿಡುಗಡೆಯಾದ ಎಲ್ಲ ಕಡೆ ಅತ್ಯುತ್ತಮ ಪ್ರದರ್ಶನ ಕಾಣ್ತಿದೆ. ಗಲ್ಲಾಪೆಟ್ಟಿಗೆಯೂ ತುಂಬುತ್ತಿದೆ. ಮೊದಲ ವಾರ ಕರಿಯಪ್ಪ 80 ಲಕ್ಷ ಬ್ಯುಸಿನೆಸ್ ಮಾಡಿದ್ದಾನೆ. ಇನ್ನು ಚಿತ್ರದ ಆಡಿಯೋ, ಸ್ಯಾಟಲೈಟ್ ರೈಟ್ಸ್‍ಗಳೂ ಸೇರಿದಂತೆ ಚಿತ್ರ ಒಟ್ಟಾರೆ ಲಾಭದಲ್ಲಿದೆ. ಮುಂದೆ ಬರೋದೆಲ್ಲ ಬೋನಸ್ಸು. ತಬಲಾ ನಾಣಿ ಕರಿಯಪ್ಪನಾಗಿ ನಟಿಸಿರುವ ಚಿತ್ರದಲ್ಲಿ ಶಿಲ್ಪಾ ಮಂಜುನಾಥ್ ನಾಯಕಿ. ಮಂಜುನಾಥ್ ನಿರ್ಮಾಪಕ. ಕುಮಾರ್ ನಿರ್ದೇಶನದ ಸಿನಿಮಾದಿಂದಾಗಿ ಅತೀ ಹೆಚ್ಚು ಗುರುತಿಸಿಕೊಂಡಿರೋದು ತಬಲಾ ನಾಣಿ. ಕೆಮಿಸ್ಟ್ರಿ ಆಫ್ ಕರಿಯಪ್ಪ' ಒಂದಿಡೀ ದಿನದ ಶೋ ಹಣ ಗುರು ಕುಟುಂಬಕ್ಕೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಗುರು ಕುಟುಂಬಕ್ಕೆ ನೆರವು ನೀಡಲು ಮುಂದಾಗಿದೆ. ಚಿತ್ರದ ಭಾನುವಾರದ ಎಲ್ಲ ಶೋಗಳಲ್ಲಿ ಸಂಗ್ರಹವಾದ ಒಟ್ಟು ಹಣವನ್ನು ಗುರು ಕುಟುಂಬಕ್ಕೆ ನೀಡಲು ನಿರ್ಧರಿಸಿದೆ ಚಿತ್ರತಂಡ. ಅಂದರೆ, ಭಾನುವಾರ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನ ಹಣವೂ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಿಗಲಿದೆ. ಹಣವನ್ನು ತುಂಬಾ ದಿನ ಇಟ್ಟುಕೊಳ್ಳೋದಿಲ್ಲ. ಈ ದಿನವೇ ಗುರು ಕುಟುಂಬದವರಿಗೆ ಹಣ ನೀಡುತ್ತೇನೆ ಎಂದು ತಿಳಿಸಿದೆ ಚಿತ್ರತಂಡ. ಗುರು ಕುಟುಂಬಕ್ಕೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಧನಸಹಾಯ ಪುಲ್ವಾಮಾ ಹತ್ಯಾಕಾಂಡದಲ್ಲಿ ಹುತಾತ್ಮರಾದ ಮಂಡ್ಯದ ವೀರಯೋಧ ಗುರು ಕುಟುಂಬಕ್ಕೆ ಒಂದಿಡೀ ದಿನದ ಶೋ ಹಣವನ್ನು ನೀಡುವುದಾಗಿ ಹೇಳಿದ್ದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ, ನುಡಿದಂತೆಯೇ ನಡೆದುಕೊಂಡಿದೆ. ಭಾನುವಾರದ ಸಂಪೂರ್ಣ ಶೋ ಹಣವನ್ನು ಗುರು ಕುಟುಂಬಕ್ಕೆ ಹಸ್ತಾಂತರಿಸಿದೆ. ತುಂಬಾ ದಿನ ತೆಗೆದುಕೊಳ್ಳೋದಿಲ್ಲ. ಮಾರನೇ ದಿನವೇ ಹಣ ನೀಡುತ್ತೇವೆ ಎಂದಿದ್ದ ಚಿತ್ರದ ನಿರ್ಮಾಪಕ ಮಂಜುನಾಥ್, ನಿರ್ದೇಶಕ ಕುಮಾರ್, ತಬಲಾನಾಣಿ, ಸಂಜನಾ ಆನಂದ್ ಮೊದಲಾದವರು ಗುಡಿಗೆರೆಗೆ ಭೇಟಿ ನೀಡಿ, ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಪರಿಹಾರದ ಚೆಕ್ ವಿತರಿಸಿದರು. ಟ್ರೇಲರ್ ನೋಡಿದ್ರೇ ಹಿಂಗೆ.. ಸಿನಿಮಾ ಹೆಂಗೋ.. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಟ್ರೇಲರ್ ನೋಡಿದವರು ಹೀಗೆ ಅಂದ್ಕೊಂಡ್ರೆ ಯಾರೇನ್ ಮಾಡೋಕಾಗುತ್ತೆ. ಪತ್ನಿ, ಮಗನನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ಇವರು ನಮ್ ಸನ್ನು.. ಇವರು ನಮ್ಮ ಮೂನು ಎಂದು ಗಂಡ ಹೇಳಿದ್ರೆ, ಹೆಂಡತಿ.. ಗಂಡನನ್ನು ಇವರು ನಮ್ಮ ಹನಿ ಅಂತಾರೆ.. ಫ್ಯಾಮಿಲಿ ಸಾಂಗಿಗೆ ಅಂತಾ ಯಜಮಾನನ ಹಾಡು ಬಂದ್ ಹೋಗುತ್ತೆ. ನಮ್ಮ ಮನೆಯಲಿ ದಿನವೂ ಮಿನುಗೋ ಚೈತ್ರವೇ.. ಆಆಆಆಆಆಆಆ.... ಹುಡುಗನಿಗೆ ಲವ್ವಾಗುತ್ತೆ. ಹುಡುಗಿ ಯಾರಂತೆ ಅಂದ್ರೆ, ಕಸ್ಟಮರ್ ಕೇರಲ್ಲಿ ಕೆಲಸ ಮಾಡೋ ಹುಡುಗಿ ಅಂತಾನೇ ಅಪ್ಪ. ಓಓಓ.. ಕಾಲ್ ಗರ್ಲ್ ಅನ್ನಿ.. ಅಂತಾಳೆ ಅಮ್ಮ.. ಓಓಓಓಓ.... ಹುಡುಗಿ.. ಹುಡುಗನಿಗೆ ಮೊದಲು ಕೊಡೋ ಗಿಫ್ಟು ಉಪ್ಪಿನಕಾಯಿ.. ಏನ್ ಕಿಕ್ಕು.. ಓಪ್ ಓಪ್ ಓಪ್ಪಾ.. ಮದ್ವೆ ಗಂಡಿಗೆ ಅದೇ ಇಲ್ಲ ಅಂದ್ರೆ ಹೆಂಗ್ರೀ ಆಗುತ್ತೆ ಸಂಸಾರ.. ಅದು ನಡೆಯೋದು ಟಿವಿ ಚಾನೆಲ್ಲಲ್ಲಿ. ಅದಂದ್ರೆ.. ಅಂತಾಳೆ ಆಂಕರ್. ಥೂ.. ಹೋಗ್ರೀಪಾ.. ಎಂದು ಪ್ಯಾನೆಲ್ಲಿನಲ್ಲಿದ್ದ ಚೆಲುವೆ.. ನಾಚಿಕೊಳ್ತಾಳೆ.. ಹಂಗಾದ್ರೆ.. ಹೀರೋ ಚಂದನ್ ಆಚಾರ್.. ಗಂಡ್ಸಲ್ವಾ..ಏನೋಪ್ಪ.. ಅವರಪ್ಪ ನೋಡಿದ್ರೆ.. ಗೇರ್ ಇಲ್ದೇ ಇರೋದನ್ನೇ ಕೇಳ್ತಾನೆ ಅಂತಾರೆ.. ಹೋಲ್ಡ್ ಆನ್.. ಇದು ಟ್ರೇಲರ್ ಸ್ಯಾಂಪಲ್ಲು. ತಬಲಾ ನಾಣಿಯೇ ಹೀರೋ ಅಂದ್ಕೊಂಡ್ರೆ.. ನೋ ಪ್ರಾಬ್ಲಂ. ಕಾಳ್ ಹಾಕೋದು ಅವರೇ. ಕಾಳ್ ಹಾಕ್ಸೋರು ಕುಮಾರು. ಇದೇ ವಾರ ಥಿಯೇಟರಿಗೆ ಬರ್ತಿದೆ. ಬೆಲ್‍ಬಾಟಂ, ಕರಿಯಪ್ಪನ ಕೆಮಿಸ್ಟ್ರಿ ಅರ್ಧಶತಕ ಕನ್ನಡ ಚಿತ್ರರಂಗಕ್ಕೆ ಈ ವಾರ ಶುಭ ಶುಕ್ರವಾರ. ಈ ವಾರ ಶಿವಣ್ಣ ಅಭಿನಯದ ಕವಚ ರಿಲೀಸ್ ಆಗುತ್ತಿದೆ. ಈ ವರ್ಷ ರಿಲೀಸ್ ಆಗುತ್ತಿರುವ ಶಿವಣ್ಣ ಅಭಿನಯದ ಮೊದಲ ಸಿನಿಮಾ ಇದು. ಇದೇ ವೇಳೆಯಲ್ಲಿ ಕನ್ನಡದ ಇನ್ನೆರಡು ಚಿತ್ರಗಳು ಅರ್ಧಶತಕ ಬಾರಿಸಿವೆ. ರೆಟ್ರೋ ಸ್ಟೈಲ್ ಡಿಟೆಕ್ಟಿವ್ ಕಥೆ ಹೊಂದಿದ್ದ ಬೆಲ್‍ಬಾಟಂ ಸಿನಿಮಾ 50 ದಿನ ಪೂರೈಸಿದೆ. ರಿಷಬ್ ಶೆಟ್ಟಿ ನಾಯಕರಾಗಿ ಅಭಿನಯಿಸಿದ್ದ ಮೊದಲ ಸಿನಿಮಾಗೆ ಹರಿಪ್ರಿಯಾ ನಾಯಕಿ. ಜಯತೀರ್ಥ ನಿರ್ದೇಶನದ ಸಿನಿಮಾ, ಸೈಲೆಂಟಾಗಿ ಹಿಟ್ ಆಗಿದೆ. ಅದೇ ವಾರ ರಿಲೀಸ್ ಆಗಿದ್ದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರವೂ ಅರ್ಧ ಶತಕ ಬಾರಿಸಿರುವುದು ವಿಶೇಷ. ಡಾ.ಮಂಜುನಾಥ್ ನಿರ್ಮಾಣದ, ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಕ್ಕೆ ಒಂದರ್ಥದಲ್ಲಿ ಹೀರೋ ಆಗಿದ್ದವರು ತಬಲಾ ನಾಣಿ. ಎರಡೂ ಚಿತ್ರಗಳು ಕಾಮಿಡಿ ಮೂಲಕವೇ ವಿಭಿನ್ನ ಸಂದೇಶ ಸಾರಿದ ಚಿತ್ರಗಳು ಎನ್ನುವುದು ವಿಶೇಷ. ಸ್ಯಾಂಡಲ್‍ವುಡ್ ಇನ್ನಷ್ಟು ಹಿಟ್ ಚಿತ್ರಗಳಿಗೆ ಸಾಕ್ಷಿಯಾಗಲಿ. ಮಂಡ್ಯ ಸುತ್ತಮುತ್ತ ನಡೆದ ನೈಜ ಕಥೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಒಂದು ಪುಟ್ಟ ಸಂಸಾರ. ಗಂಡ, ಹೆಂಡತಿ, ಮಗ. ಒಬ್ಬರ ಮೇಲೊಬ್ಬರಿಗೆ ಬಿಡಿಸಲಾಗದ ಅನುಬಂಧ. ಮಗ ಪ್ರೀತಿಸಿ ಮದುವೆಯಾಗುತ್ತಾನೆ. ಅಲ್ಲಿಂದ ಶುರು ಸಮಸ್ಯೆ. ಆ ಸಮಸ್ಯೆಯಿಂದ ಹೊರಬರಲು ಆ ಸಂಸಾರ ಪಡುವ ಪಾಡು.. ನಗು ತರಿಸುತ್ತಲೇ ಚಿಂತನೆಗೆ ಹಚ್ಚುತ್ತೆ. ಕೆಮಿಸ್ಟ್ರಿ ಆಫ್ ಕರಿಯಪ್ಪನ ಕಥೆ ಇದು. ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ತಬಲಾ ನಾಣಿ ಅಪ್ಪ. ಅಪೂರ್ವ ಅಮ್ಮ. ಕಿರಿಕ್ ಚಂದನ್ ಆಚಾರ್ ಮಗ. ಅವನ ಪ್ರೇಯಸಿ ಮತ್ತು ಪತ್ನಿ ಸಂಜನಾ. ಚಿತ್ರದಲ್ಲಿ ಮಾತೇ ಬಂಡವಾಳ. ಆದರೆ ಎಲ್ಲಿಯೂ ಬೋರ್ ಆಗಲ್ಲ ಅನ್ನೋದು ತಬಲಾ ನಾಣಿ ಭರವಸೆ. ಚಿತ್ರದಲ್ಲಿ ನಟಿಸಿರುವವರೆಲ್ಲ ರಂಗಭೂಮಿ ಹಿನ್ನೆಲೆಯವರೇ. ಹೀಗಾಗಿ.. ಎಲ್ಲೂ ಸಮಸ್ಯೆಯೇ ಆಗಲಿಲ್ಲ ಅಂತಾರೆ ನಾಣಿ. ಸಂಯುಕ್ತ 2 ಚಿತ್ರದ ನಂತರ ಮಂಜುನಾಥ್ ನಿರ್ಮಾಣ ಮಾಡಿರುವ ಚಿತ್ರವಿದು. ಸಂಜನಾ ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ..? ಸಂಜನಾ ಆನಂದ್. ಡೆಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗಿ. ಈಗ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಹೀರೋಯಿನ್. ಎಂಜಿನಿಯರಿಂಗ್ ಓದಿಕೊಂಡಿದ್ದ ಸಂಜನಾಗೆ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಆರಂಭದಲ್ಲಿ ವೀಕೆಂಡ್ ಕೆಲಸ ಎಂದುಕೊಂಡಿದ್ದ ಸಂಜನಾಗೆ, ಅಭಿನಯ ಅಷ್ಟು ಸುಲಭ ಅಲ್ಲ ಎನಿಸಿದ ನಂತರ ಸೀರಿಯಸ್ಸಾಗಿ ಹೋದರು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಚಿತ್ರದಲ್ಲಿ ತೊಡಗಿಸಿಕೊಂಡರು. ಚಿತ್ರದ ನಿರ್ದೇಶಕ ಕುಮಾರ್ ಅವರು ಮಾಡಿಸಿದ ರಿಹರ್ಸಲ್, ತಬಲಾ ನಾಣಿಯವರ ಮಾರ್ಗದರ್ಶನ ಚೆನ್ನಾಗಿ ಕೆಲಸ ಮಾಡಿತು. ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಚೆನ್ನಾಗಿ ನಟಿಸಿದ್ದೇನೆ. ನನಗಂತೂ ಆತ್ಮವಿಶ್ವಾಸ ಇದೆ. ಚಿತ್ರವೂ ಗೆಲ್ಲುತ್ತೆ. ನಾನೂ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಸಂಜನಾ. ಸಿನಿಮಾದಲ್ಲಿಯೇ ಮುಂದುವರಿಯುವ ಆಸೆ ಇದೆ. ಅಕಸ್ಮಾತ್ ಆಗದೇ ಹೋದರೆ, ನೋ ಪ್ರಾಬ್ಲಂ. ಕೆಲಸವಂತೂ ಇದ್ದೇ ಇದೆ ಎನ್ನುವ ಸಂಜನಾ ಆನಂದ್, ಎಂಜಿನಿಯರ್ ಅಷ್ಟೇ ಭರತನಾಟ್ಯ ಕಲಾವಿದೆಯೂ ಹೌದು. ಸೆಂಟ್ ಪ್ರಪಂಚ ಝೀರೋ ಪರ್ಸೆಂಟ್ ಲವ್ ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕ ಮಂಜುನಾಥ್, ಈಗ ಹೀರೋ ಆಗುತ್ತಿದ್ದಾರೆ. ಚಿತ್ರದ ಹೆಸರು ಪ್ರಸೆಂಟ್ ಪ್ರಪಂಚ ಝೀರೋ ಪರ್ಸೆಂಟ್ ಲವ್. ಸಂಯುಕ್ತ 2 ನಿರ್ದೇಶಕ ಅಭಿರಾಮ್ ಅವರೇ ಡೈರೆಕ್ಟರ್. ಮಂಜುನಾಥ್ ತಮ್ಮ ಹೆಸರನ್ನು ಅರ್ಜುನ್ ಮಂಜುನಾಥ್ ಎಂದು ಬದಲಿಸಿಕೊಂಡಿದ್ದಾರೆ. ಸಂಭ್ರಮಶ್ರೀ, ಅಕ್ಷತಾ ನಾಯಕಿ ಹೀರೋಯಿನ್. ತಬಲಾನಾಣಿ, ಲಯೇಂದ್ರ, ಎಸ್.ನಾರಾಯಣ್, ಓಂಪ್ರಕಾಶ್ ರಾವ್, ಚಂದನಾಚಾರ್, ಸಂಜನಾ ಕೂಡಾ ತಾರಾಗಣದಲ್ಲಿದ್ದಾರೆ. ಹೊಟ್ಟೆ ತುಂಬಾ ನಗಿಸೋಕೆ ಬರ್ತಾವ್ನೆ ಕೆಮಿಸ್ಟ್ರಿ ಕರಿಯಪ್ಪ ಕೆಮಿಸ್ಟ್ರಿ ಆಫ್ ಕರಿಯಪ್ಪ. ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್, ಹೊಸ ಪ್ರತಿಭೆ ಸಂಜನಾ ಆನಂದ್ ನಟಿಸಿರುವ ಸಿನಿಮಾ. ಆದರೆ, ಚಿತ್ರದ ಟೈಟಲ್ ನಿಂತಿರೋದೇ ತಬಲಾ ನಾಣಿ ಮೆಲೆ. ಏಕಂದ್ರೆ ಚಿತ್ರದ ಕರಿಯಪ್ಪ ಅವರೇ. ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ, ನಾಣಿಯವರನ್ನು ಬೇರೆಯದೇ ರೀತಿಯಲ್ಲಿ ತೋರಿಸಿದೆ. ಹೆಚ್ಚೂ ಕಡಿಮೆ ಒಂದೇ ಬ್ರಾಂಡ್‍ನ ಪಾತ್ರಗಳಿಗೆ ಸೀಮಿತವಾಗುತ್ತಿದ್ದ ತಬಲಾ ನಾಣಿ, ಇಲ್ಲಿ ಬೇರೆಯದ್ದೇ ಗೆಟಪ್ ಪಡೆದುಕೊಂಡಿದ್ದಾರೆ. ಪುಟ್ಟ ಮಗನ ಸಂಸಾರದಲ್ಲಿ ಮದುವೆಯ ನಂತರ ಉಂಟಾಗುವ ಸಮಸ್ಯೆ, ಡೈವೋರ್ಸ್ ವಿಚಾರದಂತಹ ಸೀರಿಯಸ್ ವಿಷಯಗಳನ್ನು ಇಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ತಮಾಷೆಯಾಗಿ ಹೇಳಲಾಗಿದೆ. ಇದೇ ಫೆಬ್ರವರಿ 15ಕ್ಕೆ ಬರುತ್ತಿರುವ ಕರಿಯಪ್ಪ, ಹೊಟ್ಟೆ ತುಂಬಾ ನಗಿಸೋದ್ರಲ್ಲಿ ನೋ ಡೌಟ್.
ಏಡಿ ಆಮೆಯನ್ನು ಬೇಟೆಯಾಡಿರುವುದನ್ನು ನೀವು ಸಾಮಾನ್ಯವಾಗಿ ಕಂಡಿರಲು ಸಾಧ್ಯವಿಲ್ಲ. ಆದರೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ತೀರಾ ಅಪರೂಪದ ದೃಶ್ಯಾವಳಿಯನ್ನು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಆಮೆಯನ್ನು ಬೇಟೆಯಾಡಿದ ಏಡಿ TV9kannada Web Team | Edited By: Rakesh Nayak Manchi Sep 25, 2022 | 1:38 PM ಏಡಿಗಳು ಎಲ್ಲರಿಗೂ ಚಿರಪರಿಚಿತ. ಜಗತ್ತಿನಲ್ಲಿ 4 ಸಾವಿರಕ್ಕೂ ಹೆಚ್ಚು ಜಾತಿಯ ಏಡಿಗಳಿದ್ದು, ಇವುಗಳು ತುಂಬಾ ಅಪಾಯಕಾರಿಯೂ ಆಗಿವೆ. ಸಣ್ಣದಾಗಿರಲಿ, ದೊಡ್ಡದಾಗಿರಲಿ ಮುಟ್ಟಲು ಹೋದರೆ ಕಚ್ಚಲು ಬಂದೇ ಬರುತ್ತವೆ. ಅನೇಕ ಕಡೆ ಜನರು ಏಡಿಗಳನ್ನೂ ತಿನ್ನುತ್ತಾರೆ. ಒಂದಷ್ಟು ಜನರ ನೆಚ್ಚಿನ ಭಕ್ಷ್ಯ ಕೂಡ ಆಗಿದೆ. ಏಡಿಗಳ ದೊಡ್ಡ ವೈಶಿಷ್ಟ್ಯವೆಂದರೆ ಅವು ಸಸ್ಯಾಹಾರಿ ಮತ್ತು ಮಾಂಸಾಹಾರಿ. ಇಂತಹ ಏಡಿಯ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಚ್ಚರಿ ಎಂಬಂತೆ ಆಮೆಯೊಂದನ್ನು ಬೇಟೆಯಾಡಿ ಎಳೆದೊಯ್ಯುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ, ಸಣ್ಣ ಗಾತ್ರದ ಆಮೆಯೊಂದು ತೆವಲುತ್ತಾ ಹೋಗುತ್ತಿರುತ್ತದೆ. ಇದನ್ನು ನೋಡಿದ ಆಮೆಗಿಂತ ಸ್ವಲ್ಪ ದೊಡ್ಡ ಗಾತ್ರದ ಏಡಿ ಭಾನುವಾರದ ಬಾಟೂಟ ಸಿಕ್ಕಿತು ಅಂತ ಅದರತ್ತ ಓಡೋಡಿ ಬಂದು ಹಿಡಿಯುತ್ತದೆ. ಅಷ್ಟೇ ಅಲ್ಲದೆ ತನ್ನ ಬೇಟೆಯನ್ನು ಎಳೆದುಕೊಂಡ ಹೋಗುವುದನ್ನು ಕಾಣಬಹುದು. ಆದರೆ ಏಡಿ ಆಮೆಯನ್ನು ಬೇಟೆಯಾಡಿರುವುದನ್ನು ನೀವು ಸಾಮಾನ್ಯವಾಗಿ ಕಂಡಿರಲು ಸಾಧ್ಯವಿಲ್ಲ. ತೀರಾ ಅಪರೂಪದ ವಿಡಿಯೋ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಈ ವೀಡಿಯೊವನ್ನು natureisbruta1 ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈವರೆಗೆ 28 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗಳನ್ನು ಮಾಡಲಾಗಿದ್ದು, ನೂರಾರು ಲೈಕ್​ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಉಲ್ಲಾಸದಾಯಿಕ ವಿಡಿಯೋ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಬುದ್ದಿವಂತ ಸರ್ವಶಕ್ತನಾದ ದೇವರು ಇದನ್ನು ಸೃಷ್ಟಿಸಿದನು” ಎಂದಿದ್ದಾರೆ.
40 ಸ್ಥಾನಗಳು 100-120 ಆಗುವಂತಹ ಅಚ್ಚರಿಗಳು ಘಟಿಸುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಒಂದೋ ಆಡಳಿತ ಪಕ್ಷದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಇರಬೇಕು, ಇಲ್ಲವಾದರೆ ಪ್ರತಿಪಕ್ಷದ ಪರ ಅಲೆ ಇರಬೇಕು. 1989, 1999, 2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಆಡಳಿತ ವಿರೋಧಿ ಅಲೆಯ ಕಾರಣದಿಂದಾಗಿಯೇ ಕಾಂಗ್ರೆಸ್ ಬಹುಮತ ಗಳಿಸಿತ್ತು. 1985 ರಲ್ಲಿ ಹೆಗಡೆ ಪರ, 2008ರಲ್ಲಿ ಯಡಿಯೂರಪ್ಪ ಪರವಾದ ಅಲೆಯ ಕಾರಣದಿಂದಾಗಿ ಕ್ರಮವಾಗಿ ಜನತಾ ಮತ್ತು ಬಿಜೆಪಿ ಬಹುಮತ ಗಳಿಸಿತ್ತು. 1977 ಮತ್ತು 1980ರ ಲೋಕಸಭಾ ಚುನಾವಣೆಯ ಕಾಲದಲ್ಲಿದ್ದ ಆಡಳಿತ ವಿರೋಧಿ ಅಲೆಯಿಂದಾಗಿ ಕ್ರಮವಾಗಿ ಜನತಾ ಪಕ್ಷ ಮತ್ತು ಕಾಂಗ್ರೆಸ್ ಬಹುಮತ ಪಡೆದಿತ್ತು. 1984ರಲ್ಲಿ ಮೃತ ಇಂದಿರಾಗಾಂಧಿ ಪರ ಮತ್ತು 2014ರಲ್ಲಿ ನರೇಂದ್ರ ಮೋದಿ ಪರ ಇದ್ದ ಅಲೆಯಿಂದಾಗಿ ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬಹುಮತ ಪಡೆದಿತ್ತು. ರಾಜ್ಯ ಸುತ್ತಿ ಬಂದ ರಾಜ್ಯ-ದೇಶದ ಪತ್ರಕರ್ತರ ಪ್ರಕಾರ ಇಲ್ಲಿ ಆಡಳಿತ ವಿರೋಧಿ ಅಲೆಯಾಗಲಿ, ಬಿಜೆಪಿ ಪರವಾದ ಪ್ರಬಲ ಅಲೆಯಾಗಲಿ ಇಲ್ಲ. ಹೀಗಿದ್ದಾಗ 40 ಸ್ಥಾನ 100 ಆಗೋದು ಹೇಗೆ ಎನ್ನುವುದಷ್ಟೇ ಪ್ರಶ್ನೆ. ಕೆಲವರು ಬಿಜೆಪಿ ಜತೆ ಕೆಜೆಪಿ ವಿಲೀನದಿಂದ ಬಿಜೆಪಿಗೆ 100-110 ಸೀಟುಗಳು ಬರುತ್ತೆ ಎಂದು ಹೇಳುತ್ತಾರೆ. ಇದರಲ್ಲಿ ಸ್ವಲ್ಪ ಸತ್ಯಾಂಶ ಇದೆ. ಆದರೆ ಯಾವ ತರ್ಕ ಬಳಸಿದರೂ ಯಡಿಯೂರಪ್ಪನವರಿಂದಾಗಿ 40 ಸ್ಥಾನ 80 ಇಲ್ಲವೆ ಅದು ಮೂರು ಪಟ್ಟು ಹೆಚ್ಚಾಗಬಹುದೇ? ಬಿಜೆಪಿ ವಿರುದ್ಧ ಇನ್ನೂ ನಾಲ್ಕು ಅಂಶಗಳಿವೆ. ಮೊದಲನೆಯದಾಗಿ ಕನಿಷ್ಠ 75 ಸ್ಥಾನಗಳಲ್ಲಿ ಬಿಜೆಪಿಗೆ ಗಂಭೀರ ಅಭ್ಯರ್ಥಿಗಳಿಲ್ಲ (ಮುಖ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ) ಎರಡನೆಯದಾಗಿ ಕೇವಲ ಐದು ವರ್ಷಗಳ ಹಿಂದೆ ಇದೇ ಮತದಾರರು ಯಡಿಯೂರಪ್ಪ, ರೆಡ್ಡಿ, ರಾಮುಲು, ಕಟ್ಟಾ ಮುಖಗಳನ್ನು ತಿರಸ್ಕರಿಸಿದ್ದಾರೆ. ಮೂರನೆಯದಾಗಿ ಯಾವ ಕೋನದಲ್ಲಿ ಕನ್ನಡಿ ಹಿಡಿದರೂ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿರುವ ಸಿದ್ದರಾಮಯ್ಯನವರು ಯಡಿಯೂರಪ್ಪನವರಿಗಿಂತ ಹೋಲಿಕೆಯಲ್ಲಿ ಸಮರ್ಥರು ಎನ್ನುವ ಅಭಿಪ್ರಾಯವೇ ಬರುತ್ತದೆ. ನಾಲ್ಕನೆಯದಾಗಿ ಸಿದ್ದರಾಮಯ್ಯನವರ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಏಕೈಕ ಆರೋಪವೆಂದರೆ ಅವರು ಮೇಲ್ಜಾತಿ ವಿರೋಧಿ, ಅಹಿಂದ ಪರ ಎನ್ನುವುದು. ತರ್ಕಕ್ಕಾಗಿ ಈ ಆರೋಪ ನಿಜವೆಂದು ಸ್ವೀಕರಿಸಿದರೂ ಇಂತಹ ಧ್ರುವೀಕರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟಕ್ಕಿಂತಲಾಭ ಹೆಚ್ಚು.
ತಿರುವನಂತಪುರ: ಬ್ರಾಹ್ಮಣರೇನಾದರೂ ಹಿಂದುತ್ವದ ಬಗ್ಗೆ, ಧರ್ಮರಕ್ಷಣೆ, ಸಮಾನತೆ ಬಗ್ಗೆ ಮಾತನಾಡಿದರೆ ಕೇಳಿಬರುವ ಒಂದೇ ಪ್ರಶ್ನೆ, ಬ್ರಾಹ್ಮಣೇತರರೇಕೆ ದೇವಾಲಯದ ಪೂಜಾರಿ, ಅರ್ಚಕರಾಗಬಾರದು ಎಂದು? ಈ ಪ್ರಶ್ನೆಗೆ ಉತ್ತರ ಸಿಗುಲ ಕಾಲಬಂದಿದ್ದು, ಕೇರಳದಲ್ಲಿ ಟ್ರ್ಯಾವಾನ್ ಕೋರ್ ದೇವಸ್ವೋಮ್ ಎಂಬ ಸಂಸ್ಥೆ ಹಲವು ದೇವಾಲಯಗಳಿಗೆ 6 ದಲಿತರೂ ಸೇರಿ 36 ಜನರ ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಿಸಲು ಶಿಫಾರಸು ಮಾಡಿದೆ. ಸುಮಾರು 62 ಜನರನ್ನು ಅರ್ಚಕರನ್ನಾಗಿ ನೇಮಿಸಲು ಪಟ್ಟಿ ಬಿಡುಗಡೆಗೊಳಿಸಿದ್ದು, ನೇಮಕಕ್ಕೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರನ್ನು ಸೇರಿ ಎಲ್ಲರನ್ನೂ ಸಂದರ್ಶನ ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ನೇಮಕದಲ್ಲಿ ಶೇ.20ರಷ್ಟು ಮೀಸಲಾತಿ ನೀಡಿದ್ದು ಒಟ್ಟು 20 ಜನ ಈ ವರ್ಗದವರು ಹಾಗೂ ಹಿಂದುಳಿದ ವರ್ಗಗಳಲ್ಲೇ 16 ಜನರಿಗೆ ಜೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗದವರನ್ನು ಅರ್ಚಕರನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಮಂಡಳಿ ಅಧ್ಯಕ್ಷ ರಾಜಗೋಪಾಲನ್ ನಾಯರ್ ತಿಳಿಸಿದ್ದಾರೆ. 1949ರಿಂದಲೂ ದೇವಸ್ವೋಮ್ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ಅರ್ಚಕರನ್ನು ನೇಮಿಸುವ ಹೊಣೆ ಹೊತ್ತಿದೆ.
26 ವರ್ಷದ ಶ್ರದ್ಧಾ ವಾಕರ್ ಅವರ ಭೀಕರ ಕೊಲೆ ಪ್ರಕರಣವು ಘೋರ ವಿವರಗಳನ್ನು ಬಹಿರಂಗಪಡಿಸುತ್ತಲೇ ಇದೆ. ಇತ್ತೀಚಿನ ಅಪ್‌ಡೇಟ್‌ಗಳ ಪ್ರಕಾರ, ಶ್ರದ್ಧಾ ಅವರ ಲಿವ್-ಇನ್ ಪಾಲುದಾರರಾದ ಆಫ್ತಾಬ್ ಅಮೀನ್ ಪೂನಾವಾಲಾ ದೆಹಲಿ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದಾನೆ. ಶ್ರದ್ಧಾಳ ದೇಹವನ್ನು ಕತ್ತರಿಸಿದ ನಂತರ, ಆಕೆಯ ಗುರುತನ್ನು ಮರೆಮಾಚಲು ಆಕೆಯ ಮುಖವನ್ನು ಸುಟ್ಟುಹಾಕಿದ್ದಾನೆ. ಕೊಲೆಯ ನಂತರ ದೇಹವನ್ನು ವಿಲೇವಾರಿ ಮಾಡುವ ಮಾರ್ಗಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. Instagram ನಲ್ಲಿ 29.1k ಅನುಯಾಯಿಗಳನ್ನು ಹೊಂದಿರುವ 'HungryChokro' ಹೆಸರಿನ ಪುಟವನ್ನು ಹೊಂದಿರುವ ಪೂನಾವಾಲಾ, ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ವಾಕರ್ ಅವರನ್ನು ಭೇಟಿಯಾದರು. ನಂತರ ಮುಂಬೈನಲ್ಲಿ ಅದೇ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಪ್ರೀತಿಸುತ್ತಿದ್ದರು. ಆದರೆ ಅವರು ವಿಭಿನ್ನ ನಂಬಿಕೆಗಳಿಗೆ ಸೇರಿದವರಾಗಿರುವುದರಿಂದ ಅವರ ಕುಟುಂಬಗಳು ಈ ಸಂಬಂಧವನ್ನು ವಿರೋಧಿಸಿದರು, ಮೇ 18 ರಂದು, ವಿವಾಹದ ವಿಷಯದಲ್ಲಿ ಜಗಳವಾಡಿದರು, ಅದು ಉಲ್ಬಣಗೊಂಡಿತು ಮತ್ತು ಪೂನಾವಾಲಾ ಅವಳನ್ನು ಕೊಂದನು. ಮರುದಿನ, ಅವನು ಗರಗಸ ಮತ್ತು 300-ಲೀಟರ್ ರೆಫ್ರಿಜರೇಟರ್ ಅನ್ನು ಖರೀದಿಸಿದ. ಪೂನಾವಾಲಾ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಅಧ್ಯಯನ ಮಾಡಿದ್ದನು ಮತ್ತು ಮಾಂಸವನ್ನು ಹೇಗೆ ಕತ್ತರಿಸುವುದು ಎಂಬುದರ ಕುರಿತು ಎರಡು ವಾರಗಳ ತರಬೇತಿಯನ್ನು ಪಡೆದಿದ್ದರಿಂದ ಹರಿತವಾದ ಚಾಕುಗಳನ್ನು ನಿರ್ವಹಿಸುವಲ್ಲಿ ತರಬೇತಿ ಪಡೆದಿದ್ದನು. ವಾಕರ್ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನ ಡೀಪ್ ಫ್ರೀಜರ್ ಅನ್ನು ತುಂಡುಗಳೊಂದಿಗೆ ಪ್ಯಾಕ್ ಮಾಡಿ ಮತ್ತು ಉಳಿದವುಗಳನ್ನು ಕೆಳಗಿನ ಟ್ರೇಗೆ ಹಾಕುತ್ತಾನೆ. ಸ್ವಲ್ಪ ಸಮಯದ ನಂತರ, ಅವರು ಟ್ರೇನಲ್ಲಿ ಇರಿಸಲಾದ ಘನೀಕೃತ ತುಣುಕುಗಳನ್ನು ಡೀಪ್ ಫ್ರೀಜ್ ಮಾಡಲು ಹೊರತೆಗೆಯುತ್ತಾರೆ. ದುರ್ವಾಸನೆ ನಿಗ್ರಹಿಸಲು ಅಗರಬತ್ತಿ ಮತ್ತು ರೂಮ್ ಫ್ರೆಶ್‌ನರ್‌ಗಳನ್ನೂ ಬಳಸುತ್ತಿದ್ದನು. ಕತ್ತರಿಸಿದ ತುಂಡುಗಳನ್ನು ಹೊರತೆಗೆದು ಪಾಲಿಥಿನ್ ಚೀಲಗಳಲ್ಲಿ ತುಂಬಿ ಕಾಡಿಗೆ ಕೊಂಡೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. " ಸುಮಾರು 2 ಗಂಟೆಗೆ ಕಾಡಿಗೆ ಹೋಗುತ್ತಿದ್ದರು ಮತ್ತು ಒಂದೆರಡು ಗಂಟೆಗಳ ನಂತರ ಹಿಂತಿರುಗುತ್ತಿದ್ದರು. ಅವರು ಸುಮಾರು 20 ದಿನಗಳ ಕಾಲ ಇದನ್ನು ಪುನರಾವರ್ತಿಸಿದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಗಡಿಯಲ್ಲಿ ಸೈನಿಕರ ಆತ್ಮಸ್ಥೈರ್ಯ ಹೆಚ್ಚುತ್ತಿದೆ. ಅದರಲ್ಲೂ ಪ್ರಧಾನಿಯಂಥ ಪ್ರಧಾನಿಯೇ ದೀಪಾವಳಿಗೆ ಗಡಿ ಪ್ರದೇಶಕ್ಕೆ ಬಂದು ಸೈನಿಕರ ಜತೆ ದೀಪಾವಳಿ ಆಚರಿಸಿದರೆ ಯಾರಿಗೆ ತಾನೆ ಸ್ಫೂರ್ತಿ ಬರಲ್ಲ. ಹಾಗಂತ ಮೋದಿ ಅವರು ಬರೀ ಮಾತಿನಲ್ಲೇ ಮನೆ ಕಟ್ಟಿಲ್ಲ, ಬದಲಿಗೆ ಸೇನೆಗೆ ಆರ್ಥಿಕ ಸ್ವಾತಂತ್ರ್ಯ ನೀಡಿದ್ದಾರೆ, ಶಸ್ತ್ರಾಸ್ತ್ರ ಖರೀದಿ, ಮೇಕ್ ಇನ್ ಇಂಡಿಯಾ ಅನ್ವಯ ಶಸ್ತ್ರಾಸ್ತ್ರ ಉತ್ಪಾದನೆಗೆ ಅನುಕೂಲ ಮಾಡಿಕೊಡುವ ಮೂಲಕ ಭಾರತೀಯ ಸೇನೆಯ ಶಕ್ತಿ ದ್ವಿಗುಣಗೊಳಿಸುತ್ತಿದ್ದಾರೆ. ಇದರ ಭಾಗವಾಗಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಮನವಿ ಮಾಡಿದ್ದು ಫಲಪ್ರದವಾಗಿದ್ದು, ಭಾರತಕ್ಕೆ ಆರು ಬೋಯಿಂಗ್ ಎಎಚ್ಇ ಅಪಾಚೆ ಹೆಲಿಕಾಪ್ಟರ್ ನೀಡಲು ಅಮೆರಿಕ ಒಪ್ಪಿಗೆ ನೀಡಿದೆ. ಇದರಿಂದ ಭಾರತದ ಸೇನಗೆ ಮತ್ತಷ್ಟು ಬಲ ಬರಲಿದೆ ಎಂದೇ ಹೇಳಲಾಗುತ್ತಿದೆ. ಭಾರತಕ್ಕೆ ಆರು ಹೆಲಿಕಾಪ್ಟರ್ ನೀಡಲು ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ ಒಪ್ಪಿಗೆ ನೀಡಿದೆ ಎಂದು ರಕ್ಷಣೆ ಭದ್ರತೆ ಸಹಕಾರ ಏಜೆನ್ಸಿ ಈ ಕುರಿತು ಪ್ರಕಟಣೆ ತಿಳಿಸಿದೆ. ಇದು ಸೇನೆಯ ಶಕ್ತಿ ಬಲಪಡಿಸುವ ಜತೆಗೆ ಭಾರತ-ಅಮೆರಿಕ ತಾಂತ್ರಿಕ ಸಹಕಾರ ಒಪ್ಪಂದ ವೃದ್ಧಿಯ ಭಾಗವೂ ಆಗಿದೆ ಎಂದು ತಿಳಿದುಬಂದಿದೆ. ಭಾರತ ಸರ್ಕಾರ ಸುಮಾರು 930 ದಶಲಕ್ಷ ಡಾಲರ್ ನೀಡಿ ಆರು ಹೆಲಿಕಾಪ್ಟರ್ ಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಇವು ಸೇನೆ ಸೇರಲಿವೆ. ಶತ್ರುಗಳ ದಾಳಿಗೆ ಪ್ರತಿದಾಳಿ, ರಕ್ಷಣೆ ಸೇರಿ ಹಲವು ಕಾರಣಗಳಿಗೆ ಹೆಲಿಕ್ಯಾಪ್ಟರ್ ಗಳು ಸಹಾಯಕವಾಗಲಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಇತ್ತೀಚೆಗೆ ರಾಹುಲ್ ಗಾಂಧಿ ಸೇರಿ ಹಲವರು ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರನ್ನು ಟೀಕಿಸಲೆಂದೇ, ಸರ್ಕಾರದ ಬಳಿ ಸೈನಿಕರ ಸಮವಸ್ತ್ರ ಖರೀದಿಗೂ ದುಡ್ಡಿಲ್ಲ ಎಂದು ವದಂತಿ ಹಬ್ಬಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಸೇನೆ ಬಲಪಡಿಸಲು ಹಣ ಖರ್ಚು ಮಾಡುತ್ತಲೇ ಇದೆ, ಸೇನೆ ಮತ್ತಷ್ಟು ಬಲವಾಗುತ್ತಲೇ ಇದೆ.
ಯಾರೂ ಸಾಯಬಾರದು. ಹಾಗೆಂದು ಬಯಸಬಾರದು. ಹಾಗೆ ಬಯಸುವುದು ಮಾನಸಿಕ ಅದಃಪಥನದ ಸೂಚನೆ. ಇವತ್ತಿನವರೆಗೂ ನನಗೆ ಹಾಗೆ ಅನ್ನಿಸಿದ್ದೂ ಇಲ್ಲ. ಮೊನ್ನೆ ಹಾಗನ್ನಿಸಿತು. ಉಗ್ರರು ಮುಂಬಯಿಗೆ ದಾಳಿ ನಡೆಸಿದಾಗ! ದಾಳಿ ನಡೆಸಿದ ಉಗ್ರರೆಲ್ಲ ಸಾಯಬೇಕು ಅಂತ ಎಲ್ಲರಿಗೂ ಅನ್ನಿಸಿದೆ. ನನಗನ್ನಿಸಿದ್ದು ಬೇರೆ. ದಾಳಿಯ ಗಡಿಬಿಡಿಯಲ್ಲಿ ನೀವು ಗಮನಿಸಿದ್ದೀರೋ ಇಲ್ಲವೊ. ನಾನು ಸರಿಯಾಗಿ ಗಮನಿಸಿದೆ. ತಾಜ್‌ಗೆ ಉಗ್ರರು ದಾಳಿ ನಡೆಸಿದಾಗ ಅದರಲ್ಲಿ ನಮ್ಮ ನಾಲ್ಕು ಸಂಸದರು (ಎಂಪಿಗಳು) ಇದ್ದರು. ಇಬ್ಬರು ಆರಂಭದಲ್ಲೇ ತಪ್ಪಿಸಿಕೊಂಡರೆ, ಇನ್ನಿಬ್ಬರು ೩೨ ಗಂಟೆಗಳ ನಂತರ ಪಾರಾದರು! ಆಗ ನನಗೆ ಅನ್ನಿಸಿತು. ಇಷ್ಟೆಲ್ಲ ಜನ ಅಮಾಯಕರು, ನಿತ್ಯ ಜೀವನದ ಅನಿವಾರ್ಯಕ್ಕೆ ಹೆಣಗುತ್ತಿರುವವರು ಸತ್ತರು. ನಮ್ಮ ಸೈನಿಕರು, ಪೊಲೀಸರು ಸತ್ತರು. ಛೆ! ಹಾಗಿರುವಾಗ ಇವರೂ ಸಾಯಬಾರದಿತ್ತೇ ಅನ್ನಿಸಿಬಿಟ್ಟಿತು. ವಿಚಿತ್ರವೆಂದರೆ ಇಂದಿಗೂ ನನಗೆ ಹಾಗೆ ಅನ್ನಿಸುತ್ತಲೇ ಇದೆ. ಇನ್ನೂ ಭಯಂಕರವೆಂದರೆ ಛೆ, ನಮ್ಮ ಭದ್ರತಾ ದಳದವರಾದರೂ ಯಾಕೆ ಅವರನ್ನು ಹೊರಗೆ ಸುರಕ್ಷಿತವಾಗಿ ಕರೆತಂದರು. ಅವರನ್ನು ಎಳೆದುಕೊಂಡು ಉಗ್ರರ ಎದುರಿಗೆ ನಿಲ್ಲಿಸಿಬಿಡಬೇಕಿತ್ತು. ಇಲ್ಲವೇ ಭದ್ರತಾ ದಳದ ಸಿಬ್ಬಂದಿಯೇ ಗುಂಡುಹೊಡೆದರೂ ಆಗುತ್ತಿತ್ತು! ಹೀಗೆಲ್ಲ ಯೋಚಿಸುವುದು ಸ್ವಸ್ಥ ಮನಿಸಿನ ಚಿಂತನೆಯಲ್ಲ ಎಂಬುದು ನನಗೆ ಅರಿವಿದೆ. ಆದರೂ ಅವರ ಮೇಲಿನ ಕೋಪ ಹೀಗೆಲ್ಲ ಯೋಚಿಸುವಂತೆ ಮಾಡುತ್ತಿದೆ. ಮತ್ತು ಅದೇ ಸರಿ ಅಂತಲೂ ಅನ್ನಿಸುತ್ತಿದೆ. ಹೌದು. ಅವರು ಸಾಯಬೇಕಿತ್ತು. ಆಗಲಾದರೂ ನಮ್ಮ ರಾಜಕಾರಣಿಗಳು ಉಗ್ರರ ದಾಳಿ, ಬಾಂಬ್ ಸ್ಫೋಟಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೇನೊ. ಇಲ್ಲವಾದಲ್ಲಿ ನಮ್ಮನ್ನಾಳುವವರು ಇದನ್ನೆಲ್ಲ ಮತಕ್ಕಾಗಿ ಬಳಸಿಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅವರದ್ದೇ ಕಾಲಬುಡಕ್ಕೆ ಬಂದಾಗ, ಅವರದ್ದೇ ಜನ ಸತ್ತಾಗಲಾದರೂ ಸ್ವಲ್ಪ ಎಚ್ಚೆತ್ತುಕೊಳ್ಳುತ್ತಾರೇನೋ ಎಂಬ ಕಾರಣಕ್ಕಾಗಿಯೇ ನನಗೆ ಹಾಗನ್ನಿಸಿತು. ಅವತ್ತು ತಾಜ್‌ನಲ್ಲಿ ಬಿಜೆಪಿಯ ಗೋದ್ರಾ ಸಂಸದ, ಮಹಾರಾಷ್ಟ್ರ ಎನ್‌ಸಿಪಿ ಸಂಸದ, ಕಾಂಗ್ರೆಸ್‌ನ ಸಂದರು ಇದ್ದರು. ಸರ್ವ ಪಕ್ಷ ಸಮನ್ವಯವೂ ಆಗುತ್ತಿತ್ತು. ತಥ್. ಹಾಗಾಗಲಿಲ್ಲ. ನಾಲ್ಕು ಎಂಪಿಗಳು ಪಾರಾಗಿದ್ದು, ಅದರಲ್ಲೂ ೩೨ ಗಂಟೆಗಳ ನಂತರ ಇಬ್ಬರು ಎಂಪಿಗಳು ಪಾರಾದ ಸುದ್ದಿ ಓದಿದಾಗ ನೆನಪಾಯ್ತು... ಪಾಪಿ ಚಿರಾಯು! ಹಾಂ... ಅಂದಹಾಗೆ ಜೋಗಿ ಇತ್ತೀಚೆಗೆ ಬರೆದ ಯಾಮಿನಿ ಕಾದಂಬರಿಯ ಹೀರೋ ಹೆಸರು ಚಿರಾಯು! ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. Posted by ವಿನಾಯಕ ಭಟ್ಟ at 8:36 PM 7 comments: Monday, December 01, 2008 ಇನ್ನೆಷ್ಟು ವರ್ಷ ಕಾಶ್ಮೀರಕ್ಕೆ ವಿಶೇಷ ರಾಜ್ಯದ ಕಿರೀಟ? ಕಾಶ್ಮೀರಿಗಳೆಲ್ಲ ಭಾರತದ ಪ್ರಜೆಗಳು. ಆದರೆ ಭಾರತದ ಪ್ರಜೆಯೊಬ್ಬ ಕಾಶ್ಮೀರಿಯಾಗಲು ಸಾಧ್ಯವಿಲ್ಲ! ನೀವು ಎಂದಿಗೂ ಕಾಶ್ಮೀರದ ಚುನಾವಣೆಯಲ್ಲಿ ಮತ ಚಲಾಯಿಸಲಾರಿರಿ. ಅಲ್ಲಿ ಭೂಮಿ ಕೊಳ್ಳಲಾರಿರಿ. ಅದೇ ಒಬ್ಬ ಕಾಶ್ಮೀರಿ ಪ್ರಜೆ ಹಂಪಿಗೆ ಬಂದು ಮತದಾರರ ಗುರುತುಪತ್ರ ಪಡೆಯಬಲ್ಲ. ವಿಜಾಪುರದಲ್ಲಿ ಭೂಮಿ ಖರೀದಿಸಿ, ಗಲ್ಲಿಯಲ್ಲಿ ವ್ಯಾಪಾರಿಯಾಗಲ್ಲ. ೬೧ ವರ್ಷದಲ್ಲಿ ಜಮ್ಮು-ಕಾಶ್ಮೀರ ಒಬ್ಬೇ ಒಬ್ಬ ಹಿಂದೂ ಮುಖ್ಯಮಂತ್ರಿಯನ್ನು ಕಂಡಿಲ್ಲ. ಒಬ್ಬ ಹಿಂದುವೂ ಪ್ರಮುಖ ಖಾತೆಯ ಸಚಿವನಾಗಲಿಲ್ಲ. ಕೇಂದ್ರ ಸರಕಾರ ಈ ರಾಜ್ಯದ ಪ್ರಜೆಗಳಿಗೆ ವರ್ಷಕ್ಕೆ ತಲಾ ೯,೭೫೪ ರೂ. ದೊರೆಯುವಷ್ಟು ಅನುದಾನ ನೀಡುತ್ತದೆ. ಬಿಹಾರದಂತಹ ರಾಜ್ಯಕ್ಕೆ ದಕ್ಕುವುದು ತಲಾ ೮೭೬ ರೂ.ನಷ್ಟು ಅನುದಾನ ಮಾತ್ರ. ಇಷ್ಟಾಗಿಯೂ ವಿದೇಶಾಂಗ, ಭದ್ರತೆ ಹಾಗೂ ಸಂಪರ್ಕ ಸಂಬಂಧಿ ಕಾನೂನುಗಳುನ್ನು ಬಿಟ್ಟರೆ ದೇಶದ ಅತ್ಯುನ್ನತ ಕೇಂದ್ರವಾದ ಲೋಕಸಭೆ ಜಾರಿ ಮಾಡಿದ ಕಾನೂನುಗಳು ಕಾಶ್ಮೀರಕ್ಕೆ ಲಾಗೂ ಆಗುವುದಿಲ್ಲ! ವಿಶೇಷ ರಾಜ್ಯದ ಸವಲತ್ತುಗಳನ್ನು ಕಾಶ್ಮೀರ ಇಷ್ಟೂ ವರ್ಷ ತಕರಾರಿಲ್ಲದೆ, ಸುಖದಿಂದ ಅನುಭವಿಸಿಕೊಂಡುಬಂದಿದೆ. ಇಷ್ಟೆಲ್ಲ ಅನುಭವಿಸಿದ ಕಾಶ್ಮೀರಿಗಳು ಮಾಡಿದ್ದೇನು? ೬೧ನೇ ಸ್ವಾತಂತ್ರ್ಯೋತ್ಸವದ ದಿನ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಹಾರಿಸಲಾಗಿದ್ದ ಭಾರತ ಧ್ವಜವನ್ನು ಕೆಲವೇ ಕ್ಷಣದಲ್ಲಿ ಇಳಿಸಿ, ಪಾಕಿಸ್ಥಾನ ಧ್ವಜ ಹಾರಿಸಿದರು. ಪಾಕಿಸ್ಥಾನಕ್ಕೆ ಜಯಕಾರ ಕೂಗಿದರು. ಭಾರತದ ಸೈನ್ಯ ಜಮ್ಮು-ಕಾಶ್ಮೀರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತವಾಗಿರಿಸಿತ್ತು. ಸರಕಾರಿ ಅಧಿಕೃತ ದಾಖಲೆಗಳ ಪ್ರಕಾರ ಆಗಸ್ಟ್ ತಿಂಗಳ ೧ ರಿಂದ ೧೦ನೇ ತಾರೀಕಿನವರೆಗೆ ೩,೦೭೨ ಲಾರಿಗಳು ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಶ್ರೀನಗರಕ್ಕೆ ತಲುಪಿಸಿವೆ. ೨,೧೪೨ ಲಾರಿಗಳು ಕಾಶ್ಮೀರದಿಂದ ಹಣ್ಣು ತುಂಬಿಕೊಂಡು ಲಖನಪುರ ದಾಟಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸಿವೆ. ಜುಲೈ ತಿಂಗಳಲ್ಲಿ ೨೫,೬೫೩ ಲಾರಿಗಳು ಈ ರಾಜ್ಯ ಪ್ರವೇಶಿಸಿ, ೧೫,೪೦೧ ಲಾರಿಗಳು ಹೊರಹೋಗಿವೆ. ಹೀಗಿದ್ದೂ ತಮ್ಮ ಬೆಳೆಗಳನ್ನು ಪಾಕಿಸ್ಥಾನದ ಮುಜಫಾರಾಬಾದಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ ಎಂದು ಹೆದರಿಸಿದರು. ಪ್ರತ್ಯೇಕತಾವಾದಿಗಳ ನಾಯಕ ಸಯ್ಯದ್ ಅಲಿ ಗೀಲಾನಿ ಸಾರ್ವಜನಿಕವಾಗಿ `ಪಾಕಿಸ್ತಾನ ಸೇರಬಯಸುತ್ತೇವೆ. ಕಾಶ್ಮೀರಿಗಳೆಲ್ಲ ಪಾಕಿಸ್ತಾನಿಗಳು' ಎಂದ. ಕಾಫಿರರೇ ಕಾಶ್ಮೀರ ಬಿಟ್ಟು ತೊಲಗಿ ಎಂದು ಘೋಷಣೆ ಮೊಳಗಿತು. ನಮ್ಮ ತೆರಿಗೆ ದುಡ್ಡಿನಲ್ಲಿ ಇಷ್ಟು ವರ್ಷ ಸಕಲ ಸವಲತ್ತು ನೀಡಿ ಸಾಕಿದ್ದಕ್ಕೆ ಈಗ ದಕ್ಕಿದ್ದು `ಕಾಫಿರರು' ಎಂಬ ಬಿರುದು! ನಮ್ಮ ಕೇಂದ್ರ ಸರಕಾರ ಮಾತ್ರ ಇನ್ನೂ `ಪಾಪ ಕಾಶ್ಮೀರಿ ಮುಸ್ಲಿಮರಿಗೆ ಬೇಸರವಾಗುತ್ತದೆ. ಹಾಗಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ಸಿಗದೇ ಹೋಗುತ್ತದೆ' ಎಂದು ಮಾತಾಡದೆ ಸುಮ್ಮನೆ ಕುಳಿತಿತು.`ಪಾಕಿಸ್ತಾನದ ಮುಜಫರಾಬಾದಿಗೆ ಹೋಗುವವರು ಹೋಗಬಹುದು. ಆದರೆ ಮರಳಿ ಬರುವಂತಿಲ್ಲ. ಅವರು ಅಲ್ಲೇ ಉಳಿಯಲಿ' ಎಂದು ಹೇಳುವ, `ಪಾಕಿಸ್ತಾನ ಧ್ವಜ ಹಾರಿಸಿದವನಿಗೆ ಗುಂಡಿಕ್ಕಲು ಹಿಂಜರಿಯುವುದಿಲ್ಲ' ಎಂದಬ್ಬರಿಸುವ ಒಬ್ಬ ಗಂಡು ಕೇಂದ್ರ ಸರಕಾರದಲ್ಲಿ ಕಾಣಲಿಲ್ಲ. ಹಾಗೇನಾದರೂ ಹೇಳಿದ್ದಲ್ಲಿ ಮುಜಫರಾಬಾದಿಗೆ ಹೊರಟವರ ಬಾಯಿ ಕಟ್ಟಿಹೋಗುತ್ತಿತ್ತು. ರಾಲಿ ಸದ್ದಿಲ್ಲದೆ ನಿಂತುಹೋಗುತ್ತಿತ್ತು. ಅಷ್ಟರ ಹೊರತಾಗಿಯೂ ಅವರು ಹೋಗಿದ್ದರೆ ದೇಶಕ್ಕೆ ನಷ್ಟವೇನೂ ಆಗುತ್ತಿರಲಿಲ್ಲ ಬಿಡಿ. ಪ್ರತ್ಯೇಕತೆಯ ಕೂಗು ಭಾರತಕ್ಕೆ ಹೊಸದಲ್ಲ. ನಾಗಾಲ್ಯಾಂಡ್, ಆಸ್ಸಾಂ, ಮಿಜೋರಾಂ, ತಮಿಳುನಾಡು, ಪಂಜಾಬ ಕೂಡ ಪ್ರತ್ಯೇಕವಾಗಬಯಸಿದ್ದವು. ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅವಕ್ಕೆಲ್ಲ ಒಂದು ಪರಿಹಾರ ಕಂಡುಕೊಂಡಿದೆ. ಆ ಮೂಲಕ ಏಕಾಗ್ರತೆ ಉಳಿಸಿಕೊಂಡು, ಅವರನ್ನೂ ದೇಶದೊಳಗೊಂದಾಗಿಸಿದೆ. ಕ್ರೂರ, ಅತಿಕ್ರೂರವಾಗಿ ಶಕ್ತಿಯ ಬಳಕೆ, ಪ್ರತ್ಯೇಕತಾವಾದಿ ನಾಯಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಉದಾರ ಅನುದಾನ ಹೀಗೆ ೩ ವಿಧಾನಗಳ ಮೂಲಕ ಪ್ರತ್ಯೇಕತೆಯ ಸದ್ದಡಗಿಸಲಾಗಿದೆ. ಇದರ ಪರಿಣಾಮ ನಾಗಾಗಳು ಕೂಡ ಈಗ ರಾಜ್ಯದ ಗಡಿ ವ್ಯತ್ಯಾಸಕ್ಕೆ ಹೋರಾಟ ಸೀಮಿಗೊಳಿಸಿದ್ದಾರೆ. ತಮಿಳುನಾಡಿನ ಹಿಂದಿ ವಿರುದ್ಧದ ಪ್ರತಿಭಟನೆ ಈಗ ಮಸುಕು ನೆನಪು ಮಾತ್ರ. ಆದರೆ ಕಾಶ್ಮೀರ? ಊಹುಂ. ಕೇಂದ್ರ ಉದಾರವಾಗಿ ಹಣ ನೀಡಿದೆ. ವಾರ್ಷಿಕ ಅನುದಾನದ ಜತೆಗೆ ೨೦೦೪ರಲ್ಲಿ ೫೦,೦೦೦ ಕೋಟಿ ವಿಶೇಷ ಅನುದಾನ ನೀಡಿದೆ. ವಿಶೇಷ ಸ್ಥಾನಮಾನ ಮೊದಲಿಂದಲೂ ಇದೆ. ಎಲ್ಲವನ್ನೂ ಪಡೆದು ಅನುಭವಿಸುತ್ತಲೇ ಕಾಶ್ಮೀರಿಗಳು ರಾಜಕೀಯ ಸ್ವಾತಂತ್ರ್ಯ ಇಲ್ಲ ಎಂದರು. ಅದನ್ನೂ ಕೊಡಲಾಯಿತು. ೨೦೦೪ರಲ್ಲಿ ವಿಶ್ವವೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಚುನಾವಣೆಯೂ ನಡೆಯಿತು. ಇದಕ್ಕಿಂತ ಹೆಚ್ಚಿನದೇನನ್ನು ಕೊಡಲು ಸಾಧ್ಯ? ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಇದೆಲ್ಲ ದಕ್ಕಿದೆಯೇನು?ಆದರೂ ಕಾಶ್ಮೀರಿಗಳಿಗೆ ಸಮಾದಾನವಿಲ್ಲ. ಅಮರನಾಥ ದೇವಸ್ಥಾನ ಮಂಡಳಿಗೆ ಭೂಮಿ ಕೊಟ್ಟಿದ್ದನ್ನೆ (ಪುಕ್ಕಟೆ ಕೊಟ್ಟಿದ್ದೂ ಅಲ್ಲ) ನೆಪಮಾಡಿ ದೊಡ್ಡ ಗಲಾಟೆ ಎಬ್ಬಿಸಿದರು. ಅವರ ೨ ದಿನದ ಪ್ರತಿಭಟನೆಗೆ ಹೆದರಿದ ಸರಕಾರ ಭೂಮಿ ಹಿಂಪಡೆಯಿತು. ಅಲ್ಲಿಗೆ ಕಾಶ್ಮೀರಿಗಳ ಪ್ರತಿಭಟನೆ ನಿಲ್ಲಬೇಕಿತ್ತು. ಹಾಗಾಗಲಿಲ್ಲ. ಈಗ ಅಮರನಾಥ ಭೂ ವಿವಾದ ಕಾಶ್ಮೀರಿಗರ ಬೇಡಿಕೆಯಾಗಿ ಉಳಿದಿಲ್ಲ. ಅವರದ್ದು ಮತ್ತದೇ ಪ್ರತ್ಯೇಕತೆಯ ಕೂಗು. ಕಾಶ್ಮೀರ ಭಾರತದ ತಲೆ ಇದ್ದಂತೆ ಎಂದು ಅದ್ಯಾವ ಮಹಾನುಭಾವರು ಹೇಳಿದರೋ? ಕಾಶ್ಮೀರ ಸದಾ ದೇಶಕ್ಕೆ ತಲೆನೋವಾಗೇ ಉಳಿದಿದೆ. ಇನ್ನೂ ಎಷ್ಟು ದಿನ ಅದನ್ನು ಸಹಿಸಿಕೊಳ್ಳುವುದು? ಇನ್ನೆಷ್ಟು ವರ್ಷ ವಿಶೇಷ ರಾಜ್ಯದ ಕಿರೀಟ ತೊಡಿಸುವುದು? ಅಥವಾ ದೇಶವಿರುವಷ್ಟು ಕಾಲವೂ ಕಾಶ್ಮೀರ ವಿಶೇಷ ರಾಜ್ಯವಾಗೇ ಉಳಿಯಬೇಕೇ? ವಿಶೇಷ ರಾಜ್ಯ ಎಂಬ ನೆಪದಲ್ಲಿ ಕಾಶ್ಮೀರಕ್ಕೆ ಸಿಗುವ ಸವಲತ್ತುಗಳನ್ನು ನೋಡಿದರೆ ಎಲ್ಲ ರಾಜ್ಯಗಳು `ನಮ್ಮನ್ನೂ ವಿಶೇಷ ರಾಜ್ಯ ಎಂದು ಘೋಷಿಸಿ' ಎಂದು ಹೋರಾಟ ಆರಂಭಿಸುವ ಅಪಾಯವಿದೆ. ಭಾರತದೊಂದಿಗೆ ಸೇರಿದ ೬೧ ವರ್ಷಗಳ ನಂತರವೂ ಕಾಶ್ಮೀರದ ಜನ ಭಾರತದೊಂದಿಗೆ ಮಾನಸಿಕವಾಗಿ ಬೆರೆತೇ ಇಲ್ಲ. (ಭಾರತದ ಪರವಾಗಿದ್ದ ಪಂಡಿತರನ್ನೆಲ್ಲ ಅಲ್ಲಿಂದ ಓಡಿಸಲಾಗಿದೆ ಬಿಡಿ) ಅದೆಲ್ಲಕ್ಕಿಂತ ಹೆಚ್ಚಾಗಿ ಅವರು ಪ್ರತ್ಯೇಕತೆಯ ಅಸ್ತ್ರವನ್ನು ದೇಶವನ್ನು ಹೆದರಿಸಲೆಂದೇ ಬಳಸಿಕೊಂಡುಬಂದಿದ್ದಾರೆ.`ಸಣ್ಣ ಮಕ್ಕಳು ಆಟವಾಡುವಾಗ ನೀನು ಹಂಗೆಲ್ಲ ಮಾಡಿದರೆ ನಾನು ಬರಲ್ಲ ಅಂತ ಮುಖ ತಿರುಗಿಸುತ್ತಾರಲ್ಲ, ವಯಸ್ಸಿಗೆ ಬಂದ ಮಗ ಅಪ್ಪನನ್ನು ಮನೆ ಬಿಟ್ಟುಹೋಗುತ್ತೇನೆಂದು ಹೆದರಿಸುತ್ತಾನಲ್ಲ ಹಾಗೆ... ಕಾಶ್ಮೀರಿಗಳು ಭಾರತದೊಂದಿಗಿದ್ದೇ ಸುಖವಾಗಿದ್ದಾರೆ. ಹಾಗೊಮ್ಮೆ ಅವರು ಸುಖವಾಗಿಲ್ಲವಾಗಿದ್ದರೆ ಹಿಂಸೆಗೆ ಹೆದರಿ ಪಂಡಿತರು ಕಾಶ್ಮೀರ ತೊರೆದಂತೆ ಅವರೂ ಕಾಶ್ಮೀರ ಬಿಟ್ಟು ಹೋಗುತ್ತಿದ್ದರು. ಪಾಕ್ ಆಕ್ರಮಿತ ಕಾಶ್ಮೀರದ ಸ್ಥಿತಿ ನೋಡಿ ಪಾಕಿಸ್ತಾನಕ್ಕೆ ಸೇರಿದರೆ ಏನಾಗುತ್ತದೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಾಗಿ ಪಾಕಿಸ್ತಾನ ಸೇರುವುದು ಇಷ್ಟವಿಲ್ಲ. ಸ್ವತಂತ್ರ್ಯ ರಾಷ್ಟ್ರ ಅನ್ನುತ್ತಾರೆ. ಒಂದೊಮ್ಮೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಟ್ಟರೆ ಪಾಕಿಸ್ತಾನ ಅದನ್ನು ಬಿಟ್ಟೀತೇ? ಹಾಗೊಮ್ಮೆ ಬಿಟ್ಟರೂ ಒಂದು ರಾಷ್ಟ್ರವಾಗಿ, ಪ್ರಜೆಗಳು ಸುಖವಾಗಿ ಬದುಕುವ ರಾಷ್ಟ್ರವಾಗಿ ಉಳಿಯಲು ಸಾಧ್ಯವಾದೀತೇ? ಇದೆಲ್ಲ ಆಗದ ಮಾತು ಎಂಬುದು ಕಾಶ್ಮೀರಿಗಳಿಗೂ ಗೊತ್ತಿದೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ `ಪ್ರತ್ಯೇಕತೆಯ ಕೂಗು ಕ್ಷೀಣಿಸುತ್ತದೆ. ಸ್ವತಂತ್ರ್ಯ ರಾಷ್ಟ್ರವಾಗಿ ಉಳಿಯುವುದು ಸಾಧ್ಯವಿಲ್ಲ. ಮಾತುಕತೆ, ಹೊಂದಾಣಿಕೆಯಲ್ಲಿ ಮುಕ್ತಾಯವಾಗಲಿದೆ' ಎಂದು ಹೇಳಿರುವುದು ಇದಕ್ಕೆ ಸಾಕ್ಷಿ. ಆದರೇನು ಮಾಡುವುದು ಅವರಿಗೆ ಹಠ ಮಾಡಿ ರೂಢಿಯಾಗಿದೆ. ಕೆಲವು ಮಕ್ಕಳು ರಚ್ಚೆ ಹಿಡಿಯುತ್ತಾರಲ್ಲ ಹಾಗೆ. ಆಗಾಗ ನಾವು ಪಾಕಿಸ್ತಾನಕ್ಕೆ ಸೇರುತ್ತೇವೆ ಅನ್ನುವುದು. ಸ್ವಾತಂತ್ರ್ಯ ಕೊಡಿ ಅನ್ನುವುದು. ಅದಕ್ಕೆ ಹೆದರಿ ದಿಲ್ಲಿ ದೊರೆಗಳು ಕೊಡುವ ವಿಶೇಷ ಕೊಡುಗೆ ಸ್ವೀಕರಿಸಿ ಸುಮ್ಮನಾಗುವುದು. ಅವರಿಗೆ ಹಠ ಮಾಡುವ ಚಟ, ಇವರಿಗೆ ಸಮಾದಾನ ಮಾಡುವ ಸಂಭ್ರಮ! ಸಾಕು, ಇಷ್ಟು ವರ್ಷ ಅವರನ್ನು ವಿಶೇಷವಾಗಿ ಸಲಹಿದ್ದು ಸಾಕು. ಸ್ವಾತಂತ್ರ್ಯ ಬಂದಾಗ, ಅದ್ಯಾವುದೋ ಅನಿವಾರ್ಯ ಸ್ಥಿತಿಯಲ್ಲಿ ಭಾರತಕ್ಕೆ ಸೇರಿದಾಗ ಇದ್ದ ಜನಾಂಗ ಈಗಿಲ್ಲ. ಈಗ ಕಾಶ್ಮೀರದಲ್ಲಿರುವುದು ಹೊಸ ಜನಾಂಗ. ಚಾನಲ್‌ಗಳಲ್ಲಿ ನೋಡಿದರೆ ೧೫-೪೦ ವರ್ಷದವರೇ ಪ್ರತಿಭಟನೆಗಳಲ್ಲಿ ಕಾಣಸಿಗುತ್ತಾರೆ. ಅಂದರೆ ಅವರು ಹುಟ್ಟಾ ಭಾರತೀಯರು. ಭಾರತಕ್ಕೆ ಕಾಶ್ಮೀರ ಸೇರುವಾಗ ಇದ್ದ ಜನರಿಗೆ ವಿಶೇಷ ಸೌಲಭ್ಯಗಳನ್ನು ಕೊಡುವುದು ನ್ಯಾಯಯುತ. ಒಪ್ಪಿಕೊಳ್ಳೋಣ. ಈಗಿನವರಿಗೂ ಅದನ್ನು ನೀಡುವ ಅಗತ್ಯ ಖಂಡಿತ ಇಲ್ಲ. ಕಾಶ್ಮೀರ ವಿಶೇಷ ರಾಜ್ಯವಾಗಿ ಮೆರಿದಿದ್ದು ಸಾಕು. ಅದನ್ನೂ ದೇಶದ ಇತರ ರಾಜ್ಯಗಳಂತೆ ಪರಿಗಣಿಸುವತಾಗಲಿ. ಅವರೂ ನಮ್ಮ ಹಾಗೆ ಹೊಂಡದಿಂದ ಕೂಡಿದ, ರಸಗೊಬ್ಬರ ಸಿಗದ, ನಮ್ಮ ರಾಜ್ಯಗಳಷ್ಟೇ ಅನುದಾನ ಪಡೆಯುವ, ದಕ್ಕಬೇಕಾದ್ದನ್ನೂ ಹೋರಾಟ ಮಾಡಿಯೇ ದಕ್ಕಿಸಿಕೊಳ್ಳಬೇಕಾದ ಸ್ಥಿತಿ ಅನುಭವಿಸಲಿ. ಆಗ ಅವರ ಹಠ ಕಡಿಮೆಯಾದೀತು. ಬಗ್ಗಿದವನ ಬೆನ್ನಿಗೊಂದು ಗುದ್ದು ಎಂದು ಹಳೇ ಮಾತಿದೆ. ಹಾಗೆ ದಿಲ್ಲಿಯಲ್ಲಿನ ಕೇಂದ್ರ ಸರಕಾರಗಳು ಕಾಶ್ಮೀರಿಗಳ ಎದುರು ಬಗ್ಗಿದ್ದಷ್ಟೇ ಅಲ್ಲ ಕುಕ್ಕುರುಗಾಲಿನಲ್ಲಿ ಕುಳಿತಿದೆ. ಅದಕ್ಕೇ ಅವರು ಆಗಾಗ ಗುದ್ದುತ್ತಿರುತ್ತಾರೆ. ಕೇಂದ್ರ ಸರಕಾರ ಸೆಟೆದು ನಿಂತುಕೊಳ್ಳಲಿ. ದೇಶದ ಮುಸ್ಲಿಮರಿಗೆಲ್ಲಿ ಬೇಸರವಾಗುತ್ತದೋ ಎಂದು ಅಂಜುವ ಅಗ್ಯವಿಲ್ಲ. ಯಾಕೆಂದರೆ ಕಾಶ್ಮೀರಿ ಮುಸ್ಲಿಮರ ಬಗ್ಗೆ ದೇಶದ ಇತರೆಡೆಯ ಮುಸ್ಲಿಮರೇನು ವಿಶೇಷ ಒಲವು ಹೊಂದಿಲ್ಲ. ಇದು ಮೊದಲು ಮತ್ತು ಈಗ ಸಾಬೀತಾಗಿದೆ. ಹಾಗಾಗಿ ಕೇಂದ್ರ ಸರಕಾರ ಧೈರ್ಯದಿಂದ ಈ ನಿರ್ಧಾರ ತೆಗೆದುಕೊಳ್ಳಬಹುದು. ಇಷ್ಟೆಲ್ಲ ಆದ ನಂತರವೂ ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಮುಂದುವರಿಸಿದರೆ, ವಿಶೇಷ ಸ್ಥಾನಮಾನದ ಆಸೆಗಾಗಿ ಪ್ರತ್ಯೇಕತೆಯ ಪೀಪಿ ಮೊಳಗಿಸುವಂತೆ ಇತರೆ ರಾಜ್ಯಗಳಿಗೆ ನಾವೇ ಪ್ರೋತ್ಸಾಹ ನೀಡಿದಂತಾಗುತ್ತದೆ. Posted by ವಿನಾಯಕ ಭಟ್ಟ at 9:05 PM 3 comments: Tuesday, October 14, 2008 ನನಗೆ ಅಂಥ ಪಿಚ್ಚರುಗಳೇ ಯಾಕೆ ಇಷ್ಟವಾಗುತ್ತವೆ? ಅಬ್‌ತಕ್ ಚಪ್ಪನ್, ರಿಸ್ಕ್, ಶೂಟ್‌ಔಟ್ ಎಟ್ ಲೋಖಂಡ್ವಾಲಾ, ಎ ವೆನ್ಸಡೆ, ಗಂಗಾಜಲ್... ಓಹ್! ಗಂಗಾಜಲ್, ಅಬ್ತಕ್ ಚಪ್ಪನ್ ಪಿಚ್ಚರ್ಗಳನ್ನು ಹಲವು ಬಾರಿ ನೋಡಿದ್ದೇನೆ. ನೀವು ಇನ್ನೊಮ್ಮೆ ತೋರಿಸಿದರೂ ಮೊದಲ ಸಾರಿ ನೋಡಿದಾಗಿನಿಗಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನನಗೆ ಇಷ್ಟವಾಗೋ ಪಿಚ್ಚರ್(ಸಿನಿಮಾ)ಗಳ ಲೀಸ್ಟು ನೋಡಿದರೆ ಎಲ್ಲವೂ ಒಂದೇ ಥರದವು. ಅವುಗಳ ಕತೆ, ಅಲ್ಲಿನ ತಿರುವುಗಳಲ್ಲಿ ವ್ಯತ್ಯಾಸ ಇದೆಯಾದರೂ ಹೆಚ್ಚಿನವೆಲ್ಲ ಪೊಲೀಸರಿಗೆ ಸಂಬಂಧಿಸಿದ ಕತೆಗಳು. ಅದರಲ್ಲೂ ನಿಯತ್ತಿನ, ಧಕ್ಷ ಪೊಲೀಸ್ ಅಧಿಕಾರಿಗಳ ಕತೆಗಳು. ಒಳ್ಳೆ ಪೊಲೀಸರ ಕತೆಗಳು! ಒಂದು ಕಾಲದಲ್ಲಿ ಪೊಲೀಸರು ಅಂದರೆ ಕೆಟ್ಟವರು. ಎಲ್ಲ ಮುಗಿದ ಮೇಲೆ ಬರುವವರು. ಲಂಚ ತಿನ್ನುವವರು. ಖಾಕಿ ಧಾರಿ ಗೂಂಡಾಗಳು ಎಂದು ಬಿಂಬಿಸುವ ಪಿಚ್ಚುಗಳೇ ಬರುತ್ತಿದ್ದವು. ಅವುಗಳನ್ನೂ ನೋಡಿದ್ದೇನೆ. ಈಗಿನ ಪೊಲೀಸ್ ಪರ ಪಿಚ್ಚರ್ ಗಳನ್ನೂ ನೋಡುತ್ತಿದ್ದೇನೆ. ಚಿಕ್ಕನಿರುವಾಗ ನನ್ನ ಫೇವರಿಟ್ ಹೀರೊ ದೇವರಾಜ್! ಯಾಕೆಂದರೆ ಆತ ದಕ್ಷ ಪೊಲೀಸ್ ಅಧಿಕಾರಿಗಳ ಪಾತ್ರ ಮಾಡುತ್ತಿದ್ದ. ಒರಿಜಿನಲ್ ಸಾಂಗ್ಲಿಯಾನಾ ಇಷ್ಟವಾಗದಿದ್ದರೂ ಶಂಕರ್‌ನಾಗ್‌ನ ಎಸ್ಪಿ ಸಾಂಗ್ಲಿಯಾನಾ ಪಿಚ್ಚರ್ ಇಷ್ಟವಾಗಿತ್ತು! ನಂತರ ಸಾಯಿಕುಮಾರ್ ಬಂದ. ಪೊಲೀಸ್‌ಸ್ಟೋರಿ ಮೂಲಕ ಇಷ್ಟವಾದ. ಈಗಲ್ಲ. ಚಿಕ್ಕವನಿರುವಾಗಿನಿಂದಲೂ ನನಗೆ ಪೊಲೀಸರ ಕತೆಯ ಪಿಚ್ಚರ್‌ಗಳೆಂದರೆ ಇಷ್ಟ. ಕೊಂಚ ಮಟ್ಟಿಗೆ ಭೂಗತಲೋಕದ ಕತೆಗಳು ಕೂಡ! ಸೈನಿಕರ ಕತೆಗಳು ಇಷ್ಟವಾಗುತ್ತವಾದರೂ ಪೊಲೀಸರ ಕತೆಗಳಷ್ಟು ಅವು ನನ್ನನ್ನು ಸೆಳೆಯಲಿಲ್ಲ. ಮನಸಲ್ಲಿ ನಿಲ್ಲಲಿಲ್ಲ. ಯಾಕೆ? ನಾನಗೆ ಪೊಲೀಸ್ ಆಗಬೇಕೆಂಬ ಆಸೆ ಇದ್ದದ್ದಕ್ಕಾ? ಆ ಮೂಲಕ ಸಮಾಜಕ್ಕೆ ಒಂದಷ್ಟಾದರೂ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದಕ್ಕಾ? ಸೈನಿಕನಾಗಿ ಹೊರಗಿನ ಶತ್ರುಗಳ ವಿರುದ್ಧ ಹೋರಾಡುವುದಕ್ಕಿಂತ ಪೊಲೀಸ್ ಅಧಿಕಾರಿಯಾಗಿ ದೇಶದೊಳಗಿನ ಶತ್ರುಗಳ ವಿರುದ್ಧ ಹೋರಾಡುವ ಮನಸ್ಸಿದ್ದಿದ್ದಕ್ಕಾ? ಅಥವಾ ಇಂಥ ಪಿಚ್ಚರ್ ನೋಡಿಯೇ ನಾನೂ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಆಗಬೇಕು ಅನ್ನಿಸಿತಾ? ಇವತ್ತಿಗೂ ನನಗೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ನಾನು ಒಬ್ಬ ಒಳ್ಳೆ ಪೊಲೀಸ್ ಅಧಿಕಾರಿಯಾಗಬೇಕು ಅದುಕೊಂಡಿದ್ದು ಸತ್ಯ. ಹಲವು ಕಾರಣಗಳು. ಅದಾಗಲಿಲ್ಲ. ಬದಲಾಗಿ ಪತ್ರಕರ್ತನಾದೆ. ಈ ಮೂಲಕವೂ ಸಮಾಜಕ್ಕೆ ಸೇವೆ ಸಲ್ಲಿಸಬಹುದಲ್ಲ ಎಂಬ ಸಮಾದಾನ. ಅಷ್ಟೇ ಅಲ್ಲ ಕ್ರೈಂ ವರದಿಗಾರನೂ ಆದೆ. ಆ ಮೂಲಕ ಮತ್ತೆ ನನಗಿಷ್ಟವಾದ ಪೊಲೀಸ್ ಇಲಾಖೆ ಸಂಪರ್ಕ ಪಡೆದೆ. ಒಳ್ಳೆ ಅಧಿಕಾರಿಗಳ ಪರಿಚಯವಾಯಿತು. ಹೆಸರು ಬರೆಯುತ್ತ ಹೋದರೆ ಸಾಕಷ್ಟಿದೆ. ಹಾಗೆ ಬರೆದರೂ ಅವರಿಗೂ ಹಾನಿ! ಅಂತೂ ಒಳ್ಳೆ ಅಧಿಕಾರಿಗಳ ಪರಿಚಯವೇ ಆಯಿತು. ಯಾರಿಗೂ ಗೊತ್ತಾಗದ ಅದೆಷ್ಟೋ ಸಂಗತಿಗಳು ಕಿವಿಗೆ ಬೀಳತೊಡಗಿದವು. ಕಿವಿಗೆ ಬಿದ್ದಿದ್ದು ಕಣ್ಣಿಗೂ ಕಂಡವು. ಏನೇ ಹೇಳಿ ನನಗಂತೂ ಸಾಕಷ್ಟು ಒಳ್ಳೆ ಅಧಿಕಾರಿಗಳೇ ಕಂಡರು. ಅಥವಾ ನನ್ನ ಮನಸ್ಸಲ್ಲಿ ಒಳ್ಳೆಯದೇ ಇದ್ದಿದ್ದಕ್ಕೆ ಅವರಲ್ಲಿದ್ದ ಒಳ್ಳೆಯದನ್ನಷ್ಟೇ ಕಂಡೆನೊ? ಕೆಲವು ವಿಷಯದಲ್ಲಿ ಪತ್ರಕರ್ತನಾಗಿ ಅವರಿಗೆ ಸಹಾಯವನ್ನೂ ಮಾಡಿದೆ. ಆ ಮೂಲಕ ಸಮಾಜಕ್ಕೂ ಅಂತ ಅಂದುಕೊಂಡೆ. ಈಗಲೂ ಅವರೊಂದಿಗೆ ಗೆಳತನ ನನಗಿಷ್ಟ. ಇಂದಿಗೂ ಅದೆಷ್ಟೋ ಒಳ್ಳೆ ಅಧಿಕಾರಿಗಳಿದ್ದಾರೆ. ಅವರನ್ನೆಲ್ಲ ಅರ್ಧ ಹಾಳು ಮಾಡುತ್ತಿರುವವರು ನಮ್ಮ ರಾಜಕಾರಣಿಗಳು. ಅವರ ಲಾಭಕ್ಕೆ ಪೊಲೀಸರು ದಾಳಗಳು. ಸಾರ್ವಜನಿಕರು ನಡೆಸುವ ಕಾಯಿಗಳು. ಕಾನೂನು ಮುರಿಯುವವನಿಗೆ ಯಾವುದೂ ಇಲ್ಲ. ಅದೇ ಕಾನೂನು ಪಾಲಕರು ಸಮಾಜದ ಒಳ್ಳೆಯದಕ್ಕೆ ಎನ್‌ಕೌಂಟರ್ ನಡೆಸಿದರೆ ಮಾನವ ಹಕ್ಕು ನಾಶವಾದ ಬಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ! ಕಾನೂನು ಪಾಲಿಸದೆ ಸಮಾಜಕ್ಕೆ ಕೆಡುಕುಂಟು ಮಾಡುವವನ ನಾಶಕ್ಕೆ ಕಾನೂನು ಪಾಲಕರು ಕೊಂಚ ಕಾನೂನು ಬಿಟ್ಟು ಹೋದರೆ ತಪ್ಪೇನು? ನಿಮಗೆ ನೆನಪಿರಬಹುದು, ಶೂಟೌಟ್ ಎಟ್ ಲೋಖಂಡ್ವಾಲಾದಲ್ಲಿ ಪ್ರಕರಣದ ತನಿಖೆ ನಡೆಸುವ ನ್ಯಾಯಾಧೀಶರ ಬಳಿ ಅಮಿತಾಬ್ ಕೊನೆಯಲ್ಲೊಂದು ಪ್ರಶ್ನೆ ಕೇಳುತ್ತಾನೆ... ನೀವು ನ್ಯಾಯಾಲಯದಲ್ಲಿದ್ದೀರಿ. ಹೆಂಡತಿ- ಮಕ್ಕಳು ಮನೆಯಲ್ಲಿದ್ದಾರೆ. ಒಬ್ಬ ವ್ಯಕ್ತಿ ನಿಮ್ಮ ಮನೆಯ ಹೊರಗೆ ಪಿಸ್ತೂಲ್ ಹಿಡಿದು ನಿಂತಿದ್ದಾನೆ. ಆತ ಪೊಲೀಸ್ ಆಗಿರಲಿ ಎಂದು ಬಯಸುತ್ತೀರೊ? ಗೂಂಡಾ ಆಗಿರಲಿ ಎಂದು ಬಯಸುತ್ತೀರೊ? ಸಹಜ. ಆತ ಪೊಲೀಸ್ ಆಗಿರಲಿ ಎಂದೇ ಬಯಸುತ್ತೇವೆ. ಎಲ್ಲದಕ್ಕೂ ಉತ್ತರ ಅಲ್ಲಿಯೇ ಇದೆ. ಎಷ್ಟೇ ಕೆಟ್ಟವರಿರಲಿ, ಪೊಲೀಸರಿಗೆ ಕಾನೂನಿನ ತಡೆಯಿರುತ್ತದೆ. ಆತನನ್ನು ನಿಯಂತ್ರಿಸುವುದು ಕಷ್ಟವಲ್ಲ. ಆದರೆ ಕಾನೂನೇ ಇಲ್ಲದ ಗೂಂಡಾಗಳು ಹಾಗಲ್ಲ. ದುರತವೆಂದರೆ ಅಂಥವರು ಈಗ ಖಾದಿ ಧರಿಸಿ, ನಮ್ಮನ್ನೇ ಆಳುವಂತಾಗಿದ್ದಾರೆ! ಅದೇನು ನಾನು ಬೆಳೆದ ವಾತಾವರಣವೋ? ನನ್ನಪ್ಪ-ಅಮ್ಮ ನೀಡಿದ ಸಂಸ್ಕಾರವೋ? ಅಥವಾ ಅವರೇ ಸ್ವತಃ ನಿಯತ್ತಿನಿಂದ, ಭಾರತದ ಉತ್ತಮ ಪ್ರಜೆಗಳಾಗಿರುವುದೋ? ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಲಂಚ, ಅನ್ಯಾಯ ವಿರೋಧಿ ಮನಸ್ಸು ರೂಪುಗೊಂಡುಬಿಟ್ಟಿದೆ. ಇವತ್ತಿಗೂ ಅನ್ಯಾಯ, ಲಂಚ ಕಂಡರೆ ಅದು ಸಹಿಸದು. ಎಲ್ಲ ಕಡೆ ಲಂಚ ಇದೆ ಅಂತ ಅನ್ನಿಸಿದರೂ ನಾನು ಇವತ್ತಿನವರೆಗೆ ಯಾರಿಗೂ ಲಂಚಕೊಟ್ಟಿಲ್ಲ. ಪತ್ರಕರ್ತನಾಗಿಯೂ, ದೊಡ್ಡ ಪೊಲೀಸ್ ಅಧಿಕಾರಿಗಳ ಪರಿಚಯವಿದ್ದೂ ಪೊಲೀಸರಿಗೆ ದಂಡ ಕಟ್ಟಿದ್ದೇನೆ. ಲಂಚಕೊಟ್ಟಿಲ್ಲ. ಇವತ್ತಿಗೂ ನನಗೆ ಲಂಚಕೋರರನ್ನು, ಕೊಳಕು ರಾಜಕಾರಣಿಗಳನ್ನು ಕಂಡರೆ ಎಲ್ಲಿಲ್ಲದ ದ್ವೇಷ. ಅಂಥವರ ವಿರುದ್ಧ ಬರೆಯಲು ಸಿಕ್ಕ ಒಂದು ಅವಕಾಶವನ್ನೂ ನಾನು ಇವತ್ತಿನವರೆಗೆ ಸುಮ್ಮನೆ ಬಿಟ್ಟಿಲ್ಲ. ನನಗೆ ಅವರ ಮೇಲೆ ಸೇಡು ತೀರಿಸಿಕೊಳ್ಳು ಕಾನೂನು ಬದ್ಧವಾಗಿರುವ ಮಾರ್ಗ ಅದು. ಎಲ್ಲರೂ ಕಳ್ಳರು. ಲಂಚ ಎಲ್ಲೆಲ್ಲೂ ಆವರಿಸಿದೆ ಅಂತ ಎಷ್ಟೇ ಅಂದರೂ ನನಗೆ ಈಗಲೂ ನಂಬಿಕೆಯಿದೆ. ಅದೇನೆಂದರೆ ಇವತ್ತಿಗೂ ನಿಯತ್ತಿನ ಜನ ಇದ್ದಾರೆ. ಧಕ್ಷ ಅಧಿಕಾರಿಗಳಿದ್ದಾರೆ. ರಾಜಕಾರಣಿಗಳೂ! ಸಂಖ್ಯೆ ಕಡಿಮೆ ಇರಬಹುದು. ಹೆಚ್ಚಿದ್ದರೂ ನಮಗೆ ಕಡಿಮೆ ಅನ್ನಿಸಬಹುದು. ಅವರಿಗೆ ಕೆಟ್ಟವರು ಕಿರಿಕಿರಿ ನೀಡಬಹುದು. ಅದೇನಾದರೂ ಇರಲಿ. ನಾವು ನಮ್ಮಷ್ಟಕ್ಕೆ ನಿಯತ್ತಿನಿಂದ ಇರಬೇಕು. ಇಲ್ಲಿದ್ದುಕೊಂಡೇ ಕೈಲಾದಷ್ಟು ಬದಲಾವಣೆ ಮಾಡಬಹುದು ಅಥವಾ ನಿಯತ್ತು ಇನ್ನಷ್ಟು ಕೆಡದಂತೆ, ಭಷ್ಟತೆ ಹರಡದಂತೆ ತಡೆಯಬಹುದು. ನಾವು ಮಾಡಬೇಕಾದ್ದಿಷ್ಟೆ, ನಾವು ನಿಯತ್ತಿನಿಂದಿರಬೇಕು. ಲಂಚ ಕೊಡಬಾರದು. ನಮ್ಮ ಮಕ್ಕಳೂ ನಿಯತ್ತಾಗಿ ಭಾರತದ ಉತ್ತಮ ಪ್ರಜೆಯಾಗುವಂತೆ ನೋಡಿಕೊಳ್ಳಬೇಕು. ಅಷ್ಟು ಸಾಕು. ಅದೇ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ. ಅದಕ್ಕಾಗಿ ನಮಗೆ ಯಾರೂ ಭಾರತ ರತ್ನ ಪ್ರಶಸ್ತಿ ನೀಡಬೇಕಿಲ್ಲ. ಯಾರೂ ನಮ್ಮನ್ನು ಗುರುತಿಸಬೇಕಾಗಿಯೂ ಇಲ್ಲ. (ವಿ.ಸೂ: ಇವತ್ತು (೧೪-೧೦-೦೮) ರಾತ್ರಿ ಯುಟಿವಿಯಲ್ಲಿ ರಿಸ್ಕ್ ಸಿನಿಮಾ ನೋಡ್ತಾ ಇದ್ದೆ. ನನಗೆ ಪೊಲೀಸ್ ಸಿನಿಮಾಗಳು ಇಷ್ಟವಾಗುವ ಬಗ್ಗೆ ಯಾಕೊಂದು ಚಿಕ್ಕ ಬರಹ ಬ್ಲಾಗಿಸಬಾರದು ಅನ್ನಿಸಿತು. ಪಿಚ್ಚರ್‌ನೋಡುತ್ತ, ಜಾಹೀರಾತು ಬಂದಾಗ ಬರೆಯುತ್ತ ಹೋದೆ. ಪಿಚ್ಚರ್ ಬಗ್ಗೆ ಬರೆಯಬೇಕು ಅದುಕೊಂಡು ಹೊರಟವ, ಅದು ಎಲ್ಲಿಗೋ ಹೋಯಿತು. ತುಂಬ ಸೀರಿಯಸ್ ಅನ್ನಿಸಿ ಬೋರು ಹೊಡೆಸಿದ್ದರೆ, ಬಯ್ಯಬೇಡಿ. ಬರೆಯುತ್ತ ನನ್ನ ಬಗ್ಗೇ ಹೆಚ್ಚು ಹೊಗಳಿಕೊಂಡಿದ್ದೇನೆ ಅನ್ನಿಸಿದರೆ ಕ್ಷಮಿಸಿ. ನಿಯತ್ತಿನ ಮನುಷ್ಯನಾಗಿ ನನಗಷ್ಟು ನೈತಿಕ ಅಧಿಕಾರ ಇದೆ ಅಂದುಕೊಳ್ಳುತ್ತೇನೆ.) Posted by ವಿನಾಯಕ ಭಟ್ಟ at 11:42 PM 5 comments: Monday, October 13, 2008 ಆಹಾ ಮಿಥುನನ ಮದ್ವೆಯಂತೆ! ನಾನು ಕರ್ನಾಟಕದಲ್ಲೇ ಇದ್ದಿದ್ದರೆ ಇವತ್ತು ಹೋಗಲೇ ಬೇಕಿತ್ತು. ಆದರೆ ದೂರದ ದಿಲ್ಲಿಯಲ್ಲಿದ್ದೇನಲ್ಲಾ. ನನ್ನ ಆತ್ಮೀಯ ಗೆಳೆಯ ಮಿಥುನನ ಮದುವೆ ಇವತ್ತು. ನನ್ನ ಪರವಾಗಿ ನನ್ನ ಹೆಂಡತಿ ಹೋಗಿ ಬಂದಳು. ಆದರೆ ನಾನು ಮಿಸ್! ಮಿಥುನ್ ಸದಾ ಚಟುವಟಿಕೆಯ ಹುಡುಗ. ಅದಕ್ಕೆ ತಕ್ಕಂತೆ ಗಡಿಬಿಡಿ. ಫೋನು ಮಾಡಿದರೆ ಕಟ್ ಮಾಡುವ ಬಟನ್ ಮೇಲೆ ಬೆರಳಿಟ್ಟೇ ಮಾತನಾಡುತ್ತಾನೆ. ಕಿನ್ನಿಗೋಳಿಯಂತಹ ಸಣ್ಣ ಊರಲ್ಲಿ ಕುಳಿತು ದೊಡ್ಡ ದೊಡ್ಡ ವಿಷಯಗಳ ಬೆನ್ನುಹತ್ತುತ್ತಾನೆ. ತುಂಬ ಚುರುಕು. ಅಸೂಯೆಯಾಗುವಷ್ಟು! ಆದರೆ ಆತ ನನ್ನ ಲೇಖನ ಪತ್ರಿಕೆಯಲ್ಲಿ ಬಂದಾಗೆಲ್ಲ ಉರಿದುಕೊಳ್ಳುತ್ತಿರುತ್ತಾನೆ. ಬೆಳ್ಳಂಬೆಳಗ್ಗೆ ಆತನ ಮಿಸ್ ಕಾಲ್ ಬಂದಿದೆ ಎಂದರೆ ಆ ದಿನ ನನ್ನ ಲೇಖನ ಪ್ರಕಟವಾಗಿದೆ ಎಂದೇ ಅರ್ಥ. ಓದದಿದ್ದರೂ ನೋಡಿದ ಕೂಡಲೆ ಒಂದು ಮಿಸ್ ಕಾಲ್ ಕೊಡುವುದು ಆತನ ಪದ್ಧತಿ. ನನ್ನ ಗೆಳೆಯನ ಮದುವೆಯಾಗಿದ್ದರೆ ಬ್ಲಾಗಿಗೆ ಬರೆಯುತ್ತಿರಲಿಲ್ಲ. ಅವನ ಮದುವೆಗೂ ನನಗೂ ಸಂಬಂಧ ಉಂಟು! ನನ್ನ ಗೆಳೆಯನಾದರೂ ನನ್ನ ಬಳಿ ಹುಡುಗಿಯರು ಮಾತನಾಡುವುದು ಕಂಡು ಅವನಿಗೆ ಒಳಗೊಳಗಷ್ಟೇ ಅಲ್ಲ ಹೊರಗೂ (ನನ್ನ ಬಳಿಯೇ ಹೇಳಿದ್ದಾನೆ ಹಾಗಾಗಿ) ಅಸೂಯೆ. ಒಂದಾದರೂ ಹುಡುಗಿಯನ್ನು ಪಟಾಯಿಸಿ ಮಿಂಚಬೇಕೆಂದು ಆಸೆ. ಅವಳನ್ನೇ ಮದುವೆಯಾಗಲೂ ಸಿದ್ಧನಿದ್ದ ಬಿಡಿ. ಮೂಡುಬಿದಿರೆಯ ನುಡಿಸಿರಿ, ಉಡುಪಿಯ ಸಾಹಿತ್ಯ ಸಮ್ಮೇಳನ ಹೀಗೆ ದೊಡ್ಡ ಕಾರ್ಯಕ್ರಮಗಳಲ್ಲಿ ಉತ್ತಮ ವರದಿಯ ಜತೆ ಹುಡುಗಿಯೂ ಸಿಗುತ್ತಾಳೇನೋ ಹುಡುಕಿದ್ದೇ ಹುಡುಕಿದ್ದು. ನಾನಾವಾಗಲೇ ಹೇಳಿದ್ದೆ ನನ್ನ ಜತೆ ತಿರುಗಬೇಡ. ನಿನಗೆ ಹುಡುಗಿ ಸಿಗುವುದಿಲ್ಲ ಎಂದು. ಆತ ಕೇಳಬೇಕಲ್ಲ. ನನ್ನ ಜತೆಯೇ ಇರುತ್ತಿದ್ದ. ನನಗೂ ಅವನ ಜತೆ ಇಷ್ಟವಾಗುತ್ತಿತ್ತು. ಹೀಗೆ ಹೋದಲ್ಲೆಲ್ಲ ಯಾವುದೋ ಹುಡುಗಿಯನ್ನು ಸುಮ್ಮನೆ ಕಣ್ಣುಹಾಕಿ ಇಟ್ಟಿರುತ್ತಿದ್ದ. ದುರಂತವೆಂದರೆ ಆ ಹುಡುಗಿ ನನ್ನ ಬಳಿ ನಗುನಗುತ್ತ ಮಾತನಾಡಿ, ಪರಿಚಯ ಮಾಡಿಕೊಂಡು ಹೋಗುತ್ತಿದ್ದರು. ಅವರು ಹೋದ ಮೇಲೆ ಈತ ನನಗೆ ಶಾಪಹಾಕುತ್ತಿದ್ದ! ಪ್ರೀತಿಯಿಂದ!! ಎಷ್ಟು ಕಾರ್ಯಕ್ರಮ ಸುತ್ತಿದರೂ ವರದಿ ಹೊರತು ಬೇರೇನೂ ಲಾಭವಾಗಲಿಲ್ಲ. ಅಂತೂ ನಾನು ಮಂಗಳೂರು ಬಿಟ್ಟೆ. ಅದೇನು ಕಾಕತಾಳೀಯವೋ? ಆತನಿಗೆ ಹುಡುಗಿ ಸಿಕ್ಕಿ ಮದುವೆ ನಿಕ್ಕಿಯಾಯಿತು! ಅಂತೂ ಅವನಿಗೆ ಹುಡುಗಿ ಸಿಗಬೇಕಾದರೆ ನಾನು ಮಂಗಳೂರು ಬಿಡಬೇಕಲಾಯಿತು!! ಇವತ್ತು ಯಾರೋ ಅವನ ಮದುವೆಯಲ್ಲಿ 'ಮಿಥುನನ ರಿಮೋಟ್ ಪೋಂಡಾ ಅಂದು' (ಮಿಥುನನ ರಿಮೋಟ್ ಹೋಯ್ತು) ಅಂದರಂತೆ. ಹೋಗಿಬಂದ ಗೆಳೆಯರ ವರದಿ ಪ್ರಕಾರ ಮಿಥುನನ ಪರಿಸ್ಥಿತಿ ಇನ್ನುಮುಂದೆ ಕಷ್ಟ ಎಂಬಂತಿತ್ತು. ಏನೇ ಇರಲಿ. ಅವರಿಬ್ಬರೂ ಸುಖವಾಗಿರಲಿ. ಹನಿಮೂನಿಗೆ ದಿಲ್ಲಿಗೆ ಬಾ ಎಂದಿದ್ದೇನೆ. ಮದುವೆಯಾದ ಗಡಿಬಿಡಿಯಲ್ಲಿ ಎಲ್ಲಾ ಅಲ್ಲೇ ಮುಗಿಸುತ್ತಾನೊ, ದಿಲ್ಲಿಗಾಗಿ ಏನಾದ್ರೂ ಉಳಿಸಿಕೊಳ್ಳುತ್ತಾನೊ? ನೋಡಬೇಕು... (ವಿಸೂ: ವಿಶೇಷ ಸೂಚನೆ ಅಥವಾ ವಿನಾಯಕನ ಸೂಚನೆ!: ಮದುವೆಯ ದಿನವೇ ಸಂಸಾರ ಹಾಳು ಮಾಡುವ ಯತ್ನಕ್ಕೆ ಕೈಹಾಕಿದ್ದಾನೆ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಯಾಕೆಂದರೆ ಅವರವರ ಸಂಸಾರಕ್ಕೆ ಅವರೇ ಜವಾಬ್ದಾರರು!) Posted by ವಿನಾಯಕ ಭಟ್ಟ at 4:22 PM 9 comments: Tuesday, October 07, 2008 ಕಟ್ಟಿದೆ ಮೂಗು, ತೆರೆದಿದೆ ಬ್ಲಾಗು! ಮೂಗು ಕಟ್ಟಿದೆ. ಪರಿಣಾಮ ನಿದ್ದೆ ಕೆಟ್ಟಿದೆ. ಈ ಸಿಂಬಳ ಹಿಡಿದಿಡಲಾಗದೆ ಮೂಗು ಸೋತಿದೆ... ಈ ಶೀತ ಹಿಡಿದಿಡಲು ಬೆಡ್‌ಶೀಟೂ ಸಾಲದೆ... (ದುಂಡಿರಾಜರ 'ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ, ನಿನ್ನ ರೂಪ ಬಣ್ಣಿಸಲು ಪದಗಳೂ ಸಾಲದೆ' ಹಾಡಿನಿಂದ ಸ್ಪೂರ್ತಿ ಪಡೆದು) ಅಷ್ಟು ಶೀತ. ಮೇಲೆ ಮುಖಮಾಡಿ ಮಲಗಿದರೆ ಸಿಂಬಳ ಮೂಗಿನ ಕೆಳಭಾಗದಲ್ಲಿ ಕಟ್ಟುತ್ತದೆ. ಕೆಳಮುಖಮಾಡಿ ಮಲಗಿದರೆ ಸಿಂಬಳ ಮೇಲ್ಭಾಗದಲ್ಲಿ ಕಟ್ಟುತ್ತದೆ. ಒಟ್ಟಿನಲ್ಲಿ ನಿದ್ರೆ ಇಲ್ಲದ ರಾತ್ರಿ! ಬಹುತೇಕ ಜನರಿಗೆ ಹೀಗಾದಾಗ ಮೂಡು ಕೆಡುತ್ತದೆ. ವಕ್ರದಂತನಾದ ನಾನು ಇಲ್ಲೂ ವಕ್ರ. ನನಗೆ ಮೂಡು ಬಂತು. ಆಗಸ್ಟ್ 1೫ರಂದು ಒಂದು ಲೇಖನ ಬರೆದು ಬ್ಲಾಗಿಗೆ ಹಾಕಿದವ ಮತ್ತೆ ಬ್ಲಾಗಿಸಿಯೇ ಇರಲಿಲ್ಲ. ಅಷ್ಟೇ ಏಕೆ ಬೇರೆ ಬ್ಲಾಗಿನತ್ತ ಬಗ್ಗಿ, ಬಾಗಿಯೂ ನೋಡಿರಲಿಲ್ಲ. ಆ.೨೯ರಿಂದ ೧೫ ದಿನ ಊರಿಗೆ ಹೋಗಿದ್ದೆ. ಪತ್ರಿಕೋದ್ಯಮ ಸೇರಿದ ಮೇಲೆ ಮದುವೆಗೆ ೧೨ ದಿನ ರಜೆ ಹಾಕಿದ್ದು ಬಿಟ್ಟರೆ ಮತ್ತೆ ೧೫ ದಿನದ ದೀರ್ಘ ರಜೆ ಇದೇ ಮೊದಲು. ಆಗಸ್ಟ್ ೧೫ರ ನಂತರ ಊರಿಗೆ ಹೋಗುವ ಸಂಭ್ರಮ. ಬ್ಲಾಗು ಬೋರನ್ನಿಸಿತು. ಊರಿನಲ್ಲಿ ಲ್ಯಾಪ್‌ಟಾಪ್ ಜತೆಯಲ್ಲಿತ್ತಾದರೂ ಯಾಕೋ ಬ್ಯಾಗಿನಿಂದ ಹೊರತೆಗೆಯುವ ಮನಸ್ಸಾಗಲಿಲ್ಲ. ಬಂದ ಮೇಲೆ ಊರಿನ ರಂಗು, ರಜೆಯ ಗುಂಗು ಏನೂ ಬರೆಯಲಾಗಲಿಲ್ಲ. ಹಾಗಂತ ಬರೆಯೋಕೆ ವಿಷಯ ಇರಲಿಲ್ಲ ಅಂತಲ್ಲ. ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲ ಸಾಕಷ್ಟಿದ್ದವು. ರೈಲಿನಲ್ಲಿ ಜೋಗಿಯವರ ಯಾಮಿನಿ, ಚೇತನಾ ಅವರ ಭಾಮಿನಿ ಓದಿದೆ. ದಿಲ್ಲಿಯಲ್ಲಿ ಮನೆಯಲ್ಲಿ ಕುಳೀತು ಜಯಂತ ಕಾಯ್ಕಿಣಿ ಅವರ ಕತೆಗಳನ್ನು ಓದಿ ಮತ್ತೆ ಮಾನಸಿಕವಾಗಿ ದೀವಗಿ ಸೇತುವೆ ಮೇಲೆ, ಗೋಕರ್ಣದ ಬೀದಿಯಲ್ಲಿ ಓಡಾಡಲಾರಂಭಿಸಿದೆ. ಇವುಗಳನ್ನೆಲ್ಲ ಓದುತ್ತಿದ್ದಂತೆ ಕೆಲವು ಸಿನಿಮಾ ನೋಡುತ್ತಿದ್ದಂತೆ ಇದರ ಬಗ್ಗೆ ಬರೆದು ಬ್ಲಾಗಿಸಬೇಕು ಅಂದುಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಾಗೆ ಮಾಡುತ್ತೇನೆ. ಆದರೆ ಲ್ಯಾಪ್‌ಟಾಪ್‌ನ ಮುಂದೆ ಕುಳಿತರೆ ಬರೆಯಲೇಕೋ ಮನಸ್ಸಿಲ್ಲ. ಇಂದು ಹುಡುಗಿಗೆ ಐಲವ್ ಯು ಹೇಳಲೇ ಬೇಕು ಅಂತ ಬೇಗ ಎದ್ದು ಚೆಂದವಾಗಿ ರೆಡಿಯಾಗಿ ಕಾಲೇಜಿಗೆ ಬಂದ ಹುಡುಗ ಯಾಕೋ ಇವತ್ತು ಬೇಡ ಎಂದು ೭೨ನೇ ಬಾರಿಯೂ ಶುಭ ಕಾರ್ಯ ಮುಂದೂಡಿದಂತೆ! ಈ ನಡುವೆ ಬ್ಲಾಗಿನ ಬಗ್ಗೆ ಒಂದು ನಮೂನೆ ನಶ್ವರ ಭಾವ. ರವಿ ಬೆಳೆಗೆರೆ ಅವರು ಹಾಯ್ ಬೆಂಗಳೂರಿನಲ್ಲಿ ಜೋಗಿ ಅವರ ಬಗ್ಗೆ ಬರೆಯುತ್ತ ನಯ್ಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಶರಾ ಬರೆದಿದ್ದರು. ಅದರಿಂದ ಸ್ಪೂರ್ತಿ ಪಡೆದರೋ ಎಂಬಂತೆ ಜೋಗಿ ಕೂಡ ಹಿಟ್‌ವಿಕೆಟ್ ಆದವರಂತೆ ಬ್ಲಾಗ್ಲೋಕದಿಂದ ನಿರ್ಗಮಿಸಿಬಿಟ್ಟರು. ಈ ನಡುವೆ ವಿಶ್ವೇಶ್ವರ ಭಟ್ಟರು ಸುಮ್ಮನೆ ಬ್ಲಾಗಿಗೆ ಬರೆದು ಯಾಕೆ ಸಮಯ ಹಾಳು ಮಾಡ್ತೆ. ಪತ್ರಿಕೆಗೆ ಬರೆ. ಅದನ್ನು ಬೇಕಾದ್ರೆ ಬ್ಲಾಗಿಸು ಎಂದಿದ್ದರು. ಬಹುಶಃ ಇಷ್ಟೆಲ್ಲ ವಿಷಯಗಳು ಒಟ್ಟಿಗೆ ಸೇರಿ ನನಗೆ ಬ್ಲಾಗಿನ ಬಗ್ಗೆ ಬ್ಯಾಸರ ಮೂಡುವಂತೆ ಮಾಡಿತು. ಕಳ್ಳಂಗೊಂದು ಪಿಳ್ಳೆ ನೆವ ಅಂತಾರಲ್ಲ ಹಾಗೆ ನನ್ನ ಆಲಸಿತನಕ್ಕೆ ಇಷ್ಟೆಲ್ಲ ದೊಡ್ಡ ಜನರ ಸಮರ್ಥನೆ ಸಿಕ್ಕಿಬಿಟ್ಟತ್ತು! ಪರಿಣಾಮ ನನ್ನ ಬ್ಲಾಗು ಬಂದಿತ್ತು. ಕೆಲವು ಗೆಳೆಯರು ಆರ್ಕುಟ್‌ನಲ್ಲಿ ಯಾಕೋ ನಿನ್ನ ಬ್ಲಾಗನ್ನು ಸ್ಕ್ಯಾಪ್ ಮಾಡಿದ್ದೀಯಾ ಅಂದರು. ಹಾಗೇನಿಲ್ಲ ಅಂತ ನಾನು ಸ್ಕ್ರ್ಯಾಪ್ ಮಾಡಿದೆ. ಏನೋ ಅನಿವಾರ್ಯ ಅನ್ನೋ ಶೈಲಿಯಲ್ಲಿ ಪತ್ರಿಕರ್ತನ ಕೆಲಸವನ್ನು ಮಾಡುತ್ತಿದ್ದೆ. ಅದೂ ಪೂರ್ತಿ ನನಗೇ ಸಮಾದಾನ ಕೊಡುತ್ತಿರಲಿಲ್ಲ. ಎಲ್ಲ ಚಟಗಳಂತೆ ಬರೆವಣಿಗೆ ಚಟ ಕೂಡ. ನೀವು ಅದನ್ನು ಸ್ವಲ್ಪ ದಿನ ಬಿಟ್ಟಿರೋ ಬಿಟ್ಟೇಹೋಗುತ್ತದೆ. ಮತ್ತೆ ಅದನ್ನು ಶುರುಮಾಡಬೇಕಾಗುತ್ತದೆ. ಆದರೆ ನನ್ನ ಕಟ್ಟಿದ ಮೂಗು ನನ್ನನ್ನು ಮತ್ತೆ ಬ್ಲಾಗಿನೊಳು ಮೂಗುತೂರಿಸುವಂತೆ ಮಾಡಿತು. ಬ್ಲಾಗಿನಲ್ಲಿ ನಾನು ಇಷ್ಟು ದಿನ ಕಾಣಿಸಿಕೊಳ್ಳದಿರುವುದರ ಬಗ್ಗೆ ಬರೆದೇ ಯಾಕೆ ಪುನಾರಂಭ ಮಾಡಬಾರದು ಎಂದು ಯೋಚಿಸಿದೆ. ಮಧ್ಯರಾತ್ರಿ ೧೨.೦೦ ಗಂಟೆಗೆ ಎದ್ದೆ. ಬರೆದೆ. ಬ್ಲಾಗಿಸಿದೆ. ಬ್ಲಾಗಿಗೆ ಮರುಹುಟ್ಟು ನೀಡಲು ಕಟ್ಟಿದ ಮೂಗು ಕಾರಣವಾದರೂ ಬರೆಯದೇ ಗರಬಡಿದವನಂತೆ ಇದ್ದ ನನ್ನನ್ನು ಬರೆಯಲು ಹಚ್ಚಿದ್ದು ಪ್ರತಾಪಸಿಂಹ. ಏನು ವಿನಾಯಕ್? ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯಾ? ಏನಾದ್ರೂ ಬರೆದುಕೊಡಿ. ಅಪರೂಪಕ್ಕಾದರೂ ಪತ್ರಿಕೆಯಲ್ಲಿ ಕಾಣಿಸಿಕೊಳ್ತಾ ಇರಬೇಕು ಎಂದು ತಿದಿಯೊತ್ತಿದರು. ಬರವಣಿಗೆ ಆರಂಭಿಸಲು ಒಂದು ನೆಪ ಬೇಕಿತ್ತು. ಅದು ಸಿಕ್ಕಂತಾಯಿತು. ಒಂದು ಲೇಖನ ಬರೆದೆ. ನನಗೇಕೋ ಪೂರ್ಣ ಸಮಾದಾನ ಆಗಿರಲಿಲ್ಲ. ಆದರೂ ಸೋಮವಾರ ಕಳುಹಿಸಿತ್ತೇನೆ ಅಂದಿದ್ದೆ. ಕಳುಹಿಸಿದೆ. ಆದರೆ ಸೋಮವಾರ ಸಂಜೆ ವೈನಾಗಿ (ಕುಡಿದು ಅಲ್ಲ) ಕುಳಿತು ಇನ್ನೊಂದು ಲೇಖನ ಬರೆದೆ. ನನಗೆ ಖುಶಿಕೊಟ್ಟಿತು. ಅದನ್ನೇ ಪ್ರತಾಪ್‌ಗೆ ಕಳುಹಿಸಿದೆ. ಯಾಕೋ ಬಹಳ ದಿನದ ನಂತರ ನಾನು ಉಲ್ಲಸಿತನಾಗಿದ್ದೆ. ಬಹುಶಃ ಕಟ್ಟಿದ ಮೂಗಿಗಿಂತ ಮನಸ್ಸಿಗೆ ಕಟ್ಟಿದ ಮೋಡ ಚದುರಿ ಹೋದದ್ದಕ್ಕೇ ಇರಬೇಕು ನಿದ್ರೆ ಬರುತ್ತಿಲ್ಲ! ಚಿಕ್ಕವರಿರುವಾಗ ಪ್ರವಾಸಕ್ಕೆ ಹೋಗುವ ಹಿಂದಿನ ದಿನ ನಿದ್ರೆ ಬರುತ್ತಿರಲಿಲ್ಲವಲ್ಲ ಹಾಗೆ! Posted by ವಿನಾಯಕ ಭಟ್ಟ at 12:17 AM 4 comments: Friday, August 15, 2008 ಸ್ವಾತಂತ್ರ್ಯೋತ್ಸವದಲ್ಲಿಯೇ ಕಾಣದ ಸ್ವಾತಂತ್ರ್ಯ! ೧೫ ದಿನದ ಹಿಂದಿನಿಂದಲೇ ಪ್ರವಾಸಿಗರಿಂದ ಕೆಂಪುಕೋಟೆ, ರಾಷ್ಟ್ರಪತಿ ಭವನ ಮುಂತಾದ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ನಗರದ ರೈಲು ನಿಲ್ದಾಣಗಳಿಗೆ ೨೦ ದಿನ ಹಿಂದಿನಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಬರಲು ಹೋಗುವ ಸಾರ್ವಜನಿಕರಿಗೆ ಪ್ಲಾಟ್‌ಫಾರ್ಮ್ ಪ್ರವೇಶ ನಿಷೇಧಿಸಲಾಗಿದೆ. ೫-೬ ದಿನದಿಂದ ಪ್ರಮುಖ ಸ್ಥಳಗಳಲ್ಲಿನ ಕಟ್ಟಡಗಳು, ಅದರಲ್ಲಿನ ಕಚೇರಿಗಳು ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡುವ ಸ್ವಾತಂತ್ರ್ಯ ಕಳೆದುಕೊಂಡಿವೆ. ಸ್ವಾತಂತ್ರ್ಯೋತ್ಸವದ ಹಿಂದಿನ ದಿನವಂತೂ ನಮ್ಮ ಕಚೇರಿಯ ಕಟ್ಟಡವೂ ಸೇರಿದಂತೆ ಹಲವು ಕಟ್ಟಡಗಳನ್ನು ಸಂಜೆ ೪.೦೦ ಗಂಟೆ ಹೊತ್ತಿಗೇ ಮುಚ್ಚುವ ಆದೇಶ ಹೊರಬಿದ್ದಿದೆ! ಹೋಗಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಾದರೂ ನೀವು ಸ್ವತಂತ್ರರಾಗಿ ಭಾಗವಹಿಸಬಹುದೇ? ಊಹುಂ. ಕೆಂಪುಕೋಟೆಯೂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗೆ ನೀವು ಭಾಗವಹಿಸಲು ಹರಸಾಹಸ ಮಾಡಬೇಕಾಗುತ್ತದೆ. ಮೊದಲೇ ಪಾಸು ಮಾಡಿಸಿಕೊಂಡರೆ ಮಾತ್ರ ನಿಮಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ! ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನಿಮ್ಮ ಒಂದೊಂದೇ ಸ್ವಾತಂತ್ರ್ಯ ಕಡಿತಗೊಳ್ಳುತ್ತಾ ಹೋಗುತ್ತದೆ! ಹುಡುಕಬೇಕು ನಮಗೆಷ್ಟು ಸ್ವಾತಂತ್ರ್ಯವಿದೆ ಎಂಬುದನ್ನು!! ಸಾರ್ವಜನಿಕ ಮಾರುಕಟ್ಟೆಗಳೂ ೧೫ ದಿನ ಹಿಂದಿನಿಂದಲೇ ಮೆಟಲ್ ಡಿಟೆಕ್ಟರಿನೊಳಗೆ ಹಾದು ಒಳಗೆ ಬಾಯಾತ್ರಿಕನೆ... ಎಂದು ಜನರನ್ನು ಕೋರುತ್ತಿವೆ. ಮಾರುಕಟ್ಟೆಯ ಸುತ್ತಲಿನ ದಾರಿಗಳು ಬಂದ್ ಆಗಿವೆ. ಒಂದಿಡೀ ಮಾರುಕಟ್ಟೆಗೆ ೧ ಅಥವಾ ೨ ಕಡೆ ಮಾತ್ರ ಪ್ರವೇಶ ಸಾಧ್ಯ. ಅದೂ ಮೆಟಲ್‌ಡಿಟೆಕ್ಟರ್ ಎಂಬ ಹೊಸ್ತಿಲ ಮೂಲಕ. ಪ್ರಮುಖ ಸ್ಥಳಗಳಲ್ಲಿರುವ ಕಟ್ಟಡದ ಒಳಕ್ಕೆ ಕಾರು ತೆಗೆದುಕೊಂಡು ಹೋದರೆ ಮನೆಗೆ ಸ್ವಾಮೀಜಿಗಳು ಬಂದಾಗ ಹಾನದಲ್ಲಿ ಮುಖನೋಡಿ ಒಳಕರೆದುಕೊಳ್ಳುತ್ತಾರಲ್ಲ ಹಾಗೆ ಕಾರಿನ ಅಡಿಭಾಗವನ್ನು ಕನ್ನಡಿಯಲ್ಲಿ ಪರಿಶೀಲಿಸಿ ಒಳಬಿಡಲಾಗುತ್ತದೆ. ನೀವು ಒಳಹೋಗಬೇಕೆಂದರೆ ಕೆಲವು ಕಡೆ ಮೊಬೈಲು, ಇನ್ನು ಕೆಲವು ಕಡೆ ನಿಮ್ಮ ಮನೆಯ ಚಾವಿ, ಬೆಲ್ಟ್ ಕೂಡ ರೆಸೆಪ್ಶನಿಸ್ಟ್‌ಗೆ ಕೊಟ್ಟು ಹೋಗಬೇಕು. ನಿಮ್ಮ ಕೈಯಲ್ಲಿ ಚೀಲವಿದ್ದರಂತೂ ಮುಗಿದೇ ಹೋಯಿತು. ಅದರಲ್ಲೇನಿದೆ ಅಂತ ಪೂರ್ತಿ ನೋಡಿದ ನಂತರವೇ ಒಳಪ್ರವೇಶ. ಮಾರುಕಟ್ಟೆ, ಕಟ್ಟಡ ಹೀಗೆ ಎಲ್ಲೆಂದರಲ್ಲಿ ಬಂದು ಕುಳಿತಿರುವ ಸಿಸಿ ಟಿವಿ ಕ್ಯಾಮರಾಗಳು ಅದ್ಯಾವಾಗಲೋ ನಿಮ್ಮ ಪ್ರತಿ ಕ್ಷಣದ ಚಲನೆಯನ್ನೂ ದಾಖಲಿಸುತ್ತಿವೆ. ೬೧ನೇ ಸ್ವಾತಂತ್ರ್ಯೋತ್ಸವದ ದಿನ ಕುಳಿತು ಯೋಚಿಸಿದರೆ... ಯಾರಿಗೆ ಬಂತು ಸ್ವಾತಂತ್ರ್ಯ? ಎಲ್ಲಿಗೆ ಬಂತು ಸ್ವಾತಂತ್ರ್ಯ? ಎಂಬ ಪ್ರೊ. ಸಿದ್ದಲಿಂಗಯ್ಯ ಅವರು ಬರೆದ ಈ ಹಾಡು ನೆನಪಾಗುತ್ತದೆ. ಸಿದ್ದಲಿಂಗಯ್ಯ ಅವರು ಬೇರೆಯೇ ಕಾರಣಗಳಿಗಾಗಿ ಈ ಹಾಡು ಬರೆದಿದ್ದರೂ ಅದು ಈಗ ದೇಶದ ಅದರಲ್ಲೂ ವಿಶೇಷವಾಗಿ ರಾಜಧಾನಿಯಾದ ಹೊಸದಿಲ್ಲಿಯನ್ನು ಗಮನದಲ್ಲಿಸಿಕೊಂಡೇ ಬರೆದಂತಿದೆ. ಅಷ್ಟು ಚೆನ್ನಾಗಿ ದಿಲ್ಲಿಗೆ ಹೊಂದಿಕೊಳ್ಳುತ್ತದೆ ಈ ಹಾಡು. ಈ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಬೇಕಾ? ಸ್ವಾತಂತ್ರ್ಯೋತ್ಸವ ಬಂತಲ್ಲಾ ಎಂದು ಖುಷಿಪಡಬೇಕಾ? ದುಃಕ್ಕಿಸಬೇಕಾ? ಎಂಬ ಪ್ರಶ್ನೆ ಕಾಡುತ್ತದೆ. ಸ್ವಾತಂತ್ರ್ಯೋತ್ಸವ ಅಂದರೆ ಎಲ್ಲೆಡೆ ಖುಶಿ ಇರಬೇಕು. ಪುಟಾಣಿ ಮಕ್ಕಳಲ್ಲಿ ಇರುತ್ತದಲ್ಲ ಅಂತಹ ಖುಷಿ. ಆದರೆ ನಮಗೋ ಹೊಸದಿಲ್ಲಿಯೂ ಸೇರಿದಂತೆ ಹಲವೆಡೆ ಬಾಂಬ್ ಭಯ! ಸ್ವಾತಂತ್ರ್ಯೋತ್ಸವ ಬಂತೆಂದರೆ ಹೊಸದಿಲ್ಲಿಯಂತಹ ಮಹಾನಗರಗಳಲ್ಲಿ ಭಯದ ಛಾಯೆ. ಒಂದು ವಾರದ ಹಿಂದಿನಿಂದಲೇ ಮಾರುಕಟ್ಟೆಗಳಿಗೆ ಬರುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೊಸದಿಲ್ಲಿಯ ದೊಡ್ಡ ದೊಡ್ಡ ಮಾಲ್‌ಗಳು, ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿರುವ ೧ ವಾರದಲ್ಲಿ ಆಗಮಿಸುವವರ ಸಂಖ್ಯೆ ಶೇ.೫೦ರಷ್ಟು ಇಳಿದಿದೆಯಂತೆ. ಎಲ್ಲ ಆಫರ್‌ಗಳ ಹೊರತಾಗಿ! ಕಾರಣ ಉಗ್ರರು. ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಳು ಮಾಡಲು ಅವರೆಲ್ಲಿ ಬಾಂಬ್ ಸ್ಪೋಟಿಸುತ್ತಾರೊ ಎಂಬ ಭಯ. ಅದಕ್ಕಾಗಿ ಮುನ್ನೆಚ್ಚರಿಕೆ ಹೆಸರಲ್ಲಿ ಕಟ್ಟಡ ಮುಚ್ಚಿಸುವುದು, ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡದಂತೆ ಸೂಚಿಸುವುದು ನಡೆಯುತ್ತಿದೆ. ಜನ ಭದ್ರತೆ, ನೆಮ್ಮದಿಗಾಗಿ ಅದನ್ನೆಲ್ಲ ಸಹಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? ನಾವು ಭಯದ ನೆರಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಅನಾಹುತ ರಹಿತ ಸ್ವಾತಂತ್ರ್ಯೋತ್ಸವಕ್ಕಾಗಿ ನಮ್ಮ ಸ್ವಾತಂತ್ರ್ಯ ಹರಣ ಸಹಿಸಿಕೊಳ್ಳುತ್ತೇವೆ. ಮೊದಲ್ಲೆಲ್ಲ ಹೇಳುವಂತೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಎಂಬುದು ಮಾಯವಾಗಿ ಕೇವಲ ಸ್ವಾತಂತ್ರ್ಯೋತ್ಸವಕ್ಕೆ ಸೀಮಿತವಾಗುತ್ತಿರುವಂತೆ ಭಾಸವಾಗುತ್ತಿದೆ. ೬೧ನೇ ಸ್ವಾತಂತ್ರ್ಯೋತ್ಸವ ಹೊಸ್ತಿಲಲ್ಲಿ ನಿಂತು ನಮಗೆಷ್ಟು ಸ್ವಾತಂತ್ರ್ಯವಿದೆ, ಎಷ್ಟು ಸ್ವಾತಂತ್ರ್ಯ ಮುಂದಿನ ದಿನಗಳಲ್ಲಿ ಉಳಿಯಲಿದೆ ಎಂದು ವಿಚಾರ ಮಾಡುವಂತಾಗಿದೆ. ನೀಮಗೂ ಹಾಗನ್ನಿಸುತ್ತಿದೆಯೇ? ಹಾಗಾದ್ರೆ ಸೇಮ್ ಪಿಂಚ್!! Posted by ವಿನಾಯಕ ಭಟ್ಟ at 7:39 PM 4 comments: Tuesday, August 05, 2008 ಪೇಜ್ ತ್ರಿ ನೋಡಿ ಏನೆಲ್ಲಾ ನೆನಪಾತ್ರಿ! ಪೇಜ್ ತ್ರಿ! ನನ್ನ ತಟ್ಟಿದ, ನೆನಪಲ್ಲುಳಿದ, ಚಿಂತೆಗೀಡು ಮಾಡಿದ, ಮತ್ತೆ ಮತ್ತೆ ನೋಡಿದರೂ ಬೇಸರ ತರಿಸದ ಚಲನಚಿತ್ರಗಳಲ್ಲಿ ಪೇಜ್ ತ್ರಿ ಕೂಡ ಒಂದು. ಅದೊಂಥರದಲ್ಲಿ ನ(ನ್ನ)ಮ್ಮದೇ(!) ಕತೆ. ಅಂದರೆ ಪತ್ರಕರ್ತರ ಕತೆ. ಫಿಲ್ಮಿ ಚಾನಲ್‌ನಲ್ಲಿ ನಿನ್ನೆ (೪-೦೮-೦೮) ಪೇಜ್ ತ್ರಿ ಫಿಲ್ಮ್ ಇತ್ತು. ಆ ಚಿತ್ರ ಇಷ್ಟವಾಗಲು ಈಗಲೇ ಕೊಟ್ಟ ಕಾರಣಗಳ ಜತೆಗೆ ಇನ್ನೊಂದು ಕಾರಣವೆಂದರೆ ಅದರಲ್ಲಿ ಕ್ರೈಂ ರಿಪೋರ್ಟರ್ ಹೆಸರು ವಿನಾಯಕ ಮತ್ತು ನಾನೂ ೪ ತಿಂಗಳ ಹಿಂದಿನವರೆಗೂ ಕ್ರೈಂ ರಿಪೋರ್ಟರ್ ಆಗಿದ್ದೆ!! ಹೀಗಾಗಿ ಪೇಜ್ ತ್ರಿ ನೋಡುತ್ತಿದ್ದಂತೆ ನನ್ನ ಮನಸ್ಸು ಹುಂಬುರ್ಕಿ ಓಡತೊಡಗಿತು. ನೆನಪುಗಳತ್ತ, ಮಂಗಳೂರಿನತ್ತ, ಕ್ರೈಂ ರಿಪೋರ್ಟರ್ ಆಗಿದ್ದಾಗ ಆದ ಅನುಭವಗಳತ್ತ, ಮರೆಯಲಾಗದ ಆ ದಿನಗಳತ್ತ, ಹಸಿ ಹಸಿ ಕೊಲೆಗಳತ್ತ... ನಾನು ನನ್ನ ಗೆಳೆಯರ ಬಳಿ ಈಗಾಗಲೇ ಹೇಳಿಕೊಂಡಿರುವಂತೆ ನಾನು ಬಯಸಿ ಕ್ರೈಂ ರಿಪೋರ್ಟರ್ ಆದದ್ದಲ್ಲ. ಆದರೆ ಕ್ರೈಂ ರಿಪೋರ್ಟರ್ ಆದ ಮೇಲೆ ಬಯಸಿದ್ದು! ಪತ್ರಿಕೋದ್ಯಮದ ಆರಂಭಿಕ ಹಂತದಲ್ಲಿ ಕಚೇರಿಯೊಳಗೆ ಪ್ರೆಸ್‌ನೋಟ್‌ಗಳನ್ನು ಬರೆಯುತ್ತ ಕುಳಿತಿದ್ದ ನಾನು ಒಂದು ಮಧ್ಯಾಹ್ನ ಆಕಸ್ಮಿಕವಾಗಿ ಮತ್ತು ಅನಿವಾರ್ಯವಾಗಿ ತ್ರಿಬಲ್ ಮರ್ಡರ್ ವರದಿ ಮಾಡಬೇಕಾಗಿ ಬಂತು. ಆ ವರದಿ ನನ್ನನ್ನು ಕ್ರೈಂ ರಿಪೋರ್ಟರ್‌ನನ್ನಾಗಿ ಮಾಡಿತು. ಅಥವಾ ಆ ವರದಿಯೇ ನಾನು ಕ್ರೈಂ ರಿಪೋರ್ಟರ್ ಆಗಲು ಕಾರಣವಾಯಿತು. ಆಮೇಲೆ ತಿಳಿಯಿತು ಕ್ರೈಂ ರಿಪೋರ್ಟಿಂಗ್ ಉಳಿದ ವರದಿಗಾರಿಕೆಗಿಂತ ಆಸಕ್ತಿಕರ ಎಂಬುದು. ಕ್ರೈಂ ರಿಪೋರ್ಟರ್ ಆಗಿ ಹಲವು ಎನ್‌ಕೌಂಟರ್‌ಗಳು, ನಕ್ಸಲೀಯರ ಬಗೆಗಿನ ಮಾಹಿತಿಗಳು, ಕೋಮುಗಲಭೆಗಳು, ಹಿಂದಿನ ಕಾರಣಗಳು, ಕರ್ಫ್ಯೂ, ಜನರು ಆಗ ಅನುವಿಸುವ ಕಷ್ಟ, ಊಟ, ನಿದ್ರೆ, ಸ್ನಾನವೂ ಇಲ್ಲದೆ ಕಳೆದ ದಿನಗಳು, ಅಪರಾತ್ರಿಯಲ್ಲಿ ಎಬ್ಬಿಸಿದ ಕೊಲೆಗಳು, ಮನಸ್ಸು ಕಲಕಿದ ಸಾವುಗಳು, ಸಹನೆಗೆ ಸವಾಲೆಸೆಯುವಂತೆ ಕಾದು ಕುಳಿತು ನಡೆಸಿದ ತನಿಖಾ ವರದಿಗಳು, ಯಾರಿಗೂ ತಿಳಿಯದ ಹಲವು ವಿಷಯಗಳನ್ನು ತಿಳಿಯಲು, ಕಲಿಯಲು ಅವಕಾಶವಾಯಿತು. ಹೊರನೋಟಕ್ಕೆ ದಕ್ಕದ ಪೊಲೀಸ್ ಇಲಾಖೆಯ ಅಂತರಾಳದ ಪರಿಚಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಒಳ್ಳೆ ಪೊಲೀಸ್ ಗೆಳೆಯರು ದೊರೆತರು. ಅವರಿಗೆ ಅದೇನು ಪ್ರೀತಿಯೋ ಕಾಣೆ ನನಗೆ ಎಕ್ಸ್‌ಕ್ಲ್ಯೂಸೀವ್ ಸುದ್ದಿ ಕೋಡೋರು. ಇಷ್ಟೇ ಸಾಕು. ಹೀಗೇ ಮುಂದುವರಿದರೆ ನನ್ನನ್ನು ನಾನೇ ಹೊಗಳಿಕೊಂಡುಬಿಡುವ ಅಥವಾ ಹಾಗೆ ನಿಮಗನ್ನಿಸಿಬಿಡುವ ಸಾಧ್ಯತೆ ಇದೆ. ಪೇಜ್ ತ್ರಿ ವಿಷಯಕ್ಕೆ ಬರೋಣ. ಮಂಗಳೂರಿನಲ್ಲಿ ಸಿನಿಮಾ ನೋಡಿದಾಗ ಪೇಜ್ ತ್ರಿ ಪತ್ರಿಕೋದ್ಯಮ ಅಂದರೇನು ಎಂಬುದು ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಈಗ ದಿಲ್ಲಿಗೆ ಬಂದ ಮೇಲೆ ಅರ್ಥವಾಗುತ್ತಿದೆ. ಇಲ್ಲಿನ ಪತ್ರಕರ್ತರು ಜಿಲ್ಲಾ ವರದಿಗಾರರಂತೆ ಸುದ್ದಿಗಾಗಿ ಒದ್ದಾಡುವುದಿಲ್ಲ. ಇಡೀ ದಿನಕ್ಕೆ ಒಂದೇ ಬೀಟ್. ಕಾಂಗ್ರೆಸ್, ಬಿಜೆಪಿ ಅಥವಾ ಯಾವುದೇ ಪಕ್ಷದ ಕಚೇರಿಗೆ ಹೋಗಿ ಒಂದಿಡೀ ದಿನ ಕುಳಿತು, ಸಿಕ್ಕ ನಾಯಕರೊಂದಿಗೆ ಹರಟಿ, ಪತ್ರಿಕಾಗೋಷ್ಠಿಗಳಿದ್ದರೆ ಅವುಗಳನ್ನು ಅಟೆಂಡ್ ಮಾಡಿ ಸುದ್ದಿ ಬರೆದರೆ ಮುಗಿಯಿತು. ಇದರ ಪರಿಣಾಮ ಕೆಲವರಂತೂ ರಾಜಕಾರಣಿಗಳ ಚೇಲಾಗಳಂತಾಗಿಬಿಟ್ಟಿರುತ್ತಾರೆ. ನ್ಯೂಸ್ ಚಾನಲ್‌ನವರಿಗಂತೂ ಒಬ್ಬ ಮುಖಂಡನ ಬೈಟ್ ಸಿಕ್ಕಿದರೆ ಸಾಕು. ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಷ್ಟು ಸಂತೋಷ. ಆ ಸುದ್ದಿಯ ಆಳ, ಅಗಲ ಅವರಿಗೆ ಬೇಡ. ಇನ್ನು ಪಾರ್ಟಿಗಳನ್ನು ವರದಿ ಮಾಡುವ ಪತ್ರಕರ್ತರ ಕೆಲಸ ಆ ದೇವರಿಗೇ ಪ್ರೀತಿ. ಇದನ್ನೆಲ್ಲ ನೋಡುವಾಗ ಅನ್ನಿಸುತ್ತದೆ ಇವರಿಗಿಂತ ಜಿಲ್ಲಾ ಮಟ್ಟದ ಕ್ರೈಂ ವರದಿಗಾರ ಮೇಲು ಅಂತ! ಪೇಜ್ ತ್ರಿ ಸಿನಿಮಾದಲ್ಲಿ ನಾಯಕಿ ಮಾಧವಿ ಮೊದಲು ಪೇಜ್ ತ್ರಿ ಪತ್ರಕರ್ತೆಯಾಗಿದ್ದು, ನಂತರ ಮನಸ್ಸು ಬದಲಿಸಿ ಕ್ರೈಂ ವರದಿಗಾರ್ತಿಯಾಗುತ್ತಾಳೆ. ಹಾಗೆ ಒಂದೊಳ್ಳೆ ತನಿಖಾ ವರದಿ ತರುತ್ತಾಳೆ. ನಗರದ ಅತಿಗಣ್ಯನೊಬ್ಬ ಮ ಕ್ಕಳೊಂದಿಗೆ ಸಲಿಂಗಕಾಮದಲ್ಲಿ ನಿರತನಾಗಿದ್ದ, ಅದಕ್ಕಾಗಿ ಹಲವು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ಜಾಲದ ಸುದ್ದಿಯದು. ಆದರೆ ಆತ ಪತ್ರಿಕೆಗೆ ಜಾಹೀರಾತು ನೀಡುತ್ತಾನೆಂಬ ಕಾರಣಕ್ಕೆ ಪತ್ರಿಕೆಯ ಮಾಲಿಕ ಆ ವರದಿ ಪ್ರಕಟಿಸದಂತೆ ಹೇಳುತ್ತಾನೆ. ಸಾಲದ್ದಕ್ಕೆ ಅವಳನ್ನು ಕೆಲಸದಿಂದ ತೆಗೆಯುತ್ತಾನೆ. ಇದನ್ನು ನೋಡುವಾಗ ನಾನು ಬರೆದೂ ಪ್ರಕಟವಾಗದ, ಪ್ರಕಟವಾಗದು ಎಂಬ ಗ್ಯಾರಂಟಿ ಇದ್ದುದರಿಂದ ಬರೆಯಲೇ ಆಗದ, ಬರೆದು ಪ್ರಕಟವಾಗಿ ನಂತರ ನಾನು ಅನುಭವಿಸಿದ ಕೆಲವು ವರದಿಗಳು, ಅದರ ಹಿಂದುಮುಂದಿನ ಘಟನೆಗಳು ಕಣ್ಣಮುಂದೆ ಹಾದುಹೋದವು. ಮಾಧ್ಯಮಗಳೂ ಮೊದಲಿನಂತಿಲ್ಲ. ಪತ್ರಿಕಾ ವೃತ್ತಿ ಹೋಗಿ ಪತ್ರಿಕೋದ್ಯಮವಾಗಿದೆ. ರಿಲಯನ್ಸ್ ನಂತಹ ಹಲವಾರು ಉದ್ಯಮ ಹೊಂದಿರುವ ಸಂಸ್ಥೆ ಕೂಡ ಈಗ ಮಾಧ್ಯಮ ಕ್ಷೇತ್ರದ ಮೇಲೆ ಕಣ್ಣು ಹಾಕಿದೆ. ಉದ್ಯಮ ಅಂದ ಮೇಲೆ ಸೇವೆ, ಸಾರ್ವಜನಿಕ ಬದ್ದತೆ ಎಂಬೆಲ್ಲ ಪದಗಳು ಅರ್ಥ ಕಳೆದುಕೊಳ್ಳುತ್ತವೆ. 'ಅರ್ಥ'ಶಾಸ್ತ್ರ ಮಾತ್ರ ಮುಖ್ಯವಾಗುತ್ತದೆ. ಹಾಗಾದಾಗ ಹೀಗಾಗುತ್ತದೆ. ಹೀಗಾದಾಗ ಪತ್ರಕರ್ತ ತಾನೆಣಿಸಿದ್ದನ್ನೆಲ್ಲ ಸತ್ಯ ಎಂಬುದು ಗೊತ್ತಿದ್ದರೂ, ದಾಖಲೆಗಳಿದ್ದರೂ ಬರೆಯಲಾರ. ಆದರೆ ಅದೊಂದು ಸ್ಟೋರಿ ಪ್ರಕಟಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಕೆಲಸ ಬಿಡಲಾದೀತೆ? ಹಾಗೆ ಮಾಡಿದರೆ ಸಾಧಿಸುವುದೇನು? ಇದೇ ಅಲ್ವಾ ಪೇಜ್ ತ್ರಿ ಸಿನಿಮಾ ಕೊನೆಯ ಸಂದೇಶ!? ಪೇಜ್ ತ್ರಿ ಸಿನಿಮಾ ಸತ್ಯಕ್ಕೆ ಕನ್ನಡಿ ಹಿಡಿದಂತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದನ್ನೊಮ್ಮೆ ನೋಡುವುದೊಳಿತು. ಇದರ ಜತೆಗೆ 'ಇಟ್ಸ್ ಬ್ರೇಕಿಂಗ್ ನ್ಯೂಸ್ 'ಎಂಬ ಸಿನಿಮಾ ಕೂಡ ಇಂದಿನ ನ್ಯೂಸ್ ಚಾನಲ್‌ಗಳ ಒಳ ಹೊರಗನ್ನು ತೆರೆದಿಡುತ್ತದೆ. ಇವುಗಳನ್ನು ನೋಡಿದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕ್ಷೇತ್ರಕ್ಕಿಳಿಯುವ ಮೊದಲು ಆ ಬಗ್ಗೆ ಒಂದಷ್ಟು ಮಾನಸಿಕ ಸಿದ್ಧತೆಯನ್ನಾದರೂ ಗಳಿಸಬಹುದು. ಯಾಕೆಂದರೆ ಕ್ಲಾಸಿನಲ್ಲಿ ಕಲಿತದ್ದಕ್ಕೂ ಕ್ಷೇತ್ರದಲ್ಲಿ ಅನುಭವಿಸುವುದಕ್ಕೂ ಅಜಗಜಾಂತರವಿದೆ. Posted by ವಿನಾಯಕ ಭಟ್ಟ at 8:59 PM 12 comments: Friday, August 01, 2008 ರೈ ಹೇಳಿದ ಚೇಳಿನ ಕಥೆ ಅವರಾಗ ರಾಜ್ಯದ ಸಾರಿಗೆ ಸಚಿವರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ದಿನಕ್ಕೆ ನಾಲ್ಕೈದು ಕಾರ್ಯಕ್ರಮದಲ್ಲಿ ಭಾಗವಹಿಸದಿದ್ರೆ ಅವರಿಗೆ ನಿದ್ರೆ ಬರಲ್ಲ. ಅವ್ರೇರೀ... ರಮಾನಾಥ ರೈ. ರೈ ಸಚಿವರಾಗಿದ್ದಾಗ ಸದಾ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಕೆಲಸ. ಎಲ್ಲ ಕಾರ್ಯಕ್ರಮಕ್ಕೂ ವಿಳಂಬವಾಗಿ ಬರೋದು ಮಾಮೂಲು. ಒಮ್ಮೆ ಬಂಟ್ವಾಳದ ಶಾಲಾ ವಾಷಿಱಕೋತ್ಸವ ಕಾರ್ಯಕ್ರಮಕ್ಕೆ ಮಧ್ಯರಾತ್ರಿ ೧೨.೦೦ ಗಂಟೆಗೆ ಹೋಗಿದ್ದರು. ಅದಕ್ಕೆ ರೈ ಅವರನ್ನು ಯಾವ ಕಾರ್ಯಕ್ರಮಕ್ಕೆ ಕರೆದರೂ ಮದುವೆಗೆ ಮಾತ್ರ ಕರೆಯಬಾರದು ಎಂದು ಅಲ್ಲಿನ ಜನ ಹೇಳುತ್ತಿದ್ದರು. ಯಾಕೆಂದರೆ ಅವರು ಮದುವೆಗೆ ಕರೆದರೆ ಫಸ್ಟ್ ನೈಟಿನ ಹೊತ್ತಿಗೆ ಬರುತ್ತಾರೆಂಬ ಭಯ! ರೈ ಅವರು ಲೆಕ್ಕತಪ್ಪುವಷ್ಟು, ಸುಸ್ತಾಗುವಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಎಂದೂ ಯದ್ವಾತದ್ವಾ ಮಾತನಾಡಿದವರಲ್ಲ. ಯಾರನ್ನೂ ಬೈದವರಲ್ಲ. ಕಥೆ ಹೇಳಿದವರೇ ಅಲ್ಲ. ಅಂತಹ ಸಚಿವರು ಮಂಗಳೂರಿನ ತಿರುವೈಲಿನಲ್ಲಿ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭ ಭಾಷಣ ಮಾಡುವಾಗ ಚೇಳಿನ ಕಥೆ ಹೇಳಿದ್ದರು. ಒಬ್ಬ ತೊರೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಒಂದು ಚೇಳು ನೀರಲ್ಲಿ ಬಿದ್ದಿರುವುದು ಕಂಡಿತು. ಅದು ಮೇಲೆ ಬರಲು ಯತ್ನಿಸಿ, ಯತ್ನಿಸಿ ವಿಫಲವಾಗುತ್ತಿತ್ತು. ಅದನ್ನು ನೋಡಿದ ಆತ ಚೇಳನ್ನು ಹಿಡಿದು ಮೇಲೆ ಬಿಡಲು ನಿರ್ಧರಿಸಿ ಅದನ್ನು ಹಿಡಿದ. ಆದರೆ ಚೇಳು ಅವನ ಕೈ ಕಡಿದಿದ್ದರಿಂದ ಆತ ಅದನ್ನು ಬಿಟ್ಟ. ಚೇಳು ಪುನಃ ನೀರಿಗೆ ಬಿತ್ತು. ಮತ್ತೆ ಚೇಳನ್ನು ನೀರಿನಿಂದ ಮೇಲೆತ್ತಲು ಹೋದ. ಅದು ಕಡಿಯಿತು. ಈತ ಬಿಟ್ಟ ಚೇಳು ನೀರಿಗೆ ಬಿತ್ತು!! ಹೀಗೆ ಮಾಡುತ್ತಿರುವಾಗ ಇನ್ನೊಬ್ಬ ದಾರಿಹೋಕ ಆ ವಿಚಿತ್ರ ವ್ಯಕ್ತಿಯಲ್ಲಿ ಹೇಳಿದ: ಅಲ್ಲಯ್ಯ ಅದು ಕಡಿದರೂ ನೀನೇಕೆ ಅದನ್ನು ಮತ್ತೆ ಮತ್ತೆ ನೀರಿನಿಂದ ಮೇಲೆತ್ತಲು ಯತ್ನಿಸುವೆ. ನಿನಗೆ ಬೇರೆ ಕೆಲಸ ವಿಲ್ಲವೇ? ಅದಕ್ಕೆ ಆ ವ್ಯಕ್ತಿ ಅದು ನೀರಲ್ಲಿ ಬಿದ್ದು ಸಾಯುತ್ತಿದೆ. ಅದನ್ನು ಬದುಕಿಸುವುದು ನನ್ನ ಧರ್ಮ. ಆದರೆ ಕಡಿಯುವುದು ಅದರ ಗುಣ ಅಂದನಂತೆ. ಈ ಕತೆ ಕೇಳಿದ ಮೇಲೆ ರೈ ಯಾಕೆ ಈ ಕಥೆ ಹೇಳಿರಬಹುದು ಎಂದು ಯೋಚಿಸಿದೆ. ಅವರು ಕಥೆ ಹೇಳಿದ್ದರ ಅರ್ಥ ಇಷ್ಟೆ. ತನ್ನ ವಿರೋಧಿಗಳು ಚೇಳಿದ್ದಂತೆ. ನೀರಲ್ಲಿ ಬಿದ್ದ (ಕಷ್ಟದಲ್ಲಿರುವ) ಅವರನ್ನು ಎಷ್ಟು ಸರಿ ನಾನು ಎತ್ತಲು ಹೋದರೂ ನನಗೇ ಕಡಿಯುತ್ತಾರೆ. ಕಡಿಯುವುದು ಅವರ ಗುಣ. ಆದರೆ ಅವರನ್ನು ಬದುಕಿಸುವುದು ನನ್ನ ಧರ್ಮ ಎಂದು ನಾನು ತಿಳಿದುಕೊಂಡಿದ್ದೇನೆ ಎಂಬುದು ಒಳ ಅರ್ಥ. ಇದನ್ನು ರೈ ಸುಚ್ಯವಾಗಿ ಚೇಳಿನ ಕಥೆ ಮೂಲಕ ಹೇಳಿದ್ದರು. ತಿರುವೈಲು ಗ್ರಾಮವನ್ನು ಮಹಾನಗರ ಪಾಲಿಕೆಗೆ ಸೇರಿಸುವ ಸಂದರ್ಭ ಹಲವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಒಳ ರಾಜಕೀಯ ನಡೆಸಿದ್ದರು. ಇದು ರೈ ಸಿಟ್ಟಿಗೆ ಕಾರಣವಾಗಿತ್ತು. ಚೇಳಿನ ಕಥೆ ಮೂಲಕ ರೈ ವಿರೋಧಿಗಳನ್ನು ಕುಟುಕಿದರು. Posted by ವಿನಾಯಕ ಭಟ್ಟ at 9:55 AM 6 comments: Monday, June 30, 2008 ವ್ಹಾ! ವಾಟ್ ಎನ್ ಐಡಿಯಾ ಸರ್ ಜಿ!!! ಒಂದು ಸಾಧಾರಣ ಊರು. ಬಹುಶಃ ಕೇರಳ ರಾಜ್ಯದ್ದು. ಆ ಊರಿಗೊಂದೇ ಶಾಲೆ. ಅದೂ ಖಾಸಗಿ. ಆ ಊರಿನ ಒಬ್ಬ ಬಡ ಮುದುಕ ತನ್ನ ಮೊಮ್ಮಗಳು ಲಕ್ಷ್ಮಿರಾಧಾಳನ್ನು ಆ ಶಾಲೆಗೆ ಸೇರಿಸಲು ಹೋಗುತ್ತಾನೆ. ಆದರೆ ಅಲ್ಲಿ ಕಂಡದ್ದು ಎಡ್ಮಿಶನ್ ಫುಲ್ ಬೋರ್ಡು. ಮುದಕಪ್ಪನಿಗೆ ಅದನ್ನು ಓದಲು ಬಾರದೆ ಶಾಲೆಯ ಒಳಗೆ ಹೋಗಲು ನೋಡಿದಾಗ, ಅಲ್ಲಿನ ಒಬ್ಬ ಮಾಸ್ತರ ಅಜ್ಜನಿಗೆ ಸೀಟಿಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಇದನ್ನು ಆ ಶಾಲೆಯ ಮುಖ್ಯಸ್ಥ ಫಾದರ್ ನೋಡುತ್ತಾನೆ. ಆತನಿಗೆ ಆ ಮುದುಕಪ್ಪನ ಮೊಮ್ಮಗಳನ್ನು ಶಾಲೆಗೆ ಸೇರಿಸಿಕೊಳ್ಳಲಾಗದಿರುವುದಕ್ಕೆ ಬೇಸರವಾಗುತ್ತದೆ. ಅಂತಹವರಿಗೂ ಕಲಿಯಲು ಅವಕಾಶ ಸಿಗುವಂತಾಗಬೇಕು ಎಂದು ಆಶಿಸುತ್ತಾನೆ. ಅದಕ್ಕೆ ಆತ ಒಂದು ಐಡಿಯಾ ಮಾಡುತ್ತಾನೆ. ತನ್ನ ಶಾಲೆಯಲ್ಲಿ ಶಿಕ್ಷಕರು ಕಲಿಸುವಾಗ ಅವರ ಎದುರು ಮೊಬೈಲ್‌ಗಳನ್ನು ಇಡುತ್ತಾನೆ. ಈ ಮೊಬೈಲ್‌ನಲ್ಲಿ ಹಳ್ಳಿಯ ಕೆಲವೆಡೆ ಜಾಗ ಗುರುತಿಸಿ, ಅಲ್ಲಿಟ್ಟ ಮೊಬೈಲ್‌ಗೆ ಸಂಪರ್ಕ ಕಲ್ಪಿಸುತ್ತಾನೆ. ಮೊಬೈಲ್ ಎದುರು ಮಕ್ಕಳು ಕುಳಿತು ಶಾಲೆ ಕಲಿಯುತ್ತಾರೆ. ಹೀಗೆ ಮೊಬೈಲ್ ಎದುರಲ್ಲಿ ಕುಳಿತು ಕಲಿತ ಲಕ್ಷ್ಮಿ ರಾಧಾ ಉತ್ತಮ ವಿದ್ಯಾರ್ಥಿನಿ ಬಹುಮಾನ ಗೆಲ್ಲುತ್ತಾಳೆ. ಇಷ್ಟು ಕಾನ್ಸೆಪ್ಟು. ಅದಕ್ಕೆ ಅಂದವಾದ ಹಿನ್ನೆಲೆ ಸಂಗೀತ. ಓಹೊಹೊ ಓಹೊಹೊ ಓಹೊಹೋಹೊ ಎಂಬ ಮಕ್ಕಳ ಧ್ವನಿ. ಒಂದಷ್ಟು ಇಷ್ಟವಾಗಬಲ್ಲ ದೃಶ್ಯ. ಅಭಿಷೇಕ್ ಬಚ್ಚನ್‌ಗೆ ಇಲ್ಲಿ ಫಾದರ್ ಪಾತ್ರ. ಇದು ಇವತ್ತಷ್ಟೇ ಇಡುಗಡೆಯಾದ (ಚಿತ್ರವಲ್ಲ) ಜಾಹೀರಾತು. ಐಡಿಯಾ ಮೊಬೈಲ್‌ನದ್ದು. ಬಹುಶಃ ನನಗೆ ಗೊತ್ತಿರುವ ಮಟ್ಟಿಗೆ ಇದೇ ಮೊದಲ ಬಾರಿಗೆ ಚಲನಚಿತ್ರ ಬಿಡುಗಡೆ ಮಾಡುವಾಗ ಜಾಹೀರಾತು ಪ್ರಕಟಿಸುತ್ತಾರಲ್ಲ ಹಾಗೆ ಜಾಹೀರಾತು ಪ್ರಕಟಿಸಿದ್ದರು. ಇಂದು ರಾತ್ರಿ ೯.೩೦ಕ್ಕೆ ಬಿಡುಗಡೆ ಎಂದು ಇಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸೋಮವಾರ (೩೦-೦೬-೦೮) ರಾತ್ರಿ ಟಿವಿ ಚಾನಲ್‌ಗಳಲ್ಲಿ (ನಾನು ನೋಡಿದ್ದು ಫಿಲ್ಮಿ ಚಾನಲ್) ೧೦-೧೫ ನಿಮಿಷ ನಿರಂತರವಾಗಿ ಈ ಜಾಹೀರಾತನ್ನು ಮತ್ತೆ ಮತ್ತೆ ತೋರಿಸಲಾಯಿತು. ರಾತ್ರಿ ಈ ಜಾಹೀರಾತು ನೋಡಿದಾಗ ಅರೆ ಹೊಸತು ಅನ್ನಿಸಿತು. ಇಷ್ಟವಾಯಿತು. ಮತ್ತೆ ಮತ್ತೆ ಅದನ್ನೇ ನೋಡುತ್ತ ನೋಡುತ್ತ ಬೆಳಗ್ಗೆ ಪತ್ರಿಕೆಯಲ್ಲಿ ನೋಡಿದ ಜಾಹೀರಾತು ನೆನಪಾಯಿತು. ಥಟ್ಟನೆ ಪತ್ರಿಕೆ ತೆಗೆದುನೋಡಿದೆ. ಹೌದು ಅದೇ ಜಾಹೀರಾತು. ವ್ಹಾಟೆ ಎನ್ ಐಡಿಯಾ ಸರ್ ಜಿ! ಏನು ಐಡಿಯಾ ನೋಡಿ! ನಾನು ಕಲಿತ ಪತ್ರಿಕೋದ್ಯಮ ಪದವಿಯಲ್ಲಿ ಜಾಹೀರಾತು ಒಂದು ವಿಷಯ. ಈಗಲೂ ಪತ್ರಿಕೋದ್ಯಮದಲ್ಲಿದ್ದರೂ ನನಗೆ ಜಾಹೀರಾತಿನ ಬಗ್ಗೆ ಯಾಕೋ ವಿಶೇಷ ಆಸಕ್ತಿ. ನೀವೆಲ್ಲ ರಿಮೋಟ್ ಹಿಡಿದೇ ಟಿವಿ ಮುಂದೆ ಕುಳಿತುಕೊಳ್ಳುತ್ತೀರಿ. ಜಾಹೀರಾತು ಬಂದಾಕ್ಷಣ ಚಾನಲ್ ಬದಲಿಸಲು. ಆದರೆ ನಾನು? ಚಾನಲ್ ಬದಲಿಸುವುದು ಕಡಿಮೆ. ಜಾಹೀರಾತನ್ನೂ ಕಾರ್ಯಕ್ರಮದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನೀವೂ ಸರಿಯಾಗಿ ಗಮನಿಸಿ ನೋಡಿ ದಾರಾವಾಹಿ ಅಥವಾ ಇತರೆ ಕಾರ್ಯಕ್ರಮ ನಿರ್ಮಿಸಿರುವುದಕ್ಕಿಂತ ಹೆಚ್ಚಿನ ಬುದ್ದಿವಂತಿಕೆ ಮತ್ತು ಚಾಕಚಕ್ಯತೆಯಿಂದ ಜಾಹೀರಾತು ನಿರ್ಮಿಸಿರುತ್ತಾರೆ. ವಿಐಪಿ ಸೂಟ್‌ಕೇಸ್ ಜಾಹೀರಾತು ನಂಗಿನ್ನೂ ನೆನಪಿದೆ. ಹಡುಗಿಯೊಟ್ಟಿಗೆ ಒಬ್ಬ ಹುಡುಗ ಕಾರಿನಲ್ಲಿ ಹೋಗುತ್ತಿರುತ್ತಾನೆ. ಕಾರು ಕೆಟ್ಟು ನಿಲ್ಲುತ್ತದೆ. ಕೊಂಚ ಹೊತ್ತಿನಲ್ಲಿ ಬಂದ ಹುಡುಗನ ಬೈಕ್ ಹತ್ತಿ ಹುಡುಗಿ ಕಾರಿನ ಹುಡುಗನಿಗೆ ಟಾಟಾ ಮಾಡುತ್ತಾಳೆ. ಅದರ ನಂತರ ಈತ ಕಾರಿನಲ್ಲಿದ್ದ ಸೂಟ್‌ಕೇಸ್ ತೆಗೆದು, ಬಂದ ಲಾರಿಗೆ ಚತ್ರಿ ಮೂಲಕ ಸಂಪರ್ಕ ಕಲ್ಪಿಸಿ, ಸೂಟ್‌ಕೇಸ್ ಮೇಲೆ ತಾನು ಕುಳಿತುಕೊಳ್ಳುತ್ತಾನೆ. ಅದು ಚಕ್ರ ಇರುವ ಸೂಟ್‌ಕೇಸ್. ಸ್ವಲ್ಪ ದೂರ ಹೋಗುವಷ್ಟರಲ್ಲಿ ಲಾರಿ ಟಾಟಾ ಮಾಡಿ ಹೋಗಿದ್ದ ಹುಡುಗಿ ಕುಳಿತಿದ್ದ ಬೈಕನ್ನು ಓವರ್‌ಟೇಕ್ ಮಾಡುತ್ತದೆ. ಈತ ಅವಳಿಗೆ ಟಾಟಾ ಮಾಡುತ್ತಾನೆ. ಅದಕ್ಕೆ ಹಿಂದಿಯ ಹಳೆಯ ಹಾಡಾದ ಸುಹಾನಾ ಸಫರ್ ಹೇ ಯೆ ಮೋಸಂ ಹಸಿ... ಹಾಡು. ನೋಡಿ ಎಂತಹ ಅದ್ಭುತ ಕಲ್ಪನೆ. ಹಾಗಾಗಿಯೇ ಇಂದಿಗೂ ಮರೆತಿಲ್ಲ. ಬ್ರು ಕಾಫೀಯ, ಓಟು ಕೇಳಲು ಬಂದ ರಾಜಕಾರಣಿಗೇ ಪ್ರಶ್ನೆ ಕೇಳುವ ಚಹಾದ ಜಾಹೀರಾತುಗಳು ಇಂದಿಗೂ ನೆನಪಿನಲ್ಲಿವೆ. ಆತ ಸಹಾರಾ ವಿಮೆ ಮಾಡಿಸುತ್ತಾನೆ. ನಂತರ ಸ್ಕೂಟರ್ ಹತ್ತಿ ಬೆಟ್ಟದ ಬಳಿ ಹೋಗಿ ಕುಳಿತು ಸಾಂಬಾ, ವಾಂಬಾ ಎಲ್ಲಿದ್ದೀಯಾ ಇಳಿದು ಬಾ. ನಿನ್ನಮ್ಮನ ಎದೆ ಹಾಲು ಕುಡಿದಿದ್ದರೆ ಇಳಿದು ಬಾ ಎಂದು ಸವಾಲು ಹಾಕುವ ಸಹಾರಾ ಸಂಸ್ಥೆ ಜಾಹೀರಾತೂ ತಕ್ಕಮಟ್ಟಿಗಿದೆ. ಜಾಹೀರಾತು ವಲಯದಲ್ಲಿ ಕೆಲವರನ್ನು ಆಕರ್ಷಿಸಿದ ಮತ್ತು ಖುಶಿ ಕೊಟ್ಟಿದ್ದು ಪೆಪ್ಸಿ, ಕೋಕ್ ಸಂಸ್ಥೆಗಳ ಜಾಹೀರಾತು ಸಮರ. ಅದು ಇಂದಿಗೂ ಮುಂದುವರೆದಿದೆ. ಥಮ್ಸ್ ಅಪ್‌ಗಾಗಿ ಅಕ್ಷಯ್ ಕುಮಾರ್ ಮಂಗನಂತೆ ಎಲ್ಲೆಲ್ಲೊಂದೋ ಹಾರಿ, ಮೆಟ್ಟಿಲ ಮೇಲೆ ಜಾರಿ, ರಸ್ತೆಗಳ ನಡುವೆ ತೂರಿ ಲಾರಿಯಲ್ಲಿದ್ದ ಬಾಟಲಿ ಎಗರಿಸುತ್ತಾನೆ. (ಕುರ್‌ಕುರೆ ಜಾಹೀರಾತಿನಲ್ಲಿ ಜೂಹಿ ಹೀಗೆ ಪ್ಯಾಂಕು ಪ್ಯಾಂಕು ಎಂಬ ಮೀನು ಮಾರಾಟದ ಹಾರ್ನು ಕೇಳಿ ಯಾಹೀ ಅಂತ ಹಾರಿದ್ದೂ ನಿಮಗೆ ನೆನಪಿರಬಹುದು) ಇದೇ ಜಾಹೀರಾತು ಇರಿಸಿಕೊಂಡು ಪೆಪ್ಸಿಯವರು ಈಗ ಹೊಸ ಜಾಹೀರಾತು ಮಾಡಿದ್ದಾರೆ. ಅಂಕಲ್ ಈ ವಯಸ್ಸಿನಲ್ಲಿ ಕೋಲ್ಡ್‌ಡ್ರಿಂಕ್ಸ್‌ಗಾಗಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಕೈಕಾಲು ಮುರಿದುಕೊಳ್ಳಬೇಡ. ಯಾಕೆಂದರೆ ವಯಸ್ಸಾದ ಮೇಲೆ ಮುರಿದ ಎಲುಬು ಕೂಡಿಕೊಳ್ಳುವುದು ಲೇಟು. ಅದನ್ನು ಪೆಪ್ಸಿ ಕುಡಿ. ಎಲ್ಲ ಕಡೆ ಸಿಗುತ್ತೆ ಎಂದು ಜಾಹೀರಾತು ಮಾಡಿ ಥಮ್ಸ್‌ಅಪ್‌ಗೆ ಟಾಂಗ್ ನೀಡಿದ್ದಾರೆ. ಕೆಲವು ವರ್ಷದ ಹಿಂದಂತೂ ಇದು ಪರಾಕಾಷ್ಠೆಯ ತುದಿ ತಲುಪಿತ್ತು. ನೋಡುಗರಾದ ನಮಗೋ ಮಜವೊ ಮಜಾ. ಮಾನ ಹಕ್ಕು, ನಾಯಿ ಹಕ್ಕುಗಳು ಏನೇ ಹೇಳಲಿ ನಂಗಂತೂ ಹಚ್ ಜಾಹೀರಾತು ಇಷ್ಟ. ಹಚ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರ ಯಾವಾಗಲೂ ನಿಮಗೆ ಸಹಾಯ ಮಾಡಲು ಸಿದ್ಧವಾಗಿರುತ್ತದೆ ಎಂದು ನಾಯಿಯ ಸಹಾಯದ ಮೂಲಕ ಎಷ್ಟು ಅಂದವಾಗಿ ತೋರಿಸಿದ್ದಾರೆ. ಅದನ್ನು ನೋಡಿ ಖುಶಿ ಪಡುವುದು ಬಿಟ್ಟು ಅದ್ಯಾರೋ ಕೇಸು ಹಾಕಿದ್ದಾರಂತೆ. ಅದರ ಪರಿಣಾಮ ಹಚ್ ಕಂಪನಿಯವರು ಕೆಲವು ದಿನ ಕಂಪ್ಯೂಟರ್ ನಾಯಿಯನ್ನೂ ತೋರಿಸಿ ಚಟ ತೀರಿಸಿಕೊಂಡರು. ಈಗ ಮತ್ತೆ ಜೀವಂತ ನಾಯಿಯನ್ನೇ ತೋರಿಸುತ್ತಿದ್ದಾರೆ. ಸರಿಯಾಗಿ ಗಮನಿಸಿ ನೋಡಿ. ಜಾಹೀರಾತು ಮಾಡಲು ಭಾರೀ ಬುದ್ದಿವಂತಿಕೆ ಬೇಕು. ನಿಮ್ಮ ಕಲ್ಪನೆಗಳು ಏನೇ ಇದ್ದರೂ ೧-೨ ನಿಮಿಷದಲ್ಲಿ ಮುಗಿಸಬೇಕು. ಅದು ಗ್ರಾಹಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರು ಆ ವಸ್ತುವನ್ನು ಕೊಳ್ಳುವಂತಾಗಬೇಕು. ನನಗಂತೂ ಬಹುತೇಕ ಜಾಹೀರಾತುಗಳು ಅದ್ಭುತ ಅಂತಲೇ ಅನ್ನಿಸುತ್ತವೆ. ಮೊದಲಾದರೆ ಒಂದು ಜಾಹೀರಾತು ಮಾಡಿದರೆ ಕನಿಷ್ಟ ೬ ತಿಂಗಳು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ನಿಭಾಯಿಸಹುದಿತ್ತು. ಆದರೆ ಈಗ ಹಾಗಿಲ್ಲ. ಒಂದೆರಡು ತಿಂಗಳು. ಅಷ್ಟಕ್ಕೆ ಅದು ಹಳೆತು. ಮತ್ತೆ ಹೊಸ ಸ್ಲೋಗನ್, ಹೊಸ ಕಲ್ಪನೆ, ಹೊಸ ಜಾಹೀರಾತು. ಒಂದೊಂದು ಸಂಸ್ಥೆಯೂ ಜಾಹೀರಾತಿನ ಮೇಲೆ ಕೋಟಿಗಟ್ಟಲೆ ದುಡ್ಡು ಚೆಲ್ಲುತ್ತಿವೆ. ಇದರ ಪರಿಣಾಮ ಬೇಕಾದಷ್ಟು ಜಾಹೀರಾತು ಏಜೆನ್ಸಿಗಳು ಹುಟ್ಟಿಕೊಂಡಿವೆ. ಒಂದು ಸ್ಲೋಗನ್‌ಗೆ, ಒಂದು ಕಲ್ಪನೆಗೆ ಇಲ್ಲಿ ಕೋಟಿಗೂ ಮೀರಿದ ಬೆಲೆಯಿದೆ. ಇದಕ್ಕೇ ಇರಬೇಕು ನನಗೂ ಜಾಹೀರಾತಿನತ್ತ ಸೆಳೆತ! ಹಾಗಂತ ಕೆಟ್ಟ ಜಾಹೀರಾತುಗಳೇ ಇಲ್ಲವೆಂದಲ್ಲ. ಲೇಯ್ಸ್ ಚಿಪ್ಸ್‌ನ ಬಾಯಿ ಕಳೆದು ಆ... ಎಂದರಚುವ ಹೊಸ ಜಾಹೀರಾತು ಸ್ವಲ್ಪವೂ ಚೆನ್ನಾಗಿಲ್ಲ. ಅವರ ಮುಸುಡಿಗಳನ್ನು ನೋಡಿದರೆ ಲೇಯ್ಸ್ ಬಿಡಿ ಜನ ಬೇರೆ ಯಾವ ಚಿಪ್ಸೂ ತಿನ್ನದಂತಾಗಿದೆ. ಒಳ್ಳೆಯ ಜಾಹೀರಾತುಗಳು ಇಂತಹ ಕೆಟ್ಟ ಜಾಹೀರಾತುಗಳನ್ನು ಮರೆಸಿ ಮನಸ್ಸಿಗೆ ಮುದ ನೀಡುತ್ತವೆ. ಅದೇ ಸಂತೋಷ. (ನನಗೆ ಈ ಮೇಲ್ ಮೂಲಕ ಬಂದಿದ್ದ, ಸಂಗ್ರಹಿಸಿಟ್ಟಿದ್ದ ಕೆಲವು ಉತ್ತಮ ಜಾಹೀರಾತು ಫೋಟೋಗಳಿದ್ದವು. ಅವುಗಳನ್ನು ಈ ಲೇಖನದ ಜತೆ ಪ್ರಕಟಿಸಿದ್ದೇನೆ. ನೀವಾ ಹೇರ್ ಕ್ರೀಂ ಜಾಹೀರಾತು ನೋಡಿ,ನೀವು ಸತ್ತು ಮಣ್ಣಲ್ಲಿ ಮಣ್ಣಾದರೂ ಕೂದಲು ಹಾಗೇ ಇರುತ್ತದೆ! ಪೆಡಿಗ್ರೀ ತಿಂದರೆ ನಾಯಿ ಹೆಗ್ಗಣದಂತೆ ಟಾರ್ ರಸ್ತೆಯನ್ನೂ ಅಗೆದು ತೆಗೆಯಲ್ಲದು... ಹೀಗೆ. ನಿಮಗೆ ಇಷ್ಟವಾಗಬಹುದು ಅಂದುಕೊಂಡಿದ್ದೇನೆ) Posted by ವಿನಾಯಕ ಭಟ್ಟ at 11:10 PM 12 comments: Thursday, June 26, 2008 ಶಾಲಭಂಜಿಕೆ ಓದಲೇಕೆ ಅಂಜಿಕೆ? ಅದೇನೋ ಅಂಜಿಕೆ. ಶಾಲಭಂಜಿಕೆ ಎಂಬ ಹೆಸರು, ಅದರಲ್ಲಿನ ಅಪರೂಪದ ಸೆಳೆತಕ್ಕೆ ಸಿಕ್ಕೇ ಅದನ್ನು ತಂದಿದ್ದೆ. ಅದೇ ಅಪರೂಪತ್ವ ಅದನ್ನು ಓದಲು ಅಡ್ಡಿಯಾಯಿತು! ಇದರ ಪರಿಣಾಮ ಶಾಲಭಂಜಿಕೆ ಪುಸ್ತಕ ಕಪಾಟಿನಲ್ಲಿ ಇತರ ಪುಸ್ತಕಗಳ ನಡುವೆ ಕಣ್ಣಾಮುಚ್ಚಾಲೆ ಆಡುವವರಂತೆ ಅಡಗಿ ಕುಳಿತಿತ್ತು. ಸಾಕಷ್ಟು ಹೊಸ ಪುಸ್ತಕಗಳನ್ನು ತರುತ್ತಿದ್ದೆನಾದ್ದರಿಂದ ಹಳೆಯ ಪುಸ್ತಕಗಳು ನೆನಪಿನಾಳದಲ್ಲಿ ಹೂತುಹೋಗುತ್ತಿದ್ದವು. ಅದನ್ನು ಎಂದೂ ಕೆದಕುತ್ತಿರಲಿಲ್ಲ. ಆದರೀಗ ದಿಲ್ಲಿಗೆ ಬಂದ ಮೇಲೆ ಹೊಸ ಪುಸ್ತಕಗಳು ಸಿಗದು. ಹೀಗಾಗಿ ಓದದೇ ಕಪಾಟಿನಲ್ಲಿಟ್ಟ ಪುಸ್ತಕಗಳಿಗೆ ಬಿಡುಗಡೆಯ ಭ್ಯಾಗ್ಯ. ಅಂತಹ ಓದದೇ ಉಳಿದ ಪುಸ್ತಕಗಳ ನಡುವಿಂದ ಅಂಜಿಕೆಯಿಂದಲೇ ಕೈಗೆತ್ತಿಕೊಂಡ ಪುಸ್ತಕ ಶಾಲಭಂಜಿಕೆ. ಲೇಖಕರು ನನ್ನ ಮಟ್ಟಿಗೆ ಹೊಸಬರು. ಡಾ. ಕೆ.ಎನ್. ಗಣೇಶಯ್ಯ. ಅವರ ಬಗ್ಗೆ ಕೇಳಿದ್ದಿಲ್ಲ. ಓದಿದ್ದಂತೂ ಮೊದಲೇ ಇಲ್ಲ. ಆದರೆ ಶಾಲಭಂಜಿಕೆ ಎಂಬ ಹೆಸರೇ ವಿಚಿತ್ರವಾಗಿದೆ. ಪುಸ್ತಕವೂ ವಿಚಿತ್ರವಾಗಿಯೇ ಇರಬಹುದು ಎಂದುಕೊಂಡೇ ಅತ್ರಿ ಬುಕ್‌ಸ್ಟಾಲ್‌ನಿಂದ ಕೊಂಡುತಂದಿದ್ದೆ. ಹಾಗೇ ಇಟ್ಟಿದ್ದೆ. ನಿನ್ನೆ ಕೂಡ ಪುಸ್ತಕ ತೆರೆದಾಗ ಮನದಲ್ಲಿ ಶಾಲಂಜಿಕೆ ಬಗ್ಗೆ ಅಂಜಿಕೆ ಇದ್ದೇ ಇತ್ತು. ಆದರೆ ಓದುತ್ತ ಹೋದಂತೆ ಅಂಜಿಕೆ ದೂರವಾಗಿ ಆಸಕ್ತಿ ಕೆರಳಿತು. ಪುಟ ಪುಟದಲು ಪುಟಿದೆದ್ದಿತು... ಈ ಪುಸ್ತಕದಲ್ಲಿರುವ ೮ ಕತೆಗಳು ಒಂದಷ್ಟು ಇತಿಹಾಸ ಜ್ಞಾನ, ಹಲವು ದೇಶದ ಕೇಳರಿಯದ ವಿಷಯಗಳ ಜತೆಗೆ ರೋಚಕ ತಿರುವುಗಳನ್ನು ಒದಗಿಸುತ್ತವೆ. ಇಲ್ಲಿನ ಕಥೆಗಳ ವಿಶೇಷವೆಂದರೆ ಪ್ರತಿ ಕಥೆಯೂ ಸತ್ಯಘಟನೆಗಳೊಂದಿಗೆ, ಇತಿಹಾಸದೊಂದಿಗೆ ಥಳಕು ಹಾಕಿಕೊಂಡಿವೆ. ಕೆಲವು ಕತೆಗಳಂತೂ ಗಣೇಶಯ್ಯ ಬರೆದಿದ್ದೇ ಸತ್ಯವಿರಬಹುದೇ ಅನ್ನಿಸಿಬಿಡುತ್ತದೆ. ಈ ಕಥೆಗಳು ಓದಿನ ಸುಖದ ಜತೆಗೆ ಒಂದಷ್ಟು ಜ್ಞಾನವನ್ನೂ ಅರಿಯದಂತೆ ನಿಮ್ಮ ತಲೆಯೊಳಗೆ ತುರುಕಿಬಿಡುತ್ತವೆ. ನಂಜಾದ ಮಧು ಕಥೆಯಲ್ಲಿ ಜೇನುಹುಳಗಳು ಜೇನು ಸಂಗ್ರಹಿಸಿ ಬಂದ ನಂತರ ಗೂಡಿನಲ್ಲಿ ನೃತ್ಯ ಮಾಡುತ್ತವೆ. ಈ ನೃತ್ಯದ ಮೂಲಕ ಅವು ಇತರ ಹುಳುಗಳಿಗೆ ತಾನು ಜೇನಿನ ಮರ ಇರುವ ದಿಕ್ಕು ಮತ್ತು ದೂರವನ್ನು ತಿಳಿಸುತ್ತವೆ. ಜೇನು ಮೆದ್ದು ಗೊತ್ತಿದ್ದರೂ ಈ ವಿಷಯ ನನಗೆ ತಿಳಿದಿರಲಿಲ್ಲ. ಬಹುಶಃ ಜೇನು ಸಾಕುವ, ತಿನ್ನುವ ಎಷ್ಟೋ ಜನರಿಗೆ ಗೊತ್ತಿಲ್ಲ. ಆದರೆ ಈ ಕಥೆ ಮೂಲಕ ಅದು ಗೊತ್ತಾಯಿತು. ಅದೇರೀತಿ ಹುಲಿಯ ಮಡಿಲ ಹುಳು ಮೂಲಕ ಶ್ರೀಲಂಕಾದಿಂದ ಕಾಫಿ ಹಣ್ಣಿನ ಹುಳುಗಳು ಭಾರತಕ್ಕೆ ಬಂದಿದ್ದು, ಪರಾಗ ತ್ಯಾಗದ ಮೂಲಕ ಆಯಿಲ್ ಪಾಮ್ ಗಿಡಗಳ ವಿಷಯ ತಿಳಿಯುವಂತಾಯಿತು. ಇದರ ಜತೆಗೆ ಅನಿರೀಕ್ಷಿತ, ಅನೂಹ್ಯ ತಿರುವುಗಳು ಕತೆಯನ್ನು ಓದೆಬಲ್ ಆಗಿಸಿವೆ. ತಡ ಇನ್ನೇಕೆ? ಶಾಲಭಂಜಿಕೆ ಓದಲು ಬೇಡ ಅಂಜಿಕೆ. ಹಾಗಂತ ನಿಮಗೆಲ್ಲ ತಿಳಿಸಲು ಇದನ್ನು ಇಲ್ಲಿ ಬ್ಲಾಗಿಸಿದ್ದೇನೆ. ಗಣೇಶಯ್ಯ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಂತೆ. ಅವರು ಕತೆ ಬರೆದಷ್ಟೇ ಆಸಕ್ತಿಕರವಾಗಿ ಪಾಠ ಮಾಡಿದಲ್ಲಿ ಅವರ ಬಳಿ ಕಲಿತವರು ಪುಣ್ಯವಂತರು. ಯಾಕೆಂದರೆ ನಮ್ಮ ವಿಶ್ವವಿದ್ಯಾಲಯದ ಹೆಚ್ಚಿನ ಪ್ರಾಧ್ಯಾಪಕರು ಆಸಕ್ತಿ ಮೂಡಿಸುವಂತೆ ಕಲಿಸುವುದನ್ನೇ ಮರೆತಿದ್ದಾರೆ. ಬರೆಯುವುದಂತೂ ಗೊತ್ತೇ ಇಲ್ಲ ಬಿಡಿ. ಇದಕ್ಕೆ ಗಣೇಶಯ್ಯ ಅಪವಾದದಂತಿದ್ದಾರೆ. Posted by ವಿನಾಯಕ ಭಟ್ಟ at 11:35 AM 7 comments: Saturday, June 21, 2008 ಅಂದು ನೋಡಿದ ದಿಲ್ಲಿ ಹಾಗೇ ಇದೆ ಇಲ್ಲಿ ಶಾಂತವಾದ, ಹಳೆಯ ಬೆಂಗಳೂರನ್ನು ನೆನಪಿಸುವ ಸೌತ್ ಎವಿನ್ಯು. ಚಿಕ್ಕ ಓಣಿಯಂತಿರುವ ಮೈಸೂರು ಕೆಫೆ. ನಮ್ಮೂರ ಹೆದ್ದಾರಿಯನ್ನೂ ಮೀರಿಸುವಷ್ಟು ಅಗಲವಿರುವ, ವಾಹನಗಳೆಲ್ಲಿ ಜಾರಿಬಿಡುತ್ತವೋ ಅನ್ನುವಂತಹ ರಸ್ತೆಗಳು. ಸೌತ್ ಎವಿನ್ಯುವಿನ ಅಗಲವಾದ ರಸ್ತೆಯಲ್ಲಿ ನಡೆಯುತ್ತಿದ್ದರೆ ಕಣ್ಣೆದುರಿಗೆ ರಾಷ್ಟ್ರಪತಿ ಭವನದ ಭವ್ಯ ದೃಶ್ಯ. ಅಂದು ನೋಡಿದ, ಮನಸಲ್ಲಿ ಅಚ್ಚೊತ್ತಿದ್ದ ದಿಲ್ಲಿ ಚಿತ್ರಕ್ಕೆ ಈಗಿನ ಚಿತ್ರ ಕರೆಕ್ಟಾಗಿ ಮ್ಯಾಚ್ ಆಗುತ್ತಿದೆ! ೮ ವರ್ಷದ ಹಿಂದೆ ವಿದ್ಯಾರ್ಥಿಯಾಗಿ ದಿಲ್ಲಿಗೆ ಬಂದಿಳಿದಿದ್ದೆ. ಆಗ ರಾಜಧಾನಿ ಮಂಜಿನ ಮುಸುಕು ಹೊದ್ದು ಮಲಗಿದಂತಿತ್ತು. ಮಂಜಿನ ಮಬ್ಬು ಮಬ್ಬು ಮುಸುಕಿನಲ್ಲಿ ರಾಷ್ಟ್ರಪತಿ ಭವನ ನೋಡಿದ್ದೆ. ಮೊದಲ ಬಾರಿ. ಮಂಜು ಮುಸಿಕಿದ ಹಾದಿಯಲ್ಲೇ ನಡೆದುಕೊಂಡು ನಾವು ನಾಲ್ಕೈದು ಮಂದಿ ಇಂಡಿಯಾ ಗೇಟ್‌ಗೆ ನಡೆದುಕೊಂಡು ಹೋಗಿದ್ದೆವು. ಆಹಾ ಎಂಥಾ ಬೆರಗು! ಆಗಲೂ ಈಗಲೂ ದಿಲ್ಲಿಗೆ ಎಂದು ಹೊರಟು ಬಂದಿಳಿದಿದ್ದು ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ. ಅಲ್ಲಿಂದ ಪಯಣ ಸೌತ್ ಎವಿನ್ಯುಗೆ. ಆಗ ಬಂದಾಗ ಸಂಸದ ಸನದಿ ಅವರ ಮನೆಯಲ್ಲಿ ಉಳಿದಿದ್ದೆವು. ಈ ಬಾರಿ ಧಾರವಾಡ ಉತ್ತರ ಕ್ಷೇತ್ರದ ಸಂಸದ ಪ್ರಹ್ಲಾದ ಜೋಷಿ ಅವರ ಮನೆಯಲ್ಲಿ. ಒಬ್ಬನೇ ರೈಲಿನಲ್ಲಿ ಬಂದು ನಿಜಾಮುದ್ದೀನ್‌ನಲ್ಲಿ ಇಳಿದು, ರಿಕ್ಷಾ ಹತ್ತಿ ಸೌತ್‌ಎವಿನ್ಯುಗೆ ಬಂದಿಳಿದೆ. ಅದೊಂದು ಅಪರಿಚಿತ, ಹೊಸ ಜಾಗ ಅನ್ನಿಸಲೇ ಇಲ್ಲ. ನಾನು, ನನ್ನ ಮತ್ತು ಗೆಳೆಯರ ಅಧ್ಯಯನ ಪ್ರವಾಸದ ಗೆಜ್ಜೆ ಗುರುತುಗಳು ಸ್ಪಷ್ಟವಾಗಿ ಅಲ್ಲಿ ಕಾಣುತ್ತಿದ್ದವು. ಸಮೀಪದಲ್ಲಿರುವ ಸರ್ದಾರ್ಜಿಯ ಪರಾಟ ಹೋಟೆಲ್, ಹಾಲಿನ ಡೇರಿ, ತರಕಾರಿ ಅಂಗಡಿ, ಗೆಳೆಯರು ಕುಳಿತು ಸುದ್ದಿ ಹೇಳಿದ, ಪ್ರೀತಿಯ ವಿಷಯಕ್ಕೆ ಜಗಳ ಮಾಡಿದ ಕಟ್ಟೆ ಹೀಗೆ ಎಲ್ಲವೂ ಪರಿಚಿತ ಅನ್ನಿಸಿತು. ಸೌತ್ ಎವಿನ್ಯು ವಿಶೇಷವೇ ಅದು. ದಕ್ಷಿಣ ಭಾರತದವರ ಮಟ್ಟಿಗೆ ಸೌತ್ ಎವಿನ್ಯು ನಮ್ಮದೇ ಊರಿನಂತೆ ಅನ್ನಿಸುತ್ತದೆ. ಸೌತ್ ಎವಿನ್ಯು ಒಂದರ್ಥದಲ್ಲಿ ದಿಲ್ಲಿಯ ಕರ್ನಾಟಕ. ಕರ್ನಾಟಕದವರು ಬಂದರೆ ಉಳಿಯುವುದು ಸೌತ್ ಎವಿನ್ಯುದಲ್ಲೇ ಹೆಚ್ಚು. ಅಲ್ಲಿದ್ದರೆ ನಿಮಗೆ ಕರ್ನಾಟಕದಿಂದ ಬಹಳ ದೂರದಲ್ಲಿದ್ದೇವೆ ಎಂಬ ಅನುಭವವೇ ಆಗದು. ೮ ವರ್ಷ ಹಿಂದಿನ ಅಧ್ಯಯನ ಪ್ರವಾಸ ನನ್ನ ದಿಲ್ಲಿ ಉದ್ಯೋಗದ ಪ್ರಯಾಸ ಕಡಿಮೆ ಮಾಡಿತು. ನಿಜ ಹೇಳಬೇಕೆಂದರೆ ಸಂಪಾದಕು ದಿಲ್ಲಿಯಲ್ಲಿ ವರದಿಗಾರನಾಗುವ ಅವಕಾಶ ಇರುವ ಬಗ್ಗೆ ತಿಳಿಸಿದಾಗ ನಾನು ಒಪ್ಪಿಕೊಳ್ಳಲು ಅಧ್ಯಯನ ಪ್ರವಾಸವೇ ಕಾರಣ. ನನಗೆ ರಶ್ ಅಂದರೆ ಆಗದು. ಟ್ರಫಿಕ್ ಜಾಂ, ಎಲ್ಲಿ ನೋಡಿದರಲ್ಲಿ ರಶ್. ಹೀಗಾದರೆ ನೆಮ್ಮದಿಯ ಜೀವನ ಅಸಾಧ್ಯ. ನನ್ನ ಮಟ್ಟಿಗೆ. ಆದರೆ ಅಧ್ಯಯನ ಪ್ರವಾಸಕ್ಕೆ ಬಂದಾಗ ನೋಡಿದ ದಿಲ್ಲಿ, ಇಲ್ಲಿನ ಅಗಲವಾದ ರಸ್ತೆ, ಸಿಗ್ನಲ್‌ಗಳ ಬದಲು ವೃತ್ತಗಳು, ಮಂಜು ಮುಸಿಕಿದ ವಾತಾವರಣ ಇವೆಲ್ಲ ನನ್ನನ್ನು ಆಕರ್ಷಿಸಿದ್ದವು. ದಿಲ್ಲಿಯಲ್ಲಿ ವರದಿಗಾರನಾಗಲು ಒಪ್ಪಿಕೊಳ್ಳಲು ಇದೂ ಒಂದು ಕಾರಣವಾಯಿತು. ಬಹುಶಃ ಅಧ್ಯಯನ ಪ್ರವಾಸದ ನೆಪದಲ್ಲಿ ದಿಲ್ಲಿ ನೋಡದೇ ಹೋಗಿದ್ದರೆ ಇಲ್ಲಿಗೆ ಬರಲು ಮನಸ್ಸು ಒಪ್ಪುತ್ತಿರಲಿಲ್ಲವೇನೊ. ಅಥವಾ ಬಂದರೂ ಸ್ವಲ್ಪ ಕಷ್ಟವಾಗುತ್ತಿತ್ತೇನೊ. ಹಾಗಂತ ದಿಲ್ಲಿಯಲ್ಲಿ ಟ್ರಾಫಿಕ್ ಜಾಂ ಇಲ್ಲ. ರಸ್ತೆಗಳಲ್ಲಿ ಹೊಂಡಗಳೇ ಇಲ್ಲ ಎಂದು ನಾನುಹೇಳುತ್ತಿಲ್ಲ. ಇಲ್ಲೂ ಆಗಾಗ ಟ್ರಾಫಿಕ್ ಜಾಂ ಸಿಗುವುದಿದೆ. ಆದರೆ ಬೆಂಗಳೂರಿನಷ್ಟಲ್ಲ! ಇಲ್ಲೂ ಹೊಂಡಗಳಿವೆ ಆದರೆ ರಾಷ್ಟ್ರೀಯ ಹೆದ್ದಾರಿ ೧೭ ಮತ್ತು ೪೮ರಷ್ಟಲ್ಲ!! ಅದೇ ಸಮಾದಾನ. ಇನ್ನೂ ಒಂದು ಸಮಾದಾನವೆಂದರೆ ಪೆಟ್ರೋಲ್, ಡೀಸೆಲ್ ಬೆಲೆ ಉಳಿದ ಕಡೆಗಿಂತ ಕಡಿಮೆ ಇದೆ! Posted by ವಿನಾಯಕ ಭಟ್ಟ at 4:23 PM 4 comments: Monday, June 16, 2008 ಪದ್ಮಪ್ರಿಯಾ ಸಾವಿಗೊಂದು ಬೆನ್ನುಡಿ... ಕೊಂಚ ಸಹನೆ, ಶಾಸಕರ ಮಾನದ ಬಗೆಗಿದ್ದ ಕಾಳಜಿಯ ಒಂದಷ್ಟಾದರೂ ಪದ್ಮಪ್ರಿಯಾಳ ಭಾವನೆಯ ಬಗ್ಗೂ ಇರುತ್ತಿದ್ದರೆ ಬಹುಶಃ ಅವಳು ಜೀವನಕ್ಕೆ ದುರಂತ ಅಂತ್ಯ ಕಾಣಿಸಿಕೊಳ್ಳಬೇಕಾಗಿರಲಿಲ್ಲ. ಪದ್ಮಪ್ರಿಯಾ ಮತ್ತು ಅತುಲ್ ನಡುವಿನ ಪ್ರೇಮ ತೀರ ಗುಪ್ತವಾಗೇನೂ ಉಳಿದಿರಲಿಲ್ಲ. ಸ್ವತಃ ರಘುಪತಿ ಭಟ್ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು. ಅಧಿಕೃತವಾಗಲ್ಲದಿದ್ದರೂ ಅನಧಿಕೃತವಾಗಿ, ಗಾಳಿಸುದ್ದಿಯಾಗಿ ಅದು ಉಡುಪಿ ಜನರ ಬಾಯಿ- ಕಿವಿಯಲ್ಲಿ ಸುಳಿದಾಡುತ್ತಿತ್ತು. ಇದರಿಂದಾಗಿಯೇ ಪದ್ಮಪ್ರಿಯಾ ನಾಪತ್ತೆಯಾದಾಗ ಉಡುಪಿ ಜನ ಕಣ್ಣು ತಿರುಗಿಸಿದ್ದು ಅತುಲ್ ಕಡೆಗೆ. ಇಡೀ ಘಟನೆಯಲ್ಲಿ ಸ್ವತಃ ಪದ್ಮಪ್ರಿಯಾ, ಅತುಲ್, ಶಾಸಕರ ರಘುಪತಿ ಭಟ್ ಮತ್ತು ನಮ್ಮ ಸರಕಾರ ಹೀಗೆ ಎಲ್ಲರೂ ಕೊಂಚ ಎಡವಿದವರೇ. ಪದ್ಮಪ್ರಿಯಾ ಗೃಹಿಣಿ. ಆಕೆಯ ಸ್ವಂತ ಭಾವನೆಗಳಿಗೆ ಬೆಲೆ ಖಂಡಿತ ಇದೆ. ಅದನ್ನೇ ಆಕೆ ಇನ್ನಷ್ಟು ಸಹನೆಯಿಂದ, ವ್ಯವಸ್ಥಿತವಾಗಿ ಸಾಧಿಸಿಕೊಳ್ಳಹುದಿತ್ತು. ಮಕ್ಕಳ ಬಗ್ಗೆ ಕೊಂಚ ಯೋಚಿಸಬಹುದಿತ್ತು. ರಘುಪತಿ ಭಟ್ಟರಿಂದ ವಿಚ್ಛೇದನ ಪಡೆದು ತನಗೆ ಇಷ್ಟವಾದಂತೆ ಜೀವನ ನಡೆಸಹುದಿತ್ತು. ಇಲ್ಲವೇ ಹೇಗೂ ಇಬ್ಬರ ಸಂಬಂಧ ಹದಗೆಟ್ಟಿದ್ದೇ ಆದರೆ ಗಂಡನನ್ನು ಒಪ್ಪಿಸಿಯೇ ಇಷ್ಟಪಟ್ಟವರ ಜತೆ ಹೋಗಬಹುದಿತ್ತು. ಇದ್ಯಾವುದನ್ನೂ ಮಾಡದೆಯೂ ಹೋಗುವ ಕೊನೆಯ ಕ್ಷಣದಲ್ಲಿ ಒಂದು ಸಣ್ಣ ಚೀಟಿ ಬರೆದಿಟ್ಟು ಹೋಗಿದ್ದರೂ ಇಷ್ಟು ಗೊಂದಲ, ಕುತೂಹಲ ಸೃಷ್ಟಿಯಾಗುತ್ತಿರಲಿಲ್ಲ. ಇನ್ನು ಅತುಲ್. ಅವರ ನಡುವಿನ ಸಂಬಂಧ, ಭಾವನೆಗಳು ಏನೇ ಇರಲಿ. ಆತನಿಗೂ ಜವಾದಾರಿಗಳಿವೆ. ಆತನೂ ಸಂಸಾರಸ್ಥ. ಆತ ಆಕೆಗೆ ತಿಳಿಹೇಳಬಹುದಿತ್ತು ಮತ್ತು ತಿಳಿಹೇಳಬೇಕಿತ್ತು. ಆತನೂ ಅದನ್ನು ಮಾಡಲಿಲ್ಲ. ಅಥವಾ ಆತ ಬುದ್ದಿ ಹೇಳಿದರೂ ಈಕೆ ಕೇಳಲಿಲ್ಲವೊ. ಇನ್ನು ಶಾಸಕ ಭಟ್ಟರ ಮನಸ್ಥಿತಿ ಅರ್ಥವಾಗದ್ದು. ಅವರಿಗೆ ಕೌಟುಂಬಿಕ ಸಂಬಂಧ ಹೇಗೇ ಇರಲಿ ಸಾರ್ವಜನಿಕರಿಗೆ ಅದು ಚೆನ್ನಾಗಿಯೇ ಕಾಣಬೇಕು. ಒಬ್ಬ ಶಾಸಕನಾಗಿ ಅದು ಅನಿವಾರ್ಯ. ಇದೇ ಕಾರಣಕ್ಕೆ ಅವರು ವಿಚ್ಛೇದನ ಬೇಡಿಕೆ ಮುಂದೂಡುತ್ತ ಬಂದಿದ್ದರು ಎಂಬುದು ಸುದ್ದಿ. ಒಬ್ಬ ರಾಜಕಾರಣಿಗೆ ಹೆಂಡತಿಕೊಡುವ ವಿಚ್ಛೇದನ ಸೋಲಿಗೂ ಕಾರಣವಾಗಿಬಿಡಹುದು. ಪತ್ನಿ ತಿರಸ್ಕರಿಸಿದಂತೆ ಜನವೂ ತಿರಸ್ಕರಿಬಿಟ್ಟರೆ? ಎಂಬ ಭಯ. ಇನ್ನು ಸರಕಾರ. ಅದಕ್ಕೆ ಅದರ ಮರ್ಯಾದೆ, ಅದಕ್ಕಾಗುವ ಇರುಸುಮುರುಸುಗಳನ್ನು ತಪ್ಪಿಸಿಕೊಳ್ಳುವುದಷ್ಟೇ ಮುಖ್ಯ. ಅವರು ಶಾಸಕರೇ ಆಗಿರಲಿ, ಅವರ ಪತ್ನಿಯೇ ಆಗಿರಲಿ ಅದನ್ನೊಂದು ಪರಾರಿ ಪ್ರಕರಣವನ್ನಷ್ಟೇ ಆಗಿ ನೋಡುವುದು ಸರಕಾರದಿಂದಲೂ ಸಾಧ್ಯವಾಗಲಿಲ್ಲ. ಸಾಧ್ಯವಾಗುವುದೂ ಇಲ್ಲ. ಶಾಸಕರ ಪತ್ನಿ ಪರಾರಿಯನ್ನು ಸರಕಾರ ತನ್ನ ಪ್ರತಿಷ್ಠೆಯ ವಿಷಯ ಮಾಡಿಕೊಳ್ಳದೇ ಹೋಗಿದ್ದರೆ ಬಹುಶಃ ಸಮಸ್ಯೆ ನಿಧಾನವಾಗಿ ಬಗೆಹರಿಯುತ್ತಿತ್ತೇನೊ. ಅದೂ ಆಗಲಿಲ್ಲ. ಸರಕಾರ ಮತ್ತು ಅದರ ಸಕಲ ಅಂಗಗಳು ಶಾಸಕರ ಮಾನ ಕಾಪಾಡುವ ಮೂಲಕ ತಮ್ಮ ಮಾನವನ್ನೂ ಕಾಪಾಡಿಕೊಳ್ಳುವ ಆತುರದಲ್ಲಿದ್ದವು. ಹಾಗಿಲ್ಲದೇ ಹೋಗಿದ್ದಲ್ಲಿ ಕರ್ನಾಟಕ ಪೊಲೀಸರು ದಿಲ್ಲಿ ಪೊಲೀಸರ ಸಹಾಯ ಪಡೆದುಕೊಳ್ಳುತ್ತಿದ್ದರು. ಹಾಗೆ ಮಾಡಿದ್ದರೆ ಪದ್ಮಪ್ರಿಯಾ ಉಳಿಯುತ್ತಿದ್ದಳೇನೊ. ಇದರಲ್ಲಿ ಮಾಧ್ಯಮಗಳ ಪಾಲು ತುಂಬ ಕಡಿಮೆ. ಆದರೂ ಸ್ವಲ್ಪ ಇದೆ. ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕನ್ನಡದ ಸುದ್ದಿ ಚಾನಲ್ ಒಂದು ಚಾಲೂ ಆಗಿತ್ತು. ಆಕೆ ಅದನ್ನೇನಾದರೂ ನೋಡಿ ತಕ್ಷಣಕ್ಕೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಳೇ? ಎಂಬ ಅನುಮಾನವೂ ಇದೆ. ಯಾಕೆಂದರೆ ಚಾನಲ್‌ನವರು ಟಿಆರ್‌ಪಿ ಗಳಿಸುವ ಗಡಿಬಿಡಿಯಲ್ಲಿ ಸುದ್ದಿಯನ್ನು ಬ್ರೇಕ್ ಮಾಡುವ ಆತುರದಲ್ಲಿ ಬಾಯಿಗೆ ಬಂದಿದ್ದನ್ನೆಲ್ಲ ಒದರುತ್ತಲೇ ಇರುತ್ತಾರೆ. ಅದು ಆ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಯಾವ ಪರಿಣಾಮ ಬೀರೀತು ಎಂಬುದು ಅವರಿಗೆ ಮನಸ್ಸಿನಲ್ಲಿ ಇರುವುದೇ ಇಲ್ಲ.ಈ ಎಲ್ಲ ಕಾರಣಗಳೂ ಸೇರಿ ಉಡುಪಿ ಶಾಸಕ ರಘುಪತಿ ಭಟ್ಟರ ಪತ್ನಿ ದಿಲ್ಲಿಯ ಮನೆಯೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನಿರೀಕ್ಷಿತ ಅಂತ್ಯ ಕಾಣುವಂತಾಯಿತು. ಯಾವುದೇ ವಿಷಯವಿರಲಿ ಅದು ಅದರ ವ್ಯಾಪ್ತಿ ಮೀರಿ ಬೃಹತ್ತಾಗಿ ಬೆಳೆದಾಗ ಅನಾಹುತಗಳು ಸಂಭವಿಸುತ್ತವೆ. ಪದ್ಮಪ್ರಿಯಾ ವಿಷಯದಲ್ಲಿ ಆಗಿದ್ದೂ ಇದೇ. ಪದ್ಮಪ್ರಿಯಾ ಸಾವು ಯಾಕೋ ಬೇಸರ ಉಂಟುಮಾಡಿದೆ. ಛೆ ಹೀಗಾಗಬಾರದಾಗಿತ್ತು ಅನಿಸುತ್ತಿದೆ. ಆದರೂ ಹಾಗಾಗಿ ಹೋಗಿದೆ. ನನಗೆ ಇಂತಹ ದುಃಖದಲ್ಲೂ ಒಂದು ಹಾಸ್ಯ ಕಾಣಿಸುತ್ತಿದೆ. ಅದೇನೆಂದರೆ ಭಾನುವಾರ ಬೆಳಗ್ಗೆ ಟಿವಿ ಚಾನಲ್ ಮತ್ತು ಪತ್ರಿಕೆಗಳಲ್ಲಿ ಪದ್ಮಪ್ರಿಯಾ ಕೋಲಾರದಲ್ಲಿ ಪತ್ತೆ. ಉಡುಪಿಗೆ ರವಾನೆ, ಮಂಗಳೂರಿನ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಮನವೊಲಿಕೆ ಮುಂತಾದ ಸುದ್ದಿಗಳನ್ನು ಪ್ರಕಟವಾಗಿದ್ದವು. ಪ್ರಕಟವಾಗುತ್ತಲೇ ಇದ್ದವು. ಆಕೆ ದಿಲ್ಲಿಯ ಮನೆಯೊಂದರಲ್ಲಿ ಕುಳಿತು ಇದನ್ನೆಲ್ಲ ನೋಡುತ್ತಿದ್ದಳು! ಆಕೆಗೆ ಈ ಮಾಧ್ಯಮಗಳು ಅದೆಷ್ಟು ಸುದ್ದಿ ಬಿತ್ತರಿಸುತ್ತವೆ ಅನ್ನಿಸಿರಬೇಕಲ್ಲ. ಹೀಗೆ ಅನ್ನಿಸಿಯೂ ಅದೇ ಮಾಧ್ಯಮ ಬಿತ್ತರಿಸಿದ ಸುದ್ದಿ ನಂಬಿ ಆತ್ಮಹತ್ಯೆಗೆ ಮನಸ್ಸು ಮಾಡಿರಬಹುದಾ? ಅನುಮಾನ. ಆದರೂ ಸಾಯುವ ಮುಂಚೆ ಮಾಧ್ಯಮಗಳಲ್ಲಿ ಪ್ರಕಟವಾದ ಪದ್ಮಪ್ರಿಯಾ ಕೋಲಾರದಲ್ಲಿ ಪತ್ತೆ ಸುದ್ದಿ ನೋಡಿ ಆಕೆ ನಕ್ಕಿರಬಹುದಲ್ಲಾ... Posted by ವಿನಾಯಕ ಭಟ್ಟ at 2:43 AM 7 comments: Saturday, June 07, 2008 ಮಂಜುನಾಥ ಕಲ್ಮನಿಯಿಂದ ಕಲಿಯಬೇಕಾದ್ದು... ಆತ ಸಾಫ್ಟ್‌ವೇರ್ ಎಂಜಿನಿಯರ್. ಹಣ, ಉತ್ತಮ ಜೀವನ ಹುಡುಕಿ ಅಮೆರಿಕಕ್ಕೆ ಹೋಗಿದ್ದ. ವೆದರ್ ಡಾಟ್ ಕಾಂನಲ್ಲಿ ಕೆಲಸ ಮಾಡಲು. ತಂದೆ- ತಾಯಿ, ಊರು, ರಾಜ್ಯ ಎಲ್ಲದರಿಂದ ದೂರವಾಗಿ, ಹಣಕ್ಕೆ ಹತ್ತಿರವಾಗಲು ಹೊರಟ. ಡಾಟ್ ಕಾಂ ಮುಚ್ಚಿತು. ಬದುಕುಮಗುಚಿತು. ಜೀವನದ ಆಸೆಗೆ ಕಾಮಾ (ಅಲ್ಪವಿರಾಮ) ಬಿತ್ತು. ಅದೇ ಟೆನ್ಶನ್‌ನಲ್ಲಿ ಕಾರು ಓಡಿಸುವಾಗ ಅದು ರಸ್ತೆ ಬದಿ ಮರಕ್ಕೆ ಗುದ್ದಿತು. ಕುತ್ತಿಗೆಗಿಂತ ಕೆಳಗೆ ದೇಹ ನಿಯಂತ್ರಣ ಕಳೆದುಕೊಂಡಿತು. ಹಾಗೇ ಆರು ವರ್ಷ ಅಮೆರಿಕದಲ್ಲಿ ಜೀವಚ್ಛವಾಗಿದ್ದ ಮಂಜುನಾಥ ಕಲ್ಮನಿ. ಮನೆಯವರು ಒಬ್ಬರೂ ಹೋಗಲಿಲ್ಲ. ಯಾಕೆಂದರೆ ಮಂಜುನಾಥ ಕಲ್ಮನಿ ಅಮೆರಿಕಕ್ಕೆ ಹೋದ ನಂತರ ಮನೆಯವರ ಸಂಪರ್ಕವನ್ನೇ ಹೆಚ್ಚುಕಡಿಮೆ ಕಳೆದುಕೊಂಡಿದ್ದ. ದುಡ್ಡು ಆ ಮಟ್ಟಕ್ಕೆ ಮುಟ್ಟಿಸಿತ್ತು. ಅವನ ನಸೀಬು ಚೆನ್ನಾಗಿತ್ತು. ೨೦೦೮ರಲ್ಲಿ ವೀಸಾ ಅವಧಿ ಮುಗಿಯಿತು. ಅದೇ ಕಾರಣಕ್ಕೆ ಅಮೆರಿಕ ಆಂಬುಲೆನ್ಸ್ ವಿಮಾನದಲ್ಲಿ ಮಂಜುನಾಥ ಕಲ್ಮನಿಯನ್ನು ಹೊತ್ತುಕೊಂಡು ಬಂದು ದಿಲ್ಲಿಯಲ್ಲಿ ಇಳಿಸಿಹೋಯಿತು. ಅವತ್ತಿನಿಂದ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆ ಮಂಜುನಾಥ ಕಲ್ಮನಿಯ ಮನೆಯಾಯಿತು. ಮಗ ಏನೇ ಮಾಡಿರಲಿ, ಹೆತ್ತ ಕರುಳು ಕೇಳಬೇಕಲ್ಲ. ಮನೆಯವರು ಮಂಜುನಾಥ ಕಲ್ಮನಿ ನೋಡಲು ಆರಂಭದಲ್ಲಿ ಹಿಂಜರಿದರೂ, ತಾಯಿ ಕಣ್ಣೀರು ಹಾಕುತ್ತ ದಿಲ್ಲಿಗೆ ಆಗಮಿಸಿದಳು. ೮ ವರ್ಷದ ನಂತರ ಮಗನನ್ನು ನೋಡಿದಳು. ೩ ತಿಂಗಳು ಮಗನ ಆರೈಕೆ ಮಾಡಿದರು. ಕೊನೆಗೂ ಮಂಜುನಾಥ ಕಲ್ಮನಿ ಮೇ ೪ರಂದು ಕೊನೆಯುಸಿರೆಳೆದ. ಇದು ಕರಳು ಹಿಂಡುವ ಕತೆ. ನಾಗತಿಹಳ್ಳಿ ಯಂಥವರು ಈಕತೆಯನ್ನು ಅಮೆರಿಕಾ ಅಮೆರಿಕಾ ಭಾಗ ೧ ಸಿನಿಮಾ ಮಾಡಬಹುದು. ಇದರಲ್ಲಿ ಒಂದು ವಿಷಯವಿದೆ. ಹೆಚ್ಚಿನ ಮಾಧ್ಯಮಗಳಲ್ಲಿ ಮಂಜುನಾಥ ಕಲ್ಮನಿ ಪರ ವರದಿ ಪ್ರಕಟವಾದವು. ಆತನನ್ನು ಮನೆ ತಲುಪಿಸಲು ಸರಕಾರ ಜವಾಬ್ದಾರಿ ವಹಿಸಬೇಕು ಎಂಬರ್ಥದ ವರದಿಗಳೂ ಬಂದವು. ಯಾಕೆ? ಯಾಕೆ? ಮಂಜುನಾಥ ಕಲ್ಮನಿ ದೇಶಕ್ಕಾಗಿ ಹೋರಾಡಲು ಅಮೆರಿಕಕ್ಕೆ ತೆರಳಿದ್ದ ಯೋಧನೆ? ಅಮೆರಿಕದಿಂದ ಕೆಲವು ಮಾಹಿತಿಗಳನ್ನು ದೇಶಕ್ಕೆ ಒದಗಿಸುತ್ತಿದ್ದ ಗುಪ್ತಚರನೇ? ದೇಶಕ್ಕೆ, ರಾಜ್ಯಕ್ಕೆ ಹೆಸರು ತಂದ ವ್ಯಕ್ತಿಯೆ? ದೇಶ, ರಾಜ್ಯ ಬಿಡಿ ಮನೆಯವರಿಗಾಗಿ ಏನಾದರೂ ತ್ಯಾಗ ಮಾಡಿದವನೇ? ಊಹುಂ. ಆತ ಉದ್ಯೋಗ ಅರಸಿ ಹೋದ ಒಬ್ಬ ವ್ಯಕ್ತಿ ಅಷ್ಟೆ. ಅದೂ ಮನೆಯವರಿಂದ ದೂರವಾಗಿ! ಮಾನವೀಯ ನೆಲೆಯಲ್ಲಿ ಸರಕಾರ ಸಹಾಯ ಮಾಡಬಹುದೇ ಹೊರತು, ಕರ್ತವ್ಯದ ನೆಲೆಯಲ್ಲಲ್ಲ. ಆ ನೆಲೆಯಲ್ಲಿ ಸರಕಾರ ಸಾಕಷ್ಟು ಮಾಡಿತು. ಆದರೂ ಅವರ ಮನೆಯವರಿಗೆ ಅದು ಸಾಕಾಗಿಲ್ಲ. ಸರಕಾರ ಅಷ್ಟು ವೆಚ್ಚ ಮಾಡಿ ಆತನನ್ನು ವಿಮಾನದಲ್ಲಿ ಊರಿಗೆ ತಲುಪಿಸಬೇಕಿತ್ತು. ಮನೆಯವರಿಗೆ ಪರಿಹಾರ ಸಿಗಬೇಕಿತ್ತು ಎಂಬೆಲ್ಲ ಭಾವನೆ ಇದ್ದಂತಿದೆ. ನಮ್ಮದೇ ರಾಜ್ಯದಲ್ಲಿ ಎಷ್ಟು ಮಂದಿ ಬಡವರಿದ್ದಾರೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಾಗದೆ ನರಳುತ್ತಿದ್ದಾರೆ. ಸರಕಾರ ಅವರಿಗೆಲ್ಲ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತದೆಯೇ? ಇಲ್ಲ. ಆದರೂ ಮಂಜುನಾಥ ಕಲ್ಮನಿಗೆ ಕೊಡಿಸಿತು. ಎಷ್ಟು ಜನ ಔಷಧಿಗೆ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆಲ್ಲ ಸರಕಾರ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಮಂಜುನಾಥ ಕಲ್ಮನಿಗೆ ಸರಕಾರ ಅದನ್ನೆಲ್ಲ ಮಾಡಬೇಕು ಎಂದು ಮಾಧ್ಯಮದವರು ಬಯಸುವುದೇಕೆ? ತಪ್ಪಲ್ಲವೇ? ನಾವು ಪತ್ರಕರ್ತರು ಇನ್ನು ಮುಂದಾದರೂ ವರದಿ, ವಿಶೇಷ ವರದಿಯ ಕೊನೆಯಲ್ಲಿ ಇನ್ನು ಮುಂದಾದರೂ ಸರಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಬರೆಯುವುದನ್ನು ನಿಲ್ಲಿಸಬೇಕು. ಇದು ನನ್ನ ಮನವಿ. ನಿಜವಾಗಿಯೂ ಸರಕಾರ ಗಮನ ಹರಿಸುವ್ ಅಗತ್ಯವಿದ್ದಲ್ಲಿ ಜಾಡಿಸಿ ಬರೆಯಿರಿ ಬೇಡ ಅನ್ನುವವರಾರು... Posted by ವಿನಾಯಕ ಭಟ್ಟ at 9:38 AM 7 comments: Saturday, May 24, 2008 ಅಲ್ಲಿಂ‘ದಿಲ್ಲಿ’ಗೆ ಬಂದಾಯ್ತು... ಮಂಗಳೂರಿನಿಂದ ನನ್ನ ಬ್ಲಾಗಿನ ಕೊನೆಯ ಪೋಸ್ಟ್ "ಬಯಸದೆ ಬಂದ ಭಾಗ್ಯ’! ಅಂಥದ್ದೇ ಭಾಗ್ಯ ನನ್ನನ್ನು ಅಲ್ಲಿಂ‘ದಿಲ್ಲಿ’ಗೆ ತಂದು ನಿಲ್ಲಿಸಿದೆ. ಅವಕಾಶ ಬಾಗಿಲು ತಟ್ಟಿದಾಗ ಬಿಡಬಾರದು ಅಂತಾರೆ. ಆದರೆ ಅವಕಾಶಕ್ಕೆ ಬಾಗಿಲು ತಟ್ಟುವ ಅವಕಾಶವನ್ನೂ ನಾನು ಕೊಡಲಿಲ್ಲ. ಯಾಕೆಂದರೆ ಬಾಗಿಲು ತೆರೆದೇ ಇತ್ತು!! ಆ ಅವಕಾಶದ ಮೂಲಕವೇ ಮಂಗಳೂರು ಬಿಟ್ಟು ದಿಲ್ಲಿಗೆ ಬಂದಾಯ್ತು. ನಾನು ಮಂಗಳೂರು ಬಿಟ್ಟಿದ್ದರಿಂದ ಕೆಲವರಿಗೆ ಸಂತೋಷವಾಗಿದೆ. ವಿಪರ್ಯಾಸವೆಂದರೆ ನನ್ನ ವರ್ಗಾವಣೆಯಿಂದ ನನಗೂ ಸಂತೋಷವೇ ಆಗಿದೆ! ಅದು ಅವರಿಗೆ ಸ್ವಲ್ಪ ಬೇಸರ ತಂದಿದೆ!! ನನ್ನ ವರ್ಗ ಹಲವರಿಗೆ ಬೇಸರ ತಂದಿದೆ. ಅವರು ನನ್ನನ್ನು ನಿಜವಾಗಿಯೂ ಪ್ರೀತಿಸಿದವರು. ನನಗೂ ಅಂತಹ ಗೆಳೆಯರನ್ನು ಬಿಟ್ಟು ಬರಲು ನಿಜಕ್ಕೂ ಬೇಸರವೇ. ಆದರೆ ಒಂದೇ ಊರು, ಒಂದೇ ನಮೂನೆಯ ಕೆಲಸ ನಮ್ಮ ಉತ್ಸಾಹ, ಜೀವನ ಪ್ರೀತಿ ಹಾಳು ಮಾಡುವ ಮೊದಲು ಆ ಊರು ಬಿಟ್ಟರೆ ಒಳ್ಳೆಯದು. ಯಾವುದೇ ಊರಿಗೆ ಹೊಸದಾಗಿ ಹೋದಾಗ ಚೆನ್ನಾಗೇ ಇರುತ್ತದೆ. ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಊರುತುಂಬ ಸುಂದರವಾಗಿ ಕಾಣುತ್ತದೆ. ನಿಧಾನವಾಗಿ ಜಾತಿ, ಅಸೂಯೆ, ಏನೇನೋ ರಾಜಕೀಯಗಳು ಆರಂಭವಾಗುತ್ತವೆ. ಹಾಗಾದಾಗ ಅಂತಹ ಸ್ಥಳದಲ್ಲಿ ವಿಶೇಷವಾಗಿ ನನಗೆ ಕೆಲಸ ಮಾಡುವುದು ಕಷ್ಟ. ಏಕೆಂದರೆ ನಾನು ಎದುರಿನಿಂದ ಚೂರಿ ಹಾಕುವುದನ್ನಾದರೂ ಸಹಿಸಿಕೊಂಡೇನು ಹಿಂದಿನಿಂದ ಚೂರಿ ಹಾಕುವವರನ್ನು ಸಹಿಸಿಕೊಳ್ಳಲಾರೆ. ಕೆಲವೊಮ್ಮೆ ಹಿಂದಿನಿಂದ ಚೂರಿ ಹಾಕುವವರ ಚಾಲಾಕಿತನ ಮೀರಿಸಿ ಅವರ ಹಿಂದಿನಿಂದ ಇರಿಯಬೇಕಾದ ಅನಿವಾರ್ಯವೂ ಉಂಟಾಗಿಬಿಡುತ್ತದೆ. ನಾನು ವರ್ಗವಾಗಿದ್ದಕ್ಕೆ ಫೋನ್ ಮೂಲಕ, ಈಮೇಲ್ ಮೂಲಕ ಬೇಸರ ವ್ಯಕ್ತಪಡಿಸಿ, ರಾಜ್ಯದಲ್ಲೇ ಇರಿ ಅಂತ ಒತ್ತಾಯಿಸಿದವರು ಸಾಕಷ್ಟು ಮಂದಿ. ಮಂಗಳೂರು ಬೇಸರ ಬಂದರೆ ಬೆಂಗಳೂರಿಗೆ ಹೋಗಿ. ಅದು ಬಿಟ್ಟು ದೂರದ ದಿಲ್ಲಿಗೆ ಯಾಕೆ ಹೊಗ್ತೀರಿ ಅಂದವರು ಕೆಲವರು. ಒಳ್ಳೆ ಅವಕಾಶ ಹೋಗಿ ಬನ್ನಿ ಅಂದರು ಇನ್ನು ಕೆಲವರು. ಅವರಿಗೆ ನಾನು ಚಿರಋಣಿ. ಹಾಗೆಯೇ ವರ್ಗವಾದ್ ಮೇಲೆ ಒಂದೂ ಫೋನ್ ಮಾಡದೆ ಪೀಡೆ ತೊಲಗಿತು ಎಂದು ಸಂತೋಷ ಪಟ್ಟವರೂ ಇದ್ದಾರೆ. ಅವರಿಗೂ ನಾನು ಋಣಿ. ಒಟ್ಟಿಗಿದ್ದಾಗೆಲ್ಲ ಭಾರೀ ಚೆನ್ನಾಗಿ ವರ್ತಿಸಿ, ವರ್ಗವಾದ ಮೇಲಾದರೂ ನಿಜ ಬಣ್ಣ ತೋರಿಸಿದರಲ್ಲ. ಅದಕ್ಕೆ. ಅಂಥವರ ಬಗ್ಗೆ ಮಾತಾಡುವುದಕ್ಕಿಂತ ನನ್ನ ಆತ್ಮೀಯರ ಬಗ್ಗೆ ಮಾತಾಡುವುದು ನಂಗಿಷ್ಟ. ಮಂಗಳೂರು ನನಗೆ ೬ ವರ್ಷದಲ್ಲಿ ಸಾಕಷ್ಟು ಕಲಿಸಿದೆ. ಒಳ್ಳೆಯದನ್ನೇ ಕಲಿಸಿದೆ. ಸಾಕಷ್ಟು ಒಳ್ಳೆ ಗೆಳೆಯರನ್ನು ದಯಪಾಲಿಸಿದೆ. ಬಹುಶಃ ನಾನು ಮಂಗಳೂರಿಗೆ ಹೋಗದೆ ಇದ್ದಲ್ಲಿ ನನ್ನ ಜೀವನದ ಅತ್ಯುತ್ತಮ ಗೆಳೆಯರನ್ನು ನಾನು ಮಿಸ್ ಮಾಡಿಕೊಳ್ತಾ ಇದ್ದೆ ಅನ್ನಿಸ್ತಾ ಇದೆ. ಎಷ್ಟೊಂದು ಮಾಹಿತಿದಾರರು, ಒಂದು ಸಕೆಂಡ್ ಕೂಡ ಯೋಚನೆ ಮಾಡದೆ ಎಂಥ್ಥದ್ದೇ ಸಹಾಯಕ್ಕೂ ಸಿದ್ಧರಾಗುತ್ತಿದ್ದ ಗೆಳೆಯರು ನನಗೆ ಮಂಗಳೂರಿನಲ್ಲಿ ದಕ್ಕಿದ್ದರು. ಅವರ ಋಣ ನಾನೆಂದಿಗೂ ತೀರಿಸಲಾರೆ. ಲ್ಯಾನ್ಸಿ, ಮಂಜು ನೀರೇಶ್ವಾಲ್ಯ, ನರೇಶ್ ಶೆಣೈ, ಗುರುವಪ್ಪ ಬಾಳೆಪುಣಿಯಂತಹ ಗೆಳೆಯ್ರನ್ನು, ಕುಂಟಿನಿಯಂತಹ ಅಣ್ಣನನ್ನು ಗಿಟ್ಟಿಸಿಕೊಂಡೆ. ಕನಿಷ್ಟ ದಿನಕ್ಕೊಂದು ಸಾರಿಯಾದರೂ ಫೋನಲ್ಲಿ ಮಾತಾಡುತ್ತ ಪ್ರೋತ್ಸಾಹ ನೀಡುತ್ತ, ಜೋಕ್ ಮಾಡುತ್ತಿದ್ದರು ಕುಂಟಿನಿ. ನಾನು ಮತ್ತು ವೇಣುವಿನೋದ್ ಸುದ್ದಿ ಯಾವತ್ತಿಗೂ ಹಂಚಿಕೊಂಡಿರಲಿಲ್ಲ. ಆದರೆ ನಮ್ಮಲ್ಲಿ ಒಂದು ಆತ್ಮೀಯತೆ ಇತ್ತು. ನನ್ನ ಲೇಖನಗಳಿಗೆ ಸ್ಪಂದಿಸುವ, ಪ್ರತಿಕ್ರಿಯಸುವ ಅವನ ಸಹೃದಯತೆ ಎಲ್ಲರಲ್ಲೂ ಇರುವಂಥದ್ದಲ್ಲ. ಅವರೆಲ್ಲ ದಿಲ್ಲಿಯಲ್ಲಿ ಕ್ಷಣ ಕ್ಷಣಕ್ಕೂ ನೆನಪಾಗುತ್ತಾರೆ. ಅವರಿಗೂ ಒಂದಲ್ಲ ಒಂದು ಕ್ಷಣದಲ್ಲಿ ನಾನು ನೆನಪಾಗುತ್ತಿರಬಹುದು. ಹಾಗಿತ್ತು ನಮ್ಮ ಆತ್ಮೀಯತೆ. ಕಚೇರಿಯೊಳಗೂ ಸಾಕಷ್ಟು ಆತ್ಮೀಯರಿದ್ದಾರೆ. ಆದರೆ ಅವರ ಹೆಸರು ಹಾಕಿದರೆ ಅವರಿಗೆ ಅದು ತಿರುಮಂತ್ರವಾದೀತು. ಅದಕ್ಕೆ ಅವರ ಹೆಸರು ನನ್ನ ಮನಸ್ಸಿನಲ್ಲೇ ಇರಲಿ. ಇಷ್ಟೇ ಅಲ್ಲ. ಸಾಕಷ್ಟು ಮಂದಿ ಇದ್ದಾರೆ. ನನ್ನನ್ನು ಅನವಶಕ್ಯವಾಗಿ ಮೆಚ್ಚಿಕೊಂಡವರು, ವಿನಾಕಾರಣ ಪ್ರೀತಿಸಿದವರು, ಸಕಾರಣವಾಗಿ ದ್ವೇಷಿಸುವವರು ಎಲ್ಲರೂ ಮಂಗಳೂರಿನಲ್ಲಿ ನನಗೆ ದೊರೆತರು. ಇವತ್ತಿಗೂ ಮಂಗಳೂರಿನಲ್ಲಿ ಏನಾದರೂ ಕ್ರೈಂ ಆದರೆ ಭಟ್ಟರೆ ‘ನೀವಿರಬೇಕಿತ್ತು’ ಎನ್ನುವ ಜನರಿದ್ದಾರಲ್ಲ. ಅಷ್ಟು ಸಾಕು. ನಾನು ಮಂಗಳೂರಿನಲ್ಲಿ ೬ ವರ್ಷ ಕೆಲಸ ಮಾಡಿದ್ದು ಸಾರ್ಥಕ. ಲ್ಯಾನ್ಸಿ ಮತ್ತು ನನ್ನ ಗೆಳೆತನ ವಿವರಿಸಲಾಗದ್ದು. ನಾವಿಬ್ಬರೂ ಪ್ರತಿ ದಿನ ಸಂಜೆ ಇಂದ್ರಭವನದಲ್ಲಿ ಚಹಾ ಕುಡಿಯಲು ಹೋಗುತ್ತಿದ್ದೆವು. ಕೆಲಸ ಒತ್ತಡ ಹೆಚ್ಚಿದ್ದ ದಿನ ಮತ್ತು ಭಾನುವಾರ ಇಂದ್ರಭವನ ಬಂದ್ ಇದ್ದ ದಿನ ಬಿಟ್ಟರೆ ಉಳಿದ ದಿನ ನಾವು ಇಂದ್ರಭವನ ಭೇಟಿ ತಪ್ಪಿಸುತ್ತಿರಲಿಲ್ಲ. ನೋಡೋರಿಗೆ ಚಾ ಕುಡಿಯೋ ಚಟ ಅನ್ನಿಸಿದರೂ ನಮ್ಮಿಬ್ಬರ ಪಾಲಿಗೆ ಚಾ ಕೇವಲ ನೆಪ. ಅದೇನಿದ್ದರೂ ನಮ್ಮೆ ಭೇಟಿಗೊಂದು ನೆಪವಾಗಿತ್ತು. ನನ್ನ ವರ್ಗಾವಣೆಯಿಂದ ನಮ್ಮಿಬ್ಬರಿಗೂ ಪ್ರತಿ ದಿನ ಸಂಜೆಯ ಚಾ ತಪ್ಪಿದೆ. ನಂಗೊತ್ತು ಲ್ಯಾನ್ಸಿ ನನ್ನ ಬಿಟ್ಟು ಬೇರೆ ಯಾರೊಂದಿಗೂ ಪ್ರತಿ ದಿನ ಚಾ ಕುಡಿಯುವಷ್ಟು ಆತ್ಮೀಯತೆ ಹೊಂದಿಲ್ಲ. ನಾನು ಮಂಗಳೂರಿಗೆ ಹೋದಾಗ ಆರಂಭದಲ್ಲಿ ಆತ ಅದೆಷ್ಟು ಸಹಾಯ ಮಾಡಿದ್ದನೋ ಅದಕ್ಕಿಂತ ಹೆಚ್ಚಿನ ಸಹಾಯ ನಾನು ವರ್ಗವಾಗಿ ದಿಲ್ಲಿಗೆ ಬಂದ ನಂತರ ಮಾಡಿದ್ದಾನೆ. ನಾನು ಬಂದ ನಂತರ ನನ್ನ ಮನೆಯ ವಸ್ತುಗಳನ್ನೆಲ್ಲ ತಾನೇ ಮುಂದೆ ನಿಂತು ಪ್ಯಾಕ್ ಮಾಡಿಸಿ ಕಳುಹಿಸಿದ್ದಾನೆ. ಆತನಿಗೆ ತುಂಬ ಸಹನೆ. ಆತ ಗೆಳೆಯನಿಗೆ ಅಷ್ಟು ಸ್ಪಂದಿಸಬಲ್ಲ, ಎಲ್ಲ ಕೆಲಸಗಳ ನಡುವೆಯೂ ಗೆಳೆಯರ ಬೇಡಿಕೆ ಈಡೇರಿಸಬಲ್ಲ. ನಾನಂತೂ ಪ್ರತಿಯೊಂದಕ್ಕೂ ಆತನನ್ನೇ ಅವಲಂಬಿಸಿಬಿಟ್ಟಿದ್ದೆ. ಎಷ್ಟೋ ಸಾರಿ ಸಿಲ್ಲಿ ಕಾರಣಗಳಿಗೆ ಆತನಿಗೆ ಫೋನ್ ಮಾಡುತ್ತಿದ್ದೆ. ಹೊತ್ತಲ್ಲದ ಹೊತ್ತಲ್ಲಿ ಆತನ ಸಹಾಯ ಕೇಳುತ್ತಿದೆ. ಬಹುಶಃ ಅಂತಹ ಒಬ್ಬ ಗೆಳೆಯನ್ನು ನಾನು ಭವಿಷ್ಯದಲ್ಲಿ ಪಡೆಯುವುದು ನನಗಂತೂ ಅನುಮಾನ. ಯಾಕೆಂದರೆ ಅಂತಹ ಗೆಳೆಯರು ಮತ್ತೆ ಮತ್ತೆ ಸಿಗುವುದಿಲ್ಲ. ಮಂಗಳೂರಿನ ಎಲ್ಲ ನನ್ನ ಆತ್ಮೀಯರ ಪ್ರೀತಿಗೆ, ಅಗಾಧ ಗೆಳೆತನಕ್ಕೆ ನಾನು ಅರ್ಹನಾಗಿದ್ದೆನೋ ಇಲ್ಲೆವೋ, ನನಗೆ ಅನುಮಾನವಿದೆ. ಆದರೆ ಅವರ ಗೆಳೆತನ ನನ್ನ ಮಂಗಳೂರಿನ ಜೀವನವನ್ನು ಸುಂದರವಾಗಿಸಿತು, ಸಿಹಿಯಾಗಿಸಿತು ಎಂಬುದಂತೂ ಸತ್ಯ. ಇವತ್ತಿಗೂ ನನ್ನ ಮನಸ್ಸು ಮಂಗಳೂರನ್ನು ನೆನಪಿಸಿಕೊಳ್ಳುತ್ತಿದ್ದರೆ ಅದು ಅವರಿಂದಾಗಿ. ಮುಂದೆದಾದರೂ ಅವಕಾಶ ಸಿಕ್ಕರೆ ಮಂಗಳೂರಿಗೆ ಹೋಗಬೇಕು ಅನ್ನಿಸಿದರೆ ಅದೂ ಅವರಿಂದಾಗಿಯೇ. Posted by ವಿನಾಯಕ ಭಟ್ಟ at 5:51 PM 1 comment: Friday, May 23, 2008 ಕಣ್ಣೀರ ಧಾರೆ ಇದೇಕೆ? ಇದೇಕೆ...? ಮಂಗಳೂರು ಬಿಟ್ಟು ರೈಲು ನಿಧಾನಕ್ಕೆ ಹೊರಡುತ್ತಿದ್ದಂತೆ ಹೊಟ್ಟೆಯೊಳಗೇನೋ ತಳಮಳ. ಮಂಗಳೂರು ಬಿಟ್ಟು ದಿಲ್ಲಿಗೆ ಹೋಗೇಕೆಂಬುದು ತೀರ್ಮಾನವಾಗಿ ಕೆಲ ದಿನಗಳು ಕಳೆದಿತ್ತು. ಮನಸ್ಸು ಮರುಗಿರಲಿಲ್ಲ. ಹೊಸ ಊರು ನೋಡುವ ಸುಖ ಹಳೆ ಊರು ಬಿಡುವ ದುಃಖ ಮರೆಸಿತ್ತು. ಆದರೆ ರೈಲು ಮಂಗಳೂರು ನಿಲ್ದಾಣದಿಂದ ಚಲಿಸಲಾರಂಭಿಸಿದಂತೆ, ಕಳುಹಿಸಲು ಬಂದಿದ್ದ ಹೆಂಡತಿ ಸಿಂಧು, ಗೆಳೆಯ ಲ್ಯಾನ್ಸಿ ದೂರವಾಗುತ್ತ ಕೈಬೀಸುತ್ತಿದ್ದಂತೆ ಕಣ್ಣು ಕೊಳವಾಯಿತು. ಕೈಬೀಸುತ್ತಿದ್ದವರ ಮತ್ತು ಮಂಗಳೂರಿನ ಚಿತ್ರ ಮಸುಕಾಯಿತು. ಯಾಕೋ ಇದ್ದಕ್ಕಿದ್ದಂತೆ ನಾನು ಒಂಟಿ ಅನ್ನಿಸಿ ದುಃಖ ಒತ್ತರಿಸಿಬಂತು. ಕಣ್ಣೋಟಕ್ಕೆ ನಿಲುಕುವವರೆಗೂ ಅವರಿಬ್ಬರನ್ನು ನೋಡುತ್ತಿದ್ದೆ. ರೈಲು ಮಂಗಳೂರು ಬಿಟ್ಟು ದೂರ ಓಡುತ್ತಿದ್ದರೂ ಮನಸ್ಸು ಮಾತ್ರ ಹಿಂದಕ್ಕೋಡಬಯಸುತ್ತಿತ್ತು. ಇದ್ದಕ್ಕಿದ್ದಂತೆ ದಿಲ್ಲಿಯೂ ಬೇಡ, ಬಡ್ತಿಯೂ ಬೇಡ, ಮಂಗಳೂರಲ್ಲೇ ಉಳಿದುಬಿಡೋಣ ಅನ್ನಿಸೋಕೆ ಶುರುವಾಯಿತು. ರೈಲು ಹಾಳಾಗಿ ಪ್ರಯಾಣವೇ ರದ್ದಾಗಿಬಿಡಾರದೆ ಅನ್ನಿಸಿತು. ಬೇಕಾದಷ್ಟು ಪ್ರೀತಿ ಮಾಡೋ ಗೆಳೆಯರು. ಎಲ್ಲರಿಗಿಂತ ಮೊದಲು ಸುದ್ದಿಕೊಡೋ ಮಾಹಿತಿದಾರರು. ಸಾಕು ಸಾಕೆನ್ನುವಷ್ಟು ಪ್ರೀತಿ ಮಾಡೋ ಹೆಂಡತಿ. ಇವನ್ನೆಲ್ಲ ಹಿಂದೆ ಬಿಟ್ಟು ನಾನು ದಿಲ್ಲಿಗೆ ಹೊರಟಿದ್ದೆ. ಜೀವನದಲ್ಲಿ ಮಹಾತ್ವಾಕಾಂಕ್ಷೆಗಳನ್ನು ಇರಿಸಿಕೊಳ್ಳದ, ದೊಡ್ಡ ಹುದ್ದೆಯ ಕನಸೂ ಕಾಣದ, ಇದ್ದುದರಲ್ಲೇ ಇದ್ದಷ್ಟು ದಿನ ನನ್ನವರೊಂದಿಗೆ ಹಾಯಾಗಿದ್ದುಬಿಡುವ ಮನಸ್ಥಿತಿಯ ನಾನು ದಿಲ್ಲಿಗೆ ಹೋಗಲು ಯಾಕೆ ಒಪ್ಪಿಕೊಂಡೆ ಎಂಬುದು ನನಗೀಗಲೂ ಪ್ರಶ್ನೆಯೇ. ಬಹುಶಃ ದಿಲ್ಲಿಯ ಬಗೆಗಿದ್ದ ಸುಂದರ ಕಲ್ಪನೆ ಮತ್ತು ವರದಿಗಳ ಮೂಲಕ ಕೊಂಚ ಹೆಸರು ಮಾಡಬಹುದು, ಒಂದಷ್ಟು ಸುಂದರ ಸ್ಥಳಗಳನ್ನು ನೋಡಬಹುದು ಎಂಬುದೇ ಇದಕ್ಕೆ ಕಾರಣವೇನೊ. ಅಥವಾ ಮಂಗಳೂರು ನಿಧಾನಕ್ಕೆ ಬೋರಾಗಲಾರಂಭಿಸಿತ್ತೊ. ಆದರೂ ಮಂಗಳೂರು ಬಿಡುವಾಗ ಮುಳು ಮುಳು ಅತ್ತಿದ್ದು ನಿಜ. ಯಾಕೆಂದರೆ ನನಗೆ... ಒಂಟಿ ಒಂಟಿಯಾಗಿರುವುದು ಬೋರೋ ಬೋರು... ದಿಲ್ಲಿಗೆ ಹೋಗುವುದು ಮತ್ತು ಹೆಂಡತಿ ಸ್ವಲ್ಪ ಸಮಯ ಬಿಟ್ಟು ಬರುವುದು ಎಂದು ತೀರ್ಮಾನ ಆದಾಗಿನಿಂದ ಹೆಂಡತಿ ಆಗಾಗ ಅಳುತ್ತಿದ್ದಳು. ಯಾಕೆಂದರೆ ಮದುವೆಯಾಗಿ 2 ವರ್ಷದಲ್ಲಿ ನಾವಿಬ್ಬರೂ ೧ ವಾರಕ್ಕಿಂತ ಹೆಚ್ಚು ಬಿಟ್ಟಿದ್ದಿದ್ದೇ ಇಲ್ಲ. ಅವಳಿಗೆ ಧೈರ್ಯ ಹೇಳಿ, ಹೇಳಿ ದಿಲ್ಲಿಗೆ ಹೊರಡುವ ದಿನ ಬರುವಷ್ಟರಲ್ಲಿ ನಾನೇ ಅಳುವ ಸ್ಥಿತಿ ತಲುಪಿದ್ದೆ. ದಿಲ್ಲಿಗೆ ಹೋದರೆ ಮನೆಗೆ ಬರೋದು ವರ್ಷಕ್ಕೊಂದೇ ಸಲ ಎಂಬುದು ನೆನೆದೇ ಅಪ್ಪ-ಅಮ್ಮ ಬೇಜಾರು ಮಾಡಿಕೊಂಡಿದ್ದಾರೆ. ಫೋನು ಮಾಡಿದರೆ ಮಾತಾಡಲಾಗದಷ್ಟು ದುಃಖ. ಅವರಿಗೆಲ್ಲ ಸಮಾದಾನ ಮಾಡುತ್ತ ಮಾಡುತ್ತ ನಾನೇ ಸಮಾದಾನ ಮಾಡಿಸಿಕೊಳ್ಳುವ ಸ್ಥಿತಿ ತಲುಪಿದ್ದೆ. ಆದರೆ ನಾನು ಧೈರ್ಯ ಹೇಳುವುದು ಬಿಟ್ಟು ಅತ್ತರೆ ಅವರು ಇನ್ನಷ್ಟು ಅತ್ತಾರು ಎಂಬ ಕಾರಣಕ್ಕೆ ದುಃಖ ಹೊರಗೆಡಹಿರಲಿಲ್ಲ. ಅಲ್ಲದೆ ವರ್ಗಾವಣೆಯಿಂದಾಗಿ ಮಾಡೇಕಾಗಿದ್ದ ಕೆಲಸಗಳೂ ಸಾಕಷ್ಟಿದ್ದವು. ಹೀಗಾಗಿ ದುಃಖಿಸಲು ಸಮಯವೂ ಸಿಕ್ಕಿರಲಿಲ್ಲ. ರೈಲು ಮಂಗಳೂರು ಬಿಡುತ್ತಿದ್ದಂತೆ ಅಳುವೇ ತುಟಿಗೆ ಬಂದಂತೆ...ಏನು ಮಾಡಿದರೂ ಅಳು ತಡೆಯದಾದೆ. ಸುಮ್ಮನೆ ಕುಳಿತು ಅತ್ತೆ. ರೈಲು ಮಂಗಳೂರು ಬಿಟ್ಟು ೩ ತಾಸು ಕಳೆದರೂ ಕಣ್ಣು ಮಾತ್ರ ಒಣಗಲೇ ಇಲ್ಲ. ಕಣ್ಣೀರ ಧಾರೆ ಇದೇಕೆ ಇದೇಕೆ... ಹಾಗಂತ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಅಂತೂ ಸಮಾದಾನವಾಗುವ ಹೊತ್ತಿಗೆ ನನ್ನ ಹಿಂದಿನ ಸೀಟಿನಿಂದಲೂ ಮೂಗು ಸೇರಿಸುವ ಸೊರ್ ಸೊರ್ ಶಬ್ದ ಕೇಳತೊಡಗಿತು. ನೀನೊಬ್ಬನೇ ಅಲ್ಲ ಊರು ಬಿಟ್ಟು ಹೊರಟ ಎಲ್ಲರಿಗೂ ಹೀಗೇ ಆಗುತ್ತದೆ ಎಂದು ಸೊರ್ ಸೊರ್ ಶಬ್ದವೇ ಸಮಾದಾನ ಮಾಡಿದಂತಾಗಿ ನಿಧಾನವಾಗಿ ಜೋಗಿ ಕತೆಗಳು ಪುಸ್ತಕ ಕೈಗೆತ್ತಿಕೊಂಡೆ. ಮನಸ್ಸು ಕತೆಗಳಲ್ಲಿ ಮುಳುಗಲಾರಂಭಿಸಿತು. ರೈಲು ದಿಲ್ಲಿಯತ್ತ ನನಗಿಂತ ಅರ್ಜೆಂಟಿನಲ್ಲಿ ಓಡಲಾರಂಭಿಸಿತು. Posted by ವಿನಾಯಕ ಭಟ್ಟ at 6:44 PM 7 comments: Thursday, March 27, 2008 ಬಯಸದೇ ಬಂದ ಭಾಗ್ಯ! ಇದು ಹಳೆಯ ಕನ್ನಡ ಸಿನಿಮಾ ಹೆಸರು. ಈಗ ಯಾಕೋ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ. ನನಗಾಗೇ ಹೇಳಿದ್ದೇನೋ ಅನ್ನಿಸ್ತಿದೆ. ಕಾರಣ ನನಗೆ ಬಯಸದೇ ಕೆಲವು ಭಾಗ್ಯಗಳು ಒಲಿದುಬಂದಿವೆ. ಅದ್ಯಾರೋ ದೊಡ್ಡವರು ಕನಸು ಕಾಣುವುದು ಕಲಿಯಿರಿ. ನಂತರ ಅದನ್ನು ನನಸು ಮಾಡಲು ಯತ್ನಿಸಿ ಎಂದಿದ್ದಾರಂತೆ. ಆದರೆ ಕಂಡ ಕನಸು ಪ್ರಯತ್ನವಿಲ್ಲದೇ ನನಸಾದಾಗ ಅದನ್ನು ಬಯಸದೇ ಬಂದ ಭಾಗ್ಯ ಅನ್ನಬಹುದೇನೊ. ಅದೊಂದು ದಿನ ಮಧ್ಯಾಹ್ನದ ಹೊತ್ತಿಗೆ ಕಚೇರಿಯಿಂದ ಕೃಷ್ಣ ಭಟ್ಟರು ಫೋನ್ ಮಾಡಿ "ಭಟ್ರೆ ಹೊಸ ವರುಷಕ್ಕೆ ನಿಮ್ಮ ಕನಸೇನು?' ಅಂದರು. ನಿಜಕ್ಕೂ ನಾನು ಯಾವ ಕನಸೂ ಕಂಡಿರಲೇ ಇಲ್ಲ. ಸಾಪ್ತಾಹಿಕಕ್ಕೆ ಕೇಳ್ತಿದಾರೆ ಅಂದರು. ತಕ್ಷಣಕ್ಕೆ ಮನಸ್ಸಿಗೆ ಅನ್ನಿಸಿದ್ದು ಬರೆದುಕೊಟ್ಟೆ. ಅದು ಪ್ರಕಟವೂ ಆಯ್ತು. ನಾನೋ ಕಂಡ ಅಥವಾ ಹೇಳಿಕೊಂಡ ಕನಸು ನನಸು ಮಾಡಲು ಒಂಚೂರು ಯತ್ನಿಸಿರಲಿಲ್ಲ. ಅಷ್ಟರಲ್ಲಿ ಒಂದು ದಿನ ಆರ್ ಟಿಒ ಇನ್ಸ್ಪೆಕ್ಟರ್ ಕೇಶವ ಧರಣಿ ಸಿಕ್ಕಿದವರು "ನೀವು ಅವತ್ತು ಅಪಘಾತಗಳ ಬಗ್ಗೆ ಸರಣಿ ಲೇಖನ ಬರೆದಿದ್ದಿರಲ್ಲ. ಕೆಲವು ನನ್ನಲ್ಲಿವೆ. ಎಲ್ಲವೂ ಇದ್ದರೆ ಕೊಡಿ. ಈ ಬಾರಿಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪುಸ್ತಕ ಮಾಡಿ ಬಿಡುಗಡೆ ಮಾಡುವ. ಲೇಖನಗಳು ತುಂಬಾ ಚೆನ್ನಾಗಿದ್ದವು' ಅಂದರು. ಹುಂ. ಅಂದೆ. ಹಾಗಂದ ತಪ್ಪಿಗೆ ಹಳೆಯ ಲೇಖನಗಳನ್ನೆಲ್ಲ ಸ್ವಲ್ಪ ತಿದ್ದಿ, ಅಪ್ ಗ್ರೇಡ್ ಮಾಡಿ ಕೊಟ್ಟೆ. ಪುಸ್ತಕವಾಗಿ ಬಿಡುಗಡೆಯೂ ನಡೆದುಹೋಯಿತು. ಸರಿಯಾಗಿ ನನಗೂ ಗೊತ್ತಾಗದೆ! ಇವತ್ತು ಗೋಪಾಲಕೃಷ್ಣ ಕುಂಟಿನಿ ಫೋನ್ ಮಾಡಿ "ಭಟ್ರೆ ನಿಮ್ಮ ಬ್ಲಾಗಿನ ಬಗ್ಗೆ ಕೆಂಡಸಂಪಿಗೆ ಡಾಟ್ ಕಾಂನಲ್ಲಿ ಚೆನ್ನಾಗಿ ಬರೆದಿದ್ದಾರೆ' ಅಂದರು. ನೋಡಿದರೆ ಹೌದು. ಏನೋ ನಮ್ಮ ತೆವಲಿಗೆ ಪುರುಸೊತ್ತಾದಾಗ ಬರೆದು ಬ್ಲಾಗಿಸುತ್ತೇವೆ. ಪಾಪ ನಾಲ್ಕೈದು ಜನ ಓದಿ ಕಾಮೆಂಟಿಸ್ತಾರೆ ಅಂದ್ಕೊಡಿದ್ದೆ. ಆದರೆ ಈ ಅನಿರೀಕ್ಷಿತ ಹೊಗಳಿಕೆ ಬಂದಿದೆ. ಕೆಂಡಸಂಪಿಗೆ ಡಾಟ್ ಕಾಂ ಮಾಲಿಕರಿಗೆ ನಾನು ಋಣಿ. ನನ್ನ ಬ್ಲಾಗಿನ ಬಗ್ಗೆ ಬರೆದಿದ್ದಕ್ಕೆ, ನನ್ನನ್ನು ಹುರಿದುಂಬಿಸಿದ್ದಕ್ಕೆ. ಅವರು ನನ್ನ ಬ್ಲಾಗಿನ ಮೇಲೆ ಅಷ್ಟು ಬರೆದ ಮೇಲೂ ನಾನು ತುಂಬ ದಿನ ಬ್ಲಾಗು ಅಪ್ ಡೇಟ್ ಮಾಡದಿದ್ದರೆ ಹೇಗೆ? ಅನ್ನಿಸಿ ಭಾರೀ ಹುರುಪಿನಲ್ಲಿ ಕುಂತ ಮೆಟ್ಟಿನಲ್ಲಿ 3 ಲೇಖನ ಬರೆದು ಹಾಕಿದ್ದೇನೆ. ಓದಿಕೊಳ್ಳುವ ಇಷ್ಟ-ಕಷ್ಟ ನಿಮಗಿರಲಿ. Posted by ವಿನಾಯಕ ಭಟ್ಟ at 11:04 PM No comments: ಒಂದು ಬದಿ ಕಡಲು: ಸಮಯ ಮಾಡಿಕೊಳ್ಳಿ ಓದಲು ಚುಕು ಬುಕು ರೈಲು ಹಳಿಗಳ ಮೇಲೆ ಗಡಗಡ ಸದ್ದು ಮಾಡುತ್ತ ಮಂಗಳೂರಿನಿಂದ ಗೋವೆಯ ಕಡೆಗೆ ಹೊರಟಿತ್ತು. ರೈಲಿನಲ್ಲಿ ಹೋಗುವಾಗ ಒಂದು ಬದಿಗೆ ಕಡಲೇ! ನಾನು ರೈಲಿನಲ್ಲಿ ಕುಳಿತು ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದುತ್ತಿದ್ದೆ. ನನ್ನ ಊರಿಗೆ ಹತ್ತಿರದಲ್ಲೇ ಇರುವ ಹೊನ್ನಾವರ ಒಂದು ಬದಿ ಕಡಲು ಕಾದಂಬರಿ ನಡೆಯುವ ಸ್ಥಳವಾದ್ದರಿಂದಲೋ ಏನೋ ಇಲ್ಲೇ ಎಲ್ಲೋ ನನ್ನ ಮನೆಯ ಪಕ್ಕದಲ್ಲಿಯೇ ಈ ಘಟನೆಗಳು ಸಂಭವಿಸಿದವೇನೋ ಅನ್ನಿಸಿಬಿಟ್ಟಿತು. ರೈಲಿನಲ್ಲಿ ಊರಿಗೆ ಹೋಗಿ, ಎರಡು ದಿನ ಬಿಟ್ಟು ಬರುವಾಗ ಹೀಗೆ ರೈಲಿನಲ್ಲಿಯೇ ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದಿ ಮುಗಿಸಿದ್ದೇನೆ. ಊರಿಗೆ ಹೋಗಿ ಬಂದ ಖುಶಿ ಒಂದೆಡೆಯಾದರೆ, ಕಾದಂಬರಿ ಓದಿದ ತೃಪ್ತಿ ಇನ್ನೊಂದೆಡೆ. ಹೀಗಾಗಿಯೇ ಊರಿಗೆ ಹೋಗಿ ಬಂದರೆ ಮನಸ್ಸು ತುಂಬ ಖುಶ್ ಖುಶ್! ವಿವೇಕ ಶ್ಯಾನುಭಾಗರು ಸಾಕಷ್ಟು ಬರೆದಿದ್ದಾರೆ. ಸತ್ಯ ಹೇಳ್ತೇನೆ. ನಾನು ಉತ್ತರ ಕನ್ನಡದವನಾಗಿಯೂ ಅವರ ಒಂದೇ ಒಂದು ಪುಸ್ತಕ ಓದಿರಲಿಲ್ಲ. ಒಂದು ಬದಿ ಕಡಲು ಓದಿದೆ ನೋಡಿ, ಅವರು ಇಷ್ಟವಾಗಿಬಿಟ್ಟರು. ಕಾದಂಬರಿಯಂತೆ! ಕಾದಂಬರಿಯುದ್ದಕ್ಕೂ ಉತ್ತರ ಕನ್ನಡದ ಜನಜೀವನ, ಅವರ ವರ್ತನೆಗಳೂ, ಎರಡೂ ಮನೆಯ ನಡುವೆ ಪಾಗಾರವೂ, ಬಾಂದುಕಲ್ಲೂ ಇರದ ಗಡಿಗಳು, ಅವರ ಜಗಳಗಳು, ಅಲ್ಲೇ ಒಳಗಿನ ಪ್ರೀತಿ ಎಲ್ಲವೂ ಸಹಜವಾಗಿ ಕಾದಂಬರಿಯಲ್ಲಿ ಬೆರೆತುಹೋಗಿದೆ. ಉತ್ತರ ಕನ್ನಡ ಕೆಲವು ಅಪರೂಪದ ಶಬ್ದಗಳು ಕೂಡ ಕಾದಂಬರಿಯಲ್ಲಿ ನಿಮಗೆ ಲಭ್ಯ. ನೀವು ಉತ್ತರ ಕನ್ನಡದವರಾಗಿದ್ದರೂ ಈ ಕಾದಂಬರಿ ಓದಿ. ಉತ್ತರ ಕನ್ನದವರಾಗಿರದಿದ್ದರೂ ಅದನ್ನು ಓದಿ!! ನೀವು ಉತ್ತರ ಕನ್ನಡದವರೇ ಆಗಿದ್ದರೆ ನಿಮಗೆ ಕಾದಂಬರಿ ಆಪ್ತ ಅನ್ನಿಸೀತು. ನೀವು ಉತ್ತರ ಕನ್ನಡದವರಲ್ಲದೇ ಇದ್ದಲ್ಲಿ ಕಾದಂಬರಿ ನಿಮಗೆ ಉತ್ತರ ಕನ್ನಡದ ಜನ ಜೀವನದ ಪರಿಚಯ ಮಾಡಿಸೀತು. ಕಾದಂಬರಿ ಓದಿದವನಾಗಿ ಧೈರ್ಯದಿಂದ ಹೇಳಬಲ್ಲೆ ಒಂದು ಬದಿ ಕಡಲು ನಿಮಗೆ ಖಂಡಿತ ಇಷ್ಟವಾಗುತ್ತದೆ. Posted by ವಿನಾಯಕ ಭಟ್ಟ at 10:59 PM No comments: ರೇಸ್: ನೋಡಿದ್ರೆ ಆಗಲ್ಲ ಲಾಸ್! ಒಂದೆಡೆ ಸಂತೋಷ. ಇನ್ನೊಂದೆಡೆ ದುಗುಡ! ಒಂದೊಳ್ಳೆ ಸಿನಿಮಾ ನೋಡಿದ ಸಂತೋಷ. ಕನ್ನಡದಲ್ಲಿ ಇಂತಹ ಸಿನಿಮಾಗಳು ಯಾಕೆ ಬರ್ತಾ ಇಲ್ಲ ಎಂಬ ಕೊರಗು! ಹಿಂದಿಯ ರೇಸ್ ಸಿನಿಮಾ ನೋಡಿ ಹೆಂಡತಿಯ ಕೈ ಹಿಡಿದು ಹೊರಬರುತ್ತಿದ್ದರೆ ಮನಸ್ಸಿನಲ್ಲಿ ದ್ವಂದ್ವ!! ಅದೆಷ್ಟು ಚೆನ್ನಾಗಿದೆ ಚಿತ್ರ. ಕಥೆಯೇನು ಅಂತಹ ಮಹಾನ್ ಅಲ್ಲ. ಆದರೆ ಚಿತ್ರದ ತುಂಬ ಅದ್ಭುತ ತಿರುವುಗಳು, ಅನೂಹ್ಯ ಒಳಸುಳಿಗಳು, ಸಖತ್ ಸ್ಟಂಟ್‌ಗಳು, ಎಲ್ಲೂ ಅನಗತ್ಯ ಎನಿಸದ ದೃಶ್ಯಗಳು ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿವೆ. ರೇಸ್ ಸಿನಿಮಾ ಪೋಸ್ಟರ್‌ನಲ್ಲಿ ಬಿಪಾಶಾ (‘ಬಿ’ಪಿ ಏರಿಸಿ ಜೀವಕ್ಕೆ ‘ಪಾಶಾ’ ಹಾಕುವವಳು ಎನ್ನಬಹುದೇ?) ಪೋಸ್ಟರ್ ನೋಡಿ ಸಿನಿಮಾಕ್ಕೆ ಹೋದರೂ, ಹೊರಬರುವಾಗ ಅದೊಂದು ಬಿಟ್ಟು ಉಳಿದೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಸಿನಿಮಾ ನೋಡಿ ಹೊರಬಂದವರು ಅಬ್ಬಾಸ್ ಮಸ್ತಾನ್‌ಗೆ ಒಂದು ಶಬ್ಬಾಸ್ ಕೊಡ್ತಾರೆ. ಆರಂಭದಿಂದ ಅಂತ್ಯದವರೆಗೆ ಆಸಕ್ತಿ ಕೆರಳಿಸುವಂತೆ ಸಿನಿಮಾ ನಿರೂಪಿಸುತ್ತ ಹೋಗಿದ್ದಾನೆ ನಿರ್ದೇಶಕ. ಒಂದೆರಡು ಹಾಡುಗಳು ಮಾತ್ರ ಹೆಚ್ಚಿನಿಸುವಂತಿದ್ದವು. ಇದು ಖಂಡಿತ ಸಖತ್ ಸಿನಿಮಾ. ಸಮಯ ಸಿಕ್ಕರೆ ನೋಡಿ. ರೇಸ್ ಸಿನಿಮಾ ನೋಡಿದರೆ ಖಂಡಿತ ಆಗಲ್ಲ ಲಾಸ್! ಒಳ್ಳೆ ಸಿನಿಮಾ ನೋಡಿಯಾದ ಮೇಲೆ ನಿಂಗ್ಯಾಕಪ್ಪ ದುಗುಡ ಅಂತ ಕ್ಯಾತೆ ತೆಗಿಬೇಡಿ. ಇತ್ತೀಚೆಗೆ ರವಿ ಬೆಳೆಗೆರೆ ಅಭಿನಯದ ವಾರಸ್ದಾರ ನೋಡ್ದೆ. ನಾನು ಬೆಳೆಗೆರ ಅವರ ಅಭಿಮಾನಿ. ಅವರ ಎಲ್ಲ ಕಾದಂಬರಿ ಓದಿ ಮೆಚ್ಚಿದವನು. ತುಂಬ ಆಸೆಯಿಂದ ವಾರಸ್ದಾರಕ್ಕೆ ಹೋದರೆ, ಆದದ್ದು ನಿರಾಸೆ! ನಿಜಕ್ಕೂ ಚಿತ್ರ ಚೆನ್ನಾಗಿಲ್ಲ. ಬೆಳೆಗೆರೆ ಅವರ ಮೇಲಿನ ಪ್ರೀತಿಯಿಂದಲೋ ಏನೋ ಮಾಧ್ಯಮಗಳು ಚಿತ್ರವನ್ನು ತೆಗಳಿಲ್ಲ. ಆದರೆ ಹೊಗಳಲೂ ಇಲ್ಲ! ಇಲ್ಲಿ ಬೆಳೆಗೆರೆಯ ತಪ್ಪಿಲ್ಲ. ಅವರ ನಟನೆ ಗುಡ್. ಆದರೆ ನಿರ್ದೇಶಕ ಗುರುದೇಶಪಾಂಡೆ ಎಡವಿದ್ದಾರೆ. ಅಷ್ಟೇ ಅಲ್ಲ ಎಡವಿ ಮುಗ್ಗರಿಸಿ ಬಿದ್ದಿದ್ದಾರೆ! ವಾರಸ್ದಾರ ಹಿಂದಿಯ ಸರ್ಕಾರ್ ಸಿನಿಮಾ ಹೋಲುತ್ತದೆ. ಸರ್ಕಾರ್ ಸಿನಿಮಾಕ್ಕೆ ಹೋಲಿಸದೇ ಇದ್ದರೂ ವಾರಸ್ದಾರ ಚೆನ್ನಾಗಿಲ್ಲ. ಇನ್ನು ಸರ್ಕಾರ್ ನೋಡಿ ಹೋದರಂತೂ ಕತೆ ಮುಗಿದಂತೆಯೇ. ಸರ್ಕಾರ್ ಸಿನಿಮಾದಲ್ಲಿ ಅಮಿತಾಬ್ ನಟನೆ, ಉಂಟೋ ಇಲ್ಲವೋ ಎಂಬಷ್ಟೇ ಮಾತು, ಕೇವಲ ಕೈ, ಬಾಯಿ, ಕಣ್ಣು ಇಷ್ಟನ್ನೇ ತೋರಿಸುವ ಕ್ಯಾಮರಾ ವರ್ಕ್, ಭೂಗತ ಜಗತ್ತಿನ ಒಳಸುಳಿಗಳು ಚೆನ್ನಾಗಿ ಬಿಂಬಿತವಾಗಿವೆ. ರವಿ ಬೆಳೆಗಯಂತಹ ಒಬ್ಬ ಭೂಗತ ಲೋಕದ ಪರಿಚಯ ಇದ್ದವರಾಗಿ, ಭೂಗತ ಲೋಕದಲ್ಲಿ ಗೆಳೆಯರನ್ನು ಹೊಂದಿದವರಾಗಿ ವಾರಸ್ದಾರ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಆದರೆ ಬೆಳೆಗೆರೆ ಅಷ್ಟಾಗಿ ಅತ್ತ ತಲೆ ಹಾಕದಿರುವುದು ಇದಕ್ಕೆ ಕಾರಣವೂ ಇರಬಹುದು. ಅದಕ್ಕೇ ಹೇಳಿದ್ದು ನಿರ್ದೇಶಕ ಎಡವಿದ್ದಾನೆ ಎಂದು. ಚಿತ್ರ ನೋಡಿ ನಿಜಕ್ಕೂ ಬೇಜಾರಾಯಿತು. ಗುರು ದೇಶಪಾಂಡೆ ಇನ್ನು ಮುಂದಾದರೂ ಸುಧಾರಿಸಿಕೊಳ್ಳಲಿ. ಒಳ್ಳೆ ಚಿತ್ರ ನೀಡಲಿ. ಅದನ್ನು ಕನ್ನಡದ ಜನ ನೋಡಲಿ. Posted by ವಿನಾಯಕ ಭಟ್ಟ at 10:52 PM 1 comment: Sunday, March 09, 2008 ಅಂಚಿ, ಇಂಚಿ ಎಲ್ಲಿ ಹೋದರೂ ಬೇಕು ಸಂಚಿ! ಸಂಚಿ! ಅಲಿಯಾಸ್ ಚಂಚಿ!! ಯಾನೆ ಕವಳ್ಚಂಚಿ!!! ಉತ್ತರ ಕನ್ನಡದವರಿಗೆ ಈ ಶಬ್ದ ಚಿರಪರಿಚಿತ. ಕವಳ ಸಂಚಿ ಎಂಬುದು ಉತ್ತರ ಕನ್ನಡದ ಕರಾವಳಿಯಲ್ಲಿರುವ ಹಾಲಕ್ಕಿ ಜನಾಂಗದವರ ದೇಹದ್ದೇ ಒಂದು ಅವಿಭಾಜ್ಯ ಅಂಗ! ಅಂಗಿ ಇಲ್ಲದಿದ್ದರೂ ನಡೆದೀತು. ಸಂಚಿ ಇಲ್ಲದೇ ಸಾಧ್ಯವಿಲ್ಲ. ಮುಂಡು ಹರಿದಿದ್ದರೂ ಆದೀತು. ಸಂಚಿ ಸರಿಯಾಗಿ ಇರಬೇಕು. ಅಂಚಿ(ಅಲ್ಲಿ), ಇಂಚಿ (ಇಲ್ಲಿ) ಎಲ್ಲೇ ಹೋದರೂ ಅವರ ಸೊಂಟಕ್ಕೆ ಸಂಚಿ ಇರಲೇಬೇಕು. ಪ್ಯಾಂಟು ಹೊಲಿದು, ಉಳಿದ ಬಟ್ಟೆಯಿಂದ ಸಂಚಿ ಮಾಡುವುದು ಹೆಚ್ಚು ಜನಪ್ರಿಯ. ಇದರಲ್ಲಿ ಒಂದು ಸುಣ್ಣದ ಡಬ್ಬ. ಒಂದಷ್ಟು ವೀಳ್ಯದೆಲೆ. ೩-೪ ಅಡಕೆ. ೧ ತಂಬಾಕಿನ ಎಸಳು. ಇವಿಷ್ಟು ಇರಲೇಬೇಕು. ಇಲ್ಲದಿದ್ದರೆ ಸಂಚಿಗೆ ಮರ್ಯಾದೆಯಿಲ್ಲ. ಬೆಲೆಯೂ ಇಲ್ಲ. ಇತ್ತೀಚೆಗೆ ಊರಿಗೆ ಹೋಗುವಾಗ ರೈಲಿನಲ್ಲಿ ಕಿಟಕಿಯ ಹೊರಗೆ ಕಣ್ಣು ನೆಟ್ಟು ಕುಳಿತಿದ್ದಾಗ ಹೊನ್ನಾವರ ಸಮೀಪ ಒಬ್ಬ ಸಂಚಿ ಹಿಡಿದು ಹೋಗುವುದು ಕಾಣಿಸಿತು. ಪಕ್ಕದಲ್ಲಿದ್ದ ಹೆಂಡತಿಗೆ ಸಂಚಿಯ ಕುರಿತು ಹೇಳಿದೆ. ಆಕೆ ಕನ್ನಡ ಎಂ.ಎ. ಹಾಗಾಗಿ ಸಂಚಿ ಎಂದ ಕೂಡಲೆ ಆಕೆಗೆ ಸಂಚಿ ಹೊನ್ನಮ್ಮ ನೆನಪಾದಳು. ನೋಡಿ ಎಲ್ಲಿಂದೆಲ್ಲಿಯ ಸಂಬಂಧ! ಎಲ್ಲಿಯ ಹಾಲಕ್ಕಿ ಜನಾಂಗದವರ ಕವಳ ಸಂಚಿ, ಎಲ್ಲಿ ‘ಹದಿಬದೆಯ ಧರ್ಮ’ ಬರೆದ ಸಂಚಿ ಹೊನ್ನಮ್ಮ! ಸಂಬಂಧ ಇದೆ! ಅದು ಸಂಚಿಯದ್ದು. ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು. ಥೂ! ಅಲ್ಲ ವೀಳ್ಯ ಹಾಕುತ್ತಿದ್ದರು. ಅದಕ್ಕೆ ಅಗತ್ಯ ಪರಿಕರಗಳು ಸಂಚಿಯಲ್ಲಿ ಇರುತ್ತಿದ್ದವು. ಅದನ್ನು ಹಿಡಿದುಕೊಳ್ಳಲು ಒಬ್ಬ ಆಳು ಬೇಕಲ್ಲ. ಆ ಕೆಲಸಕ್ಕೆ ಹೊನ್ನಮ್ಮ ಇದ್ದಳಂತೆ! ಉತ್ತರ ಕನ್ನಡದ ಕರಾವಳಿಯಲ್ಲಿ ಸಂಚಿ ಚಂಚಿಯಾಗಿದೆ. ನನ್ನ ಅಮ್ಮ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಸೇರುವ ಮೊದಲು ಮನೆಯಲ್ಲೇ ಹೊಲಿಗೆ ಮಾಡುತ್ತಿದ್ದಳು. ಆಗೆಲ್ಲ ಆಳುಗಳದ್ದು (ಕೆಲಸಕ್ಕೆ ಬರುವವರದ್ದು) ಒಂದೇ ವರಾತ. ಅಬ್ಬೇರೆ (ಹೆಂಗಸರನ್ನು ಕೆಲಸದವರು ಕರೆಯುವುದೇ ಹೀಗೆ. ಗಂಡಸರು ಅಥವಾ ಮನೆಯ ಯಜಮಾನರನ್ನು ವಡಿದೀರು ಎಂದು ಕರೆಯುವುದು ರೂಢಿ) ಒಂದು ಚೆಂಚಿ ಹೊಲ್ಕೊಡ್ರಾ! ಅಬ್ಬೇರು ಹೊಲಿದು ಕೊಡುವ ಒಂದು ಚೆಂಚಿಗಾಗಿ ಅವರು ಯಾವ ಕೆಲಸ ಮಾಡಲೂ ಸಿದ್ಧರಿದ್ದರು. ಹೊಸ ಚೆಂಚಿ ಅವರ ಮುಖದಲ್ಲಿ ಅಪ್ಪ ಚಾಕಲೇಟು ತಂದಾಗ ಮಕ್ಕಳ ಮುಖದಲ್ಲಿ ಉಂಟಾಗುವಷ್ಟು ಸಂತಸ ಮೂಡಿಸುತ್ತಿದ್ದುದು ನಂಗೀಗಲೂ ನೆನಪಿದೆ. ಚಂಚಿ ಹೊಲಿದುಕೊಟ್ಟ ಅಬ್ಬೇರಿಗೆ ಅವರ ನಿಷ್ಟೆ ಒಂದು ಕೆ.ಜಿ. ಜಾಸ್ತಿಯೇ. ಕಾರಂತರ ಜ್ಞಾನಪೀಠ ವಿಜೇತ ಕೃತಿ ಮೂಕಜ್ಜಿಯ ಕನಸಿನಲ್ಲೂ ಸಂಚಿಯ ಪ್ರಸ್ತಾಪ ಬರುತ್ತದೆ. ನೋಡಿ ಎಲ್ಲಿಯ ಸಂಚಿ, ಎಲ್ಲಿಯ ಜ್ಞಾನಪೀಠ ಪ್ರಶಸ್ತಿ ಪಡೆದ ಕಾದಂಬರಿ! ಅಲ್ಲೂ ಸಂಚಿಗೆ ಬೆಲೆ ಇದೆ. ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು ಮತ್ತು ಅವರು ಕವಳದ ವಸ್ತುಗಳನ್ನು ಇರಿಸಿಕೊಳ್ಳುತ್ತಿದ್ದ ಚೀಲವನ್ನೂ ಸಂಚಿ ಎಂದು ಕರೆಯುತ್ತಿದ್ದರು. ಆ ಸಂಚಿ ಹಿಡಿದುಕೊಳ್ಳುತ್ತಿದ್ದ ಹೊನ್ನಮ್ಮ ಒಂದು ಕೃತಿಯನ್ನೂ ರಚಿಸಿದ್ದಾಳೆ ಎಂಬುದು ಕವಳದ ಸಂಚಿ ಇರಿಸಿಕೊಳ್ಳುವವರಿಗೆಲ್ಲ ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಈ ಸಂಗತಿ ಅವರಿಗೆ ಗೊತ್ತಿಲ್ಲ! ಆದರೂ ಅವರಿಗೆ ಸಂಚಿ ಹೊಂದುವುದು ಹೆಮ್ಮೆಯ ಸಂಗತಿಯೇ ಆಗಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ!! Posted by ವಿನಾಯಕ ಭಟ್ಟ at 9:21 AM 5 comments: Friday, March 07, 2008 ಮಂಜು ಮುಸುಕಿದ ಹಾದಿಯಲ್ಲಿ... ಇಬ್ಬನಿ ತಬ್ಬಿದ ಇಳೆಯಲಿ ರವಿ ತೇಜ ಕಣ್ಣ ತೆರೆದು ಬಾನಕೋಟಿ ಕಿರಣ ಇಳಿದು ಬಂತು ಭೂಮಿಗೆ... ೩ ದಿನದಿಂದ ಮಂಗಳೂರಿನಲ್ಲೂ ಮಂಜು ಸುರಿವ ಮುಂಜಾವು. ಮಂಗಳೂರಲ್ಲಿ, ಅದೂ ಮಾರ್ಚ್ ತಿಂಗಳಲ್ಲಿ ಮಂಜು ಸುರಿಯುವುದು ಅಪರೂಪದಲ್ಲಿ ಅಪರೂಪ. ಫೆಬ್ರವರಿಯಲ್ಲೇ ಮಂಗಳೂರಿನಲ್ಲಿ ಬೆವರು ಸುರಿಯುವ ಸಮಯ. ಆದರೆ ಈ ವರ್ಷ ಮಾರ್ಚ್‌ನಲ್ಲೂ ಮಂಜು ಸುರಿಯುವ ಸಮಯ! ಮಂಜು ಮುಸುಕಿದ ಹಾದಿಯಲ್ಲಿ ಬೆಳ್ಳಂಬೆಳಗ್ಗೆ ಸ್ವೆಟರ್ ಹಾಕಿ, ಮಫ್ಲರ್ ಸುತ್ತಿ ವಾಕಿಂಗ್ ಮಾಡುವ ಮೋಜು ಮಡಿಕೇರಿಯವರಿಗೆ ಹಾಗೂ ಘಟ್ಟದ ಮೇಲಿನವರಿಗೆ ಮಾತ್ರ ಸಾಧ್ಯ. ಘಟ್ಟದ ಮೇಲಿನವರಿಗೆ ಘನಘೋರ ಚಳಿಗಾಲ ಇರುವಾಗ ಮಂಗಳೂರಿನಲ್ಲಿ ಬೆಳಗ್ಗೆ ಮಾತ್ರ ಚುಮುಚುಮು ಚಳಿ. ಅದನ್ನು ಚಳಿ ಅನ್ನುವುದಕ್ಕಿಂತ ತಂಪು ಎನ್ನುವುದು ಹೆಚ್ಚು ಸೂಕ್ತ. ೯.೦೦ ಗಂಟೆಯ ನಂತರ ಸಖತ್ ಹಾಟ್ ಮಗಾ! ಈ ಬಾರಿ ಪರಿಸ್ಥಿತಿ ಬದಲಾಗಿದೆ. ಚಳಿ ಇತ್ತು. ಈಗ ನೋಡಿದರೆ ಮಂಜು ಮುಸುಕಿದ ಹಾದಿಯೂ! ಗೆಳೆಯ ವೇಣು ಕರಾವಳಿಯವನೇ. ಆದರೆ ಅವನಿಗೆ ಕಾಡು ತಿರುಗುವ ಹವ್ಯಾಸ. ಹಾಗಾಗಿ ಅವರು ಕರಾವಳಿಯಲ್ಲಿದ್ದೂ ತಮ್ಮ ಬ್ಲಾಗಿಗೆ ಕಾಶ್ಮೀರದಲ್ಲಿರೋರ ಥರ ‘ಮಂಜು ಮುಸುಕಿದ ದಾರಿಯಲ್ಲಿ’ ಎಂಬ ಹೆಸರು ಕೊಟ್ಟಿದ್ದಾನೆ. ಪ್ರಕೃತಿ ಮಂಗಳೂರಿನ ದಾರಿಗೇ ಮಂಜು ಮುಸುಕುವ ಮೂಲಕ ಅವರ ಆಸೆಯನ್ನೂ ಈಡೇರಿಸಿದೆ. ಅಣ್ಣ ಗೋಪಾಲಕೃಷ್ಣ ಕುಂಟಿನಿ ನಾಲ್ಕೇ ಸಾಲು ಕವನಗಳನ್ನು ಬರೆಯುತ್ತಿದ್ದಾರೆ. ಕವಿಯಾಗುವ ಅಪಾಯದ ಮುನ್ಸೂಚನೆ ತೋರುತ್ತಿದ್ದಾರೆ. ಕೆಲವು ನನಗೆ ಅರ್ಥವಾಗದಿದ್ದರಿಂದ ಅವುಗಳು ಅಧ್ಬುತ ಎನ್ನಲು ಅಡ್ಡಿಯಿಲ್ಲ. ಇನ್ನು ಹಲವು ಅರ್ಥವಾಗಿದ್ದರಿಂದ ನಿಜಕ್ಕೂ ಅದ್ಭುತ ಅನ್ನಿಸುತ್ತವೆ. ಅವರೇ ಬರೆದ ಇಬ್ಬನಿ ಕುರಿತ ನಾಲ್ಕು ಸಾಲು ಹೀಗಿದೆ... ಎಲೆಗಳಲ್ಲಿದ್ದ ರಾತ್ರಿ ಇಬ್ಬನಿ ಕತ್ತಲಿನ ಅಚ್ಚರಿಗಳನ್ನು ಹಗಲಿಗೆ ಹೇಳದೆ ಆರಿಹೋಯಿತು.... ಎಂಥ ಚಂದ, ಎಂಥ ಅಂದ! ಜಿ.ಪಿ. ರಾಜತ್ನಂ ಅವರು ಮಡಿಕೇರಿ ಮೇಲೆ ಮಂಜು ಕವನದಲ್ಲಿ... ಮಡಿಕೇರಿ ಮೇಲ್ ಮಂಜು ಭೂಮಿನ್ ತಬ್ಬಿದ ಮೋಡಿದ್ದಂಗೆ ಬೆಳ್ಳಿ ಬಳಿದಿದ್ ರೋಡಿದ್ದಂಗೆ ಸಾಫಾಗಿ ಅಳ್ಳಾಟಿಟ್ಟಿಲ್ದಂಗೆ ಮಡಗಿದ್ದಲ್ಲೆ ಮಡಗಿದ್ದಂಗೆ.... ಎಂದು ಬರೆಯುತ್ತಾರೆ. ಈ ಎಲ್ಲ ಕವಿತೆಗಳನ್ನು ನೆನಪಿಗೆ ತರುವಂತೆ ಮಂಗಳೂರಿಗೂ ಮಂಜು ಕವಿದಿದೆ. ಮಂಗಳೂರನ್ನೇ ಬಿಳಿ ಮೋಡ ತಬ್ಬಿದ ಹಾಗೆ, ರಸ್ತೆಗಳಿಗೆಲ್ಲ ಬೆಳ್ಳಿ ಮೆತ್ತಿದ ಹಾಗೆ... ಮಂಗಳೂರಿಗೂ ಕವಿದ ಮಂಜು ನನಗೆ ಮುದ ನೀಡಿತು. ಇದೆಲ್ಲದರ ಜತೆ ನನ್ನ ಕೆಲವು ಹಳೆ ನೆನಪುಗಳನ್ನು ಸ್ಮೃತಿ ಪಟಲದ ಎದುರು ತಂದು ನಿಲ್ಲಿಸಿತು. ನಾನು ಜರ್ನಲಿಸಂ ಕಲಿಯುವಾಗ ದಿಲ್ಲಿ ಸೇರಿದಂತೆ ಉತ್ತರ ಭಾರತಕ್ಕೆ ಪ್ರವಾಸ ತೆರಳಿದ್ದೆವು. ದೆಹಲಿಯಲ್ಲಿ ದಟ್ಟವಾದ ಮಂಜು. ನಾವು ಒಂದು ರಾತ್ರಿ ಒಳಗೆ ಕುಳಿತು ಹರಟುತ್ತಿದ್ದಾಗ ನನ್ನ ಸಹಪಾಠಿ ಲಕ್ಷ್ಮಣ ನಾಯಕ ಒಂದು ಕವಿತೆ ಬರೆದಿದ್ದೇನೆ ಎಂದ. ಇಬ್ಬನಿ ನೀನೊಂದು ಕಂಬನಿ... ಹೀಗೆ (ಈಗ ಸರಿಯಾಗಿ ನೆನಪಿಲ್ಲ) ಒಟ್ಟಾರೆ ಅಂತ್ಯ ಪ್ರಾಸದಲ್ಲಿ, ಕೇಳಲು ತುಂಬ ತ್ರಾಸವಾಗಿ ಸಾಗಿತ್ತು. ನಾನು ಮತ್ತು ಆಪ್ತ ಗೆಳೆಯ ಪ್ರಸನ್ನ ಹಿರೇಮಠ ಕೇಳಿ ಒಳಗೊಳಗೇ ನಕ್ಕರೂ, ತುಂಬ ಚೆನ್ನಾಗಿದೆ ಎಂದು ಹುರಿದುಂಬಿಸಿ ಎಲ್ಲರೆದರೂ ಕವನ ಓದಲು ಹೇಳಿದವು. ಆತ ಓದಿದ. ಅದರ ಪರಿಣಾಮ ಎಲ್ಲರೂ ನಕ್ಕಿದ್ದಲ್ಲದೆ, ಆತನಿಗೆ ‘ಇಬ್ಬನಿ’ ಎಂದೇ ಕರೆಯಲಾರಂಭಿಸಿದರು. ಪ್ರವಾಸ ಮುಗಿದು ತರಗತಿಗೆ ಬಂದಾಗ ಎಲ್ಲರೂ, ಅವರವರ ಅನುಭವನ ಕಥನ ಹೇಳಬೇಕಿತ್ತು. ಆಗ ಲಕ್ಷ್ಮಣ ನಾಯ್ಕ ವೇದಿಕೆಯ ಮೇಲೆ ಹೋಗಿ ನಿಂತಾಗ ನಾವು ಹಿಂದಿನಿಂದ ‘ಇಬ್ಬನಿ’ ಎಂದು ಕೂಗಿದ್ದೇ ತಡ ಕ್ಲಾಸಿನಲ್ಲಿದ್ದವರ ನಗೆಯ ಅಣೆಕಟ್ಟು ಒಡೆದಿತ್ತು. ತನ್ನಷ್ಟಕ್ಕೆ ಸದ್ದಿಲ್ಲದೆ, ನಾವು ಬರೆಯದೆ ಹೋದರೆ ಸುದ್ದಿಯೂ ಇಲ್ಲದೆ ಸುರಿಯುವ, ಮೇಸ್ಟ್ರು ಬರುತ್ತಿದ್ದಂತೆ ಸದ್ದಿಲ್ಲದೆ ಸರಿಯಾಗಿ ಕುಳಿತುಕೊಳ್ಳುವ ಮಕ್ಕಳಂತೆ ಸೂರ್ಯ ಬರುತ್ತಿದ್ದಂತೆ ಸದ್ದಿಲ್ಲದೆ ಸರಿದೂ ಹೋಗುವ ಇಬ್ಬನಿ ನಮ್ಮ ಮನಸೊಳಗೆ ಅದಷ್ಟು ನೆನಪಿನ ಹನಿಗಳನ್ನು ಬಿಟ್ಟುಹೋಗಬಲ್ಲದು! ಚಿತ್ರಗಳು: ಜಿ.ಕೆ. ಹೆಗಡೆ Posted by ವಿನಾಯಕ ಭಟ್ಟ at 11:41 PM 3 comments: Wednesday, February 13, 2008 ಅವ್ವ: ಯವ್ವಾ ಯವ್ವಾ ಎಷ್ಟು ಚೆನಾಗೈತವ್ವ! ಆಡಂಬರವಿಲ್ಲ. ಭಾರೀ ಸುಂದರ ಸೀನುಗಳಿಲ್ಲ. ಅನಗತ್ಯ ಹಾಡುಗಳಿಲ್ಲ. ಡೈಲಾಗುಗಳಂತೂ ನಾವು ನೀವು ಆಡುವ ಮಾತುಗಳೇ. ಇದಕ್ಕಾಗಿಯೇ ನೀವು ‘ಅವ್ವ’ಳನ್ನೊಮ್ಮೆ ನೋಡಬೇಕು! ಇವತ್ತು ನಾನು- ಹೆಂಡತಿ ಅವ್ವ ಸಿನಿಮಾ ನೋಡಿ ಬಂದೆವು. ಚೆನ್ನಾಗಿದೆ. ನಾನು ಅವ್ವಳನ್ನು ನೋಡುವ ಆಸಕ್ತಿಯಲ್ಲಿರಲಿಲ್ಲ. ಆದರೆ ನನ್ನ ಹೆಂಡತಿ ಎಂ.ಎ. ಕಲಿಯುವಾಗ ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿ ಪಠ್ಯವಾಗಿತ್ತು. ಆಕೆ ಸಿನಿಮಾ ನೋಡಲೇಬೇಕು ಅಂದಳು. ಅದಕ್ಕೆ ಹೋದೆ. ಈಗ ಅನ್ನಿಸುತ್ತಿದೆ ಆಕೆ ಸಿನಿಮಾಕ್ಕೆ ಹೋಗಬೇಕೆಂದು ಕಾಟಕೊಡದಿದ್ದರೆ ನಾನು ಒಂದೊಳ್ಳೆ ಸಿನಿಮಾ ತಪ್ಪಿಸಿಕೊಳ್ಳುತ್ತಿದೆ. ಹಾಗಾಗಿ ಹೆಂಡತಿಯರು ಕಾಟಕೊಡುವುದೂ ಕೆಲವು ಬಾರಿ ಒಳ್ಳೆಯದೇ! ಲಂಕೇಶ ಕತೆಯನ್ನು ಓದುವದಕ್ಕಿಂತ ನೋಡುವುದನ್ನು ಚೆಂದವಾಗಿಸಿದ್ದಾರೆ ಮಗಳು ಕವಿತಾ. ಕೊಂಚ ಹಾಸ್ಯ, ಗಂಭೀರ, ಸಹಜ ಮಿಶ್ರಣದ ಒಂದು ಹಳ್ಳಿಯಲ್ಲಿ ನಡೆಯುವ ಕತೆ. ಒಂದೇ ಪರಿಸರದಲ್ಲಿ ಸಿಗುವ ಸಹಜವಾದ ಪ್ರಕೃತಿ ಸೌಂದರ್ಯವನ್ನು ಚಿತ್ರಕ್ಕೆ ತಕ್ಕನಾಗಿ ಬಳಸಿಕೊಳ್ಳಲಾಗಿದೆ. ಹೊರತು ಸುಂದರ ದೃಶ್ಯಗಳಿಗಾಗಿ ಸಿನಿಮಾ ಬಳಸಿಕೊಳ್ಳಲಾಗಿಲ್ಲ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಹಿಂಭಾಗದಲ್ಲಿ ಬಿಸಿಲಿರುವ ಮರದ ಎದುರು ಒಂದು ದೃಶ್ಯ, ಕೆರೆಯ ಏರಿ ಮೇಲೆ ಸೈಕಲ್ ಓಡಿಸುವುದು ಇವೆಲ್ಲ ಕತೆಗೆ, ಹಳ್ಳಿ ಪರಿಸರಕ್ಕೆ ತಕ್ಕಂತೆ ಮೂಡಿಬಂದಿವೆ. ಎಲ್ಲೂ ಅನಗತ್ಯ ಹಾಡು, ದೃಶ್ಯ ತುರುಕಿಸಲಾಗಿಲ್ಲ. ಡೈಲಾಗುಗಳು ಸೋಕಾಲ್ಡ್ ಸುಸಂಕೃತರು ಎನಿಸಿಕೊಂಡವರಿಗೆ ಅಸಭ್ಯ, ಅಸಹ್ಯ ಅನಿಸಬಹುದು. ಅದಕ್ಕೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಎ’ ಸರ್ಟಿಪಿಕೇಟ್ ನೀಡಿದೆ! ಆದರೆ ಕತೆ ನಡೆಯುವುದು ಬಯಲು ಸೀಮೆಯಲ್ಲಿ. ಅಲ್ಲಿಯದ್ದೇ ಭಾಷೆ, ಶೈಲಿ ಬಳಸಿಕೊಳ್ಳಲಾಗಿದೆ. ಅಲ್ಲಿ ನಿಮ್ಮವ್ವನ್, ಬೋಳಿ ಮಗನೆ, ಬೋಸುಡಿ ಮಗನೆ ಎಂಬುದೆಲ್ಲ ಬೈಗುಳಗಳಲ್ಲ. ಮಾತಿನ ಆರಂಭದಲ್ಲಿ ಬರುವ ವಿಶೇಷಣಗಳು ಅವು. ಅವನ್ನು ಒಂದು ಜನರ ಭಾಷೆ ಎಂದು ಪರಿಗಣಿಸಿದರೆ ಸಾಕು. ಹಾಗಿರುವುದರಿಂದಲೇ ಚಿತ್ರ ಸಹಜ ಅನ್ನಿಸುವುದು. ಒಮ್ಮೆ ನಾಯಕನ ಗೆಳೆಯ ಕೊಟ್ಟ ಹಣವನ್ನು ನಾಯಕಿ ಕುಪ್ಪುಸದೊಳಗೆ ಇರಿಸಿಕೊಳ್ಳುತ್ತಾಳೆ. ‘ಅದ್ಕೇ ನೋಡು ಹೆಂಗಸ್ರ ಕೈಲಿ ದುಡ್ಡು ಬೆಚ್ಚಗಿರತ್ತಂತೆ...’ ಅನ್ನುತ್ತಾನೆ ನಾಯಕ ವಿಜಯ್. ಎಲ್ಲರೊಟ್ಟಿಗೆ ಕುಳಿತು ಸಿನಿಮಾ ನೋಡುವಾಗ ಇದು ಸ್ವಲ್ಪ ಇರಿಸುಮುರಿಸು ಉಂಟು ಮಾಡುತ್ತದಾದರೂ, ವಿಷಯ ಸತ್ಯವೇ ಅಲ್ಲವೇ? ಚಿತ್ರದಲ್ಲಿರೋದು ಎರಡೇ ಹಾಡು. ಒಂದು ‘ಗುರುವೇ ನಿನ್ನಾಟ ಬಲ್ಲವರು ಯಾರ್‍ಯಾರೊ’ ಇಂಪಾಗಿದೆ. ಇನ್ನೊಂದು ಹಾಡು ಹಿಂದಿಯದ್ದು, ‘ಆ ಆ ಆಜಾ ಆ ಆ ಆ ಆಜಾ’ ಇದರಲ್ಲಿ ನೃತ್ಯ ಉತ್ತಮವಾಗಿದೆ. ಇಕ್ಬಾಲ್ ಕುತ್ತಿಗೆ ಕುಣಿಸುವ ನೃತ್ಯದಲ್ಲಿ ಶಮ್ಮಿಕಪೂರ್‌ನನ್ನೂ ಮೀರಿಸಿದ್ದಾರೆ. ಇದೊಂದು ನೃತ್ಯಕ್ಕಾಗಿಯಾದರೂ ನೀವು ಸಿನಿಮಾ ನೋಡಬೇಕು. ನಕ್ಕು ನಕ್ಕು ಸುಸ್ತಾಗುವುದು ಖಂಡಿತ. ಸಾವಂತ್ರಿಯಾಗಿ ನಾಯಕಿ, ಬ್ಯಾಡರ ಮಂಜನಾಗಿ ವಿಜಯ್, ಅವ್ವಳ ಪಾತ್ರದಲ್ಲಿ ಶೃತಿ ಉತ್ತಮ ಅಭಿನಯ ನೀಡಿದ್ದಾರೆ. ವಿಜಯ್‌ಗೆ ಇಂತಹ ಹಳ್ಳಿ ಹುಡುಗುನ ಪಾತ್ರ ಸಹಜವಾಗಿ ಒಪ್ಪುತ್ತದೆ. ಆತ ಇಂತಹ ಪಾತ್ರಗಳಲ್ಲಿ ಸಹಜವಾಗಿ ನಟಿಸುತ್ತಾನೆ. ಶೃತಿಯಂತಹ ನಟಿಯ ಬಾಯಲ್ಲಿ ಕೆಟ್ಟ ಶಬ್ದದ ಡೈಲಾಗುಗಳು, ಅಳುಮುಂಜಿ ಪಾತ್ರಕ್ಕೇ ಸೀಮಿತವಾಗಿದ್ದ ಅವರನ್ನು ಮಾಂಕಾಳಿ ಪಾತ್ರದಲ್ಲಿ ನೋಡುವುದು ಒಂದು ಅಪರೂಪವೇ. ಆದರೂ ಶೃತಿಯ ಬದಲು ಉಮಾಶ್ರಿ ಅವ್ವಳ ಪಾತ್ರವನ್ನು ಇನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರೇನೋ ಅನ್ನೋದು ನನ್ನ ಭಾವನೆ. ನಾಯಕಿ ಸಾವಂತ್ರಿಯ ಗೆಳತಿ ಶಿವಿ ಸಾಯುತ್ತಾಳೆ. ಆಕೆ ಯಾಕೆ ಸಾಯುತ್ತಾಳೆ? ಎಂಬುದು ಗೊತ್ತಾಗುವುದಿಲ್ಲ. ಆದರೆ ಆಕೆಯ ಸಾವಿಗೆ ಜನ ಏನೇನೋ ಮಾತಾಡಿಕೊಳ್ಳುತ್ತಾರೆ. ಆಕೆ ಸತ್ತಾಗ ಮನೆಯವರು, ಅಕ್ಕಪಕ್ಕದವರು ಅಳುವುದನ್ನು ಹಾಗೂ ಚಿತ್ರ ಮುಗಿಯುತ್ತ ಬರುವಾಗ ನಾಯಕ- ನಾಯಕಿಯ ಸರಸವನ್ನು ಸ್ವಲ್ಪ ಹೆಚ್ಚೇ ಎನ್ನುವಷ್ಟು ತೋರಿಸಲಾಗಿದೆ. ಎರಡೂ ಬಹುಶಃ ಅನಗತ್ಯವಾಗಿತ್ತು. ಚಿತ್ರದುದ್ದಕ್ಕೂ ಬೈಗುಳ ಕೇಳಿರುತ್ತೀರಿ. ಅಂತ್ಯದಲ್ಲಿ ಪ್ರೇಕ್ಷಕರಿಗೂ ಬೈಗುಳವೇ!? ಸಾಮಾನ್ಯವಾಗಿ ಚಿತ್ರದ ಕೊನೆಯಲ್ಲಿ ಇನ್ನೊಮ್ಮೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ಅವ್ವ ಮಾತ್ರ ಏನು ಕೋತಿ ಕುಣಿತೈತ್ರಾ ಇಲ್ಲಿ. ಹ್ವೋಗಿ ಹ್ವೋಗಿ ಕೆಲಸ ನೋಡ್ವೋಗಿ ಎಂದು ಬೀಳ್ಕೊಡುತ್ತಾಳೆ!ಹೋಗಿ ನೋಡಿ ಖುಶಿಪಟ್ಟು, ಉಗಿಸ್ಕೊಂಡು ಬನ್ನಿ! ದುಡ್ಕೊಟ್ಟು ಉಗಿಸ್ಕೊಳ್ಳೋದು ಅಂದ್ರೆ ಏನೂಂತ ನಿಮಗೂ ಸ್ವಲ್ಪ ಗೊತ್ತಾಗ್ಲಿ...!! Posted by ವಿನಾಯಕ ಭಟ್ಟ at 2:17 PM 4 comments: Tuesday, February 12, 2008 ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು! ಗಣೇಶ್ ಮತ್ತು ಶಿಲ್ಪಾ ೨ ವರ್ಷದ ಹಿಂದೆ ಭೇಟಿಯಾದರು. ಪರಿಚಯ ಪ್ರೇಮಕ್ಕೆ ತಿರುಗಿತು. ಅದೀಗ ಮದುವೆಯಲ್ಲಿ ಮುಕ್ತಾಯವಾಗಿದೆ! ಹಾಗಂತ ಟಿವಿ ೯ನಲ್ಲಿ ಒದರುತ್ತಿದ್ದರು. ನಮ್ಮದೇ ವಿಜಯ ಕರ್ನಾಟಕ ಪತ್ರಿಕೆಯಲ್ಲೂ ಹಾಗೇ ಬಂದಿದೆ ಅನ್ನಿ. ಹಾಸ್ಯಕ್ಕೆ ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು ಅನ್ನುವುದು ವಾಡಿಕೆ. ಆದರೆ ನಿಜವಾಗಿಯೂ ಸುದ್ದಿ ನಿರೂಪಿಸುವಾಗಲೂ ಹಾಗೆ ಹೇಳಬೇಕೆ? ಜೋಗಿಯವರು ಜಾನಕಿ ಕಾಲಂನಲ್ಲಿ ಬರೆದ ‘ಪ್ರೀತಿಯೆಂಬ ಮಾಯಾಂಜಿಕೆಯೂ ಮನಸ್ಸೆಂಬ ವೈದಹಿಯೂ’ ಲೇಖನದಲ್ಲಿ ಪ್ರೀತಿಯ ಬಗೆಗೆ ಹಾಸ್ಯಮಯವಾಗಿ, ವಿಶೇಷವಾಗಿ ಮತ್ತು ವಿಶಿಷ್ಟವಾಗಿ ಬರೆದಿದ್ದಾರೆ. ಓದಿರದೇ ಇದ್ದರೆ ಒಮ್ಮೆ ಓದಿ. ಅವರು ಬರೆಯುತ್ತಾರೆ... ಪ್ರೀತಿಸದೇ ವರ್ಷಾನುಗಟ್ಟಲೆ ಸಂತೋಷವಾಗಿ ಇದ್ದುಬಿಡಬಹುದು. ಪ್ರೀತಿಸುತ್ತಲೂ ಸಂತೋಷವಾಗಿರಬಹುದು. ಆದರೆ ಪ್ರೀತಿ ಏನನ್ನೋ ಬೇಡುತ್ತದೆ. ಏನನ್ನೋ ಕಾಡುತ್ತದೆ. ಸುಮ್ಮನಿದ್ದವರನ್ನು ಮದುವೆಗೆ ದೂಡುತ್ತದೆ. ಮದುವೆಯಾದರೆ ಪ್ರೀತಿ ಉಳಿಯುತ್ತದೆ ಅಂದುಕೊಳ್ಳುತ್ತಾರೆ. ಮದುವೆಯೆಂಬ ಪಂಜರದಲ್ಲಿ ಪ್ರೀತಿಯನ್ನು ಬಂಧಿಸಲು ಯತ್ನಿಸುತ್ತಾರೆ. ಆದರೆ ಗಿಣಿಯು ಪಂಜರದೊಳಿಲ್ಲ ಎಂಬುದು ಆಮೇಲೆ ತಿಳಿಯುತ್ತದೆ’... ಹೀಗೆ ಸಾಗುತ್ತದೆ ಬರವಣಿಗೆ. ಅಂತ್ಯ ಇನ್ನೂ ರೋಚಕ! ‘ಮದುವೆಗೆ ಮೊದಲು ಐ ಲವ್‌ ಯು ಅನ್ನುವುದು ಹೇಗೆ ಎಂಬ ಸಂಕಟ. ಮದುವೆಯಾದ ನಂತರ ಐ ಲವ್ ಯು ಅನ್ನಬೇಕಲ್ಲ ಎಂಬ ಪ್ರಾಣಸಂಕಟ. ಮದುವೆಗೆ ಮೊದಲು ಎಲ್ಲಿ ಪ್ರೀತಿಸ್ತೀನಿ ಅಂದುಬಿಡುತ್ತಾನೋ ಎಂಬ ಭಯ. ಆಮೇಲೆ ಎಲ್ಲಿ ಪ್ರೀತಿಸುತ್ತೇನೆ ಅನ್ನೋದಿಲ್ಲವೋ ಎಂಬ ಭಯ. ಮೊದಲು ಪ್ರೀತಿಸಲಿ ಅನ್ನೋ ಆಸೆ. ನಂತರ ಪ್ರೀತಿಸೋದಿಲ್ಲ ಎಂಬ ಗುಮಾನಿ. ಒಮ್ಮೆ ಐ ಲವ್ ಯು ಅಂದೆ. ಥ್ಯಾಂಕ್ಯು ಅನ್ನುವ ಉತ್ತರ ಬಂತು. ಮದುವೆಯಾದ ಮೇಲೆ ಅದನ್ನೇ ಅಂದೆ ನೋ ಮೆನ್ಶನ್ ಪ್ಲೀಸ್ ಅನ್ನುವ ಉತ್ತರ ಬಂತು. ಐ ಹೇಟ್ ಯು ಅಂದೆ. ಸೇಮ್ ಟು ಯು ಎಂಬ ಮರುತ್ತರ ಬಂತು. ಸಧ್ಯ ಇಬ್ಬರೂ ಪ್ರೀತಿಸುತ್ತಿಲ್ಲ. ಆದ್ದರಿಂದ ಸುಖವಾಗಿದ್ದೇವೆ ಅಂದುಕೊಂಡೆ’ ಎಂದು ಬರೆಯುತ್ತಾರೆ ಜೋಗಿ. ಪ್ರೀತಿಯ ಬಗ್ಗೆ ಇಷ್ಟು ಅದ್ಭುತವಾಗಿ, ಹಾಸ್ಯಮಿಶ್ರಿತ ಸತ್ಯ ವಿವರಿಸಿದ್ದನ್ನು ನಾನಂತೂ ಎಲ್ಲೂ ಓದಿಲ್ಲ. ಇಷ್ಟೆಲ್ಲ ನೆನಪಾದದ್ದು ಗಣೇಶ್ ಮದುವೆಯಿಂದ. ಟಿವಿ೯ ಚಾನಲ್‌ನಲ್ಲಂತೂ ಇಡೀ ದಿನ ಅದೇ ಸುದ್ದಿ. ಸಂಜೆಯ ನಂತರ ಬೇರೆ ವಿಷಯವೇ ಇಲ್ಲ. ರಾತ್ರಿ ೧೦.೦೦ ಗಂಟೆಗೆ ಇದೆಂಥಾ ಮದುವೆ!? ಎಂಬ ಕಾರ್ಯಕ್ರಮ. ಯಾಕೆ? ಒಬ್ಬ ಸಿನಿಮಾ ಸ್ಟಾರ್‌ನ ಖಾಸಗಿ ಜೀವನದ ಬಗ್ಗೆ ಯಾಕಿಷ್ಟು ಆಸಕ್ತಿ? ಆತನ ಮದುವೆಯನ್ನು ಇದೆಂಥಾ ಮದುವೆ ಎಂದು ಪ್ರಶ್ನಿಸಲು ಮಾಧ್ಯಮಕ್ಕೆ ಅಧಿಕಾರ ಕೊಟ್ಟವರು ಯಾರು? ಮಾಧ್ಯಮದ ಮಂದಿ ಹದ್ದುಮೀರಿ ವರ್ತಿಸುತ್ತಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳು ಪತ್ರಕರ್ತನಾದ ನನ್ನಲ್ಲಿಯೇ ಮೂಡುತ್ತಿದೆ. ಮಾಧ್ಯಮಗಳ ಮತ್ತು ಮಾಧ್ಯಮದಲ್ಲಿರುವ ಕೆಲವರ ಅತ್ಯಾಸಕ್ತಿಯ ಪರಿಣಾಮ ಪ್ರಸಿದ್ಧ ವ್ಯಕ್ತಿಗಳ ಖಾಸಗಿ ಜೀವನ ಹಾಳಾಗಿದೆ. ಖಾಸಗಿ ಜೀವನ ಎಂಬ ಶಬ್ದವೇ ಅವರ ಮಟ್ಟಿಗೆ ಅರ್ಥ ಕಳೆದುಕೊಳ್ಳುತ್ತಿದೆ. ಸಿನಿಮಾ ನಟಿಯರು ಬಂದರೆ ಸಾಕು ಮಧ್ಯಮದವರು ಮುತ್ತುತ್ತಾರೆ. ಮಂಗಳೂರಿಗೆ ಐಶ್ವರ್ಯಾ ರೈ ಬಂದರೆ ಎಲ್ಲ ಮಾಧ್ಯಮ ಪ್ರತಿನಿಧಿಗಳು ಐಶ್ವರ್ಯಾ ರೈ ಇರುವ ಹೋಟೆಲ್ ಎದುರು ಒಂದಿಡೀ ದಿನ ಕಾದು ಕುಳಿತಿರುತ್ತಾರೆ. (ಸಾಮಾನ್ಯರು ಪತ್ರಿಕಾಗೋಷ್ಠಿ ೫ ನಿಮಿಷ ತಡವಾದರೆ ಬೊಬ್ಬೆಹೊಡೆಯುತ್ತಾರೆ!). ಆಕೆಯೋ ಪತ್ರಕರ್ತರನ್ನು ಬಳಿಯೂ ಬಿಟ್ಟುಕೊಳ್ಳುವುದಿಲ್ಲ. ಇದೆಂಥ ಕರ್ಮ ಪತ್ರಕರ್ತರದ್ದು! ಖಾಸಗಿ ಜೀವನ. ಅವರವರದ್ದು ಅವರವರಿಗೆ. ಒಬ್ಬೆ ಒಳ್ಳೆ ನಟನಾದರೆ ಅವನ ನಟನೆ ಇಷ್ಟಪಡೋಣ. ಲೇಖಕನ ಲೇಖನ ಇಷ್ಟಪಡೋಣ. ಅವರ ಪ್ರೀಮ, ಕಾಮದ ಖಾಸಗಿ ಜೀವನವನ್ನಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಉತ್ತಮ ನಡತೆ, ಆದರ್ಶ ಜೀವನ ನಡೆಸಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಹಾಗೇ ಇರಬೇಕು ಎಂದು ನಿರ್ದೇಶಿಸುವುದು ಸರಿಯಲ್ಲ. ಗಣೇಶ್ ಇಷ್ಟ ಪಟ್ಟ ಹುಡುಗಿಯನ್ನು ಮದುವೆಯಾಗಿದ್ದಾರೆ. ವಿಚ್ಛೇದಿತೆಯನ್ನು ಮದುವೆಯಾಗಲು ಅಂತಹ ಮನಸ್ಥಿತಿ ಬೇಕು ಎಂಬುದು ಸತ್ಯ. ಆದರೆ ಆಕೆಗೆ ಆತನ ಜೀವನ ಕೊಟ್ಟ, ಬಾಳು ಕೊಟ್ಟ ಎಂಬುದು ಸುಳ್ಳು. ಯಾಕೆಂದರೆ ಜೀವನ ಆಕೆಯದು. ವಿಚ್ಛೇದಿತರಾಗಿ ಮದುವೆಯಾಗದೇ ಇರುವವರೂ ಬಾಳು ನಡೆಸುತ್ತಿದ್ದಾರೆ. ಅಥವಾ ಆಕೆ ವಿಚ್ಛೇದಿತೆ. ಬಾಳು ಕತ್ತಲಲ್ಲಿದೆ ಎಂದು ಗಣೇಶ ಮದುವೆಯಾಗಿದ್ದಲ್ಲ. ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆ. ಅದನ್ನೊಂದು ದೊಡ್ಡ ಆದರ್ಶವೆಂದಾಗಲಿ, ಟಿವಿ೯ ಚಾನಲ್ ಥರ ಇದೆಂಥಾ ಮದುವೆ ಎಂದಾಗಲಿ ಬಿಂಬಿಸುವ, ಭಾರೀ ಪ್ರಚಾರ ಕೊಡುವ ಅಗತ್ಯಗಳು ನನಗಂತೂ ಸರಿ ಅನಿಸುತ್ತಿಲ್ಲ. ಏನಂತೀರಾ? Posted by ವಿನಾಯಕ ಭಟ್ಟ at 11:03 PM 4 comments: ಹೆಂಡತಿಗೂ ನದಿಯ ಗು(ಹ)oಗು ನಾನಿನ್ನೂ ಜೋಗಿಯವರ ನದಿಯ ನೆನಪಿನ ಹ(ಗು)ಂಗಿನಿಂದ ಹೊರಬಂದಿಲ್ಲ. ಆಗಲೇ ನನ್ನ ಹೆಂಡತಿ ನದಿಯ ಗುಂಗಿಗೆ ಸಿಲುಕಿದ್ದಾಳೆ. ಸಾಮಾನ್ಯವಾಗಿ ಆಕೆ ಓದುವುದು ತುಸು ನಿಧಾನ. ದಿನವೂ ಅಷ್ಟಷ್ಟೇ ಪುಟಗಳನ್ನು ಓದುತ್ತ ಹೋಗುವುದು ಆಕೆ ಅಭ್ಯಾಸ. ಆದರೆ ಜೋಗಿಯವರ ನದಿಯ ನೆನಪಿನ ಹಂಗು ಪುಸ್ತಕ ಹಿಡಿದ ಆಕೆ ಅದನ್ನು ಕೆಳಗೇ ಇಡುತ್ತಿಲ್ಲ. ಫೆ.೧೧ರಂದು ಓದಲು ಆರಂಭಿಸಿದವಳು ಫೆ.೧೨ಕ್ಕೆ ಮುಗಿಸುವ ಹಂತಕ್ಕೆ ಬಂದಿದ್ದಾಳೆ! ದಾರವಾಹಿಯನ್ನೂ ನೋಡದೆ, ಇಂಟರ್‌ನೆಟ್ ಆನ್ ಮಾಡದೆ ಪುಸ್ತಕಕ್ಕೆ ಅಂಟಿ ಕೂತಿದ್ದಾಳೆ. ಇವತ್ತೇ ಮುಗಿಸಿಬಿಡುವಷ್ಟು ಇಂಟರೆಸ್ಟಿಂಗ್ ಆಗಿದ್ಯೇನೆ ಅಂದೆ? ಅದಕ್ಕೆ ಹೌದು ಅಂದಳು. ಆದರೆ ಅವಳಿಗೆ ಇಂದೇ ಓದಿ ಮುಗಿಸುವದೂ ಇಷ್ಟವಿಲ್ಲ ಯಾಕೆಂದರೆ ಮುಗಿದೇ ಹೋಗುತ್ತಲ್ಲ ಎಂಬ ಬೇಜಾರು! ನೋಡಿ ಜೋಗಿ ಯಾರ್‍ಯಾರನ್ನೋ ಎಂಥೆಂಥ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ! Posted by ವಿನಾಯಕ ಭಟ್ಟ at 10:59 PM No comments: Monday, February 11, 2008 ನದಿಯ ನೆನಪಿನ ಗು(ಹ)೦ಗಿನಲ್ಲಿ... ಅದೊಂದು ಕೊಲೆ ಪ್ರಕರಣ. ನಾನು ಮಂಗಳೂರಿಗೆ ಬರುವ ಮೊದಲೇ ಅದು ನಡೆದಿತ್ತಾದರೂ, ಕ್ರೈಂ ರಿಪೋರ್ಟರ್ ಆಗಿ ನಾನು ಹಳೆಯ ಕ್ರೈಂಗಳ ಕಥಾನಕ ಬರೆಯುತ್ತಿದ್ದಾಗ, ಗೋಪಾಲಕೃಷ್ಣ ಕುಂಟಿನಿ ಸಲಹೆಯಂತೆ ಆ ಕೊಲೆಯ ಬಗ್ಗೆ ಬರೆದಿದ್ದೆ. ಆದೇ ಕೊಲೆಯ ಸುತ್ತಮುತ್ತ ಜೋಗಿಯ ನದಿಯ ನೆನಪಿನ ಹಂಗು ಕಾದಂಬರಿ ಹಬ್ಬಿಕೊಂಡಿದೆ. ಕೊಲೆಯಾದಾತ ಜೋಗಿ ಮತ್ತು ಕುಂಟಿನಿಯ ಗೆಳೆಯನೂ ಆಗಿದ್ದ. ದಕ್ಷಿಣ ಕನ್ನಡದವರ ಮಟ್ಟಿಗೆ ಈ ಕಾದಂಬರಿ ನಮ್ಮ ಸುತ್ತಲಿನಲ್ಲೇ ನಡೆದ ಘಟನೆ ಎಂಬಷ್ಟು ಆಪ್ತವಾಗುವಂಥದ್ದು. ಕೊಲೆಯ ಸುತ್ತ ಹಲವಾರು ಘಟನೆಗಳು ಸೃಷ್ಟಿಯಾಗುತ್ತವೆ. ಹೆಚ್ಚಿನವೆಲ್ಲ ಸತ್ಯ ಘಟನೆಗಳೇ. ಅದನ್ನು ಜೋಗಿ ಕತೆ ಎಂಬಂತೆ ವಿವರಿಸಿದ್ದಾರೆ. ಸ್ಥಳಗಳು ಅದೇ, ಹೆಸರುಗಳು ಮಾತ್ರ ಬೇರೆ ಬೇರೆ. ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಮದುವೆಯಾದ ಘಟನೆಯೂ ಕಾದಂಬರಿಯಲ್ಲಿ ಬರುತ್ತದೆ. ಸ್ವಾಮೀಜಿಯ ತುಮುಲ, ಅವರ ಮದುವೆಗೆ ಉಂಟಾಗುವ ಅಡ್ಡಿಗಳು, ಸ್ವಾಮೀಜಿಯಾಗಿಯೇ ಇರಿ, ಹುಡುಗಿಯೊಂದಿಗಿನ ಸಂಬಂಧ ಮುಂದುವರಿಸಿ ಎಂಬಂಥ ಮರ್ಯಾದೆ ಉಳಿಸುವ ಸಲಹೆಗಳನ್ನೆಲ್ಲ ಜೋಗಿ ಸ್ವಾರ್‍ಯಸ್ಯವಾಗಿ ವಿವರಿಸಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ನಂಗಂತೂ ಖುಷಿಕೊಟ್ಟಿದೆ. ನೀವೂ ಓದಿ. ನಿಮಗೂ ಇಷ್ಟವಾಗುವುದು ಖಂಡಿತ. ಜೋಗಿ ಸಿಕ್ಕಾಬಟ್ಟೆ ಬರೆಯುತ್ತಾರೆ. ಅವರು ಎಷ್ಟು ಬರೆಯುತ್ತಾರೆಂದರೆ ಅವರು ಒಂದು ವಾರದಲ್ಲಿ ಬರೆದಷ್ಟನ್ನು ನಾವು ಒಂದು ವಾರದಲ್ಲಿ ಓದಲು ಸಾಧ್ಯವಿಲ್ಲ. ಅಷ್ಟು ಬರೆಯುತ್ತಾರೆ. ಅವರು ಬರೆಯುತ್ತಲೇ ಇರಲಿ. ಅದರಲ್ಲಿ ಒಂದಷ್ಟನ್ನಾದರೂ ಓದಿ ಖುಷಿಪಡಲು ನಮಗೆ ಸಮಯ ಸಿಗಲಿ! Posted by ವಿನಾಯಕ ಭಟ್ಟ at 11:04 AM 1 comment: Wednesday, January 30, 2008 ಹಿಡಿವ ಬಸ್ಸು ಬಿಟ್ಟು, ಬಿಡುವ ಬಸ್ಸು ಹಿಡಿದು... ಎಂಥೆಂಥದ್ದೋ ಪ್ರಕರಣಗಳ ಆರೋಪಿಗಳನ್ನು, ಚಾಲಾಕಿಗಳನ್ನು ಹಿಡಿಯುವ ಪೊಲೀಸರು ಒಮ್ಮೊಮ್ಮೆ ಎಡವಟ್ಟು ಮಾಡಿಬಿಡುತ್ತಾರೆ. ಹೋಳಿದ್ದೊಂದನ್ನು ಬಿಟ್ಟು ಇನ್ನೆಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಇಕ್ಕಟ್ಟಿಗೆ ಸಿಲುಕುತ್ತಾರೆ. ಒಂದು ದಿನ (ಎರಡು ವರ್ಷದ ಹಿಂದೆ) ನಡೆದ ಈ ಘಟನೆ ಅದಕ್ಕೊಂದು ಸಾಕ್ಷಿ. ಬೆಳಗಾಂನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಮಂಗಳೂರಿಗೆ ಬಂದಿದ್ದರು. ರಾತ್ರಿ ಬಸ್ಸಿಗೆ ಮರಳಿ ಬೆಳಗಾಂಗೆ ಹೋಗಬೇಕಿತ್ತು. ೧೦.೦೦ ಗಂಟೆ ಬಸ್‌ಗೆ ಟಿಕೆಟ್ ಬುಕ್ ಆಗಿತ್ತು. ಅವರು ಎಲ್ಲೆಲ್ಲೋ ಹೋಗಿ, ಏನೇನೋ ಹಕ್ಕುಗಳನ್ನು ಜಾರಿ ಮಾಡಿ ಮರಳಿ ಮಂಗಳೂರಿಗೆ ಬರುವಾಗ ರಾತ್ರಿ ೮.೩೦ ಗಂಟೆ ಆಗಿಬಿಟ್ಟಿತ್ತು. ಅವರನ್ನು ಭೇಟಿ ಮಾಡಲು ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್, ಡಿವೈಎಸ್ಪಿ ಎಸ್.ಎಂ. ಮಂಟೂರ್ ಹಾಗೂ ಮಂಗಳೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಉದಯ್ ನಾಯ್ಕ್ ಕಾದು ಕುಳಿತಿದ್ದರು. ಭೇಟಿ ಅಂದರೆ ಸುಮ್ಮನೆ ಆಗುತ್ಯೆ? ಸ್ವಲ್ಪ ಹೊತ್ತಿನ ಹರಟೆಯ ನಂತರ ಊಟ ಮಾಡಲು ಹೋದರು. ಎಷ್ಟೇ ಬೇಗ ಬೇಗ ಆರ್ಡರ್ ಮಾಡಿ ತರಿಸಿಕೊಂಡು ಊಟ ಮಾಡಿದರೂ ೧೦.೦೦ ಗಂಟೆ ಆಗಿಬಿಟ್ಟಿತ್ತು. ಬಸ್ ತಪ್ಪಿಹೋಗುತ್ತಲ್ಲ? ಪೊಲೀಸ್ ಬುದ್ದಿ ಕರ್ಚು ಮಾಡಿ ಕೂಡಲೆ ಸಂಚಾರ ವಿಭಾಗ ಪೊಲೀಸರಿಗೆ ವಯರ್‌ಲೆಸ್ ಮೂಲಕ ಮಾಹಿತಿ ನೀಡಿ ಬಸ್ ನಿಲ್ಲಿಸುವಂತೆ ಸೂಚಿಸಲಾಯಿತು. ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಅವರ ವಾಹನ ಕೆಂಪು ಲೈಟ್ ಹಾಕಿಕೊಂಡು ಸರ್ವೀಸ್ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾದ ಬಸ್ ಬಳಿಗೆ ಹೋಗುವಾಗ ೧೦-೧೫ ನಿಮಿಷ ವಿಳಂಬವಾಗಿತ್ತು. ಅಲ್ಲಿ ಹೋಗಿ ನೋಡಿದರೆ ಸಂಚಾರ ಪೊಲೀಸರು ಎರಡು ಬಸ್ ಹಿಡಿದು ನಿಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ವಾಹನ ಬಂದ ತಕ್ಷಣ ಸೆಲ್ಯೂಟ್ ಹೊಡೆದ ಒಬ್ಬ ಸರ್ ಎರಡೂ ಬಸ್ ನಿಲ್ಲಿಸಿದ್ದೇವೆ ಎಂದ ವರದಿ ಒಪ್ಪಿಸಿದ. ಹೋಗಿ ನೋಡಿದರೆ ಬೇಕಾದ ಬಸ್ಸೇ ಇರಲಿಲ್ಲ. ಸಂಚಾರ ಪೊಲೀಸರು ಗಡಿಬಿಡಿಯಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಹೋಗುವ ಬಸ್ ಹಿಡಿದು ನಿಲ್ಲಿಸಿದ್ದರು. ಬೆಳಗಾಂಗೆ ಹೋಗುವ ಬಸ್ ಹೋಗಿಯಾಗಿತ್ತು!! ನಗರ ಸಂಚಾರ ಮುಗಿಸಿ ಹೊರ ಹೋಗುತ್ತಿದ್ದ ಬಸ್ಸನ್ನು ಕೆಎಸ್‌ಆರ್‌ಟಿಸಿ ಬಳಿ ಕೊನೆಗೆ ಅಂತೂ ಇಂತೂ ಹಿಡಿದು ಬೆಳಗಾಂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್ಪಿಯವರನ್ನು ಹತ್ತಿಸಿದ ಅವರ ಗೆಳೆಯರು ಕೊನೆಗೂ ಸಿಕ್ಕೆದೆಯಲ್ಲ ಖಾಸಗಿ ಬಸ್ಸೆ ಎಂದು ನಿಟ್ಟುಸಿರು ಬಿಟ್ಟರು!! ಇದು ನನಗೆ ಹೇಗೆ ಗೊತ್ತಾಯಿತು ಅಂದ್ರೆ, ನಾನು ಮನೆಗೆ ಮರಳುವಾಗ ಈ ಮೂವರು ಪೊಲೀಸ್ ಅಧಿಕಾರಿಗಳು ಆಗಷ್ಟೇ ಗೆಳೆಯನನ್ನು ಬಸ್ ಹತ್ತಿಸಿ, ಉಫ್! ಅಂತ ಉಸಿರು ಬಿಟ್ಟು, ರಸ್ತೆ ಬದಿಗೆ ಸುದ್ದಿ ಹೇಳುತ್ತ ನಿಂತಿದ್ದರು. ನಾನು ಬೈಕ್ ನಿಲ್ಲಿಸಿ ಮಾತನಾಡಿಸಿದಾಗ ಇದೆಲ್ಲ ಪುರಾಣ ಹೊರಬಿತ್ತು. Posted by ವಿನಾಯಕ ಭಟ್ಟ at 10:41 PM 3 comments: Tuesday, January 22, 2008 ಹೊಂಗನಸು ಅಲ್ಲವಿದು ಕೆಟ್ಟ ಕನಸು! ಆ ಮನೆಯ ಯಜಮಾನ ಆಗಷ್ಟೇ ಸತ್ತಿರುತ್ತಾನೆ. ಅಂತ್ಯ ಸಂಸ್ಕಾರಕ್ಕೆಂದು ಆತನ ಹೆಣವನ್ನು ಗುಡ್ಡದ ಮೇಲೆ ತೆಗೆದುಕೊಂಡು ಹೋಗಿ ಇಟ್ಟಿರುತ್ತಾರೆ. ಆಗ ಅಷ್ಟೂ ಹೊತ್ತು ನಿಮಗೆ ಗೊತ್ತಿಲ್ಲದ ಒಬ್ಬ ವ್ಯಕ್ತಿ ಬರುತ್ತಾನೆ. ಸತ್ತವನ ಹೆಂಡತಿ ಬಳಿ ಹೋಗಿ, ಏನಿಲ್ಲ ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನೆರವೇರಿದರೆ ಎಲ್ಲ ಸರಿ ಹೋಗುತ್ತದೆ. ನಿನ್ನ ಮಗಳಿಗೆ ಒಂದು ಸಂಬಂಧ ಇದೆ ನೋಡಲೆ? ಎನ್ನುತ್ತಾನೆ. ಇಂತಹ ಘಟನೆ, ಸನ್ನಿವೇಶವನ್ನು ನೀವೆಲ್ಲೂ ನೋಡಿಲ್ಲವೆಂದರೆ ಖಂಡಿತ ಹೊಂಗನಸು ಸಿನಿಮಾ ನೋಡಿ. ಅದರಲ್ಲಿ ಅಪ್ಪನ ಹೆಣ ಇರಿಸಿಕೊಂಡೇ ಮಗಳ ಮದುವೆ ಮಾತನಾಡುವ ಸನ್ನಿವೇಶ ಇದೆ! ನಿಮಗೆ ಇಷ್ಟವಾಗಬಹುದು!! ಚಿತ್ರದ ನಾಯಕ ಮತ್ತು ನಾಯಕಿ ಹಳ್ಳಿ ಮತ್ತು ನಗರದಲ್ಲಿ ವಾಸವಾಗಿರುವವರು. ಆದರೆ ಹಾಡಲ್ಲಿ ಮಾತ್ರ ಇವರು ಟೈಗರ್ ಪ್ರಭಾಕರ್‌ನ ‘ಕಾಡಿನ ರಾಜ’ ಅಥವಾ ಎಂ.ಪಿ. ಶಂಕರ್‌ನ ಚಿತ್ರಗಳಲ್ಲಿ ಕಾಣುತ್ತಿದ್ದ ‘ಜುಂಬಲಿಕ್ಕಾ ಜುಂಬಿಕ್ಕಾ ಜುಂಬ ಜುಂಬಾಲೆ’ ಹಾಡಿನ ನಮೂನೆಯ ಕಾಡು ಮನುಷ್ಯರ ಬಟ್ಟೆ ಧರಿಸಿ ಬೆರಗು ಮೂಡಿಸುತ್ತಾರೆ. ಇನ್ನು ನಾಯಕಿಯೋ? ಅವಳ ಮುಖ, ನಟನೆ ನಿರ್ದೇಶಕರಿಗೇ ಚೆಂದ. ನಾಯಕನ ಜತೆ ನಾಯಕಿ ಹಾಗೂ ಗೆಳತಿಯರು ಕೇರಳಕ್ಕೆ ಓಣಂಗಾಗಿ ತೆರಳುತ್ತಾರೆ. ಆಗ ಚಹಾ ತೋಟದಿಂದ ಕಂಗೊಳಿಸುವ ಮುನಾರ್ ತೋರಿಸಲಾಗುತ್ತದೆ. ನಂತರ ಕೆಲವೇ ಕ್ಷಣದಲ್ಲಿ ಆ ಮನೆಯ ಮಾಲಿಕ ಕನ್ನಡದಲ್ಲಿ ಮಾತನಾಡಿ ಬೆಚ್ಚಿ ಬೀಳಿಸುತ್ತಾನೆ. ಅವರದ್ದೇ ಬಾಯಲ್ಲಿ "ಕಾಸರಗೋಡು ಮೊದಲು ಕರ್ನಾಟಕದ ಭಾಗವಾಗಿತ್ತು. ನೀವು ಅದನ್ನು ಉಳಿಸಿಕೊಳ್ಳಲಿಲ್ಲ.’ ಎಂಬ ಡೈಲಾಗುಗಳನ್ನು ನಿರ್ದೇಶಕ ಮಹಾಶಯರು ಹೇಳಿಸುತ್ತಾರೆ. ಆದರೆ ಕಾಸರಗೋಡಿನಲ್ಲಿ ಚಹಾ ತೋಟವೇ ಇಲ್ಲ! ಇಡೀ ಸಿನಿಮಾದಲ್ಲಿ ನಗು ಬರೋದು ಒಂದೆರಡು ಕಡೆ ಮಾತ್ರ. ಶರಣ್ ಫೋಟೋಗ್ರಾಫರ್ ಆಗಿ ನಗಿಸುತ್ತಾನೆ. ಅರ್ಧ ಸಿನಿಮಾದಿಂದ ಈತ ಕಾಣೆ. ಅಟ್ ಲೀಸ್ಟ್ ಸಿನಿಮಾದ ಅಂತ್ಯದಲ್ಲಿ ನಡೆಯುವ ಮದುವೆಗೆ ಫೋಟೋ ತೆಗೆಯುವ ಆರ್ಡರನ್ನಾದರೂ ಆತನಿಗೆ ನಿರ್ದೇಶಕರು ದಯಪಾಲಿಸ ಬಹುದಿತ್ತು. ! ನಿಜ ಹೇಳೇಕೆಂದರೆ ಹೊಂಗನಸು ಚಿತ್ರಕ್ಕೆ ಈ ಹೆಸರು ಸ್ವಲ್ಪವೂ ಹೊಂದಿಕೊಳ್ಳುವುದಿಲ್ಲ. ಬದಲಾಗಿ ಈ ಚಿತ್ರಕ್ಕೆ ‘ಅತ್ಗೆಗಾಗಿ’ ಎಂದು ಇಟ್ಟಿದ್ದರೆ ಅತ್ಯಂತ ಸೂಕ್ತವಾಗಿತ್ತು. ಯಾಕೆಂದರೆ ನಾಯಕ ಸಿನಿಮಾದುದ್ದಕ್ಕೂ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ. ಅದೂ ಅಣ್ಣನನ್ನು ಮದುವೆಯಾಗದ! ಅನಂತನಾಗು ಮತ್ತು ರಮೇಶ್ ಭಟ್ ಗೆಳೆಯರು. ಚಿಕ್ಕವರಿರುವಾಗಲೇ ಅನಂತನಾಗಿನ ಹಿರಿಯ ಮಗನಿಗೂ, ರಮೇಶ ಭಟ್ ಮಗಳಿಗೂ ಮದುವೆ ಎಂದು ಮಾತಾಡಿಕೊಂಡಿರುತ್ತಾರೆ. ಇದನ್ನು ಮದುವೆಯಾಗಬೇಕಾದ ಹಿರಿಯ ಮಗಿನಿಂದ ಕಿರಿಯ ಮಗ (ಚಿತ್ರದ ನಾಯಕ) ಹೆಚ್ಚು ನೆನಪಿಟ್ಟುಕೊಳ್ಳುತ್ತಾನೆ. ಅಂದಿನಿಂದಲೇ ಅವನ ವರ್ತನೆಗಳು ಅತ್ತಿಗೆಯನ್ನು ಬೆಂಬಲಿಸುತ್ತದೆ. ಎಷ್ಟರ ಮಟ್ಟಿಗೆ ಅಂದರೆ ಅವಳನ್ನು ಎಲ್ಲರೂ ಸಾಗರ್‌ನ (ಚಿತ್ರದಲ್ಲಿ ನಾಯಕ ಹೆಸರು) ಅತ್ತಿಗೆ ಎಂದೇ ಕರೆಯುತ್ತಾರೆ. ಇವನೋ ಅತ್ತಿಗೆಗಾಗಿ ಏನೂ ಮಾಡಬಲ್ಲ. ಅಥವಾ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ (ಕಡಗೆ ಅಣ್ಣ ಇದೇ ಕಾರಣಕ್ಕೆ ಅವಳನ್ನು ಮದುವೆಯಾಗಲು ಒಪ್ಪುವುದಿಲ್ಲ.) ಅತ್ತಿಗೆಗಾಗಿಯೇ ಒಂದು ಹುಡುಗಿಯನ್ನು ಹುಡುಕಿ, ಪ್ರೀತಿಸಿ ಮದುವೆಯಾಗುತ್ತಾನೆ! ಸಿನಿಮಾ ಆರಂಭವಾಗಿ ಅರ್ಧ ಮುಗಿಯುವವೆಗೂ ಈ ಸುದ್ದಿಯೇ ಇರುವುದಿಲ್ಲ. ನಾಯಕ- ನಾಯಕಿ ಆಕಸ್ಮಿಕವಾಗಿ ಒಂದೆರಡು ಬಾರಿಯಲ್ಲ ಪ್ರೇಕ್ಷಕರಿಗೆ ಬೇಜಾರು ಬರುವಷ್ಟು ಬಾರಿ ಭೇಟಿಯಾಗುತ್ತಾರೆ. ಅಂತೂ ಅರ್ಧ ಮುಗೀತು ಅಂತ ಹೊರ ಹೋಗಿ ಬಂದು ಕುಳಿತರೆ, ಮೊದಲಿನರ್ಧಕ್ಕೆ ಸಂಬಂಧವೇ ಇಲ್ಲದಂತೆ ಕತೆ ಮುಂದುವರಿಯುತ್ತದೆ. ಹೆಚ್ಚು ಕಮ್ಮಿ ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕರಿಗೆ ಎರಡು ಸಿನಿಮಾ ನೋಡಿದ ಅನುಭವವಾದರೆ, ಆರಂಭದಿಂದ ಮಧ್ಯಂತರವರೆಗೆ ಹಾಗೂ ಮಧ್ಯಂತರದಿಂದ ಅಂತ್ಯದವರೆಗೆ ಎರಡು ಸಿನಿಮಾಗಳನ್ನು ನಿರ್ಮಿಸಿ, ಎರಡನ್ನೂ ಜೋಡಿಸಿದರೆ ಹೇಗಾಗುತ್ತದೆ? ಹಾಗಾಗಿಗೆ ಎಂದು ‘ಹೊಂಗನಸು’ ಸಿನಿಮಾ ಮುಗಿಯುವ ಹೊತ್ತಿಗೆ ಅನಿಸಿರುತ್ತದೆ. ‘ಹೊಂಗನಸು’ ಸಿನಿಮಾವನ್ನು ಪ್ರೇಕ್ಷಕರು ಒಂದು ಕೆಟ್ಟ ಕನಸು ಎಂದು ಮರೆಯಬೇಕಾದ ಸ್ಥಿತಿ ಇದೆ. ಮಂಗಳವಾರ ‘ಗಾಳಿಪಟ’ ಸಿನಿಮಾ ನೋಡಲೆಂದು ಹೋಗಿದ್ದೆವು. ಟಿಕೆಟ್ ಸಿಗದೆ ನಮ್ಮ ಆಸೆಗಳು ದಾರ ಹರಿದ ಗಾಳಿಪಟದಂತೆ ಎಲ್ಲೆಲ್ಲೋ ಸುತ್ತಾಡಿ ಅಂತಿಮವಾಗಿ ಹೊಂಗನಸಾಗಿ ಮಾರ್ಪಾಟಾದವು. ಈಗ ಆ ಹೊಂಗನಸನ್ನು ಕೆಟ್ಟ ಕನಸೆಂದು ಮರೆಯಬೇಕಾಗಿದೆ. ಆದರೆ ಸಿನಿಮಾಕ್ಕೆ ಹೋಗುವಾಗ ತಲೆನೋವೆಂದು ಹೇಳುತ್ತಿದ್ದ ನನ್ನ ಹೆಂಡತಿಗೆ ಹೊಂಗನಸು ನೋಡಿ ಹೊರಬರುವಾಗ ತಲೆ ನೋವು ಮಂಗಮಾಯವಾಗಿದ್ದು ಮಾತ್ರ ಸತ್ಯ. ಅಷ್ಟರ ಮಟ್ಟಿಗೆ ನಿರ್ದೇಶಕ ಯಶಸ್ವಿಯಾಗಿದ್ದಾನೆ. ಗೂಗ್ಲಿ: ಹೊಂಗನಸಿನಂತಹ ಸಿನಿಮಾಗಳನ್ನೂ ನೋಡಬೇಕು. ಯಾಕೆಂದರೆ ಒಳ್ಳೆಯ ಸಿನಿಮಾಕ್ಕೂ ಕೆಟ್ಟ ಸಿನಿಮಾಕ್ಕೂ ಇರುವ ವ್ಯತ್ಯಾಸ ಅರಿಯಲು. Posted by ವಿನಾಯಕ ಭಟ್ಟ at 9:34 PM 5 comments: Friday, January 18, 2008 ಸಿನಿಮಾ ನೋಡಿ ಅಳದೇ ಅದೆಷ್ಟು ವರ್ಷವಾಗಿತ್ತು! ಸಿನಿಮಾ ನೋಡಿ ನಾನು ಅತ್ತಿದ್ದು ಯಾವಾಗ? ಎಷ್ಟು ಪ್ರಯತ್ನಪಟ್ಟರೂ ನೆನಪಾಗುತ್ತಿಲ್ಲ. ನನಗೆ ತಿಳಿಯಲು ಆರಂಭವಾದಾಗಿನಿಂದ ಸಿನಿಮಾ ನೋಡಿ ಅತ್ತಿದ್ದು ಹೆಚ್ಚೆಂದರೆ ಒಂದೆರಡು ಬಾರಿ ಮಾತ್ರ. ಹೈಸ್ಕೂಲ್ ದಾಟಿದ ಮೇಲೆ ಸಿನಿಮಾ ನೋಡಿ ಅತ್ತ ದಾಖಲೆಯೇ ಇಲ್ಲ. ಆದರೆ ಮೊನ್ನೆ ಅತ್ತುಬಿಟ್ಟೆ. ತಾರೆ ಜಮೀನ್ ಪರ್ ಸಿನಿಮಾ ನೋಡಿ ಅತ್ತುಬಿಟ್ಟೆ. ಅತ್ತುಬಿಟ್ಟೆ ಅನ್ನುವುದಕ್ಕಿಂತ ಹಲವು ಬಾರಿ ಅಳು ಬಂತು ಅನ್ನುವುದು ಹೆಚ್ಚು ಸೂಕ್ತ. ಸಾಮಾನ್ಯವಾಗಿ ಸಿನಿಮಾ ನೋಡಿ ನಾನು ಅಳುವುದಿಲ್ಲ. ಸಿನಿಮಾವನ್ನು ಕೇವಲ ಸಿನಿಮಾ ಎಂದು ನೋಡಿದವನು ನಾನು. ಅದರಲ್ಲೂ ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ, ಸಿನಿಮಾ ನೋಡುವುದು ಹೇಗೆ ಎಂಬುದನ್ನು ಮೇಸ್ಟ್ರರಿಂದ ಹೇಳಿಸಿಕೊಂಡವನಾಗಿ ಸಿನಿಮಾದೊಳಗೆ ಭಾವನಾತ್ಮಕವಾಗಿ ಸೇರಿ ಹೋಗುವುದು ಬಹಳ ಕಡಿಮೆ. ಆದರೆ ತಾರೆ ಜಮೀನ್ ಪರ್ ನೋಡುವಾಗ ಮಾತ್ರ ಅದು ಸಾಧ್ಯವೇ ಆಗಲಿಲ್ಲ. ಯಾಕಿರಬಹುದು? ನಾನೂ ಚಿಕ್ಕವನಿರುವಾಗ ಬೇಕಾದಷ್ಟು ಬಾರಿ ಅಪ್ಪನಿಂದ ಬೈಸಿ, ಹೊಡೆಸಿಕೊಂಡಿದ್ದಕ್ಕಾ? ಕಡಿಮೆ ಮಾರ್ಕ್ಸ್ ತಗೊಂಡೆ ಎಂದು ಬೈಸಿಕೊಂಡಿದ್ದಕ್ಕಾ? ಹೆಚ್ಚು ಮಾರ್ಕ್ಸ್ ಪಡೆಯದೇ, ಓದದೇ, ಕ್ರಿಕೆಟ್ ಆಡಿದ್ದಕ್ಕೆ ಒಂದಿಡೀ ದಿನ ಮನೆಯ ಹೊರಗೇ ನಿಲ್ಲುವ ಶಿಕ್ಷೆ ಅನುಭವಿಸಿದ್ದಕ್ಕಾ? ಇದೆಲ್ಲದರ ಪರಿಣಾಮ ನಾನು ತಾರೆ ಜಮೀನ್ ಪರ್ ಹಿರೋ ಬಾಲಕನ ಜತೆ ನನ್ನನ್ನೇ ಗುರುತಿಸಿಕೊಂಡೆನಾ? ಬಹುಶಃ ಹೌದು. ಅದರ ಪರಿಣಾಮವೇ ಕಣ್ಣು ನೀರಾಡಿದ್ದು. ನಾನಾದರೋ ಕಲಿಯುವಾಗ ಅಷ್ಟೇನೂ ಸ್ಪರ್ಧೆ ಇರಲಿಲ್ಲ. ಕಲಿಯದಿದ್ದರೆ, ಶೇ.೮೫ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆಯದಿದ್ದರೆ ಕೆಲಸ ಸಿಗದೇ ನಿಷ್ಪ್ರಯೋಜಕ ಎನಿಸಿಕೊಳ್ಳಬೇಕಾದ ಸ್ಥಿತಿ ಬರುತ್ತದೆ ಎಂಬ ಸ್ಥಿತಿ ಇರಲಿಲ್ಲ. ಈಗಿನ ಹಾಗೆ ೧೦೦ಕ್ಕೆ ೯೯, ೯೮ ಮಾರ್ಕ್ಸ್‌ಗಳೂ ಆಗ ಸಿಗುತ್ತಿರಲಿಲ್ಲ. ನಾನು ಯಾರ ಬಳಿಯೂ ಟ್ಯೂಶನ್ ಹೇಳಿಸಿಕೊಳ್ಳದೆ ಎಂಎ ಮುಗಿಸಿದೆ. ಈಗ ನೋಡಿದರೆ ೧-೨-೩ನೇ ತರಗತಿಗೇ ಟ್ಯೂಶನ್. ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗಂತೂ ಬೆಳಗ್ಗೆ ಟ್ಯೂಶನ್, ನಂತರ ಕ್ಲಾಸು. ಅದರ ನಂತರ ಮತ್ತೆ ಸಂಜೆ ಟ್ಯೂಶನ್, ರಜೆಯಲ್ಲಿ ಟ್ಯೂಶನ್. ಆ ಮಕ್ಕಳ ಮೇಲೆ ಅದೆಷ್ಟು ಒತ್ತಡ ಇರಬಹುದು? ಶೇ.೯೦, ೮೦ ಅಂಕ ಪಡೆಯುವ ಮಕ್ಕಳು ಒಳಗೊಳಿಂದೊಳಗೆ ಅದೆಷ್ಟು ಕುಸಿಯುತ್ತಿರಬಹುದು? ಕಲ್ಪನೆಗೂ ನಿಲುಕದ್ದು. ಹೆಚ್ಚು ಅಂಕ ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುವ ಪಾಲಕರು ತಾರೆ ಜಮೀನ್ ಪರ್ ಸಿನಿಮಾ ನೋಡುವುದೊಳಿತು. Posted by ವಿನಾಯಕ ಭಟ್ಟ at 11:35 AM 3 comments: Tuesday, January 15, 2008 ಮನಸು ಮರೆಯದ ಮುನಾರ್ ಮೈ ಕೊರೆವ ಚಳಿ, ನೋಡಿದಲ್ಲೆಲ್ಲ ಹಚ್ಚ ಹಸಿರು. ಜತೆಯಲ್ಲಿ ಪ್ರೇಯಸಿಯ (ಹೆಂಡತಿಯದ್ದೂ ಆಗಬಹುದು) ಬೆಚ್ಚನೆಯ ಉಸಿರು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು? ಒಂದಲ್ಲ ಎರಡಲ್ಲ 22 ಸಾವಿರ ಹೆಕ್ಟೇರ್ ಚಹಾ ತೋಟ! ಕಣ್ಣೋಟದುದ್ದಕ್ಕೂ ಸಮತಟ್ಟಾದ ಹಸಿರು! ಹದವಾಗಿ ಸುರಿಯುವ ಮಂಜು. ಅದರಿಂದುಂಟಾದ ಮಸುಕು ವಾತಾವರಣ. ಹತ್ತಿಯುಂಡೆಗಳಂತೆ ಕೈಗೆಟಕುವಷ್ಟು ದೂರದಲ್ಲಿ ಕಾಣುವ ಮೋಡಗಳು. ಸಿನಿಮಾಗಳಲ್ಲಿ ಹೊಗೆ ಹಾಕಿ ತೋರಿಸುವ ದೇವಲೋಕದ ಚಿತ್ರ ನೆನಪಾಗುತ್ತದೆ. ಇದೆಲ್ಲ ಇಲ್ಲದೆ ಅದನ್ನು ದೇವರನಾಡು ಎಂದು ಕರೆಯುತ್ತಾರಾ? ನಾನು ಕೇರಳದ ಮುನಾರ್ಗೆ ಹೋಗಿ ಬಂದು ಆಗಲೇ ಏಳು ತಿಂಗಳಾಯಿತು. ಮನಸಲ್ಲಿ ಮಾತ್ರ ಮುನಾರ್ ಸ್ವಲ್ಪವೂ ಮಸುಕಾಗಿಲ್ಲ. ಅಷ್ಟರಲ್ಲೇ ಮತ್ತೊಮ್ಮೆ ಮುನಾರ್‌ಗೆ ಹೋಗುವ ಆಸೆ ಮನಸಲ್ಲಿ. ಮುನಾರ್ ನಿಜಕ್ಕೂ ಕಣ್ಣು- ಮನಸ್ಸುಗಳಿಗೆ ಹಬ್ಬ! ನನ್ನ ಗೆಳೆಯ ಮಂಜು (ಮಿಸ್ಟ್ ಅಲ್ಲ) ಮುನಾರಿನ ಮಂಜಿನ ನಡುವೆ ತೆಗೆದ ಚಿತ್ರಗಳು ಆಗಾಗ ಮುನಾರ್ ನೆನಪನ್ನು ಹಸಿರಾಗಿಸಿ, ಮನಸನ್ನು ಹಸಿ ಮಾಡುತ್ತಲೇ ಇರುತ್ತವೆ. ಮುನಾರ್ನಲ್ಲಿರುವ ರಾಜಮಲೈ ನಿಜಕ್ಕೂ ಭೂಲೋಕದ ಸ್ವರ್ಗ. ಅಪರೂಪದ ಮತ್ತು ವಿನಾಶದಂಚಿನಲ್ಲಿರುವ ನೀಲಗಿರಿ ಥಾರ್ ಹೆಸರಿನ ಆಡು ಜಾತಿಗೆ ಸೇರಿದ ಪ್ರಾಣಿಗಳು ಇಲ್ಲಿ ಮಾತ್ರ ಇವೆ. ಅತಿ ಎತ್ತರದ ಬೆಟ್ಟದ ಮೇಲಿರುವ ಈ ಸ್ಥಳಕ್ಕೆ ಅರಣ್ಯ ಇಲಾಖೆ ವಾಹನದಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ಅಲ್ಲಿ ಎಷ್ಟೊತ್ತು ಬೇಕಾದರೂ ನೀವು ಇರಬಹುದು. ಯಾರೂ ತಕರಾರು ಮಾಡುವುದಿಲ್ಲ. ಈ ಸ್ಥಳದ ವಿಶೇಷತೆಯೆಂದರೆ ಪ್ರತಿ ೧೫ ನಿಮಿಷಕ್ಕೊಮ್ಮೆ ಇಲ್ಲಿ ವಾತಾವರಣ ಬದಲಾಗುತ್ತದೆ. ಅರೆಕ್ಷಣಕ್ಕೆ ಮಂಜು ಆವರಿಸಿಕೊಂಡು ಕೈ ಅಳತೆ ಅಂತರದಲ್ಲಿದ್ದವರು ಕಾಣದಂತಾಗುತ್ತದೆ. ಮಂಜೇ ಮಳೆಯಾಗಿ ಬದಲಾಗುತ್ತದೆ. ನಿಧಾನವಾಗಿ ಮಂಜು ಸರಿದು ತಿಳಿಯಾಗುತ್ತದೆ. ಮಂಜು ನಿಧಾನವಾಗಿ ಆಗಮಿಸಿ, ನಿಮ್ಮನ್ನಾವರಿಸಿ ಆಚೆ ಹೋಗುವುದನ್ನು ಇಲ್ಲಿ ಅನುಭವಿಸಬಹುದು. ಇಲ್ಲಿ ಹೋದರೆ ಸಮಯ, ಮನೆ, ಕೆಲಸ, ಕೊನೆಗೆ ಪಕ್ಕದಲ್ಲಿರುವ ಹೆಂಡತಿ ಎಲ್ಲವೂ ಮರೆತೇ ಹೋಗುತ್ತದೆ. ಕೇರಳ ಸರಕಾರ ಅನುಮತಿ ಕೊಟ್ಟರೆ ಅಲ್ಲೇ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಇದ್ದುಬಿಡೋಣ ಅನಿಸುವಷ್ಟು ಚೆಂದಗಿದೆ ಆ ಸ್ಥಳ. ಹತ್ತಿರದಲ್ಲೇ ಒಂದೆರಡು ಡ್ಯಾಂಗಳಿವೆ. ಸಂಜೆಯಾದರೆ ಅದರ ಹಿನ್ನೀರು ಪ್ರದೇಶದಲ್ಲಿ ಆನೆಗಳು ನೀರಿಗೆಂದು ಬೆಟ್ಟ ಇಳಿದು ಬರುತ್ತವೆ. ಜತೆಗೇ ಮರಿಗಳೂ ಇದ್ದರೆ ಅದು ನಿಮಗೆ ಬೋನಸ್. ಮುನಾರ್ ಬಹಳ ದೂರವೇನಿಲ್ಲ. ಮಂಗಳೂರಿನಿಂದ ೫೩೦ ಕಿ.ಮೀ. ಮಂಗಳೂರಿನಿಂದ ರೈಲಿನಲ್ಲಿಯೂ ಪ್ರಯಾಣಿಸಬಹುದು. (ಪೂರ್ತಿ ಮುನಾರ್‌ವರೆಗೆ ಅಲ್ಲ). ಆದರೆ ನಾವೇ ವಾಹನ ಮಾಡಿಸಿಕೊಂಡು ಹೋದರೆ ಅದರ ಮಜವೇ ಬೇರೆ. (ನಾವು ಸ್ಕಾರ್ಪಿಯೋ ತೆಗೆದುಕೊಂಡು ಹೋಗಿದ್ದೆವು.) ಕೇರಳ ನೋಡಿ ಕಲೀಬೇಕು ಕಣ್ರೀ ನಾವು ಕರ್ನಾಟಕದೋರು. ಮುನಾರ್ ಎಂಬ ಊರನ್ನು ಆವರಿಸಿಕೊಂಡಿರುವ 22 ಸಾವಿರ ಹೆಕ್ಟೇರ್ ಚಹಾ ತೋಟ ಟಾಟಾದವರಿಗೆ ಸೇರಿದ್ದು. ಖಾಸಗಿಯವರಿಗೆ ಚಹಾ ತೋಟ ಮಾಡಲು ಕೊಟ್ಟೂ, ಅದನ್ನು ಪ್ರವಾಸಿ ತಾಣವಾಗಿ ಮಾಡುವಲ್ಲಿ ಮತ್ತು ಯಾವ ಪ್ರವಾಸಿಗರಿಗೂ ಅದೊಂದು ಖಾಸಗಿ ಚಹಾ ತೋಟ ಎಂಬ ಭಾವನೆ ಬರದ ರೀತಿಯಲ್ಲಿ ನಿಭಾಯಿಸಲಾಗಿದೆ. ಚಹಾ ತೋಟಗಳ ಮೇಲಿನ ಗುಡ್ಡದಲ್ಲಿ ರಾಜಮಲೈನಂತರ ಸುಂದರ ಸ್ಥಳವಿದೆ. ಅಲ್ಲಿ ನೀಲಗಿರಿ ಥಾರ್ ಎಂಬ ಅಪರೂಪದ ಪ್ರಾಣಿಗಳ ವಂಶವೃದ್ಧಿ ನಡೆದಿದೆ. ನಮ್ಮ ರಾಜ್ಯದಲ್ಲೂ ಪ್ರವಾಸಿ ತಾಣಗಳಿವೆ. ಅವುಗಳನ್ನು ಜನರಿಗೆ ಸರಿಯಾಗಿ ಬಿಂಬಿಸಲು, ಸೌಲಭ್ಯ ಕಲ್ಪಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ. ನನ್ನ ಜಿಲ್ಲೆಯಾದ ಉತ್ತರ ಕನ್ನಡಕ್ಕೆ ಜಲಪಾತಗಳ ತವರೂರು ಎಂಬ ಹೆಸರಿದೆ. ಜೋಗ ಜಲಪಾತವನ್ನೂ ಮೀರಿಸುವಷ್ಟು ಸುಂದರವಾಗಿರುವ, ಹೆಚ್ಚು ನೀರಿರುವ ಜಲಪಾತಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಆದರೆ ಅಲ್ಲಿಗೆ ಹೊರಟಿರೋ, ಒಂದು ರಸ್ತೆಗೂ ಸರಿಯಾದ ಬೋರ್ಡ್ ಇಲ್ಲ. ಹೊಸಬರು ನೇರವಾಗಿ ಜಲಪಾತದ ದಾರಿಗೆ ಹೋಗುವುದು ಸಾಧ್ಯವೇ ಇಲ್ಲ. ರಸ್ತೆಗಳ ಬಗ್ಗೆ ಮಾತಾಡದಿರುವುದೇ ಒಳ್ಳೆಯದು. ಯಾಣದಂತಹ ಪ್ರವಾಸಿ ತಾಣ ಪ್ರಸಿದ್ಧವಾಗಬೇಕಾದರೆ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಅದನ್ನು ತೋರಿಸಬೇಕಾಯಿತು. ಕೇರಳವನ್ನು ಸ್ವಲ್ಪ ಮಟ್ಟಿಗಾದರೂ ಅನುಸರಿಸಿದರೆ ಕರ್ನಾಟಕವೂ ದೇವರ ರಾಜ್ಯವಾದೀತು. ಏನಂತೀರಾ? Posted by ವಿನಾಯಕ ಭಟ್ಟ at 9:16 PM 5 comments: Thursday, January 03, 2008 ಮಾಂಸಾಹಾರಿ ಆಡು ಆಡಿನ ಮಾಂಸ ಮನುಷ್ಯ ತಿನ್ನೋದು ಗೊತ್ತು. ಆಡು ಮಾಂಸ ತಿನ್ನೋದೇ? ನಂಬಲಸಾಧ್ಯ. ಆದರೆ ನಂಬದೆ ಬೇರೆ ದಾರಿಯಿಲ್ಲ. ದೇವಸ್ಥಾನಗಳ ರಾಜ್ಯ ಎಂದೇ ಹೆಸರಾಗಿರುವ ಓರಿಸ್ಸಾದಲ್ಲಿ ಇಂತಹದ್ದೊಂದು ಆಡಿದೆ. ಅದು ಮಾಂಸವನ್ನೂ ತಿನ್ನುತ್ತದೆ ಸಾರಾಯಿ ಕುಡಿದು ಟೈಟೂ ಆಗುತ್ತದೆ. ಈ ವಿಶೇಷತೆಯೇ ಈ ಆಡಿನ ದೀರ್ಘಾಯಸ್ಸಿನ ಮೂಲ! ಓರಿಸ್ಸಾದ ರಾಜಧಾನಿ ಭುವನೇಶ್ವರದಿಂದ ೩೫೦ ಕಿ.ಮೀ. ದೂರದಲ್ಲಿ ಹೆದ್ದಾರಿ ಬದಿಯಲ್ಲೇ ಇರುವ ಸನಾ ಬಡಾ ದಾಬಾದಲ್ಲಿದೆ ಈ ಆಡು. ಅದರ ಹೆಸರು ಮಂಟು. ಎರಡೂವರೆ ವರ್ಷದ ಈ ಮಂಟುವಿಗೆ ಬೇಯಿಸಿದ ಮಾಂಸ ತಿನ್ನುತ್ತದೆ. ದಾಬಾದಲ್ಲಿ ಆಡು ಕಡಿದು ಬೇಯಿಸಿ ಮಾಡುವ ಮಾಂಸವನ್ನೇ ಈ ಆಡು ತಿನ್ನುತ್ತದೆ. ಇದು ಮಾತು ಕೂಡ ಕೇಳುತ್ತದೆ. ಟೈಟಾದಾಗ ಕೂಡ! ಸತ್ತಂತೆ ಮಲಗಲು, ಹೊಡೆದಾಟದ ಪೋಸು ನೀಡಲು ಹೇಳಿದರೆ ಅರೆ ಕ್ಷಣದಲ್ಲಿ ಮಾಡಿ ತೋರಿಸುತ್ತದೆ ಈ ಆಡು. ದಾಬಾದ ಮಾಲಿಕ ಸನಾ ನಾಯಕ್ ದಾಬಾದಲ್ಲಿ ಅಡುಗೆಗೆಂದೇ ಆಡು ಸಾಕುತ್ತಾರೆ. ಆದರೆ ಈ ವಿಶೇಷತೆ ಇರುವುದರಿಂದ ಮಂಟುವನ್ನು ಕಡಿದು ಅಡುಗೆ ಮಾಡಿಲ್ಲ. ಈ ಆಡಿನ ಆಕರ್ಷಣೆಗೆ ಜನ ಬರುತ್ತಾರೆ. ಜನ ಆಡಿನೊಂದಿಗೆ ಆಹಾರ ಹಂಚಿಕೊಳ್ಳುತ್ತಾರೆ ಎನ್ನುತ್ತಾನೆ ಮಾಲಿಕ.ಇಷ್ಟೇ ಅಲ್ಲ, ಗ್ರಾಕರ ಆಕರ್ಷಣೆಯ ಕೇಂದ್ರವಾಗಿರುವ ಈ ಆಡಿನ ಮದುವೆಯನ್ನು ಧಾಂ ಧೂಂ ಜೋರಾಗಿ ನಡೆಸಲು ಮಾಲಿಕ ಸಿದ್ಧತೆ ನಡೆಸಿದ್ದಾನೆ. ಸಚಿವರು, ಶಾಸಕರನ್ನೂ ಕರೆಸುವ ಯೋಚನೆ ಮಾಡಿದ್ದಾನೆ. ಅನುರೂಪವಾದ ಹೆಣ್ಣು (ಆಡು) ಸಿಗಬೇಕಷ್ಟೆ!
http://vantagehsi.com/tag/fruit-lover/home-health-care-send-your-referrals/ ಸುದ್ಧಿಯಲ್ಲಿ ಏಕಿದೆ ? ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆಗೆ ಶೀಘ್ರದಲ್ಲೇ ಅಮೆರಿಕದ ಸಿಗ್‌ ಸೌರ್‌ ಅಸಾಲ್ಟ್‌ ರೈಫಲ್‌ ಹಾಗೂ ಪಿಸ್ತೂಲುಗಳು ಲಭ್ಯವಾಗಲಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಭಾರಿ ಬಲ ಸಿಗಲಿದೆ. Bāruipur ಮುಖ್ಯಾಂಶಗಳು ಅಮೆರಿಕದಿಂದ ಅತ್ಯಾಧುನಿಕ 500 ಸಿಗ್‌ ಸೌರ್‌-716 ರೈಫಲ್‌ ಹಾಗೂ 100 ಸಿಗ್‌ ಸೌರ್‌ ಎಂಪಿಎಕ್ಸ್‌ 9 ಎಂಎಂ ಪಿಸ್ತೂಲುಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಇವು ಪೊಲೀಸರಿಗೆ ಲಭ್ಯವಾಗಲಿವೆ. ದೇಶದಲ್ಲೇ ಮೊದಲ ಬಾರಿಗೆ ಪೊಲೀಸರಿಗೆ ಅತ್ಯಾಧುನಿಕ ರೈಫಲ್‌ ಹಾಗೂ ಪಿಸ್ತೂಲುಗಳು ಸಿಕ್ಕಂತಾಗಲಿದೆ. ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಹಾಗೂ ಗಣ್ಯರ ರಕ್ಷಣೆಗೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಆಧುನಿಕ ಶಸ್ತ್ರಾಸ್ತ್ರ ನೀಡಲಾಗುತ್ತದೆ. ಭಾರತೀಯ ಸೇನೆ ಸಹ ಅಮೆರಿಕದಿಂದ ಖರೀದಿ ಅಸಾಲ್ಟ್‌ ರೈಫಲ್‌ ಹಾಗೂ ಬಂದೂಕುಗಳ ಖರೀದಿಗೆ ಮುಂದಾಗಿದೆ. 2019ರಲ್ಲಿ ಸಿಗ್‌ ಸೌರ್‌ ಮಾದರಿಯ 72,400 ರೈಫಲ್‌ಗಳ ಖರೀದಿಗೆ 700 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ರೈಫಲ್‌ಗಳ ವಿಶೇಷವೇನು? ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಸಿಗ್‌ ಸೌರ್‌-716 ರೈಫಲ್‌ಗಳು 7.62/51 ಎಂಎಂ (ಐಎನ್‌ಎಸ್‌ಎಎಸ್‌ ರೈಫಲ್‌ಗಳು 5.56/45 ಎಂಎಂ ಹಾಗೂ 4.01 ಕೆಜಿ ತೂಕ) ಕಾಟ್ರಿಜ್‌ಗಳನ್ನು ಹೊಂದಿವೆ. ನಿಮಿಷಕ್ಕೆ 650-850 ಸುತ್ತಿನ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದ್ದು, 500 ಮೀಟರ್‌ ವ್ಯಾಪ್ತಿಯ ಗುರಿಗಳನ್ನು ಹೊಡೆದುರುಳಿಸಲಿವೆ. ಮ್ಯಾಗಜಿನ್‌ ಇಲ್ಲದೆ 3.82 ಕೆಜಿ ತೂಕ ಹೊಂದಿವೆ. ಹಾಗೆಯೇ, ಸಿಗ್‌ ಎಂಪಿಎಕ್ಸ್‌ 9 ಎಂಎಂ ಬಂದೂಕುಗಳು ನಿಮಿಷಕ್ಕೆ 850 ಸುತ್ತು ಗುಂಡು ಹಾರಿಸ ಬಹುದಾಗಿದ್ದು, 2.94 ಕೆಜಿ ತೂಕ ಹೊಂದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ನಿವಾರಿಸುವಲ್ಲಿ ಪೊಲೀಸ್ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತೀಯ ಸೇನೆಯ ವಿವಿಧ ಪಡೆಗಳ ಜತೆಗೆ ಪೊಲೀಸರು ಜಂಟಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವುದು ಅಗತ್ಯವಾಗಿದೆ.
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsApp ಗೆ ಸೇರಿ WhatsApp ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಮಾತನಾಡಲು ಅತ್ಯಂತ ವೇಗದ, ಸರಳವಾದ ಮತ್ತು ವಿಶ್ವಾಸಾರ್ಹವಾದ ಮಾರ್ಗವಾಗಿದೆ. 180 ಕ್ಕೂ ಹೆಚ್ಚು ದೇಶಗಳಲ್ಲಿನ 2 ಬಿಲಿಯನ್‌ಗಿಂತಲೂ ಹೆಚ್ಚು ಜನರು WhatsApp ಬಳಸಿ ಯಾವುದೇ ಕ್ಷಣದಲ್ಲೂ, ಯಾವುದೇ ಸ್ಥಳದಿಂದಲೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಾರೆ. WhatsApp ಉಚಿತವಾಗಿದೆ ಅಷ್ಟೇ ಅಲ್ಲ, ಬಹುಸಂಖ್ಯೆಯ ಮೊಬೈಲ್ ಸಾಧನಗಳಲ್ಲಿ ಮತ್ತು ಕಡಿಮೆ ಕನೆಕ್ಟಿವಿಟಿ ಇರುವ ಪ್ರದೇಶಗಳಲ್ಲಿಯೂ ಲಭ್ಯವಿದೆ - ಇದರಿಂದಾಗಿ ನೀವು ಎಲ್ಲಿದ್ದರೂ ಅದನ್ನು ಪ್ರವೇಶಿಸಲು ಸಾಧ್ಯವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ನಿಮ್ಮ ಮೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳಲು, ಪ್ರಮುಖ ಮಾಹಿತಿಯನ್ನು ಕಳುಹಿಸಲು ಅಥವಾ ಸ್ನೇಹಿತರನ್ನು ಸಂಪರ್ಕಿಸಲು ಇದು ಸರಳ ಮತ್ತು ಸುರಕ್ಷಿತ ಮಾರ್ಗವಾಗಿದೆ. ಜನರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರಿಗೆ ಸಂಪರ್ಕ ಸಾಧಿಸಲು ಮತ್ತು ಹಂಚಿಕೊಳ್ಳಲು WhatsApp ಸಹಾಯ ಮಾಡುತ್ತದೆ. ಸಮಾನ ಉದ್ಯೋಗಾವಕಾಶ ಹಾಗೂ ದೃಢ ಕಾರ್ಯ ಉದ್ಯೋಗದಾತ ಎನ್ನಿಸಿಕೊಳ್ಳಲು WhatsApp ಹೆಮ್ಮೆ ಪಡುತ್ತದೆ. ಜನಾಂಗ, ಧರ್ಮ, ಬಣ್ಣ, ರಾಷ್ಟ್ರೀಯತೆ, ಲಿಂಗ (ಗರ್ಭಿಣಿಯಾಗುವುದು, ಜನನ, ವಂಶಾಭಿವೃದ್ದಿ ಸಂಬಂಧಿಸಿದ ಆರೋಗ್ಯ ನಿರ್ಧಾರಗಳು ಅಥವಾ ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಒಳಗೊಂಡಂತೆ) ಲೈಂಗಿಕ ಅಭಿರುಚಿ, ಲಿಂಗ ಗುರುತಿಸುವಿಕೆ, ಲಿಂಗ ಸಂಬಂಧಿ ಅಭಿವ್ಯಕ್ತಿ, ವಯಸ್ಸು, ಸುರಕ್ಷಿತ ಮಾಜೀ ಸೈನಿಕರ ಸ್ಟೇಟಸ್‌, ಅಂಗವಿಕಲತೆ, ಜೆನೆಟಿಕ್‌ ಮಾಹಿತಿ, ರಾಜಕೀಯ ದೃಷ್ಟಿಕೋನಗಳು ಅಥವಾ ಕ್ರಿಯಾಶೀಲತೆ, ಅಥವಾ ಅನ್ವಯವಾಗುವ ಇತರೆ ಕಾನೂನು ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ನಾವು ಯಾವ ಕಾರಣಕ್ಕೂ ತಾರತಮ್ಯ ಎಸಗುವುದಿಲ್ಲ. ನೀವು ನಮ್ಮ ಸಮಾನ ಉದ್ಯೋಗಾವಕಾಶ ನೋಟೀಸ್‌ ಅನ್ನು ಇಲ್ಲಿ ನೋಡಬಹುದು. ಒಕ್ಕೂಟ, ರಾಜ್ಯ ಹಾಗೂ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವ ಅಪರಾಧ ಹಿನ್ನೆಲೆಯ ಸೂಕ್ತ ಅರ್ಹತೆಯುಳ್ಳ ಅರ್ಜಿದಾರರನ್ನೂ ಕೂಡ ನಾವು ಪರಿಗಣಿಸುತ್ತೇವೆ. Facebook, ಅದರ ಉದ್ಯೋಗಿಗಳು ಹಾಗೂ ಅವಶ್ಯವಿರುವ ಅಥವಾ ಕಾನೂನು ಸಮ್ಮತಿಸುವ ಇತರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. Facebook ನ ಪಾವತಿ ಪಾರದರ್ಶಕ ನೀತಿಮತ್ತು ಸಮಾನ ಉದ್ಯೋಗಾವಕಾಶ ಕಾನೂನು ನೋಟೀಸ್‌ ಅನ್ನು ಅವುಗಳ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ, ಕಾನೂನು ಅವಶ್ಯಕತೆಗೆ ತಕ್ಕಂತೆ WhatsApp ಇ-ಪರಿಶೀಲನೆ ಅಭಿಯಾನಗಳಲ್ಲಿ ಕೂಡ ಭಾಗವಹಿಸುತ್ತದೆ. ತನ್ನ ಉದ್ಯೋಗ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸಮಂಜಸವಾದ ಸೌಕರ್ಯಗಳನ್ನು ಒದಗಿಸಿ ಕೊಡಲು WhatsApp ಬದ್ಧವಾಗಿರುತ್ತದೆ. ಅಂಗವೈಕಲ್ಯದ ಕಾರಣಕ್ಕಾಗಿ ತಮಗೆ ಯಾವುದೇ ಸಹಕಾರ ಅಥವಾ ಸೌಕರ್ಯದ ಅವಶ್ಯಕತೆ ಇದ್ದರೆ, ಇಲ್ಲಿ ನಮಗೆ ತಿಳಿಸಿ: accommodations-ext@fb.com .
ಚಿತ್ರರಂಗ ಎಂದರೆ ಎಲ್ಲ ರೀತಿಯ ಸಿನಿಮಾಗಳನ್ನೂ ಮಾಡಬೇಕು. ಹೊಸ ಶೈಲಿಯ ಕಥೆಗಳನ್ನು, ಹೊಸ ಆಲೋಚನೆಗಳನ್ನು ಬರಮಾಡಿಕೊಳ್ಳಬೇಕು. ಹೊಸ ಯೋಚನೆಗಳಿರುವ ಕಥೆಗಾರರನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪರಂವಃ ಸ್ಟುಡಿಯೋಸ್​ ಹೆಜ್ಜೆ ಇಟ್ಟಿದ್ದು, `ಮಿಥ್ಯ` ಅಂಥದ್ದೊಂದು ವಿನೂತನ ಪ್ರಯತ್ನವಾಗಲಿದೆ. `ಮಿಥ್ಯ`, ರಕ್ಷಿತ್​ ಶೆಟ್ಟಿ ನಿರ್ಮಾಣದ ಹೊಸ ಚಿತ್ರ. ಈ ಚಿತ್ರದ ಮೂಲಕ ಸುಮಂತ್​ ಭಟ್​ ಸ್ವತಂತ್ರ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 11 ವರ್ಷದ ಬಾಲಕನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಅವನ ನೋವು ಮತ್ತು ವಿಮೋಚನೆಯ ಕಥೆಯನ್ನು ಹೇಳವ ಪ್ರಯತ್ನ ಮಾಡುತ್ತಿದ್ದಾರೆ. ತಂದೆ-ತಾಯಿಯ ನಿಧನದ ನಂತರ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ `ಮಿಥ್ಯ`. ಮೂಲತಃ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಸುಮಂತ್​ ಭಟ್​ಗೆ ಸಿನಿಮಾ ಎನ್ನುವುದು ಪ್ಯಾಶನ್​. ಇದಕ್ಕೂ ಮುನ್ನ ಪರಂವಃ ಸ್ಟುಡಿಯೋಸ್​ ನಿರ್ಮಾಣದ `ಏಕಂ` ಎಂಬ ವೆಬ್​ಸೀರೀಸ್​ನ ಏಳು ಕಂತುಗಳಲ್ಲಿ, ನಾಲ್ಕು ಕಂತುಗಳನ್ನು ಬರೆದು ನಿರ್ದೇಶಿಸಿದವರು ಅವರು. ಜತೆಗೆ ಪರಂವಃ ಕಥಾತಂಡದ ಸಕ್ರಿಯರಾಗಿ ಗುರುತಿಸಿಕೊಂಡವರು. ಈಗ ಅವರು ಸ್ವತಂತ್ರ ನಿರ್ದೇಶಕರಾಗಿ `ಮಿಥ್ಯ` ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು`ಮತ್ತು `ವಿಕ್ರಾಂತ್​ ರೋಣ` ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್​ ಶೆಟ್ಟಿ, ಇಲ್ಲಿ ಮಿಥುನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೊಂದಿಗೆ ಪ್ರಕಾಶ್​ ತುಮ್ಮಿನಾಡು, ರೂಪಾ ವರ್ಕಾಡಿ ಮುಂತಾದವರು ನಟಿಸುತ್ತಿದ್ದಾರೆ. `ಮಿಥ್ಯ` ಚಿತ್ರಕ್ಕೆ ಉದಿತ್​ ಖುರಾನ ಅವರ ಛಾಯಾಗ್ರಹಣವಿದ್ದು, ಮಿಥುನ್​ ಮುಕುಂದನ್​ ಅವರ ಸಂಗೀತವಿದೆ. ಭುವನೇಶ್​ ಮಣಿವಣ್ಣನ್​ ಸಂಕಲನಕಾರರಾಗಿ, ಶ್ರೇಯಾಂಕ್​ ನಂಜಪ್ಪ ಸೌಂಡ್​ ಡಿಸೈನರ್​ ಆಗಿ ಕಾರ್ಯನಿರ್ವಹಿಸಲಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ನ.22ರಿ೦ದ 27ರವರೆಗೆ ಉಡುಪಿಯ ಶ್ರೀಚ೦ದ್ರಮೌಳೀಶ್ವರ ದೇವರಸನ್ನಿಧಿಯಲ್ಲಿ ಕಾಲಾವಧಿ ರಥೋತ್ಸವ ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಚ೦ದ್ರಮೌಳೀಶ್ವರ ದೇವರಸನ್ನಿಧಿಯಲ್ಲಿ ಇದೇ ಕಾರ್ತಿಕ ಕೃಷ್ಣ ಪಕ್ಷ 13ಯು ದಿನಾ೦ಕ ನವೆ೦ಬರ್ 22ರ ಮ೦ಗಳವಾರ ಮೊದಲ್ಗೊ೦ಡು ಮಾರ್ಗಶಿರ ಶುಕ್ಲಪಕ್ಷ 4ಯು ದಿನಾ೦ಕ 27ರ ರವಿವಾರದವರೆಗೆ ಕಾಲಾವಧಿ ರಥೋತ್ಸವ ಪರ೦ಪರಾಗತ ಶುಭ ಸ೦ಪ್ರದಾಯಾನುಸಾರವಾಗಿ ಧಾರ್ಮಿಕ ಕಾರ್ಯಕ್ರಮಗಳೊ೦ದಿಗೆ ನಡೆಯಲಿದೆ. ನವೆ೦ಬರ್ 22ರ ಮ೦ಗಳವಾರದ೦ದು ಸಾಯ೦ಕಾಲ ಪ್ರಾರ್ಥನೆ, ಮುಹೂರ್ತಬಲಿ, ಪುಣ್ಯಾಹವಾಚನ, ಅ೦ಕುರಾರೋಹಣ, ಅ೦ಕುರ ಪೂಜೆ, ರಾತ್ರೆ ಪೂಜೆ ನಡೆಯಲಿದೆ. ನವೆ೦ಬರ್ 23ರ ಬುಧವಾರದ೦ದು ಬೆಳಿಗ್ಗೆ ಪುಣ್ಯಾಹವಾಚನ, ದೇವನಾ೦ದೀ, ಪ೦ಚಕಲಶ, ಧ್ವಜಶುದ್ಧಿ, ಧ್ವಜಾರೋಹಣ , ಅಗ್ನಿಜನನ, ಪ್ರದಾನ ಹೋಮ,ಕಲಾಶಾಭಿಷೇಕ, ಮಹಾಪೂಜೆ.ರಾತ್ರೆ ನಿತ್ಯಬಲಿ, ರಾತ್ರಿಪೂಜೆ, ಮಹಾರ೦ಗಪೂಜೆ(ರಾತ್ರಿ10ಗ೦ಟೆಗೆ) ಬಲಿ. ನವೆ೦ಬರ್ 24ರ ಗುರುವಾರದ೦ದು ಬೆಳಿಗ್ಗೆ ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ ರಾತ್ರಿ ನಿತ್ಯಬಲಿ,ರಾತ್ರಿಪೂಜೆ,ಬಲಿ ಪೂಜೆಯು ಜರಗಲಿದೆ. ನವೆ೦ಬರ್ 25ರ ಶುಕ್ರವಾರದ೦ದು ಬೆಳಿಗ್ಗೆ ಪುಣ್ಯಾಹವಾಚನ, ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ೦ಚಕಲಶ, ರಥಶುದ್ಧಿ, ಬಲಿಪೂಜೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಅ೦ಬಲಪಾಡಿ ಶ್ರೀಲಕ್ಷ್ಮೀಜನಾರ್ಧನ ಭಗಿನೀ ಭಜನಾ ಮ೦ಡಳಿಯವರಿ೦ದ ಭಜನಾಕಾರ್ಯಕ್ರಮವು ನಡೆಯಲಿದೆ. ಮಧ್ಯಾಹ್ನ11.45ಕ್ಕೆ ರಥಾರೋಹಣ ಕಾರ್ಯಕ್ರಮವುಜರಗಲಿದೆ. ಸ೦ಜೆ 5ಕ್ಕೆ ವಿದ್ವಾನ್ ದಾಮೋದರ ಸೇರಿಗಾರ ಮತ್ತು ಬಳಗದವರಿ೦ದ ಸೆಕ್ಸೋಪೋನ್ ವಾದನದೊ೦ದಿಗೆ 5.30ಕ್ಕೆ ರಥೋತ್ಸವ ವಾಲಗ ಮ೦ಟಪ ಪೂಜೆ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜರಗಲಿದೆ. ರಾತ್ರಿ ಪೂಜೆ,ಭೂತಬಲಿ, ಶಯನ ಮ೦ಟಪ ಪೂಜೆ, ಶಯನೋತ್ಸವ, ಕವಾಟ ಬ೦ಧನ ಕಾರ್ಯಕ್ರಮವು ನಡೆಯಲಿದೆ. ನವೆ೦ಬರ್ 26ರ ಶನಿವಾರದ೦ದು ಕವಾಟೋದ್ಘಾಟನೆ, ದಶವಿಧಸ್ನಾನ, ಪೂಜೆ, ಅಷ್ಟಾವಧಾನ ಸೇವೆ, ಪ್ರದಾನಹೋಮ, ಕಲಶಾಭಿಷೇಕದೊ೦ದಿಗೆ ಮಧ್ಯಾಹ್ನದ ಪೂಜೆ. ಸಾಯ೦ಕಾಲ ಬಲಿ, ಮ೦ಗಳ ಓಕುಳಿ, ಕಟ್ಟೆಪೂಜೆ, ಅವಭೃತ ಸ್ನಾನ, ಪೂರ್ಣಾಹುತಿ ಹೋಮ,ಮಹಾಮ೦ತ್ರಾಕ್ಷತೆ, ಧ್ವಜಾವರೋಹಣ,ರಾತ್ರಿ ಪೂಜೆಯು ನಡೆಯಲಿದೆ.
’ಪತ್ರಕರ್ತರಾಗಿ ಬರುವವರು ಸಾಹಿತ್ಯ, ಸಂಸ್ಕೃತಿ ಇತ್ಯಾದಿ ಓದಿಕೊಂಡಿರುವುದಿಲ್ಲ. ಇತ್ತೀಚೆಗಂತೂ ಬರುವ ಪತ್ರಕರ್ತರಿಗೆ ರಾಜಕೀಯ ಪರಿಜ್ಞಾನವೂ ಇರುವುದಿಲ್ಲ,’ ಎಂಬ ಮಾತುಗಳನ್ನು ಕೇಳುತ್ತಿದ್ದೇವೆ. ಪತ್ರಕರ್ತ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದ ಯುವಕನಿಗೆ ಪಂಪ, ರನ್ನ ಗೊತ್ತಿಲ್ಲ ಎಂಬ ದಿಗ್ಭ್ರಮೆಯನ್ನು ಸಂಪಾದಕರೊಬ್ಬರು ಬರೆದುಕೊಂಡಿದ್ದರು. ಅವರ ಪತ್ರಿಕೆಯೇ ಇತ್ತೀಚೆಗೆ ವರದಿಗಾರರು/ಉಪ ಸಂಪಾದಕರು ಬೇಕಾಗಿದ್ದಾರೆ ಎಂಬ ಜಾಹಿರಾತಿನಲ್ಲಿ ವಯಸ್ಸಿನ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಿದ್ದಾರೆ. ಈ ವಯಸ್ಸಿನಲ್ಲಿ ಬರುವ ಯುವಕರಿಗೆ ಪಂಪ, ರನ್ನ ಹೇಗೆ ಗೊತ್ತಾಗಲು ಸಾಧ್ಯ? ಅದೃಷ್ಟವಶಾತ್ ತೆಳ್ಳಗೆ, ಬೆಳ್ಳಗೆ ನೋಡಲು ಚೆಂದ ಇರಬೇಕು ಎಂದು ಹೇಳದಿರುವುದು ನಮ್ಮ ಪುಣ್ಯ ಎಂದೇ ಭಾವಿಸಬೇಕಾಗಿದೆ. ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ. ಅವರು ಆಯಾ ಎಡಿಷನ್‌ಗಳ ಫೇಜ್ ತುಂಬಿಸುತ್ತಾ ಹೋಗಬೇಕು. ಹೀಗೆ ನಿವ್ವಳ ಗುಡ್ಡೆ ಹಾಕುವ ಕೆಲಸಕ್ಕೆ ವರದಿಗಾರರು ಬೇಕಾಗಿದ್ದಾರೆ ಹೊರತು ಅವರು ಹೇಗೆ ಬರೆಯಬಲ್ಲರು? ಅವರಲ್ಲಿ ಒಳನೋಟ ಇರುವ ಬರವಣಿಗೆ ತೆಗೆಯಲು ಸಾಧ್ಯವೇ? ಅವರನ್ನು ಹೇಗೆ ಮಾನಿಟರ್ ಮಾಡಬೇಕು. ಸಿದ್ಧಗೊಳಿಸಬೇಕು ಎಂಬ ಕಳಕಳಿ ಈಗ ಯಾವ ಪತ್ರಿಕೆಯಲ್ಲೂ ಉಳಿದಿಲ್ಲ. ಉಪ ಸಂಪಾದಕರು/ ಜಿಲ್ಲಾ ವರದಿಗಾರರು ಕೂಡಾ ಸ್ಥಳೀಯ ಪೇಜು ತುಂಬಿಸುವವರಾಗಿಯೇ ಹೋಗಿದ್ದಾರೆ. ಬಿಡಿ ಸುದ್ದಿಗಾರರಂತೂ ಒಂದೆರಡು ಫೋಟೋ, ಎರಡುಮೂರು ಸುದ್ದಿ ಹಾಕಿ, ನಿಟ್ಟಿಸಿರು ಬಿಡುತ್ತಾರೆ. ಈ ಪೇಜ್ ನೋಡಿಕೊಳ್ಳುವ ಉಪ ಸಂಪಾದಕ ಮಹಾಶಯರು ಬೇಗನೇ ಪೇಜು ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿ ಬಣವಿ ತರಹ ಸುದ್ದಿಗಳನ್ನು ಜೋಡಿಸಿ, ಕೈ ತೊಳೆದು ಕೊಂಡು ಹೋಗಿ ಬಿಡುತ್ತಾರೆ. ಈ ಎಡಿಷನ್ ಹಾವಳಿಯಿಂದ ಈ ಸ್ಥಳೀಯ ಪೇಜ್‌ಗಳು ಎಷ್ಟು ಹಾಳಾಗಿವೆ ಎಂದರೆ ಅಲ್ಲಿ ಕಾಗುಣಿತ ದೋಷ ಸೇರಿದಂತೆ ಪತ್ರಿಕೆಗಳಿಗೆ ಇರುವ ತನ್ನದೇ ಆದ ಭಾಷೆಯೇ (ಸ್ಟೈಲ್‌ಷೀಟ್) ಮಾಯವಾಗಿ ಹೋಗಿರುತ್ತದೆ. ನಮ್ಮ ಬಳ್ಳಾರಿ ಜಿಲ್ಲೆಯ ಉದಾಹರಣೆಯನ್ನು ತೆಗೆದುಕೊಂಡರೆ ಪ್ರಜಾವಾಣಿ ಎರಡು ಪುಟಗಳನ್ನು ಬಳ್ಳಾರಿ ಜಿಲ್ಲೆಗೆ ಮೀಸಲಿಟ್ಟಿದೆ (2-3ನೇ ಪೇಜ್‌ಗಗಳು). ಜಾಹಿರಾತು ಹೆಚ್ಚಾದರೆ ಮತ್ತೇ ಎರಡು ಪೇಜ್‌ಗಳನ್ನು ಹೆಚ್ಚಿಗೆ ಕೊಡುತ್ತದೆ. ವಿಜಯ ಕರ್ನಾಟಕದ್ದಂತೂ ಇನ್ನೂ ವಿಚಿತ್ರ. ಯಾವ ಪುಟದಲ್ಲಿ ಯಾವುದು ಲೋಕಲ್, ಯಾವುದು ಸ್ಟೇಟ್ ನ್ಯೂಸ್ ಎಂದು ಗೊತ್ತಾಗದಷ್ಟು ಮಿಕ್ಸ್ ಮಾಡಿ ಹಾಕಲಾಗಿರುತ್ತೆ. ಕೆಲವೊಮ್ಮೆ ಮುಖ ಪುಟದಲ್ಲಿ ಬಂದಿರುವ ಸುದ್ದಿ ಇನ್ನೊಂದು ಎಡಿಷನ್‌ನಲ್ಲಿ ಮಂಗಮಾಯ ಆಗಿರುತ್ತದೆ. ಕನ್ನಡಪ್ರಭ, ಉದಯವಾಣಿಯದು ಕೂಡಾ ಇದೇ ಕಥೆ. ಗಣಿಗಾರಿಕೆಯ ಉಬ್ಬರ ಇರುವಾಗ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿತವಾದ ಅನೇಕ ಅಂಶಗಳನ್ನು ಬಿಡಿ ಸುದ್ದಿಗಾರರು ಬರೆದಿದ್ದಾರೆ. ಈ ಸುದ್ದಿಗಳು ಬಂದಿವೆ ಕೂಡಾ. ರಾಜ್ಯಮಟ್ಟದ ಸುದ್ದಿಯನ್ನಾಗಿ ಮಾಡಬಹುದಾದ ಗಮನ ಸೆಳೆಯುವ ಸುದ್ದಿಗಳೇ ಅವು. ಬರೆಯುವ ಶೈಲಿಯಲ್ಲಿ ಹೆಚ್ಚುಕಡಿಮೆ ಇರಬಹುದು. ಡೆಸ್ಕ್‌ನಲ್ಲಿ ಇರುವ ಉಪ ಸಂಪಾದಕರು ಅದರ ಮಹತ್ವ ನೋಡಿ, ಪುನಃ ಬರೆಸಿ, ಅದನ್ನು ರಾಜ್ಯ ಸುದ್ದಿಯನ್ನಾಗಿ ಮಾಡಬೇಕಿತ್ತು. ಆದರೆ ಪೇಜ್ ತುಂಬಿಸುವ ಧಾವಂತ, ಬಿಡಿ ಸುದ್ದಿಗಾರರ ಬಗ್ಗೆ ಇರುವ ಉಪೇಕ್ಷೆ ಎಲ್ಲವೂ ಸ್ಥಳೀಯ ಪೇಜ್‌ಗಳಲ್ಲಿ ಬಂದು ಅಂತಹ ಸುದ್ದಿಗಳು ಕಳೆದು ಹೋಗಿ ಬಿಡುತ್ತವೆ. ಎಷ್ಟು ಸುದ್ದಿಗಳು ಹೀಗೆ ಕಳೆದು ಹೋಗಿವೆ? ರಾಜ್ಯಮಟ್ಟದ ಸುದ್ದಿಗಳಿಗಾಗಿ ಎಷ್ಟು ಪೇಜ್‌ಗಳನ್ನು ಮೀಸಲಿಟ್ಟಿವೆ. ಯಾವುದು ರಾಜ್ಯದ ಸುದ್ದಿ? ಇದು ಒಂದು ಪ್ರಶ್ನೆಯಾದರೆ ಮತ್ತೊಂದು ಅಂಕಣಕೋರರ ಹಾವಳಿ. ಪ್ರಜಾವಾಣಿಯನ್ನು ಹೊರತು ಪಡೆಸಿ, ಉಳಿದ ದಿನ ಪತ್ರಿಕೆಗಳನ್ನು ನೋಡಿ ಅಲ್ಲಿ ಮುಕ್ಕಾಲು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದು ಈ ಅಂಕಣಕಾರರೇ ಸಾಗುವಳಿ ಮಾಡುತ್ತಿರುತ್ತಾರೆ. ಈ ಅಂಕಣಕೋರರ ಹಾವಳಿಯಿಂದಾಗಿ ಜಿಲ್ಲಾ ವರದಿಗಾರರು, ಉಪ ಸಂಪಾದಕರು ಕೂಡಾ ಏನೂ ಬರೆಯದ ಸ್ಥಿತಿ ನಿರ್ಮಾಣವಾಗಿದೆ. ಇರುವ ಸ್ಥಳೀಯ ಪೇಜ್‌ಗಳಲ್ಲಿಯೇ ಅವರು ಕೃಷಿ ಮಾಡಲಾರಂಭಿಸುತ್ತಾರೆ. ಬೈಲೈನ್ ಹಾಕಿಕೊಂಡು ಚರಂಡಿ, ಟ್ರಾಫಿಕ್, ಹಂದಿಗಳ ಹಾವಳಿ ಎಂದೆಲ್ಲಾ ಬರೆದುಕೊಳ್ಳುತ್ತಾರೆ. ಅಂಕಣಕೋರನೊಬ್ಬ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದು ಕೇಳಿ, ಅಯ್ಯೋ ಎಲ್ಲಿಗೆ ಬಂತು ಜರ್ನಲಿಸಂ ಪ್ರತಾಪ ಅಂತಾ ಲೊಚಗುಡುವುದು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯ? ಹೀಗೆ ಪ್ರಶ್ನೆಗಳು ಸಾಕಷ್ಟು ಎದ್ದು ಬರುತ್ತವೆ. ಒಡನೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬುದು ಸಹ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ. This entry was posted in ಪರಶುರಾಮ್ ಕಲಾಲ್, ಮಾಧ್ಯಮ, ಸಾಮಾಜಿಕ and tagged ಅಂಕಣಕಾರರು, ಉದಯವಾಣಿ, ಕನ್ನಡಪ್ರಭ, ದಿನಪತ್ರಿಕೆ, ಪತ್ರಕರ್ತ, ಪ್ರಜಾವಾಣಿ, ವರದಿಗಾರರು, ವಿಜಯಕರ್ನಾಟಕ, ಸಂಯುಕ್ತಕರ್ನಾಟಕ, ಸುದ್ದಿ on November 5, 2011 by admin.
ದಿನಾಂಕ 04-08-2020 ರಂದು ಕವಿತಾ ಗಂಡ ವಿಠಲ ಲೋಹಾರೆ ವಯ: 35 ವರ್ಷ, ಜಾತಿ: ಕಂಬಾರ, ಸಾ: ಡೋಣಗಾಂವ(ಎಮ್‌) ರವರ ಗಂಡನಾದ ವಿಠಲ ತಂದೆ ನಾರಾಯಣ ಲೋಹಾರೆ ಇವರು ವಿಜಯಕುಮರ ದೇಶಮುಖ ರವರ ಹೊಲದಲ್ಲಿ ಸೋಯಾ ಬೆಳೆಯಲ್ಲಿನ ಹುಲ್ಲು ಕತ್ತಿಲು ಹೋಗಿ ಹುಲ್ಲು ಕಿತ್ತುತ್ತಿರುವಾಗ ಅವರ ಬಲಗೈ ತೋರಬೆರಳಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಉದಗೀರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಚಿಕಿತ್ಸೆ ವೇಳೆಯಲ್ಲಿ ಗಂಡ ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ವೈಗರೆ ಇರುವುದಿಲ್ಲ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 11/2020, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 10-08-2020 ರಂದು ಫಿರ್ಯಾದಿ ರಂಜನಾ ಗಂಡ ಮಾರುತಿ ನರೋಟೆ ಸಾ: ಔರಾದ(ಬಿ) ರವರ ಗಂಡನಾದ ಮಾರುತಿ ತಂದೆ ಬಾಜಿರಾವ ನರೋಟೆ ರವರು ತನ್ನ ವ್ಯಾಪಾರದಲ್ಲಿ ನಷ್ಟವಾಗಿ, ಹೊಲದಲ್ಲಿ ಬಿತ್ತನೆ ಮಾಡಿದ ಬೆಳೆಯು ಸರಿಯಾಗಿ ಬೆಳೆಯದಿರುವ ಕಾರಣ ತನಗೆ ಕೃಷಿ ಕೆಲಸಕ್ಕೆ ಮಾಡಿಕೊಂಡಿದ್ದ ಸಾಲವನ್ನು ಹೇಗೆ ತೀರಿಸಬೇಕು ಎಂದು ಚಿಂತೆ ಮಾಡಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಬ್ಲೇಡನಿಂದ ತನ್ನ ಕೈಗಳಿಗೆ ಕಟ್ ಮಾಡಿಕೊಂಡು ಮನೆಯಲ್ಲಿನ ತಗಡದ ಕೆಳಗೆ ಹಾಕಿದ ಕಟ್ಟಿಗೆಯ ದಂಟೆಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 94/2020, ಕಲಂ. ಮಹಿಳೆ ಕಾಣೆ :- ದಿನಾಂಕ 07-08-2020 ರಂದು 1000 ಗಂಟೆಯ ಸುಮಾರಿಗೆ ಫಿರ್ಯಾದಿ ನಾಗರಾಜ ತಂದೆ ಗುರುಲಿಂಗಯ್ಯಾ ಹಾಲಾ ಸಾ: ಹಳ್ಳಿಖೇಡ (ಬಿ) ರವರ ಹೆಂಡತಿಯಾದ ಮಾಣಿಕೇಶ್ವರಿ ವಯ: 34 ವರ್ಷ ಇಕೆಯು ತಮ್ಮ ಮನೆಯಿಂದ ಬೀದರ ನೌಬಾದ ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ತನ್ನ ಹೆಂಡತಿಯನ್ನು ಎಲ್ಲಾ ಕಡೆಗೆ ಹುಡುಕಾಡಿ ವಿಚಾರಿಸಿ ತಿಳಿದುಕೊಳ್ಳಲು ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಕಾಣೆಯಾದ ತನ್ನ ಹೆಂಡತಿಯ ಚಹರೆ ಪಟ್ಟಿ ದುಂಡು ಮುಖ, ಸದ್ರಢ ಮೈಕಟ್ಟು, ಗೋಧಿ ಮೈ ಬಣ್ಣ, ತಲೆಯ ಮೇಲೆ ಕಪ್ಪು ಕೂದಲು, ನೇರವಾದ ಮೂಗು, ಮೈಮೇಲೆ ಆರೆಂಜ್ ಬಣ್ಣದ ಸೀರೆ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 10-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 104/2020, ಕಲಂ. 457, 380 ಐಪಿಸಿ :- ದಿನಾಂಕ 08-08-2020 ರಂದು 1730 ಗಂಟೆಯಿಂದ ದಿನಾಂಕ 10-08-2020 ರಂದು 0830 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಬಸವಕಲ್ಯಾಣ ಬಜಾರ ಸಬ್ ಪೋಸ್ಟ್ ಆಫೀಸಿನ ಶೇಟರ್ ಕೀಲಿ ಮುರಿದು ಒಳಗಡೆ ಪ್ರವೇಶ ಮಾಡಿ ನಗದು ಹಣ 10,428/- ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಗೋದಾವರಿ ಗಂಡ ನಿತ್ಯಾನಂದ ಕೊಂಗಳೆ ವಯ: 28 ವರ್ಷ, ಜಾತಿ: ಮರಾಠಾ, ಉ: ಗ್ರಾಮೀಣ ಡಾಕ್ ಸೇವಕ, ಸಾ: ಹುಣುಸನಾಳ, ತಾ: ಹುಮನಾಬಾದ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Kannada News » Technology » Infinix has launched a new smart TV series in India Infinix X3 price just at Rs 11999 Infinix X3: ಭಾರತದಲ್ಲಿ ಕೇವಲ 11,999 ರೂ. ಗೆ ಬಿಡುಗಡೆ ಆಗಿದೆ ಇನ್ಫಿನಿಕ್ಸ್ X3 ಸ್ಮಾರ್ಟ್​ ಟಿವಿ ಇನ್ಫಿನಿಕ್ಸ್​ ಕಂಪನಿ ಅಚ್ಚರಿ ಎಂಬಂತೆ ಅತ್ಯಂತ ಕಡಿಮೆ ಬೆಲೆಗೆ ಎರಡು ಮಾದರಿಯಲ್ಲಿ ಹೊಸ ಸ್ಮಾರ್ಟ್​ ಟಿವಿಯೊಂದನ್ನು ಲಾಂಚ್ ಮಾಡಿದೆ. ದೇಶದಲ್ಲಿ ತನ್ನ ನೂತನ ಆಂಡ್ರಾಯ್ಡ್ X3 (Infinix X3) ಸ್ಮಾರ್ಟ್ ಟಿವಿ ಸರಣಿಯನ್ನು ಪರಿಚಯಿಸಿದೆ. Infinix X3 smart tv TV9kannada Web Team | Edited By: Vinay Bhat Mar 11, 2022 | 2:53 PM ಭಾರತದಲ್ಲೀಗ ಸ್ಮಾರ್ಟ್​ಫೋನ್​ಗಳ (smartphone) ಜೊತೆ ಸ್ಮಾರ್ಟ್​ ಟಿವಿಗಳ ಹಾವಳಿ ಕೂಡ ಜೋರಾಗಿದೆ. ಪ್ರಸಿದ್ಧ ಮೊಬೈಲ್ ತಯಾರಿಕ ಸಂಸ್ಥೆ ಸ್ಮಾರ್ಟ್​ ಟಿವಿಗಳನ್ನು ಕೂಡ ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಇನ್ಫಿನಿಕ್ಸ್​ ಕಂಪನಿ ಅಚ್ಚರಿ ಎಂಬಂತೆ ಅತ್ಯಂತ ಕಡಿಮೆ ಬೆಲೆಗೆ ಎರಡು ಮಾದರಿಯಲ್ಲಿ ಹೊಸ ಸ್ಮಾರ್ಟ್​ ಟಿವಿಯೊಂದನ್ನು ಲಾಂಚ್ ಮಾಡಿದೆ. ದೇಶದಲ್ಲಿ ತನ್ನ ನೂತನ ಆಂಡ್ರಾಯ್ಡ್ X3 (Infinix X3) ಸ್ಮಾರ್ಟ್ ಟಿವಿ ಸರಣಿಯನ್ನು ಪರಿಚಯಿಸಿದೆ. ಹೊಸ ಇನ್ಫಿನಿಕ್ಸ್ ಆಂಡ್ರಾಯ್ಡ್ X3 ಸ್ಮಾರ್ಟ್ ಟಿವಿ ಸರಣಿಯಲ್ಲಿ 32-ಇಂಚಿನ ಮತ್ತು 43-ಇಂಚಿನ ಎರಡು ಸ್ಮಾರ್ಟ್‌ಟಿವಿಗಳನ್ನು (Smart TV)ಕಂಪೆನಿ ಪರಿಚಯಿಸಿದ್ದು, ಈ ಎರಡೂ ಟಿವಿಗಳು ಅತ್ಯಂತ ಅಗ್ಗದ ಬೆಲೆಯಲ್ಲಿ ಸಾಕಷ್ಟು ಫೀಚರ್ಸ್ ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇನ್ಫಿನಿಕ್ಸ್​ X3 32 ಇಂಚಿನ ಬೆಲೆ 11,999 ರೂ. ನಿಗದಿ ಮಾಡಲಾಗಿದೆ. 43 ಇಂಚಿನ ಟಿವಿಗೆ 19,999 ರೂ. ಇನ್ಫಿನಿಕ್ಸ್ X3 ಸ್ಮಾರ್ಟ್ ಟಿವಿ ಎರಡೂ ಮಾಡೆಲ್‌ಗಳು ಇದೇ ಮಾರ್ಚ್ 12 ಮತ್ತು ಮಾರ್ಚ್ 16 ರ ನಡುವೆ ದೇಶದ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮೂಲಕ ಮುಂಗಡ ಬುಕಿಂಗ್‌ಗೆ ಲಭ್ಯವಿರುತ್ತವೆ ಎಂದು ಕಂಪೆನಿ ತಿಳಿಸಿದೆ. ಇನ್ನು ಆಂಡ್ರಾಯ್ಡ್ X3 ಸ್ಮಾರ್ಟ್‌ಟಿವಿಗಳ ಜೊತೆ ಬಿಡುಗಡೆಯ ಕೊಡುಗೆಯಾಗಿ 1,499 ರೂ. ಬೆಲೆ ಹೊಂದಿರುವ Infinix Snokor (iRocker) ಟ್ರೂ ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್‌ಗಳನ್ನು ಕೇವಲ 1 ರೂಪಾಯಿಗೆ ನೀಡುವುದಾಗಿ ಕಂಪನಿ ತಿಳಿಸಿದೆ. 32-ಇಂಚಿನ ಟಿವಿ HD ಪರದೆಯೊಂದಿಗೆ ಬರುತ್ತದೆ. ಆದರೆ 43-ಇಂಚಿನ ಟಿವಿ ಪೂರ್ಣ HD ರೆಸಲ್ಯೂಶನ್‌ನೊಂದಿಗೆ ಬರುತ್ತದೆ. 32-ಇಂಚಿನ ಟಿವಿ 93 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬಂದರೆ 43-ಇಂಚಿನ ಟಿವಿ 96 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದೆ. X3 ಸ್ಮಾರ್ಟ್ ಟಿವಿಗಳು ಆಂಟಿ-ಬ್ಲೂ ರೇ ತಂತ್ರಜ್ಞಾನದಿಂದ ಚಾಲಿತವಾಗಿದ್ದು, ಅವುಗಳಿಂದ ಹೊರಸೂಸುವ ಹಾನಿಕಾರಕ ನೀಲಿ ಕಿರಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಒಂದು ಅವಧಿಯಲ್ಲಿ ಕಣ್ಣುಗಳ ಮೇಲೆ ಪರಿಣಾಮ ಬೀರುವ ಗಂಭೀರ ಹಾನಿಯನ್ನು ತಪ್ಪಿಸುತ್ತದೆ. ಇನ್ನು ಈ ಎರಡೂ ಟಿವಿಗಳು 122 ಪರ್ಸೆಂಟ್ sRGB ಗ್ಯಾಮೆಟ್ ಕವರೇಜ್ ಮತ್ತು HDR10 ಬೆಂಬಲವನ್ನು ಹೊಂದಿವೆ. ನಾಲ್ಕು ಕಾರ್ಟೆಕ್ಸ್ A55 ಕೋರ್‌ಗಳೊಂದಿಗೆ ಕ್ವಾಡ್ ಕೋರ್ Realtek RTD2841 ಪ್ರೊಸೆಸರ್‌ನಿಂದ ಚಾಲಿತವಾಗಿವೆ ಮತ್ತು 1GB RAM ಮತ್ತು 8GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.ಎರಡೂ ಟಿವಿಗಳು 122 ಪರ್ಸೆಂಟ್ sRGB ಗ್ಯಾಮೆಟ್ ಕವರೇಜ್ ಮತ್ತು HDR10 ಬೆಂಬಲವನ್ನು ಪಡೆದುಕೊಂಡಿದೆ. ನಾಲ್ಕು ಕಾರ್ಟೆಕ್ಸ್ A55 ಕೋರ್‌ಗಳೊಂದಿಗೆ ಕ್ವಾಡ್ ಕೋರ್ Realtek RTD2841 ಪ್ರೊಸೆಸರ್‌ನಿಂದ ಚಾಲಿತವಾಗಿವೆ ಮತ್ತು 1GB RAM ಮತ್ತು 8GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿವೆ ಎಂದು ಇನ್ಫಿನಿಕ್ಸ್ ಕಂಪೆನಿ ತಿಳಿಸಿದೆ. ಇದರಲ್ಲಿ 32-ಇಂಚಿನ ಮಾದರಿಯು 20W ಒಟ್ಟು ಔಟ್‌ಪುಟ್‌ನೊಂದಿಗೆ ಎರಡು ಬಾಕ್ಸ್ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಆದರೆ 43-ಇಂಚಿನ ಮಾದರಿಯು 36W ಒಟ್ಟು ಔಟ್‌ಪುಟ್‌ನೊಂದಿಗೆ ಎರಡು ಬಾಕ್ಸ್ ಸ್ಪೀಕರ್‌ಗಳು ಮತ್ತು ಎರಡು ಟ್ವೀಟರ್‌ಗಳನ್ನು ಒಳಗೊಂಡಿದೆ ಎಂದು ಕಂಪೆನಿ ತಿಳಿಸಿದೆ. ಎರಡೂ ಪರದೆಯ ಗಾತ್ರಗಳು ಡಾಲ್ಬಿ ಆಡಿಯೊವನ್ನು ಬೆಂಬಲಿಸುತ್ತವೆ. ಟಿವಿಯಲ್ಲಿನ ಸಂಪರ್ಕ ಆಯ್ಕೆಗಳಲ್ಲಿ ಮೂರು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು, ಈಥರ್ನೆಟ್ ಪೋರ್ಟ್, ಮಿನಿ YPbPr ವೀಡಿಯೊ ಔಟ್‌ಪುಟ್ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ.
ಇತ್ತೀಚೆಗೆ ಅಷ್ಟೇ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರನಹಳ್ಳಿಯಲ್ಲಿ ದೇವರ ಮೆರವಣಿಗೆ ವೇಳೆ ಕೋಲು ಮುಟ್ಟಿದ ಎಂಬ ಕಾರಣಕ್ಕೆ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ 60 ಸಾವಿರ ರು, ದಂಡದ ಜೊತೆಗೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಚಿಂತಾಮಣಿಯಲ್ಲಿ ಕಳ್ಳತನ ಆರೋಪ ಹೊರೆಸಿ ದಲಿತ ಬಾಲಕನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. Govindaraj S First Published Oct 1, 2022, 8:16 AM IST ಚಿಕ್ಕಬಳ್ಳಾಪುರ (ಅ.01): ಇತ್ತೀಚೆಗೆ ಅಷ್ಟೇ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರನಹಳ್ಳಿಯಲ್ಲಿ ದೇವರ ಮೆರವಣಿಗೆ ವೇಳೆ ಕೋಲು ಮುಟ್ಟಿದ ಎಂಬ ಕಾರಣಕ್ಕೆ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿ 60 ಸಾವಿರ ರು, ದಂಡದ ಜೊತೆಗೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಚಿಂತಾಮಣಿಯಲ್ಲಿ ಕಳ್ಳತನ ಆರೋಪ ಹೊರೆಸಿ ದಲಿತ ಬಾಲಕನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಅಂಬಾಜಿ ದುರ್ಗ ಹೋಬಳಿಯ ಕೆಂಪದೇನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ದೌರ್ಜನ್ಯಕ್ಕೆ ಒಳಗಾದ ಬಾಲಕನನ್ನು ಗ್ರಾಮದ ಆನಂದ ಎಂಬುವರ ಪುತ್ರ ಯಶ್ವಂತ(16) ಎಂದು ಗುರುತಿಸಲಾಗಿದೆ. ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದ ಯುವಕ ಅನುಮಾನಾಸ್ಪದ ಸಾವು! ಗ್ರಾಮದಲ್ಲಿ ಮಕ್ಕಳೊಂದಿಗೆ ಯಶವಂತ್‌ ಆಟವಾಡುತ್ತಿರುವಾಗ ನಾಗರಾಜ್‌ ಎಂಬುವರ ಪುತ್ರಿಯ ಓಲೆಯನ್ನು ಕದ್ದಿದ್ದಾನೆ ಎಂದು ಆರೋಪಿಸಿ ಬಾಲಕನನ್ನು ಗ್ರಾಮದ ಹಾಲಿನ ಡೇರಿ ಬಳಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಗ್ರಾಮದ ಸವರ್ಣಿಯರಾದ ನಾರಾಯಣಸ್ವಾಮಿ, ನವೀನ, ನಂಜೆಗೌಡ, ಹರೀಶ್‌, ನಾಗರಾಜ್‌, ಅಂಬಿಕಾ, ದೊಡ್ಡೇಗೌಡ ಸೇರಿದಂತೆ ಹಲವರು ಹಿಗ್ಗಾಮಗ್ಗ ಥಳಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆತನ ತಾಯಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ: ವಿಷಯ ತಿಳಿದ ಕೂಡಲೇ ನಗರ ಠಾಣೆ ಪೊಲೀಸರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಬಾಲಕ ಹಾಗು ಆತನ ತಾಯಿಯ ಹೇಳಿಕೆ ಪಡೆದರು. ಈ ವೇಳೆ ಬಾಲಕನ ತಾಯಿ ನೀಡಿದ ಹೇಳಿಕೆಯಲ್ಲಿ, ತನ್ನ ಮಗ ಆಟವಾಡಿಕೊಳ್ಳುವಾಗ ಓಲೆ ಕದ್ದಿದ್ದಾನೆಂದು ಆತನನ್ನು ರಾತ್ರಿ ಕರೆದುಕೊಂಡು ಹೋಗಿ ಡೇರಿ ಮುಂದೆ ಕಂಬಕ್ಕೆ ಕಟ್ಟಾಕಿ ಹಲ್ಲೆ ನಡೆಸಿದ್ದಾರೆ. ನೀವು ಊರಿನಿಂದ ಮನೆ ಖಾಲಿ ಮಾಡಬೇಕೆಂದು ಹೇಳುತ್ತಿದ್ದಾರೆ. ನಿಮ್ಮ ಜಾತಿಯವರು ನಮ್ಮೂರಲ್ಲಿ ಇರುವುದು ಬೇಡ ಎನ್ನುತ್ತಿದ್ದಾರೆಂದು ವಿವರಿಸಿದ್ದಾರೆ. ಕ್ರಮಕ್ಕೆ ಮಾದಿಗ ದಂಡೋರ ಆಗ್ರಹ: ಆಸ್ಪತ್ರೆಗೆ ತೆರಳಿ ತಾಯಿ, ಮಗನಿಗೆ ಧೈರ್ಯ ತುಂಬಿ ಮಾತನಾಡಿರುವ ಮಾದಿಗ ದಂಡೋರ ಸಂಘಟನೆಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಂಗಮಶಿಗೇನಹಳ್ಳಿ ದೇವರಾಜ್‌, ಕಳ್ಳತನ ಆರೋಪ ಮಾಡಿ ಕಂಬಕ್ಕೆ ಕಟ್ಟಿಥಳಿಸಿ ಕಾನೂನು ತಮ್ಮ ಕೈಗೆ ತೆಗೆದಕೊಂಡಿರುವ ಆರೋಪಿಗಳ ಮೇಲೆ ಕೂಡಲೇ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 10 ಮಂದಿ ವಿರುದ್ದ ಎಫ್‌ಐಆರ್‌: ಪ್ರಕರಣಧ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಮುಖ ಆರೋಪಿ ನಾರಾಯಣಸ್ವಾಮಿ ಬಿನ್‌ ವೆಂಕಟರವಣಪ್ಪ ಸೇರಿ ನವೀನ್‌, ಹರೀಶ್‌, ದೊಡ್ಡೇಗೌಡ, ಮೀನು ದಾಸಪ್ಪ, ಅಂಬಿಕಾ, ಡಿಶ್‌ ಮಂಜು, ನಾರಾಯಣ, ನಾಗರಾಜ್‌, ನಾರಾಯಣಸ್ವಾಮಿ ಬಿನ್‌ ಶ್ಯಾಮಣ್ಣ ಎಂಬುವರ ವಿರುದ್ದ ಎಫ್‌ಐಆರ್‌ ದಾಖಲಾಗಿದ್ದು, ಉಳಿದವರ ಬಂಧಿಸಲು ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ಕುಶಾಲ್‌ ಚೌಕ್ಸೆ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಕೆವೈಸಿ ಅಪ್‌ಡೇಟ್‌ ಹೆಸರಿನಲ್ಲಿ ವೃದ್ಧನ 2.21 ಲಕ್ಷ ಎಗರಿಸಿದ ಸೈಬರ್‌ ಕಳ್ಳರು 3 ಮಂದಿ ಅರೆಸ್ಟ್‌: ದಲಿತ ಬಾಲಕನ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಯಾರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದರೂ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ವಹಿಸುತ್ತೇವೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌ ಕನ್ನಡಪ್ರಭಗೆ ತಿಳಿಸಿದರು.
ಒಮ್ಮೆ ಒಬ್ಬರು ತಪಸ್ವಿಗಳು ತಮ್ಮ ಆಶ್ರಮದ ಬಳಿ ಅತ್ಯಂತ ಕಠಿಣವಾದ ತಪಶ್ಚರ್ಯೆಯಲ್ಲಿ ನಿರತರಾಗಿದ್ದರು. ಅವರ ತಪೋಮಹಿಮೆಯಿಂದ ತನ್ನ ಸ್ಥಾನಕ್ಕೆ ಕುತ್ತು ಬರಬಹುದೆಂಬ ಭೀತಿಯಿಂದ ಇಂದ್ರನು ಹೇಗಾದರೂ ಮಾಡಿ ಅವರ ತಪಸ್ಸಿಗೆ ಭಂಗವನ್ನುಂಟುಮಾಡಬೇಕೆಂಬ ಮನಸ್ಸಿನಿಂದ ಒಂದು ಉಪಾಯವನ್ನು ಮಾಡುತ್ತಾನೆ. ತಾನು ಮಾರುವೇಷದಲ್ಲಿ ಅವರ ಬಳಿ ಬಂದು ಅವರಲ್ಲಿ 'ಮುನಿವರ್ಯರೇ, ನಾನು ಅನ್ಯ ಕೆಲಸದ ನಿಮಿತ್ತ ಬೇರೆಡೆಗೆ ತೆರಳಬೇಕಾಗಿದೆ. ಅಲ್ಲಿಗೆ ಈ ಆಯುಧವನ್ನು ಕೊಂಡೊಯ್ಯುವಂತಿಲ್ಲ. ನಾನು ಬರುವವರೆಗೂ ಈ ನನ್ನ ಆಯುಧವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತಾನೆ. ಮೊದಲಿಗೆ, ತಪಸ್ವಿಗಳಿಗೆ ಆ ಜವಾಬ್ದಾರಿ ಇಷ್ಟವಿಲ್ಲದಿದ್ದರೂ ಅವನ ಒತ್ತಾಯಕ್ಕೆ ಮಣಿದು ತಾವು ಆಯುಧವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪಿಕೊಳ್ಳುತ್ತಾರೆ. ಆಗ ಇಂದ್ರನು ಇನ್ನು ತನ್ನ ಮನೋರಥ ಪೂರ್ಣವಾದಂತೆ ಎಂದುಕೊಂಡು ಅಲ್ಲಿಂದ ತೆರಳುತ್ತಾನೆ. ತಪಸ್ವಿಗಳ ಮೇಲೆ ಆಯುಧವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕೆಂಬ ಜವಾಬ್ದಾರಿ ಇದ್ದುದರಿಂದ ಅವರು ಯಾವಾಗಲೂ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಆಗುತ್ತದೆ, ತಪಸ್ಸಿಗೆ ಕುಳಿತಾಗಲೂ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ.  ಹಾಗಾಗಿ ಹಿಂದಿನಂತೆ ಏಕಾಗ್ರತೆಯಿಂದ ತಪಸ್ಸನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವರ ಗಮನವೆಲ್ಲ ಆಯುಧದ ಮೇಲೆಯೇ ಇರುತ್ತದೆ, ಮನಸ್ಸು ಚಾಂಚಲ್ಯಕ್ಕೆ ಒಳಗಾಗುತ್ತದೆ. ಒಮ್ಮೆ ಆಯುಧದ ಹರಿತವನ್ನು ಪರೀಕ್ಷಿಸೋಣ ಎಂದುಕೊಂಡು ತಮ್ಮ ಆಶ್ರಮದಲ್ಲಿ ಬೆಳೆದ ಒಂದು ಬಳ್ಳಿಯ ಮೇಲೆ ಅದನ್ನು ಪ್ರಯೋಗಿಸುತ್ತಾರೆ ಅದು ಒಂದೇ ಏಟಿಗೆ ಎರಡು ತುಂಡಾಗುತ್ತದೆ ಹಾಗೆಯೇ ಕೆಲವು ಗಿಡಮರಗಳ ಮೇಲೆಯೂ ಪ್ರಯೋಗಿಸಿ ಎಷ್ಟೊಂದು ಹರಿತವಾಗಿದೆ ಎಂದು ಸಂತೋಷಿಸುತ್ತಾರೆ,  ಅಷ್ಟಕ್ಕೇ ನಿಲ್ಲದೇ ಆಶ್ರಮದ ಬಳಿ ಬಂದ ಮೃಗಗಳ ಮೇಲೂ ಅದನ್ನು ಪ್ರಯೋಗಿಸಿ ಅವುಗಳ ಹತ್ಯೆಗೂ ಕಾರಣರಾಗುತ್ತಾರೆ. ಸಾತ್ವಿಕ ತಪಸ್ವಿಗಳಾಗಿದ್ದವರು ತಮ್ಮ ಪ್ರಕೃತಿಗೆ ಹೊಂದದ ಒಂದು ಪದಾರ್ಥವನ್ನು ತಮ್ಮ ಬಳಿ ಇಟ್ಟುಕೊಂಡ ಪರಿಣಾಮ ಒಬ್ಬ ದುಷ್ಟವ್ಯಾಧರಾಗಿ ಪರಿವರ್ತನೆಗೊಳ್ಳುತ್ತಾರೆ. ಪದಾರ್ಥ ಸಂಗ್ರಹಣೆಯ ಬಗ್ಗೆ ಇರಬೇಕಾದ ಎಚ್ಚರಿಕೆಯನ್ನು ಈ ಕಥೆಯು ತಿಳಿಸುತ್ತದೆ. ನಮಗೆ ಇಷ್ಟವಾಯಿತು; ಆಕರ್ಷಣೆ ಉಂಟಾಯಿತು ಎಂಬ ಮಾತ್ರಕ್ಕೆ ಆ ಪದಾರ್ಥದಿಂದ ಉಂಟಾಗುವ ಪರಿಣಾಮವನ್ನು ಪೂರ್ವಾಪರ ಯೋಚಿಸದೆ ಅದನ್ನು ಸಂಗ್ರಹಿಸುವುದು ಮತ್ತು ಅದರ ಪ್ರಭಾವಕ್ಕೆ ಒಳಗಾಗುವುದು ಅಪಾಯವೇ ಸರಿ. "ಶರೀರಮಾದ್ಯಂ ಖಲು ಧರ್ಮ ಸಾಧನಂ" ಎಂಬಂತೆ ಧರ್ಮ ಸಾಧನೆಗಾಗಿಯೇ ಈ ಶರೀರವು ಬಂದಿರುವುದು;  ಅವರವರ ಪ್ರಕೃತಿಗನುಗುಣವಾದ ಧರ್ಮವನ್ನು ಚೆನ್ನಾಗಿ ಪಾಲಿಸಿ ಧರ್ಮಕ್ಕೆ ಅನುಗುಣವಾಗಿ ಅರ್ಥ ಕಾಮಗಳನ್ನು ಹೊಂದಲು ಬೇಕಾದಂತಹ ಪದಾರ್ಥಗಳನ್ನು ಬಳಸಿದಾಗ ಜೀವನದ ಅಂತಿಮ ಧ್ಯೇಯವಾದ ಮೋಕ್ಷದ ಮಾರ್ಗವು ಅನಾಯಾಸವಾಗಿ ತೆರೆಯಲ್ಪಡುವುದು ಎಂಬುದು ಭಾರತೀಯ ಮಹರ್ಷಿಗಳ ಚಿಂತನೆ. ನಮ್ಮ ಪ್ರಕೃತಿಗೆ ಹೊಂದುವ ಪದಾರ್ಥಗಳನ್ನು ಮಾತ್ರ ಅಪೇಕ್ಷಿಸುವುದರ ಜೊತೆಗೆ ಇನ್ನೊಬ್ಬರಿಗೆ ಸಂಬಂಧಿಸಿದ ಪದಾರ್ಥಗಳ ಬಗ್ಗೆ ಕಿಂಚಿತ್ತೂ ಅಪೇಕ್ಷೆ ಇಲ್ಲದಿರುವಿಕೆಯೂ ಅತ್ಯಂತ ಮುಖ್ಯವೇ. ಹಾಗಿಲ್ಲದೇ ಇನ್ನೊಬ್ಬರ ಸಂಪತ್ತನ್ನು ಅಪೇಕ್ಷಿಸುವುದರಿಂದ ಉಂಟಾಗುವ ದುರವಸ್ಥೆಗೆ ರಾವಣನೇ ಪ್ರಸಿದ್ಧ ಉದಾಹರಣೆ.  ರಾವಣನಲ್ಲಿ ಸಕಲ ಸಂಪತ್ತುಗಳು, ಭೋಗ ಸಾಮಗ್ರಿಗಳನ್ನು ಒಳಗೊಂಡ ಸ್ವರ್ಣಮಯವಾದ ಲಂಕೆಯೇ ಇತ್ತು. ಆದರೆ ಅವನು ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೇ ಶ್ರೀರಾಮಚಂದ್ರನ ಆತ್ಮಶ್ರೀಯಾದ ಸೀತಾದೇವಿಯನ್ನು ಅಪೇಕ್ಷಿಸಿ, ಕುತಂತ್ರದಿಂದ ಅವಳನ್ನು ಅಪಹರಿಸಿ, ತನ್ನ ರಾಜ್ಯಕ್ಕೆ ಸೆಳೆದೊಯ್ದನು. ಅವನು ಮಾಡಿದ ಅಪರಾಧಕ್ಕಾಗಿ, ತನ್ನದಾದ ಎಲ್ಲಾ ಸಂಪತ್ತನ್ನೂ, ಕೊನೆಗೆ ತನ್ನ ಪ್ರಾಣವನ್ನೂ ಕಳೆದುಕೊಳ್ಳಬೇಕಾಯಿತು, ಹಾಗಾಗಿ ಪರರ ಪದಾರ್ಥಗಳನ್ನು ಎಂದೆಂದಿಗೂ ಅಪೇಕ್ಷಿಸಬಾರದು.  ಅದನ್ನು ನಮಗೆ ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ನಮಗೆ ಇಷ್ಟವಾಯಿತು ಎಂದು ನಮ್ಮ ಜೀರ್ಣಶಕ್ತಿಗೆ ಮಿತಿಮೀರಿ ಆಹಾರವನ್ನು ಸೇವಿಸಿದಾಗ ಅದು ಅಜೀರ್ಣವಾಗಿ ಹೊಟ್ಟೆಯಲ್ಲಿರುವುದೆಲ್ಲವನ್ನೂ ಸೇರಿಸಿಕೊಂಡು ಹೊರಹೋಗುವಂತೆ, ನಮಗೆ ದಕ್ಕಿಸಿಕೊಳ್ಳಲಾಗದ ಪದಾರ್ಥವು ಎಂದಾದರೂ ಒಮ್ಮೆ ನಮ್ಮಿಂದ ಹೊರಹೋಗುವಾಗ, ನಮ್ಮ ಸಂಪತ್ತನ್ನೂ ಸೇರಿಸಿಕೊಂಡು ಹೊರಹೋಗುತ್ತದೆ! ಹಾಗಾಗಿ ನಮಗೆ ಯಾವ ಪದಾರ್ಥವು ಸೇವ್ಯ, ಯಾವುದು ವರ್ಜ್ಯ ಎಂದು ಹಲವು ಬಾರಿ ಪರಿಶೀಲಿಸಿ ಸ್ವೀಕರಿಸುವುದು ವಿವೇಕದ ಲಕ್ಷಣ. "ಹಸಿವಿದ್ದರೆ ಅನ್ನಕೋಶವನ್ನು ತುಂಬಿಕೊಳ್ಳಿ. ಆದರೆ ಅನ್ನಕೋಶಕ್ಕೆ ಡ್ಯಾಮೇಜ್ ಆಗುವವರೆಗೆ ತುಂಬಬೇಡಿ, ಆದ್ದರಿಂದ ಧರ್ಮ ಕೆಡದಂತೆ ಅರ್ಥಜಾತವನ್ನು ಬಳಸಿಕೊಳ್ಳಿ" ಎಂಬ ಶ್ರೀರಂಗಮಹಾಗುರುಗಳ ವಾಣಿಯಂತೆ ಧರ್ಮ ಮಾರ್ಗದಲ್ಲಿ ಸಾಗಿ, ಮಹಾಧ್ಯೇಯವನ್ನು ತಲುಪಲು ತಮ್ಮ ತಮ್ಮ ಪ್ರಕೃತಿಗಳಿಗನುಗುಣವಾದ ಪದಾರ್ಥಗಳನ್ನಷ್ಟೇ ಅಪೇಕ್ಷಿಸಿದಾಗ, ಜೀವನವು ಸತ್ಯ, ಸುಂದರವಾಗಿರುತ್ತದೆ.
ಕನ್ನಡ ಕಿರುತೆರೆಯಲ್ಲಿ ಎಲ್ಲರೂ ಇಷ್ಟಪಡುವ ಹೆಸರು ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರವನ್ನು ಇಂದಿಗೂ ಜನರು ಮರೆತಿಲ್ಲ. ಈಗಲೂ ವೈಷ್ಣವಿ ಅವರನ್ನು ಸನ್ನಿಧಿ ಎಂದೇ ಕರೆಯುವ ಸಾಕಷ್ಟು ಜನರಿದ್ದಾರೆ. ವೈಷ್ಣವಿ ಅವರನ್ನು ಮತ್ತೊಮ್ಮೆ ಕಿರುತೆರೆಯಲ್ಲಿ ನೋಡುವ ಆಸೆ ಜನರದ್ದು. ಆದರೆ ವೈಷ್ಣವಿ ಅವರು ಅಗ್ನಿಸಾಕ್ಷಿ ನಂತರ ಮತ್ಯಾವುದೇ ಧಾರಾವಾಹಿಯನ್ನು ಇಡುವರೆಗು ಒಪ್ಪಿಕೊಂಡಿಲ್ಲ. ಆದರೆ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದರೆ ವೈಷ್ಣವಿ. ಇದೀಗ ವೈಷ್ಣವಿ ಅವರು ಚಾಪೆ ದಿಂಬು ಹಿಡಿದು, ಹಳ್ಳಿ ಹಕ್ಕಿಯಾಗಿ ಪಯಣ ಶುರು ಮಾಡಿದ್ದಾರೆ. ವೈಷ್ಣವಿ ಹೊರಟಿರುವುದು ಎಲ್ಲಿಗೆ? ಏನಿದು ಹಳ್ಳಿ ಹಕ್ಕಿಯ ಹೊಸ ಸುದ್ದಿ? ವೈಷ್ಣವಿ ಅವರು ಕಿರುತೆರೆಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ದೇವಿ ಹೆಸರಿನ ಧಾರಾವಾಹಿಯಲ್ಲಿ ನಟಿಸಲು ಶುರು ಮಾಡಿದರು. ಆದರೆ ವೈಷ್ಣವಿ ಅವರಿಗೆ ಹೆಚ್ಚಿನ ಬೇಡಿಕೆ ಸಿಕ್ಕಿದ್ದು ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ. ಆ ಪಾತ್ರದ ಅಭಿನಯ ಮತ್ತು ತೀವ್ರತೆ ಎಷ್ಟಿತ್ತು ಅಂದ್ರೆ, ವೈಷ್ಣವಿ ಅವರನ್ನು ನೋಡುವ ಸಲುವಾಗಿಯೇ ಸಾಕಷ್ಟು ಜನರು ಧಾರಾವಾಹಿ ನೋಡುತ್ತಿದ್ದರು ಎಂದರೆ ತಪ್ಪಾಗುವುದಿಲ್ಲ. ಅಗ್ನಿಸಾಕ್ಷಿ ಧಾರಾವಾಹಿ ವೈಷ್ಣವಿ ಅವರನ್ನು ಕರ್ನಾಟಕದ ಮನೆಮಗಳಾಗಿ ಮಾಡಿತ್ತು. ಅಗ್ನಿಸಾಕ್ಷಿ ಬಳಿಕ ವೈಷ್ಣವಿ ಅವರು ಬೇರೆ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕೆಲವೊಂದು ಶೋಗಳನ್ನು ನಿರೂಪಣೆ ಮಾಡಿದರು. ನಂತರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು, ಫಿನಾಲೆವರೆಗೂ ತಲುಪಿದ್ದರು. ಬಿಗ್ ಮನೆಯಲ್ಲಿ ವೈಷ್ಣವಿ ಅವರ ನಿಜವಾದ ಸ್ವಭಾವ ನೋಡಿ ಜನರು ಸಹ ಫುಲ್ ಫಿದಾ ಆಗಿದ್ದರು. ಬಿಗ್ ಬಾಸ್ ನಂತರ ವೈಷ್ಣವಿ ಗೌಡ ಅವರು ಯೂಟ್ಯೂಬ್ ಚಾನೆಲ್, ಫೋಟೋಶೂಟ್ ಇವುಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ. ಅದೆಲ್ಲದರ ನಡುವೆ ಈಗ ವೈಷ್ಣವಿ ಅವರು ಚಾಪೆ ದಿಂಬು ಹಿಡಿದು, ಸೀರೆ ಧರಿಸಿ ಎಲ್ಲಿಗೂ ಹೊರಟಿದ್ದಾರೆ. ವೈಷ್ಣವಿ ಅವರಿಗೆ ಏನಾಯ್ತು ಎಂದು ನೀವು ಯೋಚನೆ ಮಾಡುತ್ತಿರಬಹುದು. ಇದು ವೈಷ್ಣವಿ ಅವರು ಅಭಿನಯಿಸುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಆಗಿದೆ. ಈ ಸಿನಿಮಾ ಹೆಸರು, ‘ಬೆಳ್ಳಿ ಚುಕ್ಕಿ, ಹಳ್ಳಿ ಹಕ್ಕಿ’. ಈ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ ವೈಷ್ಣವಿ ಗೌಡ. ಈ ಸಿನಿಮಾದ ನಾಯಕ ಮತ್ತು ನಿರ್ದೇಶಕ ಮಹೇಶ್ ಗೌಡ. ಲಂಡನ್ ನಲ್ಲಿ ಸಿನಿಮಾ ಬಗ್ಗೆ ಕಲಿತು ಬಂದಿರುವ ಮಹೇಶ್ ಗೌಡ ಅವರು, ಮೊದಲಿಗೆ ರಾಜ್ ಬಿ ಶೆಟ್ಟಿ ನಟನೆಯ ಮಹಿರ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ಎರಡನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಅವರೇ ನಾಯಕನಾಗಿದ್ದಾರೆ. ಹಾಗೂ ಈ ಸಿನಿಮಾ ಶುರುವಾಗಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಕಾರಣ. ನಿರ್ದೇಶಕರು ಹೇಳುವ ಹಾಗೆ, ಕಳೆದ ವರ್ಷ ಅವರಿಗೆ ಅಪ್ಪು ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದಾಗ, ಅಪ್ಪು ಅವರೊಡನೆ ಸಿನಿಮಾ ಕಥೆ ಹೇಳಿದ್ದರಂತೆ. ಅದನ್ನು ಕೇಳಿ ಅಪ್ಪು ಅವರು, ಕಥೆ ಚೆನ್ನಾಗಿದೆ, ನೀವೇ ಹೀರೋ ಆದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರಂತೆ. ಅದೇ ರೀತಿ ಮಹೇಶ್ ಗೌಡ ಅವರೇ ಹೀರೋ ಆಗಿದ್ದಾರೆ. ಈ ಸಿನಿಮಾದಲ್ಲಿ ನಾಯಕನಿಗೆ ತೊನ್ನು ಸಮಸ್ಯೆ ಇರುತ್ತದೆ. ಆ ರೀತಿಯ ಸಮಸ್ಯೆ ಇರುವ ಹುಡುಗ ಪಕ್ಕದ ಹಳ್ಳಿಯ ಮುದ್ದಾದ ಹುಡುಗಿಯನ್ನು ಇಷ್ಟಪಡುತ್ತಾನೆ. ಇಂತಹ ಸಮಸ್ಯೆ ಇದ್ದರು ಸಹ ಆಕೆ ಹುಡುಗನನ್ನು ಇಷ್ಟಪಟ್ಟು ಮದುವೆಯಾಗುತ್ತಾಳೆ, ಇದಕ್ಕೆ ಕಾರಣ ಏನು ಎನ್ನುವ ಗೊಂದಲ ಹುಡುಗನಿಗೆ. ಕಾರಣ ಏನಿರಬಹುದು ಎನ್ನುವುದು ಹೀರೋ ತಿಳಿದುಕೊಳ್ಳುವ ಪ್ರಯತ್ನವೇ ಸಿನಿಮಾ ಕಥೆ. ಈ ಸಿನಿಮಾದಲ್ಲಿ ವೈಷ್ಣವಿ ಅವರದ್ದು ಮುದ್ದಾದ ಹಳ್ಳಿ ಹುಡುಗಿಯ ಪಾತ್ರ. ಕಥೆ ಕೇಳುತ್ತಿದ್ದ ಹಾಗೆಯೇ ಬಹಳ ಸಂತೋಷದಿಂದ ಒಪ್ಪಿಕೊಂಡರಂತೆ ವೈಷ್ಣವಿ ಗೌಡ. ಪುನೀತ್ ರಾಜ್ ಕುಮಾರ್ ಅವರ ಹಾರೈಕೆಯ ಮತ್ತು ಆಶೀರ್ವಾದದ ಜೊತೆಗೆ ಸಿನಿಮಾ ಶುರುವಾಗಿದೆ. ಮಲೆನಾಡಿನ ಸುತ್ತಮುತ್ತಾ ಸಿನಿಮಾ ಚಿತ್ರೀಕರಣ ನಡೆಯಲಿದೆಯಂತೆ. ಇದೊಂದು ಸಮಸ್ಯೆ ಬಗ್ಗೆ ಆಧರಿಸಿ ಮಾಡಿರುವ ಕಥೆ ಆಗಿದ್ದು, ಈ ರೀತಿಯ ಕಥೆಯನ್ನು ರೊಮ್ಯಾಂಟಿಕ್ ಕಾಮಿಡಿ ಜಾನರ್ ನಲ್ಲಿ ತೋರಿಸಲಾಗುತ್ತಿದೆ. ನಾಯಕ ಮತ್ತು ನಿರ್ದೇಶಕ ಆಗಿರುವ ಮಹೇಶ್ ಅವರಿಗೆ ನಿಜ ಜೀವನದಲ್ಲೂ ಅದೇ ಸಮಸ್ಯೆ ಇರುವ ಕಾರಣ ನ್ಯಾಚುಲರ್ ಆಗಿ ಮೂಡಿಬರಲಿದೆಯಂತೆ. Post Views: 98 Post navigation ಶಿವನ ಆಶೀರ್ವಾದ ಈ ವಾರ ಈ ರಾಶಿಗಳ ಮೇಲೆ.. ಕನ್ನಡ ಮತ್ತು ತೆಲುಗು ಕಲಾವಿದರ ನಂತರ ತಮಿಳು ಹುಡುಗನ ಜೊತೆಗೆ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ.. ಶಾಕ್ ಆದ ನೆಟ್ಟಿಗರು.. Latest from ಸುದ್ದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ.. ಕನ್ನಡ ಕಿರುತೆರೆ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷಟು ಕಲಾವಿದರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು…
‘ಪತ್ಮಂದೆ’ ಲೇಖಕ ಅನು ಬೆಳ್ಳೆ ಅವರ ಕಿರುಕಾದಂಬರಿ. ಒಂದು ಹಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಅದರ ಸುತ್ತ ನಡೆಯುವ ಸ್ಥಳೀಯ ರಾಜಕೀಯ ಹುತ್ತದ ರಹಸ್ಯ ವಿದ್ಯಮಾನಗಳನ್ನು ಕುತೂಹಲ, ಆತಂಕಗಳ ಮೂಲಕ ತೆರೆಯುತ್ತಾ ಹೋಗುವ ಒಂದು ವಿಶಿಷ್ಟ ಕಥನ. ಪಾರಿಜಾತಳ ಆತಂಕ ಮತ್ತು ಕುತೂಹಲದಿಂದ ಆರಂಭವಾಗುವ ಕಾದಂಬರಿಯು ಅಚ್ಚಪ್ಪಣ್ಣನ ಬಗೆಗಿನ ಅವಳ ಒಲವಿನ ಅಪೇಕ್ಷೆಯ ಜೊತೆಗೆ ಆಶಾ ಕಾರ್ಯಕರ್ತೆ ಗುಲಾಬಿ ಮತ್ತು ಅಚ್ಚಪ್ಪನ ನಡುವಿನ ಸಂಬಂಧದ ಅನುಮಾನದೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಒಂದು ಸರಳ ತ್ರಿಕೋನ ಪ್ರೇಮದ ಕತೆಯಾಗಬಹುದಾಗಿದ್ದ ಕೃತಿಯನ್ನು ಅನು ಬೆಳ್ಳೆಯವರು ಸಾಮಾಜಿಕ ಕಳಕಳಿಯ ಕಥನವನ್ನಾಗಿ ರೂಪಾಂತರಿಸಿದ್ದಾರೆ. ಅನು ಬೆಳ್ಳೆ ಅವರರ ಕಾದಂಬರಿಯ ಕಥನ ಶೈಲಿಯಲ್ಲಿ ಆಡುನುಡಿಯ ನುಡಿಗಟ್ಟುಗಳು, ದೇಸಿ ಬದುಕಿನ ನೈಜ ಚಿತ್ರಣಗಳು, ವ್ಯಂಗ್ಯ ವಿಡಂಬನೆಯ ಲಹರಿಯ ವರ್ಣನೆಗಳು, ಭಾವನೆಗಳನ್ನು ಚಿತ್ರಕ ಭಾಷೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡುವ ವಿವರಗಳು ಗಮನ ಸೆಳೆಯುತ್ತವೆ. About the Author ಅನು ಬೆಳ್ಳೆ (ರಾಘವೇಂದ್ರರಾವ) ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...
AYVM - Articles: ಅಷ್ಟಾಕ್ಷರೀ​ - 11 ಬುದ್ಧಿನಾಶಾತ್ ಪ್ರಣಶ್ಯತಿ (Astakshara Darshana 11 Buddhinashat Pranashyati) AYVM - Articles Sunday, May 22, 2022 ಅಷ್ಟಾಕ್ಷರೀ​ - 11 ಬುದ್ಧಿನಾಶಾತ್ ಪ್ರಣಶ್ಯತಿ (Astakshara Darshana 11 Buddhinashat Pranashyati) ಲೇಖಕರು : ಡಾ|| ಕೆ. ಎಸ್. ಕಣ್ಣನ್ (ಪ್ರತಿಕ್ರಿಯಿಸಿರಿ lekhana@ayvm.in) ತಾನು ಚೆನ್ನಾಗಬೇಕು - ಎಂಬ ಆಸೆ ಯಾರಿಗಿಲ್ಲ? ಏನೋ ದುಃಖಾತಿರೇಕವಾದಾಗ ಬದುಕೇ ಬೇಡವೆನಿಸಿ, ಸಾಯುವ ಆಸೆ ಹುಟ್ಟಿಕೊಳ್ಳಬಹುದು. ಅದರೆ ಆ ಆಸೆ ಬಹುಮಂದಿಗೆ ಬಹುಕಾಲ ನಿಲ್ಲುವುದಿಲ್ಲ, ನಿಲ್ಲುವುದಲ್ಲ. ತೀರಾ ಬುದ್ಧಿಗೆಟ್ಟವರು, ಎಷ್ಟೋ ಕೋಟಿಗೊಬ್ಬರು, ಆ ದೃಢಸಂಕಲ್ಪವನ್ನು ದೀರ್ಘಕಾಲ ಏಕರೂಪವಾಗಿ ಉಳಿಸಿಕೊಂಡಾರು. ಅಂತಹವರನ್ನು ಬಿಟ್ಟರೆ, ಸಾಯಬೇಕೆಂದುಕೊಂಡವರಿಗೆ ಸರಿಯಾಗಿ ಸಾಂತ್ವನ ಹೇಳುವವವರು ಸಮಯಕ್ಕೆ ಸರಿಯಾಗಿ ಸಿಕ್ಕರೆ, ಸಾಯುವ ಸಂಕಲ್ಪವು ಸಡಿಲವಾಗುವುದು. ಆದರೆ ಬುದ್ಧಿ ಹಾಳಾದವರಿಗೆ ಮಾತ್ರ ಹಿತೈಷಿಗಳ ಮಾತೂ ಪಥ್ಯವಲ್ಲ: ರಾವಣನಿಗೆ ವಿಭೀಷಣನ ನುಡಿ ಹಿಡಿಸಲಿಲ್ಲ; ವಾಲಿಗೆ ತಾರೆಯ ಮಾತು ರುಚಿಸಲಿಲ್ಲ. ಬುದ್ಧಿ ಕೆಡುವುದು ಎಂದರೇನು? ಅದು ಹಾಗೆ ಆಗುವುದು ಯಾವಾಗ, ಏತಕ್ಕೆ? - ಎಂಬ ಪ್ರಶ್ನೆಗಳು ಬರುವಂತಹವೇ. "ನನ್ನ ರೂಪವು ಕೆಡಲಿ" "ನನ್ನ ಆರೋಗ್ಯವು ಹೋಗಲಿ" ಎಂದು ಯಾರಿಗಾದರೂ ಬಯಕೆ ಬಂದೀತೇ? ಅವೆರಡಕ್ಕಿಂತಲೂ ಮನಸ್ಸಿನ ಆರೋಗ್ಯ ಬಹುಮುಖ್ಯವೇ ಸರಿ: ದೈಹಿಕರೋಗಗಳಿಗೆ ಪರಿಹಾರಗಳು ಸಿಕ್ಕಾವು; ಆದರೆ ಮನಸ್ಸಿಗೋ ಬುದ್ಧಿಗೋ ರೋಗ ಹತ್ತಿತೆಂದರೆ ಅದಕ್ಕೆ ಪರಿಹಾರವನ್ನು ಕೊಡುವುದು ಯಾರಿಗೂ ಸುಲಭವಲ್ಲ. ಸ್ವಾಸ್ಥ್ಯವೆಂದರೆ ಆರೋಗ್ಯವೆಂಬುದು ಎಲ್ಲರಿಗೂ ತಿಳಿದಿರುವುದೇ. ಆದರೂ ಆ ಪದಗಳ ಮೂಲಕ್ಕೇ ಹೋಗಿ ನೋಡಿದರೆ ಭೇದವು ಗೋಚರವಾಗುತ್ತದೆ. ಯಾವನಿಗೆ ಏನೂ ರೋಗವಿಲ್ಲವೋ ಅಂತಹವನು "ಅರೋಗ". ಅರೋಗನ ಸ್ಥಿತಿಯೇ (ಅಥವಾ ಭಾವವೇ) ಅರೋಗತೆ. ಅರೋಗತೆಯೇ "ಆರೋಗ್ಯ": ಆರೋಗ್ಯವೆಂದರೆ ರೋಗಗಳಿಲ್ಲದಿರುವಿಕೆ. ಸ್ವಾಸ್ಥ್ಯವು ಅಷ್ಟುಮಾತ್ರವಲ್ಲ. ಸ್ವಸ್ಥನ ಸ್ಥಿತಿಯು (ಅಥವಾ ಭಾವವು) ಸ್ವಾಸ್ಥ್ಯ. ಸ್ವಸ್ಥನಾರು? - ಎಂಬ ಪ್ರಶ್ನೆಗೆ ಸುಶ್ರುತನಿತ್ತ ಉತ್ತರವನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಜ್ಞಾಪಿಸುತ್ತಿದ್ದರು. ಶರೀರದಲ್ಲಿ (ವಾತ-ಪಿತ್ತ-ಕಫಗಳೆಂಬ ಮೂರು) 'ದೋಷ'ಗಳಿರುತ್ತವೆ; ಅವು 'ಸಮ'ನಾಗಿರಬೇಕು. ಹಾಗೆಯೇ ಶರೀರದಲ್ಲಿಯ ಅಗ್ನಿ-ಧಾತುಕ್ರಿಯೆ-ಮಲಕ್ರಿಯೆಗಳೂ ಸಮನಾಗಿರಬೇಕು. ಮತ್ತು ಇವೆಲ್ಲಕ್ಕೂ ಆಧಾರಭೂತವಾಗಿ, ಆತ್ಮ-ಇಂದ್ರಿಯ-ಮನಸ್ಸುಗಳು ಪ್ರಸನ್ನವಾಗಿರಬೇಕು - ಎಂದು ಆ ಲಕ್ಷಣವು ಹೇಳುತ್ತದೆ. (ಇಲ್ಲಿಯ ಪಾರಿಭಾಷಿಕವಿಷಯಕ್ಕೆ ಬಹುವಿಸ್ತೃತವಾದ ವಿವರಣೆಯೇ ಬೇಕಲ್ಲವೇ?) ಇಷ್ಟೆಲ್ಲ ಲೆಕ್ಕಾಚಾರಗಳಿರುವುದರಿಂದಲೇ, "ಆಸ್ಪತ್ರೆಗೆ ಸೇರಿಲ್ಲದವರೆಲ್ಲ ಸ್ವಸ್ಥರೆಂದೇನಲ್ಲ" ಎಂಬುದಾಗಿ ಶ್ರೀರಂಗಮಹಾಗುರುಗಳು ವಿನೋದವಾಗಿ ಪ್ರತಿಪಾದಿಸುತ್ತಿದ್ದರು. ಇಲ್ಲಿ ನಮಗೆ ಕೊನೆಯ ಅಂಶ ಪ್ರಸ್ತುತ. ಆತ್ಮನ ಅಥವಾ ಮನಸ್ಸಿನ ಪ್ರಸನ್ನತೆಯೆಂದರೇನು? ಹಾಗೆಯೇ, ಬುದ್ಧಿಯು ನಾಶವಾಗುವುದೆಂತು? - ಎಂಬ ಎರಡೂ ಪ್ರಶ್ನೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವನ್ನು ಕಾಣಬಹುದು. ಜೀವನವು ಅತ್ಯಂತಸಂಕೀರ್ಣವೆಂಬುದು ನಿರ್ವಿವಾದ. ಆದರೆ ಕಾರ್ಯ-ಕಾರಣ-ಭಾವವು ಮಾತ್ರ ಎಲ್ಲೆಡೆಯೂ ಇರುವುದೇ: ಪ್ರತಿಯೊಂದು ಕಾರ್ಯದ ಹಿಂದೆಯೂ ಕಾರಣವೊಂದು ಇದ್ದೇ ಇರುವುದು. ಪ್ರತಿಯೊಂದು ಕಾರಣದಿಂದಲೂ ಏನೋ ಪರಿಣಾಮವೊಂದು ಆಗಿಯೇ ತೀರುವುದು. ಒಂದೆಂದರೆ ಒಂದೇ ಅಲ್ಲ. ಒಂದು ಕಾರ್ಯದ ಹಿಂದೆ ಹಲವು ಕಾರಣಗಳಿದ್ದಾವು; ಒಂದು ಕಾರಣದಿಂದ ಹಲವು ಕಾರ್ಯಗಳು ಜನಿಸಿಯಾವು. ಆದರೆ ಕಾರ್ಯ-ಕಾರಣ-ಭಾವದ ಸರಪಣಿಯು ಮಾತ್ರ ಸರ್ವವ್ಯಾಪಿ. ಒಂದರ್ಥದಲ್ಲಿ ಇಡೀ ವಿಜ್ಞಾನದ ಸಾರಾಂಶವೇ ಇದು. ಬುದ್ಧಿನಾಶದ ಹಿಂದೆಯಿರುವ ಕಾರ್ಯಕಾರಣಭಾವ-ಶೃಂಖಲೆಯನ್ನು ಗೀತೆಯು ಸುಭಗವಾಗಿ ತೋರಿಗೊಟ್ಟಿದೆ: "[ಇಂದ್ರಿಯ]ವಿಷಯಗಳ ಧ್ಯಾನದಿಂದಾಗಿ ಅವುಗಳ ಬಗ್ಗೆ ಒಂದು ಸಂಗವು (ಎಂದರೆ ಆಸಕ್ತಿಯು) ಉಂಟಾಗುತ್ತದೆ. ಉತ್ಕಟವಾದ ಸಂಗದಿಂದ ಕಾಮವು (ಎಂದರೆ ಬಯಕೆಯು) ಜನಿಸುತ್ತದೆ (ಎಂದರೆ, ಬಯಸಿದ್ದು ಬೇಕೇಬೇಕೆನಿಸುತ್ತದೆ); [ಬಯಕೆಯೀಡೇರದಿದ್ದಾಗ] ಅದು ಕ್ರೋಧಕ್ಕೆ ಎಡೆಮಾಡಿಕೊಡುತ್ತದೆ; ಕ್ರೋಧದಿಂದ ಸಂಮೋಹವು (ಎಂದರೆ ಸರಿ-ತಪ್ಪುಗಳು ಗೊತ್ತಾಗದಿರುವುದು) ಉಂಟಾಗುತ್ತದೆ; ಸಂಮೋಹದಿಂದ ಸ್ಮೃತಿಯ ಭ್ರಮೆಯಾಗುತ್ತದೆ (ಎಂದರೆ ಶಾಸ್ತ್ರದಿಂದಲೋ ಹಿರಿಯರಿಂದಲೋ ಪಡೆದ ಸದುಪದೇಶವು ಜಾರುತ್ತದೆ: ಗೊತ್ತಿದ್ದ ಸರಿದಾರಿಯೂ ಮರೆಯುತ್ತದೆ); ಸ್ಮೃತಿಭ್ರಂಶದಿಂದ ಬುದ್ಧಿನಾಶವಾಗುತ್ತದೆ (ಎಂದರೆ, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನೆಯು ಹಾಳಾಗುತ್ತದೆ); ಹಾಗೂ ಕೊನೆಯದಾಗಿ, ಬುದ್ಧಿನಾಶವಾದವನು ಪೂರ್ಣವಾಗಿ ಹಾಳಾಗುತ್ತಾನೆ. ಹೀಗೆ ಇಲ್ಲಿ ಎಂಟು ಘಟ್ಟಗಳನ್ನೂ, ಒಂದರಿಂದ ಮತ್ತೊಂದು ಮತ್ತೊಂದರಿಂದ ಮಗದೊಂದು ಜನಿಸುವುದನ್ನೂ, ಕಾರ್ಯ-ಕಾರಣಗಳ ಕೊಂಡಿಗಳಾಗಿ ಕಾಣಿಸಿದೆ. ಇಷ್ಟು ಮಾತ್ರವಲ್ಲದೆ, ಮತ್ತು ಇದಕ್ಕೆ ಪ್ರತಿಯಾಗಿ, ಸಂಕ್ಷೇಪವಾಗಿ ಪ್ರಸನ್ನತೆಯನ್ನು ಪಡೆಯುವ ಬಗೆಯನ್ನೂ ಅಲ್ಲೇ ತಿಳಿಸಿದೆ. ಇಂದ್ರಿಯವಿಷಯಗಳನ್ನೇ ರಾಗದ್ವೇಷಗಳಿಲ್ಲದ, ಹಾಗೂ ತನ್ನ ವಶದಲ್ಲೇ ಇರುವ, ಇಂದ್ರಿಯ-ಮನಸ್ಸುಗಳಿಂದ ಅನುಭವಿಸುತ್ತಿರುವವನು ಪ್ರಸಾದವನ್ನು ಹೊಂದುವನು - ಎಂದೂ ತಿಳಿಸಿದೆ. (ಪ್ರಸಾದವೆಂದರೆ ಪ್ರಸನ್ನತೆಯೇ). ಅಂತೂ ಇವಿಷ್ಟರ ಒಟ್ಟಾರೆ ನೋಟವನ್ನು ಹೀಗೆ ಹೇಳಬಹುದು. ಇಂದ್ರಿಯಗಳಿಂದ ನಾನಾಸುಖಗಳನ್ನು ಪಡೆಯುವುದೇ ದೋಷವೆಂದಲ್ಲ. ಸಂಗವೇ ತಪ್ಪಲ್ಲ. ಇಂದ್ರಿಯಗಳ ಮೇಲೆ ಹಿಡಿತವಿದ್ದಲ್ಲಿ ತೊಂದರೆಯಿಲ್ಲ. ಬದಲಾಗಿ, ಹಾಗಿಲ್ಲದಾದಾಗ, ಪರಿಣಾಮಪರಂಪರೆಯಿಂದ ಬುದ್ಧಿನಾಶವೂ, ಅದರಿಂದಾಗಿ ಅಧೋಗತಿಯೂ, ಸಿದ್ಧವೇ.
ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಶನಿಯು ಮಕರ ರಾಶಿಯಲ್ಲಿರುವುದರಿಂದ ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರಿಗೆ ಈ ಸಮಯದಲ್ಲಿ ಶನಿಯ ಅರ್ಧಶತಕ ನಡೆಯುತ್ತಿದೆ. ಇದಲ್ಲದೇ ಮಿಥುನ ಮತ್ತು ತುಲಾ ರಾಶಿಯವರ ಮೇಲೆ ಧೈಯ ಪ್ರಭಾವವಿದೆ. ಶನಿಯ ಅರ್ಧಶತಕವು 24 ಜನವರಿ 2022 ರಿಂದ ಕುಂಭ ರಾಶಿಯ ಜನರ ಮೇಲೆ ಇರುತ್ತದೆ, ಇದು 03 ಜೂನ್ 2027 ರವರೆಗೆ ಇರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಒಂದು ಗ್ರಹವು ತನ್ನ ರಾಶಿ ಅಥವಾ ಚಲನೆಯನ್ನು ಬದಲಾಯಿಸಿದಾಗ, ಅದು ಖಂಡಿತವಾಗಿಯೂ ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಶನಿ ಗ್ರಹವು ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ಪ್ರತಿವಿಷ ಮತ್ತು ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಯಾವುದೇ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತಾನೆ ಮತ್ತು ಈ ಸಮಯದಲ್ಲಿ ಅದು ಹಿಮ್ಮೆಟ್ಟುವಿಕೆ ಮತ್ತು ಕರುಣಾಜನಕವಾಗಿರುತ್ತಾನೆ. ಶನಿಯು ಜುಲೈ 12 ರಂದು ಮಕರ ರಾಶಿಯಲ್ಲಿ ಹಿಮ್ಮೆಟ್ಟಿದನು ಮತ್ತು ನಂತರ ಅಕ್ಟೋಬರ್ 23 ರಂದು ಮಕರ ರಾಶಿಯಲ್ಲಿ ಚಲಿಸಲು ಪ್ರಾರಂಭಿಸುತ್ತಾನೆ. ಒಂದು ಗ್ರಹವು ಸಾಗುತ್ತಿರುವಾಗ, ಗ್ರಹಗಳು ಈಗ ಸರಳ ರೇಖೆಯಲ್ಲಿ ಚಲಿಸುತ್ತಿವೆ ಎಂದರ್ಥ. ಗ್ರಹಗಳ ಪಥ ಸಂಚಲನದಿಂದಾಗಿ ಎಲ್ಲಾ ರಾಶಿಚಕ್ರದ ಮೇಲೆ ಇದರ ಪರಿಣಾಮ ಕಂಡುಬರುತ್ತದೆ. ಈಗ ಮಕರ ರಾಶಿಯಲ್ಲಿ ಶನಿ ಸಂಕ್ರಮಣದಿಂದಾಗಿ ಕೆಲವರಿಗೆ ಸಾಡೇ ಸತಿ, ಧೈಯದಿಂದ ಮುಕ್ತಿ ಸಿಗಲಿದೆ. ಶನಿಯು ದಾರಿಯಲ್ಲಿದ್ದರೆ ಯಾವ ರಾಶಿಯವರಿಗೆ ಅದರ ಲಾಭ ಸಿಗಲಿದೆ ಎಂದು ತಿಳಿಯೋಣ. ಈ ರಾಶಿಗಳು ಶನಿ ಸಾಡೆ ಸತಿ ಮತ್ತು ಧೈಯಾದಿಂದ ಸ್ವಾತಂತ್ರ್ಯವನ್ನು ಪಡೆಯುತ್ತವೆ ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಶನಿಯು ಮಕರ ರಾಶಿಯಲ್ಲಿರುವುದರಿಂದ ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರಿಗೆ ಈ ಸಮಯದಲ್ಲಿ ಶನಿಯ ಅರ್ಧಶತಕ ನಡೆಯುತ್ತಿದೆ. ಇದಲ್ಲದೇ ಮಿಥುನ ಮತ್ತು ತುಲಾ ರಾಶಿಯವರ ಮೇಲೆ ಧೈಯ ಪ್ರಭಾವವಿದೆ. ಶನಿಯ ಅರ್ಧಶತಕವು 24 ಜನವರಿ 2022 ರಿಂದ ಕುಂಭ ರಾಶಿಯ ಜನರ ಮೇಲೆ ಇರುತ್ತದೆ, ಇದು 03 ಜೂನ್ 2027 ರವರೆಗೆ ಇರುತ್ತದೆ. ವೈದಿಕ ಪಂಚಾಂಗದ ಪ್ರಕಾರ, ಜನವರಿ 17, 2023 ರಿಂದ, ತುಲಾ ಮತ್ತು ಮಿಥುನ ರಾಶಿಯ ಜನರು ಶನಿಯ ಧೈಯಾದಿಂದ ಮುಕ್ತರಾಗುತ್ತಾರೆ. ಇದಲ್ಲದೇ ಧನು ರಾಶಿಯವರಿಗೆ ಸಾಡೇ ಸತಿಯಿಂದ ಮುಕ್ತಿ ಸಿಗಲಿದೆ. ಈ ರಾಶಿಚಕ್ರ ಚಿಹ್ನೆಗಳಿಂದ ಶನಿಯ ಅರ್ಧಶತಕವನ್ನು ತೊಡೆದುಹಾಕಿದ ನಂತರ, ಕೆಲಸದಲ್ಲಿ ಯಶಸ್ಸು ಪ್ರಾರಂಭವಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಗೌರವ ಹೆಚ್ಚಾಗುವುದು. ಮುಂದಿನ ವರ್ಷ ಕುಂಭ ರಾಶಿಯಲ್ಲಿ ಶನಿ ಸಂಕ್ರಮಣದಿಂದ ಮೀನ ರಾಶಿಯವರಿಗೆ ಸಾಡೇ ಸತಿಯ ಮೊದಲ ಘಟ್ಟ ಪ್ರಾರಂಭವಾಗಲಿದ್ದು, ಧನು ರಾಶಿಯವರಿಗೆ ಸಾಡೇ ಸತಿಯಿಂದ ಮುಕ್ತಿ ಸಿಗಲಿದೆ. 2023ರ ಜನವರಿಯಿಂದ ಕುಂಭ, ಮಕರ, ಮೀನ ರಾಶಿಗಳಲ್ಲಿ ಶನಿಯ ಸಾಡೇ ಸತಿ ಆರಂಭವಾಗಲಿದೆ. ಅದೇ ಸಮಯದಲ್ಲಿ, 2023 ರಲ್ಲಿ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರ ಮೇಲೆ ಶನಿಯ ಧೈಯಾ ಪ್ರಾರಂಭವಾಗಲಿದೆ. ಶನಿ ಸಾಡೇ ಸತಿಯ ಪರಿಣಾಮವನ್ನು ಕಡಿಮೆ ಮಾಡುವ ಪರಿಹಾರಗಳು : ಶನಿ ದೋಷ ಮತ್ತು ಸಾಡೇಸತಿಯ ಪರಿಣಾಮವನ್ನು ಕಡಿಮೆ ಮಾಡಲು, ಶನಿ ಬೀಜ ಮಂತ್ರವನ್ನು ಪಠಿಸಿ ‘ಓಂ ಪ್ರಾಂ ಪ್ರೇಂ ಪ್ರೌನ್ ಸಸ್ ಶನಯೇ ನಮಃ’. 1. ಶನಿವಾರದಂದು ಹನುಮಂತನಿಗೆ ಎಣ್ಣೆ ಹಾಕಿ ಲಡ್ಡುಗಳನ್ನು ಅರ್ಪಿಸಿ. 2. ಶನಿವಾರದಂದು ಎಳ್ಳು, ಎಣ್ಣೆ, ಕಪ್ಪು ಉರಡ್, ಕಪ್ಪು ಬಟ್ಟೆ, ಕಬ್ಬಿಣ ಮತ್ತು ಸಾಸಿವೆ ಎಣ್ಣೆಯನ್ನು ದಾನ ಮಾಡುವುದು ಶುಭ.
ಬೆಂಗಳೂರು: ಇಂದು ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯತ್ತ ಸಾಗಿದೆ. ಕಳೆದ 24 ಗಂಟೆಗಳಲ್ಲಿ 3,604 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 28,34,630 ಕ್ಕೆ ಏರಿಕೆಯಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 788 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದರೆ, 11 ಜನರು ಬಲಿಯಾಗಿದ್ದಾರೆ. ಇಲ್ಲಿಯವರೆಗಿನ ಬೆಂಗಳೂರಿನ ಒಟ್ಟಾರೆ ಸೋಂಕಿತರ ಸಂಖ್ಯೆ 12,11,430 ತಲುಪಿದೆ. ರಾಜ್ಯದಲ್ಲಿ ಇಂದು 89 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದಲ್ಲದೇ 7,699 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನೂ ರಾಜ್ಯದಲ್ಲಿ 1,01,042 ಸಕ್ರಿಯ್ಯ ಸೋಂಕಿತರು ಇದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ತಿಳಿಸಿದೆ. ಇದನ್ನೂ ಓದಿರಿ: ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಿ-ಕೇಂದ್ರ ಸರ್ಕಾರ ಜಿಲ್ಲಾವಾರು ಸೋಂಕಿತರ ಸಂಖ್ಯೆ: ಬಾಗಲಕೋಟೆ 7, ಬಳ್ಳಾರಿ 26, ಬೆಳಗಾವಿ 143, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 788, ಬೀದರ್ 8, ಚಾಮರಾಜನಗರ 54, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 126, ಚಿತ್ರದುರ್ಗ 22, ದಕ್ಷಿಣ ಕನ್ನಡ 454, ದಾವಣಗೆರೆ 118, ಧಾರವಾಡ 46, ಗದಗ 18, ಹಾಸನ 322, ಹಾವೇರಿ 13, ಕಲಬುರಗಿ 36, ಕೊಡಗು 115, ಕೋಲಾರ 101, ಕೊಪ್ಪಳ 9, ಮಂಡ್ಯ 109, ಮೈಸೂರು 478, ರಾಯಚೂರು 19, ರಾಮನಗರ 15, ಶಿವಮೊಗ್ಗ 177, ತುಮಕೂರು 116, ಉಡುಪಿ 97, ಉತ್ತರ ಕನ್ನಡ 57, ವಿಜಯಪುರ 9, ಯಾದಗಿರಿ 4 ಸೋಂಕಿತರು ಪತ್ತೆಯಾಗಿದ್ದಾರೆ.
ಆಪರೇಷನ್ ಕಮಲ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷ ತನ್ನ ಆರೋಪಕ್ಕೆ ಸಾಕ್ಷಿ ನೀಡುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷ ಚಂಡೀಗಢದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದೆ. ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿದ್ದಾರೆ. ಆಪ್ ಪ್ರಧಾನ ಕಚೇರಿಯ ಹೊರಗೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಟಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಅವರ ಮೇಲೆ ಜಲ ಫಿರಂಗಿಗಳನ್ನು ಬಳಸಿ ಆ ಯತ್ನವನ್ನು ವಿಫಲಗೊಳಿಸಲು ಪೊಲೀಸರು ಯಶಸ್ವಿಯಾದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಅಶ್ವನಿ ಶರ್ಮಾ ಮತ್ತು ಸುನೀಲ್ ಜಾಖರ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್‌ ಕಮಲ ನಡೆಸಿದೆ ಎಂದು ಆಪ್‌ ಆರೋಪಿಸಿತ್ತು. ಆ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪ್ರತಿಭಟನೆಗೆ ಕರೆ ನೀಡಿದ್ದರು. ಪರಿಣಾಮ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪಂಜಾಬ್‌ನ ಬಿಜೆಪಿ ನಿಯೋಗವು ಕಳೆದ ವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ, ಆಪ್‌ ಸುಳ್ಳು ಆರೋಪದ ವಿರುದ್ಧ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಕೋರಿತ್ತು. "ಅರವಿಂದ್ ಕೇಜ್ರಿವಾಲ್ ಆಧಾರರಹಿತ ಮತ್ತು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಿಡಿಗೇಡಿತನ ಮಾಡುತ್ತಿದ್ದಾರೆ" ಎಂದು ಹೇಳಿತ್ತು. ಇದೀಗ ಸಾಕ್ಷಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದೆ. ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ | ಕಮಲ್ ನಾಥ್ ಸ್ಪರ್ಧೆ? ಹಿಗ್ಗುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ! ಸೆ.27ರಂದು ವಿಶೇ‍ಷ ಅಧಿವೇಶನ ರಾಜ್ಯ ವಿಧಾನಸಭೆಯ ವಿಶೇ‍ಷ ಅಧಿವೇಶನ ರದ್ದಾಗಿರುವ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸೆ.27ರಂದು ಮತ್ತೆ ಅಧಿವೇಶನ ಕರೆಯಲಾಗುವುದು ಎಂದು ಘೋಷಿಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಭಗವಂತ್ ಮಾನ್ ತಮ್ಮ ನಿರ್ಧಾರವನ್ನು ಹೊರ ಹಾಕಿದ್ದಾರೆ. ಸರ್ವಾನುಮತದಿಂದ ಅಧಿವೇಶನ ಕರೆಯುವುದಾಗಿ ಹೇಳಿದ್ದಾರೆ. ವಿಶೇ‍ಷ ಅಧಿವೇಶನ ಆದೇಶ ಹಿಂತೆಗೆದುಕೊಳ್ಳುವ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಭಗವಂತ್ ಮಾನ್ ತಿಳಿಸಿದ್ದಾರೆ. ಪಂಜಾಬ್‌ನ ಆಪ್ ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ವಿಶ್ವಾಸ ನಿರ್ಣಯಕ್ಕೆ ಕರೆಯಲಾಗಿದ್ದ ಗುರುವಾರದ ಅಧಿವೇಶನದ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ. ಸದನದ ನಿಯಮಗಳು ಕೇವಲ ವಿಶ್ವಾಸ ಮತಯಾಚನೆಗೆ ಅಧಿವೇಶನ ಕರೆಯಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜ್ಯಪಾಲ ನಿರ್ಧಾರವನ್ನು ಸ್ವಾಗತಿಸಿವೆ.
Kannada News » Sports » munita prajapati journey who set new national record with in 20km women race walk in national games National Games: ನ್ಯಾಷನಲ್ ಗೇಮ್ಸ್​ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ದಿನಗೂಲಿ ನೌಕರನ ಮಗಳು..! National Games 2022: ಮುನಿತಾ ಪ್ರಜಾಪತಿ 2018 ರ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದರೆ, ಎರಡು ವರ್ಷಗಳ ಹಿಂದೆ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 10 ಕಿ.ಮೀ ವೇಗದ ನಡಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. TV9kannada Web Team | Edited By: pruthvi Shankar Sep 30, 2022 | 4:33 PM ಕರೆಂಟ್ ಶಾಕ್​ನಿಂದ ಬಲಗೈ ಕಳೆದುಕೊಂಡರೂ ಕೂಲಿ ಕೆಲಸ ಬಿಡದ ತಂದೆ. ನೆರೆಹೊರೆಯವರ ಬಳಿ ಸಾಕಷ್ಟು ಸಾಲ ಮಾಡಿದ ತಾಯಿ. ಈ ಇಬ್ಬರ ಹೋರಾಟಕ್ಕೆ ಪ್ರತಿಫಲವಾಗಿ ಮಗಳು ಇದೀಗ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸುವ ಮೂಲಕ ತಮ್ಮ ಪೋಷಕರ ಹೋರಾಟದ ಕಥೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ವಾಸ್ತವವಾಗಿ ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ (National Games 2022) ಉತ್ತರ ಪ್ರದೇಶದ ಮುನಿತಾ ಪ್ರಜಾಪತಿ ಎಂಬ ಯುವತಿ 20 ಕಿಮೀ ಮಹಿಳೆಯರ ವೇಗದ ನಡಿಗೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ನಿನ್ನೆಯಿಂದ ಆರಂಭವಾಗಿರುವ ನ್ಯಾಷನಲ್​ ಗೇಮ್ಸ್​ನಲ್ಲಿ 20 ಕಿಮೀ ಮಹಿಳೆಯರ ವೇಗದ ನಡಿಗೆಯಲ್ಲಿ ಸ್ಪರ್ಧಿಸಿದ್ದ ಮುನಿತಾ 1 ಗಂಟೆ 38 ನಿಮಿಷ 20 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಕರೆಂಟ್‌ ಶಾಕ್​ನಿಂದ ತಂದೆಯ ಬಲಗೈ ಕಟ್ ಚಿನ್ನದ ಪದಕ ಗೆಲ್ಲುವುದರೊಂದಿಗೆ ನ್ಯಾಷನಲ್​ ಗೇಮ್ಸ್​ನಲ್ಲಿ ದಾಖಲೆ ಬರೆದಿರುವ 21 ವರ್ಷದ ಮುನಿತಾ ಕುಟುಂಬದ ಕಥೆ ಕೇಳಿದರೆ ಎಂತಹವರಿಗೂ ಕಣ್ಣೀರು ಬರದಿರದು. ತೀರ ಬಡ ಕುಟುಂಬದಲ್ಲಿ ಜನಿಸಿದ ಮುನಿತಾ ಅವರ ತಂದೆ ಕೂಲಿ ಕೆಲಸ ಮಾಡಿ, ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಅವರ ತಂದೆ ತಮ್ಮ ಬಲಗೈಯನ್ನು ಕಳೆದುಕೊಳ್ಳಬೇಕಾಯಿತು. ಇಷ್ಟೆಲ್ಲಾ ಆದರೂ ಮಗಳ ಕನಸನ್ನು ನನಸಾಗಿಸಲು ಮುನಿತಾ ತಂದೆ ಪಟ್ಟಪಾಡು ಅಷ್ಟಿಷ್ಟಲ್ಲ. ಕೆಲಸಕ್ಕಾಗಿ ಆಟದ ಹಿಂದೆ ಬಿದ್ದೆ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರಿಂದ ಮುನಿತಾಳಿಗೆ ಸಲಹೆ ನೀಡಿದ ಅವರ ಅಕ್ಕ, ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಒಳ್ಳೆಯ ಸರ್ಕಾರಿ ಉದ್ಯೋಗವನ್ನೂ ಪಡೆಯಬಹುದು ಎಂಬ ಸಲಹೆಯನ್ನು ನೀಡಿದ್ದರಂತೆ. ಇದಾದ ನಂತರ ಮೈದಾನಕ್ಕಿಳಿದ ಮುನಿತಾ 2017 ರಲ್ಲಿ ಭೋಪಾಲ್‌ನಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಟ್ರಯಲ್ಸ್ ನೀಡಿದ್ದರು. 2 ವರ್ಷಗಳ ಹಿಂದೆಯೇ ದಾಖಲೆ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಮುನಿತಾ ಎಂದೂ ಹಿಂತ್ತಿರುಗಿ ನೋಡಲಿಲ್ಲ. ಮುನಿತಾ ಪ್ರಜಾಪತಿ 2018 ರ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದರೆ, ಎರಡು ವರ್ಷಗಳ ಹಿಂದೆ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 10 ಕಿ.ಮೀ ವೇಗದ ನಡಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಮಗಳಿಗಾಗಿ ಸಾಲ ಮಾಡಿದ ತಾಯಿ ಮುನಿತಾಳ ತಾಯಿ ತನ್ನ ಸಹೋದರಿಯರಿಂದ ಸಾಲ ಪಡೆದು 2017 ರಲ್ಲಿ ಆಕೆಯನ್ನು ಟ್ರಯಲ್ಸ್‌ಗಾಗಿ ಭೋಪಾಲ್‌ಗೆ ಕಳುಹಿಸಿದ್ದರಂತೆ. ಈ ಅವಕಾಶ ತನ್ನ ಜೀವನದ ಕೊನೆಯ ಪ್ರಯೋಗವೆಂದು ಪರಿಗಣಿಸಿದ್ದ ಮುನಿತಾ ಟ್ರಯಲ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಆಯ್ಕೆಯಾದರು. ಆ ಬಳಿಕ ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಮುನಿತಾಗೆ ಪ್ರಾಧಿಕಾರದಿಂದ ಆಹಾರ ಮತ್ತು ಕಿಟ್‌ನ ಸೌಲಭ್ಯವೂ ದೊರೆಯಿತು.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಮಿಲನ ಧಾರಾವಾಹಿ ಕೆಲ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ.. ಸಾಕಷ್ಟು ಜನಮನ್ನಣೆ ಪಡೆದುಕೊಂಡಿದ್ದ ಧಾರಾವಾಹಿ.. ಆದರೆ ಆ ಧಾರಾವಾಹಿಯ ನಟಿ‌ ಸೌಮ್ಯ ಅವರು ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿದ್ದರೂ, ಕೈತುಂಬಾ ಧಾರಾವಾಹಿಗಳ ಅವಕಾಶ ಇದ್ದರೂ ಈ ಕ್ಷೇತ್ರವನ್ನು ಬಿಟ್ಟು ಬೇರೆ ಕೆಲಸ ಮಾಡಲು ಶುರು ಮಾಡಿದ್ರು.. ಇದ್ದಕ್ಕಿಂದ ಹಾಗೆ ಧಾರಾವಾಹಿ ಕ್ಷೇತ್ರ ಬಿಡಲು ಕಾರಣವಾದರೂ ಏನು ಎಂಬುದು ಯಾರಿಗೂ ತಿಳಿದಿರಲಿಲ್ಲ.. ಆದರೆ ಮೊನ್ನೆ ಮೊನ್ನೆಯಷ್ಟೇ ಮಾದ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸೌಮ್ಯ ಅವರು ಎಲ್ಲಾ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.. ಹೌದು ಆ ಒಬ್ಬ ನಿರ್ಮಾಪಕನಿಂದಾಗಿ ಸೌಮ್ಯ ಅವರು ಕಿರುತೆರೆಯನ್ನೇ ಬಿಡುವಂತಾಯಿತು.. ಸೌಮ್ಯ ಅವರು 4 ವತ್ಷ ಕಿರುತೆರೆಯಲ್ಲಿ ಇದ್ದರು.. ನಾಲ್ಕು ವರ್ಷದಲ್ಲಿ 12 ಧಾರಾವಾಹಿಯಲ್ಲಿ ಸೌಮ್ಯ ಅಭಿನಯಿಸಿದ್ದರು.. ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಧಾರಾವಾಹಿಯಲ್ಲಿಯೂ ಸೌಮ್ಯ ಅಭಿನಯಿಸಿದರು.. ಸಾಕಷ್ಟು ಹಣ ಹೆಸರು ಎಲ್ಲವನ್ನೂ ಸಂಪಾದಿಸಿದರು.. ಮಿಲನ ಧಾರಾವಾಹಿ ಮುಗಿದ ಬಳಿಕ ಚೌಕ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಸೌಮ್ಯ ನಂತರ ಸಂಪೂರ್ಣವಾಗಿ ಮರೆಯಾದರು.. ಇದಕ್ಕೆ ಕಾರಣ ಆ ಒಬ್ಬ ನಿರ್ಮಾಪಕ.. ಹೌದು ತೆಲುಗು ನಿರ್ಮಾಪಕ ಒಬ್ಬ ಆಡಿಶನ್ ಇದೆ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದೇನೆ ಬನ್ನಿ‌ ಎಂದು ಪೋನ್ ಮಾಡಿದನಂತೆ.. ನಾನು ಎಲ್ಲಿಯೇ ಹೋದರು ತಾಯಿಯನ್ನು ಕರೆದುಕೊಂಡು ಬರ್ತೀನಿ.. ಅವರಿಗೂ ಒಂದು ಟಿಕೆಟ್ ಬುಕ್ ಮಾಡಿ.. ನಾನು ಹಣ ಕೊಡ್ತೀನಿ ಎಂದು ಸೌಮ್ಯ ಹೇಳಿದರಂತೆ… ಆದರೆ ಆ ನಿರ್ಮಾಪಕ ಇಲ್ಲ ನೀವ್ ಒಬ್ಬರೆ ಬರಬೇಕು.. ನಿಮಗೆ ಎಲ್ಲಾ ಗೊತ್ತು ತಾನೇ ಅಲ್ಲಿ ನಿರ್ದೇಶಕರು ಇರ್ತಾರೆ ನೀವು ಅಡ್ಜಸ್ಟ್ ಮಾಡಿಕೊಳ್ಳಬೇಕು.. ಇದೆಲ್ಲಾ ಏನು ಹೊಸದಲ್ಲವಲ್ಲ.. ನಾನು ಓಪನ್ ಆಗಿಯೇ ಹೇಳ್ತಿದ್ದೀನಿ ಎಂದರಂತೆ.. ತಕ್ಷಣ.. ನೋಡಿ ನಾನು ಆ ರೀತಿಯ ನಟಿ ಅಲ್ಲ..‌ ಹೀಗಿದ್ದರೆ ಪ್ರತಿಭೆಗೆ ಬೆಲೆ ಎಲ್ಲಿದೆ ಎಂದರಂತೆ ಸೌಮ್ಯ. ‌ ಅದಕ್ಕೆ ಅವರು ನಾಲ್ಕು ವರ್ಷ ಈ ಇಂಡಸ್ಟ್ರಿಯಲ್ಲಿ ಇದ್ದೀರಾ.. ಇದೆಲ್ಲಾ ಕಾಮನ್ ಇಷ್ಟವಿದ್ದರೆ ಬನ್ನಿ.. ಇಲ್ಲಾಂದ್ರೆ ಬೇಡ ಎಂದರಂತೆ.. ನಾನು ಆ ರೀತಿಯ ಹುಡುಗಿ ಅಲ್ಲ.. ಇನ್ಯಾವತ್ತೂ ನನಗೆ ಫೋನ್ ಮಾಡಬೇಡಿ ಎಂದರಂತೆ ಸೌಮ್ಯ.. ಸೌಮ್ಯ ಅವರಿಗೆ ಹಿಂದೆಂದೂ ಯಾರೂ ಕೂಡ ಈ ರೀತಿ ನಡೆದುಕೊಂಡಿರಲಿಲ್ಲವಂತೆ.‌. ಅದೇ ಕೊನೆ ಆನಂತರ ಸಂಪೂರ್ಣ ಕಿರುತೆರೆ ಇಂಡಸ್ಟ್ರಿಯನ್ನೇ ಬಿಟ್ಟುಬಿಟ್ಟರು.. ಆದರೆ ವಿಪರ್ಯಾಸ ಎಂದರೆ ಆ ನಿರ್ಮಾಪಕ ಮತ್ಯಾರೂ ಅಲ್ಲ.. ಆ ನಿರ್ಮಾಪಕನ ಹೆಂಡತಿಯೂ ಸಹ ಒಬ್ಬ ನಟಿ.. ಅವರ ಜೊತೆಯೂ ಸೌಮ್ಯ ಅಭಿನಯಿಸಿದ್ದಾರೆ.. ಆ ನಿರ್ಮಾಪಕನ ಬಳಿಯೂ ಸೌಮುಅ ಅವರು ಈ ಮುನ್ನ ಮಾತನಾಡಿದ್ದರಂತೆ.. ಆದರೆ ಫೋನ್ ನಲ್ಲಿ ಬೇರೆ ಹೆಸರಿನಲ್ಲಿ ಆ ನಿರ್ಮಾಪಕ ಸೌಮ್ಯ ಬಳಿ ಮಾತನಾಡಿದ್ದನಂತೆ.‌ ಆ ಬಳಿಕ 8 ತಿಂಗಳು ಮನೆಯಲ್ಲೇ ಕುಳಿತರಂತೆ.. ಸಾಕಷ್ಟು ಅವಕಾಶ ಬಂದರೂ ಸಹ ಆಡಿಶನ್ ಗೆ ಹೋಗಲಿಲ್ಲವಂತೆ.. ಆ ಬಳಿಕ ಬೇರೆ ಇಂಟೀರಿಯರ್ ಡಿಸೈನ್ ಕಂಪನಿಯಲ್ಲಿ 6 ತಿಂಗಳು ಕೆಲಸ ಮಾಡಿದರು.. ನಂತರ ತಮ್ಮದೇ ಆದ ಸ್ವಂತ ಕಂಪನಿಯೊಂದನ್ನು ತೆರೆದು ಅದರಲ್ಲೇ ಕೆಲಸ ಮಾಡುತ್ತಿದ್ದಾರಂತೆ.. ಈ ನಡುವೆ ಸೌಮ್ಯ ಅವರಿಗೆ ಮದುವೆಯೂ ಕೂಡ ಆಯಿತು.. ಇದೀಗ ಆನಂದವಾಗಿದ್ದಾರೆ.. ಇನ್ನು ಮೂತು ನಾಲ್ಕು ವರ್ಷ ಬಿಟ್ಟು ಒಳ್ಳೆಯ ಅವಕಾಶ ಸಿಕ್ಕರೆ ಮತ್ತೆ ಬಣ್ಣ ಹಚ್ವುವ ಕನಸಿದೆ ಎಂದಿದ್ದಾರೆ.. ಅವಕಾಶ ಕೊಡ್ತೀವಿ ಅಂತ ಹೆಣ್ಣನ್ನು ಈ ರೀತಿ ಬಳಸಿಕೊಳ್ಳುವ ಹಣದ ಮದ ತುಂಬಿದ ಕೆಲ ನಿರ್ಮಾಪಕರು ಅದೆಷ್ಟು ಪ್ರತಿಭೆಯುಳ್ಳ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಿದ್ದಾರೋ.. ಜೀವನ ಎಂಬುದು ಇಂತವರಿಗೆ ಕೇವಲ ಎರಡು ನಿಮಿಷದ ಕ್ಷಣಿಕ ಸುಖವಷ್ಟೇ.. ಬದಲಾಗಬೇಕಿದೆ ಮನುಷ್ಯನ ಮನಸ್ಥಿತಿ..
ಹೈದರಾಬಾದ್‌ನ ಸಿಎಂ ಕಚೇರಿ ಪ್ರಗತಿ ಭವನದಲ್ಲಿ ತೆಲಂಗಾಣ ಸಿಎಂ ಕೆಸಿಆರ್​ ಅವರನ್ನು ಭೇಟಿಯಾದ ಹೆಚ್​ಡಿಕೆ ಅತ್ಯಂತ ಮಹತ್ವದ ಮಾತುಕತೆ ನಡೆಸಿದರು. ಬೆಂಗಳೂರು/ಹೈದರಾಬಾದ್​: ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ಅವರು ಭಾನುವಾರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಪರ್ಯಾಯ ರಾಜಕೀಯ ಕೂಟ ರಚಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಹೈದರಾಬಾದ್‌ನ ಸಿಎಂ ಕಚೇರಿ ಪ್ರಗತಿ ಭವನದಲ್ಲಿ ಕೆಸಿಆರ್​ ಅವರನ್ನು ಭೇಟಿಯಾದ ಹೆಚ್​ಡಿಕೆ ಅತ್ಯಂತ ಮಹತ್ವದ ಮಾತುಕತೆ ನಡೆಸಿದರು. ಕರ್ನಾಟಕ, ತೆಲಂಗಾಣ ರಾಜ್ಯಗಳ ರಾಜಕೀಯ ಸ್ಥಿತಿಗತಿಗಳ ಕುರಿತು ಹಾಗೂ ಸದ್ಯದ ರಾಷ್ಟ್ರ ರಾಜಕಾರಣದ ಬಗ್ಗೆ ಸಮಾಲೋಚಿಸಲಾಯಿತು. ಕೆಸಿಆರ್ ಭೇಟಿಯಾದ ಹೆಚ್​ಡಿಕೆ: ಪರ್ಯಾಯ ರಾಜಕೀಯ ಕೂಟ ರಚನೆ ಬಗ್ಗೆ ಚರ್ಚೆ ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದು, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರನ್ನು ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಭೇಟಿಯಾಗಿ ಅತ್ಯಂತ ಮಹತ್ವದ ಸ್ನೇಹಪೂರ್ವಕ ಮಾತುಕತೆ ನಡೆಸಲಾಯಿತು. ಕರ್ನಾಟಕ, ತೆಲಂಗಾಣ ರಾಜ್ಯಗಳ ರಾಜಕೀಯ ಸ್ಥಿತಿಗತಿಗಳ ಕುರಿತು ಹಾಗೂ ಸದ್ಯದ ರಾಷ್ಟ್ರ ರಾಜಕಾರಣದ ಬಗ್ಗೆ ಸಮಾಲೋಚನೆ ನಡೆಯಿತು ಎಂದು ಹೇಳಿದ್ದಾರೆ. ಅಲ್ಲದೇ, ರಾಷ್ಟ್ರ ರಾಜಕಾರಣಕ್ಕೆ ಪರಿಣಾಮಕಾರಿ ತಿರುವು ನೀಡಿ, ರಾಷ್ಟ್ರೀಯ ಪಕ್ಷಗಳಿಗೆ ಹೊರತಾದ ರೈತ, ಕಾರ್ಮಿಕ, ದೀನದಲಿತ ಮತ್ತು ಒಟ್ಟಾರೆ ಶ್ರೀಸಾಮಾನ್ಯನ ಪರವಾದ ದನಿಯುಳ್ಳ ಪರ್ಯಾಯ ರಾಜಕೀಯ ಕೂಟ ರಚಿಸುವ ತಮ್ಮ ಮನದಿಂಗಿತವನ್ನು ನನ್ನೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಅವರಿಗೆ ಶುಭ ಹಾರೈಸಿದೆ ಹಾಗೂ ಜೊತೆಯಲ್ಲಿ ನಿಲ್ಲುವುದಾಗಿ ಭರವಸೆಯನ್ನು ನೀಡಿದೆ ಎಂದೂ ಹೆಚ್​ಡಿಕೆ ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಜೊತೆಗೆ 2023ರ ಕರ್ನಾಟಕದ ವಿಧಾನಸಭೆ ಚುನಾವಣೆ ಹಾಗೂ ವಿಜಯದಶಮಿಗೆ ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿಗೆ ಅಂಕುರಾರ್ಪಣೆ ಮಾಡುವ ಬಗ್ಗೆ ಹೆಚ್ಚು ಒತ್ತು ಕೊಟ್ಟು ಹಿರಿಯರಾದ ಕೆಸಿಆರ್‌ ಅವರು ಮಾತುಕತೆ ನಡೆಸಿದರು. ಈ ವೇಳೆ ಅವರು ನನ್ನಡೆಗೆ ತೋರಿದ ಆದರಾಭಿಮಾನ, ವಾತ್ಸಲ್ಯ, ವಿಶ್ವಾಸಕ್ಕೆ ನಾನು ಮಾರು ಹೋಗಿದ್ದೇನೆ ಎಂದಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ. ರಾಷ್ಟ್ರೀಯ ಪಕ್ಷ ಪ್ರಾರಂಭ?: ಇತ್ತ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್ ಅವರು ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಮತ್ತು ನೀತಿಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಕೆಸಿಎಆ್​ ಕಚೇರಿಯ ಅಧಿಕೃತ ಪ್ರಕಟಣೆ ಹೊರಡಿಸಿದೆ. ಪರ್ಯಾಯ ರಾಷ್ಟ್ರೀಯ ಅಜೆಂಡಾದಲ್ಲಿ ಒಮ್ಮತವಿದೆ. ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರೊಂದಿಗೆ ಸುದೀರ್ಘ ಚರ್ಚೆಯ ಅಭಿಪ್ರಾಯ ವ್ಯಕ್ತವಾಗಿದೆ. ತೆಲಂಗಾಣ ಚಳವಳಿಯ ಆರಂಭಕ್ಕೂ ಮುನ್ನ ಮಾಡಿದಂತೆಯೇ ಚರ್ಚೆ ಮಾಡಿದ್ದೇವೆ. ರಾಷ್ಟ್ರೀಯ ಪಕ್ಷ ಮತ್ತು ಅದರ ನೀತಿಗಳ ರಚನೆ ನಡೆಯುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿ ಗಂಟೆಗೆ ಐದು ಮಂದಿಯಂತೆ 2021ರಲ್ಲಿ ಒಟ್ಟು 45,000 ಮಂದಿ ಮಹಿಳೆಯರು ಕುಟುಂಬದ ಸದಸ್ಯರಿಂದಲೇ ಹತ್ಯೆಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಸ್ತ್ರೀಹತ್ಯೆಯ ಅಂಕಿಅಂಶಗಳು ಬಹಿರಂಗಪಡಿಸಿವೆ. ಕಳೆದ ಒಂದು ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು 81,100 ಮಂದಿ ಹತ್ಯೆಗೀಡಾಗಿದ್ದು, ಅದರಲ್ಲಿ ಶೇ. 56ರಷ್ಟು ಮಹಿಳೆಯರು ಪತಿ, ಸಂಗಾತಿ ಅಥವಾ ಸಂಬಂಧಿಕರಿಂದಲೇ ಕೊಲೆಯಾಗಿದ್ದಾರೆ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತಿವೆ. ವಿಶ್ವಸಂಸ್ಥೆಯ ಮಹಿಳಾ ವಿಭಾಗ ಹಾಗೂ ಡ್ರಗ್ಸ್‌ ಅಂಡ್‌ ಕ್ರೈಮ್‌ ವಿಭಾಗವು ಈ ಅಂಕಿ ಅಂಶಗಳ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಈ ಅಂಕಿಅಂಶಗಳು ಮಹಿಳೆಯರು ತಮ್ಮ ಲಿಂಗದ ಕಾರಣದಿಂದಲೇ ಹತ್ಯೆಗೀಡಾಗುತ್ತಿದ್ದಾರೆ. ಮಾಹಿತಿಯ ಕೊರತೆಯಿಂದಾಗಿ, 10 ಮಂದಿಯಲ್ಲಿ ನಾಲ್ವರ ಸಾವನ್ನು ಸ್ತ್ರೀಹತ್ಯೆಯಾಗಿ ಪರಿಗಣಿಸುತ್ತಿಲ್ಲ. ಉಳಿದಂತೆ ಸ್ತ್ರೀಹತ್ಯೆಯ ಅಧಿಕೃತ ಅಂಕಿ ಅಂಶಗಳು ಕಳೆದ ದಶಕಕ್ಕೆ ಹೋಲಿಸಿದಲ್ಲಿ ಹೆಚ್ಚು ಬದಲಾವಣೆ ಕಂಡುಬರುವುದಿಲ್ಲ ಎಂದು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಏಷ್ಯಾದಲ್ಲಿಯೇ ಅತಿಹೆಚ್ಚು ಸ್ತ್ರೀಹತ್ಯೆಗಳು ಈ ಹತ್ಯೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಏಷ್ಯಾದಲ್ಲಿ. ಕಳೆದ ಒಂದು ವರ್ಷ ಏಷ್ಯಾದಲ್ಲಿ ಸುಮಾರು 17,800 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ. ಹಾಗೆಯೇ, ಆಫ್ರಿಕಾದಲ್ಲಿ ಕುಟುಂಬದ ಸದಸ್ಯರಿಂದಲೇ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಹತ್ಯೆಗೀಡಾಗುವ ಅಪಾಯ ಹೆಚ್ಚಿದೆ ಎಂಬುದನ್ನು ಸಂಶೋಧನೆಯು ವಿವರಿಸುತ್ತದೆ. ಲಿಂಗ ಸಂಬಂಧಿತ ಹತ್ಯೆಗಳ ದರವು ಆಫ್ರಿಕಾದಲ್ಲಿ 1 ಲಕ್ಷ ಮಹಿಳೆಯರಿಗೆ ಶೇ. 2.5ರಷ್ಟಿದೆ. ಅಮೆರಿಕದಲ್ಲಿ ಶೇ. 1.4, ಓಷಿಯಾನಿಯಾದಲ್ಲಿ ಶೇ. 1.2, ಏಷ್ಯಾದಲ್ಲಿ ಶೇ. 0.8 ಹಾಗೂ ಯೂರೋಪ್‌ನಲ್ಲಿ ಈ ದರವು ಶೇ. 0.6ರಷ್ಟಿದೆ. ಈ ಸುದ್ದಿ ಓದಿದ್ದೀರಾ?: ಹಾಲಿನ ದರ ಹೆಚ್ಚಳ | ಹಾಲು ಉತ್ಪಾದಕರಿಗೆ ಸಿಗುವುದೇ ದರ ಏರಿಕೆಯ ಫಲ; ರೈತ ಮುಖಂಡರು, ಗ್ರಾಹಕರು ಏನಂತಾರೆ? ಸಂಶೋಧನೆಯ ಪ್ರಕಾರ, 2020ರ ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಉತ್ತರ ಅಮೆರಿಕ, ಪಶ್ಚಿಮ ಹಾಗೂ ದಕ್ಷಿಣ ಯುರೋಪ್‌ನಲ್ಲಿ ಸ್ತ್ರೀಹತ್ಯೆ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಯುರೋಪ್‌ ಮತ್ತು ಅಮೆರಿಕದ 25 ದೇಶಗಳ ದತ್ತಾಂಶಗಳ ಪ್ರಕಾರ, ಬಹುಪಾಲು ಮಹಿಳೆಯರ ಹತ್ಯೆಯು ಪತಿ ಅಥವಾ ಸಂಗಾತಿಯನ್ನು ಹೊರತು ಪಡಿಸಿ, ಕುಟುಂಬದವರಿಂದ ನಡೆದ ಹತ್ಯೆಗಳಾಗಿವೆ. ಕೌಟುಂಬಿಕ ಹಿಂಸೆ; ಸಂತ್ರಸ್ತೆಯನ್ನೇ ದೂಷಿಸುವ ಮನೋಭಾವ ವೈವಾಹಿಕ ಅತ್ಯಾಚಾರವನ್ನು ಅನುಮತಿಸುವ ಅಥವಾ ಸಂತ್ರಸ್ತೆಯನ್ನೇ ಮದುವೆಯಾಗುವ ಮೂಲಕ ಅತ್ಯಾಚಾರಿಗಳಿಗೆ ಶಿಕ್ಷೆ ತಪ್ಪಿಸಲು ಅನುಮತಿ ನೀಡುವುದು ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಿಂಗ ತಾರತಮ್ಯವನ್ನುಂಟು ಮಾಡುವಂತಹ ಕಾನೂನುಗಳು ಜಾರಿಯಲ್ಲಿವೆ ಎನ್ನುತ್ತಾರೆ ಸ್ಯಾಂಟಿಯಾಗೊ ಮೂಲದ ಮಹಿಳಾ ಹೋರಾಟಗಾರ್ತಿ ಬಾರ್ಬರಾ ಜಿಮೆನ್ಸ್‌. ಕೌಟುಂಬಿಕ ಹಿಂಸೆಯನ್ನು ಕುಟುಂಬದ ಖಾಸಗಿ ವಿಷಯ ಎಂದು ಈಗಲೂ ನೋಡಲಾಗುತ್ತದೆ. ಇಂತಹ ಪ್ರಕರಣಗಳನ್ನು ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಂತ್ರಸ್ತೆಯನ್ನೇ ಇದಕ್ಕೆಲ್ಲ ಹೊಣೆ ಮಾಡುವುದು ವ್ಯಾಪಕವಾಗಿದೆ. ಇದು ಮಹಿಳೆಯರು ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದನ್ನು ನಿಯಂತ್ರಿಸುತ್ತದೆ. ಆದ್ದರಿಂದ ಅಪರಾಧಿಗಳು ಶಿಕ್ಷೆಗೊಳಗಾಗದೇ ಮತ್ತಷ್ಟು ದೌರ್ಜನ್ಯ ಎಸಗಲು ಇದು ಕಾರಣವಾಗುತ್ತಿವೆ ಎನ್ನುತ್ತಾರೆ ಅವರು.