text
stringlengths
344
278k
ಮೆಲ್ಬೋರ್ನ್, ನ 13 (DaijiworldNews/SM): ಭಾರೀ ಕುತೂಹಲ ಕೆರಳಿಸಿದ್ದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಆ ಮೂಲಕ ಐಸಿಸಿ ಟಿ20ಯಲ್ಲಿ ಎರಡನೇ ಬಾರಿ ಚಾಂಪಿಯನ್ ಆದಂತಾಗಿದೆ. ಮತ್ತೊಂದೆಡೆ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಟಿ20 ವಿಶ್ವಕಪ್ ಒಟ್ಟೊಟ್ಟಿಗೆ ಗೆದ್ದುಕೊಂಡ ದಾಖಲೆಯನ್ನು ತನ್ನ ಹೆಸರಲ್ಲಿ ಉಳಿಸಿಕೊಂಡಿದೆ. ಮೆಲ್ಬರ್ನ್ ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜಾಸ್ ಬಟ್ಲರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಆಂಗ್ಲ ಬೌಲರ್ ಗಳ ಕಾಡಿದರು. ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್ 15 ಹಾಗೂ ಬಾಬರ್ ಅಜಾಂ 32 ರನ್ ಪೇರಿಸಿದರು. ಮೊಹಮ್ಮದ್ ಹ್ಯಾರಿಸ್ 8, ಶಾನ್ ಮಸೂದ್ 38, ಶದಾಬ್ ಖಾನ್ 20 ರನ್ ಪೇರಿಸಿದ್ದು ಆ ಮೂಲಕ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಿದ್ದು ಇಂಗ್ಲೆಂಡ್ ತಂಡಕ್ಕೆ 138 ರನ್ ಗಳ ಗುರಿ ನೀಡಿತ್ತು. ಇನ್ನು ಪಾಕ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 52 ರನ್ ಗಳ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನುಳಿದಂತೆ ಇಂಗ್ಲೆಂಡ್ ಪರ ಜೋಸ್ ಬಟ್ಲರ್ 26, ಸಾಲ್ಟ್ 10, ಹ್ಯಾರಿ ಬ್ರೋಕ್ 20, ಮೋಯಿನ್ ಅಲಿ 19 ಹಾಗೂ ಲಿವಿಂಗ್ಸ್ಟೋನ್ ಅಜೇಯ 1 ರನ್ ಗಳಿಸಿದ್ದಾರೆ. ಪಾಕ್ ಪರ ಬೌಲಿಂಗ್ ನಲ್ಲಿ ಹಾರಿಸ್ ರೌಫ್ ಮೊಹಮ್ಮದ್ ವಾಸೀಂ ತಲಾ 2 ವಿಕೆಟ್, ಶಾಹೀನ್ ಶಾ ಆಫ್ರಿದಿ, ಶಬಾದ್ ಖಾನ್ ತಲಾ 1 ವಿಕೆಟ್ ಪಡೆದಿದ್ದಾರೆ.
ಕಷ್ಟ ಪಟ್ಟಾದರೂ ಉನ್ನತ ವ್ಯಕ್ತಿಯಾಗಬೇಕೆಂಬ ಆಸೆ ಕಲಾಂರಲ್ಲಿತ್ತು… ಯಾವುದೇ ಕೆಟ್ಟ ಹಾದಿ ಹಿಡಿಯದೆ ಸನ್ಮಾರ್ಗದಿಂದ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದರು…ತಾವೇ ಸ್ವತ: ಮನೆ ಮನೆಗೆ ದಿನಪತ್ರಿಕೆಗಳನ್ನು ಹಂಚಿ ತಮ್ಮ ಶಾಲಾ ಶುಲ್ಕವನ್ನು ಭರಿಸಿದ್ದರು.. ವೈಮಾನಿಕ ಇಂಜಿನೀಯರಿಂಗ್ ಪದವಿ, ನಂತರ ಪಿ ಹೆಚ್ ಡಿ, ಎಮ್ ಟೆಕ್ ನ್ನು ಮುಗಿಸಿದರು.. ಇಸ್ರೋ ದಲ್ಲಿ ವಿಜ್ಞಾನಿಯಾಗಿ ಆ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ… ಕ್ಷಿಪಣಿ ಹಾಗೂ ರಾಕೇಟ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಕಾರಣ ‘ಮಿಸೈಲ್ ಮ್ಯಾನ್’ ಎಂದೇ ಪ್ರಸಿದ್ಧಿ ಪಡೆದವರು. ರಾಮೇಶ್ವರದ ಒಂದು ಬಡ ಮುಸಲ್ಮಾನ ಕುಟುಂಬದಲ್ಲಿ ಜನಿಸಿದ ಅಬ್ದುಲ್ ಕಲಾಂ ಇಡೀ ಭಾರತೀಯರ ಮನಗೆದ್ದ ರಾಷ್ಟ್ರಪತಿಗಳಾದರು. ಸರ್ವಧರ್ಮಗಳನ್ನು ಸಮಾನವಾಗಿ ಕಂಡಂತವರು. ಯಾರನ್ನೂ ನೋಯಿಸಿದವರಲ್ಲ. ‘ಅಜಾತಶತ್ರು’ವಿಗೆ ಇನ್ನೊಂದು ಅರ್ಥವೇ ಈ ಅಬ್ದುಲ್ ಕಲಾಂ. ಅಮೆರಿಕದ ಗುಪ್ತಚಾರರ ಕಣ್ತಪ್ಪಿಸಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಇಂದಿಗೂ ಅವರನ್ನು ಬೆಚ್ಚಿಬೀಳಿಸುತ್ತದೆ. ಪೊಖ್ರಾಣ್ ಅಣ್ವಸ್ತ್ರ ಪರೀಕ್ಷೆ ಯಲ್ಲಿ ಅಬ್ದುಲ್ ಕಲಾಂರದ್ದೇ ಮಹತ್ತರ ಪಾತ್ರ. ಅದೊಂದು ಅಣ್ವಸ್ತ್ರ ಪರೀಕ್ಷೆ ಭಾರತವನ್ನು ಇಡೀ ವಿಶ್ವವೇ ಹುಬ್ಬೇರಿಸಿ ನೋಡಿತ್ತು. ರಾಷ್ಟ್ರಪತಿಗಳಾಗಿ ಅವರು ರಬ್ಬರ್ ಸ್ಟಾಂಪ್ ಎನ್ನುವ ಹಣೆಪಟ್ಟಿಯನ್ನು ಕಿತ್ತೆಸೆದವರು. ವಿದ್ಯಾರ್ಥಿಗಳೊಂದಿಗೆ ಅದೆಷ್ಟು ಸಂವಾದ ಕಾರ್ಯಕ್ರಮ ಮಾಡಿದಾರೋ ಅವರೇ ಬಲ್ಲರು. ಕೇವಲ ವರ್ಷಕ್ಕೆ ೩-೪ ಬಾರಿ ಕಾಣಿಸಿಕೊಳ್ಳುತ್ತಿದ್ದ ರಾಷ್ಟ್ರಪತಿಗಳ ಸಂಪ್ರದಾಯಕ್ಕೆ ವಿದಾಯ ಹೇಳಿ ಸದಾ ಸಮಾಜಮುಖಿಯಾಗಿದ್ದರು. ಕೊನೆಗೂ ಮದುವೆಯೆಂಬ ಬಂಧನಕ್ಕೊಳಗಾಗದೆ ದೇಶಸೇವೆಯನ್ನೇ ಕಾಯಕವನ್ನಾಗಿಸಿದ ಮಹಾನ್ ದೇಶಭಕ್ತ. ಇವರಿಂದ ಮೊದಲು ಇಂತಹಾ ವ್ಯಕ್ತಿ ಹುಟ್ಟಿಲ್ಲ ಮುಂದೆಯೂ ಹುಟ್ಟಲಾರ. ಆದ್ದರಿಂದ ಅವರು ಕೊಟ್ಟ ಸಲಹೆ ಸೂಚನೆ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲಾಂರ ಬಾಲ್ಯವನ್ನು ಮಾತ್ರ ಹೋಲಿಸಬಹುದಾದ ವ್ಯಕ್ತಿಯೊಬ್ಬ ಇದ್ದಾನೆ… ಬಹುಷಃ ಅವನನ್ನು ವ್ಯಕ್ತಿಯೆಂದರೆ ತಪ್ಪಾದೀತು.. ಆದರೂ ಇರಲಿ. ಅವನೇ ಕಸಬ್ .. ಇವನ ಬಾಲ್ಯವು ಕಲಾಂ ರ ಬಾಲ್ಯವು ಸ್ವಲ್ಪ ಮಟ್ಟಿಗೆ ಹೋಲಿಸಬಹುದು. ಕಸಬ್ ನ ಮನೆ ಬಡತನದಿಂದ ತುಂಬಿದ ಕುಟುಂಬ ಮನೆಯಲ್ಲಿದ್ದರು ಕೆಲವರು ದುಡಿಯುತ್ತಿದ್ದರು… ಆ ದುಡಿಮೆಯಿಂದ ಯಾರೊಬ್ಬರ ಹೊಟ್ಟೆಯೂ ತುಂಬುತ್ತಿರಲಿಲ್ಲ. ಕಲಾಂ ಮತ್ತು ಕಸಬ್ ಗೆ ಕೇವಲ ಹೋಲಿಕೆಯಿರುವುದು ಬಡತನವೆಂಬ ಬಾಲ್ಯ ಮತ್ತು ಮುಸಲ್ಮಾನ ಎಂಬುವುದು ಮಾತ್ರ. ಬಡತನವನ್ನು ದೂರ ಮಾಡಲು ಕಸಬ್ ನ ಅಣ್ಣ ಆಯ್ಕೆ ಮಾಡಿಕೊಂಡ ಕೆಲಸ ‘ದರೋಡೆ’… ಕಸಬ್ ಸ್ವಲ್ಪ ಬೆಳೆಯುತ್ತಲೇ ತನ್ನ ಅಣ್ಣನೊಂದಿಗೆ ದರೋಡೆ ವೃತ್ತಿಗೆ ಕಾಲಿಟ್ಟ.. ದರೋಡೆಯಲ್ಲಿ ಕುಖ್ಯಾತಿಯನ್ನು ಪಡೆದ.. ಅದೆಷ್ಟು ಬಾರಿ ಪೋಲೀಸರ ಆತಿಥ್ಯವನ್ನು ಪಡೆದಿದ್ದನೋ ಅವನೇ ಬಲ್ಲ. ಅದೇಕೋ ಅವನಿಗೆ ದರೋಡೆಯಿಂದ ಬರುತ್ತಿದ್ದ ಸಂಪಾದನೆ ಸಾಲುತ್ತಿರಲಿಲ್ಲ .. ಯಾರದ್ದೋ ಪರಿಚಯದಿಂದ ದೇಶದ್ರೋಹ ಭಯೋತ್ಪಾದನೆಯ ಚಟುವಟಿಕೆಗೆ ಸೇರಿಕೊಂಡ… ಬಹುಷಃ ದರೋಡೆ ಮಾಡುತ್ತಾ ಇರುತ್ತಿದ್ದರೆ ನೇಣಿಗೆರುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ ?? ಬಡತನವೆಂಬ ಸಣ್ಣ ನೆಪವಿಟ್ಟು ಭಯೋತ್ಪಾದನೆ ಮಾಡುವುದು ಸರಿಯೇ??? ಬಡತನ ದೂರಮಾಡಲು ಹಲವು ಉತ್ತಮ ಮಾರ್ಗಗಳಿವೆ. ಒಂದೇ ಬಾರಿಗೆ ಶ್ರೀಮಂತರಾಗುವ ಅತಿಯಾಸೆ. ಮತಾಂಧರ ಕೈ ಸಿಲುಕಿ ಇಡೀ ಜೀವನವನ್ನೇ ಹಾಳುಮಾಡಿಕೊಂಡ ಮಹಾಪಾಪಿ. ಅವನ ಪ್ರಕಾರ ತನ್ನ ಮನೆಯವರ ಸುಖಕ್ಕೆ ದೇಶದ್ರೋಹಿ ಚಟುವಟಿಕೆಯನ್ನು ಮಾಡತೊಡಗಿದನಂತೆ. ಕಳ್ಳನಿಗೊಂದು ಪಿಳ್ಳೆ ನೆಪವಲ್ಲದೆ ಮತ್ತೇನು?? ಇವನ ಹೆತ್ತವರು ತನ್ನ ಮಗನೇ ಅಲ್ಲ ಎಂದಿದ್ದರು.. ಕೊನೆಗೆ ಅವನ ಶವವನ್ನೂ ತೆಗೆದುಕೊಳ್ಳಲು ನಿರಾಕರಿಸಿತ್ತು… ಬಹುಷಃ ಇಂತಹಾ ಮಗ ಹುಟ್ಟಿದ ತಪ್ಪಿಗೆ ತಮ್ಮವನಲ್ಲ ಎಂದು ಹೇಳಿ ಮಾಡಿದ ತಪ್ಪಿನ ಪ್ರಾಯಶ್ಚಿತ್ತ ಮಾಡಿಕೊಂಡರೇನೋ…!!! ಮುಂಬೈ ದಾಳಿಯ ಸಂದರ್ಭದಲ್ಲಿ ಅದೆಷ್ಟು ಮುಗ್ಧ ಮನಸ್ಸುಗಳಿಗೆ ಘಾಸಿ ಮಾಡಿದ್ದಾನೋ?? ಎಷ್ಟು ಜನರ ಶಾಪವಿದೆಯೋ??? ಕಸಬ್ ಮತ್ತು ಕಲಾಂ ರನ್ನು ಹೋಲಿಸಿದಾದ ಗಿಳಿಗಳೆರಡರ ಕಥೆ ನೆನಪಾಗುವುದು ಸಹಜ. ಒಬ್ಬ ಗಿಳಿ ವ್ಯಾಪಾರಿಯಿಂದ ಋಷಿಮುನಿಯು ಹಾಗೂ ಬೇಟೆಗಾರ ಇಬ್ಬರೂ ತಲಾ ಒಂದೊಂದು ಗಿಳಿ ಮರಿಯನ್ನು ಖರೀದಿಸಿದರು. ಸ್ವಲ್ಪ ಸಮಯದ ನಂತರ ಆ ವ್ಯಾಪರಿಯು ಆವರಿಬ್ಬರ ಮನೆಗೂ ಭೇಟಿ ಮಾಡಿದ ಋಷಿಮುನಿಯ ಮನೆಯಲ್ಲಿ ಒಳ ಹೊಕ್ಕ ತಕ್ಷಣ ಅಲ್ಲಿದ್ದ ಗಿಳಿಯು ” ಆತ್ಮೀಯ ಸ್ವಾಗತ, ಬನ್ನಿ ಕುಳಿತುಕೊಳ್ಳಿ, ತಕ್ಷಣಕ್ಕೆ ಕುಡಿಯಲು ನೀರೇನಾದರು ಬೇಕೆ ? ” ಎಂದು ಕೇಳಿತು.. ಅಷ್ಟೊಂದು ನಯ ವಿನಯದಿಂದ ಮಾತನಾಡಿದ ಗಿಳಿಯನ್ನು ಕಂಡು ಗಿಳಿ ವ್ಯಾಪಾರಿಯು ಸಂತೋಷಪಟ್ಟುಕೊಂಡ. ಇದಾದ ಮೇಲೆ ಬೇಟೆಗಾರನ ಮನೆಗೂ ಭೇಟಿಕೊಟ್ಟ ಅಲ್ಲಿ ಒಳಹೊಕ್ಕ ತಕ್ಷಣ ವ್ಯಾಪಾರಿಗೆ ಅತ್ಯಂತ ಭಯಭೀತನಾದನು. ಯಾಕಿರಬಹುದು ? ಅಲ್ಲಿದ್ದ ಗಿಳಿಯು ” ನಮ್ಮ ಮನೆಗೆ ಏನೋ ಬಂದಿದೆ ಅದನ್ನು ಹೊಡೆದು ಬಡಿದು ಕಡಿಯಿರಿ” ಎಂದಿತ್ತು. ಅಲ್ಲಿಂದಲೇ ನೇರವಾಗಿ ವ್ಯಾಪಾರಿಯು ತನ್ನ ಮನೆಯ ಕಡೆ ಹೊರಟೇ ಹೋದನು. ಇದರಿಂದ ಅವನು ತಿಳಿದುಕೊಂಡದ್ದು ಏನೆಂದರೆ ಅದೆಷ್ಟೇ ಕಷ್ಟವಿದ್ದರೂ ಕೆಟ್ಟವರ ಸಹವಾಸ ಮಾಡಬಾರದು. ‘ಸಜ್ಜನರ ಸಂಘವದು ಹೆಜ್ಜೇನು ಸವಿದಂತೆ ದುರ್ಜನರ ಸಂಘವದು ಹೆಜ್ಜೇನು ಕಡಿದಂತೆ ‘ ಎನ್ನುವ ಮಾತು ನಮ್ಮನ್ನು ಸದಾ ಎಚ್ಚರಿಸುತ್ತಿರಬೇಕು. ಅಬ್ದುಲ್ ಕಲಾಂ ಅಪ್ಪಟ ಭಾರತೀಯ ಮುಸಲ್ಮಾನ .ದೇಶಭಕ್ತಿ ರಕ್ತದಲ್ಲಿಯೇ ಕರಗತವಾಗಿರುತ್ತದೆ. ಆದರೆ ಪಾಕಿಸ್ಥಾನಿ ಮುಸಲ್ಮಾನನಿಗೆ ಮತಾಂಧತೆಯೇ ತುಂಬಿಕೊಂಡಿರುತ್ತದೆ. ಬಹುಷಃ ಮೋದಿಯವರು ಕಲಾಂರನ್ನು ಮುಂದಿಟ್ಟು ” ಅಪ್ಪಟ ಭಾರತೀಯ ಮುಸ್ಲೀಮರು ಯಾರೂ ದೇಶದ್ರೋಹದ ಚಟುವಟಿಕೆಗಳಿಗೆ ಅವಕಾಶ ಕೊಡುವುದಿಲ್ಲ” ಈ ಮಾತನ್ನು ಹೇಳಿದರು ಅನಿಸುತ್ತದೆ. ಆದ್ದರಿಂದ ನಾವು ನಮ್ಮ ಸಜ್ಜನರ ಸಂಘವನ್ನೇ ಮುಂದುವರಿಸೋಣ… ಉಪಕಾರಿಯಾಗದಿದ್ದರೂ ಅಪಕಾರಿಯೆನಿಸುವುದು ಬೇಡ. ನಮ್ಮ ಜೀವನದಲ್ಲಿ ಕಲಾಂ ಕೊಟ್ಟ ಅದ್ಭುತ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳೋಣ… ಅವರಂತೆ ಆಗದಿದ್ದರೂ ಅವರು ನಡೆದ ಸನ್ಮಾರ್ಗದಲ್ಲಿ ನಾವು ನಡೆಯೋಣ ಆಗ ಯಶಸ್ಸು ತಾನಾಗಿಯೇ ನಮ್ಮನ್ನು ಆವರಿಸಿಕೊಳ್ಳುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಒಳ್ಳೆಯ ಫಲವನ್ನೇ ನಿರೀಕ್ಷಿಸಬಹುದು. ಕೇವಲ ಕೆಟ್ಟ ಕಾರ್ಯವನ್ನೇ ಮಾಡಿ ಕೊನೆಗೆ ಒಳ್ಳೆಯ ಫಲ ನಿರೀಕ್ಷಿಸುವುದು ಸರಿಯೇ?? ಇದುವೇ ಕಲಾಂರಿಗೂ ಕಸಬ್ ಗೂ ಇರುವ ಪ್ರಮುಖ ವ್ಯತ್ಯಾಸ. ಅಬ್ದುಲ್ ಕಲಾಂ ರು ಇನ್ನೊಮ್ಮೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸೋಣ…
ಮೆಕ್ ಡೋನಾಲ್ಡ್ ಕಂಪನಿಯ ನಿಯಮದ ಪ್ರಕಾರ ಮ್ಯಾನೇಜರ್ ಆಗಲಿ ಅಥವಾ ಉನ್ನತ ಹುದ್ದೆಯಲ್ಲಿರುವ ಯಾರೇ ಆಗಲಿ ಸಹೋದ್ಯೋಗಿ ಜೊತೆ ನೇರ ಅಥವಾ ಪರೋಕ್ಷವಾಗಿ ಪ್ರೇಮ ಸಂಬಂಧ ಹೊಂದುವಂತಿಲ್ಲ. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿದ್ದ ಮೆಕ್ ಡೋನಾಲ್ಡ್ ಸಿಇಒ ಸ್ಟೀವ್ ಈಸ್ಟರ್ ಬ್ರೂಕ್ ಸಹೋದ್ಯೋಗಿ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದ. ಈ ವಿಷಯ ಕಂಪನಿಯ ಗಮನಕ್ಕೆ ಬರುತ್ತಿದ್ದಂತೆ ಸಂಸ್ಥೆ ಅವರನ್ನು ಕಂಪನಿಯಿಂದ ವಜಾಗೊಳಿಸಿದೆ. ಕಂಪನಿಯ ನಿಯಮಗಳನ್ನು ಉಲ್ಲಂಘಿಸಿ ಮಹಿಳಾ ಸಹೋದ್ಯೋಗಿ ಜೊತೆ ಸಮ್ಮತಿಯ ಸಂಬಂಧ ಹೊಂದಿದ್ದ ಆರೋಪದ ಮೇಲೆ ಸಿಇಒ ವನ್ನು ಕಂಪನಿಯಿಂದ ಹೊರಹಾಕಲಾಗಿದೆ. ತಾನು ಕಂಪನಿಯಿಂದ ಫೈರ್ ಆಗಿರುವುದನ್ನು ಖಚಿತ ಪಡಿಸಿರುವ ಸ್ಟೀವ್, ತಾನು ಕಂಪನಿಯ ಸಹೋದ್ಯೋಗಿ ಜತೆ ಸಂಬಂಧ ಹೊಂದಿದ್ದು, ಇದು ನನ್ನ ತಪ್ಪು ಎಂದು ಉದ್ಯೋಗಿಗಳಿಗೆ ಇ-ಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ. ಕಂಪನಿ ನನಗೆ ಉತ್ತಮ ಅವಕಾಶ ನೀಡಿದೆ. ಕಂಪನಿಯ ನಿಯಮ ಉಲ್ಲಂಘಿಸಿರುವ ನಾನು ಮಂಡಳಿಯ ನಿರ್ಧಾರವನ್ನು ಒಪ್ಪಿದ್ದು, ಇದೀಗ ಕಂಪನಿಯಿಂದ ಹೊರಹೋಗಬೇಕಾದ ಸಮಯ ಬಂದಿದೆ ಎಂದು ಮೇಲ್ ನಲ್ಲಿ ಹೇಳಿದ್ದಾರೆ.
ಮಾಧ್ಯಮ ಅನೇಕ ಇದೀಗ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕಂಟೆಂಟ್ ನೀಡುವ ಹೊಸ OTT (ಓವರ್ ದಿ ಟಾಪ್) ಹೊರತರುತ್ತಿದೆ. ಈ OTT ಯ ಮುಖ್ಯ ಉದ್ದೇಶ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ ಉತ್ತಮ ಮನೋರಂಜನಾ contentಗಳು ಮತ್ತು infotainment contentಗಳಿಗೆ ಸೂಕ್ತ ವೇದಿಕೆಯೊಂದನ್ನು ರೂಪಿಸುವುದು. OTT ಯ ಹೆಸರನ್ನು ಇಷ್ಟರಲ್ಲೇ ಪ್ರಕಟಿಸಲಿದ್ದು ವೀಕ್ಷಕರಿಗೆ ಜನಪ್ರಿಯ app ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ. ಮಾಧ್ಯಮ ಅನೇಕ ತನ್ನ OTT ಮೂಲಕ ತನ್ನ in-house productions ಗಳನ್ನು “Maadhyama Aneka Originals” ಶೀರ್ಷಿಕೆಯಡಿ ತರುತ್ತಿದ್ದು, ಹೊಸತನ ಮತ್ತು ಸದಭಿರುಚಿಯ ಅಡಿಪಾಯದ ಮೇಲೆ ಹೆಣೆದ ಕಥಾವಸ್ತುಗಳನ್ನು ವೆಬ್ ತೆರೆಯ ಮೇಲೆ ತರುವ ಧ್ಯೇಯೋದ್ದೇಶ ಹೊಂದಿದೆ. ತನ್ನ OTT ಮೂಲಕ ಪ್ರೇಕ್ಷಕರಿಗೆ ಉತ್ತಮ ಕಂಟೆಂಟ್ ನೀಡುವುದರೊಂದಿಗೆ, ಮನೋರಂಜನಾ ಉದ್ಯಮದ ಇಡೀ ಸಮುದಾಯ – ನಿರ್ಮಾಪಕರು, ನಿರ್ದೇಶಕರು, ಚಿತ್ರಕಥೆ ಬರಹಗಾರರು, ಕಲಾವಿದರು, ತಂತ್ರಜ್ಞರೂ – ಎಲ್ಲರ ಆಯಾ ಕಲಾ ಸಾಮರ್ಥ್ಯ, ಪರಿಣಿತಿಗೆ ಪೋಷಕವಾಗಿ ಒಂದು ವೇದಿಕೆ ಯಾಗಬೇಕೆನ್ನುವ ನಿಟ್ಟಿನಲ್ಲಿ ‘ಮಾಧ್ಯಮ ಅನೇಕ’ ಈ ಪ್ಲಾಟ್ಫಾರ್ಮ್ ಅನ್ನು ರೂಪಿಸುತ್ತಿದೆ. ಇಲ್ಲಿನ ಕಂಟೆಂಟ್ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಇರುತ್ತದೆ. ಆಸಕ್ತ ಚಿತ್ರಕಥೆ ಬರಹಗಾರರು, ಕಥೆಗಾರರು, ತಮ್ಮ ಯಾವುದೇ ಕಥಾವಸ್ತುವಾಗಲಿ ಅಥವಾ ತಮ್ಮ ಸಿದ್ಧ ಚಿತ್ರಕಥೆ / ಸ್ಕ್ರಿಪ್ಟ್‌ ಗಳ ಪರಿಕಲ್ಪನೆಗಳನ್ನು ‘ಮಾಧ್ಯಮ ಅನೇಕ’ ಕಂಟೆಂಟ್ ಕ್ಯುರೇಟರ್ ಗಳಿಗೆ ಕಳುಹಿಸಬಹುದು. ವಸ್ತು ವಿಷಯ ವೆಬ್ ಸೀರೀಸ್ ಅಥವಾ ಡಾಕ್ಯುಮೆಂಟರಿ ಗೆ ಪೂರಕವಾಗಿ ಇರುವಂತಹದ್ದಾಗಿರಬೇಕು. OTT ಪ್ಲಾಟ್‌ಫಾರ್ಮ್‌ಗಳು ಯುವ ಚಲನಚಿತ್ರ ನಿರ್ಮಾಪಕರಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿವೆ ಮತ್ತು ಪರಿಣಿತ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ವಿಭಿನ್ನ ಪರಿಕಲ್ಪನೆಗಳು ಮತ್ತು ಕಥಾಹಂದರವನ್ನು ಪ್ರಯೋಗಿಸುವ ಸ್ವಾತಂತ್ರ್ಯವನ್ನು ದೊರಕಿಸಿಕೊಡುತ್ತಿವೆ. ಆದರೆ ಯಾವುದೇ ಪ್ರಮುಖ ಪ್ರಾದೇಶಿಕ OTT streaming platform ಕನ್ನಡ ಭಾಷೆಯಲ್ಲಿ original content ಅನ್ನು ಸಕ್ರಿಯವಾಗಿ ಪೂರೈಸುವುದನ್ನು ನಾವಿನ್ನೂ ಕಾಣಬೇಕಾಗಿದೆ. ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಾದ Amazon Prime Video, Netflix, ಮತ್ತು Hotstar ಇನ್ನೂ ಕನ್ನಡದಲ್ಲಿ ಭಾರಿ ಪ್ರಮಾಣದ ಆಸಕ್ತಿ ತೋರಿಸಬೇಕಾಗಿದೆ. ಈ ಕೊರತೆಯನ್ನು ಮಾಧ್ಯಮ ಅನೇಕ ಪ್ರಾದೇಶಿಕ ಭಾಷೆಗಳಿಗೆ, ವಿಶೇಷವಾಗಿ ಕನ್ನಡ ಭಾಷೆಗೆ ಇರುವ ಒಂದು ಸದಾವಕಾಶವೆಂದು ಪರಿಗಣಿಸುತ್ತಿದೆ. ಅಂತೆಯೇ ‘ಮಾಧ್ಯಮ ಅನೇಕ’ 2020 ರಲ್ಲಿ ವೆಬ್ ಪ್ಲ್ಯಾಟ್‌ಫಾರ್ಮ್‌ಗಳಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ತಯಾರಿಸುವತ್ತ ಗಮನ ಹರಿಸಲು ಪ್ರಾರಂಭಿಸಿತು. ಇದೀಗ ವೆಬ್ ಪ್ಲಾಟ್ಫಾರ್ಮ್ ಗಳಲ್ಲಿ ಪ್ರಾದೇಶಿಕ ಭಾಷೆಗಳ ಕಾರ್ಯಕ್ರಮಗಳಿಗೆ, ಅವುಗಳ ನಿರ್ಮಾಪಕರಿಗೆ ಬೇಡಿಕೆ ಹೆಚ್ಚುತ್ತಿರುವ ಈ ಹಂತದಲ್ಲಿ ಮಾಧ್ಯಮ ಅನೇಕ ತನ್ನ OTT ಪ್ರಕಟಣೆ ಹೊರತರುತ್ತಿದೆ. ಮಾಧ್ಯಮ ಅನೇಕ ಪ್ರೈ ಲಿ. ಕುರಿತು “ಮಾಧ್ಯಮ ಅನೇಕ ಪ್ರೈ. ಲಿ.” ಬೆಂಗಳೂರು ಮೂಲದ ಮೀಡಿಯಾ ಪ್ರೊಡಕ್ಷನ್ ಹೌಸ್ ಆಗಿ 2018ರಿಂದ ಕಾರ್ಯಾಚರಣೆ ಮಾಡುತ್ತಿದೆ. ಮನರಂಜನೆ ಮತ್ತು infotainment ವಿಭಾಗಗಳಿಗೆ ಮೌಲ್ಯ ಆಧಾರಿತ, ಕಾಲಮಾನಕ್ಕೆ ತಕ್ಕಂತೆ ಮತ್ತು ಉತ್ತಮ ಗುಣಮಟ್ಟದ ವಿಷಯವನ್ನು ನಿರ್ಮಿಸುವ ದೃಷ್ಟಿಯೊಂದಿಗೆ ಕಳೆದ ಮೂರಕ್ಕೂ ಹೆಚ್ಚು ವರ್ಷಗಳಿಂದ ವೆಬ್ ಆಧಾರಿತ ಮನರಂಜನಾ ವಿಷಯ, ಸಾಕ್ಷ್ಯಚಿತ್ರಗಳು ಮತ್ತು Talk Showಗಳನ್ನು ಕನ್ನಡ ಭಾಷೆಯಲ್ಲಿ ನಿರ್ಮಿಸುತ್ತಾ ಬಂದಿದೆ. “ಬಿಚ್ಚಿಟ್ಟ ಬುತ್ತಿ – webಸಂಭಾಷಣೆ” ಮಾಧ್ಯಮ ಅನೇಕ ನಿರ್ಮಾಣದ ಮೊಟ್ಟ ಮೊದಲ ಪ್ರಸ್ತುತಿ. 2018 ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಹಲವಾರು ಕ್ಷೇತ್ರಗಳಲ್ಲಿ – ಸಾಹಿತ್ಯ, ಸಿನಿಮಾ, ಸಂಗೀತ, ನಾಟ್ಯ, ಕೃಷಿ, ರಂಗಭೂಮಿ – ಸಾಧನೆ ಮಾಡಿರುವ ಅಪ್ರತಿಮ ಪ್ರತಿಭೆಗಳ ಸಾಧನೆಯನ್ನು ದಾಖಲಿಸುವುದು ಮೂಲ ಉದ್ದೇಶ. ಸಂದರ್ಶನಗಳ ಮೂಲಕ ಅಪೂರ್ವ ವ್ಯಕ್ತಿತ್ವಗಳ ವಿಸ್ತಾರ ಪರಿಚಯ ಈ ಕಾರ್ಯಕ್ರಮದಲ್ಲಿ ದೊರೆಯುತ್ತದೆ. ಜೊತೆಜೊತೆಗೆ ಸಾಕ್ಷ್ಯಚಿತ್ರಗಳನ್ನು ಕೂಡ ಮಾಧ್ಯಮ ಅನೇಕ ನಿರ್ಮಿಸಿದ್ದು ಅವುಗಳಲ್ಲಿ ಮುಖ್ಯವಾದವು “ತೇಜಸ್ವಿ ಎಂಬ ವಿಸ್ಮಯ” “Marie Curie – An Inspiration for All Times”, “A Tribute to MS Sathyu”. ಇತ್ತೀಚೆಗೆ ಮತ್ತೊಂದು ಸಾಕ್ಸ್ಯಚಿತ್ರ ಸರಣಿ ಪ್ರಾರಂಭಿಸಿದ್ದು “People Stories” ಶೀರ್ಷಿಕೆಯಡಿ ನಮ್ಮ ಸುತ್ತಲಿರುವ ಜನಸಾಮಾನ್ಯರ ಅಸಾಮಾನ್ಯ ಬದುಕಿನ ಚಿತ್ರಣ ಬಿಚ್ಚಿಡುವ ಪ್ರಯತ್ನ ನಡೆಯುತ್ತಿದೆ. ಇವೆಲ್ಲಾ ಕಾರ್ಯಕ್ರಮಗಳಿಗೆ ಪ್ರೇಕ್ಷಕರಿಂದ ದೊರೆತ, ದೊರೆಯುತ್ತಿರುವ ಮೆಚ್ಚುಗೆ, ಸಕಾರಾತ್ಮಕ ಪ್ರತಿಕ್ರಿಯೆಗಳು ಕನ್ನಡ ಭಾಷೆಯ original content ಗೆ ಉದ್ಯಮದಲ್ಲಿ ಇರುವ ಆದ್ಯತೆ ಮತ್ತು ಬೇಡಿಕೆ ಸಾಕ್ಷಿ ಎಂದರೆ ತಪ್ಪಾಗಲಾರದು. ಇದೀಗ ೨೦೨೧ ರಲ್ಲಿ ‘ಮಾಧ್ಯಮ ಅನೇಕ’ ತನ್ನದೇ ಆದ OTT ಹೊರತರುತ್ತಿದ್ದು ವೆಬ್ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು. ಪ್ರೇಕ್ಷಕರಿಗೆ, content producers ಗಳಿಗೆ, ನಿರ್ದೇಶಕ – ನಿರ್ಮಾಪಕರಿಗೆ, ಕ್ರಿಯಾಶೀಲ ಬರಹಗಾರರಿಗೆ ಇದೊಂದು ಅಮೂಲ್ಯ ವೇದಿಕೆಯಾಗುವ ಭರವಸೆಯೊಂದಿಗೆ ಈ ಪ್ರಕಟಣೆ ನಿಮ್ಮ ಮುಂದೆ.
ಭಾರತವು ವಿಶಾಲವಾದ ಕಾನೂನು ವ್ಯವಸ್ಥೆಯನ್ನು ಹೊಂದಿದೆ, ಆದರೆ ಹೆಚ್ಚಿನ ನಾಗರಿಕರು ಕಾನೂನುಗಳ ಅಡಿಯಲ್ಲಿ ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದಿಲ್ಲ ಅಥವಾ ಅವುಗಳನ್ನು ಹೇಗೆ ಜಾರಿಗೊಳಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಾನೂನು ಸಹಾಯದ ಹೆಚ್ಚಿನ ಅಗತ್ಯವಿರುವವರು ಕೈಗೆಟಕುವಂತಹ, ವಿಶ್ವಾಸಾರ್ಹ ಕಾನೂನು ಮಾಹಿತಿಗೆ ಹಲವಾರು ಅಡೆತಡೆಗಳನ್ನು ಎದುರಿಸುತ್ತಾರೆ. ಇದು ಕಾಗದದ ಮೇಲಿನ ಕಾನೂನು ಮತ್ತು ಅದು ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ನಡುವೆ ವಿಶಾಲವಾದ ಅಂತರಕ್ಕೆ ಕಾರಣವಾಗುತ್ತದೆ. ಕೆಲವು ಅಡೆತಡೆಗಳು: ಅರಿವಿನ ಕೊರತೆ: ಅವರ ಸಮಸ್ಯೆ ಕಾನೂನು ಸಮಸ್ಯೆಯಾಗಿದೆ ಎಂದು ಮತ್ತು ಅವರ ಪರಿಸ್ಥಿತಿಗೆ ಕಾನೂನು ಹೇಗೆ ಅನ್ವಯಿಸುತ್ತದೆ ಎಂಬುದರ ಕುರಿತು ಮಾಹಿತಿಯ ಕೊರತೆ: ವಕೀಲರನ್ನು ಸಂಪರ್ಕಿಸುವುದನ್ನು ಹೊರತುಪಡಿಸಿ ಕಾನೂನು ಮಾಹಿತಿಯನ್ನು ಎಲ್ಲಿ ಪಡೆಯಬಹುದು ಎಂಬುದರ ಕುರಿತು ಹೆಚ್ಚಿನ ನಾಗರಿಕರಿಗೆ ತಿಳಿದಿರುವುದಿಲ್ಲ. ಕಾನೂನು ಮಾಹಿತಿಯು ಲಭ್ಯವಿದ್ದಾಗ, ಅದು ಹೆಚ್ಚಾಗಿ ಇಂಗ್ಲಿಷ್‌ನಲ್ಲಿದೆ ಮತ್ತು ಸಂಕೀರ್ಣವಾಗಿದೆ. 30 ಕೋಟಿಗೂ ಹೆಚ್ಚು ಭಾರತೀಯರು ಸಾಕ್ಷರರಲ್ಲ ಮತ್ತು ಜನಸಂಖ್ಯೆಯ 10.6% ಮಾತ್ರ ಇಂಗ್ಲಿಷ್ ಮಾತನಾಡಬಲ್ಲರು. ಸಂಕೀರ್ಣ ಪ್ರಕ್ರಿಯೆ: ಪ್ರತಿಯೊಂದು ಕಾನೂನು ಸಮಸ್ಯೆಯು ಕೇಂದ್ರ ಶಾಸನಗಳು, ರಾಜ್ಯ ಕಾನೂನುಗಳು, ಅಧಿಸೂಚನೆಗಳು ಮತ್ತು ಬಹು ನ್ಯಾಯ ವಿತರಣಾ ವೇದಿಕೆಗಳ ಸಂಕೀರ್ಣ ಚೌಕಟ್ಟಿನಿಂದ ನಿಯಂತ್ರಿಸಲ್ಪಟ್ಟಿದೆ. ಇದು ನ್ಯಾಯವನ್ನು ಪಡೆಯುವ ಪ್ರಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ. ಭಾರೀ ಆರ್ಥಿಕ ಹೊರೆ: ವಕೀಲರನ್ನು ತೊಡಗಿಸಿಕೊಳ್ಳುವ ಮತ್ತು/ಅಥವಾ ಸಲಹೆ ನೀಡುವ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ ಮತ್ತು ಅನೇಕರಿಗೆ ಭರಿಸಲಾಗುವುದಿಲ್ಲ. ಅಲ್ಲದೆ, ಬಳಕೆದಾರರ ಗುರುತು, ಆದಾಯ, ಸಾಮಾಜಿಕ ಸ್ಥಿತಿ, ಭೌಗೋಳಿಕ ಸ್ಥಳ ಮತ್ತು ಶಿಕ್ಷಣದ ಮಟ್ಟಗಳಂತಹ ಅನೇಕ ಅಂಶಗಳು ಕಾನೂನಿನೊಂದಿಗೆ ಸಂವಹನ ನಡೆಸುವ ಅವರ ಅನುಭವದ ಮೇಲೆ ಪರಿಣಾಮ ಬೀರುತ್ತವೆ. ಅನೇಕರಿಗೆ, ಕಾನೂನು ಸಬಲೀಕರಣಕ್ಕಿಂತ ಹೆಚ್ಚಾಗಿ ಶೋಷಣೆಯ ಸಾಧನವಾಗಬಹುದು. ನ್ಯಾಯ ಎಂದರೆ? ‘ನ್ಯಾಯ’ ಮುಕ್ತ ಪ್ರವೇಶ, ಡಿಜಿಟಲ್ ಸಂಪನ್ಮೂಲ. ಇದು ಬಹು ಸ್ವರೂಪಗಳಲ್ಲಿ ಸರಳ, ಕಾರ್ಯಸಾಧ್ಯ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತಹ ಕಾನೂನು ಮಾಹಿತಿಯನ್ನು ಒದಗಿಸುತ್ತದೆ. ಹೀಗೆ, ನ್ಯಾಯ ದಿನನಿತ್ಯದ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದರಿಂದ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ನ್ಯಾಯವನ್ನು ಪಡೆಯಲು ಅಧಿಕಾರವನ್ನು ಹೊಂದಿರುತ್ತಾರೆ. ನ್ಯಾಯಾವನ್ನು ನವೆಂಬರ್ 2016 ರಲ್ಲಿ ಪ್ರಾರಂಭಿಸಲಾಯಿತು ಮತ್ತು ವಕೀಲರಲ್ಲದವರಿಗೆ ಕಾನೂನುಗಳನ್ನು ಸರಳಗೊಳಿಸುವಲ್ಲಿ ತೊಡಗಿರುವ ಭಾರತದ ಮೊದಲ ಸಂಸ್ಥೆಯಾಗಿದೆ. ರೋಹಿಣಿ ನಿಲೇಕಣಿಯವರಿಂದ ರೂಪಿಸಲ್ಪಟ್ಟ ಮತ್ತು ‘ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ’ ಯಲ್ಲಿ ಕಾವು ಪಡೆದಿರುವ ನಮ್ಮ ಕೆಲಸವು ನಮ್ಮ ಪೋಷಕರಾದ ರೋಹಿಣಿ ನಿಲೇಕಣಿ ಫಿಲಾಂತ್ರೊಪಿಸ್ ಮತ್ತು ಮೇಕಿನ್ ಮಹೇಶ್ವರಿ ಅವರ ಉದಾರ ಕೊಡುಗೆಯಿಂದ ಸಾಧ್ಯವಾಗಿದೆ. ನಾವು ಒಂದು ಸ್ವತಂತ್ರ, ಪಕ್ಷಾತೀತ, ಅರಾಜಕೀಯ ಉಪಕ್ರಮ. ನಮ್ಮ ಕೆಲಸ “ನಾಗರಿಕರಲ್ಲಿ ಕಾನೂನು ಅರಿವು ಸಶಕ್ತ ಭಾರತಕ್ಕೆ ಕಾರಣವಾಗಬಹುದು” ಎಂದು ನಾವು ನಂಬುತ್ತೇವೆ. ಕಾನೂನು ಅರಿವು ಮೂಡಿಸಲು, ನಮ್ಮ ಮುಕ್ತ ಪ್ರವೇಶ, ಆನ್‌ಲೈನ್ ಪ್ಲಾಟ್‌ಫಾರ್ಮ್ ವಿವರಣೆಗಳು, ಮಾರ್ಗದರ್ಶಿಗಳು, ಮಾದರಿ ನಮೂನೆಗಳು ಮತ್ತು ಟೆಂಪ್ಲೇಟ್‌ಗಳು, ಟೂಲ್‌ಕಿಟ್‌ಗಳು, ರಾಜ್ಯವಾರು ಸಂಪನ್ಮೂಲಗಳು, ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳು, ಗ್ಲಾಸರಿ ಪದಗಳು, ಮತ್ತು ಇಂಗ್ಲಿಷ್‌, ಹಿಂದಿ ಮತ್ತು ಕನ್ನಡದಲ್ಲಿ ಲಿಖಿತ, ಆಡಿಯೋ ಮತ್ತು ವೀಡಿಯೋ ರೂಪದಲ್ಲಿ ಮಾಹಿತಿಯನ್ನು ಒದಗಿಸುತ್ತದೆ. ನಮ್ಮ ಸಹಯೋಗ ವೇದಿಕೆಯ ಮೂಲಕ ನಾಗರಿಕರು, ಸರ್ಕಾರಿ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು, ವಕೀಲರು, ಶಿಕ್ಷಣ ತಜ್ಞರು ಮತ್ತು ತಳಮಟ್ಟದ ಸಂಸ್ಥೆಗಳಿಂದ ಮಾಹಿತಿಯು ಕ್ರಿಯಾತ್ಮಕ ಮತ್ತು ಪ್ರಸ್ತುತವಾಗಿದೆ. ಸೂಕ್ತವಾದ ನ್ಯಾಯ ವಿತರಣಾ ಕಾರ್ಯವಿಧಾನಗಳಿಗೆ ನಿಮ್ಮ ಮಾರ್ಗವನ್ನು ನ್ಯಾವಿಗೇಟ್ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ವೆಬ್‌ಸೈಟ್‌ನ ಆಸ್ಕ್ ನ್ಯಾಯಾ ವಿಭಾಗ ಅಥವಾ ನಮ್ಮ ವಾಟ್ಸಾಪ್ ಆಧಾರಿತ ಸಹಾಯವಾಣಿಯ ಮೂಲಕ ಮುಂದಿನ ಪ್ರಶ್ನೆಗಳನ್ನು ಪರಿಹರಿಸಬಹುದು. ಸಮಸ್ಯೆಯ ಕಾನೂನು ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿವಿಧ ಕಾನೂನುಗಳ ಅಡಿಯಲ್ಲಿ ನಿಮ್ಮ ಹಕ್ಕುಗಳು ಮತ್ತು ಕರ್ತವ್ಯಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳಲು ‘ನ್ಯಾಯಾ’ ಮಾಹಿತಿಯನ್ನು ಒದಗಿಸುತ್ತದೆ. ನೀವು ವಕೀಲರನ್ನು ಸಂಪರ್ಕಿಸುವ ಮೊದಲು ಲಭ್ಯವಿರುವ ಆಯ್ಕೆಗಳನ್ನು ಗುರುತಿಸಲು ಸಹ ನಾವು ನಿಮಗೆ ಸಹಾಯ ಮಾಡುತ್ತೇವೆ. ತಾಂತ್ರಿಕ ವಿಭಜನೆಯನ್ನು ಕಡಿಮೆ ಮಾಡಲು ಮತ್ತು ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳನ್ನು ತಲುಪಲು, ನಾವು ಪ್ರೇಕ್ಷಕರ ಅಗತ್ಯಗಳಿಗೆ ಕಸ್ಟಮೈಸ್ ಮಾಡಿದ ವಿಷಯವನ್ನು ರಚಿಸುತ್ತೇವೆ ಮತ್ತು ಪಾಲುದಾರ ಸಂಸ್ಥೆಗಳು ಅಥವಾ ಕಾನೂನು ಚಾಂಪಿಯನ್‌ಗಳಾಗಿ ಕಾರ್ಯನಿರ್ವಹಿಸುವ ಸ್ಥಳೀಯ ಸಮುದಾಯದ ಮುಖಂಡರ ಸಹಾಯದಿಂದ ಅವುಗಳನ್ನು ಪ್ರಚಾರ ಮಾಡುತ್ತೇವೆ. ನಮ್ಮ ‘ಆಕ್ಸೆಸ್ ಟು ಜಸ್ಟಿಸ್’ ವಕೀಲರು, ಕಾನೂನು ತಜ್ಞರು ಮತ್ತು ಕಾನೂನು ವಿದ್ಯಾರ್ಥಿಗಳ ನೆಟ್‌ವರ್ಕ್ ಕಾನೂನು ಪ್ರಶ್ನೆಗಳನ್ನು ಪರಿಹರಿಸಲು ಮಾಹಿತಿಯನ್ನು ಒದಗಿಸಲು ತಳ ಸಮುದಾಯಗಳೊಂದಿಗೆ ಕೆಲಸ ಮಾಡುತ್ತದೆ ಮತ್ತು ಸಂಕೀರ್ಣವಾದ ಕಾನೂನು ವ್ಯವಸ್ಥೆಯನ್ನು ನ್ಯಾವಿಗೇಟ್ ಮಾಡಲು ನಿಮಗೆ ಸಹಾಯ ಮಾಡಲು ಪ್ಯಾರಾಲೀಗಲ್ ಬೆಂಬಲವನ್ನು ನೀಡುತ್ತದೆ. ನಾವು ಕಾನೂನು ಸಲಹೆಯನ್ನು ನೀಡುವುದಿಲ್ಲ ಮತ್ತು ವಕೀಲರಂತೆ ನಿಮ್ಮ ಕಾನೂನು ವಿವಾದಗಳನ್ನು ಪರಿಹರಿಸಲು ಸಹಾಯ ಮಾಡುವುದಿಲ್ಲ. ನಮ್ಮ ತಂಡ ಕಾನೂನುಗಳನ್ನು ಎಲ್ಲರಿಗೂ ಹೆಚ್ಚು ಸುಲಭವಾಗಿಸುವ ನಮ್ಮ ಸಾಮಾನ್ಯ ಉತ್ಸಾಹದಿಂದ ನ್ಯಾಯಾ ತಂಡವು ಒಂದುಗೂಡಿದೆ. ಪ್ರತಿಯೊಬ್ಬ ತಂಡದ ಸದಸ್ಯರು ನಿರ್ದಿಷ್ಟ ಪಾತ್ರವನ್ನು ಹೊಂದಿದ್ದರೂ, ತಂಡದ ಸದಸ್ಯರ ನಡುವೆ ದೃಢವಾದ ಅಡ್ಡ-ಕಾರ್ಯನಿರ್ವಹಣೆಯಿದೆ. ಪ್ರತಿಯೊಬ್ಬರಿಗೂ ಸಾಂಸ್ಥಿಕ ದೃಷ್ಟಿಗೆ ಆಹಾರ ನೀಡುವ ಪ್ರಾಥಮಿಕ ಮತ್ತು ದ್ವಿತೀಯಕ ಕರ್ತವ್ಯಗಳು ಇವೆ. ಸಂವಿಧಾನ್ ಫೆಲೋಶಿಪ್ ನಮ್ಮ ಸಂವಿಧಾನ ಫೆಲೋಗಳು ಜಿಲ್ಲಾ ಮಟ್ಟದ ವಕೀಲರು. ಅವರು ಸರಳವಾದ ಪ್ರಾದೇಶಿಕ ಭಾಷೆಯ ಮಾಹಿತಿಯನ್ನು ರಚಿಸಲು ತಳಮಟ್ಟದ ಸಂಸ್ಥೆಗಳು ಮತ್ತು ಸಮುದಾಯದೊಂದಿಗೆ ಕೆಲಸ ಮಾಡುತ್ತಾರೆ. ಮತ್ತಷ್ಟು ಓದಿ ನಮ್ಮ ಸಹಯೋಗಿಗಳು ನಾವು ಸರ್ಕಾರೇತರ ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಜೊತೆಗೆ ವಿವಿಧ ಕಾನೂನು ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರೊಂದಿಗೆ ಕೆಲಸ ಮಾಡುತ್ತೇವೆ. ಅವರ ಆಲೋಚನೆಗಳು, ವಿಮರ್ಶೆಗಳು ಮತ್ತು ಬೆಂಬಲವು ಭಾರತದಲ್ಲಿನ ಕಾನೂನುಗಳ ಅಡಿಯಲ್ಲಿ ಅವರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದಿರುವ ತಿಳುವಳಿಕೆಯುಳ್ಳ ವ್ಯಕ್ತಿಗಳ ಬಲವಾದ ಸಮುದಾಯವನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ. 'ಆಕ್ಸೆಸ್ ಟು ಜಸ್ಟಿಸ್' ನೆಟ್‌ವರ್ಕ್ ವಿದ್ಯಾರ್ಥಿ ಸ್ವಯಂಸೇವಕರು ನ್ಯಾಯಾವನ್ನು ಕಾನೂನು ವಿದ್ಯಾರ್ಥಿಗಳು ಮತ್ತು ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳ ಕಾನೂನು ನೆರವು ಚಿಕಿತ್ಸಾಲಯಗಳು ಬೆಂಬಲಿಸುತ್ತಿವೆ. ಪ್ರಸ್ತುತ, ನಾವು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU), ಸಿಂಬಿಯಾಸಿಸ್ ಲಾ ಸ್ಕೂಲ್ ನೋಯ್ಡಾ, ನ್ಯಾಷನಲ್ ಲಾ ಯೂನಿವರ್ಸಿಟಿ (NLU) – ಒರಿಸ್ಸಾ, ಮತ್ತು NUJS, ಪಶ್ಚಿಮ ಬಂಗಾಳ, ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಸಮುದಾಯ ಆಧಾರಿತ ಸಂಸ್ಥೆಗಳು ನ್ಯಾಯಾ ಅವರ ಪಾಲುದಾರ ಸಂಸ್ಥೆಗಳು ಕಾನೂನು ಮಾಹಿತಿಯನ್ನು ಸಂಬಂಧಿತ ಮತ್ತು ಕ್ರಮಬದ್ಧವಾಗಿಸಲು ನ್ಯಾಯಾಗೆ ಇನ್‌ಪುಟ್‌ಗಳನ್ನು ಒದಗಿಸುತ್ತವೆ. ಸಮಾನಾಂತರವಾಗಿ, ನ್ಯಾಯಾ ಅವರ ವಕೀಲರ ತಂಡವು ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಈ ಸಂಸ್ಥೆಗಳ ಫಲಾನುಭವಿಗಳಿಗೆ ನಿರ್ದಿಷ್ಟ ಆಸಕ್ತಿಯ ವಿಷಯಗಳ ಕುರಿತು ಕಸ್ಟಮೈಸ್ ಮಾಡಿದ ಮತ್ತು ಸಮಗ್ರ ಕಾನೂನು ಮಾಹಿತಿಯನ್ನು ರಚಿಸುತ್ತದೆ. ಸಂವಿಧಾನ್ ಫೆಲ್ಲೋಸ್ ತಳ ಸಮುದಾಯಗಳಿಗೆ ಸಹಾಯ ಮಾಡಲು ಉತ್ಸುಕರಾಗಿರುವ ವಕೀಲರಿಗೆ ನ್ಯಾಯದ ಸಂವಿಧಾನ್ ಫೆಲೋಶಿಪ್ ಒಂದು ಅನನ್ಯ ಅವಕಾಶವಾಗಿದ್ದು, ಅವರ ಸ್ಥಳೀಯ ಸಮುದಾಯಗಳಲ್ಲಿ ಫಲಾನುಭವಿಗಳಿಗೆ ಕ್ರಮಬದ್ಧವಾದ ಕಾನೂನು ಮಾಹಿತಿಯ ರಚನೆ ಮತ್ತು ಪ್ರಸಾರವನ್ನು ಸಂವಿಧಾನ್ ಫೆಲೋಶಿಪ್ ಸುಗಮಗೊಳಿಸುತ್ತದೆ. ಇನ್ನಷ್ಟು ತಿಳಿಯಿರಿ ‘ನ್ಯಾಯ’ ಮುಕ್ತ ಪ್ರವೇಶ, ಡಿಜಿಟಲ್ ಸಂಪನ್ಮೂಲ. ಇದು ಬಹು ಸ್ವರೂಪಗಳಲ್ಲಿ ಸರಳ, ಕಾರ್ಯಸಾಧ್ಯ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತಹ ಕಾನೂನು ಮಾಹಿತಿಯನ್ನು ಒದಗಿಸುತ್ತದೆ. ಹೀಗೆ, ನ್ಯಾಯ ದಿನನಿತ್ಯದ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದರಿಂದ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ನ್ಯಾಯವನ್ನು ಪಡೆಯಲು ಅಧಿಕಾರವನ್ನು ಹೊಂದಿರುತ್ತಾರೆ.
Jun 29, 2022 Anjum Moudgil, Breaking news, India news, kannada news, Karnataka news, National news, Shooting World Cup, silver, ಅಂಜುಮ್ ಮೌದ್ಗಿಲ್, ಬೆಳ್ಳಿ, ಶೂಟಿಂಗ್ ವಿಶ್ವಕಪ್‌ PTI ನವದೆಹಲಿ: ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಅನುಭವಿ ಶೂಟರ್ ಅಂಜುಮ್ ಮೌದ್ಗಿಲ್ ಅವರು ಶುಕ್ರವಾರ ಬೆಳ್ಳಿ ಪದಕ ಗಳಿಸಿದ್ದಾರೆ. ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್‌ನಲ್ಲಿ ಅಂಜುಮ್ ಮೌದ್ಗಿಲ್ ಅವರು ಬೆಳ್ಳಿ ಗೆಲ್ಲುವ ಮೂಲಕ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಅಂಜುಮ್‌ ಅವರು 12–16ರಿಂದ ಡೆನ್ಮಾರ್ಕ್‌ನ ರಿಕ್ಕೆ ಮಯಿಂಗ್ ಇಬ್ಸೆನ್ ಅವರು ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟರು. ಇದನ್ನು ಓದಿ: ಫ್ರೆಂಚ್ ಓಪನ್: ಥ್ರಿಲ್ಲರ್ ಗೇಮ್ ನಲ್ಲಿ ವಿಶ್ವದ ನಂ.1 ಜಾಕೋವಿಚ್ ವಿರುದ್ಧ ನಡಾಲ್ ಗೆ ಜಯ, ಸೆಮೀಸ್ ಗೆ ಲಗ್ಗೆ!! ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆಯಾಗಿರುವ ಅಂಜುಮ್‌, ರ‍್ಯಾಂಕಿಂಗ್ ಸುತ್ತಿನಲ್ಲಿ ಗುರುವಾರ 600ರ ಪೈಕಿ 587 ಪಾಯಿಂಟ್ಸ್ ಕಲೆಹಾಕಿದ್ದರು. 60 ಶೂಟರ್‌ಗಳ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಅಂಜುಮ್ ಅವರಿಗೆ ವಿಶ್ವಕಪ್‌ನಲ್ಲಿ ಇದು ಎರಡನೇ ಬೆಳ್ಳಿ ಪದಕವಾಗಿದೆ. ಇದೇ ಸ್ಪರ್ಧೆಯಲ್ಲಿದ್ದ ಭಾರತದ ಆಯುಷಿ ಪೊದ್ದಾರ್ ಮತ್ತು ಆಶಿ ಚೌಕ್ಸಿ ಕ್ರಮವಾಗಿ 16 ಮತ್ತು 20ನೇ ಸ್ಥಾನ ಗಳಿಸಿದರು.
Bagepalli : ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಸಾರ್ವಜನಿಕರ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಸಾಕ್ಷರತಾ ಸಂಘಟನೆಗಳ ವಿವಿಧ ಚಟುವಟಿಕೆಗಳನ್ನು ತಹಶೀಲ್ದಾರ್ ಡಿ.ಎ.ದಿವಾಕರ್ ಉದ್ಘಾಟಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರರು ” ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಯಲ್ಲಿ ಸಾಮಾಜಿಕ ಪ್ರಜ್ಞೆ ಹೊಂದುವುದು ಅಗತ್ಯವಾಗಿದೆ. ಮತದಾನದ ಪಾವಿತ್ರ್ಯತೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯ ಸಂವಿಧಾನ 18 ವರ್ಷಗಳ ನಂತರದ ಪ್ರಜೆಗಳಿಗೆ ಮತದಾನದ ಹಕ್ಕು ನೀಡಿದೆ. ಮತದಾನ ಮಾಡುವ ಮೂಲಕ ಸರ್ಕಾರಗಳನ್ನು ರಚನೆ ಮಾಡುವ ಅವಕಾಶಗಳು ಇರುವುದರಿಂದ ಮತದಾನದ ಜಾಗೃತಿ ಮತ್ತು ಮಹತ್ವವನ್ನು ವಿದ್ಯಾರ್ಥಿ ದೆಸೆಯಿಂದಲೇ ಕಲಿಸಲು ಶಾಲಾ-ಕಾಲೇಜುಗಳಲ್ಲಿ ಯುವಸಂಸತ್ತು ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಮತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಹಾಗೂ ರಾಜ್ಯ ಮಟ್ಟದ ರಸಪ್ರಶ್ನೆಗಳ ಸ್ಪರ್ಧೆಗಳನ್ನು ಹಮ್ಮಿಕೊಂಡ್ಡಿದ್ದು ವಿದ್ಯಾರ್ಥಿಗಳು ಭಾಗವಹಿಸಬೇಕು ” ಎಂದು ಹೇಳಿದರು. ಶಾಲಾ-ಕಾಲೇಜುಗಳಲ್ಲಿ ವಿಧಾನಸಭೆ, ಲೋಕಸಭೆಯಲ್ಲಿ ನಡೆಯುವ ಅಧಿವೇಶನಗಳ ಮಾದರಿಯಲ್ಲಿ ಯುವಸಂಸತ್ತು ಕಾರ್ಯಕ್ರಮ ನಡೆಸಲಾಗುತ್ತದೆ. ಮತದಾನದ ಬಗ್ಗೆ ಅರಿವು ಮೂಡಿಸಲು ಕ್ವಿಜ್ ಸ್ಪರ್ಧೆಗಳನ್ನು ಮಾಡಲಾಗಿದ್ದು, ಗೆದ್ದವರಿಗೆ ಬಹುಮಾನ, ನಗದು ಪುರಸ್ಕಾರ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ ತಿಳಿಸಿದರು. ಬಾಲಕಿಯರ ಶಾಲಾವರಣದ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ಹಾಗೂ ಭಿತ್ತಿಪತ್ರಗಳ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರ ಸಂಪನ್ಮೂಲ ತಾಲ್ಲೂಕು ಸಮನ್ವಾಧಿಕಾರಿ ವೆಂಕಟರಾಮಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ಮಂಜುನಾಥಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಮೀರ್ ಜಾನ್, ಉಪನ್ಯಾಸಕ ವೆಂಕಟರಾಮರೆಡ್ಡಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಫಕ್ರುದ್ದೀನ್, ಶಿಕ್ಷಣ ಅಧಿಕಾರಿಗಳಾದ ರಾಜಣ್ಣ, ಬಾಲರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣಪ್ಪ, ಉಪನ್ಯಾಸಕಿ ಡಾ.ಶಾರದ, ತಾಲ್ಲೂಕು ಸಾಕ್ಷರತಾ ಅಧಿಕಾರಿ ಆರ್.ಶಿವಪ್ಪ ಕಾರ್ಯಕರಮದಲ್ಲಿ ಪಾಲ್ಗೊಂಡಿದ್ದರು.
ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ-ನಷ್ಟಗಳು ಸದಾ ಬರುತ್ತವೆ. ಕೆಲವೊಮ್ಮೆ ಸಹಿಸಲು ಅಸಾಧ್ಯ ಎನಿಸಿದಾಗ ಗುರುವಿನ ಸಲಹೆಯೂ ನಮಗೆ ಸದಾ ಮುನ್ನಡೆಯನ್ನು ನೀಡುತ್ತದೆ. ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774. ಮೇಷ ರಾಶಿ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ. ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಕಷ್ಟಕ್ಕೆ ನೂಕಬಹುದು. ಹಣದ ಬಗ್ಗೆ ವಿಶೇಷ ಗಮನ ಹರಿಸಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 1. ವೃಷಭ ರಾಶಿ: ಸ್ಥಿರ ಸಂಪನ್ಮೂಲ ಕಂಡುಕೊಳ್ಳುವಿರಿ. ಆತುರದ ನಿರ್ಧಾರ ಬೇಡ. ಆಹಾರದ ಬಗ್ಗೆ ವಿಶೇಷ ಗಮನ ಹರಿಸಿ. ಖರ್ಚನ್ನು ನಿಭಾಯಿಸಲು ಕಲಿಯುವುದು ಉತ್ತಮ. ಉತ್ತಮ ಹಣದ ಹರಿವು ಇರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 9. ಮಿಥುನ ರಾಶಿ: ಆರ್ಥಿಕ ರಂಗದಲ್ಲಿ ಉತ್ತಮವಾಗಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೆಚ್ಚುಗೆ ಪಡೆಯುವಿರಿ. ವೈವಾಹಿಕ ಜೀವನದಲ್ಲಿ ಸನಸ್ಯೆ ಉಂಟಾಗಬಹುದು. ನಾಲಿಗೆಯ ಮೇಲೆ ಹಿಡಿತವಿರಲಿ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 4. ಕಟಕ ರಾಶಿ: ವಿವಾಹಿತರಿಗೆ ಈ ದಿನ ಚೆನ್ನಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಸಾಮಾನ್ಯಕ್ಕಿಂತಲೂ ಉತ್ತಮವಾಗಿದೆ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ ಎಂದು ಉತ್ಸಾಹ ಕಳೆದುಕೊಳ್ಳಬೇಡಿ. ಆತುರ ಬೇಡ ಮುಂದೆ ಉತ್ತಮ ಫಲಿತಾಂಶ ದೊರೆಯಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 6. ಸಿಂಹ ರಾಶಿ: ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಹಾಜರಾಗುವ ಸಾಧ್ಯತೆ ಇದೆ. ಇಂದು ವ್ಯಾಪಾರಿಗಳಿಗೆ ಏರಿಳಿತ ಕಂಡುಬರಲಿದೆ. ಇಂದು ನೀವು ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ಖರೀದಿಸಬಹುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 3. ಕನ್ಯಾ ರಾಶಿ: ಉತ್ಸಾಹ ಮತ್ತು ತೀವ್ರ ಕೋಪದಿಂದಾಗಿ ದೊಡ್ಡ ನಷ್ಟ ಉಂಟಾಗಬಹುದು. ಇಂದು ಮನಸ್ಸು ಕಿನ್ನತೆಗೆ ಒಳಗಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ಹರಿವು ಸಾಮಾನ್ಯವಾಗಿರಲಿದೆ. ಕೌಟುಂಬಿಕ ಸಮಸ್ಯೆ ಉಂಟಾಗಬಹುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 1. ತುಲಾ ರಾಶಿ: ಬಹಳ ಸಮಯದ ನಂತರ ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಪ್ರವಾಸದ ಸಾಧ್ಯತೆ ಇದೆ. ಕೆಲವು ಕಾರ್ಯಗಳು ಪೂರ್ಣಗೊಳ್ಳಲಿವೆ. ಇದರಿಂದಾಗಿ ನಿಮಗೆ ಸ್ವಲ್ಪ ಸಮಾದಾನವಾಗಬಹುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 4. ವೃಶ್ಚಿಕ ರಾಶಿ: ಇಂದು ನಿಮಗೆ ದೊಡ್ಡ ಕೆಲಸ ಬರಬಹುದು. ಉನ್ನತ ಸ್ಥಾನ ದೊರೆಯಬಹುದು. ಪ್ರಣಯದಲ್ಲಿ ಜಗಳ ಆಗುವುದು. ವಯಕ್ತಿಕ ಜೀವನದಲ್ಲಿ ಸುಖ ಶಾಂತಿ ಇರುವುದು. ನಿಮ್ಮ ಮಗುವಿನಿಂದ ಉತ್ತಮ ಸಂದೇಶ ದೊರೆಯುವುದು. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 5. ಧನು ರಾಶಿ: ಇಂದು ನಿಮ್ಮ ವಿರುದ್ಧ ಪ್ರತಿಭಟನೆ ದರಣಿಗಳು ಉಂಟಾಗಬಹುದು. ಹಣಕ್ಕೆ ಸಂಬಂಧಿಸಿದ ಕೆಲಸವನ್ನು ಮುಂದೂಡುವುದು ಉತ್ತಮ. ವಯಕ್ತಿಕ ಸಂಬಂಧದಲ್ಲಿ ಉಧ್ವೇಗ ಹೆಚ್ಚಾಗಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 3. ಮಕರ ರಾಶಿ: ಇಂದು ಹಿರಿಯರು ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಸಂಗಾತಿಯ ವಿಚಾರದಲ್ಲಿ ಅತ್ರುಪ್ತರಾಗುತ್ತೀರಿ. ಕುಟುಂಬ ಸದಸ್ಯರ ಬೆಂಬಲ ದೊರೆಯಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 7. ಕುಂಭ ರಾಶಿ: ಇಂದು ನಿಮಗೆ ಯಶಸ್ಸು ದೊರೆಯಲಿದೆ. ವಿರೋಧಿಗಳು ನಿಮ್ಮನ್ನು ಹಣಿಯಲು ಕಾಯುತ್ತಿರುತ್ತಾರೆ. ಶೀಗ್ರವೇ ಯಶಸ್ಸನ್ನು ಬಯಸಿದರೆ ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ಆರೋಗ್ಯ ಸ್ಥಿರವಾಗಿರಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 6. ಮೀನ ರಾಶಿ: ಕೆಲಸಗಾರರ ಮೇಲೆ ಒತ್ತಡ ಹೇರಬೇಡಿ. ಅಸಡ್ಡೆ ಉತ್ತಮವಲ್ಲ. ನಕಾರಾತ್ಮಕ ಆಲೋಚನೆಗಳಿಂದ ಹೊರಬರುವುದು ಉತ್ತಮ. ಆರೋಗ್ಯ ಸ್ಥಿರವಾಗಿರಲಿದೆ. ಪ್ರೀತಿಯ ವಿಷಯದಲ್ಲಿ ಈ ದಿನ ಜಾಗರುಕರಾಗಿರುವುದು ಉತ್ತಮ. ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಕರೆ ಮಾಡಿ 7022660774. ಅದೃಷ್ಟ ಸಂಖ್ಯೆ 3.
Vishwavani Kannada Daily > ಜಿಲ್ಲೆ > ಬೀದರ್ > ಕಾನೂನಿನಲ್ಲಿಯೂ ಅತಿಥಿ ಉಪನ್ಯಾಸಕರ ಖಾಯಮಾತಿಗೆ ಅವಕಾಶವಿಲ್ಲ: ಡಾ.ಅಶ್ವಥ ನಾರಾಯಣ ಕಾನೂನಿನಲ್ಲಿಯೂ ಅತಿಥಿ ಉಪನ್ಯಾಸಕರ ಖಾಯಮಾತಿಗೆ ಅವಕಾಶವಿಲ್ಲ: ಡಾ.ಅಶ್ವಥ ನಾರಾಯಣ Sunday, October 10th, 2021 ವಿಶ್ವವಾಣಿ ಬೀದರ: ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಳ್ಳಲು ಕಾನೂನಿನಲ್ಲಿಯೂ ಅವಕಾಶ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ ನಾರಾಯಣ ಸಿ.ಎಸ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಭಾನುವಾರ ಮಾತನಾಡಿ, ಅತಿಥಿ ಉಪನ್ಯಾಸಕರ ಖಾಯಂ ಕುರಿತು ಸುಳ್ಳು ಆಶ್ವಾಸನೆ ನೀಡುವು ದಿಲ್ಲ. ಅವರ ಸೇವೆಯನ್ನು ಪ್ರತಿ ವರ್ಷದಂತೆ ಮುಂದುವರೆಸಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಅನುಪಾತದಲ್ಲಿ ಉಪನ್ಯಾಸಕರ ನೇಮಕಾತಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಆದ್ಯತೆ ನೀಡ ಲಾಗುತ್ತಿದೆ. ಇನ್ನೂ ಅತಿಥಿ ಉಪನ್ಯಾಸಕರ ಸಂಭಾವನೆ ಹೆಚ್ಚಿಸುವ ಕುರಿತಂತೆ ಸಿಎಂ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು. ಅರ್ಹತೆವುಳ್ಳ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ಇದೆ. ಮೆರಿಟ್ ಮತ್ತು ಮೀಸಲಾತಿ ಅನ್ವಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು. ಎಲ್ಲ ರೀತಿಯ ಶಿಕ್ಷಣವನ್ನು ಒಳಗೊಂಡು(ಕಾನೂನು ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಹೊರತುಪಡಿಸಿ) ರಾಷ್ಟ್ರಿಯ ಶಿಕ್ಷಣ ನೀತಿ-2020ನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರವನ್ನು ಆರ್‌ಎಸ್‌ಎಸ್ ನಡೆಸುತ್ತದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ಸರ್ಕಾರದ ಆಡಳಿತ, ಪಾರದರ್ಶಕತೆ ವಿಷಯದ ಬಗ್ಗೆ ಅವರು ಮಾತನಾಡಲಿ. ಬಿಎಸ್‌ವೈ ನಮ್ಮ ಅಗ್ರಮಾನ್ಯ ನಾಯಕರು. ಅವರ ಬಗ್ಗೆ ಪ್ರತಿಯೊಬ್ಬ ರಿಗೂ ಗೌರವ, ಅಭಿಮಾನ ಇದೆ. ಅವರನ್ನು ಸೈಡ್‌ಲೈನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನಮ್ಮ ಪೂರ್ವಜರು ಯಾವ ವಯಸ್ಸಿನಲ್ಲಿ ವ್ಯಕ್ತಿ ಏನು ಮಾಡಬೇಕೆಂದು ಸರಿಯಾಗಿ ಹೇಳಿದ್ದಾರೆ ಅದೇನೂ ತಪ್ಪಲ್ಲ. ಹೌದು ವ್ಯಕ್ತಿ ಇಪ್ಪತ್ತನೆ ವಯಸ್ಸಿನಲ್ಲಿ ಮದುವೆಯಾಗಬೇಕು, ಆತ ನಲ್ವತ್ತು ಐವತ್ತ ರ ಸಮಯದಲ್ಲಿ ತನ್ನ ಜವಾಬ್ದಾರಿ ಅನ್ನು ಕಳೆದುಕೊಂಡು, ಮಕ್ಕಳ ಜೊತೆ ಇರಬೇಕು. ಆದರೆ ಇವತ್ತಿನ ಕಾಲ ಹಾಗಿಲ್ಲಾ ತಾವು ಜೀವನದಲ್ಲಿ ಸೆಟಲ್ ಆದ ಮೇಲೆಯೇ ಒಳ್ಳೆಯ ಕೆಲಸ ಸಿಕ್ಕ ಮೇಲೆಯೇ ಇನ್ನೂ ಕೆಲವರು ಒಳ್ಳೆಯ ಸಂಬಳ ಸಿಕ್ಕ ನಂತರವೇ ಮ ದುವೆ ಆಗುತ್ತೇನೆ ಎಂದು ಯೋಚಿಸುತ್ತಾರೆ. ಆದರೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಮ ದುವೆ ಆಗುವ ಸಮಯದಲ್ಲಿ ಆಗಬೇಕು ಇಲ್ಲವಾದಲ್ಲಿ ಆನಂತರ ಮ ದುವೆಯಾಗುತ್ತೇವೆ ಅಥವಾ ನಲವತ್ತು ವಯಸ್ಸು ದಾಟಿದ ನಂತರ ಮದು ವೆಯಾಗುತ್ತೇವೆ ಅಂತ ಹೋದರೆ ಏನಾಗುತ್ತದೆ ಗೊತ್ತಾ ನೀವೇನಾದರೂ ನಲವತ್ತು ವಯಸ್ಸು ದಾಟಿದ ಮೇಲೆ ಮ ದುವೆ ಆಗೋಣ ಅಥವಾ ನಲವತ್ತು ವಯಸ್ಸು ದಾಟಿದ ಮೇಲೆ ಪ್ರೀ ತಿ ಮಾಡೋಣ ಅಂತ ಅಂ ದುಕೊಳ್ಳುತ್ತಾ ಇದ್ದೀರಾ, ಹಾಗಾದರೆ ನೀವು ಈ ಲೇಖನವನ್ನು ತಿಳಿಯಲೇಬೇಕು. ಹೌದು ಈ ರೀತಿ ಯೋಚನೆ ಮಾಡುವವರು ಯಾರು ಅಂದರೆ ಸಾಮಾನ್ಯವಾಗಿ ಜೀವನದಲ್ಲಿ ಸೆ ಟಲ್ ಆಗಬೇಕು ಎಂದು ಕಾದು ಕುಳಿತಿರುವವರು ಅಥವಾ ಈಗಾಗಲೇ ಒಮ್ಮೆ ರಿಲೇ ಷನ್ ಶಿ ಪ್ ನಲ್ಲಿದ್ದು ಬ್ರೇ ಕಪ್ ಹೊಂದಿರುವವರು ವಿಚ್ಛೇದನ.\ ಮಾಡುವುದು ಹೌದು ನಲವತ್ತು ವಯಸ್ಸು ದಾಟಿದ ನಂತರ ನಮಗೂ ಮತ್ತೊಬ್ಬ ಸಂ ಗಾತಿ ಬೇಕು ಎಂದು ಆಲೋಚನೆ ಮಾಡುವವರು ಈ ಮೇಲ್ಕಂಡ ಕಾರಣದಿಂದಾಗಿ ಈ ರೀತಿ ಯೋಚನೆ ಮಾಡ್ತಾರೆ. ಆದರೆ ಈ ವಯಸ್ಸು ದಾಟಿದ ಮೇಲೆ ನಿವೇನಾದರು ಮತ್ತೆ ಸಂ ಗತಿಯನ್ನು ಬಯಸಿದರೆ ಅಥವಾ ಪ್ರೀ ತಿ ಮಾಡ್ತೇನೆ ಅಂತ ಹೊರಟರೆ ಏನನ್ನೆಲ್ಲಾ ನೀವು ಎದುರಿಸಬೇಕಾಗುತ್ತದೆ ಗೊತ್ತಾ ಅದನ ಹೇಳ್ತೀವೊ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ. ಅಷ್ಟೇ ಅಲ್ಲ ನಲ್ವತ್ತರ ನಂತರ ಮುಖದ ಸುಕ್ಕು ಕಟ್ಟುತ್ತದೆ ಸೌಂ ದರ್ಯ ಹಾಳಾಗುತ್ತದೆ ಇದರಿಂದ ಕೂಡಾ ನಿಮಗೆ ಸಂ- ಗಾತಿ ಸಿಗದೇ ಇರಬಹುದು ಇದರಿಂದ ನಿಮ್ಮ ಮನಸ್ಸಿಗೆ ಘಾಸಿ ವುಂಟಾಗಬಹುದು ಮಾನ ಸಿಕವಾಗಿ ಖಿ ನ್ನತೆಗೆ ಒಳಗಾಗಬಹುದು. ಇನ್ನೂ ಕೆಲವರು ಸಂ -ಗಾತಿಯನ್ನು ಬಯಸದ ನಂತರ ಸಂ ಗಾತಿಗೆ ಕೊಡುವ ಪ್ರೀತಿ ಕಡಿಮೆಯಾಗಬಹುದು ಹಾಗೆ ಪುರು ಷರಲ್ಲಿ ನಲವತ್ತರ ನಂತರ ನ-ಮ್ಯ ತೆ ಕಡಿಮೆಯಾಗುತ್ತದೆ ಹಾಗೆ ಆತ್ಮ ವಿಶ್ವಾಸ ಕೂಡ ಕಡಿಮೆ ಆಗುತ್ತದೆ, ತಮ್ಮ ಸಂ -ಗಾತಿ ಬಯಸುವ ಪ್ರೀ ತಿಯನ್ನು ಕೊಡುವುದಕ್ಕೆ ಸಾಧ್ಯವಾಗದೆ ಇರಬಹುದು ಇದರಿಂದಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ಮತ್ತು ಹಾಗಾದರೆ ನಮ್ಮ ಜೀವನದಲ್ಲಿ ಅನೇಕ ಘಟನೆ ಆಗಿರುತ್ತದೆ ಮತ್ತೆ ಯಾಕೆ ನಡೆಯುತ್ತದೆ ಯಾವ ರೀತಿ ನಡೆಯಬೇಕೆಂಬ ತಿಳಿದುಕೊಳ್ಳಬೇಕೆಂದರೆ ಇದಕ್ಕೆಲ್ಲ ಮುಖ್ಯ ಕಾರಣ ರಾಶಿ ಮತ್ತು ಗ್ರಹಗತಿಗಳು ಹೌದು ಗ್ರಹಗಳಲ್ಲಿ ಆಗದಂತಹ ಬದಲಾವಣೆ ನಮ್ಮ ರಾಶಿಗಳ ಮೇಲೆ ನೇರವಾಗಿ ಪರಿಣಾಮ ಬೀಳುತ್ತದೆ ಆ ರೀತಿ ರಾಶಿಯಲ್ಲಿರುವ ಬದಲಾವಣೆಗಳು ನಮ್ಮ ಮೇಲೆ ಪರಿಣಾಮ ಬೀರುತ್ತೆ ಆದ್ದರಿಂದ ನಿರೀಕ್ಷಿತ ಘಟನೆಗಳು ಮತ್ತು ಅನಿರೀಕ್ಷಿತ ತಿಳಿವಳಿಕೆಯನ್ನು ನಾವು ನಮ್ಮ ಜೀವನದಲ್ಲಿ ಕಾಣುತ್ತೇವೆ ಹಾಗಾದರೆ ಈ ರೀತಿ ಅನಿರೀಕ್ಷಿತ ಗೊಂಡಿರುವ ಹಲವಾರು ಜನ ಸಿರಿವಂತ ರಾಗುತ್ತಾರೆ ಮತ್ತು ಹಲವಾರು ಜನರು ಬಡವರು ಸಹ ಆಗುತ್ತಾರೆ ಆ ರೀತಿಯ ಅನಿರೀಕ್ಷಿತ ಘಟನೆಗಳು ನಮ್ಮಲ್ಲಿ ರಾಶಿಯ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ ಹಾಗಾದರೆ ಬನ್ನಿ. ಈ ರೀತಿ ಈ ಬಾರಿ ಎಲ್ಲಾ ದೇವತೆಗಳು 33 ಕೋಟಿ ದೇವರುಗಳು ಸಹ ಸೇರಿ ಈ ಮೂರು ರಾಶಿಯವರಿಗೆ ಅನಿರೀಕ್ಷಿತವಾಗಿ ವರವನ್ನು ನೀಡುತ್ತಿದ್ದಾರೆ ಅವರು ಅನಿರೀಕ್ಷಿತವಾಗಿ ಸಿರಿವಂತ ರಾಗುತ್ತಿದ್ದಾರೆ ಈ ಮೂರೂ ರಾಶಿಗಳು ಯಾವುದು ಕೋಟ್ಯಾಧಿಪತಿ ರೇ ಪಡೆಯುತ್ತಿರುವ ರಾಶಿ ಯಾವುದು ಹಲವಾರು ವರ್ಷಗಳ ನಂತರ ಎಲ್ಲಾ ದೇವಾನುದೇವತೆಗಳು ಸೇರಿ ಈ ಮೂರು ರಾಶಿಗಳಿಗೆ ವರವನ್ನು ನೀಡುತ್ತಿದ್ದಾರೆ ಈ ಮೂರು ರಾಶಿಗಳು ಕೂಡ ಬಹಳ ಅದೃಷ್ಟವನ್ನು ಪಡೆಯಲಿದ್ದಾರೆ ಅನಿರೀಕ್ಷಿತ ಇಂದ ಬಂದಿರುವ ಅದೃಷ್ಟವನ್ನು ಇವರ ಮನೆಯಲ್ಲಿ ಸೇರಲಿದೆ ಧನಾಲಕ್ಷ್ಮಿ ಅವರ ಮನೆಯಲ್ಲಿ ಸದಾಕಾಲ ನೆಲಸಿದ್ದಾಳೆ ಅನಿರೀಕ್ಷಿತವಾಗಿ ಈ ಲಾಭವನ್ನು ನೀವು ಪಡೆಯಲಿದ್ದೀರಿ ಹಾಗೂ ಕೆಲಸದಲ್ಲಿ ಉತ್ತಮ ಮಾತುಗಾರಿಕೆಯಿಂದ ನೀವು ಗುಣವನ್ನು ನಿಮ್ಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದೆ ಕೇವಲ ನಿಮ್ಮ ಕ್ಷೇತ್ರ ಮಾತ್ರವಲ್ಲದೆ ಸಮಾಜ ಗಾಗಿ ಸಾಮಾಜಿಕ ಕೆಲಸವನ್ನು ಮಾಡಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆಯಲಿ ಇದ್ದೀರಾ ಬಹಳಷ್ಟು ಕಡಿಮೆ ಸಮಯದಲ್ಲಿ ಕೋಟ್ಯಾಧಿಪತಿ ಆಗುತ್ತೀರಾ ಇಷ್ಟು ವರ್ಷಗಳಿಂದ ಕಷ್ಟಗಳೆಲ್ಲ ದೂರವಾಗುತ್ತದೆಕಷ್ಟಪಟ್ಟು ಮಾಡುತ್ತಿರುವ ಈ ಎಲ್ಲಾ ಕೆಲಸಗಳು ಕೂಡ ಸರಳವಾಗಿ ನೆರವೇರಲಿದೆ ಕೋರ್ಟು ಕಚೇರಿಗಳಲ್ಲಿ ನಿಮಗೆ ಜಯ ಸಿಗಲಿದೆ ವ್ಯಾಪಾರ-ವ್ಯವಹಾರದಲ್ಲಿ ಉನ್ನತಮಟ್ಟಕ್ಕೆ ಹೋಗುತ್ತೀರಾ ಎಲ್ಲ ರೀತಿಯಲ್ಲಿ ನೀವು ಲಾಭವನ್ನು ಪಡೆಯಲಿದ್ದೀರಿ. ಕುಟುಂಬದ ಸದಸ್ಯರಲ್ಲ ಒಳ್ಳೆಯ ಹೆಸರನ್ನು ಸಂಪಾದಿಸಿ ಬಹಳಷ್ಟು ಸಂತೋಷದಿಂದ ಮನೆಯವರೊಂದಿಗೆ ಕಾಲಕಳೆಯುತ್ತಿದ್ದ ಕೇವಲ ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗುರುತಿಸಿಕೊಳ್ಳುವುದಕ್ಕೆ ಕೀರ್ತಿ ಪಟಾಕಿ ನಿಮಗೆ ಬರಲಿದೆ ಒಳ್ಳೆಯ ಹೆಸರಿನಿಂದ ಹಲವಾರು ಕೆಲಸಗಳನ್ನು ಮಾಡಿ ಎಲ್ಲರ ಮನಸ್ಸನ್ನು ಗೆಲ್ಲುತ್ತೀರಿ ಅನುಗುಣ ವ್ಯಕ್ತಿಯೊಂದಿಗೆ ನೀವು ಸೇರಲಿ ಇದ್ದೀರಿ ಅವರ ಅನುಭವದ ಮಾತಿನೊಂದಿಗೆ ನೀವು ಉನ್ನತ ಮಟ್ಟಕ್ಕೆ ಹೋಗುತ್ತೀರಾ ಈ ರೀತಿ ಬಾಳಷ್ಟು ಅದೃಷ್ಟವನ್ನು ತಂದುಕೊಳ್ಳುವ ರಾಶಿ ಎಂದರೆ ಸಿಂಹ ರಾಶಿ ಕುಂಭ ರಾಶಿ ಮತ್ತು ಮಕರ ರಾಶಿ ಇ 3 ರಾಶಿ ಬಹಳಷ್ಟು ಅದೃಷ್ಟವಂತರು ಒಳ್ಳೆಯ ಸಿರಿವಂತರಾಗಿ ತೀರ. ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588
22 ನವೆಂಬರ್ 2022 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಹುದ್ದೆಗಳ ನೇಮಕಾತಿ l ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 20 ನವೆಂಬರ್ 2022 ಕರ್ನಾಟಕ ಆ್ಯಂಟಿಬಯೊಟಿಕ್ಸ್ & ಫಾರ್ಮಸೂಟಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 19 ನವೆಂಬರ್ 2021 ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಖಾಲಿ ಇರುವ ವಿವಿಧ 376 ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ. 7 ಡಿಸೆಂಬರ್ 2021 ಏರ್ ಇಂಡಿಯಾ ಕಂಪನಿಯ ಅಧೀನ ಸಂಸ್ಥೆಯಾಗಿರುವ ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ 15 ನವೆಂಬರ್ 2021 'ಪ್ರಸಾರ ಭಾರತಿ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 3 ಡಿಸೆಂಬರ್ 2021 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA)' ಬೆಂಗಳೂರು ಸಂಸ್ಥೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ 2 ಡಿಸೆಂಬರ್ 2021 ರಾಷ್ಟ್ರೀಯ ಅರೋಗ್ಯ ಅಭಿಯಾನದಡಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ 22 ಸೆಪ್ಟೆಂಬರ್ 2021 ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನ 22 ಸೆಪ್ಟೆಂಬರ್ 2021 ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ICU / HDU ಗಳಿಗೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹರಿಂದ ಅರ್ಜಿ ಅಹ್ವಾನ 21 ಸೆಪ್ಟೆಂಬರ್ 2021 ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ರಿಫೈನರೀಸ್ ವಿಭಾಗವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ 17 ಸೆಪ್ಟೆಂಬರ್ 2021 ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ (ರಿ) ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 16 ಸೆಪ್ಟೆಂಬರ್ 2021 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಓಎಸ್) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ 14 ಸೆಪ್ಟೆಂಬರ್ 2021 ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 8 ಸೆಪ್ಟೆಂಬರ್ 2021 ಬಾಗಲಕೋಟ ಜಿಲ್ಲೆಗೆ ಸೇರಿದ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ 8 ಸೆಪ್ಟೆಂಬರ್ 2021 ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ನೇಮಕಾತಿ 7 ಸೆಪ್ಟೆಂಬರ್ 2021 ಬೀದರ ಜಿಲ್ಲೆಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ 3 ಸೆಪ್ಟೆಂಬರ್ 2021 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ 2 ಸೆಪ್ಟೆಂಬರ್ 2021 ಭಾರತೀಯ ವಾಯುಪಡೆಯಲ್ಲಿ (IAF) ಗ್ರೂಪ್ ಸಿ ನಾಗರಿಕ (Group C Civilian) ವೃಂದದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ರಾಜ್ಯದಲ್ಲೂ ಖಾಲಿ ಇವೆ ಹುದ್ದೆಗಳು 31 ಆಗಸ್ಟ್ 2021 ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಅಹ್ವಾನ 28 ಆಗಸ್ಟ್ 2021 ಗದಗ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ 31 ಆಗಸ್ಟ್ 2021 ಬಾಗಲಕೋಟೆ ಜಿಲ್ಲೆಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 30 ಆಗಸ್ಟ್ 2021 ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ಐಸಿಎಫ್‌ಆರ್‌ಇ)ಯಲ್ಲಿ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 29 ಆಗಸ್ಟ್ 2021 ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಈಗ ಕಿರುತೆರೆಯಲ್ಲೂ ಜನಪ್ರಿಯ. "ಹಿಟ್ಲರ್ ಕಲ್ಯಾಣ"ದ A J ಪಾತ್ರದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಪ್ರಸ್ತುತ ಇವರು "ಮಹಾನ್ ಕಲಾವಿದ" ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ದಿ.ಸುರೇಶ್ಚಂದ್ರ ಪುತ್ರ ಅಭಯ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌ ಇದು ಇವರ ಎರಡನೇ ನಿರ್ದೇಶನದ ಚಿತ್ರ. ಸಂಗೀತ ನಿರ್ದೇಶನ ಕೂಡ ಅಭಯ್ ಚಂದ್ರ ಅವರದೆ. ಈ ಚಿತ್ರದ ಕೆಲವು ವಿಷಯಗಳನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ನಾನು ಪತ್ರಕರ್ತ ಸುರೇಶ್ಚಂದ್ರ ಅವರ ಪುತ್ರ. ಇದು ನನ್ನ ಎರಡನೇ ಚಿತ್ರ. ಈ ಕಥೆಯನ್ನು ಸಿದ್ದಪಡಿಸಿಕೊಂಡು "ಕಲಾವಿದ" ಅಂತ ಶೀರ್ಷಿಕೆಯಿಟ್ಟಿದೆ. ಈ ವಿಷಯವನ್ನು ರವಿಚಂದ್ರನ್ ಸರ್ ಗೆ ತಿಳಿಸಿದೆ. ಧಾರಾಳವಾಗಿ ಈ ಶೀರ್ಷಿಕೆ ಇಡು. ಆದರೆ ಬರೀ "ಕಲಾವಿದ" ಅಂತ ಬೇಡ. ಏನಾದರೂ ಸೇರಿಸು ಅಂದರು. ನಾನು "ಮಹಾನ್ ಕಲಾವಿದ" ಅಂತ ಇಟ್ಟೆ. ಕಲಾವಿದನೊಬ್ಬನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಈ ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಈ ಪಾತ್ರಕ್ಕೆ ಸೂಕ್ತ ಎಂದು ಕೊಂಡಿದ್ದೆ.‌ ಅವರೆ ಈ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಸಿಕ್ಕ ಗೆಳೆಯ ಭರತ್ ಬಿ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಅಭಯ್ ಚಂದ್ರ ತಿಳಿಸಿದರು. ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ‌ ಮೊದಲು ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ಅಭಯ್ ಹೇಳಬೇಕು. ನಾನು ಸಹ ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ದಿಲೀಪ್ ರಾಜ್ ಹೇಳಿದರು. ಈ ಚಿತ್ರದಲ್ಲಿ ದಿಲೀಪ್ ರಾಜ್ ಅವರ ಪತ್ನಿ ಪಾತ್ರ ಮಾಡುತ್ತಿರುವುದಾಗಿ ಜಾಹ್ನವಿ ರಾಯಲ ತಿಳಿಸಿದರು. ಲಾಕ್ ಡೌನ್ ನಂತರ ನನ್ನ ಮೊದಲ ಪತ್ರಿಕಾಗೋಷ್ಠಿ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ಪಲ್ಲವಿ ರಾಜು.. ನಾನು ಮೂಲತಃ ಹಾಸನದವನು. ಈಗ ಮಂಡ್ಯ ನಿವಾಸಿ. ಅಪ್ಪ-ಅಮ್ಮನ ಸಹಕಾರದಿಂದ ನಿರ್ಮಾಪಕನಾಗಿದ್ದೇನೆ.‌ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಪಕ ಭರತ್ ಬಿ ಗೌಡ.
ಪ್ರಸ್ತುತ, ನನ್ನ ದೇಶದ ಲೋಡರ್ ಎಂಟರ್‌ಪ್ರೈಸಸ್ ಇಂಧನ ಉಳಿತಾಯ ಮತ್ತು ಬಳಕೆ ಕಡಿತದ ಸುತ್ತ ಹೊಸ ಸುತ್ತಿನ ಉತ್ಪನ್ನ ತಂತ್ರಜ್ಞಾನವನ್ನು ನವೀಕರಿಸಲು ಪ್ರಾರಂಭಿಸಿದೆ, ಕೋರ್ ಸಿಸ್ಟಮ್‌ಗಳು ಮತ್ತು ಘಟಕಗಳ ಅಪ್‌ಗ್ರೇಡ್‌ನ ಮೇಲೆ ಕೇಂದ್ರೀಕರಿಸಿದೆ, ಅಂದರೆ ಹೈಡ್ರಾಲಿಕ್ ಸಿಸ್ಟಮ್‌ಗಳು ಮತ್ತು ಹೈಡ್ರಾಲಿಕ್ ಘಟಕಗಳ ತಾಂತ್ರಿಕ ಅಪ್‌ಗ್ರೇಡ್, ಪ್ರಸರಣ ವ್ಯವಸ್ಥೆಗಳು ಮತ್ತು ಪ್ರಸರಣ ಘಟಕಗಳು. ಮೊದಲನೆಯದಾಗಿ, ಹೈಡ್ರಾಲಿಕ್ ಸಿಸ್ಟಮ್ ಬದಲಾವಣೆ ಮತ್ತು ಬದಲಾವಣೆಯ ಏಕೀಕರಣ ಪ್ರಸ್ತುತ, ಅಂತಾರಾಷ್ಟ್ರೀಯ ಲೋಡರ್‌ಗಳ ಸುಧಾರಿತ ಹೈಡ್ರಾಲಿಕ್ ವ್ಯವಸ್ಥೆಯು ಸಂಪೂರ್ಣ ವೇರಿಯಬಲ್ ಲೋಡ್ ಸೆನ್ಸಿಂಗ್ ಹೈಡ್ರಾಲಿಕ್ ವ್ಯವಸ್ಥೆಯಾಗಿದೆ.ಮುಖ್ಯ ಘಟಕಗಳಲ್ಲಿ, ಕೆಲಸ ಮಾಡುವ ಮತ್ತು ಸ್ಟೀರಿಂಗ್ ಪಂಪ್‌ಗಳು ಲೋಡ್ ಸೆನ್ಸಿಂಗ್ ವೇರಿಯಬಲ್ ಪಂಪ್‌ಗಳು, ಮತ್ತು ಕವಾಟಗಳು ಲೋಡ್ ಸೆನ್ಸಿಂಗ್ ಸ್ಟೀರಿಂಗ್ ಕವಾಟಗಳು ಮತ್ತು ಲೋಡ್ ಸೆನ್ಸಿಂಗ್ ಮಲ್ಟಿ-ವೇ ವಾಲ್ವ್‌ಗಳಾಗಿವೆ.ವ್ಯವಸ್ಥೆಯ ಮಹೋನ್ನತ ವೈಶಿಷ್ಟ್ಯಗಳು ಉತ್ತಮ ಕಾರ್ಯಾಚರಣಾ ಸೌಕರ್ಯ, ಹೆಚ್ಚಿನ ಕಾರ್ಯಾಚರಣೆಯ ದಕ್ಷತೆ ಮತ್ತು ಗಮನಾರ್ಹವಾದ ಶಕ್ತಿ-ಉಳಿತಾಯ ಪರಿಣಾಮ, ಆದರೆ ವೆಚ್ಚವು ಹೆಚ್ಚು.ಕೆಲವು ವಿಶೇಷ ಉತ್ಪನ್ನಗಳನ್ನು ಹೊರತುಪಡಿಸಿ, ಚೀನಾ ಮತ್ತು ಪ್ರಪಂಚದ ಎಲ್ಲಾ ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ಮೂಲಭೂತವಾಗಿ ಯಾವುದೇ ಅಥವಾ ಕೇವಲ ಒಂದು ಸಣ್ಣ ಮಾರುಕಟ್ಟೆ ಪಾಲು ಇಲ್ಲ.ಈ ನಿಟ್ಟಿನಲ್ಲಿ, ನನ್ನ ದೇಶದ ಲೋಡರ್ ಉದ್ಯಮ ಮತ್ತು ಸಂಬಂಧಿತ ಉದ್ಯಮದ ಒಳಗಿನವರು ಸಿಸ್ಟಮ್‌ನಲ್ಲಿ ಸಾಕಷ್ಟು ತಾಂತ್ರಿಕ ಆವಿಷ್ಕಾರಗಳನ್ನು ನಡೆಸಿದ್ದಾರೆ ಮತ್ತು ಅದರ ಮುಂದುವರಿದ ಸ್ವರೂಪವನ್ನು ಉಳಿಸಿಕೊಂಡು, ಉತ್ಪಾದನಾ ವೆಚ್ಚವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ.ಪ್ರಸ್ತುತ, ಅಭಿವೃದ್ಧಿ ಮತ್ತು ಸುಧಾರಣೆ ಕಾರ್ಯವು ಗಣನೀಯ ಫಲಿತಾಂಶಗಳನ್ನು ಸಾಧಿಸಿದೆ, ಮುಖ್ಯವಾಗಿ ಕೆಳಗಿನ ವಿವಿಧ ರಚನಾತ್ಮಕ ಪ್ರಕಾರಗಳಲ್ಲಿ. ಎರಡನೆಯದಾಗಿ, ಸುಧಾರಿತ ಮಲ್ಟಿ-ವೇ ವಾಲ್ವ್ ಫುಲ್ ವೇರಿಯಬಲ್ ಲೋಡ್ ಸೆನ್ಸಿಂಗ್ ಹೈಡ್ರಾಲಿಕ್ ಸಿಸ್ಟಮ್ ಈ ವ್ಯವಸ್ಥೆಯು ಇನ್ನೂ ಸಂಪೂರ್ಣವಾಗಿ ವೇರಿಯಬಲ್ ಲೋಡ್ ಸೆನ್ಸಿಂಗ್ ಹೈಡ್ರಾಲಿಕ್ ಸಿಸ್ಟಮ್ ಆಗಿದೆ, ಮತ್ತು ಅದರ ನಾವೀನ್ಯತೆಗಳು ಮುಖ್ಯವಾಗಿ ಬಹು-ಮಾರ್ಗದ ಕವಾಟಗಳ ಮೇಲೆ ಕೇಂದ್ರೀಕೃತವಾಗಿವೆ.ಬಹು-ಮಾರ್ಗದ ಕವಾಟದ ಮುಖ್ಯ ದೇಹವು ಕಡಿಮೆ ವೆಚ್ಚದೊಂದಿಗೆ ಸಾಮಾನ್ಯ ಬಹು-ಮಾರ್ಗದ ಕವಾಟವಾಗಿದೆ ಮತ್ತು ಸರಳ ರಚನೆಯೊಂದಿಗೆ ಸಣ್ಣ ಲಾಜಿಕ್ ಕವಾಟವನ್ನು ಲಗತ್ತಿಸಲಾಗಿದೆ.ಎರಡರ ವೆಚ್ಚದ ಮೊತ್ತವು ಲೋಡ್-ಸೆನ್ಸಿಂಗ್ ಮಲ್ಟಿ-ವೇ ವಾಲ್ವ್‌ನ 1/4 ಕ್ಕಿಂತ ಕಡಿಮೆಯಿರುತ್ತದೆ.ಲೋಡ್ ಸೆನ್ಸಿಂಗ್ ಹೈಡ್ರಾಲಿಕ್ ಸಿಸ್ಟಮ್ ಅನ್ನು ಹೋಲಿಸಬಹುದಾಗಿದೆ, ಆದರೆ ಒಟ್ಟು ವೆಚ್ಚವು ಕೇವಲ 70% ಆಗಿದೆ. ಮೂರನೆಯದಾಗಿ, ಸ್ಥಿರ ವೇರಿಯಬಲ್ ಸಂಗಮವನ್ನು ಇಳಿಸುವ ಹೈಡ್ರಾಲಿಕ್ ವ್ಯವಸ್ಥೆ ಸ್ಥಿರ ವೇರಿಯಬಲ್ ಕನ್‌ಫ್ಯೂಯನ್ಸ್ ಅನ್‌ಲೋಡಿಂಗ್ ಹೈಡ್ರಾಲಿಕ್ ಸಿಸ್ಟಮ್‌ನ ಸ್ಟೀರಿಂಗ್ ಭಾಗವು ಇನ್ನೂ ಲೋಡ್ ಸೆನ್ಸಿಂಗ್ ವೇರಿಯಬಲ್ ಪಂಪ್ ಮತ್ತು ಲೋಡ್ ಸೆನ್ಸಿಂಗ್ ಸ್ಟೀರಿಂಗ್ ಕವಾಟವಾಗಿದೆ, ಮತ್ತು ಕೆಲಸದ ಭಾಗವು ಪರಿಮಾಣಾತ್ಮಕ ಪಂಪ್ ಮತ್ತು ಸಾಮಾನ್ಯ ಬಹು-ಮಾರ್ಗ ಕವಾಟದಿಂದ ಕೂಡಿದೆ.ವ್ಯವಸ್ಥೆಯು ಆದ್ಯತೆಯ ಕವಾಟ, ಶಟಲ್ ಕವಾಟ, ನಿಯಂತ್ರಣ ಕವಾಟವನ್ನು ಸೇರಿಸಿದೆ ಮತ್ತು ಇಳಿಸುವ ಕವಾಟವು ಲೋಡ್ ಸೆನ್ಸಿಂಗ್ ಸ್ಥಿರ ಒತ್ತಡದ ವೇರಿಯಬಲ್ ಪಂಪ್ ಮತ್ತು ಪರಿಮಾಣಾತ್ಮಕ ಪಂಪ್‌ನ ಸಂಗಮವನ್ನು ಪೂರ್ಣಗೊಳಿಸುತ್ತದೆ ಮತ್ತು ಸ್ಟೀರಿಂಗ್ ಸಮಯದಲ್ಲಿ ಲೋಡ್ ಸೆನ್ಸಿಂಗ್ ಸ್ಥಿರ ಒತ್ತಡದ ವೇರಿಯಬಲ್ ಸಿಸ್ಟಮ್‌ನ ಎರಡು ಸಿಸ್ಟಮ್ ಮೋಡ್‌ಗಳನ್ನು ಅರಿತುಕೊಳ್ಳುತ್ತದೆ. ಮತ್ತು ಕಾರ್ಯಾಚರಣೆಯ ಸಮಯದಲ್ಲಿ ನಿರಂತರ ಒತ್ತಡದ ವೇರಿಯಬಲ್ ವ್ಯವಸ್ಥೆ.ಕಾರ್ಯಾಚರಣೆಯು ಗರಿಷ್ಠ ಲೋಡ್ ಅನ್ನು ತಲುಪಿದಾಗ ಮತ್ತು ಇಳಿಸುವ ಕವಾಟವು ಗರಿಷ್ಠ ಸೆಟ್ ಒತ್ತಡವನ್ನು ತಲುಪಿದಾಗ, ಕೆಲಸ ಮಾಡುವ ಪರಿಮಾಣಾತ್ಮಕ ಪಂಪ್ ಸಂಪೂರ್ಣವಾಗಿ ಇಳಿಸದ ಸ್ಥಿತಿಯಲ್ಲಿದೆ.ಸಿಸ್ಟಮ್ ಸ್ಟೀರಿಂಗ್ ಸಿಸ್ಟಮ್‌ನ ಥ್ರೊಟ್ಲಿಂಗ್ ಮತ್ತು ಓವರ್‌ಫ್ಲೋ ನಷ್ಟವನ್ನು ಪರಿಹರಿಸುತ್ತದೆ, ಜೊತೆಗೆ ಕೆಲಸದ ವ್ಯವಸ್ಥೆಯ ಓವರ್‌ಫ್ಲೋ ನಷ್ಟವನ್ನು ಪರಿಹರಿಸುತ್ತದೆ, ಇದರಿಂದಾಗಿ ಶಕ್ತಿಯನ್ನು ಉಳಿಸುವ ಮತ್ತು ಬಳಕೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಸಾಧಿಸುತ್ತದೆ. ಫುಲ್ ವೇರಿಯಬಲ್ ಲೋಡ್ ಸೆನ್ಸಿಂಗ್ ಹೈಡ್ರಾಲಿಕ್ ಸಿಸ್ಟಮ್‌ಗೆ ಹೋಲಿಸಿದರೆ, ಆಪರೇಟಿಂಗ್ ಸೌಕರ್ಯ ಮತ್ತು ಸಿಸ್ಟಂನ ಕೆಲಸದ ದಕ್ಷತೆಯು ಮೂಲತಃ ಒಂದೇ ಆಗಿರುತ್ತದೆ, ಆದರೆ ವೆಚ್ಚವು ಹಿಂದಿನದಕ್ಕಿಂತ ಸುಮಾರು 35% ಮಾತ್ರ, ಮತ್ತು ಶಕ್ತಿಯ ಉಳಿತಾಯದ ಪರಿಣಾಮವು ಹಿಂದಿನದಕ್ಕಿಂತ ಸುಮಾರು 70% ಆಗಿದೆ.ಸಂಪೂರ್ಣ ಪರಿಮಾಣಾತ್ಮಕ ವ್ಯವಸ್ಥೆಯೊಂದಿಗೆ ಹೋಲಿಸಿದರೆ, ಈ ವ್ಯವಸ್ಥೆಯ ಶಕ್ತಿಯ ಉಳಿತಾಯವು ಸುಮಾರು 70%, ಮತ್ತು ವೆಚ್ಚವು ಸುಮಾರು 1.5 ಪಟ್ಟು ಹೆಚ್ಚು.ಸ್ಥಿರ ವೇರಿಯಬಲ್ ಕನ್‌ಫ್ಯೂಯನ್ಸ್ ಅನ್‌ಲೋಡಿಂಗ್ ಹೈಡ್ರಾಲಿಕ್ ವ್ಯವಸ್ಥೆಯು ಅತ್ಯಂತ ವೆಚ್ಚ-ಪರಿಣಾಮಕಾರಿ ವ್ಯವಸ್ಥೆಯಾಗಿದೆ ಮತ್ತು ನಿರ್ದಿಷ್ಟ ಪ್ರಚಾರ ಮೌಲ್ಯವನ್ನು ಹೊಂದಿದೆ ಎಂದು ಹೇಳಬಹುದು. ಮುಂದಕ್ಕೆ, ಸುಧಾರಿತ ಮಲ್ಟಿ-ವೇ ವಾಲ್ವ್ ಸ್ಥಿರ ವೇರಿಯಬಲ್ ಸಂಗಮ ಹೈಡ್ರಾಲಿಕ್ ಸಿಸ್ಟಮ್ ಈ ವ್ಯವಸ್ಥೆಯು ಮೂಲತಃ ಮೊದಲ ಎರಡು ಸುಧಾರಿತ ವ್ಯವಸ್ಥೆಗಳ ಸಂಶ್ಲೇಷಣೆಯಾಗಿದೆ.ಸ್ಟೀರಿಂಗ್ ಭಾಗವು ಲೋಡ್ ಸೆನ್ಸಿಂಗ್ ವೇರಿಯಬಲ್ ಪಂಪ್ + ಲೋಡ್ ಸೆನ್ಸಿಂಗ್ ಸ್ಟೀರಿಂಗ್ ಕವಾಟವಾಗಿದೆ, ಮತ್ತು ಕೆಲಸದ ಭಾಗವು ಎರಡರ ಸಂಯೋಜನೆಯಾಗಿದೆ - ಬಹು-ಮಾರ್ಗದ ಕವಾಟವು ಸಾಮಾನ್ಯ ಬಹು-ಮಾರ್ಗ ಕವಾಟ ಮತ್ತು ಸಣ್ಣ ಲಾಜಿಕ್ ಕವಾಟವನ್ನು ಹೊಂದಿರುತ್ತದೆ., ಕೆಲಸ ಮಾಡುವ ಪಂಪ್ ಪರಿಮಾಣಾತ್ಮಕ ಪಂಪ್ ಮತ್ತು ಇಳಿಸುವ ಕವಾಟದಿಂದ ಕೂಡಿದೆ.ಡ್ಯುಯಲ್-ಪಂಪ್ ಸಂಗಮವನ್ನು ಆದ್ಯತೆಯ ಕವಾಟದ ಮೂಲಕ ಅರಿತುಕೊಳ್ಳಲಾಗುತ್ತದೆ ಮತ್ತು ಕೆಲಸ ಮತ್ತು ಸ್ಟೀರಿಂಗ್ ಮೂಲಭೂತವಾಗಿ ಲೋಡ್-ಸೆನ್ಸಿಂಗ್ ವೇರಿಯಬಲ್ ಸಿಸ್ಟಮ್ಗಳಾಗಿವೆ.ಫುಲ್ ವೇರಿಯಬಲ್ ಲೋಡ್ ಸೆನ್ಸಿಂಗ್ ಹೈಡ್ರಾಲಿಕ್ ಸಿಸ್ಟಮ್‌ಗೆ ಹೋಲಿಸಿದರೆ, ಸಿಸ್ಟಮ್‌ನ ಆಪರೇಟಿಂಗ್ ಸೌಕರ್ಯವು ಮೂಲಭೂತವಾಗಿ ಆಪರೇಟಿಂಗ್ ದಕ್ಷತೆಯಂತೆಯೇ ಇರುತ್ತದೆ, ಆದರೆ ವೆಚ್ಚವು ಮೊದಲಿನ ಸುಮಾರು 50% ಮಾತ್ರ;ಹಿಂದಿನದಕ್ಕಿಂತ ಸುಮಾರು 2 ಪಟ್ಟು.ವ್ಯವಸ್ಥೆಯು ಕಡಿಮೆ ಬೆಲೆ, ಉತ್ತಮ ಗುಣಮಟ್ಟದ ಮತ್ತು ಹೆಚ್ಚಿನ ವೆಚ್ಚದ ಕಾರ್ಯಕ್ಷಮತೆಯೊಂದಿಗೆ ಉತ್ತಮ ವ್ಯವಸ್ಥೆಯಾಗಿದೆ ಮತ್ತು ಹೆಚ್ಚಿನ ಪ್ರಚಾರ ಮೌಲ್ಯವನ್ನು ಹೊಂದಿದೆ ಎಂದು ಹೇಳಬಹುದು.
ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದ ಸುದೀರ್ಘ ಪರಂಪರೆಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರು ಬೆಳಗಿ ಮರೆಯಾಗಿದ್ದಾರೆ. ಸಂಗೀತ, ನೃತ್ಯಗಳಿಗೆ ಸಮಾಜದಲ್ಲಿ ಯಾವುದೇ ರೀತಿಯ ಪ್ರೋತ್ಸಾಹ, ಗೌರವಯುತವಾದ ಸ್ಥಾನ ಇಲ್ಲದ ಕಾಲದಲ್ಲಿ ಈ ಕಲಾವಿದರು ತಮ್ಮ ಜೀವನದುದ್ದಕ್ಕೂ ಉತ್ತಮ ಸಂಗೀತಕ್ಕಾಗಿ, ಅದನ್ನು ಕೇಳಬಲ್ಲ ಸಹೃದಯಿ ಶ್ರೋತೃಗಳ ಒಂದು ಪುಟ್ಟ ಗುಂಪಿಗಾಗಿ, ಸಮಾಜದಲ್ಲಿ ಶಾಸ್ತ್ರೀಯ ಸಂಗೀತಕ್ಕೊಂದು ಅಸ್ತಿತ್ವ ಕಲ್ಪಿಸಿ ಕೊಡುವುದಕ್ಕಾಗಿ ಹಂಬಲಿಸಿ, ದುಡಿದು ಇಂದು ನಾವು ನಿಂತಿರುವ ದೃಢವಾದ ನೆಲೆಗಟ್ಟನ್ನು ನಿರ್ಮಿಸಿಕೊಟ್ಟಿದ್ದಾರೆ. ಯಾವುದೇ ಒಂದು ವಿಚಾರವನ್ನು ಪ್ರತಿಕೂಲಗಳಿಗೆ ಎದುರಾಗಿ ನಿಂತು ಹೆಣಗಾಡಿ, ಹೋರಾಡಿ ಸ್ಥಾಪಿಸುವುದು ತುಂಬಾ ಕಠಿಣವಾದ ಕೆಲಸ. ಆದರೆ ಅಷ್ಟೇ ಸವಾಲಿನಿಂದ ಕೂಡಿದ್ದು, ಹಾಗೆ ಸ್ಥಾಪಿಸಿದ ವಿಚಾರವನ್ನು ಅದರ ಮೂಲ ಸತ್ವಕ್ಕೆ ಧಕ್ಕೆ ಬಾರದಂತೆ ಬಹಳಕಾಲ ಜನಮಾನಸದಲ್ಲಿ ಉಳಿಸಿಕೊಂಡು ಮುನ್ನಡೆಸುವುದು. ಹಾಗೆಯೇ ಏಕತಾನತೆ ಎಂದೂ ಅನಿಸದಂತೆ ಕಾಲಕ್ಕನುಗುಣವಾಗಿ ವಿಚಾರದಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡುವುದೂ ಅಷ್ಟೇ ಮುಖ್ಯವಾಗುತ್ತದೆ. ಒಂದು ದೇಶದ ಸಾಂಸ್ಕೃತಿಕ ಚರಿತ್ರೆಯ ಯಾವುದೇ ಒಬ್ಬ ವಿದ್ಯಾರ್ಥಿಗೆ ಇದರ ಅಧ್ಯಯನ ಬಹಳ ಮಹತ್ವಪೂರ್ಣವಾದದ್ದು ಎಂದೆನಿಸುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತ, ಭರತನಾಟ್ಯ ಮುಂತಾದ ನೃತ್ಯ ಪ್ರಕಾರಗಳು, ಶಿಲ್ಪಕಲೆ ಇವುಗಳೆಲ್ಲಾ ಬಹಳ ಪುರಾತನ, ಪಾರಂಪರಿಕ ಹಾಗೂ ದೈವಿಕ ಕಲೆಗಳು ಎಂದು ನಂಬಲ್ಪಟ್ಟವು. ಕಲಿಯ ಬಯಸುವವನ ಸಂಪೂರ್ಣ ಸಮರ್ಪಣೆಯನ್ನು ಬೇಡುವಂಥವು. ಹಿಂದುಸ್ಥಾನೀ ಸಂಗೀತವು ನಾದಪ್ರಧಾನವಾಗಿದ್ದು ‘ಶಬ್ದಕ್ಕೆ ಮೀರಿದ’ ಸಂಗೀತವೆಂದು ಗುರುತಿಸಲ್ಪಟ್ಟಿದೆ. ಹಿಂದಿನ ಗುರುಶಿಷ್ಯ ಪರಂಪರೆಯಲ್ಲಿ ಲೇಖನಿ ಪುಸ್ತಕಗಳು ಇಲ್ಲದ ಕಾಲದಲ್ಲಿ ಗುರುವಿನಿಂದ ಶಿಷ್ಯನಿಗೆ ಬಾಯ್ದೆರೆಯಾಗಿ ಬಂದಿಷ್‍ಗಳ ಪಾಠಾಂತರವಾಗುತ್ತಿತ್ತು. ಸಾವಿರಾರು ಬಂದಿಷ್ ಗಳನ್ನು ನೆನಪಿಟ್ಟುಕೊಂಡು ಹಾಡುವ ಉಸ್ತಾದ್‍ಗಳು, ಗವಾಯಿಗಳು ಇದ್ದರು. ಹೀಗೆ ಮೌಖಿಕ ಪರಂಪರೆಯನ್ನು ಹೊಂದಿ, ಶಬ್ದಕ್ಕೆ ಮೀರಿದ ‘ಅಮೂರ್ತ’ವಾದ ನಮ್ಮ ಸಂಗೀತ, ವೀಡಿಯೋ, ಮೈಕ್ರೋಫೋನ್, ರೆಕಾರ್ಡರ್‌ಗಳಿಂದ ಕೂಡಿದ ಸಂಪೂರ್ಣವಾಗಿ ದಾಖಲೆಗೊಳಗಾಗಿರುವ (documentation) ಇಂದಿನ ಯುಗದವರೆಗೆ ಸಾಗಿ ಬಂದ ಪಯಣದಲ್ಲಿ ತನ್ನ ‘ಶಬ್ದದಾಚೆಗಿನ ತುಡಿತ’ವನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕವೂ ಒಮ್ಮೊಮ್ಮೆ ನಮ್ಮನ್ನು ಕಾಡುತ್ತದೆ. ಜಾನಪದ ಸಂಗೀತದ ತಳಹದಿಯಿಂದ ಮೈದಳೆದ ಈ ಸಂಗೀತ ಇವತ್ತು ಅತ್ಯಂತ ಕ್ರಮಬದ್ಧವಾಗಿ, ಪರಿಷ್ಕೃತವಾಗಿ, ‘ಶಾಸ್ತ್ರೀಯ’ ಎಂಬ ಹೆಸರಿನೊಂದಿಗೆ ವೇದಿಕೆ ಏರಿ ಕುಳಿತ ಪರಿ ಅಚ್ಚರಿ ಮೂಡಿಸುತ್ತದೆ. ಆದರೆ ಅದರೊಂದಿಗೇ ಒಬ್ಬ ಮಹಿಳೆ ತಾನು ಗೌರವಯುತವಾಗಿ ಸಂಸಾರದ ಚೌಕಟ್ಟಿನೊಳಗೆ ಇದ್ದುಕೊಂಡು ಉತ್ತಮವಾದ ಸಾಮಾಜಿಕ ಜೀವನವನ್ನೂ ಕಾಪಾಡಿಕೊಂಡು ಸಂಗೀತ ಕಲಿಯ ಬಹುದಾದ ಹಾಗೂ ವೇದಿಕೆ ಏರಬಹುದಾದ ವಾತಾವರಣ ಇಂದು ನಿರ್ಮಾಣಗೊಂಡಿದೆ. ಹಾಗೇಯೇ ಸಮಾಜದ ಮುಖ್ಯವಾಹಿನಿಯಲ್ಲಿ ವೈದ್ಯರು, ಶಿಕ್ಷಕರು, ಇಂಜಿನಿಯರುಗಳು ಮೊದಲಾದವರೊಂದಿಗೆ ಸಮಾನವಾಗಿ ಸಂಗೀತಗಾರರೂ ಗುರುತಿಸಿಕೊಳ್ಳುವಂತಾದದ್ದು ಸಮಾಧಾನವನ್ನು ನೀಡುತ್ತದೆ. ಸಂಗೀತ ಕ್ಷೇತ್ರದ ಈ ಎಲ್ಲಾ ಬದಲಾದ ಸಂದರ್ಭದಲ್ಲಿ ನಿಂತು, ಇತ್ತೀಚೆಗೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿರುವ ಪ್ರತಿಭಾವಂತ ಯುವ ಗಾಯಕರುಗಳನ್ನು ಗುರುತಿಸಲು ಹೊರಟಾಗ ಮನಸ್ಸಿಗೆ ಸಂತೋಷವಾಗುವುದರೊಂದಿಗೆ, ಶಾಸ್ತ್ರೀಯ ಸಂಗೀತದ ಮುಖ್ಯ ಪ್ರವಾಹಕ್ಕೆ ಬಂದು ಸೇರುತ್ತಲೇ ಇರುವ ಚಿಕ್ಕ ಚಿಕ್ಕ ಧಾರೆ, ಒಳ ಹರಿವುಗಳ ಅನುಭವವೂ ಆಯಿತು. ಈ ಧಾರೆ, ಹರಿವುಗಳನ್ನು ‘ಮಾಡರ್ನ್ ಟ್ರೆಂಡ್ಸ್’ ಅಥವಾ ‘ವೈಯಕ್ತಿಕ ಕೊಡುಗೆ’ ಎಂಬ ಹೆಸರಿನಡಿಯೂ ಗುರುತಿಸಬಹುದೇನೋ… ಆದರೆ ನಾನು, ನನ್ನ ಕೇಳ್ಮೆ ಹಾಗೂ ಅರ್ಥೈಸಿಕೊಳ್ಳುವ ಮಿತಿಯೊಳಗೆ ಕೇವಲ ಗಾಯನ ಪ್ರಕಾರದಲ್ಲಿ ಉಂಟಾಗುತ್ತಿರುವ ಕೆಲವು ಗುರುತಿಸಲೇಬೇಕಾದ ಬದಲಾವಣೆಗಳನ್ನು, ಹೊಸದಾರಿಯಲ್ಲಿ ಸಾಗಿ ಬರುತ್ತಿರುವ ಕೆಲವು ಚಿಂತನೆಗಳನ್ನು, ನನ್ನ ಮನಮುಟ್ಟಿದ ಕೆಲವು ಅಪರೂಪದ ಪ್ರತಿಭೆಗಳನ್ನು ಈ ಬರಹದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಹೊರಟಿದ್ದೇನೆ. ಹಿಂದೂಸ್ಥಾನಿ ಸಂಗೀತದ ಇತಿಹಾಸವನ್ನು ಸಂಪೂರ್ಣವಾಗಿ ಗಮನಿಸಿದಾಗ, ಇದು ಹೆಚ್ಚಾಗಿ ಪುಣೆ, ಮುಂಬೈ, ಕಲ್ಕತ್ತಾ, ಬನಾರಸ್, ಲಖ್ನೊ, ಗ್ವಾಲಿಯರ್, ಧಾರವಾಡ, ಗೋವಾ ಮುಂತಾದ ಪಟ್ಟಣಗಳಲ್ಲೇ ಬೆಳೆದು ಬಂದಿರುವುದು ಕಂಡು ಬರುತ್ತದೆ. ಈ ಪಟ್ಟಣಗಳು ಸಂಗೀತವನ್ನು ಬಯಸಿ ಬರುವ ಗ್ರಾಮೀಣ ಪ್ರದೇಶದ, ಏನೂ ಸಂಗೀತದ ಹಿನ್ನಲೆಯಿಲ್ಲದಿರುವ ವಿದ್ಯಾರ್ಥಿಗಳಿಗೂ ನೂರಾರು ವರ್ಷಗಳಿಂದ ಅನ್ನ, ವಿದ್ಯೆ ನೀಡಿ ಪೊರೆದಿವೆ, ಪೊರೆಯುತ್ತಿವೆ. ಸಂಗೀತದ ತೀರ್ಥಸ್ಥಾನಗಳು ಎನಿಸಿದ ಫುಣೆ, ಕಲ್ಕತ್ತಾ, ಮುಂಬಯಿ, ಗ್ವಾಲಿಯರ್ ಇತ್ಯಾದಿ ನಗರಗಳ ಇಂದಿನ ಸಂಗೀತದ ವಾತಾವರಣವನ್ನು ನೋಡಿದಾಗ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರು ಯಾವತ್ತೂ ಹೇಳುತ್ತಿದ್ದ ‘ಸಂಗೀತವೆಂದರೆ ತೊಟ್ಟಿಲು ಇದ್ದ ಹಾಗೆ. ನಾವು ತೂಗುವುದು ನಿಲ್ಲಿಸಿದರೆ, ನಮ್ಮ ಹಿಂದೆ ಬಂದವರು ತೊಟ್ಟಿಲಿಗೆ ಕೈ ಹಚ್ಚುತ್ತಾರೆ’ ಎಂಬ ಮಾತು ನಿಜವೆನಿಸುತ್ತದೆ. ಈಗಿರುವ ಹಿರಿಯ ತಲೆಮಾರಿನ ಸಂಗೀತಗಾರರಾದ ಕಿಶೋರಿ ಅಮೋನ್ಕರ್, ಅಶ್ವಿನಿ ಭಿಡೆ ದೇಶಪಾಂಡೆ, ವೀಣಾ ಸಹಸ್ರಬುಧ್ಧೆ, ಉಲ್ಲಾಸ್ ಕಶಾಲ್ಕರ್, ಮಾಲಿನಿ ರಾಜುರ್ಕರ್, ರಶೀದ್ ಖಾನ್, ಅಜಯ್ ಚಕ್ರವರ್ತಿ, ಜಸ್‍ರಾಜ್, ಪದ್ಮಾ ತಲ್ವಾಲ್ಕರ್, ಸಂಜೀವ್ ಅಭ್ಯಂಕರ್ ಇವರೆಲ್ಲರ ನಂತರದ ತಲೆಮಾರಿನ ಗಾಯಕರಲ್ಲಿ ಹಲವರು ಭರವಸೆಯನ್ನು ಮೂಡಿಸುತ್ತಾರೆ. ಈ ನಿಟ್ಟಿನಲ್ಲಿ ಗುರುತಿಸಲೇಬೇಕಾದ ಕೆಲವು ಹೆಸರುಗಳನ್ನು ಕೆಳಗೆ ಚರ್ಚಿಸಿದ್ದೇನೆ. ಕೌಶಿಕಿ ಚಕ್ರವರ್ತಿ: ಪಂ.ಅಜಯ್ ಚಕ್ರವರ್ತಿ ಅವರ ಮಗಳೂ ಹಾಗೂ ಶಿಷ್ಯೆಯೂ ಆದ ಕೌಶಿಕಿಯ ಹೆಸರು ಕೇಳದ ಸಂಗೀತ ಪ್ರಿಯರಿಲ್ಲ. ಎಳೆವೆಯಿಂದಲೇ ಸಂಗೀತದ ಗಂಭೀರ ಅಭ್ಯಾಸ ನಡೆಸಿ, ಕಲ್ಕತ್ತಾದಲ್ಲಿರುವ ಪ್ರಸಿದ್ಧ ಸಂಗೀತ ಸಂಸ್ಥೆಯಾದ ಐಟಿಸಿಯ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಹೆಚ್ಚಿನ ಅಭ್ಯಾಸ ಮಾಡಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರತಿಷ್ಠಿತ ಸಂಗೀತ ಸಭೆಗಳಲ್ಲೆಲ್ಲಾ ಹಾಡಿ, ಅನೇಕ ಬಾರಿ ವಿದೇಶ ಪ್ರಯಾಣವನ್ನೂ ಮಾಡಿದವರು ಕೌಶಿಕಿ. ಶಾಸ್ತ್ರೀಯ ಸಂಗೀತದಷ್ಟೇ ಸಮರ್ಥವಾಗಿ ಠುಮ್ರಿ, ದಾದ್ರಾಗಳನ್ನೂ ಹಾಡಬಲ್ಲವರು. ಲಯದ ಮೇಲಿನ ಪ್ರಭುತ್ವ, ತಮ್ಮ ಕಂಠಸಿರಿಯನ್ನು ದುಡಿಸಿಕೊಂಡ ರೀತಿ ಶ್ಲಾಘನೀಯವದುದು. ಇವರು ಪಟಿಯಾಲ ಘರಾಣೆಯ ಹಾಡುಗಾರ್ತಿ. ಅರ್ಶದ್ ಅಲಿ ಖಾನ್: ಅರ್ಶದ್ ಐ.ಟಿ.ಸಿ ಯಿಂದ ಹೊರಬಂದ ಮತ್ತೋರ್ವ ಪ್ರತಿಭೆ. ಸಾರಂಗಿ ಮಾಂತ್ರಿಕ ಎನಿಸಿದ್ದ ಉ.ಶಕೂರ್ ಖಾನರ ಮೊಮ್ಮಗ, ಇವರು. 4 ವರ್ಷದ ಬಾಲಕನಾಗಿದ್ದಾಗಲೇ 40ರಾಗಗಳ ಪರಿಚಯ ಹೊಂದಿದ್ದರು. 8 ವರ್ಷದವನಾದಾಗ ಕಲ್ಕತ್ತಾದ ಐಟಿಸಿ ಸಂಸ್ಥೆ ಸೇರಿ, ಅಲ್ಲಿ ಉ.ಮಶ್ಕುರ್ ಅಲಿ ಖಾನ್ ಹಾಗೂ ಉ.ಮುಬಾರಕ್ ಅಲಿ ಖಾನ್ ಅವರ ಬಳಿ ಕಿರಾಣಾ ಸಂಪ್ರದಾಯದಲ್ಲಿ ಸಂಗೀತಾಭ್ಯಾಸ ಮಾಡಿದರು. ತಮ್ಮ ಘರಾಣೆಯ ವೈಶಿಷ್ಟ್ಯಗಳನ್ನು ಗಾಯನದಲ್ಲಿ ಯಶಸ್ವಿಯಾಗಿ ಪಡಿಮೂಡಿಸುತ್ತಾರೆ. ಪುಶ್ಕರ್ ಲೇಲೆ: ಗುರುಮುಖೇನ ಪಡೆದ ವಿದ್ಯೆಯನ್ನು ತಮ್ಮ ಪ್ರತಿಭೆಯ ಮೂಸೆಯಲ್ಲಿ ತಿದ್ದಿ, ಸಂಗೀತವಾಗಿ ಹೊರತಂದವರು, ಪುಶ್ಕರ್. ಆರಂಭದಲ್ಲಿ ಶ್ರೀ ಗಂಗಾಧರ ಬುವಾ ಪಿಂಪಳ್ಕರ್ ಇವರ ಬಳಿ ಗ್ವಾಲಿಯರ್ ಶೈಲಿಯಲ್ಲಿ ಅಭ್ಯಾಸ ಆರಂಭಿಸಿ, ಮುಂದೆ ಶ್ರೀ ವಿಜಯ್ ಕೊಪರ್ಕರ್ ಹಾಗೂ ಹಲವಾರು ವರ್ಷ ಶ್ರೀ ವಿಜಯ್ ಸರದೇಶ್‍ಮುಖ್ ಅವರ ಬಳಿ ಅಭ್ಯಾಸ ಮಾಡಿದ್ದಾರೆ. ಸರದೇಶ್‍ಮುಖ್ ಅವರು ಸಂಗೀತದ ಆಧುನಿಕ ಯುಗದ ನೇತಾರರಾದ ಪಂ.ಕುಮಾರ ಗಂಧರ್ವರ ಪ್ರಮುಖ ಶಿಷ್ಯರಾಗಿದ್ದಾರೆ. ಇಂದಿನ ದಿನಮಾನದಲ್ಲಿ ಇರುವ ಕೆಲವೇ ಟಪ್ಪಾ ಗಾಯಕರಲ್ಲಿ ಪುಶ್ಕರ್ ಕೂಡಾ ಒಬ್ಬರು. ಸಂಗೀತಕ್ಕೆ ಸಂಬಂಧಿಸಿದ ಅನೇಕ ಉತ್ತಮ ವಿಚಾರಗಳನ್ನು ಹೊಂದಿರುವ ಇವರು, ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅಪೂರ್ವ ಗೋಖಲೆ: ಅಪೂರ್ವ, ಗ್ವಾಲಿಯರ್ ಘರಾಣೆಯ ಹಿರಿಯ ಗಾಯಕ-ವಯೋಲಿನ್ ವಾದಕ-ಶ್ರೇಷ್ಠ ಗುರುವೂ ಆಗಿದ್ದ ಪಂ.ಗಜಾನನ ಬುವಾ ಜೋಶಿ ಅವರ ಮೊಮ್ಮಗಳು. ತಮ್ಮ ಅಜ್ಜನ ಬಳಿಯೇ ಅಭ್ಯಾಸ ಆರಂಭಿಸಿ, ನಂತರ ಮಾವ ಮಧುಕರ್ ಜೋಶಿ ಅವರ ಬಳಿ ಮುಂದುವರಿಸಿದರು. ಉನ್ನತ ಅಭ್ಯಾಸವನ್ನು ಪಂ.ಉಲ್ಲಾಸ್ ಕಶಾಲ್ಕರ್ ಅವರ ಬಳಿ ಮಾಡಿ, ಸದ್ಯ ಅಶ್ವಿನಿ ಭಿಡೆ ಅವರ ಮಾರ್ಗದರ್ಶನದೊಂದಿಗೆ ಮುಂದೆ ಸಾಗುತ್ತಿದ್ದಾರೆ. ತಮ್ಮ ಸಹೋದರಿ ಪಲ್ಲವಿ ಜೋಶಿ ಜೊತೆಗೂ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಸಹೋದರಿಯರಿಬ್ಬರೂ ಪ್ರತಿಭಾವಂತರಾಗಿದ್ದು ಪಾರಂಪರಿಕ ಝುಮ್ರಾ, ತಿಲವಾಡ ತಾಳಗಳಲ್ಲಿ ರಾಗಗಳನ್ನು ಸುಂದರವಾಗಿ ಹಿಡಿದಿಡುತ್ತಾರೆ. ಮಂಜೂಷಾ ಕುಲಕರ್ಣಿ ಪಾಟೀಲ್: ಆಗ್ರಾ-ಗ್ವಾಲಿಯರ್ ಘರಾಣೆಯ ಗಾಯಕಿ, ಮಂಜೂಷಾ. ಚಿಂಟುಬುವಾ ಮೈಸ್ಕರ್ ಹಾಗೂ ಡಿ.ವಿ. ಖಾನೆಬುವಾ ಅವರ ಬಳಿ, ಗುರು-ಶಿಷ್ಯ ಪರಂಪರೆಯಲ್ಲಿ ಹಲವಾರು ವರ್ಷ ಅಭ್ಯಾಸ ಮಾಡಿ, ಪ್ರಸ್ತುತ ಶ್ರೀ ವಿಕಾಸ ಕಶಾಲ್ಕರ್ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾದ ಇವರ ಗಾಯನ, ಶಕ್ತಿಯುತವಾದ ಗಾಯನವೆಂದೇ ಗುರುತಿಸಲ್ಪಡುತ್ತದೆ. ಇವರ ಗಾಯನದಲ್ಲಿ ಲಯದ ಬಗೆಗಿನ ಆತ್ಮ ವಿಶ್ವಾಸ, ರಾಗಶುದ್ಧತೆ, ತಾನ್‍ಗಳ ಸಂಕೀರ್ಣತೆ ಎದ್ದು ಕಾಣುತ್ತದೆ. ಉತ್ತಮವಾಗಿ ಮರಾಠಿ ನಾತ್ಯ ಗೀತೆಗಳನ್ನು, ಅಭಂಗಗಳನ್ನು ಹಾಡುತ್ತಾರೆ. ಶಾಶ್ವತಿ ಮಂಡಲ್-ಪಾಲ್: ಮಧ್ಯ ಪ್ರದೇಶದ ಗ್ವಾಲಿಯರ್, ಸಂಗೀತದ ಪ್ರಮುಖ ಘರಾಣೆಗಳಲ್ಲಿ ಒಂದಾದ ಗ್ವಾಲಿಯರ್ ಘರಾಣೆಯ ಜನ್ಮ ಭೂಮಿ. ಇಂಥಹ ಗ್ವಾಲಿಯರ್ ಹಾಗೂ ಅದರ ನೆರೆಯ ಭೋಪಾಲ್ ಶಾಶ್ವತಿಯ ಕರ್ಮಭೂಮಿ. ಶಾಶ್ವತಿ, ಆರಂಭದ ಶಿಕ್ಷಣವನ್ನು ತಮ್ಮ ತಾಯಿ ಕಮಲಾ ಮಂಡಲ್ ಬಳಿ ಪಡೆದರು. ನಂತರ, ಘರಾಣೆಯ ಹಿರಿಯ ಗಾಯಕರಾದ ಬಾಳಾ ಸಾಹೇಬ ಪೂಛ್‍ವಾಲೆ ಅವರ ಬಳಿ ಖ್ಯಾಲ್ ಹಾಗೂ ಟಪ್ಪಾ ಗಾಯಕಿಯ ಅಭ್ಯಾಸ ಮಾಡಿದರು. ಕೆಲವು ಕಾಲ ಗುಂಡೇಚಾ ಸಹೋದರರಿಂದಲೂ ಮಾರ್ಗದರ್ಶನ ಪಡೆದಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾದ ಇವರು, ಟಪ್ಪಾ ಗಾಯನದಲ್ಲಿ ಪರಿಣತಿಯನ್ನು ಸಾಧಿಸಿದ್ದಾರೆ. ಸಾವನಿ ಶೆಂಡೆ: ಪ್ರಸ್ತುತ ವೀಣಾ ಸಹಸ್ರಬುದ್ಧೆ ಅವರಿಂದ ಉನ್ನತ ಮಾರ್ಗದರ್ಶನ ಪಡೆಯುತ್ತಿರುವ ಸಾವನಿ ಜನಿಸಿದ್ದು ಸಂಗೀತಗಾರರ ಮನೆಯಲ್ಲೇ. ಇವರ ಅಜ್ಜಿ ಹಿರಿಯ ಖ್ಯಾಲ್ ಹಾಗೂ ಠುಮ್ರಿ ದಾದ್ರಾಗಳ ಗಾಯಕಿ, ಕುಸುಮ್ ಶೆಂಡೆ. ಸಾವನಿಯ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದರೂ, ಅತ್ಯುತ್ತಮ ಗಾಯಕರು. ಹೀಗೆ ಎಳವೆಯಿಂದಲೇ ಆರಂಭಗೊಂಡ ಸಂಗೀತಾಭ್ಯಾಸ ಇಂದು ಆಕೆಯನ್ನು ಉತ್ತಮ ಕಲಾವಿದೆಯನ್ನಾಗಿ ಮಾಡಿದೆ. ಸಾವನಿ, ಹಲವಾರು ಮರಾಠಿ ಸಿನಿಮಾಗಳಿಗೆ ಕಂಠ ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದುವು, ಸಾವಲೀ, ಕೈರೀ ಇತ್ಯಾದಿ. ಜಸರಾಜ್ ಗೌರವ ಪುರಸ್ಕಾರ, ಮಾಣಿಕ್ ಭಿಡೆ ಪ್ರಶಸ್ತಿ, ಸುರಮಣಿ ಮುಂತಾದ ಹಲವು ಪುರಸ್ಕಾರ ಪಡೆದಿದ್ದಾರೆ. ಮಂಜಿರಿ ಅಸಾನಾರೆ ಕೇಳ್ಕರ್: ಮರಾಠಿ ಭಾಷೆಯ ಹೆಸರಾಂತ ಲೇಖಕರಾದ ಪು.ಲಾ.ದೇಶಪಾಂಡೆ ಅವರು ಮಂಜಿರಿಯನ್ನು ‘ಭವಿಷ್ಯದ ಕೇಸರಿಬಾಯಿ’ ಎಂದು ಗುರುತಿಸಿದ್ದಾರೆ. ಇವರ ತಂದೆ ಆನಂದ ಕೇಳ್ಕರ್, ತಬಲಾ ವಾದಕರು. ಮಂಜಿರಿ ತಮ್ಮ ಸಂಗೀತದ ಆರಂಭವನ್ನು, ಜೈಪುರ್ ಅತ್ರೌಲಿ ಘರಾಣೆಯ ಬುರ್ಜಿ ಖಾನರ ಶಿಷ್ಯರಾದ ಪಂ.ಖಾನೆಟಕರ್ ಬುವಾ ಅವರ ಬಳಿ ಆರಂಭಿಸಿದರು. ಮುಂದೆ ಸಿ ಟಿ ಮೈಸ್ಕರ್ ಅವರ ಬಳಿ ಮುಂದುವರಿಸಿದರು. ಇಂದು ತಮ್ಮ ಯಾವುದೇ ರೀತಿಯ ಚಮತ್ಕಾರಗಳಿಲ್ಲದ, ಶುದ್ಧ ಸಂಗೀತದಿಂದ ಹೆಸರಾಗಿರುವ ಮಂಜಿರಿ, ಮೂಲತಃ ಉತ್ತಮ ಕಥಕ್ ನೃತ್ಯಗಾರ್ತಿ. ತಮ್ಮ ಗಾಯನದ ಮುಂದುವರಿಕೆಗಾಗಿ, ಜೈಪುರ್ ಘರಾಣೆಯ ಮೇರು ಕಲಾವಿದೆ, ಸ್ವರಶ್ರೀ ಕೇಸರಬಾಯಿ ಕೇರ್ಕರ್ ವಿದ್ಯಾರ್ಥಿ ವೇತನವನ್ನೂ ಪಡೆದಿದ್ದಾರೆ. ಶೌನಕ್ ಅಭಿಶೇಕಿ: ಶೌನಕ್, ಪಂ.ಜಿತೇಂದ್ರ ಅಭಿಶೇಕಿ ಅವರ ಮಗ ಹಾಗೂ ಶಿಷ್ಯ. ಆಗ್ರಾ-ಜೈಪುರ್ ಘರಾಣೆಯ ಗಾಯಕ. ತಮ್ಮ ತಂದೆಯ ರಚನೆಗಳನ್ನು ಆಧರಿಸಿದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸಿ ಪ್ರಸ್ತುತಪಡಿಸಿದ್ದಾರೆ. ಸರಸ್ವತಿ ರಾಣೆ ಪುರಸ್ಕಾರ್, ಪುಣೆ ಕಿ ಆಶಾ ಇತ್ಯಾದಿ ಹಲವು ಗೌರವಕ್ಕೆ ಪಾತ್ರರಾಗಿದ್ದಾರೆ. ಅನುರಾಧಾ ಕುಬೇರ್: ಇಂದು ಹೆಚ್ಚು ಪ್ರಸಿದ್ಧಿಯಲ್ಲಿ ಇಲ್ಲದ ‘ಬೆಂಡಿ ಬಜಾರ್ ಘರಾಣೆ’ಯ ಗಾಯಕಿ, ಅನುರಾಧಾ. ಶಾಂತವಾದ ರಾಗ ವಿಸ್ತಾರ, ಸ್ವರದೆಡೆಗಿನ ಪ್ರೀತಿಯಿಂದ ಕೇಳುಗರ ಮನಸ್ಸನ್ನು ಗೆದ್ದಿದ್ದಾರೆ. ಸುಮಾರು 15 ವರ್ಷಗಳ ಕಾಲ, ಘರಾಣೆಯ ಪಂ. ಟಿ ಡಿ ಜನೋರಿಕರ್ ಬುವಾ ಬಳಿ ಉತ್ತಮವಾದ ತಾಲೀಮನ್ನು ಪಡೆದಿದ್ದಾರೆ. ಪ್ರಸ್ತುತ ಶ್ರೀ ಅರವಿಂದ ಥಟ್ಟೆ ಯವರ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಗಾಯಕಿ. ತಮ್ಮ ಘರಾಣೆಯ ಖಾಸ್ ಬಂದಿಷ್‍ಗಳನ್ನು ಸಮರ್ಥವಾಗಿ ಹಾಡಬಲ್ಲವರು, ಅನುರಾಧಾ. ಜಯತೀರ್ಥ ಮೇವುಂಡಿ: ಕರ್ನಾಟಕದ ಹೆಸರನ್ನು ದೇಶಾದ್ಯಂತ ಮೆರೆಸುತ್ತಿರುವ ಅಪರೂಪದ ಕಲಾವಿದ, ಮೇವುಂಡಿ. ಕಿರಾಣಾ ಸಂಪ್ರದಾಯದ ತಾಲೀಮು ಹಾಗೂ ತಮ್ಮ ಪ್ರತಿಭೆ ಎರಡರ ಅದ್ಭುತವಾದ ಪಾಕವನ್ನು ಪ್ರತೀ ಕಾರ್ಯಕ್ರಮದಲ್ಲೂ ಉಣಬಡಿಸುತ್ತಿದ್ದಾರೆ. ಆರಂಭಿಕ ಶಿಕ್ಷಣವನ್ನು, ಗಾನಭಾನು ಎಂದೇ ಹೆಸರಾಗಿದ್ದ, ಕಿರಾಣಾ ಘರಾಣೆಯ ಪಂ. ಅರ್ಜುನ್‍ಸಾ ನಾಕೋಡ್ ಅವರ ಬಳಿ ಪಡೆದು, ಮುಂದೆ ಭೀಮಸೇನ್ ಜೋಶಿ ಅವರ ಶಿಷ್ಯರಾದ ಶ್ರೀಪತಿ ಪಾಡಿಗಾರ್ ಅವರ ಶಿಷ್ಯತ್ವ ಮಾಡಿದರು. ಗಂಭೀರವಾದ ಅಲಾಪ್, ತಾನ್‍ಗ‍ಳ ಕುಸುರಿ ಕೆಲಸ, ಮಧುರವಾದ ಅಭಂಗ್‍ಗಳಿಂದ ಸಭೆ ಗೆಲ್ಲಬಲ್ಲವರು, ಮೇವುಂಡಿ. ಜಸರಾಜ್ ಪ್ರಶಸ್ತಿ, ಐ ಟಿ ಸಿ ನೀಡುವ ಗೌರವ, ಹೀಗೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಗೌರಿ ಪಠಾರೆ: ಮುಂಬೈ ನಿವಾಸಿಯಾಗಿರುವ ಗೌರಿ, ಆರಂಭಿಕ ಅಭ್ಯಾಸವನ್ನು ಪಂ. ಗಂಗಾಧರ ಪಿಂಪಳ್ಕರ್ ಅವರ ಬಳಿ ಮಾಡಿದ್ದಾರೆ. ಮುಂದೆ ಆರು ವರ್ಷಗಳ ಕಾಲ ಜಿತೇಂದ್ರ ಅಭಿಶೇಕಿ ಅವರಲ್ಲಿ ಅಭ್ಯಾಸ ಮಾಡಿ, ಪ್ರಸ್ತುತ 10-15 ವರ್ಷಗಳಿಂದ ಪುಣೆಯ ಪದ್ಮಾ ತಲವಾಲ್ಕರ್ ಅವರ ಬಳಿ ವಿದ್ಯಾಭ್ಯಾಸ ನಡೆಸಿದ್ದಾರೆ. ಇವರ ಗಾಯನದ ಗತ್ತುಗಾರಿಕೆ, ಗಾಯನದಿಂದ ಸಭೆಯನ್ನು ತುಂಬುವ ರೀತಿ ಶ್ರೋತೃಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ರಾಮಕೃಷ್ಣ ಬುವಾ ವಝೆ ಪ್ರಶಸ್ತಿಯೇ ಮೊದಲಾದ ಹಲವು ಗೌರವಗಳನ್ನು ಗೌರಿ ಪಡೆದಿದ್ದಾರೆ. ಚೇತನಾ ಬನಾವತ್: ಕಿರಾಣಾ ಘರಾಣೆಯ ಹಿರಿಯ ಗಾಯಕಿ ಡಾ.ಪ್ರಭಾ ಅತ್ರೆಯವರ ಶಿಷ್ಯೆಯಾಗಿರುವ ಚೇತನಾ ಜನಿಸಿದ್ದು, ಉದಯಪುರದಲ್ಲಿ. ಆರಂಭಿಕ ಶಿಕ್ಷಣವನ್ನು ತಮ್ಮ ತಾಯಿ ಮದನಾ ಬನಾವತ್ರಿಂದ ಪಡೆದು, ನಂತರದಲ್ಲಿ ಪ್ರಭಾ ತಾಯಿಯ ಶಿಷ್ಯೆಯಾಗಿ ಇಂದು ದೇಶದೆಲ್ಲೆಡೆ ಹೆಸರಾಗಿದ್ದಾರೆ. ಪ್ರಭಾ ಅತ್ರೆಯವರು ರಚಿಸಿದ ಬಂದಿಷ್‍ಗಳು ಇರುವ ಸಿ.ಡಿಯಾದ ‘ಸ್ವರಾಂಗಿನಿ’ ಹಾಗೂ ‘ಸ್ವರಾಂಜಿನಿ’ ಗಳಲ್ಲಿ ಪ್ರಭಾ ತಾಯಿಯವರು, ಚೇತನಾ ಅವರಿಂದಲೇ ಹಾಡಿಸಿರುವುದು, ಅವರ ಪ್ರತಿಭೆಗೆ ನಿದರ್ಶನ. ಚೇತನಾ ಸಂಗೀತ ನಾಟಕ ಅಕಾಡೆಮಿಯ ಯುವ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ. ಸಾನಿಯಾ ಪಾಠನ್ಕರ್: ಜೈಪುರ್-ಅತ್ರೌಲಿ ಘರಾಣೆಯ ಮೇರು ಕಲಾವಿದೆಯಾದ ಅಶ್ವಿನಿ ಭಿಡೆ ದೇಶ್‍ಪಾ0ಡೆ ಅವರ ಶಿಷ್ಯೆಯಾದ ಸಾನಿಯಾ, ಸಿ.ಎಸ್ ಮುಗಿಸಿದ್ದಾರೆ. ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಸಾನಿಯಾ, ಭವಿಷ್ಯದಲ್ಲಿ ಹೆಸರಾಂತ ಉತ್ತಮ ಗಾಯಕಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಾನಿಯಾ, ವಿಷ್ಣು ದಿಗಂಬರ ಪ್ರಶಸ್ತಿ, ಜಸರಾಜ್ ಪ್ರಶಸ್ತಿ, ರಾಮಕೃಷ್ಣ ಬುವಾವಝೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅನೇಕ ರಿಯಾಲಿಟಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಠುಮ್ರಿ ದಾದ್ರಾಗಳನ್ನೂ ಸಮರ್ಥವಾಗಿ ಹಾಡ ಬಲ್ಲವರು. ಶಶಾಂಕ್ ಮಕ್ತೇದಾರ್: ಪ್ರಸ್ತುತ ಗೋವಾದ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶಶಾಂಕ್, ವಿದ್ವಜ್ಜನರ ಹಾಗೂ ಸಹೃದಯಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದ ಕಲಾವಿದರು. ತಂದೆ ಶಾಮರಾವ್ ಮಕ್ತೇದಾರ್ ರಿಂದ ಆರಂಭಿಕ ಶಿಕ್ಷಣ ಪಡೆದು, 1991ರಲ್ಲಿ ಐ ಟಿ ಸಿ ಸೇರಿ, ಉಲ್ಲಾಸ್ ಕಶಾಲ್ಕರ್ ಅವರ ಬಳಿ ಹೆಚ್ಚಿನ ಅಭ್ಯಾಸ ಮಾಡಿದರು. ತಮ್ಮ ಗುರುಗಳ ಗುರುಗಳಾದ ‘ಪಂ.ಗಜಾನನ ಬುವಾ ಜೋಶಿ ಅವರ ಸಾಂಗೀತಿಕ ಕೊಡುಗೆ’ ಎಂಬುದು ಅವರ ಪಿಹೆಚ್‍ಡಿ ಅಧ್ಯಯನದ ವಿಷಯ. ಕುಮಾರ್ ಮರಡೂರ್: ಪ್ರಸ್ತುತ ಕಲ್ಕತ್ತಾದ ಐ ಟಿ ಸಿ ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ್, ಧಾರವಾಡದ ಮಣ್ಣಿನ ಮಗ. ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯಿಂದ ಸಂಗೀತಾಸಕ್ತರ ಗಮನ ಸೆಳೆದವರು. ಕುಮಾರ್ ತಮ್ಮ ತಂದೆ ಪಂ.ಸೋಮನಾಥ ಮರಡೂರ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದಾರೆ. ಸವಾಯ್ ಗಂಧರ್ವ ಉತ್ಸವವೇ ಮೊದಲಾದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕುಮಾರ್ ತಬಲಾ ವಾದನವನ್ನೂ ಚೆನ್ನಾಗಿ ಬಲ್ಲವರು. ಇವರ ಕಂಠವು ಕಂಚಿನ ಗಟ್ಟಿತನ, ಗಂಭೀರತೆ ಗಳ ಜೊತೆಗೆ ಹೂವಿನ ಮೃದುತ್ವವನ್ನೂ ಹೊಂದಿದೆ. ಆರತಿ ಠಾಕೂರ್ ಕುಂಡಲ್ಕರ್: ಪುಣೆ ನಿವಾಸಿಯಾದ ಆರತಿ, ಭರವಸೆ ಮೂಡಿಸುತ್ತಿರುವ ಗಾಯಕಿ. ಡಾ.ಪ್ರಭಾ ಅತ್ರೆ ಅವರ ಶಿಷ್ಯೆ. ಕಿರಾಣಾ ಘರಾಣೆಯ ಪದ್ಧತಿಯಲ್ಲಿ ಕಲಿತ ಇವರು ಖ್ಯಾಲ್ ಜೊತೆಗೆ ಠುಮ್ರಿ, ದಾದ್ರಾಗಳನ್ನೂ ಹಾಡುತ್ತಾರೆ. ಇವರ ಪತಿ ಸುಯೋಗ್ ಕುಂಡಲ್ಕರ್, ಪ್ರತಿಭಾವಂತ ಯುವ ಹಾರ್ಮೋನಿಯಂ ವಾದಕ. ಇವರಷ್ಟೇ ಅಲ್ಲದೇ ತುಶಾರ್ ದತ್ತ್, ಶಿವಾನಿ ಮಾರುಲ್ಕರ್, ರುಚಿರಾ ಕೇದಾರ್, ಗಾಯತ್ರಿ ವೈರಾಗ್ಯಕರ್, ಯಶಸ್ವಿ ಸಾಠೆ, ರಂಜನಿ ರಾಮಚಂದ್ರನ್, ಶೌನಕ್ ಚಟರ್ಜಿ ಮುಂತಾದವರೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಇಲ್ಲಿ, ಯಾವುದೇ ಸಂಗೀತವು ‘ಆಧುನಿಕ’ ಎಂದು ಕರೆಯಲ್ಪಡುವುದು ಕೇವಲ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಅಲ್ಲ. ಯಾರೇ ಒಬ್ಬ ಸಂಗೀತಗಾರ ಪರಂಪರೆ ಹೇಳುವ ಶಿಸ್ತು, ನಿಯಮಗಳನ್ನು ಉಳಿಸಿಕೊಂಡೂ ಹೆಚ್ಚು ಸಂವೇದನಾ ಶೀಲವಾದ, ಹಾಗೆಯೇ ಹೆಚ್ಚು ಪ್ರಸ್ತುತವೆನಿಸುವ ಹೊಸತೊಂದನ್ನು ಕಂಡುಕೊಂಡಾಗ ಆತ ಮತ್ತೆ ಪ್ರಸ್ತುತನಾಗುತ್ತಾ ಹೋಗುತ್ತಾನೆ. ಹೀಗಾಗಿ ಆಧುನಿಕತೆ ಎನ್ನುವುದು ಮನೋಧರ್ಮಕ್ಕೆ ಸಂಬಂಧಿಸಿದ್ದು. ಹೀಗೆ ತನ್ನ ಬೇರನ್ನು ಭದ್ರವಾಗಿಟ್ಟುಕೊಂಡೇ, ಆಧುನಿಕತೆಯೆಡೆಗೆ ಸಾಗುತ್ತಿರುವ ಇವತ್ತಿನ ಸಂಗೀತದಲ್ಲಿ ಉಂಟಾಗಿರುವ ಕೆಲವು ಉತ್ತಮವಾದ, ನನಗೆ ಧನಾತ್ಮಕ ಎನಿಸಿದ ಮಾರ್ಪಾಟುಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೇನೆ. ನನಗನಿಸುವಂತೆ ಇಂದಿನ ಹಲವು ಗಾಯಕರಿಗೆ ‘ಬಂದಿಶ್’ ಬಗ್ಗೆ ಒಲವು ಹೆಚ್ಚುತ್ತಿದೆ. ಹಲವಾರು ಸಂದರ್ಭಗಳಲ್ಲಿ ಅಶ್ಲೀಲ, ಅಸಹ್ಯ ವೆನಿಸುವ ಅರ್ಥವನ್ನು ಕೊಡುವ ಹಳೆಯ ಬಂದಿಷ್‍ಗಳ ಬದಲಿಗೆ ಒಳ್ಳೆಯ ಅರ್ಥದ ಹೊಸ ಬಂದಿಷಗಳ ಹುಡುಕಾಟ ನಡೆಯುತ್ತಿದೆ. ಇದರಿಂದಾಗಿ ಪಾರಂಪರಿಕ ಬಂದಿಷ್‍ಗಳ ಜೊತೆ ಸೇರಿ ಹೋದ ಕುಮಾರಜಿ, ನಾತು ಬುವಾ, ರಾತಾಂಜನಕರ್, ರತ್ನಕಾಂತ್ ರಾಮನಾಥಕರ್ ಮುಂತಾದವರ ಬಂದಿಷ್‍ಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತಿವೆ. ಇವುಗಳೊಂದಿಗೆ ಶಂಕರ ಅಭ್ಯಂಕರ್, ಕಿಶೋರಿ ಅಮೋನ್ಕರ್, ಅಶ್ವಿನಿ ಭಿಡೆ, ಪ್ರಭಾ ಅತ್ರೆ ಮೊದಲಾದವರ ಅನೇಕ ವಿಶಿಷ್ಟ ರಚನೆಗಳೂ ಪ್ರಸಿದ್ಧಿ ಪಡೆಯುತ್ತಿವೆ. ಹೊಸದಾದ ‘ಭಾವ ಸೌಂದರ್ಯವಾದ’ವನ್ನು ಪ್ರತಿಪಾದಿಸುವ ನಾರಾಯಣ ಪಂಡಿತರಂಥವರ ಬಂದಿಷ್‍ಗಳು ಸಂಗೀತದ ‘ಆಧುನಿಕತೆ’ಗೆ ಸಂದ ದೊಡ್ಡ ಕೊಡುಗೆ. ಯುವಪೀಳಿಗೆಯಲ್ಲಿ ಇಂಥಹ ಕಾರ್ಯ ಮುಂದುವರಿಸಿ, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವವರು ಪುಣೆಯ ಯುವ ಹಾರ್ಮೋನಿಯಂ ವಾದಕ-ವಾಗ್ಗೇಯ ಕಾರರಾದ ಶ್ರೀ ಚೈತನ್ಯ ಕುಂಟೆ. ಇವರು ಹಲವಾರು ಬಂದಿಷ್‍ಗಳ ರಚನೆ ಮಾಡುವುದರೊಂದಿಗೆ, ಹಲವಾರು ವಿಚಾರಾಧಾರಿತ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗಾಗಿ; ಮೆಘ್-ರಂಗ್, ಬಸಂತ್-ರಂಗ್, ನಾಯಿಕಾ ಭಾವ-ತರಂಗ್, ಭೈರವಿ ದರ್ಶನ್, ಸಾಜ್ ಠುಮರೀಚಾ ಇತ್ಯಾದಿ. ಕಥಕ್ ಹಾಗೂ ಭರತನಾಟ್ಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿರುವ ಇವರು, ಟಪ್ಪಾ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದಾರೆ. ಇಂದಿನ ಹೆಚ್ಚಿನ ಯುವ ಗಾಯಕರು ಸಂಗೀತದ ಕ್ಷೇತ್ರಕ್ಕೆ ಸಂಪೂರ್ಣ ಸಮರ್ಪಣೆ ಮಾಡಿಕೊಂಡಿದ್ದರೂ, ಉನ್ನತ ಮಟ್ಟದ ಔಪಚಾರಿಕ ಶಿಕ್ಷಣವನ್ನೂ ಪಡೆದವರಾಗಿದ್ದಾರೆ. ಸಾಹಿತ್ಯ, ಗಣಿತ, ವಿಜ್ಞಾನ ಹೀಗೆ ವಿಭಿನ್ನ ವಿಭಾಗದಲ್ಲಿ ಹೆಚ್ಚಿನ ತಿಳುವಳಿಕೆ ಹೊಂದಿದ್ದು, ಈ ತಿಳುವಳಿಕೆಯಿಂದ ಅವರು ಸಂಗೀತವನ್ನು ನೋಡುವ ದೃಷ್ಟಿಯೂ ಬದಲಾಗುತ್ತಿರುವುದನ್ನು ಗುರುತಿಸಬಹುದಾಗಿದೆ. ತಮ್ಮ ಈ ಔಪಚಾರಿಕ ಶಿಕ್ಷಣದಿಂದ ಉತ್ತಮವಾದ ವಿಶ್ಲೇಷಣಾ ಶಕ್ತಿ ಹಾಗೂ ಘನತೆಯಿಂದ ಹಾಡುವುದು, ಬದುಕುವುದು ಇವುಗಳನ್ನು ಪಡೆದುಕೊಂಡಿದ್ದಾರೆ. ಧ್ವನಿ ವರ್ಧಕ ಇಲ್ಲದ ಕಾಲದಲ್ಲಿ ರೂಪುಗೊಂಡ ‘ಜೋರ್‌ದಾರ್’ ಗಾಯನ ಅದರ ಕುರುಡು ಅನುಕರಣೆಯಿಂದ ಮುಂದಿನ ಪೀಳಿಗೆಗೂ ಸಾಗಿ ಬಂದದ್ದನ್ನು ಕಾಣುತ್ತೇವೆ. ಈ ಅಂಶ ಇಂದಿನ ಕಾಲದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಮೈಕ್ ಅನ್ನು ಬಳಸಿ ಸಂಗೀತದಲ್ಲಿ ಮಾಡಬಹುದಾದ ಬದಲಾವಣೆ, ಅದರಿಂದಾಗುವ ಉಪಯೋಗ ಇವೆಲ್ಲವನ್ನೂ ಅಭ್ಯಾಸ ಮಾಡಿ ಸ್ವರಸಂಸ್ಕಾರ (voice culture) ಕ್ಷೇತ್ರದಲ್ಲಿ ಮಹತ್ವಪೂರ್ಣವಾದ ಬದಲಾವಣೆಯನ್ನು ಮಾಡಲಾಗಿದೆ. ಪುರುಷರು ಗುರುಗಳಾಗಿದ್ದಾಗ, ಅವರಿಂದ ಕಲಿಯುತ್ತಿದ್ದ ಸ್ತ್ರೀಯರ ಶಾರೀರ ತನ್ನ ಮೂಲ ಸ್ವರೂಪಕ್ಕೆ ಹೊರತಾದ, ಹೆಣ್ಣು ಕಂಠಕ್ಕೆ ಶೋಭಿಸದ ಗಮಕಗಳು, ತಾನ್‍ಗಳು ಇತ್ಯಾದಿಗಳನ್ನು ಅನುಕರಿಸುತ್ತದೆ. ಇವುಗಳನ್ನೆಲ್ಲಾ ಗುರುತಿಸಿ, ಪರಿಷ್ಕರಿಸಿ ‘ femininity’’ ಎಂಬ ಹೆಸರಿನಡಿ ಇಂದು ಗುರುತಿಸಲಾಗಿದೆ. ಹೆಚ್ಚಿನ ಗಮಕಗಳಿಂದ ಸ್ತ್ರೀಕಂಠದ ಮೇಲೆ ಬೀಳುವ ಅನವಶ್ಯಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಚಿಕ್ಕವಯಸ್ಸಿನಲ್ಲಿಯೇ ಸ್ವರವನ್ನು ಕಳೆದುಕೊಳ್ಳುವುದು ತಪ್ಪುತ್ತದೆ ಎಂದೂ ಗುರುತಿಸಲಾಗಿದೆ. ಇಂದಿನ ಮಲ್ಟಿಮೀಡಿಯ ಯುಗದಲ್ಲಿ ಹಿಂದಿನ ಉಸ್ತಾದ್, ಗವಾಯಿಗಳು ಮಾಡುತ್ತಿದ್ದ ಹಾವಾಭಿನಯಗಳ ಅಬ್ಬರ ಕಡಿಮೆಯಾಗಿ ಸೂಕ್ಷ್ಮತೆ ಜಾಗ ಪಡೆಯುತ್ತಿದೆ. ಶಾರೀರದ ಅದೇ ಬಾಗು ಬಳುಕುಗಳನ್ನು ಆಂಗಿಕ ಅಭಿನಯ, ಅಬ್ಬರಗಳಿಲ್ಲದೆ ನಯವಾಗಿ ಸಾಧಿಸುವ ಬಗೆ ಇಂದಿನ ಸಂಗೀತಗಾರರಲ್ಲಿ ಕಾಣುತ್ತದೆ. ಪಾರಂಪರಿಕ ಧೀಮಾ, ಏಕ್ತಾಲ್, ತ್ರಿತಾಲ್‍ಗಳೊಂದಿಗೆ ಇಂದಿನ ವೇಗದ ಯುಗದಲ್ಲಿ ಮಧ್ಯ ಲಯದ ಝಪ್ತಾಲ್, ರೂಪಕ್‍ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಮಧ್ಯಲಯದ ತಾಳಗಳಿಂದ ರಾಗನಿರೂಪಣೆಯಲ್ಲಿ ಚುಟುಕು ಹಾಗೂ ಚುರುಕುತನಗಳು ಬರುವುದರೊಂದಿಗೆ ರಾಗದ ಸಾರವನ್ನು ಸಂಗ್ರಹಿಸಿ ಸುಂದರವಾಗಿ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಹಳೆ ಬೇರಿನಿಂದ ಚಿಗುರೊಡೆದ ಹೊಸ ಕವಲುಗಳು ಕೆಳಗೆ ಭದ್ರವಾಗಿ ಬೇರೂರಿಕೊಂಡೇ ಗಗನಗಾಮಿಯಾಗಿ ಬೆಳೆಯುತ್ತಿರುವುದು ಆಶಾದಾಯಕವಾಗಿ ಕಂಡುಬರುತ್ತದೆ. ಎಲ್ಲ ಸಂಗತಿಗಳ ಜೊತೆಗೆ ಕಲೆಯೂ ಒಂದು ‘ಮಾರಾಟದ ಸರಕಾಗಿ’ ಬಿಡುವ ಎಚ್ಚರದಲ್ಲೇ ಇವರು ಕಲೆಯ ಮೂಲಕ ತಮ್ಮತನದ ಹುಡುಕಾಟದ ಇಕ್ಕಟ್ಟಿನಲ್ಲಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಇವುಗಳ ನಡುವೆಯೇ ಪರಂಪರೆಯ ನೆಲಗಟ್ಟಿನೊಂದಿಗೆ ಬಹುಮಾಧ್ಯಮಗಳ ಸಾಧ್ಯತೆಗಳನ್ನು ದುಡಿಸಿಕೊಂಡು ಕಲೆಯನ್ನು ಹಲವು ಆಯಾಮಗಳಲ್ಲಿ ಯುವ ಗಾಯಕರು, ವಾದಕರು ಬೆಳೆಸುತ್ತಿದ್ದಾರೆ; ಕಾಲದ ಗತಿಯಲ್ಲಿ ದನಿಗೂಡಿಸುತ್ತಾ ನಡೆಯುತ್ತಿದ್ದಾರೆ. This entry was posted in ಶ್ರೀಮತಿ ದೇವಿ, ಸಾಹಿತ್ಯ and tagged ಶಾಸ್ತ್ರೀಯ, ಸಂಗೀತ, ಹಿಂದೂಸ್ಥಾನಿ on March 10, 2012 by admin. Post navigation ← ವಕೀಲರನ್ನು, ಪತ್ರಕರ್ತರನ್ನು ಅನುಮಾನದಿಂದ ನೋಡುವಂತೆ ಮಾಡಿದವರ್ಯಾರು? ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -11) → 2 thoughts on “ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹೊಸ ಕವಲುಗಳು” keshav kulkarni March 10, 2012 at 5:00 am Thanks a lot for updating the budding generation Hindustani singers. Staying far from Dharwad, I am missing the first hand information. I will search for these aritists and buy the CDs/ MP3. Thanks a lot for the article.
Kannada News » Sports » Cricket news » Sourav Ganguly Gave A Big Update On Jasprit Bumrahs Availability For T20 World Cup 2022 T20 World Cup 2022: ‘ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿಲ್ಲ’! ಬಿಗ್ ಅಪ್​ಡೇಟ್ ನೀಡಿದ ಗಂಗೂಲಿ T20 World Cup 2022: ಬುಮ್ರಾ ಇನ್ನೂ ಟಿ 20 ವಿಶ್ವಕಪ್‌ನಿಂದ ಹೊರಬಿದ್ದಿಲ್ಲ. ವಿಶ್ವಕಪ್ ಆರಂಭವಾಕ್ಕೆ ಇನ್ನು ಸಾಕಷ್ಟು ಸಮಯವಿದೆ. ಹೀಗಾಗಿ ನಾವು ಸ್ವಲ್ಪ ಸಮಯ ಕಾಯಬೇಕಿದೆ ಎಂದು ಗಂಗೂಲಿ ಹೇಳಿದ್ದಾರೆ. Sourav Ganguly TV9kannada Web Team | Edited By: pruthvi Shankar Sep 30, 2022 | 9:27 PM ಕಳೆದೆರಡು ದಿನಗಳಿಂದ ಟೀಂ ಇಂಡಿಯಾದ ದಿಗ್ಗಜ ವೇಗದ ಬೌಲರ್ ಬುಮ್ರಾ (Jasprit Bumrah) ಬಗ್ಗೆ ಇಡೀ ಕ್ರಿಕೆಟ್ ಜಗತ್ತೇ ಮಾತನಾಡುತ್ತಿದೆ. ಅಲ್ಲದೆ ಸಾಕಷ್ಟು ಕ್ರಿಕೆಟ್ ಪಂಡಿತರು ಟಿ20 ವಿಶ್ವಕಪ್​ನಲ್ಲಿ ಬುಮ್ರಾ ಅಲಭ್ಯತೆಯೂ ರೋಹಿತ್ ಪಡೆಗೆ ಎಷ್ಟು ನಷ್ಟವನ್ನುಂಟು ಮಾಡಲಿದೆ ಎಂದು ಉದ್ದುದ್ದ ಭಾಷಣಗಳನ್ನು ಬಿಗಿಯುತ್ತಿದ್ದಾರೆ. ಆದರೆ ಇದೆಲ್ಲವನ್ನು ಮೌನವಾಗಿ ಕೇಳಿಸಿಕೊಳ್ಳುತ್ತಿರುವ ಬಿಸಿಸಿಐ (BCCI) ಮಾತ್ರ ಇದುವರೆಗೆ ಟಿ20 ವಿಶ್ವಕಪ್​ನಲ್ಲಿ (T20 World Cup) ಬುಮ್ರಾ ಆಡುತ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಯಾವುದೇ ರೀತಿಯ ಸ್ಪಷ್ಟನೇ ಮಾತ್ರ ನೀಡಿಲ್ಲ. ಆದರೆ ಉಳಿದಂತೆ ರಾಷ್ಟ್ರೀಯ ಮಾದ್ಯಮಗಳು ಮಾತ್ರ ಯಾರ್ಕರ್ ಕಿಂಗ್ ಟಿ20 ವಿಶ್ವಕಪ್ ಆಡುವುದಿಲ್ಲ ಎಂದು ರಾಜಾರೋಷವಾಗಿ ವರದಿಯನ್ನು ಬಿತ್ತರಿಸುತ್ತಿವೆ. ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಮೊದಲ ಬಾರಿಗೆ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆನ್ನುನೋವಿನ ಸಮಸ್ಯೆಯಿಂದಾಗಿ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಶುಕ್ರವಾರ ಸೆಪ್ಟೆಂಬರ್ 30 ರಂದು ಈ ಮಾಹಿತಿಯನ್ನು ನೀಡಿತ್ತು. ಅಲ್ಲದೆ ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬುದನ್ನು ಮಂಡಳಿ ಖಚಿತ ಪಡಿಸಿತ್ತು. ಆದರೆ ಇನ್ನುಳಿದಂತೆ ಬುಮ್ರಾ ಅವರ ಇಂಜುರಿ ಮತ್ತು ಅವರ ಲಭ್ಯತೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಮಂಡಳಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಆತುರಪಡಬೇಡಿ ಸುದ್ದಿ ಸಂಸ್ಥೆ ಪಿಟಿಐ ಒಂದು ದಿನದ ಹಿಂದೆ ತನ್ನ ವರದಿಯಲ್ಲಿ ಬುಮ್ರಾ ಅವರ ಗಾಯವು ತುಂಬಾ ಗಂಭೀರವಾಗಿದ್ದು, ಅದರಿಂದ ಚೇತರಿಸಿಕೊಳ್ಳಲು ಅವರಿಗೆ 4 ರಿಂದ 6 ತಿಂಗಳುಗಳು ಬೇಕಾಗಬಹುದು ಎಂದು ತಿಳಿಸಿತ್ತು. ಆದರೆ ಬಿಸಿಸಿಐ ಈ ರೀತಿಯ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಈಗ ಮಂಡಳಿಯ ಅಧ್ಯಕ್ಷ ಗಂಗೂಲಿ ಮೊದಲ ಬಾರಿಗೆ ಈ ವಿಷಯದ ಬಗ್ಗೆ ಮೌನಮುರಿದಿದ್ದು, ವಿಶ್ವಕಪ್‌ಗೆ ಇನ್ನೂ ಸಮಯವಿದೆ, ಆದ್ದರಿಂದ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಶುಕ್ರವಾರ ಕ್ರೀಡಾ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಬಿಸಿಸಿಐ ಬಾಸ್, ಬುಮ್ರಾ ಇನ್ನೂ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿಲ್ಲ. ವಿಶ್ವಕಪ್ ಆರಂಭವಾಕ್ಕೆ ಇನ್ನು ಸಾಕಷ್ಟು ಸಮಯವಿದೆ. ಹೀಗಾಗಿ ನಾವು ಸ್ವಲ್ಪ ಸಮಯ ಕಾಯಬೇಕಿದೆ. ಅಲ್ಲದೆ ಅವಸರದಲ್ಲಿ ಮಾಧ್ಯಮಗಳು ಏನೇನೋ ಹೇಳಬೇಡಿ ಎಂದು ಹೇಳಿಕೊಂಡಿದ್ದಾರೆ. ದ್ರಾವಿಡ್ ಕೂಡ ಇದ್ದನ್ನೇ ಹೇಳಿದ್ದಾರೆ ಅಂದಹಾಗೆ, ರವೀಂದ್ರ ಜಡೇಜಾ ಅವರ ಇಂಜುರಿಯ ಸಮಯದಲ್ಲಿಯೂ ಇದೇ ರೀತಿಯ ವರದಿಗಳು ಹೊರಬಿದ್ದಿದ್ದವು. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ಸಮಯದಲ್ಲಿ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ ಅವರು ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು. ಇದಾದ ನಂತರ ಜಡೇಜಾ ವಿಶ್ವಕಪ್‌ನಲ್ಲೂ ಆಡುವುದಿಲ್ಲ ಎಂಬ ಸುದ್ದಿ ಬಂದಿತ್ತು. ಆದರೆ, ಆ ಸಮಯದಲ್ಲಿ ಕೋಚ್ ರಾಹುಲ್ ದ್ರಾವಿಡ್ ಕೂಡ ವಿಶ್ವಕಪ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿದೆ. ಹಾಗಾಗಿ ಈಗಲೇ ನಾವು ಜಡೇಜಾ ಅವರನ್ನು ತಂಡದಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಅಂತಿಮವಾಗಿ ಜಡೇಜಾ ಟೂರ್ನಿಯಿಂದ ಹೊರಬಿದ್ದರು. ಬುಮ್ರಾ ಅವರ ವಿಷಯದಲ್ಲಿ ಪರಿಸ್ಥಿತಿ ವಿಭಿನ್ನವಾಗಿದ್ದರೂ, ಅವರು ಫಿಟ್ ಆಗಿ ತಂಡಕ್ಕೆ ಮರಳುತ್ತಾರೆ ಎಂಬುದು ಭಾರತ ತಂಡ ಮತ್ತು ಅಭಿಮಾನಿಗಳ ಆಶಯವಾಗಿದೆ. ಬುಮ್ರಾ ಮತ್ತು ಜಡೇಜಾರ ವಿಷಯದಲ್ಲಿ ವ್ಯತ್ಯಾಸವೆಂದರೆ ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಬುಮ್ರಾಗೆ ವಿಶ್ರಾಂತಿಯ ಅಗತ್ಯವಿದೆ, ಆದರೆ ಜಡೇಜಾಗೆ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.
ಆತ ತಮಿಳಿನ ಸುಪ್ರಸಿದ್ದ ನಟ. ಹೆಸರು ಧನುಷ್. ಗಡ್ಡವನ್ನು ತೆಳುವಾಗಿ ಬಿಟ್ಟು, ಕಪ್ಪಗೆ ತೆಳ್ಳಗೆ ಇರುವ ಈತ ಒಮ್ಮೆಲೇ ಹೀರೋ ಮೆಟೀರಿಯಲ್ ಎಂದರೆ ಯಾರಾದರೂ ಮೇಲೆ ಕೆಳಗೆ ನೋಡಿಯಾರು. ಆಗ ಈತ ಒಬ್ಬ ಅದ್ಬುತ ನಟ, ನಿರ್ದೇಶಕ, ಹಾಡುಗಾರ ಅಲ್ಲದೆ ಒಬ್ಬ ನಿರ್ಮಾಪಕನೂ ಹೌದು ಎಂದರೆ ಒಮ್ಮೆ ಕೇಳಿದವರು ಕಕ್ಕಾಬಿಕ್ಕಿಯಾಗುವರು. ‘ತಮಾಷೆ ಮಾಡಬೇಡಿ ಸುಮ್ನಿರಿ ಸಾರ್’ ಎಂದು ನಗುತ್ತಾ ಮುಂದೆ ಸಾಗುವರು. ಅದೂ ನಿಜ. ಬಹುಪಾಲು ಪ್ರೇಕ್ಷಕರಿಗೆ ನಟ ಎಂದಾಕ್ಷಣ ಸದೃಢ ಕಾಯ, ಭಿನ್ನ ಬಗೆಯ ಉಡುಗೆ, ಕಣ್ಣಿಗೊಂದು ಗ್ಲಾಸು, ಗಡುಸಾದ ಧ್ವನಿ, ಇತ್ಯಾದಿ ಇತ್ಯಾದಿಗಳೇ ಕಲ್ಪನೆಯಲ್ಲಿ ಮೂಡುತ್ತಿದ್ದವು. ಅಂತಹದರಲ್ಲಿ ಧನುಷನ ಬಾಹ್ಯ ದೇಹಕಾಯ ಇವೆಲ್ಲ ಹೀರೊ ಫ್ಯಾಕ್ಟರ್ಗಳಿಗೆ ಪ್ರಶ್ನಾರ್ಥಕವಾಗಿದಿತ್ತು. ಹೀಗೆ ಅಸಾಧ್ಯವೆಂಬ ಸರೋವರದಲ್ಲಿ ಸಾಧ್ಯವೆಂಬ ಹಡಗನ್ನು ಹರಿಬಿಟ್ಟ ಪರಿಯನ್ನು ಕಂಡು ಕೋಟಿ ಕೋಟಿ ಜನರು ಈತನ ಅಭಿಮಾನಿಗಳಾದರು. ನಟನೆಯನ್ನೇ ಅತಿದೊಡ್ಡ ಬಂಡವಾಳವಾಗಿಸಿಕೊಂಡು ಈತ ಬೆಳೆದದ್ದು ಇಂದಿಗೆ ಇತಿಹಾಸ. ಸದ್ಯಕ್ಕೆ ಈತನ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಈತನ ಪೋಷಕರ ಕುರಿತಾಗಿ ಎಂಬುದನ್ನು ಹಲವರು ಬಲ್ಲರು. ಆತನ ವಿಕಿಪೀಡಿಯ ಪೇಜ್’ನ್ನು ಒಮ್ಮೆ ಇಣುಕಿ ನೋಡಿದಾಗ ಆತನ ಹುಟ್ಟೆಸರು ವೆಂಕಟೇಶ ಪ್ರಭುವೆಂದು, ತಂದೆ ತಮಿಳಿನ ನಿರ್ಮಾಪಕ ಕಸ್ತೂರಿ ರಾಜ ಹಾಗು ತಾಯಿ ವಿಜಯಲಕ್ಷ್ಮಿ ಎಂದು ತಿಳಿಯುತ್ತದೆ. ಆದರೆ ದಿಢೀರನೆ ಒಂದು ದಿನ ತಮಿಳುನಾಡಿನ ಯಾವುದೊ ಮೂಲೆಯಲ್ಲಿ ಜೀವನ ಸಾಗಿಸುತ್ತಿದ್ದ ಹಿರಿಯ ಜೀವಗಳೆರಡು ಧನುಷ್ ತಮ್ಮ ಮಗನೆಂದೂ, ಆತನ ಹುಟ್ಟೆಸರು ಕೇಲೈಸೆಲ್ವನ್ ಎಂದೂ ಹಾಗು ಅದಕ್ಕೆ ಪೂರಕವಾದ ಸಾಕ್ಷಿಗಳು ತಮ್ಮ ಬಳಿ ಇವೆಯೆಂದು ಹೇಳಿಕೊಂಡು ಕೋರ್ಟ ಮೆಟ್ಟಿಲನ್ನು ಏರುತ್ತವೆ. ಮಗನನ್ನು ಕಾಣದ ಅವರುಗಳು ಕೊನೆಪಕ್ಷ ಜೀವನ ನಿರ್ವಹಣೆಗಾಗಿ ಕರಾರುವಕ್ಕಾಗಿ 65 ಸಾವಿರ ರೂಗಳನ್ನು ಮಾಸಿಕವಾಗಿ ಕೊಡಬೇಕೆಂದು ಕೇಳಿಕೊಳ್ಳುತ್ತವೆ. ಕರುಳು ಚುರ್ರ್ ಎನ್ನುವ ಅವರ ಮುಗ್ದ ಮುಖಗಳು ಟಿವಿ ಪರದೆಯ ಮೇಲೆ ಮೂಡುತ್ತವೆ. ಅರೆಬೆಂದ ಸುದ್ದಿಗಳನ್ನೇ ಮೃಷ್ಟಾನ್ನ ಭೋಜನದಂತೆ ಮಾಧ್ಯಮಗಳೂ ಅವುಗಳನ್ನು ನೋಡುಗರಿಗೆ ಉಣಬಡಿಸುತ್ತವೆ. ಇನ್ನೊಂದೆಡೆ ತಮಿಳುನಾಡಿನ ಅಮ್ಮಳೆನಿಸಿಕೊಂಡ ಜಯಲಲಿತಾಳ ಸಾವಿನ ಕಣ್ಣೀರು ಆಕೆಯ ಅಭಿಮಾನಿಗಳಲ್ಲಿ ಇನ್ನೂ ಒಣಗುವುದರ ಒಳಗೆಯೇ ಇತ್ತಕಡೆ ಬಿಳಿ ಶಿರ್ಟ್ ಹಾಗು ಪಂಚೆಯನ್ನು ತೊಟ್ಟು, ಮುಖದ ಮೇಲೊಂದು ಮಂದಹಾಸದ ನಗೆಯನ್ನುಟ್ಟು ಮಾಯಾಲೋಕದಿಂದ ಇಳಿದುಬಂದ ಗಂಧರ್ವನಂತೆ ವ್ಯಕ್ತಿಯೊಬ್ಬ ಕೋರ್ಟನ ಮುಂದೆ ಹೋಗಿ ತಾನು ಜಯಲಲಿತಾ ಹಾಗು ತಮಿಳು ಚಿತ್ರರಂಗದ ಇನ್ನೊಬ್ಬ ನಟನಿಗೆ ಹುಟ್ಟಿದ ಸುಪುತ್ರನೆಂದೂ, ಅದನ್ನು ಸಾಬೀತುಪಡಿಸುವ ದಾಖಲೆಗಳು ತನ್ನ ಬಳಿ ಇವೆಯೆಂದೂ, ಆದರಿಂದ ಆಕೆಯ ಸಮಗ್ರ ಆಸ್ತಿಯೂ ತನಗೆ ಸೇರಬೇಕೆಂದು ಅನಾಥನಂತೆ ಅವಲತ್ತು ತೋಡಿಕೊಳ್ಳುತ್ತಾನೆ. ಆಡುವ ಮಕ್ಕಳ ದೂರುಗಳಂತಿರುವ ಕೇಸ್’ಗಳಿಗೆ ತೀರ್ಪುಗಾರರಬೇಕಾದ ಅನಿವಾರ್ಯತೆಯಲ್ಲಿ ಯಾವಾಗ ಈತನು ಕೋರ್ಟ್’ಗೆ ಪ್ರಸ್ತುತ ಪಡಿಸಿದ ದಾಖಲೆಗಳು ಸುಳ್ಳೆಂದು ಸಾಬೀತಾದವೋ ಕೆಂಡಾಮಂಡಲವಾದ ನ್ಯಾಯಾಧೀಶರು ಕೂಡಲೇ ಅವನನ್ನು ಜೈಲಿಗಟ್ಟುವಂತೆ ಆಗ್ರಹಿಸಿದರಂತೆ! ಆಸೆ ಮಾನವನ ಸಹಜ ಗುಣಗಳಲ್ಲೊಂದು. ಒಪ್ಪೋಣ. ಮಮತೆಯೂ ಈ ವಾದಕ್ಕೆ ಪೂರಕವಾಗಿರಬಹುದು ಎಂದುಕೊಳ್ಳೋಣ. ಆದರೆ ಹುಟ್ಟಿಸಿದ ಮಕ್ಕಳ ಮೇಲಿನ ಅಥವಾ ಹೆತ್ತ ತಾಯಿಯ ಮಡಿಲಿನ ಮಮತೆ ಎಂಬುದು ಆಸೆಯಿಂದ ಹುಟ್ಟುವ ಭಾವಗಳಂತೂ ಅಲ್ಲವೇ ಅಲ್ಲ. ಅದು ಗಾಳಿಯಲ್ಲಿರುವ ಉಸಿರಿನಷ್ಟೇ ಸಹಜ. ಅದರಲ್ಲೂ ಹಣದ ಮೇಲಿನ ಆಸೆಗೋ ಅಥವಾ ವ್ಯಾಮೋಹಕ್ಕೋ ಒಳಗಾಗಿ ಇಂದು ಸಿಕ್ಕ ಸಿಕ್ಕವರನ್ನೆಲ್ಲ ಇವ ನನ್ನ ಮಗ, ಅವಳು ನನ್ನ ತಾಯಿ ಎನ್ನುವುದು ತಮ್ಮ ಕೆನ್ನಗೆ ತಾವೇ ರಪರಪನೆ ಬಾರಿಸಿಕೊಂಡಷ್ಟು ಹೀನ. ಒಂದು ಪಕ್ಷ ಮೇಲಿನ ವಾದಗಳು ನಿಜವೆಂದೇ ಇಟ್ಟುಕೊಂಡರು ಇಷ್ಟು ವರ್ಷಗಳ ಕಾಲ ಅಡಗಿಕೊಂಡಿದ್ದ ಆ ಬಾಂಧವ್ಯ ದಿಢೀರನೆ ಜಾಗೃತಗೊಳ್ಳಲು ಕಾರಣವಾದರು ಏನು? ಅಂದು ಕೇಲೈಸೆಲ್ವನ್ ಮನೆ ಬಿಟ್ಟು ಓಡಿ ಹೋದಾಗ ಇರದ ಕೋರ್ಟು ಕಛೇರಿಗಳು ಇಂದು ಆತ ಕೋಟಿಗಳೊಡನೆ ಆಡಲು ಶುರುಮಾಡಿಕೊಂಡಾಗ ಒಮ್ಮೆಲೇ ಕಾಣಸಿಗುತ್ತವೆ ಏಕೆ ? ಈಕೆಯೇ ನನ್ನ ಅಮ್ಮ ಎಂದು ಹೇಳಿಕೊಳ್ಳಲು ಅವನಿಗೆ ಕಾಗದ ಪತ್ರಗಳ ಸಬೂತೆ ಏಕೆ ಬೇಕಾಗುತ್ತದೆ?. ಎಲ್ಲಿಯ ಪ್ರೀತಿ, ಅದೆಲ್ಲಿಯ ಮಮತೆ?. ಒಂದಂತೂ ನಿಜ. ಹಣವೆಂಬ ಆಸೆಯನ್ನು ತಾಯಿಯ ಮಮತೆಯ ಸ್ಥರಕ್ಕೆ ಏರಿಸಲಾಗದಿದ್ದರೂ ಅಂತಹ ಮಿಗಿಲಾದ ಒಂದು ಭಾವವನ್ನು ಇಂದು ಮಾನವ ನೋಟಿನ ಹಾಳೆಗಳೊಟ್ಟಿಗೆ ತುಲನೆ ಹಾಕುವ ಮಟ್ಟಿಗೆ ಕೆಳಗೆಳೆದು ತಂದು ನಿಲ್ಲಿಸಿದ್ದಾನೆ. ಈಗ ಎಲ್ಲವೂ ಹಣಮಯ. ಹುಟ್ಟಿ ಒದ್ದಾಡಿ ಕೊಸರಾಡುವ ಎಳೆಯ ಕಾಲುಗಳು ಎಂದು ಬಲಿತು ಜಗದ ಸಂತೆಯನ್ನು ಸೇರುತ್ತವೋ ಅಂದೇ ಅಸೆ ಎಂಬೊಂದು ಕವಚ ಅವುಗಳನ್ನು ಭದ್ರವಾಗಿ ಆವರಿಸಿಬಿಡುತ್ತದೆ. ಮುಂದೆ ಏನಿದ್ದರೂ ಅವುಗಳ ಓಟ ಆ ಆಸೆಯ ಗಮ್ಯದೆಡೆಗೆ. ದಾರಿಯಲ್ಲಿ ಸಿಗುವ ಬಾಂಧವ್ಯಗಳೆಲ್ಲ ಆ ಓಟಕ್ಕೆ ನಗಣ್ಯ. ಇಲ್ಲವಾದಲ್ಲಿ ಇಷ್ಟು ವರ್ಷಗಳ ನಂತರ ಸಿಕ್ಕ ಮಗನಿಂದ ಒಂದಿಷ್ಟು ಪ್ರೀತಿ ದೊರೆತರೆ ಸಾಕಪ್ಪ ಎಂಬುದ ಬಿಟ್ಟು ಬರೋಬ್ಬರಿ 65 ಸಾವಿರ ನೋಟಿನ ಹಾಳೆಗಳೇ ಬೇಕೆನ್ನುವ ಆಸೆಯನ್ನು ಮಮತೆ ಎನ್ನಲಾಗುತ್ತದೆಯೇ? ತನ್ನೆಲ್ಲವನ್ನು ಕಳೆದುಕೊಂಡು ಪರದೇಶಿಯಾದ ಜೀವವೊಂದಕ್ಕೆ ನೆನಪಾಗಾಗುವುದು ಅಮ್ಮನ ಮಡಿಲೇ ಅಂದರೆ ಆ ಜೀವ ಮರುಹುಟ್ಟಿಗೆ ಹಾತೊರೆದಂತೆ. ತನ್ನೆಲ್ಲ ಪಾಪ ನಿವಾರಣೆಯ ಕೇಂದ್ರವೇನೋ ಎಂಬಂತೆ ತಾಯಿಯ ಮಡಿಲು ಆ ಜೀವಕ್ಕೆ ಕಾಣತೊಡಗುತ್ತದೆ.ತಾನು ಅದೆಷ್ಟೇ ನೀಚ ಕಾರ್ಯವನ್ನು ಮಾಡಿದ್ದರೂ, ಜಗತ್ತಿನ ಕಣ್ಣಿನಲ್ಲಿ ಇನ್ನೆಂದೂ ಮೇಲೇಳಲಾಗದ ಮಟ್ಟಿಗೆ ಕುಸಿದರೂ ಅಮ್ಮನ ಮಡಿಲು ಮಗುವನ್ನು ಕೈ ಬೀಸಿ ಕರೆಯುತ್ತದೆ. ಬಿ. ಆರ್. ಲಕ್ಷ್ಮಣ ರಾವ್ ಅವರ ‘ಅಮ್ಮ ನಿನ್ನ ಎದೆಯಾಳದಲ್ಲಿ’ ಎಂಬ ಅದ್ಭುತ ಸಾಲುಗಳಲ್ಲಿ ಹೊರಲೋಕಕ್ಕೆ ಬರಲು ಹಾತೊರೆಯುವ ಆ ಮಗು ಹೊರಬಂದು, ಜಗವೆಲ್ಲ ಜಾಲಾಡಿ ಆಯಾಸಗೊಂಡು ಕೊನೆಗೆ ಅಮ್ಮನ ಮಮತೆಯ ಮಡಿಲಿನ ಆಸರೆಯನ್ನೇ ಆಶಿಸುತ್ತದೆ. ಭಾವಗೀತೆಯ ಆ ಸಾಲುಗಳು ಅದೆಷ್ಟೇ ಅಪ್ಪಟ ಸತ್ಯವೆನಿಸಿದರೂ ನಿಜ ಜೀವನದಲ್ಲಿ ‘ಕೊನೆಗೆ’ ಎಂಬ ಘಳಿಗೆಯಲ್ಲಿ ಅಮ್ಮನ ಮಡಿಲ ನೆನಪನ್ನು ತರಿಸಿಕೊಳ್ಳುವ ಜೀವಗಳು ವಿರಳವಾಗತೊಡಗಿವೆ. ಅಂತಹ ವಿರಳತೆಯ ಹಿಂದಿರುವ ಕರಾಳ ಕೈಗಳು ಮಾತ್ರ ಅನೇಕ. ‘ದುಡ್ಡಿಗಿಂತ ಮಗನೆ, ನಿನ್ನ ಒಂದು ಬಿಗಿದಪ್ಪುಗೆ ನಮಗೆ ಸಾಕು. ಎಂದಿಗೂ ನೀನೆ ನಮ್ಮ ಮಗ.’ ಎಂದಿದ್ದರೂ ಧನುಷನೇ ಅತ್ತು ಅವರನ್ನು ಅಪ್ಪಿಕೊಳ್ಳುತ್ತಿದ್ದನೇನೋ, ಯಾರು ಬಲ್ಲರು? ತಿಂಗಳಿಗೆ 65 ಸಾವಿರ ಕೊಡುವುದು ಕೋಟಿಗಳಲ್ಲಿ ಆಡುವ ನಟನೊಬ್ಬನಿಗೆ ದೊಡ್ಡ ವಿಷಯವೇನಲ್ಲ. ಒಂದು ಪಕ್ಷ ಆದದ್ದು ಆಗಲಿ ಇನ್ನು ಮುಂದಿನ ಇಪ್ಪತ್ತು ವರ್ಷಕ್ಕಾಗುವ ದುಡ್ಡನ್ನು ಒಮ್ಮೆಲೇ ಕೊಟ್ಟು ಕೈ ತೊಳೆದುಕೊಂಡರೂ ಸಹ ಈತ ಪರೋಕ್ಷವಾಗಿ ಆ ಹಿರಿಯ ಜೀವಗಳ ವಾದವನ್ನು ಒಪ್ಪಿಕೊಂಡಂತಾಗುತ್ತದೆ. ಮುಂದೆ ಹಣದ ಆಸೆಯಲ್ಲಿ ಹೆತ್ತ ಪೋಷಕರನ್ನೇ ವಂಚಿಸಿ ಬಾಳುವ ಈತ ಯಾವ ಸೀಮೆಯ ನಾಯಕ ಎಂದು ತಮಿಳರು ಈತನನ್ನು ತಿರಸ್ಕರಿಸಿಯಾರು. ಅಥವಾ ಆ ಹಿರಿಯ ಜೀವಗಳ ವಾದದಂತೆ ಈತ ನಿಜವಾಗಿಯೂ ಅವರ ಮಡಿಲಲ್ಲೇ ಅತ್ತು ಒದ್ದಾಡಿ ಬೆಳೆದಿರಬಹುದಾ? ಅದೂ ನಿಜವಾದರೆ ಹೆತ್ತ ತಾಯಿ ಹಾಗು ಸಾಕು ತಾಯಿಯ ಪ್ರೀತಿಯಲ್ಲಿ ಯಾವುದು ಗೆಲ್ಲಬಹುದು? ಇಂತಹ ಸಂದಿಗ್ಧ ಘಳಿಗೆಯ ಚಿತ್ರಗಳಲ್ಲಿ ನಟಿಸಬೇಕಾದ ನಟನೊಬ್ಬ ತನ್ನ ಜೀವನವನ್ನೇ ಇಂದು ಅಂತಹ ಉದಾಹರಣೆಯಾಗಿ ಸಾಬೀತುಪಡಿಸಬೇಕಿದೆ. ಇದಕ್ಕೆಲ್ಲ ಉತ್ತರ, ಕಪ್ಪು ಬಿಳುಪಿನ ತೀರ್ಪು ಕೋರ್ಟ್’ನಿಂದ ಹೊರಬಿದ್ದ ನಂತರವೇ. ಒಟ್ಟಿನಲ್ಲಿ ತಮಿಳುನಾಡಿನ ಇತ್ತೀಚಿನ ಕೆಲ ವಿದ್ಯಮಾನಗಳಲ್ಲಿ ಹೆತ್ತವರ ಹಾಗು ಮಕ್ಕಳ ನಡುವಿನ ಹಗ್ಗ ಜಗ್ಗಾಟ ತುಸು ಹೆಚ್ಚಾಗಿಯೇ ಸುದ್ದಿಯಾಗಿತ್ತು. ನೀನೆ ನಮ್ಮ ಮಗ ಎಂಬ ವಾದ ಒಂದೆಡೆಯಾದರೆ, ಅವಳೇ ನನ್ನ ಅಮ್ಮ ಎನ್ನುವನ ವಾದ ಇನ್ನೊಂದೆಡೆ. ಹುಟ್ಟಿಸಿದ ಮಕ್ಕಳನ್ನು ಮತ್ತೊಮ್ಮೆ ಹೆತ್ತವರ ತೆಕ್ಕೆಗೆ ಹಾಕುವ ಕಾರ್ಯವನ್ನು ಅಲ್ಲಿಯ ಕೋರ್ಟುಗಳು ಮಾಡಬೇಕಿವೆ. ಆದರೆ ಹುಟ್ಟು ಮತ್ತು ಸಾವುಗಳ ಪರಿಧಿಯಿಂದಾಚೆಗೆ ಅನಂತವಾಗಿ ಸಾಗುವ ಆತ್ಮವೆಂಬ ಜ್ವಾಲೆಯನ್ನು ಹಿಡಿದು ಪ್ರಶ್ನೆಯನ್ನು ಕೇಳುವ ಕ್ಷಮತೆ ಭೂ ಲೋಕದ ಯಾವ ಕೋರ್ಟುಗಳಿಗೆ ಇದೆ? ಅದು ಸಾದ್ಯವಾಗುವುದಾಗಿದ್ದಿದ್ದರೆ ಅದೆಷ್ಟು ಕಪಟ ಮುಖಗಳು ಉದುರಿ ಬೀಳುತ್ತಿದ್ದವೋ ಏನೋ! ಒಂದು ಪಕ್ಷ ಸಾದ್ಯವಾಗಬಹುದಾಗಿದ್ದರೂ ಆತ್ಮಗಳನ್ನೂ ಸುಳ್ಳುಗಾರನನ್ನಾಗಿ ಮಾಡುವ ಕಲೆ ಮಾನವನಿಗೆ ದೊಡ್ಡದೇನಲ್ಲ ಬಿಡಿ. ಒಟ್ಟಿನಲ್ಲಿ ಮದರ್ಸ್ ಡೇ ಎನ್ನುತ ಕಂಪ್ಯೂಟರ್’ನ ಕೀಲಿಗಳಿಂದ ಜಗತ್ತಿನ ಮುಂದೆ ಅಚ್ಚೊತ್ತುವ ಜನರು ತಮ್ಮಲಿರುವ ಆ ನಿಷ್ಕಲ್ಮಶ ಪ್ರೀತಿಯನ್ನು ಎಂದಿನವರೆಗೆ ಎದೆಯ ಮಡಿಲಲ್ಲಿ ಕಾಪಾಡಿಕೊಳ್ಳುತ್ತಾರೆ ಎಂಬುದರಲ್ಲೇ ಆಧುನಿಕ ಜಗತ್ತಿನ ನಿಜಬಣ್ಣ ಅಡಗಿದೆ.
ದಿನಾಂಕ 03-05-2015 ರಂದು 10-30 ಪಿ.ಎಂ ಸುಮಾರಿಗೆ 1) ರಮೇಶ ತಂದೆ ಪಕೀರಪ್ಪ, ಮಾರುತಿ ಓಮಿನಿ ಕಾರು ನಂ ಕೆಎ-36-ಎಂ-9329 ನೇದ್ದರ ಚಾಲಕ ಸಾ: ಕೋಳಬಾಳ ತಾ: ಸಿಂದನೂರು FvÀ£ÀÄ ಓಮಿನಿ ಕಾರನ್ನು ಮಸ್ಕಿ ಕಡೆಯಿಂದ ಅತೀವೇಗ ವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಬೂತಲದಿನ್ನಿ ಕ್ಯಾಂಪ್ ಬ್ರಿಡ್ಜ್ ಹತ್ತಿರ ನಿಯಂತ್ರಣ ತಪ್ಪಿ ಸದರಿ ವಾಹನವು ಬ್ರಿಡ್ಜ್ ನ ಕೆಳಗೆ ಹಳ್ಳದಲ್ಲಿ ಬಿದ್ದುದ್ದರಿಂದ ಆರೋಪಿ ರಮೆಶನಿಗೆ ಬಲಗೈ ಮೊಣಕೈ ಹತ್ತಿರ ಎಲುಬು ಮುರೆದಿದ್ದು ಕಾರಿನಲ್ಲಿ ಕುಳಿತ ಅನೀಲಕುಮಾರನ ಬಲ ಮೊಳಕೈ ಹತ್ತಿರ ಎಲುಬು ಮುರಿದು ಕಪಾಳಕ್ಕೆ ತರಚಿದ ಗಾಯಗಳಾಗಿರುತ್ತದೆ, ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt UÀÄ£Éß £ÀA: 113/2015 PÀ®A.279,337,338 L¦¹ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ದಿನಾಂಕ;-05/05/2015 ರಂದು ಸಂಜೆ 6-30ಗಂಟೆಗೆ ಸಿಂದನೂರು-ರಾಯಚೂರು ಮುಖ್ಯ ರಸ್ತೆಯ ರೋಡಿನ ಮೇಲೆ ಕೋಗಂಟಿ ಪ್ಯಾಕ್ಟರಿ ಹತ್ತಿರ ಈ ಪ್ರಕರಣದಲ್ಲಿಯ ಆರೋಪಿ ನಂ.2. 2).ಚಾಂದಪಾಷ ತಂದೆ ಬಷೀರ ಆಹ್ಮದ 31ವರ್ಷ, ಜಾ;ಮುಸ್ಲಿಂ. ಸಾ;-ಹರ್ನಳ್ಳಿ ತಾ;-ಮಾನ್ವಿ ಈತನು ತನ್ನ ಲಾರಿ ನಂಬರ್ ಎಂ.ಹೆಚ್.12-ಹೆಚ್.ಡಿ.-4306 ನೇದ್ದರಲ್ಲಿ ನೆಲ್ಲು ಮಷಿನ ಏರಿಕೊಂಡು ದೇಸಾಯಿ ಕ್ಯಾಂಪಿನಿಂದ ಹರ್ನಾಳಕ್ಕೆ ಹೋಗುತ್ತಿರುವಾಗ ಸದರಿ ಗಾಡಿಯಲ್ಲಿ ಪಟ್ಟಿಯ ಶಬ್ದ ಬರುತ್ತಿದ್ದರಿಂದ ಲಾರಿಯನ್ನು ನಿಲ್ಲಿಸಿ, ಲಾರಿಯಲ್ಲಿದ್ದ ಚಾಂದಪಾಷ,ನಾಗರಾಜ, ಮನೋಜ್ ಮೂವರು ಇಳಿದುಕೊಂಡು ರಸ್ತೆಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಮೃತ ಕುಲದೀಪಸಿಂಗ್ ಈತನು ಲಾರಿಯ ಹಿಂದೆಹೋಗಿ ವಿಕ್ಷಣೆ ಮಾಡುತ್ತಿದ್ದಾಗ ನಮೂದಿತ ಆಪಾಧಿತನು ತನ್ನ ಕಾರ್, ನಂ.ಕೆ.ಎ.36-ಎನ್-0136 ನೇದ್ದನ್ನು ಸಿಂಧನೂರು ಕಡೆಯಿಂದ ಮಾನ್ವಿ ಕಡೆಗೆ ನಡೆಸಿಕೋಂಡು ಬಂದು ಲಾರಿಯ ಹಿಂದೆ ಶಬ್ದ ಬರುತ್ತಿದ್ದನ್ನು ಕುಲದೀಪಸಿಂಗ್ ನೋಡುತ್ತ ಇರುವಾಗ ಆಪಾಧಿತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರಪಡಿಸಿದ್ದರಿಂದ ಮೃತ ಕುಲದೀಪಸಿಂಗ್ ಈತನಿಗೆ ತಲೆಗೆ, ಹಣೆಗೆ ಮತ್ತು ಇತರೇ ಕಡೆಗಳಲ್ಲಿ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಮೃತಪಟ್ಟಾಗ ಸಂಜೆ 6-30 ಗಂಟೆಯಾಗಿದ್ದು, ಕಾರ್ ಚಾಲಕ ಮತ್ತು ಅದರಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ರಕ್ತಗಾಯವಾಗಿದ್ದು, ಇವರಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಇಲಾಜು ಕುರಿತು ಇವರೆಲ್ಲರೂ 108 ವಾಹನದಲ್ಲಿ ರಾಯಚೂರು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ.ಅಪಾಧಿತ ನಂ.2.ಈತನು ತನ್ನ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸದೆ ರಸ್ತೆಯ ಮೇಲೆ ನಿಲ್ಲಿಸಿ ಹೋಗಿ ಬರುವ ವಾಹನಗಳಿಗೆ ಅಡೆತಡೆಯಾಗುವಂತೆ ನಿಲ್ಲಿಸಿದ್ದರಿಂದ ಆರೋಪಿ ನಂ.1 ಈತನು ತನ್ನ ಕಾರನ್ನು ಅತೀ ಜೋರಾಗಿಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದ್ದು ಇರುತ್ತದೆ.ಕಾರಣ ಇಬ್ಬರು ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಇದ್ದ ಪಿರ್ಯಾದಿ ಮೇಲಿಂದ ಠಾಣಾ ಅಪರಾಧ ಸಂಖ್ಯೆ 49/2015.ಕಲಂ,279,283,338,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. zÉÆA©ü ¥ÀæPÀgÀtzÀ ªÀiÁ»w:- ನಮ್ಮೂರಿನ ನಮ್ಮ ಜನಾಂಗದ ನಮ್ಮ ಮೂರನೇ ಅಣ್ಣತಮ್ಮಂದಿರರಿಗೆ ಆಸ್ತಿಯ ವಿಷಯದಲ್ಲಿ ಈಗ್ಗೆ ಸುಮಾರು ವರ್ಷಗಳಿಂದ ಸರಿ ಇರುವುದಿಲ್ಲಾ.ಹಾಗೂ ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ಹೂಡಿದ್ದು ಇರುತ್ತದೆ. ದಿನಾಂಕ;-05/05/2015 ರಂದು ಬೆಳಿಗ್ಗೆ 8-30 ಗಂಟೆಗೆ ಸುಮಾರಿಗೆ ನಮ್ಮೂರಿನ ಈರನಗೌಡರ ಮನೆಯ ಮುಂದೆ ಹೊಲದ ಬಗ್ಗೆ ವಿಚಾರ ಮಾಡಲು ಹೊಗುತ್ತಿರುವಾಗ 1).ಖಾಜಾಸಾಬ ತಂದೆ ಮೌಲಾಸಾಬ2).ನೂರಜಾಬೇಗಾಂ ಗಂಡ ಖಾಜಾಸಾಬ 3).ಹಜರತ ತಂದೆ ಖಾಜಾಸಾಬ 4).ನಬಾಬಸಾಬ ಕಲ್ಲೂರು 5).ಹುಸೇನಸಾಬ ತಂದೆ ಮುದುಕಪ್ಪ 6).ಖಾಜಾಸಾಬ ತಂದೆ ಹುಸೇನಸಾಬ 7).ಗನಿಸಾಬ ತಂದೆ ಮೌಲಾಸಾಬ ಎಲ್ಲರೂ ಜಾ;-ಮುಸ್ಲಿಂ,ಸಾ:-ಆಯನೂರು ಕೂಡಿಕೊಂಡು ಬಂದವರೇ ‘’ಲೇ ಸೂಳೆ ಮಕ್ಕಳೆ ಹೊಲ ಸರ್ವೆನಂ.3/ಬಿ ಇದು ನಮ್ಮ ಹೆಸರಲೇ ಇರುತ್ತದೆ.ನೀವು ಯಾಕೇ ನಮ್ಮ ಹೊಲದಲ್ಲಿ ಬರುತ್ತಿರಲೇ ಅಂತಾ ಅವಾಚ್ಯವಾಗಿ ಬೈದು ಅವರಲ್ಲಿ ಖಾಜಾಸಾಬ, ನೂರಜಾಬೇಗಾಂ,ನಬಾಬಸಾವ ಇವರುಗಳು ಬಂದು ನನ್ನನ್ನು ತಡೆದು ನಿಲ್ಲಿಸಿ ಕೈಗಳಿಂದ ಹೊಡೆಬಡೆ ಮಾಡಿರುತ್ತಾರೆ .ನೂರಜಾಬೇಗಾಂಳು ನನ್ನ ಕೂದಲು ಹಿಡಿದು ಎಳೆದಾಡಿದ್ದು ಆಗ ನನ್ನ ತಮ್ಮ ಹುಸೇನಸಾಬ ಈತನು ಬಿಡಿಸಲು ಬಂದಾಗ ಹಜರತ, ಖಾಜಾಸಾಬ ಇವರುಗಳು ಕೈಗಳಿಂದ ಹೊಡೆದಿದ್ದು,ನಂತರ ನಬಾಬಸಾಬನು ಗಟ್ಟಿಯಾಗಿ ಹಿಡಿದುಕೊಂಡು ಮುಂದೆ ಹೋಗದಂತೆ ತಡೆದು ನಿಲ್ಲಿಸಿ,ಕೈಗಳಿಂದ ಬೆನ್ನಿಗೆ ಗುದ್ದಿ ಕಾಲಿನಿಂದ ಒದ್ದಿದ್ದು ಆಗ ನನ್ನ ತಂಗಿಯ ಗಂಡನಾದಖಾಜಾಸಾಬ ಈತನುಬಿಡಿಸಲು ಬಂದಾಗ ಈತನಿಗೂ ಸಹ ಗನಿಸಾಬ ಈತನು ಕೈಗಳಿಂದ ಹೊಡೆಬಡೆ ಮಾಡಿರುತ್ತಾನೆ.ಆಗ ಹುಸೇನಸಾಬ ಈತನು ಈ ಸೂಳೆ ಮಕ್ಕಳುಸೊಕ್ಕು ಬಹಳಾಗಿದೆ.ನಮ್ಮ ಹೊಲಕ್ಕೆಬಂದು ನಮಗೆ ಹೊಡೆಯುತ್ತಾರೆ. ಅಂತಾ ಬೈದು ಹಜರತನುನನ್ನನ್ನು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ನಂತರ ಎಲ್ಲರೂ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 48/2015.ಕಲಂ.143,147,323,504,506,354, ಸಹಿತ 149 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:- ದಿನಾಂಕ 05-05-2015 ರಂದು ಸಾಯಂಕಾಲ 4-30 ಗಂಟೆಗೆ ತುರುವಿಹಾಳದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಹಂಪನಾಳ ಸರಕಾರಿ ಹಳ್ಳದಲ್ಲಿ ಅನಧಿಕೃತವಾಗಿ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆಂದು ಮಾಹಿತಿ ಪಡೆದು ಪಿ,ಎಸ್,ಐ ತುರುವಿಹಾಳರವರು ಸಿಬ್ಬಂ¢AiÀÄವರೊಂದಿಗೆ ಮತ್ತು ಪಂಚರೊಂದಿಗೆಸ್ಥಳಕ್ಕೆ ಹೋಗಿ 3 ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬುತ್ತಿದ್ದ ಕೆಲಸಗಾರರು ಸ್ಥಳದಿಂದ ಓಡಿ ಹೋಗಿದ್ದು ಟ್ರ್ಯಾಕ್ಟರ್ ಗಳ ಹತ್ತಿರ ಅದರ ಚಾಲಕರ ನಿಂತಿದ್ದು ಆರೋಪಿ ನಂ-1 ನೇದ್ದವನು ಸೋನಾಲಿಕಾ ಟ್ರ್ಯಾಕ್ಟರ್ ಇದ್ದು ಅದರ ನಂ ಕೆ,ಎ,36 ಟಿ,ಬಿ,9404 ಇದ್ದು ಟ್ರ್ಯಾಲಿ ನಂ ಇರುವುದಿಲ್ಲ ಆರೋಪಿ ನಂ 2 ನೇದ್ದವನದು ಮಹೇಂದ್ರ 475 D I ಟ್ರ್ಯಾಕ್ಟರ್ ಇದ್ದು ಅದರ ಇಂಜನ್ ನಂ ZJBG 00753 ಇದ್ದು ಟ್ರ್ಯಾಕ್ಟರ್ ಟ್ರ್ಯಾಲಿಯ ನಂಬರ್ ಇರುವುದಿಲ್ಲ ಆರೋಪಿ ನಂ-3 ನೇದ್ದವನದು ಸ್ವರಾಜ 843 XM ಕೆಂಪು ಬಣ್ಣದ್ದು ಟ್ರ್ಯಾಕ್ಟರ್ ಇದ್ದು ಅದರ ನೋಂದಣಿ ಸಂಖ್ಯೆ ಇರುವುದಿಲ್ಲ ಇಂಜನ್ ನಂ EJRJP14308 ಇದ್ದು ಟ್ರ್ಯಾಲಿ ನಂ ಇರುವುದಿಲ್ಲ ಸದರಿ 3 ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬಿದ್ದು ಆರೋಪಿತರು ಪರವಾನಿಗೆ ಮತ್ತು ಪರ್ಮಿಟ್ ಕುರಿತು ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲವೆಂದು ಅನಧಿಕೃತವಾಗಿ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿರವಾಗ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಫಿರ್ಯಾಧಿದಾರರ ಪಂಚನಾಮೆ,ವರದಿ3 ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಒಪ್ಪಿಸಿದ್ದರ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 51/2015 PÀ®A 379 IPC & RULE 44 OF KARANATAKA MINOR MINERAL CONCESSION RULE's ,1994, CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. ದಿನಾಂಕ: 05-05-2015 ರಂದು ಬೆಳಿಗ್ಗೆ 10-00 ಗಂಟೆಗೆ ©.J¸ï.ºÉƸÀ½î ¦J¸ïL UÀ§ÆâgÀ oÁuÉ gÀªÀgÀ ಬಾತ್ಮಿ ಪ್ರಕಾರವಾಗಿ ಗಬ್ಬೂರು ಸೀಮಾಂತರದ ಖಾನಾಪುರ ಕ್ರಾಸ್ ಹತ್ತಿರ ಹೋದಾಗ ಆರೋಪಿ ಚಾಲಕನಾದ ಹೊನಕೇರಪ್ಪ ತಂದೆ ಯಲ್ಲಪ್ಪ ವ:20 ಜಾ:ಕುರಬರು ಸಾ:ಹೇಮನಾಳ ಈತನು ತನ್ನ ಮ್ಯಾಸ್ಸಿ ಫರ್ಗುಸನ್ ಟ್ರ್ಯಾಕ್ಟರ್ ಇಂಜಿನ್ ನಂ. 26063, ಚೆಸ್ಸಿ ನಂ.370317 ಮತ್ತು ಅದಕ್ಕೆ ಜೋಡಿಸಿದ ಟ್ರ್ಯಾಲಿ ನಂ. ಕೆಎ-36/ಟಿಬಿ-6346ರಲ್ಲಿ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ, ಹಣ ಸಂದಾಯ ಮಾಡದೆ ಮಾರಾಟ ಮಾಡುವ ಉದ್ದೇಶದಿಂದ ಅಪ್ರಾಳ ಸೀಮಾಂತರದ ಕೃಷ್ಣಾ ನದಿಯಿಂದ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡು ಬಂದು ಟ್ರ್ಯಾಕ್ಟರ್ ಮತ್ತು ಚಾಲಕನನ್ನು ತಂದು ಒಪ್ಪಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಲಿಖಿತ ದೂರು ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂ. 66/2015 ಕಲಂ: 4(1ಎ) (21) ಎಂ.ಎಂ.ಡಿ.ಆರ್. ಮತ್ತು 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. C¥ÀºÀgÀt ¥ÀæPÀgÀtzÀ ªÀiÁ»w:- ¦üAiÀiÁð¢ PÉ.¨Á§ÄgÁªï vÀAzÉ ªÉAPÀlgÁªÀÄAiÀÄå PÀqÀ°, ªÀAiÀÄ:42ªÀ, eÁ:F½UÉÃgï, G:¥ÉÊ¥ï PÀA¥À¤AiÀÄ°è ¹ªÉÄAmï PÉ®¸À, ¸Á:UÀAUÁªÀw gÀ¸ÉÛ ¥ÉÊ¥ï PÀA¥À¤ ºÀwÛgÀ ¹AzsÀ£ÀÆgÀÄ FvÀ£À ªÀÄUÀ¼ÁzÀ PÉ.zÀÄUÁð¨sÀªÁ¤ 17 ªÀµÀðzÀ C¥Áæ¥ÀÛ ¨Á®QAiÀÄ£ÀÄß 1)¥ÀÈyégÁeï vÀAzÉ gÁªÀÄQæµÁÚ, 2) gÁªÀÄQæµÁÚ, 3)®Qëöäà ªÀÄƪÀgÀÄ ¸Á:qÉVÎ §¸ÀªÀtÚPÁåA¥ï, 4)¸ÀvÀågÁdÄ gÁdªÀÄAræ, 5)¥ÀÆtðZÀAzÀæ 6)¥ÀÆeÁ ¸Á:vÉVΣÀPÁåA¥ï (gÁªÀÄgÉrØ PÁåA¥ï), 7)¦.gÁeÉñï, 8) eÉÆåÃw ¸Á:zÉøÁ¬ÄPÁåA¥ï (²æÃgÁªÀÄ£ÀUÀgÀ) EªÀgÀÄUÀ¼ÀÄ ªÀÄ£ÀªÉÇ°¹, ¥ÀĸÀ¯Á¬Ä¹, vÀ¯É PÉr¹ DgÉÆæ 01 £ÉÃzÀݪÀ£ÉÆA¢UÉ ªÀÄzÀÄªÉ ªÀiÁqÀĪÀ GzÉÝñÀ¢AzÀ ¢£ÁAPÀ 12-04-2015 gÀAzÀÄ ¨É¼ÀV£À eÁªÀ 05-00 UÀAmÉ ¸ÀĪÀiÁjUÉ DgÉÆævÀgÀÄ 02 PÁgïUÀ¼À°è §AzÀÄ ¹AzsÀ£ÀÆgÀÄ £ÀUÀgÀzÀ ¥ÉÊ¥ï PÀA¥À¤ ¸À«ÄÃ¥ÀzÀ°ègÀĪÀ ¦üAiÀÄð¢AiÀÄ ªÀÄ£ÉAiÀÄ ºÀwÛgÀ¢AzÀ C¥ÀºÀj¹PÉÆAqÀÄ ºÉÆÃV DAzsÀæ¥ÀæzÉñÀzÀ F¸ïÖ UÉÆÃzÁªÀj f¯ÉèAiÀÄ CAvÀªÉÃð¢AiÀÄ°è DgÉÆæ 01 £ÉÃzÀݪÀ£ÉÆA¢UÉ ®UÀß ªÀiÁrzÀÄÝ EzÉ CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.72/2015, PÀ®A. 366(J) L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.05.2015 gÀAzÀÄ 12 ¥ÀææPÀgÀtUÀ¼À£ÀÄß ¥ÀvÉÛ ªÀiÁr 2300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ. Posted by Inspector General Of Police North Eastern Range Kalaburagi. at 6:54 PM No comments: BIDAR DISTRICT DAILY CRIME UPDATE 06-05-2015 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-05-2015 ¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 171/2015, PÀ®A 143, 147, 323, 504 eÉÆvÉ 149 L¦¹ ªÀÄvÀÄÛ 3(1)(10) J¸ï.¹/J¸ï.n PÁAiÉÄÝ 1989 :- ದಿನಾಂಕ 04-05-2015 ರಂದು ಫಿರ್ಯಾದಿ ಸುನೀತಾ ಗಂಡ ಶಿವರಾಜ ಮೊರೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಅಶೋಕ ನಗರ ಭಾಲ್ಕಿ ರವರು ಮತ್ತು ಮಗನಾದ ಸಂದೀಪ ಇಬ್ಬರು ಭಾಲ್ಕಿ ಅಶೋಕ ನಗರದ ತಮ್ಮ ಮನೆಯಲ್ಲಿದ್ದಾಗ ಕಾರ ನಂ. ಎಪಿ-9/ಎಜಿ-8199 ನೇದರಲ್ಲಿ ಆರೋಪಿತರಾದ 1) ಸರದಾರ ತಂದೆ ಛೋಟುಮಿಯ್ಯಾ, 2) ಶಾಹಜಾ ಗಂಡ ಚಾಂದ ಮತ್ತು ಇನ್ನೂ 7 ಜನರು ಎಲ್ಲರೂ ಸಾ: ಹೈದ್ರಾಬಾದ ಇವರೆಲ್ಲರೂ ಬಂದು ಫಿಯಾಱದಿ ಮತ್ತು ಫಿಯಾಱದಿಯವರ ಮಗ ಸಂದೀಪನಿಗೆ ನೀವು ಇರುವ ಮನೆ ನಮ್ಮ ಮನೆ ಇದ್ದು, ನೀವು ಏಕೆ ತಗೆದುಕೊಂಡಿದ್ದಿರಿ ಎಂದು ಹೇಳುತ್ತಾ ಅವಾಚ್ಯವಾಗಿ ಬೈದು ಸಂದೀಪ ಇತನಿಗೆ ಸರದಾರ ಇತನು ಕೈಯಿಂದ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಸರದಾರ ಇತನ ಹೆಂಡತಿ ಫಿಯಾಱದಿಗೆ ಕೈಯಿಂದ ಬೆನ್ನ ಮೇಲೆ ಹೊಡದು ಜಿಂಜಾ ಮುಷ್ಠಿ ಮಾಡಿರುತ್ತಾಳೆ, ಸಂದೀಪ ಇತನು ಅವರಿಗೆ ನಿಮ್ಮ ಕಾಕಿ ಸೈದಾಬಿ ಗಂಡ ಪಾಶಾಮಿಯಾ ಇವಳು ಮಾರಾಟ ಮಾಡಿರುತ್ತಾಳೆ, ನೀವು ಏಕೆ ಕೇಳುತ್ತಿದ್ದಿರಿ ಎಂದು ಹೇಳಿದರು ಕೂಡ ಅವರು ಹೊಡೆದಿರುತ್ತಾರೆ, ಆಗ ಗಲ್ಲಿಯ ಜನರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆ ಮತ್ತು ಅವರು ಬಂದ ಕಾರಿನಲ್ಲಿ ಮರಳಿ ವಾಪಸ ಹೋಗಿರುತ್ತಾರೆಂದು ಫಿಯಾಱದಿಯವರು ದಿನಾಂಕ 05-05-2015 ರಂದು ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄ£Àß½î ¥Éưøï oÁuÉ UÀÄ£Éß £ÀA. 56/2015, PÀ®A 279, 304(J) eÉÆvÉ 187 LJA« PÁAiÉÄÝ :- ¢£ÁAPÀ 05-05-2015 gÀAzÀÄ ¦üAiÀiÁð¢ gÀ«PÀĪÀiÁgÀ vÀAzÉ PÁ²Ã£ÁxÀ ¥ÀªÁgÀ ªÀAiÀÄ: 28 ªÀµÀð, eÁw: ®ªÀiÁtÂ, ¸Á: ¹AzÉÆ® vÁAqÁ gÀªÀgÀÄ ªÀÄÈvÀ ¤ªÀÄð¯Á ¨Á¬Ä UÀAqÀ xÁ£ÀĹAUÀ ¥ÀªÁgÀ ªÀÄvÀÄÛ ±ÁAvÁ¨Á¬Ä UÀAqÀ Q±À£À J®ègÀÄ ªÀÄ£Àß½î ªÀÄÆgÁfð ±Á¯ÉAiÀÄ PÀlÖqÀzÀ PÉ®¸À ªÀiÁr ªÀÄgÀ½ ªÀÄ£ÉUÉ vÁAqÉUÉ ºÉÆUÀĪÁUÀ ªÀÄ£Àß½î ªÀÄÆgÁfð ±Á¯ÉAiÀÄ ºÀwÛgÀ ©ÃzÀgÀ gÀ¸ÉÛAiÀÄ ªÉÄÃ¯É »A¢¤AzÀ ¯Áj £ÀA. PÉJ38/7345 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ¯ÁjAiÀÄ£ÀÄß CwêÉÃUÀ ªÀÄvÀÄÛ ¤±Á̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¤ªÀÄð¯Á gÀªÀjUÉ C¥ÀWÁvÀ ¥Àr¹ ¯Áj ¤°è¸ÀzÉà Nr ºÉÆVzÀÄÝ, ¸ÀzÀj C¥ÀWÁvÀ¢AzÀ ¤ªÀÄð¯Á¨Á¬Ä gÀªÀjUÉ vÀ¯ÉAiÀÄ°è ¨sÁj UÀÄ¥ÀÛUÁAiÀÄ, ªÀÄÄV¤AzÀ ªÀÄvÀÄÛ §® Q«¬ÄAzÀ gÀPÀÛ §A¢zÀÄÝ C®èzÉà §® ¨sÀÄdPÉÌ ¨sÁj UÀÄ¥ÀÛUÁAiÀĪÁVzÀÝjAzÀ aQvÉìUÉ DmÉÆzÀ°è ©ÃzÀgÀ ¥ÀæAiÀiÁ« D¸ÀàvÉæUÉ vÉUÉzÀÄPÉÆAqÀÄ ºÉÆÃV C°èAzÀ ºÉaÑ£À aQvÉìUÉ ºÉÊzÀæ¨ÁzÀUÉ CA§Ä¯É£ïìzÀ°è vÉUÉzÀÄPÉÆAqÀÄ ºÉÆÃUÀĪÁUÀ zÁjAiÀÄ°è ¸ÀAUÁgÉrØ ºÀwÛgÀ ¤ªÀÄð¯Á ¨Á¬Ä UÀAqÀ xÁ£ÀÄ ¹AUÀ ¥ÀªÁgÀ ªÀAiÀÄ: 32 ªÀµÀð, eÁw: ¯ÁªÀiÁtÂ, ¸Á: ¹AzÉÆ® vÁAqÁ gÀªÀgÀÄ ªÀÄÈvÀ¥ÀnÖgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 06-05-2015 gÀAzÀÄ °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವು ಸೂಚನೆಗಳನ್ನು ನೀಡಿದರೆ ಅದರಿಂದ ಆಗುವ ಶುಭ ಮತ್ತು ಅಶುಭ ವನ್ನು ನಾವು ತಿಳಿದುಕೊಳ್ಳಬಹುದಾಗಿದೆ ನಮ್ಮ ಶಾಸ್ತ್ರಗಳ ಬಗ್ಗೆ ಶಕುನಶಾಸ್ತ್ರ ಒಂದು ಇದಕ್ಕೆ ಕೆಲವರಿಗೆ ನಂಬಿಕೆ ಇದ್ದರೆ ಇನ್ನು ಕೆಲವರಿಗೆ ಮೂಢನಂಬಿಕೆ ಎಂದು ಭಾವಿಸುತ್ತಾರೆ ಮನೆಯಲ್ಲಿ ನಡೆಯುವ ಕೆಲವು ಸೂಚನೆಗಳು ಮುಂಬರುವ ಘಟನೆಗಳನ್ನು ತಿಳಿಸುತ್ತದೆ ಕೆಲವೊಂದು ಘಟನೆಗಳು ಶುಭ ಮತ್ತು ಅಶುಭ ಎಂದು ಪರಿಗಣಿಸಲಾಗುತ್ತದೆ ಇದರಿಂದ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606 ಮನೆಯಲ್ಲಿ ಹುತ್ತ ಬೆಳೆಯುವುದರಿಂದ ಮತ್ತು ಜೇನುಗೂಡು ಕಟ್ಟುವುದರಿಂದ ಆಗುವ ಫಲವೇನು ಎಂದು ಎಲ್ಲರಿಗೂ ಸಹ ಆತಂಕ ಇದ್ದೇ ಇರುತ್ತದೆ ಮನೆ ಒಳಗೆ ಮಣ್ಣಿನ ಗೋಡೆಯನ್ನು ಹೊಂದಿದ್ದರೆ ಅಂತಹ ಮನೆಗಳಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಹುತ್ತವು ಬೆಳೆಯುತ್ತಿದ್ದವು ಹುತ್ತಗಳ ಎಂದ ತಕ್ಷಣ ಹಾವು ಇದ್ದೇ ಇರುತ್ತದೆ ಎನ್ನುವ ನಂಬಿಕೆ ಹಾಗೂ ಹುತ್ತವನ್ನು ಹಾವು ಕಟ್ಟದಿದ್ದರೂ ಗೆದ್ದಲು ಕಟ್ಟಿರುವ ಹುತ್ತದ ಒಳಗೆ ಹಾವುಗಳು ಸೇರಿಕೊಂಡು ವಾಸಿಸುತ್ತದೆ ಮನೆಯೊಳಗೆ ಗೆದ್ದಲು ಕಟ್ಟಿದರೆ ಅದರ ಒಳಗೆ ಅವುಗಳು ಸೇರಿಕೊಳ್ಳುವುದು ಅಸಾಧ್ಯ ಆದರೆ ಇದು ಶುಭಾದಾಯಕಗಳು ಇದು ನಾಗದೇವರ ವಾಸಸ್ಥಾನ ಎನ್ನುವ ನಂಬಿಕೆ ಕರಾವಳಿ ಭಾಗದ ಜನರಿಗೆ ಈ ರೀತಿ ಹೆಚ್ಚಾಗಿರುತ್ತದೆ ಕರಾವಳಿ ಭಾಗದಲ್ಲಿ ಹೆಚ್ಚಾಗಿ ನಾಗರಾಧನೆ ಮಾಡುವುದರಿಂದ ಈ ನಂಬಿಕೆ ಬಂದಿರಬಹುದು ಮನೆಯ ಒಳಗೆ ಹುತ್ತ ಕಟ್ಟಿದರೆ ಆ ಮನೆಯನ್ನು ಬಿಡಬೇಕು ಎನ್ನುವ ನಂಬಿಕೆ ಹೆಚ್ಚಿದೆ ಮನೆ ಒಳಗೆ ಜೇನು ಗೂಡು ಕಟ್ಟಿದರೆ ಶುಭ ಅಶುಭ ಎಂದು ಪರಿಗಣಿಸಲಾಗುತ್ತದೆ ಜೇನುಗೂಡು ಪೂರ್ವದಿಕ್ಕಿನಲ್ಲಿ ಕಟ್ಟಿದರೆ ಉತ್ತಮ ಫಲ ಆಗ್ನೇಯ ದಿಕ್ಕಿನಲ್ಲಿ ಕಟ್ಟಿದರೆ ಆಪ್ತ ಸ್ನೇಹಿತರು ಮನೆಗೆ ಆಗಮಿಸುತ್ತಾರೆ ಅಥವಾ ಸ್ನೇಹಿತರಿಂದ ನಮ್ಮ ಜೀವನಕ್ಕೆ ಯಾವುದಾದರೂ ಒಂದು ಅನುಕೂಲ ಎಂಬ ಸೂಚನೆ ದಕ್ಷಿಣ ದಿಕ್ಕಿನಲ್ಲಿ ಜೇನುಗಳು ಕಟ್ಟಿದರೆ ಶುಭಫಲ ನೈರುತ್ಯದಲ್ಲಿ ಜೇನು ಕಟ್ಟಿದರೆ ದರಿದ್ರ ಕಷ್ಟ ಬರುತ್ತದೆ ಜೀವನದಲ್ಲಿ ಯಶಸ್ಸಿನ ಹಾದಿ ತುಂಬಾ ಕಠಿಣವಾಗಿರುತ್ತದೆ ಪಶ್ಚಿಮ ದಿಕ್ಕಿನಲ್ಲಿ ಜೇನು ಅಥವಾ ಹುತ್ತ ಕಟ್ಟಿದರೆ ಶುಭ ಅಥವಾ ಶುಭಕಾರ್ಯಗಳು ನೆರವೇರುತ್ತದೆ ಮತ್ತು ಬಂಧುಗಳಿಗೆ ಅನುಕೂಲವಾಗುತ್ತದೆ ವಾಯುವ್ಯದಲ್ಲಿ ಕಟ್ಟಿದರೆ ಅಂದುಕೊಂಡ ಕೆಲಸಗಳು ಬೇಗ ಕೈಗೊಳ್ಳುತ್ತದೆ ಉತ್ತರದಿಕ್ಕಿನಲ್ಲಿ ಜೇನು ಗೂಡು ಕಟ್ಟಿದರೆ ವಿಶೇಷವಾಗಿ ದ್ರವ್ಯ ಪ್ರಾಪ್ತಿಯಾಗುತ್ತದೆ ಈಶಾನ್ಯದಿಕ್ಕಿನಲ್ಲಿ ಶುಭ ಮನೆಯ ಮಧ್ಯಭಾಗದಲ್ಲಿ ಇದ್ದರೆ ಸ್ತ್ರೀಯರಿಂದ ಶುಭ ಮನೆಯಲ್ಲಿ ನೈರುತ್ಯ ಭಾಗ ಒಂದು ಬಿಟ್ಟು ಉಳಿದೆಲ್ಲ ಭಾಗಗಳಲ್ಲಿ ಜೇನು ಗೂಡು ಕಟ್ಟಿದರೆ ಶುಭ ಮತ್ತು ನಿಮ್ಮ ಮನೆಗೆ ಅದೃಷ್ಟ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606
ಭಾರತವನ್ನು ಸಿನಿಮಾ ಚಿತ್ರೀಕರಣ ಮತ್ತು ಚಿತ್ರೀಕರಣ ನಂತರದ ಕೆಲಸಗಳಿಗಾಗಿ ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ನಟ ಚಿರಂಜೀವಿ ಅವರಿಗೆ ನೀಡಲಾಗುವುದು ಕಲೆ ಮತ್ತು ಸಿನಿಮಾ ಜಗತ್ತಿನ ಗಡಿಗಳನ್ನು ಐ ಎಫ್‌ ಎಫ್‌ ಐ ಅಳಿಸಿಹಾಕಿದೆ: ವಾರ್ತಾ ಮತ್ತು ಪ್ರಸಾರ ಸಹಾಯಕ ಸಚಿವ ಡಾ. ಎಲ್. ಮುರುಗನ್ ಗೋವಾದಲ್ಲಿ ಶೀಘ್ರದಲ್ಲೇ ಹೊಸ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ: ಮುಖ್ಯಮಂತ್ರಿ ಪ್ರಮೋದ ಸಾವಂತ್ Posted On: 20 NOV 2022 8:08PM by PIB Bengaluru ವಿಶ್ವದ ಅತ್ಯುತ್ತಮ ಚಲನಚಿತ್ರಗಳು ಮತ್ತು ಅವುಗಳ ನಿರ್ಮಾತೃಗಳನ್ನು ಒಂದೇ ಸೂರಿನಡಿಯಲ್ಲಿ ಮತ್ತೊಮ್ಮೆ ಒಗ್ಗೂಡಿಸಿರುವ 53 ನೇ ಆವೃತ್ತಿಯ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಇಂದು ನವೆಂಬರ್ 20 ರಂದು ಗೋವಾದ ಪಣಜಿಯಲ್ಲಿರುವ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಗೋವಾದ ಎಂಟರ್‌ಟೈನ್‌ಮೆಂಟ್ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಈ ಸಿನಿಮಾ ಉತ್ಸವದಲ್ಲಿ 79 ದೇಶಗಳ 280 ಚಲನಚಿತ್ರಗಳು ಪ್ರದರ್ಶನವಾಗುತ್ತಿವೆ. 25 ಫೀಚರ್‌ ಮತ್ತು 20 ನಾನ್‌ ಫೀಚರ್‌ ಚಲನಚಿತ್ರಗಳನ್ನು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಒಂಬತ್ತು ದಿನಗಳ ಶ್ರೇಷ್ಠ ಸಿನಿಮಾ ಯಾನವನ್ನು ದೀಪವನ್ನು ಬೆಳಗಿಸಿ ಉದ್ಘಾಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತವನ್ನು ಚಲನಚಿತ್ರ ಚಿತ್ರೀಕರಣ ಮತ್ತು ಚಿತ್ರೀಕರಣ ನಂತರದ ಕೆಲಸಗಳಿಗೆ ನಮ್ಮ ಜನರ ಪ್ರತಿಭೆ ಮತ್ತು ನಮ್ಮ ಉದ್ಯಮದ ನಾಯಕರ ನಾವೀನ್ಯತೆಯ ಬೆಂಬಲದೊಂದಿಗೆ ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು. “ಐಎಫ್‌ಎಫ್‌ಐ ಗೆ ನನ್ನ ದೃಷ್ಟಿ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ, ಬದಲಿಗೆ ಭಾರತವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಅಮೃತ ಮಹೋತ್ಸವದಿಂದ ಅಮೃತಕಾಲಕ್ಕೆ ಪರಿವರ್ತನೆಯಾದಾಗ ಐಎಫ್‌ಎಫ್‌ಐ ಹೇಗಿರಬೇಕು ಎಂಬ ಬಗ್ಗೆ, ಹೆಚ್ಚು ಪ್ರಾದೇಶಿಕ ಉತ್ಸವಗಳ ಮೂಲಕ ಭಾರತವನ್ನು ಕಂಟೆಂಟ್ ರಚನೆಯ ಶಕ್ತಿ ಕೇಂದ್ರವನ್ನಾಗಿ ಮಾಡುವ ಬಗ್ಗೆ ಗುರಿಯನ್ನು ಹೊಂದಿದ್ದೇವೆ ಎಂದು ಅವರು ವಿವರಿಸಿದರು. 53ನೇ ಐಎಫ್‌ಎಫ್‌ಐ ಅಸಂಖ್ಯಾತ ರೋಮಾಂಚಕ ಸಂಸ್ಕೃತಿಗಳ ಸಮ್ಮಿಳನ ಮತ್ತು ಸಿನಿಮೀಯ ಶ್ರೇಷ್ಠತೆಯ ಕೈಗನ್ನಡಿಯಾಗಲಿದೆ ಎಂದು ಶ್ರೀ ಠಾಕೂರ್ ಹೇಳಿದರು. ಐಎಫ್‌ಎಫ್‌ಐ ಯುವ ಮತ್ತು ಸ್ಥಾಪಿತ ಚಲನಚಿತ್ರ ನಿರ್ಮಾಪಕರಿಗೆ ನೆಟ್‌ವರ್ಕ್, ಸಹಯೋಗ ಮತ್ತು ಸಿನಿಮಾ ಪ್ರಪಂಚದ ಅತ್ಯುತ್ತಮವಾದ ಅನುಭವ, ಅನನ್ಯ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಒದಗಿಸುತ್ತದೆ. ಸಿನಿಮಾ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಭರವಸೆಗಳು ಮತ್ತು ಕನಸುಗಳು, ಆಕಾಂಕ್ಷೆಗಳು, ಮಹತ್ವಾಕಾಂಕ್ಷೆಗಳು ಮತ್ತು ಮುಖ್ಯವಾಗಿ ಇತಿಹಾಸದ ಯಾವುದೇ ಸಮಯದ ಜನರ ಸಾಮೂಹಿಕ ಪ್ರಜ್ಞೆಯ ಸಂಗಮವನ್ನು ಸೆರೆಹಿಡಿಯುತ್ತದೆ ಎಂದು ಅವರು ಹೇಳಿದರು. ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರೋತ್ಸವದ ಹಾದಿಯನ್ನು ನೆನಪಿಸಿಕೊಂಡ ಅನುರಾಗ್ ಠಾಕೂರ್, ಐಎಫ್‌ಎಫ್‌ಐ ಪರಿಕಲ್ಪನೆಯು ಅದರ 'ವಸುಧೈವ ಕುಟುಂಬಕಂ' ಎಂಬ ಧ್ಯೇಯದಲ್ಲಿಯೇ ಬೇರೂರಿದೆ, ಇದು ಜಗತ್ತು ಒಂದೇ ಕುಟುಂಬವಾಗಿರುವ ಶಾಂತಿಯುತ ಸಹಬಾಳ್ವೆಯ ಸಾರವನ್ನು ಒಳಗೊಂಡಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಹೆಚ್ಚುತ್ತಿರುವ ಭಾರತದ ಜಾಗತಿಕ ಪಾತ್ರ ಮತ್ತು ಜಿ-20 ಅಧ್ಯಕ್ಷ ಸ್ಥಾನವು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯಕ್ಕೆ ಪ್ರತೀಕವಾಗಿದೆ ಎಂದು ಅವರು ಹೇಳಿದರು. ಮೊದಲ ಬಾರಿಗೆ ಭಾರತೀಯ, ಜಾಗತಿಕ ಸಿನಿಮಾ ಮತ್ತು ಒಟಿಟಿ ಪ್ರೀಮಿಯರ್‌ಗಳು ಐಎಫ್‌ಎಫ್‌ಐನಲ್ಲಿ ನಡೆಯಲಿವೆ, ಇದರಲ್ಲಿ ಜಾಗತಿಕವಾಗಿ ಮೆಚ್ಚುಗೆ ಪಡೆದ ʼಫೌಡಾʼ ಸರಣಿಯ ನಾಲ್ಕನೇ ಸೀಸನ್‌ನ ಮೊದಲ ಪ್ರದರ್ಶನವೂ ಸೇರಿದೆ, ಇದು ವಿಶ್ವದ ಕೆಲವು ದೊಡ್ಡ ಇಸ್ರೇಲಿ ತಾರೆಗಳನ್ನು ಒಳಗೊಂಡಿದೆ. ಈ ಸರಣಿಯ ಮುಂದಿನ ಸೀಸನ್ ಅನ್ನು ಐಎಫ್‌ಎಫ್‌ಐನಲ್ಲಿಯೇ ಮೊದಲು ಪ್ರದರ್ಶಿಸಲಾಗುವುದು ಎಂಬ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಸಚಿವರು ಹೇಳಿದರು. ಫ್ರಾನ್ಸ್‌ನೊಂದಿಗಿನ ನಮ್ಮ ದೃಢವಾದ ಸಂಬಂಧವನ್ನು ಗೌರವಿಸಲು “ಕಂಟ್ರಿ ಆಫ್‌ ಫೋಕಸ್ʼ ಐಎಫ್‌ಎಫ್‌ಐನಲ್ಲಿ ಕಂಟ್ರಿ ಆಫ್ ಫೋಕಸ್ ಅಧಿವೇಶನದ ಬಗ್ಗೆ ಮಾತನಾಡಿದ ಸಚಿವರು, ಈ ವರ್ಷ ಭಾರತ-ಫ್ರಾನ್ಸ್ ಬಾಂಧವ್ಯಕ್ಕೆ 75 ವರ್ಷಗಳಾಗಿದ್ದು, ಎರಡು ರಾಷ್ಟ್ರಗಳ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಡುವಿನ ಸಭೆಯಿಂದ ಗುರುತಿಸಲ್ಪಟ್ಟಿದೆ ಮತ್ತು ಈ ವರ್ಷ ಕಾನ್‌ ಚಚಲನಚಿತ್ರೋತ್ಸವದಲ್ಲಿ ಭಾರತವು ʼಕಂಟ್ರಿ ಆಫ್‌ ಆನರ್‌ʼ ಗೌರವಕ್ಕೆ ಪಾತ್ರವಾಯಿತು ಎಂದು ಹೇಳಿದರು. 75 ನೇ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತದ 'ಕಂಟ್ರಿ ಆಫ್ ಆನರ್' ನ ಉತ್ಸಾಹವನ್ನು ಮುಂದುವರೆಸುತ್ತಾ, ಐಎಫ್‌ಎಫ್‌ಐನ 53 ನೇ ಆವೃತ್ತಿಯಲ್ಲಿ 'ಕಂಟ್ರಿ ಆಫ್ ಫೋಕಸ್' ಆಗಿ ಫ್ರಾನ್ಸ್ ಅನ್ನು ಸ್ವಾಗತಿಸಲು ನಾನು ಸಂತೋಷಪಡುತ್ತೇನೆ ಎಂದು ಠಾಕೂರ್ ಹೇಳಿದರು. ‘ಭವಿಷ್ಯದ 75 ಸೃಜನಶೀಲ ಮನಸ್ಸುಗಳುʼಎರಡನೇ ಆವೃತ್ತಿ ಎರಡನೇ ಆವೃತ್ತಿಯ 'ಭವಿಷ್ಯದ 75 ಸೃಜನಶೀಲ ಮನಸ್ಸುಗಳುʼ ಕಠಿಣ ಪ್ರಕ್ರಿಯೆಯ ನಂತರ ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವರು ಹೇಳಿದರು. ಜೀವಮಾನ ಪ್ರಶಸ್ತಿ ಪುರಸ್ಕೃತರು, ಎನ್‌ಎಫ್‌ಎ, ಗ್ರ್ಯಾಮಿ ಮತ್ತು ಆಸ್ಕರ್ ವಿಜೇತರನ್ನು ಒಳಗೊಂಡ ಪ್ರಖ್ಯಾತ ತೀರ್ಪುಗಾರರ ತಂಡವು ಸುಮಾರು 1000 ಪ್ರವೇಶಗಳಿಂದ ನಿರ್ದೇಶನ, ಸಂಪಾದನೆ, ಹಿನ್ನೆಲೆ ಗಾಯನ, ಕಥೆ, ಅನಿಮೇಷನ್ ಮತ್ತು ನಟನೆ ಮುಂತಾದ 10 ವಿಭಾಗಗಳಲ್ಲಿ ಆಯ್ಕೆ ಮಾಡಿದೆ. ಇವರು 19 ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದು, ಜೈನ್ತಿಯಾ ಹಿಲ್ಸ್ (ಮೇಘಾಲಯ), ಲಖಿಂಪುರ (ಅಸ್ಸಾಂ), ಖೋರ್ದಾ (ಒಡಿಸ್ಸಾ) ದಂತಹ ಸ್ಥಳಗಳಿಂದ ಬಂದಿದ್ದಾರೆ ಮತ್ತು ಇವರ ಪೈಕಿ 18 ವರ್ಷದ ಅತ್ಯಂತ ಕಿರಿಯರು ಇದ್ದಾರೆ ಎಂದು ಸಚಿವರು ಹೇಳಿದರು. ಈ ವರ್ಷ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಗೆದ್ದಿರುವ ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವರನ್ನು ಸಚಿವರು ಅಭಿನಂದಿಸಿದರು. ದಕ್ಷಿಣ ಭಾರತದ ನಟ ಚಿರಂಜೀವಿ ಅವರಿಗೆ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಚಿವರು ಘೋಷಿಸಿದರು. ಐಎಫ್‌ಎಫ್‌ಐನ ಈ ಆವೃತ್ತಿಯು 50 ವರ್ಷಗಳ ಮಣಿಪುರಿ ಸಿನೆಮಾವನ್ನು ಸ್ಮರಿಸುತ್ತದೆ. ವಿಶೇಷವಾಗಿ ಕ್ಯುರೇಟೆಡ್ ಪ್ಯಾಕೇಜ್‌ನಲ್ಲಿ ಗಮನಾರ್ಹವಾದ ಫೀಚರ್‌ ಮತ್ತು ನಾನ್‌ ಫೀಚರ್‌ ಮಣಿಪುರಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಅವರು ಹೇಳಿದರು. ಐಎಫ್‌ಎಫ್‌ಐ ಸಂದರ್ಭದಲ್ಲಿ ಏರ್ಪಡಿಸಲಾಗುತ್ತಿರುವ ಫಿಲ್ಮ್ ಬಜಾರ್‌ನ ಪ್ರಾಮುಖ್ಯತೆಯ ಬಗ್ಗೆಯೂ ಶ್ರೀ ಅನುರಾಗ್ ಠಾಕೂರ್ ಗಮನಸೆಳೆದರು. ಮೊದಲ ಬಾರಿಗೆ, ಐಎಫ್‌ಎಫ್‌ಐ ಕಂಟ್ರಿ ಪೆವಿಲಿಯನ್‌ಗಳನ್ನು ಪರಿಚಯಿಸುವ ಮೂಲಕ ಫಿಲ್ಮ್ ಬಜಾರ್‌ನ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಫಿಲ್ಮ್ ಬಜಾರ್‌ನ 15 ನೇ ಆವೃತ್ತಿಯಲ್ಲಿ ಪ್ರದರ್ಶಿಸಲಾಗುವ 40 ಕ್ಕೂ ಹೆಚ್ಚು ಪೆವಿಲಿಯನ್‌ಗಳಿಗೆ ಭೇಟಿ ನೀಡುವಂತೆ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಸಿನಿಮಾ ಜಗತ್ತಿನ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಲು ಮೊದಲ ಬಾರಿಗೆ ಐಎಫ್‌ಎಫ್‌ಐ ತಂತ್ರಜ್ಞಾನ ಕೇಂದ್ರವನ್ನು ಹೊಂದಿದೆ ಎಂದು ಸಚಿವರು ಹೇಳಿದರು. ಸೇರ್ಪಡೆಯ ಐಎಫ್‌ಎಫ್‌ಐ ಚಲನಚಿತ್ರೋತ್ಸವವನ್ನು ಹೆಚ್ಚು ಒಳಗೊಳ್ಳುವ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ಮಾಡಲು, ದಿವ್ಯಾಂಗರಿಗೆ (ವಿಶೇಷ ಚೇತನರಿಗೆ) ವಿಶೇಷ ಅವಕಾಶಗಳನ್ನು ಮಾಡಲಾಗಿದೆ ಎಂದು ಠಾಕೂರ್ ಹೇಳಿದರು. ಅವರ ಪ್ರವೇಶಕ್ಕೆ ಬೇಕಾದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ವಿಭಾಗದಲ್ಲಿನ ಚಲನಚಿತ್ರಗಳು ಆಡಿಯೋ-ದೃಶ್ಯ-ಸಜ್ಜಿತವಾಗಿದ್ದು, ಎಂಬೆಡೆಡ್ ಆಡಿಯೋ ವಿವರಣೆಗಳು ಮತ್ತು ಉಪಶೀರ್ಷಿಕೆಗಳೊಂದಿಗೆ ಇರುತ್ತವೆ. ಭಾರತೀಯ ಸಿನಿಮಾ ಮತ್ತು ಟೆಲಿವಿಷನ್ ಸಂಸ್ಥೆ (FTII) ವಿಶೇಷ ಚೇತನರಿಗೆ ಎರಡು ವಿಶೇಷ ಕೋರ್ಸ್‌ಗಳನ್ನು ಏರ್ಪಡಿಸಿದೆ. ಆಟಿಸಂ ವ್ಯಕ್ತಿಗಳಿಗಾಗಿ 'ಸ್ಮಾರ್ಟ್‌ಫೋನ್ ಫಿಲ್ಮ್ ಮೇಕಿಂಗ್' ಮತ್ತು ಗಾಲಿಕುರ್ಚಿ ಬಳಸುವವರಿಗಾಗಿ 'ಸ್ಕ್ರೀನ್ ಆಕ್ಟಿಂಗ್' ನ ಮೂಲಭೂತ ಕೋರ್ಸ್ ಅನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಲೆ ಮತ್ತು ಸಿನಿಮಾ ಜಗತ್ತಿನ ಗಡಿಗಳನ್ನು ಅಳಿಸಿಹಾಕುವ ಐಎಫ್‌ಎಫ್‌ಐ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವ ಡಾ. ಎಲ್ ಮುರುಗನ್ ಅವರು ಮಾತನಾಡಿ, ಕೋವಿಡ್ ನಂತರ ಐಎಫ್‌ಎಫ್‌ಐನ ಈ 53 ನೇ ಆವೃತ್ತಿಯು ತನ್ನ ರೋಮಾಂಚಕ ಹಬ್ಬದ ಅವತಾರಕ್ಕೆ ಮರಳಲಿದೆ ಎಂದು ಹೇಳಿದರು. ಐಎಫ್‌ಎಫ್‌ಐ ಕಲೆ ಮತ್ತು ಸಿನಿಮಾ ಪ್ರಪಂಚದಲ್ಲಿನ ಗಡಿಗಳನ್ನು ಅಳಿಸಿಹಾಕುತ್ತಿದೆ ಮತ್ತು ವಿಭಿನ್ನ ಚಲನಚಿತ್ರ ಸಂಸ್ಕೃತಿಗಳು ಪರಸ್ಪರ ತೊಡಗಿಸಿಕೊಳ್ಳಲು ಮತ್ತು ಸಹಯೋಗದ ಸಾಧ್ಯತೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ನಮ್ಮ ಪ್ರಧಾನ ಮಂತ್ರಿಯವರು ಐಎಫ್‌ಎಫ್‌ಐ ಅನ್ನು ವಿವಿಧ ರಾಷ್ಟ್ರಗಳು ಮತ್ತು ಸಮಾಜಗಳ ಪ್ರತಿನಿಧಿಗಳ ನಡುವೆ ಸಮನ್ವಯವನ್ನು ಉತ್ತೇಜಿಸುವ ಚಲನಚಿತ್ರೋತ್ಸವ ಎಂದು ಬಣ್ಣಿಸಿದ್ದಾರೆ. ಐಎಫ್‌ಎಫ್‌ಐನ ಈ ಆವೃತ್ತಿಯು ಚಲನಚಿತ್ರ ಪ್ರೇಮಿಗಳು ಬಯಸುವ ಎಲ್ಲವನ್ನೂ ಹೊಂದಿದೆ. 75 ಕ್ರಿಯೇಟಿವ್ ಯಂಗ್ ಮೈಂಡ್ಸ್, ಮಾಸ್ಟರ್‌ಕ್ಲಾಸ್‌ಗಳು, ಬಾಕ್ಸ್ ಆಫೀಸ್ ಫ್ಲೇವರ್, ಫಿಲ್ಮ್ ಬಜಾರ್ ಮತ್ತು ಗ್ಲೋಬಲ್ ಸಿನಿಮಾ ಇದರಲ್ಲಿವೆ ಎಂದು ಅವರು ಹೇಳಿದರು. ಸಹ-ನಿರ್ಮಾಣ ಒಪ್ಪಂದಗಳಿಗೆ ಪ್ರೋತ್ಸಾಹ, ಏಕ ಗವಾಕ್ಷಿ ಅನುಕೂಲ, ಬೃಹತ್ ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್) ಸಾಮರ್ಥ್ಯ ಬಳಕೆ ಮುಂತಾದ ವಿವಿಧ ಉಪಕ್ರಮಗಳ ಮೂಲಕ ಭಾರತವನ್ನು ವಿಶ್ವದ ಕಂಟೆಂಟ್‌ ಉತ್ಪಾದನಾ ಕೇಂದ್ರವನ್ನಾಗಿ ವಾರ್ತಾ ಮತ್ತು ಪ್ರಸಾರ ಸಚಿವರು ಮುಂದಾಳತ್ವ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಮತ್ತು ಕಾಮಿಕ್) ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವ ಸ್ಪ್ಯಾನಿಷ್ ನಿರ್ದೇಶಕ ಕಾರ್ಲೋಸ್ ಸೌರಾ ಅವರನ್ನು ಸಚಿವರು ಅಭಿನಂದಿಸಿದರು. ದಿವಂಗತ ಮನೋಹರ್ ಪರಿಕ್ಕರ್ ಅವರ ನಾಯಕತ್ವದಲ್ಲಿ ಮತ್ತು ಈಗ ಮುಖಯಮಂತ್ರಿ ಪ್ರಮೋದ್‌ ಸಾವಂತ್ ಅವರ ನೇತೃತ್ವದಲ್ಲಿ ಐಎಫ್‌ಎಫ್‌ಐನ ಯಶಸ್ಸಿಗೆ ಗೋವಾ ರಾಜ್ಯ ನೀಡಿದ ಮಹತ್ತರ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು. ಗೋವಾದಲ್ಲಿ ಶೀಘ್ರದಲ್ಲೇ ಹೊಸ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಗೋವಾದಲ್ಲಿ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ ಸ್ಥಾಪನೆ ಅಂತಿಮ ಹಂತದಲ್ಲಿದೆ ಮತ್ತು 2025 ರ ವೇಳೆಗೆ ನಾವು ಹೊಸ ಸ್ಥಳದಲ್ಲಿ ಐಎಫ್‌ಎಫ್‌ಐ ಅನ್ನು ಆಚರಿಸಬಹುದು ಎಂದು ಭರವಸೆ ನೀಡಿದರು. ಚಿತ್ರೋತ್ಸವಕ್ಕೆ ಸ್ಥಳೀಯ ಸ್ವಾದವನ್ನು ಸೇರಿಸುವ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಯವರು, ಈ ವರ್ಷ ಐಎಫ್‌ಎಫ್‌ಐನಲ್ಲಿ, ರಾಜ್ಯ ಸರ್ಕಾರವು ಗೋವಾದ ಚಲನಚಿತ್ರ ಸಮುದಾಯಕ್ಕಾಗಿ ವಿಶೇಷ ಮಾಸ್ಟರ್‌ಕ್ಲಾಸ್‌ಗಳನ್ನು ನಡೆಸುವ ಉಪಕ್ರಮವನ್ನು ತೆಗೆದುಕೊಂಡಿದೆ, ಇದರಲ್ಲಿ ಹಿಂದಿ ಮತ್ತು ಮರಾಠಿ ಚಲನಚಿತ್ರಗಳ ಹೆಸರಾಂತರು ಭಾಗವಹಿಸಲಿದ್ದಾರೆ ಎಂದರು. ಗೋವಾದ ವಿಭಾಗವನ್ನು ಈ ವರ್ಷ ವಿಶೇಷವಾಗಿ ಆಯೋಜಿಸಲಾಗಿದೆ. ಭಾರತೀಯ ಪನೋರಮಾದಿಂದ ಮೂವರು ತೀರ್ಪುಗಾರರನ್ನು ಒಳಗೊಂಡ ವಿಶೇಷ ತಂಡವು ಆರು ಕಿರುಚಿತ್ರಗಳು ಮತ್ತು ಒಂದು ಸಾಕ್ಷ್ಯಚಿತ್ರವನ್ನು ಆಯ್ಕೆ ಮಾಡಿದ್ದಾರೆ. ಫೆಸ್ಟಿವಲ್ ಮೈಲ್, ಮನರಂಜನಾ ವಲಯ ಮತ್ತು ಪಾರಂಪರಿಕ ಮೆರವಣಿಗೆಯಂತಹ ವಿವಿಧ ಬಾಹ್ಯ ಚಟುವಟಿಕೆಗಳ ಮೂಲಕ ಪ್ರವಾಸಿಗರು ಮತ್ತು ಗೋವಾದ ಸಾರ್ವಜನಿಕರ ಗಮನ ಸೆಳೆಯಲು ನಮಗೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಗೋವಾದಾದ್ಯಂತ ಕಾರವಾನ್‌ಗಳನ್ನು ನಿಯೋಜಿಸಲಾಗುವುದು ಮತ್ತು ಸಾರ್ವಜನಿಕರಿಗೆ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಇನ್ನಷ್ಟು ಒಳಗೊಳ್ಳುವ ಉದ್ದೇಶದಿಂದ ದಿವ್ಯಾಂಗರಿಗಾಗಿ ವಿಶೇಷ ಚಲನಚಿತ್ರ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪ್ರಯತ್ನಗಳು ಗೋವಾವನ್ನು ಐಎಫ್‌ಎಫ್‌ಐಗೆ ಶಾಶ್ವತ ಸ್ಥಳವನ್ನಾಗಿ ಮಾಡಿದವು ಎಂದು ಶ್ರೀ ಪ್ರಮೋದ್ ಸಾವಂತ್ ನೆನಪಿಸಿಕೊಂಡರು. ಅತಿಥಿಗಳನ್ನು ಸ್ವಾಗತಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು, ಐಎಫ್‌ಎಫ್‌ಐ ಭಾರತೀಯ ಚಲನಚಿತ್ರೋದ್ಯಮವು ಪ್ರಪಂಚದ ಮುಂದೆ ತನ್ನ ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶಿಸಲು ಮತ್ತು ವಿಶ್ವದ ಇತರ ಭಾಗಗಳ ಸಿನಿಮಾದಲ್ಲಿನ ಉತ್ತಮ ಅಭ್ಯಾಸಗಳನ್ನು ಬರಮಾಡಿಕೊಳ್ಳಲು ಒಂದು ವೇದಿಕೆಯಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಶೇಷ ಸಂದೇಶವನ್ನೂ ಕಾರ್ಯದರ್ಶಿಯವರು ಓದಿದರು. “ಭಾರತದ ಅತಿದೊಡ್ಡ ಚಲನಚಿತ್ರೋತ್ಸವವಾಗಿ, ಸಿನಿಮಾದಿಂದ ಒಂದಾಗಿರುವ ವಿವಿಧ ರಾಷ್ಟ್ರಗಳು ಮತ್ತು ಸಮಾಜಗಳ ಪ್ರತಿನಿಧಿಗಳ ನಡುವೆ ಐಎಫ್‌ಎಫ್‌ಐ ಒಂದು ಪ್ರೋತ್ಸಾಹದಾಯಕ ಸಮನ್ವಯವನ್ನು ಉತ್ತೇಜಿಸುತ್ತದೆ " ಎಂದು ಪ್ರಧಾನಿಯವರು ಸಂದೇಶ ನೀಡಿದ್ದಾರೆ. ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವೀಂದರ್ ಭಾಕರ್ ಮತ್ತು ಇತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಮೃಣಾಲ್ ಠಾಕೂರ್, ವರುಣ್ ಧವನ್, ಕ್ಯಾಥರೀನ್ ತೆರೇಸಾ, ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್ ಮತ್ತು ಅಮೃತಾ‌ ಖಾನ್ವಿಲ್ಕರ್ ಮುಂತಾದ ಸಿನಿ ತಾರೆಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ***** (Release ID: 1877601) Visitor Counter : 33 Read this release in: Marathi , English , Hindi , Tamil , Manipuri , Urdu , Malayalam ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಅದ್ದೂರಿ ಚಾಲನೆ ಭಾರತವನ್ನು ಸಿನಿಮಾ ಚಿತ್ರೀಕರಣ ಮತ್ತು ಚಿತ್ರೀಕರಣ ನಂತರದ ಕೆಲಸಗಳಿಗಾಗಿ ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ನಟ ಚಿರಂಜೀವಿ ಅವರಿಗೆ ನೀಡಲಾಗುವುದು ಕಲೆ ಮತ್ತು ಸಿನಿಮಾ ಜಗತ್ತಿನ ಗಡಿಗಳನ್ನು ಐ ಎಫ್‌ ಎಫ್‌ ಐ ಅಳಿಸಿಹಾಕಿದೆ: ವಾರ್ತಾ ಮತ್ತು ಪ್ರಸಾರ ಸಹಾಯಕ ಸಚಿವ ಡಾ. ಎಲ್. ಮುರುಗನ್ ಗೋವಾದಲ್ಲಿ ಶೀಘ್ರದಲ್ಲೇ ಹೊಸ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ: ಮುಖ್ಯಮಂತ್ರಿ ಪ್ರಮೋದ ಸಾವಂತ್ Posted On: 20 NOV 2022 8:08PM by PIB Bengaluru ವಿಶ್ವದ ಅತ್ಯುತ್ತಮ ಚಲನಚಿತ್ರಗಳು ಮತ್ತು ಅವುಗಳ ನಿರ್ಮಾತೃಗಳನ್ನು ಒಂದೇ ಸೂರಿನಡಿಯಲ್ಲಿ ಮತ್ತೊಮ್ಮೆ ಒಗ್ಗೂಡಿಸಿರುವ 53 ನೇ ಆವೃತ್ತಿಯ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಇಂದು ನವೆಂಬರ್ 20 ರಂದು ಗೋವಾದ ಪಣಜಿಯಲ್ಲಿರುವ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಗೋವಾದ ಎಂಟರ್‌ಟೈನ್‌ಮೆಂಟ್ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಈ ಸಿನಿಮಾ ಉತ್ಸವದಲ್ಲಿ 79 ದೇಶಗಳ 280 ಚಲನಚಿತ್ರಗಳು ಪ್ರದರ್ಶನವಾಗುತ್ತಿವೆ. 25 ಫೀಚರ್‌ ಮತ್ತು 20 ನಾನ್‌ ಫೀಚರ್‌ ಚಲನಚಿತ್ರಗಳನ್ನು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಒಂಬತ್ತು ದಿನಗಳ ಶ್ರೇಷ್ಠ ಸಿನಿಮಾ ಯಾನವನ್ನು ದೀಪವನ್ನು ಬೆಳಗಿಸಿ ಉದ್ಘಾಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತವನ್ನು ಚಲನಚಿತ್ರ ಚಿತ್ರೀಕರಣ ಮತ್ತು ಚಿತ್ರೀಕರಣ ನಂತರದ ಕೆಲಸಗಳಿಗೆ ನಮ್ಮ ಜನರ ಪ್ರತಿಭೆ ಮತ್ತು ನಮ್ಮ ಉದ್ಯಮದ ನಾಯಕರ ನಾವೀನ್ಯತೆಯ ಬೆಂಬಲದೊಂದಿಗೆ ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು. “ಐಎಫ್‌ಎಫ್‌ಐ ಗೆ ನನ್ನ ದೃಷ್ಟಿ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ, ಬದಲಿಗೆ ಭಾರತವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಅಮೃತ ಮಹೋತ್ಸವದಿಂದ ಅಮೃತಕಾಲಕ್ಕೆ ಪರಿವರ್ತನೆಯಾದಾಗ ಐಎಫ್‌ಎಫ್‌ಐ ಹೇಗಿರಬೇಕು ಎಂಬ ಬಗ್ಗೆ, ಹೆಚ್ಚು ಪ್ರಾದೇಶಿಕ ಉತ್ಸವಗಳ ಮೂಲಕ ಭಾರತವನ್ನು ಕಂಟೆಂಟ್ ರಚನೆಯ ಶಕ್ತಿ ಕೇಂದ್ರವನ್ನಾಗಿ ಮಾಡುವ ಬಗ್ಗೆ ಗುರಿಯನ್ನು ಹೊಂದಿದ್ದೇವೆ ಎಂದು ಅವರು ವಿವರಿಸಿದರು. 53ನೇ ಐಎಫ್‌ಎಫ್‌ಐ ಅಸಂಖ್ಯಾತ ರೋಮಾಂಚಕ ಸಂಸ್ಕೃತಿಗಳ ಸಮ್ಮಿಳನ ಮತ್ತು ಸಿನಿಮೀಯ ಶ್ರೇಷ್ಠತೆಯ ಕೈಗನ್ನಡಿಯಾಗಲಿದೆ ಎಂದು ಶ್ರೀ ಠಾಕೂರ್ ಹೇಳಿದರು. ಐಎಫ್‌ಎಫ್‌ಐ ಯುವ ಮತ್ತು ಸ್ಥಾಪಿತ ಚಲನಚಿತ್ರ ನಿರ್ಮಾಪಕರಿಗೆ ನೆಟ್‌ವರ್ಕ್, ಸಹಯೋಗ ಮತ್ತು ಸಿನಿಮಾ ಪ್ರಪಂಚದ ಅತ್ಯುತ್ತಮವಾದ ಅನುಭವ, ಅನನ್ಯ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಒದಗಿಸುತ್ತದೆ. ಸಿನಿಮಾ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಭರವಸೆಗಳು ಮತ್ತು ಕನಸುಗಳು, ಆಕಾಂಕ್ಷೆಗಳು, ಮಹತ್ವಾಕಾಂಕ್ಷೆಗಳು ಮತ್ತು ಮುಖ್ಯವಾಗಿ ಇತಿಹಾಸದ ಯಾವುದೇ ಸಮಯದ ಜನರ ಸಾಮೂಹಿಕ ಪ್ರಜ್ಞೆಯ ಸಂಗಮವನ್ನು ಸೆರೆಹಿಡಿಯುತ್ತದೆ ಎಂದು ಅವರು ಹೇಳಿದರು. ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರೋತ್ಸವದ ಹಾದಿಯನ್ನು ನೆನಪಿಸಿಕೊಂಡ ಅನುರಾಗ್ ಠಾಕೂರ್, ಐಎಫ್‌ಎಫ್‌ಐ ಪರಿಕಲ್ಪನೆಯು ಅದರ 'ವಸುಧೈವ ಕುಟುಂಬಕಂ' ಎಂಬ ಧ್ಯೇಯದಲ್ಲಿಯೇ ಬೇರೂರಿದೆ, ಇದು ಜಗತ್ತು ಒಂದೇ ಕುಟುಂಬವಾಗಿರುವ ಶಾಂತಿಯುತ ಸಹಬಾಳ್ವೆಯ ಸಾರವನ್ನು ಒಳಗೊಂಡಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಹೆಚ್ಚುತ್ತಿರುವ ಭಾರತದ ಜಾಗತಿಕ ಪಾತ್ರ ಮತ್ತು ಜಿ-20 ಅಧ್ಯಕ್ಷ ಸ್ಥಾನವು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯಕ್ಕೆ ಪ್ರತೀಕವಾಗಿದೆ ಎಂದು ಅವರು ಹೇಳಿದರು. ಮೊದಲ ಬಾರಿಗೆ ಭಾರತೀಯ, ಜಾಗತಿಕ ಸಿನಿಮಾ ಮತ್ತು ಒಟಿಟಿ ಪ್ರೀಮಿಯರ್‌ಗಳು ಐಎಫ್‌ಎಫ್‌ಐನಲ್ಲಿ ನಡೆಯಲಿವೆ, ಇದರಲ್ಲಿ ಜಾಗತಿಕವಾಗಿ ಮೆಚ್ಚುಗೆ ಪಡೆದ ʼಫೌಡಾʼ ಸರಣಿಯ ನಾಲ್ಕನೇ ಸೀಸನ್‌ನ ಮೊದಲ ಪ್ರದರ್ಶನವೂ ಸೇರಿದೆ, ಇದು ವಿಶ್ವದ ಕೆಲವು ದೊಡ್ಡ ಇಸ್ರೇಲಿ ತಾರೆಗಳನ್ನು ಒಳಗೊಂಡಿದೆ. ಈ ಸರಣಿಯ ಮುಂದಿನ ಸೀಸನ್ ಅನ್ನು ಐಎಫ್‌ಎಫ್‌ಐನಲ್ಲಿಯೇ ಮೊದಲು ಪ್ರದರ್ಶಿಸಲಾಗುವುದು ಎಂಬ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಸಚಿವರು ಹೇಳಿದರು. ಫ್ರಾನ್ಸ್‌ನೊಂದಿಗಿನ ನಮ್ಮ ದೃಢವಾದ ಸಂಬಂಧವನ್ನು ಗೌರವಿಸಲು “ಕಂಟ್ರಿ ಆಫ್‌ ಫೋಕಸ್ʼ ಐಎಫ್‌ಎಫ್‌ಐನಲ್ಲಿ ಕಂಟ್ರಿ ಆಫ್ ಫೋಕಸ್ ಅಧಿವೇಶನದ ಬಗ್ಗೆ ಮಾತನಾಡಿದ ಸಚಿವರು, ಈ ವರ್ಷ ಭಾರತ-ಫ್ರಾನ್ಸ್ ಬಾಂಧವ್ಯಕ್ಕೆ 75 ವರ್ಷಗಳಾಗಿದ್ದು, ಎರಡು ರಾಷ್ಟ್ರಗಳ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಡುವಿನ ಸಭೆಯಿಂದ ಗುರುತಿಸಲ್ಪಟ್ಟಿದೆ ಮತ್ತು ಈ ವರ್ಷ ಕಾನ್‌ ಚಚಲನಚಿತ್ರೋತ್ಸವದಲ್ಲಿ ಭಾರತವು ʼಕಂಟ್ರಿ ಆಫ್‌ ಆನರ್‌ʼ ಗೌರವಕ್ಕೆ ಪಾತ್ರವಾಯಿತು ಎಂದು ಹೇಳಿದರು. 75 ನೇ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತದ 'ಕಂಟ್ರಿ ಆಫ್ ಆನರ್' ನ ಉತ್ಸಾಹವನ್ನು ಮುಂದುವರೆಸುತ್ತಾ, ಐಎಫ್‌ಎಫ್‌ಐನ 53 ನೇ ಆವೃತ್ತಿಯಲ್ಲಿ 'ಕಂಟ್ರಿ ಆಫ್ ಫೋಕಸ್' ಆಗಿ ಫ್ರಾನ್ಸ್ ಅನ್ನು ಸ್ವಾಗತಿಸಲು ನಾನು ಸಂತೋಷಪಡುತ್ತೇನೆ ಎಂದು ಠಾಕೂರ್ ಹೇಳಿದರು. ‘ಭವಿಷ್ಯದ 75 ಸೃಜನಶೀಲ ಮನಸ್ಸುಗಳುʼಎರಡನೇ ಆವೃತ್ತಿ ಎರಡನೇ ಆವೃತ್ತಿಯ 'ಭವಿಷ್ಯದ 75 ಸೃಜನಶೀಲ ಮನಸ್ಸುಗಳುʼ ಕಠಿಣ ಪ್ರಕ್ರಿಯೆಯ ನಂತರ ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವರು ಹೇಳಿದರು. ಜೀವಮಾನ ಪ್ರಶಸ್ತಿ ಪುರಸ್ಕೃತರು, ಎನ್‌ಎಫ್‌ಎ, ಗ್ರ್ಯಾಮಿ ಮತ್ತು ಆಸ್ಕರ್ ವಿಜೇತರನ್ನು ಒಳಗೊಂಡ ಪ್ರಖ್ಯಾತ ತೀರ್ಪುಗಾರರ ತಂಡವು ಸುಮಾರು 1000 ಪ್ರವೇಶಗಳಿಂದ ನಿರ್ದೇಶನ, ಸಂಪಾದನೆ, ಹಿನ್ನೆಲೆ ಗಾಯನ, ಕಥೆ, ಅನಿಮೇಷನ್ ಮತ್ತು ನಟನೆ ಮುಂತಾದ 10 ವಿಭಾಗಗಳಲ್ಲಿ ಆಯ್ಕೆ ಮಾಡಿದೆ. ಇವರು 19 ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದು, ಜೈನ್ತಿಯಾ ಹಿಲ್ಸ್ (ಮೇಘಾಲಯ), ಲಖಿಂಪುರ (ಅಸ್ಸಾಂ), ಖೋರ್ದಾ (ಒಡಿಸ್ಸಾ) ದಂತಹ ಸ್ಥಳಗಳಿಂದ ಬಂದಿದ್ದಾರೆ ಮತ್ತು ಇವರ ಪೈಕಿ 18 ವರ್ಷದ ಅತ್ಯಂತ ಕಿರಿಯರು ಇದ್ದಾರೆ ಎಂದು ಸಚಿವರು ಹೇಳಿದರು. ಈ ವರ್ಷ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಗೆದ್ದಿರುವ ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವರನ್ನು ಸಚಿವರು ಅಭಿನಂದಿಸಿದರು. ದಕ್ಷಿಣ ಭಾರತದ ನಟ ಚಿರಂಜೀವಿ ಅವರಿಗೆ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಚಿವರು ಘೋಷಿಸಿದರು. ಐಎಫ್‌ಎಫ್‌ಐನ ಈ ಆವೃತ್ತಿಯು 50 ವರ್ಷಗಳ ಮಣಿಪುರಿ ಸಿನೆಮಾವನ್ನು ಸ್ಮರಿಸುತ್ತದೆ. ವಿಶೇಷವಾಗಿ ಕ್ಯುರೇಟೆಡ್ ಪ್ಯಾಕೇಜ್‌ನಲ್ಲಿ ಗಮನಾರ್ಹವಾದ ಫೀಚರ್‌ ಮತ್ತು ನಾನ್‌ ಫೀಚರ್‌ ಮಣಿಪುರಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಅವರು ಹೇಳಿದರು. ಐಎಫ್‌ಎಫ್‌ಐ ಸಂದರ್ಭದಲ್ಲಿ ಏರ್ಪಡಿಸಲಾಗುತ್ತಿರುವ ಫಿಲ್ಮ್ ಬಜಾರ್‌ನ ಪ್ರಾಮುಖ್ಯತೆಯ ಬಗ್ಗೆಯೂ ಶ್ರೀ ಅನುರಾಗ್ ಠಾಕೂರ್ ಗಮನಸೆಳೆದರು. ಮೊದಲ ಬಾರಿಗೆ, ಐಎಫ್‌ಎಫ್‌ಐ ಕಂಟ್ರಿ ಪೆವಿಲಿಯನ್‌ಗಳನ್ನು ಪರಿಚಯಿಸುವ ಮೂಲಕ ಫಿಲ್ಮ್ ಬಜಾರ್‌ನ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಫಿಲ್ಮ್ ಬಜಾರ್‌ನ 15 ನೇ ಆವೃತ್ತಿಯಲ್ಲಿ ಪ್ರದರ್ಶಿಸಲಾಗುವ 40 ಕ್ಕೂ ಹೆಚ್ಚು ಪೆವಿಲಿಯನ್‌ಗಳಿಗೆ ಭೇಟಿ ನೀಡುವಂತೆ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಸಿನಿಮಾ ಜಗತ್ತಿನ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಲು ಮೊದಲ ಬಾರಿಗೆ ಐಎಫ್‌ಎಫ್‌ಐ ತಂತ್ರಜ್ಞಾನ ಕೇಂದ್ರವನ್ನು ಹೊಂದಿದೆ ಎಂದು ಸಚಿವರು ಹೇಳಿದರು. ಸೇರ್ಪಡೆಯ ಐಎಫ್‌ಎಫ್‌ಐ ಚಲನಚಿತ್ರೋತ್ಸವವನ್ನು ಹೆಚ್ಚು ಒಳಗೊಳ್ಳುವ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ಮಾಡಲು, ದಿವ್ಯಾಂಗರಿಗೆ (ವಿಶೇಷ ಚೇತನರಿಗೆ) ವಿಶೇಷ ಅವಕಾಶಗಳನ್ನು ಮಾಡಲಾಗಿದೆ ಎಂದು ಠಾಕೂರ್ ಹೇಳಿದರು. ಅವರ ಪ್ರವೇಶಕ್ಕೆ ಬೇಕಾದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ವಿಭಾಗದಲ್ಲಿನ ಚಲನಚಿತ್ರಗಳು ಆಡಿಯೋ-ದೃಶ್ಯ-ಸಜ್ಜಿತವಾಗಿದ್ದು, ಎಂಬೆಡೆಡ್ ಆಡಿಯೋ ವಿವರಣೆಗಳು ಮತ್ತು ಉಪಶೀರ್ಷಿಕೆಗಳೊಂದಿಗೆ ಇರುತ್ತವೆ. ಭಾರತೀಯ ಸಿನಿಮಾ ಮತ್ತು ಟೆಲಿವಿಷನ್ ಸಂಸ್ಥೆ (FTII) ವಿಶೇಷ ಚೇತನರಿಗೆ ಎರಡು ವಿಶೇಷ ಕೋರ್ಸ್‌ಗಳನ್ನು ಏರ್ಪಡಿಸಿದೆ. ಆಟಿಸಂ ವ್ಯಕ್ತಿಗಳಿಗಾಗಿ 'ಸ್ಮಾರ್ಟ್‌ಫೋನ್ ಫಿಲ್ಮ್ ಮೇಕಿಂಗ್' ಮತ್ತು ಗಾಲಿಕುರ್ಚಿ ಬಳಸುವವರಿಗಾಗಿ 'ಸ್ಕ್ರೀನ್ ಆಕ್ಟಿಂಗ್' ನ ಮೂಲಭೂತ ಕೋರ್ಸ್ ಅನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಲೆ ಮತ್ತು ಸಿನಿಮಾ ಜಗತ್ತಿನ ಗಡಿಗಳನ್ನು ಅಳಿಸಿಹಾಕುವ ಐಎಫ್‌ಎಫ್‌ಐ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವ ಡಾ. ಎಲ್ ಮುರುಗನ್ ಅವರು ಮಾತನಾಡಿ, ಕೋವಿಡ್ ನಂತರ ಐಎಫ್‌ಎಫ್‌ಐನ ಈ 53 ನೇ ಆವೃತ್ತಿಯು ತನ್ನ ರೋಮಾಂಚಕ ಹಬ್ಬದ ಅವತಾರಕ್ಕೆ ಮರಳಲಿದೆ ಎಂದು ಹೇಳಿದರು. ಐಎಫ್‌ಎಫ್‌ಐ ಕಲೆ ಮತ್ತು ಸಿನಿಮಾ ಪ್ರಪಂಚದಲ್ಲಿನ ಗಡಿಗಳನ್ನು ಅಳಿಸಿಹಾಕುತ್ತಿದೆ ಮತ್ತು ವಿಭಿನ್ನ ಚಲನಚಿತ್ರ ಸಂಸ್ಕೃತಿಗಳು ಪರಸ್ಪರ ತೊಡಗಿಸಿಕೊಳ್ಳಲು ಮತ್ತು ಸಹಯೋಗದ ಸಾಧ್ಯತೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ನಮ್ಮ ಪ್ರಧಾನ ಮಂತ್ರಿಯವರು ಐಎಫ್‌ಎಫ್‌ಐ ಅನ್ನು ವಿವಿಧ ರಾಷ್ಟ್ರಗಳು ಮತ್ತು ಸಮಾಜಗಳ ಪ್ರತಿನಿಧಿಗಳ ನಡುವೆ ಸಮನ್ವಯವನ್ನು ಉತ್ತೇಜಿಸುವ ಚಲನಚಿತ್ರೋತ್ಸವ ಎಂದು ಬಣ್ಣಿಸಿದ್ದಾರೆ. ಐಎಫ್‌ಎಫ್‌ಐನ ಈ ಆವೃತ್ತಿಯು ಚಲನಚಿತ್ರ ಪ್ರೇಮಿಗಳು ಬಯಸುವ ಎಲ್ಲವನ್ನೂ ಹೊಂದಿದೆ. 75 ಕ್ರಿಯೇಟಿವ್ ಯಂಗ್ ಮೈಂಡ್ಸ್, ಮಾಸ್ಟರ್‌ಕ್ಲಾಸ್‌ಗಳು, ಬಾಕ್ಸ್ ಆಫೀಸ್ ಫ್ಲೇವರ್, ಫಿಲ್ಮ್ ಬಜಾರ್ ಮತ್ತು ಗ್ಲೋಬಲ್ ಸಿನಿಮಾ ಇದರಲ್ಲಿವೆ ಎಂದು ಅವರು ಹೇಳಿದರು. ಸಹ-ನಿರ್ಮಾಣ ಒಪ್ಪಂದಗಳಿಗೆ ಪ್ರೋತ್ಸಾಹ, ಏಕ ಗವಾಕ್ಷಿ ಅನುಕೂಲ, ಬೃಹತ್ ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್) ಸಾಮರ್ಥ್ಯ ಬಳಕೆ ಮುಂತಾದ ವಿವಿಧ ಉಪಕ್ರಮಗಳ ಮೂಲಕ ಭಾರತವನ್ನು ವಿಶ್ವದ ಕಂಟೆಂಟ್‌ ಉತ್ಪಾದನಾ ಕೇಂದ್ರವನ್ನಾಗಿ ವಾರ್ತಾ ಮತ್ತು ಪ್ರಸಾರ ಸಚಿವರು ಮುಂದಾಳತ್ವ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಮತ್ತು ಕಾಮಿಕ್) ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವ ಸ್ಪ್ಯಾನಿಷ್ ನಿರ್ದೇಶಕ ಕಾರ್ಲೋಸ್ ಸೌರಾ ಅವರನ್ನು ಸಚಿವರು ಅಭಿನಂದಿಸಿದರು. ದಿವಂಗತ ಮನೋಹರ್ ಪರಿಕ್ಕರ್ ಅವರ ನಾಯಕತ್ವದಲ್ಲಿ ಮತ್ತು ಈಗ ಮುಖಯಮಂತ್ರಿ ಪ್ರಮೋದ್‌ ಸಾವಂತ್ ಅವರ ನೇತೃತ್ವದಲ್ಲಿ ಐಎಫ್‌ಎಫ್‌ಐನ ಯಶಸ್ಸಿಗೆ ಗೋವಾ ರಾಜ್ಯ ನೀಡಿದ ಮಹತ್ತರ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು. ಗೋವಾದಲ್ಲಿ ಶೀಘ್ರದಲ್ಲೇ ಹೊಸ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಗೋವಾದಲ್ಲಿ ವಿಶ್ವ ದರ್ಜೆಯ ಮಲ್ಟಿಪ್ಲೆಕ್ಸ್ ಮತ್ತು ಸಮಾವೇಶ ಕೇಂದ್ರ ಸ್ಥಾಪನೆ ಅಂತಿಮ ಹಂತದಲ್ಲಿದೆ ಮತ್ತು 2025 ರ ವೇಳೆಗೆ ನಾವು ಹೊಸ ಸ್ಥಳದಲ್ಲಿ ಐಎಫ್‌ಎಫ್‌ಐ ಅನ್ನು ಆಚರಿಸಬಹುದು ಎಂದು ಭರವಸೆ ನೀಡಿದರು. ಚಿತ್ರೋತ್ಸವಕ್ಕೆ ಸ್ಥಳೀಯ ಸ್ವಾದವನ್ನು ಸೇರಿಸುವ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಯವರು, ಈ ವರ್ಷ ಐಎಫ್‌ಎಫ್‌ಐನಲ್ಲಿ, ರಾಜ್ಯ ಸರ್ಕಾರವು ಗೋವಾದ ಚಲನಚಿತ್ರ ಸಮುದಾಯಕ್ಕಾಗಿ ವಿಶೇಷ ಮಾಸ್ಟರ್‌ಕ್ಲಾಸ್‌ಗಳನ್ನು ನಡೆಸುವ ಉಪಕ್ರಮವನ್ನು ತೆಗೆದುಕೊಂಡಿದೆ, ಇದರಲ್ಲಿ ಹಿಂದಿ ಮತ್ತು ಮರಾಠಿ ಚಲನಚಿತ್ರಗಳ ಹೆಸರಾಂತರು ಭಾಗವಹಿಸಲಿದ್ದಾರೆ ಎಂದರು. ಗೋವಾದ ವಿಭಾಗವನ್ನು ಈ ವರ್ಷ ವಿಶೇಷವಾಗಿ ಆಯೋಜಿಸಲಾಗಿದೆ. ಭಾರತೀಯ ಪನೋರಮಾದಿಂದ ಮೂವರು ತೀರ್ಪುಗಾರರನ್ನು ಒಳಗೊಂಡ ವಿಶೇಷ ತಂಡವು ಆರು ಕಿರುಚಿತ್ರಗಳು ಮತ್ತು ಒಂದು ಸಾಕ್ಷ್ಯಚಿತ್ರವನ್ನು ಆಯ್ಕೆ ಮಾಡಿದ್ದಾರೆ. ಫೆಸ್ಟಿವಲ್ ಮೈಲ್, ಮನರಂಜನಾ ವಲಯ ಮತ್ತು ಪಾರಂಪರಿಕ ಮೆರವಣಿಗೆಯಂತಹ ವಿವಿಧ ಬಾಹ್ಯ ಚಟುವಟಿಕೆಗಳ ಮೂಲಕ ಪ್ರವಾಸಿಗರು ಮತ್ತು ಗೋವಾದ ಸಾರ್ವಜನಿಕರ ಗಮನ ಸೆಳೆಯಲು ನಮಗೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಗೋವಾದಾದ್ಯಂತ ಕಾರವಾನ್‌ಗಳನ್ನು ನಿಯೋಜಿಸಲಾಗುವುದು ಮತ್ತು ಸಾರ್ವಜನಿಕರಿಗೆ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಇನ್ನಷ್ಟು ಒಳಗೊಳ್ಳುವ ಉದ್ದೇಶದಿಂದ ದಿವ್ಯಾಂಗರಿಗಾಗಿ ವಿಶೇಷ ಚಲನಚಿತ್ರ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪ್ರಯತ್ನಗಳು ಗೋವಾವನ್ನು ಐಎಫ್‌ಎಫ್‌ಐಗೆ ಶಾಶ್ವತ ಸ್ಥಳವನ್ನಾಗಿ ಮಾಡಿದವು ಎಂದು ಶ್ರೀ ಪ್ರಮೋದ್ ಸಾವಂತ್ ನೆನಪಿಸಿಕೊಂಡರು. ಅತಿಥಿಗಳನ್ನು ಸ್ವಾಗತಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು, ಐಎಫ್‌ಎಫ್‌ಐ ಭಾರತೀಯ ಚಲನಚಿತ್ರೋದ್ಯಮವು ಪ್ರಪಂಚದ ಮುಂದೆ ತನ್ನ ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶಿಸಲು ಮತ್ತು ವಿಶ್ವದ ಇತರ ಭಾಗಗಳ ಸಿನಿಮಾದಲ್ಲಿನ ಉತ್ತಮ ಅಭ್ಯಾಸಗಳನ್ನು ಬರಮಾಡಿಕೊಳ್ಳಲು ಒಂದು ವೇದಿಕೆಯಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಶೇಷ ಸಂದೇಶವನ್ನೂ ಕಾರ್ಯದರ್ಶಿಯವರು ಓದಿದರು. “ಭಾರತದ ಅತಿದೊಡ್ಡ ಚಲನಚಿತ್ರೋತ್ಸವವಾಗಿ, ಸಿನಿಮಾದಿಂದ ಒಂದಾಗಿರುವ ವಿವಿಧ ರಾಷ್ಟ್ರಗಳು ಮತ್ತು ಸಮಾಜಗಳ ಪ್ರತಿನಿಧಿಗಳ ನಡುವೆ ಐಎಫ್‌ಎಫ್‌ಐ ಒಂದು ಪ್ರೋತ್ಸಾಹದಾಯಕ ಸಮನ್ವಯವನ್ನು ಉತ್ತೇಜಿಸುತ್ತದೆ " ಎಂದು ಪ್ರಧಾನಿಯವರು ಸಂದೇಶ ನೀಡಿದ್ದಾರೆ. ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವೀಂದರ್ ಭಾಕರ್ ಮತ್ತು ಇತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಮೃಣಾಲ್ ಠಾಕೂರ್, ವರುಣ್ ಧವನ್, ಕ್ಯಾಥರೀನ್ ತೆರೇಸಾ, ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್ ಮತ್ತು ಅಮೃತಾ‌ ಖಾನ್ವಿಲ್ಕರ್ ಮುಂತಾದ ಸಿನಿ ತಾರೆಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮೈಸೂರು, ಅ. 18(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಡೆಂಗ್ಯು ಆತಂಕ ಹೆಚ್ಚಾಗುತ್ತಿದೆ. ಈ ಮಾರಕ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿ ಮನೆ ಮನೆ ಸಮೀಕ್ಷೆ ಕೈಗೊಂಡು, ಜಾಗೃತಿ ಮೂಡಿಸಲಾರಂಭಿಸಿದ್ದಾರೆ. ರಸ್ತೆ, ಮನೆ ಸುತ್ತಮುತ್ತ ಮಳೆ ನೀರು ನಿಲ್ಲುವುದರಿಂದ ಅಪಾರ ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು, ಈಡಿಸ್ ಈಜಿಪ್ಟೈ ಸೊಳ್ಳೆ ಹಗಲಿನ ವೇಳೆ ಜನರನ್ನು ಕಚ್ಚುವುದರಿಂದ ಡೆಂಗ್ಯು ಸೋಂಕು ಹರಡಲಿದ್ದು, ಕೆಲ ಸಂದರ್ಭದಲ್ಲಿ ಜೀವಕ್ಕೆ ಕುತ್ತು ತಂದೊಡ್ಡುತ್ತಿದೆ. ಈ ಸಾಲಿನ ಜನವರಿಯಿಂದ ಅ.18ರವರೆಗೆ ಮೈಸೂರು ಜಿಲ್ಲೆಯಲ್ಲಿ 638 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ತಿಂಗ ಳಾಂತ್ಯಕ್ಕೆ ಡೆಂಗ್ಯೂ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಹಾಗಾಗಿ ಈಡಿಸ್ ಸೊಳ್ಳೆಗಳ ಮೂಲೋ ತ್ಪಾಟನೆಗೆ ಆರೋಗ್ಯ ಸಿಬ್ಬಂದಿ ಸಮರ ಸಾರಿದ್ದಾರೆ. ಅಲ್ಲದೆ, ಪ್ರತಿ ಮನೆಗೂ ತೆರಳಿ ಸ್ವಚ್ಛತೆ ಕಾಪಾಡಿಕೊಳ್ಳು ವಂತೆ ಸಲಹೆ ನೀಡುತ್ತಿದ್ದಾರೆ. ಕಾಡುತ್ತಿದ್ದ ಜ್ವರದ ಬಾಧೆ: ಈ ಸಾಲಿನ ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಮೈಸೂರು ನಗರ ಸೇರಿದಂತೆ ಜಿಲ್ಲೆ ಯಲ್ಲಿ ಸಾಕಷ್ಟು ಮಂದಿಗೆ ಜ್ವರದ ಬಾಧೆ ಕಾಡಿತ್ತು. ಈಗ ನಿಯಂತ್ರಣಕ್ಕೆ ಬಂದಿದೆಯಾದರೂ, ಮಾಸಾಂತ್ಯದ ವೇಳೆಗೆ ಮಳೆಯಿಂದಾಗಿ ಇನ್ನಷ್ಟು ಕಾಡಬಹುದು ಎಂಬ ಆತಂಕ ವಿದೆ. ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಡೆಂಗ್ಯು ಶಂಕೆ ಮೇರೆಗೆ 3829 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 638 ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಜನವರಿಯಲ್ಲಿ 39, ಫೆÉಬ್ರವರಿಯಲ್ಲಿ 28, ಮಾರ್ಚ್‍ನಲ್ಲಿ 29, ಏಪ್ರಿಲ್‍ನಲ್ಲಿ 30, ಮೇ ನಲ್ಲಿ 55, ಜೂನ್‍ನಲ್ಲಿ 115, ಜುಲೈನಲ್ಲಿ 149, ಆಗಸ್ಟ್‍ನಲ್ಲಿ 91, ಸೆಪ್ಟೆಂಬರ್‍ನಲ್ಲಿ 78, ಅಕ್ಟೋಬರ್(ಅ.1ರಿಂದ ಈವರೆಗೆ)-24 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಆತಂಕಪಡುವ ಅಗತ್ಯವಿಲ್ಲ: ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್. ಚಿದಂ ಬರ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಗೆ ಹೋಲಿಸಿದರೆ, ಈಗ ಡೆಂಗ್ಯೂ ಪ್ರಕರಣ ಇಳಿ ಮುಖವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ, ಡೆಂಗ್ಯೂ ಪ್ರಕರಣ ಹೆಚ್ಚಾಗಬಹುದು ಎಂದು ಭಾವಿಸು ವುದು ಸರಿಯಲ್ಲ. ಈ ಖಾಯಿಲೆ ಒಮ್ಮೆ ನಿಯಂತ್ರಣಕ್ಕೆ ಬಂದರೆ, ಅದು ಮುಂದಿನ ದಿನಗಳಲ್ಲಿ ಇಳಿಮುಖ ವಾಗುತ್ತಲೇ ಹೋಗುತ್ತದೆ. ಜಿಲ್ಲೆಯ ಜನತೆ ಡೆಂಗ್ಯೂಗೆ ಆತಂಕಪಡುವ ಅಗತ್ಯವಿಲ್ಲ ಎಂದರು. ಮಳೆ ನೀರು ನಿಂತಾಗ: ಮಳೆ ನೀರು ಒಂದೆಡೆ ಬಹಳ ದಿನ ನಿಂತಿದ್ದಾಗ ಈಡಿಸ್ ಸೊಳ್ಳೆ ಉತ್ಪಾದನೆಯಾಗುತ್ತದೆ. ಈ ಸೊಳ್ಳೆಗಳು ಹಗಲಿನ ವೇಳೆ ಮನುಷ್ಯನನ್ನು ಕಚ್ಚುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಸಣ್ಣ ಮಕ್ಕಳು, ಹಿರಿಯ ನಾಗರಿಕರು, ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಹಗಲಿನ ವೇಳೆ ಹೆಚ್ಚಾಗಿ ಮಲಗುವಂತಹ ವ್ಯಕ್ತಿಗಳಿಗೆ ಡೆಂಗ್ಯೂ ಹರಡುತ್ತದೆ. ಜನರು ತಮ್ಮ ಮನೆಯಲ್ಲಿ ನೀರಿನ ತೊಟ್ಟಿಗಳನ್ನು ಶುದ್ಧೀ ಕರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಇಳಿಮುಖ: 2017ರಲ್ಲಿ ಜಿಲ್ಲೆಯಲ್ಲಿ 843 ಪ್ರಕರಣ ಪತ್ತೆಯಾಗಿತ್ತು. ಇದನ್ನು ಹೊರತುಪಡಿಸಿದರೆ ಕಳೆದ 9 ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಈ ವರ್ಷ 638 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ಕರ್ನಾಟಕ ಅರಣ್ಯ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಮ್ಮ ಗೌಪ್ಯತೆ ನೀತಿಯನ್ನು ಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ಆ ಮಾಹಿತಿಯನ್ನು ನಮಗೆ ಒದಗಿಸಲು ನೀವು ಇಚ್ಛಿಸಿದಲ್ಲಿ, ಮಾಹಿತಿಗಾಗಿ ನಿಮ್ಮ ವಿನಂತಿಯನ್ನು ಪೂರೈಸಲು ಅಥವಾ ನಿಮ್ಮ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಲು ಮಾತ್ರ ಇದನ್ನು ಬಳಸಲಾಗುತ್ತದೆ. ತಮ್ಮ ಭೇಟಿಯನ್ನು ಮಿತಿಯಿಲ್ಲದಂತೆ ಮಾಡಲು ನಾವು ಕೆಲವು ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಾಗ ನಾವು ತಾಂತ್ರಿಕ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದನ್ನು ಕೆಳಗಿನ ವಿಭಾಗವು ವಿವರಿಸುತ್ತದೆ. ಮಾಹಿತಿ ಸಂಗ್ರಹಿಸಿ ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ: ಈ ವೆಬ್‌ಸೈಟ್‌ನಲ್ಲಿ ನೀವು ಕಣ್ಣುಹಾಯಿಸಿದಾಗ, ಪುಟಗಳನ್ನು ಓದಿದಾಗ ಅಥವಾ ಮಾಹಿತಿಯನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಭೇಟಿಯ ಕುರಿತು ಕೆಲವು ತಾಂತ್ರಿಕ ಮಾಹಿತಿಯನ್ನು ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತೇವೆ. ಈ ಮಾಹಿತಿಯು ನೀವು ಯಾರೆಂದು ಗುರುತಿಸುವುದಿಲ್ಲ. ನಿಮ್ಮ ಭೇಟಿಯ ಕುರಿತು ನಾವು ಸಂಗ್ರಹಿಸುವ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ: 1. ನೀವು ನಮ್ಮ ವೆಬ್‌ಸೈಟ್‌ಗೆ ಪ್ರವೇಶಿಸುವ ನಿಮ್ಮ ಸೇವಾ ಪೂರೈಕೆದಾರರ (ಉದಾ. Mtnl.net.in) ಮತ್ತು ಐಪಿ ವಿಳಾಸ (ಐಪಿ ವಿಳಾಸವು ನಿಮ್ಮ ಕಂಪ್ಯೂಟರ್‌ಗೆ ಸ್ವಯಂಚಾಲಿತವಾಗಿ ನಿಯೋಜಿಸಲಾದ ಒಂದು ಸಂಖ್ಯೆ). 2. ನಮ್ಮ ಸೈಟ್‌ಗೆ ಪ್ರವೇಶಿಸಲು ಬಳಸುವ ಬ್ರೌಸರ್ ಪ್ರಕಾರ (ಫೈರ್‌ಫಾಕ್ಸ್, ಗೂಗಲ್ ಕ್ರೋಮ್) ಮತ್ತು ಆಪರೇಟಿಂಗ್ ಸಿಸ್ಟಮ್ (ವಿಂಡೋಸ್). 3. ನೀವು ನಮ್ಮ ಸೈಟ್‌ಗೆ ಪ್ರವೇಶಿಸಿದ ದಿನಾಂಕ ಮತ್ತು ಸಮಯ. 4. ನೀವು ಭೇಟಿ ನೀಡಿದ ಪುಟಗಳು / URL ಗಳು. ನೀವು ಇನ್ನೊಂದು ವೆಬ್‌ಸೈಟ್‌ನಿಂದ ಈ ವೆಬ್‌ಸೈಟ್‌ಗೆ ತಲುಪಿದ್ದರೆ, ಆ ಉಲ್ಲೇಖಿಸುವ ವೆಬ್‌ಸೈಟ್‌ನ ವಿಳಾಸ. 5. ವೆಬ್‌ಸೈಟ್ ಲೋಡ್ ಮಾಡಲು ಭಾಷೆಯ ಆದ್ಯತೆ ಈ ವೆಬ್‌ಸೈಟ್ ನಿಮಗೆ ಹೆಚ್ಚು ಉಪಯುಕ್ತವಾಗಲು ಸಹಾಯ ಮಾಡಲು ಮಾತ್ರ ಈ ಮಾಹಿತಿಯನ್ನು ಬಳಸಲಾಗುತ್ತದೆ. ಈ ಡೇಟಾದೊಂದಿಗೆ, ನಮ್ಮ ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಮತ್ತು ಬಳಸಿದ ತಂತ್ರಜ್ಞಾನಗಳ ಬಗ್ಗೆ ನಾವು ಕಲಿಯುತ್ತೇವೆ. ಈ ವೆಬ್‌ಸೈಟ್‌ಗೆ ವ್ಯಕ್ತಿಗಳು ಮತ್ತು ಅವರ ಭೇಟಿಗಳ ಬಗ್ಗೆ ನಾವು ಎಂದಿಗೂ ಟ್ರ್ಯಾಕ್ ಮಾಡುವುದಿಲ್ಲ ಅಥವಾ ದಾಖಲಿಸುವುದಿಲ್ಲ.
ಸೆಪ್ಟೆಂಬರ್ 29 ಪ್ರತಿ ವರ್ಷ 'ವಿಶ್ವ ಹೃದಯ ದಿನ'ವನ್ನಾಗಿ ಆಚರಿಸಲಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ, ಈ ಸಮಸ್ಯೆಯು ಪ್ರಪಂಚದ ಎಲ್ಲಾ ಸಾಂಕ್ರಾಮಿಕವಲ್ಲದ ರೋಗಗಳ ಪಾಲಿನ ಅರ್ಧದಷ್ಟಿದೆ. Ravi Janekal First Published Sep 29, 2022, 3:34 PM IST ಉಡುಪಿ (ಸೆ.29) : ವಿಶ್ವ ಹೃದಯ ದಿನದ 2022 ರ ಘೋಷ ವಾಕ್ಯ 'ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ' ವಿಶ್ವ ಹೃದಯ ದಿನದ ಅಂಗವಾಗಿ ಮಣಿಪಾಲದ ಕಸ್ತೂರಿ ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗ, ಹೃದಯರಕ್ತನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹೃದಯದ ಆರೋಗ್ಯದ ಅರಿವು ಮೂಡಿಸಲು ಕಸ್ತೂರಿ ಬಾ ಆಸ್ಪತ್ರೆ, ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ ಮತ್ತು ಸಾರ್ವಜನಿಕರಿಗೆ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. World Heart Day 2022: ಕಾಲೇಜು ವಿದ್ಯಾರ್ಥಿಗಳಿಗೆ ಹೃದಯಾಘಾತ ತಡೆ ತರಬೇತಿ? ಅಬ್ದುಲ್ ಅಹ್ಮದ್ ಐಪಿಎಸ್, ಪೊಲೀಸ್ ಅಧೀಕ್ಷಕರು- ಕರಾವಳಿ ಭದ್ರತಾ ಪೊಲೀಸ್, ಕರ್ನಾಟಕ ಇವರು ಹೃದಯ ಆರೋಗ್ಯ ಜಾಗೃತಿ ಶಿಲ್ಪವನ್ನು ಅನಾವರಣಗೊಳಿಸಿದರು ಮತ್ತು ಅವರು ಮಾತನಾಡುತ್ತಾ , "ನಮ್ಮನ್ನು ಅವಲಂಬಿಸಿ ಬಹಳಷ್ಟು ಜನ ನಮ್ಮ ಕುಟುಂಬದಲ್ಲಿ ಇರುತ್ತಾರೆ. ಅಕಾಲಿಕ ಮರಣ ಸಾಕಷ್ಟು ತೊಂದರೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ತಕ್ಕಂತೆ ನಮ್ಮ ಹೃದಯ ತಪಾಸಣೆ ಮಾಡುವುದರ ಮೂಲಕ ನಮ್ಮ ಹೃದಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು" ಎಂದರು. ಡಾ ಶರತ್ ಕುಮಾರ್ ರಾವ್(Dr.Sharath Kumar Rao), ಡೀನ್-ಕೆಎಂಸಿ(KMC) ಇವರು ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜುಗಳನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ 'ಹೃದಯವು ವ್ಯಕ್ತಿ ಜೀವಂತವಾಗಿರಲು ಒಂದು ಯಂತ್ರದ ತರಹ ಕೆಲಸ ಮಾಡುತ್ತದೆ ಮತ್ತು ಇದು ದೇಹದ ಎಲ್ಲ ಜೀವಕೋಶಗಳಿಗೆ ರಕ್ತ , ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಪೂರೈಕೆ ಮಾಡುವುದರೊಂದಿಗೆ ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನು ಮಾಡುತ್ತದೆ. ಇಂತಹ ಬಹು ಮೂಲ್ಯ ಅಂಗವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ(Dr.Avinash Shetty) ಅವರು, ಸಾರ್ವಜನಿಕರ ಬೇಡಿಕೆ ಮೇರೆಗೆ ನಾವು ವಿಶೇಷ ಹೃದಯ ತಪಾಸಣೆ ಪ್ಯಾಕೇಜ್ ಅನ್ನು ರೂ 3000 ಮತ್ತು ಸುಧಾರಿತ ಹೃದಯ ತಪಾಸಣೆ ಪ್ಯಾಕೇಜ್ ರೂ 4000 ನಲ್ಲಿ ಪರಿಚಯಿಸುತ್ತಿದ್ದೇವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು' ಎಂದರು. ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್(Dr. Anand Venugopala), ಮಲ್ಪೆ ಭದ್ರತಾ ಪೊಲೀಸ್ ನಿರೀಕ್ಷಕ ಡಾ ಶಂಕರ್ ಎಸ್ ಕೆ(Dr.Shankar S.K.) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶ್ವ ಹೃದಯ ದಿನ(World Heart Day)ದ ಕುರಿತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್(Dr.Ashwini Kumar) ಅವಲೋಕನ ನೀಡಿದರು. ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ ಪದ್ಮಕುಮಾರ್ ಸ್ವಾಗತಿಸಿ, ಹೃದ್ರೋಗ ತಪಾಸಣೆ ಪ್ಯಾಕೇಜ್‌ಗಳ ಕುರಿತು ಮಾಹಿತಿ ನೀಡಿದರು. ಹೃದಯನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಕಾಮತ್ ವಂದಿಸಿದರು. World Heart Day: ಸ್ತಂಭನವಾಗದಂತೆ ಇರಿ ಜೋಪಾನ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಪರಿಸರ ಸ್ನೇಹಿ ವಸ್ತುಗಳಿಂದ ಶಿಲ್ಪವನ್ನು ತಯಾರಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಉಚಿತವಾಗಿ , ಮಧುಮೇಹ , ರಕ್ತದ ಒತ್ತಡ, ಇ ಸಿ ಜಿ ಮತ್ತುವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು. ಡಾ ಈಶ್ವರಿ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.
ತಿರುವನಂತಪುರ: ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕಮ್ಯುನಿಸ್ಟ್ ಪಕ್ಷದ ಜನರು ಒಂದೆಡೆಯಾದರೆ, ಕೇರಳ ಸರ್ಕಾರವೂ ತನ್ನ ಹಿಂದೂ ವಿರೋಧಿ ನೀತಿಯನ್ನು ಮುಂದುವರಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಜನವರಿ 26 ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದು ತಿಳಿದ ಸರ್ಕಾರ, ರಾಜ್ಯದ ಎಲ್ಲ ಶಾಲೆ, ಕಾಲೇಜು ಆಡಳಿತ ಮಂಡಳಿಗಳಿಗೆ ವಿಚಿತ್ರವಾದ ಆದೇಶ ಹೊರಡಿಸಿದೆ. ಈ ಮೂಲಕ ಮೋಹನ್ ಭಾಗವತ್ ಧ್ವಜಾರೋಹಣ ತಡೆಯುವ ಹಿಂಬಾಗಿಲ ತಂತ್ರ ಕೇರಳ ಸರ್ಕಾರ ಮಾಡಿದ್ದು, ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೆ ಕೇರಳದ ಶಾಲೆಯೊಂದರಲ್ಲಿ ಆಗಸ್ಟ್ 15ರಂದು ಮೋಹನ್ ಭಾಗವತ್ ಧ್ವಜಾರೋಹಣ ಮಾಡಿದ್ದರಿಂದ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಜನವರಿ 15ರಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಲಿರುವ ಮೋಹನ್ ಭಾಗವತ್ ಧ್ವಜಾರೋಹಣ ಮಾಡುವುದು ನಿಗದಿಯಾಗಿತ್ತು. ಅವರನ್ನು ಗುರಿಯಾಗಿಟ್ಟುಕೊಂಡು ಕೇರಳ ಸರ್ಕಾರ ಹೊಸ ಆದೇಶ ಹೊರಡಿಸಿ, ಭಾಗವತ್ ಧ್ವಜಾರೋಹಣ ತಡೆಯುವ ಹುನ್ನಾರ ನಡೆಸಿದೆ. ಜ.26ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇರಳದ ಪಲಕ್ಕಡಕ್ಕೆ ಮೋಹನ್ ಭಾಗವತ್ ಆಗಮಿಸುತ್ತಿದ್ದು, ಆ ವೇಳೆ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಏನಿದೆ ಆದೇಶದಲ್ಲಿ ಜನಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು ಮಾತ್ರ ಧ್ವಜಾರೋಹಣ ಮಾಡಬೇಕು. ಶಾಲಾ, ಕಾಲೇಜುಗಳಲ್ಲಿ ಆಯಾ ವಿಭಾಗದ ಮುಖ್ಯಸ್ಥರು, ಸಂಸ್ಥೆಯ ಅಧಿಕೃತ ವ್ಯಕ್ತಿಗಳು, ಕಚೇರಿಯ ಸಿಬ್ಬಂದಿ ಮಾತ್ರ ಧ್ವಜಾರೋಹಣ ಮಾಡಬೇಕು. ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ಆಯಾ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಧ್ವಜಾರೋಹಣ ಮಾಡಬೇಕು. ಹೀಗೆ ಪರೋಕ್ಷವಾಗಿ ಭಾಗವತ್ ಧ್ವಜಾರೋಹಣಕ್ಕೆ ಅವಕಾಶ ತಪ್ಪಿಸಲು ಕೇರಳ ಸರ್ಕಾರ ಹುನ್ನಾರ ನಡೆಸಿರುವುದು ಸ್ಪಷ್ಟವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಮೋಹನ್ ಭಾಗವತ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೇರಳ ಸರ್ಕಾರ ದುರುದ್ದೇಶಪೂರ್ವಕವಾಗಿ ಇಂತಹ ಆದೇಶಗಳನ್ನು ಹೊರಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ರಾಜಕೀಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಲ್ಲೆಲ್ಲೂ, ಎಂತ ಘಟಾನುಘಟಿಗಳ ಬಾಯಲ್ಲೂ ರಾಜ್ಯದ ರಾಜಕೀಯದ ಮಾತುಗಳೇ ಕೇಳಿಬರುತ್ತಿವೆ. ಆದಾಗ್ಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಂದೆ ಹಲವು ಸವಾಲುಗಳು ಇವೆ ಎಂಬುದನ್ನು ಯಡಿಯೂರಪ್ಪನವರು ಮರೆಯಬಾರದು. ಅತ್ತ ಆ ಭಾಗ್ಯ, ಈ ಭಾಗ್ಯ ಕೊಟ್ಟೆ ಎಂದು ಬೀಗುತ್ತಿದ್ದ ಸಿದ್ದರಾಮಯ್ಯನವರೇ ಚಾಮುಂಡೇಶ್ವರಿಯಲ್ಲಿ ಸೋತು ಮುಖ ಒಣಗಿಸಿಕೊಂಡು ತಿರುಗಾಡುತ್ತಿದ್ದಾರೆ. ಜೆಡಿಎಸ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಸಹ ಅಷ್ಟೇ ದಿಟ. ಹಾಗಾದರೆ ರಾಜ್ಯದಲ್ಲಿ ಕಮಲ ಅರಳಲು ಕಾರಣವೇನು? ಯಾಕೆ ತುಂಬ ಜನ ಬಿಜೆಪಿಯನ್ನೇ ಗೆಲ್ಲಿಸಿದರು? ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾರಣಗಳೇನು? ಯಾವ ಕಾರಣಕ್ಕಾಗಿ ಬಿಜೆಪಿ ಗೆದ್ದಿತು? ಎಂಬ ತರಹೇವಾರಿ ಪ್ರಶ್ನೆಗಳು ಜನರನ್ನು ಕಾಡುತ್ತಿರಬಹುದು. ಅಂತಹ ಪ್ರಶ್ನೆಗಳಿಗೆ ಉತ್ತರವಾಗಿ ಇಲ್ಲಿ ಹತ್ತು ಅಂಶಗಳನ್ನು ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಜನ ಬೆಂಬಲಿಸಲು ಮೊದಲನೇ ಕಾರಣವೆಂದರೆ ಆಡಳಿತ ವಿರೋಧಿ ಅಲೆ. ಸಿದ್ದರಾಮಯ್ಯನವರು ಸೀಮಿತ ಸಮುದಾಯಕ್ಕಾಗಿ ಯೋಜನೆ ಜಾರಿಗೊಳಿಸಿದ್ದು, ಸರ್ಕಾರದ ಹಲವು ಹಗರಣ, ಅಧಿಕಾರಿಗಳ ವರ್ಗಾವಣೆ ಸೇರಿ ಹಲವು ಕಾರಣಗಳಿಂದ ಜನ ಬಿಜೆಪಿಗೆ ಮತ ಹಾಕಿದರು ಎಂಬುದರಲ್ಲಿ ಸಂಶಯವಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಹಿಂದೂಗಳ ನಿರ್ಲಕ್ಷ್ಯವೂ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಹನುಮ ಜಯಂತಿಗೆ ಅಡ್ಡಿ, ಗಣೇಶ ಚತುರ್ಥಿಗೆ ನಿಯಮ, 22 ಹಿಂದೂಗಳ ಹತ್ಯೆಯಾದರೂ ಕ್ರಮ ಕೈಗೊಳ್ಳದಿರುವುದು ಹಾಗೂ ಬಿಜೆಪಿಯ ಹಿಂದುತ್ವದ ಮಂತ್ರದಿಂದ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆಯಾಯಿತು. ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಡೆಸಿದ ಸಾಲು ಸಾಲು ರ್ಯಾಲಿಗಳು, ರಾಜ್ಯ ಸರ್ಕಾರದ ವೈಫಲ್ಯ ಎತ್ತಿ ತೋರಿಸಿದ್ದು, ಮೋದಿ ಅಲೆಯಿಂದ ಬಿಜೆಪಿಗೆ ಗೆಲುವು ನಿರಾಯಾಸವಾಗಿ ಲಭಿಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು, ಯೋಜನೆಗಳು ರಾಜ್ಯದಲ್ಲೂ ಜನ ಬಿಜೆಪಿಯನ್ನು ಬೆಂಬಲಿಸುವಂತೆ ಆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತ್ಯೇಕ ಲಿಂಗಾಯತ ಧರ್ಮದ ಪರ ನಿಂತಿರುವುದು ಸಹ ಬಿಜೆಪಿಗೆ ವರದಾನವಾಯಿತು. ಮೋದಿ ಪರ ಒಲವಿದ್ದ ಯುವ ಲಿಂಗಾಯತರು ಸಿದ್ದರಾಮಯ್ಯರನ್ನು ಮಕಾಡೆ ಮಲಗಿಸಿದರು. ಅದೇ ಕಾರಣಕ್ಕೆ ಲಿಂಗಾಯತರು ಜಾಸ್ತಿ ಇರುವ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿ ಎಂದೇ ಖ್ಯಾತಿಯಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕರ್ನಾಟಕದಲ್ಲಿ ನಡೆಸಿದ ಸಾಲು ರ್ಯಾಲಿ, ಸಮಾವೇಶಗಳಿಂದ ರಾಜ್ಯದಲ್ಲಿ ಕಮಲ ಅರಳಲು ಸಹಕಾರಿಯಾಯಿತು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹಿಂದುತ್ವ ಮುನ್ನೆಲೆಗೆ ಬಂತು. ಆದರೆ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯನವರ ಡೋಂಗಿ ಹಿಂದುತ್ವವನ್ನು ಜನ ನಂಬದೆ, ಬಿಜೆಪಿಯನ್ನು ಬೆಂಬಲಿಸಿದರು. ರಾಜ್ಯದಲ್ಲಿ ಈ ಬಾರಿ ಯಡಿಯೂರಪ್ಪನವರ ವರ್ಚಸ್ಸು, ಸುರೇಶ್ ಕುಮಾರ್ ಅವರಂತಹ ನಾಯಕರ ಬೆಂಬಲ, ವಿರೋಧ ಪಕ್ಷದಲ್ಲಿ ಹಲವು ವಿಚಾರಗಳ ಪ್ರಸ್ತಾಪ, ಮಹದಾಯಿ ವಿಚಾರದಲ್ಲಿ ಬಿಜೆಪಿ ನಡೆಸಿದ ಪ್ರಯತ್ನಗಳೂ ಕಮಲ ಅರಳಲು ಬೆನ್ನೆಲುಬಾದವು. ಐದು ವರ್ಷ ರಾಜ್ಯವಾಳಿದ ಸಿದ್ದರಾಮಯ್ಯನವರು ಕಾನೂನು ಸುವ್ಯವಸ್ಥೆಯನ್ನೇ ಕಾಪಾಡಲಿಲ್ಲ. ಕರಾವಳಿ ಹೊತ್ತಿ ಉರಿಯಿತು, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಯಾಯಿತು, ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದರು. 22 ಹಿಂದೂಗಳ ಹತ್ಯೆಯಾಯಿತು. ಆದರೂ ಸಿದ್ದರಾಮಯ್ಯನವರು ಮಗುಮ್ಮಾಗಿದ್ದದ್ದು ಬಿಜೆಪಿ ಗೆಲುವಿಗೆ ಸಹಕಾರಿಯಾಯಿತು. ಮೇಲಾಗಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅಲ್ಲದೆ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಎಲ್ಲ ಕಾರಣಗಳು ರಾಜ್ಯದಲ್ಲಿ ಜನ ಬಿಜೆಪಿಯನ್ನು ನಂಬಿ, ಮತ ಹಾಕಲು ಕಾರಣವಾದವು.
ಬೆಂಗಳೂರು: ಸರ್ಕಾರದ ಸಚಿವರು, ಕೇಂದ್ರ ಸಚಿವರು ಮತ್ತು ಸಾರ್ಜನಿಕರ ತೀವ್ರ ವಿರೋಧದ ಬಳಿಕ ರಾಜ್ಯ ಸರ್ಕಾರ ಕೊನೆಗೂ ವಾರಾಂತ್ಯ ಕರ್ಫ್ಯೂವನ್ನು ರದ್ದುಪಡಿಸಿದೆ. ಕಳೆದರೆಡು ವಾರ ರಾಜ್ಯ ಸರ್ಕಾರ ಕೋವಿಡ್-19 ಮೂರನೇ ಅಲೆಯನ್ನು ತಡೆಯಲು ವೀಕೆಂಡ್ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿತ್ತು. ಶುಕ್ರವಾರ ಮಧ್ಯಾಹ್ನ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಇನ್ನು ಮುಂದೆ ವೀಕೆಂಡ್ ಕರ್ಫ್ಯೂ ಹಾಗೂ ಲಾಕ್ ಡೌನ್ ಮಾಡುವುದಿಲ್ಲ, ಮತ್ತು ನೈಟ್ ಕರ್ಫ್ಯೂ ಮುಂದುವರಿಯಲಿದೆ ಎಂಬ ಸರ್ಕಾರ ಸ್ಪಷ್ಪಪಡಿಸಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೊರೋನಾ ನಿಯಂತ್ರಣ ಸಭೆಯನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಸಚಿವ ಆರ್ ಅಶೋಕ್, ಡಾ.ಕೆ.ಸುಧಾಕರ್, ಅರಗ ಜ್ಞಾನೇಂದ್ರ ಸೇರಿದಂತೆ ವಿವಿಧ ತಜ್ಞರು ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರೋ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಜೊತೆಗೆ 3ನೇ ಅಲೆಯ ತೀವ್ರತೆ ಅಷ್ಟೇನು ಹೆಚ್ಚಾಗಿಲ್ಲ. ಒಂದು ವೇಳೆ ಹೆಚ್ಚಾದ್ರೆ, 3ನೇ ಅಲೆಯ ತೀವ್ರತೆ ವ್ಯಾಪಕವಾದ್ರೇ ಮತ್ತೆ ಕಠಿಣ ನಿಯಮಗಳನ್ನು ಜಾರಿಗೆ ತರಬಹುದು. ಹೀಗಾಗಿ ವೀಕೆಂಡ್ ಕರ್ಪ್ಯೂ ರದ್ದು ಪಡಿಸುವಂತೆ ಸಚಿವರು ಸೇರಿದಂತೆ, ತಜ್ಞರು ಸಿಎಂ ಸಲಹೆ ಮಾಡಿದರು. ಸಚಿವರು, ತಜ್ಞರ ಸಲಹೆಗೆ ಸಹಮತ ವ್ಯಕ್ತ ಪಡಿಸಿದಂತ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ರಾತ್ರಿಯಿಂದ ಜಾರಿಗೊಳ್ಳ ಬೇಕಿದ್ದಂತ ವೀಕೆಂಡ್ ಕರ್ಪ್ಯೂವನ್ನು ರದ್ದುಗೊಳಿಸೋ ನಿರ್ಧಾರವನ್ನು ಕೈಗೊಂಡಿದ್ದಾರೆ. ಸಭೆಯ ಮಹತ್ವದ ನಿರ್ಧಾರವನ್ನು ಸಚಿವ ಆರ್ ಅಶೋಕ್ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Kannada News » Sports » Cricket news » Hardik Pandya's reply to query on Sanju Samson, Umran Malik's non-selection Hardik Pandya: ಸಂಜು ಸ್ಯಾಮ್ಸನ್​​ಗೆ ಯಾಕೆ ಚಾನ್ಸ್ ನೀಡಿಲ್ಲ: ಇದು ನನ್ನ ತಂಡ, ಬೇಕಾದವರಿಗೆ ಅವಕಾಶ ನೀಡಿರುವೆ..! India vs New Zealand: ಸತತ ವೈಫಲ್ಯದ ನಡುವೆಯೂ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರಿಷಭ್ ಪಂತ್ ಅವಕಾಶ ಪಡೆದಿದ್ದರು. ಇತ್ತ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿದ್ದರೂ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಪ್ರಶ್ನೆಗಳೆದ್ದಿದ್ದವು. Sanju Samson-Hardik Pandya TV9kannada Web Team | Edited By: Zahir PY Nov 23, 2022 | 9:30 PM India vs New zealand: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ (Team India) ವಶಪಡಿಸಿಕೊಂಡಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಮಳೆಗೆ ಅಹುತಿಯಾದರೆ, 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಿದಾಗ ಪಂದ್ಯವು ಟೈನಲ್ಲಿ ಅಂತ್ಯ ಕಂಡಿತ್ತು. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಟೀಮ್ ಇಂಡಿಯಾ 1-0 ಅಂತರದಿಂದ ವಶಪಡಿಸಿಕೊಂಡಿತು. ಈ ಸರಣಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯಗೆ ತಂಡದ ಆಯ್ಕೆ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲೂ ಸಂಜು ಸ್ಯಾಮ್ಸನ್ ಹಾಗೂ ಉಮ್ರಾನ್ ಮಲಿಕ್ ಅವರಿಗೆ ತಂಡದಲ್ಲಿ ಅವಕಾಶ ನೀಡದಿರುವ ಬಗ್ಗೆ ಪ್ರಶ್ನಿಸಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಇಬ್ಬರಿಗೂ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಕುರಿತು ಅಭಿಮಾನಿಗಳು ಸೇರಿದಂತೆ ಹಲವು ಮಾಜಿ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ತಂಡದ ಆಯ್ಕೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಈ ಎಲ್ಲಾ ಪ್ರಶ್ನೆಗಳನ್ನು ಪಾಂಡ್ಯ ಮುಂದಿಟ್ಟಾಗ ಕೋಪಗೊಂಡರು. ಆ ಬಳಿಕ ಸಮಜಾಯಿಷಿ ನೀಡಿದ ಅವರ ಉತ್ತರಗಳು ಈಗ ಚರ್ಚೆಗೆ ಕಾರಣವಾಗಿದೆ. ಉಮ್ರಾನ್ ಮಲಿಕ್ ಹಾಗೂ ಸಂಜು ಸ್ಯಾಮ್ಸನ್​ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಹಾರ್ದಿಕ್ ಪಾಂಡ್ಯ, ಇದು ನನ್ನ ತಂಡ. ತಂಡದ ಕೋಚ್ ಮತ್ತು ನನ್ನ ಸಹ ಆಟಗಾರರು ಸರಿ ಎಂದು ಭಾವಿಸಿದ್ದನ್ನು ನಾನು ಮಾಡುತ್ತೇನೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಾನು ಹೆಜ್ಜೆ ಇಡುವುದಿಲ್ಲ. ಹೊರಗಿನವರು ಹೇಳಿದರೆ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಉತ್ತರಿಸಿದ್ದಾರೆ. ಇಲ್ಲಿ ಯಾರು ತಂಡದಿಂದ ಹೊರಗಿದ್ದಾರೆ ಎಂಬುದು ಮುಖ್ಯವಲ್ಲ. ನನ್ನ ತಂಡದ ಬಗ್ಗೆ ಎಲ್ಲಾ ನಿರ್ಧಾರಗಳನ್ನು ನಾವೆಲ್ಲರೂ ಒಟ್ಟಾಗಿ ತೆಗೆದುಕೊಳ್ಳುತ್ತೇವೆ. ಆಗಿನ ಅಗತ್ಯಕ್ಕೆ ತಕ್ಕಂತೆ ನಮಗೆ ಬೇಕಾದ ತಂಡದೊಂದಿಗೆ ಮೈದಾನಕ್ಕಿಳಿಯುತ್ತೇವೆ. ಇಬ್ಬರಿಗೂ ತಂಡದಲ್ಲಿ ಆಡುವ ಅವಕಾಶ ಸಿಗಲಿದೆ. ಪ್ರತಿಯೊಬ್ಬರಿಗೂ ಅವಕಾಶ ಸಿಗುತ್ತದೆ. ಅಲ್ಲಿಯವರೆಗೂ ಕಾಯಬೇಕಾಗುತ್ತದೆ. ಏಕೆಂದರೆ ದೊಡ್ಡ ಸರಣಿ ನಡೆದರೆ, ಹೆಚ್ಚು ಪಂದ್ಯಗಳು, ಹೆಚ್ಚಿನ ಅವಕಾಶಗಳು ಸಿಗುತ್ತವೆ. ಆದರೆ ಅದು ಚಿಕ್ಕ ಸರಣಿಯಾಗಿತ್ತು. ಹೀಗಾಗಿ ಎಲ್ಲರಿಗೂ ಚಾನ್ಸ್ ನೀಡಲಾಗಿಲ್ಲ ಎಂದರು. ಇದೇ ವೇಳೆ ತಂಡದಲ್ಲಿ ನಾನು ಹೆಚ್ಚಿನ ಬದಲಾವಣೆಗಳನ್ನು ಮಾಡುವುದರಲ್ಲಿ ನಂಬಿಕೆ ಇಟ್ಟಿಲ್ಲ. ಹೀಗಾಗಿ ಮೂರು ಪಂದ್ಯಗಳ ಸರಣಿಯಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿಲ್ಲ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ. ಅಚ್ಚರಿ ಎಂದರೆ ಸತತ ವೈಫಲ್ಯದ ನಡುವೆಯೂ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರಿಷಭ್ ಪಂತ್ ಅವಕಾಶ ಪಡೆದಿದ್ದರು. ಇತ್ತ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿದ್ದರೂ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಆದರೀಗ ಸರಣಿಯ ಬಳಿಕ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ನೀಡಿರುವ ಹೇಳಿಕೆ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಹುಟ್ಟುಹಬ್ಬದ ಶುಭಾಶಯಗಳು, ಸೋನಂ ಕಪೂರ್. ಫ್ಯಾಷನ್ ಮತ್ತು ಬಾಲಿವುಡ್‌ನ ನಡುವಿನ ಅಂತರವನ್ನು ಕಡಿಮೆ ಮಾಡಲು ನಟಿಯ ಸುಸಜ್ಜಿತ ಕೊಡುಗೆಯನ್ನು ಚರ್ಚಿಸಲು ಉತ್ತಮ ದಿನವಿಲ್ಲ ಎಂದು ನಾವು ಭಾವಿಸುತ್ತೇವೆ. ಹೆಚ್ಚಿನ ಫ್ಯಾಶನ್-ಪ್ರೇರಿತ ಫೋಟೋಶೂಟ್‌ಗಳನ್ನು Instagram ವಿಷಯವಾಗಿ ಬಳಸುವುದರಿಂದ ಹಿಡಿದು ತನ್ನ ಚಲನಚಿತ್ರಗಳ ಪ್ರಚಾರದವರೆಗೆ ಹಾಟ್ ಕೌಚರ್ ಧರಿಸುವುದರವರೆಗೆ, ಸೋನಮ್ ವೇಷಭೂಷಣದ ಸಂತೋಷವನ್ನು ನಮಗೆ ಪರಿಚಯಿಸಿದ್ದಾರೆ ಮತ್ತು ಹಲವಾರು ಸಾಂಪ್ರದಾಯಿಕ ಫ್ಯಾಷನ್ ಕ್ಷಣಗಳನ್ನು ನಮಗೆ ಪ್ರಸ್ತುತಪಡಿಸಿದ್ದಾರೆ. ಅವಳು ವಿನ್ಯಾಸಕರು ಮತ್ತು ಸ್ಟೈಲಿಸ್ಟ್‌ಗಳ ಪ್ರಿಯತಮೆ, ಫ್ಯಾಷನ್‌ನ ಎಲ್ಲಾ ವಿಷಯಗಳಿಗೆ ಅವಳ ಕಣ್ಣಿಗೆ ಧನ್ಯವಾದಗಳು. ಈಗ, ನಟಿ ಮತ್ತೊಂದು ಮೈಲಿಗಲ್ಲು – ಮಾತೃತ್ವದ ತುದಿಯಲ್ಲಿ ನಿಂತಿರುವಂತೆ, ಸೋನಮ್ ಗರ್ಭಧಾರಣೆಯ ಫ್ಯಾಷನ್ ಅನ್ನು ಒಂದು ಸಮಯದಲ್ಲಿ ಒಂದು ಪೋಸ್ಟ್ ಅನ್ನು ಮರು ವ್ಯಾಖ್ಯಾನಿಸುತ್ತಿದ್ದಾರೆ. ಆಕೆಯ ಜನ್ಮದಿನದಂದು, ನಾವು ಸೋನಮ್ ಅವರ ಕೆಲವು ಸುಂದರವಾದ ಗರ್ಭಧಾರಣೆಯ ಫ್ಯಾಷನ್ ಮೇಳಗಳನ್ನು ನೋಡೋಣ. ಪಟ್ಟಿಯಲ್ಲಿ ಮೊದಲನೆಯದು ಅಬು ಜಾನಿ-ಸಂದೀಪ್ ಖೋಸ್ಲಾ ಅವರ ಬೆರಗುಗೊಳಿಸುವ ಬಿಳಿಯ ರಚನೆಯಾಗಿದೆ ಅದು ಸೋನಮ್ ಕಪೂರ್ ಅವರ ಫ್ಯಾಶನ್ ಡೈರಿಗಳಲ್ಲಿ ಕಾಣಿಸಿಕೊಂಡಿರುವ ಇತ್ತೀಚಿನದು. ಡಿಸೈನರ್ ಜೋಡಿಯ ಮುಂಬರುವ ಹಬ್ಬದ ಮತ್ತು ವಧುವಿನ ಸಂಗ್ರಹಣೆಯ ಮೇಳವು ಸೂಕ್ಷ್ಮವಾದ ಮಿನುಗುಗಳು ಮತ್ತು ಮುತ್ತುಗಳೊಂದಿಗೆ ಆಫ್-ವೈಟ್ ಚಾಮೋಯಿಸ್ ಸ್ಯಾಟಿನ್ ಸ್ಕರ್ಟ್ ಮತ್ತು ಉದ್ದವಾದ, ಹಿಂದುಳಿದ ಬಹು-ಫಲಕದ ಉಡುಪನ್ನು ಒಳಗೊಂಡಿರುತ್ತದೆ, ಮುತ್ತಿನ ಕಸೂತಿಯನ್ನು ಒಳಗೊಂಡಿರುತ್ತದೆ. ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ, ಸೋನಮ್ ಕಪೂರ್ ತನ್ನ ಉಡುಪಿನಲ್ಲಿರುವ ಅದ್ಭುತವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು “ತಾಯ್ತನದ ತುದಿಯಲ್ಲಿ ಮತ್ತು ನನ್ನ ಹುಟ್ಟುಹಬ್ಬದ ಅಂಚಿನಲ್ಲಿ, ನಾನು ಹೇಗೆ ಭಾವಿಸುತ್ತೇನೆ ಎಂದು ನಾನು ಉಡುಗೆಯನ್ನು ಆರಿಸಿಕೊಳ್ಳುತ್ತಿದ್ದೇನೆ – ಗರ್ಭಿಣಿ ಮತ್ತು ಶಕ್ತಿಯುತ, ದಪ್ಪ. ಮತ್ತು ಸುಂದರ…” ಅದಕ್ಕಿಂತ ಮುಂಚೆ ಸೋನಂ ಕಪೂರ್ ಕೂಡ ಕಪ್ಪು ಬಣ್ಣದ ಫಿಲ್ ದೇ ಕಫ್ತಾನ್ ನಲ್ಲಿ ಹೇಳಿಕೆ ನೀಡಿದ್ದಾರೆ ಕಸೂತಿ ಜೊತೆ. ಶೀರ್ಷಿಕೆಯಲ್ಲಿ, “ನನ್ನ (ಏಂಜೆಲ್ ಎಮೋಜಿ) ಜೊತೆಗೆ ಕಫ್ತಾನ್ ಜೀವನ” ಎಂದು ಅವರು ಹೇಳಿದರು. ಅವಳು ಕಫ್ತಾನ್ ಅನ್ನು ಒಂದು ಜೋಡಿ ಸ್ಟಿಲೆಟೊಸ್ ಮತ್ತು ರೂಬಿ ಡ್ರಾಪ್ ಕಿವಿಯೋಲೆಗಳೊಂದಿಗೆ ಜೋಡಿಸಿದಳು. ಮಧ್ಯಭಾಗದ ಬನ್, ನಗ್ನ ತುಟಿಗಳು ಮತ್ತು ಹೊಗೆಯಾಡುವ ಕಣ್ಣುಗಳೊಂದಿಗೆ, ಸೋನಮ್ ಚಿತ್ರಗಳಲ್ಲಿ ಬಹುಕಾಂತೀಯವಾಗಿ ಕಾಣುತ್ತಾರೆ. ಅದಕ್ಕೂ ಮೊದಲು, ಸೋನಮ್ ಕಪೂರ್ ಅವರು ಡಿಸೈನರ್ ಅಬು ಜಾನಿ ಅವರ ಜನ್ಮದಿನದಂದು ಬಿಳಿ ಮೇಳದಲ್ಲಿ ಕಾಣಿಸಿಕೊಂಡ ನಂತರ ಇಂಟರ್ನೆಟ್ ಅನ್ನು ಸುಟ್ಟು ಹಾಕಿದರು. ಆಕೆಯ ಸಹೋದರಿ ಮತ್ತು ನೆಚ್ಚಿನ ಸಹಯೋಗಿ ರಿಯಾ ಕಪೂರ್‌ನಿಂದ ಶೈಲಿಯಲ್ಲಿ, ಸೋನಮ್ ಸ್ಯಾಟಿನ್ ಧೋತಿ ಪ್ಯಾಂಟ್, ಆಫ್ ಶೋಲ್ಡರ್ ಬ್ಲೌಸ್ ಮತ್ತು ದುಪಟ್ಟಾದಲ್ಲಿ ಕಾಣಿಸಿಕೊಂಡರು. ಅವಳು ಕೋಲ್-ರಿಮ್ಡ್ ಕಣ್ಣುಗಳು ಮತ್ತು ಆಭರಣಗಳೊಂದಿಗೆ ತನ್ನ ಕೂದಲನ್ನು ತೆರೆದಿದ್ದಳು. ಅವರ ಪತಿ ಆನಂದ್ ಅಹುಜಾ ಅವರೊಂದಿಗೆ ತೆಗೆದ ಚಿತ್ರಗಳ ಸೆಟ್‌ನಲ್ಲಿ, ಸೋನಂ ಕಪೂರ್ ಸಾಧಾರಣ ಶೀರ್ ಬೀಜ್ ಡ್ರೆಸ್‌ನಲ್ಲಿ ಕಾಂತಿಯುತವಾಗಿ ಕಾಣುತ್ತಿದ್ದಾರೆ ಸಂಕೀರ್ಣವಾದ ವಿವರಗಳು ಮತ್ತು ಇಬ್ಬನಿ ಮೇಕ್ಅಪ್ನೊಂದಿಗೆ. ಸರಳ ಸುಂದರವಾಗಿರಲು ಸಾಧ್ಯವಿಲ್ಲ ಎಂದು ಯಾರು ಹೇಳಿದರು? ಸೋನಂ ಕಪೂರ್ ಅವರು ಬಿಳಿ ಟಿ-ಶರ್ಟ್‌ನೊಂದಿಗೆ ನೇರಳೆ ಬಣ್ಣದ ಸೂಟ್‌ನಲ್ಲಿ ಹೆಜ್ಜೆ ಹಾಕಿದಾಗ ಟ್ವಿಸ್ಟ್‌ನೊಂದಿಗೆ ಪವರ್ ಸೂಟ್‌ಗಳನ್ನು ಅಪ್ಪಿಕೊಳ್ಳುವುದನ್ನು ನಾವು ನೋಡಿದ್ದೇವೆ. ಅವಳು ಅದನ್ನು ಸೊಗಸಾದ ಚಿನ್ನದ ಆಭರಣಗಳೊಂದಿಗೆ ಜೋಡಿಸಿದಳು. ಇನ್ನೊಂದು ಸಂದರ್ಭದಲ್ಲಿ, ಸೋನಮ್ ಕಪೂರ್ ಕಿತ್ತಳೆ ಬಣ್ಣದ ಛಾಯೆಯ ಸ್ಯಾಟಿನ್ ಶರ್ಟ್ ಅನ್ನು ಹೊಂದಿಕೆಯಾಗುವ ಗಾತ್ರದ ಪ್ಯಾಂಟ್ ಅನ್ನು ಆಯ್ಕೆ ಮಾಡಿಕೊಂಡರು.
ಕುಂದಾಪುರ: ಕಂಡ್ಲೂರಿನ ಅಲ್‌ಹುದಾ ಚಾರಿಟಬಲ್ ಟ್ರಸ್ಟ್, ಕುಂದಾಪುರ ತಾಲೂಕು ಸದ್ಭಾವನಾ ವೇದಿಕೆ ಮತ್ತು ತ್ರಾಸಿ-ಗಂಗೊಳ್ಳಿ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ತ್ರಾಸಿಯ ಕ್ಲಾಸಿಕ್ ಆಡಿಟೋರಿಯಂನಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ಪ್ರಧಾನ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕ, ಲೇಖಕ ಕೆ. ಶಿವಾನಂದ ಕಾರಂತ ಧರ್ಮಗಳ ನಡುವಿನ ತಾಕಲಾಟದಲ್ಲಿ ಮಾನವ ಧರ್ಮ ಮರೆಯಾಗಿದೆ. ಯಾವ ಧರ್ಮವೂ ದ್ವೇಷವನ್ನು, ಹಿಂಸೆಯನ್ನು, ಯುದ್ಧವನ್ನು ಬೋಧಿಸಿಲ್ಲ. ಧರ್ಮದ ಕುರಿತಾಗಿ ಹಲವರಲ್ಲಿ ಇರುವ ಅರೆ ಮತ್ತು ಶೂನ್ಯ ಜ್ಞಾನ ಧರ್ಮಗಳ ನಡುವೆ ತ್ವೇಷ ಉಂಟಾಗಲು ಕಾರಣ. ಎಲ್ಲ ಜನರು ದೇವರಿಗೆ, ಮಾತಾಪಿತೃಗಳಿಗೆ, ಗುರುಗಳಿಗೆ, ಪರಿಸರಕ್ಕೆ ಮತ್ತು ಸಹಜೀವಿಗಳಿಗೆ ಸಲ್ಲಬೇಕಾಗಿರುವುದನ್ನು ಸಲ್ಲಿಸುತ್ತ ಬದುಕಬೇಕು. ಆಯಾ ಧರ್ಮಗಳನ್ನು ಅನುಸರಿಸುತ್ತ ಎಲ್ಲ ಧರ್ಮೀಯರು ಈ ವಿಚಾರದಲ್ಲಿ ಒಂದಾಗಬೇಕು ಎಂದು ಹೇಳಿದರು. ತ್ರಾಸಿ-ಗಂಗೊಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಾರ್ಜ್ ಡಿ’ಆಲ್ಮೇಡ ದೇವರನ್ನು ಪ್ರೀತಿಸುವವರು ದೇವರ ಮಕ್ಕಳಾದ ಎಲ್ಲ ಮನುಷ್ಯರನ್ನು ಪ್ರೀತಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಹಿರಾ ಮೀಡಿಯದ ಅಧ್ಯಕ್ಷ ಮಹಮದ್ ಇಸಾಕ್ ಪುತ್ತೂರು ಸೌಹಾರ್ದ ಇಫ್ತಾರ್ ಒಂದು ಉಪಯುಕ್ತ ಕಾರ್ಯಕ್ರಮ. ಇದರಲ್ಲಿ ವಿವಿಧ ಧರ್ಮೀಯರು ಒಂದೆಡೆ ಕಲೆತು ಸೌಹಾರ್ದ ವಾತಾವರಣದಲ್ಲಿ ಪರಸ್ಪರರನ್ನು ಮತ್ತು ಪರ ಧರ್ಮಗಳನ್ನು ಅರಿಯುವ ಅವಕಾಶ ಸಿಗುತ್ತದೆ ಎಂದರು. ಶಾಸಕ ಕೆ. ಗೋಪಾಲ ಪೂಜಾರಿ, ತ್ರಾಸಿ ಹೋಲಿಕ್ರಾಸ್ ಇಗರ್ಜಿಯ ಧರ್ಮಗುರು ಚಾರ್ಲ್ಸ್ ಲೂಯಿಸ್ ಶುಭ ಹಾರೈಸಿದರು. ಸದ್ಭಾವನಾ ವೇದಿಕೆಯ ಸಂಚಾಲಕ ಸಬ್ಲಾಡಿ ಮಂಜಯ್ಯ ಶೆಟ್ಟಿ, ಅಲ್‌ಹುದಾ ಚಾರಿಟಬಲ್ ಟಸ್ಟ್‌ನ ಅಧ್ಯಕ್ಷ ಎಸ್. ದಸ್ತಗೀರ್ ಸಾಹೇಬ್, ಉಪಾಧ್ಯಕ್ಷ ಬೆಟ್ಟೆ ಜಿಫ್ರಿ ಸಾಹೇಬ್ ವೇದಿಕೆಯಲ್ಲಿದ್ದರು. ಕುಂದಾಪುರ ತಾಲೂಕು ಮಿಲ್ಲತ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಝಮೀರ್ ಅಹ್ಮದ್ ರಶಾದಿ ಖುರಾನ್ ಪಠಿಸಿದರು. ಪತ್ರಕರ್ತ ಜಿ. ಎಂ, ಶರೀಫ್ ಹೂಡೆ ಸ್ವಾಗತಿಸಿದರು. ಎಸ್. ಜನಾರ್ದನ ಮರವಂತೆ ಪ್ರಸ್ತಾವನೆಗೈದರು. ಶ್ರೀನಿವಾಸ ಗಾಣಿಗ ವಂದಿಸಿದರು. ಅಲ್‌ಹುದಾ ಚಾರಿಟಬಲ್ ಟ್ರಸ್ಟ್‌ನ ಎಸ್. ಮುನೀರ್ ಅಹ್ಮದ್ ನಿರೂಪಿಸಿದರು.
ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿದ್ದು, ಮೂರು ದಿನಗಳ ಬಳಿಕವೂ ಈಶಾನ್ಯ ದೆಹಲಿಯಲ್ಲಿ ತ್ವೇಷಮಯ ವಾತಾವರಣ ಮುಂದುವರಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ಈ ನಡುವೆ ಹಿಂಸಾಚಾರ ನಿಯಂತ್ರಣ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ದ ಕ್ರಮಕ್ಕೆ ಮುಂದಾಗದ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್, ಪ್ರಚೋದನಕಾರಿ ಭಾಷಣದ ವೀಡಿಯೋಗಳನ್ನು ವೀಕ್ಷಿಸಿ, ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಅಭಯ್ ವರ್ಮಾ ವಿರುದ್ಧ ಈವರೆಗೆ ಎಫ್ ಐಆರ್ ದಾಖಲಿಸಿಲ್ಲ ಏಕೆ ಎಂದು ಪ್ರಶ್ನಿಸಿದೆ. ನಗರ ಹೊತ್ತಿ ಉರಿಯುತ್ತಿದ್ದರೂ, ಎಫ್ ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿಮಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲವೇ ಎಂದು ದೆಹಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಾಮಾಜಿಕ ಹೋರಾಟಗಾರ ಹರ್ಷ್ ಮಂದರ್ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಪೀಠದ ಈ ಪ್ರಶ್ನೆ, ಸಿಎಎ ವಿರೋಧಿ ಹೋರಾಟಗಾರರ ವಿರುದ್ಧದ ಆಡಳಿತಪಕ್ಷದ ದ್ವೇಷ ಮತ್ತು ಹಿಂಸೆಗೆ ಕುಮ್ಮಕ್ಕು ನೀಡುವ ಪ್ರಚೋದನಕಾರಿ ಕೃತ್ಯ ಮತ್ತು ಹೇಳಿಕೆಗಳ ವಿಷಯದಲ್ಲಿ ದೆಹಲಿ ಪೊಲೀಸರೂ ಪರೋಕ್ಷವಾಗಿ ಪಾಲುದಾರರು ಎಂಬ ಜನಸಾಮಾನ್ಯರ ಭಾವನೆಗೆ ಇಂಬು ನೀಡಿದಂತಾಗಿದೆ. ಹಾಗೆಯೇ ನ್ಯಾಯಾಂಗದ ಕಣ್ಣೆದುರೇ ದೆಹಲಿಯಲ್ಲಿ ಮತ್ತೊಮ್ಮೆ 1984ರ ಸಿಖ್ ಹತ್ಯಾಕಾಂಡದಂತಹ ದುರ್ಘಟನೆ ಸಂಭವಿಸಲು ಬಿಡುವುದಿಲ್ಲ. ಜನರ ಜೀವಕ್ಕೆ ಸುರಕ್ಷತೆ ಮತ್ತು ಭದ್ರತೆ ಖಾತ್ರಿಪಡಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. ಈ ನಡುವೆ, ಸುಪ್ರೀಂಕೋರ್ಟ್ ಕೂಡ ದೆಹಲಿ ಗಲಭೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಕೆಲಸ ಮಾಡುವ ಸ್ವಾತಂತ್ರ್ಯ ಮತ್ತು ವೃತ್ತಿಪರತೆಯ ಕೊರತೆಯಿಂದಾಗಿ ಹಲವು ಜೀವಗಳನ್ನು ಕಳೆದುಕೊಳ್ಳುವಂತಾಗಿದ್ದು ದುರಾದೃಷ್ಟಕರ ಎಂದು ಸಾಂದರ್ಭಿಕವಾಗಿ ಅಭಿಪ್ರಾಯಪಟ್ಟಿದೆ. ಜೊತೆಗೆ, ದೆಹಲಿ ಹಿಂಸಾಚಾರದ ಬಗ್ಗೆ ನಿರ್ಣಯ ಅಂಗೀಕರಿಸಿರುವ ಸುಪ್ರೀಂಕೋರ್ಟ್ ವಕೀಲರ ಸಂಘ(ಬಾರ್ ಅಸೋಸಿಯೇಷನ್) ಕೂಡ ಗಲಭೆ ನಿಯಂತ್ರಿಸುವಲ್ಲಿ ಪೊಲೀಸರ ವೈಫಲ್ಯವನ್ನು ಖಂಡಿಸುವುದಾಗಿ ಹೇಳಿದೆ. ಬೆಳಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ದೆಹಲಿ ಪೊಲೀಸರ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರು ಉದ್ದೇಶಪೂರ್ವಕವಾಗಿ ನಾಲ್ವರು ಬಿಜೆಪಿ ನಾಯಕರ ಹೇಳಿಕೆಯ ವೀಡಿಯೋಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ. ಆದರೆ, ಇಂತಹ ಪ್ರಚೋದನಕಾರಿ ಹೇಳಿಕೆಗಳು ಸಿಎಎ ವಿರೋಧಿಗಳ ಕಡೆಯಿಂದಲೇ ಬಂದಿವೆ. ಅಂತಹ ವೀಡಿಯೋಗಳನ್ನು ನಾನು ಇಲ್ಲಿ ಪ್ರದರ್ಶಿಸಿದರೆ ಅದು ಇನ್ನಷ್ಟು ಪ್ರಚೋದನಕ್ಕೆ ದಾರಿಮಾಡಿಕೊಡಲಿದೆ ಎಂದರು. ಆಗ, ನ್ಯಾ. ಎಸ್ ಮುರುಳೀಧರ್ ಮತ್ತು ನ್ಯಾ. ತಲ್ವಂತ್ ಸಿಂಗ್ ಅವರನ್ನೊಳಗೊಂಡ ಪೀಠ, ಎಸ್ ಜಿ ಅವರ ಈ ಹೇಳಿಕೆಯೇ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿದ್ಧಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಎಂದು ಪರಿಗಣಿಸಿತು. “ಹೀಗೆ ಹೇಳುವ ಮೂಲಕ ನೀವು ಪೊಲೀಸರನ್ನು ತಪ್ಪಿತಸ್ಥರನ್ನಾಗಿ ಚಿತ್ರಿಸುತ್ತಿದ್ದೀರಿ. ಸ್ವತಃ ಎಸ್ ಜಿ ಅವರೇ ಈ ಹೇಳಿಕೆಗಳು ಪ್ರಚೋದನಕಾರಿ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುವಾಗ ಆ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಲು ನೀವು ಮೀನಾಮೇಷ ಎಣಿಸುತ್ತಿರುವುದು ಏಕೆ? ಇಡೀ ದೇಶ ಈ ಪ್ರಶ್ನೆಯನ್ನು ಕೇಳುತ್ತಿದೆ” ಎಂದು ನ್ಯಾ. ಮುರಳೀಧರ್ ಅವರು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಆಗ, ಇದು ಎಫ್ ಐ ಆರ್ ದಾಖಲಿಸಲು ಸಕಾಲವಲ್ಲ. ದೂರುದಾರರು ಈ ವೀಡಿಯೋಗಳನ್ನೇ ಏಕೆ ತಾವು ಉಲ್ಲೇಖಿಸಿದ್ದೇವೆ ಎಂಬುದಕ್ಕೆ ಕಾರಣ ನೀಡಿಲ್ಲ. ಹಾಗಾಗಿ ಎಫ್ ಐಆರ್ ದಾಖಲಿಸಲು ಸೂಕ್ತ ಸಮಯವಲ್ಲ ಎಂದು ಎಸ್ ಜಿ ಹೇಳಿದರು. ಆದರೆ, ಆ ವಾದಕ್ಕೆ ಸೊಪ್ಪುಹಾಕದ ನ್ಯಾಯಪೀಠ, ‘ಎಫ್ ಐಆರ್ ದಾಖಲಿಸಲು ಈಗ ಸಕಾಲವಲ್ಲ ಎಂದರೆ ಇನ್ನು ಯಾವಾಗ? ಗಲಭೆಯಲ್ಲಿ ಆಸ್ತಿಪಾಸ್ತಿ ನಷ್ಟದ ಬಗ್ಗೆ ನೀವು ಎಫ್ ಐಆರ್ ಹಾಕುತ್ತಿದ್ದೀರಲ್ಲವೆ? ಹಾಗಿರುವಾಗ ಈ ಹೇಳಿಕೆಗಳ ಕುರಿತು ಎಫ್ ಐಆರ್ ದಾಖಲಿಸಲು ಯಾಕೆ ಮುಹೂರ್ತ ನೋಡುತ್ತಿದ್ದೀರಿ” ಎಂದು ಖಾರವಾಗಿ ಪ್ರಶ್ನಿಸಿತು. ವಿಚಾರಣೆ ನಡುವೆ ನ್ಯಾಯಾಲದಲ್ಲಿ ಹಾಜರಿದ್ದ ದೆಹಲಿ ಪೊಲೀಸ್ ಅಧಿಕಾರಿ, ತಾವು ಆ ಪ್ರಚೋದನಕಾರಿ ವೀಡಿಯೋಗಳನ್ನು ನೋಡಿಯೇ ಇಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಮರಳೀಧರ್, ನಿಮ್ಮ ಕಚೇರಿಯಲ್ಲಿ ಎಷ್ಟೊಂದು ಟಿವಿಗಳಿವೆ. ಆದರೂ ಈ ವೀಡಿಯೋಗಳನ್ನು ನೀವು ನೋಡಿಲ್ಲ ಎಂದರೆ ದೆಹಲಿ ಪೊಲೀಸರ ಸ್ಥಿತಿಯ ಬಗ್ಗೆ ಕನಿಕರ ಬರುತ್ತಿದೆ ಎಂದರು. ಬಳಿಕ ನ್ಯಾಯಾಲಯದಲ್ಲಿಯೇ ಕಪಿಲ್ ಮಿಶ್ರಾ ಪ್ರಚೋದನಕಾರಿ ಹೇಳಿಕೆಯ ವೀಡಿಯೋ ವೀಕ್ಷಣೆಗೆ ನ್ಯಾಯಾಧೀಶರು ಸೂಚಿಸಿದರು. ದೂರುದಾರ ಹರ್ಷ್ ಮಂದರ್ ಪರ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವೀಸ್, ಅವರು ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮತ್ತು ಅಭಯ್ ವರ್ಮಾ ಅವರ ಪ್ರಚೋದನಕಾರಿ ಹೇಳಿಕೆಗಳೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿವೆ ಎಂದು ನ್ಯಾಯಪೀಠದ ಗಮನಸೆಳೆದರು. ಬಳಿಕ ಆ ಮೂವರ ಹೇಳಿಕೆಗಳ ವೀಡಿಯೋಗಳನ್ನೂ ಕಲಾಪದಲ್ಲಿ ವೀಕ್ಷಿಸಿಸಲಾಯಿತು. ಬಳಿಕ ವಿಚಾರಣೆಯನ್ನು ನಾಳೆಗೆ ಮುಂದೂಡಿದ ನ್ಯಾಯಪೀಠ, ಮತ್ತೊಂದು ಪೀಠಕ್ಕೆ ವಿಚಾರಣೆ ಮುಂದುವರಿಸಲು ಸೂಚಿಸಿತು ಮತ್ತು ಪ್ರಚೋದನಕಾರಿ ವೀಡಿಯೋಗಳ ಕುರಿತು ಎಫ್ ಐಆರ್ ದಾಖಲಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ದೆಹಲಿ ಪೊಲೀಸ್ ಕಮೀಷನರ್ ಗೆ ನಿರ್ದೇಶನ ನೀಡಿತು. ಹಾಗೆಯೇ ಈ ಪ್ರಕರಣದಲ್ಲಿ ತನ್ನನ್ನು ವಿಚಾರಣೆಯ ವ್ಯಾಪ್ತಿಗೆ ಪರಿಗಣಿಸಬೇಕು ಎಂಬ ಕೇಂದ್ರದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿತು. ಒಟ್ಟಾರೆ, ಬುಧವಾರ ನ್ಯಾಯಾಲಯದ ಮಧ್ಯಪ್ರವೇಶದ ಮೂಲಕ, ದೆಹಲಿಯ ಹಿಂಸಾಚಾರದ ಹಿಂದಿನ ವ್ಯಕ್ತಿಗಳು ಮತ್ತು ಅಂತಹವರ ವಿಷಯದಲ್ಲಿ ದೆಹಲಿ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತೆರೆದುಕೊಂಡಂತಾಯಿತು. ಈ ನಡುವೆ ದೆಹಲಿಯಲ್ಲಿ ಕಣ್ಣಳತೆಯ ದೂರದಲ್ಲೇ ವ್ಯಾಪಕ ಹಿಂಸಾಚಾರ, ಮುಸ್ಲಿಮರ ಮೇಲಿನ ಮತೀಯ ಅಟ್ಟಹಾಸಗಳು ಮೇರೆ ಮೀರಿದ್ದರೂ ಮೂರು ದಿನಗಳಿಂದ ಆ ಬಗ್ಗೆ ಮೌನವಾಗೇ ಇದ್ದ ಪ್ರಧಾನಿ ಮೋದಿಯವರು, ಬುಧವಾರ ಟ್ವೀಟ್ ಮಾಡಿ, ಶಾಂತಿ ಕಾಪಾಡುವಂತೆ ಮತ್ತು ಪರಸ್ಪರ ಸಹೋದರಭಾವದಲ್ಲಿ ಸಹಬಾಳ್ವೆ ನಡೆಸುವಂತೆ ಜನತೆಗೆ ಬಹಿರಂಗ ಕರೆ ನೀಡಿದ್ಧಾರೆ. ಶಾಂತಿ ಮತ್ತು ಸೌಹಾರ್ದ ನಮ್ಮ ಯಾವತ್ತಿನ ಮೌಲ್ಯಗಳು ಎಂಬುದನ್ನು ಜನತೆ ಮರೆಯಬಾರದು ಎಂದು ಪ್ರಧಾನಿಗಳು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಮಗು ಮೊದಲು ಅಂಬೆಗಾಲು ಇಡುತ್ತದೆ. ನಂತರ ದೊಡ್ಡದಾಗಿ ನಡೆಯುತ್ತದೆ. ನಂತರ ಓಡುತ್ತದೆ. ಬಳಿಕ ಮತ್ತೆ ಇದು ಜೀವನದ ಕೊನೆಯಲ್ಲಿ ಮರುಕಳಿಸುತ್ತದೆ. ಓಡುತ್ತಿದ್ದವರು ನಡೆಯುವ ಹಂತಕ್ಕೆ ಬರುತ್ತಾರೆ. ನಂತರ ಕೊನೆಗೆ ಹಾಸಿಗೆ. ಮಂಗಳೂರು ಮಹಾನಗರ ಪಾಲಿಕೆ ಸದ್ಯ ಹಾಸಿಗೆಯಲ್ಲಿದೆಯೋ ಅಥವಾ ಅಂಬೆಗಾಲು ಇಡುತ್ತಿದೆಯೋ ಎನ್ನುವುದನ್ನು ಅವರೇ ಹೇಳಬೇಕು. ಇದು ಹೇಳಲು ಕಾರಣ ಕುಂಟುತ್ತಿರುವ ಉದ್ದಿಮೆ ಪರವಾನಿಗೆ ನವೀಕರಣದ ಕೆಲಸ. ಮೊನ್ನೆ ಫೆಬ್ರವರಿ 28 ಉದ್ದಿಮೆ ಪರವಾನಿಗೆ ನವೀಕರಣ ಮಾಡುವವರಿಗೆ ಕೊನೆಯ ಗಡುವಾಗಿತ್ತು. ಅದರ ನಂತರ ಮಾಡುವವರಿಗೆ ಒಟ್ಟು ಶುಲ್ಕದ 25% ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತದೆ. ಆದರೆ ವಿಷಯವಿರುವುದು ತುಂಬಾ ಉದ್ದಿಮೆದಾರರು ಫೆಬ್ರವರಿ ಕೊನೆಯ ತನಕ ಕಾಯುವುದು ಯಾಕೆ ಎಂದು ಜನವರಿಯಲ್ಲಿಯೇ ನವೀಕರಣಕ್ಕೆ ಮುಂದಾಗಿ ತಮ್ಮ ಕಡೆಯಿಂದ ಕೊಡಬೇಕಾಗಿರುವ ದಾಖಲೆಗಳನ್ನು ಕೊಟ್ಟು ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ ಹಾಗೂ ನವೀಕರಣವಾಗಿರುವ ಪ್ರಮಾಣಪತ್ರ ಯಾವಾಗ ತಮ್ಮ ಕೈ ಸೇರುತ್ತದೆ ಎಂದು ಕಾಯುತ್ತಾ ಕುಳಿತಿದ್ದಾರೆ. ಆದರೆ ಅವರಿಗೆ ಇಲ್ಲಿಯ ತನಕ ಅಂದರೆ ಮಾರ್ಚ್ ಅರ್ಧ ಮುಗಿದರೂ ಇನ್ನೂ ಪರವಾನಿಗೆ ನವೀಕರಣ ಮಾಡಿ ಕೊಟ್ಟೇ ಇಲ್ಲ. ಹಣ ಕಟ್ಟಿದರೂ ಚಲನ್ ಕೊಟ್ಟಿಲ್ಲ. ಹಿಂದೆ ಈ ಕೆಲಸಗಳಿಗೆ ಹೆಚ್ಚೆಂದರೆ ಒಂದು ವಾರ ಸಾಕಾಗುತ್ತಿತ್ತು. ಈಗ ಇದಕ್ಕೆ ಒಂದೂವರೆ ತಿಂಗಳು ಆದರೂ ನವೀಕರಣವಾಗಿರುವ ಪ್ರಮಾಣಪತ್ರ ಉದ್ಯಮಿಗಳ ಕೈಗೆ ಸಿಗುತ್ತಿಲ್ಲ. ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲೆ ಓಡಾಟ… ಉದ್ದಿಮೆ ಪರವಾನಿಗೆ ನವೀಕರಣ ಮಾಡುವ ಪ್ರಕ್ರಿಯೆ ಏನೂ ಕಬ್ಬಿಣದ ಕಡಲೆಕಾಯಿ ಅಲ್ಲ. ಈ ಕೆಲಸ ಹೇಗೆ ನಡೆಯುತ್ತದೆ ಎಂದು ಮೊದಲು ಅದನ್ನು ವಿವರಿಸುತ್ತೇನೆ. ಉದ್ದಿಮೆದಾರರು ಮೊದಲಿಗೆ ತಮ್ಮ ಹಿಂದಿನ ಟ್ರೇಡ್ ಲೈಸೆನ್ಸ್ ಪತ್ರ, ತೆರಿಗೆ ಕಟ್ಟಿರುವ ರಸೀದಿಯ ಪ್ರತಿಯನ್ನು ಪಾಲಿಕೆಗೆ ಸಲ್ಲಿಸಬೇಕು. ಅದರೊಂದಿಗೆ ನಿಶ್ಚಿತ ಮೊಬಲಗನ್ನು ಕೊಡಬೇಕು. ನಿಮ್ಮ ಜಾಗದ ಪರಿಶೀಲನೆ ನಡೆಸಿದ ಬಳಿಕ ಆರೋಗ್ಯ ವಿಭಾಗದಿಂದ ಚಲನ್ ಸಿಗುತ್ತದೆ. ಹಿಂದೆ ವಾರದ ಒಳಗೆ ನವೀಕರಣವಾದ ಪತ್ರ ಸಿಗುತ್ತಿದ್ದ ಕಾರಣ ಇದೊಂದು ಇಶ್ಯೂ ಆಗಿರಲಿಲ್ಲ. ಚಲನ್ ಕಟ್ಟಿ, ಟ್ರೇಡ್ ಲೈಸೆನ್ಸ್ ಪ್ರಿಂಟ್ ಉದ್ದಿಮೆದಾರರ ಕೈಯಲ್ಲಿ ಬರುತ್ತಿತ್ತು. ಆದರೆ ಈಗ ಹಾಗೆ ಆಗುತ್ತಿಲ್ಲ. ಈಗ ಹಳೆ ಟ್ರೇಡ್ ಲೈಸೆನ್ಸ್ ಪ್ರತಿ, ತೆರಿಗೆ ಕಟ್ಟಿದ ರಸೀದಿಯ ಪ್ರತಿ ಕೊಟ್ಟ ಬಳಿಕವೂ ಟ್ರೇಡ್ ಲೈಸೆನ್ಸ್ ನವೀಕರಣವಾದ ಸರ್ಟಿಫೀಕೇಟ್ ಸಿಗುವುದು ಮರೀಚಿಕೆಯಾಗುತ್ತಿದೆ. ವ್ಯಾಪಾರಿಗಳು ಪಾಲಿಕೆಗೆ ಬಂದು ಕೇಳಿದರೆ ಮೇಲಿನ ಮಹಡಿಗೆ ಹೋಗಿ ಎಂದು ಕೆಳಗೆ ಕುಳಿತವರು ಹೇಳುತ್ತಾರೆ. ಮೇಲೆ ಕೋಣೆಗಳನ್ನು ಹುಡುಕಿ ಹೋದ ನಂತರ ಇಲ್ಲಿ ಅಲ್ಲ ಅಲ್ಲಿ, ಅಲ್ಲಿ ಅಲ್ಲ ಇಲ್ಲಿ ಎಂದು ಓಡಾಡಿಸಲಾಗುತ್ತದೆ. ಒಬ್ಬ ವ್ಯಾಪಾರಿ ಎಷ್ಟು ಸಲ ಎಂದು ತನ್ನ ವ್ಯಾಪಾರವನ್ನು ಬಿಟ್ಟು ಪಾಲಿಕೆಗೆ ಓಡಿಬರುವುದು. ಆತ ಸಹಜವಾಗಿ ಆರೋಗ್ಯ ವಿಭಾಗದ ಹೆಲ್ತ್ ಇನ್ಸಪೆಕ್ಟರ್ ಗಳ ಮೊರೆ ಹೋಗುತ್ತಾನೆ. ಹೆಲ್ತ್ ಇನ್ಸಪೆಕ್ಟರ್ ಜೊತೆ ಚೆನ್ನಾಗಿದ್ದರೆ… ಹಾಗಂತ ಆರೋಗ್ಯ ವಿಭಾಗದ ಹೆಲ್ತ್ ಇನ್ಸಪೆಕ್ಟರ್ ಗಳು ತಮ್ಮ ವಾರ್ಡಿನ ತಮಗೆ ಪರಿಚಯ ಇರುವ ಮಳಿಗೆಗಳಿಂದ ತಾವೇ ದಾಖಲೆಗಳನ್ನು ಸಂಗ್ರಹಿಸಿ ಎರಡು ದಿನಗಳೊಳಗೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಿಸಿ ಪ್ರಿಂಟ್ ತಂದುಕೊಡುತ್ತಾರೆ. ಅಲ್ಲಿ ಅವರಿಗೆ ಉದ್ದಿಮೆಯ ಮಾಲೀಕರ ವಿಶೇಷವಾದ “ಪ್ರೀತಿ” ಸಿಗುವುದರಿಂದ ಅವರೇ ಮಾಡಿಸಿಕೊಡುತ್ತಾರೆ. ಅದೇ ನೀವಾಗಿ ಪಾಲಿಕೆಗೆ ಹೋದರೆ ವ್ಯಾಪಾರ ಸೆಟ್ ಮಾಡುವಾಗ ಆದ ಕಿರಿಕಿರಿಗಿಂತ ಈಗ ಉಪದ್ರವ ಜಾಸ್ತಿಯಾಗಿರುತ್ತದೆ. ಅಷ್ಟಕ್ಕೂ ಈ ಸಮಸ್ಯೆ ಶುರುವಾದದ್ದು ಹೇಗೆ ಎಂದರೆ ಉದ್ದಿಮೆದಾರರು ಪರವಾನಿಗೆಯನ್ನು ನವೀಕರಣ ಮಾಡುವಾಗ ತಮ್ಮ ವ್ಯಾಪಾರ ಮಳಿಗೆಯ ವಿಸ್ತ್ರೀರ್ಣವನ್ನು ಕಡಿಮೆ ಬರೆಯುತ್ತಾರೆ ಎಂದು ಆರೋಗ್ಯ ಅಧಿಕಾರಿಗಳು ತಾವೇ ಅಲ್ಲಿಗೆ ಹೋಗಿ ಪರಿಶೀಲನೆ ಮಾಡಿ ನಂತರ ನವೀಕರಣದ ಪ್ರಕ್ರಿಯೆ ಮಾಡಬೇಕು ಎನ್ನುವುದು ಐಡಿಯಾವಾಗಿತ್ತು. ಆದರೆ ಐಡಿಯಾ ಏನೋ ಚೆನ್ನಾಗಿದೆ. ಆದರೆ ಇದರಿಂದ ಪಾಲಿಕೆಗೆ ಏನೂ ಉಪಯೋಗವಾಗಿಲ್ಲ. ಸುಳ್ಳು ಹೇಳಿ ನವೀಕರಣ ಮಾಡಿದ ಒಬ್ಬನೇ ಒಬ್ಬ ಉದ್ದಿಮೆದಾರನನ್ನು ಪಾಲಿಕೆಯ ಅಧಿಕಾರಿಗಳು ಇಲ್ಲಿಯ ತನಕ ಹಿಡಿದಿಲ್ಲ. ಆದರೆ ಜನರಿಗೆ ಮಾತ್ರ ಇದರಿಂದ ತೊಂದರೆಯಾಗುತ್ತಿದೆ ಎನ್ನುವುದು ಸುಳ್ಳಲ್ಲ. ಒಂದೋ ನೀವು ಉದ್ದಿಮೆದಾರರಲ್ಲಿ ಕಳ್ಳರು ಇದ್ದಾರೆ ಎಂದು ಅಂದುಕೊಂಡಿದ್ದೀರಿ ಎಂದಾದರೆ ಅವರನ್ನು ಹಿಡಿಯಿರಿ ಅಥವಾ ಏನೂ ಸಿಗಲಿಲ್ಲವಾ, ಬೇರೆಯವರಿಗಾದರೂ ಸುಲಭವಾಗಿ ಕೆಲಸ ಮಾಡಿಕೊಡಿ. ನೀವು ಏನೂ ಮಾಡುತ್ತಿಲ್ಲ. ಆದರೆ ಹೆಲ್ತ್ ಇನ್ಸಪೆಕ್ಟರ್ ಗಳು ತಮಗೆ ಬೇಕಾದವರಿಗೆ ತಾವೇ ಮುಂದೆ ನಿಂತು ಮಾಡಿಕೊಡುತ್ತಿದ್ದಾರೆ. ಇದರ ಅರ್ಥ ಏನು? ಇನ್ನಾದರೂ ಪಾಲಿಕೆಯಲ್ಲಿ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಬರುವ ಜನರಿಗೆ ಅಧಿಕಾರಿಗಳು ಯಾವುದೇ ಕಿರಿಕಿರಿ ಮಾಡದೇ ಕೆಲಸ ಮಾಡಿಕೊಡಲಿ ಎಂದು ಹಾರೈಸೋಣ
ಬುದ್ಧ ಸೂಚಿಸಿದ ಧ್ಯಾನದ ಬಗೆಗಳಲ್ಲಿ ಐದು ‘ನಿತ್ಯಧ್ಯಾನ’ಗಳನ್ನು ಇಲ್ಲಿ ನೀಡಲಾಗಿದೆ. ಇವು ನಿಮ್ಮ ವ್ಯಕ್ತಿತ್ವವನ್ನು ಅರಳಿಸಿ ಆಧ್ಯಾತ್ಮಿಕ ಸ್ತರಕ್ಕೆ ಕೊಂಡೊಯ್ಯುವ ಮಾರ್ಗಗಳೂ ಆಗಿವೆ. ಮೊದಲನೆಯದು ಪ್ರೀತಿಯ ಧ್ಯಾನ. ಇದರಲ್ಲಿ ನಿಮ್ಮ ಹೃದಯದ ಹೊಂದಾಣಿಕೆ ಮಾಡಿಕೊಳ್ಳಬೇಕು. ನಿಮ್ಮ ಪಾಲಿನದು ಮಾತ್ರವಲ್ಲ; ಎಲ್ಲರ ಸುಖ, ಸಂತೋಷಗಳನ್ನು ಬಯಸಬೇಕು; ನಿಮ್ಮ ಶತ್ರುಗಳ ಆನಂದವನ್ನೂ ನೀವು ಬಯಸಬೇಕು. ಎರಡನೆಯದು ಅನುಕಂಪದ ಧ್ಯಾನ. ಸಂಕಟದಲ್ಲಿರುವ ಎಲ್ಲ ಜೀವಿಗಳನ್ನು ಕುರಿತು ನೀವು ಚಿಂತಿಸಬೇಕು; ಅವರ ದುಃಖವನ್ನು ನೀವು ಅನುಭವಿಸಲಾರಿರಿ. ಆದರೆ, ಅದನ್ನು ಕುರಿತು ಆಳವಾಗಿ ಆಲೋಚಿಸಿ, ಅರಿಯಲು ಪ್ರಯತ್ನಿಸಿ. ಅದರಿಂದ ನಿಮ್ಮ ಆತ್ಮದಲ್ಲಿ ಅವರಿಗಾಗಿ ಆಳವಾದ ಅನುಕಂಪ – ಸಹಾನುಭೂತಿ ಉಂಟಾಗುವುದು. ಮೂರನೆಯದು ಆನಂದದ ಧ್ಯಾನ. ಇಲ್ಲಿ ನೀವು ಇತರರ ಸಮೃದ್ಧಿಯನ್ನು ಕುರಿತು ಚಿಂತಿಸಬೇಕು. ಇತರರ ಸಂತೋಷದಲ್ಲಿ ನೀವು ಸಂತೋಷವನ್ನು ಕಾಣಬೇಕು. ನಾಲ್ಕನೆಯದು ಅಶುಚಿಯ ಧ್ಯಾನ. ಕೆಡುಕಿನ, ಭ್ರಷ್ಟಜೀವನದ ಕೆಟ್ಟ ಪರಿಣಾಮಗಳನ್ನು ಕುರಿತು ನೀವು ಚಿಂತಿಸಬೇಕು. ಒಂದು ಕ್ಷಣದ ಸುಖ ಎಷ್ಟು ಕ್ಷುಲ್ಲಕ; ಆದರೆ ಅದರ ಪರಿಣಾಮಗಳು ಎಷ್ಟು ಘೋರ ಎಂಬುದನ್ನು ಮನದಟ್ಟು ಮಾಡಿಕೊಂಡು. ಅವುಗಳಿಂದ ದೂರ ಉಳಿಯುವ ಸಂಕಲ್ಪ ತೊಡಬೇಕು. ಐದನೆಯದು ಶಾಂತಿಯ ಧ್ಯಾನ. ಇಲ್ಲಿ ನೀವು ಪ್ರೀತಿ – ದ್ವೇಷ, ಸರ್ವಾಧಿಕಾರ – ಸ್ವಾತಂತ್ರ್ಯ, ಬಡತನ – ಶ್ರೀಮಂತಿಕೆಗಳನ್ನು ಮೀರಿ ಉನ್ನತ ಭಾವದಲ್ಲಿರುತ್ತೀರಿ. ನಿಮ್ಮ ವಿಧಿಯನ್ನು ನೀವು ನಿಷ್ಪಕ್ಷಪಾತ ಶಾಂತಭಾವದಿಂದ, ಪರಿಪೂರ್ಣ ಶಾಂತಿಯಿಂದ ಪರಿಗಣಿಸುವಿರಿ.
ಪರಿಹಾರವೇ ಇಲ್ಲವೇನೋ ಎಂಬಂಥ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಇತಿಹಾಸದುದ್ದಕ್ಕೂ ದಿಟ್ಟ ಮತ್ತು ಸರ್ವಕಾಲಿಕ ಪರಿಹಾರ ನೀಡಿದ ನಾಡು ಬಿಹಾರ. ಸಿದ್ಧಾರ್ಥ ಗೌತಮನನ್ನು ಬುದ್ಧನನ್ನಾಗಿ, ಚಂಡ ಅಶೋಕನನ್ನು ದೇವನಾಂಪ್ರಿಯನನ್ನಾಗಿ, ಜಯಪ್ರಕಾಶರನ್ನು ಲೋಕನಾಯಕನನ್ನಾ ಗಿ ಮಾಡಿ ಸಮಸ್ತ ನಾಡಿಗೆ ಬೆಳಕು ನೀಡಿದ ನಾಡು ಬಿಹಾರ. ಆರ್ಯಭಟ, ಕೌಟಿಲ್ಯ, ಚಂದ್ರಗುಪ್ತ ಮೌರ್ಯ, ಗುರು ಗೋವಿಂದ ಸಿಂಹ ಹೀಗೆ ಸಾವಿರ ಸಾವಿರ ರತ್ನಗಳ ಖನಿ ಬಿಹಾರ. ನಳಂದದ (ನಳಂದಾ ಎಂದರೆ ಕೊನೆಯಿಲ್ಲದೆ ಮಾಡುವ ದಾನ) ವಿಶ್ವವಿದ್ಯಾಲಯದಿಂದ ಮೊದಲ್ಗೊಂಡು ಶಿಕ್ಷಣದ ಉತ್ತುಂಗವನ್ನು ಸಾಧಿಸಿದವರ, ಬೌದ್ಧ ಧರ್ಮವನ್ನು ಪ್ರಪಂಚಕ್ಕೆ ಮುಟ್ಟಿಸಿದವರ ಬಿಹಾರ ಅತ್ಯಂತ ಜಾಗೃತ ಭೂಮಿ. ನಮ್ಮ ದೇಶದ ಪ್ರತಿ ಹತ್ತು ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಬಿಹಾರದವರು. ಅನೇಕ ಪ್ರತಿಭಾವಂತ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ವಿಜ್ಞಾನಿಗಳನ್ನು ಕೊಡುಗೆ ನೀಡಿದ ಬಿಹಾರ ಇಂದು ತನ್ನ ಮುಂದಿದ್ದ ಬಹುದೊಡ್ಡ ಸವಾಲಿಗೆ ತನ್ನದೇ ಛಾತಿ ಮೆರೆದು ಉತ್ತರಿಸಿದೆ. ಬಿಹಾರ್ ರಾಜಕಾರಣದ ಹಿನ್ನೋಟ ಹಲವು ಸಾಮಾಜಿಕ, ರಾಜಕೀಯ ಚಳುವಳಿಗಳಿಗೆ ಮಡಿಲಾಗಿದ್ದ ಬಿಹಾರವನ್ನು ಸ್ವಾತಂತ್ರ್ಯಾ ನಂತರ ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿಗಳು ಬಿಹಾರದವರೇ ಅದರೂ, ರಾಜಕೀಯ ಇಚ್ಛಾ ಶಕ್ತಿ ಮತ್ತು ಒಂದು ನಿರ್ದಿಷ್ಟ ಗೊತ್ತು ಗುರಿಯಿಲ್ಲದ ನೀತಿಗಳಿಂದಾಗಿ ಬಿಹಾರವನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು. ಹಾಗೆ ನೋಡಿದರೆ ನೆಹರೂ ಸಂಪುಟದಲ್ಲಿ ಬಿಹಾರಕ್ಕ ಎರಡೇ ಸ್ಥಾನ ಸಿಕ್ಕಿದ್ದು. ಒಬ್ಬರು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸತ್ಯನಾರಾಯಣ ಸಿನ್ಹಾ ಇನ್ನೊಬ್ಬರು ಕಾರ್ಮಿಕ ಸಚಿವ ಬಾಬು ಜಗಜೀವನ ರಾಮ. ಬೌದ್ಧಿಕ ವಲಯಗಳಲ್ಲಿ ಬಿಹಾರ ಅಪಾರ ಸಾಧನೆ ಮೆರೆದಿತ್ತು. ಜಗಜೀವನ್ ರಾಮ್ ಇನ್ನೊಬ್ಬ ಬಿಹಾರದ ನಾಯಕ ಅನುಗ್ರಹ ನಾರಾಯಣ ಸಿನ್ಹಾ ಜೊತೆಗೆ ೧೯೪೭ ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ ಹೋಗಿ ಉಪನ್ಯಾಸ ನೀಡಿ ಬಂದಿದ್ದರು. ಹೀಗೆ ಬಿಹಾರದ ಪ್ರಭಾವಳಿ ಸಾಕಷ್ಟಿದ್ದರೂ, ಸಾಮಾಜಿಕ ಅಸಮಾನತೆಯ ನಿರ್ಮೂಲನೆಗೆ ಒತ್ತು ಸಿಗದ ಕಾರಣ ಬಿಹಾರದ ದಲಿತ ಮತ್ತು ಹಿಂದುಳಿದವರ ಬದುಕು ಒಂದು ದೊಡ್ಡ ಕಾರಾಗೃಹದಲ್ಲಿ ಬಂಧಿತ ಕೈದಿಗೂ ಕೀಳಾಗಿತ್ತು. ಇಡೀ ಬಿಹಾರವೇ ಒಂದು ಜೀತದ ಮನೆಯಾಗಿತ್ತು. ಬಿ ಪಿ ಮಂಡಲ್ (ಮಂಡಲ ಆಯೋಗದ ಕರ್ತ) ಕೆಲ ಸಮಯ ಮುಖ್ಯ ಮಂತ್ರಿಯಾದದ್ದು ಬಿಟ್ಟರೆ ದಲಿತ ಮತ್ತು ಹಿಂದುಳಿದವರಿಗೆ ಇಲ್ಲಿ ಅಧಿಕಾರವೇ ಸಿಗಲಿಲ್ಲ. ಆದರೆ ೧೯೭೦ ರಲ್ಲಿ ಮೊದಲ ಬಾರಿಗೆ ಅಂದಿನ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ಕರ್ಪೂರಿ ಠಾಕುರ್ ಮುಖ್ಯ ಮಂತ್ರಿಯಾದರು. ಹೆಸರಿಗೆ ಮಾತ್ರ ಠಾಕುರ್ ಆಗಿದ್ದ ಇವರು ನೈಜ ಅರ್ಥದಲ್ಲಿ ಬಿಹಾರದ ತಳಸಮುದಾಯಕ್ಕೆ ನಾಯಕತ್ವ ನೀಡಿದರು. ಲಾಲು ಪ್ರಸಾದ್, ನಿತೀಶ್, ಪಾಸ್ವಾನ್ ಸೇರಿದಂತೆ ಇಂದಿನ ಬಿಹಾರದ ಬಹುತೇಕ ದಲಿತ ಮತ್ತು ಹಿಂದುಳಿದವರ ನಾಯಕರನ್ನು ಬೆಳೆಸಿದರು. ಬಿಹಾರವನ್ನು ಮೇಲ್ಜಾತಿಗಳ ಹಿಡಿತದಿಂದ ಮುಕ್ತಿಗೊಳಿಸಿದ ಮೊದಲ ಕೀರ್ತಿ ಸಲ್ಲಬೇಕಾದದ್ದು ಜನನಾಯಕರಾದ ಕರ್ಪೂರಿಯವರಿಗೆ. ಅವರ ಸಮಾಜವಾದಿ ಗರಡಿಯಲ್ಲಿ ಬೆಳೆದ ನಾಯಕತ್ವ ೧೯೭೫ ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು. ತುರ್ತು ಪರಿಸ್ಥಿತಿಯ ವಿರೋಧಿಸಿ ಕಟ್ಟಿದ ಚಳುವಳಿಯ ಕಾವಿನಲ್ಲಿ ನೆಂದ ಬಿಹಾರದ ಜನಮಾನಸ ಮತ್ತೆ ಕರ್ಪೂರಿ ಯವರನ್ನು ನಾಯಕನನ್ನಾಗಿ ಆರಿಸಿತು. ಆದರೆ ನಂತರದಲ್ಲಿ ಬಂದ ಕಾಂಗ್ರೆಸ್ ಪಕ್ಷ ೧೯೯೦ ರ ವರೆಗೂ ಅಧಿಕಾರದಲ್ಲಿತ್ತು. ಜಗನ್ನಾಥ ಮಿಶ್ರಾ ಸರಕಾರದ ಆಡಳಿತದಿಂದ ಬೇಸತ್ತು ಹೋಗಿದ್ದ ಜನತೆ ಅಂದಿನ ಯುವ ನಾಯಕ ಲಾಲೂ ಪ್ರಸಾದರನ್ನು ಸಿಂಹಾಸನದ ಮೇಲೆ ಕೂರಿಸಿತು. ಬಾಬರಿ ಮಸೀದಿ ಕೆಡವುವ ಆಂದೋಲನದಲ್ಲಿ ಮಗ್ನವಾಗಿದ್ದವರು ಕೋಮು ದಳ್ಳುರಿ ಅಂಟಿಸಿ ಬಿಟ್ಟಿದ್ದರೂ ಅದರ ಬೇಗುದಿಯಿಂದ ಬಿಹಾರ ಬಚಾವಾಗಿತ್ತು. ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಅಡ್ವಾಣಿಯವರ ರಥಯಾತ್ರೆಯನ್ನು ತಡೆದ ಲಾಲೂ ಪ್ರಸಾದ್ ಇಂದು ಬಿಹಾರದ ಜನತೆಯ ಮಧ್ಯೆ ಮತ್ತೆ ಕಿಂಗ್ ಮೇಕರ್ ಆಗಿ ಪ್ರಸ್ತುತರಾಗಿದ್ದಾರೆ. ಬಿಹಾರದ ಚುನಾವಣಾ ಫಲಿತಾಂಶ ಬಂದ ಮೇಲೆ ನಿತೀಶ್ ಗೆಲುವಿಗೆ ಕಾರಣವಾದ ಅನೇಕಾನೇಕ ಅಂಶಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಕೆಲ ಪ್ರಮುಖ ಮಾಧ್ಯಮಗಳು ಇಡೀ ಚುನಾವಣೆಯ ಯಶಸ್ಸಿಗೆ ಪ್ರಶಾಂತ್ ಕಿಶೋರ್ ಎಂಬ ಮೋದಿಯವರ ಆಪ್ತ ವಲಯದ ಚುನಾವಣಾ ತಂತ್ರ ನಿಪುಣ ಕಾರಣ ಎಂದು ಹೊಗಳಿವೆ. ಕೆಲವರು ಜಾತಿ ಸಮೀಕರಣದ ಕಾರಣ ನೀಡಿ ಇದು ಜಾತಿ ಲೆಕ್ಕಾಚಾರಗಳ ಮೇಲಿನ ಗೆಲುವು ಎಂದಿದ್ದಾರೆ. ಒಂದು ಚುನಾವಣೆಯ ಯಶಸ್ಸು ಒಬ್ಬ ವ್ಯಕ್ತಿ ಅಥವಾ ಬರಿ ಜಾತಿ ಲೆಕ್ಕಾಚಾರಗಳ ಮೊತ್ತವಾಗಿ ನೋಡದೇ ಬಿಹಾರದ ಜನಸಾಮಾನ್ಯ ಇಷ್ಟೊಂದು ಸ್ಪಷ್ಟ ಬಹುಮತ ನೀಡಲು ಕಾರಣವಾದ ಬಹು ಮುಖ್ಯ ಆದರೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗದ ಅಂಶಗಳನ್ನು ನಾವು ಗಮನಿಸಬೇಕಿದೆ. ಲಾಲೂ ಎಂಬ ಮಾಂತ್ರಿಕ ನಮ್ಮ ಚಡ್ಡಿ ಚತುರರು ಇಂಗ್ಲೀಷ್ ಬರದ ಗಾವಂಟಿ ಗಮಾರ ಎಂದು ಬಿಂಬಿಸುವ ಲಾಲೂ ಪ್ರಸಾದ್ ಎಂಬ ಅದ್ಭುತ ಶಕ್ತಿ ಈ ಗೆಲುವಿನ ರೂವಾರಿ ಮೊದಲ ಕಾರಣ. ಲೋಕಸಭಾ ಚುನಾವಣೆಯಲ್ಲಿಯೇ ಪಾಸ್ವಾನ್ ಎಂಬ ದಲಿತ ನಾಯಕ ಬಿಜೆಪಿ ಬುಟ್ಟಿಗೆ ಬಿದ್ದಿದ್ದರು. ನಂತರದಲ್ಲಿ ಮಾಂಝಿಯವರನ್ನು ಓಲೈಸಿ ಮಹದಲಿತರನ್ನು ಸೆಳೆಯುವ ಪ್ರಯತ್ನವಾಯಿತು. ದಲಿತರ ಅಲ್ಪ ಸ್ವಲ್ಪ ಮತ ಪಡೆಯಬಲ್ಲ ಸಮರ್ಥ್ಯವಿದ್ದ ಬಿಎಸ್ಪಿ ಮತ್ತು ಎಡ ಪಕ್ಷಗಳು ಈ ಚುನಾವಣೆಗಳು ಶುರುವಾಗುವ ಮೊದಲೇ ತಾವು ಸ್ವಾತಂತ್ರ್ಯ ವಾಗಿ ಹೋರಾಟ ಮಾಡುವುದಾಗಿ ಘೋಷಿಸಿ ಬಿಟ್ಟಿದ್ದವು. ಲಾಲೂ ಅವರ ಸಮೀಪವರ್ತಿ ಪಪ್ಪು ಯಾದವರನ್ನು ಕೂಡ ಬಿಜೆಪಿ ಸೆಳೆದುಬಿಟ್ಟಿತ್ತು. ಹೀಗೆ ದಲಿತ ಮತ್ತು ಯಾದವ ಮತದಾರದ ಮಧ್ಯೆ ಬಿಜೆಪಿ ಬೇರೂರಲು ಸಾಕಷ್ಟು ಪ್ರಯತ್ನ ಮಾಡಿ ತಕ್ಕ ಮಟ್ಟಿಗೆ ಸಫಲವಾಯಿತು. ಇವ್ಯಾವುದನ್ನೂ ಲಕ್ಷಿಸದ ಲಾಲೂ ಬಿಹಾರದ ಅಸಲಿ ಸಂಘಟನಾ ಸಾಮರ್ಥ್ಯ ಮೆರೆದರು. ಬಿಹಾರದ ಹೃದಯವನ್ನು ಬಲ್ಲ ಲಾಲೂ ತಮ್ಮ ಸಂಪೂರ್ಣ ಶಕ್ತಿಯನ್ನು ಪಣಕ್ಕೆ ಒಡ್ಡಿ ಪರಿಹರಿಸಲು ಸಾಧ್ಯವೇ ಇಲ್ಲದ ಸವಾಲುಗಳನ್ನು ಸ್ವೀಕರಿಸಿದರು. ನಿತೀಶ್ ರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಸಮರ್ಥನೆಯನ್ನೂ ಪಡೆದರು. ಸೋನಿಯಾ ಮತ್ತು ರಾಹುಲ್ರನ್ನು ಎಷ್ಟು ಬೇಕೋ ಅಷ್ಟೇ ಪ್ರಯೋಗಿಸಿದ ಲಾಲೂ ಸಂಪೂರ್ಣವಾಗಿ ಚುನಾವಣೆಯನ್ನು ಬೇರುಮಟ್ಟದ ಸಂಘಟನೆಯ ಭಾರ ಹೊತ್ತರು. ಅಪ್ರತಿಮ ವಾಗ್ಮಿ ಮತ್ತು ಮನಸೆಳೆಯುವ ಮಾತುಗಳಿಗೆ ಹೆಸರಾದ ಲಾಲೂ ಚುನಾವಣೆಯ ಮೊದಲು ಮತ್ತು ನಂತರದಲ್ಲಿ ನಡೆದ ಯಾವುದೇ ಭಾಷಣ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ನಿತೀಶ್ ತಮ್ಮ ಜೊತೆಗಿದ್ದರೆ ಮೊದಲ ಪ್ರಾಶಸ್ತ್ಯ ನಿತೀಶ್ ಗೇ ನೀಡಿದರು. ಸೀಟು ಹೊಂದಾಣಿಕೆಯಲ್ಲಿ ನಿತೀಶ್ ಮತ್ತು ಲಾಲೂ ತಾದಾತ್ಮ್ಯ ಅನುಕರಣೀಯ ವಾಗಿತ್ತು. ಸಣ್ಣ ಪುಟ್ಟ ಸ್ಥಳೀಯ ಗಲಾಟೆಗಳನ್ನು ಸಮರ್ಥವಾಗಿ ಲಾಲೂ ನಿಭಾಯಿಸಿದರು. ನಿತೀಶ್ ಎಂಬ ಮೌನ ಸಾಧಕ ಎರಡನೇ ಬಹು ಮುಖ್ಯ ಅಂಶ ನಿತೀಶ್ ಆಡಳಿತಾವಧಿಯಲ್ಲಿನ ಅವರ ಅದ್ಭುತ ಸಾಧನೆ. ಎಲೆಕ್ಟ್ರಿಕಲ್ ಎಂಜಿನೀರಿಂಗ್ ಪದವೀಧರ ನಿತೀಶ್ ಭಾರತೀಯ ತಾಂತ್ರಿಕ ಸೇವೆಯಲಿದ್ದು ನಂತರ ರಾಜಕೀಯಕ್ಕೆ ಹೊರಳಿದವರು. ನಿತೀಶ್ ಅತ್ಯಧ್ಭುತ ಪ್ರತಿಭಾವಂತ ಆಡಳಿತಗಾರ. ೨೦೦೯ ರಲ್ಲಿ ಲೋಕಪಾಲದ ಸುದ್ದಿಯೇ ಇಲ್ಲದಾಗ ಅತ್ಯಂತ ಪುರೋಗಾಮಿ ಬಿಹಾರ ವಿಶೇಷ ನ್ಯಾಯಾಲಯಗಳ ಕಾಯಿದೆ, ೨೦೦೯ ನ್ನು ಜಾರಿಗೆ ತಂದು ಸದ್ದಿಲ್ಲದೇ ಬ್ರಷ್ಟಾಚಾರವನ್ನು ಮಟ್ಟ ಹಾಕಿದರು. ಬ್ರಷ್ಟ ಅಧಿಕಾರಿಗಳ ಮನೆಗಳನ್ನು ಜಪ್ತಿ ಮಾಡಿ ಶಾಲೆ, ಆಸ್ಪತ್ರೆ, ಗ್ರಂಥಾಲಯ ಮತ್ತು ಸಮುದಾಯ ಭವನಗಳನ್ನಾಗಿ ಪರಿವರ್ತಿಸಿಬಿಟ್ಟರು. ಬಿಹಾರ ಅರ್ಥಿಕ ಪ್ರಗತಿಯ ಹೊಸ ಮೈಲುಗಲ್ಲು ಮೀಟಿತು. ನಿತೀಶ್ ಹಳ್ಳಿ ಹಳ್ಳಿ ಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ ಶಾಲೆ ಮತ್ತು ಉದ್ಯೋಗ ಪಸರಿಸಿದರು. ಹೆಣ್ಣು ಮಕ್ಕಳಿಗೆ ಉಚಿತ ಸಮವಸ್ತ್ರ, ಸೈಕಲ್ ಮತ್ತು ವಿದ್ಯಾರ್ಥಿ ವೇತನ ಜಾರಿ ಮಾಡಿದರು. ಮಧ್ಯಾಹ್ನದ ಊಟ ಯೋಜನೆ ಅತ್ಯಂತ ಸಮರ್ಪಕವಾಗಿ ಜಾರಿ ಮಾಡಿದರು. ಆರು ಗಂಟೆಯ ಮೇಲೆ ಹೆಣ್ಣುಮಕ್ಕಳು ಹೋಗಲಿ ಗಂಡಸರೇ ಮನೆಯಿಂದ ಹೊರಬರುವ ಪ್ರಮೇಯವಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ನಿತೀಶ್ ಈ ಚಿತ್ರಣ ಬದಲಿಸಿಬಿಟ್ಟರು. ಕಾನೂನು ಸುವ್ಯವಸ್ಥೆ ಸ್ಥಾಪನೆಯಾದ ನಂತರದಲ್ಲಿ ಬಿಹಾರದ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾನ್ವಿತ ವರ್ಗ ಭಾರತದ ಮತ್ತು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದು ಬಿಹಾರದಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯಾಪಾರ ಕೈಗೊಂಡರು. ೨೦೧೩ ರಲ್ಲಿ ವಾಣಿಜ್ಯ ಸಂಸ್ಥೆ ಬಿಹಾರ ಮತ್ತು ಗುಜರಾತ್ ಮಧ್ಯೆ ಹೋಲಿಕೆ ಮಾಡಿ ಒಂದು ವರದಿ ಮಾಡಿತು. ಈ ವರದಿಯ ಪ್ರಕಾರ ಗುಜರಾತ್ ಖಾಸಗಿ ವಲಯಕ್ಕೆ ಮಣೆ ಹಾಕಿ ಬಂಡವಾಳ ಹೂಡಿಸಿ ಲಾಭ ಮಾಡಿಸಿದ್ದರೆ, ಬಿಹಾರದಲ್ಲಿ ಸರಕಾರವೇ ಅಗತ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಲಾಭ ಜನರಿಗೇ ದಕ್ಕುವಂತೆ ಮಾಡಿತ್ತು. ಬಡವರ ಹೊಟ್ಟೆ ಮೇಲೆ ಹೊಡೆದು ಭೂಮಿ ವಶಪಡಿಸಿಕೊಳ್ಳದೇ, ಯಾವುದೇ ಅಬ್ಬರದ ಪ್ರಚಾರ ವಿಲ್ಲದೆ, ಸೇಡು ದ್ವೇಷದ ರಾಜಕಾರಣ ಮಾಡದೇ ನಿತೀಶ್ ಅತ್ಯಧ್ಭುತವನ್ನು ಸಾಧಿಸಿ ತೋರಿಸಿದ್ದರು. ಲಾಲೂ ಬಗ್ಗೆ ಅಲ್ಲಲ್ಲಿ ಅಸಮಾಧಾನವಿದ್ದ ಮೇಲ್ವರ್ಗ ಕೂಡ ನಿತೀಶ್ ಎಂದರೆ ಗೌರವಿಸುತ್ತಿತ್ತು. ಮೋದಿಯವರು ನಿತೀಶ್ರ ಕುರಿತು ವಯಕ್ತಿಕ ಟೀಕೆ ಮಾಡಿದಾಗ ನಿತೀಶ್ ಆಡಳಿತದ ಸಮಬಾಳ್ವೆಯ ಮಹತಿ ಅರಿತಿದ್ದ ಈ ವರ್ಗ ತನ್ನ ಸೇಡು ತೀರಿಸಿಕೊಂಡಿತು. ಕೇಂದ್ರದ ಕುರಿತ ಹತಾಶೆ ಮೂರನೆಯ ಕಾರಣ, ಬಿಹಾರದ ಜನತೆಗೆ ಮೋದಿ ಆಡಳಿತದ ಕುರಿತು ಆದ ತೀವ್ರ ಹತಾಶೆ. ಲೋಕಸಭಾ ಚುನಾವಣೆಯಲ್ಲಿ ನಲವತ್ತರಲ್ಲಿ ಮೂವತ್ತೊಂದು ಸ್ಥಾನ ಗೆದ್ದ ಬಿಜೆಪಿಯಿಂದ ಜನತೆಗೆ ಅಪಾರ ನಿರೀಕ್ಷೆಗಳಿದ್ದವು. ಬಿಹಾರ ಆರ್ಯಭಟನ ನಾಡು ಇಲ್ಲಿಯ ಜನಸಾಮಾನ್ಯರೂ ಗಣಿತದಲ್ಲಿ ಮಹಾ ಪ್ರಕಾಂಡರು! ಮೋದಿಯವರ ಲೋಕ ಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಪ್ಯಾಕೇಜ್ ನ ಒಂದೊಂದು ರೂಪಾಯಿಯ ಲೆಕ್ಕವನ್ನೂ ಬಾಯಲ್ಲೇ ಹೇಳುವಷ್ಟು ಬುದ್ಧಿವಂತರು. ಇವರ ನಿರೀಕ್ಷೆಗಳು ಸಂಪೂರ್ಣ ಸುಳ್ಳಾಗಿ ಜನಜೀವನ ಇನ್ನಷ್ಟು ದುರ್ಭರವಾದಾಗ ಮೋದಿಯವರ ಮೂವತ್ತೈದು ಸಭೆಗಳ ಸೇಡುಭರಿತ ವಯಕ್ತಿಕ ಟೀಕೆಭರಿತ ಭಾಷಣಗಳು ಜನತೆಗೆ ಕರ್ಕಶ ಶಬ್ದದಂತೆ ಕೇಳಿಸಿದವು. ನಿತೀಶ್ ಲಾಲೂ ಜೋಡಿಯ ಬಿಹಾರದ ಗೆಲುವಿಗೆ ದೀರ್ಘಕಾಲೀನ ಐತಿಹಾಸಿಕ ಕಾರಣಗಳಿವೆ. ಬರಿ ಪ್ರಚಾರ ವೈಖರಿ, ಸೇಡಿನ ಭಾಷಣ, ಒಬ್ಬ ವ್ಯಕ್ತಿಯ ಚಾತುರ್ಯ ಯಾವ ಚುನಾವಣೆಯನ್ನು ಗೆಲ್ಲಿಸಲೂ ಸಾಧ್ಯವಾಗದು. ಕೋಮು ಭಾವನೆಗಳ ತಿರಸ್ಕಾರ ಇನ್ನೊಂದು ಕಾರಣ ಬಿಹಾರದ ಮತದಾರ MIM ನಂಥಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳ ಬಗ್ಗೆ ಸ್ಪಷ್ಟತೆ ಮೆರೆದದ್ದು. ನಿತೀಶರ ಒಂದು ಕಾಲದ ಬಿಜೆಪಿ ಮೈತ್ರಿಯನ್ನು ಮುಂದಿಟ್ಟು ಮುಸ್ಲಿಮರಿಗೆ ತಮ್ಮದೇ ಜನಾಂಗದ ನಾಯಕತ್ವದ ನೆಲೆ ಬೇಕು ಎಂದು ಪ್ರಚಾರ ಮಾಡಿ ಒಂದು ಒಕ್ಕೂಟದ ಭಾಗವಾಗಿ ಸ್ಪರ್ಧಿಸಿದ ಪಪ್ಪು ಮತ್ತು ಒವೈಸಿಗಳು ಗಾಳಿಯಲ್ಲಿ ತೂರಿಹೊಗಿದ್ದಾರೆ. ಮಹಾರಾಷ್ಟ್ರದಲ್ಲಾದಂತೆ ಮುಸ್ಲಿಂ ಮೂಲಭೂತವಾದಿ ಪಕ್ಷ MIM ಗೆ ಯಾವ ಬೆಂಬಲವೂ ಸಿಕ್ಕಿಲ್ಲ. ‘ಅತಿಂ ಸರ್ವತ್ರ ವರ್ಜಯೇತ್’ ಎಂಬಂತೆ ಹಿಂದೂ ಮತ್ತು ಮುಸ್ಲಿಂ ಕೋಮುವಾದಕ್ಕೆ ಬಲಿಯಾಗದೇ ಬಿಹಾರದ ಜನತೆ ತಮ್ಮ ಬೌದ್ಧಿಕ ಮತ್ತು ನೈತಿಕ ಬಲ ಪ್ರದರ್ಶಿಸಿದ್ದಾರೆ. ತಮ್ಮ ವೋಟು ಒಡೆಯಲು ಮಾಡಿದ ಸಂಚನ್ನು ಮತದಾರರು ತುಂಬಾ ಸರಿಯಾಗಿ ಗ್ರಹಿಸಿದರು. ಗೋವನ್ನು ಬಳಸಿ ಸಮಾಜವನ್ನು ಕೋಮು ಆಧಾರದ ಮೇಲೆ ಒಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ. ಶರದ್ ಯಾದವ್ ಎಂಬ ಮುತ್ಸದ್ದಿ ಇನ್ನೊಂದು ಮುಖ್ಯ ಕಾರಣ ರಾಷ್ಟ್ರ ಮಟ್ಟದಲ್ಲಿ ಮೀಡಿಯಾ ಮತ್ತು ಬುದ್ಧಿಜೀವಿಗಳನ್ನು ತಮ್ಮೊಂದಿಗೆ ಸೆಳೆಯಲು ಸಮರ್ಥರಾದ ಜೆಡಿಯು ಅಧ್ಯಕ್ಷರಾದ ಶರದ್ ಯಾದವ್. ಇವರು ಇಂಜಿನಿಯರಿಂಗ್ ಪದವಿಯಲ್ಲಿ ಸ್ವರ್ಣ ಪದಕ ಪಡೆದ ಪ್ರತಿಭಾವಂತ. ಇವರ ನಿರೀಕ್ಷೆ ಎಷ್ಟು ನಿಖರವಾಗಿತ್ತೆಂದರೆ ಚುನಾವಣಾ ಫಲಿತಾಂಶ ಬರುವ ಕೆಲವೇ ದಿನಗಳ ಮೊದಲು ಶರದ್ ಯಾದವ್ ತಮಗೆ ೧೫೦ ಸ್ಥಾನಗಳು ಖಚಿತ ಎಂದು ನುಡಿದಿದ್ದರು. ನಿತೀಶ ಗಿಂತ ಸಾಕಷ್ಟು ಹಿರಿಯರೂ ಆದ ಇವರು ನಿತೀಶ್ ನೇತೃತ್ವವನ್ನು ಶರತ್ತಿಲ್ಲದೇ ಒಪ್ಪಿ ಒಬ್ಬ ನೈಜ ಮುತ್ಸದ್ದಿಯಂತೆ ಕಾರ್ಯ ನಿರ್ವಹಿಸಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಗೌರವ ತಂದು ಕೊಟ್ಟರು. ಮಮತೆಯ ಕರೆಯೋಲೆ ಒಂದು ಚಿಕ್ಕ ಆದರೆ ಕಡೆಗಣಿಸಲು ಆಗದ ಅಂಶವೆಂದರೆ, ಮಮತಾ ಬ್ಯಾನರ್ಜಿ ಬಿಹಾರದ ಜನತೆಗೆ ಮಹಗಠ ಬಂಧನದ ಪರ ನಿಲ್ಲಲು ಕರೆ ಕೊಟ್ಟರು. ಸೀಮಂಚಲವೆಂದು ಕರೆಯಲ್ಪಡುವ ಪುರ್ನಿಯ, ಕಟಿಹಾರ್, ಕಿಷೆನ್ ಗಂಜ್, ಅರಾರಿಯ, ಮಿಥಿಲ ಪ್ರಾಂತ ಗಳಲ್ಲಿ ಸಾಕಸ್ಟು ಸಂಖ್ಯೆಯಲ್ಲಿರುವ ಬಂಗಾಳಿಗಳು ಲಾಲೂ ನಿತೀಶ್ ಪರ ನಿಂತರು. ಜಾತ್ಯತೀತ ವೋಟಿನ ವಿಭಜನೆಯಾಗದಂತೆ ತಡೆಯುವಲ್ಲಿ ಕೆಜ್ರಿವಾಲ್ ಮತ್ತು ಮಮತಾ ಬೆಂಬಲ ರಾಷ್ಟ್ರೀಯ ವಾಗಿಯೂ ಮಹತ್ತರವಾಗಿತ್ತು. ಬಿಹಾರದ ಚುನಾವಣಾ ರಂಗ ಸಮಾನ ಮನಸ್ಕರನ್ನು ಒಂದು ಮಾಡಿತು. ಕಾಂಗ್ರೆಸ್ ಪುನರುಜ್ಜೀವನ ಕಾಂಗ್ರೆಸ್ ಪ್ರಚಾರವನ್ನು ಸಾಕಷ್ಟು ಕಡಿಮೆ ಗೊಳಿಸಿದ ಬಿಹಾರದ ಸ್ಥಳೀಯ ನಾಯಕತ್ವ ಅನಗತ್ಯ ಗೊಂದಲಗಳನ್ನು ನಿವಾರಿಸಿತು. ರಾಹುಲ್ ಭಾಷಣದ ಟೀಕೆ, ಸೋನಿಯಾರ ಭಾಷೆಯ ಕುರಿತು ಅನಗತ್ಯ ವಿವಾದ ಇತ್ಯಾದಿ ಇಲ್ಲಿ ಕಾಣಸಿಗಲೇ ಇಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಮರುಜೀವ ಪಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ವೋಟು ಸಿಗದೇ ಹೋಗಬಹುದು ಆದರೆ ಕಾಂಗ್ರೆಸ್ಸಗೆ ಅಲ್ಲಿ ಬಹು ದೊಡ್ಡ ಸಂಘಟನೆಯಿದೆ. ಇದರ ಸಂಪೂರ್ಣ ಲಾಭ ಈ ಬಾರಿ ದಕ್ಕಿದೆ. ಪ್ಯಾಕೇಜ್ ಮರೆಯದಿರಲಿ ಇನ್ನೊಂದು ಮಾತು. ಜನರು ತಮ್ಮ ನಾಯಕರ ಗುಣಾವಗುಣಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಕಡೆ ತುಂಬಾ ನಿರೀಕ್ಷೆ ಇಟ್ಟುಕೊಂಡ ಒಬ್ಬ ಪ್ರಧಾನ ಮಂತ್ರಿಯವರು ರಾಜಕೀಯ ವಿರೋಧಿಗಳ ಕುಟುಂಬ, ಮಕ್ಕಳು ಇತ್ಯಾದಿಗಳ ಕುರಿತು ಟೀಕೆ ಮಾಡುತ್ತಿದ್ದಾರೆ, ಒಬ್ಬ ನೈಜ ಮುತ್ಸದ್ದಿಯ ಮಾದರಿಯಲ್ಲಿ ಯಾವುದಕ್ಕೂ ತೀಕ್ಷ್ಣವಾಗಿ ಮತ್ತು ವಯಕ್ತಿಕ ಮಟ್ಟಕ್ಕಿಳಿದು ಪ್ರತಿಕ್ರಯಿಸದ ಲಾಲೂ-ನಿತೀಶರನ್ನೂ ಮೌನವಾಗಿ ತುಲನೆ ಮಾಡುತ್ತಿತ್ತು. ಜನತೆಯ ತೀರ್ಮಾನ ಈಗ ದೇಶದ ಮುಂದಿದೆ. ತಮ್ಮ ಒಂದು ಕಾಲದ ಬಲಗೈ ಬಂಟ ಪಪ್ಪು ಯಾದವ್ ಮತ್ತವರ ಹೆಂಡತಿಯ ತಮ್ಮ ಸುಭಾಷ್ ಯಾದವ್ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ‘ಲಾಲು ಸುಮ್ಮನೇ ವೋಟು ಒಡೆಯಲು ಕಣದಲ್ಲಿದ್ದಾರೆ; ಗೆಲವು ಖಂಡಿತಾ ನಮ್ಮದೇ ಎಂದಾಗ’, ಲಾಲೂ ಅವರಿಗೆ ಸೊಪ್ಪು ಕೂಡ ಹಾಕಲಿಲ್ಲ. ಮೋದಿಯವರು ಅತಿಯಾಗಿ ಕೆಣಕಿದಾಗ ಮಾತ್ರ ಲಾಲೂ ಮೋದಿಯವರಿಗೆ ತಾಕತ್ತಿದ್ದರೆ ತಮ್ಮೊಂದಿಗೆ ಇಂಗ್ಲಿಷ್ ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು. ಈ ಸವಾಲನ್ನು ಮೋದಿಯವರು ಸ್ವೀಕರಿಸುವ ಔದಾರ್ಯ ತೋರಲಿಲ್ಲವೇಕೋ? ಬಿಹಾರದ ಗೆಲುವು ಮೈಮರೆಸಬಾರದು. ಜನತೆಯ ಹೆದರಿಕೆ ಬರುವಷ್ಟು ಅಪಾರ ಪ್ರಮಾಣದ ನಿರೀಕ್ಷೆ ನೋಡಿದರೆ ನಿತೀಶ್ ರ ಜವಾಬ್ದಾರಿ ಎಷ್ಟು ದೊಡ್ಡದು ಎಂದು ಗೋಚರವಾಗುತ್ತದೆ. ಹಾಗೆಯೇ, ನಿತೀಶರನ್ನು ಒಬ್ಬ ವೈರಿಯಂತೆ ಕಾಣದೇ ಈ ದೇಶದ ಪ್ರಧಾನಿಗಳು ತಾವು ಆಶ್ವಾಸನೆ ನೀಡಿದಂತೆ ಬಿಹಾರದ ಜನತೆಗೆ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೊಟ್ಟು ಒಬ್ಬ ನೈಜ ಮುತ್ಸದ್ದಿಯಂತೆ ನಡೆದುಕೊಳ್ಳಬೇಕು. ಲಾಲೂ ಅವರೊಂದಿಗೆ ಇಂಗ್ಲಿಷ್ ಸಂವಾದದ ಸವಾಲು ಮರೆತರೂ ಪರವಾಗಿಲ್ಲ ಮೂವತ್ತೊಂದು ಸಂಸದರನ್ನು ತಮಗೆ ಕೊಟ್ಟ ಬಿಹಾರದ ಅಭಿವೃದ್ಧಿಯ ಪ್ಯಾಕೇಜ್ ಮಾತ್ರ ಮರೆಯಬಾರದು. ಬುದ್ಧ ನಕ್ಕ ನಾಡು ಬಿಹಾರ ಹೌದಾದರೂ, ಮಾತಿಗೆ ತಪ್ಪಿದರೆ, ಪಾಟಲಿಪುತ್ರದ ಚಾಣಕ್ಯನ ಮಾದರಿ ಸೇಡು ತೀರಿಸದೆ ಸುಮ್ಮನಿರುವ ಜಾಯಮಾನದ್ದಲ್ಲ! This entry was posted in ಆರ್ಥಿಕ, ಮಾಧ್ಯಮ, ರಾಜಕೀಯ, ಶ್ರೀಧರ್ ಪ್ರಭು, ಸಾಮಾಜಿಕ on November 13, 2015 by admin. Post navigation ← ಶಾಂತಿ ಕದಡುವವರ ಮಧ್ಯೆ ನೆಮ್ಮದಿಯನ್ನು ಕನವರಿಸುತ್ತಾ… ಸಾಮಾಜಿಕ ಜಾಲತಾಣ ಹಾಗೂ ಮುಸ್ಲಿಮ್ ಮಹಿಳೆಯರ ಪ್ರಾತಿನಿಧ್ಯ → 27 thoughts on “ಪ್ರತಿ ಸವಾಲಿಗೂ ಸಿದ್ಧ ಉತ್ತರ – ಬುದ್ಧ-ಚಾಣಕ್ಯರ ಬಿಹಾರ” ಸೀತಾ November 13, 2015 at 3:15 pm ಲಾಲೂ-ನಿತೀಶ್ ಜೋಡಿಯ ವಿಜಯದ ಅಸಲೀ ರೂವಾರಿಗಳಾದ ಬಿಹಾರದ ಮತದಾರರಿಗೆ ಅಭಿನಂದನೆಗಳು. ಈ ಗೆಲುವಿನ ಲಾಭವನ್ನು ಲಾಲೂ-ನಿತೀಶ್ ಜೋಡಿ ಇನ್ನೈದು ವರ್ಷಗಳ ಕಾಲ ಪಡೆಯುವಾಗ ಮತದಾರರನ್ನು ಮರೆಯದಿರಲಿ. Reply ↓ Ananda Prasad November 13, 2015 at 4:45 pm ಬಿಹಾರದ ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಸಲ ನಿಜವಾದ ಫಲಿತಾಂಶಕ್ಕೆ ಹತ್ತಿರದ ಸಮೀಕ್ಷೆ ನೀಡುತ್ತೇವೆ ಎಂಬ ಹೆಗ್ಗಳಿಕೆ ಹೊಂದಿದ್ದ ಚಾಣಕ್ಯದ ಸಮೀಕ್ಷೆ ಸಂಪೂರ್ಣ ತಿರುವುಮುರುವಾಯಿತು. ಚಾಣಕ್ಯದ ಚುನಾವಣೋತ್ತರ ಸಮೀಕ್ಷೆ ಈ ಬಾರಿ ಬಿಜೆಪಿ ಮೈತ್ರಿಕೂಟಕ್ಕೆ ೧೫೫ ಸೀಟುಗಳನ್ನು ನೀಡಿತ್ತು ಆದರೆ ನಿಜವಾದ ಫಲಿತಾಂಶ ಬಂದಾಗ ಇದರಿಂದ ಹತ್ತಿರ ಹತ್ತಿರ ನೂರು ಸೀಟುಗಳನ್ನು ಕಳೆಯಬೇಕಾಗಿ ಬಂತು. ಅತಿ ನಂಬಿಕೆಯ ಸಮೀಕ್ಷೆ ಎಂಬ ಗರಿಯನ್ನು ಮುಡಿಗೇರಿಸಿಕೊಂಡವರ ಸಮೀಕ್ಷೆ ಈ ರೀತಿ ತಲೆಕೆಳಗಾದರೆ ಇವರ ವಿಶ್ವಾಸಾರ್ಹತೆ ಹೇಗೆ ಉಳಿದೀತು? ದೇಶಾದ್ಯಂತ ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು, ಕಲಾವಿದರು ದೇಶದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ವಿರುದ್ಧ ಸೌಮ್ಯ ಪ್ರತಿಭಟನೆಯ ರೂಪದಲ್ಲಿ ಪ್ರಶಸ್ತಿ ವಾಪಸ್ ಮಾಡಿದ ವಿದ್ಯಮಾನ ಚುನಾವಣಾ ಫಲಿತಾಂಶದ ಮೇಲೆ ಖಚಿತವಾಗಿಯೂ ಪ್ರಭಾವ ಬೀರಿದೆ. ಅಧಿಕಾರದ ಅಮಲಿನಲ್ಲಿ ಬಿಜೆಪಿ ಇದನ್ನು ಕಾಂಗ್ರೆಸ್ ಸಾಹಿತಿಗಳ ಪ್ರತಿಭಟನೆ ಎಂದು ರಾಜಕೀಯಕರಣಗೊಳಿಸಿದರೂ, ಲೇವಡಿ ಮಾಡಿದರೂ ಪ್ರಶಸ್ತಿ ವಾಪಸ್ ಮಾಡಿದವರು ನೈಜ ಕಾಳಜಿಯಿಂದ ಮಾಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಪ್ರಶಸ್ತಿ ವಾಪಾಸ್ ಮಾಡಿದ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಹಾಗೂ ಈ ಕುರಿತು ದನಿಯೆತ್ತಿದವರು ಪ್ರಗತಿಪರ, ಮಾನವೀಯ ಕಾಳಜಿಯ, ಉದಾರವಾದಿ ವ್ಯಕ್ತಿತ್ವ ಹೊಂದಿದವರು. ಪ್ರಪಂಚದ ಸಾಹಿತಿಗಳು, ವಿಜ್ಞಾನಿಗಳು, ಚಿಂತಕರಲ್ಲಿ ಬಹುತೇಕರು (ಶೇಕಡಾ ೯೦ಕ್ಕೂ ಅಧಿಕ) ಪ್ರಗತಿಪರ ಚಿಂತನೆ ಹೊಂದಿದವರೇ ಆಗಿದ್ದಾರೆ ಮತ್ತು ಅವರು ಇರಬೇಕಾದುದು ಕೂಡಾ ಹಾಗೆ ಏಕೆಂದರೆ ಅವರಿಗೆ ಉಳಿದ ಜನಸಾಮಾನ್ಯರಿಗಿಂತ ಹೆಚ್ಚಿನ ಪ್ರತಿಭೆ, ಚಿಂತನಾಶಕ್ತಿ ಇರುತ್ತದೆ. ಹೀಗಾಗಿ ಬುದ್ಧಿಜೀವಿಗಳು ಜನಸಾಮಾನ್ಯರಂತೆ ಸಂಕುಚಿತ ಮನೋಭಾವದಿಂದ ಚಿಂತಿಸಲು ಸಾಧ್ಯವಿಲ್ಲ. ಹೀಗಾಗಿಯೇ ಪ್ರಪಂಚದಾದ್ಯಂತ ಬುದ್ಧಿಜೀವಿಗಳ ಚಿಂತನೆಗಳಿಗೆ ಮಾನ್ಯತೆ ಇದೆ. ನಾಗರಿಕತೆ, ವಿಜ್ಞಾನ, ಸಾಹಿತ್ಯ, ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲು ಬುದ್ಧಿಜೀವಿಗಳ ಚಿಂತನೆಗಳೇ ಮೂಲಾಧಾರ ಎಂಬುದು ಎಲ್ಲರೂ ತಿಳಿಯಬೇಕಾದ ಅಗತ್ಯ ಇದೆ. ಮೋದಿಯವರು ವಿದೇಶಗಳಲ್ಲಿ ಹೋಗಿ ನಮ್ಮದು ಗಾಂಧಿ ಹಾಗೂ ಬುದ್ಧನ ನಾಡು ಎಂದು ತಾವು ಒಬ್ಬ ಉದಾರವಾದಿ ನಾಯಕನಂತೆ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಆದರೆ ದೇಶದೊಳಗೆ ಅದನ್ನು ಪಾಲಿಸುವುದಿಲ್ಲ. ಹೀಗಾಗಿಯೇ ದೇಶದ ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು ತಮ್ಮ ಪ್ರಶಸ್ತಿ ವಾಪಸ್ ಮಾಡುವಂಥ ಗಂಭೀರ ಪ್ರತಿಭಟನೆಗೆ ಇಳಿದಿದ್ದಾರೆ. ಬಿಹಾರದಲ್ಲಿ ನಡೆದ ಚುನಾವಣೆಗಳಲ್ಲಿ ಜನ ಮೋದಿ ನೇತೃತ್ವದ ಸರ್ಕಾರದ ವಿಫಲತೆಗೆ ಪ್ರತಿಫಲವಾಗಿ ತಮ್ಮ ಸಿಟ್ಟನ್ನು ತೋರಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಮೋದಿ ಸರ್ಕಾರ ತಾನು ಅಧಿಕಾರಕ್ಕೆ ಬರುವ ಮೊದಲು ನೀಡಿಯ ಯಾವ ಆಶ್ವಾಸನೆಗಳನ್ನೂ ಪೂರೈಸಿಲ್ಲ. ಇದರಿಂದ ಜನಸಾಮಾನ್ಯರು ಸಿಟ್ಟುಗೊಂಡಿದ್ದಾರೆ ಹಾಗೂ ಅವರ ಜೀವನ ಯುಪಿಎ ೨ ಸರ್ಕಾರದ ಅವಧಿಗಿಂತ ಹೆಚ್ಚು ದುರ್ಬರವಾಗಿದೆ. ಈ ಸಿಟ್ಟು ಬಿಹಾರದ ಚುನಾವಣೆಗಳಲ್ಲಿ ವ್ಯಕ್ತವಾಗಿದೆ. ಇಲ್ಲದಿದ್ದರೆ ಯಾರನ್ನು ಭ್ರಷ್ಟ ಹಾಗೂ ಜಂಗಲ್ರಾಜ್ ಜನಕ ಎಂದು ಮೋದಿ ಹಂಗಿಸಿದ್ದರೋ ಅಂಥ ಲಾಲೂ ಪಕ್ಷವನ್ನೇ ಅತಿ ದೊಡ್ಡ ಪಕ್ಷವಾಗಿ ಜನ ಚುನಾಯಿಸುತ್ತಿರಲಿಲ್ಲ. ಮೋದಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಡಾಲರ್ ವಿರುದ್ಧ ರೂಪಾಯಿ ದರ ಏರಲು ಕಾಂಗ್ರೆಸ್ ನೇತೃತ್ವದ ಸರ್ಕಾರದ ಅರ್ಥಿಕ ನೀತಿಯೇ ಕಾರಣ ಎಂದು ಹರಿಹಾಯ್ದಿದ್ದರು. ಮೋದಿ ಅಧಿಕಾರ ವಹಿಸಿಕೊಂಡಾಗ ಡಾಲರ್ ವಿರುದ್ಧ ರೂಪಾಯಿ ದರ ೫೯-೬೦ ರೂಪಾಯಿ ಆಸುಪಾಸು ಇತ್ತು. ಈಗ ಡಾಲರ್ ವಿರುದ್ಧ ರೂಪಾಯಿ ದರ ೬೬ ರೂಪಾಯಿಗೆ ಏರಿದೆ. ಇದರ ಪರಿಣಾಮವಾಗಿ ಆಮದು ವಸ್ತುಗಳ ಬೆಲೆ ಹೆಚ್ಚುತ್ತದೆ. ಈಗ ಡಾಲರ್ ವಿರುದ್ಧ ರೂಪಾಯಿ ದರ ಹೆಚ್ಚಲು ಯಾರು ಕಾರಣ ಎಂದು ಮೋದಿ ಹೇಳುತ್ತಾರೆ? Reply ↓ ಸೀತಾ November 14, 2015 at 3:29 pm “ದೇಶಾದ್ಯಂತ ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು, ಕಲಾವಿದರು ದೇಶದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ವಿರುದ್ಧ ಸೌಮ್ಯ ಪ್ರತಿಭಟನೆಯ ರೂಪದಲ್ಲಿ ಪ್ರಶಸ್ತಿ ವಾಪಸ್ ಮಾಡಿದ ವಿದ್ಯಮಾನ ಚುನಾವಣಾ ಫಲಿತಾಂಶದ ಮೇಲೆ ಖಚಿತವಾಗಿಯೂ ಪ್ರಭಾವ ಬೀರಿದೆ.” ಹೌದು ಆನಂದ ಪ್ರಸಾದ್, ಇವರೆಲ್ಲಾ ಎಡಪಂಥೀಯರು ಹಾಗೂ ಕಾಂಗ್ರೆಸ್ ಪಕ್ಷದ ಪರೋಕ್ಷ ಪ್ರೋತ್ಸಾಹದಿಂದಲೇ ಪ್ರಶಸ್ತಿ ವಾಪಾಸು ಮಾಡುವ ನಾಟಕ ಮಾಡಿದರು ಅಂತ ಎಲ್ಲರಿಗೂ ತಿಳಿದಿದೆ. ಬಿಹಾರ ಚುನಾವಣೆ ಹೊತ್ತಿಗೆ ಇವರ ನಾಟಕದ ಮೊದಲ ಅಂಕ ತಾರಕಕ್ಕೆ ಏರಿತ್ತು ಫಲಿತಾಂಶ ಬಂದ ನಂತರ. ತಿರುಗಿ ಅಸ್ಸಾಂ ಚುನಾವಣೆಯ ಹೊತ್ತಿಗೆ ನಾಟಕದ ಎರಡನೆಯ ಅಂಕ ಶುರುವಾಗಲಿದೆ. ಆಗಲಾದರೂ ಇವರು ಸರಕಾರದಿಂದ ಪಡೆದ ಪ್ರಶಸ್ತಿಗಳನ್ನಷ್ಟೇ ಅಲ್ಲ ಸೌಲತ್ತು ಲಾಭ (ಸೈಟು/ಅಪಾರ್ಟ್ಮೆಂಟ್/ಗ್ರಾಂಟ್ ಇತ್ಯಾದಿ)ವನೂ ಹಿಂದಿರುಗಿಸಲಿದ್ದಾರೆ ಎಂದು ಆಶಿಸೋಣವೇ? Reply ↓ G.W.Carlo November 15, 2015 at 11:29 pm ಮೇಲ್ಕಂಡ ಸಾಹಿತಿಗಳು ಪ್ರಶಸ್ತಿಯೊಂದಿಗೆ ಸೈಟು, ಅಪಾರ್ಟ್ ಮೆಂಟು ಇತ್ಯಾದಿ ಪಡೆದುಕೊಂಡಿದ್ದರೆ ಅದನ್ನೂ ಹಿಂದಿರುಗಿಸುವುದು ಸೀತಾ ಅವರು ಹೇಳಿದಂತೆ ಸರಿಯಾದ ಕ್ರಮ. ಇಂತವರ ಬಗ್ಗೆ ಸೀತಾರವರ ಬಳಿ ಮಾಹಿತಿ ಇರಬಹುದು. ದಯವಿಟ್ಟು ಅದನ್ನು ಪ್ರಕಟಿಸಿ ಅವರನ್ನು ಎಕ್ಸ್ ಪೋಸ್ ಮಾಡಿ ಸೀತಾರವರೆ, Reply ↓ ಸೀತಾ November 16, 2015 at 2:33 pm ಸ್ವತಹ ದೇವನೂರ ಮಹಾದೇವ ಅವರೇ ಹೇಳಿದ್ದಾರೆ ಪ್ರಶಸ್ತಿಗಳ ಕಾರಣದಿಂದ ತನಗೆ ಲಭಿಸಿದ ಸೌಲತ್ತು ಸೌಕರ್ಯ ಸ್ಥಾನಮಾನ ಹಿಂದಿರುಗಿಸಲಾಗುತ್ತಿಲ್ಲ ಆ ಬಗ್ಗೆ ಖೇದವಿದೆ ಅಂತ. ಅವರಿಗಿರುವ ಆತ್ಮಸಾಕ್ಷಿ ಮಿಕ್ಕ ಲೇಖಕರಲ್ಲಿ ಇಲ್ಲವೇ? ಅಥವಾ ಅವರೆಲ್ಲರೂ ಯಾರಾದರೂ ತಮ್ಮನ್ನು ಎಕ್ಸ್ ಪೋಸ್ ಮಾಡಲಿ ಎನ್ನುವಷ್ಟು ಭಂಡರಾಗಿದ್ದಾರೆಯೇ? ಆರ್ ಟಿ ಐ ಮೂಲಕ ಜಿ ಕೆಟಗರಿ ಸೈಟು ಪಡೆದವರ ಪಟ್ಟಿಯನ್ನು ತಾವೇ ಪಡೆಯಬಹುದು ಕಾರ್ಲೋ ಅವರೇ. Reply ↓ Ananda Prasad November 16, 2015 at 11:36 am ದೇಶವು ಸ್ವಾತಂತ್ರ್ಯಾನಂತರ ಹಿಂದೆಂದೂ ಕಂಡರಿಯದ ಧಾರ್ಮಿಕ ಮೂಲಭೂತವಾದದತ್ತ ಹೊರಳುತ್ತಿದೆ. ಇದುವೇ ಇಂದು ದೇಶದಲ್ಲಿ ಕಂಡುಬರುತ್ತಿರುವ ಅಸಹನೆ ಹಾಗೂ ಅಸಹಿಷ್ಣುತೆಗೆ ಕಾರಣ. ಸ್ವಾತಂತ್ರ್ಯಾನಂತರ ಹಿಂದೆ ದೇಶದಲ್ಲಿ ಸಾಕಷ್ಟು ಕೋಮು ಗಲಭೆಗಳು, ಹತ್ಯಾಕಾಂಡಗಳು ನಡೆದಿವೆ ಆಗೆಲ್ಲ ಯಾಕೆ ಸಾಹಿತಿಗಳು, ಕಲಾವಿದರು ಪ್ರಶಸ್ತಿ ಮರಳಿಸಿಲ್ಲ ಎಂಬ ಒಂದು ಪ್ರಶ್ನೆಯನ್ನು ಆಡಳಿತದಲ್ಲಿರುವ ಬಿಜೆಪಿ ಹಾಗೂ ಅದರ ಸೈದ್ಧಾಂತಿಕ ಮಾರ್ಗದರ್ಶಕರು ಎತ್ತಿ ಈಗ ಪ್ರಶಸ್ತಿ ಮರಳಿಸಿದ, ಮರಳಿಸುತ್ತಿರುವವರ ಪ್ರತಿಭಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ತ್ತಿದ್ದಾರೆ. ಹಿಂದೆ ನಡೆದ ಯಾವುದೇ ಕೋಮುಗಲಭೆ, ಹತ್ಯಾಕಾಂಡಗಳಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಆಗುವ ಸನ್ನಿವೇಶ ನಿರ್ಮಾಣವಾಗಿರಲಿಲ್ಲ. ಇದೀಗ ಇಂಥ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿಯೇ ಸೂಕ್ಷ್ಮ ಸಂವೇದನಾಶೀಲರಾದ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಎಚ್ಚತ್ತುಕೊಂಡು ದೇಶದ ಜನಮಾನಸವನ್ನು ಎಚ್ಚರಿಸುವ ಸಲುವಾಗಿ ತಮ್ಮ ಪ್ರಶಸ್ತಿಗಳನ್ನು ಮರಳಿಸುತ್ತಿದ್ದಾರೆ. ಇಂದು ದೇಶದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಜನರು ಮತದಾನದ ಮೂಲಕ ಪೂರ್ಣ ಬಹುಮತ ನೀಡಿ ಸ್ಥಾಪಿಸಿರುವುದು ಧಾರ್ಮಿಕ ಮೂಲಭೂತವಾದಿಗಳ ಪರವಾಗಿರುವ ಸರಕಾರವಾಗಿದೆ. ಹೀಗಾಗಿ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ಅಪಾರ ಬಲ ಬಂದಿದೆ. ಇದರ ಪರಿಣಾಮವಾಗಿ ಸಮಾಜವು ಧಾರ್ಮಿಕ ಮೂಲಭೂತವಾದದತ್ತ ಹೊರಳುತ್ತಿದೆ. ಒಮ್ಮೆ ದೇಶದ ಹಿಡಿತ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಕೈಗೆ ಸಿಕ್ಕಿದರೆ ಅದರಿಂದ ಹೊರಬರುವುದು ಬಹಳ ಕಠಿಣ. ಇದಕ್ಕೆ ಉತ್ತಮ ಉದಾಹರಣೆ ಪಾಕಿಸ್ತಾನ. ಪಾಕಿಸ್ತಾನದಲ್ಲಿ ಚುನಾಯಿತ ಸರ್ಕಾರ ಇದ್ದರೂ ಧಾರ್ಮಿಕ ಮೂಲಭೂತವಾಗಿ ಸಂಘಟನೆಗಳು ಹಾಗೂ ಅವುಗಳಿಗೆ ಬೆಂಬಲವಾಗಿರುವ ಮಿಲಿಟರಿಯ ಅಪ್ಪಣೆ ಇಲ್ಲದೆ ಚುನಾಯಿತ ಸರ್ಕಾರ ಯಾವುದೇ ಕೆಲಸವನ್ನು ಸ್ವತಂತ್ರವಾಗಿ ನಡೆಸಲಾರದ ಪರಿಸ್ಥಿತಿ ಸ್ವಾತಂತ್ರ್ಯ ಲಭಿಸಿದ ಲಾಗಾಯ್ತಿನಿಂದ ಇದೆ. ಇಂಥ ಸ್ಥಿತಿ ನಮ್ಮ ದೇಶಕ್ಕೆ ಬರುವುದು ಬೇಡ ಎಂಬುದೇ ಎಚ್ಚತ್ತ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳ ಒಕ್ಕೊರಲ ದನಿಯಾಗಿದೆ. ನಮ್ಮ ದೇಶದಲ್ಲಿಯೂ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಆಡಳಿತ, ನ್ಯಾಯಾಂಗ, ಮಿಲಿಟರಿ, ಪೋಲೀಸ್ ಬಲ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಮಾಧ್ಯಮ ಸಂಸ್ಥೆಗಳು ಮೊದಲಾದ ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಪರವಾಗಿರುವ ಜನರನ್ನು ತೂರಿಸುವ ಕೆಲಸವನ್ನು ಆರಂಭಿಸಿವೆ. ಒಮ್ಮೆ ಇವುಗಳ ಆಯಕಟ್ಟಿನ ಸ್ಥಾನಗಳಿಗೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಲ್ಲಿ ತಮ್ಮ ಮೆದುಳು ತಿಕ್ಕಿಸಿಕೊಂಡ ವ್ಯಕ್ತಿಗಳು ಹಿಡಿತ ಸಾಧಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತಾ ಹೋಗುತ್ತದೆ ಹಾಗೂ ಅಂತಿಮವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಹೀಗೆ ಆಗದಂತೆ ಆರಂಭದಲ್ಲೇ ತಡೆಯುವುದು ವಿವೇಕ. ಆ ವಿವೇಕವನ್ನೇ ಈಗ ನಮ್ಮ ಎಚ್ಚತ್ತ ಸಾಹಿತಿಗಳು, ಚಿಂತಕರು, ಕಲಾವಿದರು, ವಿಜ್ಞಾನಿಗಳು ಮೊದಲಾದ ಸೂಕ್ಷ್ಮ ಮತಿಯ ಪರಿಸ್ಥಿತಿಯನ್ನು ಗ್ರಹಿಸಬಲ್ಲವರು ಮಾಡುತ್ತಿರುವುದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಮಾತಿನಂತೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಹುನ್ನಾರಗಳನ್ನು ಮೊಳಕೆಯಲ್ಲಿರುವಾಗಲೇ ಚಿವುಟಿಹಾಕುವುದು ವಿವೇಕ, ಇಲ್ಲದೆ ಹೋದರೆ ಮುಂದೆ ದೇಶದ ಜನರೇ ಇದರ ಕಹಿಫಲವನ್ನು ಪಾಕಿಸ್ತಾನ ಯಾವ ರೀತಿ ಅನುಭವಿಸುತ್ತಿದೆಯೋ ಅದೇ ರೀತಿ ನಮ್ಮ ದೇಶದಲ್ಲಿಯೂ ಅನುಭವಿಸಬೇಕಾದೀತು. Reply ↓ Salam Bava November 16, 2015 at 2:31 pm ” ಸಂತ ,ಸಾಹಿತಿ ದೇವನೂರ ಮಹಾದೇವ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಶನಿವಾರ ವಾಪಸು ಮಾಡಿದ್ದಾರೆ. ಈ ಸಂಬಂಧ ಪ್ರಶಸ್ತಿಯ ಮೊತ್ತ 25 ಸಾವಿರ ನಗದು ಹಿಂತಿರುಗಿಸಿದ್ದಾರೆ. ಅವರ ಹೇಳಿಕೆ -‘ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ, ಹತ್ಯೆ ಮಾಡಿದವರ ಪತ್ತೆಗೆ ವಿಶೇಷ ತಂಡ ರಚಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.ಯಾವುದೇ ಆಳ್ವಿಕೆಯು ಸಂವೇದನಾಶೀಲವಾಗಲು ಹಾಗೂ ಸಮಾಜಮುಖಿಯಾಗಲು ಲೇಖಕ, ಕಲಾವಿದ, ಪ್ರಜ್ಞಾವಂತರು ಸರ್ಕಾರಕ್ಕೆ ಅಂಕುಶದಂತೆ ಇರಬೇಕು ಎಂದು ನಂಬಿಕೊಂಡಿರುವ ನಾನು, ಇತ್ತೀಚಿನ ‘ಅಸಹಿಷ್ಣುತೆಗಾಗಿ ಪ್ರಶಸ್ತಿ ಹಿಂತಿರುಗಿಸುತ್ತಿರುವ’ ಈ ಸಂದರ್ಭದಲ್ಲಿ ನನ್ನ ಸ್ವಭಾವಕ್ಕೆ ವಿರುದ್ಧವಾಗಿ ಸಂಯಮಿಸಿಕೊಂಡೇ ಬಂದೆ. ಆದರೆ, ಯಾವಾಗ ಕೆಲ ಲೇಖಕ–ಕಲಾವಿದರು ಆಳ್ವಿಕ ಪರ ಸಂಘಟಿತರಾಗಿ ನಿಂತರೋ ಅದು ಕೇಡಿನ ಲಕ್ಷಣ ಅನ್ನಿಸಿಬಿಟ್ಟಿತು. ಇದಕ್ಕೆ ಜಿಗುಪ್ಸೆಗೊಂಡು, ನಾನು ಪಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದೇನೆ. ಈಗ ಹಿಂತಿರುಗಿಸುತ್ತಿರುವುದು ಸಾಂಕೇತಿಕವಾಗಿ ಮಾತ್ರವೆ. ಯಾಕೆಂದರೆ, ಅವುಗಳನ್ನು ಪಡೆದಿದ್ದರಿಂದ ಪರೋಕ್ಷವಾಗಿ ಪಡೆದಿರಬಹುದಾದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚವೂ ನನಗಿದೆ.” ಈ ಒಂದು ಪ್ರಶಸ್ತಿ ವಾಪಸಾತಿ ಕ್ರಿಯೆ ಇಡೀ ಪ್ರಕ್ರಿಯೆಗೆ ಇನ್ನೂ ಹೆಚ್ಹಿನ ಕ್ರೆಡಿಬಿಲಿಟಿ ಯನ್ನು ಕೊಟ್ಟಿದೆ ,ಇಂದು ದೇಶದ ಉದ್ದಗಲಕ್ಕೂ ಅಸಹಿಷ್ಣುತೆಯ ಆಕೃತಿಗಳು ಅಂಗೈಮೇಲಿನ ನಲ್ಲಿಕಾಯಿಯಷ್ಟು ಸ್ಪಷ್ಟವಾಗಿ ಕಾಣುತ್ತಿವೆ. ಈ ಸತ್ಯವನ್ನು ರಾಜಕೀಯ ವ್ಯಕ್ತಿಗಳು ಮರೆ ಮಾಚುವುದು ಅಥವಾ ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಳ್ಳುವುದು ನಮಗೆ ಅಂತಹ ಆಶ್ಚರ್ಯಕರ ವಿಷಯವಾಗಿ ಕಾಣುವುದಿಲ್ಲ. ಆದರೆ ಅನುಪಮ್ ಖೇರ್ ರಂಥಾ ಅನೇಕ ಪ್ರತಿಭಾವಂತ ಬರಹಗಾರರು, ಬುದ್ಧಿಜೀವಿಗಳು ‘ಅಸಹಿಷ್ಣುತೆ ಎಂಬುದು ಎಲ್ಲಿದೆ? ಕೆಲವು ಅಹಿತಕರ ಘಟನೆಗಳಿಗೆ ಬಣ್ಣಕಟ್ಟಿ ದೇಶದ ಮಾನವನ್ನು ಹರಾಜಿಗಿಡಬೇಡಿ, ನಮ್ಮದು ಸಹಿಷ್ಣುತೆಯ ದೇಶ, ಈಗ ಎಲ್ಲೆಲ್ಲೂ ಸಹಿಷ್ಣುತೆ ತುಂಬಿ ತುಳುಕುತ್ತಿದೆ’ ಎಂದು ಹೇಳಿಕೆ ನೀಡುತ್ತ ತಮ್ಮ ಆತ್ಮಸಾಕ್ಷಿಯನ್ನು ಒತ್ತಿಗಿಟ್ಟಿದಾರೆ . ತಮ್ಮದೇ ಸಹಕಲಾವಿದ ಶಾರುಕ್ ಖಾನ್ ತಮ್ಮ ಆತ್ಮ ಸಾಕ್ಹಿಗೆ ಅನುಗುಣವಾಗಿ ಒಂದು ಹೇಳಿಕೆ ಕೊಟ್ಟದ್ದಕೆ ,ಅವರನ್ನು ಮಾನಸಿಕ ಪೀಡನೆಗೆ ಒಳಪಡಿಸಿದಾಗ ಒಂದೇ, ಒಂದು ಸಾಂತ್ವನ ಹೇಳದೆ ,ದೆಲ್ಹಿಗೆ ಬಾಡಿಗೆಯ ನಿಯೋಗ ಕೊಂಡೋದರು . ಪ್ರಶಸ್ತಿ ಹಿಂದಿರುಗಿಸಿದವರ ಕುರಿತಾಗಿ – ಅವರು ಎಡಪಂಥೀಯರು ,ಕಾಂಗ್ರಸ್ ಅನುಭಾವಿಗಳು ,ದೇಶದ್ರೋಹಿಗಳು ,ಸೈಟ್ ವಾಪಸು ಮಾಡದವರು ಎಂದೆಲ್ಲಾ ನಿರಂತರ ಪ್ರಹಾರ ನಡೆಯುತ್ತಿದೆ . ಹಿಂದಿ ಸಾಹಿತಿ ಉದಯ ಪ್ರಕಾಶ್ ,ನಯನತಾರ ಸೈಗಲ್ ರಿಂದ ಹಿಡಿದು ನಮ್ಮ ದೇವನೂರರ ತನಕ ಸಾದಾರಣ ೫೫ ಜನರ ಪ್ರಾಮಾಣಿಕತೆಯನ್ನು ,ಅವರ ಬದ್ದತೆಯನ್ನು ಯಾವ ಓರ್ವ ಸಾದಾರಣ ಅರಿವಿನ ವ್ಯಕ್ತಿಯೂ ಪ್ರಶ್ನಿಸಲಾರ ,ಆದರೆ ಸಂಘ ಪರಿವಾರಿ ಬೆಂಬಲಿಗರಿಗೆ ಕೇವಲ ಅವರ ನೇರ ಮಾತ್ರಾ ಕಾಣುವುದು ! ದೇಶದ ಪ್ರತಿ ಷ್ತ್ಘಿತ ,ಬಲಪಂಥಿಯ ಮತ್ತು ಮೋದಿ ಬೆಂಬಲಿಗ ವೀಕ್ಲಿ “ಇಂಡಿಯಾ ಟುಡೇ” ಸಹಾ ತನ್ನ ಲೇಖನದಲ್ಲಿ ಈ ತರಹದ ಅಸಹಿಷ್ಣುತೆಯನ್ನು ತೀವ್ರವಾಗಿ ಖಂಡಿಸಿದೆ . ಎಲ್ಲಾ ಶಾಂತಿಪ್ರಿಯ ,ದೇಶಪ್ರೇಮಿ ಭಾರತೀಯರೂ ಈ ಸಾಹಿತಿಗಳ ,ಬುದ್ದಿಜೀವಿ ಗಳ ಕ್ರಮಕ್ಕೆ ಬೆಂಬಲ ಕೊಡಬೇಕು. ತಮ್ಮ ಜೀವನಕ್ರಮ ,ಮತ್ತು ಜೀವವನ್ನೇ ಪಣಕ್ಕಿಟ್ಟು ದೇಶದ ಸಾಂವಿದಾನಿಕ ಮೌಲ್ಯಗಳ ರಕ್ಷಣೆಗೆ ನಿಂತ ಅವರನ್ನು ಅಭಿನಂದಿಸಬೇಕು . ಅವರ ಈ ಕ್ರಮ ಸಹಾ ಬಿಹಾರದ ಪಲಿತಾಂಶದಲ್ಲಿ ಗುಣಾತ್ಮಕವಾಗಿ ಪರಿಣಾಮ ಬೀರಿದೆ . Reply ↓ ಸೀತಾ November 16, 2015 at 2:51 pm ‘ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ, ಹತ್ಯೆ ಮಾಡಿದವರ ಪತ್ತೆಗೆ ವಿಶೇಷ ತಂಡ ರಚಿಸಬೇಕು’ ಕರ್ನಾಟಕ ಸರಕಾರ ಏಕೆ ಈ ಬಗ್ಗೆ ಇನ್ನೂ ಕಾರ್ಯೋನ್ಮುಖವಾಗಿಲ್ಲ? ದೇವನೂರ ಮಹದೇವ ಅವರ ಸಮಾಜವಾದಿ ಸ್ನೇಹಿತರೇ ಆಗಿರುವ ಮಾನ್ಯ ಜನನಾಯಕ ಸಿದ್ದರಾಮಯ್ಯನವರು ಸ್ವತಃ ಆಸಕ್ತಿ ತಳೆದು ತನಿಖೆ ಪ್ರಗತಿ ಸಾಧಿಸುವಂತೆ ಮಾಡಬಹುದಿತ್ತಲ್ಲ. ಸಿ ಐ ಡಿ ತನಿಖೆ ಏನನ್ನೂ ಪತ್ತೆ ಹಚ್ಚದೆ ಇರುವಾಗ ಸಿ ಬಿ ಐ ಗೆ ಏಕೆ ತನಿಖೆಯನ್ನು ವಹಿಸಿಕೊಟ್ಟಿಲ್ಲ? ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಹತ್ಯೆ ಪ್ರಕರಣದಲ್ಲೂ ಹೀಗೇ ಆಗಿದೆ. ಆಕೆಯ ಹತ್ಯೆಯ ಹಿಂದೆ ಇರಬಹುದಾದ ಪಿತೂರಿ ಬಹಿರಂಗವಾಗದೇ ಹೋಗಿದೆ. ಸುನಂದಾ ಹತ್ಯೆ ಹಿಂದೆ ದಾವೂದ್ ಇಬ್ರಾಹಿಮ್ ನೇತೃತ್ವದ ದುಬಾಯಿ ಮಾಫಿಯಾದ ಕೈವಾಡವಿದೆ ಎಂದು ಮಾನ್ಯ ಸುಬ್ರಹ್ಮಣ್ಯ ಸ್ವಾಮಿಯವರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಕಲ್ಬುರ್ಗಿ ಹತ್ಯೆ ಕೂಡ ಮಾಫಿಯ ಸ್ಟೈಲಿನಲ್ಲಿ ಆಗಿದೆ. ಇಲ್ಲೂ ದುಬಾಯಿ ಮಾಫಿಯಾದ ಕೈವಾಡ ಇರಬಹುದೇ? ಇತ್ತೀಚೆಗೆ ಭಾರತದ ಪೋಲೀಸರ ಕೈಗೆ ಸಿಕ್ಕಿ ಬಿದ್ದ ಛೋಟಾ ರಾಜನ್ ಬಳಿ ಸುನಂದಾ ಹಾಗೂ ಕಲ್ಬುರ್ಗಿ ಹತ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಬಹುದೇ? ಸತ್ಯ ಏನೆಂದು ಸ್ಪಷ್ಟವಾಗಬೇಕು ಹಾಗೂ ಅಲ್ಲಿಯ ವರೆಗೆ ದೇವನೂರ ಮಹಾದೇವ ಮೊದಲಾದ ಸಾಹಿತಿಗಳು ರಾಜ್ಯದ ಗೃಹಮಂತ್ರಿ ಹಾಗೂ ಪೋಲೀಸ್ ಇಲಾಖೆ ಮೇಲೆ ತನಿಖೆ ಪ್ರಗತಿ ಕಾಣುವಂತೆ ಒತ್ತಡ ಹೇರತಕ್ಕದ್ದು. Reply ↓ Salam Bava November 16, 2015 at 5:04 pm ಮುಖ್ಯ ಮಂತ್ರಿಗಳು ತನಿಖೆ ತ್ವರಿತ ಗತಿಯಿಂದ ಸಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ,ಇದರಲ್ಲಿ ಭಾಂದವ್ಯದ ಪ್ರಶ್ನೆ ಎಲ್ಲಿ !ದೇವನೂರರ ಇಡೀ ಹೇಳಿಕೆಯನ್ನು ತೆಗೆದುಕೊಂಡು ಪ್ರತಿಕಯಿಸದೇ ಒಂದು ವಾಕ್ಯ ಮಾತ್ರಾ ಯಾಕೆ ? . ಇನ್ನು ಸುನಂದಾ ಸಾವು ,ದುಬೈ ಮಾಫಿಯ ಕುರಿತು ಅನ್ವೇಷಿಸಲು ಸುಬ್ರಮಣ್ಯ ಸ್ವಾಮಿ ಕೇಂದ್ರವನ್ನು ಒತ್ತಾಯಿಸಲಿ . Reply ↓ ಸೀತಾ November 16, 2015 at 5:45 pm ಬಾವ ಭಾಯಿ, ದೇವನೂರು ಮಹಾದೇವ ಅವರು “ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ, ಹತ್ಯೆ ಮಾಡಿದವರ ಪತ್ತೆಗೆ ವಿಶೇಷ ತಂಡ ರಚಿಸಬೇಕು” ಅಂತ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ತನಿಖೆ ತ್ವರಿತ ಗತಿಯಿಂದ ಸಾಗುತ್ತಿದೆ” ಎಂದು ಹೇಳಿಕೆ ನೀಡಿದ್ದಾರೆ. ಈ ಎರಡು ಹೇಳಿಕೆಗಳನ್ನು ಗಮನಿಸಿದಾಗ ಇಲ್ಲಿ ಎರಡೇ ಸಾಧ್ಯತೆಗಳಿರುವುದು ಬುದ್ಧಿ ಇರುವ ಬಾಲಕರಿಗೂ ಅರ್ಥವಾಗುತ್ತದೆ: ೧) ಮುಖ್ಯಮಂತ್ರಿ ಹೇಳಿಕೆ ಸತ್ಯ, ದೇವನೂರ ಅವರ ಹೇಳಿಕೆ ಸತ್ಯವಲ್ಲ. ತನಿಖೆ ತ್ವರಿತ ಗತಿಯಿಂದ ಸಾಗುತ್ತಿದೆ ಎಂಬುದು ಸತ್ಯವಾಗಿದ್ದರೆ ಸರಕಾರ ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಅಂತ ಹೇಳುವುದು ತಪ್ಪಲ್ಲವೇ? ೨) ದೇವನೂರು ಸತ್ಯ ಹೇಳಿದ್ದಾರೆ, ಮುಖ್ಯಮಂತ್ರಿ ಅವರ ಹೇಳಿಕೆಯಲ್ಲಿ ಸತ್ಯವಿಲ್ಲ. ಕಲಬುರ್ಗಿ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸತ್ಯವಾಗಿದ್ದರೆ ತನಿಖೆ ತ್ವರಿತ ಗತಿಯಿಂದ ಸಾಗುತ್ತಿದೆ ಎಂಬುದು ಸುಳ್ಳಲ್ಲವೇ? ಈ ಎರಡು ಸಾಧ್ಯತೆಗಳಲ್ಲಿ ನಿಮ್ಮ ಆಯ್ಕೆ ಯಾವುದು? Reply ↓ Salam Bava November 16, 2015 at 6:07 pm ಸಾಂದರ್ಭಿಕವಾಗಿ ಇಬ್ಬರ ಸ್ಟಾಂಡ್ ಸಹಾ ಸರಿ,ಅವರಿಬ್ಬರ ಹೇಳಿಕೆಯಲ್ಲಿ ಯಾವುದೇ ಕ್ಲೀಷವಿಲ್ಲ . ಒಬ್ಬರು ಆಡಳಿತಶಾಹಿಯ ನಿಲುಮೆ ,ಮತ್ತೊಬ್ಬರದ್ದು ಓರ್ವ ಜವಾಬ್ದಾರಿಯುತ ನಾಗರಿಕನದ್ದು . ಸುಬ್ರಮಣ್ಯ ಸ್ವಾಮಿಗೂ ಸ್ವಲ್ಪ ನೆನೆಪಿಸೋಣ Reply ↓ ಸೀತಾ November 16, 2015 at 6:50 pm “ಸಾಂದರ್ಭಿಕವಾಗಿ ಇಬ್ಬರ ಸ್ಟಾಂಡ್ ಸಹಾ ಸರಿ” ಹಹ್ಹಹಹ! ಇದು ನಿಮ್ಮ ಬೌದ್ಧಿಕ ದಿವಾಳಿತನವನ್ನೂ ಶುದ್ಧಾಂಗ ಅಪ್ರಮಾಣಿಕತೆಯನ್ನೂ ಬಯಲು ಮಾಡಿದೆ ಬಾವ ಭಾಯಿ! ಸಂತೆ ಮೊಳ ನೇಯ್ದ ಹಾಗೆ ವಿತ್ತಂಡ ವಾದ ಮಾಡುತ್ತಾ ಹೃದಯದೊಳಗಿರುವ ಮತೀಯ ನಂಜನ್ನು ಕಾರುತ್ತಾ ವರ್ತಮಾನವನ್ನು ವಿಷಮಯಗೊಳಿಸಬೇಡಿ. ನಾನು ಈ ಹಿಂದೆಯೇ ಹೇಳಿದ ಹಾಗೆ ಚಿತ್ತ ಶುದ್ಧಿ ಭಾವ ಶುದ್ಧಿ ಹಯು ವಾಕ್ ಶುದ್ಧಿ ಮಾಡಿಕೊಳ್ಳಿ. ಅಟ್ ಲೀಸ್ಟ್ ಟ್ರೈ ಮಾಡಿ ನೋಡಿ. Reply ↓ Sumanasa November 16, 2015 at 10:10 pm ಅಯ್ಯೋ ಸೀತಾ ಅವರೇ ಎಲ್ಲಾ ಬಿಟ್ಟು ಈ ‘ಬಾವ’ಯ್ಯನಿಗೆ ಬುದ್ಧಿ ಹೇಳಲು ಹೋಗಿದ್ದೀರಲ್ಲ! ಇವರು ಮೊದಲಿಂದಲೂ ಹೀಗೆ ವಿತ್ತಂಡ ವಾದ ಮಾಡುತ್ತಲೇ ಬಂದಿದ್ದಾರೆ, ಇದೇನು ಹೊಸದಲ್ಲ! ಹಿಂದೊಮ್ಮೆ ಸೌದಿ ಅರೇಬಿಯಾದಲ್ಲಿ ಏಕೆ ಭಾರತೀಯರಿಗೆ ದೇವಸ್ಥಾನ ಕಟ್ಟಲು ಅವಕಾಶ ಕೊಡುತ್ತಿಲ್ಲ, ಧಾರ್ಮಿಕ ಹಬ್ಬ ಆಚರಿಸಲು ಸ್ವಾತಂತ್ರ್ಯವಿಲ್ಲ ಎಂದು ಓದುಗರು ಪ್ರಶ್ನೆ ಕೇಳಿದಾಗ ಇವರು ಕೊಟ್ಟ ಉತ್ತರವಂತೂ ವಹಾಬ್ಬಿಗಳಿಗೆ ಖುಷಿ ಕೊಡುವ ಹಾಗೆ ಇತ್ತು! ತನ್ನ ಮತೀಯವಾದದ ಕುರುಡಿನಲ್ಲಿ ಮಿಕ್ಕವರಿಗೆ ಮಾನವೀಯತೆಯ ಪಾಠ ಹೇಳುವ ಅನೇಕರಿದ್ದಾರೆ ನಮ್ಮ ನಡುವೆ. ಚಿತ್ತ ಶುದ್ಧಿ ಭಾವ ಶುದ್ಧಿ ವಾಕ್ ಶುದ್ಧಿಎಲ್ಲಾ ಇವರಿಗೆ ಸಾಧ್ಯವೇ ಸೀತಾ??? Reply ↓ Salam Bava November 17, 2015 at 4:14 pm ನಿಮ್ಮದು ಪ್ಯಾಶಿಸ್ಟ್ ಮನೋವ್ರತ್ತಿ ,ನಿಮಗೆ ಪ್ರಾಮಾಣಿಕ ಚರ್ಚೆ ಬೇಡ . ನಿಮ್ಮದೇ ಪಕ್ಷದ ಕೇಂದ್ರ ಸರಕಾರದಲ್ಲಿ ,ಪ್ರಧಾನಿಯೂ ಸೇರಿ ಇಬ್ಬಂದಿತನ ತೋರಿಸುವರು ಪ್ರತಿ ಹೆಜ್ಜೆ ,ಹೆಜ್ಜೆಗೂ ಸಿಕ್ಕುತ್ತಾರೆ.ಇಲ್ಲಿ ಕರ್ನಾಟಕ ಕಂಡ ಇಬ್ಬರು ಅತ್ಯಂತ ಪ್ರಾಮಾಣಿಕ ಪ್ರಮುಖರು ,ಪ್ರೊ ! ಕಲಬುರ್ಗಿಯವರ ಹತ್ಯೆಯ ತನಿಖೆಯ ಕುರಿತಾಗಿ – ದೇವನೂರರು ತಮ್ಮ ಕಳಕಳಿಯನ್ನು ಮತ್ತು ಮುಖ್ಯಮಂತ್ರಿಗಳು ತಮ್ಮ ಸರಕಾರ ಕ್ಯೆಗೊಂಡ ಕ್ರಮವನ್ನು ವಿಶದೀಕರಿಸಿದ್ದಾರೆ . ಈ ದೇಶದ ಎಲ್ಲಾ ಶೋಷಿತರ ದೀನ ,ದಲಿತರ ,ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ದ ,ಸಮಾಜದ ಮುಖವಾಣಿಯಾದ ಸಾಹಿತಿಗಳು ,ಬುದ್ದಿಜೀವಿಗಳು ಒಡ್ಡಿದ ಪ್ರತಿರೋದ ಅತ್ಯಂತ ಪರಿಣಾಮ ಬೀರಿದೆ . ಇದನ್ನು ಬೌದ್ದಿಕ,ಅಪ್ರಾಮಾಣಿಕ,ನಂಜು ಎಂದೆಲ್ಲಾ ಹಲಬುವುದು ಯಾಕೆ ? ಬಿಹಾರದ ಜನತೆ ಮಾತಿನ ಮೋಡಿಗಾರನ ಮಾತಿಗೆ ಮರುಳಾಗದೆ -ಸ್ವಾತಂತ್ರ್ಯ ,ಸಮಾನತೆ,ಜಾತ್ಯತೀತತೆ ,ಬ್ರಾತತ್ವವನ್ನು ಭಾರತೀಯ ಮಣ್ಣಿನಲ್ಲಿ ನೆಲೆನಿಲ್ಲುವಂತೆ ಮಾಡ್ಡಿದ್ದನ್ನು ನಿಮಗೆ ಜೀರ್ಣಿಸಲು ಆಗುತ್ತಿಲ್ಲ . ಇನ್ನು ಒಂದು ಸಿಹಿ ಸುದ್ದಿ – ನನಗೆ ಸಿಕ್ಕಿದ ಒಂದು ವಾರ್ತೆಯಂತೆ,ಡಾ ಬಂಜಗೆರೆ ಜಯಪ್ರಕಾಶ್ರವರು ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರವನ್ನು ನಯವಾಗಿ ತಿರಸ್ಕರಿಸಿದ್ದಾರೆ . ಈ ಸುದ್ದಿಯನ್ನು ಸಂಬಂದ ಪಟ್ಟವರು ದ್ರಡೀಕರಿಸಬೇಕು Reply ↓ ಸೀತಾ November 17, 2015 at 7:39 pm “ನಿಮ್ಮದು ಪ್ಯಾಶಿಸ್ಟ್ ಮನೋವ್ರತ್ತಿ” ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ. “ನಿಮ್ಮದೇ ಪಕ್ಷದ ಕೇಂದ್ರ ಸರಕಾರದಲ್ಲಿ ,ಪ್ರಧಾನಿಯೂ ಸೇರಿ ಇಬ್ಬಂದಿತನ ತೋರಿಸುವರು ಪ್ರತಿ ಹೆಜ್ಜೆ ,ಹೆಜ್ಜೆಗೂ ಸಿಕ್ಕುತ್ತಾರೆ.” ಹೆಹೆ! ಕೇಂದ್ರಸರಕಾರದ ಪಕ್ಷಕ್ಕೂ ನನಗೂ ಇರುವ ಸಂಬಂಧ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧ. “ದೇವನೂರರು ತಮ್ಮ ಕಳಕಳಿಯನ್ನು ಮತ್ತು ಮುಖ್ಯಮಂತ್ರಿಗಳು ತಮ್ಮ ಸರಕಾರ ಕ್ಯೆಗೊಂಡ ಕ್ರಮ” ಇವೆರಡರ ನಡುವೆ ಇರುವ ವೈರುಧ್ಯ ಗೊಂದಲವನ್ನು ಸ್ಪಷ್ಟಗೊಳಿಸಿದ ಮೇಲೂ ಇಬ್ಬರನ್ನೂ ಸಮರ್ಥಿಸಿಕೊಂಡು ಮಾತನಾಡುವವರು ನಿಜಕ್ಕೂ ನಿಮ್ಮಂತಹ ತರ್ಕಹೀನ ಮೂರ್ಖರೇ ಸರಿ. “ಇದನ್ನು ಬೌದ್ದಿಕ,ಅಪ್ರಾಮಾಣಿಕ,ನಂಜು ಎಂದೆಲ್ಲಾ ಹಲಬುವುದು ಯಾಕೆ” ಹಲುಬುತ್ತಿರುವುದು ನಿಮ್ಮ ಎಲುಬಿಲ್ಲದ ನಾಲಿಗೆ. ಪ್ರಶಸ್ತಿ ವಾಪಾಸು ಮಾಡುವುದರ ಹಿಂದಿನ ರಾಜಕೀಯ ಕುತಂತ್ರ ಈಗಾಗಲೇ ಬಯಲಾಗಿದೆ. ಎಲ್ಲಾ ಗೊತ್ತಿದ್ದೂ ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ನಿಮ್ಮ ಕುಟಿಲ ಬುದ್ಧಿ ಕೂಡ ಬಹಿರಂಗವಾಗಿದೆ. “ಬಿಹಾರದ ಜನತೆ ಮಾತಿನ ಮೋಡಿಗಾರನ ಮಾತಿಗೆ ಮರುಳಾಗದೆ -ಸ್ವಾತಂತ್ರ್ಯ ,ಸಮಾನತೆ,ಜಾತ್ಯತೀತತೆ ,ಬ್ರಾತತ್ವವನ್ನು ಭಾರತೀಯ ಮಣ್ಣಿನಲ್ಲಿ ನೆಲೆನಿಲ್ಲುವಂತೆ ಮಾಡ್ಡಿದ್ದನ್ನು ನಿಮಗೆ ಜೀರ್ಣಿಸಲು ಆಗುತ್ತಿಲ್ಲ .” ಬಿಹಾರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ನೆಲೆ ನಿಂತಿರುವುದು ಯಾದವ ಹಾಗೂ ಕುರ್ಮಿ ಜಾತಿಗಳ ಪ್ರಾಬಲ್ಯ ಹಾಗೂ ಯಜಮಾನಿಕೆ. ಹೀಗಾಗಿ ಬಿಹಾರದ ಬಡ ಜನರು ಮುಸಲ್ಮಾನರು ಸೇರಿದಂತೆ ಬಿಹಾರ ಬಿಟ್ಟು ದೂರದ ಬೆಂಗಳೂರು ದೆಹಲಿಗೆ ಬದುಕುವ ಮಾರ್ಗ ಅರಸಿ ವಲಸೆ ಹೋಗುತ್ತಾ ಬಂದಿದ್ದಾರೆ. ಸತ್ಯ ಏನೆಂದು ತಿಳಿದು ಮಾತನಾಡಿ ಬಾವಯ್ಯ. Reply ↓ ಸೀತಾ November 18, 2015 at 11:29 am ಪ್ರಭುಗಳೇ, ನೀವೂ ನಾವೂ ಎಲ್ಲರೂ ಮೆಚ್ಚುವ ಮಾನ್ಯ ಯೋಗೇಂದ್ರ ಯಾದವ್ ಅವರೇ ಹೀಗೆ ಹೇಳಿದ್ದಾರೆ “Lalu coming back is not a way forward for Bihar.” ಎಂದ ಮೇಲೆ ಬಿಹಾರದ ಚುನಾವಣೆ ಫಲಿತಾಂಶದ ಬಗ್ಗೆ ಸಂತೋಷ ಪಡುವುದು ನಿಜಕ್ಕೂ ಮೂರ್ಖತನ. Salam Bava November 18, 2015 at 4:53 pm ಮಗದೊಮ್ಮೆ ತಮ್ಮ ಸಣ್ಣತನ,ಕುತ್ಸಿತ ಭುದ್ದಿ ,ನೀಚ ಹೇಳಿಕೆ ಮತ್ತು ಅಸಹನೆಯನ್ನು ಯಾರು ವಾ೦ತಿ ಮಾಡಿದೆನ್ದ್ದುವರ್ತಮಾನದ ಎಲ್ಲಾ ಓದುಗರಿಗೆ ನಿಚ್ಚಳವಾಗಿ ತಿಳಿಯಿತು. “ಪ್ರಭುಗಳೇ, ನೀವೂ ನಾವೂ ಎಲ್ಲರೂ ಮೆಚ್ಚುವ ಮಾನ್ಯ ಯೋಗೇಂದ್ರ ಯಾದವ್ ಅವರೇ ಹೀಗೆ ಹೇಳಿದ್ದಾರೆ “Lalu coming back is not a way forward for Bihar.” ಯೋಗೇ೦ದ್ರ ಯಾದವ- ನಿತೀಶರನ್ನು NDTV ಯಲ್ಲಿ ತು೦ಬಾ ಹೊಗಳಿದ್ದಾರಲ್ಲಾ! ಸಿದ್ದರಾಮಯ್ಯರ ಅಳ್ವಿಕೆಯನ್ನು ಮೆಚ್ಚಿದ್ದಾರಲ್ಲ.ಅವರ ಅನ್ನಭಾಗ್ಯ,ಕ್ಕ್ಷೀರ ಭಾಗ್ಯ ಮು೦ತಾದ ಯೋಜನೆಗಳಿ೦ದ ಪ್ರಭಾವಿತರಾಗಿದ್ದರು .ಇನ್ನು ನೀವು ನ೦ಬುವ ಸಿದ್ದಾ೦ತದ ಕಡು ವಿರೋದಿಯಾದ ಅವರು ಕೇವಲ ಲಾಲೂಪ್ರಸಾದರನ್ನು ಮಾತ್ರಾ- not a way forward for Bihar.”ಎ೦ದು ಹೇಳಿದ್ದನ್ನು ತು೦ಬಾ ಮನಸ್ಸಿಗೆ ಹಚ್ಚಿಕೊ೦ಡ್ಡಿದ್ದು ಮಾತ್ರಾ ನಿಮ್ಮ ವಿರೋಧಾಭಾಸವನ್ನು ತೋರಿಸುತ್ತದೆ! ಸೀತಾ November 18, 2015 at 6:49 pm “ತಮ್ಮ ಸಣ್ಣತನ,ಕುತ್ಸಿತ ಭುದ್ದಿ ,ನೀಚ ಹೇಳಿಕೆ ಮತ್ತು ಅಸಹನೆಯನ್ನು ಯಾರು ವಾ೦ತಿ ಮಾಡಿದೆನ್ದ್ದು” ಕನ್ನಡಿ ನೋಡಿ ತಾವೇ ಕನ್ಫಾರ್ಮ್ ಮಾಡಿಕೊಳ್ಳಿ ಬಾವಯ್ಯ! “ನೀವು ನ೦ಬುವ ಸಿದ್ದಾ೦ತದ ಕಡು ವಿರೋದಿಯಾದ ಅವರು” ಹೆಹೆ! ಯೋಗೇಂದ್ರ ಯಾದವ್ ಅವರದ್ದು ನಿಮ್ಮ ಹಾಗೆ ವಹಾಬಿ ಸಿದ್ಧಾಂತವೆ ಬಾವಯ್ಯ? 😛 (ಹಿಂದೆ ನೀವು ಸೌದಿ ಅರೇಬಿಯಾದಲ್ಲಿ ಭಾರತೀಯರಿಗೆ ದೇವಸ್ಥಾನ/ಚರ್ಚು/ಗುರುದ್ವಾರ ಏಕೆ ಇಲ್ಲ ಎಂಬ ಪ್ರಶ್ನೆಗೆ ಕೊಟ್ಟ ಉತ್ತರವೇ ಸಾರಿದೆ ನಿಮ್ಮದು ಅರೇಬಿಯಾದ ವಹಾಬಿ ಸಿದ್ಧಾಂತ ಅಂತ.) ಹೆಹೆ! ಯೋಗೇಂದ್ರ ಯಾದವ್ ಅವರ ಯೋಗ್ಯತೆಯ ನೂರನೆಯ ಒಂದು ಭಾಗವೂ ಇಲ್ಲದ ತಮ್ಮಿಂದ ನಾನು ಸಿದ್ಧಾಂತದ ಪಾಠ ಹೇಳಿಸಿಕೊಳ್ಳಬೇಕೇ ಬಾವಯ್ಯ? 😉 ಬಿಹಾರದ ಬಗ್ಗೆ ನಿಜವಾದ ಕಳಕಳಿ ಇದ್ದುದರಿಂದಲೇ ಯೋಗೇಂದ್ರ ಯಾದವ್ ಅವರು ಲಾಲೂ ಮತ್ತೆ ಪ್ರಬಲರಾದುದರ ಬಗ್ಗೆ ಅಪಾರ ಆತಂಕ ವ್ಯಕ್ತ ಪಡಿಸಿದ್ದು. ಈ ಲಾಲೂ ಎಂತಹವರೆಂದು ಇಡೀ ಪ್ರಪಂಚಕ್ಕೆ ಗೊತ್ತಿದೆ ಆದರೆ ಈ ಬಾವಯ್ಯನಿಗೆ ಮಾತ್ರ ಗೊತ್ತಿಲ್ಲ! ಸೀತಾ November 19, 2015 at 8:33 pm ಪ್ರಭುಗಳೇ, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಮಂತ್ರಿ ಮಂಡಲದಲ್ಲಿ ಲಾಲೂ ಅವರ ಸುಪುತ್ರ ತೇಜಸ್ವೀ ಉಪಮುಖ್ಯಮಂತ್ರಿಯಾಗಿರುತ್ತಾರೆ ಅಂತ ವರದಿಯಾಗಿದೆ. ಅನನುಭವಿ ತೇಜಸ್ವಿಗೆ ಮಣೆ ಹಾಕಲು ಆರ್ ಜೆ ಡಿ ಯ ಹಿರಿಯ ಧುರೀಣ ಅಬ್ದುಲ್ ಬಾರಿ ಸಿದ್ದಿಕ್ಕಿ ಅವರನ್ನು ಕಡೆಗಣಿಸಲಾಗಿದೆ. ಇದೇನಾ ನಿತೀಶ್/ಲಾಲೂ ಘಟಬಂಧನವನ್ನು ಪೂರ್ಣವಾಗಿ ಬೆಂಬಲಿಸಿದ ಮುಸ್ಲಿಂ ಸಮುದಾಯಕ್ಕೆ ಲಾಲೂ ಸಲ್ಲಿಸಿರುವ ಕೃತಜ್ಞತೆ? ಈ ಬಗ್ಗೆ ತಾವೇನು ಹೇಳಲು ಬಯಸುತ್ತೀರಿ? Reply ↓ Shridhar Prabhu November 23, 2015 at 12:02 pm ಸೀತಾ ಅವರೇ, ನಿಮಗೆ ಮುಸ್ಲಿಂ ಸಮುದಾಯದ ಬಗೆಗಿರುವ ಮನದಾಳದ ಪ್ರೀತಿ ಕಂಡು ಮನಸ್ಸು ತುಂಬಿ ಬಂದಿತು! ಈ ದೇಶದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬರಿಗೂ ಮುಸ್ಲಿಮರ ಬಗ್ಗೆ ನಿಮ್ಮಷ್ಟೇ ನಿಷ್ಕಲ್ಮಶ ಕಾಳಜಿ ಸ್ಫುರಿಸಲಿ ಎಂದು ಆಶಿಸುವೆ! Reply ↓ ಸೀತಾ November 26, 2015 at 1:07 pm ಖಂಡಿತ ಸರ್ ನಿಮ್ಮ ಆಸೆ ನನಸಾಗಲಿ. ಅದು ಮೊಟ್ಟಮೊದಲು ಬಿಹಾರದಿಂದಲೇ ಶುರುವಾಗಲಿ. ಎಲ್ಲ ಸವಾಲುಗಳಿಗೆ ಉತ್ತರ ಕೊಡುವ ಛಾತಿ ಇರುವ ನಿತೀಶ್ ಭಾಯಿ ಅವರು ಅಬ್ದುಲ್ ಬಾರಿ ಸಿದ್ದಿಕ್ಕಿ ಅವರನ್ನು ಲಾಲೂ ಪುತ್ರನ ಜಾಗದಲ್ಲಿ ಉಪಮುಖ್ಯಮಂತ್ರಿಯಾಗಿ ಕೂರಿಸಲಿ. ಆಗ ಇಡೀ ದೇಶವೇ ನಿತೀಶ್ ಮಾರ್ಗವನ್ನು ಅನುಸರಿಸುತ್ತದೆ. ಏನಂತೀರ? Reply ↓ Salam Bava November 30, 2015 at 6:31 pm ಸೀತರಾಮ್ರೆ ,ನಿಮ್ಮ ಈ ಕಮೆಂಟು ಶುದ್ದ ಅಸಂಬದ್ದ . ನಾನು ಎಂದೂ ,ಎಲ್ಲ್ಲಿಯೂ ಹಿಂದೂ ಸಮುದಾಯವನ್ನು ಟೀಕೆ ಮಾಡಿಲ್ಲ ,ಅಥವಾ ಅವರ ಧಾರ್ಮಿಕ ಬಾವನೆಗೆ ನೋವುಂಟು ಮಾಡಿಲ್ಲ . ನಾನು ಟೀಕಿಸಿದ್ದು ಸಂಘಿ ಪ್ಯಾಸಿಸಂನ್ನು ,ಸಂವಿದಾನ ,ಸಮಾಜವಾದ ಮತ್ತು ಜಾತ್ಯತೀತತೆಯ ಮೇಲಾಗುವ ಧಾಳಿಯನ್ನು . ಇನ್ನು ಅಬ್ಬುಬಕ್ಕರ್ ಮೌಲ್ವಿಯವರ ಹೇಳಿಕೆಯಾಗಲಿ , ಅಥವ ಶಬರಿ ಮಲೆಯಲ್ಲಿ ಹೆಂಗಸರ ಕುರಿತಾಗಿ ಇರುವ ಕಟ್ಟು ,ಕಟ್ಟಳೆ ಗಳಾಗಲಿ ಅದು ಆಂತರಿಕವಾದ ಸಾಮುದಾಯಿಕ ಪ್ರಶ್ನೆ . ಅದನ್ನು ಅವರೇ ಆಂತರಿಕವಾಗಿ ಪರಿಹರಿಸುತ್ತಾರೆ . ಕೇರಳದ ಹಲವಾರು ಮುಸ್ಲಿಂ ನಾಯಕರೇ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ . ಅಚ್ಚುತ್ಯಾನಂದನ್ರ ಎಡ ಪಕ್ಷದವರಲ್ಲ್ಲವೇ ? ಅದು ನಿಮ್ಮ ಜಾಣ ಮರೆವೇ ! ಅದರಿಂದ ಒಂದು ದೇಶದಲ್ಲಿ ಅಶಾಂತಿ ,ಪ್ಯಾಸಿಸಂ ,ಸಂವಿದಾನದ ದಿಕ್ಕಾರ ,ಅಲ್ಪಸಂಖ್ಯಾತರ ,ದಲಿತರ ,ಮೇಲೆ ದೌರ್ಜನ್ಯ ಮತ್ತು ಬಲಾಡ್ಯರು ,ಭಂಡವಾಳಿಶಾಹಿಗಳ ವಿಜೃಂಭಣೆ ಮತ್ತು ದುರ್ಬ್ರಲರ ಶೋಷಣೆಯನ್ನು ಈ ಕೆಲವೊಂದು ಘಟನೆಗಳಿಗೆ ತಳಕು ಹಾಕುವುದು ಯಾಕೆ ? Reply ↓ ಸೀತಾ December 6, 2015 at 2:02 pm ಬಾವ ಭಾಯಿ, ಅಬೂಬಕ್ಕರ್ ಎಂಬ ಮತಾಂಧ ಸುನ್ನಿ ನಾಯಕನನ್ನು ಮೀಡಿಯಾ ಮುಂದೆ ಟೀಕಿಸುವ ನಿಮ್ಮಂತಹ ಜಾಣ ಮುಸಲ್ಮಾನರು ತೆರೆಯ ಹಿಂದೆ ಅವನ ವಾದವನ್ನು ಸಮರ್ಥಿಸುತ್ತಾರೆ ಹಾಗೂ ಅವನ ಬೆಂಬಲಕ್ಕೆ ನಿಲ್ಲುತ್ತಾರೆ. ಇದು ವಾಸ್ತವದ ಸತ್ಯ. ಆದುದರಿಂದ ಮಹಿಳೆಯರ ಬಗ್ಗೆ ಅಬೂಬಕ್ಕರನಿಗೆ ಇರುವ ಗೃಹೀತಗಳು ಆತನ ವೈಯಕ್ತಿಕ ಚಿಂತನೆ ಎಂದೂ ಸುನ್ನಿ ಸಮುದಾಯದ ಆಂತರಿಕ ವಿಷಯವೆಂದೂ ತಳ್ಳಿ ಹಾಕುವುದು ಸರಿಯಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮಡೆಸ್ನಾನ ಆಚರಣೆಯೂ ಮಲೆಕುಡಿಯರ ಆಂತರಿಕ ವಿಷಯವೇ ಅಲ್ಲವೇ? ಆದರೆ ಅದನ್ನು ಅದೆಷ್ಟೋ ಪ್ರಜ್ಞಾವಂತ ಹಿಂದೂಗಳು ವಿರೋಧಿಸಿ ಕೋರ್ಟಿಗೂ ಹೋಗಿದ್ದಾರಲ್ಲವೇ? ಅದೇ ರೀತಿ ಮುಸಲ್ಮಾನ ಹೆಣ್ಣುಮಕ್ಕಳ ಮೂಲಭೂತ ಘನತೆಯನ್ನು ಘಾಸ ಮಾಡುವ ಅಬೂಬಕ್ಕರನ ಧೋರಣೆಗಳನ್ನು ಸುನ್ನಿ ಸಮುದಾಯದ ಒಳಗೂ ಹೊರಗೂ ಕೋರ್ಟಿನಲ್ಲೂ ಪ್ರಶ್ನಿಸಬೇಕಾಗಿದೆ. Reply ↓ Shridhar Prabhu December 1, 2015 at 10:53 am ಸೀತಾ ಅವರೇ. ಲಾಲೂ ಮಾತ್ರವಲ್ಲ ಯಾವ ರಾಜಕಾರಣಿಯ ಕುಟುಂಬ ರಾಜಕಾರಣವನ್ನು ನಾನು ಖಂಡಿತಾ ಒಪ್ಪುವುದಿಲ್ಲ. ತಮ್ಮ ಮಗನ ಬದಲು ರಾಷ್ಟ್ರೀಯ ಜನತಾದಳದ ಯಾವುದಾದರೂ ಒಬ್ಬ ಮುಖಂಡರನ್ನು ಉಪ ಮುಖ್ಯಮಂತ್ರಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು ಎಂಬುದನ್ನು ನಾನು ಒಪ್ಪುತ್ತೇನೆ. ಒಂದು ಪರಿಪಕ್ವ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಸಿದ್ಧಾಂತದ ಆಧಾರದ ಮೇಲೆ ನಡೆಯಬೇಕು. ನೀತಿ ಮುಖ್ಯವಾಗಬೇಕೇ ವಿನಃ ನೇತಾ ಅಲ್ಲ. ಆದರೆ ದುರ್ಭಾಗ್ಯವಶಾತ್ ಬಿಹಾರದ ಚುನಾವಣೆಗಳೂ ಸೇರಿದಂತೆ ಭಾರತದ ಬಹುತೇಕ ಚುನಾವಣೆಗಳು ವ್ಯಕ್ತಿ ಕೇಂದ್ರಿಕವಾಗಿವೆ. ಈ ಸಂಪ್ರದಾಯ ಸಧ್ಯಕ್ಕೆ ನಿಲ್ಲುವ ಸೂಚನೆಗಳು ಕಾಣಿಸುತ್ತಿಲ್ಲ. ಬಿಹಾರದಲ್ಲಿ ನಡೆದ ಚುನಾವಣೆಗಳು ನಿರ್ವಿವಾದವಾಗಿ ಮೋದಿ ಮತ್ತು ನಿತೀಶ್ ಮಧ್ಯದ ನೇರ ಹಣಾಹಣಿ. ಬಿಹಾರದ ಜನತೆ ಲಾಲೂ ಯಾದವ್ ಸೇರಿದಂತೆ ಯಾವುದೇ ಪಕ್ಷದ ಯಾವುದೇ ನೇತಾರರನ್ನು ನೋಡಿ ಮತ ಹಾಕಿಲ್ಲ. ಹಾಗೆಯೇ ಭಾಜಪ ಕೂಡ ಮೋದಿಯವರ ವಯಕ್ತಿಕ ವರ್ಚಸ್ಸನ್ನೇ ನೆಚ್ಚಿಕೊಂಡಿತ್ತು. ಮೋದಿ ಮತ್ತು ನಿತೀಶ್ ಮಧ್ಯೆ ಬಿಹಾರ ನಿತೀಶರನ್ನು ಆಯ್ದುಕೊಂಡಿದೆ. ಸಂಯುಕ್ತ ಜನತಾದಳ ತನ್ನ ಸ್ವಂತ ಶಕ್ತಿಯಿಂದ ಗೆದ್ದುಕೊಂಡ ಅನೇಕ ಕ್ಷೇತ್ರಗಳನ್ನೂ ಲಾಲೂ ಅವರ ಪಾರ್ಟಿಗೆ ಬಿಟ್ಟು ಕೊಟ್ಟು ಸಮ್ಮಿಶ್ರ ರಾಜಕಾರಣದ ಧರ್ಮವನ್ನು ಕಾಪಾಡಬೇಕಾಯಿತು. ಆದರೆ ನಿತೀಶ್ ಅವರ ವಯಕ್ತಿಕ ವರ್ಚಸ್ಸು ಬಿಹಾರದ ಚುನಾವಣೆಗಳ ಮೇಲೆ ಅತ್ಯಂತ ಗಾಢ ಪ್ರಭಾವ ಬೀರಿದೆ ಎಂದು ಅವರ ವಿರೋಧಿಗಳೂ ಒಪ್ಪುತ್ತಾರೆ. ಹಾಗಾಗಿ ಲಾಲೂ ಅಥವಾ ಸುಶೀಲ್ ಮೋದಿ ಅಥವಾ ಇನ್ಯಾವುದೇ ಬಿಹಾರದ ನಾಯಕರು ಇಲ್ಲಿ ಗೌಣ. ಇಂದು ಒಂದು ಕಾಲದಲ್ಲಿ ಲಾಲೂ vs. ಇತರರು ಎಂಬ ಸಂದರ್ಭ ಇತ್ತು. ಯೋಗೇಂದ್ರ ಯಾದವರು ಹೇಳಿದ ಮಾತು ಆ ಕಾಲಕ್ಕೆ ಸರಿಹೋಗುತ್ತದೆ. ಯೋಗೇಂದ್ರ ಯಾದವರು ಲಾಲೂ ಬಗ್ಗೆ ಕಳವಳ ವ್ಯಕ್ತಪಡಿಸಿದರೇ ಹೊರತು ಭಾಜಪವನ್ನು ಸಮರ್ಥಿಸಲಿಲ್ಲವಲ್ಲ. ಅರವಿಂದ ಕೆಜ್ರಿವಾಲ್ ಅವರೊಂದಿಗಿನ ವೈಮಸ್ಸಿನ ಕಾರಣದಿಂದ ಕೂಡ ಯಾದವ್ ಹೀಗೆ ಹೇಳಿರಬಹುದು. ನೀವು ನಾವು ಮತ್ತು ಅನೇಕರು ಅಭಿಮಾನಪಡುವ ಯೋಗೇಂದ್ರ ಯಾದವ್ ಅವರಿಗೆ ಲಾಲೂ ಅವರಿಗಿಂತ ಭಾಜಪ ಹೆಚ್ಚು ಅಪಥ್ಯ ಎಂಬುದನ್ನು ನೀವೂ ಸಹ ಒಪ್ಪುತ್ತೀರಿ ಎಂದುಕೊಳ್ಳುತ್ತೇನೆ. Reply ↓ ಸೀತಾ December 6, 2015 at 1:15 pm ಸರಿ ಪ್ರಭುಗಳೇ, ಕೆಲವೇ ವರ್ಷಗಳ ಹಿಂದೆ ಹಿಂದುತ್ವವಾದಿ ಭಾಜಪದ ಸಖ್ಯದಿಂದ ಅಧಿಕಾರಕ್ಕೆ ಬಂದ ನಿತೀಶ್ ಸಾಹೇಬರು ಇಂದು ಜಾತಿವಾದಿ ಲಾಲೂ ಅವರ ಸಖ್ಯದಿಂದ ಅಧಿಕಾರ ಉಳಿಸಿಕೊಂಡಿದ್ದಾರೆ. ಯಾವುದು ಯೋಗೇಂದ್ರ ಯಾದವ್ ಅವರಿಗೆ ನಿತೀಶ್ ಅವರ ತತ್ವಹೀನ ಅಧಿಕಾರ ಲಾಲಸೆ ಎಂದು ಭಾಸವಾಗಿದೆಯೋ ಅದು ನಿಮಗೆ ಸಮ್ಮಿಶ್ರ ರಾಜಕಾರಣದ ಧರ್ಮವಾಗಿ ಕಂಡಿದೆ! ಇರಲಿ, ನಿಮ್ಮ ಹಾಗೆ ಇನ್ನೂ ಅನೇಕರ ವೈರುಧ್ಯಗಳ ಉತ್ತಮ ವಿಶ್ಲೇಷಣೆಯನ್ನು ಈ ಅಂಕಣ ಬರಹದಲ್ಲಿ ಕಾಣಬಹುದು: _http://bit.ly/1SGrdBw Reply ↓ Reader December 9, 2015 at 7:52 pm ಬಿಹಾರದ ಚುನಾವಣೆ ಮಾತ್ರವಲ್ಲ ಈ ಸರ್ವಾಧಿಕಾರಿ ಪ್ರವೃತ್ತಿಯ ಮೋದಿ ಅಧಿಕಾರ ವಹಿಸದಾಗಿನಿಂದ ಮಹಾರಾಷ್ಟ್ರದ ಚುನಾವಣೆಯೊಂದನ್ನು ಹೊರತಾಗಿಸಿದಂತೆ,ಸ್ಥಳೀಯಾಡಳಿತ (ಇದೀಗ ಗುಜರಾತಿನದ್ದೂ) ಸಹಿತ ಭಾಜಪ ಮುಗ್ಗರಿಸಲು ಆರಂಭಿಸಿದೆ. ಅದರಲ್ಲಿ ಆಶ್ಚರ್ಯಪಡುವಷ್ಟು ರಹಸ್ಯವಾದುದು ಏನೂ ಇಲ್ಲ. ಯಾಕೆಂದರೆ ಭಾರತದ ಜನರಲ್ಲಿ ಅತ್ಯಧಿಕ ಮಂದಿ ಅವಿದ್ಯಾವಂತರಿರಬಹುದಾದರೂ ಭಾರತೀಯರು ಅಷ್ಟೊಂದು ಅವಿವೇಕಿಗಳಲ್ಲ ಆದ್ದರಿಂದ ಯಾರನ್ನೂ ಎಂದೆಂದಿಗೂ ವಂಚಿಸಲು ಸಾಧ್ಯವಿಲ್ಲ. ಅಂದಿನ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದ, ಅಂದಿದ್ದ ಬೆಲೆಯೇರಿಕೆ,ಜತೆಗೆ ಇಂದಿಗೂ ಅಸ್ತಿತ್ವದಲ್ಲಿರುವ ಅದರ ಪಿತ್ರಾರ್ಜಿತ ನಾಯಕತ್ವ ಹೀಗೆ ಇವೆಲ್ಲವುಗಳಿಂದ ಬೇಸತ್ತಿದ್ದ ಜನರಿಗೆ ಮಾದ್ಯಮಗಳು ಸೃಷ್ಟಿಸಿದ್ದ ಮೋದಿಯ ಕಾರ್ಮೋಡದಿಂದ ಉತ್ತಮ ಮಳೆಬೆಳೆಯನ್ನು ನಿರೀಕ್ಷಿಸಿದ್ದರಿಂದ ಉಂಟಾದ ಪ್ರಮಾದವೇ ಇಂದು ನಾವು ಅನುಭವಿಸುತ್ತಿರುವ ಅಲ್ಪಸಂಖ್ಯಾತ ಸವರ್ಣೀಯ ಪ್ರಾಬಲ್ಯದ ಸರಕಾರವಾಗಿದೆ. ಹಾಗೆಂದು ಅದು ಮೇಲ್ಜಾತಿ ನಿಯಂತ್ರಣದಲ್ಲಿರುವ ಮಾಧ್ಯಮವು ಸೃಷ್ಟಿಸಿದ ಕೃತಕ ಮೋಡದಿಂದ ನಾವು ಮೂಢರಾದೆವು ಎಂಬ ವಾಸ್ತವವನ್ನರಿತು ತಮ್ಮ ಆಶಾಗೋಪುರಗಳ ಭ್ರಮೆಯಿಂದ ಹೊರ ಬರಲು ಈ ಸರ್ಕಾರ ಹೆಚ್ಚಿನ ಸಮಯವೇನೂ ಜನರಿಗೆ ನೀಡದೆ ಕ್ಷಿಪ್ರವಾಗಿಯೇ ತನ್ನ ನಿಜ ಬಣ್ಣವನ್ನು ಬಟ್ಟಾಬಯಲಾಗಿಸಿಕೊಂಡಿದೆ. ಕಪ್ಪು ಹಣ ವಾಪಸಾತಿಯಾಗಿಸಿ ತಮ್ಮೆಲ್ಲರ ಜೇಬಿಗೆ ಲಕ್ಷಗಳನ್ನು ತುಂಬಿಸುವ ಸುಳ್ಳು ಆಶ್ವಾಸನೆ ಸೇರಿದಂತೆ ಅವು ಯಾವೆಲ್ಲಾ ಸುಳ್ಳು ಭರವಸೆಗಳು ನೀಡಿದ್ದವು ಎಂದು ಒಂದೊಂದಾಗಿ ಉಲ್ಲೇಖಿಸುವ ಅಗತ್ಯವಿರಲಾರದು (ಪ್ರತಿವಾದಿಗಳು ಇದ್ದರೆ ಅವೆಲ್ಲವೂ ಸಿದ್ದವಾಗಿದೆ) ಹೀಗೆ ತಾವು ಮೋಸ ಹೋದೆವು ಎಂದು ತಿಳಿದ ಕೂಡಲೇ ಜನರು ಸಹಜವಾಗಿಯೇ ಅದಕ್ಕೆ ನೀಡುವ ಬೆಂಬಲದಿಂದ ಹೊರಬಂದರು ಅದರ ಪ್ರತಿಫಲವೇ ಈ ಬದಲಾವಣೆಯಾಗಿದೆ. ಮಾತ್ರವಲ್ಲ ಇನ್ನೂ ಬದಲಾವಣೆಯಾಗಲಿದೆ. ಅದೇಕೆಂದರೆ ಭಾರತದ ವೈಶಿಷ್ಟ್ಯವಾದ ವಿವಿಧತೆಯಲ್ಲಿ ಐಕ್ಯತೆಯನ್ನು (Unity in Diversity) ಯನ್ನು ಯಾವ ಸಂಘಪರಿವಾರದ ಯಾವ ಕೇಸರಿ ಗೂಂಡಾಗಳಿಂದಲೂ ಅಳಿಸಲು ಸಾಧ್ಯವಿಲ್ಲ ಎಂಬುವುದು ಸಾಬೀತಾಗಲಿದೆ. ಇವರ ನಕಲಿ ಹಿಂದುತ್ವ ಅಧಿಕಾರ ಲಾಲಸೆಯದ್ದೆ ವಿನಃ ನೈಜ ಹಿಂದೂ ಧರ್ಮಕ್ಕೂ ಜನಸಾಮಾನ್ಯರನ್ನು ವಿಭಜಿಸುವ ಇವರ ಸ್ವಾರ್ಥ ರಾಜಕಾರಣಕ್ಕೂ ಸಂಬಂಧವೇ ಇಲ್ಲ ಎಂಬ ಸತ್ಯವನ್ನು ಮತದಾರರು ಮನಗಾಣುತ್ತಿದ್ದಾರೆ. ಉಳಿದಂತೆ ಭಾಜಪ ಸರ್ಕಾರದಲ್ಲಿ ಯಾವ ಸಾಹಿತಿಗಾಗಲೀ,ವಿಜ್ಞಾನಿಗಾಗಲೀ ಬುದ್ದಿಜೀವಿಗಳಿಗಾಗಲೀ ಅದಾವ ಮನಸ್ತಾಪವೂ ಇಲ್ಲ ಹಾಗಿದ್ದಿದ್ದರೆ ಇಂದು ಕಾಣುವ ಪ್ರಶಸ್ತಿ ವಾಪಸಾತಿಯ ವಿದ್ಯಮಾನ ಯಾಕಾಗಿ ಈ ಮೊದಲಿನ ವಾಜಪೇಯಿಯವರ ಭಾಜಪ ಸರಕಾರಕ್ಕೆದುರಾಗಲಿಲ್ಲ ಎಂಬುವುದು ಪ್ರಶ್ನಾರ್ಹವಾಗಿದೆ. ಇನ್ನು ಸಹಿಷ್ಣುತೆಯನ್ನು ಹೊಂದಿರದ, ಕೋಮುವಾದದಿಂದ ಮಂಕಾದ ಬರಡು ಹೃದಯಗಳಿಗೆ ಅಸಹಿಷ್ಣುತೆ ಗೋಚರವಾಗುವುದಾದರೂ ಹೇಗೆ? ಯಾರನ್ನೂ ಮನುಷ್ಯವರ್ಗವೆಂದು ಕಾಣಲಾಗದ ಅವರು ಪ್ರತಿಯೊಬ್ಬರನ್ನು ಹಿಂದೂ ಮುಸ್ಲಿಂ ಕ್ರೈಸ್ತ ಎಂಬೋಪಾದಿಯಲ್ಲಿ ನೋಡುವ ಹೃದಯ ಶುದ್ದಿಯಾಗುವವರೆಗೆ ಎಲ್ಲಿದೆ ಅಸಹಿಷ್ಣುತೆ ಎಂದು ತಡಕಾಡುತ್ತಾ ಗೊಣಗುತ್ತಲೇ ಇರುವರು. ಸಾಮಾಜಿಕ ಅಂತರ್ಜಾಲ ತಾಣಗಳು ಲಭಿಸಿದ್ದಲ್ಲೆಲ್ಲಾ ತಮ್ಮ ಹಳಸಿದ ಮನೋಭಾವನೆಯನ್ನು ವಾಂತಿ ಮಾಡುತ್ತಲೇ ಇರುವರು. ಇತಿ, ವರ್ತಮಾನದ ಓದುಗ. Reply ↓ jana snehi December 10, 2015 at 9:55 pm ರೀಡರ್ ರವರು ನೀಡಿದ ಅಂಟಿಪಾಟಿಕ್ ಫಲಿಸಿರಬೇಕು. ಕೋಮುವ್ಯಾಧಿಯಿಂದಾಗಿ ವಾಂತಿ ಮಾಡುವ ಪ್ರತಿಕ್ರಿಯೆಗಳು ಸದ್ಯಕ್ಕೆ ಸ್ಥಗಿತಗೊಂಡವು. ಕೋಮುವಾದದ ಮೂಲಕ ಮೇಲ್ಜಾತಿ ಪ್ರಾಬಲ್ಯವನ್ನು ಉಳಿಸಲು ಹೆಣಗಾಡುವ ಅದಕ್ಕಾಗಿ ಹಿಂದುತ್ವ ಮಂತ್ರವ ಜಪಿಸಿ ಅಮಾಯಕ ಹಿಂದುಳಿದವರ್ಗದ ಜನಗಳಿಗೆ (ಅವರು ಯಾವ ರೀತಿಯಲ್ಲಿಯೂ ಮೇಲ್ಜಾತಿಗಳಿಗೆ ಸಮಾನವಲ್ಲದಿದ್ದರೂ,ಹಿಂದೂ ಅರ್ಚಕ ಸ್ಥಾನಕ್ಕೆ,ಅಷ್ಟಮಟಗಳಿಗೆ ಮಟಾಧಿಪಥಿಗಾಗಲೀ ಅನರ್ಹರಾಗಿದ್ದರೂ ಕೂಡಾ) ನೀವು (ಎಷ್ಟೇ ಹಿಂದೆ ಆದರೂ) (ನಮಗೆ ಮತ ನೀಡಿ ಅಧಿಕಾರದಲ್ಲಿರಿಸಲು) ನೀವೂ ಹಿಂದೂವೇ ಆಗಿರುವಿರಿ ಎಂದೇ ಬಿಂಬಿಸಿ ಅಲ್ಪ ಸಂಖ್ಯಾತ ಸವರ್ಣೀಯ ವರ್ಗವು ತಮ್ಮನ್ನು ಬಹುಸಂಖ್ಯಾತರೆಂದು ಘೋಷಿಸಿಕೊಂಡಿದೆ. ಆದ್ದರಿಂದ ಅವುಗಳಿಗೆ ವ್ಯತಿರಿಕ್ತವಾದ ವಾಸ್ತವಿಕತೆಗಳನ್ನು ವಿವರಿಸುವ ಅದಾವ ಸಾಚಾ ಲೇಖನವನ್ನು ನೋಡಿದರೂ ಈ ಜನಗಳಿಗೆ ಅದೆಷ್ಟು ಉತ್ತಮ ಬರಹವಿದ್ದರೂ ಅದರಲ್ಲಿ ವೈರುಧ್ಯಗಳೇ ಕಾಣಿಸುತ್ತವೆ.ಮಾತ್ರವಲ್ಲ ಈ ಸಕಾಲಿಕ ಸತ್ಯಗಳನ್ನು ಜೀರ್ಣಿಸಲಾಗದೆ, ವಾಂತಿ ಮಾಡಲು ಆರಂಭಿಸುತ್ತಾರೆ. ಒಂದೊಂದೇ ವಿಷಯಗಳನ್ನು ಪ್ರಾಮಾಣಿಕವಾಗಿ ಪುರಾವೆಗಳಿಂದ ಮಂಡಿಸುವ ಲೇಖನವಿದ್ದರೆ ಇವುಗಳನ್ನು ಓದುತ್ತಲೇ ತಲೆಸುತ್ತುವಿಕೆ ಶುರುವಾಗಿ ಕೊನೆಗೆ ಬೇಕಾಬಿಟ್ಟಿಯಾಗಿ ಪ್ರತಿಕ್ರಿಯೆಗಳ ಮೂಲಕ ಕಾರಿಕೊಳ್ಳುತ್ತಾ ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಇನ್ನಷ್ಟು ಪ್ರಮಾಣಗಳನ್ನು ಹೊಂದಿರುವ ಪ್ರತಿಕ್ರಿಯೆ ಕಂಡರೆ ತಮ್ಮ ವಾದ ಮಂಡಿಸಿದಷ್ಟೂ ಮತ್ತಷ್ಟು ನಗ್ನರಾಗುವೆವು ಎಂದರಿತಾಗ ಇವೆಲ್ಲವೂ ಕೊನೆಯಾಗಿ ಸುಮ್ಮನಿರುತ್ತಾರೆ. ಈ ಹಿಂದೊಮ್ಮೆ ವಿದೇಶಿ ಉದ್ಯೋಗಿಗಳನ್ನು ಭಯೋತ್ಪಾದಕರು ಎಂದು ಜರೆದ ಪ್ರತಿಕ್ರಿಯೆ ನೀಡಿದ ವ್ಯಕ್ತಿಯಲ್ಲಿ ಅದರ ಬಗ್ಗೆ ಓದುಗರೊಬ್ಬರು ಸ್ಪಷ್ಟೀಕರಣ ಬಯಸಿದಾಗ ಅಷ್ಟೊಂದು ಬೇಜವಬ್ಧಾರಿಯಾಗಿ ತನ್ನ ನೀಚ ಮನೋಭಾವನೆ ವ್ಯಕ್ತಗೊಳಿಸಿದ ಆ ವ್ಯಕ್ತಿ ಧೀರ್ಘ ಕಾಲಕ್ಕೆ ಪ್ರತಿಕ್ರಿಯೆ ನೀಡುವುದರಿಂದಲೇ ನಾಪತ್ತೆಯಾಗಿದ್ದರು.
ನಿಮ್ಮ ಕೂದಲನ್ನು ಬಾಚಲು ನೀವು ಯಾವ ಬಾಚಣಿಗೆ ಬಳಸ್ತಾ ಇದ್ದೀರಾ? ಅಫ್‌ಕೋರ್ಸ್‌ ಪ್ಲಾಸ್ಟಿಕ್‌ನಿಂದ ತಯಾರಿಸಿದ್ದೇ ಆಗಿರುತ್ತೆ. ಯಾಕಂದ್ರೆ ಹೆಚ್ಚಿನವು ದೊಡ್ಡ ದೊಡ್ಡ ಕಂಪೆನಿಯ ಬಾಚಣಿಗೆ ಕೂಡ ಪ್ಲಾಸ್ಟಿಕ್‌ನಿಂದಲೇ ತಯಾರಿಸಿರ್ತಾರೆ. ಇಲ್ಲ ಅಂದ್ರೆ ಮೆಟಲ್‌ನಿಂದ ತಯಾರಿಸಿದ ಕೂಂಬ್‌ಗಳಾಗಿರುತ್ತೆ. ಆದ್ರೆ ಇವುಗಳಿಗಿಂತ ಬೆಸ್ಟ್‌ ಮರದಿಂದ ತಯಾರಿಸಿರುವ ಬಾಚಣಿಗೆಗಳು. ಮರದ ಬಾಚಣಿಗೆಗಳು ನಿಮ್ಮ ಕೂದಲಿಗೆ ಅತ್ಯಂತ ಉಪಯೋಗಕಾರಿ ಅನ್ನೋದು ಸಂಶೋಧನೆಗಳಿಂದಲೇ ತಿಳಿದುಬಂದಿದೆ. ಪ್ಲಾಸ್ಟಿಕ್‌ ಬಾಚಣಿಗೆಗೂ ಮರದ ಬಾಚಣಿಗೆಗೂ ಇದೇ ವ್ಯತ್ಯಾಸ: ಮೆಟಲ್‌ ಅಥ್ವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕೂಂಬ್‌ಗಳು ನಿಮ್ಮ ಸ್ಕಾಲ್ಪ್‌ಗಳಿಗೆ ರಫ್‌ […] sadhu srinath | Nov 02, 2019 | 5:17 PM ನಿಮ್ಮ ಕೂದಲನ್ನು ಬಾಚಲು ನೀವು ಯಾವ ಬಾಚಣಿಗೆ ಬಳಸ್ತಾ ಇದ್ದೀರಾ? ಅಫ್‌ಕೋರ್ಸ್‌ ಪ್ಲಾಸ್ಟಿಕ್‌ನಿಂದ ತಯಾರಿಸಿದ್ದೇ ಆಗಿರುತ್ತೆ. ಯಾಕಂದ್ರೆ ಹೆಚ್ಚಿನವು ದೊಡ್ಡ ದೊಡ್ಡ ಕಂಪೆನಿಯ ಬಾಚಣಿಗೆ ಕೂಡ ಪ್ಲಾಸ್ಟಿಕ್‌ನಿಂದಲೇ ತಯಾರಿಸಿರ್ತಾರೆ. ಇಲ್ಲ ಅಂದ್ರೆ ಮೆಟಲ್‌ನಿಂದ ತಯಾರಿಸಿದ ಕೂಂಬ್‌ಗಳಾಗಿರುತ್ತೆ. ಆದ್ರೆ ಇವುಗಳಿಗಿಂತ ಬೆಸ್ಟ್‌ ಮರದಿಂದ ತಯಾರಿಸಿರುವ ಬಾಚಣಿಗೆಗಳು. ಮರದ ಬಾಚಣಿಗೆಗಳು ನಿಮ್ಮ ಕೂದಲಿಗೆ ಅತ್ಯಂತ ಉಪಯೋಗಕಾರಿ ಅನ್ನೋದು ಸಂಶೋಧನೆಗಳಿಂದಲೇ ತಿಳಿದುಬಂದಿದೆ. ಪ್ಲಾಸ್ಟಿಕ್‌ ಬಾಚಣಿಗೆಗೂ ಮರದ ಬಾಚಣಿಗೆಗೂ ಇದೇ ವ್ಯತ್ಯಾಸ: ಮೆಟಲ್‌ ಅಥ್ವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕೂಂಬ್‌ಗಳು ನಿಮ್ಮ ಸ್ಕಾಲ್ಪ್‌ಗಳಿಗೆ ರಫ್‌ ಫೀಲಿಂಗ್‌ ನೀಡುತ್ತೆ. ಆದ್ರೆ ಮರದಿಂದ ತಯಾರಿಸಿದ ಬಾಚಣಿಗೆ ಸಾಫ್ಟ್‌ ಆಗಿರುತ್ತೆ ಮತ್ತು ಪಾಲಿಶ್ಡ್‌ ಆಗಿರುತ್ತೆ. ಅವು ಪ್ಲಾಸ್ಟಿಕ್‌ ಮತ್ತು ಮೆಟಲ್‌ನಿಂದ ತಯಾರಿಸಿರುವ ಕೂಂಬ್‌ಗಳಿಗಿಂತ ಸ್ಕಾಲ್ಪ್‌ಗೆ ಹೆಚ್ಚು ಹಿತವಾದ ಅನುಭವವನ್ನು ನೀಡಬಲ್ಲದು, ಅದ್ರಲ್ಲೂ ನಿಮ್ಮದು ಸೆನ್ಸಿಟೀವ್‌ ಸ್ಕಾಲ್ಪ್‌ ಆಗಿದ್ರೆ ವುಡನ್‌ ಬಾಚಣಿಗೆಗಳು ಸ್ಕಾಲ್ಪ್‌ ಸ್ಕ್ರಾಚ್‌ ಆಗೋದು ಅಥ್ವಾ ಸ್ಕಾಲ್ಪ್‌ ಹಾನಿಯಾಗುವ ಎಲ್ಲಾ ಅಂಶಗಳಿಂದ ದೂರವಿರುವಂತೆ ಮಾಡುತ್ತೆ. ತಲೆಗೆ ಎಣ್ಣೆ ಹಚ್ಚಿದಾಗ ಪ್ಲಾಸ್ಲಿಕ್‌ ಬಾಚಣಿಗೆ ಸ್ಕಾಲ್ಪ್ ಮತ್ತು ಕೂದಲಿಗೆ ಸರಿಯಾಗಿ ಎಣ್ಣೆಯನ್ನು ಅಪ್ಲೈ ಆಗುವಂತೆ ಮಾಡುವುದಿಲ್ಲ. ಬದಲಾಗಿ ಮರದ ಬಾಚಣಿಗೆ ಬಳಸಿದ್ರೆ ನಿಮ್ಮ ಕೂದಲು ಮತ್ತು ಚರ್ಮದ ಭಾಗಕ್ಕೆ ಸರಿಯಾಗಿ ಎಣ್ಣೆ ಹರಡುವಂತೆ ಮಾಡುತ್ತೆ. ಮರದ ಬಾಚಣಿಗೆಯಿಂದ ಎಣ್ಣೆ ಸವರಿಕೊಳ್ಳೋದ್ರಿಂದ ಸ್ಕಾಲ್ಪ್‌ ಗ್ರೀಸಿಗ್ರೀಸಿ ಆಗಿ ತುರಿಕೆ ಮತ್ತಿತರ ಕಾಯಿಲೆಗಳು ಬರದಂತೆ ತಡೆಯಲು ಈ ಮರದ ಬಾಚಣಿಗೆಗಳು ನೆರವಾಗುತ್ತೆ. ಪರಿಣಾಮಗಳು: ಪ್ಲಾಸ್ಟಿಕ್ ಮತ್ತು ಮೆಟಲ್‌ ಬಾಚಣಿಗೆಗಳ ಎಲೆಕ್ಟ್ರಿಕ್‌ ಕಂಡಕ್ಟರ್‌ ಗುಣಗಳಿಂದಾಗಿ ಕೂದಲು ಆರೋಗ್ಯಪೂರ್ಣವಾಗಿ ಇರೋದಿಲ್ಲ. ಬದಲಾಗಿ ಕೂದಲು ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತೆ. ಆದ್ರೆ ಮರ ನಿಮ್ಗೆ ಗೊತ್ತಿರೋ ಹಾಗೆ ಒಂದು ಅವಾಹಕ. ಅಂದ್ರೆ ವಿದ್ಯುತ್ ಪ್ರವಹಿಸಲು ಬಿಡೋದಿಲ್ಲ. ಹಾಗಂತ ಕೂದಲಲ್ಲಿ ವಿದ್ಯುತ್‌ ಪ್ರವಹಿಸುತ್ತಾ ಅಂತ ಪ್ರಶ್ನೆ ಕೇಳ್ಬೇಡಿ. ಇದೊಂದು ನ್ಯಾಚುರಲ್ ಪ್ರಕ್ರಿಯೆ ಅಷ್ಟೇ, ಒಟ್ಟಿನಲ್ಲಿ ಮರದ ಬಾಚಣಿಗೆಯ ಅವಾಹಕ ಗುಣದಿಂದಾಗಿ ಕೂದಲು ಡ್ಯಾಮೇಜ್‌ ಆಗೋದನ್ನ ತಡೆಯುತ್ತೆ. ಉದ್ದ ಕೂದಲಿರುವವರಿಗೆ ಕೂದಲು ಸಿಕ್ಕಾಗುವುದು, ಬಾಚುವಾಗ ನೋವಾಗುವ ಸಮಸ್ಯೆ ಕಾಡುತ್ತೆ. ಆದ್ರೆ ಮರದ ಬಾಚಣಿಗೆ ಬಳಸೋದ್ರಿಂದ ಈ ಸಮಸ್ಯೆ ಕಡಿಮೆಯಾಗುತ್ತೆ. ಅಷ್ಟೇ ಅಲ್ಲ, ಕೂದಲಿನ ಲೆಂಥ್ ಮತ್ತು ನೀವು ಕೂದಲಿಗೆ ಅಪ್ಲೈ ಮಾಡುವ ಎಣ್ಣೆಯನ್ನು ಸರಿಯಾಗಿ ಡಿಸ್ಟ್ರಿಬ್ಯೂಟ್ ಮಾಡಿ ಎಲ್ಲಾ ಕೂದಲೂ ಆರೋಗ್ಯಪೂರ್ಣಗೊಳ್ಳಲು ಇದು ಸಹಕಾರಿಯಾಗಿದೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಇನ್ನು ನೀವು ಯಾವ ಮರದ ಬಾಚಣಿಗೆ ಬಳಸ್ತಾ ಇದ್ದೀರಿ ಅನ್ನೋದನ್ನೂ ಪರಿಶೀಲಿಸಿಕೊಳ್ಳಲು ಸಾಧ್ಯವಿದ್ರೆ ಪರಿಶೀಲಿಸಿಕೊಳ್ಳಿ. ಬೇವಿನ ಮರದ ಬಾಚಣಿಗೆಯನ್ನು ಬಳಸಿದ್ರೆ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತೆ. ಕೂದಲಲ್ಲಿ ಅಥ್ವಾ ತಲೆಯಲ್ಲಿ ಆಗುವ ಅಲರ್ಜಿಗಳನ್ನು ನಿವಾರಿಸಲು ಈ ಬೇವಿನ ಮರದ ಬಾಚಣಿಗೆ ಹೆಚ್ಚು ಪರಿಣಾಮಕಾರಿ. ಇನ್ನು ಮರದ ಬಾಚಣಿಗೆಯನ್ನು ಆಗಾಗ ಕ್ಲೀನ್ ಮಾಡ್ಕೊಳ್ತಾ ಇರಿ. ಆದ್ರೆ ನೀರಿನಿಂದ ತೊಳೆದು ಕ್ಲೀನ್ ಮಾಡ್ಬೇಡಿ. ನ್ಯಾಚುರಲ್ ಆಯಿಲ್ ಬಳಸಿ ಕ್ಲೀನ್ ಮಾಡಿಕೊಳ್ಳಬಹುದು. ಮರದ ಬಾಚಣಿಗೆ ಕ್ಲೀನ್ ಮಾಡಲು ಜೋಜೋಬಾ ಆಯಿಲ್ ತುಂಬಾ ಒಳ್ಳೆಯದಂತೆ. ಇತ್ತೀಚೆಗೆ ಬೇರೆಬೇರೆ ಡಿಸೈನಿನ ಮರದ ಬಾಚಣಿಗೆಗಳು ಲಭ್ಯವಿರೋದ್ರಿಂದ ಎಲ್ಲಾ ಲೇಡಿಸ್ ತಮ್ಮ ವ್ಯಾನಿಟಿಯಲ್ಲಿ ಇಟ್ಟುಕೊಳ್ಳಲೇಬೇಕಾದ ಒಂದು ಬೆಸ್ಟ್ ಆಕ್ಸಸರಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಪ್ಲಾಸ್ಟಿಕ್ ಅಥ್ವಾ ಮೆಟಲ್‌ ಬಾಚಣಿಗೆಗಳಿಗಿಂತ ಮರದ ಬಾಚಣಿಗೆಗಳು ನಿಮಗೆ ಹೆಚ್ಚು ಪ್ರಯೋಜನಕಾರಿ.
ಪ್ರತಿಯೊಬ್ಬ ಮನುಷ್ಯರು ಹಣವನ್ನು ಗಳಿಸಲು ತುಂಬಾನೇ ಶ್ರಮವನ್ನು ಪಡುತ್ತಾರೆ ಕೆಲವೊಮ್ಮೆ ಹೆಚ್ಚಿನ ಶ್ರಮ ಪಟ್ಟರೂ ಸಹ ಅವರಿಗೆ ಸಿಗಬೇಕಾದಷ್ಟು ಹಣವು ಸಿಗುತ್ತಿಲ್ಲ ಅವರ ಯೋಗದಲ್ಲಿ ಹಣ ಇರುತ್ತದೆ ಆದರೆ ಕೆಲವು ಕಾರಣಗಳಿಂದ ಅದು ಸಿಗುತ್ತಿರುವುದು ಇಲ್ಲ ಇಲ್ಲಿ ನಾವು ಪ್ರಾಚೀನ ಜ್ಞಾನ ಮತ್ತು ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯವನ್ನು ನಾವು ತಿಳಿದುಕೊಳ್ಳಬಹುದಾಗಿದೆ ಮೊದಲನೆಯದಾಗಿ ತಾಯಿ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಚಿತ್ರದ ಮೇಲೆ ನೀವು ಕೇಸರಿಯನ್ನು ಅರ್ಪಿಸಿದರೆ ಅಥವಾ ಹೂವನ್ನು ಅರ್ಪಿಸಿದರೆ ವರ್ಷವಿಡಿ ಇರುವ ತೊಂದರೆಗಳು ನಿಮಗೆ ದೂರವಾಗುತ್ತದೆ ಇದನ್ನು ನೀವು ನಂಬಿಕೆಯಿಂದ ಹಚ್ಚಬೇಕಾಗುತ್ತದೆ ಏಕೆಂದರೆ ಕೇಸರಿಯು ತಾಯಿ ಲಕ್ಷ್ಮೀದೇವಿಯ ತುಂಬಾನೇ ಪ್ರಿಯವಾಗಿದೆ . ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588 ಅಚಾನಕ್ಕಾಗಿ ಧನಪ್ರಾಪ್ತಿ ಯಾಗಲು ನೀವು ನಿಮ್ಮ ಮನಸಿಚ್ಛೆ ಯನ್ನು ಮನಸ್ಸಿನಲ್ಲಿ ಹೇಳುತ್ತಾ ಆಲದ ಮರದ ಬೇರಿಗೆ ಗಂಟುಗಳನ್ನು ಕಟ್ಟಬೇಕು ಮೂರನೆಯದಾಗಿ ಕಪ್ಪು ಅರಿಶಿನ-ಕುಂಕುಮವನ್ನು ಬಟ್ಟೆಯಲ್ಲಿ ಕಟ್ಟಿ ಹಣವನ್ನು ಇಡುವ ಸ್ಥಾನದಲ್ಲಿರುವುದರಿಂದ ಧನ ಪ್ರಾಪ್ತಿಯಾಗುತ್ತದೆ ನಾಲ್ಕನೆಯದಾಗಿ ಅನ್ನೊಂದು ಕವಡೆಯನ್ನು ಕೇಸರಿಯಲ್ಲಿ ಮಿಶ್ರಣ ಮಾಡಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಹಣವಿರುವ ಸ್ಥಾನದಲ್ಲಿರುವುದರಿಂದ ಹಣದಲ್ಲಿ ನಾವು ವೃದ್ಧಿಯನ್ನು ಕಾಣಬಹುದು. ಪ್ರತಿದಿನ ಸಂಜೆ ಸಾಸಿವೆ ಎಣ್ಣೆಯ ಎರಡು ದೀಪವನ್ನು ಮನೆಯ ಮುಂದೆ ಉರಿಸುವುದರಿಂದ ಧನ ವೃದ್ದಿಯಾಗುತ್ತದೆ ಆರನೆಯದಾಗಿ ಸಂಕದಲ್ಲಿ ನೀರನ್ನು ತುಂಬಿ ಲಕ್ಷ್ಮೀದೇವಿಗೆ ಅರ್ಪಿಸಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯು ಬೇಗ ಒಲಿಯುತ್ತಾರೆ ಏಳನೇ ತಾಗಿತೋ ಲಕ್ಷ್ಮಿದೇವಿಗೆ ಕಮಲದ ಮಣಿಯವನ್ನು ಅರ್ಪಿಸಬೇಕು ಎಂಟನೆಯದಾಗಿ ಅಚಾನಕ್ಕಾಗಿ ಹಣವನ್ನು ಯಾರು ಇಷ್ಟಪಡುತ್ತಾರೆ ಯಾರಿಗೆ ಶ್ರಮಪಟ್ಟ ನಂತರವೂ ಹಣ ಹೆಚ್ಚು ಸಿಗುತ್ತಿಲ್ಲ ಅನ್ನುವವರು ಇಲ್ಲಿ ಧನಯಂತ್ರವನ್ನು ಪ್ರಯೋಗ ಮಾಡಬಹುದು ಇದರಿಂದ ಯಾವುದೇ ಕಾರಣಕ್ಕೂ ನಿಮಗೆ ಹಣದಲ್ಲಿ ಕೊರತೆ ಉಂಟಾಗುವುದಿಲ್ಲ. ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಮೇಷ ರಾಶಿ ಈ ಸಮಯದಲ್ಲಿ ನಿಮ್ಮ ಪರೀಕ್ಷೆಯ ಅವಧಿಯ ನಡೆಯುತ್ತಿದೆ ಈ ಸಮಯದಲ್ಲಿ ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಇಂದು ನಿಮ್ಮ ಕಾರ್ಯದಿಂದ ನಿಮ್ಮ ಜನಪ್ರಿಯತೆಯು ಹೆಚ್ಚಾಗಬಹುದು ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ವೃಷಭ ರಾಶಿ ಇನ್ನೂ ರೀತಿಯಲ್ಲಿ ಜಾಗರೂಕರಾಗಿರುವುದು ರಿಂದ ನಿಮ್ಮ ನಷ್ಟವನ್ನು ನೀವು ತಪ್ಪಿಸಬಹುದು ಹುಡುಗಿಯ ದೃಷ್ಟಿಯಿಂದ ನೀವು ಪ್ರಯೋಜನವನ್ನು ತೆಗೆದುಕೊಳ್ಳಬಹುದು ನಿಮ್ಮ ಪ್ರೇಯಸಿಗೆ ಜನ ಸಮಯ ನೀಡಲು ಸಾಧ್ಯವಾಗದೆ ಇರುವ ಕ್ಷಣದಿಂದ ದೂರುಗಳು ಬರುತ್ತದೆ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ಮಿಥುನ ರಾಶಿ ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಹೊಸ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು ನಿಮ್ಮ ಜೀವನ ಸಂಗಾತಿಯ ಉತ್ತಮ ವಿಷಯದ ಬಗ್ಗೆ ಎಂದು ಕ್ಷಣಗಳನ್ನು ಕಳೆಯುತ್ತೀರಾ ನಿಮ್ಮ ಮಕ್ಕಳಿಂದಲೂ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ ಇಂದು ನಿಮಗೆ ಉತ್ಸಾಹ ತುಂಬಿದ ದಿನವಾಗಿದೆ ನಿಮ್ಮ ವಿರೋಧಿಗಳು ಸ್ವಲ್ಪ ಸಮಯದವರೆಗೂ ತಲೆಯೆತ್ತುವುದು ಬಿಡುವುದಿಲ್ಲ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ಕರ್ಕಟಕ ರಾಶಿ ಇಂದು ನೀವು ಯಾವುದೇ ಅಪಾಯಕಾರಿ ಹೆಜ್ಜೆಗಳನ್ನು ಇಡಬೇಡಿ ನಿಮ್ಮ ವಿರೋಧಿಗಳು ಸ್ವಲ್ಪ ಸಮಯದವರೆಗೆ ತಲೆಯೆತ್ತುವ ಆಗಿಲ್ಲ ನಿಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸುತ್ತೀರಿ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ಸಿಂಹ ರಾಶಿ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ವಿಷಯವಾಗಿದ್ದರೆ ತಕ್ಷಣವೇ ಮುಂದೆ ಸಾಗಿರಿ ನಿಮಗೆ ಕಂಡಿತವಾಗಿಯೂ ಲಾಭ ಇರುತ್ತದೆ ನಿಮ್ಮ ಸಂಬಂಧಿಕರಿಂದ ಹಳೆಯ ಕುಂದುಕೊರತೆಗಳನ್ನು ತೆಗೆದುಹಾಕುವ ಸಮಯ ಇದಾಗಿರುತ್ತದೆ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ಕನ್ಯಾ ರಾಶಿ ಇಂದು ನೀವು ಮಾಡಿದ ಕೆಲಸವು ಪ್ರಯೋಜನವನ್ನು ಪಡೆಯುತ್ತದೆ ನಿಮ್ಮ ಮನಸ್ಸು ಸಂತೋಷದಿಂದ ಶಾಂತಿಯನ್ನು ಪಡೆಯುತ್ತದೆ ಅನಾದಿಕಾಲದಿಂದ ನಡೆಯುತ್ತಿರುವ ಉದ್ವಿಗ್ನತೆಯ ಕಡಿಮೆಯಾಗುತ್ತದೆ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ತುಲಾ ರಾಶಿ ಇಂದು ದಿನದ ಮೊದಲಾರ್ಧದಲ್ಲಿ ನಿಮ್ಮ ಫೋನ್ ಕರೆಯ ಮೂಲಕ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಾ ಕಚೇರಿ ಕೆಲಸಗಾರರು ಸಂತೋಷದಿಂದ ಇರುತ್ತಾರೆ ನಿಮ್ಮ ವ್ಯವಹಾರ ಮತ್ತು ವಹಿವಾಟಿನಲ್ಲಿ ಅಪಾಯ ಹೆಚ್ಚಿರುತ್ತದೆ ಯಾವುದೇ ಒಪ್ಪಂದ ಮಾಡಿಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ಎಂದು ದಿನದ ಮೊದಲ ಭಾಗದಲ್ಲಿ ಹೆಚ್ಚು ಶ್ರಮಿಸಬೇಕಾಗುತ್ತದೆ ಸಂಜೆಯ ವೇಳೆ ಲಾಭಕ್ಕಾಗಿ ಕೆಲವು ಅವಕಾಶವಿದೆ ಪ್ರಯಾಣವನ್ನು ಯೋಚಿಸಬಹುದು ಇಂದು ನೀವು ಕೆಲವು ಉತ್ತಮ ಮತ್ತು ಪರಿಣಾಮಕಾರಿ ಜನರನ್ನು ಭೇಟಿ ಮಾಡುತ್ತೀರಾ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ಧನಸ್ಸು ರಾಶಿ ಇಂದು ನಿಮಗೆ ತುಂಬಾ ಒಳ್ಳೆಯ ಸಮಯ ಇಂದು ನೀವು ಪೂರ್ಣ ಲಾಭವನ್ನು ಪಡೆದುಕೊಳ್ಳಿ ಕಚೇರಿಯಲ್ಲಿ ಯಾವುದೇ ಸಹೋದ್ಯೋಗಿಗಳೊಂದಿಗೆ ನೀವು ತೊಡಗಿದ್ದರೆ ಉತ್ತಮ ನೀವು ಇಂದು ಅಭಿಯಾನಗಳನ್ನು ಗೆಲ್ಲುತ್ತೀರಿ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ಮಕರ ರಾಶಿ ಇಂದು ನಿಮಗೆ ವ್ಯವಹಾರದಲ್ಲಿ ಲಾಭ ಹೆಚ್ಚಾಗುತ್ತದೆ ವೈವಾಹಿಕ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತೀರಿ ನೀವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಯೋಚಿಸುವುದು ಉತ್ತಮ ನಿಮಗೆ ಕುಟುಂಬದಿಂದ ಸಾಕಷ್ಟು ಪ್ರೀತಿ ಗೌರವವನ್ನು ಪಡೆಯುತ್ತೀರಿ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ಕುಂಭ ರಾಶಿ ಇಂದು ನಿಮಗೆ ತುಂಬಾ ಸಾಮಾನ್ಯ ದಿನವಾಗಿರುತ್ತದೆ ಇಂದು ನಿಮಗೆ ಕೆಲಸ ಹೆಚ್ಚಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಕೆಲಸ ಮಾಡುವುದರಿಂದ ಹೆಚ್ಚಿನ ಫಲ ಸಿಗುತ್ತದೆ ಯಾವುದೇ ರೀತಿಯ ವಿವಾದಗಳಿಂದ ನಿಮ್ಮನ್ನು ನೀವು ದೂರವಿಡಿ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606 ಮೀನ ರಾಶಿ ಹಿಂದಿ ನೀವು ಪ್ರಯತ್ನದಲ್ಲಿ ಹಿಂದೇಟು ಹಾಕಿದರೆ ಕೆಲಸಗಳಲ್ಲಿ ಸಿಲುಕಿಹಾಕಿಕೊಳ್ಳುತ್ತೀಯೆ ಇಂದು ಜಾಗರೂಕತೆಯಿಂದ ಇರುವುದು ಉತ್ತಮ ಇಂದು ನೀವು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಉತ್ತಮ ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606
ಸ್ವತಂತ್ರ ಭಾರತದ ಮೊದಲ ಮತದಾರ – ಶ್ಯಾಮ್ ಸರಣ್ ನೇಗಿ – 106 ನೇ ವಯಸ್ಸಿನಲ್ಲಿ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನರಾದರು. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಿದಾಗ, ಕಠಿಣ ಚಳಿಗಾಲ ಮತ್ತು ಆರಂಭಿಕ ಹಿಮಪಾತವನ್ನು ಪರಿಗಣಿಸಿ ಅಕ್ಟೋಬರ್ 25, 1951 ರಂದು ಕಿನ್ನೌರ್‌ನಲ್ಲಿ ಮತದಾನವನ್ನು ನಡೆಸಲು ನಿರ್ಧರಿಸಲಾಯಿತು ಮತ್ತು ದೇಶದ ಇತರ ಭಾಗಗಳಲ್ಲಿ ಜನವರಿ-ಫೆಬ್ರವರಿ, 1952 ರಲ್ಲಿ ಚುನಾವಣೆಗಳು ನಡೆದವು. ಈ ವೇಳೆ ನೇಗಿ 1951ರ ಅ. 25ರಂದು ತಮ್ಮ ಮತ ಚಲಾಯಿಸುವ ಮೂಲಕ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನೇಗಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಚುನಾವಣೆ ಆಯೋಗವು, ಇವರು ಕೇವಲ ಸ್ವತಂತ್ರ ಭಾರತದ ಮೊದಲ ಮತದಾರ ಮಾತ್ರವಲ್ಲ, ಪ್ರಜಾಪ್ರಭುತ್ವದಲ್ಲಿ ಅಸಾಧಾರಣ ನಂಬಿಕೆ ಇರಿಸಿಕೊಂಡಿದ್ದ ವ್ಯಕ್ತಿ. ರಾಷ್ಟ್ರಕ್ಕೆ ಅವರ ಸೇವೆ ಪ್ರಶಂಸನೀಯ ಎಂದು ಸ್ಮರಿಸಿದ್ದಾರೆ. ಶ್ಯಾಮ್ ಸರಣ್ ನೇಗಿ ಅವರಿಗೆ 106 ವರ್ಷ ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ನೇಗಿ ಅವರು ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೂ ಈ ತಿಂಗಳ 2ರಂದು ಅಂಚೆ ಮೂಲಕ ಮತ ಚಲಾಯಿಸಿ ಯುವ ಜನರಿಗೆ ಮಾದರಿಯಾಗಿದ್ದರು. ಕಳೆದ 35 ಬಾರಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದ ಅವರು ಈ ಬಾರಿ ಅನಾರೋಗ್ಯದಿಂದ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐಎಮ್ವಿ ಎಕ್ಟ್ ;- ದಿನಾಂಕ:27/09/2017 ರಂದು ರಾತ್ರಿ 12.15 ಎಎಮ್ ಸುಮಾರಿಗೆ ಶಹಾಪುರ-ಭೀ.ಗುಡಿ ಮುಖ್ಯ ರಸ್ತೆಯ ಮೇಲೆ ಭಾಸ್ಕರರಾವ ಮುಡಬೂಳ ಇವರ ಹೊಲದ ಹತ್ತಿರ ಮೃತ ಮಹಾಂತೇಶ, ಆಂಜನೇಯ ಇಬ್ಬರೂ ಕೂಡಿ ಸುನಿಲಕುಮಾರ ಈತನ ಅಟೋ ಟಂಟಂ ನಂ:ಕೆಎ-33, 9184 ನೇದ್ದರ ಕುಳಿತು ಹೊರಟಾಗ ಎದುರಿನಿಂದ ಅಟೋ ಟಂಟಂ ನಂ;ಕೆಎ-33, ಎ-5592 ನೇದ್ದರ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದಿದ್ದರಿಂದ ಸದರಿ ಅಟೋ ಚಾಲಕನ ನಿಯಂತ್ರಣ ತಪ್ಪಿ ಸದರಿ ಅಟೋಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ನಿಲ್ಲಿಸದೇ ಓಡಿ ಹೋಗಿದ್ದು ಸದರಿ ಅಪಘಾತದಲ್ಲಿ ಮಹಾಂತೇಶ ಈತನು ಅಟೋದಿಂದ ಕೆಳಗೆ ಬಿದ್ದಾಗ ಸದರಿ ಅಟೋ ಮಹಾಂತೇಶನ ತಲೆಯ ಮೇಲೆ ಬಿದ್ದಿದ್ದರಿಂದ ತಲೆ ಒಡೆದು ಭಾರಿ ರಕ್ತಗಾಯವಾಗಿ, ಬಲ ರಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಆಂಜನೇಯ ಮತ್ತು ಸುನಿಲಕುಮಾರ ಇವರಿಗೆ ಸಣ್ಣಪುಟ್ಟ ಗುಪ್ತಗಾಯಗಳಾಗಿದ್ದು ಆಸ್ಪತ್ರೆಗೆ ತೋರಿಸಿಕೊಳ್ಳುವಂತಹ ಗಾಯಗಳಾಗಿರುವದಿಲ್ಲ. ಅಪಘಾತಪಡಿಸಿ ಓಡಿ ಹೋದ ಅಟೋ ಟಂಟಂ ಮತ್ತು ಅಟೋ ಚಾಲಕನಿಗೆ ರಸ್ತೆಯ ಮೇಲೆ ಓಡಾಡುವ ಇತರ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಕಾರಣ ಸದರಿ ಅಪಘಾತಕ್ಕೆ ಅಟೋ ಟಂಟಂ ನಂ:ಕೆಎ-33, ಎ-5592 ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಿಲ್ಲ ಈತನೇ ಕಾರಣನಿದ್ದು ಸದರಿ ಚಾಲಕನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2017 ಕಲಂ 279, 304(ಎ) ಐಪಿಸಿ ಸಂಗಡ 187 ಐಎಮ್ವಿ ಎಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 379/2017.ಕಲಂ 379.ಐ.ಪಿ.ಸಿ.;- ದಿನಾಂಕ 27/09/2017 ರಂದು ಬೆಳಿಗೆ 07-30 ಗಂಟೆಗೆ ಶ್ರೀ ವೆಂಕಣ್ಣ ಎ,ಎಸ್,ಐ, ಶಹಾಫೂರ ಪೊಲೀಸ್ ಠಾಣೆಯ ಇವರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಹಾಗು ಒಂದು ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 27/09/52017 ರಂದು ಬೆಳಿಗ್ಗೆ 5-30 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಬಾತ್ಮಿ ಬಂದಿದ್ದೆನೆಂದರೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಶಹಾಪೂರ ಕಡೆಗೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತಿದ್ದ ಬಗ್ಗೆ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಬಸವರಾಜ ಸಿಪಿ.ಸಿ. 180 ಇಬ್ಬರೂ ಕೂಡಿ ಮೋಟರ ಸೈಕಲ್ ಮೇಲೆ ಹೋರಟು ಶಹಾಪೂರ ನಗರದ ಅಮಾನ ಧಾಬಾದ ಮುಂದೆ ಹೋಗಿ ರೋಡಿನ ಪಕ್ಕದಲ್ಲಿ ವಾಹನ ಬರುವದನ್ನು ನಿಗಾ ಮಾಡುತ್ತಾ ನಿಂತಿದ್ದಾಗ ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಹತ್ತಿಗುಡೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ವಾಹನದಲ್ಲಿ ಮರಳು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿ ಟ್ಯಾಕ್ಟರ ವಾಹನವನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿ ಟ್ಯಾಕ್ಟರ ವಾಹನ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಹಾಜರು ಪಡಿಸಲು ಹೇಳಿದ್ದು, ಮರಳು ಸಾಗಾಣಿಕೆ ಪರವಾನಿಗೆ ಪತ್ರ ಇರುವುದಿಲ್ಲ ಅಂತ ಹೇಳಿದನು. ಸದರಿ ಮರಳು ತುಂಬಿದ ಟ್ಯಾಕ್ಟರ ವಾಹನವನ್ನು ಪರಿಶೀಲಿಸಿ ನೋಡಲಾಗಿ ಒಂದು ಮಹೇಂದ್ರ ಕಂಪನಿಯ 415 ಆ ಕೆಂಪು ಬಣ್ಣದ ಟ್ಯಾಕ್ಟರ ಇದ್ದು ಅದರ ಇಂಜಿನ್ ನಂ-ಚಎಚಉ00558 ಅದಕ್ಕೆ ಹೊಂದಿಕೊಂಡಿರುವ ನೀಲಿ ಬಣ್ಣದ ಟ್ರಾಲಿ, ನಂಬರ ಇರುವದಿಲ್ಲಾ. ಅ:ಕಿ:1,50000/- ರೂ ಮತ್ತು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ:ಕಿ:1500=00 ರೂ ಸದರಿ ಟ್ಯಾಕ್ಟರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ದೇವಪ್ಪ ತಂದೆ ಯಂಕಪ್ಪ ದೋರಿ ವ|| 30 ಉ|| ಚಾಲಕ ಜಾ|| ಬೇಡರ ಸಾ|| ಯಕ್ಷಂತಿ ಅಂತ ಹೇಳಿದನು. ಮತ್ತು ನಮ್ಮ ಟ್ರ್ಯಾಕ್ಟರ ಮಾಲಿಕ ರಾಮಣ್ಣ ತಂದೆ ಹಣಮಂತ ಸಾ|| ಯಕ್ಚಿಂತಿ ಇವರು ನಮ್ಮ ಊರಿನ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ನಾನು ಮರಳನ್ನು ಕಳ್ಳತನದಿಂದ ತುಂಬಿಕೊಂಡು ಬಂದು ಮಾರಾಟ ಮಾಡಲು ಶಹಾಪೂರಕ್ಕೆ ಹೊರಟಿರುವದಾಗಿ ತಿಳಿಸಿದನು. ಸದರಿ ಟ್ಯಾಕ್ಟರ ವಾಹನ ಚಾಲಕನು ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತಿದ್ದ ಬಗ್ಗೆ ಖಚಿತವಾಗಿದ್ದರಿಂದ ಸದರಿ ಟ್ರ್ಯಾಕ್ಟರ & ಚಾಲಕನನ್ನು ತಾಬೆಗೆ ತೆಗೆದುಕೊಂಡು ಮರಳಿ ಠಾಣೆಗೆ ಬೆಳಿಗ್ಗೆ 7-00 ಗಂಟೆಗೆ ಬಂದು ಆರೋಪಿತರ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ಮುಂದಿನ ಕ್ರಮಕ್ಕಾಗಿ 7-30 ಗಂಟೆಗೆ ಬಂದು ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಚಾಲಕನನ್ನು ಹಾಜರುಪಡಿಸಿ ಸರಕಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದರ ಸಾರಾಶದ ಮೇಲಿಂದ ಠಾಣೆಯ ಗುನ್ನೆ ನಂ 379/2017 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 380/2017 ಕಲಂ 78(3) ಕೆ.ಪಿ.ಯಾಕ್ಟ ;- ದಿನಾಂಕ: 27/09/2017 ರಂದು 1.30 ಪಿ.ಎಂಕ್ಕೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಎ.ಎಂ.ಕಮಾನಮನಿ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮುಂಜಾನೆ 10.00 ಎ.ಎಂ.ಕ್ಕೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಠಾಣೆಯ ಸುಧಾರಿತ ಗ್ರಾಮ ಗಸ್ತು ಬೀಟ್ ನಂ.02 ನೇದ್ದರ ಸಿಬ್ಬಂಧಿ ಶ್ರೀ ಬಸಯ್ಯ ಸಿಪಿಸಿ-242 ರವರು ದೋರನಳ್ಳಿ ಗ್ರಾಮದ ಮರೆಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಠಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿದ ಮೇರೆಗೆ ಫಿರ್ಯಾದಿಯವರು, ಪಂಚರು ಹಾಗೂ ಠಾಣಾ ಸಿಬ್ಬಂಧಿಯವರೊಂದಿಗೆ ಹೋಗಿ 11.25 ಎ.ಎಂಕ್ಕೆ ದಾಳಿ ಮಾಡಿ ಒಬ್ಬ ಆರೋಪಿಗೆ ಹಿಡಿದು ಅವನಿಂದ ನಗದು ಹಣ 1730=00 ರೂಪಾಯಿ, ಎರಡು ಮಟಕಾ ಚೀಟಿ ಮತ್ತು ಒಂದು ನೀಲಿ ಬಾಲಪೆನ್ ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮಧ್ಯಾಹ್ನ 1.30 ಪಿ.ಎಂಕ್ಕೆ ಫಿಯರ್ಾದಿದಾರರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 380/2017 ಕಲಂ ಕಲಂ 78(3) ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 381/2017 ಕಲಂ 78[3] ಕೆ.ಪಿ ಆಕ್ಟ ;- ದಿನಾಂಕ 27/09/2017 ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಣ್ಣ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರ ನಗರದ ಗಂಗಾ ನಗರ ಏರಿಯಾದಲ್ಲಿ ಬರುವ ಬಸವಣ್ಣ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 41 ನೇದ್ದರ ಸಿಬ್ಬಂದಿ ಶ್ರೀ ಗಜೇಂದ್ರ ಸಿ.ಪಿ.ಸಿ 313 ರವರಿಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ತಿಳಿಸಿದ ಮೇರೆಗೆ ಮಾನ್ಯ ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗಿ ಸಾಯಂಕಾಲ 16-15 ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಯನ್ನು ಹಿಡಿದು ಆತನಿಂದ ನಗದು ಹಣ 4630=00 ರೂ ಮತ್ತು 2 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಮುದ್ದೆಮಾಲನ್ನು ಪಂಚರ ಸಮಕ್ಷಮದಲ್ಲಿ 16-20 ಗಂಟೆಯಿಂದ 17-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿಯವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಲ 18-30 ಗಂಟೆಗೆ ಫಿರ್ಯಾಧಿಯವರು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 381/2017 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು Posted by Inspector General Of Police North Eastern Range Kalaburagi. at 5:43 PM No comments: BIDAR DISTRICT DAILY CRIME UPATE 28-09-2017 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-09-2017 ªÀÄAoÁ¼À ¥ÉưøÀ oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :- ¢£ÁAPÀ 19-09-2017 gÀAzÀÄ ¦üAiÀiÁ𢠸ÀÄgÉñÀ vÀAzÉ CªÀÄÈvÀ £ÁgÁAiÀÄt¥ÀÆgÉ ªÀAiÀÄ: 38 ªÀµÀð, eÁw: PÉÆý, ¸Á: ¨sÉÆøÁÎ gÀªÀgÀ vÀAV gÀÄPÀ̪ÀiÁä UÀAqÀ ²æêÀÄAvÀ ºÉƸÁ¼É ¸Á: ¨sÉƸÀUÁ EªÀ¼ÀÄ CqÀÄUÉ ªÀiÁqÀ®Ä ªÀÄ£ÉAiÀÄ°è£À ¹ÃªÉÄ JuÉÚAiÀÄ ¸ÉÆÖÃUÉ UÁ½ vÀÄA© ZÁ®Ä ªÀiÁrzÁUÀ MªÉÄä¯É ¨ÉAQ JzÀÄÝ ªÉÄʪÉÄð£À §mÉÖUÀ½UÉ ¨ÉAQ ºÀwÛPÉÆAqÁUÀ CªÀ¼À UÀAqÀ ²æêÀÄAvÀ ªÀÄvÀÄÛ £ÉUÉÃt «ÄÃgÁ¨Á¬Ä E§âgÀÄ PÀÆrPÉÆAqÀÄ ¤ÃgÀÄ ªÀÄvÀÄÛ §mÉÖ¬ÄAzÀ ªÉÄÊUÉ ºÀwÛzÀ ¨ÉAQ Dj¹gÀÄvÁÛgÉ, ¨ÉAQ Dj¸ÀĪÀµÀÖgÀ°è CªÀ¼À JgÀqÀÄ UÀ®è, PÀÄwÛUÉ, JzÉ, ºÉÆmÉÖ, ¨É£ÀÄß, JgÀqÀÄ vÉÆqÉUÀ½UÉ ªÀÄvÀÄÛ JgÀqÀÄ PÉÊUÀ½UÉ ¨sÁj ¸ÀÄlÖUÁAiÀÄUÀ¼ÁVgÀÄvÀÛªÉ, £ÀAvÀgÀ DPÉUÉ aQvÉì PÀÄjvÀÄ PÀ®§ÄgÀVAiÀÄ ªÁvÀì®å D¸ÀàvÉæAiÀÄ°è zÁR®Ä ªÀiÁrgÀÄvÁÛgÉ, £ÀAvÀgÀ gÀÄPÀ̪ÀiÁä EªÀ½UÉ ¸ÀzÀj D¸ÀàvÉæAiÀÄ°è aQvÉì PÉÆr¹ ¸Àé®à DgÁªÀÄ DzÀ £ÀAvÀgÀ CªÀ½UÉ VªÀÄÆ°PÉUÀ¼À aQvÉì ªÀiÁr¸ÉÆÃt CAvÀ D¸ÀàvÉæ¬ÄAzÀ ¢£ÁAPÀ 20-09-2017 gÀAzÀÄ ©qÀÄUÀqÉ ªÀiÁr¹PÉÆAqÀÄ ¨sÉÆøÁÎ UÁæªÀÄPÉÌ vÀAzÀÄ DAiÀÄĪÉÃðzÀ aQvÉì ªÀiÁr¸ÀÄwÛzÀÄÝ, »ÃVgÀĪÁUÀ ¢£ÁAPÀ 26-09-2017 gÀAzÀÄ gÀÄPÀ̪ÀiÁä EªÀ¼ÀÄ ¸ÀÄlÖ UÁAiÀÄUÀ½AzÀ ªÀÄÈvÀ¥ÀnÖgÀÄvÁÛ¼É, ¸ÀzÀj WÀl£É DPÀ¹äPÀªÁV dgÀÄVzÀÄÝ EgÀÄvÀÛzÉ CAvÀ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. §¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 121/2017, PÀ®A. 279, 337, 338, 304(J) L¦¹ :- ದಿನಾಂಕ 26-09-2017 ರಂದು ಫಿರ್ಯಾದಿ ದಯಾನಂದ ತಂದೆ ರಾಮಣ್ಣಾ ಉಪಾರೆ, ವಯ: 40 ವರ್ಷ, ಜಾತಿ: ಎಸ್ಸಿ(ಹೊಲೆಯ), ಸಾ: ಯರಂಡಗಿ ಊರಿಗೆ ಹೋಗಲು ರಾ.ಹೆ. ನಂ. 09 ಮುಡಬಿ ಕ್ರಾಸ ಹತ್ತಿರ ನಿಂತಿರುವಾಗ ಮುಡಬಿ ಕಡೆಯಿಂದ ಒಂದು ಮೋಟರ್ ಸೈಕಲ ನಂ. ಕೆಎ-39/ಜೆ-3006 ನೇದ್ದರ ಚಾಲಕನಾದ ಆರೋಪಿ ರಾಜ ತಂದೆ ಸಿದ್ರಾಮಪ್ಪಾ ಬಡದಾಳೆ, ವಯ: 40 ವರ್ಷ, ಸಾ: ಶರಣನಗರ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಒಬ್ಬ ವ್ಯಕ್ತಿಗೆ ಡಿಕ್ಕಿ ಮಾಡಿರುತ್ತಾನೆ, ಗಾಯಾಳುಗಳಿಗೆ ನೋಡಲು ಅಸ್ವಸ್ಥ ಮನಸ್ಸಿನ ಅಂದಾಜು 55 ವಯಸ್ಸಿನ ವ್ಯಕ್ತಿ ಇದ್ದು ಅವನಿಗೆ ತಲೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ತಲೆಗೆ ಮತ್ತು ಎಡಗಲ್ಲಕ್ಕೆ ಹಾಗೂ ಬಲಗಾಲ ಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ ಫಿರ್ಯಾದಿಯು ಸದರಿ ಇಬ್ಬರೂ ಗಾಯಾಳುಗಳಿಗೆ ಒಂದು ಖಾಸಗಿ ವಾಹನದಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಸದರಿ ಅಪರಿಚಿತ ಅಸ್ವಸ್ಥ ಮನಸ್ಸಿನ ವ್ಯಕ್ತಿಯು ದಿನಾಂಕ 27-09-2017 ರಂದು ಅವನಿಗಾದ ಗಾಯಗಳಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿರುವಾಗಲೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 182/2017, PÀ®A. 379 L¦¹ :- ¢£ÁAPÀ 22-09-2017 gÀAzÀÄ 2130 UÀAmÉUÉ ¦üAiÀiÁ𢠱ÉÃRgÀ¨Á§Ä vÀAzÉ ¸ÀĨsÁµÀ ¨ÉãÀÆgÀ ªÀAiÀÄ: 26 ªÀµÀð, ¸Á: vÉVκÀ½î, vÁ: EAr, ¸ÀzÀå: UÀÄA¥Á ©ÃzÀgÀ gÀªÀgÀÄ ºÉÆAqÁ ±ÉʪÀiï ªÉÆÃmÁgÀ ¸ÉÊPÀ® £ÀA. PÉJ-28/EºÉZï-4347 £ÉÃzÀ£ÀÄß vÀ£Àß gÀÆ«Ä£À ªÀÄÄAzÉ ¤°è¹ ªÀÄ®VPÉÆAqÀÄ ¢£ÁAPÀ 23-09-2017 gÀAzÀÄ 0900 UÀAmÉUÉ ¦üAiÀiÁð¢AiÀÄÄ PÉ®¸ÀPÉÌ ºÉÆÃUÀĪÀ ¸À®ÄªÁV gÀƫĤAzÀ ºÉÆÃgÀUÉ §AzÀÄ £ÉÆÃqÀ¯ÁV vÀ£Àß ªÉÆlgÀ ¸ÉÊPÀ® vÀ£Àß gÀÆ«Ä£À ªÀÄÄAzÉ ¤°è¹zÀ ªÉÆlgÀ ¸ÉÊPÀ® EgÀ°®è, ¦üAiÀiÁð¢AiÀÄÄ £Á£ÀÄ J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢®è, ¸ÀzÀj ªÉÆÃmÁgï ¸ÉÊPÀ®£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÉÆÃmÁgÀ ¸ÉÊPÀ® ZÉ¹ì £ÀA. JªÀiï.E.4.eÉ.¹.651.¹.J¥sï.7003848, EAf£À £ÀA. eÉ.¹.65.E.70004873 £ÉÃzÀÄÝ EgÀÄvÀÛzÉ, CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 27-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
ಯಾವುದೇ ವಸ್ತುವನ್ನು ಹಿಡಿದಿಟ್ಟುಕೊಳ್ಳಲೊಂದು ಖಾಲಿ ‘ಇರಬೇಕು’. ಅನಸ್ತಿತ್ವವೇ ‘ಅಸ್ತಿ’ – `ಇದೆ’ ಎಂದಾಗಬೇಕು. ಈ ಅನಸ್ತಿತ್ವದ ಅಸ್ತಿತ್ವವೇ ಅತ್ಯುಪಯುಕ್ತ, ಇದೇ ಸೃಷ್ಟಿ ಸಾಧ್ಯತೆಯ ಅನಂತ ದಿಬ್ಬ ~ ಅಲಾವಿಕಾ ಮೂವತ್ತು ಅರೆಗಳಿದ್ದರೂ ಚಕ್ರವನ್ನ ಹಿಡಿದಿಡೋದು ಅವನ್ನು ಒಗ್ಗೂಡಿಸುವ ರಂಧ್ರ. ಕುಂಬಾರ ಮಣ್ಣು ತುಳಿತುಳಿದು ಚೆಂದದ ಮಡಿಕೆ ಮಾಡಿದರೂ ಉಪಯೋಗಕ್ಕೆ ಬರೋದು ಆಕಾರವಲ್ಲ, ಅದರೊಳಗಿನ ಖಾಲಿ. ಬಾಗಿಲಿಲ್ಲದೆ ಕೋಣೆಯೊಳಕ್ಕೆ ಬರಲಾಗದು, ಕಿಟಕಿಗಳಿಲ್ಲದೆ ಕೋಣೆಯೊಳಕ್ಕೆ ಬರಿ ಕತ್ತಲು. ಅನಸ್ತಿತ್ವ ನಿಜಕ್ಕೂ ಬಹೂಪಯೋಗಿಯಾಗಿರುವುದು ~ ಅನ್ನುತ್ತಾನೆ ತತ್ತ್ವಜ್ಞಾನಿ ಲಾವೋತ್ಸು ತನ್ನ `ತಾವೋ ತೆ ಚಿಂಗ್’ದಲ್ಲಿ. ಅನಸ್ತಿತ್ವ ಅಂದರೆ ಅಸ್ತಿತ್ವದ ಗೈರು. ಅದು ಶೂನ್ಯ. ಅದು ನಿರ್ವಾತವೂ, ಅದು ಖಾಲಿಯೂ ಆಗಿದೆ. ಈ ನಿರ್ವಾತವು, ಈ ಶೂನ್ಯವು ಅನಂತ ಸಾಧ್ಯತೆಗಳ ತೊಟ್ಟಿಲು. ತುಂಬಿಕೊಂಡಿರುವ ಸ್ಥಳದ ಸಾಧ್ಯತೆಗಳು ಅಲ್ಲಿಗೆ ಮುಗಿದುಹೋಗುತ್ತವೆ. ಆ ಅಷ್ಟು ಸ್ಥಳದ ಸಾಧ್ಯತೆ ಮಿತಗೊಳ್ಳುತ್ತದೆ. ಖಾಲಿ ಇರುವ ಸ್ಥಳ ಯಾವುದಾದರೊಂದು ಹೊಸ ಹುಟ್ಟಿಗೆ, ಹೊಸತರ ಉಪಯೋಗಕ್ಕೆ ಮುಕ್ತವಾಗಿರುತ್ತದೆ. ತಾವೋ ಈ ಖಾಲಿತನದ ಉಪಯುಕ್ತತೆಯ ಬಗ್ಗೆ ಮಾತಾಡುತ್ತದೆ. ಖಾಲಿ ಅನ್ನುವುದು ಅನಸ್ತಿತ್ವ. ಅಂದರೆ ಯಾವುದಕ್ಕೆ ಅಸ್ತಿತ್ವವೇ ಇಲ್ಲವೋ ಅದು. ಆದರೆ ಈ ಖಾಲಿ ಉಪಯೋಗಕ್ಕೆ ಬರಬೇಕೆಂದರೆ ಅದು `ಇರಬೇಕು’. ಖಾಲಿ ಇಲ್ಲವಾದರೆ ಅದು ತುಂಬಿಕೊಂಡಿದೆ ಎನ್ನುವ ಅರ್ಥ ಉಂಟಾಗುತ್ತದೆ. ಯಾವುದು ತುಂಬಿಕೊಂಡಿರುತ್ತದೆಯೋ ಅದು `ಅಸ್ತಿತ್ವ’ದ ಭಾಗ. ಅದು ಆಕಾರದಿಂದ, ವಸ್ತುವಿನಿಂದ ಆಕ್ರಮಿತ. ಅದೀಗ ಹೊಸ ಉಪಯೋಗಕ್ಕೆ ಬರುವುದಿಲ್ಲ. ಹೊಸ ಸಾಧ್ಯತೆಗೆ ದಕ್ಕುವುದಿಲ್ಲ. ಆದ್ದರಿಂದ ಖಾಲಿ `ಇರಬೇಕು’. ಅನಸ್ತಿತ್ವವೇ `ಅಸ್ತಿ’ – `ಇದೆ’ ಎಂದಾಗಬೇಕು. ಈ ಅನಸ್ತಿತ್ವದ ಅಸ್ತಿತ್ವವೇ ಅತ್ಯುಪಯುಕ್ತ, ಇದೇ ಸೃಷ್ಟಿ ಸಾಧ್ಯತೆಯ ಅನಂತ ದಿಬ್ಬ. ದೇಹವನ್ನು `ಘಟ’ವೆಂದೂ ಕರೆಯುತ್ತಾರೆ. ಮಡಿಕೆಯು ದೇಹವನ್ನು ಸಮರ್ಥವಾಗಿ ಸಂಕೇತಿಸುತ್ತದೆ. ಪಂಚಭೂತಗಳಿಂದ ಸೃಷ್ಟಿಗೊಂಡ ಶರೀರವು ಜೀವದ್ರವ್ಯವನ್ನು ಹಿಡಿದಿಟ್ಟುಕೊಳ್ಳುವ ಮಡಿಕೆಯಂತೆ. ದೇಹದೊಳಗಿನ ವಸ್ತುಗಳೆಲ್ಲವೂ ಈ ಜೀವದ್ರವ್ಯವನ್ನು ಹಿಡಿದಿಟ್ಟುಕೊಳ್ಳುತ್ತವೆ. ಘಟ ಅಥವಾ ಮಡಿಕೆ ಒಡೆದುಹೋದರೆ ಅದರೊಳಗಿನ ನೀರು ಚೆಲ್ಲಿಹೋಗುತ್ತದೆ. ಕಾಲಕ್ರಮದಲ್ಲಿ ಭೂಮಿಯಿಂದಲೋ ಸೂರ್ಯನಿಂದಲೋ ಹೀರಲ್ಪಟ್ಟು ಇಂಗಿ ಹೋಗುತ್ತದೆ. ಅಥವಾ ನದಿಯೊಳಗೆ ಬಿದ್ದರೆ ವಿಶಾಲ ಹರಿವಿನಲ್ಲಿ ಒಂದಾಗಿಬಿಡುತ್ತದೆ. ಹಾಗೆಯೇ ದೇಹವು ನಾಶವಾದಾಗ ಅದರೊಳಗಿನ ಜೀವದ್ರವ್ಯವು ಸೃಷ್ಟಿಯಲ್ಲಿ ವಿಲೀನವಾಗುತ್ತದೆ. ಆದರೆ ಈ ನೀರನ್ನು, ಈ ಜೀವದ್ರವ್ಯವನ್ನು ಹಿಡಿದಿಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಖಾಲಿ ಏನಾಗುತ್ತದೆ? ಅದು ಅನಂತ ಆಕಾಶದೊಂದಿಗೆ ಬೆರೆತುಹೋಗುತ್ತದೆ! ವಾಸ್ತವದಲ್ಲಿ ಅನಂತ ಆಕಾಶವು ಆಕಾರದೊಳಗೆ ಬಂಧಿಸಲ್ಪಟ್ಟು ಆಕಾಶದ ತುಣುಕಾಗಿ ವಿಭಜನೆಗೊಂಡಿರುತ್ತದೆ. ಆಕಾರವು ಅಥವಾ ಗೋಡೆಯು ಅಥವಾ ದೇಹವು ನಾಶವಾದ ಕೂಡಲೆ ಈ ತುಣುಕು ಆಕಾಶವು ಅಖಂಡ ಆಕಾಶದೊಡನೆ ಬೆರೆತುಹೋಗುತ್ತದೆ. ರೂಪಾಕಾರಗಳಿಲ್ಲದ, ಗಾತ್ರ ಗುರುತುಗಳಿಲ್ಲದ ಆತ್ಮವು ಅನಸ್ತಿತ್ವದ ಅಸ್ತಿತ್ವವೇ ಆಗಿದೆ. ವಾಸ್ತವದಲ್ಲಿ ಆತ್ಮವೆಂಬುದು ಇಲ್ಲ. ಆದರೆ ಈ ಆತ್ಮವು ಜೀವಸಾಧ್ಯತೆಗಳ ತೊಟ್ಟಿಲಾಗಿರುವುದರಿಂದ ಅದು ಇದೆ. ಅಸ್ತಿತ್ವವೇ ಇಲ್ಲದ `ಆತ್ಮ’ ಎನ್ನುವ ಸಂಗತಿಯು ಜೀವ ಸೃಷ್ಟಿಗೆ ಅವಕಾಶ ಮಾಡಿಕೊಡುವುದರಿಂದ ಅದು ಅಸ್ತಿತ್ವದಲ್ಲಿ ಇದೆ ಎಂದಾಗುತ್ತದೆ. ಆತ್ಮ ಎನ್ನುವ ಖಾಲಿಯೇ ದೇಹದಲ್ಲಿ ಜೀವವನ್ನು ಇರಗೊಡುವುದು. ದೇಹಾಂತದೊಡನೆ ಸೃಷ್ಟಿಯಲ್ಲಿ ಜೀವವು ಲೀನವಾಗುತ್ತದೆಯಷ್ಟೆ? ಆಗ ಪರಮಾತ್ಮದ ತುಣುಕಾದ ಆತ್ಮವೂ ತನ್ನ ಅನಂತ ಮೂಲಸ್ರೋತದೊಡನೆ ಬೆರೆತುಹೋಗುತ್ತದೆ. ಹೇಗೆ ಅನಂತ ಆಕಾಶದ ತುಣುಕು ಮಡಿಕೆಯೊಳಗಿನ ನೀರನ್ನು ಹಿಡಿದಿಡುವ ಖಾಲಿಯಾಗಿ, ತುಣುಕು ಆಕಾಶವಾಗಿರುತ್ತದೆಯೋ, ಹಾಗೆಯೇ ಅನಂತ ಪರಮಾತ್ಮದ ತುಣುಕು ದೇಹದೊಳಗಿನ ಜೀವದ್ರವ್ಯವನ್ನು ಹಿಡಿದಿಡುವ ಖಾಲಿಯಾಗಿ, ಆತ್ಮವಾಗಿ ಅಸ್ತಿತ್ವ ಪಡೆಯುತ್ತದೆ. ಮತ್ತು ಮರಳಿ ತನ್ನ ಮೂಲದೊಡನೆ ಒಂದಾಗುತ್ತದೆ. ಇಲ್ಲಿ ಮತ್ತೊಂದು ಸ್ವಾರಸ್ಯವಿದೆ. ಆಕಾಶ ಕೂಡ ಯಾವುದೇ ರೂಪಾಕಾರಗಳಿಲ್ಲದ ಒಂದು ಸಂಗತಿ. ವಾಸ್ತವದಲ್ಲಿ ಯಾವುದು ಅವಕಾಶವನ್ನು ಆಕ್ರಮಿಸುವುದಿಲ್ಲವೋ ಅದು ಅನಸ್ತಿತ್ವವೇ ಆಗಿರುತ್ತದೆ. ಆದ್ದರಿಂದ ಆಕಾಶವೂ ಅನಸ್ತಿತ್ವ. ಈ ಅನಸ್ತಿತ್ವದಲ್ಲಿ ಲಕ್ಷಾಂತರ ಗ್ರಹತಾರೆಗಳು ಇರುವುದರಿಂದ, ಆ ಎಲ್ಲಕ್ಕೂ ಅದು ಸ್ವಯಂ ಅವಕಾಶವಾಗಿ ಒದಗಿರುವುದರಿಂದ ಅಸ್ತಿತ್ವವಾಗಿ ಪರಿಗಣಿಸಲ್ಪಡುತ್ತದೆ. ಹಾಗೆಯೇ ಆತ್ಮವೂ ಕೂಡಾ. ಆತ್ಮವಾಗಲೀ ಪರಮಾತ್ಮವಾಗಲೀ (ನಿರಾಕಾರ ಬ್ರಹ್ಮನ್) ಭೌತಿಕ ಸ್ಥಳವನ್ನು ಆಕ್ರಮಿಸುವುದಿಲ್ಲ. ಸ್ಥೂಲ – ಸೂಕ್ಷ್ಮ ಈ ಯಾವ ಸ್ತರದಲ್ಲಿಯೂ ಅದು ಒದಗಿಬರುವುದಿಲ್ಲ. ಆದರೆ ಅದು ಅನೇಕ ಜೀವಿಗಳ ಸೃಷ್ಟಿಗೆ ಅವಕಾಶ ಕೊಡುತ್ತದೆ. ಹಾಗೆಂದೇ ಅಸ್ತಿತ್ವ ಪಡೆಯುತ್ತದೆ. ಆದರೆ, ಇಲ್ಲೊಂದು ಪ್ರಶ್ನೆ ಏಳುತ್ತದೆ. ಉಪಯೋಗಕ್ಕೆ ಬರುವುದು ಮಡಿಕೆಯೊಳಗಿನ ಖಾಲಿಯೇ ಆದರೂ ವಸ್ತುವನ್ನು ಹಿಡಿದಿಟ್ಟುಕೊಳ್ಳಬಲ್ಲ ಆ ಖಾಲಿ ಸೃಷ್ಟಿಯಾಗಬೇಕೆಂದರೆ ಅದಕ್ಕೊಂದು ಗೋಡೆ ಅವಶ್ಯವಾಗಿ ಬೇಕಾಗುತ್ತದೆ. ಜೇಡಿಮಣ್ಣಿನಿಂದ ಮಡಿಕೆಯನ್ನು ಮಾಡಿದರಷ್ಟೆ ನೀರು ತುಂಬಲು ಸಾಧನ ಒದಗುವುದು. ರಂಧ್ರವಿದ್ದ ಮಾತ್ರಕ್ಕೆ ಚಕ್ರ ಚಲಿಸುವುದಿಲ್ಲ. ಅದಕ್ಕೆ ಅರೆಗಳ ಅವಶ್ಯಕತೆ ಖಂಡಿತ ಇರುವುದು. ಹಾಗೆಯೇ ದೇಹವೂ. ಆತ್ಮವಿದ್ದ ಮಾತ್ರಕ್ಕೆ ಜೀವಿಯು ಅಸ್ತಿತ್ವ ಪಡೆಯುವುದಿಲ್ಲ. ದೇಹವಿಲ್ಲದೆ ಹೇಗೆ ತಾನೆ ಅದು ಸಾಧ್ಯವಾಗುತ್ತದೆ? ನಿಜ. ಆದರೆ ಕೇವಲ ಮಡಿಕೆ ಇದ್ದ ಮಾತ್ರಕ್ಕೆ, ಅರೆಗಳಿದ್ದ ಮಾತ್ರಕ್ಕೆ, ದೇಹವಿದ್ದ ಮಾತ್ರಕ್ಕೆ ಅದರ ಉಪಯೋಗವಿಲ್ಲ ಅಲ್ಲವೆ? ಆದ್ದರಿಂದ ಯಾವುದೇ ಸಲಕರಣೆ ಉಪಯುಕ್ತವಾಗಲು ಅದರೊಳಗಿನ ಖಾಲಿ ಮುಖ್ಯವಾಗುತ್ತದೆ. ಹಾಗೂ ಖಾಲಿಯು ಉಪಯುಕ್ತವಾಗಲು ಹೊರಗಿನ ಸಲಕರಣೆಯು ಸಹಕಾರಿಯಾಗುತ್ತದೆ. ಇವು ಪರಸ್ಪರ ಉಪಯೋಗಿ ಸಂಗತಿಗಳು. ಆದರೆ ನಾವು ಕೇವಲ ಹೊರಗಿನ, ಗೋಚರ ಸಂಗತಿಗೆ ಮಾತ್ರ ಮಹತ್ವ ಕೊಡುತ್ತೇವೆ. ಮಡಿಕೆಯ ಅಂದ – ಆಕಾರಕ್ಕೆ ಹೆಚ್ಚು ಶ್ರಮ ವಹಿಸುತ್ತೇವೆ. ದೇಹವನ್ನು ಶೃಂಗರಿಸಿಕೊಳ್ಳುತ್ತೇವೆ. ಆದರೆ ಆತ್ಮದ ಇರುವನ್ನು ಸಾರ್ಥಕಗೊಳಿಸಿಕೊಳ್ಳುವ ಬಗ್ಗೆ ಚಿಂತಿಸುವುದೇ ಇಲ್ಲ. ಅದು ಮಡಿಕೆಯಿರಲಿ, ದೇಹವಿರಲಿ ಅಥವಾ ಯಾವುದೇ ಸಲಕರಣೆ ಇರಲಿ. ಅದು ಸಾರ್ಥಕಗೊಳ್ಳುವುದು ಹೇಗೆ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆಯೇ. ನೀರು ತುಂಬಿ ತರಲು ಉಪಯೋಗವಿಲ್ಲದ ಮಡಿಕೆ ದಂಡ ಅಲ್ಲವೆ? ಹಾಗೆಯೇ ಆತ್ಮ ಸಂವಹನಕ್ಕೆ ಉಪಯೋಗವಾಗದ ದೇಹ ಕೂಡಾ. ತೂತು ಬಿದ್ದ ಮಡಿಕೆಯ ನಿರರ್ಥಕತೆಯನ್ನೇ ಗಮನಿಸಿ. ಅದರ ತೂತಿನ ಮೂಲಕ ಖಾಲಿಯೂ ಸೋರಿ ಹೋಗಿರುತ್ತದೆ. ಅನಂತ ಆಕಾಶದಲ್ಲಿ ಲೀನವಾಗಿರುತ್ತದೆ. ಹಾಗೆಂದೇ ತೂತು ಮಡಿಕೆ ನೀರನ್ನು ಇಟ್ಟುಕೊಳ್ಳಲಾಗದು. ಅದರಂತೆಯೇ ಅಸ್ವಸ್ಥ ದೇಹವೂ ಕೂಡಾ. ಆದ್ದರಿಂದಲೇ ರೋಗಿಷ್ಟ ದೇಹದಲ್ಲಿ ಆತ್ಮವು ಸದಾ ನಿಷ್ಕ್ರಮಣ ಸ್ಥಿತಿಯಲ್ಲೇ ಇರುತ್ತದೆ. ವೈದ್ಯರು `ಪ್ರಾಣ ಯಾವಾಗ ಬೇಕಿದ್ದರೂ ಹೋಗಬಹುದು’ ಅನ್ನುವುದಿಲ್ಲವೇ? ಅಸ್ವಸ್ಥ ದೇಹವು ಜೀವ ಸೋರಿಹೋಗುವಂಥ ರಂಧ್ರ ಉಂಟು ಮಾಡಿದ್ದರ ಪರಿಣಾಮವಿದು. ಆದ್ದರಿಂದ ಮೂಲ ದ್ರವ್ಯವನ್ನು ಹಿಡಿದಿಟ್ಟುಕೊಳ್ಳುವಷ್ಟು ಸಮರ್ಥವಾಗಿ, ಹಾಗೂ ಆ ಉದ್ದೇಶಕ್ಕಾಗಿ ಮಾತ್ರ ನಾವು ಸಲಕರಣೆಯನ್ನು ಪೋಷಿಸಿಕೊಳ್ಳಬೇಕು. ಆಗ ಮಾತ್ರ ಮಡಿಕೆಯ ಅಸ್ತಿತ್ವ ಸಾರ್ಥಕಗೊಳ್ಳುವುದು, ದೇಹದ್ದು ಕೂಡಾ.
ರಾಜ್ಯದಲ್ಲಿ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ನನಗೆ ಒತ್ತಡ ಬಂದಿದೆ. ಆದರೆ, ಅಂತಿಮವಾಗಿ ಈಗ ಮೂರು ವಿಧಾನಸಭಾ ಕ್ಷೇತ್ರಗಳನ್ನು ಅಂತಿಮವಾಗಿ ಪಟ್ಟಿ ಮಾಡಿಕೊಂಡಿದ್ದೇನೆ. ಅದರಲ್ಲಿ ಹೈಕಮಾಂಡ್‌ ಸೂಚನೆ ಮಾಡಿದಂತೆ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. Sathish Kumar KH First Published Nov 18, 2022, 1:36 PM IST ಮೈಸೂರು (ನ.18): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ರಾಜ್ಯದಲ್ಲಿ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ನನಗೆ ಒತ್ತಡ ಬಂದಿದೆ. ಆದರೆ, ಅಂತಿಮವಾಗಿ ಈಗ ಮೂರು ವಿಧಾನಸಭಾ ಕ್ಷೇತ್ರಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ. ಅದರಲ್ಲಿ ಹೈಕಮಾಂಡ್‌ ಸೂಚನೆ ಮಾಡಿದಂತೆ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದ ಹಲವು ಕ್ಷೇತ್ರಗಳಿಂದ ಸ್ಪರ್ಧೆಗೆ ಒತ್ತಾಯ ಬಂದಿದೆ. ನಾನು ಮೂರು ಕ್ಷೇತ್ರಗಳನ್ನ ಅಂತಿಮವಾಗಿ ಪಟ್ಟಿ (Short list)) ಮಾಡಿದ್ದೇನೆ. ಕೋಲಾರ (Kolar), ಬಾದಾಮಿ (Badami) ಹಾಗೂ ವರುಣಾ (Varuna) ಕ್ಷೇತ್ರಗಳು ಈ ಪಟ್ಟಿಯಲ್ಲಿವೆ. ಚುನಾವಣೆ (Election) ಘೋಷಣೆ ನಂತರ ನಾನು ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಹೇಳುತ್ತೇನೆ. ಕ್ಷೇತ್ರದ ಆಯ್ಕೆಯ ಬಗ್ಗೆ ಅಂತಿಮವಾಗಿ ಹೈಕಮಾಂಡ್ (High Command) ತೀರ್ಮಾನ ಮಾಡುತ್ತದೆ. ಇನ್ನು ಸೋಲಿನ ಭಯದಲ್ಲಿ ಸಿದ್ದರಾಮಯ್ಯ (siddaramaiah) ಅವರು ಕ್ಷೇತ್ರಳಲ್ಲಿ ಸಮೀಕ್ಷೆಯ (Survey) ಮೊರೆ ಹೋಗಿದ್ದಾರೆ ಎಂಬ ಬಿಜೆಪಿ ಸೇರಿ ಹಲವು ಪಕ್ಷಗಳ ಮುಖಂಡರ ಆರೋಪದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಗೆ ಚಕ್ರವ್ಯೂಹ: ಟಗರು ಬೇಟೆಗೆ ಖೆಡ್ಡಾ ರೆಡಿ ಸಮೀಕ್ಷೆ ಮಾಡಿಸಿದರೆ ತಪ್ಪೇನು? : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಅವರು ಸಮೀಕ್ಷೆ ಮಾಡಿಸಿರಲಿಲ್ವಾ? ಎಂದು ಬಿಜೆಪಿ (BJP) ಮುಖಂಡರ ವಿರುದ್ಧ ಕಿಡಿಕಾರಿದರು. ಆದರೆ, ಸಮೀಕ್ಷೆ ಮಾಡಿಸುವುದರಲ್ಲಿ ನನಗೆ ತಪ್ಪೇನು ಕಾಣಿಸುತ್ತಿಲ್ಲ. ನಾವು ರಾಜ್ಯವ್ಯಾಪಿ ಪ್ರವಾಸ (Tour) ಮಾಡುತ್ತಿದ್ದೇವೆ. ಈ ವೇಳೆ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಸುರಕ್ಷಿತ ಕ್ಷೇತ್ರ ಯಾವುದು ಎಂಭುದಕ್ಕಾಗಿ ಸರ್ವೆ ಮಾಡಿಸಿರುತ್ತಾರೆ. ಆದರೆ, ನಾನು ಸರ್ವೆ ಅಥವಾ ಪಕ್ಷ ಸರ್ವೆ ಮಾಡಿಸಿಲ್ಲ. ಇನ್ನು ಜೆಡಿಎಸ್ (JDS) ಪಕ್ಷದ ಪಂಚರತ್ನ (Pancaratna) ಯಾತ್ರೆ ಸೇರಿ ಯಾವುದೇ ಜಾತ್ರೆ ಮಾಡಿದರೂ ಪರವಾಗಿಲ್ಲ. ಪಂಚ ರತ್ನ, ಅಷ್ಟ ರತ್ನ, ದಶರತ್ನ ಯಾತ್ರೆ ಏನು ಬೇಕಾದರೂ ಮಾಡಲಿ. ಅವರ ಸಂಘಟನೆ ಅವರಿಗೆ ಇರುತ್ತದೆ. ನಾನು ಯಾರಿಗೂ ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ಹೇಳಿದರು. ಆರ್ಥಿಕವಾಗಿ ಹಿಂದುಳಿದವರ ಮೀಸಲು ದೇಶದಲ್ಲಿ ಅಸಮಾನತೆ ಹೆಚ್ಚಿಸುತ್ತೆ: ಸಿದ್ದರಾಮಯ್ಯ ಮೂರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಕಟ: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಟಿಕೆಟ್‌ಗಾಗಿ (Ticket) ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ಈಗ ಸಿದ್ದರಾಮಯ್ಯ ಅವರು ಚುನಾವಣೆ ಘೋಷಣೆ ಆಗುವವರೆಗೂ ತಾವು ಸ್ಪರ್ಧಿಸುವ ಕ್ಷೇತ್ರ ಯಾವುದು ಎಂಬುದನ್ನು ತಿಳಿಸುತ್ತಿಲ್ಲ. ಹೀಗಾಗಿ, ವರುಣಾ, ಕೋಲಾರ ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇತರೆ ಕಾಂಗ್ರೆಸ್‌ ಆಕಾಂಕ್ಷಿಗಳು (aspirants) ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂತಿಮವಾಗಿ ಸಿದ್ದರಾಮಯ್ಯ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ನಮ್ಮ ಕ್ಷೇತ್ರದಲ್ಲಿ ಅರ್ಜಿ (Application) ಹಾಕಿದ್ದರೆ ನನಗೇ ಟಿಕೆಟ್‌ ಸಿಗುತ್ತಿತ್ತು ಎಂದು ಕೈ-ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬರಲಿದೆ. ಇದರಿಂದ ಮೂರು ಕ್ಷೇತ್ರಳ ಟಿಕೆಟ್‌ ಆಕಾಂಕ್ಷಿಗಳು ಸಂಕಟದಲ್ಲಿ ಸಿಲುಕಿದ್ದಾರೆ.
ಪ್ರಾಯಶಃ ಧಾರಾವಾಹಿಗಳನ್ನು ನೋಡದ ಮಂದಿಯೇ ಇಲ್ಲವೇನೋ. ಬೇಕೋ ಬೇಡವೋ, ಮನೆಯಲ್ಲಿ ಟೀವಿ ಇದೆ ಎಂದ ಮೇಲೆ ಮುಗಿಯಿತು ಬಿಡಿ, ಸೀರಿಯಲ್ಲುಗಳ ಮಾಯಾಜಾಲದಲ್ಲಿ ನೀವು ಕೂಡ ಬಂಧಿಯಾಗೇ ಇರುತ್ತೀರಿ. ಅಥವ ನಿಮ್ಮ ಪ್ರೀತಿಪಾತ್ರರು ಯಾರೋ ಧಾರಾವಾಹಿಗಳಿಗೆ ಅಂಟಿಕೊಂಡಿರುತ್ತಾರೆ ಕೂಡ. ಕನ್ನಡದಲ್ಲೇ ದಿನಕ್ಕೀಗ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳು ನಿತ್ಯ ಪ್ರಸಾರ ಕಾಣುತ್ತವೆ. ಪ್ರೈಮ್ ಟೈಮ್ ಮನರಂಜನೆಯ ನಿತ್ಯ ಸರಕು, ಸೀರಿಯಲ್ಲುಗಳದೇ ಆಗಿದೆ. ಸಂಜೆ ಆರು ಗಂಟೆಯಿಂದ ಹನ್ನೊಂದು ಗಂಟೆಯವರೆಗಿನ ಥರಹೇವಾರಿ ಕಥೆಗಳ ಲೋಕ, ಬರವಣಿಗೆಯ ಒಂದು ಪ್ರಮುಖ ಪ್ರಕಾರ ಕೂಡ ಆಗಿದೆ. ನಿತ್ಯವೂ ಇಷ್ಟೆಲ್ಲ ಸೀರಿಯಲ್ ಗಳು ಪ್ರಸಾರ ಕಾಣುತ್ತಿದೆ ಎಂದ ಮೇಲೆ- ಅಲ್ಲಿನ ಪಾತ್ರಗಳ ಬಾಯಲ್ಲಿ ಬರುವ ಸಂಭಾಷಣೆಯನ್ನ ಬರೆಯೋರು- ಚಿತ್ರಕಥೆಯನ್ನು ಬರೆಯೋರು ಕೂಡ ಅತ್ಯಂತ ಮುಖ್ಯವಾಗುತ್ತಾರೆ. ಯಾವ ಸಾಫ್ಟ್ ವೇರ್ ಇಂಜಿನಿಯರ್ ಗೆ ಕಡಿಮೆ ಇಲ್ಲದ ಸಂಬಳ ಕೂಡ ಈ ವಿಭಾಗದಲ್ಲಿದೆ ಎಂದರೆ ಅಚ್ಚರಿಯಾಗುವುದೇನೋ? ಧಾರಾವಾಹಿ ಪ್ರಪಂಚ: ಬರವಣಿಗೆಯನ್ನು ಹವ್ಯಾಸಕ್ಕಷ್ಟೇ ಸೀಮಿತವಾಗಿಡದೇ, ಅದರಲ್ಲೇ ಹೊಟ್ಟೆಪಾಡನ್ನೂ ನೋಡಿಕೊಂಡು ಬೆಳೆಯುತ್ತೇನೆ ಎಂದು ನಿರ್ಧರಿಸಿದವರಿಗೆ ಹೊಸ ಹೊಸ ಅವಕಾಶಗಳು ಖಂಡಿತಕ್ಕೂ ತೆರೆದುಕೊಳ್ಳುತ್ತವೆ. ಸಿನಿಮಾ, ಧಾರಾವಾಹಿಗಳ ಚಿತ್ರಕಥೆ/ಸಂಭಾಷಣೆ ಬರೆಯುವುದು, ಅವುಗಳಲ್ಲೊಂದು. ಪ್ರತಿದಿನ ಪ್ರಸಾರವಾಗುವ ಧಾರಾವಾಹಿಗಳಿಗೆ ಆಕರ್ಷಕವಾಗಿ ಚಿತ್ರಕಥೆಯನ್ನೂ- ಸಂಭಾಷಣೆಯನ್ನೂ ಹೊಸೆಯುವ ಮಂದಿಗೆ ಬೇಡಿಕೆ ಇದ್ದೇ ಇದೆ. ಸಮಯಕ್ಕೆ ಸರಿಯಾಗಿ, ನೋಡುಗರನ್ನೂ ಗಮನದಲ್ಲಿರಿಸಿಕೊಂಡು ಸೊಗಸಾಗಿ ಬರೆಯುವವರನ್ನು ಈ ಕ್ಷೇತ್ರ ಎಂದಿಗೂ ನಿರಾಕರಿಸದು. ಶ್ರದ್ಧೆಯಿಂದ ಬರೆಯುತ್ತೇನೆ ಎಂಬ ಕೆಚ್ಚಿನ ಜೊತೆಗೆ, ಸರಿಯಾದ ಸಿದ್ಧತೆ ಬೇಕು ಅಷ್ಟೇ. ಕನ್ನಡ ಕಿರುತೆರೆ, ಈಗ ಹಿಂದೆಂದೂ ಕಂಡು-ಕೇಳದಷ್ಟು ಮಟ್ಟಕ್ಕೆ ಬೆಳೆದಿದೆ, ಸಿನಿಮಾಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಧಾರಾವಾಹಿ ಸಂಚಿಕೆಗಳು ನಿರ್ಮಾಣಗೊಳ್ಳುತ್ತಿವೆ. ಕರ್ನಾಟಕದ ಆಚೆಗೆ- ವಿದೇಶಗಳಲ್ಲೂ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ನಟಿಸಿದ- ನಾಯಕ ನಾಯಕಿಯರು ಸೀರಿಯಲ್ ಕ್ಷೇತ್ರಕ್ಕೆ ಮರಳಿ ಬರುತ್ತಿದ್ದಾರೆ. ನೋಡುಗರ ಸ್ಪಂದನೆಯೂ ಚೆನ್ನಾಗಿದ್ದು ವಾಹಿನಿಗಳು ಕೂಡ ಜನರ ಮನಸ್ಥಿತಿಗೆ ಸ್ಪಂದಿಸುತ್ತ ಹೊಸ ಬಗೆಯ ಸೀರಿಯಲ್ಲುಗಳನ್ನ ನಿರ್ಮಾಣ ಮಾಡುವತ್ತ ಮುಂದಾಗುತ್ತಿವೆ. ಹೀಗಾಗಿಯೇ, ಬರವಣಿಗೆಯ ಮೇಲೆ ಹಿಡಿತ ಇರುವ ಬರಹಗಾರರಿಗೆ ನೆಲೆ ಕಂಡುಕೊಳ್ಳಲು ಇದೊಂದು ಉತ್ತಮ ಜಾಗ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಒಂದಾದ ಮೇಲೊಂದು ಧಾರಾವಾಹಿಗಳನ್ನು ನಿರ್ಮಿಸುವ ಮತ್ತು ಪ್ರಸಾರ ಮಾಡುವ ಒತ್ತಡದಲ್ಲಿರುವ ಮನರಂಜನಾ ವಾಹಿನಿಗಳು ಸದಾ ಕಾಲ ಬರಹಗಾರರ ಹುಡುಕಾಟದಲ್ಲಿರುತ್ತವೆ. ಏಕೆಂದರೆ ಎಷ್ಟೇ ಅದ್ಭುತವಾದ ನಿರ್ಮಾಣ- ಝಗಮಗಿಸುವ ಸೆಟ್ಟುಗಳು-ಎಲ್ಲ ಇದ್ದರೂ, ಧಾರಾವಾಹಿಯೊಂದರ ಆತ್ಮ ಇರುವುದು, ಅದರ ಬರವಣಿಗೆಯಲ್ಲೇ. ಅದರಲ್ಲಿ ಸತ್ವ ಇಲ್ಲವಾದರೆ, ಸೀರಿಯಲ್ ಒಂದು ಗೆಲ್ಲಲಾರದು. ಅಧ್ಯಯನ ಅಗತ್ಯ ಹೀಗೆಂದ ಮಾತ್ರ ನಾಳೆ ಬೆಳಗಾಗೆದ್ದು ಸೀರಿಯಲ್ ಬರೆದುಬಿಡುತ್ತೇನೆ ಎಂದು ಎದ್ದು ಹೊರಟರೆ ಸಾಧ್ಯವಿಲ್ಲ. ಸರಿಯಾದ ಅಧ್ಯಯನ ಇದ್ದರೆ ಮಾತ್ರ ಇಲ್ಲಿ ಯಶಸ್ಸು ಸಾಧ್ಯ. ಇಲ್ಲವಾದರೆ ಬಂದ ದಾರಿಗೆ ಸುಂಕವಿಲ್ಲ- ಎಂಬ ಹಾಗೆ ಮನೆಯ ಹಾದಿ ಹಿಡಿಯಬೇಕಾಗುತ್ತದೆ. ಪ್ರತಿ ದಿನ ಕೂಡ ಸುಮಾರು ಹದಿನೈದರಿಂದ ಇಪ್ಪತ್ತು ಪುಟಗಳ ಸಂಭಾಷಣೆಯನ್ನು ಬಿಟ್ಟೂ ಬಿಡದಂತೆ ಬರೆಯುವ ತಾಳ್ಮೆ ನಿಮಗಿದೆಯೇ ಎಂಬ ಪ್ರಶ್ನೆಯನ್ನು ಮೊದಲು ಕೇಳಿಕೊಳ್ಳಿ, ಇಲ್ಲ ಎಂಬ ಉತ್ತರ ಬಂದರೆ, ಈ ಕ್ಷೇತ್ರ ನಿಮಗೆ ಹೇಳಿ ಮಾಡಿಸಿದ್ದಲ್ಲ, ಬಿಟ್ಟುಬಿಡಿ. ದಿನಂಪ್ರತಿ ಸುಮಾರು ಎಂಟರಿಂದ ಹತ್ತು ದೃಶ್ಯಗಳ ಚಿತ್ರೀಕರಣ ನಡೆದೇ ನಡೆಯುತ್ತದೆ ಮತ್ತು ಅದಕ್ಕಾಗಿ ಮೇಲೆ ಹೇಳಿದಷ್ಟು ಪುಟಗಳನ್ನ ಬರೆದೇ ತೀರಬೇಕಿರುತ್ತದೆ. ಇದು, ಇಲ್ಲಿರಬೇಕಾದ ಅತ್ಯಂತ ಮುಖ್ಯ ಅರ್ಹತೆಗಳಲ್ಲೊಂದು. ಕವಿತೆಯೊಂದನ್ನು ಸೂಕ್ಷ್ಮವಾಗಿ ಕೆತ್ತಿದಂತಹ ನಿಧಾನ, ಇಲ್ಲಿಗೆ ಸಲ್ಲುವುದಿಲ್ಲ. ಜನಮನವನ್ನು ಮುಟ್ಟುವ ಸಮರ್ಥ ಸಂಭಾಷಣೆಯನ್ನು ಬರೆಯುವ ಜೊತೆಗೆ- ಅದನ್ನ ಹೆಚ್ಚಿನ ಪ್ರಮಾಣದಲ್ಲಿ ಬರೆಯಬೇಕಾದ ಅನಿವಾರ್ಯತೆ ಇರುವುದು ಇಲ್ಲಿನ ವಾಸ್ತವ. ಅದನ್ನ ಧಿಕ್ಕರಿಸಿ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿಯೇ ಬಹಳ ಮಂದಿ ಇಲ್ಲಿ ಸೋಲುವ ಅಪಾಯ ಇದೆ. ಹೆಚ್ಚು ಹೆಚ್ಚು ಓದಿಕೊಂಡಷ್ಟೂ- ಸಿನಿಮಾಗಳನ್ನ/ಧಾರಾವಾಹಿಗಳನ್ನ ನೋಡಿದಷ್ಟೂ ಬರಹಗಾರನ ಜ್ಞಾನ ಹೆಚ್ಚುತ್ತದೆ. ಆಗ ಹೆಚ್ಚಿನ ಪುಟಗಳ ಸಂಭಾಷಣೆಯನ್ನೂ ಸಲೀಸಾಗಿ ಬರೆಯುವುದು ಸಾಧ್ಯ. ಏನನ್ನೇ ಓದಿಕೊಂಡರೂ, ನೋಡಿದ್ದರೂ- ಅದನ್ನೆಲ್ಲ ಬಹಳ ಸರಳವಾಗಿ ತಲುಪಿಸಬೇಕಾದ್ದು ಮುಖ್ಯ. ಗ್ರಾಂಥಿಕವಾದ,ಸಟ್ಟನೆ ಅರ್ಥವಾಗದ- ಬಹಳ ಗಂಭೀರವಾದ ಸಂಭಾಷಣೆಗಳು ನೋಡುಗರಿಗೆ ಅಷ್ಟೊಂದಾಗಿ ರುಚಿಸದು. ಇನ್ನುಕೆಲ ಬಾರಿ ಅಭಿನಯಿಸುವ ಪಾತ್ರಧಾರಿ- ಆತನ/ಆಕೆಯ ಸಂಭಾಷಣೆ ಹೇಳುವ ಪರಿಯನ್ನೂ ಗಮನಿಸಿಕೊಂಡು ಬರೆಯುವುದು ಮುಖ್ಯವಾಗುತ್ತದೆ. ಆರಾಮಾಗಿರೋ ಸೀನೇ ಇಲ್ಲ! ನಿಮಗೆ ಜ್ವರ ಬಂದಿದ್ದರೂ, ಮದುವೆ ಸೀನಿನ ಡೈಲಾಗು ನಾಳೆಗೆ ಬೇಕು ಎಂದ ಮೇಲೆ- ಮುಗಿದೇ ಹೋಯಿತು. ಶತಾಯಗತಾಯ ಅದನ್ನ ಬರೆದು ಕಳಿಸಲೇಬೇಕು. ಏಕೆಂದರೆ ನಟರೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಜನ, ಸಂಭಾಷಣಕಾರ ಬರೆದು ಕಳಿಸುವ ಸೀನಿಗಾಗಿ ಸೆಟ್ ನಲ್ಲಿ ಕಾಯುತ್ತಿರುತ್ತಾರೆ. ಇದನ್ನ ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕಾಗಿರುವ ಆ ಹೊತ್ತಿನ ಅಗತ್ಯ. ಬಹಳ ಮಂದಿಗೆ, ಫ್ರೀಲ್ಯಾನ್ಸ್ ಬರಹಗಾರರು ಎಂದ ಮೇಲೆ- ಅಯ್ಯೋ ಬಿಡಯ್ಯ ಮಜಾ ಮಾಡ್ಕೊಂಡ್ ಇರ್ತಾರೆ, ಯಾವಾಗಲೂ ಫ್ರೀ ಟೈಮು ಎಂಬ ತಪ್ಪು ಕಲ್ಪನೆಯೊಂದಿದೆ. ಆರಾಮಾಗಿರಬಹುದು ಎಂದೇನಾದರೂ ಈ ಫೀಲ್ಡನ್ನ ಆರಿಸಿಕೊಳ್ಳುವ ಆಸೆಯಿದ್ದರೆ ಅದರಿಂದ ಹೊರಗೆ ಬನ್ನಿ! ಇದು ರಜೆಯೇ ಇಲ್ಲದ, ಮುನ್ನೂರ ಅರವತ್ತೈದು ದಿನ ಕೂಡ ಕೆಲಸವನ್ನು ಬೇಡುವ ಜಾಗ. ಹೊತ್ತಲ್ಲದ ಹೊತ್ತಿನಲ್ಲಿ ಹೊಸದೊಂದು ದೃಶ್ಯ ಬರೆದುಕೊಡುವ ಕರೆ ಬರುತ್ತದೆ. ಭಟ್ಕಳದ ಬಸ್ ಸ್ಟ್ಯಾಂಡಿನಿಂದ ತೊಡಗಿ, ಹಿಮಾಲಯದ ನದೀ ದಡದಲ್ಲಿ ಕೂತು ಕೂಡ ಸಂಭಾಷಣೆ ಬರೆದು ಕಳಿಸುವ ಅನಿವಾರ್ಯತೆಗೆ ನಾನೇ ಸಿಲುಕಿದ್ದೇನೆ. ನಿಮ್ಮ ಯಾವುದೇ ಜಂಜಡಗಳಲ್ಲಿ ನೀವು ಸಿಲುಕಿಕೊಂಡಿದ್ದರೂ- ಆ ಸಮಸ್ಯೆ ಸೀನ್ ಪೇಪರ್ ನಲ್ಲಿ ಕಾಣಿಸಬಾರದು! ್ಹಗಲು ರಾತ್ರಿಗಳ ಪರಿವೆ ಇಲ್ಲದೆಯೇ ಲ್ಯಾಪ್ ಟಾಪ್ ಮುಂದೆ ಕೂತು ಸೀನು ಕಟ್ಟುವ ಕೆಲಸ ಮಾಡುವ ಉಮೇದು ಇಲ್ಲಿ ಇರಲೇಬೇಕಾದ್ದು ಅವಶ್ಯಕ. ಹಾಗೆಂದು ನಿತ್ಯವೂ ಹೀಗೇ ಕೆಲಸವೇ ಎಂದುಕೊಳ್ಳಬೇಡಿ-ಖಂಡಿತ ಅಲ್ಲ. ಆದರೆ- ಈ ಅಂಚನ್ನೂ ತಿಳಿದುಕೊಂಡಿರಬೇಕಾದ್ದು ಅಗತ್ಯ. ಬರೆಯುವ ಮುನ್ನ: ಧಾರಾವಾಹಿಯ ಸಂಭಾಷಣೆಕಾರನಾದವನು, ಚಿತ್ರಕಥೆಯನ್ನು ಬರೆಯುವವರ ಜೊತೆಗೆ ಹಾಗೂ ನಿರ್ದೇಶಕನ ಜೊತೆಗೆ ಉತ್ತಮ ಸಂವಹನ ಹೊಂದಿರಬೇಕು. ಕತೆಯ ಬಗ್ಗೆ ಸ್ಪಷ್ಟವಾದ ಕಲ್ಪನೆ ಇದ್ದು, ಧಾರಾವಾಹಿಯು ಎತ್ತ ಸಾಗುತ್ತಿದೆ ಎನ್ನುವ ಅರಿವನ್ನ ಇಟ್ಟುಕೊಂಡಿರಬೇಕು. ಪಾತ್ರಗಳು-ಅವುಗಳ ಮಿತಿಯನ್ನ ಅರಿತುಕೊಂಡಿರಬೇಕು. ಯಾವ ಸನ್ನಿವೇಶ ಮುಖ್ಯವಾದದ್ದು- ಯಾವುದು ಅನಗತ್ಯ ಎನ್ನುವ ಜಾಣ್ಮೆ ಹೊಂದಿರಬೇಕಾದ್ದೂ ಅಗತ್ಯವೇ. ಪ್ರತೀ ದೃಶ್ಯದಲ್ಲೂ ಚುರುಕಾದ, ನೋಡುಗ- ಅರೇ ಎನ್ನುವಂತಹ ಸಂಭಾಷಣೆಯನ್ನು ಕಟ್ಟಿಕೊಡುವ ಪ್ರಯತ್ನವೂ ಇರಬೇಕು. ಹೀಗಿದ್ದಾಗ ಒಬ್ಬ ಉತ್ತಮ ಸಂಭಾಷಣೆಕಾರನಾಗಲು ಸಾಧ್ಯವಿದೆ. ಚಿತ್ರಕಥೆ: ಸಂಭಾಷಣೆ ವಿಭಾಗ ನನಗೆ ಹೇಳಿ ಮಾಡಿಸಿದ್ದಲ್ಲ, ಆದರೆ ನಾನೊಬ್ಬ ಒಳ್ಳೆಯ ಕತೆಗಾರ ಅನ್ನುವ ಯೋಚನೆ ಇರುವವರು ಚಿತ್ರಕಥೆ ಬರೆಯುವುದರ ಬಗ್ಗೆ ಗಮನಹರಿಸಬಹುದು. ವಾಹಿನಿಗಳು ಒದಗಿಸುವ, ಅಥವ ನಿರ್ದೇಶಕನ ಮನದಲ್ಲಿರುವ ಕಥೆಯನ್ನ ವಿಸ್ತರಿಸಿ ಬರೆಯುವ ಶಕ್ತಿಯಿದ್ದಲ್ಲಿ, ಚಿತ್ರಕಥೆ ಬರೆಯುವುದು ಒಳಿತು. ಪ್ರತೀ ಸಂಚಿಕೆಗಳಿಗೆ ರೋಚಕವಾಗಿ ಸ್ಕ್ರೀನ್ ಪ್ಲೇ ಬರೆಯುವುದು ಕೂಡ ಬಹಳ ಆಸಕ್ತಿದಾಯಕ ವಿಷಯ. ನಿತ್ಯವೂ ಕೂತು ಬರೆಯುವ ಅಗತ್ಯ ಇಲ್ಲದೇ ಹೋದರೂ ಕೂಡ ಚಿತ್ರಕಥೆಯನ್ನ ಕಟ್ಟುವುದು ತುಂಬ ಒತ್ತಡದ ಕೆಲಸ. ಧಾರಾವಾಹಿಯ ಮುಂದಿನ ಹರಿವನ್ನು ನಿರ್ಧರಿಸಬೇಕಾದ ಅನಿವಾರ್ಯತೆ ಚಿತ್ರಕಥೆಗಾರನಿಗಿರುತ್ತದೆ. ಪಾತ್ರಗಳು ಹುಟ್ಟುವುದೂ-ಸಾಯುವುದೂ ಈತನ ಕೈಯಲ್ಲೇ! ಬಹಳಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿರುವುದರಿಂದ, ಹೊಸತನವನ್ನು ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ. ಚಿತ್ರಕಥೆಯನ್ನ ಬರೆಯುವವನು ಸುತ್ತ ನಾಲ್ಕು ವಾಹಿನಿಗಳ ಧಾರಾವಾಹಿಗಳನ್ನೂ ಗಮನಿಸುತ್ತ- ಅವುಗಳಿಗಿಂತ ಭಿನ್ನವಾದ ಕಥಾಹಂದರವನ್ನು ಹುಟ್ಟುಹಾಕಬೇಕಾಗುತ್ತದೆ. ನೋಡುಗರ ಅಭಿಪ್ರಾಯಕ್ಕೆ ತಕ್ಕ ಹಾಗೆ ಕಥೆಯನ್ನು ಬದಲಾಯಿಸುವ ಅನಿವಾರ್ಯತೆ ಕೆಲ ಬಾರಿ ಬಂದೊದಗುತ್ತದೆ. ಅಂದುಕೊಂಡ ಮಟ್ಟಕ್ಕೆ ಧಾರಾವಾಹಿ ನೋಡುಗನ ಮನಮುಟ್ಟದೇ ಹೋದರೆ, ಕಥೆಗೊಂದು ಹೊಸ ತಿರುವನ್ನ ಕೊಡುವುದು ಚಿತ್ರಕಥೆ ಬರೆವಾತನ ಕೆಲಸ. ಅದೂ ಅಲ್ಲದೇ, ತಕ್ಕನಾದ ರೇಟಿಂಗ್ ಬರದೇ ಹೋದರೆ ಆಗ ಕೂಡ ಕಥೆಯ ದಿಕ್ಕನ್ನ ಬದಲಾಯಿಸಬೇಕಾದ್ದು ಈತನದೇ ಜವಾಬ್ದಾರಿ. ಇನ್ನೂ ಇದೆ! ಕೇವಲ ಧಾರಾವಾಹಿಗಳು ಮಾತ್ರವಲ್ಲದೇ ಮನರಂಜನಾ ವಾಹಿನಿಗಳಲ್ಲಿ ಇನ್ನೂ ಹಲ ಬಗೆಯ ಬರಹಗಾರರಿಗೆ ಅವಕಾಶವಿದೆ. ನಾನ್ ಫಿಕ್ಷನ್ ಶೋಗಳು- ರಿಯಾಲಿಟಿ ಶೋ ಗಳು ಕೂಡ ಬರಹಗಾರರನ್ನ ಪೋಷಿಸುತ್ತವೆ. ಡ್ಯಾನ್ಸ್ ಶೋ ಇರಲಿ, ಕಾಮಿಡಿ ಅಥವಾ ಟಾಕ್ ಶೋ ಇರಲಿ- ಅಥವಾ ಯಾವುದೇ ಬಗೆಯ ವಾರಾಂತ್ಯದ ವಿಶೇಷ ಕಾರ್ಯಕ್ರಮಗಳಿರಲಿ- ಎಲ್ಲದಕ್ಕೂ ಬರಹವೇ ಬೆನ್ನೆಲುಬು! ಯಾವನೇ ಸೆಲೆಬ್ರಿಟಿಯೊಬ್ಬ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದಾನೆ ಎಂದರೆ- ಆತನ ಹಿಂದೊಬ್ಬ ರೈಟರು ಕೂತಿದ್ದಾನೆ ಎಂತಲೇ ಲೆಕ್ಕ! ಇದರ ಜೊತೆಗೀಗ ಬೆಳೆಯುತ್ತಿರುವ ಯೂಟ್ಯೂಬ್-ವೀಡಿಯೋ ಅಪ್ಲಿಕೇಶನ್ ಗಳಿಂದಾಗಿ ಶಾರ್ಟ್ ಫಿಲಂ ಗಳು- ವೆಬ್ ಸೀರೀಸ್ ಗಳನ್ನ ಮಾಡುವ ಹೊಸ ಆಸಕ್ತಿ ಕೂಡ ಬೆಳೆಯುತ್ತಿದೆ. ಬರವಣಿಗೆಯನ್ನೇ ವೃತ್ತಿಯಾಗಿಸಿಕೊಳ್ಳುವ ಆಸಕ್ತಿ ಇರುವವರಿಗೆ ಇವುಗಳು ಕೂಡ ಉತ್ತಮ ಮಾರ್ಗವೇ. ಡಾಕ್ಯುಮೆಂಟರಿಗಳಿಗೆ ಸ್ಕ್ರಿಪ್ಟ್ ಬರೆಯುವುದು-ಸ್ವತಂತ್ರವಾಗಿ ಕಾರ್ಯಕ್ರಮಗಳನ್ನ ನಿರ್ಮಿಸಿ ವಾಹಿನಿಗಳಿಗೆ ಒದಗಿಸುವುದು- ಇವೇ ಮೊದಲಾದ ಸಾಧ್ಯತೆಗಳು ಕೂಡ ಬರಹಗಾರನಾದವನಿಗಿದೆ. ದಯವಿಟ್ಟು ಗಮನಿಸಿ: ಇಷ್ಟೆಲ್ಲ ಓದಿದ ಮೇಲೆ ಬರವಣಿಗೆಯನ್ನ ಪ್ರವೃತ್ತಿಯಿಂದ ವೃತ್ತಿಗೆ ಬದಲಾಯಿಸಿಕೊಳ್ಳುವ ಆಸಕ್ತಿ ಕೆಲವರಿಗಾದರೂ ಬಂದಿರಬಹುದು. ಆದರೆ ಮೇಲೆ ಹೇಳಿದ ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಸಂಬಂಧಪಟ್ಟ ನಿರ್ಮಾಪಕರ ಬಳಿ ಸಂಬಳದ ಬಗ್ಗೆ ಸರಿಯಾಗಿ ಮಾತನಾಡಿ! ಈ ಕ್ಷೇತ್ರಕ್ಕೆ ಬರುವ ಬಹಳ ಮಂದಿಯನ್ನ ಅನುಭವ ಸಿಗುತ್ತದೆ, ಕೆಲಸ ಮಾಡಿ. ನಾವು ಕೊಡೋದೇ ಇಷ್ಟು ಕಣ್ರೀ ಮಾಡೋದಾದರೆ ಮಾಡಿ ಎಂದು ಜೀತಕ್ಕೆ ಹಚ್ಚುವ ಮಂದಿಯೂ ಇದ್ದಾರೆ. ಹೀಗಾಗಿ ಫ್ರೀಲ್ಯಾನ್ಸರಾಗಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಗಳಿಕೆಯ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿ. ಇಲ್ಲದೇ ಹೋದರೆ ನಿಮ್ಮ ಕೆಲಸಕ್ಕೆ ತಕ್ಕ ಸಂಬಳ ಸಿಗದೇ ನಿರಾಶೆ ಹೊಂದುವ ಸಾಧ್ಯತೆಯೂ ಇದೆ. ಕೊನೆಯದಾಗಿ- ನಿಮ್ಮ ಬರವಣಿಗೆಯ ಮೇಲೆ ನಿಮಗೆ ನಂಬಿಕೆ ಇದೆ ಎಂದಾದರೆ ಖಂಡಿತವಾಗಿಯೂ ಇದನ್ನ ವೃತ್ತಿಯಾಗಿ ಸ್ವೀಕರಿಸಬಹುದು. ಏಕೆಂದರೆ ನಿಮ್ಮ ಜ್ಞಾನ ನಿಮ್ಮ ಕೈಬಿಡದು! ಎಂದಿಗೂ. ಪೋಸ್ಟ್ ಮಾಡಿದವರು ಶ್ರೀನಿಧಿ.ಡಿ.ಎಸ್ ರಲ್ಲಿ 10:20 ಪೂರ್ವಾಹ್ನ 3 ಕಾಮೆಂಟ್‌ಗಳು: ಲೇಬಲ್‌ಗಳು: ಆಕ್ಟಿಂಗ್, ಎಪಿಸೋಡ್, ಕನ್ನಡ ಕಿರುತೆರೆ, ಡೈಲಾಗ್ ರೈಟಿಂಗ್, ಧಾರಾವಾಹಿ, ಸಂಭಾಷಣೆ, ಸೀರಿಯಲ್ ಮಂಗಳವಾರ, ಆಗಸ್ಟ್ 01, 2017 ಛಾಯಾಗ್ರಹಣವೆಂಬ ಕ್ಷಣ ಕ್ಷಣದ ಧ್ಯಾನ “It is an illusion that photos are made with the camera… they are made with the eye, heart and head.” – Henri Cartier-Bresson ತಾನು ಸ್ಥಿರವಾಗಿದ್ದೂ, ನೋಡುಗನ ಬದುಕನ್ನ ಅಲುಗಾಡಿಸಬಲ್ಲ ವಿಶಿಷ್ಠ ಶಕ್ತಿ ಛಾಯಾಗ್ರಹಣಕ್ಕಿದೆ. ಕಾಲಪ್ರವಾಹದಲ್ಲಿ ಮಿಂಚಿ ಮರೆಯಾಗಬಹುದಾಗಿದ್ದ ಕ್ಷಣವೊಂದನ್ನು ಅನಂತವಾಗಿ ಸೆರೆಹಿಡಿದಿಡಬಲ್ಲ ಈ ಅನ್ಯೂಹ್ಯ ಕ್ರಿಯೆಯೇ ಒಂದು ಅಚ್ಚರಿ. ಭೂತಕಾಲದ ಕಿಟಕಿ, ವರ್ತಮಾನದ ಕನ್ನಡಿ ಮತ್ತು ಭವಿಷ್ಯತ್ತಿಗೆ ಬಾಗಿಲು ಛಾಯಾಗ್ರಹಣ.ಸೂಕ್ಷ್ಮ ಗಮನಿಸುವಿಕೆಗಳ ಮೂಲಕ ಏಕಾಗ್ರತೆಯನ್ನ ಹೆಚ್ಚಿಸುವ, ಪ್ರಕೃತಿಯೊಡನೆ ನಾವೂ ಪ್ರಕೃತಿಯೇ ಆಗಿಬಿಡುವ ಸಾಧ್ಯತೆ ಇರುವ, ನಿರಂತರ ಪ್ರಯೋಗಗಳ ಮೂಲಕ ನಮ್ಮನ್ನ ನಾವು ಅರಿತುಕೊಳ್ಳುವಂತೆ ಮಾಡುವ ಶಕ್ತಿ ಫೋಟೋಗ್ರಫಿಗಿದೆ. ನೆರಳು ಬೆಳಕುಗಳ ಬೆರಗಿನಾಟವು ಅಂತರಂಗವನ್ನು ಮುಟ್ಟುವ, ತಟ್ಟುವ ಮತ್ತು ಆ ಮೂಲಕ ಮನಸ್ಸಿನ ಕವಾಟವನ್ನು ತಣ್ಣಗೆ ತೆರೆಯುವ ಛಾಯಾಗ್ರಹಣವು ಧ್ಯಾನವೇ ಹೌದು. ಫೋಟೋಗ್ರಫಿಯನ್ನ ನಾನೆಂದೂ ಹವ್ಯಾಸವಾಗಿಯೇ ಪರಿಗಣಿಸಿದವನಾಗಿರಲಿಲ್ಲ. ನನ್ನ ಮೊದಲ ಆಸಕ್ತಿ ಕೂಡ ಅದಾಗಿರಲಿಲ್ಲ. ಆದರೆ ಮೆತ್ತಗೆ ಅದಾಗಿಯೇ ನನ್ನನ್ನ ಆವರಿಸಿಕೊಂಡಿತು. ಬದುಕನ್ನ ನೋಡುವ ಹೊಸದೊಂದು ಸಾಧ್ಯತೆಯನ್ನು ಕ್ಯಾಮರಾದ ಕಣ್ಣು ಕಲಿಸಿಕೊಟ್ಟಿತು. ಯಾವುದೋ ಬೆಟ್ಟದಲ್ಲಿ ಮರವೊಂದರಲ್ಲಿ ತನಗೆ ತಾನೇ ತೊನೆದುಕೊಳ್ಳುತ್ತಿರುವ ಪಾಚಿಕಟ್ಟಿಕೊಂಡಿರುವ ಗಂಟೆ, ನೀಲಿಹೂವೊಂದರ ಮೇಲೆ ಕೂತಿರುವ ದುಂಬಿ, ಸೂರ್ಯನೆದುರಾಗಿ ಕುಳಿತು ಬೆಳಕನ್ನೇ ಆಪೋಶನ ತೆಗೆದುಕೊಳ್ಳುವಂತೆ ಕೂತಿರುವ ಸನ್ಯಾಸಿ, ಹುಲ್ಲುಗರಿಕೆ ಹಾರುಹಕ್ಕಿ ನಭದ ಚುಕ್ಕಿ ಒಂದೇ ಎರಡೇ! ಎಂದು ನಾನು ಹಾರುವ ಚಿಟ್ಟೆಗಳ ಹಿಂದೆ ಹೋಗುತ್ತ ಹೋಗುತ್ತ ಧ್ಯಾನಸ್ಥ ಸ್ಥಿತಿಯನ್ನ ಅನುಭವಿಸಿದ್ದೆನೋ, ಅಂದೇ ಅಂದುಕೊಂಡೆ, ಇದು ನನ್ನೊಡನೆ ಇರಲೆಂದೇ ಬಂದಿದೆ! ಒಂದಂತೂ ಹೌದು. ಛಾಯಾಗ್ರಹಣವೆಂದರೆ ಕೇವಲ ಸಾಧನವೊಂದನ್ನು ಬಳಸಿ- ಚಿತ್ರವೊಂದನ್ನು ತೆಗೆಯುವ ಬರಿದೆ ತಾಂತ್ರಿಕ ಕಾರ್ಯವಂತೂ ಅಲ್ಲ. ನಮ್ಮನ್ನ ಮತ್ತೊಂದೇ ವಿಶ್ವಕ್ಕೆ ಕರೆದೊಯ್ಯುವ, ಇಂದ್ರಿಯಗಳ ಹಂಗನ್ನ ಮೀರಿದ ಅನುಭೂತಿ. ಚಿತ್ರವೊಂದನ್ನ ತೆಗೆಯುತ್ತಿರುವ ಆ ಕ್ಷಣದಲ್ಲಿ- ಆ- ಆ ಫಕ್ಕನೆ ಮಿಂಚಿ ಮರೆಯಾಗುವ ಸೆಕೆಂಡಿನಷ್ಟು ಕಾಲದಲ್ಲಿ ನಾವು, ನಾವಾಗಿರುವುದಿಲ್ಲ. ನಮ್ಮ ಗುರಿ, ಕನಸುಗಳು, ಶತ್ರುಗಳು ಮಿತ್ರರು ಬ್ಯಾಂಕ್ ಬ್ಯಾಲೆನ್ಸು ನಾಳಿನ ಚಿಂತೆ – ಯಾವುದೂ ಕೂಡ ಆ ಒಂದು ದಿವ್ಯ ಘಳಿಗೆ ನಮ್ಮ ಮನದೊಳಗೆ ಇರುವುದಿಲ್ಲ. ಆ ಕ್ಷಣಕ್ಕೆ ಅದೊಂದು ಖಾಲಿ ಕ್ಯಾನ್ ವಾಸ್. ಈಗಷ್ಟೇ ತೆಗೆದ ಚಿತ್ರವನ್ನು ತನ್ನೊಳಗೆ ಇಳಿಸಿಕೊಳ್ಳಲು ಸಿದ್ಧವಾಗಿರುವ ಹಾಳೆ. ನಿಮ್ಮ ಸುತ್ತಲಿನ ಸಂತೆಯ ಮಧ್ಯದಲ್ಲೂ ನೀವು ನೀವಾಗಷ್ಟೇ ಉಳಿದಿರುವ ಆನಂದದ ಚಣ ಅದು. ಹೊರ ಜಗತ್ತಿನ ಜೊತೆಗೆ ಆತ್ಮಸಂಪರ್ಕ ಕಡಿದು ಹೋಗಿ ಪುಟ್ಟ ನಿರ್ವಾತ ಉಂಟಾಗುವ ಹೊತ್ತು. ಅಲ್ಲಿ ನಾನು ಮಾತ್ರವೇ ಇದ್ದೇನೆ ಮತ್ತು ನನಗೆ ಮಾತ್ರ ಅಲ್ಲೇನಾಗುತ್ತಿದೆ ಎನ್ನುವುದು ಗೊತ್ತು. ಕ್ಯಾಮರಾದ ವ್ಯೂ ಫೈಂಡರೊಳಗೆ ನನ್ನನ್ನು ನಾನು ಕಂಡುಕೊಳ್ಳುವ ಈ ಮಾಯೆಯೇ ಧ್ಯಾನವಲ್ಲವೇ? ಹಿಂದು ಮುಂದುಗಳ ಚಿಂತೆಯಿಲ್ಲದೇ ಈ ಕ್ಷಣದಲ್ಲಿ ಬದುಕಬೇಕೆನ್ನುವ ಯೋಗಿಗಳು ಕಂಡುಕೊಂಡ ಸತ್ಯವನ್ನೇ ಛಾಯಾಗ್ರಹಣ ಹೇಳಿಕೊಡುತ್ತದೆ! ಕಣ್ಣೆದುರಿಗಿನ ಘಟನೆಯೊಂದನ್ನು ಸಾಕ್ಷಿಪ್ರಜ್ಞೆಯಂತೆ ಗಮನಿಸುತ್ತ ಅದನ್ನು ದಾಖಲಿಸಿಕೊಳ್ಳುವ ಪುಣ್ಯವೂ ದೊರಕುವ ಈ ಹವ್ಯಾಸಕ್ಕೆ ಎಣೆಯೇ ಇಲ್ಲ! ಕ್ಯಾಮರಾದ ಹಿಂದಿನ ಧ್ಯಾನದಲ್ಲಿ ನಾನು ಬದುಕನ್ನ ಬದಲಿಸಬಲ್ಲ ಕ್ಷಣಗಳನ್ನ ಕಂಡುಕೊಂಡಿದ್ದೇನೆ. ಈಗ ತಾನೇ ಅರಳಿದ ಹೂವು, ಇನ್ನೇನು ಕರಗಿ ಹೋಗಲಿರುವ , ಆದರೂ ಮಿನುಗುತ್ತಿರುವ ಇಬ್ಬನಿಯ ಬಿಂದು, ಕಣ್ಣೆದುರೇ ಬಣ್ಣ ಬದಲಿಸುತ್ತಿರುವ ಆ ಮಾಯಾವಿ ಗೋಸುಂಬೆ, ಯಾವ ಚಿಂತೆಯೂ ಇಲ್ಲದೇ ಮಧು ಹೀರುತ್ತಿದ್ದ ಮಿಡತೆಯೊಂದನ್ನ ಸಟಕ್ಕನೆ ಹಿಡಿದು ನುಂಗಿದ ಹಸಿರು ಹಾವು- ಇವೆಲ್ಲವೂ ನಮ್ಮದೇ ಜೀವನದ ಬೇರೆ ಬೇರೆ ಅಧ್ಯಾಯಗಳನ್ನ ನಮ್ಮೆದುರಿಗೆ ತೆರೆದು ತೋರಿಸುತ್ತ ಕ್ಯಾಮರಾದೊಳಗೆ ಬಂಧಿಯಾಗುತ್ತ- ಬದುಕಿನ ಆತ್ಯಂತಿಕ ಸತ್ಯಗಳನ್ನ ಹೇಳುತ್ತವೆ. ಕೈಯೊಳಗೆ ಕ್ಯಾಮರಾ ಇಲ್ಲದೇ ಹೋಗಿದ್ದರೆ ಖಂಡಿತಕ್ಕೂ ಇವನ್ನೆಲ್ಲ ನಾನು ಗಮನಿಸುತ್ತಲೇ ಇರಲಿಲ್ಲ! ಪ್ರಾಯಶಃ ಕ್ಯಾಮರಾ ಎಂಬೀ ಸಲಕರಣೆ ಆಧುನಿಕ ಯೋಗಿಯೇ ಸರಿ! ಆ ಹೊತ್ತಿನಲ್ಲಿ- ಅಲ್ಲಿ- ಇದ್ದುಕೊಂಡು ಸುಮ್ಮಗೆ ನಡೆಯುತ್ತಿರುವ ಒಂದು ಪುಟ್ಟ ಸುಂದರ ನೈಸರ್ಗಿಕ ಕ್ರಿಯೆಗೆ ಸಾಕ್ಷಿಯಾಗುವುದರಲ್ಲಿರುವ ಭಾವವನ್ನ ಅಕ್ಷರದಲ್ಲಿ ಹಿಡಿದಿಡಲಾರದು. ಸಾಧ್ಯವಿಲ್ಲದ ಮಾತದು. ಸಾಗರದ ಅಲೆಗಳ ಮುಂದೆ ನಿಂತು, ಅವುಗಳ ಆಗಮನ ನಿರ್ಗಮನಕ್ಕೆ ತಕ್ಕ ಹಾಗೆ ನಮ್ಮ ಉಸಿರೂ ಕೂಡ ಬದಲಾಗುವ ಸತ್ಯವನ್ನು ನಾನು ಕಂಡುಕೊಂಡಿದ್ದೇನೆ. ಮಳೆ ಹನಿಗಳ ತೊಟ್ಟಿಕ್ಕುವಿಕೆಯಲ್ಲಿನ ಸಂಗೀತ, ಹುಲ್ಲ ಎಲೆಯೊಂದರ ಮೃದುತ್ವ, ಮರಕ್ಕಂಟಿಕೊಂಡ ಪಾಚಿಯ ಹರಡುವಿಕೆಯಲ್ಲೂ ಅಡಗಿರುವ ಚಿತ್ರ, ಹಿನ್ನೀರ ಮರದ ತುಂಬ ತಾವೇ ಎಲೆಯಂತೆ ಕುಳಿತ ಹಕ್ಕಿಗಳ ಹಿಂಡು-ಒಂದೇ ಎರಡೇ? ಕ್ಯಾಮರಾ ಇಲ್ಲದೆಯೂ ಇವೆಲ್ಲವೂ ಕಾಣುತ್ತವೆ, ಅನುಭವಿಸಬಹುದು ಎಂದು ಹೇಳುವವರಿಗೆ ನನ್ನದೊಂದೇ ಉತ್ತರ. ಹೆಗಲ ಮೇಲೆ ಕ್ಯಾಮರಾ ಇದ್ದ ಕಾರಣಕ್ಕೆಯೇ ಇವೆಲ್ಲವನ್ನು ಹುಡುಕಿ ಹೊರಟಿದ್ದು ನಾನು! ಇಲ್ಲವಾದರೆ ಅವೆಲ್ಲ ಅವರ ಪಾಡಿಗೆ ಇದ್ದಲ್ಲೇ ಇರುತ್ತಿದ್ದವು, ನೋಡಲು- ಮತ್ತು ಆ ಕ್ಷಣ ಸೆರೆ ಹಿಡಿಯಲು ಅಲ್ಲಿ ನಾನು ಇರುತ್ತಿರಲಿಲ್ಲ, ಅಷ್ಟೇ. ಜಂಗಮ ಜೀವನಕ್ಕೆ ಕ್ಯಾಮರಾಕ್ಕಿಂತ ಒಡನಾಡಿ ಬೇರೆ ಇಲ್ಲ. ಕಳೆದ ಹತ್ತು ವರುಷಗಳಲ್ಲಿ ಫೋಟೋಗಳನ್ನ ತೆಗೆಯುವ ಆಸೆಗೆ ಹಿಮಾಲಯದ ವರೆಗೂ ಹೋಗಿ ಬಂದ ನನಗೆ ಆದ ಅನುಭವಗಳೆಷ್ಟೋ, ದೊರಕಿದ ಸ್ನೇಹಿತರೆಷ್ಟೊ. ನನ್ನ ಕುಬ್ಜತನ ಏನು, ಎಂಥ ಹುಲುಮಾನವ ನಾನು ಎಂಬುದು ಅರ್ಥವಾಗಿದ್ದರೆ, ಅದಕ್ಕೆ ನನ್ನ ಈ ಛಾಯಾಗ್ರಹಣದ ಹವ್ಯಾಸವೇ ಮುಖ್ಯ ಕಾರಣ. ಉದ್ದುದ್ದ ಚಾಚಿಕೊಂಡಿರುವ ಹಿಮಪರ್ವತದೆದುರು ನಿಂತು ನೋಡಿದಾಗ, ಈ ನನ್ನ ಪುಟ್ಟ ಪೆಟ್ಟಿಗೆಯೊಳಗೆ ದಕ್ಕುವ ಹಿಮಾಲಯವಷ್ಟೇ ನನ್ನ ಹಿಮಾಲಯ- ದಕ್ಕದ್ದು ಅಗಾಧ ಎಂಬರ್ಥವಾಗಿ ನೆಲಕ್ಕೆ ಮತ್ತೂ ಹತ್ತಿರವಾಗುವ ಬಯಕೆ ತಾನಾಗೇ ಮೂಡುತ್ತದೆ. ನಮ್ಮ ಕಲ್ಪನೆಗಳಿಗೆ ರೆಕ್ಕೆ ಮೂಡಿಸುವ ಈ ಹವ್ಯಾಸದ ಇನ್ನೊಂದು ಬಹುಮುಖ್ಯ ಅಂಶವೆಂದರೆ, ಹತ್ತಿರವಾಗುವ ಕ್ರಿಯೆ. ನಿಸರ್ಗದ ಜೊತೆಗೋ, ಜೊತೆಗಿರುವ ಒಡನಾಡಿಗಳ ಜೊತೆಗಿನ ಸಂಸರ್ಗವನ್ನು- ಫೋಟೋಗ್ರಫಿ ಇನ್ನಷ್ಟು ಹತ್ತಿರವಾಗಿಸುತ್ತವೆ. ಒಂದು ಮುಗ್ಧ ಕಿರುನಗೆ, ಕಣ್ಣ ಮಿಂಚು- ನಿಮ್ಮನ್ನ ಸೆಳೆಯುವ ಬಗೆಯೇ ಬದಲಾಗುತ್ತದೆ! ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಕಗ್ಗದ ಮಾತು ಸಗ್ಗ ಎನ್ನುವುದು ಅರ್ಥವಾಗುತ್ತದೆ. ಜನಜಂಗುಳಿಯ ಮಧ್ಯೆ ನಿಂತು ಕ್ಯಾಮರಾ ಕ್ಲಿಕ್ಕಿಸುವುದು ನನಗೆ ಅತ್ಯಂತ ಇಷ್ಟ ಕೊಡುವ ಕೆಲಸ. ಚಹದಂಗಡಿಯ ಹುಡುಗ, ಕಸ ಗುಡಿಸುತ್ತಿರೋ ಆ ಹೆಂಗಸು, ಚಪ್ಪಲಿ ಹೊಲಿಯುತ್ತಿರುವ ವೃದ್ಧ, ಹಸ್ತಸಾಮುದ್ರಿಕೆ ಹೇಳುತ್ತಿರುವ ಜ್ಯೋತಿಷಿ- ಅರೆರೆ! ನಮ್ಮ ಮಧ್ಯೆಯೇ ಎಷ್ಟೊಂದು ಜಗತ್ತುಗಳಿವೆ! ಸುಮ್ಮಗೆ ಹಾದು ಹೋಗುವಾಗ ಎಂದೂ ಕಾಣದ ಇವರುಗಳು ಯಾರೂ- ಕ್ಯಾಮರಾ ಕೈಗೆ ಬಂದ ಕೂಡಲೇ ಜೀವಂತವಾದಂತೆ ಕಾಣುತ್ತಾರೆ. ಮತ್ತು ಹೀಗೆ ಕಂಡು ಹಾಗೆ ಮರೆಯಾಗುವುದರ ಒಳಗೆ ಅವರ ಕಥೆಗಳನ್ನೂ ನಮ್ಮೊಳಗೆ ಇಳಿಸಿ ಹೋಗಿಬಿಡುತ್ತಾರೆ. ಈ ಎಲ್ಲ ಕಾರಣಗಳಿಗಾಗಿ ನನ್ನ ಪಾಲಿಗೆ ಕ್ಯಾಮರಾ ಒಂದು ಧ್ಯಾನದ ಸಲಕರಣೆಯೇ. ಅದಿಲ್ಲವಾಗಿದ್ದರೆ ನಾನು ಎಷ್ಟೆಲ್ಲ ಕಲಿಕೆಯನ್ನು ಕಳೆದುಕೊಂಡು ಬಿಡುತ್ತಿದ್ದೆನೋ ಏನೋ. ಬದುಕಿನ ಒಪ್ಪಓರಣಗಳನ್ನ ಮಾತ್ರವಲ್ಲದೇ ಓರೆಕೋರೆಗಳನ್ನೂ ಈ ಪುಟ್ಟ ಯಂತ್ರ ಎತ್ತಿ ಹಿಡಿದು ಸರಿದಾರಿಯನ್ನ ತೋರಿಸುತ್ತದೆ. ಸುಖದಂತೆಯೇ ದುಃಖವನ್ನೂ ಸೆರೆ ಹಿಡಿಯುತ್ತದೆ. This too Shall Pass- ಎಂಬ ಮಾತನ್ನ ವಿರೋಧಿಸಲೋ ಎಂಬಂತೆ- ಮರೆಯಾಗುವ ಮಾಂತ್ರಿಕ ಕ್ಷಣವನ್ನು ಹಿಡಿದಿಟ್ಟು ಬೀಗುತ್ತದೆ! ಮುಗಿಸುವ ಮುನ್ನ, ಒಂದು ಘಟನೆಯನ್ನ ಹಂಚಿಕೊಳ್ಳಲೇ ಬೇಕು. ಹೀಗೇ ಎಲ್ಲೋ ಹೋಗಿದ್ದಾಗ- ದಾರಿಯಲ್ಲೊಬ್ಬರು ವೃದ್ಧೆ ಯಾರದೋ ಬಳಿ ಏನನ್ನೋ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ದೈನ್ಯವಿತ್ತು- ವಿನಂತಿಯಿತ್ತು. ಪಾಪ ಎದುರಿಗಿದ್ದವರ ಬಳಿ ಏನೋ ಕಷ್ಟ ಹಂಚಿಕೊಳ್ಳುತ್ತಿದ್ದರು. ಸುಮ್ಮನೆ ಕೊಂಚ ದೂರ ನಿಂತೇ ಅವರ ಚಿತ್ರವನ್ನ ಕ್ಲಿಕ್ಕಿಸುತ್ತಿದ್ದೆ. ನಾನು ಫೋಟೋ ತೆಗೆಯುವುದನ್ನ ನೋಡಿದ ಆಕೆಯ ಮುಖಚರ್ಯೆ ಬದಲಾಯಿತು. ನಾನು ಏನೂ ಕೇಳದೆಯೇ ಇದ್ದರೂ- ಅವರಾಗೇ “ ನಮ್ಮ ಕಷ್ಟ ಪಟದಲ್ಲಿ ಯಾಕೆ ಗೊತ್ತಾಗ್ಬೇಕು ಹೇಳಿ” ಎಂದು ಅಮಾಯಕವಾಗಿ ನಕ್ಕು ಬಿಟ್ಟರು. ಈಗ ಫೋಟೋ ತೆಗೆ-ಎಂಬ ಹಾಗೆ. ಆ ನಕ್ಕ ಕ್ಷಣದಲ್ಲಿತ್ತು ಬದುಕಿನ ಸಾರ್ಥಕತೆ. ಧ್ಯಾನವನ್ನೂ ಮೀರಿದ ಭಾವ. ಮತ್ತು ಅಂತಹ ಭಾವಗಳೇ ಮತ್ತೆ ಹೊಸ ನಡಿಗೆಗೆ ಪ್ರೇರೇಪಿಸುವ ಉದ್ದೀಪನದ ಮದ್ದು! ವಿಶ್ವವಾಣಿಯ ಗುರು ಪುರವಣಿಯಲ್ಲಿ ಪ್ರಕಟಿತ ಪೋಸ್ಟ್ ಮಾಡಿದವರು ಶ್ರೀನಿಧಿ.ಡಿ.ಎಸ್ ರಲ್ಲಿ 11:34 ಪೂರ್ವಾಹ್ನ 3 ಕಾಮೆಂಟ್‌ಗಳು: ಲೇಬಲ್‌ಗಳು: ಛಾಯಾಗ್ರಹಣ, ಧ್ಯಾನ, Meditation, Photography ಸೋಮವಾರ, ಜುಲೈ 24, 2017 ಜಯ ಜಯ ಜಗನ್ನಾಥ! ಪುರಿಯ ಪುರಾಧೀಶ: ಪುರಿ. ಒಡಿಶಾ ಕರಾವಳಿಯ ಪುಟ್ಟ ಪಟ್ಟಣ. ಸಟ್ಟನೆ ನೋಡಿದರೆ, ನಮ್ಮ ಮಂಗಳೂರೋ, ಉಡುಪಿಯೋಕಾರವಾರವೋ ಅನ್ನಿಸುವಂತಹ ಊರು. ಅದೇ ತೆಂಗು, ಬಾಳೆ, ಹಸಿರು ಗದ್ದೆಗಳ ಸಾಲು. ಎಳನೀರು ಮಾರುವ ಪೋರರು, ಗೇರು ಹೂವಿನ ಘಮ. ಭೂಲಕ್ಷಣದಲ್ಲಿ ತನ್ನಿಂದ ಸಾವಿರಾರು ಕಿಲೋಮೀಟರು ದೂರದಲ್ಲಿರುವ ಉಡುಪಿಯಂತಿರುವ ದೇಗುಲ ನಗರಿ ಪುರಿ. ಅಲ್ಲಿರುವ ಪೊಡವಿಗೊಡೆಯನೇ ಇಲ್ಲಿರೂ ಆರಾಧ್ಯ ದೈವ. ಅಲ್ಲಿ ಕಡೆಗೋಲು ಕೃಷ್ಣನಾದರೆ, ಇಲ್ಲಿ ಜಗನ್ನಾಥ. ಪುರಿಯ ದೇವಸ್ಥಾನದ ಅನ್ನಸಂತರ್ಪಣೆ, ವಿಶ್ವವಿಖ್ಯಾತ. ಮೋಕ್ಷಮಾರ್ಗಕ್ಕಾಗಿ ದರ್ಶನ ಮಾಡಬೇಕಿರುವ ಏಳು ಪುಣ್ಯಕ್ಷೇತ್ರಗಳಲ್ಲಿ ಈ ದೇಗುಲವೂ ಒಂದು ಎಂದು ಪುರಾಣಗಳೇ ಹೇಳುತ್ತವೆ. ಜಗನ್ನಾಥನೆಂದರೆ, ಜಗದ ಒಡೆಯ ಎಂದರ್ಥ. ಆದರೆ ಈ ನಮ್ಮ ಕೃಷ್ಣನೆಂದ ಮೇಲೆ ಗೊತ್ತಲ್ಲ, ಆತ ಒಡೆಯನಿಗಿಂತ ಜಾಸ್ತಿ ಸ್ನೇಹಿತನೇ. ಪೂರ್ವ ಕರಾವಳಿಯ ಪುರಿಯಲ್ಲಿ ನೆಲೆ ನಿಂತ ಈ ಜಗನ್ನಾಥನೂ ಅಷ್ಟೇ. ಸಖ ಭಾವದ ಸುಖೀ ದೇವರು. ನಾಡಿನೆಲ್ಲಡೆಯ ಜನ ಈ ಜಗನ್ನಾಥನ ಬೀಡಿಗೆ ಬಂದು ಆತನ ದರ್ಶನಕ್ಕೆಂದು ಸಾಲು ಹಚ್ಚಿ ನಿಂತರೆ ಬಿಡುಗಣ್ಣನಾಗಿ ಎಲ್ಲರಿಗೂ ಆಶೀರ್ವಾದ ಮಾಡುತ್ತ ನಿಲ್ಲುವ ಬಣ್ಣದ ದೇವ ಅವನಿಲ್ಲಿ. ಹಸಿದ ಹೊಟ್ಟೆಗೆ ಇಲ್ಲವೆನ್ನದೆ ಊಟವನಿಕ್ಕುವ ಮಹಾಗುರು. ಇಲ್ಲಿ ಉಣ್ಣದೇ ಹೋಗುವ ಭಕ್ತರಿಲ್ಲ! ದೇವರಿಗೆ ಕೈ ಮುಗಿಯುವುದು ಮರೆತರೂ, ಘಮಘಮ ಕಿಚಡೀ ಹೊಟ್ಟೆಗಿಳಿಯದೇ ಹೋಗದೇನೋ. ಪುರಾಣದಲ್ಲೇನಿದೆ? ಇಂದ್ರದ್ಯುಮ್ನನೆಂಬ ಮಹಾರಾಜನ ಅಪರಿಮಿತ ವಿಷ್ಣುಭಕ್ತಿ, ಪುರಿಯ ದೇಗುಲದ ಮೂಲ. ಖುದ್ದು ವಿಷ್ಣುವೇ, ವಿಶ್ವಕರ್ಮನೊಡಗೂಡಿ ಅಪೂರ್ಣ ಮೂರ್ತಿಗಳನ್ನ ಕೆತ್ತಿದ್ದನೆಂಬುದು ಐತಿಹ್ಯ. ೨೧ ದಿನಗಳ ಕಾಲ ಗರ್ಭಗುಡಿಯ ಬಾಗಿಲು ತೆಗೆಯಬಾರದೆಂಬ ಶರತ್ತನ್ನ ಮೀರಿ ಇಂದ್ರದ್ಯಮ್ನನ ಪತ್ನಿ, ಬಾಗಿಲು ತೆಗೆದ ಕಾರಣಕ್ಕೆ ಮೂರ್ತಿಗಳಿಗೆ ಕೈ ಕಾಲುಗಳೇ ಮೂಡಿರಲಿಲ್ಲ.ಅಂದಿನಿಂದ ಇಂದಿನವರೆಗೂ ಜಗನ್ನಾಥ ಬಲರಾಮ ಸುಭದ್ರೆಯರು ಬಿಟ್ಟಗಣ್ಣಿನ, ಬಣ್ಣಬಣ್ಣದ ಅಲಂಕಾರ ಹೊಂದಿರುವ ಚೆಲುವ ಚೆಲುವೆಯರು! ಹಾಂ, ಮರದ ಮೂರ್ತಿಗಳು ಇವೆಲ್ಲ- ನಮ್ಮ ಎಂದಿನ ಸಂಪ್ರದಾಯದ ಕಲ್ಲಿನ ವಿಗ್ರಹಗಳಲ್ಲ! ಬ್ರಹ್ಮಾಂಡ ಪುರಾಣ, ಸ್ಕಂದ ಪುರಾಣ, ಭವಿಷ್ಯ ಪುರಾಣವೂ ಸೇರಿದಂತೆ ಹಲವು ಪುರಾಣಗಳಲ್ಲಿ ಮತ್ತೆ ಮತ್ತೆ ಪುರಿಯ ಉಲ್ಲೇಖವಿದೆ. ಜಗನ್ನಾಥನನ್ನು ವರ್ಣಿಸುವ ಶ್ಲೋಕಗಳಿವೆ. ಎಂದಿನಂತೆ- ತನ್ನ ಪತ್ನಿಯರ ಜೊತೆಗಲ್ಲದೇ ಒಡಹುಟ್ಟಿದವರ ಜೊತೆಗೆ ನೆಲೆನಿಂತ ಈ ವಾಸುದೇವನಿಗೆ, ಅಪಾರ ಗೌರವ. ಇಂದ್ರದುಮ್ಯನ ಅಂದು ವಿಷ್ಣುವನ್ನು ಕೋರಿಕೊಂಡಂತೆಯೇ- ಇಂದಿಗೂ ಈ ದೇಗುಲ ಕೇವಲ ಮೂರು ತಾಸುಗಳಷ್ಟೇ ಮುಚ್ಚಿರುತ್ತದೆ! ಹಗಲಿರುಳುಳೆನ್ನದೇ ಮಂದಿರವನ್ನು ಸಂದರ್ಶಿಬಹುದಾದ- ಅದ್ವೀತೀಯ ತಾಣ ಇದು. ಆಧ್ಯಾತ್ಮ ಕ್ಷೇತ್ರ: ಪುರಿಯ ಮಂದಿರದ ಬಗ್ಗೆ, ಕಾಲನ ಹೊಡೆತಕ್ಕೋ, ವೈರಿಗಳ ಅಟಾಟೋಪಕ್ಕೋ ಸಿಕ್ಕು ಧ್ವಂಸಗೊಂಡ ದೇವಳವನ್ನ ಮತ್ತೆ ಮತ್ತೆ ಕಟ್ಟಿಸಿದ ರಾಜರುಗಳ ಬಗ್ಗೆ ಹೇಳಹೊರಟರೆ ಅದೇ ಇನ್ನೊಂದು ಲೇಖನವಾದೀತು. ಈಗಿರುವ ದೇಗುಲವನ್ನು ಕಟ್ಟಿಸಿದಾತ, ಕಳಿಂಗ ರಾಜ ಖರವೇಲ. ವೇದಗಳಿಗಿಂತ ಪುರಾತನವಾದ ಇತಿಹಾಸವನ್ನು ಹೊಂದಿರುವ ಈ ಜಗನ್ನಾಥ, ಆ ಯಾವ ಆಡಂಬರವನ್ನೂ ಹೊರದೇ ಸರಳರಲ್ಲಿ ಸರಳನಂತೆ ನಿಂತಿದ್ದಾನೆ ಇಲ್ಲಿ. ಆದರೆ ಆ ಸರಳತೆಯ ಹಿಂದೆ ಭಾರತದ ಭವ್ಯ ಆಧ್ಯಾತ್ಮ ಪ್ರಪಂಚದ ಹೊಳಹುಗಳಿವೆ. ಇಲ್ಲಿನ ಮೂರು ಮೂರ್ತಿಗಳು ಸರ್ವಜ್ಞತೆ-ಸರ್ವವ್ಯಾಪಕತೆ- ಸರ್ವಶಕ್ತತೆಯನ್ನು ಪ್ರತಿನಿಧಿಸುತ್ತವೆ. ದೇಗುಲದ ಗೋಪುರದಲ್ಲಿನ ಸುದರ್ಶನ ಚಕ್ರ, ಇವೆಲ್ಲವನ್ನು ಮೀರಿದ ನಾಲ್ಕನೆಯ ಆಯಾಮವನ್ನ ಸೂಚಿಸುತ್ತದೆ. ಪದೇ ಪದೇ ಬದಲಾಗುವ ಮೂರ್ತಿಗಳು, ವಿಗ್ರಹಗಳಿಗಿಂತ ಮೂಲತತ್ವವೇ ಮುಖ್ಯ ಎಂಬುದನ್ನು ಸಾರುತ್ತವೆ. ಪಾಂಡವರಾದಿಯಾಗಿ, ಆದಿ ಶಂಕರಾಚಾರ್ಯರೂ ಸೇರಿದಂತೆ ಅದೆಷ್ಟೋ ಸಾಧಕರನ್ನ ಸೆಳೆದ ದಿವ್ಯ ಕ್ಷೇತ್ರವಿದು. ಇಲ್ಲಿನ ಮೂರ್ತಿಗಳಿಗೆ ಕೈ-ಕಾಲುಗಳಿಲ್ಲದೇ ಇರುವುದಕ್ಕೆ ಒಂದು ಕಥೆಯಿದೆ. ಪ್ರಾಪಂಚಿಕ ಇಹ ಭೋಗಗಳ ಈ ಜಗತ್ತಿನಲ್ಲಿ ನಮಗೆ ಯಾವ ಕೈಕಾಲುಗಳೂ ಬೇಡ ಎಂದನಂತೆ ಜಗನ್ನಾಥ. ಎಲ್ಲವನ್ನೂ ಕಣ್ಣಿನಿಂದಲೇ ಸ್ವೀಕರಿಸುತ್ತೇನೆ, ಸಾಕು. ಭಕ್ತರ ಕಣ್ಣಿಗೆ ನನ್ನ ಕಣ್ಣುಗಳು ಕಾಣಲಿ. ನಮ್ಮ ಸಂವಹನ ಅಷ್ಟರಿಂದಲೇ ಸಾಧ್ಯ ಎಂದು ಇಂದ್ರದ್ಯುಮ್ನನಿಗೆ ಸಮಾಧಾನ ಹೇಳಿದ್ದನಂತೆ! ವಿಶಿಷ್ಟ ಆಚರಣೆಗಳ ಸರಳ ಜಗನ್ನಾಥ: ಪುರಿಯನ್ನು ಜಗನ್ನಾಥನು ಆವರಿಸಿಕೊಂಡಿರುವ ಪರಿ ಅನನ್ಯ. ಇಲ್ಲಿನ ಮಂದಿಗೆ ಅವನೇ ಗುರು. ಊರಿಗೂರೇ ಅವನ ಧ್ಯಾನದಲ್ಲಿ ಮಗ್ನವಾದೊಂದು ಮಹಾಮೇಳದಂತೆ ಕಾಣುತ್ತದೆ. ದೇವರನ್ನ ಸ್ನೇಹಿತನಂತೆ ಕಾಣುತ್ತ- ಅವನನ್ನೊಂದು ನೋಡಿಕೊಂಡು ಬನ್ನಿ ಎಂದು ಏಕವಚನದಲ್ಲಿ ಜಗನ್ನಾಥನ ಬಗ್ಗೆ ಮಾತನಾಡುತ್ತ ಸಂಚರಿಸುವ ಸೈಕಲ್ ರಿಕ್ಷಾವಾಲಾಗಳು, ದೇವರ ಪ್ರಸಾದವನ್ನು ಉಂಡೇ ಇಲ್ಲವೇ ಇನ್ನೂ ಎಂದು ಕಣ್ಣು ಬಿಟ್ಟು ಅಚ್ಚರಿ ವ್ಯಕ್ತ ಪಡಿಸುವ ಅಂಗಡಿಯವರು, "ಜಗತ್ತಿನ ಅತ್ಯಂತ ದೊಡ್ಡ ಹೋಟೇಲು ಯಾವುದು ಗೊತ್ತಾ, ಇದೇ- ಜಗನ್ನಾಥನ ಮಂದಿರ" ಎಂದು ನಗುವ ಪಾಂಡಾಗಳು.. ಹೀಗೆ ನಗರ ತುಂಬ ಜಗನ್ನಾಥನದೇ ಗುಂಗು. ಈ ಜಗನ್ನಾಥನೂ ಅಷ್ಟೇ, ಸಂಪ್ರದಾಯಗಳನ್ನು ಮೀರಿ ನಿಂತ ಪುಣ್ಯಾತ್ಮ. ಅದಕ್ಕಾಗಿಯೇ ಏನೋ, ಜನರಿಗೂ ಅವನೆಂದರೆ ಇಷ್ಟ. ೧೦-೧೯ ವರ್ಷಗಳಿಗೊಮ್ಮೆ- ಇಲ್ಲಿ ದೇವ ವಿಗ್ರಹಗಳೇ ಬದಲಾಗುತ್ತವೆ. ಆಷಾಢ ಅಧಿಕಮಾಸ ಬಂದ ವರ್ಷವೆಲ್ಲ- ಹೊಸ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತದೆ. ವರ್ಷಕ್ಕೆ ಹದಿನೈದು ದಿನ ಆರೋಗ್ಯ ಸರಿಯಿಲ್ಲ ಎಂದು ದೇವರೂ ರಜೆ ಹಾಕುತ್ತಾರೆ! ಹೌದು. ಆಷಾಢ ಮಾಸದ ಸೆಖೆಯಲ್ಲಿ ದೇವರುಗಳೆಲ್ಲ ಹೊರ ಬಂದು ಸ್ನಾನ ಮಾಡುತ್ತಾರೆ! ಸ್ನಾನ ಪೂರ್ಣಿಮೆಯೆಂದೇ ಹೆಸರು ಆದಿನಕ್ಕೆ. ಹದಿನೈದು ದಿನಗಳ ಸ್ನಾನ ಮತ್ತು ಮಾವಿನಹಣ್ಣಿನರಸದ ಅಭಿಷೇಕ ದಿಂದ ಸುಸ್ತಾದ ಸ್ವಾಮಿ, ಹುಷಾರು ತಪ್ಪಿ ಮುಂದಿನ ಹದಿನೈದು ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡದೇ, ರಜೆ ಹಾಕಿ ಮೂಲಿಕೆಗಳ ಔಷಧ ಸ್ವೀಕರಿಸುತ್ತ ಆರಾಮಾಗುತ್ತಾರೆ. ಇಂಥ ದೇವ ಎಲ್ಲಿ ಸಿಕ್ಕಾನು ಹೇಳಿ? ನಮ್ಮ ಮಧ್ಯದಿಂದಲೇ ಎದ್ದು ಹೋಗಿ ಕೂತಂತೆ ಕಾಣುವ ಜಗದ ನಾಥ ಈತ! ಜಗನ್ನಾಥ ರಥೋತ್ಸವ: ವಿಶ್ವಪ್ರಸಿದ್ಧ ಜಗನ್ನಾಥ ರಥೋತ್ಸವದ ಬಗ್ಗೆ ತಿಳಿಯದವರಿಲ್ಲವೇನೋ. ಪ್ರತಿ ವರುಷ, ಇಲ್ಲಿ ನಡೆಯುವ ರಥಯಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಈ ರಥೋತ್ಸವದ ಹಿಂದಿನ ಆಚರಣೆಯೂ ಮಜವಾಗಿದೆ! ಈ ಹುಷಾರಿಲ್ಲದೇ ಮಲಗಿದ್ದ ಕೃಷ್ಣ- ಬಲರಾಮ-ಸುಭದ್ರೆಯರು, ಮತ್ತೆ ಆರೋಗ್ಯವಂತರಾದ ಮೇಲೆ ಅವರಿಗೆಲ್ಲ ಏನಾದರೂ ರುಚಿ-ರುಚಿಯಾಗಿದ್ದು ತಿನ್ನಬೇಕು ಅನ್ನಿಸಿ ಅಲ್ಲೇ ಸ್ವಲ್ಪ ದೂರದಲ್ಲಿರುವ ಗುಂಡೀಚಾ ಅನ್ನುವ ತನ್ನ ಅತ್ತೇಮನೆಗೆ ಹೋಗುತ್ತಾರೆ! ದೇವರೆಂದ ಮೇಲೆ ಸುಮ್ಮನೇ ಹೋಗಲು ಸಾಧ್ಯವೇ? ಅದಕ್ಕೇ ಈ ರಥಯಾತ್ರೆ ನಡೆಯುತ್ತದೆ. ವೈಭವೋಪೇತವಾಗಿ ಅಲಂಕರಿಸಿಕೊಂಡ ಸೋದರ ಸೋದರಿಯರು, ಅಲ್ಲಿ ಹೋಗಿ ಒಂದಿಷ್ಟು ದಿನಗಳ ಕಾಲ ಇದ್ದು ಬರುತ್ತಾರೆ. ತನ್ನ ಬಾಲ್ಯಕ್ಕೆ ಮರಳುವ ಕೃಷ್ಣನ ಸಂಭ್ರಮ ಇದು. ಹೆಂಡತಿ ಲಕ್ಷ್ಮಿಯನ್ನ ದೇಗುಲದಲ್ಲೇ ಬಿಟ್ಟು- ತಾನು ಮಾತ್ರ ಅಣ್ಣ ತಂಗಿಯರೊಡಗೂಡಿ ಹೋಗುತ್ತಾನೆ ಜಗನ್ನಾಥ. ಗುಂಡೀಚ ದೇಗುಲದಲ್ಲಿ ಕೃಷ್ಣನ ಆಮೋದ ಪ್ರಮೋದಗಳ ಸಕಲ ವ್ಯವಸ್ಥೆಗಳೂ ಇದೆ! ಆತ ಅಲ್ಲಿ ಎಲ್ಲ ಮರೆತು ರಾಸಲೀಲೆಯಾಡುತ್ತಾನೆ, ಬೇಕುಬೇಕಾದ ತಿಂಡಿ ತಿನಿಸುಗಳನ್ನ ತಿನ್ನುತ್ತಾನೆ. ಸಿಟ್ಟುಗೊಂಡು ಬಂದ ಲಕ್ಷ್ಮಿಯನ್ನ ಸಮಾಧಾನಿಸಿ ಮರಳಿ ಕಳಿಸುತ್ತಾನೆ! ಎಲ್ಲ ಮುಗಿದ ಮೇಲೆ-ತಾನು ಮತ್ತೆ ಜಗನ್ನಾಥ ದೇವಸ್ಥಾನಕ್ಕೆ ವಾಪಸ್ಸು ಬರುತ್ತಾನೆ. ಇಲ್ಲಿನ ಮಂದಿ ಕೃಷ್ಣನೊಡಗೂಡಿ ತಾವು ಕೂಡ ಈ ರಥಯಾತ್ರೆಯಲ್ಲಿ ಸಂಭ್ರಮಿಸುತ್ತಾರೆ. ತಾವೂ ಆತನ ಬಾಲ್ಯಕ್ಕೆ ಹೋಗುತ್ತಾರೆ. ಪುರಿಯ ಬೀದಿ ಬೀದಿಗಳಲ್ಲಿನ ಎಲ್ಲ ದೇಗುಲಗಳೂ ಕೃಷ್ಣನ ನೆಂಟರದೇ! ಅತ್ತೆ-ಮಾವ-ಚಿಕ್ಕಮ್ಮ-ಚಿಕ್ಕಪ್ಪ-ಹೆಂಡತಿ-ಅಣ್ಣ-ಹೀಗೆ ಎಲ್ಲ ಕಡೆಗಳಿಗೂ ಈ ಜಗನ್ನಾಥ ರಥಯಾತ್ರೆಯ ನೆಪದಲ್ಲಿ ಭೇಟಿಕೊಡುತ್ತಾನೆ. ಅಲ್ಲೆಲ್ಲ ರಥ ಸಾಗುತ್ತದೆ. ದೇವನೊಬ್ಬ, ತಾನು ದೈವತ್ವಕ್ಕೇರಿದ್ದರೂ, ಹೀಗೆ ಮನುಷ್ಯ ಸಹಜ ಆಚರಣೆಗಳ ಮೂಲಕ ಜನಮಾನಸಕ್ಕೆ ಬಹಳ ಹತ್ತಿರವಾಗುತ್ತಾನೆ. ತಾನೂ ಕೂಡ ನಿಮ್ಮಂತೆಯೇ ಎಂಬ ಆಪ್ತತೆಯನ್ನ ಸಾಮಾನ್ಯರಲ್ಲಿ ಬಿತ್ತುತ್ತಾನೆ. ಜಗನ್ನಾಥ ಈ ಕಾರಣಕ್ಕಾಗಿಯೇ ಎಲ್ಲರಿಗೂ ಪ್ರಿಯ. ಇಷ್ಟೊಂದು ಸರಳ ದೇವರು ಭಾರತದಲ್ಲಿ ಬೇರೆಲ್ಲಿಯೂ ಇಲ್ಲವೇನೋ. ತುಂಬ ಮಡಿವಂತಿಕೆ ಇಲ್ಲದ, ತಿಂಡಿಪೋತ ದೇವರು ನಮ್ಮ ಜಗನ್ನಾಥ. ದಿನವಿಡೀ ದರ್ಶನ ನೀಡುವ, ಬಡವ ಬಲ್ಲಿದನೆಂಬ ಭೇದವಿಲ್ಲದ, ಅತ್ಯುಚ್ಚವಾದ ಆಚಾರವನ್ನೋ, ಪಾಂಡಿತ್ಯವನ್ನೋ ಬೇಡ ಈ ಮಹಾಗುರು, ಸಮಸ್ತರಿಗೂ ಆಪ್ತ. ಜಗನ್ನಾಥನ ಮಂದಿರದೊಳಗೆ ಒಮ್ಮೆ ನಡೆದಾಡಿದರೆ, ಯಾರಿಗೇ ಆದರೂ ಅದರ ಅರಿವಾಗುತ್ತದೆ. ಮತ್ತೆ ಮತ್ತೆ ಸತ್ತು ಹುಟ್ಟುವ ಜಗನ್ನಾಥ, ಮನುಷ್ಯರಾದವರೂ ದೈವತ್ವಕ್ಕೇರಬಹುದು ಎಂಬ ಸತ್ಯವನ್ನು ಸಾರುತ್ತ ಪುರಿಯಲ್ಲಿ ನಿಂತಿದ್ದಾನೆ. ಕೈಕಾಲುಗಳ ಅಗತ್ಯವಿಲ್ಲದೆಯೇ ಜಗವನ್ನು ಮುನ್ನೆಡಬಹುದು, ಹೃದಯದಲ್ಲಿ ಭಕ್ತಿಯಿದ್ದರೆ ಸಾಕು ಎನ್ನುವ ಈ ಜಗನ್ನಾಥನಿಗೆ-ಜಗನ್ನಾಥನೇ ಸಾಟಿ! ಸತ್ತು ಹುಟ್ಟುವ ದೇವರುಗಳು ಜಗತ್ತಿನ ಯಾವ ದೇವಸ್ಥಾನದಲ್ಲಿಯೂ ಇಲ್ಲದ ಅತ್ಯಂತ ವಿಶೇಷ ಆಚರಣೆ ಪುರಿಯ ದೇಗುಲದಲ್ಲಿದೆ. ಅಧಿಕ ಆಷಾಢ ಮಾಸ ಬಂದ ವರ್ಷ ಅಲ್ಲಿನ ಮೂರ್ತಿಗಳನ್ನ ಬದಲಾಯಿಸಲಾಗುತ್ತದೆ. ಈ ಆಚರಣೆಗೆ ನಬಕಲೇಬರ ಎಂದು ಹೆಸರು. ನವ ಕಳೇಬರವೆಂದರೆ-ಹೊಸ ದೇಹ ಎಂದರ್ಥ. ಹನ್ನೆರಡು ಅಥವಾ ಹತ್ತೊಂಬತ್ತು ವರುಷಗಳಿಗೊಮ್ಮೆ ಬರುವ ಈ ಅಧಿಕ ಮಾಸದಲ್ಲಿ, ಹಳೆಯ ಮೂರ್ತಿಗಳನ್ನು ವಿಸರ್ಜಿಸಿ-ಹೊಸ ವಿಗ್ರಹಗಳನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮರದ ಮೂರ್ತಿಗಳಾದ ಕಾರಣಕ್ಕೆ, ಈ ವಿಹ್ರಗಗಳೂ ಕೂಡ ಜೀರ್ಣಾವಸ್ಥೆಯನ್ನು ತಲುಪಿರುತ್ತವೆ. ಈ ಹೊತ್ತಿನಲ್ಲಿ ದಾರುಬ್ರಹ್ಮವೆಂದು ಕರೆಯುವ ಬೇವಿನ ಮರದಿಂದ ಹೊಸ ಕಾಷ್ಠ ಶಿಲ್ಪಗಳನ್ನ ಕೆತ್ತಲಾಗುತ್ತದೆ. ಈ ಮರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಕೂಡ ಬಹಳ ಸೂಕ್ಷ್ಮ ಪ್ರಕ್ರಿಯೆಗಳಿದ್ದು- ಕಡುಗಪ್ಪು ಬಣ್ಣದ ಮರವೇ- ಜಗನ್ನಾಥನ ಕೆತ್ತನೆಗೆ ಬೇಕಿದ್ದರೆ, ಬಲರಾಮ ಸುಭದ್ರೆಯರಿಗೆ ಮಾಮೂಲು ಮರಗಳೇ ಸಾಕು. ಹೊಸ ವಿಗ್ರಹಗಳು ಸಿದ್ಧವಾದ ಮೇಲೆ, ಹಳೆಯ ಮೂರ್ತಿಗಳು ಸಾವನ್ನಪ್ಪಿದವೆಂದು ನಿರ್ಣಯಿಸಿ-ಸೂಕ್ತ ಕ್ರಿಯಾ ಕರ್ಮಗಳನ್ನೂ ನಡೆಸಲಾಗುತ್ತದೆ. ಹೊಸ ದೇಹಗಳೊಂದಿಗೆ ಹಳೆಯ ದೇವರುಗಳು ಮತ್ತೆ ಭಕ್ತರ ದರ್ಶನಕ್ಕೆ ಸಿದ್ಧವಾಗುತ್ತಾರೆ. ತೀರಾ ಇತ್ತೀಚೆಗೆ, 2015 ನೇ ಇಸವಿಯಲ್ಲಿ ನಬಕಲೇಬರ ಆಚರಣೆ ಜರುಗಿತ್ತು. ಜಗನ್ನಾಥ ಮಹಾಪ್ರಸಾದ: ಪುರಿಯ ದೇಗುಲದ ಮಹಾಪ್ರಸಾದ, ಅತ್ಯಂತ ವಿಶಿಷ್ಠವಾದದ್ದು. ಜಗನ್ನಾಥನಿಗೆ ಪ್ರತಿದಿನ, ತಪ್ಪದೆ, 56 ಬಗೆಯ ವಿವಿಧ ಖಾದ್ಯ-ಅನ್ನ ನೈವೇದ್ಯವನ್ನ ಸಮರ್ಪಿಸಲಾಗುತ್ತದೆ. ಛಪ್ಪನ್ನ ಭೋಗ್ ಎಂದು ಕರೆಯುವ ಈ ಆಹಾರ ಸಮ್ಮೇಳವೇ-ಬಾಯಲ್ಲಿ ನೀರೂರಿಸುವಂತದ್ದು. ಅನ್ನ, ತುಪ್ಪದಲ್ಲಿ ಕಲಸಿದ ಅನ್ನ, ಸಿಹಿಯಾದ ದಾಲ್, ಕಿಚಡಿ, ತರಕಾರಿಗಳನ್ನ ಬೆರೆಸಿ ಮಾಡಿರುವ ವೈವಿಧ್ಯಮಯ ಸಾರು/ಸಾಂಬಾರುಗಳು.. ಭಕ್ಷ್ಯಗಳು- ಹೀಗೆ ಇವೆಲ್ಲವನ್ನ ಭೋಜನಪ್ರಿಯ ಜಗನ್ನಾಥನಿಗೆ ಸಮರ್ಪಿಸಿ- ಭಕ್ತಾದಿಗಳಿಗೂ ಬಡಿಸಲಾಗುತ್ತದೆ. ನಿತ್ಯ ಇವುಗಳನ್ನ ಕಟ್ಟಿಗೆಯ ಒಲೆಯಲ್ಲೇ, ಮಡಿಕೆಗಳಲ್ಲಿಯೇ ಬೇಯಿಸಲಾಗುತ್ತದೆ. ಒಂದರ ಮೇಲೊಂದು ಮಡಿಕೆಗಳನ್ನ ಇರಿಸಿ, ಈ ಮಹಾಪ್ರಸಾದವನ್ನು ತಯಾರಿಸುವುದನ್ನು ನೋಡುವುದೇ ಒಂದು ಸೊಗಸು. ರಥೋತ್ಸವದ ತಯಾರಿ ಪ್ರತಿ ವರುಷದ ರಥೋತ್ಸವಕ್ಕೆ ಕೂಡ ಹೊಸ ರಥಗಳನ್ನ ನಿರ್ಮಿಸುವುದು ಜಗನ್ನಾಥ ದೇಗುಲದ ವಿಶೇಷತೆ. ಸುಮಾರು ೪೫ ಅಡಿಗಳಷ್ಟು ಎತ್ತರವಿರುವ ರಥಗಳ ನಿರ್ಮಾಣವೇ ಒಂದು ಕಲೆ. ಜಗನ್ನಾಥನ ರಥ, ನಂದಿಘೋಷ, ಬಲರಾಮನದು ತಾಲಧ್ವಜ, ಸುಭದ್ರೆಯದು ಪದ್ಮಧ್ವಜ. ನೋಡಲು ದೇಗುಲದ ಗೋಪುರಗಳನ್ನೇ ಹೋಲುವ ರಚನೆಯನ್ನ ಈ ರಥಗಳು ಹೊಂದಿದ್ದು ಜಗನ್ನಾಥನ ರಥ, ಎಲ್ಲಕ್ಕೂ ಎತ್ತರವಾಗಿದೆ. ನೂರಾರು ವರುಷಗಳಿಂದಲೂ ಒಂದೇ ರೀತಿಯಾಗಿ ಈ ರಥಗಳ ನಿರ್ಮಾಣ ನಡೆಯುತ್ತಿದ್ದು, ತಲೆತಲಾಂತರಗಳಿಂದಲೂ ಒಂದೇ ಮನೆತನದ ಮಂದಿ ಈ ಹಕ್ಕನ್ನ ಹೊಂದಿದ್ದಾರೆ. ಪ್ರತಿವರುಷ ಒಡಿಶಾದ ಕಾಡುಗಳಲ್ಲಿ ಅದಕ್ಕೆ ಬೇಕಾದ ಮರಗಳನ್ನ ಪೂಜಿಸಿ, ಕಡಿದು- ನಂತರ ಮಹಾನದಿಯಲ್ಲಿ ಮರಗಳ ತುಂಡುಗಳನ್ನ ತೇಲಿಬಿಡಲಾಗುತ್ತದೆ. ಅವುಗಳನ್ನ ಪುರಿಯಲ್ಲಿ ಸಂಗ್ರಹಿಸಿ, ಅಕ್ಷಯ ತೃತೀಯಾದ ಪುಣ್ಯದಿನದಂದು ರಥಗಳ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ನೂರಾರು ಮಂದಿ ಸುಮಾರು ಎರಡು-ಮೂರು ತಿಂಗಳುಗಳ ಕಾಲ ಶ್ರಮಿಸಿ ರಥಗಳನ್ನ ಸಿದ್ಧಗೊಳಿಸುತ್ತಾರೆ. ಹದಿನಾರು ಚಕ್ರಗಳನ್ನ ಹೊಂದಿರುವ, ಕೆಂಪು ಮತ್ತು ಹಳದೀ ವಸ್ತ್ರಗಳಿಂದ ಅಲಂಕೃತವಾದ ಜಗನ್ನಾಥದ ರಥದ ದರ್ಶನವೇ ರೋಮಾಂಚನಕಾರಿ. ವಿದೇಶಗಳಲ್ಲೂ ರಥೋತ್ಸವ: ಈಗ ಜಗತ್ತಿನ ಸುಮಾರು ಎಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಜಗನ್ನಾಥನ ರಥ ಯಾತ್ರೆಯ ದಿನದಂದೇ ಭಕ್ತರೆಲ್ಲ ಸೇರಿ ರಥ ಯಾತ್ರೆಯನ್ನ ನಡೆಸುತ್ತಾರೆ. ನ್ಯೂಯಾರ್ಕ್, ಲಂಡನ್, ಮಾಸ್ಕೋ ಸೇರಿದಂತೆ ಬಹು ಮುಖ್ಯ ನಗರಗಳಲ್ಲಿ ಜಗನ್ನಾಥನ ಯಾತ್ರೆ ಸಂಚರಿಸುತ್ತದೆ! ಪೋಸ್ಟ್ ಮಾಡಿದವರು ಶ್ರೀನಿಧಿ.ಡಿ.ಎಸ್ ರಲ್ಲಿ 12:52 ಅಪರಾಹ್ನ 2 ಕಾಮೆಂಟ್‌ಗಳು: ಲೇಬಲ್‌ಗಳು: ಜಗನ್ನಾಥ, ಪುರಿ ರಥೋತ್ಸವ, jagannath ಬುಧವಾರ, ಜುಲೈ 12, 2017 ತೆರಿಗೆ ಬೇನೆ! ನಿತ್ಯ ಬೆಳಗ್ಗೆದ್ದು ಯಾರನ್ನಾದರೂ ಒಬ್ಬರನ್ನ ಕಡ್ಡಾಯವಾಗಿ ನೆನೆಸಿಕೊಳ್ಳಲೇಬೇಕು ಅಂತ ಭಗವಂತನೇನಾದರೂ ರೂಲ್ಸು ಮಾಡಿದರೆ ನಾನು ನಂಗೆ ಎಸ್.ಎಸ್.ಎಲ್.ಸಿ ಯಲ್ಲಿ ಗಣಿತ ಟೀಚರಾಗಿದ್ದ ವಿನ್ನಿ ಟೀಚರನ್ನು ನೆನಪಿಸಿಕೊಳ್ಳುತ್ತೇನೆ. ಅನುಮಾನವೇ ಇಲ್ಲ. ಯಾಕೆಂದರೆ ಲೆಕ್ಕ ಅನ್ನುವುದು, ನನ್ನ ತಲೆಗೆ ಹೋಗುವುದು ಬಿಡಿ, ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಅಂಕಗಣಿತ, ಬೀಜಗಣಿತ, ರೇಖಾಗಣಿತ, ನೀವ್ ಯಾವ್ದೇ ಕೇಳಿ, ನಂಗೆ ಎಲ್ಲ ಕಬ್ಬಿಣದ ಕಡಲೆಯೇ. ಒಂದು ಹೆಚ್ಚು ಕಷ್ಟ, ಇನ್ನೊಂದು ಅದ್ಕಿಂತ ಹೆಚ್ಚು ಕಷ್ಟ, ಆಮೇಲಿಂದ ಅಭೂತಪೂರ್ವ ಕಷ್ಟ. ನಾನು ಹೇಗಾದರೂ ಮಾಥ್ಸಲ್ಲಿ ಗೋತಾ ಹೊಡೀತೇನೆ ಎನ್ನುವುದು ನಮ್ ಮನೇಲಿ ಬಿಡಿ, ನಮ್ಮ ಇಡೀ ವಠಾರಕ್ಕೇ ಗೊತ್ತಿತ್ತಾಗಿ ನಮ್ಮಪ್ಪ ವಿನ್ನೀ ಟೀಚರ ಬಳಿ ಏನೋ ಸಂಜೆ ಹೊತ್ತಿಗೆ ಸ್ವಲ್ಪ ಲೆಕ್ಕ ಹೇಳ್ಕೊಡಿ ಎಂದು ಕೇಳಿದ್ದರು. ಪರೀಕ್ಷೆಯ ಮುನ್ನಾದಿನದ ವರೆಗೂ ಅವರು ನನ್ನ ತಲೆಗೆ ಅದೇನೇನೋ ತುಂಬೀ ತುಂಬೀ ನನ್ನ ಉದ್ದಾರದ ಸಕಲ ಯತ್ನಗಳನ್ನ ಮಾಡಿದ್ದರು. ಇಷ್ಟಾಗಿಯೂ, ಯಾರಿಗೂ ಏನೂ ಭರವಸೆ ಇರಲಿಲ್ಲ. ಮುಂದಿನದು ದೇವರಾ ಚಿತ್ತ ಅಂತ ಸುಮ್ಮನಿದ್ದರು. ಕೊನೇಗೆ ರಿಸಲ್ಟು ಬಂದ ದಿನ ನೋಡಿದರೆ, ಕರೆಕ್ಟಾಗಿ ಮೂವತ್ತೈದು ಮಾರ್ಕು ಬಂದು ನಾನು ಗಣಿತ ಪಾಸಾಗಿದ್ದೆ! ಅಪ್ಪ ನಿರ್ದಾಕ್ಷಿಣ್ಯವಾಗಿ ಇದು ನಿನ್ನ ಸಾಧನೆಯೇನೂ ಅಲ್ಲ, ವಿನ್ನೀ ಟೀಚರಿದ್ದು ಅಂದಿದ್ದರು. ಅಲ್ಲ, ನಂಗೆ ಅದರ ಬಗ್ಗೆ ಯಾವ ಅನುಮಾನವೂ ಇರಲಿಲ್ಲ! ಆವತ್ತೇ ಕೊನೆ.ನಾನು ಈ ಲೆಕ್ಕದ ದಿಕ್ಕಲ್ಲಿ ಮುಖ ಹಾಕಿ ನಿಂತಿದ್ದರೆ ಕೇಳಿ. ಆಮೇಲೆ ನಾನು ಓದುವ ಯಾವ ಕೋರ್ಸಿನಲ್ಲಿರೂ ಅದರ ನೆರಳೂ ಕೂಡ ಕಾಣಬಾರದೆಂಬ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು, ಶಿಕ್ಷಣಶರಧಿಯನ್ನೇನೋ ದಾಟಿಬಿಟ್ಟೆ! ಆದರೆ ನಾನು ಗಣಿತವನ್ನು ಬಿಟ್ಟರೂ, ಈ ಅಗಣಿತ ತಾರಾ ಮಂಡಲದವರೆಗೆ ವ್ಯಾಪಿಸಿರುವ ಈ ಕೂಡುಕಳೆಯಾಟ ನನ್ನನ್ನ ಬಿಡಬೇಕಲ್ಲ! ಏನೋ, ಓದ್ಕಂಡು ನನ್ನ ಪಾಡಿಗೆ ನಾನು ಯಾವ್ದೋ ಕೆಲಸ ಮಾಡುತ್ತೇನೆ, ಕಂಪನಿ ಸಂಬಳ ಕೊಡತ್ತೆ ತಗೊಂಡರಾಯ್ತು ಅಂತ ಅಂದುಕೊಂಡಿದ್ದರೆ, ವಕ್ಕರಿಸಿತು ನೋಡಿ, ಈ ಟ್ಯಾಕ್ಸು ಲೆಕ್ಕಾಚಾರ. ಭಗವಂತನೇ. ಎಲ್ಲೆಲ್ಲೋ ಪಾರಾಗಿ ತುದೀಗೆ ಹೀಗೆ ಸಿಕ್ಕಾಕ್ಕೊಂಡಿದ್ದೆ ನಾನು. ಈ ಲೆಕ್ಕ ಹಾಕದೇ ವಿಧಿಯಿಲ್ಲ ಆದರೆ ನನಗೋ, ಸುತಾರಾಂ ತಲೆಗೆ ಹೋಗುವುದಿಲ್ಲ. ಯಾವುದೇ ಕಂಪನಿಯಾಗಿರಲಿ, ಈ ಹೆಚ್ಚಾರುಗಳು ನಾವು ಕೆಲಸಕ್ಕೆ ಸೇರುವಾಗ ಹೇಳುವ ಸಂಬಳಕ್ಕೂ ಆಮೇಲೆ ಕೈಗೆ ಬರುವ ಮನೆಗೆ ಕೊಂಡುಯ್ಯುವ ಟೇಕ್ ಹೋಮು ಸ್ಯಾಲರಿಗೂ ತಲೆಬುಡ ಹೊಂದಿಕೆಯಾದರೆ ಕೇಳಿ! ನೂರಾರು ಅಲೋವೆನ್ಸು, ಟ್ಯಾಕ್ಸುಗಳ ಕಥೆ ಹೇಳಿ ಹರಿದ ಗೋಣಿಯಲ್ಲಿ ಭತ್ತ ಹೊತ್ತ ಕಥೆಯಾಗುತ್ತದೆ ಜೀವನ. ನೋಡಿ, ಅಷ್ಟೆಲ್ಲ ಟ್ಯಾಕ್ಸು ಕಟ್ಟಾಗಬಾರದೆಂದಿದ್ದರೆ, ಅಲ್ಲೆಲ್ಲೋ ಇನ್ವೆಸ್ಟ್ ಮಾಡಿ, ಇನ್ನೆನ್ನೋ ಸಾಲ ಮಾಡಿ ಅಂತೆಲ್ಲ ತಿಳಿದವರು ಕೂರಿಸಿ ಹೇಳಿ, ಅಯ್ಯೋ, ಇನ್ನೂ ಏನೋ ಮಾಡ್ಕೊಂಡಿಲ್ಲವೇನ್ರೀ ಥೋ ನಿಮ್ಮಾ ಎಂದು ಗಾಬರಿ ಹುಟ್ಟಿಸಿಬಿಡೂತ್ತಾರೆ. ಅದಕ್ಕೆ ತಕ್ಕ ಹಾಗೆ ನೀವು ಜೀವವಿಮೆ ಅದೂ ಇದೂಂತ ಎಲ್ಲಾ ಎಳೆದು ಮೈ ಮೇಲೆ ಹಾಕ್ಕೊಂಡು ನಾಳೆಯಿಂದ ತೆರಿಗೆ ಮುಕ್ತ ಎಂದುಕೊಳ್ಳುತ್ತೀರಿ. ಆದರೆ, ಯಾವ ದ್ರಾವಿಡ ಪ್ರಾಣಾಯಾಮ ಮಾಡಿದರೂ,ಕೊನೆಗೆ ಕಟ್ಟಬೇಕಾದ ಟ್ಯಾಕ್ಸು ಚಿಲ್ಲರೆಯಲ್ಲಿ ವ್ಯತ್ಯಾಸವಾದಂತೆ ಕಾಣುತ್ತದೆಯೇ ಹೊರತು ಬೇರೇನೂ ಆಗದು! ಆಫೀಸಿನ ಜಂಜಡದಲ್ಲೇ ಇರುವವರಿಗಾದರೂ ಹೆಚ್ಚಿನ ಸಮಸ್ಯೆ ಇಲ್ಲ, ನಿಮ್ಮ ಕೂಡು ಕಳೆ ಗುಣಿಸು ಭಾಗಿಸುಗಳನ್ನ ಅಕೌಂಟ್ಸು ವಿಭಾಗದವರೇ ಹೆಚ್ಚಿನ ಸಲ ಮಾಡಿ, ನೀವು ಬರೀ ಇಷ್ಟೂಂತ ಟ್ಯಾಕ್ಸು ಕಟ್ಟಿದರಾಯ್ತು ಅನ್ನುತ್ತಾರೆ. ನೀವು ಹಿಂದೆ ಮುಂದೆ ನೋಡದೇ ಅವರು ಹೇಳಿದ ಅಮೌಂಟನ್ನ ಸಾವಾಸ ಸಾಕಪ್ಪಾ ಅಂತ ಕಟ್ಟಿಬಿಡುತ್ತೀರಿ. ಆದರೆ ಫ್ರೀಲ್ಯಾನ್ಸರುಗಳಾದರೆ ಮುಗಿದೇ ಹೋಯಿತು ಕತೆ. ನಿಮ್ಮ ತೆರಿಗೆಗೆ ನೀವೇ ಜವಾಬ್ದಾರರು! ಯಾರೋ ಹೇಳಿದ್ದನ್ನ ನಂಬಿಕೊಂಡು ನನ್ನ ಟ್ಯಾಕ್ಸು ನಾನೇ ಕಟ್ಟಿಕೊಳ್ಳುತ್ತೇನೆ ಅಂತ ಹೊರಟೆನಪ್ಪ ಒಂದು ಸಲ. ಆ ಗರ್ವಮೆಂಟು ವೆಬ್ ಸೈಟಲ್ಲಿ ಅಸಂಖ್ಯಾತ ಫಾರ್ಮುಗಳು. ಅದರಲ್ಲಿ ತುಂಬಿಸಬೇಕಾದ ಕೋಟಿ ದಾಖಲೆಗಳು. ಒಂದೇ ಎರಡೇ! ಮೊದಲೇ ಸ್ವತಂತ್ರವಾಗಿ ಕೆಲಸ ಮಾಡುತ್ತಿರುತ್ತೀರಿ. ಮಾಡಿರೋ ಕೆಲಸಕ್ಕೆ ದುಡ್ಡು ಬರೋ ಖಾತ್ರಿಯೇ ಇಲ್ಲದೇ ಹೋದರೂ, ತೆರಿಗೆಯ ಕತ್ತರಿ ಮಾತ್ರಾ ಪಕ್ಕಾ ಲೆಕ್ಕ! ಆ ಟ್ಯಾಕ್ಸು ಈ ಟ್ಯಾಕ್ಸು ಅಂತೆಲ್ಲ ಇಷ್ಟುದ್ದ ಲಿಸ್ಟು ನೋಡಿದರೆ ಸಂಬಳಕ್ಕಿಂತ ಹೆಚ್ಚೇ ತೆರಿಗೆ ಕಟ್ಟಬೇಕು ಎನ್ನುವ ಲೆಕ್ಕ ಸಿಕ್ಕು ಕಂಗಾಲು ನಾನು. ನಾನು ಆರೆಂಟು ಜಾಲತಾಣಗಳನ್ನೆಲ್ಲ ನೋಡಿ ನನ್ನ ಉಳಿಕೆ ಬಗ್ಗೆ, ನಾನು ಮಾಡಬೇಕಾದ ಹೂಡಿಕೆ ಬಗ್ಗೆ ಅರ್ಥ ಮಾಡಿಕೊಳ್ಳಲು ಹೆಣಗಾಡಿದೆ. ಅಲ್ಲಿ ಹೇಳಿದಷ್ಟು ಇನ್ವೆಷ್ಟು ಮಾಡಿ ತೆರಿಗೆ ಉಳಿಸಬೇಕು ಎಂದರೆ, ನನ್ನನ್ನೇ ನಾನು ಹರಿಶ್ಚಂದ್ರನ ತರಹ ಮಾರಿಕೊಳ್ಳಬೇಕಿತ್ತು. ನನ್ನ ಒಟ್ಟೂ ಜೀವನದ ಬಗ್ಗೆ ನನಗೆಯೇ ಮರುಕ ಬಂದು ಹೋಯಿತು. ಈ ತೆರಿಗೆಗಳನ್ನೆಲ್ಲ ಕಟ್ಟಿಕೊಂಡು ಇನ್ನೂ ನಾನು ಬದುಕಿರುವುದೇ ಒಂದು ಭಾಗ್ಯ ಎನ್ನಿಸಿ ಆನಂದವನ್ನು ಹೊಂದಿದೆ. ಇದೆಲ್ಲ ಆದ ಮೇಲೆ, ನಾನಾಗಿಯೇ ಇನ್ನು ಮೇಲೆ ತೆರಿಗೆ ಕಟ್ಟುವ ಸಹವಾಸಕ್ಕೆ ನೇರವಾಗಿ ಹೋಗಲಾರೆ ಎಂದು ನಿರ್ಧರಿಸಿ, ಲೆಕ್ಕ ಪರಿಶೋಧಕರ ಮೊರೆ ಹೋದೆ. ಆಮೇಲೆ ಜೀವನ ಸ್ವಲ್ಪ ಸಹಜ ಸ್ಥಿತಿಗೆ ಬಂದು ಉಸಿರಾಡುವಂತಾಗಿದ್ದಂತೂ ಹೌದು. ಅಷ್ಟಾದರೂ ಸರ್ವೀಸ್ ಟ್ಯಾಕ್ಸೆಂಬ ಶೂಲವನ್ನ ನಾವೇ ಇರಿದುಕೊಳ್ಳಬೇಕಾದ ಕತೆ ಇರುವುದರಿಂದ ಲೆಕ್ಕದ ಭೂತ ಬಂದು ನನ್ನನ್ನ ತಿವಿಯುತ್ತಲೇ ಇರುತ್ತದೆ. ನೆಟ್ಟಗೆ ಸೇವಾ ತೆರಿಗೆಯನ್ನೇ ಲೆಕ್ಕ ಮಾಡಲು ಬಾರದ ನನಗೆ, ಮತ್ತೆ ಅದರ ತುದಿ ಕೊಸರು ಕೃಷಿ ಕಲ್ಯಾಣ ಸೆಸ್ಸೂ, ಸ್ವಚ್ಚ ಭಾರತ ತೆರಿಗೆ ಅಂತೆಲ್ಲ ನೂರಕ್ಕೆ ಇಪ್ಪತ್ತು ಸೇರಿಸಿ ಹತ್ತು ಕಳೆದು ಮುಕ್ಕಾಲು ಗುಣಿಸಿ, ಉಫ್! ಇಷ್ಟಾಗಿ ಸ್ವಲ್ಪ ಹೆಚ್ಚುಕಮ್ಮಿ ಲೆಕ್ಕವಾದರೆ ಎಲ್ಲ ಅಧ್ವಾನಂ. ಸೇವಾ ತೆರಿಗೆಯ ಜಾಲತಾಣವನ್ನೊಮ್ಮೆ ನೋಡಿ, ನೂರು ನೂರಾಹತ್ತು ಬಗೆಯ ಟ್ಯಾಕ್ಸುಗಳೂ, ಅದಕ್ಕೊಂದು ಕೋಡ್ ನಂಬರೂ, ಅದಕ್ಕೊಂದಿಷ್ಟು ಪರ್ಸಂಟೇಜು ಲೆಕ್ಕಾಚಾರಗಳೂ- ಅಲ್ಲಾ, ಹುಲು ಮಾನವವರಾದ ನಾವು ಇದನ್ನೆಲ್ಲ ಮಾಡಿಯೇ ತೀರಬೇಕೆಂದರೆ ಹೇಗೆ ಸ್ವಾಮಿ? ಆದರೆ ಈ ಸೀಎಗಳಿರುತ್ತಾರಲ್ಲ, ಅವರನ್ನು ನಾನು ದೇವಮಾನವರೆಂದೇ ನಿರ್ಧರಿಸಿದ್ದೇನೆ. ನಾನು ಬೆಳಗ್ಗಿಂದ ಸಂಜೆಯವರೆಗೆ ಲೆಕ್ಕಹಾಕಿಯೂ ಮುಗಿಯದ ಟ್ಯಾಕ್ಸಿನ ಗೋಜಲನ್ನ, ಅಯ್ಯೋ ಅಷ್ಟೇಯಾ ಮಾರಾಯಾ ಎಂದು ನನ್ನ ಸೀಎ ಗೆಳೆಯ ಗಿರಿ ಫಟ್ಟಂತ ಕಣ್ಕಟ್ ಮಾಡಿದ ಹಾಗೆ ಬಗೆಹರಿಸುವುದನ್ನ ನೋಡಿ ಈಗೀಗ ಅವನು ಗೋವರ್ಧನ ಗಿರಿಧಾರಿಯ ಹಾಗೇ ಕಾಣಿಸುತ್ತಾನೆ! ಯಾರಾದರೂ ಬಂದು ನಿಮ್ಮ ಪರ್ಸು ಕಿತ್ತುಕೊಂಡು ಹೋದರೂ ಬೇಸರವಾಗದೇನೋ. ನಾವೇ ಸರಕಾರಕ್ಕೆ ಕೈ ಎತ್ತಿ ಕೊಡುವ ದುಡ್ಡಿಗೆ ಎಷ್ಟೆಲ್ಲ ಸರ್ಕಸ್ಸು ಮಾಡಬೇಕು ಹೇಳಿ? ಸುಮ್ನೆ ಯಾರಾದ್ರೂ ಬಂದು ನೋಡು ತಮಾ ಇದು ಲೆಕ್ಕ ಅಂತೇಳಿ ಕರೆಂಟು ಬಿಲ್ಲೋ ಕೇಬಲ್ಲು ಬಿಲ್ಲಿನ ತರವೋ ಟ್ಯಾಕ್ಸು ಕಲೆಕ್ಟು ಮಾಡಿದ್ದಿದ್ದರೆ ಭಾರಿ ಒಳ್ಳೇದಾಗುತ್ತಿತ್ತು ಎಂದು ಅನ್ನಿಸಿದ್ದಿದೆ ನಂಗೆ. ಚಾಚೂ ತಪ್ಪದೇ ಕಟ್ಟುವ ತೆರಿಗೆಯನ್ನ ಮತ್ತೇನಾದರೂ ಕೊಂಚ ತಡ ಮಾಡಿದಿರೋ, ಮತ್ತೆ ಅದರ ಒದ್ದಾಟದ ಪರ್ವವೇ ಬೇರೆ. ಅದು ಹೇಗೋ ಮಾಡಿ ಈ ಎಲ್ಲ ತೆರಿಗೆಯ ಆಘಾತಗಳಿಗೆ ನನ್ನನ್ನ ಹೊಂದಿಸಿಕೊಂಡು ಉಸಿರು ಬಿಡುತ್ತಿದ್ದರೆ, ಈಗ ಹೊಚ್ಚ ಹೊಸ GST ಬಂದು ಕೂತಿದೆ! ಅಲ್ಲ, ಹೆಂಗ್ ಸ್ವಾಮಿ ತಡ್ಕಳದು ಜೀವ? ಮೊದಲೇ ತೆರಿಗೆ ಬೇನೆಯಿಂದ ಬಳಲುತ್ತಿರುವ ನನ್ನಂತಹ ಬಡಪಾಯಿಗಳು, ಜಾಲತಾಣಗಳಲ್ಲಿ ಓಡಾಡುತ್ತಿರುವ ನೂರಾರು ಬಗೆಯ ಹೊಸ ಲೆಕ್ಕಾಚಾರಗಳಿಂದ ಪಕ್ಕಾ ಹೃದಯಾಘಾತಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. ತಿಂಗಳೂ ತಿಂಗಳೂ ಕಪ್ಪದ ಲೆಕ್ಕ ಸಲ್ಲಿಸಬೇಕಂತೆ ಅಂದರೆ ಇಲ್ಲ ಇಲ್ಲ ವಾರಕ್ಕೊಮ್ಮೆ ಅದೇನೋ ಫಾರ್ಮು ತುಂಬಿಸಿಟ್ಟುಕೊಳ್ಳಬೇಕಂತೆ ಅಂತ ಒಬ್ಬರಂದರೆ ಮೂರು ತಿಂಗಳಿಗೊಮ್ಮೆ ಸಲ್ಲಿಕೆ ಆದರೆ ಸಾಕಂತೆ ಅಂತ ಮಗದೊಬ್ಬನ ಪ್ರಲಾಪ. ನಾನೋ, ಹೊಸದಾಗಿ ಹಳ್ಳಿಯಿಂದ ಬಂದ ಸಿದ್ದ ಡಿವೈಡರಿನ ಮೇಲೆ ನಿಂತು ಆ ಕಡೆ ಈ ಕಡೆ ಹೋಗುವ ವಾಹನಗಳನ್ನ ನೋಡಿದ ಹಾಗೆ,ಮೂಕ ಪ್ರೇಕ್ಷಕ. ಒಬ್ಬರು ಸರಕಾರದ ವಿರೋಧ, ಮತ್ತೊಬ್ಬರು ಪರ. ನಾವೆಲ್ಲ 28 ಪರ್ಸೆಂಟು ಕಟ್ಬೇಕೂಂತ ಒಂದಿಷ್ಟು ಜನ, ಇಲ್ಲ ಇಲ್ಲ 18 ಸಾಕೂಂತ ಇನ್ನೊಂದಿಷ್ಟು ಮಂದಿ. ಎಲ್ಲ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಿ ಕಲ್ಲೊಗೆವ ಮಹಾಭಟರು. ನಾನೂ ನನ್ನೆರಡು ಜ್ಞಾನಬಿಂದುಗಳನ್ನ ಈ ಜಿ.ಎಸ್.ಟಿ ಯ ಅಗಾಧ ಸಾಗರಕ್ಕೆ ಸೇರಿಸೋಣವೆಂದರೆ, ಏನು ಮಾಡಲಿ, ಭೂಪರುಗಳ ನಡುವಿನ ಬೆಪ್ಪ ನಾನು. ಆದರೆ, ಇದ್ದಿದ್ದರಲ್ಲಿ ಈ ಸಲ ನನ್ನಂತಹ ದಡ್ಡಶಿಖಾಮಣಿಗಳಿಗೆ ಅರ್ಥವಾಗಲಿ ಅಂತಲೇ ಏನೋ, ಕೇಂದ್ರ ಸರಕಾರ ಜೀಎಸ್ಟಿ ಹೆಸರಲ್ಲಿ ತೆರಿಗೆ ವ್ಯವಹಾರ ಸರಳವಾಗಿ ಕಾಣುವ ಹಾಗಂತೂ ಮಾಡಿದೆ. ಕಟ್ಟುವ ದುಡ್ಡಲ್ಲಿ ವ್ಯತ್ಯಾಸವಾಗುತ್ತದೆಯೋ, ಇಲ್ಲವೋ ತಿಳಿಯದೇ ಹೋದರೂ ಏನು ಮಾಡುತ್ತಿದ್ದೇನೆ ಎನ್ನುವುದಂತೂ ಅರ್ಥವಾಗುವ ಹಾಗೆ ಕಾಣುತ್ತಿದೆ. ನನ್ನ ಸೀಎ ಗೆಳೆಯನಲ್ಲಿ ಕೇಳಿದೆ, ಏನಯ್ಯ ಇದು ಜೀಎಸ್ಟಿ ಈ ಸಲ ಹೆಂಗೆ ಜೀವನ ಅಂತ. ಅವನು ಬಹಳ ಚೆನ್ನಾಗಿ ಹೇಳಿದ, “ಮೊದ್ಲು ನಿಂಗೆ ಹೆಂಗೆ ಹೊಡೀತಿದ್ರೂಂತ ಗೊತಾಗ್ತಾ ಇರ್ಲಿಲ್ಲ, ಏಟು ಎಲ್ಲಿಂದ ಬೀಳ್ತಿದೆ ಅಂತ ಅಂದಾಜಾಗ್ತಾ ಇರ್ಲಿಲ್ಲ, ಇನ್ ಮೇಲೆ ಸರಿಯಾಗಿ ಗೊತ್ತಾಗತ್ತೆ”. ಎಲ್ಲರಿಗೂ ತೆರಿಗೆ ಬೇನೆಯ ಶುಭಾಶಯಗಳು! ಪೋಸ್ಟ್ ಮಾಡಿದವರು ಶ್ರೀನಿಧಿ.ಡಿ.ಎಸ್ ರಲ್ಲಿ 9:54 ಪೂರ್ವಾಹ್ನ 3 ಕಾಮೆಂಟ್‌ಗಳು: ಲೇಬಲ್‌ಗಳು: ಜಿ.ಎಸ್.ಟಿ, ತೆರಿಗೆ, GST, Income Tax ಗುರುವಾರ, ಏಪ್ರಿಲ್ 13, 2017 ಕಿರುತೆರೆಯ ಕಲ್ಯಾಣೋತ್ಸವ ಇಂದು ಕಿರುತೆರೆಯ ಧಾರಾವಾಹಿಗಳು ಸಿನಿಮಾ ಜಗತ್ತಿಗೇ ಸ್ಪರ್ಧೆಯನ್ನು ಒಡ್ಡಿರುವುದು ಸುಸ್ಪಷ್ಟ. ಕೆಲ ಸೀರಿಯಲ್ ಗಳು ಜನಪ್ರಿಯತೆಯಲ್ಲಿ ಚಲನಚಿತ್ರಗಳನ್ನೇ ಮೀರಿಸಿರುವುದೂ ಸುಳ್ಳಲ್ಲ. ನಿತ್ಯದ ಕ್ಲೀಷೆಗಳಲ್ಲೇ ಇನ್ನೂ ಸುತ್ತುತ್ತಿರುವ ಆಪಾದನೆ ಇದ್ದರೂ ಕೂಡ, ಅಪಾರ ಜನಸ್ತೋಮ –ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಧಾರಾವಾಹಿಗಳ ವೀಕ್ಷಣೆಯಲ್ಲಿ ತೊಡಗಿರುವುದಂತೂ ಸತ್ಯ. ಚಾನಲ್ ಗಳ ರೇಟಿಂಗ್ ಗಳನ್ನು ಗಮನಿಸಿದಾಗ ಇದಂತೂ ಅರಿವಾಗುತ್ತದೆ. ಕಳೆದೊಂದು ದಶಕದಲ್ಲಿ ಸೀರಿಯಲ್ಲುಗಳ ನಿರ್ಮಾಣದಲ್ಲಿ ಗಣನೀಯ ಏರಿಕೆಯಾಗಿದೆ.ಗುಣಮಟ್ಟದಲ್ಲೂ ಕೂಡ ಬಹಳ ಸುಧಾರಣೆಯಾಗಿದೆ. ನಿತ್ಯ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳ ಪ್ರಸಾರ ಕನ್ನಡದಲ್ಲಾಗುತ್ತಿದೆ. ಸಿನಿಮಾಗಳಂತೆಯೇ ಇಲ್ಲೂ ಅದ್ದೂರಿ ಸನ್ನಿವೇಶಗಳ ಚಿತ್ರೀಕರಣವಾಗುತ್ತಿದೆ. ಅದರಲ್ಲೂ ಮದುವೆಯ ಚಿತ್ರಣವಿದ್ದರಂತೂ ಕೇಳುವುದೇ ಬೇಡ. ಐಷಾರಾಮಿ ಕಲ್ಯಾಣ ಮಹೋತ್ಸವಗಳು ಇಂದು ಸೀರಿಯಲ್ ಗಳಲ್ಲಿ ಹಾಸುಹೊಕ್ಕಾಗಿ ಹೋಗಿವೆ! ಸೀರಿಯಲ್ ಮದುವೆ-ಸಂಭ್ರಮಕ್ಕೆ ಕೊನೆಯಿಲ್ಲ! ನೀವು ನೋಡಿರಬಹುದಾದ ಚಲನಚಿತ್ರಗಳಲ್ಲಿ ಬಹುಶಃ ತೊಂಬತ್ತಕ್ಕೂ ಹೆಚ್ಚು ಪ್ರತಿಶತ ಚಿತ್ರಗಳು ಮದುವೆಗಳಿಂದಲೇ ಮುಗಿದು, ಶುಭಂ ಕಾಣಿಸಿಕೊಳ್ಳುತ್ತವೆ. ಹೀರೋ ಹೀರೋಯಿನ್ನುಗಳು ಏನೇನೋ ಕಷ್ಟಪಟ್ಟು ಕೊಟ್ಟಕೊನೆಗೆ ತಾಳಿ ಕಟ್ಟುವುದರ ಮೂಲಕ ಸಿನಿಮಾ ಅಂತ್ಯವಾಗುತ್ತದೆ. ಆದರೆ ಧಾರಾವಾಹಿ ಜಗತ್ತಿನಲ್ಲಿ ಎಲ್ಲ ಶುರುವಾಗುವುದೇ ಮದುವೆಯಿಂದ! ಸೇರೊದ್ದ ಹೀರೋಯಿನ್ನು ಅತ್ತೆ ಮನೆಗೆ ಬರುತ್ತಲೇ ನಮ್ಮ ಕಥೆ ಆರಂಭ! ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು ಆದರೆ ಮದುವೆಯಿಲ್ಲದ ಸೀರಿಯಲ್ ಹುಡುಕಲು ಸಾಧ್ಯವಿಲ್ಲ.ಅದೂ ಕಳೆದ ಮೂರು ನಾಲ್ಕು ವರ್ಷಗಳ್ ಈಚೆಗಂತೂ ಅದ್ದೂರಿ ವಿವಾಹವಿಲ್ಲದ ಸೀರಿಯಲ್ಲೇ ಇಲ್ಲ ಎನ್ನಬಹುದೇನೋ. ಧಾರಾವಾಹಿಗಳಲ್ಲಿನ ಮದುವೆಗಳಲ್ಲಿನ ಅಬ್ಬರದ ಸಂಭ್ರಮವನ್ನು ನೋಡದೇ ಇರುವ ವೀಕ್ಷಕರೇ ಇಲ್ಲ ಅನ್ನಿಸುತ್ತದೆ. ಹೀಗಾಗಿಯೇ ಚಳಿಯೇ ಇರಲಿ , ಮಳೆಯೇ ಬರಲಿ, ಆಷಾಢವೋ-ಅಧಿಕಮಾಸವೋ ತಿಂಗಳಲ್ಲಿ ಒಂದೆರಡು ಮದುವೆಯಾದರೂ ಕಿರುತೆರೆಯಲ್ಲಿ ಪಕ್ಕಾ! ಅದ್ದೂರಿತನಕ್ಕೆ ಸರಿಸಾಟಿಯಿಲ್ಲ ವೀಕ್ಷಕರ ಬಯಕೆಯೋ, ಚಾನಲುಗಳ ನಿರ್ಧಾರವೋ, ಹೆಚ್ಚು ಮಂದಿಯನ್ನ ಧಾರಾವಾಹಿಗಳ ಕಡೆಗೆ ಸೆಳೆಯುವ ಯತ್ನವೋ- ಅದ್ದೂರಿ ಕಲ್ಯಾಣಗಳೀಗ ಟೀವಿಯಲ್ಲಿ ಸಾಮಾನ್ಯವಾಗಿ ಹೋಗಿದೆ. ದೇವಸ್ಥಾನದಲ್ಲಿ ನಾಯಕ ನಾಯಕಿಗೆ ತಾಳಿ ಕಟ್ಟುವ ಕಾಲ ಮುಗಿದಿದೆ! ಸಾಲು ಸಾಲು ರೆಸಾರ್ಟುಗಳೀಗ ಧಾರಾವಾಹಿಗಾಗಿ ಮದುವೆಗಾಗಿಯೇ ಬುಕ್ಕಿಂಗ್ ಆಗುತ್ತಿವೆ. ಮಧ್ಯಮ ವರ್ಗದ ವ್ಯಥೆಯೋ, ಶ್ರೀಮಂತರ ಕಥೆಯೋ- ಮದುವೆಗಳು ಮಾತ್ರ ಸಂಭ್ರಮೋಪೇತವಾಗಿ ನಡೆಯಬೇಕೆಂಬ ಅಲಿಖಿತ ನಿಯಮ ಜಾರಿಗೆ ಬಂದು ಬಿಟ್ಟಿದೆ. ಎರಡು ಮೂರು ಕುಟುಂಬಗಳ ನಡುವೆ -ಒಂದಲ್ಲ ಎರಡೆರಡು ಮದುವೆ, ನೂರಾರು ಮಂದಿ ಸಹನಟರು, ಫಳಫಳ ರೇಷ್ಮೆಸೀರೆ ಕೋಟು ಬೂಟುಗಳ ಓಡಾಟ- ಇವೆಲ್ಲ ನೀವು ನಿತ್ಯ ನೋಡುವ ಪ್ರಹಸನದ ಭಾಗವಾಗಿ ಹೋಗಿದೆ. ಝಗಮಗ ಜೀವಕಳೆಯ ಮಂದಿ ತೆರೆಯ ಮೇಲೆ ಓಡಾಡುತ್ತಿದ್ದರೆ ಮನೆಮನೆಗಳ ವೀಕ್ಷಕರ ಮುಖವೂ ಬೆಳಗುತ್ತಿದೆ. ಮದುವೆಯ ಸೀನುಗಳಿದ್ದರೆ ಖಂಡಿತಕ್ಕೂ ಅದಕ್ಕೆ ಹೆಚ್ಚಿನ ಟೀಆರ್ಪಿ ಬರುತ್ತದೆ ಎನ್ನುವುದು ಚಾನಲ್ಲುಗಳ ಒಳಗೆ ಕೂತ ಎಲ್ಲರಿಗೂ ಗೊತ್ತಿರುವ ಸತ್ಯ! ಶಾಸ್ತ್ರ ಸಂಪ್ರದಾಯಗಳಿಗೆ ಮರು ಜೀವ! ನಿಮ್ಮ ಮನೆಗಳ ಮದುವೆಗಳಲ್ಲಿ ನೀವು ಅದೆಷ್ಟು ಶಾಸ್ತ್ರಗಳನ್ನು ಪಾಲಿಸುತ್ತೀರೋ ಇಲ್ಲವೋ, ನಾವು ಸೀರಿಯಲ್ ಮಂದಿ ಮಾತ್ರ ಇವುಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತೇವೆ. ಬಳೆಪೂಜೆಯಿಂದ ಮೊದಲುಗೊಂಡು ಸಕಲೆಂಟು ಶಾಸ್ತ್ರಗಳನ್ನೂ ಹುಡುಕಿ ಅದನ್ನ ತೆರೆಯಮೇಲೆ ತರುವುದರ ಬಗ್ಗೆ ಗಮನ ಹರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ! ಗಂಡಿಗೂ ಹೆಣ್ಣಿಗೂ ಮದುವೆಗೆ ಮೊದಲು, ನಂತರ- ಅದೇನೇ ಸಂಪ್ರದಾಯಗಳಿರಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿಸುವುದರಲ್ಲಿ ಸಿದ್ಧಹಸ್ತರು. ಪುರೋಹಿತರುಗಳಿಗೇ ಶಾಸ್ತ್ರ ಮರೆತರೂ, ನಿರ್ದೇಶಕನಿಗೆ ಮರೆಯಲಾರದು. ನಾನೇ ಧಾರಾವಾಹಿಯೊಂದನ್ನು ಬರೆಯುವ ಸಂದರ್ಭದಲ್ಲಿ ಒಂದಿಷ್ಟು ಗ್ರಂಥಗಳು- ಗೂಗಲ್ಲು ಎಲ್ಲದರ ಸಹಾಯ ಪಡೆದು ಒಂದಾದ ಮೇಲೊಂದು- ಮದ್ವೆಗಳಲ್ಲಿ ಯಾವ ಯಾವ ಸಂಪ್ರದಾಯಗಳಿವೆ ಎಂದು ಅಭ್ಯಾಸ ಮಾಡಿದ್ದೆ! ಹಾಂ, ಇನ್ನೊಂದು ಮುಖ್ಯ ವಿಷಯ- ನಾವು ವಸುದೈವ ಕುಟುಂಬಕಂ ಎಂಬ ಸೂಕ್ತಿಯಲ್ಲಿ ವಿಶ್ವಾಸ ಹೊಂದಿದವರು.ಹೀಗಾಗಿ ಉತ್ತರ ಭಾರತದ ಯಾವುದೋ ಒಂದು ಶಾಸ್ತ್ರ ಮಲೆನಾಡಿನ ಮದುವೆಯೊಳಗೆ ಸಣ್ಣದಾಗಿ ತೂರಿಕೊಳ್ಳಬಹುದು. ಶೈವರ ಮದುವೆಗೆ ದೃಶ್ಯ ಮಾಧ್ಯಮಕ್ಕೆ ಸುಂದರವಾಗಿ ಕಾಣಬಹುದಾದ ಮಾಧ್ವರದೊಂದು ಆಚರಣೆ ಸೇರಿಕೊಂಡಿರಬಹುದು. ನಮ್ಮನ್ನ ಮನ್ನಿಸಿರಿ! ಹಾಡು ನೃತ್ಯಗಳ ಮಹಾನಂದ ರೆಸಾರ್ಟ್ ಮದುವೆ ಎಂದಾದ ಮೇಲೆ ಮುಗಿದೇ ಹೋಯಿತು, ಆ ಧಾರಾವಾಹಿಯಲ್ಲಿನ ಮದುವೆಗೆ ಸೆಲೆಬ್ರಿಟಿ ಬರೋದು ಖಂಡಿತ. ಅವರು ಬಂದ ಮೇಲೆ ನಾಲ್ಕು ಹೆಜ್ಜೆ ಡ್ಯಾನ್ಸು ಖಾಯಂ. ಸೀರಿಯಲ್ಲಿ ನಾಯಕನಿಗೋ ನಾಯಕಿಗೋ ನಮ್ಮ ಸಿನಿಮಾ ಹೀರೋ ಫ್ರೆಂಡು. ಅವನ ಜೊತೆಗೆ ಬರುವ ದಂಡು ಒಂದು ಹಾಡೋ, ನೃತ್ಯಕ್ಕೋ ಸೇರಿಕೊಳ್ಳದಿದ್ದರೆ ಯಾವ ಮಜವೂ ಇರಲಾರದು. ಲಾಜಿಕ್ಕಿನ ಕಥೆ ಬಿಡಿ, ಇದು ಮ್ಯಾಜಿಕ್ಕಿನ ವಿಷಯ! ಕನ್ನಡ ಧಾರಾವಾಹಿಗಳ ಮದುವೆಗಳಲ್ಲಿ ಹೆಚ್ಚಿನೆಲ್ಲ ಸೆಲೆಬ್ರಿಟಿ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆ. ಹಿಂದಿಯಲ್ಲಿ ಶಾರುಕ್ ಸಲ್ಮಾನ್ ಹೃತಿಕ್ ಕೂಡ ಇಂಥ ವಿವಾಹಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ, ಸೀರಿಯಲ್ ಮದುವೆಗಳ ಜನಪ್ರಿಯತೆ ಯಾವ ಮಟ್ಟಕ್ಕಿರಬಹುದು ಯೋಚಿಸಿ ನೋಡಿ. ತಮ್ಮ ಸಿನಿಮಾಗಳನ್ನು ಪ್ರಮೋಟ್ ಮಾಡಿಕೊಳ್ಳಲು ಜನಪ್ರಿಯ ಧಾರಾವಾಹಿಯೊಂದರ ಮದುವೆಯ ವೇದಿಕೆಗಿಂತ ಉತ್ತಮ ಜಾಗ ಯಾವುದಿದೆ ಹೇಳಿ?ಹೀಗಾಗಿಯೇ ಒಂದಿಡೀ ದಿನ ಅಭ್ಯಾಸ ಮಾಡಿ ನಂತರ ಶ್ರದ್ಧಾ ಭಕ್ತಿಗಳಿಂದ ನಟನಟಿಯರು ಈ ಮದುವೆಯ ನೃತ್ಯ ವಿಶೇಷಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದು ಮನೆಯಲ್ಲೇ ಕೂತು ಮದುವೆ ನೋಡುವ ಮಂದಿಗೆ ಮೃಷ್ಟಾನ್ನ ಭೋಜನವೇ ಸರಿ. ತೆರೆಯ ಹಿಂದಿನ ಶ್ರಮ ಆದರೆ ಇಷ್ಟೆಲ್ಲವನ್ನ ಕಟ್ಟಿಕೊಡುವುದಕ್ಕೆ ತಂತ್ರಜ್ಞರ ಬಳಗ ಹಗಲು ರಾತ್ರಿಯೆನ್ನದೆ ಶ್ರಮಿಸಬೇಕು. ಎರಡು ಮೂರು ದಿನಗಳೊಳಾಗಿ ಹತ್ತೈವತ್ತು ದೃಶ್ಯಗಳನ್ನ ಶೂಟ್ ಮಾಡಬೇಕು. ನಾನೇ ಇಂತಹ ೨-೩ ಮದುವೆಗಳ ಚಿತ್ರೀಕರಣದಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಹೇಳುತ್ತಿದ್ದೇನೆ- ಖಂಡಿತಕ್ಕೂ ಇದು ಸುಲಭವಲ್ಲ. ದಪ್ಪನೆಯ ರೇಷ್ಮೆ ಸೀರೆಯಲ್ಲಿ ಪ್ರಖರ ಬೆಳಕಿನಲ್ಲಿ ಬೆಳಗ್ಗಿಂದ ಸಂಜೆಯವರೆಗೆ ನಗುಮೊಗ ಹೊತ್ತು ಕೂತ ನಾಯಕಿಯ ಬೆವರ ಸಂಕಟ ತೆರೆಯ ಮೇಲೆ ಕಾಣುವುದಿಲ್ಲ. ಅಲ್ಲಲ್ಲೇ ಸೀನು ಬರೆವ ಸಂಭಾಷಣೆಕಾರ, ಸೊಂಟ ಬಿದ್ದು ಹೋಗುವಂತೆ ಓಡಾಡುವ ಸೆಟ್ ಹುಡುಗರು, ಕಲಾ ನಿರ್ದೇಶಕ, ಛಾಯಾಗ್ರಾಹಕ ತೆರೆಯ ಮೇಲೆ ಕಾಣಿಸುವುದೇ ಇಲ್ಲ. ಇವರೆಲ್ಲರ ತೆರೆಮರೆಯ ಒದ್ದಾಟದಿಂದಲೇ ತೆರೆ ಮೇಲೆ ಸೊಗಸು ಹೆಚ್ಚುತ್ತಿರುತ್ತದೆ. ಇನ್ನೆಷ್ಟು ದಿನ ಹೀಗೆ? ಆದರೀಗ ವೀಕ್ಷಕ ವರ್ಗಕ್ಕೂ ಏಕತಾನತೆ ಕಾಡಲಾರಂಭಿಸಿದೆ. ಒಂದೇ ಬಗೆಯ ಮದುವೆಗಳು- ಅದದೇ ಹಾಡು ನೃತ್ಯಗಳು ಬೋರಾಗಲಾರಂಭಿಸಿದೆ. ನೈಜತೆಯಿಂದ ದೂರವೇನೋ ಅನ್ನಿಸುವ ದೃಶ್ಯಾವಳಿಗಳು- ಅವವೇ ಮಸಲತ್ತುಗಳು,ಮದುವೆ ನಿಲ್ಲಿಸಲು ಯಾವುದೋ ಪಾತ್ರ ಮಾಡುವ ಕಸರತ್ತುಗಳು ಆಕಳಿಕೆ ತರಿಸುತ್ತಿವೆ. ಅದ್ದೂರಿತನವನ್ನು ಮೀರಿದ ಕಂಟೆಂಟ್ ಅನ್ನು ಜನರೀಗ ಬಯಸುತ್ತಿದ್ದಾರೆ. ಯಾವುದೋ ಒಂದು ಧಾರಾವಾಹಿ ಈ ಸಿದ್ಧಸೂತ್ರವನ್ನು ಬದಿಗೊತ್ತಿ ಹೊಸ ದಾರಿಯನ್ನು ಹಿಡಿಯಬಹುದು. ಅಲ್ಲಿಯವರೆಗೆ ಸಶೇಷ! ಹಾಂ, ಹೇಳೋದು ಮರೆತೆ- ಟೀವಿ ಮದುವೆಯೊಂದಕ್ಕೆ ಇತ್ತೀಚೆಗೆ ಪತ್ರಿಕೆಯಲ್ಲಿ ಅಕ್ಷತೆಯ ಸ್ಯಾಷೆ ಹಂಚಿದ್ದರು ಮೊನ್ನೆ ಮೊನ್ನೆ ತಾನೇ! ನಂಗಂತೂ ಆ ಐಡಿಯಾ ಇಷ್ಟವಾಯಿತು. ಯಾರಿಗೆ ಗೊತ್ತು- ನಾಳೆ ನಿಮ್ಮ ಮನೆಗೇ ನುಗ್ಗಿ ಮದುವೆ ಶೂಟಿಂಗ್ ನಡೆದರೂ ಅಶ್ಚರ್ಯವಿಲ್ಲ! ಕಾದು ನೋಡೋಣ. ಪೋಸ್ಟ್ ಮಾಡಿದವರು ಶ್ರೀನಿಧಿ.ಡಿ.ಎಸ್ ರಲ್ಲಿ 2:48 ಅಪರಾಹ್ನ ಕಾಮೆಂಟ್‌ಗಳಿಲ್ಲ: ಶುಕ್ರವಾರ, ಏಪ್ರಿಲ್ 07, 2017 ಹಿಮಾಲಯದ ಮರುಭೂಮಿ- ನುಬ್ರಾ ಕಣಿವೆ ಮೈಕೊರೆಯುವ ಮೈನಸ್ ಹತ್ತು ಡಿಗ್ರಿಯ ಚಳಿ. ಕತ್ತೆತ್ತಿ ನೋಡಿದರೆ, ಸುತ್ತಲೂ ಹಿಮದ ಸೀರೆ ಹೊದ್ದು ಮಲಗಿರುವ ಬಿಳಿಬಿಳಿ ಪರ್ವತ ಶ್ರೇಣಿಗಳು, ಮಂಜು ಕರಗಿ ಝುಳು ಹರಿಯುತ್ತಿರುವ ಸಣ್ಣ ತೊರೆಗಳು... ಆದರೆ, ಕಾಲ ಕೆಳಗೆ ಮಾತ್ರ ಮರಳು. ಎತ್ತ ನೋಡಿದರೂ, ಮರಳ ದಿಣ್ಣೆಗಳು, ಓಡಾಡುತ್ತಿರುವ ಒಂಟೆಗಳು.. ಜೋರು ಬೀಸುವ ಗಾಳಿಗೆ ಮರಳೂ ಮೇಲೆದ್ದು ಮುಸುಕುವ ಉಸುಕ ಬಿರುಗಾಳಿ! ಅರೆರೆ. ಎತ್ತಣ ಹಿಮಪರ್ವತ, ಎತ್ತಣ ಮರುಳ ದಿಣ್ಣೆ ಎಂದು ಯೋಚಿಸುತ್ತಿದ್ದೀರಾ? ಹೌದು. ಇಂತಹದೊಂದು ಸೋಜಿಗದ ಜಾಗ ನಮ್ಮ ಭಾರತದಲ್ಲಿಯೇ ಇದೆ ಎಂದರೆ ಅಚ್ಚರಿಯಾದೀತು. ಸ್ವರ್ಗಸದೃಶವಾದ ಈ ತಾಣ, ನುಬ್ರಾ ಕಣಿವೆ. ಮೈನವಿರೇಳಿಸುವ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಒಡಲಲ್ಲಿ ತುಂಬಿಕೊಂಡಿರುವ ಲಢಾಕ್ ಪ್ರಾಂತ್ಯದಲ್ಲಿದೆ ಈ ನುಬ್ರಾ ವ್ಯಾಲಿ. ಜಮ್ಮ ಕಾಶ್ಮೀರವನ್ನು ಹಾದುಹೋಗುವ ಹಿಮಾಲಯ ಪರ್ವತ ಶ್ರೇಣಿಯು, ಅಲ್ಲಿನ ಪ್ರಕೃತಿಸಿರಿಗೆ ವರದಾನವನ್ನೇ ನೀಡಿದೆ. ನಿಸ್ಸಂಶಯವಾಗಿಯೂ ನಮ್ಮ ದೇಶದ ಭೇಟಿ ನೀಡಲೇಬೇಕಾದ ಪ್ರವಾಸೀತಾಣಗಳಲ್ಲಿ ಕಾಶ್ಮೀರ ಕಣಿವೆಯೂ ಒಂದು. ಕಾಶ್ಮೀರದ ಲಢಾಕ್, ಪ್ರಾಯಶಃ ಬಹುಸಂಖ್ಯೆಯ ಪ್ರವಾಸಿಗಳು ಬಂದು ಹೋಗುವ ಜಿಲ್ಲೆಯೂ ಹೌದು. ಲೇಹ್ ನಗರ, ವಿವಿಧ ಬೌದ್ಧಮಂದಿರಗಳು ಪ್ಯಾಂಗಾಂಗ್ ಸರೋವರ, ಖರ್ದುಂಗ್ಲಾ ಪಾಸ್ ಇಲ್ಲಿನ ಜನಮನ ಸೆಳೆಯುವ ತಾಣಗಳು. ಈ ಎಲ್ಲ ಗೌಜಿಗದ್ದಲಗಳಿಂದ ದೂರವಾಗಿ, ಲೇಹ್ ನಗರದಿಂದ ಉತ್ತರಕ್ಕೆ ಸುಮಾರ ನೂರೈವತ್ತು ಕಿಲೋಮೀಟರ್ ದೂರದಲ್ಲಿ ಇರುವ ವಿಸ್ಮಯಕಾರೀ ಕಣಿವೆಯೇ ನುಬ್ರಾ. ಕೂಗಳತೆಯ ದೂರದಲ್ಲಿ ಪಾಕಿಸ್ತಾನ ಮತ್ತು ಚೀನಾ ಎರಡರ ಗಡಿಗಳನ್ನೂ ಹೊಂದಿರುವ-ಭದ್ರತೆಯ ದೃಷ್ಟಿಯಿಂದ ಭಾರತದ ಆಯಕಟ್ಟಿನ ಜಾಗದಲ್ಲಿರುವ ಈ ಕಣಿವೆ- ಈ ಕಾರಣಕ್ಕಾಗಿಯೇ ಪ್ರವಾಸಿಗರ ವಲಯದಲ್ಲಿ ತುಂಬ ಪ್ರಸಿದ್ಧವಾಗಿಲ್ಲ. ಸಿಯಾಚಿನ್ ಗ್ಲೇಸಿಯರ್ ಗೆ ಈ ನುಬ್ರಾ ಕಣಿವೆಯಿಂದ ಮೂವತ್ತೇ ಕಿಲೋಮೀಟರು ದೂರ! ಲಡಾಕ್ ಮತ್ತು ಕಾರಾಕೊರಂ ಎಂಬ ಪ್ರಸಿದ್ಧ ಹಿಮಾಲಯ ಪರ್ವತಶ್ರೇಣಿಯನ್ನು ಸಿಯಾಚಿನ್ ಮತ್ತು ಶ್ಯೋಕ್ ಎಂಬೆರಡು ನದಿಗಳು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಉಂಟಾಗಿರುವ ಕಣಿವೆ ಪ್ರದೇಶ, ನುಬ್ರಾ. ಶ್ಯೋಕ್, ಸಿಂಧೂ ನದಿಯ ಉಪನದಿ. ಟಿಬೆಟಿಯನ್ ಪ್ರಸ್ಥಭೂಮಿಯ ಗುಣಲಕ್ಷಣದಂತೆ,ಕೊರೆವ ಮರುಭೂಮಿಯಾಗಿ ನುಬ್ರಾ ರೂಪುಗೊಂಡಿದೆ. ಅತಿಯಾದ ಶೀತದ ಕಾರಣದಿಂದಾಗಿ ಇಲ್ಲಿ ಯಾವುದೇ ಗಿಡ-ಮರಗಳು ವಿಫುಲವಾಗಿ ಬೆಳೆಯಲಾರವು. ಮಳೆಯೂ ಇಲ್ಲಿ ವಿರಳ. ಹೀಗಾಗಿಯೇ ಉಸುಕಿನ ದಿಣ್ಣೆಗಳು ಕಿಲೋಮೀಟರುಗಟ್ಟಲೆ ಚಾಚಿಕೊಂಡಿವೆ. ಅಚ್ಚರಿಯೆಂದರೆ, ಮರಳುಗಾಡಿನಲ್ಲಿರುವಂತೆ ಒಂಟೆಗಳೂ ಇಲ್ಲಿವೆ! ಎರಡು ಡುಬ್ಬಗಳ ಒಂಟೆಗಳು ಕುರುಚಲು ಪೊದೆಗಳ ಬಳಿ ಮೇಯುತ್ತ ನಿಂತಿರುವ ದೃಶ್ಯವನ್ನೂ ನೋಡಬಹುದು. ನೆನಪಿಡಿ- ಈ ರೀತಿಯ ಎರಡು ದಿಬ್ಬದ ಒಂಟೆಗಳು ಇಲ್ಲಿ ಬಿಟ್ಟರೆ, ಇರುವುದು ಆಸ್ಟ್ರೇಲಿಯಾದಲ್ಲಿ ಮಾತ್ರ! ನದಿಗಳು ಹರಿದು ಉಂಟಾಗಿರುವ ವಿಶಾಲ ಬಯಲು, ಉದ್ದಕ್ಕೆ ಚಾಚಿರುವ ಹಿಮಾವೃತ ಬೆಟ್ಟಗಳು ಈ ಕಣಿವೆಗೊಂದು ದಿವ್ಯ ಸೌಂದರ್ಯವನ್ನು ನೀಡಿದೆ. ನುಬ್ರಾ ಕಣಿವೆಗೆ ಐತಿಹಾಸಿಕ ಮಹತ್ವ ಕೂಡ ಇದೆ. ಪುರಾತನ ಭಾರತದ ಪ್ರಸಿದ್ಧ ’ಸಿಲ್ಕ್ ರೂಟ್’ ಅನ್ನುವ ದಾರಿ ನುಬ್ರಾ ಕಣಿವೆಯನ್ನೇ ಹಾದು ಹೋಗುತ್ತಿತ್ತು. ಸಾಂಬಾರ ಪದಾರ್ಥ ಮತ್ತು ರೇಷ್ಮೆ ಬಟ್ಟೆಗಾಗಿ ಭರತಖಂಡಕ್ಕೆ ಬರುವ ಹೊರಗಿನ ವ್ಯಾಪರಸ್ಥರು ದುರ್ಗಮವಾದ ಈ ಕಣಿವೆಯನ್ನೇ ಹಾದು ಭಾರತಕ್ಕೆ ಬರಬೇಕಿತ್ತು. ಸುಮಾರು ೧೯೫೦ನೇ ಇಸವಿಯವರೆಗೂ ಚೀನಾದಿಂದ ಇಲ್ಲಿಗೆ- ಇಲ್ಲಿಂದ ಚೀನಾ ಕಡೆಗೆ ಜನರು ಕಾಲ್ನಡಿಗೆಯೇ ಹೋಗುತ್ತಿದ್ದರಂತೆ. ನಂತರ ರಾಜತಾಂತ್ರಿಕ ಕಾರಣಗಳಿಗೆ ಮತ್ತು ಭದ್ರತೆಯ ದೃಷ್ಟಿಯಿಂದಾಗಿ ಈ ಮಾರ್ಗವನ್ನು ಮುಚ್ಚಲಾಯಿತು. ನುಬ್ರಾ ಕಣಿವೆ ಭಾರತದ ಅತ್ಯಂತ ಶೀತ ಪ್ರದೇಶಗಳಲ್ಲೊಂದಾಗಿದ್ದು, ಇಲ್ಲಿನ ಜನಸಂಖ್ಯೆಯೂ ವಿರಳ. ಅಲ್ಲೊಂದು ಇಲ್ಲೊಂದು ಹಳ್ಳಿಗಳಿವೆ. ದಿಸ್ಕಿತ್, ಹುಂಡುರ್, ಟುರ್ಟಕ್ ಮೊದಲಾದ ಊರುಗಳು ಅಲ್ಲಲ್ಲಿ ಸೋಮಾರಿಯಾಗಿ ಬಿದ್ದುಕೊಂಡಿವೆ. ಇಲ್ಲಿಗೆ ಬರುವ ಪ್ರವಾಸಿಗರೇ ಆದಾಯದ ಮೂಲ. ಹಿಮ ಕರಗಿ ಹರಿಯುವ ನೀರು ಇರುವುದರಿಂದ, ಅಲ್ಲಲ್ಲಿ ಬಾರ್ಲಿ, ಅಕ್ರೋಟು ಮೊದಲಾದವನ್ನು ಬೆಳೆಯುತ್ತಾರೆ. ಲಡಾಖ್ ನ ಉಳಿದ ಪ್ರಾಂತ್ಯಗಳಿಗೆ ಹೋಲಿಸಿದರೆ, ಕೃಷಿ ಚಟುವಟಿಕೆ ಇಲ್ಲೇ ಜಾಸ್ತಿ. ನಾವೊಂದಿಷ್ಟು ಮಂದಿ ನುಬ್ರಾಕ್ಕೆ ಹೋಗಿದ್ದು ಫೆಬ್ರವರಿ ತಿಂಗಳ ಕೊರೆಯುವ ಚಳಿಯಲ್ಲಿ. ಲಢಾಕ್ ನ ಬೇರಾವುದೋ ಟ್ರೆಕ್ ಅನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾದ ಕಾರಣಕ್ಕಾಗಿ ಲೇಹ್ ಸುತ್ತಮುತ್ತ ಇರುವ ಒಂದಿಷ್ಟು ಜಾಗಗಳನ್ನ ನೋಡಲು ೩-೪ ದಿನಗಳ ಸಮಯ ಸಿಕ್ಕಿತ್ತು. ಈ ಹುಡುಕಾಟದ ಫಲವೇ ನುಬ್ರಾವ್ಯಾಲಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಮಟಮಟ ಮಧ್ಯಾಹ್ನವೇ ಮೈನಸ್ ೧೦-೧೫ ಡಿಗ್ರಿಯ ಮೂಳೆಕೊರೆಯುವ ಚಳಿ. ಇಡೀ ನುಬ್ರಾಕ್ಕೆ ನಾವೊಂದು ಹತ್ತು ಜನ ಬಿಟ್ಟರೆ ಬೇರಾವ ಪ್ರವಾಸಿಗರೂ ಇಲ್ಲ. ಯಾವ ಗೆಸ್ಟ್ ಹೌಸ್ ಗಳಾಗಲೀ, ಹೋಟೇಲುಗಳಾಗಲೀ ಈ ಸಮಯದಲ್ಲಿ ತೆರೆದಿರುವುದಿಲ್ಲ. ರಾತ್ರಿ ಸುಮಾರು -೩೦ ಡಿಗ್ರಿಗಳವರೆಗೂ ತಾಪಮಾನ ಇಳಿಕೆಯಾಗುತ್ತದೆ. ಮನೆಗಳ, ಲಾಡ್ಜುಗಳ ನೆತ್ತಿಯ ಮೇಲಿನ ಟ್ಯಾಂಕಿನಲ್ಲಿರುವ ನೀರು ಕೂಡ ಮಂಜುಗಡ್ದೆಯಾಗಿ ಬಿಟ್ಟಿರುತ್ತದೆ! ಸಂಜೆ ಐದು ಗಂಟೆಯ ನಂತರ ಹೊರಗಡೆ ಓಡಾಡುವ ಯಾವ ಸಾಧ್ಯತೆಯೂ ಇಲ್ಲ. ನರಪಿಳ್ಳೆ ಕೂಡ ರಸ್ತೆಯಲ್ಲಿ ಇರುವುದಿಲ್ಲ. ಊರಮಂದಿಯೆಲ್ಲ ಮನೆಯೊಳಗೆ ಅಗ್ಗಿಷ್ಟಿಕೆಗಳನ್ನ ಹಾಕಿಕೊಂಡು ಕೂತಿರುತ್ತಾರೆ. ಆ ಚಳಿಯಲ್ಲೇ ಹುಂಡುರ್ ನ ಮರಳ ದಿಣ್ಣೆಗಳಲ್ಲಿ ಓಡಾಡಿ ಆಶ್ರಯ ಹುಡುಕಿಕೊಂಡು ಹೋದೆವು. ನಮ್ಮ ಟೆಂಪೋ ಟ್ರಾವೆಲರ್ ಡ್ರೈವರು ಅದೇ ಊರಿನವನಾದ ಕಾರಣಕ್ಕೆ ಗೆಸ್ಟ್ ಹೌಸೊಂದರ ಬಾಗಿಲು ತೆಗಿಸಿ, ಮಲಗುವ ವ್ಯವಸ್ಥೆ ಮಾಡಿಸಿಕೊಟ್ಟ. ನೋಡಿದರೆ, ಅಲ್ಲಿದ್ದಿದ್ದು ಒಬ್ಬ ಹೆಂಗಸು ಮಾತ್ರ. ಆಕೆ ಸಾಕ್ಷಾತ್ ಅನ್ನಪೂರ್ಣೆಯಂತೆ ನಮಗೆ ಬಿಸಿಬಿಸಿ ಫುಲ್ಕಾಗಳನ್ನ- ಅನ್ನ ದಾಲ್ ನ ಮಾಡಿ ಬಡಿಸಿದ್ದನ್ನು ನಾವೆಲ್ಲ ಎಂದಿಗೂ ಮರೆಯಲಾರೆವು! ಇಲ್ಲಿನ ಸ್ತ್ರೀಯರು ಬಹಳ ಕಷ್ಟ ಸಹಿಷ್ಣುಗಳಾಗಿದ್ದು ಗಂಡಸರಿಗಿಂತ ಹೆಚ್ಚಿನ ಕೆಲಸವನ್ನು ಅವರೇ ಮಾಡುತ್ತಾರೆ. ಹೆಚ್ಚಿನ ಹಳ್ಳಿಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಜಾಸ್ತಿ ಕಾಣಿಸುತ್ತಾರೆ! ಇಲ್ಲಿನ ಹೆಚ್ಚಿನ ಹಳ್ಳಿಗಳಲ್ಲಿ ಬೌದ್ಧರ ಮಾನೆಸ್ಟ್ರಿಗಳಿವೆ. ದಿಸ್ಕಿತ್ ನಲ್ಲಿ ಮೈತ್ರೇಯ ಬುದ್ಧನ ಮೂವತ್ತಮೂರು ಮೀಟರ್ ಎತ್ತರ ಸುಂದರ ಪ್ರತಿಮೆ ಇದೆ. ಶಾಂತಿಯ ಪ್ರತೀಕವಾಗಿರುವ ಮೈತ್ರೇಯ ಬುದ್ಧನ ಈ ಮೂರ್ತಿಯು, ಪಾಕಿಸ್ತಾನದ ಕಡೆಗೆ ಮುಖ ಮಾಡಿಕೊಂಡಿದೆ! ಹುಂಡುರ್ ನಲ್ಲಿ ಚಂಬಾ ಎಂಬ ಬೌದ್ಧ ಮಂದಿರವಿದೆ. ಪುಟಾಣಿ ಮಕ್ಕಳು ಕೆಂಪು ನಿಲುವಂಗಿಯನ್ನ ತೊಟ್ಟು ಓಡಾಡುವುದನ್ನು ನೋಡುವುದೇ ಒಂದು ಸೊಗಸು. ಸುಮುರ್ ಎಂಬಲ್ಲಿ ೧೮೫೦ ರಲ್ಲಿ ಕಟ್ಟಲ್ಪಟ್ಟ ಗೊಂಪಾ ಇದೆ. ಬೌದ್ಧ ಧರ್ಮೀಯರ ಗ್ರಂಥಗಳನ್ನು ಅಧ್ಯಯನ ಮಾಡುತ್ತ ಕೂತಿರುವ ಗುರುಗಳೂ..ಅವರುಗಳ ಶಿಷ್ಯರೂ ನಿಮಗಿಲ್ಲಿ ಕಾಣಸಿಗುತ್ತಾರೆ. ಹಾಗೇ ಇಲ್ಲಿಂದ ನುಬ್ರಾ ಕಣಿವೆಯ ನದಿಗುಂಟದ ಹಾದಿಯನ್ನು ಹಿಡಿದು ಮತ್ತೊಂದು ನೂರೈವತ್ತು ಕಿಲೋಮೀಟರು ಹೋದರೆ ಥ್ರೀ ಈಡಿಯಟ್ಸ್ ಚಿತ್ರದಿಂದಾಗಿ ಪ್ರಸಿದ್ಧವಾದ ಪ್ಯಾಂಗಾಂಗ್ ಲೇಕ್ ಸಿಗುತ್ತದೆ. ಹಾಂ, ನೀವು ಇವುಗಳನ್ನ ಯಾವುದನ್ನೂ ನೋಡದೇ ಸುಮ್ಮನೇ ಇಲ್ಲಿನ ರಸ್ತೆಗಳಲ್ಲಿ ಅಲೆಯುತ್ತೀರಿ ಎಂದರೂ ಸೈಯೇ. ಯಾಕೆಂದರೆ ಲಢಾಕ್ ನ ಸತ್ವವಿರುವುದೇ ಉದ್ದೇಶವಿಲ್ಲದೇ ಮಾಡುವ ಅಲೆದಾಟದಲ್ಲಿ. ಏಕೆಂದರೆ ಇಲ್ಲೊಂದು ವಿಚಿತ್ರ ಅನುಭೂತಿಯಿದೆ. ಹೊರ ಜಗತ್ತಿನ ದೈನಿಕ ವ್ಯಾಕರಣಕ್ಕೆ ಹೊರತಾದ ಬದುಕಿದೆ. ಕಣ್ಣುಹಾಯಿಸಿದಷ್ಟು ಉದ್ದಕ್ಕೂ ಕಾಣುವ ಹಿಮಪರ್ವತ ಮಾಲೆ, ಬೀಸಿ ಬರುವ ಗಾಳಿಗೆ ಮೇಲೆದ್ದ ಮರಳು ಸೃಜಿಸಿದ ಧೂಳಿನ ಮಾಯಾಲೋಕ.. ನಿಮ್ಮನ್ನ ಮಂತ್ರಮುಗ್ಧರನ್ನಾಗಿಸುತ್ತದೆ. ದೈತ್ಯ ಪ್ರಕೃತಿಯೆದುರಿಗೆ ನಾವೆಷ್ಟು ಕುಬ್ಜ ಅನ್ನುವುದನ್ನು ಮರುನಿರೂಪಿಸುತ್ತದೆ. ಎಂದಾದರೊಂದು ದಿನ ಲೇಹ್ ಗೆ ಖಂಡಿತವಾಗಿಯೂ ಹೋಗಿ, ಅಲ್ಲಿಗೆ ಹೋದವರು ನುಬ್ರಾ ಕಣಿವೆಗೆ ಹೋಗುವುದನ್ನು ಮಾತ್ರ ಮರೆಯಬೇಡಿ! ಹೋಗುವುದು ಹೇಗೆ? ದೆಹಲಿಯಿಂದ ಲೇಹ್ ಗೆ ವಿಮಾನದಲ್ಲಿ ಅಥವಾ ರಸ್ತೆಮಾರ್ಗವಾಗಿಯೂ ಪ್ರಯಾಣಿಸಬಹುದು. ಆದರೆ ಚಳಿಗಾಲದಲ್ಲಿ ಮನಾಲಿ-ಜಮ್ಮು ರಸ್ತೆಯಲ್ಲಿ ಸಂಚಾರ ನಿಷಿದ್ಧ. ಡಿಸೆಂಬರ್ ನಿಂದ ಮಾರ್ಚ್- ಕೇವಲ ವಿಮಾನದಲ್ಲಷ್ಟೇ ಲೇಹ್ ಗೆ ತಲುಪಬಹುದು. ಅಲ್ಲಿಂದ ಯಾವುದಾದರೂ ಕಾರ್/ಟೆಂಪೋ ಟ್ರಾವೆಲರ್ ನಲ್ಲಿ ನುಬ್ರಾಗೆ ಹೋಗಬಹುದು. ಲೇಹ್ ಪಟ್ಟಣದಿಂದ ನುಬ್ರಾಗೆ ೧೫೦ ಕಿಲೋಮೀಟರು, ಐದರಿಂದ ಆರುಗಂಟೆಗಳ ಪ್ರಯಾಣ. ಮೊದಲೇ ವಸತಿ ಸೌಕರ್ಯವನ್ನು ಕಾಯ್ದಿರಿಸಿಕೊಂಡು ಹೋಗುವುದು ಒಳಿತು. ಖರ್ದುಂಗ್ಲಾ ಪಾಸ್ ನುಬ್ರಾ ಕಣಿವೆಗೆ ತೆರಳಬೇಕಿದ್ದರೆ ಜಗತ್ತಿನ ಅತ್ಯಂತ ಎತ್ತರದ ಮೋಟರೇಬಲ್ ಪಾಸ್ ಎಂದೇ ಪ್ರಸಿದ್ಧವಾಗಿರುವ ಖರ್ದುಂಗ್ಲಾ ಪಾಸ್ ಅನ್ನು ದಾಟಿಕೊಂಡು ಹೋಗಬೇಕು. ೧೮,೩೮೦ ಅಡಿಗಳೆತ್ತರದಲ್ಲಿರುವ ಖರ್ದುಂಗ್ಲಾದಲ್ಲೊಂದೆರಡು ಫೋಟೋ ಕ್ಲಿಕ್ಕಿಸಿಕೊಂಡು ಮತ್ತೆ ೮ ಸಾವಿರ ಅಡಿಗಳಷ್ಟು ಕೆಳಗಿಳಿದರೆ ವಿಸ್ತಾರವಾಗಿ ಚಾಚಿಕೊಂಡಿರುವ ನುಬ್ರಾ ಕಣಿವೆ ಕಾಣಿಸುತ್ತದೆ. ಖರ್ದುಂಗ್ಲಾದಲ್ಲಿ ಹಿಮಪಾತವಾಗಿದ್ದರೆ ರಸ್ತೆ ಮುಚ್ಚಿಕೊಂಡು ಮುಂದಿನ ಪ್ರಯಾಣ ಸಾಧ್ಯವಾಗದೇ ಹೋಗಬಹುದು. ಹೀಗಾಗಿ, ಖರ್ದುಂಗ್ಲಾದ ವಾತಾವರಣ ಹೇಗಿದೆ ಅನ್ನುವುದರ ಮೇಲೆ ನುಬ್ರಾ ನೋಟ ಸಾಧ್ಯ! ಕಣ್ಣಳತೆ ದೂರದಲ್ಲೇ ಸಿಯಾಚಿನ್! ನುಬ್ರಾ ವ್ಯಾಲಿಯಿಂದ ಸಿಯಾಚಿನ್ ದರ್ಶನ ಭಾಗ್ಯ ಸಿಗುತ್ತದೆ. ಸಿಯಾಚಿನ್ ನ ಬೇಸ್ ಕ್ಯಾಂಪ್ ಗೆ ನುಬ್ರಾ ಮೂಲಕವೇ ಸಾಗಿ ಹೋಗಬೇಕು. ಬೇಸ್ ಕ್ಯಾಂಪ್ ವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ. ಅಲ್ಲಿಂದ ಮುಂದೆ ನಿಷೇಧಿತ ಪ್ರದೇಶ. ಮಿಲಿಟರಿ ಒಪ್ಪಿಗೆಯಿಲ್ಲದೇ ಮುಂದೆ ಸಾಗುವಂತಿಲ್ಲ. ಸಿಯಾಚಿನ್ ಬೇಸ್ ಕ್ಯಾಂಪ್ ಗೆ ಹೋಗುವ ಸೈನ್ಯದ ಟ್ರಕ್ ಗಳು ದಾರಿಯುದ್ಧಕ್ಕೂ ಅಲ್ಲಲ್ಲಿ ಕಾಣಸಿಗುತ್ತವೆ. ಬಿಳಿಯ ಸಮವಸ್ತ್ರ ತೊಟ್ಟ ಸೈನಿಕರೂ ಹಸನ್ಮುಖರಾಗಿ ಪ್ರವಾಸಿಗರನ್ನ ಮಾತನಾಡಿಸುತ್ತಾರೆ.
Congress President Election: ಗಾಂಧಿ ಪರಿವಾರದ ನಿಷ್ಠೆಯ ಬಂಟ, ಕರ್ನಾಟಕ ದಲಿತ ಸಮುದಾಯ ಪ್ರಬಲ ನಾಯಕ, ಸಂಘಟನಾ ಚತುರ ಮಲ್ಲಿಕಾರ್ಜುನ ಖರ್ಗೆ AICC ಅಧ್ಯಕ್ಷ ಪದವಿಗೇರುವ ಕಾಲ ಸನ್ನಿಹಿತವಾಗಿದೆ Oct 1, 2022, 10:56 PM IST ನವದೆಹಲಿ (ಅ. 01): ಗಾಂಧಿ ಪರಿವಾರದ ನಿಷ್ಠೆಯ ಬಂಟ, ಕರ್ನಾಟಕ ದಲಿತ ಸಮುದಾಯ ಪ್ರಬಲ ನಾಯಕ, ಸಂಘಟನಾ ಚತುರ ಮಲ್ಲಿಕಾರ್ಜುನ ಖರ್ಗೆ ( Mallikarjun Kharge) AICC ಅಧ್ಯಕ್ಷ ಪದವಿಗೇರುವ ಕಾಲ ಸನ್ನಿಹಿತವಾಗಿದೆ. 2023ರ ಚುನಾವಣೆ ಮತ್ತು ಖರ್ಗೆಯವರಲ್ಲಿರುವ ಎಲ್ಲರನ್ನೂ ಒಳಗೊಳ್ಳುವ ಮನೋಭಾವಕ್ಕೆ ಮೇಡಂ ಸೋನಿಯಾ (Sonia Gandhi) ಮಣೆ ಹಾಕಿದ್ದು, ಅಕ್ಟೋಬರ್ 19ರಂದು ಹೊರ ಬೀಳಲಿರುವ ಫಲಿತಾಂಶ ಬಹುತೇಕ ಖರ್ಗೆ ಪರವೇ ಇರಲಿದೆ. ಇನ್ನು, G-23 ಬಂಡಾಯಗಾರರ ಗುಂಪಿನಿಂದಲೂ ಖರ್ಗೆಗೆ ಬೆಂಬಲ ಸಿಕ್ಕಿದ್ದು, ತರೂರ್ ಸುಲಭದ ತುತ್ತಾಗಲಿದ್ದಾರೆ. ಕನ್ನಡಿಗ ಖರ್ಗೆ AICC ಅಧ್ಯಕ್ಷ ಪದವಿಗೇರುತ್ತಿದ್ದಂತೆ ರಾಜ್ಯ ರಾಜಕಾರಣದ (Karnataka politics) ಮೇಲೂ ಪರಿಣಾಮ ಬೀರಲಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಣ ಬಡಿದಾಟದಿಂದ ಮುರಿದ ಮನೆಯಂತಾಗಿರುವ KPCCಗೆ ತೇಪೆ ಹಚ್ತಾರಾ ಎಂಬ ನಿರೀಕ್ಷೆಗಳು ಮೂಡಿವೆ. ಸೋನಿಯಾ ಗಾಂಧಿ ಅಳೆದು ತೂಗಿ ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಪಟ್ಟ ಕಟ್ಟುತ್ತಿರುವುದು ಕರ್ನಾಟಕ ಕಾಂಗ್ರೆಸ್‌ಗೆ ವರವಾಗಲಿದೆ ಎನ್ನಲಾಗ್ತಿದೆ. ಓಬಿಸಿ ಸಿದ್ದರಾಮಯ್ಯ, ಒಕ್ಕಲಿಗ ನಾಯಕ ಡಿಕೆಶಿ ನಂತರ, ಕಾಂಗ್ರೆಸ್ ದಲಿತ ನಾಯಕ ಖರ್ಗೆಗೆ ದೊಡ್ಡ ಸ್ಥಾನ ನೀಡಿದ್ದು, ಈಗ ಮೂರು ಪ್ರಬಲ ಸಮುದಾಯದ ನಾಯಕರಿಗೆ ಸ್ಥಾನ ನೀಡಲಾಗಿದೆ. ಆದ್ರೆ ಈಗ ಕಾಂಗ್ರೆಸ್‌ನಲ್ಲಿ ಮೂರನೇ ಬಣ ಸೃಷ್ಟಿಯಾಗುವ ಆತಂಕವೂ ಎದುರಾಗಿದೆ. ಮತ್ತೊಂದು ಪವರ್ ಸೆಂಟರ್ ಮೂಲಕ ಖರ್ಗೆ, ಸಿದ್ದು-ಡಿಕೆಶಿ ಬಣ ಬಡಿದಾಟಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ. ಇದರ ಜೊತೆಗೆ 2023ರ ಟಿಕೆಟ್ ಹಂಚಿಕೆಯಲ್ಲೂ ಖರ್ಗೆ ಪ್ರಭಾವದ ಸಾಧ್ಯತೆ ಇದೆ. ಖರ್ಗೆ ಅಧ್ಯಕ್ಷರಾದ್ರೆ ರಾಜ್ಯ ಕಾಂಗ್ರೆಸ್‌ನ ಲೆಕ್ಕಾಚಾರ ಅದಲು ಬದಲಾಗಲಿದ್ದು, ದಲಿತ ವೊಟ್‌ ಬ್ಯಾಂಕ್ ಕಾಂಗ್ರೆಸ್ ಪರ ಗಟ್ಟಿಯಾಗೋ ಸಾಧ್ಯತೆ ಇದೆ News Hour: ಪೇಸಿಎಂ ಅಸ್ತ್ರಕ್ಕೆ ಬಿಜೆಪಿ ನಾಯಕರ ಜಾತಿ ಪ್ರತ್ಯಸ್ತ್ರ! ಖರ್ಗೆ AICC ಅಧ್ಯಕ್ಷ ಪದವಿಗೇರುತ್ತಿರುವುದಕ್ಕೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಖರ್ಗೆ ಮೋಸ್ಟ್ ಸೀನಿಯರ್ ಲೀಡರ್ ಆದ್ರೆ, ಇವರು ಗಾಂಧಿ ಫ್ಯಾಮಿಲಿಯ ರಬ್ಬರ್ ಸ್ಟಾಂಪ್ ಆಗೋದು ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಕಿದ್ರೆ, ಮೊದಲು ರಾಜ್ಯದಲ್ಲಿ ಒಡೆದು ಚೂರಾಗಿರುವ ಕಾಂಗ್ರೆಸ್ ಪಕ್ಷವನ್ನ ಸರಿಪಡಿಸಲಿ ಎಂದು MLC ರವಿಕುಮಾರ್ ಕಿಚಾಯಿಸಿದ್ದಾರೆ. AICC ಅಧ್ಯಕ್ಷ ಚುನಾವಣೆಗೆ 3ನೇ ಅಭ್ಯರ್ಥಿಯಾಗಿದ್ದ ತ್ರಿಪಾಠಿ ನಾಮಪತ್ರ ತಿರಸ್ಕೃತಗೊಂಡಿದ್ದು, ಚುನಾವಣಾ ಕದನದಲ್ಲಿ ಖರ್ಗೆಗೆ ಎದುರಾಳಿಯಾಗಿ ಶಶಿ ತರೂರ್ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಆಯ್ಕೆ ನಿಶ್ಚಿತವಾಗಿದ್ದು ರಾಜ್ಯಸಭೆಯ ವಿರೋಧ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Dead Sea : ಈ ಮೃತಸಮುದ್ರ ನಿಮ್ಮನ್ನು ಪುನಶ್ಚೇತನಗೊಳಿಸುತ್ತದೆ. ಸೂರ್ಯಸ್ನಾನಕ್ಕೆಂದೇ ಪ್ರವಾಸಿಗರು ಇಲ್ಲಿಗೆ ನಿಗದಿತ ದಿನಗಳಲ್ಲಿ ಭೇಟಿಕೊಡುತ್ತಾರೆ. ವಿಚಿತ್ರ ಎನ್ನಿಸುತ್ತಿದೆಯೇ? ಮೃತಸಮುದ್ರದ ಬಗ್ಗೆ? ಓದಿ... ಮೃತ ಸಮುದ್ರ TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad Sep 28, 2022 | 1:43 PM Dead Sea : ಡೆಡ್​ ಸೀ-ಮೃತಸಮುದ್ರ ಏನಿದು? ಇದು ಎಲ್ಲಿದೆ? ಹೇಗಿರುತ್ತದೆ? ಎಂಬ ಪ್ರಶ್ನೆಗಳು ನಿಮ್ಮ ಮೆದುಳಲ್ಲಿ ದಾಂಗುಡಿ ಇಡಲು ಶುರುಮಾಡಿರುತ್ತವೆ. ಈ ಡೆಡ್​ ಸೀ ಇರುವುದು ಇಸ್ರೇಲ್ ಮತ್ತು ಜೋರ್ಡಾನ್​ ಮಧ್ಯದ ಪಶ್ಚಿಮ ತೀರದಲ್ಲಿ. ಇದೊಂದು ನೈಋತ್ಯ ಏಷ್ಯಾದಲ್ಲಿರುವ ಉಪ್ಪು ಸರೋವರ. ಇದನ್ನು ಸಾಲ್ಟ್​ ಸೀ ಮತ್ತು ಸೀ ಆಫ್​ ಲಾಟ್ ಎಂದೂ ಕರೆಯುತ್ತಾರೆ. ಈ ಪ್ರದೇಶದಲ್ಲಿ ಜಲಮೂಲವು ಕಡಿಮೆ ಮಟ್ಟದಲ್ಲಿರುತ್ತದೆ. ಹಾಗೆಯೇ ಈ ಭೂಪ್ರದೇಶ ಕಡಿಮೆ ಎತ್ತರದಲ್ಲಿರುತ್ತದೆ. ಡೆಡ್​ಸೀ ನೀರು ಸಮುದ್ರದ ನೀರಿಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ಉಪ್ಪಿನಿಂದ ಕೂಡಿರುತ್ತದೆ. ಯಾಕೆ ಹೀಗೆ, ಇದು ಹೀಗಿರಲು ಕಾರಣವೇನು? ಹಿಂದೆ ಈ ಉಪ್ಪುನೀರಿನ ಸರೋವರವು ಮೆಡಿಟರೇನಿಯನ್ ಸಮುದ್ರದೊಂದಿಗೆ ಸಂಪರ್ಕ ಹೊಂದಿತ್ತು. ಆಫ್ರಿಕ ಮತ್ತು ಅರೇಬಿಯನ್ ಟೆಕ್ಟೋನಿಕ್ ಶಿಲಾಪದರಗಳು ಆಚೀಚೆ ಸರಿಯುವ ಘರ್ಷಣೆಯಲ್ಲಿ ಉಪ್ಪುನೀರಿನ ಸರೋವರಕ್ಕೆ ಮೆಡಿಟರೇನಿಯನ್ ಸಮುದ್ರದ ಸಂಪರ್ಕ ತಪ್ಪಿಹೋಯಿತು. ಹೀಗಾಗಿ ಇದು ನೆಲದ ಮಧ್ಯೆ ನಿಂತ ನೀರಿನ ನೆಲೆಯಾಯಿತು. ಸುತ್ತಲಿನ ಭೂಪ್ರದೇಶದಿಂದ ತಾಜಾ ಸಿಹಿ ನೀರು ಈ ಸರೋವರಕ್ಕೆ ಹರಿದುಬರುತ್ತದೆ. ಆದರೆ ಇಲ್ಲಿಗೆ ಬಂದ ನೀರು ಬೇರೆಲ್ಲಿಗೂ ಹರಿದು ಹೋಗಲು ಅವಕಾಶವಿಲ್ಲ. ಮರಳುಗಾಡಿನಲ್ಲಿ ಆವಿಯಾಗುವ ನೀರು ಉಪ್ಪಿನ ಅಂಶವನ್ನು ಇದ್ದಲ್ಲೇ ಉಳಿಸುವುದರಿಂದ ಮೃತ ಸಮುದ್ರದ ನೀರಿನ ಅಂಶ ಹೆಚ್ಚಾಗಿದೆ. ಲವಣಾಂಶ ಹೆಚ್ಚಾಗಿರುವುದರಿಂದ ಜೀವಿಗಳ ಉಳಿವಿಗೆ ವ್ಯತಿರಿಕ್ತ ಪರಿಸರ ನಿರ್ಮಾಣವಾಗಿದೆ. ಡೆಡ್​ಸೀ ನಿಜವಾಗಲೂ ಮೃತಸಮುದ್ರವೆ? ಇದಕ್ಕೆ ಉತ್ತರ ಹೌದು! ಸಮುದ್ರ ಮಟ್ಟಕ್ಕಿಂತ 1412 ಅಡಿಗಳಷ್ಟು ಕೆಳಗಿರುವ ಕೋಬಾಲ್ಟ್-ನೀಲಿ ನೀರಿನಿಂದ ಡೆಡ್ ಸೀ ಮತ್ತು ಅದರ ಸುತ್ತಮುತ್ತಲೂ ಇರುವ ಪಕ್ಷಿ, ಮೀನು ಅಥವಾ ಸಸ್ಯಗಳು ಏನೊಂದೂ ಇಲ್ಲಿ ಕಂಡುಬರಲಾರವು. ಸ್ಫಟಿಕದಂತಹ ಸೋಡಿಯಂ ಕ್ಲೋರೈಡ್​ನ ಬಂಡೆಗಳು ಮತ್ತು ಮರಳು ಈ ನೀರಿನಂಚಿನಲ್ಲಿ ಹೊಳೆಯುತ್ತಿರುತ್ತವೆ. ಈ ಹಂತದಲ್ಲಿರುವಾಗಲೇ ಜುಡಿಯಾ ಪರ್ವತ ಮತ್ತು ಜೋರ್ಡಾನ್ ಪರ್ವತಗಳ ಮಧ್ಯೆ ಆನಂದದಾಯಕ ಕ್ಷಣಗಳನ್ನು ಕಳೆಯಲು ಪ್ರವಾಸಿಗರು ಇಲ್ಲಿ ಬರುತ್ತಾರೆ. ಸೂರ್ಯಸ್ನಾನಕ್ಕೆಂದೇ ಪ್ರವಾಸಿಗರು ಇಲ್ಲಿಗೆ ಭೇಟಿಕೊಡುತ್ತಾರೆ. ಮೊದಲು ಈ ಡೆಡ್​ಸೀಯ ನೀರಿನಲ್ಲಿ ತೇಲುತ್ತಾರೆ. ಜೊತೆಗೆ ಇಲ್ಲಿರುವ ಮಣ್ಣಿನೊಳಗೆ ದೇಹವನ್ನು ಹುಗಿದುಕೊಳ್ಳುತ್ತಾರೆ. ಈ ಪ್ರಕ್ರಿಯೆಯಿಂದ ದೇಹವು ಹೈಲುರಾನಿಕ್ ಆಮ್ಲ ಮತ್ತು ಇತರ ಖನಿಜಗಳನ್ನು ಹೀರಿಕೊಳ್ಳುತ್ತದೆ ಇನ್ನು ಈ ಡೆಡ್​ಸೀ ತೀರಗಳಲ್ಲಿ ಯಾವುದೇ ದೋಣಿಗಳು ಲಭ್ಯವಿರುವುದಿಲ್ಲ. ಏಕೆಂದರೆ ಇಲ್ಲಿ ಅಲೆಗಳೇಳುವಷ್ಟು ರಭಸದ ಹರಿವು ಇರುವುದಿಲ್ಲವೆಂದ ಮೇಲೆ ದೋಣಿ? ಹಾಗಾಗಿ ಇಲ್ಲಿ ಸದಾ ನಿಶ್ಯಬ್ದ. ಈ ಪರಿಸರವು ಯುಟೋಪಿಯನ್​ ಗ್ರಹದ ಯಾವುದೋ ಒಂದು ತಾಣದಂತೆ ಕಾಣುತ್ತದೆ.
Kannada News » Videos » Members of a Maratha Association waylay NWKRTC bus at Aurangabad district and write Marathi slogans on it video story in Kannada ನಿಪ್ಪಾಣಿ ಡಿಪೋಗೆ ಸೇರಿದ ಬಸ್ಸನ್ನು ಔರಂಗಾಬಾದ್ ನಲ್ಲಿ ಅಡ್ಡಗಟ್ಟಿ ಮರಾಠಿಗರ ಪುಂಡಾಟಿಕೆ ನಿಪ್ಪಾಣಿ ಡಿಪೋಗೆ ಸೇರಿದ ಬಸ್ಸೊಂದನ್ನು ಗ್ರಾಮದಲ್ಲಿ ಅಡ್ಡಗಟ್ಟಿ ವಾಹನದ ಮೇಲೆ ಜೈ ಮಹಾರಾಷ್ಟ್ರ ಅಂತೆಲ್ಲ ಕಪ್ಪು ಮಸಿಯಿಂದ ಬರೆದಿದ್ದಾರೆ. TV9kannada Web Team | Edited By: Arun Belly Nov 25, 2022 | 10:57 AM ಮರಾಠಿಗರ ಪುಂಡಾಟಿಕೆ ದಿನಗಳೆದಂತೆ ಹೆಚ್ಚುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಅದನ್ನು ನಾವು ಪದೇಪದೆ ನೋಡುತ್ತಿರುತ್ತೇವೆ. ಇವತ್ತು ಮಹಾರಾಷ್ಟ್ರ ಔರಂಗಾಬಾದ್ (Aurangabad) ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಅಖಿಲ ಭಾರತ ಮರಾಠಾ ಸಂಘದ ಕಾರ್ಯಕರ್ತರು ಪ್ರದರ್ಶಿಸಿರುವ ಪುಂಡಾಟಿಕೆ ಮತ್ತು ಬಾಲಿಷತನವನನ್ನು ಒಮ್ಮೆ ಗಮನಿಸಿ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (NWKRTC) ನಿಪ್ಪಾಣಿ ಡಿಪೋಗೆ ಸೇರಿದ ಬಸ್ಸೊಂದನ್ನು ಗ್ರಾಮದಲ್ಲಿ ಅಡ್ಡಗಟ್ಟಿ ವಾಹನದ ಮೇಲೆ ಜೈ ಮಹಾರಾಷ್ಟ್ರ ಅಂತೆಲ್ಲ ಕಪ್ಪು ಮಸಿಯಿಂದ ಬರೆದಿದ್ದಾರೆ.
'Rangitaranga' fame Nirup Bhandari's new film 'Rajaratha' is all set to be released on the 25th of this month. The team which is in the last leg of post-production is gearing up for release on 25th. One of the highlights of the film is, many well known technicians across India has worked for the film. Particularly, well known art director Rajath Poddar who has worked for films like 'Jagga Jasoos', 'Barfie' and othes has done art direction for this film. Apart from that choreographers Johnny Master and Bosco-Caesar has choreographed for this film. Apart from that, Shivakumar who has done the color grading for films like 'Bahubali - The Beginning', 'Bahubali - The Conclusion' has worked for this film. 'Rajaratha' stars Nirup Bhandari and Avanthika Shetty in lead roles. One of the highlights of the film is, well known Kollywood actor Arya who is known for his performance in 'Naan Kaduval' has made his debut in Kannada through 'Rajaratha'. Shruthi Hariharan also plays a prominent role in the film. Ajaneesh Lokanath has also composed five songs for the film. RJ Rapid Rashmi Apologises Radio Jockey Rapid Rashmi on Wednesday apologized in front of Karnataka Film Chamber of Commerce president Sa Ra Govindu for provoking Anup Bhandari and Nirup Bhandari hereby hurting the sentiments of Kannadigas. Anup Bhandari's latest film 'Rajaratha' starring his brother Nirup Bhandari was released two weeks back and before the release, the Bhandari brothers had participated in a interview with RJ Rapid Rashmi. During the interview, when asked about what will the brothers do if the audience does not watch the film, the brothers had said derogatory remarks. The interview had become viral and the brothers had apologized in social media. Sa Ra Govindu had urged the producers not to attend Rashmi's show. On Wednesday afternoon, the RJ came over to KFCC and apologized. Rapid Rashmi said she had no intention of hurting anybody's sentiments and if anybody was hurt she would apologies. Related Articles :- ಕನ್ನಡಿಗರ ಕ್ಷಮೆ ಕೇಳಿದ ರಾಜರಥ Rapid ರಶ್ಮಿ ಡ್ಯಾಶ್ ಸೃಷ್ಟಿಸಿದ ರಾಜರಥ ರಾದ್ಧಾಂತ Bhandari Brothers Apologises For Their Remarks Will 'Phantom' Title Change? Actor Sudeep recently announced that there is a major announcement coming from the team on the 21st of January. With just a day left, fans of the actor are speculating about what the mighty announcement would be? If rumours are to be believed then the title of the film is all set to be changed. The film was earlier titled as 'Phantom' with a caption Vikram Rona. With some major problems surfacing regarding the title, the makers have decided to change it to 'Vikranth Rona - The World of Phantom'. This is said to be the major announcement and in the future the film will be identified as 'Vikranth Rona - The World of Phantom' and not 'Phantom' alone. The announcement will be made on the evening of January 21st. 'Phantom' stars Sudeep, Nirup Bhandari, Neetha Ashok and others in prominent roles. The film is written and directed by Anup Bhandari, while Jack Manju has produced the film under his Shalini Arts Productions banner. ಅಬ್ಬಬ್ಬಾ..ರಾಜರಥ ಅನೂಪ್ ಟೆನ್ಷನ್ನೇ ಬೇರೆ..! ರಾಜರಥ, ರಂಗಿತರಂಗದ ನಂತರ.. ಅದೇ ಚಿತ್ರತಂಡದಿಂದ ಬರುತ್ತಿರುವ 2ನೇ ಸಿನಿಮಾ. ಚಿತ್ರದ ಟ್ರೇಲರ್ ಅದ್ಭುತವಾಗಿದೆ. ಪ್ರೇಕ್ಷಕರಿಂದಲೂ ವಂಡರ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಚಿತ್ರತಂಡದ, ಅದರಲ್ಲೂ ನಿರ್ದೇಶಕ ಅನೂಪ್ ಅವರ ಟೆನ್ಷನ್ನೇ ಬೇರೆ. ಅವರ ಈ ಟೆನ್ಷನ್‍ಗೆ ಕಾರಣ, ರಂಗಿತರಂಗ. ಸುಮಾರು 3 ವರ್ಷಗಳ ಹಿಂದೆ ತೆರೆಕಂಡಿದ್ದಾಗ, ಇಡೀ ಚಿತ್ರತಂಡವೇ ಚಿತ್ರರಂಗಕ್ಕೆ ಹೊಸದು. ಆಗ ಅವರೂ ಹತ್ತರಲ್ಲಿ ಒಬ್ಬರು. ಆದರೆ, ರಂಗಿತರಂಗದ ಮ್ಯಾಜಿಕ್, ಅವರನ್ನು ಹತ್ತರಲ್ಲಿ ಹನ್ನೊಂದಾಗಿಸಿತು. ಈಗ 2ನೇ ಸಿನಿಮಾ. ರಂಗಿತರಂಗ ಚಿತ್ರದ ಸಕ್ಸಸ್ ಆಕಸ್ಮಿಕ ಅಲ್ಲ ಅನ್ನೋದನ್ನು ಪ್ರೂವ್ ಮಾಡಬೇಕಾದ ಹೊಣೆ, ಈಗ ಅನೂಪ್ ಅವರ ಮೇಲಿದೆ. ಚಿತ್ರದ ಬಗ್ಗೆ ಅನೂಪ್ ಅವರಿಗೆ ಆತ್ಮವಿಶ್ವಾಸ ಇದೆ. ಚಿತ್ರದ ಹೀರೋ ನಿರೂಪ್ ಅವರಲ್ಲಿ ನಿಮ್ಮನ್ನು ನೀವೇ ನೋಡಿಕೊಳ್ತೀರಿ. ಆತನದ್ದು ಹೆದರುವವರನ್ನು ಹೆದರಿಸುವ, ಹೆದರಿಸುವವರ್ನು ಕಂಡರೆ ತಾನೇ ಹೆದರಿಕೊಳ್ಳುವ ಪಾತ್ರ. ಇನ್ನು ಬಸ್‍ವೊಂದು ಕಥೆ ಹೇಳುವ ಶೈಲಿಯೇ ಹೊಸದು. ಚಿತ್ರದ ಫಸ್ಟ್‍ಹಾಫ್‍ನಲ್ಲಿ ಬರುವ ದೃಶ್ಯಗಳಿಗೆ ಲಿಂಕ್ ಸಿಗುವುದು ದ್ವಿತೀಯಾರ್ಧದಲ್ಲಿ. ಚಿತ್ರದ ಚಿತ್ರೀಕರಣ ನೋಡಿದರೆ, ಅದೊಂದು ಟೂರ್‍ಗೆ ಹೋಗಿ ಬಂದ ಅನುಭವ. ವಿಭಿನ್ನವಾದ ಸಿನಿಮಾ ಇಷ್ಟವಾಗೋದು ಗ್ಯಾರಂಟಿ ಅಂತಾರೆ ಅನೂಪ್. ಪ್ರೇಕ್ಷಕರಲ್ಲೂ ಅಂಥದ್ದೇ ಕುತೂಹಲ ಹಾಗೂ ರಾಜರಥ ಟೀಂ ಚೆನ್ನಾಗಿ ಸಿನಿಮಾ ಮಾಡಿರುತ್ತೆ ಅನ್ನೋ ವಿಶ್ವಾಸ ಇದೆ. ಇನ್ನೇನು ಕೆಲವೇ ಗಂಟೆ... ರಾಜರಥದ ಮ್ಯಾಜಿಕ್ ಪ್ರೇಕ್ಷಕರ ಎದುರು ಅನಾವರಣಗೊಳ್ಳಲಿದೆ. ಅವಳ ಮದುವೆಗೆ ಒಪ್ಪಿಗೆ ಕೊಡ್ತಾನಾ ಗಂಡ..? ಆದಿಲಕ್ಷ್ಮೀ ಪುರಾಣ ಮದುವೆಯಾಗು.. ಹುಡುಗಿ ನೋಡು.. ಎನ್ನುತ್ತಿದ್ದ ತಾಯಿಗೆ ಹುಡುಗಿಯನ್ನು ನೋಡಿಕೊಂಡು ಬಂದ ಮಗ ಹೇಳ್ತಾನೆ. ``ನಾನೊಂದು ಹುಡುಗಿಯನ್ನ ಇಷ್ಟಪಟ್ಟಿದ್ದೀನಿ. ಅವಳನ್ನೇ ಮದುವೆಯಾಗ್ತೀನಿ' ತಾಯಿ ಹೇಳ್ತಾಳೆ `ಕೇಳೋಣ ಬಿಡು' ಆದರೆ ಮಗನ ಮುಂದಿನ ರಿಯಾಕ್ಷನ್ ನೋಡಿ.. ಕೇಳೋದಾದ್ರೆ, ಅವಳ ಗಂಡನ್ನೇ ಕೇಳಬೇಕು.. ಇಂತಹ ಸಣ್ಣದೊಂದು ಪಂಚ್ ಕೊಟ್ಟೇ ಟ್ರೇಲರ್ ಬಿಟ್ಟಿದ್ದಾರೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಆದಿಲಕ್ಷ್ಮೀ ಪುರಾಣದ ಟ್ರೇಲರ್‍ನ ಝಲಕ್ ಇದು. ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಅಭಿನಯದ ಈ ಸಿನಿಮಾಗೆ ಪ್ರಿಯಾ ನಿರ್ದೇಶಕಿ. 2016ರಲ್ಲಿ ಯಶ್ ಜೊತೆ ನಟಿಸಿದ್ದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ನಂತರ ರಾಧಿಕಾ ಪಂಡಿತ್ ಅವರು ನಟಿಸಿರುವ ಚಿತ್ರವಿದು. ಯಶ್ ಅವರನ್ನು ಮದುವೆಯಾದ ಮೇಲೆ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡಿರೋ ಮೊದಲ ಚಿತ್ರ. ಆಗ ಅಕ್ಕ..ಪಕ್ಕ.. ಈಗ ಗಂಡಕ.. ರವಿಶಂಕರ್ ಗಾಯಕ..! ಅಕ್ಕ ಪಕ್ಕ ಸಿಕ್ಕಿ ನಕ್ಕ.. ಹಕ್ಕಿ ಪುಕ್ಕ ಹೆಕ್ಕಿ ಮುಕ್ಕ.. ರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ.. ಒಂದ್ಸಲ ಈ ಹಾಡನ್ನು ಯಾವುದೇ ಗ್ಯಾಪ್ ಇಲ್ಲದೆ, ತಡವರಿಸದ ಹೇಳಿ ಬಿಡಿ.. ಕಷ್ಟವಾಗುತ್ತೆ ಅಲ್ವಾ..? ರಂಗಿತರಂಗದಲ್ಲಿ ಇಂಥಾದ್ದೊಂದು ಟಂಗ್ ಟ್ವಿಸ್ಟರ್ ಹಾಡನ್ನಿಟ್ಟು ಪ್ರೇಕ್ಷಕರನ್ನು ಆಕರ್ಷಿಸಿದ್ದ ಅನೂಪ್ ಭಂಡಾರಿ, ರಾಜರಥದಲ್ಲೂ ಅಂಥದ್ದೆ ಮ್ಯಾಜಿಕ್ ಮಾಡೋಕೆ ಹೊರಟಿದ್ದಾರೆ. ಗಂಡಕ ಹಾಡಿನ ಮೂಲಕ ಅಂಥದ್ದೇ ಮ್ಯಾಜಿಕ್ ಸೃಷ್ಟಿಸಿದ್ದಾರೆ. ಅಂದಹಾಗೆ ನಿಮಗೆ ಗೊತ್ತಿರಲಿ.. ಗಂಡಕ ಎಂದರೆ ಬೇರೇನೋ ಅಲ್ಲ. ಅದು ಘೇಂಡಾಮೃಗಕ್ಕೆ ಕನ್ನಡದಲ್ಲಿಯೇ ಇರುವ ಪದ. ಹೀಗೆ ಮರೆಯಾಗುತ್ತಿರುವ ಕನ್ನಡದ ಪದವನ್ನು ಹಾಡಿನಲ್ಲಿ ತಂದು ಹೇಳುವ ಸಾಹಸ ಮಾಡಿದೆ ರಾಜರಥ ಚಿತ್ರತಂಡ. ಪ್ರಾಸಕ್ಕೇ ಹೆಚ್ಚು ಒತ್ತು ನೀಡಿರುವ ಹಾಡಿನಲ್ಲಿ ಇಂತಹ ಅಪರೂಪದ ಪದಗಳು ಬರುತ್ತವೆ. ಕನ್ನಡ ಎಷ್ಟು ಸೊಗಸಾಗಿದೆ ಎಂದು ಥ್ರಿಲ್ಲಾಗುವಂತಿದೆ ಎನ್ನುತ್ತಿದ್ದಾರೆ ಅನೂಪ್. ಈ ಹಾಡು ಹಾಡಿರುವುದು ರವಿಶಂಕರ್. ಬಹುತೇಕರಿಗೆ ಗೊತ್ತಿರೋ ಹಾಗೆ ರವಿಶಂಕರ್‍ಗೆ ಶಾಸ್ತ್ರೀಯ ಸಂಗೀತದ ಸ್ಪರ್ಶವಿದೆ. ಹೀಗಾಗಿಯೇ ಈ ಹಾಡನ್ನು ಸರಾಗವಾಗಿ ಹಾಡಲು ಸಾಧ್ಯವಾಗಿದೆ. ಸ್ವತಃ ರವಿಶಂಕರ್ ಥ್ರಿಲ್ಲಾಗಿದ್ದಾರೆ. ಆ ಥ್ರಿಲ್ ಪ್ರೇಕ್ಷಕರಿಗೆ ಮಾರ್ಚ್ 23ನೇ ತಾರೀಕು ಸಿಗಲಿದೆ. ಅದು ರಾಜರಥ ಚಿತ್ರಮಂದಿರಕ್ಕೆ ಬರುವ ದಿನ. ಏಪ್ರಿಲ್ 7ರಿಂದ ಯೂರೋಪ್‍ನಲ್ಲಿ ರಾಜರಥ ರಾಜರಥ. ಅನೂಪ್ ಭಂಡಾರಿ ನಿರ್ದೇಶನದ, ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ ಅಭಿನಯದ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಮರ್ಶೆಗಳು ವಿಭಿನ್ನವಾಗಿದ್ದರೂ, ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಅನೂಪ್. ಚಿತ್ರ ಇದೇ ಏಪ್ರಿಲ್ 7ನೇ ತಾರೀಕು ಯೂರೋಪ್‍ನಲ್ಲಿ ಬಿಡುಗಡೆಯಾಗುತ್ತಿದೆ. ಅಮೆರಿಕದಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಗಿಟ್ಟಿಸಿದೆ ರಾಜರಥ. ಇನ್ನು ಚಿತ್ರಕ್ಕೆ ಇನ್ನಷ್ಟು ಪ್ರಚಾರ ಬೇಕಿದೆ ಎಂದು ನಿರ್ಧರಿಸಿರುವ ಚಿತ್ರತಂಡ, ಈ ವಾರದಿಂದಲೇ ರಥಯಾತ್ರೆ ಶುರು ಮಾಡುತ್ತಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ.. ಹೀಗೆ ಎಲ್ಲ ಕಡೆ ರಾಜರಥದ ಯಾತ್ರೆ ಶುರುವಾಗಲಿದೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಬಳಸಿರುವ ಬೈಕ್‍ನ್ನು ಅದೃಷ್ಟಶಾಲಿ ಪ್ರೇಕ್ಷಕರಿಗೆ ಉಡುಗೊರೆಯಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ನೀವು ಸಿನಿಮಾ ನೋಡಿ ಬರುವಾಗ ಚಿತ್ರದ ಟಿಕೆಟ್ ಮೇಲೆ ನಿಮ್ಮ ಹೆಸರು, ನಂಬರ್ ಬರೆದು ಚಿತ್ರತಂಡ ಇಟ್ಟಿರುವ ಬಾಕ್ಸ್‍ನಲ್ಲಿ ಹಾಕಿ ಬನ್ನಿ. ಅದೃಷ್ಟ ಅದ್ಭುತವಾಗಿದ್ದರೆ, ನಿಮಗೆ ಆ ಬೈಕ್ ಸಿಗುತ್ತೆ. ಕನ್ನಡದಲ್ಲಿ ಅಭಿನಯ ಖುಷಿ ತಂದಿದೆ - ಆರ್ಯ ನಾನ್ ಕಡುವಳ್ ಖ್ಯಾತಿಯ ಆರ್ಯ, ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅವರೀಗ ಕನ್ನಡದ ರಾಜರಥ ಚಿತ್ರದಲ್ಲಿ ನಟಿಸಿದ್ದಾರೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರದಲ್ಲಿ ಆರ್ಯ ಅವರಿಗೆ ಪುಟ್ಟ ಆದರೆ, ಪ್ರಮುಖವಾದ ಪಾತ್ರವಿದೆ. ನಿರ್ದೇಶಕರು ಆರ್ಯ ಅವರಿಗೆ ಫೋನ್ ಮಾಡಿ ಚಿತ್ರದ ಕಥೆಯ ಒನ್ ಲೈನ್ ಹಾಗೂ ಅವರ ಪಾತ್ರದ ಬಗ್ಗೆ ಮರುಮಾತನಾಡದೆ ಒಪ್ಪಿಕೊಂಡರಂತೆ ಆರ್ಯ. ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಿದೆ. ಭಂಡಾರಿ ಕಥೆ ಹೇಳಿದ ರೀತಿ ಹಾಗೂ ಮೇಕಿಂಗ್ ತುಂಬಾನೇ ಹಿಡಿಸಿದೆ ಎಂದಿದ್ದಾರೆ ಆರ್ಯ. ಒಂದು ವಿಭಿನ್ನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಕನ್ನಡಿಗರು ಇಷ್ಟಪಡುತ್ತಾರೆ ಎಂಬ ಭರವಸೆಯಿದೆ ಎಂದಿದ್ದಾರೆ ಆರ್ಯ. Related Articles :- Kollywood Actor Arya Acts In Rajaratha ಕನ್ನಡಿಗರ ಕ್ಷಮೆ ಕೇಳಿದ ರಾಜರಥ ಭಂಡಾರಿ ಬ್ರದೡೞ ತಂಡದ ರಾಜರಥ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ವಿವಾದಾತ್ಮಕವಾಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಕನ್ನಡಗಿರ ಕ್ಷಮೆ ಕೇಳಿದೆ. ಆರ್‌.ಜೆ ರಶ್ಮಿ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ 'ರಾಜರಥ ನೋಡಿಲ್ಲ ಅಂದ್ರೆ ಅಂತಹ ಆ ಪ್ರೇಕ್ಷಕನನ್ನು ಡ್ಯಾಶ್ ಅನ್ನುತ್ತೀರಾ ಎಂಬ ಪ್ರಶ್ನೆಗೆ , ನಿರ್ದೇಶಕ ಅನೂಪ್‌ ಮತ್ತು ನಟ ನಿರೂಪ್‌ ಇಬ್ಬರು 'ಕಚಡ ನನ್‌ ಮಗ', 'ಕಚಡ ಲೋಫರ್‌ ನನ್‌ ಮಕ್ಳು' ಅಂತ ಹೇಳುತ್ತಾರೆ. ಆ ಹೇಳಿಕೆಯಿರುವ ವಿಡಿಯೋ ವೈರಲ್ ಆಗಿತ್ತು. ಕನ್ನಡಿಗರು ರಾಜರಥ ತಂಡದವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಕುರಿತು ಚಿತ್ರತಂಡ ಈಗ ಕನ್ನಡಿಗರ ಕ್ಷಮೆ ಕೇಳಿದೆ. 'ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರ ಅದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತಲ್ಲ' ಎಂದಿದ್ದಾರೆ ಅನೂಪ್ ಭಂಡಾರಿ. ನಿರೂಪ್ ಭಂಡಾರಿ ಸಹ ಈ ಕುರಿತು ಕ್ಷಮೆಯಾಚಿಸಿದ್ದಾರೆ. ಫೇಸ್‌ಬುಕ್ ಲೈವ್ ಶೋನಲ್ಲಿ ನಮ್ಮ ಕಾಮೆಂಟ್‌ನಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ. ಇದು ಉದ್ದೇಶಪೂರ್ವಕ ಅಲ್ಲ. ಪ್ರೇಕ್ಷಕರ ಬಗ್ಗೆ ನಮಗೆ ತುಂಬಾ ಕಾಳಜಿ ಇದೆ. ಎಲ್ಲಾ ಸಂದರ್ಶನಗಳಲ್ಲೂ ನಾವು ಇದನ್ನು ಒತ್ತಿ ಹೇಳಿದ್ದೇವೆ. ಇಂದು ನಾವು ಈ ಸ್ಥಿತಿಯಲ್ಲಿದ್ದೇವೆ ಎಂದರೆ ಅದಕ್ಕೆ ಪ್ರೇಕ್ಷಕರೇ ಕಾರಣ ಎಂದಿದ್ದಾರೆ. ಬಹುಶಃ ಪೂರ್ತಿ ಸಂದರ್ಶನವನ್ನು ನೋಡಿದ್ದರೆ, ಇದೊಂದು ಹಾಸ್ಯಮಯ ಎಂದು ಅರಿವಾಗುತ್ತಿತ್ತೇನೋ.. ಆದರೆ, ಸಂದರ್ಶನದ ಅಷ್ಟು ಭಾಗವನ್ನಷ್ಟೇ ಎಡಿಟ್ ಮಾಡಿ, ಅದು ವೈರಲ್ ಆದ ಕಾರಣ, ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ. Related Articles :- Rapid ರಶ್ಮಿ ಡ್ಯಾಶ್ ಸೃಷ್ಟಿಸಿದ ರಾಜರಥ ರಾದ್ಧಾಂತ Bhandari Brothers Apologises For Their Remarks ಕಮಲ್‍ಹಾಸನ್‍ರ ಮುಂದೆ ಬನ್ನಿ.. ರಾಜರಥದಲ್ಲಿ.. ಬೆಂಕಿಯಲ್ಲಿ ಅರಳಿದ ಹೂವು, 1983ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಕೆ. ಬಾಲಚಂದರ್ ನಿರ್ದೇಶನದ ಆ ಸಿನಿಮಾದಲ್ಲಿ ಸುಹಾಸಿನಿಯೇ ನಾಯಕಿ ಹಾಗೂ ನಾಯಕ. ಆ ಚಿತ್ರದಲ್ಲಿ ಸುಹಾಸಿನಿ ಅವರ ಸೋದರ ಕಮಲ್‍ಹಾಸನ್ ಒಂದು ಹಾಡಿನಲ್ಲಿ ಬಂದು ಹೋಗ್ತಾರೆ. ಬಸ್ ಕಂಡಕ್ಟರ್ ಆಗಿ ಬರೋ ಕಮಲ್‍ಹಾಸನ್ ಹಾಡುವ ಮುಂದೆ ಬನ್ನಿ.. ಮುಂದೆ ಬನ್ನಿ.. ಹಾಡು ಇಂದಿಗೂ ಜನಪ್ರಿಯ. ಆ ಹಾಡು ಮರುಸೃಷ್ಟಿಯಾಗಿದೆ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ರಾಜರಥದಲ್ಲಿ ಈ ಹಾಡನ್ನು ಮರುಸೃಷ್ಟಿ ಮಾಡಲಾಗಿದೆ. ಈ ಹಾಡಿಗೆ ಧ್ವನಿ ನೀಡಿರುವುದು ಸ್ವತಃ ಅನೂಪ್ ಭಂಡಾರಿ. ಆ ಹಾಡನ್ನು ಬಿಡುಗಡೆ ಮಾಡಿರುವುದು ರಾಕಿಂಗ್ ಸ್ಟಾರ್ ಯಶ್. ಆ ಹಾಡಿನಲ್ಲಿ ಬರುವ ``ಕನ್ನಡ ನಾಡಲಿ ನೀನು ಕನ್ನಡ ಮಾತಾಡು.. ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು'' ಲೈನ್ ತುಂಬಾ ಇಷ್ಟ ಎಂದಿರುವ ರಾಕಿಂಗ್ ಸ್ಟಾರ್‍ಗೆ ತುಂಬಾ ಇಷ್ಟವಾಗಿದ್ದು ಚಿತ್ರದ ಹಾಡಿನ ಮೇಕಿಂಗ್. ಚಿತ್ರದ ಮೇಕಿಂಗ್ ಇಂಟರ್‍ನ್ಯಾಷನಲ್ ಲೆವೆಲ್ಲಿನಲ್ಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಯಶ್. ಇಷ್ಟೆಲ್ಲ ಇರುವ ಇರುವ ಹಿಟ್ ಆಗದೇ ಇರುತ್ತಾ..? ಸೂಪರ್ ಹಿಟ್ ಆಗಿಬಿಟ್ಟಿದೆ. ಆನ್‍ಲೈನ್‍ನಲ್ಲಿ ಟ್ರೆಂಡ್ ಕೂಡಾ ಆಗಿದೆ. ಅಷ್ಟೇ ಅಲ್ಲ, ಈ ಹಾಡು ಚಿತ್ರದ ಕುರಿತ ನಿರೀಕ್ಷೆಗಳನ್ನೂ ಹೆಚ್ಚಿಸಿದೆ. ಮೂಲ ಚಿತ್ರದಲ್ಲಿ ಅಂದರೆ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಸಂಗೀತ ನೀಡಿದ್ದವರು ಎಲ್.ವೈದ್ಯನಾಥನ್. ಸಾಹಿತ್ಯ ಒದಗಿಸಿದ್ದವರು ಚಿ.ಉದಯಶಂಕರ್. ರಾಜರಥ ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಭಂಡಾರಿ. ಗಾಯಕರೂ ಅವರೇ. ಆ ಚಿತ್ರದ ಈ ಹಾಡಿನ ಸೃಷ್ಟಿಕರ್ತರಿಗೆ ಕ್ರೆಡಿಟ್‍ನ್ನೂ ನೀಡಿರುವ ರಾಜರಥ ಟೀಂ, ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧವಾಗಿದೆ. ಗುಮ್ಮ ಬಂದೇಬಿಟ್ಟ.. ವಿಕ್ರಾಂತ್ ರೋಣ ಚಿತ್ರದ ನಾಲ್ಕನೇ ಹಾಡು ಇದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಚಿತ್ರದ ಮೊದಲ ಕುತೂಹಲವೇ ಗುಮ್ಮ. ಏನಿದು ಗುಮ್ಮ ಎಂಬ ಕುತೂಹಲ ಹುಟ್ಟಿಸಿಯೇ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದ ಅನೂಪ್ ಭಂಡಾರಿ ಈಗ ಚಿತ್ರದ 4ನೇ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದ್ದಾರೆ. ದ ಡೆವಿಲ್ಸ್ ಫ್ಯುರಿ ಹೆಸರಿನ ಈ ಹಾಡು ವಿಕ್ರಾಂತ್ ರೋಣ ಚಿತ್ರದ ಥೀಮ್ ಸಾಂಗ್ ಕೂಡಾ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಸಾಹಿತ್ಯ ನಿರ್ದೇಶಕ ಅನೂಪ್ ಭಂಡಾರಿ ಅವರದ್ದೇ. ಅನೂಪ್, ಅಜನೀಶ್ ಕೂಡಾ ಹಾಡುಗಾರರ ಲಿಸ್ಟಿನಲ್ಲಿದ್ದು, ದೀಪಕ್ ಬ್ಲೂ ಮತ್ತು ಹರ್ಷಿಕಾ ವೇದಾಂತ್ ಹಾಡಿಗೆ ದನಿಗೂಡಿಸಿದ್ದಾರೆ. ಈಗಾಗಲೇ ರಾರಾ ರಕ್ಕಮ್ಮ, ರಾಜಕುಮಾರಿ, ಹೇ ಫಕೀರ ಹಾಡುಗಳು ಕ್ರೇಜ್ ಹುಟ್ಟುಹಾಕಿವೆ. ಈಗ ಗುಮ್ಮನ ಟೈಮು. ರಂಗಿತರಂಗ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಬಂಡವಾಳ ಹೂಡಿರೋದು ಜಾಕ್ ಮಂಜು. ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿರೋ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಇನ್ನೊಂದೇ ಒಂದು ವಾರ.. ಗುಮ್ಮನ್ನ ನೋಡೇಬಿಡೋಣ... ಗೊತ್ತಿಲ್ಲದೆ ಆದ ತಪ್ಪಿಗೆ ಕ್ಷಮೆ ಇರಲಿ - ಆವಂತಿಕಾ ಶೆಟ್ಟಿ ರಾಜರಥ ಚಿತ್ರದ ನಾಯಕಿ ಆವಂತಿಕಾ ಶೆಟ್ಟಿ ರಾಜರಥ ಚಿತ್ರದ `ಕ.....ಕ್ಳು' ವಿವಾದದ ಬಗ್ಗೆ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ನನಗೆ ಅದು ಅಷ್ಟು ಕೆಟ್ಟ ಪದ ಎಂಬುದು ಗೊತ್ತಿರಲಿಲ್ಲ. ನಾನು ಇನ್ನೂ ಈಗ ಕನ್ನಡ ಕಲಿಯುತ್ತಿದ್ದೇನೆ. ಗೊತ್ತಿಲ್ಲದೇ ಆದ ತಪ್ಪಿಗೆ ಕ್ಷಮಿಸಿಬಿಡಿ ಎಂದು ಕೇಳಿಕೊಂಡಿದ್ದಾರೆ. ಆವಂತಿಕಾ ಶೆಟ್ಟಿ ಮೂಲತಃ ಕನ್ನಡದವರೇ ಆದರೂ, ಹುಟ್ಟಿ ಬೆಳೆದಿರುವುದು ಮುಂಬೈನಲ್ಲಿ. ಹೀಗಾಗಿ ಈಗ ಕನ್ನಡ ಕಲಿಯುತ್ತಿರುವ ಆವಂತಿಕಾ ಶೆಟ್ಟಿ, `ಕ.....ಕ್ಳು' ಡೈಲಾಗ್‍ಗೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಈ ರೀತಿಯ ವಿವಾದಗಳು ಆಗುವುದಿಲ್ಲ. ಗೊತ್ತಿಲ್ಲದೆ ಆದ ತಪ್ಪನ್ನು ಮನ್ನಿಸಿಬಿಡಿ. ಇದೀಗ ತಾನೆ ಬೆಳೆಯುತ್ತಿರುವ ನಮ್ಮನ್ನು ಹರಸಿ ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ. ಚಡ್ಡಿ ತೊಟ್ಟ ನಾಯಕನ ಕಟೌಟ್ - ರಾಜರಥ ಸ್ಪೆಷಲ್ ಹೊಸ ಸಿನಿಮಾವೊಂದು ರಿಲೀಸ್ ಆಗುವಾಗ ಚಿತ್ರದ ಹೀರೋ ಕಟೌಟ್ ನಿಲ್ಲಿಸೋದು ಸಾಮಾನ್ಯ. ಕೆಲವೊಮ್ಮೆ ನಿರ್ದೇಶಕರ ಕಟೌಟ್‍ನ್ನೂ ಹಾಕ್ತಾರೆ. ನಾಯಕರ ಕಟೌಟ್‍ನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಮಾಡಿಸಿ, ಎತ್ತರದ ಕಟೌಟ್ ಮಾಡಿಸಿ ಪ್ರಮುಖ ಥಿಯೇಟರ್‍ಗಳ ಎದುರು ನಿಲ್ಲಿಸೊದು ಹೊಸದನೇನಲ್ಲ. ಆದರೆ, ಇಲ್ಲಿಯೂ ರಾಜರಥ ಚಿತ್ರತಂಡ ವಿಭಿನ್ನತೆ ಮೆರೆದಿದೆ. ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿ ಕಟೌಟ್‍ನ್ನು ಥಿಯೇಟರ್‍ಗಳ ಮುಂದೆ ಹಾಕಲಾಗಿದೆ. ಆದರೆ, ಹೀರೋ ಇರೋದು ಸೂಪರ್‍ಮ್ಯಾನ್ ಶೈಲಿಯಲ್ಲಿ. ಆದರೆ, ಚಡ್ಡಿಯಲ್ಲಿ. ಬಹುಶಃ, ಚಡ್ಡಿಯಲ್ಲಿ ನಿಂತ ನಾಯಕನ ಕಟೌಟ್ ಹಾಕಿರೋದು ಇದೇ ಮೊದಲಿರಬೇಕು. ಕಟೌಟ್‍ನಲ್ಲಿ ಪುನೀತ್ ಅವರೂ ಇದ್ದಾರೆ. ಅಂದಹಾಗೆ ಚಿತ್ರದಲ್ಲಿ ರಾಜರಥ ಎಂದರೆ, ಪುನೀತ್ ಅವರೇ. ಈಗಾಗಲೇ ಟಿಕೆಟ್ ಬುಕಿಂಗ್ ಶುರುವಾಗಿದ್ದು, ರಾಜರಥದ ಜೋರು ಕಾಣುತ್ತಿದೆ. ಜಾಕ್ ಮಂಜುಗೆ `ಜಾಕ್'ಪಾಟ್ : ವಿಕ್ರಾಂತ್ ರೋಣ ಫಸ್ಟ್ ಡೇ ಕಲೆಕ್ಷನ್ ಎಷ್ಟು? ಗರಗರಗರಗರ ಗಗ್ಗರ ಜರ್ಬ.. ಪಿರನಲ್ಕುರಿ ನೆತ್ತರ ಪರ್ಬ.. ರಾ.. ರಾ.. ರಕ್ಕಮ್ಮ.. ರಾ.. ರಾ.. ರಕ್ಕಮ್ಮ.. ಯಕ್ಕಸಕ್ಕ ಯಕ್ಕಸಕ್ಕ.. ಗುಮ್ಮ ಬಂದ ಗುಮ್ಮ.. ಹೀಗೆ ಹಲವು ಸೆನ್ಸೇಷನ್ ಹುಟ್ಟುಹಾಕಿದ್ದ ವಿಕ್ರಾಂತ್ ರೋಣ ಸುದೀಪ್ ಅವರ ಇದುವರೆಗಿನ ಎಲ್ಲ ಚಿತ್ರಗಳ ದಾಖಲೆಯನ್ನೂ ಮೀರಿ ಅದ್ಧೂರಿ ಬಿಡುಗಡೆ ಕಂಡಿತ್ತು. ಮೊದಲ ದಿನ ನಡೆದದ್ದು ಒಂಭತ್ತೂವರೆ ಸಾವಿರಕ್ಕೂ ಹೆಚ್ಚು ಶೋಗಳು. ರಾಜ್ಯದಲ್ಲಿಯೇ ಎರಡೂವರೆ ಸಾವಿರ ಶೋಗಳು. ಅದ್ಧೂರಿ.. ಅಬ್ಬರ.. ಊರ್ವಶಿ ಚಿತ್ರಮಂದಿರಕ್ಕೆ ಖುದ್ದು ಪತ್ನಿ ಪ್ರಿಯಾ ಸುದೀಪ್ ಮತ್ತು ಕಿಚ್ಚನ ರಾಜಕುಮಾರಿ ಮಗಳು ಸಾನ್ವಿ ಸುದೀಪ್ ಬಂದಿದ್ದರು. ಪ್ರಿಯಾ ಅವರೊಂದಿಗೆ ನಿರೂಪ್ ಭಂಡಾರಿ ಕೂಡಾ ಚಿತ್ರಮಂದಿರದಲ್ಲೇ ಕೂತು ಸಿನಿಮಾ ನೋಡಿದರು. ಸುದೀಪ್ ಅವರ ಆರೋಗ್ಯ ಕೈಕೊಟ್ಟಿರುವ ಕಾರಣ ಸಾನ್ವಿ ಮಧ್ಯಾಹ್ನದ ಶೋಗೆ ಬಂದರು. ಊರ್ವಶಿ ಚಿತ್ರಮಂದಿರವೊಂದರ ಕಲೆಕ್ಷನ್ನೇ 25 ಲಕ್ಷಕ್ಕೂ ಹೆಚ್ಚು ಎನ್ನಲಾಗುತ್ತಿದೆ. ಎಲ್ಲ ಶೋಗಳೂ ಹೌಸ್‍ಫುಲ್. ಇನ್ನೊಂದು ಪ್ರಮುಖ ಚಿತ್ರಮಂದಿರ ವೀರೇಶ್‍ನಲ್ಲಿ ಎರಡು ಸ್ಕ್ರೀನ್ ಇವೆ. 2ಡಿ ಮತ್ತು 3ಡಿ ಎರಡರಲ್ಲೂ ನೋಡಬಹುದು. ಎರಡೂ ಸೇರಿ ಮೊದಲ ದಿನ ನಡೆದದ್ದು ಒಟ್ಟು 12 ಶೋಗಳು. ಎಲ್ಲ ಶೋಗಳೂ ಹೌಸ್‍ಫುಲ್. ರಾಜ್ಯದ ವಿವಿಧೆಡೆ ಕೂಡಾ ಅದ್ಭುತ ಪ್ರದರ್ಶನ ಕಂಡಿವೆ. ಎಲ್ಲೆಡೆ ಹೌಸ್‍ಫುಲ್ ಶೋಗಳು. ಇನ್ನು 2ನೇ ದಿನದ ಶೋಗಳೂ ಆಗಲೇ ಹೌಸ್‍ಫುಲ್ ಆಗುತ್ತಿವೆ. ವಿಮರ್ಶಕರಷ್ಟೇ ಅಲ್ಲ, ಚಿತ್ರ ನೋಡಿ ಬಂದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಹೊಗಳುತ್ತಿದ್ದಾರೆ. ತೆಲಂಗಾಣ, ಆಂಧ್ರದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನವೇ 55ರಿಂದ 60 ಕೋಟಿ ಕಲೆಕ್ಷನ್ ಆಗಿದೆ ಎನ್ನುವುದು ಪ್ರಾಥಮಿಕ ಮಾಹಿತಿ. ಕರ್ನಾಟಕದಲ್ಲಿ 15ರಿಂದ 20 ಕೋಟಿ ಕಲೆಕ್ಷನ್ ಎನ್ನಲಾಗಿದೆ. ಇದೆಲ್ಲದರಿಂದ ಖುಷಿಯಾಗಿರೋದು ಜಾಕ್ ಮಂಜು. ಟಿವಿ 9 ಆ್ಯಂಕರ್ ಸೀಟ್ ಟು ವಿಂಡೋ ಸೀಟ್ ಡೈರೆಕ್ಷನ್ ಹಲೋ.. ನಮಸ್ಕಾರ.. ನಾನು ನಿಮ್ಮ ಶೀತಲ್ ಶೆಟ್ಟಿ.. ಕನ್ನಡಿಗರಿಗೆ ಹೆಚ್ಚು ಹೆಚ್ಚು ಪರಿಚಯವಾಗಿದ್ದೇ ಟಿವಿ 9 ಆಂಕರ್ ಆಗಿ. ನಂತರ ಕೆರಿಯರ್ ಚೇಂಜ್ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು ಚಿತ್ರರಂಗಕ್ಕೆ ಬಂದ ಶೀತಲ್ ಶೆಟ್ಟಿ, ಮೊದಲು ನಟಿಸಿದ ಸಿನಿಮಾ ಉಳಿದವರು ಕಂಡಂತೆ. ಆ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರವನ್ನೇ ಮಾಡಿದ್ದ ಶೀತಲ್ ಈಗ ನಿರ್ದೇಶಕಿಯೂ ಆಗಿದ್ದಾರೆ. ಅವರೇ ನಿರ್ದೇಶನ ಮಾಡಿರುವ ಸಿನಿಮಾ ವಿಂಡೋಸೀಟ್. ಕೆಂಡಸಂಪಿಗೆ, ಪ್ರೇಮ ಗೀಮ ಜಾನೆ ದೋ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶೀತಲ್ ಶೆಟ್ಟಿ, ಗಡಿಯಾರ, ಪತಿ ಬೇಕು.ಕಾಮ್ ಚಿತ್ರಗಳಲ್ಲಿ ಲೀಡ್ ರೋಲ್‍ಗಳಲ್ಲೇ ಕಾಣಿಸಿಕೊಂಡರು. ಈಗ ನಿರ್ದೇಶಕಿಯಾಗಿ ವಿಂಡೋ ಸೀಟ್ ಚಿತ್ರವನ್ನ ರಿಲೀಸ್ ಮಾಡುತ್ತಿದ್ದಾರೆ. ಜುಲೈ 1ಕ್ಕೆ ರಿಲೀಸ್. ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್. ಚಿತ್ರಕ್ಕೆ ಶುಭ ಕೋರಲೆಂದು ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಖುದ್ದು ಬಂದಿದ್ದರು. ಚಿತ್ರದ ಹೀರೋ ರಂಗಿತರಂಗ ನಿರೂಪ್ ಭಂಡಾರಿ. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಕನ್ನಡಕ್ಕೆ ಹೊಸದು ಎನ್ನಬಹುದಾದ ರೊಮ್ಯಾಂಟಿಕ್ ಥ್ರಿಲ್ಲರ್ ಸ್ಟೋರಿ. ಡೈರೆಕ್ಟರ್‍ಗೂ ನಟಿಸೋ ಆಸೆ. ಆದರೆ.. ಆಕೆಯದ್ದೇ ಭಯ..! ರಂಗಿತರಂಗ ಚಿತ್ರ ನೋಡಿದ್ದರೆ, ಆ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಕಾಣಿಸಿಕೊಂಡಿದ್ದರು. ರಾಜರಥ ಚಿತ್ರದಲ್ಲೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ ಅನೂಪ್. ಆದರೆ, ನೀವು ಗುರುತಿಸೋಕೆ ಸಾಧ್ಯವಿಲ್ಲ. ಅಕಸ್ಮಾತ್ ಗುರುತಿಸಿದರೆ, ನಿಮಗೆ ಒಂದು ಅವಾರ್ಡ್ ಕೊಡ್ತೇನೆ ಎಂದು ಚಾಲೆಂಜ್ ಹಾಕ್ತಾರೆ ಅನೂಪ್. ಅನೂಪ್ ನಿರ್ದೇಶಕರೇ ಇರಬಹುದು, ನೋಡೋಕೆ ಸ್ಮಾರ್ಟ್ ಆಗಿಯೇ ಇದ್ದಾರೆ. ಹೀಗಿರುವಾಗ ಹೀರೋ ಆಗುವ ಚಾನ್ಸ್ ಬರಲಿಲ್ವಾ ಎಂದರೆ, ಬಂತು ಅಂತಾರೆ ಅನೂಪ್. ಯಾಕೆ ಒಪ್ಪಿಕೊಳ್ಳಲಿಲ್ಲ ಅಂದಾಗ ಗೊತ್ತಾಗಿದ್ದೇ ಅವರಿಗೆ ಆಕೆಯ ಭಯ ಇದೆ ಅನ್ನೋದು. ಆಕೆ ಎಂದರೆ ಬೇರಾರೋ ಅಲ್ಲ. ಅವರ ಪತ್ನಿ. ಸಿನಿಮಾದಲ್ಲಿ ನಟಿಸೋದು ಎಂದರೆ ಒಂದಿಷ್ಟು ರೊಮ್ಯಾನ್ಸ್ ದೃಶ್ಯಗಳು ಇದ್ದೇ ಇರುತ್ತವೆ. ನಾಯಕಿಯ ಜೊತೆ ಹತ್ತಿರದಲ್ಲಿರುವ ದೃಶ್ಯಗಳಲ್ಲಿ ನಟಿಸಲೇಬೇಕಾಗುತ್ತೆ. ಹಾಗೇನಾದರೂ ನಾನು ನಟಿಸಿದರ ನನ್ನ ಪತ್ನಿ ನನ್ನನ್ನು ಮನೆಯಿಂದ ಹೊರಗೆ ಹಾಕ್ತಾಳೆ ಎಂದು ನಗ್ತಾರೆ ಅನೂಪ್. ಆದರೆ, ನಿರ್ದೇಶನದಲ್ಲಿ ಬ್ಯುಸಿ ಇರುವುದು ಹಾಗೂ ನಟನೆಯಲ್ಲಿ ಅಷ್ಟು ಆಸಕ್ತಿ ಇಲ್ಲದೇ ಇರುವುದು ನಿಜವಾದ ಕಾರಣ. ತಮಿಳು ಸ್ಟಾರ್ ಆರ್ಯ, ಕನ್ನಡದ ಮೊದಲ ಅನುಭವ ಆರ್ಯ. ತಮಿಳು ಚಿತ್ರರಂಗದ ಸ್ಟಾರ್ ನಟ. ಇವರು ಕನ್ನಡದಲ್ಲಿ ನಟಿಸಿರುವ ಮೊದಲ ಸಿನಿಮಾ ರಾಜರಥ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ರಾಜರಥ ಚಿತ್ರದಲ್ಲಿ ಆರ್ಯ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಮೊದಲ ಕನ್ನಡ ಚಿತ್ರದ ಅನುಭವವನ್ನೂ ಖುಷಿಯಿಂದ ಹೇಳಿಕೊಂಡಿದ್ದಾರೆ ಆರ್ಯ. ರಂಗಿತರಂಗ ನೋಡಿದಾಗ ಇಷ್ಟವಾಯ್ತು. ನಂತರ ಅನೂಪ್ ಅವರ ತಂದೆಯ ಸ್ನೇಹಿತರೊಬ್ಬರ ಮೂಲಕ ಚಿತ್ರದ ಬಗ್ಗೆ ನನ್ನ ಮೆಚ್ಚುಗೆ ತಿಳಿಸಿದೆ. ಅದಾದ ಮೇಲೆ ಅನೂಪ್ ನನಗೆ ಫೋನ್ ಮಾಡಿ, ನನ್ನ ಚಿತ್ರದಲ್ಲಿ ನೀವು ನಟಿಸಬೇಕು ಎಂದಾಗ ನಿಜಕ್ಕೂ ಥ್ರಿಲ್ ಆಗಿಬಿಟ್ಟೆ. ಓಕೆ, ಬ್ರದರ್. ಡನ್ ಎಂದಷ್ಟೇ ಹೇಳಿದ್ದೆ ಎಂದು ನೆನಪಿಸಿಕೊಳ್ತಾರೆ ಆರ್ಯ. ಚಿತ್ರದಲ್ಲಿ ನಟಿಸುವಾಗ ನಾನು ಒಬ್ಬ ಹೊಸಬ ಎಂದೇ ಫೀಲ್ ಆಯ್ತು. ಕನ್ನಡದಲ್ಲಿಯೂ ನಟಿಸಬೇಕು ಎನ್ನುವ ಕನಸು, ಈ ಚಿತ್ರದ ಮೂಲಕ ಈಡೇರಿದೆ. ಅನೂಪ್ ಅವರಲ್ಲಿ ಒಂದಿಷ್ಟು ಹೊಸತನವಿದೆ. ವಿಭಿನ್ನತೆಯಿದೆ. ಚಿತ್ರದಲ್ಲಿ ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ ಎಂದಿದ್ದಾರೆ ಆರ್ಯ. ಏನು ನಿಮ್ಮ ಪಾತ್ರ ಎಂದರೆ, ನಿರ್ದೇಶಕರು ಇದರ ಬಗ್ಗೆ ಬಾಯಿಬಿಡಬೇಡಿ ಎಂದಿದ್ದಾರೆ. ಹಾಗಾಗಿ ನಾನು ಬಾಯಿ ಹೊಲಿದುಕೊಂಡಿದ್ದೇನೆ ಅಂತಾರೆ ಆರ್ಯ. ತಮಿಳು ಹಾಗೂ ಕನ್ನಡದ ಮಧ್ಯೆ ಬಹಳಷ್ಟು ಹೋಲಿಕೆಗಳಿವೆ. ಇದು ಕನ್ನಡ ಗೊತ್ತಿಲ್ಲದೇ ಇದ್ದರೂ, ನನಗೆ ಡೈಲಾಗ್ ಹೇಳೋಕೆ ಸಹಾಯ ಮಾಡ್ತು ಎಂದು ಡೈಲಾಗ್ ಡೆಲಿವರಿ ಕಷ್ಟ ಹೇಳಿಕೊಂಡಿದ್ದಾರೆ ಆರ್ಯ. ಆರ್ಯ ಅವರಷ್ಟೇ ಅಲ್ಲ, ಇಡೀ ಚಿತ್ರತಂಡ ಎದುರು ನೋಡುತ್ತಿರುವುದು ಅಭಿಮಾನಿಗಳನ್ನ. ಶುಕ್ರವಾರ ರಿಲೀಸ್ ಆಗುವ ಸಿನಿಮಾ, ಜನರಿಗೆ ಇಷ್ಟವಾಗಿಬಿಟ್ಟರೆ, ರಾಜರಥದವರ ಖುಷಿಗೆ ನೋ ಲಿಮಿಟ್ಸ್. ನಾನು ಮೇಘಾ, ಆವಂತಿಕಾ ಅಲ್ಲ - ಆವಂತಿಕಾ ಶೆಟ್ಟಿ ನನಗೆ ಕನ್ನಡ ಬರುತ್ತದೆಯಾದರೂ, ಸ್ಪಷ್ಟವಾಗಿ, ಸರಾಗವಾಗಿ ಮಾತನಾಡುವುದು ಕಷ್ಟ. ನಟ ನಿರೂಪ್ ಭಂಡಾರಿ, ಚಿತ್ರದುದ್ದಕ್ಕೂ ನನ್ನನ್ನು ರೇಗಿಸುತ್ತಲೇ ಇದ್ದರು. ಆದರೆ, ಇದೇ ರಾಜರಥ ತೆಲುಗಿನಲ್ಲೂ ಪ್ರತ್ಯೇಕವಾಗಿ ಶೂಟ್ ಆಗಿದೆ. ಆಗ ನಿರೂಪ್ ಭಂಡಾರಿಗೆ ನಾನು ಅನುಭವಿಸಿದ ಕಷ್ಟ ಅರ್ಥವಾಯಿತು. ಏಕೆಂದರೆ, ತೆಲುಗು ಅವರಿಗೆ ಬರುತ್ತಿರಲಿಲ್ಲ. ಇಂಥಾದ್ದೊಂದು ಅನುಭವ ಹೇಳಿಕೊಳ್ಳುವ ಆವಂತಿಕಾ ಶೆಟ್ಟಿ, ಈಗಲೂ ರಾಜರಥದ ಮೇಘಾ ಪಾತ್ರದ ಗುಂಗಿನಿಂದ ಹೊರಬಂದಿಲ್ಲ. ನಾನು ಪಾತ್ರದೊಳಗೆ ಯಾವ ಮಟ್ಟಕ್ಕೆ ಇನ್‍ವಾಲ್ವ್ ಆಗಿದ್ದೆ ಎಂದರೆ, ನನಗೆ ಈಗಲೂ ಮೇಘಾ ಪಾತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಮೇಘನಾ.. ಅಲ್ಲಲ್ಲ.. ಆವಂತಿಕಾ ಶೆಟ್ಟಿ. ರಂಗಿತರಂಗದಲ್ಲೂ ಹೀಗೆಯೇ ಆಗಿತ್ತು. ಸಂಧ್ಯಾ ಪಾತ್ರದ ಗುಂಗು ಹಲವಾರು ತಿಂಗಳು ಉಳಿದುಕೊಂಡಿತ್ತು. ಈಗ ರಾಜರಥದಲ್ಲೂ ಹಾಗೆಯೇ ಆಗುತ್ತಿದೆ. ಆದರೆ, ರಂಗಿತರಂಗಕ್ಕಿಂತ ರಾಜರಥ ಸವಾಲು. ಆ ಚಿತ್ರದಲ್ಲಿ ಎಲ್ಲರೂ ಹೊಸಬರೇ. ಆದರೆ, ಈಗ ಎಲ್ಲರ ಮೇಲೂ ನಿರೀಕ್ಷೆ ಇದೆ. ಆ ನಿರೀಕ್ಷೆಗಳನ್ನು ಮುಟ್ಟಿದ್ದೇವೆ ಎಂಬ ನಂಬಿಕೆಯೂ ಇದೆ ಅಂತಾರೆ ಆವಂತಿಕಾ ಶೆಟ್ಟಿ. ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರವನ್ನು ಜೀವಿಸಿದ್ದಾರೆ. ನಾಯಕ ನಟ ನಿರೂಪ್ ಭಂಡಾರಿ ಪಾತ್ರವೇ ತಾವಾಗಿ ಹೋಗಿದ್ದಾರೆ. ನನಗೂ ಇದೊಂದು ಕಂಫರ್ಟಬಲ್ ತಂಡ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಆವಂತಿಕಾ. ಆವಂತಿಕಾರ ಸಕಲ ನಿರೀಕ್ಷೆಗಳಿಗೂ ಉತ್ತರ ಸಿಗುವುದು ಬರುವ ಶುಕ್ರವಾರ. ನಿರ್ಮಾಪಕರಿಗೇ ಗೊತ್ತಿಲ್ಲದೆ ರಂಗಿತರಂಗ ರೀಮೇಕ್ ರೈಟ್ಸ್ ಖರೀದಿಸಿದ್ದು ಯಾರು? ರಂಗಿತರಂಗ. 2015ರಲ್ಲಿ ರಿಲೀಸ್ ಆಗಿ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ. ಆ ಚಿತ್ರದ ರೀಮೇಕ್ ರೈಟ್ಸ್ಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಇತ್ತೀಚೆಗೆ ಬಾಲಿವುಡ್ನ ಖ್ಯಾತ ನಟಿ ಹಾಗೂ ನಿರ್ಮಾಪಕಿ ಕೋಮಲ್ ಉನ್ನಾವೆ ರಂಗಿತರಂಗ ರೀಮೇಕ್ ಮಾಡುತ್ತಿದ್ದೇವೆ ಎಂದಿದ್ದರು. ರೀಮೇಕ್ ಹಕ್ಕು ಖರೀದಿಸಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡಾ ಶುರು ಎಂದಿದ್ದರು. ಆಕೆಯೇನೂ ಸಾಮಾನ್ಯರಲ್ಲ. ಒನ್ ವೇ ಟಿಕೆಟ್ ಹಾಗೂ ಬೈಸಿಕಲ್ ಬಾಯ್ಸ್ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕಿ. ವಿಚಿತ್ರವೆಂದರೆ ಇದು ಚಿತ್ರದ ನಿರ್ಮಾಪಕರಿಗೇ ಗೊತ್ತಿಲ್ಲ. ರಂಗಿತರಂಗದ ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದಿರುವುದಾಗಿ ಪ್ರೊಡಕ್ಷನ್ ಹೌಸ್ ಒಂದು ಹೇಳುತ್ತಿದೆ. ಆದರೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕುಗಳೂ ರಂಗಿತರಂಗ ಸಿನಿಮಾದ ಸಹ ನಿರ್ಮಾಪಕ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಸುಧಾಕರ್ ಭಂಡಾರಿ ಸಾಜ ಅವರ ಬಳಿಯೇ ಇದೆ. ನಮ್ಮ ಅನುಮತಿ ಇಲ್ಲದೇ ಯಾರಾದರೂ ರಂಗಿತರಂಗ ಸಿನಿಮಾದ ಹಕ್ಕುಗಳನ್ನು ಮಾರಾಟ ಮಾಡುವುದಾಗಲೀ ಖರೀದಿ ಮಾಡುವುದಾಗಿ ಅಥವಾ ರೀಮೇಕ್ ಮಾಡುವುದಾಗಲೀ ಮಾಡಿದರೆ ಅದು ಕಾನೂನು ಉಲ್ಲಂಘನೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ. ಹೆಚ್.ಕೆ. ಪ್ರಕಾಶ್ ನಿರ್ಮಿಸಿದ್ದ ರಂಗಿತರಂಗ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದರು. ನಿರೂಪ್ ಭಂಡಾರಿ, ಸಾಯಿ ಕುಮಾರ್, ರಾಧಿಕಾ ನಾರಾಯಣ್ ಹಾಗೂ ಆವಂತಿಕಾ ಶೆಟ್ಟಿ ನಟಿಸಿದ್ದ ಚಿತ್ರ, ಬಾಹುಬಲಿ ಎದುರು ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಬಂದಾ.. ಬಂದ.. ಫಕೀರ ಬಂದ.. ರಾ..ರಾ.. ರಕ್ಕಮ್ಮ ಸದ್ದು ದೇಶದಾದ್ಯಂತ ಜೋರಾಗಿದೆ. ರಕ್ಕಮ್ಮ ಎಕ್ಕ..ಸಕ್ಕ.. ಕುಣಿಸುತ್ತಿದ್ದರೆ.. ರಾಜಕುಮಾರಿಯ ಜೋಗುಳ ಬೇರೆಯದೇ ರೀತಿ ಗುನುಗುವಂತಿದೆ. ಈಗ ಮತ್ತೊಂದು ಹಾಡು.. ಫಕೀರನ ಹಾಡು. ಈ ಹಾಡು ಸೃಷ್ಟಿಯಾಗಿರುವುದು ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿ ಅವರ ಮೇಲೆ. ಹಳ್ಳಿಗೆ ಬರೋ ಹುಡುಗನ ಮೇಲಿರೋ ಹಾಡಿದು. ಸ್ವಲ್ಪ ತಮಾಷೆಯಾಗಿ, ರೆಟ್ರೋ ಶೈಲಿಯಲ್ಲಿದೆ. ನಿರೂಪ್ ಭಂಡಾರಿ ಚಿತ್ರದಲ್ಲಿ ಸಂಜೀವ್ ಗಂಭೀರ್ ಅನ್ನೋ ಪಾತ್ರದಲ್ಲಿ ನಟಿಸಿದ್ದು, ಸುದೀಪ್ ಎದುರು ನಿರೂಪ್ ಪಾತ್ರ ಹೇಗಿರುತ್ತೆ ಅನ್ನೋ ಕುತೂಹಲವಂತೂ ಇದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ರಿಲೀಸ್ ಆಗುವುದು ಜುಲೈ ಅಂತ್ಯಕ್ಕೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರೋ ಚಿತ್ರ.. ದಿನ ದಿನಕ್ಕೂ ಸೆನ್ಸೇಷನ್ ಆಗುತ್ತಿದೆ.
ನಾವು ಸಣ್ಣವರಿದ್ದಾಗ ಅಪ್ಪ, ಅಮ್ಮ ಶಾಲೆ ಶುರುವಾಗ ಅಂದರೆ ಜೂನ್ ನಲ್ಲಿ ಒಂದು ಮಾತು ಹೇಳುತ್ತಿದ್ದರು. ಆಯಾ ದಿನದ ಪಾಠಗಳನ್ನು ಆಯಾ ದಿನವೇ ಓದಿ ಮುಗಿಸು. ಇಲ್ಲದಿದ್ದರೆ ಕೊನೆಯಲ್ಲಿ ಎಲ್ಲಾ ಒಮ್ಮೆಲೇ ಓದಿದರೆ ಆಗ ಕಷ್ಟವಾಗುತ್ತದೆ. ಈ ಮಾತನ್ನು ಹೆಚ್ಚಿನ ಮನೆಗಳಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಮನೆಯ ಯಾರಾದರೊಬ್ಬರು ಹೇಳಿಯೇ ಹೇಳಿರುತ್ತಾರೆ. ಇದರ ಲಾಜಿಕ್ ನಿಮಗೂ ಅರ್ಥವಾಗಬಹುದು. ಆದರೆ ಇಷ್ಟು ಸಿಂಪಲ್ ವಿಷಯ ನಮ್ಮ ಮಂಗಳೂರು ಮಹಾನಗರ ಪಾಲಿಕೆಗೆ ಗೊತ್ತಾಗುತ್ತಿರಲಿಲ್ಲ. ಅವರ ತಪ್ಪಿನಿಂದ ಜನಸಾಮಾನ್ಯರಾದ ನಾವು ಕಷ್ಟವನ್ನು ಅಥವಾ ಹೊರೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು. ಎರಡು ರೀತಿಯಲ್ಲಿ ನೀವು ತೊಂದರೆ ಅನುಭವಿಸುತ್ತೀರಿ… ಕಳೆದ ಬಾರಿ ನಮ್ಮ ನಿಮ್ಮ ಮನೆಗಳ ನೀರಿನ ಬಿಲ್ ಕೊಡಲಿಕ್ಕೆ ಎಂದು ಪಾಲಿಕೆ ಗುತ್ತಿಗೆದಾರರಿಗೆ ಹೊರ ಗುತ್ತಿಗೆಯಲ್ಲಿ ಜವಾಬ್ದಾರಿ ನೀಡಿತ್ತು. ಒಂದು ಬಿಲ್ ಇಶ್ಯೂ ಮಾಡಿದರೆ ಗುತ್ತಿಗೆದಾರನಿಗೆ ಇಂತಿಷ್ಟು ಎಂದು ಹಣ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಪಾಲಿಕೆ ಈ ನೀರಿನ ಬಿಲ್ ಕೊಡುವ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಕೊಟ್ಟು ತನ್ನ ಹೆಗಲನ್ನು ಹಗುರ ಮಾಡಿಕೊಂಡಿತ್ತು. ಆದರೆ ಆ ಗುತ್ತಿಗೆದಾರರ ಕೆಲಸದವರು ಸರಿಯಾಗಿ ಯಾರ ಮನೆಗೂ ಹೋಗದೆ ತಾವು ಎಲ್ಲಿಯೋ ಕುಳಿತು ಮೀಟರ್ ನಾಟ್ ರೀಡಿಂಗ್ (ಎಂಎನ್ ಆರ್) ಅಥವಾ ಎನ್ ಎಲ್ ಎಂದು ಬರೆದು ಅಲ್ಲಿಯೇ ಬಿಲ್ ಹರಿದು ಬಿಸಾಡುತ್ತಿದ್ದರು. ಇದರಿಂದ ಅವರೇನೋ ಬಿಲ್ ಕೊಟ್ಟಂತೆ ಆಗುತ್ತಿತ್ತು. ಇತ್ತ ಅವರು ಕೊಟ್ಟಿದ್ದಾರೆ ಎಂದು ಪಾಲಿಕೆ ಹಣ ಪಾವತಿಸುತ್ತಿತ್ತು. ಆದರೆ ಆ ನಡುವೆ ಮನೆಯವರಿಗೆ ಯಾವಾಗಲೂ ಬಿಲ್ ಬರುತ್ತಲೇ ಇರಲಿಲ್ಲ. ಇವತ್ತು ಬಿಲ್ಲಿನವ ಬರುತ್ತಾನೆ, ನಾಳೆ ಬರುತ್ತಾನೆ ಎಂದು ಮನೆಯವರು ಕಾದು ಕುಳಿತದ್ದೇ ಬಂತು. ಬಿಲ್ ಕೊಡುವವ ಒಂದು ತಿಂಗಳು ಆದರೂ ಬರಲಿಲ್ಲ, ಎರಡೂ ತಿಂಗಳು ಆದರೂ ಇರಲಿಲ್ಲ. ಕೊನೆಗೆ ಐದು ತಿಂಗಳು ಆಗುವಾಗ ಬಿಲ್ಲೊಂದು ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತದೆ. ಕೊನೆಗೂ ಬಿಲ್ ಬಂತಲ್ಲ ಎಂದು ನೀವು ನಿಟ್ಟುಸಿರು ಬಿಡುತ್ತೀರಿ. ಬಿಲ್ ನಲ್ಲಿ ಐದು ತಿಂಗಳಿನ ಒಟ್ಟು ಮೊತ್ತ ನೋಡುವಾಗ ನಿಮಗೆ ಏನೋ ಸ್ವಲ್ಪ ಜಾಸ್ತಿಯೇ ಇದೆಯಲ್ವಾ ಎಂದು ಅನಿಸುತ್ತದೆ. ಇಲ್ಲಿ ಒಬ್ಬ ಜನಸಾಮಾನ್ಯ ಎರಡು ರೀತಿಯ ಸಂಕಷ್ಟವನ್ನು ಎದುರಿಸುತ್ತಾನೆ. ಮೊದಲನೇಯದಾಗಿ ಒಮ್ಮೆಲ್ಲೆ ಐದು ತಿಂಗಳಿನ ಬಿಲ್ ಕಟ್ಟಲು ಬಂದಾಗ ಸಹಜವಾಗಿ ಮಧ್ಯಮ ವರ್ಗದವರಿಗೆ ಅದು ಹೊರೆಯಾಗುತ್ತದೆ. ಅದರೊಂದಿಗೆ ತಾವು ಐದು ತಿಂಗಳಿದ್ದು ಒಮ್ಮೆಲ್ಲೆ ಕಟ್ಟುವಾಗ ಒಮ್ಮೆಲೆ ಹೆಚ್ಚು ಹಣ ಅಥವಾ ಪರೋಕ್ಷವಾಗಿ ದಂಡ ನಮಗೆ ಗೊತ್ತಿಲ್ಲದೆ ನಮ್ಮಿಂದ ಕಟ್ಟಲ್ಪಡಲಾಗುತ್ತಿದೆ. ಅದು ಹೇಗೆಂದು ವಿವರಿಸುತ್ತೇನೆ. ನೀವು ಸಾಮಾನ್ಯವಾಗಿ ತಿಂಗಳಿಗೆ ಇಪ್ಪತ್ತು ಸಾವಿರ ಲೀಟರ್ ಒಳಗೆ ನೀರನ್ನು ಉಪಯೋಗಿಸುವವರಾದರೆ ನಿಮಗೆ ತಿಂಗಳಿಗೆ ಮಿನಿಮಮ್ ಆಗಿರುವ 65 ರೂಪಾಯಿ ಬಿಲ್ ಬರುತ್ತದೆ. ಅದು ಮಾಮೂಲಿ. ಇದು ಇಪ್ಪತ್ತು ಸಾವಿರ ಲೀಟರ್ ಒಳಗಿನವರಿಗೆ ಮಾತ್ರ. ಅದೇ ನೀವು ಐದು ತಿಂಗಳಿಗೆ ಒಮ್ಮೆ ಬಿಲ್ ಕಟ್ಟುವಾಗ ಬಿಲ್ಲಿನಲ್ಲಿ ನೀವು ಉಪಯೋಗಿಸಿದ ನೀರಿನ ಪ್ರಮಾಣವನ್ನು ನಮೂದಿಸಲಾಗಿರುತ್ತದೆ. ಅದು ಸಹಜವಾಗಿ ಜಾಸ್ತಿಯೇ ಇರುತ್ತದೆ. ಐದು ತಿಂಗಳಿನ ಬಿಲ್ ಒಟ್ಟಿಗೆ ಸೇರಿ ಒಂದೇ ಬಿಲ್ ಬಂದಿರುವಾಗ ಉಪಯೋಗಿಸಿದ ನೀರು ಒಟ್ಟು ಒಂದೂಕಾಲು ಲಕ್ಷ ಎಂದು ಇತ್ತು ಎಂದು ಇಟ್ಟುಕೊಳ್ಳೋಣ. ಆಗ ನಿಮ್ಮ ಮೂಲ ಲೆಕ್ಕ ಇಪ್ಪತ್ತು ಸಾವಿರಕ್ಕೆ ಅರವತ್ತೈದು ರೂಪಾಯಿ ಒಂದು ಲಕ್ಷ ಲೀಟರಿಗೆ ಅರವತ್ತೈದು ರೂಪಾಯಿ ಇಂಟು ಫೈವ್ ಆಗುವುದಿಲ್ಲ. ಅದರ ಲೆಕ್ಕವನ್ನು ನಿಖರವಾಗಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಲೆಕ್ಕ ಅರ್ಥ ಮಾಡಿ.. ಗೃಹ ಬಳಕೆ (ನಿವಾಸಿ) ರೂಪಾಯಿ ತಿಂಗಳಿಗೆ 65. ಎ) ಸೊನ್ನೆಯಿಂದ ಹದಿನೈದು ಸಾವಿರ ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗೆ ರೂ 2.50. ಆ)ಹದಿನೈದು ಸಾವಿರ ಲೀಟರ್ ನಿಂದ ಮೂವತ್ತು ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗರ ಮೂರು ರೂಪಾಯಿ. ಇ) ಮೂವತ್ತು ಸಾವಿರದ ಒಂದು ಲೀಟರ್ ನಿಂದ ಐವತ್ತು ಸಾವಿರ ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗೆ ರೂಪಾಯಿ ಐದು. ಈ) ಐವತ್ತು ಸಾವಿರದ ಒಂದು ಲೀಟರ್ ನಿಂದ ಎಪ್ಪತೈದು ಸಾವಿರ ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗೆ ಏಳು ರೂಪಾಯಿ. ಉ) 75001 ಲೀಟರ್ ನಿಂದ 1,00,000 ಲೀಟರ್ ಗೆ ಪ್ರತಿ ಒಂದು ಸಾವಿರ ಲೀಟರ್ ಗೆ ಹತ್ತು ರೂಪಾಯಿ. ಊ) 1,00,001 ಲೀಟರ್ ನಿಂದ ಮೇಲ್ಪಟ್ಟು ಪ್ರತಿ 1000 ಲೀಟರ್ ಗೆ ರೂ 12. ಹೀಗೆ ಲೆಕ್ಕಚಾರದಲ್ಲಿ ಬಿಲ್ ಇದೆ. ಈಗ ಕುಳಿತು ಲೆಕ್ಕ ಹಾಕಿ. ನಿಮಗೆ ಐದು ತಿಂಗಳಿನ ನಂತರ ಬಂದ ಬಿಲ್ ನಲ್ಲಿ ಎಷ್ಟು ಸಾವಿರ ಲೀಟರ್ ನೀರು ಖರ್ಚಾಗಿದೆ ಮತ್ತು ನೀವು ಯಾವ ಕ್ಯಾಟಗರಿಯಲ್ಲಿ ಬರುತ್ತೀರಿ. ಒಂದು ವೇಳೆ ಪ್ರತಿ ತಿಂಗಳಿಗೆ ಬಿಲ್ ಬರುತ್ತಿದ್ದಲ್ಲಿ ನೀವು ಎಷ್ಟು ಕಟ್ಟಬೇಕಿತ್ತು. ಹೀಗೆ ಒಮ್ಮೆಲ್ಲೆ ಬಂದ ಕಾರಣ ನೀವು ಎಷ್ಟು ಕಟ್ಟಬೇಕಾಗಿದೆ. ಲೆಕ್ಕ ಹಾಕಿ ಕಮೆಂಟ್ ಮಾಡಿ. ಇದರ ಮುಂದುವರಿದ ಭಾಗ ನಾಳೆ ಹೇಳುತ್ತೇನೆ!
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೀತಿದೆ. ಬಿಜೆಪಿ ಹಾಗು ಆಮ್ ಆದ್ಮಿ ಪಾರ್ಟಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೀತಿದೆ. ಕಾಂಗ್ರೆಸ್‌ ಸೇರಿದಂತೆ ಬೇರೆಲ್ಲಾ ಸಣ್ಣಪುಟ್ಟ ಪಕ್ಷಗಳು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಎಲ್ಲಾ 70 ಕ್ಷೇತ್ರಗಳಲ್ಲೂ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳ ಕಡೆಗೆ ಮತದಾರನ ಒಲವು ಸ್ಪಷ್ಟವಾಗ್ತಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಕೈಗೊಂಡಿರುವ ಜನಪರ ಕಾರ್ಯಕ್ರಮಗಳಿಗೆ ಮಾರು ಹೋಗಿದ್ದಾರೆ ಎನ್ನುತ್ತಿವೆ ರಾಜಕೀಯ ವಿಶ್ಲೇಷಣೆಗಳು. ಇದು ಬಿಜೆಪಿ ನಾಯಕರನ್ನು ಕಂಗಾಲಾಗಿಸಿದೆ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ದೆಹಲಿ ಮತದಾರರನ್ನು ಧರ್ಮದ ಆಧಾರದಲ್ಲಿ ಇಬ್ಭಾಗ ಮಾಡಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ದೆಹಲಿಯ ಚುನಾವಣೆ ಭಾರತ, ಪಾಕಿಸ್ತಾನ ನಡುವಿನ ಯುದ್ಧಕ್ಕೆ ಹೋಲಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮಾಡುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ಪ್ರಚಾರದಲ್ಲೇ ಕರೆ ಕೊಡುತ್ತಾರೆ. ಒಟ್ಟಾರೆ ಧರ್ಮದ ಆಧಾರದಲ್ಲಿ ಜನರು ರೊಚ್ಚಿಗೇಳುವಂತೆ ಮಾಡಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತಾಗುತ್ತಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆ ಕೊಟ್ಟ ನಾಲ್ಕೇ ದಿನದಲ್ಲಿ ದೆಹಲಿಯ ಯುವಕನೊಬ್ಬ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಹೋರಾಟಗಾರರ ಮೇಲೆ ಆರಡಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದ. ಈ ಘಟನೆಯಲ್ಲಿ ಓರ್ವ ಪತ್ರಿಕೋದ್ಯಮ ವಿದ್ಯಾರ್ಥಿ ಗಾಯಗೊಂಡು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರಿಚತ ವ್ಯಕ್ತಿಯೊಬ್ಬ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮಾಡುವ ಜನರ ಮೇಲೆ ದಾಳಿ ಮಾಡಿದ್ದು, ಉದ್ದೇಶಪೂರ್ವಕವಾಗಿ ನಡೆದ ಘಟನೆಯಾ ಎನ್ನುವ ಅನುಮಾನ ಮೂಡಲು ಶುರುವಾಗುತ್ತಿವೆ. ಈ ಅನುಮಾನ ಮೂಡಲು ಕಾರಣವಾಗಿದ್ದು ಅಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ. ರಾಜಕೀಯ ಯಶಸ್ವಿಗಾಗಿ ಗುಂಡು ಹಾರಿಸುವಂತೆ ಯೋಜನೆ ರೂಪಿಸಲಾಯ್ತಾ ಅನ್ನೋ ಪ್ರಶ್ನಾರ್ಥಕ ಚಿಹ್ನೆ ಮೂಡುವಂತಾಗಿದೆ. ಈ ಹೋರಾಟವನ್ನು ಹತ್ತಿಕ್ಕಿದ್ರೆ ಚುನಾವಣೆಯಲ್ಲಿ ಮತಗಳಿಸಬಹುದು ಅನ್ನೋ ಕಾರಣಕ್ಕೆ ಯಾರಾದರು ಸಂಚು ಮಾಡಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಅನುಮಾನಕ್ಕೆ ಹಲವಾರು ಕಾರಣಗಳೂ ಇವೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಅಧಿಕಾರದಲ್ಲಿದೆ. ಆದರೆ ಅಲ್ಲಿನ ಪೊಲೀಸ್ ವ್ಯವಸ್ಥೆ ಮೇಲೆ ಹಿಡಿತ ಹೊಂದಿರುವುದು ನಮ್ಮ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಒಂದನೇ ಅನುಮಾನ ಏನಪ್ಪ ಅಂದ್ರೆ, ಆ ಯುವಕ ಬಂದೂಕಿನಿಂದ ಗುಂಡು ಹಾರಿಸಿದ್ದು, ಪ್ರತಿಭಟನಾಕಾರರ ಮೇಲೆ. ಆ ವೇಳೆ ದೆಹಲಿ ಪೊಲೀಸರು ಶಸ್ತ್ರ ಸಜ್ಜಿತವಾಗಿ ಕೆಲವೇ ಅಡಿಗಳ ದೂರ ನಿಂತಿದ್ದರು. ಓರ್ವ ಬಂದೂಕುಧಾರಿ ಗುಂಡು ಹಾರಿಸುತ್ತಿದ್ದಾನೆ ಎಂದರೆ, ಕಾನೂನು ಪಾಲನೆ ಮಾಡಬೇಕಿದ್ದ ಪೊಲೀಸರು ಮಾಡಬೇಕಿದ್ದ ಮೊದಲ ಕೆಲಸ ಎಂದರೆ ಆತನ ಮೇಲೆ ಫೈರ್ ಮಾಡುವುದು. ಆದರೆ ಪೊಲೀಸರು ಆ ಕೆಲಸವನ್ನು ಮಾಡುವುದಿಲ್ಲ. ಆತನನ್ನು ತುಂಬಾ ಸಾಮಾನ್ಯ ರೀತಿಯಲ್ಲಿ ಬಂಧನ ಮಾಡುತ್ತಾರೆ. ಮತ್ತೊಂದು ಎಂದರೆ ಬಂದೂಕಿನಿಂದ ಗುಂಡು ಹಾರಿಸುವಾಗ ಆ ಪೊಲೀಸರ ತಂಡ ಸುಮ್ಮನೆ ನಿಂತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಈ ದೃಶ್ಯಗಳು ಪೊಲೀಸರಿಗೆ ಮೊದಲೇ ಗೊತ್ತಿತ್ತಾ ಎನ್ನುವ ಅನುಮಾನವನ್ನು ಹುಟ್ಟುಹಾಕುತ್ತಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ಬಳಿ ನಡೆದ ದಾಳಿ ವೇಳೆ ಪೊಲೀಸರು ಕೆಲಕಾಲ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಇದೊಂದು ಅನುಮಾನ ಆದರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 17 ವರ್ಷದ ಯುವಕ ಗುಂಡು ಹಾರಿಸುವುದಕ್ಕಾಗಿ ಹಣ ಪಾವತಿ ಮಾಡಿದ್ದು ಯಾರು..? ಎಂದು ಪ್ರಶ್ನಿಸಿದ್ದಾರೆ. ಸಂಸತ್‌ ಬಜೆಟ್‌ ಅಧಿವೇಶನ ಆರಂಭಕ್ಕೂ ಮುನ್ನವೇ ರಾಹುಲ್‌ ಗಾಂಧಿ ಈ ಪ್ರಶ್ನೆ ಮಾಡಿರೋದು ಭಾರೀ ಕೋಲಾಹಲವನ್ನು ಸೃಷ್ಟಿ ಮಾಡುವ ಎಲ್ಲಾ ಸಾಧ್ಯಗಳು ಇವೆ. ಇನ್ನು ಅರವಿಂದ್‌ ಕೇಜ್ರಿವಾಲ್‌ ಕೂಡ, ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಸಿಆರ್‌, ಎನ್‌ಆರ್‌ಸಿ ಆಕ್ರೋಶಭರಿತ ಹೇಳಿಕೆಗಳು ದೆಹಲಿ ಚುನಾವಣೆಯಲ್ಲಿ ಪರಿಣಾಮ ಬೀರುವುದಿಲ್ಲ. ಇಲ್ಲಿ ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ನಡೆಯುತ್ತೆ ಎಂದಿದ್ದಾರೆ. ದೆಹಲಿ ಜಾಮಿಯಾ ಫೈರಿಂಗ್‌ ವಿಚಾರ ಮುಂದೆ ಯಾವ ಪರಿಣಾಮ ಬೀರುತ್ತೆ ಎನ್ನುವುದು ಚುನಾವಣಾ ಫಲಿತಾಂಶಕ್ಕೆ ಹಿಡಿದ ಕೈಗನ್ನಡಿಯಾಗಿರಲಿದೆ.
Kannada News » Karnataka » Belagavi » Gift Politics in belagavi Ticket aspirants distributing free tiffin box sarees and etc ಬೆಳಗಾವಿಯಲ್ಲಿ ಗಿಫ್ಟ್ ಪಾಲಿಟಿಕ್ಸ್: ಮತದಾರರನ್ನು ಗಾಳಕ್ಕೆ ಬೀಳಿಸಲು ಟಿಕೆಟ್ ಅಕಾಂಕ್ಷಿಗಳಿಂದ ಭರ್ಜರಿ ಕಾರ್ಯಕ್ರಮಗಳು ಖಾನಾಪುರ ಕ್ಷೇತ್ರದಲ್ಲಿ ಮಹಿಳಾ ಮತದಾರರ ಓಲೈಕೆಗೆ ಅರಿಶಿನ ಕುಂಕುಮ ಪಾಲಿಟಿಕ್ಸ್ ನಡೆಯುತ್ತಿದೆ. ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅರಿಶಿನ ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಗಿಫ್ಟ್ ಪಾಲಿಟಿಕ್ಸ್ TV9kannada Web Team | Edited By: Ayesha Banu Nov 24, 2022 | 10:29 AM ಬೆಳಗಾವಿ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ 2023(Karnataka Assembly Elections 2023) ದಿನಾಂಕ ಘೋಷಣೆಗೂ ಮುನ್ನವೇ ತಯಾರಿ ಶುರುವಾಗಿದೆ. ರಾಜಕೀಯ ಪಕ್ಷಗಳು ತಮ್ಮದೇ ಸ್ಟೈಲಿನಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಜನ ಸಂಕಲ್ಪ ಯಾತ್ರೆ, ಪಂಚಯಾತ್ರೆ ಮೂಲಕ ಜನರನ್ನು ಸೆಳೆಯಲು ಮುಂದಾಗಿದ್ದಾರೆ. ಇದರ ನಡುವೆ ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿಯರಿಬ್ಬರು ವಿನೂತನವಾಗಿ ಮತದಾರರನ್ನು ಸೆಳೆಯುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಬೆಳಗಾವಿಯ ನಾಲ್ಕು ಕ್ಷೇತ್ರಗಳಲ್ಲಿ ಈಗಿನಿಂದಲೇ ಗಿಫ್ಟ್ ಪಾಲಿಟಿಕ್ಸ್ ಆರಂಭವಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ನಾನಾ ಬಗೆಯ ಗಿಫ್ಟ್ ನೀಡಲಾಗುತ್ತಿದೆ. ವಿಧಾನಸಭೆ ಚುನಾವಣೆಗೆ 5 ತಿಂಗಳು ಬಾಕಿ ಇರುವಾಗಲೇ ಮತದಾರರ ಓಲೈಕೆಗೆ ಕಸರತ್ತು ಆರಂಭವಾಗಿದೆ. ಯುವ ಸಮೂಹ, ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಲಂಚ್ ಬಾಕ್ಸ್, ಸೀರೆ, ಕನ್ನಡಕ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಖಾನಾಪುರ ಕ್ಷೇತ್ರದಲ್ಲಿ ಮಹಿಳಾ ಮತದಾರರ ಓಲೈಕೆಗೆ ಅರಿಶಿನ ಕುಂಕುಮ ಪಾಲಿಟಿಕ್ಸ್ ನಡೆಯುತ್ತಿದೆ. ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅರಿಶಿನ ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್‌ ಮಹಿಳೆಯರಿಗೆ ಉಚಿತ ಲಂಚ್ ಬಾಕ್ಸ್ ವಿತರಣೆ ಮಾಡುತ್ತಿದ್ದಾರೆ. ಇತ್ತ ಬಿಜೆಪಿ ಟಿಕೆಟ್ ಆಕಾಂಕ್ಷಿ ಎ.ದಿಲೀಪಕುಮಾರ್‌ ಮಹಿಳೆಯರಿಗೆ ಸೀರೆ ಗಿಫ್ಟ್ ಮಾಡುತ್ತಿದ್ದಾರೆ. ಅರಿಶಿನ ಕುಂಕುಮ ಕಾರ್ಯಕ್ರಮ ಏರ್ಪಡಿಸಿ ಸೀರೆ ಗಿಫ್ಟ್ ನೀಡುತ್ತಿದ್ದಾರೆ. ಮತ್ತೋರ್ವ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಸೋನಾಲಿ ಸೋನಬರ್ತ್, ಕಣ್ಣಿನ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಉಚಿತ ಕನ್ನಡಕ ಗಿಫ್ಟ್ ನೀಡಿದ್ದಾರೆ. ಮತ್ತೊಂದೆಡೆ ಬೆಳಗಾವಿ ಉತ್ತರ, ದಕ್ಷಿಣ ಕ್ಷೇತ್ರದ ಶಾಸಕರು ಉಚಿತ ಪುಸ್ತಕ ವಿತರಿಸಿದ್ದಾರೆ. ಶಾಸಕ ಅನಿಲ್ ಬೆನಕೆ, ಅಭಯ್ ಪಾಟೀಲ್ ಪಿಯುಸಿ ವಿದ್ಯಾರ್ಥಿಗಳಿಗೆ ನೆರವಾಗಲು ಉಚಿತ ಟೆಕ್ಸ್ಟ್ ಬುಕ್ ಹಂಚುತ್ತಿದ್ದಾರೆ. ಇದನ್ನೂ ಓದಿ: ನೀ ಬೆರಕಿ ಇದೀಯಾ, ಬೇಲೂರು ಪಾಲಿಟಿಕ್ಸ್ ನನಗೆ ಗೊತ್ತು: ವೇದಿಕೆಯಲ್ಲೇ ಶಾಸಕ ಲಿಂಗೇಶ್​ ಕಾಲೆಳೆದ ಸಿಎಂ ಬೊಮ್ಮಾಯಿ ಗಿಫ್ಟ್ ಪಾಲಿಟಿಕ್ಸ್​ಗೆ ಸಂಜಯ್ ಪಾಟೀಲ್ ವ್ಯಂಗ್ಯ ಮತ್ತೊಂದೆಡೆ ಅರಿಶಿನ ಕುಂಕುಮ ಆಯೋಜಿಸಿ ಗಿಫ್ಟ್ ಹಂಚಿಕೆ ಆರೋಪ ವಿಚಾರಕ್ಕೆ ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ್ ವ್ಯಂಗ್ಯವಾಡಿದ್ದಾರೆ. ನಾನು ಗಂಡಸನಿದ್ದೀನಿ ಅರಿಶಿನ ಕುಂಕುಮ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಆಯೋಜಿಸುತ್ತಿರುವ ಅರಿಶಿನ ಕುಂಕುಮ ಕಾರ್ಯಕ್ರಮಕ್ಕೆ ಸಂಜಯ್ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ ಟಿಫನ್ ಬಾಕ್ಸ್ ಹಂಚಿಕೆ ಗಮನಕ್ಕೆ ಇದೆ. ಬಿಜೆಪಿ ಕಾರ್ಯಕರ್ತರು ಟಿಫನ್ ಬಾಕ್ಸ್ ತೆಗೆದುಕೊಳ್ಳಲ್ಲ. ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಆಗಬೇಕು. ಮತವನ್ನು ಯಾರೊಬ್ಬರು ಮಾರಾಟ ಮಾಡಬಾರದು ಎಂದರು. ಇನ್ನು ಬಿಜೆಪಿ ಶಾಸಕರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪುಸ್ತಕ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಂಜಯ್ ಪಾಟೀಲ್, ನಾವೇನೂ ಸರಾಯಿ ಹಂಚುತ್ತಿಲ್ಲವಲ್ಲ, ಜ್ಞಾನದ ವೃದ್ಧಿಗೆ ಪುಸ್ತಕ ಹಂಚಿಕೆ ಮಾಡುತ್ತೀದ್ದೇವೆ. ಬಡವರ ಮಕ್ಕಳ ಕಲಿಕೆಗೆ ಪುಸ್ತಕ ಅನುಕೂಲ ಆಗಿದೆ. ಟಿಫಿನ್ ಬಾಕ್ಸ್ ಬಗ್ಗೆ ನಾನೇನು ಟೀಕೆ ಮಾಡಲ್ಲ. ಮತ ಹಾಕಬೇಕು ಎಂದು ಷರತ್ತು ವಿಧಿಸುವ ಪ್ರಕ್ರಿಯೆ ನಡೆದಿದೆ. ದೇವಸ್ಥಾನಕ್ಕೆ 50 ಲಕ್ಷ ಕೊಡ್ತೇವಿ ಬೇರೆ ಪಕ್ಷದ ಟೆಬಲ್ ಹಚ್ಚಬೇಡಿ ಈ ರೀತಿಯ ಕೆಲಸ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದಿದೆ. ಯಾರು ಅಭಿವೃದ್ಧಿ ಮಾಡುತ್ತಾರೆ ಅವರಿಗೆ ಆಮಿಷ ಒಡ್ಡುವ ಅವಶ್ಯಕತೆ ಇಲ್ಲ ಎಂದರು.
ಪ್ರಶಸ್ತಿಗಳು ನನ್ನ ಶ್ರಮಕ್ಕೆ ದೊರೆತ ಪ್ರತಿಫಲ. ಅದನ್ನು ಮರಳಿ ನೀಡಲು ನಾನು ದಡ್ಡನಲ್ಲ ಎಂದು ಹೇಳುವ ಮೂಲಕ ಪ್ರಕಾಶ್ ರೈ ಪ್ಲೇಟು ಬದಲಿಸಿದ್ದಾರೆ. ಹಾಗಾದರೆ ಪ್ರಕಾಶ್ ರೈಗೆ ಬಂದ ಪ್ರಶಸ್ತಿ ಅವರ ಶ್ರಮಕ್ಕೆ ದೊರೆತ ಫಲವಾದರೆ ಉಳಿದವರಿಗೆಲ್ಲ ಹೇಗೆ ಪ್ರಶಸ್ತಿಗಳು ದೊರೆತಿದ್ದು? ಎರಡು ವರ್ಷದ ಹಿಂದೆ ಸಾಕಷ್ಟು ಜನ ತಮ್ಮ ಪ್ರಶಸ್ತಿಗಳನ್ನು ಮರಳಿಸಿದರಲ್ಲ. ಅವರಿಗೆಲ್ಲ ಪುಕ್ಕಟೆ ದೊರೆತಿತ್ತೇ? ಈ ಹೇಳಿಕೆ ಮೂಲಕ ಹಿಂದೆ ಪ್ರಶಸ್ತಿ ಮರಳಿಸಿದವರನ್ನೆಲ್ಲ ಪ್ರಕಾಶ್ ರೈ ನಿವಾಳಿಸಿ ಎಸೆದಂತಾಗಿದೆ. ಅವರಿಗೆಲ್ಲ ಶ್ರಮ ಪಡದೆ ಪ್ರಶಸ್ತಿ ಲಭಿಸಿತ್ತು. ಅದಕ್ಕೆ ಹಿಂತಿರಿಗಿಸಿದ್ದಾರೆ. ಆದರೆ ನಾನು ಶ್ರಮಪಟ್ಟು ಪ್ರಶಸ್ತಿ ಪಡೆದವನು. ಹಾಗಾಗಿ ಹಿಂತಿರಿಗಿಸುವುದಿಲ್ಲ ಎಂದರ್ಥವೇ? ಪ್ರಕಾಶ್ ರೈ ಪಕ್ಕಾ ನಟ ಎಂಬುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕೆ? ಪ್ರಧಾನಿ ಮೋದಿ ವಿರುದ್ಧ ಮಾತನಾಡುವುದರಿಂದ ಸಿಗುವ ಪ್ರಚಾರ, ಅದಕ್ಕಾಗಿ ಸಿಗುವ ಪ್ರಾಮುಖ್ಯಗಳೆಲ್ಲ ಬೇಕು. ಆದರೆ ಪ್ರಶಸ್ತಿ ಹಿಂತಿರುಗಿಸುವ ಗೋಜಿಗೆ ಮಾತ್ರ ಅವರು ಹೋಗುವುದಿಲ್ಲ. ಯಾಕೆಂದರೆ ಪ್ರಶಸ್ತಿಯೊಟ್ಟಿಗೆ ಅದರ ಹಣವನ್ನೂ ವಾಪಸ್ ನೀಡಬೇಕಾಗುತ್ತದೆ‌. ಜತೆಗೆ ರಾಷ್ಟ್ರಪ್ರಶಸ್ತಿ ವಿಜೇತ ನಟ ಎಂದು ಹೇಳಿಕೊಳ್ಳುವಂತೆಯೂ ಇರುವುದಿಲ್ಲ. ಅದೆಲ್ಲ ಪ್ರಕಾಶ್ ರೈಗೆ ಬೇಕಾಗಿಲ್ಲ. ಆದರೆ ಅನಗತ್ಯವಾಗಿಯಾದರೂ ಸೈ ಮೋದಿಯನ್ನು ಬಯ್ಯುವುದು ಮಾತ್ರ ಬೇಕು. ಒಂದು ವರ್ಷದ ಹಿಂದೆ ಕಾವೇರಿ ಸಮಸ್ಯೆ ಸಂದರ್ಭ, ಚಾನಲ್ ಒಂದಕ್ಕೆ ಸಂದರ್ಶನ ನೀಡುವಾಗ ನಾನ್ಯಾಕ್ರಿ ಕಾವೇರಿ ಬಗ್ಗೆ ಮಾತನಾಡಬೇಕು? ನಾನೊಬ್ಬ ನಟ. ನನಗೆ ಗಡಿ, ಭಾಷೆಗಳ ಬಂಧವಿಲ್ಲ ಎಂದು ಮುಖ ಸಿಂಡರಿಸಿಕೊಂಡು ಎದ್ದು ಹೋಗಿದ್ದರು. ಕೇವಲ ನಟನಾಗಿ ಇರಬಯಸುವ ವ್ಯಕ್ತಿ ಹಾಗೆ ಹೇಳಿದ್ದನ್ನು ನಾವು ಒಪ್ಪಲೇಬೇಕು. ಆದರೆ ಪ್ರಕಾಶ್ ರೈ ಈಗ ರಾಜಕೀಯದ ಮಾತನಾಡಿದ್ದಾರೆ. ಈಗ ಪ್ರೀತಿಯ ಗೌರಿ ಸಾವಿನ ಬಗ್ಗೆ ಮೋದಿಯನ್ನು ಪ್ರಕಾಶ್ ರೈ ದೂರಬಹುದು ಎಂದಾದರೆ, ಅವರು ಕಾವೇರಿ ಸಮಸ್ಯೆ ಬಗ್ಗೆಯೂ ಖಂಡಿತ ಮಾತನಾಡಬೇಕು. ತನಗೆ ಬೇಕಾದಾಗ, ಬೇಕಾದ ವಿಷಯದ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂಬುದು ಅನುಕೂಲಸಿಂಧು ವಾದವಾಗುತ್ತದೆ. ಕಾವೇರಿ ಸಮಸ್ಯೆ ಬಗ್ಗೆ ಮಾತನಾಡಿದರೆ, ಕನ್ನಡ- ತಮಿಳು ಭಾಷೆ ತಿಕ್ಕಾಟದ ಬಗ್ಗೆ ಮಾತನಾಡಿದರೆ ಅದು ವಿವಾದಕ್ಕೆ ಕಾರಣವಾಗುತ್ತದೆ. ಆಗ ತಮಿಳು ಚಿತ್ರರಂಗದಲ್ಲಿ ನಟಿಸಲು ಸಮಸ್ಯೆಯಾಗುತ್ತದೆ. ಅದಕ್ಕೆ ಅವರು ಕನ್ನಡ- ತಮಿಳು, ಕಾವೇರಿ ವಿಷಯ ಬಂದಾಗ ಶುದ್ಧ ನಟರಾಗಿರಲು ಇಷ್ಟಪಡುತ್ತಾರೆ. ಅದೇ ಗೌರಿ ಕೊಲೆ ವಿಷಯ ಬಂದಾಗ ಅವರು ಮೋದಿಯನ್ನು ಬಯ್ಯಲು ಮುಂದಾಗುತ್ತಾರೆ. ಯಾಕೆಂದರೆ ಅದರಿಂದ ಅವರಿಗೆ ಪ್ರಚಾರ ದೊರೆಯುತ್ತದೆ. ವಿಚಾರವಾದಿ ನಟ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ವ್ಯಕ್ತಿ ಅಂತೆಲ್ಲ ಬಿರುದುಗಳು ಬರುತ್ತವೆ. ಸಹಜವಾಗಿ ನಟನೆಯಲ್ಲಿ ಬೇಡಿಕೆ ಹೆಚ್ಚುತ್ತದೆ. ನಟನೆ ಜತೆಗೆ ಬೇರೆ ರೀತಿಯ ಪ್ರಚಾರವೂ ದೊರೆಯುತ್ತದೆ. ಇದರಿಂದ ಸಿನೆಮಾಗಳು ಕಡಿಮೆಯಾಗುವ ಯಾವ ಅಪಾಯವೂ ಇಲ್ಲ. ಇದೆಲ್ಲ ಲೆಕ್ಕ ಹಾಕಿಯೇ ಪ್ರಕಾಶ್ ರೈ ಮೋದಿ ವಿರುದ್ಧ ಮಾತನಾಡಿರುತ್ತಾರೆ. ಅದೇ ಲೆಕ್ಕಾಚಾರದ ಕಾರಣಕ್ಕೆ ಅವರು ಕಾವೇರಿ ವಿವಾದದ ವಿಷಯದಲ್ಲಿ ಮಾತನಾಡುವುದಿಲ್ಲ. ಪ್ರಕಾಶ್ ರೈ ನಟರಷ್ಟೇ ಅಲ್ಲ, ಚಾಲಾಕಿ ಕೂಡ. ಸಂದರ್ಶನದ ಸಮಯದಲ್ಲಿ “ಒಬ್ಬ ನಟನಿಂದ ರಾಜಕೀಯ ಮಾತನಾಡಿಸಿ ವಿವಾದ ಮಾಡೋ ಕೆಟ್ಟಬುದ್ಧಿ ನಿಮಗ್ಯಾಕೆ?’ ಎಂದು ರೈ ಪ್ರಶ್ನಿಸಿದ್ದರು. ಆದರೆ ಗೌರಿ ಲಂಕೇಶ್‌ ಕೊಲೆ ವಿಷಯದಲ್ಲಿ ಮೋದಿಯನ್ನು ಎಳೆದುತರುವ ಕೆಟ್ಟಬುದ್ಧಿ ನಿಮಗ್ಯಾಕೆ ಎಂದು ಈಗ ಜನ ಕೇಳುವಂತಾಗಿದೆ. ಮಾಧ್ಯಮದವರು ಜವಾಬ್ದಾರಿಯಿಂದ ಇರಬೇಕು ಎಂದು ಹೇಳುವ ಪ್ರಕಾಶ್‌ ರೈಗೆ ಜವಾಬ್ದಾರಿ ಇಲ್ಲವೇ? ಯಾವ ಸಂದರ್ಭದಲ್ಲಿ ಯಾವ ಪ್ರಶ್ನೆಕೇಳಬೇಕು ಎಂಬ ಬೇಸಿಕ್‌ ಜ್ಞಾನ ಇಲ್ಲವೇ? ನಾನೇನು ಪಾಪ ಮಾಡಿದ್ದೇನೆ ನಿಮಗೆ? ಎಂದು ಪತ್ರಕರ್ತರನ್ನು ರೈ ಪ್ರಶ್ನಿಸುತ್ತಾರೆ. ಹಾಗಾದರೆ ಈಗ ಪ್ರಕಾಶ್‌ ರೈಗೆ ಕೆಟ್ಟ ಬುದ್ಧಿ ಬಂದಿದ್ಯಾಕೆ? ಮಾಧ್ಯಮದವರು ಜವಾಬ್ದಾರಿಯಿಂದ ಇರಬೇಕು ಎಂದು ಪಾಠ ಮಾಡುವ, ಇದನ್ನು ಪ್ರಸಾರ ಮಾಡಿ ಎಂದೂ ಹೇಳುವ ಪ್ರಕಾಶ್‌ ರೈಗೆ ಜವಾಬ್ದಾರಿ ಇಲ್ಲವೇ? ಆಗಿರುವ ಒಂದು ಕೊಲೆಗೆ ಪ್ರಧಾನಿಯನ್ನೇ ಹೊಣೆಯೆಂದು ಹೇಳುವುದು ಪ್ರಜ್ಞಾವಂತೆ ವರ್ತಿಸುವ ರೈಗೆ ಶೋಭೆಯೇ? ಯಾವ ಸಂದರ್ಭದಲ್ಲಿ ಯಾವ ಪ್ರಶ್ನೆ ಕೇಳಬೇಕು ಎಂಬುದನ್ನೇ ಹೇಳಿಕೊಡುವಷ್ಟು ಬುದ್ಧಿ ಇರುವ ಪ್ರಕಾಶ್‌ ರೈಗೆ ಎಲ್ಲಿ ಏನನ್ನು ಮಾತನಾಡಬೇಕು ಎಂಬುದರ ಅರಿವಿಲ್ಲದಂತಾಯಿತೇ? ರೈ ಉದ್ದೇಶ ಸರಿಯಾಗಿದ್ದರೆ ಯಾಕೆ ಬರುತ್ತಿತ್ತು ಮೋದಿಯ ಬಗ್ಗೆ ಆರೋಪ? ಮೋದಿ ಅತ್ಯುತ್ತಮ ನಟ ಎಂಬ ಆರೋಪ ಮಾಡಬೇಕಾದರೆ ಪತ್ರಕರ್ತೆಗೆ ಪಾಠ ಮಾಡುವಾಗಿದ್ದಷ್ಟೇ ಜವಾಬ್ದಾರಿ ರೈಗಿತ್ತೇ? ಇಷ್ಟಕ್ಕೂ ಮೋದಿ ಪ್ರಕಾಶ್‌ ರೈಗೇನು ಮಾಡಿದ್ದರು? ಎಲ್ಲರೂ ಮನುಷ್ಯರೇ, ಸಮಸ್ಯೆ ಬೇರೆ ಇದೆ ಎಂಬ ಅವರ ಮಾತನ್ನೇ ಅವರು ಮರೆತರೇ? ಪ್ರಕಾಶ್‌ ರೈ ತನಗೆ ಲಭಿಸಿದ್ದೆಲ್ಲ ಶ್ರಮದಿಂದ, ಬೇರೆಯವರಿಗೆ ಎಲ್ಲವೂ ಶ್ರಮವಿಲ್ಲದೇ ಸಿಕ್ಕದ್ದು ಅಂದುಕೊಂಡಿದ್ದಾರಾ? ಸ್ವಾಮಿ ಪ್ರಕಾಶ್ ರೈ ಅವರೇ, ಮೋದಿಯವರು ಇಂದು ಪ್ರಧಾನಿಯಾಗಿದ್ದರೆ ಅದು ಕೂಡ ಶ್ರಮದ ಫಲವೇ ಎಂಬುದನ್ನು ತಿಳಿದುಕೊಳ್ಳಿ. ಮೋದಿ ಸುಲಭಕ್ಕೆ ಗುಜರಾತ್‌ ಮುಖ್ಯಮಂತ್ರಿಯಾಗಿ ಮೂರು ಬಾರಿ ಆಯ್ಕೆಯಾಗಿಲ್ಲ. ಅವರನ್ನು ಪ್ರಧಾನಿಯಾಗಿ ಆರಿಸಿದ ದೇಶದ ಜನ ಮೂರ್ಖರಲ್ಲ ಎಂಬುದನ್ನು ರೈ ಅರ್ಥಮಾಡಿಕೊಳ್ಳಬೇಕು. ಗುಜರಾತ್‌ನಲ್ಲಿ ಅವರು ಮಾಡಿದ ಕೆಲಸಗಳನ್ನು ಜನ ಗುರುತಿಸಿದ್ದಾರೆ. ಅವರು ಅದಕ್ಕಾಗಿ ಕಷ್ಟಪಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಅವರು ದೇಶ, ರಾಜ್ಯಗಳನ್ನು ಗಮನದಲ್ಲಿರಿಸಿಕೊಂಡು ಕೆಲಸಮಾಡಿದ್ದಾರೆ. ದುಡ್ಡು ಮಾಡುವ ಗೋಜಿಗೆ ಹೋಗಿಲ್ಲ. ಸ್ವಾರ್ಥಕ್ಕೆ ಬಲಯಾಗಿಲ್ಲ. ರಾಷ್ಟ್ರವೇ ಮೊದಲು ಎಂಬುದನ್ನು ಇತರರಿಗೂ ಮಾದರಿಯಾಗುವಂತೆ ತೋರಿಸಿಕೊಟ್ಟಿದ್ದಾರೆ. ಸ್ವಚ್ಛ ಭಾರತದಂತ ಒಳ್ಳೆಯ ಕನಸೊಂದನ್ನು ದೆಶದ ಜನರಲ್ಲಿ ಬಿತ್ತಿದ್ದಾರೆ. ಮೋದಿಯೇ ಆದರೂ ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಹಾಗೆಯೇ ಪ್ರಕಾಶ್‌ ರೈ ಕೂಡ ನಟನೆಯಿಂದ ಎಲ್ಲರನ್ನೂ ಖುಷಿಪಡಿಸಲು ಸಾಧ್ಯವಿಲ್ಲ. ಇದನ್ನು ಬಹುಶಃ ಪ್ರಕಾಶ್‌ ರೈ ಮರೆತಿದ್ದಾರೆ. ಇಲ್ಲವಾದಲ್ಲಿ ಮೋದಿಯನ್ನು ನಟನೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಎಂದು ಭ್ರಮಿಸಿಕೊಂಡಿದ್ದಾರೆ. ಅದಕ್ಕೇ ಅವರು ಮೋದಿ ತನ್ನನ್ನೂ ಮೀರಿಸುವ ನಟ ಎಂದು ಆರೋಪಿಸಿ, ತಾವು ಅವರೊಂದಿಗೆ ಪೈಪೋಟಿಗೆ ಇಳಿದಿದ್ದೇನೆ ಭಾವಿಸಿಕೊಂಡಿದ್ದಾರೆ. ಅದಕ್ಕೇ ಅವರಿಗೆ ಮೋದಿ ಅವರ ವಿರೋಧಿಯಂತೆ ಕಾಣುತ್ತಿದ್ದಾರೆ. ಈ ಭ್ರಮೆಯನ್ನು ಆದಷ್ಟು ಬೇಗ ನಿವಾರಿಸಿಕೊಳ್ಳುವ ಶಕ್ತಿಯನ್ನು ದಯಾಳುವಾದ ಪರಮಾತ್ಮನು ಪ್ರಕಾಶ್‌ ರೈಗೆ ನೀಡಲಿ.
ಒಂದೊಂದೇ ರಾಜ್ಯದ ಆಡಳಿತ ಕೈಬಿಟ್ಟು ಹೋಗುತ್ತಿರುವಂತೆಯೇ ಆಡಳಿತಾರೂಢ ಬಿಜೆಪಿ ಇದೀಗ ರಾಷ್ಟ್ರದ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಲೇಬೇಕೆಂಬ ಹಠ ತೊಟ್ಟಿದ್ದು, ಇದಕ್ಕಾಗಿ ಹಲವಾರು ಆಮಿಷಗಳ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು 2020ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಹಿಂದಿನ ಎರಡು ಚುನಾವಣೆಗಳಲ್ಲಿ ಆದ ಸೋಲನ್ನು ಈ ಬಾರಿ ಗೆಲುವಿನ ಮೂಲಕ ಮರೆಯುವ ಪ್ರಯತ್ನ ನಡೆಸಲು ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ನಗರ ಕೇಂದ್ರಿತ ಮತ್ತು ಸಿರಿವಂತರ ಪರವಾಗಿರುವ ಪಕ್ಷ ಎಂದೇ ಬಿಂಬಿತವಾಗಿರುವ ಬಿಜೆಪಿ ಇನ್ನು ಮುಂದೆ ಇಂತಹ ಹಣೆಪಟ್ಟಿ ಕಟ್ಟಿಕೊಂಡು ಹೋದರೆ ಮತದಾರ ಮತ ಹಾಕುವುದಿಲ್ಲ ಎಂಬುದನ್ನು ಮನಗಂಡಿದೆ. ಅಲ್ಲದೇ, ಇದುವರೆಗೆ ನಡೆದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ರಾಷ್ಟ್ರೀಯವಾದ, ಮೋದಿ ಅಲೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಹೋಗಿ ಐದು ಪ್ರಮುಖ ರಾಜ್ಯಗಳಲ್ಲಿ ಕೈಸುಟ್ಟುಕೊಂಡಿದ್ದರಿಂದ ದೆಹಲಿ ಚುನಾವಣೆಯಲ್ಲಿ ಬೇರೆಯದ್ದೇ ಆದ ಯೋಜನೆಗಳನ್ನು ರೂಪಿಸುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತಿತರೆ ರಾಜ್ಯಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬಿಟ್ಟು ಮತ್ತು ಸ್ಥಳೀಯ ಮಟ್ಟದಲ್ಲಿ ಬಿಜೆಪಿಗೆ ಇದ್ದ ಆಡಳಿತ ವಿರೋಧಿ ಅಲೆಗಳನ್ನು ಪಕ್ಕಕ್ಕೆ ಸರಿಸಿ ಕೇವಲ ಪ್ರಧಾನಿ ಮೋದಿ ಅಲೆಯ ಮೇಲೆ ತೇಲಿದ್ದರಿಂದ ಬಿಜೆಪಿ ಅಧಿಕಾರವನ್ನು ಕಳೆದುಕೊಳ್ಳುವ ಮೂಲಕ ಸೋಲಿನ ಅಲೆಯ ವಿರುದ್ಧ ಈಜಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠೆಯಂತಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವನ್ನು ಸಾಧಿಸುವ ನಿಟ್ಟಿನಲ್ಲಿ ಇನ್ನೂ ಎರಡು ತಿಂಗಳಿರುವಾಗಲೇ ಮತದಾರರನ್ನು ಓಲೈಸಿಕೊಳ್ಳಲೆಂದೇ ಹಲವಾರು ವೋಟ್ ಬ್ಯಾಂಕ್ ಯೋಜನೆಗಳನ್ನು ಪ್ರಕಟಿಸುತ್ತಿದೆ. ಇದರಲ್ಲಿ ಪ್ರಮುಖವಾಗಿ ದೆಹಲಿಯ 1,731 ಅನಧಿಕೃತ ಕಾಲೋನಿಗಳನ್ನು ಸಕ್ರಮ ಮಾಡಿ ಅವರಿಗೆ ಹಕ್ಕುಪತ್ರಗಳನ್ನು ನೀಡುವ ಹೊಸ ಕಾನೂನನ್ನು ಜಾರಿಗೆ ತರುವ ಭರವಸೆಯನ್ನು ನೀಡಿದೆ. ಇದನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಘೋಷಣೆ ಮಾಡಿದ್ದಾರೆ. ಕಳೆದ ಚುನಾವಣೆಯ ವೇಳೆ, ಆಮ್ ಆದ್ಮಿ ಪಾರ್ಟಿ ಉಚಿತ ಕುಡಿಯುವ ನೀರು ಮತ್ತು ವಿದ್ಯುತ್ ಯೋಜನೆಯನ್ನು ಪ್ರಕಟಿಸುವ ಮೂಲಕ ಮತದಾರರ ಹೃದಯ ಮತ್ತು ಮನಸನ್ನು ಕದಿಯುವ ಮೂಲಕ ಕ್ಲೀನ್ ಸ್ವೀಪ್ ಮಾಡಿ ಅಧಿಕಾರದ ಗದ್ದುಗೆ ಏರಿತ್ತು. ಇದಲ್ಲದೇ, ಶಾಲೆಗಳಿಗೆ ಆಟದ ಮೈದಾನ ಮತ್ತು ಮೊಹಲ್ಲಾಗಳಲ್ಲಿ ಕ್ಲಿನಿಕ್ ಗಳನ್ನು ಆರಂಭಿಸುವ ಮೂಲಕ ಪ್ರಾಥಮಿಕ ಆರೋಗ್ಯಕ್ಕೆ ಆದ್ಯತೆ ನೀಡಿದ್ದರಿಂದ ಫಿದಾ ಆಗಿದ್ದ ಮತದಾರರು ಆಮ್ ಆದ್ಮಿ ಪಾರ್ಟಿಯ ಕೈ ಹಿಡಿದಿದ್ದರು. ಈ ಬಾರಿಯೂ ಆಮ್ ಆದ್ಮಿ ಪಾರ್ಟಿಯಿಂದ ಇಂತಹ ಇನ್ನೂ ಹಲವಾರು ಯೋಜನೆಗಳ ಭರವಸೆ ಹೊರ ಬರಬಹುದೆಂಬ ನಿರೀಕ್ಷೆಯಲ್ಲಿ ಬಿಜೆಪಿ ಅದಕ್ಕೂ ಮುನ್ನವೇ ಕಾಲೋನಿಗಳನ್ನು ಸಕ್ರಮ ಮಾಡುವ ಯೋಜನೆಯನ್ನು ಘೋಷಿಸಿದೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ “ಧನ್ಯವಾದ ರ್ಯಾಲಿ’’ ಮೋದಿ ಈ ಯೋಜನೆಯನ್ನು ಪ್ರಕಟಿಸಿದ್ದಾರೆ. ಫೆಬ್ರವರಿಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ಸರ್ಕಾರ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ದೆಹಲಿ (ಅನಧಿಕೃತ ಕಾಲೋನಿಗಳ ನಿವಾಸಿಗಳ ಸಾರ್ವಜನಿಕ ಹಕ್ಕು ಪರಿಗಣಿಸುವುದು) ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರವನ್ನೂ ಪಡೆದುಕೊಂಡಿದೆ. ದೆಹಲಿಯಲ್ಲಿರುವ ಅನಧಿಕೃತ ಕಾಲೋನಿಗಳಲ್ಲಿ ವಾಸವಾಗಿರುವ ನಿವಾಸಿಗಳಿಗೆ ಅವರಿರುವ ಜಾಗದ ಮಾಲೀಕತ್ವದ ಹಕ್ಕನ್ನು ನೀಡುವುದು ಈ ಮಸೂದೆಯ ಉದ್ದೇಶವಾಗಿದೆ. ಈ ಕಾನೂನಿನ ಪ್ರಕಾರ ಆಸ್ತಿಯ ಮಾಲೀಕತ್ವದ ಹಕ್ಕು ನಿವಾಸಿಗಳಿಗೆ ದೊರೆಯಲಿದೆ. ಆಸ್ತಿಯ ವರ್ಗಾವಣೆ, ಅಡಮಾನ, ಆಸ್ತಿಯ ಹಕ್ಕು ಪ್ರತಿಪಾದನೆ, ಮಾರಾಟ ಒಪ್ಪಂದ, ಸ್ವಾಧೀನ ಪ್ರಮಾಣಪತ್ರ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ನಿವಾಸಿಗಳಿಗೆ ನೀಡಲಾಗುತ್ತದೆ. 2008ರಲ್ಲಿಯೇ ಅಂದಿನ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದು ಅನಧಿಕೃತ ಕಾಲೋನಿಗಳನ್ನು ಸಕ್ರಮ ಮಾಡಲು ನಿರ್ಧರಿಸಿತ್ತಾದರೂ, ಕಡೆಗೆ ಕೈಬಿಟ್ಟಿತ್ತು. ಇದೀಗ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ಪಡೆದಿದೆಯಾದರೂ, ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲು 2021ರವರೆಗೆ ಕಾಲಾವಕಾಶ ಬೇಕು ಎಂದು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಹೇಳಿದೆ. ಈಗ ಆಮ್ ಆದ್ಮಿ ಪಾರ್ಟಿಗೆ ಬಿಜೆಪಿ ಅನುಮೋದನೆ ಪಡೆದಿರುವ ಈ ಕಾಯ್ದೆಯನ್ನು ಜಾರಿಗೆ ತಂದರೂ ಕಷ್ಟ, ತರದಿದ್ದರೂ ಕಷ್ಟ ಎಂಬಂತಾಗಿದೆ. ಏಕೆಂದರೆ, ಜಾರಿಗೆ ತಂದರೆ ಇದರ ಎಲ್ಲಾ ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆ, ತರದಿದ್ದರೆ ಪ್ರಚಾರದ ವೇಳೆ ಇಂತಹ ಜನಪರವಾದ ಯೋಜನೆಯನ್ನು ಆಮ್ ಆದ್ಮಿ ಪಾರ್ಟಿ ಜಾರಿಗೆ ತರಲಿಲ್ಲ ಎಂದು ವ್ಯತಿರಿಕ್ತವಾದ ಪ್ರಚಾರ ಮಾಡಿ ಬಿಜೆಪಿ ಮತಗಳನ್ನು ಸೆಳೆಯಲು ಪ್ರಯತ್ನಿಸಲಿದೆ. ಹೀಗಾಗಿ ಆಮ್ ಆದ್ಮಿ ಪಾರ್ಟಿಗೆ ಈ ಯೋಜನೆ ಅತ್ತ ದರಿ ಇತ್ತ ಪುಲಿಯಂತಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆ ವೇಳೆ ಪ್ರಚಾರದ ಪ್ರಮುಖವಾಗಿ ಪ್ರಸ್ತಾಪಿಸಲು ಬಿಜೆಪಿಗೆ ಹೇಳಿಕೊಳ್ಳುವಂತಹ ವಿಚಾರಗಳು ಇರಲಿಲ್ಲ. ಇದೀಗ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ಪಡೆಯುತ್ತಿದ್ದಂತೆಯೇ ಅನಧಿಕೃತ ಕಾಲೋನಿಗಳ ಸಕ್ರಮ ಕಾನೂನಿನ ಬಗ್ಗೆ ಗಲ್ಲಿ ಗಲ್ಲಿಗಳಲ್ಲಿ ಸ್ಥಳೀಯ ಬಿಜೆಪಿ ನಾಯಕರು ಪ್ರಚಾರವನ್ನು ಆರಂಭಿಸಿದ್ದಾರೆ. ಇಷ್ಟೇ ಅಲ್ಲ, ಈ ಹೊಸ ಕಾನೂನನ್ನು ತರಲು ನಿರ್ಧರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಹೇಳುವ ಸಂಬಂಧ ಸಹಿ ಸಂಗ್ರಹಣೆ ಮಾಡಲಾಗಿದೆ. ಇದಕ್ಕೆ ಅನಧಿಕೃತ ಕಾಲೋನಿಗಳ 11 ಲಕ್ಷ ನಿವಾಸಿಗಳ ಬಳಿ ಸಹಿಯನ್ನು ಹಾಕಿಸಿಕೊಳ್ಳಲಾಗುತ್ತಿದೆ. ಮೋದಿ ನೇತೃತ್ವದಲ್ಲಿ ನಡೆದ ಧನ್ಯವಾದ ರ್ಯಾಲಿಗೆ ಎಲ್ಲಾ ಅನಧಿಕೃತ ಕಾಲೋನಿಗಳ ನಿವಾಸಿಗಳ ಸಂಘಗಳ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ಇದಿಷ್ಟೇ ಅಲ್ಲ, ಬಿಜೆಪಿ ಈ ಹೊಸ ಕಾನೂನನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ 350 ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಆಯೋಜಿಸುತ್ತಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೈಕ್ ರ್ಯಾಲಿಗಳನ್ನೂ ಆಯೋಜಿಸುತ್ತಿದೆ. ಈ ಮೂಲಕ ಕಳೆದ ಚುನಾವಣೆಯಲ್ಲಿ ಆಗಿದ್ದ ಮುಖಭಂಗವನ್ನು ಈ ಬಾರಿ ಗೆಲುವನ್ನಾಗಿ ಮಾಡಿಕೊಳ್ಳಲು ಬಿಜೆಪಿ ತುದಿಗಾಲ ಮೇಲೆ ನಿಂತಿದೆ. ಆದರೆ, ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಅಷ್ಟು ಸುಲಭವಾಗಿ ಅಧಿಕಾರವನ್ನು ಬಿಟ್ಟುಕೊಡುವ ಲಕ್ಷಣಗಳಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಯಾವ ರೀತಿ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡಬೇಕೆಂಬುದರ ಬಗ್ಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಬಿಜೆಪಿಯ ಈ ಹೊಸ ಕಾನೂನಿನ ಕಾರ್ಯತಂತ್ರಕ್ಕೆ ಈಗಾಗಲೇ ಆಮ್ ಆದ್ಮಿ ಪಾರ್ಟಿ ಪ್ರತಿತಂತ್ರವನ್ನು ರೂಪಿಸಿದೆ. ಆಮ್ ಆದ್ಮಿ ಪಾರ್ಟಿ ನಾಯಕ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಈ ಮತದಾರರನ್ನು ಓಲೈಸುವ ಯೋಜನೆ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಲೋನಿಗಳನ್ನು ಸಕ್ರಮ ಮಾಡುವ ಬಗ್ಗೆ ಬಿಜೆಪಿಗೆ ಗಂಭೀರತೆ ಇಲ್ಲ. ಒಂದು ವೇಳೆ ಇದ್ದಿದ್ದೇ ಆದಲ್ಲಿ ಮತ್ತು ಈ ಯೋಜನೆ ನಿಜಕ್ಕೂ ಜನಪರವಾಗಿದ್ದರೆ ಇನ್ನೂ ಏಕೆ ನಿವಾಸಿಗಳಿಗೆ ಮನೆಗಳನ್ನು ನೋಂದಣಿ ಮಾಡಿಕೊಡುವ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದುವರೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ. ಹೊಸ ಕಾನೂನು ಜಾರಿಗೆ ತರಲಾಗುತ್ತದೆ. ಡಿಸೆಂಬರ್ ಅಂತ್ಯದ ವೇಳೆಗೆ 600 ಕ್ಕೂ ಹೆಚ್ಚು ಕಾಲೋನಿಗಳಿಗೆ ಹಕ್ಕುಪತ್ರ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಿರಿ. ಆದರೆ ಇದುವರೆಗೆ ಒಬ್ಬರಿಗೂ ಹಕ್ಕುಪತ್ರ ನೀಡದೇ ದೆಹಲಿಯ ಮುಗ್ಧ ಜನರಿಗೆ ನೀವು ಮತ್ತೊಮ್ಮೆ ವಂಚಿಸಿದ್ದೀರಿ ಎಂದು ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುವುದನ್ನು ಆರಂಭಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷ ಕಾಲೋನಿಗಳನ್ನು ಸಕ್ರಮಗೊಳಿಸುವ ಸುಳ್ಳು ಭರವಸೆ ನೀಡಿತ್ತು, ಅದನ್ನೇ ಬಿಜೆಪಿ ಮುಂದುವರಿಸಿದೆ ಎಂದು ಕಿಡಿಕಾರುತ್ತಿರುವ ಕೇಜ್ರಿವಾಲ್, ಈ ಅನಧಿಕೃತ ಕಾಲೋನಿಗಳಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಜಾರಿಯಲ್ಲಿವೆ. ಸದ್ಯದಲ್ಲೇ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಈ ಸೌಲಭ್ಯಗಳನ್ನು ಆಮ್ ಆದ್ಮಿ ಪಾರ್ಟಿ ತನ್ನ ವಾಗ್ದಾನದಂತೆ ಪೂರೈಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿಗೆ ಸೆಡ್ಡು ಹೊಡಿದಿದ್ದಾರೆ. ಈ ಮೂಲಕ ಕೇಜ್ರಿವಾಲ್ ಅನಧಿಕೃತ ಕಾಲೋನಿಗಳ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಇದುವರೆಗೆ ದೆಹಲಿ ಅಭಿವೃದ್ಧಿ ಬಗ್ಗೆ ಸೊಲ್ಲೆತ್ತದೇ ಇದ್ದ ಬಿಜೆಪಿ ಇದೀಗ ಚುನಾವಣೆ ಹೊಸ್ತಿಲಲ್ಲಿರುವಾಗ ಅನಧಿಕೃತ ಕಾಲೋನಿಗಳ ಬಗ್ಗೆ ಮಮಕಾರವನ್ನು ಹುಟ್ಟಿಸಿಕೊಂಡಿದೆ ಮತ್ತು ಅಲ್ಲಿನ ನಿವಾಸಿಗಳ ಬಗ್ಗೆ ಅಕ್ಕರೆಯನ್ನು ತೋರುತ್ತಿದೆ. ಚುನಾವಣೆಗೆ ಮುನ್ನ ಕೇವಲ 100 ನಿವಾಸಿಗಳಿಗೆ ಹಕ್ಕುಪತ್ರ ಕೊಟ್ಟು ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡುವ ತಯಾರಿ ನಡೆಸಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಬಡವರ ಬಗ್ಗೆ ತೋರುತ್ತಿರುವ ಕಾಳಜಿ ಬಿಜೆಪಿ ಮತಗಳಾಗಿ ಪರಿವರ್ತನೆ ಮಾಡುವುದು ದುಸ್ತರ ಎಂದೇ ಹೇಳಲಾಗುತ್ತಿದೆ.
ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ 2018-19 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ”, “ಶುಲ್ಕ ವಿನಾಯಿತಿ”, ವಿದ್ಯಾಸಿರಿ-“ಊಟ ಮತ್ತು ವಸತಿ ಸಹಾಯ ಯೋಜನೆ” ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. National Scholarship National Scholarships Portal is one-stop solution through which various services starting from student application, application receipt, processing, sanction and disbursal of various scholarships to Students are enabled. National Scholarships Portal is taken as Mission Mode Project under National e-Governance Plan (NeGP) SC/ST Scholarship Karnataka Government is providing Scholarship for SC/ST Pre-Metric & Post-Metric Students. And also providing Prize Money for SSLC Student
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಬಲೂನ್‌ಗೆ ಗಾಳಿ ತುಂಬುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ – ಮಗು ಮೃತ್ಯು ನಾಗ್ಪುರ:ಆ 28.ಅಜ್ಜ ಖರೀದಿಸುತ್ತಿದ್ದ ಬಲೂನ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎರಡು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಸಾಂದರ್ಭಿಕ ಚಿತ್ರ ಕೃಷಿ ಚಟುವಟಿಕೆ, ಎತ್ತುಗಳ ಮಹತ್ವ ತಿಳಿಸಲು ಆಚರಿಸಲಾದ ತನ್ಹಾ ಪೋಲಾ ಹಬ್ಬಕ್ಕೆ ಮಗು ತನ್ನ ಅಜ್ಜನೊಂದಿಗೆ ಹೋಗಿದ್ದು, ಈ ವೇಳೆ ಬಲೂನ್ ಖರೀದಿಸುತ್ತಿದ್ದಾಗ ಗಾಳಿ ತುಂಬಲು ಬಳಸುವ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಸಿಲಿಂಡರ್‌ನ ಒಂದು ಭಾಗ ಆಕೆಯ ಕಾಲಿಗೆ ತಗುಲಿದ್ದರಿಂದ ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ಪ್ರೇಮ ವಿವಾಹಕ್ಕೆ ಕುಜ, ಬುಧ, ಶುಕ್ರ, ರಾಹು ಕಾರಕರು. ಸಮಗ್ರಹಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಕುಜ, ಶನಿ, ಶುಕ್ರ, ಬುಧ, ಚಂದ್ರರು ಸಮಗ್ರಹಗಳು. 2,5,7,11ನೇ ಭಾವಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಭಾವಾಧಿಪತಿಗಳು ಬಲಾಢ್ಯರಾಗಲೀ ಅಥವಾ ಪರಿವರ್ತಿತರಾದಾಗ ಪ್ರೇಮವಿವಾಹವುಂಟಾಗುತ್ತದೆ. ವಕ್ರಗ್ರಹಗಳು ಪ್ರೇಮವಿವಾಹ ಕಾರಕರು. ವಕ್ರಗ್ರಹಗಳು ಶಕ್ತಿಯುತವಾಗೆ 2/5/7/11ರಲ್ಲಿದ್ದರೆ ಪ್ರೇಮ ವಿವಾಹ ಉಂಟಾಗುತ್ತದೆ. ರಾಹುವಿನ ಪ್ರಭಾವ ಕುಜ, ಶನಿ, ಚಂದ್ರ, ಬುಧ, ಶುಕ್ರನ ಮೇಲೆ ಇದ್ದಾಗಲೂ ಪ್ರೇಮ ವಿವಾಹವುಂಟಾಗುತ್ತದೆ. ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ವತ್ಸ ಪ್ರಾಚೀನ ಭಾರತದ ಉತ್ತರಪಥದ ಹದಿನಾರು ಮಹಾಜನಪದಗಳಲ್ಲಿ ಒಂದು. ಇದು ಗಂಗಾ ಬಯಲಿನಲ್ಲಿ ಸ್ಥಿತವಾಗಿತ್ತು. ಕೌಶಾಂಬಿ ಇದರ ರಾಜಧಾನಿ[೧], ಈಗ ಇದನ್ನು ಕೋಸಮ್ ಎಂದು ಕರೆಯಲಾಗುತ್ತದೆ ಮತ್ತು ಉತ್ತರ ಪ್ರದೇಶದಲ್ಲಿನ ಸಣ್ಣ ಪಟ್ಟಣವಾಗಿದೆ. ಈ ಪಟ್ಟಣದಲ್ಲಿ ಕೋಸಮ್ ಅವಶೇಷಗಳು ಎಂದು ಕರೆಯಲಾದ ಒಂದು ಪುರಾತತ್ವ ತಾಣವಿದೆ ಮತ್ತು ಇದು ಪ್ರಾಚೀನ ಭಾರತದ ಕೌಶಾಂಬಿಯೆಂದು ನಂಬಲಾಗಿದೆ. ವತ್ಸದ ಭೌಗೋಳಿಕ ನೆಲೆ ಗಂಗಾ ಮತ್ತು ಯಮುನಾ ನದಿಗಳ ಸಂಗಮದ ಹತ್ತಿರವಿತ್ತು. ವತ್ಸ ಮಹಾಜನಪದ ವತ್ಸರು ಕುರು ರಾಜವಂಶದ ಶಾಖೆಯಾಗಿದ್ದರು. ಋಗ್ವೈದಿಕ ಕಾಲದಲ್ಲಿ, ಕುರು ರಾಜ್ಯವು ಹರ್ಯಾಣಾ/ದೆಹಲಿ ಮತ್ತು ಪ್ರಯಾಗ್/ಕೌಶಾಂಬಿವರೆಗೆ ಗಂಗಾ ಜಮುನಾ ದೋವಾಬ್ ಪ್ರದೇಶವನ್ನು ಒಳಗೊಂಡಿತ್ತು ಮತ್ತು ಹಸ್ತಿನಾಪುರ ಅದರ ರಾಜಧಾನಿಯಾಗಿತ್ತು. ಉತ್ತರ ವೈದಿಕ ಕಾಲದಲ್ಲಿ, ಹಸ್ತಿನಾಪುರ ಪ್ರವಾಹಗದಿಂದ ನಾಶವಾಯಿತು, ಮತ್ತು ಕುರು ರಾಜ ನಿಚಕ್ಷು ತನ್ನ ಎಲ್ಲ ಪ್ರಜೆಗಳೊಂದಿಗೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿ ಹೊಸದಾಗಿ ನಿರ್ಮಾಣಗೊಂಡ ರಾಜಧಾನಿ ಕೌಶಾಂಬಿಯಲ್ಲಿ ನೆಲೆಸಿದ. ವೈದಿಕ ಕಾಲದ ನಂತರದಲ್ಲಿ, ಆರ್ಯಾವರ್ತ ಹಲವು ಮಹಾಜನಪದಗಳನ್ನು ಹೊಂದಿದ್ದಾಗ, ಕುರು ರಾಜವಂಶವು ಕುರುಗಳು ಮತ್ತು ವತ್ಸರ ನಡುವೆ ವಿಭಜನೆಗೊಂಡಿತ್ತು. ಕುರುಗಳು ಹರ್ಯಾಣಾ/ದೆಹಲಿ/ಮೇಲಿನ ದೋವಾಬ್ ಪ್ರದೇಶವನ್ನು ನಿಯಂತ್ರಿಸುತ್ತಿದ್ದರೆ, ವತ್ಸರು ಕೆಳಗಿನ ದೋವಾಬ್ ಪ್ರದೇಶವನ್ನು ನಿಯಂತ್ರಿಸುತ್ತಿದ್ದರು. ಆಮೇಲೆ, ವಸ್ತರು ಎರಡು ಶಾಖೆಗಳಾಗಿ ವಿಭಜನೆಗೊಂಡರು -- ಮಥುರಾದಲ್ಲಿನ ಒಂದು ಶಾಖೆ, ಮತ್ತು ಕೌಶಾಂಬಿಯಲ್ಲಿನ ಇನ್ನೊಂದು ಶಾಖೆ. ನಿಚಕ್ಷು ಜನಮೇಜಯನ ಮೊಮ್ಮಗನ ಮೊಮ್ಮಗ. ಕೌಶಾಂಬಿಗೆ ಸ್ಥಳಾಂತರಗೊಂಡ ವಿಷಯ ಭಾಸನ ಸ್ವಪ್ನವಾಸವದತ್ತ ಮತ್ತು ಪ್ರತಿಜ್ಞಾ ಯೌಗಂಧರಾಯಣಗಳಿಂದ ಬೆಂಬಲಿತವಾಗಿದೆ. ಇವೆರಡೂ ಪುಸ್ತಕಗಳು ರಾಜ ಉದಯನನು ಭಾರತ ಕುಲದ ವಂಶಸ್ಥನೆಂದು ವರ್ಣಿಸಿವೆ. ಪುರಾಣಗಳು ನಿಚಕ್ಷುವಿನ ಉತ್ತರಾಧಿಕಾರಿಗಳ ಪಟ್ಟಿಯನ್ನು ಒದಗಿಸುತ್ತವೆ, ಪಟ್ಟಿಯಲ್ಲಿ ಕೊನೆಯವನು ರಾಜ ಕ್ಷೇಮಕ. ವತ್ಸ ರಾಜ್ಯದ ಹೆಸರು ಕಾಶಿಯ ರಾಜ ವತ್ಸನಿಂದ ಬಂದಿತು ಎಂದು ಇತರ ಪುರಾಣಗಳು ಹೇಳುತ್ತವೆ. ಚೇದಿ ರಾಜಕುಮಾರ ಕುಶ ಅಥವಾ ಕುಶಾಂಬನು ರಾಜಧಾನಿ ಕೌಶಾಂಬಿಯನ್ನು ಸ್ಥಾಪಿಸಿದನು ಎಂದು ರಾಮಾಯಣ ಮತ್ತು ಮಹಾಭಾರತಗಳು ಹೇಳುತ್ತವೆ. ಎರಡನೇ ಶತಾನೀಕ, ಪರಾಂತಪನು ಸ್ವಲ್ಪ ಖಚಿತ ಮಾಹಿತಿ ಲಭ್ಯವಿರುವ ವತ್ಸ ರಾಜ್ಯದ ಮೊದಲ ಅರಸನಾಗಿದ್ದಾನೆ. ಪುರಾಣಗಳು ಇವನ ತಂದೆಯ ಹೆಸರು ವಸುದಾನ ಎಂದು ಹೇಳಿದರೆ, ಭಾಸನು ಇವನ ತಂದೆಯ ಹೆಸರು ಸಹಸ್ರಾಣೀಕನೆಂದು ಹೇಳುತ್ತಾನೆ. ಶತಾನೀಕನು ವಿದೇಹದ ಒಬ್ಬ ರಾಜಕುಮಾರಿಯನ್ನು ವಿವಾಹವಾದನು. ಇವರಿಬ್ಬರ ಮಗನೇ ಉದಯನ. ಶತಾನೀಕನು ಮೃಗವತಿಯನ್ನೂ ವಿವಾಹವಾದನು, ಇವಳು ಲಿಚ್ಛವಿ ಮುಖ್ಯಸ್ಥ ಚೇಟಕನ ಮಗಳು. ಶತಾನೀಕನು ದಧಿವಾಹನನ ಆಳ್ವಿಕೆಯ ಕಾಲದಲ್ಲಿ ಅಂಗ ರಾಜ್ಯದ ರಾಜಧಾನಿ ಚಂಪಾವನ್ನು ಆಕ್ರಮಣಮಾಡಿದನು. ಉಲ್ಲೇಖಗಳುಸಂಪಾದಿಸಿ ↑ Geographical Review of India. Original from the University of Michigan: Geographical Society of India. 1951. p. 27.
Jul 1, 2022 Breaking news, Droupadi Murmu, India news, kannada news, Karnataka news, National news, Newdelhi, NominationPapers, order, Presidential polls, Yashwant Sinha, ಕ್ರಮಬದ್ಧ, ದ್ರೌಪದಿ ಮುರ್ಮು, ನವದೆಹಲಿ, ನಾಮಪತ್ರಗಳು, ಯಶವಂತ ಸಿನ್ಹಾ, ರಾಷ್ಟ್ರಪತಿ ಚುನಾವಣೆ The New Indian Express ನವದೆಹಲಿ: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ರಾಜ್ಯಸಭಾ ಕಾರ್ಯದರ್ಶಿ ಗುರುವಾರ ಹೇಳಿದ್ದಾರೆ. ರಾಷ್ಟ್ರಪತಿ ಚುನಾವಣೆಗಾಗಿ ಸ್ವೀಕೃತವಾದ 115 ನಾಮಪತ್ರಗಳ ಪೈಕಿ, 28 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿಯೂ ಆಗಿರುವ ರಾಜ್ಯ ಸಭಾ ಪ್ರಧಾನ ಕಾರ್ಯದರ್ಶಿ ಪಿ. ಸಿ ಮೊದಿ ತಿಳಿಸಿದ್ದಾರೆ. 115 ನಾಮಪತ್ರಗಳ ಪೈಕಿ ಉಳಿದಿದ್ದ 72 ಅಭ್ಯರ್ಥಿಗಳ 87 ನಾಮಪತ್ರಗಳಲ್ಲಿ ಅಗತ್ಯ ಅರ್ಹತೆ ಹೊಂದಿಲ್ಲದ ಕಾರಣ 79 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಜೆಡಿಎಸ್ ಬೆಂಬಲ ಜುಲೈ 2 ರಂದು ನಾಮಪತ್ರ ಹಿಂಪಡೆಯಲು ಕಡೆಯೇ ದಿನವಾಗಿದ್ದು, ತದನಂತರ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಗೆಜೆಟ್ ನಲ್ಲಿ ಪ್ರಕಟಿಸಲಾಗುವುದು, ಮುರ್ಮು, ಯಶವಂತ ಸಿನ್ಹಾ ಅವರಲ್ಲದೇ, ಮುಂಬೈಯ ಕೊಳಗೇರಿಯ ನಿವಾಸಿ ಸೇರಿದಂತೆ ಜನಸಾಮಾನ್ಯರು ಕೂಡಾ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವವರಿಗೆ ಕನಿಷ್ಠ 50 ಚುನಾಯಿತ ಪ್ರತಿನಿಧಿಗಳು ಸೂಚಕರಾಗಿ, ಇತರ 50 ಮಂದಿ ದ್ವಿತೀಯ ಸೂಚಕರಾಗಿ ಇರುವಂತೆ ಚುನಾವಣಾ ಆಯೋಗ ಕಡ್ಡಾಯಪಡಿಸಿದೆ.
ಗಾಂಧಿ ಜಯಂತಿ – ಮಹಾತ್ಮ ಗಾಂಧಿಯೆರೆ ಜನ್ಮೊ ದಿನಾಚರಣೆ. ಉಂದು ರಾಷ್ಟೀಯ ಪರ್ಬ, ಪ್ರತಿ ಒರ್ಸೊ ಅಕ್ಟೋಬರ್ ೦೨ ದಾನಿ ಗಾಂಧಿ ಜಯಂತಿ ಆಚರಿಸವುನೆ. ಭಾರತೊದ ಸ್ವಸಂತ್ರೊ ಹೋರಾಟಗಾರೆರೆಡ್ ಒರಿಯಾಯಿನ ಲಾಲ್ ಬಹದ್ದೂರ್ ಶಾಸ್ತ್ರಿಯೆರೆನ ಜನ್ಮೊ ದಿನಾಚರಣೆನ್‍ಲಾ ಇಂದುವೇ ದಿನೊ ಆಚರಿಸವುನೆ. ಮಹಾತ್ಮ ಗಾಂಧೀಜಿ ೧೮೮೬ ಗಾಂಧಿ ಜಯಂತಿದ ಇಸೇಸೊಸಂಪೊಲಿಪುಲೆ ಕರಮಚಂದ ಗಾಂಧಿ ಅಕ್ಟೋಬರ್ 2 ನಮೊನ ದೇಸೊ ಇಡೀಕ ಆಚರಿಸುನ ರಾಷ್ಟ್ರೀಯೊ ಪರ್ಬೊಗು ಕಾರಣೊ ಆನಿ ಗಾಂಧಿ ಜಯಂತಿ. ಮಾಂತ ಸಾಲೆಲೆಡ್, ಸರ್ಕಾರಿ ಕಚೇರಿಲೆಡ್ ಗಾಂಧಿಜಿಯೆರೆ ಪಟೊನು ದೀಡ್ದ್ ಪೂಜೆ ಮಲ್ಪುವೆರ್. ಸಾಲೆಲೆಡ್ ಬುಕ್ಕೊ ಕೋಲೇಜಿಲೆಡ್ ಆನಿ ಗಾಂಧಿಜಿಯೆರೆ ಬಗೆಟ್ ಬುಕ್ಕೊ ಆರೆನ ಸಾದನೆತ ಬಗೆಟ್ ಒಟ್ಟಾದ್ ಆರೆನ ಬದ್ಕ್‌ದ ಚರಿತ್ರೆನ್ ಜೋಕ್ಲೆಗ್ ಪನ್ಪೆರ್. ಅಯಿತ ಜೊತೆಟ್ ಆನಿ ಇಸೇಸೊ ಆದ್ ಸ್ವಚ್ಚ ಮಲ್ಪುನ ಬೇಲೆನ್ ದೀಡೊಂದು ಪ್ರತೀ ಗ್ರಾಮೊಲೆಡ್ ಸ್ರಮದಾನೊ ಮಲ್ಪುವೆರ್. ಸಾಲೆದ ಜೋಕುಲು ಪುಲ್ಯಕಾಂಡೆ ಮೀದ್, ರಾಷ್ಟ್ರಪಿತೆರೆಗ್ ಅಡ್ಡ ಬೂರ್‌ದ್ ಆರೆನ ತತ್ವೊಲೆನ್ ಜೀವನೊಡು ಅಲವಡಿಸಯರ ತಯಾರಾದ್ ಸಾಲೆಗ್ ಬರ್ಪೆರ್. ಇಂಚಿತ್ತಿ ಮಲ್ಲ ನರಮ್ಮಾನಿನ ಜನ್ಮೊ ದಿನೊ ಆಯಿನ ಅಕ್ಟೋಬರ್ ೨ ನಾನಿ ಇಡೀ ದೇಸೊಡು, ರಾಜ್ಯೊಡು, ಗ್ರಾಮೊ ಗ್ರಾಮೊಡುಲಾ ಕಲಿ ಗಂಗಸರೊನು ಪರಿಯರ ಬಲ್ಲಿ, ಮಾರಿಯರ ಬಲ್ಲಿ ಪನ್ಪನೆನ್ ಸರ್ಕಾರೊ ನಿಸೇದೊ ಮಲ್ತಿನವು ನಮೊಕು ಪೆರ್ಮೆದ ಸಂಗತಿ. ಗಾಂಧಿಯೆರೆ ಪುಟ್ಟು ಬುಕ್ಕೊ ಬದ್‍ಕ್ಸಂಪೊಲಿಪುಲೆ ಪುತಲೀಬಾಯಿ ಇಂಬೆರೆ ಪೂರ್ತಿ ಪುದರ್ ಮೋಹನದಾಸ್ ಕರಮ‍ಚಂದ್ ಗಾಂಧಿ. ಇಂಬೆರ್ ಅಕ್ಟೋಬರ್ ೨, ೧೮೬೯ಡ್ ಭಾರತೊದ ಗುಜರಾತ್ ರಾಜ್ಯೊದ ಪೋರಬಂದರ್ಡ್ ಪುಟ್‍ದೆರ್. ಇಂಬೆರೆ ಅಮ್ಮೆರ್ ಕರಮಚಂದ್ ಗಾಂಧಿ. ಅಪ್ಪೆ ಪುತಲೀಬಾಯಿ. ೧೩ನೆ ಪ್ರಾಯೊಡು ಗಾಂಧೀಜಿ ಕಸ್ತೂರಿ ಬಾ ಇಂಬೆರೆನ್ ಮದಿಮೆ ಆಯೆರ್. ಅಯಿನೆಡ್ದ್ ಬುಕ್ಕೊ ಇಂಬೆರೆಗ್ ನಾಲ್ ಜೋಕ್ಲು ಪುಟ್ಟಿಯೆರ್. ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ, ರಾಮದಾಸ್ ಗಾಂಧಿ ಬುಕ್ಕೊ ದೇವದಾಸ್ ಗಾಂಧಿ. ೧೯ನೆ ಪ್ರಾಯೊಡು ಗಾಂಧೀಜಿ ಲಂಡನ್ ನಗರೊದ ಯೂನಿವರ್ಸಿಟಿ ಕಾಲೇಜಿಡ್ ವಕಲತ್ ಬೇಲೆಗ್ ತರಬೇತಿ ಪಡೆಯರ ಪೋದು ತರಬೇತಿನ್ ಮುಗಿತ್ ಬತ್ತೆರ್. ಅಲ್ಪಡ್‌ದ್ ಬತ್ತ್‌ದ್ ಬೊಂಬಾಯಿ ನಗರೊಡು ವಕಲತ್ ಬೇಲೆ ಸುರು ಮಲ್ಪಿಯರ ಪ್ರಯತ್ನಿಸಯೆರ್. ವಕಾಲತ್‍ಡ್ ಜಾಸ್ತಿ ಪ್ರೇಜನೊ ಆವಂದಿನೆಡ್ದಾವರೊ ರಡ್ಡ್ ಒರ್ಸೊಡ್ದ್ ಬುಕ್ಕೊ ದಕ್ಷಿಣ ಆಫ್ರಿಕೊಗು ಕೆಲಸೊದ ಮಿತ್ತ್ ಪೋಯೆರ್. ಅಲ್ಪ ಬಾರತೊಡ ನಿವಾಸಿಲೆಗ್ ಸಮಾನ ಹಕ್ಕ್‌ನ್ ಕೊರಂದಿನ ಬ್ರಿಟಿಷ್ ಸರ್ಕಾರೊದ ವರ್ಣಭೇದೊ ನೀತಿನ್ ತೂದು ಬೇಜಾರಾದ್ ಗಾಂಧೀಜಿ ಅಲ್ಪದ ವರ್ಣಭೇದ ನೀತಿನ್ ಅಲಿಪಾಯರ ಚಳುವಳಿನ್ ಪುಟ್ಟ್‌ದ ಪಾಡ್ಯೆರ್. ಅಲ್ಪದ ಪೀಟರ್ ಮ್ಯಾರಿಟ್ಸ್ ಬರ್ಗ್ ಪನ್ಪಿನ ನಗರೊಡು ರೈಲ್‍ಡ್ ಒಂಜನೆ ದರ್ಜೆ ಟಿಕೆಟ್ ದೆತೊಂಡಲಾ ಅಲ್ಪ ಕುಲ್ಯರ ಬುಡಂದೆ ರೈಲ್‍ಡ್ದ್ ಪಿದಯಿ ಪಾಡ್‌ನಗ ಅಕ್ಲೆನ ವರ್ಣಭೇದೊ ನೀತಿದ ಇರುದ್ದೊ ಹೋರಾಟ ಮಲ್ಪೆರೆ ನಿಚ್ಚಯೊ ಆಂಡ್. ನವಂಬರ್ ೬, ೧೯೧೩ಡ್ ಬಾರತೊದ ಗಣಿಗಾರೆರೆ ಒಂಜಿ ಮೆರವಣಿಗೆಡ್ ಪೋನಗ ಗಾಂಧೀಜಿ ಬಂಧಿತೆರಾಯೆರ್.
ಮಾನಸಿಕ ಒತ್ತಡ ನಮ್ಮ ಅತೀ ದೊಡ್ಡ ಶತ್ರು, ಮಾನಸಿಕ ಒತ್ತಡಕ್ಕೆ ಒಳಗಾದರೆ ಅದರಿಂದ ಆರೋಗ್ಯ ಹಾಳು, ಮಾನಸಿಕ ನೆಮ್ಮದಿ ಹಾಳು, ನಮ್ಮ ಶಕ್ತಿಯೇ ಬತ್ತಿ ಹೋದಂಥ ಅನುಭವ. ಮಾನಸಿಕ ಒತ್ತಡಕ್ಕೆ ಒಳಗಾದಾಗ ಅನವಶ್ಯಕ ನಕಾರಾತ್ಮಕ ಆಲೋಚನೆಗಳು ತಲೆಗೆ ತುಂಬಿಕೊಳ್ಳುತ್ತದೆ. ಇದರಿಂದಾಗಿ ಕೆಲವರಿಗೆ ಖಿನ್ನತೆ ಕೂಡ ಉಂಟಾಗುವುದು, ಹಾಗಾಗಿ ಮಾನಸಿಕ ಒತ್ತಡ ಉಂಟಾದಾಗ ನೀವು ಅದರಿಂದ ಹೊರಬರಲು ಪ್ರಯತ್ನಿಸಲೇಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಲು ನಿಮಗೆ ಹಲವಾರು ದಾರಿಗಳಿವೆ, ಮ್ಯೂಸಿಕ್, ಹೀಲಿಂಗ್ ಮಸಾಜ್‌, ಸೌಂಡ್‌ ಹೀಲಿಂಗ್, ಧ್ಯಾನ ಹೀಗೆ ಅನೇಕ ವಿಧಾನಗಳಿವೆ, ಇವುಗಳ ಮೊರೆ ಹೋದರೆ ಮಾನಸಿಕ ಒತ್ತಡ ಕಡಿಮೆಯಾಗಿ ಒಂದು ಧನಾತ್ಮಕ ಚಿಂತನೆ ಮೂಡಲಾರಂಭಿಸುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾದಾಗ ಸುಮ್ಮನೆ ಕೂತರೆ ಇದರಿಂದ ಮತ್ತಷ್ಟು ಕುಗ್ಗುತ್ತೇವೆ. ಆದ್ದರಿಂದ ಇವುಗಳಿಂದ ಹೊರಬರಲು ಪ್ರಯತ್ನಿಸಲೇಬೇಕು. ಮನಶಾಸ್ತ್ರಜ್ಞರ ಪ್ರಕಾರ ಮ್ಯೂಸಿಕ್‌ ಸಾಧನಗಳ ಶಬ್ದ , ಮಂತ್ರಗಳು ಇವೆಲ್ಲಾ ಮಾನಸಿಕ ಒತ್ತಡ ತುಂಬಾನೇ ಕಡಿಮೆ ಮಾಡುತ್ತೆ, ಹೇಗೆ ಎಂದು ನೋಡೋಣ ಬನ್ನಿ: ಮಂತ್ರಗಳು ಮಂತ್ರಗಳನ್ನು ಧಾರ್ಮಿಕ ಪೂಜೆಯಲ್ಲಿ ಮಾತ್ರ ಬಳಸುವುದು ಎಂದು ನೀವು ಭಾವಿಸಿದರೆ ಅದು ತಪ್ಪು, ಮಂತ್ರಗಳಿಗೆ ಮಾನಸಿಕ ಆರೋಗ್ಯ ವೃದ್ಧಿಸುವ ಶಕ್ತಿಯಿದೆ. ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ನೀವು ಮಂತ್ರಗಳನ್ನು ಪಠಿಸಿದರೆ ಅದು ಮಾನಸಿಕ ಒತ್ತಡ ಹೊರ ಹಾಕುತ್ತೆ, ನಿಮ್ಮಲ್ಲಿ ಧನಾತ್ಮಕ ಶಕ್ತಿ ಅನುಭವ ಉಂಟಾಗುವುದು. ಆಗ ನಿಮ್ಮ ಆಲೋಚನೆಗಳು, ನಿರ್ಧಾರಗಳು ಸರಿಯಾಗಿ ಇರುತ್ತದೆ. ಓಂಕಾರ ನೀವು ಕಣ್ಣುಗಳನ್ನು ಮುಚ್ಚಿ ಓಂಕಾರ ಪಠಿಸಿ ನೋಡಿ, ನಿಮ್ಮಲ್ಲಿಯೇ ಒಂದು ವೃಬ್ರೇಷನ್‌ ಫೀಲ್ ಆಗುತ್ತೆ, ಇದು ಧಾರ್ಮಿಕ ನಂಬಿಕೆಯಲ್ಲ, ನಿಮ್ಮ ಅನುಭವಕ್ಕೆ ಬರುವ ಸತ್ಯ. ಒಂದು ನಿಶ್ಯಬ್ದ ಸ್ಥಳದಲ್ಲಿ ಕೂತು ಸಮಸ್ಥಿತಿ ಭಂಗಿಯಲ್ಲಿ ಕುಳಿತುಕೊಳ್ಳಿ, ನಂತರ ಕಣ್ಣುಗಳನ್ನು ಮುಚ್ಚಿ ಓಂಕಾರ ಉಚ್ಛಾರಣೆ ಮಾಡಿ. ನೀವು ಓಂಕಾರ ಉಚ್ಛಾರಣೆ ಮಾಡುವಾಗ ನಿಮ್ಮ ಮನಸ್ಸಿನ ಗಮನ ನಿಮ್ಮ ಉಚ್ಛಾರಣೆಯ ಮೇಲಿಯೇ ಇರಲಿ. ಈ ರೀತಿ ಬೆಳಗ್ಗೆ ಸಂಜೆ 5 ನಿಮಿಷ ಮಾಡಿ ನೋಡಿ. ನಿಮ್ಮ ಮಾನಸಿಕ ಒತ್ತಡ ತುಂಬಾನೇ ಕಡಿಮೆಯಾಗುವುದು. ಸೌಂಡ್‌ ಹೀಲಿಂಗ್ ಇನ್ಸ್ಟ್ರೂಮೆಂಟ್ ಹಲವು ಸೌಂಡ್‌ ಸಾಧನಗಳಿವೆ, ಅವುಗಳನ್ನು ಕೇಳುತ್ತಿದ್ದರೆ ನೀವು ಆ ಕ್ಷಣ ನಿಮ್ಮನ್ನು ಮರೆತು ತಲ್ಲೀನರಾಗುತ್ತೀರಿ, ಅಷ್ಟೊಂದು ಹಿತ ಅನಿಸುವುದು, ಮನಸ್ಸು ತುಂಬಾ ರಿಲ್ಯಾಕ್ಸ್ ಅನಿಸುವುದು.ಆದ್ದರಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಸೌಂಡ್‌ ಥೆರಪಿ ಮಾಡಿಸುವುದು ಒಳ್ಳೆಯದು. ಮಾನಸಿಕ ಒತ್ತಡ ಬರಲೇಬಾರದು ಎಂದರೆ ಅದು ಸಾಧ್ಯವಿಲ್ಲ, ಅನೇಕ ಕಾರಣಗಳಿಂದ ಉಂಟಾಗುತ್ತದೆ. ಆದರೆ ಅದನ್ನು ಹೊರ ಹಾಕುವುದನ್ನು ಕಲಿತರೆ ತೊಂದರೆಯಿಲ್ಲ. ನಿಮ್ಮ ಮಾನಸಿಕ ಒತ್ತಡ ಹೊರ ಹಾಕಲು ಈ ವಿಧಾನಗಳ ಜೊತೆಗೆ ನಿಮ್ಮ ಇಷ್ಟ ಸಂಗೀತ ಕೇಳುವುದು, ಸಿನಿಮಾ ನೋಡುವುದು, ಪ್ರಾರ್ಥನೆ ಮಂದಿರಗಳಿಗೆ ಹೋಗುವುದು ಮಾಡಿ, ಇದರಿಂದ ತುಂಬಾನೇ ರಿಲೀಫ್ ಅನಿಸುವುದು.
ಭಾರತೀಯ ಸಂಪ್ರದಾಯದಲ್ಲಿ ಅತಿ ಹೆಚ್ಚಿನ ವೀಳ್ಯೆದೆಲೆಗೆ ಮಹತ್ವವಿದೆ. ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲಾ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ನಿತ್ಯದ ದೇವರ ಸಮರ್ಪಣೆಗೂ ಹಣ್ಣು ಕಾಯಿಗಳ ಜತೆಗೆ ಎಲೆ ಅಡಿಕೆ ಇರಲೇಬೇಕು,`ಫಲತಾಂಬೂಲ’ ಕೊಡುವಾಗ ತೆಂಗಿನ ಕಾಯಿಯ ಜತೆಗೆ ವೀಳ್ಯದೆಲೆ ಮತ್ತು ಅಡಿಕೆ ಇಡಲೇ ಬೇಕು. ದೇವರ ಪೂಜೆಯ ಜೊತೆಗೆ ತಾಂಬೂಲಕ್ಕೂ ವೀಳ್ಯದೆಲೆಯನ್ನು ಬಳಸುತ್ತೇವೆ. ಅಡಿಕೆ ಸುಣ್ಣ ಹಾಕಿ ತಿನ್ನುವ ವೀಳ್ಯದೆಲೆಯಿಂದ ಅತಿ ಹೆಚ್ಚಿನ ಉಪಯೋಗಗಳು ದೊರೆಯುತ್ತವೆ. ವೀಳ್ಯದೆಲೆ ತಿನ್ನುವುದರಿಂದ ಆಗುವ ಹಲವು ಪ್ರಯೋಜನಗಳು ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು. ಕ್ಯಾಲ್ಸಿಯಂ ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ. ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಮೂತ್ರ ಸುಲಭವಾಗಿ ಆಗುವುದು. ಮಕ್ಕಳಲ್ಲಿ ನೆಗಡಿ, ಕೆಮ್ಮು, ಕಫ‌ ಉಂಟಾದಾಗ ವೀಳ್ಯದೆಲೆಯ ರಸ, ತುಳಸೀರಸ, ದೊಡ್ಡಪತ್ರೆಯ ರಸ ಬೆರೆಸಿ, ಜೇನು ತುಪ್ಪ ಸೇರಿಸಿ ನೀಡಿದರೆ ಶೀಘ್ರ ಗುಣವಾಗುತ್ತದೆ. ಅಸ್ತಮಾ, ಕೆಮ್ಮು, ಕಫ‌ದಿಂದ ಬಳಲುವವರು, ವೀಳ್ಯದೆಲೆಯ ರಸ, ಬಿಳಿ ಈರುಳ್ಳಿಯ ರಸ ಹಾಗೂಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಕದಡಿ ದಿನಕ್ಕೆ 3-4 ಬಾರಿ ಸೇವಿಸಿದರೆ ತುಂಬಾ ಪರಿಣಾಮಕಾರಿ. ಹೊಟ್ಟು ಉದುರುವುದು, ಕೂದಲು ಉದುರುವುದು ನಿವಾರಣೆಯಾಗುತ್ತದೆ: 2 ಕಪ್‌ ಕೊಬ್ಬರಿ ಎಣ್ಣೆಗೆ ಅರ್ಧ ಕಪ್‌ ವೀಳ್ಯದೆಲೆಯ ರಸ ಮತ್ತು ಅರ್ಧ ಕಪ್‌ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ತಲೆಯ ಕೂದಲಿಗೆ ಹಚ್ಚಿ ಮಾಲೀಶು ಮಾಡಬೇಕು. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. . ವೀಳ್ಯದ ಎಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ. ಹಲ್ಲುನೋವು, ವಸಡುನೋವು ಕಡಿಮೆಯಾಗುತ್ತದೆ: ತೀವ್ರವಾದ ಹಲ್ಲು ನೋವಿದ್ದಾಗ ವೀಳ್ಯದೆಲೆಯ ರಸದಲ್ಲಿ ಲವಂಗದ ಹುಡಿಯನ್ನು ಬೆರೆಸಿ, ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಬೇಕು. ಗರ್ಭಿಣ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜೊತೆಗೆ 4 ಯಾಲಕ್ಕಿ ಕಾಳುಗಳನ್ನಿಟ್ಟು ಜಗಿದು ರಸ ಹೀರಿದರೆ ಶಮನಕಾರಿ. ಗಾಯ ಉಂಟಾದಾಗ, ತುರಿಕೆ ಕಜ್ಜಿಗಳಿಗೆ ವೀಳ್ಯದೆಲೆಯ ರಸದಲ್ಲಿ 4-6 ಹನಿ ನಿಂಬೆರಸ ಬೆರೆಸಿ ಹಚ್ಚಿದರೆ ಗುಣಕಾರಿ. ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ. ವೀಳ್ಯದೆಲೆ ‘ಕೊಲೆಸ್ಟ್ರಾಲ್’ಮತ್ತು ಗಂಟಲಿನಲ್ಲಿನ ಅಂಟು ಕಫವನ್ನು ತೆಗೆದುಹಾಕುತ್ತದೆ. ಅನ್ನಜೀರ್ಣವಾಗಲು ಬೇಕಾಗುವ ನಾರುಮಯ ಹಾಗೂ ಗೆರೆಗಳಿರುವ ಪದಾರ್ಥವು ಈ ಎಲೆಯಿಂದ ಸಿಗುತ್ತದೆ. ಎಲೆಯಲ್ಲಿನ ಕ್ಷಾರತನವು ಜಂತುಗಳನ್ನು ನಾಶಪಡಿಸುತ್ತದೆ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ZEE5ನಲ್ಲಿ ಸ್ಟ್ರೀಂ ಆಗುತ್ತಿರುವ ‘ಅನಂತಂ’ ಒಂದರ ಬೆನ್ನಿಗೆ ಒಂದು ಎಪಿಸೋಡು ನೋಡಬೇಕಾದ ಧಾವಂತದ ವೆಬ್ ಸರಣಿಯಲ್ಲ. ಕೆಲವು ಅಧ್ಯಾಯ‌ ನೋಡಿದ ಮೇಲೆ ಸ್ವಲ್ಪ ಹೊತ್ತಿಗೆ ಬೇರೇನೂ ಬೇಡವೆಂದು ಅನಿಸುವಷ್ಟು ಕಾಡುವಂಥ ಕಥಾ ಸಂಕಲನ. ವಾರದ ಒಂದೊಂದೇ‌ ದಿನ ಒಂದೋ ಎರಡೋ ಕತೆ ನೋಡಿ ಮೆಲುಕು ಹಾಕಿದರೆ ಹೆಚ್ಚು ಅರ್ಥಪೂರ್ಣ. ವೆಬ್ ಸರಣಿಯೆಂಬ ಪ್ರಕಾರ ಬಲು ಸೊಗಸು. ಸಿನಿಮಾದ ಪರಿಧಿಗೆ ಮೀರಿದ್ದು, ಟಿವಿಯ ವ್ಯಾಪ್ತಿಯಲ್ಲಿ ಕಳೆದು ಹೋಗುವಂಥದ್ದು, ಕಾದಂಬರಿ ಆಗಬಹುದಾದ್ದು, ಸಣ್ಣ ಕತೆಯಲ್ಲಿ ಹಿಡಿದಿಡುವಂಥದ್ದು – ಇವೆಲ್ಲ ವೆಬ್ ಸರಣಿಯ ಬೊಗಸೆಯಲ್ಲಿ ಪ್ರತಿಫಲಿಸಬಹುದು. ‘ಅನಂತಂ’ ಎಂಬ ತಮಿಳು ವೆಬ್ ಸರಣಿ ಈ ಎಲ್ಲ ಗುಣಗಳನ್ನೂ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ತನ್ನದಾಗಿಸಿಕೊಂಡಿದೆ. ಇದು‌‌ ಕತೆಯೊಳಗಿನ ಕತೆ, ಇಲ್ಲಿ‌ ಕತೆಗಳು ಅನಂತ, ಕತೆಯೇ‌ ಶ್ರೀಮಂತ. ಬರುವ ಎಂಟೂ ಕತೆಗಳ ಕೇಂದ್ರಬಿಂದು ಅನಂತಂ ಎಂಬ ಮನೆ. ಅರ್ಧ ಶತಮಾನಕ್ಕೂ ಹಳೆಯದಾದ ಆ ಮನೆಗೆ ಹಲವು ಕುಟುಂಬಗಳು ಬಂದು ಹೋಗಿವೆ, ಅಲ್ಲಿ ಬದುಕು ಕಟ್ಟಿಕೊಂಡವರಿದ್ದಾರೆ, ಕೊನೆಯ ಉಸಿರೆಳೆದವರಿದ್ದಾರೆ. ಮಣಿರತ್ನಂ ಗರಡಿಯಲ್ಲಿ ಪಳಗಿದ ನಿರ್ದೇಶಕಿ ಪ್ರಿಯಾ ಆ ಕಥಾ ಸಂಕಲನದ ಬಸ್ಸಿನಲ್ಲಿ ಪ್ರೇಕ್ಷಕನನ್ನು ಕಿಟಕಿ ಬದಿಯ ಸೀಟಲ್ಲಿ ಕೂರಿಸಿ ಕರೆದೊಯ್ಯುತ್ತಾರೆ. ಈ ಕತೆಗಳು ಸಣ್ಣ ಕತೆಗಳಂತೆ. ತೀರಾ ವಾಚ್ಯವಾಗಿ ಹೇಳುತ್ತಾ ಕತೆಯನ್ನು ‘ತಿಳಿಸುವ’ ಧಾವಂತಕ್ಕೆ ಕೈ ಹಾಕುವುದಿಲ್ಲ‌. ತೆರೆಯ ಮೇಲೆ ಕಾಣುವ‌ ಭಾವ ಕೆಲವಾದರೆ ಕಾಣದೇ ಉಳಿಯುವವು ಹಲವು. ‘ರೇಖಾ’‌ ಎಂಬ ಕತೆ ಇದಕ್ಕೆ ಅತಿ ಸೂಕ್ತ ಉದಾಹರಣೆ. 1975ರಲ್ಲಿ ಅನಂತಂಗೆ ಬಾಡಿಗೆಗೆ‌ ಬರುವ ರೇಖಾ‌ ಹಾಗೂ ಸಂದೀಪ್‌‌ಗೆ ಇಬ್ಬರು ಮಕ್ಕಳು. ಚೆನ್ನೈನ ಸಂದೀಪ್‌ ಮತ್ತು ತಿರುಪತಿಯ ಅರ್ಚಕರೊಬ್ಬರ ಮಗಳು ರೇಖಾ ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದರು‌ ಎಂಬುದನ್ನು ತೋರಿಸಲು ಯಾವುದೇ‌ ದೃಶ್ಯ ಹೆಣೆದಿಲ್ಲ. “ಎಲ್ಲರನ್ನೂ ಮುಂದೆ ಹೋಗಿ,‌ ಮುಂದೆ ಹೋಗಿ ಎನ್ನುವ‌ ನಿಮ್ಮಪ್ಪ ನಮ್ಮನ್ನು ಮಾತ್ರ ನಿಲ್ಲಿ ನಿಲ್ಲಿ ಎಂದುಬಿಟ್ಟರಲ್ಲಾ” ಎಂದು ಸಂದೀಪ್ ರೇಖಾಗೆ ಹೇಳುವ‌ ಮಾತಿನಲ್ಲೇ ಅವರ ಅಂದಿನ ಪ್ರೇಮಕತೆಯನ್ನು ನಾವು ಓದಿಕೊಳ್ಳಬೇಕು. ಜತೆಗೆ ಆ ಕಾಲದ ಕತೆಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಕೊಂಚ ಇತಿಹಾಸದ ಪರಿಜ್ಞಾನವೂ ಅಗತ್ಯ. ಇಲ್ಲವಾದರೆ ಐಐಟಿಯಲ್ಲಿ ಪದವಿ ಪಡೆದ ಆತ ಸ್ವಂತ ವ್ಯವಹಾರ ನಡೆಸಲು ಮೀಟರ್ ಬಡ್ಡಿಗೆ ಕಡ ತಂದದ್ದೇಕೆ ಎಂದು ಅರ್ಥವಾಗಲಿಕ್ಕಿಲ್ಲ. ಆಗಿನ ಭಾರತದಲ್ಲಿ‌ ಹೆಚ್ಚು ಕಲಿತವರಿಗೆ ಕೆಲಸಕ್ಕೆ ಅವಕಾಶವಿರಲಿಲ್ಲ ಎಂಬುದು‌ ತಿಳಿದಿರದಿದ್ದರೆ ಆತನ ಆತಂಕ ನಮಗೆ ನಾಟುವುದಿಲ್ಲ. ಸೋವಿಯತ್ ಮನಸ್ಥಿತಿಯ ಭಾರತ‌ದಲ್ಲಿ ಅತಿಹೆಚ್ಚು ಕಲಿತ ಬುದ್ಧಿವಂತರು ಕೆಲಸಕ್ಕಾಗಿ ದೇಶವನ್ನೇ ಬಿಟ್ಟು ಹೋಗಬೇಕಿತ್ತು ಎಂಬುದು ಗೊತ್ತಿಲ್ಲದಿದ್ದರೆ ಆ ಪಾತ್ರಗಳ ತುಡಿತ ನಮ್ಮನ್ನು ತಟ್ಟುವುದಿಲ್ಲ. ಈ ಎಲ್ಲಾ ವಿಚಾರಗಳನ್ನೂ ‘ಅನಂತಂ’ ಅವರವರ ಭಾವಕ್ಕೆ ಬಿಟ್ಟು ಕತೆ ಹೇಳುತ್ತಾ ಸಾಗುತ್ತದೆ. ಕದ ತಟ್ಟಿದಲ್ಲೆಲ್ಲಾ ಸಂದೀಪ್‌ಗೆ ಓವರ್ ಕ್ವಾಲಿಫೈಡ್ ಎಂಬ ಕಾರಣಕ್ಕೇ ಕೆಲಸ ನಿರಾಕರಣೆಯಾಗುವಾಗ ಬದುಕಲ್ಲಿ ಜೀವಂತಿಕೆ ಉಳಿಸುವವಳು ರೇಖಾ. ಅವಳು ಅಂದಿನ ಭಾರತದ ಆಶಾವಾದಿಗಳ ಪ್ರತಿನಿಧಿ‌. ಇರುವುದರಲ್ಲೇ ಸಣ್ಣ ಸಣ್ಣ ಸಂತೋಷಗಳನ್ನು ದೊಡ್ಡದಾಗಿ ಆಚರಿಸುವ ಕನಸುಗಾರ್ತಿ. ಮನೆಯ ಗೋಡೆಯೂ ಉಸಿರಾಡುತ್ತದೆ‌ ಅನ್ನುವ ಆಕೆ ನಿರ್ಜೀವ ವಸ್ತುವಲ್ಲೂ ಎದೆಬಡಿತ ಕಾಣುತ್ತಾಳೆ. ಆ ಕಾಲದಲ್ಲಿ ಅಂಥ ಅಪರಿಮಿತ‌ ಆಶಾವಾದಿ ಬೆನ್ನೆಲುಬಾಗಿ ಸಿಕ್ಕಿದ್ದ ಅದೃಷ್ಟವಂತರು ಮಾತ್ರವೇ‌ ಸಂದೀಪನಂತೆ ಭಾರತದಲ್ಲೇ ಉಳಿದರು. ಕೊನೆಗೂ ಸಂದೀಪನಂಥವರು ಆಗಿನ ಭಾರತದಲ್ಲಿ ನೆಲೆ ಕಂಡುಕೊಂಡದ್ದು ಸ್ವಂತ ಶಕ್ತಿ – ಯುಕ್ತಿಯ ಮೇಲೆಯೇ. ಮಗನ ಹುಟ್ಟುಹಬ್ಬ ನಿಮಿತ್ತ ರೇಖಾ ನೆರೆಯ ಮಕ್ಕಳಿಗೆ ಗಾಳಿಪಟ ಮಾಡುವ ಸ್ಪರ್ಧೆ ಏರ್ಪಡಿಸುತ್ತಾಳೆ. ಉದ್ಯೋಗ‌ ಆಕಾಂಕ್ಷಿ ಸಂದೀಪನಿಗೆ ಅಂಥ ಸಮಾರಂಭದಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ಇರುವುದಿಲ್ಲ. ಆದರೂ ಮಗನ ಒತ್ತಾಯಕ್ಕೆ ಗಾಳಿಪಟ ಮಾಡುವ ಕಾಯಕದಲ್ಲಿ ಕೂರಲೇಬೇಕು. ಗಾಳಿಪಟ ಮಾಡುವುದು ಹೇಗೆ ಎಂದು ಮಗನ ಸಂಗಡಿಗರಿಗೆ ಕಲಿಸಿಕೊಡಬೇಕು. ಯಾವುದೇ ವಿಷಯವಾದರೂ ಸಂದೀಪ್ ತಂತ್ರ ಮಾತ್ರವನ್ನು ಹೇಳಿಕೊಡುವವನಲ್ಲ, ಅದರ ಹಿಂದಿನ ವಿಜ್ಞಾನ ತಿಳಿಸಿಕೊಡುವುದು ಅವನ ಜಾಯಮಾನ. ಮಕ್ಕಳಿಗೆ ಅರ್ಥವಾಗುವ ರೀತಿ ಸರಳ ಮತ್ತು ಕುತೂಹಲಕರವಾಗಿ ಹೇಳಿಕೊಡುವಾಗ ಅಲ್ಲಿದ್ದ ಮಕ್ಕಳಷ್ಟೇ ಅಲ್ಲ, ಅವರ ತಂದೆ ತಾಯಂದಿರೂ ಈತನ ಪ್ರತಿಭೆಗೆ ತಲೆದೂಗುತ್ತಾರೆ. ಈ ಘಟನೆಯಿಂದ ಪ್ರೇರಿತನಾದ ತಂದೆಯೊಬ್ಬ ಕೊಡುವ ಸಲಹೆಯೇ ಕೋಚಿಂಗ್ ಸೆಂಟರ್. ಅದುವೇ ಕಡೆಗೆ ಊರುಗೋಲಾಗಿ ಒಂದು‌ ದಶಕದಲ್ಲಿ‌ ರಾಷ್ಟ್ರಮಟ್ಟಕ್ಕೆ ಬೆಳೆಯುತ್ತದೆ. ಶೈಕ್ಷಣಿಕ ‌ಸಲಹೆಗಾರನಾಗಲು‌ ಕೇಂದ್ರ ಸರ್ಕಾರದಿಂದ ಬುಲಾವು ಬರುತ್ತದೆ ಎನ್ನುತ್ತದೆ‌ ಕತೆ. ಆಗಿನ ಕಾಲದಲ್ಲಿ ಅಷ್ಟೆಲ್ಲಾ ಸುದ್ದಿಯಾದರೂ ಸರ್ಕಾರವೇ ಕರೆದು ಕೆಲಸ ಕೊಡಿಸಬೇಕಿತ್ತು. ಈಗಿನ ಬೈಜೂಸ್‌ ಸ್ಥಾಪಕನ ಹಿಂದೆ ಕೋಟಿಗಟ್ಟಲೆ ಹಣಹಿಡಿದ ಹೂಡಿಕೆದಾರರು ಕ್ಯೂ‌ ನಿಂತಿದ್ದರು. ಆದರೆ ಅದರ ಸಮೀಕರಣ ಮಾಡುವ ಕೆಲಸ ತನ್ನದಲ್ಲ ಎಂದು ‘ಅನಂತಂ’ ಮತ್ತೊಂದು ಕತೆಯ ಕಡೆಗೆ ಹೆಜ್ಜೆ ಹಾಕುತ್ತದೆ. ಅಷ್ಟು ಮಾತ್ರಕ್ಕೆ ‘ಅನಂತಂ’ನಲ್ಲಿ ಬರುವ ಎಲ್ಲಾ ಕತೆಗಳೂ ಒಂದಕ್ಕಿಂತ ಒಂದು ಮೇಲು ಎನ್ನಲಾಗುವುದಿಲ್ಲ. ನೀವು ಯಾವ ಭಾವಲಹರಿಯಲ್ಲಿ‌ ಇದ್ದೀರಿ ಎಂಬುದರ ಮೇಲೆ ನಿಮಗೆ ಅಧ್ಯಾಯಗಳು ಇಷ್ಟವಾಗುತ್ತವೆ. ಮೊದಲ ಅಧ್ಯಾಯ‌ ‘ಮರಗತಂ’ ಕತೆಯ ಆಚೆಗೆ ನಮ್ಮನ್ನು ಬೇರೆಲ್ಲಿಗೂ ಕೊಂಡೊಯ್ಯುವುದಿಲ್ಲ. ಆದರೆ ‘ಸೀತಾ’ ತೀವ್ರವಾಗಿ ಭಾವ ಕಲಕಬಹುದು. ಅತಿ ಪ್ರತಿಭಾವಂತೆ ಅಂಧ ಹುಡುಗಿಯ ಕತೆ ನನಗಂತೂ ನೋಡಿ ಅರಗಿಸಿಕೊಳ್ಳುವುದಕ್ಕೇ ಕಷ್ಟವಾಯಿತು. ನಾನು ಕಣ್ಣಂಚಿನ ನೀರನ್ನು ಸಹಿಸಬಲ್ಲೆ, ಹೃದಯವೇ ಹಿಂಡಿ‌ ಬರುವಾಗ ತಾಳಲು ಕಷ್ಟವಾಗುತ್ತದೆ. ಆದಾಗ್ಯೂ ಸೀತಾ ಇಷ್ಟವಾಗುತ್ತಾಳೆ, ಮನದೊಳಗೆ ಬಂಧಿಯಾಗುತ್ತಾಳೆ. ‘ಅನಂತ’ನ ಕತೆ ಸಲಿಂಗ ಪ್ರೇಮದ ಸಾಮಾಜಿಕ ಅಸ್ಪೃಶ್ಯತೆ ಬಗ್ಗೆ ಹೇಳಿದರೆ ‘ಮೆನನ್’ ವಯಸ್ಸಿನ ಪರಿಧಿಯ ಆಚೆಗೆ ನಿಲ್ಲುವ‌ ಪ್ರೀತಿಯನ್ನು ಕಟ್ಟಿಕೊಡುತ್ತದೆ. ಮೂರೂ ತಲೆಮಾರಿನ ಮಹಿಳೆಯರು ಒಬ್ಬನೇ ಹುಡುಗನನ್ನು ಇಷ್ಟಪಡುತ್ತಾರೆ ಎಂಬುದನ್ನು ಮಾತಲ್ಲಿ ಕೇಳಿದರೆ ಅಲ್ಲಿ ಸಾಮಾಜಿಕ ಇತಿಮಿತಿಯ ಮೀರುವಿಕೆ ಇದೆ ಅನಿಸಬಹುದು. ಆದರೆ ನಿರ್ದೇಶಕಿ ಪ್ರಿಯಾ ಅಂಥ ಅನಿಸಿಕೆಗೆ ಆಸ್ಪದ ಕೊಡುವುದಿಲ್ಲ. ಜವಾಬ್ದಾರಿ ಹೆಚ್ಚಾದಂತೆ ತಾನು ಪ್ರೀತಿಗೆ ಬೀಳಲು ಯೋಗ್ಯವಲ್ಲ, ಅಥವಾ ತನ್ನ ವಯಸ್ಸಿಗೆ ಪ್ರೀತಿ-ಗೀತಿ ಎಲ್ಲ ಒಗ್ಗುವುದಿಲ್ಲ ಎಂದು‌‌ ಮಿತಿ ಹಾಕಿಕೊಳ್ಳುವ ಹೆಣ್ಣಿನ ಅಂತರಂಗಕ್ಕೆ ಪ್ರಿಯಾ ಕನ್ನಡಿ ಹಿಡಿದಿದ್ದಾರೆ. ನಿಷ್ಕಾಮ ಪ್ರೇಮ ಎಲ್ಲರಿಗೂ ಸಲ್ಲುತ್ತದೆ ಎಂಬುದನ್ನು ತೋರಿಸಿದ್ದಾರೆ. ಆದರೆ ಲಘು ಧಾಟಿಯಲ್ಲಿ ಹೇಳಹೊರಟ ಕಾರಣ ಕೆಲವು ಕಡೆ ಭಾವ ತೆಳುವಾಗುತ್ತದೆ. Zee5ನಲ್ಲಿ ಸ್ಟ್ರೀಂ ಆಗುತ್ತಿರುವ ‘ಅನಂತಂ’ ಒಂದರ ಬೆನ್ನಿಗೆ ಒಂದು ಎಪಿಸೋಡು ನೋಡುವ ಧಾವಂತದ ಮನಸ್ಥಿತಿಗಲ್ಲ. ಕೆಲವು ಅಧ್ಯಾಯ‌ ನೋಡಿದ ಮೇಲೆ ಸ್ವಲ್ಪ ಹೊತ್ತಿಗೆ ಬೇರೇನೂ ಬೇಡವೆಂದು ಅನಿಸುವಷ್ಟು ಕಾಡುವಂಥ ಕಥಾ ಸಂಕಲನ. ವಾರದ ಒಂದೊಂದೇ‌ ದಿನ ಒಂದೋ ಎರಡೋ ಕತೆ ನೋಡಿ ಮೆಲುಕು ಹಾಕಿದರೆ ಹೆಚ್ಚು ಅರ್ಥಪೂರ್ಣ.
ದಿನಾಂಕ 12-01-2021 ರಂದು ಎಳ್ಳ ಅಮವಾಸೆ ಇದ್ದ ಕಾರಣ ಫಿರ್ಯಾದಿ ಅರವಿಂದ ತಂದೆ ತುಳಸಿರಾಮ ಮಲ್ಲಿಗೆ ವಯ: 25 ವರ್ಷ, ಸಾ: ಬೆಳಕುಣಿ(ಸಿ) ಗ್ರಾಮ ರವರು ಊಟಕ್ಕೆ ಅಂತ ದೇವಿದಾಸ ತಂದೆ ಭೀಮಣ್ಣಾ ಮಾಳಗೆ ಇವರ ಹೊಲಕ್ಕೆ ಹೋಗಿ ಊಟ ಮಾಡಿಕೊಂಡು ಮರಳಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಮಾದಪ್ಪಾ ಗಂದಗೆ ರವರ ಹೊಲದ ಹತ್ತಿರ ಅತ್ತೆಯ ಮಗನಾದ ವಿಜಯಕುಮಾರ ತಂದೆ ಅಮೃತ ಇವರು ಸಹ ಬೆಳಕುಣಿ ಕ್ರಾಸ್ ಕಡೆಯಿಂದ ಊಟ ಮಾಡಲು ರೋಡಿನ ಬದಿಯಿಂದ ನಡೆದುಕೊಂಡು ಬರುತ್ತಿರುವಾಗ ಆತನ ಹಿಂದುಗಡೆಯಿಂದ ಅಂದರೆ ಬೆಳಕುಣಿ ಕ್ರಾಸ್ ಕಡೆಯಿಂದ ಟಾಟಾ ಎಸ್ ವಾಹನ ಸಂ. ಎಪಿ-26/ವೈ-4685 ನೇದರ ಚಾಲಕನಾದ ಆರೋಪಿ ಪ್ರಶಾಂತ ತಂದೆ ಸಂಜುಕುಮಾರ ಸಾ: ಬೆಳಕುಣಿಡ(ಸಿ) ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ವಿಜಯಕುಮಾರನಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ವಿಜಯಕುಮಾರ ಇತನ ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯ, ಮೂಗಿನಿಂದ ರಕ್ತ ಸೋರುತಿತ್ತು ಹಾಗು ಮೂಗಿಗೆ & ಕಾಲಿನ ಪಿಂಡರಿ ಹತ್ತಿರ ತರಚಿದ ಗಾಯವಾಗಿದ್ದು, ಎದೆಗೆ ಗುಪ್ತಗಾಯವಾಗಿರುತ್ತದೆ, ನಂತರ ಕೂಡಲೆ ಗಾಯಗೊಂಡ ವಿಜಯಕುಮಾರ ಇವರಿಗೆ ಚಿಕಿತ್ಸೆಗಾಗಿ ಸಂತಪೂರ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಅಂಬುಲೇನ್ಸದಲ್ಲಿ ಹೈದ್ರಬಾದಕ್ಕೆ ತೆಗೆದುಕೊಂಡು ಹೋಗುವಾಗ ದಾರಿ ಮಧ್ಯ ಆಂಧ್ರದ ಸದಾಶಿವ ಪೇಟ ಹತ್ತಿರ ವಿಜಯಕುಮಾರ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 498 (ಎ), 306, 504 ಜೊತ 34 ಐಪಿಸಿ :- ದಿನಾಂಕ 12-01-2021 ರಂದು ಫಿರ್ಯಾದಿ ಇರಫಾನಾ ಬೇಗಂ ಗಂಡ ಎಮ್.ಡಿ ಮೇಹೆಬÆಬ ದುಕಾನವಾಲೆ ವಯ: 35 ವರ್ಷ, ಸಾ: ಮರ್ಜಾಪುರ, ಸದ್ಯ: ಚಿಂತಲಮೆಟ ಹೈದ್ರಾಬಾದ ರವರ ಅಣ್ಣನಾದ ಮಹಮ್ಮದ ಮಿರಾಜ ಪಟೇಲ ರವರ ಮಗಳಾದ ಉಮೇರಾ ಬೇಗಂ ವಯ: 20 ವರ್ಷ ಇವಳಿಗೆ 6 ತಿಂಗಳ ಹಿಂದೆ ನಿರ್ಣಾ ಗ್ರಾಮದ ಬಾಬುಮಿಯ್ಯಾ ಇವರ ಮಗನಾದ ಮಸ್ತಾನ ಇತನ ಜೋತೆ ಮದುವೆ ಮಾಡಿ ಕೊಟ್ಟಿದ್ದು, ಅವಳಿಗೆ ಸದ್ಯ: ಮಕ್ಕಳಾಗಿರವುದಿಲ್ಲಾ, ಮದುವೆಯಾಗಿ 3 ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದು ನಂತರ ಅವಳ ಗಂಡ ಮಸ್ತಾನ, ಮಾವ ಬಾಬುಮಿಯ್ಯಾ, ಅತ್ತೆ ಸಾಬೀರಾಬೇಗಂ ಇವರೆಲ್ಲರೂ ಕೂಡಿ ಉಮೇರಾ ಬೇಗಂ ಇವಳಿಗೆ ದಿನಾಲು ನೀನು ಚೆನ್ನಾಗಿಲ್ಲಾ, ನಿನಗೆ ಅಡುಗೆ ಮಾಡಲು ಬರುವುದಿಲ್ಲಾ ಅಂತಾ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಹೊಡೆಬಡೆ ಮಾqÀವುದು ಮಾಡುತ್ತಾ ಬಂದಿರುತ್ತಾರೆ, ಹೀಗಿರುವಲ್ಲಿ ದಿನಾಂಕ 11-01-2021 ಉಮೇರಾ ಬೇಗಂ ಇವಳಿಗೆ ಆರೋಪಿತರಾದ ಗಂಡ ಮಸ್ತಾನ, ಮಾವ ಬಾಬುಮಿಯ್ಯಾ ಹಾಗೂ ಅತ್ತೆ ಸಾಬೀರಾಬೇಗಂ ಇವರೆಲ್ಲರೂ ಕೂಡಿ ಮಾನಸೀಕ ಹಾಗು ದೈಹಿಕ ಕಿರಕುಳ ನೀಡಿ ಹೊಡೆ ಬಡೆ ಮಾಡಿದ್ದರಿಂದ ಅವಳು ಬೇಸರಗೊಂಡು ಅವರ ಕಿರಕುಳ ತಾಳಲಾರದೇ ತನ್ನ ಮನೆಯಲ್ಲಿ ಕಟ್ಟಿಗೆ ಸರಕ್ಕೆ ತನ್ನ ಓಡನಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 279, 338 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :- ದಿನಾಂಕ 12-01-2021 ರಂದು ಎಳ್ಳ ಅಮವಾಸೆ ಇರುವುದರಿಂದ ಫಿರ್ಯಾದಿ ಬಾಹದ್ದೂರ ಖಾನ್ ತಂದೆ ನಿಜಾಮೋದ್ದಿ£ï ಮಾಸುಲ್ದಾರ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಹಳ್ಳಿಖೇಡ(ಬಿ) ರವರು ದೇವರ ನೈವಿದ್ಯಾ ತೆಗೆದುಕೊಂಡು ಹೊಲಕ್ಕೆ ಹೋಗುವಾಗ ಜೊತೆಯಲ್ಲಿ ತನ್ನ ಚಿಕ್ಕಪ್ಪನ ಮೊಮ್ಮಕಳಾದ ಸೈಯದ್ ಸಮೀರ ತಂದೆ ಸೈಯದ್ ಮಜರ್ ಮಾಸುಲ್ದಾರ ವಯ: 6 ವರ್ಷ ಹಾಗೂ ಸೈಯದ್ ಅರ್ಮಾನ ತಂದೆ ಸೈಯದ್ ಮುಕ್ರಾಮ ಮಾಸುಲ್ದಾರ ವಯ: 11 ವರ್ಷ ಇವರನ್ನು ಟಿ.ವಿ.ಎಸ್ ಸೂಪರ್ ಎಕ್ಸೆಲ್ ಮೋಟಾರ ಸೈಕಲ್ ನಂ. ಕೆಎ-39/ಎಲ್-8065 ನೇದರ ಮೇಲೆ ಕೂಡಿಸಿಕೊಂಡು ಹೊಲಕ್ಕೆ ಹೋಗುವಾಗ ಹೊಲದ ಹತ್ತಿರ ರೋಡಿನ ಮೇಲೆ ಕಾರ್ನರನಲ್ಲಿ ಫಿರ್ಯಾದಿಯು ತನ್ನ ಮೋಟಾರ ಸೈಕಲ್ ನಿಲ್ಲಿಸಿ ಹುಡುಗರಿಗೆ ಕೆಳಗೆ ಇಳಿಸುವಾಗ ಹಿಂದಿನಿಂದ ಅಂದರೆ ಹಳ್ಳಿಖೇಡ(ಬಿ) ಪಟ್ಟಣದ ಕಡೆಯಿಂದ ಪಲ್ಸರ್ ಮೋಟಾರ ಸೈಕಲ್ ನಂ. ಎಪಿ-23/ಎಸಿ-6714 ನೇದರ ಚಾಲಕನಾದ ಆರೋಪಿ ಶಿವಶರಣ ತಂದೆ ರಾಜಪ್ಪಾ ಸೋನಕೇರೆ ವಯ: 27 ವರ್ಷ, ಸಾ: ನಿಂಬೂರ, ತಾ: ಹುಮನಾಬಾದ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ್ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲ ಪಾದದ ಕಣ್ಣಿಗೆ ಮತ್ತು ಪಾದದ ಮೇಲಿನ ಭಾಗಕ್ಕೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗಡೆ ಎದೆಯ ಮೇಲೆ ಗುಪ್ತಗಾಯ ಹಾಗೂ ಬಲಗೈ ಮೋಳಕೈ ಮೇಲೆ ತರಚಿದ ಗಾಯವಾಗಿರುತ್ತದೆ ಹಾಗೂ ಸೈಯದ್ ಸಮೀರ್ ಇವನಿಗೆ ಬಲಗಾಲ ಪಾದದ ಮೇಲ್ಭಾಗಕ್ಕೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ನಂತರ ಗಾಯಗೊಂಡವರಿಗೆ ಚಿಕ್ಕಪ್ಪನ ಮಗನಾದ ಸೈಯದ್ ಮಜರ್ ತಂದೆ ಸೈಯದ್ ಮಂಜೂರ ಮಾಸುಲ್ದಾರ ಇವನು ಚಿಕಿತ್ಸೆ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 279, 338 ಐಪಿಸಿ :- ದಿನಾಂಕ 12-01-2021 ರಂದು ಫಿರ್ಯಾದಿ ಗುಣವಂತರಾವ ತಂದೆ ರಾಮರಾವ ಬಿರಾದರ ವಯ: 60 ವರ್ಷ, ಸಾ: ಹಿಪ್ಪಳಗಾಂವ ಗ್ರಾಮ ರವರ ಮಗನಾದ ಪುಂಡಲಿಕ ಇತನು ಸಂತಪೂರಕ್ಕೆ ಬಂದಿದ್ದರಿಂದ ಆತನಿಗೆ ಕರೆದುಕೊಂಡು ಬರಲು ಇನ್ನೊಬ್ಬ ಮಗನಾದ ಫಿರ್ಯಾದಿ ಪಂಡರಿನಾಥ ತಂದೆ ಗುಣವಂತರಾವ ಬಿರಾದರ ವಯ: 37 ವರ್ಷ ಇತನು ಮೋಟಾರ ಸೈಕಲ್ ನಂ. ಕೆಎ-38/ಎಸ್-1599 ನೇದನ್ನು ತೆಗೆದುಕೊಂಡು ಸಂತಪೂರಕ್ಕೆ ಹೋಗುವಾಗ ನಾಗೂರ ಬ್ರಿಡ್ಜ್ ಹತ್ತಿರ ಅತೀವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದು, ಸದರಿ ಅಪಘಾತದಿಂದ ಪಂಡರಿನಾಥ ಇತನ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯ, ಎರಡು ಕಣ್ಣಿನ ಹುಬ್ಬಿಗೆ ರಕ್ತಗಾಯ ಹಾಗು ಎಡಗಡೆ ದವಡೆಗೆ ಸಹ ರಕ್ತಗಾಯವಾಗಿರುತ್ತದೆ, ಕಾರಣ ಆತನಿಗೆ ಚಿಕಿತ್ಸೆ ಕುರಿತು ಸಂತಪೂರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ನಂತರ ಆತನಿಗೆ ಹೆಚ್ಚಿನ ಚಿಕಿತ್ಸೆ ಕುರತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ನಂತರ ಹೈದ್ರಬಾದನ ವಾಸವಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 06/2021, ಕಲಂ. 379 ಐಪಿಸಿ :- ದಿನಾಂಕ 08-01-2021 ರಂದು 0230 ಗಂಟೆಯಿಂದ 0330 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಪ್ರಭು ತಂದೆ ಝರೆಪ್ಪ ಸಾಗರ ವಯ: 42 ವರ್ಷ, ಜಾತಿ: ಎಸ್.ಸಿ (ಹೊಲಿಯ), ಸಾ: ಆಣದೂರ ಗ್ರಾಮ, ತಾ: ಜಿ: ಬೀದರ ರವರು ತಮ್ಮ ಮನೆಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ನಿಲ್ಲಿಸಿದ ತನ್ನ ಪಲ್ಸರ್ ಮೋಟಾರ ಸೈಕಲ ಚಾಸಿಸ್ ನಂ. ಎಂ.ಡಿ.2.ಎ.11.ಸಿ.ಎಕ್ಸ.9.ಎಲ್.ಸಿ.ಜಿ.22810 ಹಾಗೂ ಇಂಜಿನ್ ನಂ. ಡಿ.ಹೆಚ್.ಎಕ್ಸ.ಸಿ.ಎಲ್.ಜಿ.38560, ಕಪ್ಪು ಮತ್ತು ನೀಲಿ ಬಣ್ಣದ್ದು, ಅ.ಕ 1,00,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 12-01-2021 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 06/2021, ಕಲಂ. ಮಹಿಳೆ ಕಾಣೆ :- ದಿನಾಂಕ 11-01-2021 ರಂದು 1600 ಗಂಟೆಯ ಸುಮಾರಿಗೆ ಫಿರ್ಯಾದಿ ದತ್ತು ತಂದೆ ಚಂದ್ರಪ್ಪಾ ಆಮಾಣೆ ಸಾ: ಸೋನಕೇರಾ ರವರ ಮಗಳಾದ ಸಂಧ್ಯಾ ವಯ: 20 ವರ್ಷ ಇಕೆಯು ಘೊಟವಾಡಿ ದರ್ಗಾದಿಂದ ಹೋಗಿ ಕಾಣೆಯಾಗಿರುತ್ತಾಳೆ, ಅವಳನ್ನು ಎಲ್ಲಾ ಕಡೆ ಹುಡಕಾಡಿದರೂ ಸಹ ಸಿಕ್ಕಿರುವುದಿಲ್ಲ, ಅವಳು ಕೆಂಪು ಬಣ್ಣದ ಟಾಪ, ಬಂಗಾರ ಬಣ್ಣದ ಪ್ಯಾಂಟ, ವೇಲ ಇರುತ್ತದೆ, ಹಣೆಯ ಮೇಲೆ ಒಂದು ಸಣ್ಣ ಹಳೆ ಗಾಯ ಇರುತ್ತದೆ, ಅಂದಾಜು 5 ಅಡಿ ಎತ್ತರ, ಉದ್ದನೆಯ ಮುಖ, ಸಾಧಾರಾಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ವತಿಯಿಂದ ಚಂದಕವಾಡಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ವಿಶಾಲಾಕ್ಷಿ ಸಿ.ಜಿ, ಉತ್ತಮ ಸಮಾಜ ಮತ್ತು ಉತ್ತಮ ನಾಗರಿಕರಾಗಲು ಕಾನೂನು ಅರಿವು ಹೊಂದು ವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ನಮ್ಮ ನೆಲದ ಕಾನೂನನ್ನು ಗೌರವಿಸಬೇಕು. ನಮ್ಮ ಸಂವಿಧಾನ ಎಲ್ಲಾ ಕಾನೂನುಗಳಿಗೂ ಅಡಿ ಪಾಯವಾಗಿದ್ದು, ಅಂತಹ ಸಂವಿಧಾನದಲ್ಲಿ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಸಹ ನೀಡಿದೆ. ಅದನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಸುಂದರ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕಡ್ಡಾಯವಾಗಿ ಕಾನೂನಿನ ಅರಿವನ್ನು ಹೊಂದಬೇಕು, ಎಲ್ಲರೂ ನಿಮ್ಮ ಹಕ್ಕುಗಳ ಬಗ್ಗೆ ಕೇಳುತ್ತೀರಾ, ಅದೇ ತರಹ ಕರ್ತವ್ಯಗಳನ್ನು ಸಹ ಪಾಲಿಸುವ ಮೂಲಕ ಸಂವಿಧಾನಕ್ಕೆ ಗೌರವ ಸೂಚಿಸಬೇಕು ಎಂದು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಮಾತನಾಡಿ, ವಿದ್ಯಾರ್ಥಿಗಳು ತಂದೆ ತಾಯಿಗಳ ಹಿತ ವಚನ ಮತ್ತು ಗುರು ಹಿರಿಯರ ಆದರ್ಶಗಳನ್ನು ಪಾಲಿಸಿದರೆ ಕಾನೂನನ್ನು ಪರಿಪಾಲಿಸಿದಂತೆ ಎಂದು ಹೇಳಿದರು. ಪೂರ್ವ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಆನಂದ್ ಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನುಗಳು ಜಾರಿಯಲ್ಲಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯಿದೆ ಪ್ರಕಾರ 18 ವರ್ಷ ಒಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಕಾನೂನಿ ನಡಿಯಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಪ್ರತಿ ಯೊಬ್ಬರಿಗೂ ಕಾನೂನಿನ ತಿಳುವಳಿಕೆ ಅತ್ಯಗತ್ಯ ಎಂದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಆರ್.ಅರುಣ್ ಕುಮಾರ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮಾಡುವುದರ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದು, ಇದರಿಂದ ಅನೇಕ ಕಾನೂನು ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು. ವಕೀಲೆ ಎಂ.ಪಿ.ನಾಗಲಕ್ಷ್ಮಿ ಆಸ್ತಿ ಹಕ್ಕುಗಳ ಬಗ್ಗೆ ವಿದ್ಯಾ ರ್ಥಿಗಳಿಗೆ ಅರಿವು ಮೂಡಿಸಿದರು, ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್, ಉಪನ್ಯಾಸಕ ಸತೀಶ್ ಇತರರು ಹಾಜರಿದ್ದರು.
ಪುಟ್ಟ ಸಿಕ್ಕಾಪಟ್ಟೆ ಇಂಗ್ಲಿಶ್ ಮಾತಾಡೋ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಓದ್ತಾನೆ. ಮನೆಯಿಂದ ಸ್ಕೂಲ್, ಸ್ಕೂಲ್ ಇಂದ ಮನೆಗೆ ವ್ಯಾನ್ನಲ್ಲೇ ಓಡಾಟ. ಬೆಳಿಗ್ಗೆ ಸ್ಕೂಲ್ಗೆ ಅಂತ ಹೋದವನು ಜ್ವರ ಅಂತ ವಾಪಸ್ ಬಂದ್ಬಿಟ್ಟ. ಅಮ್ಮ ಡಾಕ್ಟರ್ ಹತ್ರ ಕರ್ಕೊಂಡ್ ಹೋದ್ರೆ ಡಾಕ್ಟರ್ ಹೇಳಿದ್ರಂತೆ… ತುಂಬಾ ಹೆದರಿದ್ದಾನೆ.. ಅದಕ್ಕೆ ಜ್ವರ ಅಂತ… ತಕ್ಷಣ ಪುಟ್ಟ ನಾನ್ ಸ್ಕೂಲ್ಗೆ ಹೋಗಲ್ಲ ಅಲ್ಲಿ ದೆವ್ವ ಇದೆ ಅಂತ ಅಳೊಕೆ ಶುರು. ಅದೇನು ದೆವ್ವ ನೋಡೋಣ ಅಂತ ಪುಟ್ಟನ ಅಪ್ಪ ಸ್ಕೂಲ್ ಕಡೆ ಹೋದ್ರೆ.. ಒಂದಲ್ಲ ಎರಡಲ್ಲ ನೂರಾರು ದೆವ್ವಗಳಂತೆ. ಅಪ್ಪಂಗೆ ಗಾಬರಿ. ಅಲ್ಲೇ ಪಕ್ಕ ಇದ್ದ watchman ಹೇಳಿದ್ರಂತೆ… ಅದೆಂತದ್ದೋ haloween ಅಂತೆ ಸರ್ ಎಲ್ಲಾ ರಕ್ತ ಬಳಕೊಂಡ್ ದೆವ್ವ, ಬೂತದ ತರ ಬಂದವ್ರೆ. ಎಲ್ಲೋ ಪರದೇಶದಲ್ಲಿ ಏನೋ ಮಾಡ್ತಾರೆ ಅಂತ ಕಣ್ಣು ಮುಚ್ಚಿ ನಮ್ಮ ಜನ ಅದನ್ನ ಇಲ್ಲೂ ಆಚರಣೆ ಮಾಡ್ತಾರೆ. ಎಷ್ಟು ಇಂಟರ್ನ್ಯಾಷನಲ್ ಸ್ಕೂಲ್ಗಳಲ್ಲಿ ಮಕ್ಕಳನ್ನು ಸೇರಿಸಿಕೊಂಡು ಜನ್ಮಾಷ್ಟಮಿ.. ಗಣೇಶ ಹಬ್ಬ ..ಕನ್ನಡ ರಾಜ್ಯೋತ್ಸವ ಅಂತ ನಮ್ಮ ಹಬ್ಬಗಳನ್ನ ಆಚರಿಸುತ್ತಾರೆ ? — ಗಣೇಶ್ Source whatsapp copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಪುಟ್ಟ ಮಕ್ಕಳಲ್ಲಿ ಹೆಚ್ಚಾಗಿ ಕಾಣುವ ಆರೋಗ್ಯ ಸಮಸ್ಯೆಗಳ ಪೈಕಿ ಮಲಬದ್ಧತೆ ಹಾಗೂ ಗ್ಯಾಸ್‍ನ ಸಮಸ್ಯೆಯೂ ಒಂದು. ನಿತ್ಯವೂ ಅಜೀರ್ಣ, ವಾಂತಿ ಬೇಧಿಯುಂಟಾಗಿ, ಹೊಟ್ಟೆ ಕಿವುಚಿದಂತಾಗಿ ಮಕ್ಕಳ ಅಳುಮುಖವನ್ನು ನೋಡುವುದು ಸಮಾಧಾನಪಡಿಸುವುದು ಹೆತ್ತವರಿಗೆ ತಲೆನೋವಿನ ವಿಚಾರವಾಗಿಬಿಟ್ಟಿರುತ್ತದೆ. ಮಗುವಿಗೇಕೆ ಅಜೀರ್ಣ ಸಮಸ್ಯೆ ಜಾಸ್ತಿ? ನಮ್ಮ ದೇಹದಲ್ಲಿ ಈಸೋಫ್ಯಾಗಲ್ ಸ್ಫಿಂಕ್ಟರ್ ಎಂಬ ವಾಲ್ವ್ ಹೊಟ್ಟೆಯಿಂದ ಅನ್ನನಾಳಕ್ಕೆ ಆಹಾರ ತಿರುಗಿ ಹೋಗದಂತೆ ನೋಡಿಕೊಳ್ಳುತ್ತದೆ. ಮಗುವಿನಲ್ಲಿ ಈ ವಾಲ್ವ್ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು ಸಂಪೂರ್ಣ ಬೆಳೆಯಲು ಒಂದು ವರ್ಷದವರೆಗೂ ಸಮಯ ತೆಗೆದುಕೊಳ್ಳಬಹುದು. ಇದು ಮಕ್ಕಳಲ್ಲಿ ಜೀರ್ಣ ಪ್ರಕ್ರಿಯೆ ಸರಿಯಾಗಿ ಆಗದಿರಲು ಪ್ರಮುಖ ಕಾರಣ. ಇದರಿಂದಲೇ ಆ್ಯಸಿಡ್ ರಿಫ್ಲಕ್ಸ್ ಆಗುವುದು. ಇದಲ್ಲದೆ ಅಪರೂಪಕ್ಕೆ ಇನ್ಫೆಕ್ಷನ್ ಕೂಡಾ ಕಾರಣವಾಗಬಹುದು. ಇನ್ನು ನವಜಾತ ಶಿಶುವು ಹಾಲು ಕುಡಿಯುವಾಗ ಜೊತೆಗೆ ಗಾಳಿಯನ್ನೂ ಎಳೆಯುತ್ತದೆ. ಇದರಿಂದ ಮಗುವು ಪದೇ ಪದೆ ಕಕ್ಕುತ್ತದೆ. ಇನ್ನು ಮಗುವಿಗೆ ದಪ್ಪ ಆಹಾರವನ್ನು ಕೊಡಲಾರಂಭಿಸಿದಾಗ ಮಲಬದ್ಧತೆ ಕಾಡುವುದು ಸಾಮಾನ್ಯ. ಮನೆ ಮದ್ದಿನ ಮೂಲಕ ಮಕ್ಕಳ ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನಿತ್ಯವೂ ಹೊಟ್ಟೆಯ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ಹೊಕ್ಕುಳಿನ ಭಾಗದಲ್ಲಿ ಎಣ್ಣೆ ಅಥವಾ ಹಳೆಯ ತುಪ್ಪವನ್ನು ಉಜ್ಜಿ ಮಸಾಜ್ ಮಾಡುತ್ತಿರಬೇಕು. ಇದರಿಂದ ಡೈಜೆಶನ್ ಸರಿಯಾದ ರೀತಿಯಲ್ಲಿ ನಡೆಯುತ್ತದೆ. ದಿನಕ್ಕೆ ಒಂದೆರಡು ಬಾರಿ ಸ್ವಲ್ಪ ಬೆಚ್ಚನೆಯ ನೀರಲ್ಲಿ ಬಟ್ಟೆಯನ್ನು ಅದ್ದಿ ಹಿಂಡಿ, ಬಿಸಿ ಶೇಕವನ್ನು ಮಕ್ಕಳ ಹೊಟ್ಟೆಯ ಭಾಗದಲ್ಲಿರಿಸಿದರೆ ಮಕ್ಕಳಲ್ಲಿ ಗ್ಯಾಸ್ ಸಮಸ್ಯೆ ಹೋಗಿ ಮಲಬದ್ಧತೆಯನ್ನು ದೂರವಿರಿಸುತ್ತದೆ. ದಿನಕ್ಕೆ ನಾಲ್ಕೈದು ಬಾರಿ ಬೆಚ್ಚನೆಯ ನೀರನ್ನು ಕುಡಿಸಿ. ಎದೆಹಾಲು ಕುಡಿಸುವಾಗ ಪೊಸಿಶನ್ ಸರಿ ಇದ್ದರೆ ಆ್ಯಸಿಡ್ ರಿಫ್ಲಕ್ಸ್ ಕಡಿಮೆ ಮಾಡಬಹುದು. ಮಲಗಿಕೊಂಡು ಕುಡಿಸುವುದು, ಮಗುವನ್ನು ತೊಡೆ ಮೇಲೆ ಮಲಗಿಸಿಕೊಂಡು ಕುಡಿಸುವ ಬದಲು, ಮಗುವಿನ ತಲೆ ಸ್ವಲ್ಪ ಮೇಲಿದ್ದು, ದೇಹ ಕೆಳಗಿರುವಂತೆ ಹಿಡಿದುಕೊಳ್ಳಿ. ಆಗ ಕುಡಿದ ಹಾಲು ತಿರುಗಿ ಬಾಯಿಗೆ ಬರುವುದಿಲ್ಲ. ಹಾಲು ಕುಡಿದಾದ ಬಳಿಕ 1-2 ನಿಮಿಷದವರೆಗೆ ಮೆಲ್ಲನೆ ಬೆನ್ನಿಗೆ ತಟ್ಟಬೇಕು. ಆಗ ಮಗು ತೇಗುತ್ತದೆ. ಈ ರೀತಿ ಮಾಡಿದರೆ ಮಗುವಿನಲ್ಲಿ ಗ್ಯಾಸ್ ಸಮಸ್ಯೆ ಕಾಣಿಸುವುದಿಲ್ಲ. ಹೆಪ್ಪಾದ ಡೈರಿ ಪದಾರ್ಥಗಳು ಮಗುವಿನಲ್ಲಿ ಗ್ಯಾಸ್ ಸಂಬಂಧಿ ಸಮಸ್ಯೆ ಹೋಗಲಾಡಿಸುತ್ತದೆ. ಹಾಗಾಗಿ, ಮಗು 6 ತಿಂಗಳು ದಾಟಿದ್ದರೆ ಯಾವಾಗ ಜೀರ್ಣ ಸಮಸ್ಯೆ ಕಂಡುಬಂದರೂ ಆಗ, ಸ್ವಲ್ಪ ಮೊಸರಿಗೆ ಚೂರು ನೀರು ಸೇರಿಸಿಕೊಂಡು ಕುಡಿಸಿ. ವೀಳ್ಯದೆಲೆಗೆ ಹರಳೆಣ್ಣೆ ಉಜ್ಜಿಕೊಂಢು ಬಿಸಿ ಮಾಡಿಕೊಳ್ಳಿ…ನಂತರ ಮಗುವಿಗೆ ಬಿಟಿ ತಡೆಯುವಷ್ಟರ ಮಟ್ಟಿಗೆ ಬಂದಾಗ ಆ ಎಲೆಯನ್ನು ಮಗುವಿನ ಹೊಕ್ಕುಳಿನ ಭಾಗಕ್ಕೆ ಮೆಲ್ಲನೆ ಮಸಾಜ್ ಮಾಡಿ..ಇದು ಗ್ಯಾಸ್ ಸಮಸ್ಯೆಗೆ ರಾಮಬಾಣ ತಾಯಿ ಎದೆ ಹಾಲನ್ನು ಚಮಚವೊಂದರಲ್ಲಿ ಸ್ವಲ್ಪ ಹಿಂಡಿಕೊಂಡು ಅದಕ್ಕೆ ಒಂದು ಹನಿ ಹರಳೆಣ್ಣೆ ಮಿಶ್ರ ಮಾಡಿ ಮಗುವಿಗೆ ಸೇವಿಸಲು ಕೊಡಿ.. ಇದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಕಾಣಬಹುದು. (6 ತಿಂಗಳ ಕಳೆದ ಮಕ್ಕಳಿಗೆ ಮಾತ್ರ) ಈ ರೀತಿಯ ಮನೆ ಮದ್ದುಗಳ ಅಳವಡಿಕೆಯ ಮೂಲಕ ಮಕ್ಕಳಲ್ಲಿ ಕಂಡುಬರುವ ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆ ಮುಕ್ತಿ ಕಾಣಬಹುದು. ಇದಕ್ಕೂ ಮಿಗಿಯಾದ ಹೊಟ್ಟೆನೋವು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. Latest News ರಾಜ್ಯ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು! ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ. ರಾಜಕೀಯ ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು, ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ರಾಜಕೀಯ ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್ ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ರಾಜ್ಯ ಊಟ ಕೊಡಿಸಲು ಹಣವಿಲ್ಲವೆಂದು ತನ್ನ 2 ವರ್ಷದ ಮಗಳನ್ನು ಕೊಂದ ಬೆಂಗಳೂರಿನ ಟೆಕ್ಕಿ! ಆರೋಪಿ ಮತ್ತು ಆತನ ಮಗಳು ನವೆಂಬರ್ 15 ರಂದು ನಾಪತ್ತೆಯಾಗಿದ್ದು, ನಂತರ ಮಗುವಿನ ತಾಯಿ ಭವ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆಕೆ ಯಾವಾಗಲೂ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಾಳೆ ಮತ್ತು ಸಾಮಾನ್ಯವಾಗಿ ಶಾಲೆಯಿಂದ ಹೊರಡುವ ಕೊನೆಯ ವ್ಯಕ್ತಿ ಎಂದು ಶಾಲೆಯ ಮೂಲಗಳು ತಿಳಿಸಿವೆ Suvarna News Bengaluru, First Published May 27, 2022, 9:32 PM IST ವಿಲ್ಲುಪುರಂ (ಮೇ 27): ವಿಲ್ಲುಪುರಂ ಬಳಿಯ ಸುಂದರಿಪಾಳ್ಯಂ ಗ್ರಾಮದ 47 ವರ್ಷದ ಶಿಕ್ಷಕಿ ಕಳೆದ 13 ವರ್ಷಗಳಿಂದ ರಜೆ ತೆಗೆದುಕೊಂಡಿಲ್ಲ. ವಾಣಿಯಪಾಳ್ಯದ ಆನಂದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್.ಸರಸು ಅವರು ಕಳೆದ 13 ವರ್ಷಗಳಿಂದ ಕ್ಯಾಶುಯಲ್, ಮೆಡಿಕಲ್ ಮತ್ತು ಗಳಿಕೆ ರಜೆ (Earn Leaves) ಸೇರಿದಂತೆ ಯಾವುದೇ ರಜೆ ತೆಗೆದುಕೊಂಡಿಲ್ಲ. ಇದೇ ಶಾಲೆಯ ಮಾಜಿ ವಿದ್ಯಾರ್ಥಿಯಾಗಿರುವ ಈ ಶಿಕ್ಷಕಿ 2004 ರಿಂದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ನನ್ನ 18 ವರ್ಷಗಳ ಸೇವೆಯಲ್ಲಿ, ನಾನು ಒಂದೇ ಒಂದು ವೈದ್ಯಕೀಯ ರಜೆ ತೆಗೆದುಕೊಂಡಿಲ್ಲ. ಅದು ಬಿಟ್ಟರೆ ಕಳೆದ 13 ವರ್ಷಗಳ ಸೇವಾವಧಿಯಲ್ಲಿ ವಿದ್ಯಾರ್ಥಿನಿಯರಿಗೆ ಮಾದರಿಯಾಗಬೇಕು ಎಂಬ ಕಾರಣಕ್ಕೆ ಯಾವುದೇ ರೀತಿಯ ರಜೆ ತೆಗೆದುಕೊಂಡಿಲ್ಲ' ಎಂದು ಹೇಳಿದ್ದಾರೆ. "ಆಕೆ ಯಾವಾಗಲೂ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಾಳೆ ಮತ್ತು ಸಾಮಾನ್ಯವಾಗಿ ಶಾಲೆಯಿಂದ ಹೊರಡುವ ಕೊನೆಯ ವ್ಯಕ್ತಿ" ಎಂದು ಶಾಲೆಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕೇವಲ 1 ರೂ.ನಲ್ಲಿ SC ST ಹೆಣ್ಮಕ್ಕಳಿಗೆ ತಾಂತ್ರಿಕ ಶಿಕ್ಷಣ? “ಶಾಲಾ ಸಮಯಕ್ಕಿಂತ ಮೊದಲು ಅಥವಾ ನಂತರ ನನ್ನ ವೈಯಕ್ತಿಕ ಕೆಲಸಗಳನ್ನು ಪೂರ್ಣಗೊಳಿಸಲು ನಾನು ಸಮಯ ನೀಡುತ್ತೇಬೆ. ನನ್ನನ್ನು ನೋಡಿದ ನಂತರ ಅನೇಕ ವಿದ್ಯಾರ್ಥಿಗಳು ರಜೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ ಮತ್ತು ಅಲ್ಲಿ ನನ್ನ ತರಗತಿಗಳಿಗೆ ಹೆಚ್ಚಿನ ಸಮಯ ಪೂರ್ಣ ಹಾಜರಾತಿ ಇರುತ್ತದೆ, ”ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ತಮಿಳುನಾಡು ಸರ್ಕಾರದ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಬೋಧನೆಗಾಗಿ ಅವರು 50 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. “ಆರಂಭದಲ್ಲಿ, ರಜೆ ತೆಗೆದುಕೊಳ್ಳದ ನನ್ನ ಅಭ್ಯಾಸದಿಂದ ನಾನು ನಗರದ ಹೊರಗೆ ನಡೆಯುವ ಕಾರ್ಯಕ್ರಮಗಳನ್ನು ತಪ್ಪಿಸಿದ್ದರಿಂದ ಸಂಬಂಧಿಕರು ನನ್ನ ಮೇಲೆ ಕೋಪಗೊಂಡಿದ್ದರು. ಆದರೆ ಅವರು ನನ್ನ ನೀತಿಯನ್ನು ಅರ್ಥಮಾಡಿಕೊಂಡರು ಮತ್ತು ಈಗ ಯಾವುದೇ ತೊಂದರೆಯಿಲ್ಲ, ”ಎಂದು ಅವರು ತಿಳಿಸಿದ್ದಾರೆ
ಹುಬ್ಬಳ್ಳಿ: ಸರ್ಕಾರದ ಯಾವುದೇ ಯೋಜನೆಯ ಬಗ್ಗೆ ಸ್ಪಷ್ಟ ಅರಿವಿರದ ಶಾಸಕ ಪ್ರಸಾದ ಅಬ್ಬಯ್ಯ ಕ್ಷೇತ್ರದಲ್ಲಿ ಜಾರಿಯಾದ ಕೆಲ ಯೋಜನೆಗಳ ಇತಿಹಾಸ ತಿಳಿಯದೇ ಎಲ್ಲವೂ ನಾನೇ ಮಾಡಿದ್ದು, ನನ್ನಿಂದಲೇ ಆಗಿದ್ದು ಎಂಬ ಹಪಾಹಪಿಗೆ ಬಿದ್ದಿರುವುದು ನಾಚಿಕೆಗೇಡು ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಮನೆಗಳನ್ನು ಕಟ್ಟಿಸಿಕೊಡಲು ಆಗ್ರಹಿಸಿ ಪೌರಕಾರ್ಮಿಕರ ವಿವಿಧ ಸಂಘಟನೆಗಳ ಹಿರಿಯರು ನಿರಂತರ ಹೋರಾಟಗಳ ಪರಿಣಾಮವಾಗಿ ಸನ್ 1981ರಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಆಗಿದೆ. ವಿವಿಧ ಸಂಘಟನೆಗಳ ೪ ದಶಕಗಳ ಹೋರಾಟದ ಫಲವಾಗಿ ನವನಗರದಲ್ಲಿ 122 ಮನೆಗಳು ಹಾಗೂ ಮಂಟೂರ್ ರೋಡನಲ್ಲಿ 320 ಮನೆಗಳು ಪಾಲಿಕೆಯಿಂದ ರಾಜೀವ್‌ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿದೆ ಎಂಬುದು ನಮಗೆಲ್ಲ ತಿಳಿದ ಇತಿಹಾಸವಾಗಿದೆ. ಪ್ರಸ್ತುತ ಮಂಟೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ಪೌರಕಾರ್ಮಿಕರ ಮನೆಗಳ ಬಗ್ಗೆ ಅಲ್ಲಿ ಆಗಬೇಕಾದ ಸಣ್ಣ ಪುಟ್ಟ ಮಾರ್ಪಾಡುಗಳಿದ್ದರೆ ಪೌರಕಾರ್ಮಿಕರ ಅವಲಂಭಿತರು ಸಮುದಾಯದ ಮುಖಂಡರು, ಸಂಘದ ಮುಖ್ಯಸ್ಥರು ಹಾಗೂ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರುವುದು ಸಹಜ ಕ್ರಿಯೆಯಾಗಿದೆ. ಆದರೆ, ಇದರ ಬಗ್ಗೆ ಸ್ಪಷ್ಟವಾಗಿ ಅರಿಯದ ಶಾಸಕ ಪ್ರಸಾದ ಅಬ್ಬಯ್ಯ ಪ್ರಚಾರದ ಹುಚ್ಚಿಗೆ ಬಿದ್ದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುವ ಬಗ್ಗೆ ಮಾಹಿತಿ ತಿಳಿದು ದಿಢೀರ್ ಅಧಿಕಾರಿಗಳ ಸಭೆ ಕರೆದು ಪೌರ ಕಾರ್ಮಿಕರ ಮನೆಗಳ ಯೋಜನೆಯಲ್ಲಿ ಯಾವುದೇ ಮಾರ್ಪಾಡು ಮಾಡಬಾರದು ಇದು ನನ್ನ ಕನಸಿನ ಯೋಜನೆಯಾಗಿದೆ ಎಂದು ತಾಕೀತು ಮಾಡಿರುವುದು ನೋಡಿದರೆ ಶಾಸಕರಿಗೆ ಯೋಜನೆ ಸಮರ್ಪಕ ಜಾರಿ ಮಾಡುವುದಕ್ಕಿಂತ ಪ್ರಚಾರದ ಹಪಾಹಪಿ ಇರುವುದು ಎದ್ದು ಕಾಣುವಂತಿದೆ. ಪೌರಕಾರ್ಮಿಕರ ಸಮುದಾಯಕ್ಕೆ ಸಂಬಂದಿಸಿದ ಯೋಜನೆಗಳಿಗೆ ಪೌರ ಕಾರ್ಮಿಕರು ಹಾಗೂ ಸಂಘದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕಾದ ಶಾಸಕ ಪ್ರಸಾದ್ ಅಬ್ಬಯ್ಯ ಸಮುದಾಯದ ಜೊತೆಗೆ ಚರ್ಚಿಸದೆ ಎಕಪಕ್ಷಿಯ ನಿರ್ದಾರ ತೆಗೆದುಕೊಳ್ಳತ್ತ ಪ್ರತಿ ಬಾರಿ ಎಡವುತ್ತಿದ್ದು, ಇವರ ಎಡವಟ್ಟಿನಿಂದಾಗಿ ಕಳೆದ ಬಾರಿ ಹಜ್ ಭವನ ನಿರ್ಮಾಣ ವಿಷಯದಲ್ಲೂ ಆ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯದೇ ತರಾತುರಿಯಲ್ಲಿ ತೀರ್ಮಾನ ಕೈಗೊಂಡು ತೀವ್ರ ಮುಖಭಂಗಕ್ಕೀಡಾಗಿದ್ದು ಕಣ್ಣ ಮುಂದಿದೆ. ಪೌರ ಕಾರ್ಮಿಕರ ಮನೆಗಳು ನನ್ನ ಕನಸಿನ ಕೂಸು ಎಂದೆನ್ನುವ ಶಾಸಕ ಪ್ರಸಾದ ಅಬ್ಬಯ್ಯ 1981 ರಲ್ಲಿ ಪಾಲಿಕೆಯಲ್ಲಿ ಈ ಬಗ್ಗೆ ಠರಾವು ಪಾಸಾದಾಗ ಅಬ್ಬಯ್ಯ ಎಲ್ಲಿದ್ದರು? ಯಾವ ಸ್ಥಾನಮಾನ ಹೊಂದಿದ್ದರು? ಎಂಬುದನ್ನು ಸ್ಪಷ್ಟಪಡಿಸಲಿ. ಕರದಾತರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ಪೌರಕಾರ್ಮಿಕರ ಮನೆಗಳು ಅಲ್ಲಿ ವಾಸಿಸುವ ಪೌರ ಕಾರ್ಮಿಕರ ಅನುಕೂಲಕ್ಕೆ ತಕ್ಕಂತೆ ಸುಸಜ್ಜಿತವಾಗಿರಲಿ ಎಂಬ ಸದುದ್ದೇಶದಿಂದ ಹಲವಾರು ಜನಪ್ರತಿನಿಧಿಗಳು, ಸಂಘದ ಮುಖಂಡರು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಅದನ್ನೇ ತಪ್ಪಾಗಿ ತಿಳಿದು ಅಧಿಕಾರಿಗಳ ಮೇಲೆ ಹರಿಹಾಯುವುದು ಶಾಸಕರ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ. ಶಾಸಕ ಪ್ರಸಾದ್ ಅಬ್ಬಯ್ಯ ಜನಗಳ ಸೇವಕರು ಎಂಬುದನ್ನು ಮರೆಯಬಾರದು. ಸರ್ಕಾರದ ಅನುದಾನದಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳ ಬಗ್ಗೆ ಮಾತನಾಡುವ ಹಕ್ಕು ಎಲ್ಲರಿಗೂ ಇರುತ್ತದೆ. ಅದು ಯಾರ ಮನೆಯ ಸ್ವತ್ತು ಹಾಗಿರುವುದಿಲ್ಲ ಎಂಬುದು ಶಾಸಕರು ಮೊದಲು ತಿಳಿದುಕೊಳ್ಳಲಿ ಎಂದು ಈ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ ವಿಜಯ್ ಗುಂಟ್ರಾಳ್.
ಇಲಾಖಾ ವಿಚಾರಣೆ ವೇಳೆಯೇ ಹಿರಿಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಬೆದರಿಕೆ ಒಡ್ಡಿದ ಆರೋಪದಡಿ ಅಮಾನತುಗೊಂಡಿರುವ ಮುಖ್ಯ ಪೇದೆಯೊರ್ವನನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಟಿ.ನರಸೀಪುರ ಠಾಣೆಯ ರೈಟರ್(ಠಾಣಾ ಬರಹಗಾರರಾಗಿದ್ದ ) ಕೃಷ್ಣೇಗೌಡ ಎಂಬಾತನೇ ಬಂಧನಕ್ಕೊಳಗಾದಾತ. ಇಲಾಖಾ ವಿಚಾರಣೆಯನ್ನು ಎದುರಿಸು ಬಂದಿದ್ದಾತ ಅನುಚಿತವಾಗಿ ವರ್ತಿಸಿದ್ದ. ೨೦೦೧ನೇ ಇಸವಿಯಲ್ಲಿ ಕೃಷ್ಣೇಗೌಡ ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರಿದ್ದು, ನಂಜನಗೂಡು ವಿಭಾಗದ ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ, ನಂಜನಗೂಡು ವೃತ್ತದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದರಿಂದ ೨೦೧೯ರಲ್ಲಿ ನಂಜನಗೂಡು ಠಾಣೆಯಿಂದ ಟಿ.ನರಸೀಪುರ ಠಾಣೆಗೆ ವರ್ಗಾವಣೆಗೊಂಡಿದ್ದ ಮುಖ್ಯಪೇದೆ ಕೃಷ್ಣೇಗೌಡ ಪ್ರಭಾವ ಬೀರಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಇಲ್ಲೂ ಸಹ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಹಿರಿಯ ಅಧಿಕಾರಿಗಳಿಗೆ ಅಗೌರವವಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದ್ದು, ಇದರಿಂದ ಕೃಷ್ಣೇಗೌಡನ ವರ್ತನೆಯಿಂದ ರೈಟರ್ ಕೆಲಸಕ್ಕೆ ಬೇರೆಯವರನ್ನು ನಿಯೋಜಿಸಲಾಗಿತ್ತು, ಇದರಿಂದ ಕುಪಿತಗೊಂಡ ಕೃಷ್ಣೇಗೌಡ ತನ್ನ ವಶದಲ್ಲಿದ್ದ ಇಲಾಖೆಗೆ ಸೇರಿದ ೫೦ ಜೀವಂತ ಬುಲೆಟ್(ಗುಂಡು)ಗಳನ್ನು ಹೊತ್ತೊಯ್ದು, ಕಾವೇರಿ ನದಿ ಸೇತುವೆ ಕೆಳಗೆ ಬಿಸಾಡಿದ್ದ, ಟಿ.ನರಸೀಪುರ ಠಾಣೆಯಲ್ಲಿ ಅಂದೇ ಪ್ರಕರಣ ದಾಖಲಾಗಿತ್ತು. ನಂತರದಲ್ಲಿ ಸೇತುವೆ ಕೆಳಗಿನ ನದಿಯಲ್ಲಿ ಬುಲೆಟ್‌ಗಳು ದೊರೆತಿದ್ದವು. ಆರೋಪಿ ಕೃಷ್ಣೇಗೌಡನನ್ನು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿತ್ತು. ಹುಣಸೂರು ಡಿವೈಎಸ್‌ಪಿ ರವಿಪ್ರಸಾದ್‌ರಿಗೆ ವಿಚಾರಣೆ ಜವಾಬ್ದಾರಿ ವಹಿಸಲಾಗಿತ್ತು. ಆ.೧೪ರಂದು ಬೆಳಗ್ಗೆ ವಿಚಾರಣೆಗೆ ಹಾಜರಾದ ಕೃಷ್ಣೇಗೌಡ ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ಡಿವೈಎಸ್‌ಪಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರ ಮೇರೆಗೆ ಸ್ಥಳಕ್ಕಾಗಮಿಸಿದ ಇನ್ಸ್‌ಪೆಕ್ಟರ್ ಸಿ.ವಿ.ರವಿರವರ ಮೇಲೂ ಹರಿಹಾಯ್ದು ಏಕಾಏಕಿ ಕಚೇರಿಯಿಂದ ಹೊರಬಂದು ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ನನ್ನ ಕೈಯಲ್ಲಿದ್ದಾರೆ, ನೀವೇನೂ ಮಾಡಲಾಗಲ್ಲವೆಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಲ್ಲದೆ ಪೊಲೀಸರು ಹೊಡೆಯುತ್ತಿದ್ದಾರೆಂದು ಆವರಣದಲ್ಲಿ ತನ್ನ ಬಟ್ಟೆ ಹರಿದುಕೊಂಡು ಕೂಗಾಟನಡೆಸಿದ್ದಾನೆ. ಡಿವೈಎಸ್‌ಪಿ ರವಿಪ್ರಸಾದ್ ನೀಡಿರುವ ದೂರಿನ ಮೇರೆಗೆ ಕೃಷ್ಣೇಗೌಡರ ವಿರುದ್ದ ಪ್ರಕರಣ ದಾಖಲಿಸಿರುವ ನಗರ ಠಾಣೆ ಪೊಲೀಸರು ಇದೀಗ ಪ್ರಕರಣವನ್ನು ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಪುಕ್ಕಟೆ ಮನರಂಜನೆ: ಡಿವೈಎಸ್‌ಪಿ ಕಚೇರಿ ಪಕ್ಕದಲ್ಲೇ ಗ್ರಾಮಾಂತರ ಠಾಣೆ ಇದ್ದು, ಇಲ್ಲಿಗೆ ಬಂದಿದ್ದವರು ಹಾಗೂ ಆವರಣದ ಪೊಲೀಸ್ ಕ್ಯಾಂಟಿನ್‌ನಲ್ಲಿದ್ದ ಜನರು ಕೃಷ್ಣೇಗೌಡನ ಕೂಗಾಟ ಕಂಡು ಓಡಿ ಬಂದರಾದರೂ ಸತ್ಯಾಂಶ ತಿಳಿದು ಪುಕ್ಕಟೆ ಮನರಂಜನೆ ಪಡೆದು ತೆರಳಿದರು. ಸೂಕ್ತ ಕ್ರಮಕ್ಕಾಗಿ ಒತ್ತಾಯ: ಶಿಸ್ತಿನ ಇಲಾಖೆಯಾಗಿರುವ ಪೊಲೀಸ್ ಇಲಾಖೆಯಲ್ಲಿ ಇಂತಹ ಕೃತ್ಯ ಎಸಗುವವರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರಲಿದೆ. ಈತನನ್ನು ವಜಾಗೊಳಿಸಿ ಇಲಾಖೆ ಮರ್‍ಯಾದೆ ಕಾಪಾಡುವಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ದೆಹಲಿ: ನೋಟು ಅಮಾನ್ಯ ನಂತರ ಕಾಳಧನಿಕರ ಜಾಡು ಕೈಬಿಟ್ಟು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಚುನಾವಣೆ ತಯಾರಿಯಲ್ಲಿ ಮುಳುಗಿದೆ ಎಂದು ಬೊಬ್ಬೆ ಇಡುವ ವಿರೋಧ ಪಕ್ಷಗಳಿಗೆ ಮಂಗಳವಾರ ಮೋದಿ ಹೊಸ ಶಾಕ್ ಕೊಟ್ಟಿದ್ದಾರೆ. ಸ್ವಾಮಿ ನಾವು ಸುಮ್ಮನಿಲ್ಲ ದೇಶಾದ್ಯಂತ ಸುಮಾರು 2.1 ಲಕ್ಷ ಬೇನಾಮಿ ಕಂಪೆನಿಗಳ ಬ್ಯಾಂಕ್‍ಗಳನ್ನು ಶೋಧಿಸಿ ವಹಿವಾಟು ಸ್ಥಗಿತಗೊಳಿಸಿದ್ದೇವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದರಿಂದ ತಮ್ಮ ತೆರಿಗೆ ವಂಚನೆ ಎಲ್ಲಿ ಬಟಾಬಯಲಾಗುವುದೋ ಎಂದು ಹೆದರಿ ವಿರೋಧಿ ಪಕ್ಷಗಳು ಒಂದೇ ದಿನದಲ್ಲಿ ತೆಪ್ಪಗಾಗಿವೆ. ” ನಿಮ್ಮ ಹಸ್ತಾಕ್ಷರವು ದೇಶದ ಪ್ರಧಾನಿ ಹಸ್ತಾಕ್ಷರಕ್ಕಿಂತ ಪ್ರಭಾವಿ. ಹಾಗಾಗಿಯೇ ನೀವು ಸಹಿಹಾಕಿರುವ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ನಮಗೆ ಅತ್ಯಂತ ವಿಶ್ವಾಸವಿದೆ “. – ಪ್ರಧಾನಿ ಮೋದಿ ( ಜು.1ಕ್ಕೆ ಚಾರ್ಟರ್ಡ್ ಅಕೌಂಟೆಂಟ್‍ಗಳ ಸಮಾವೇಶದಲ್ಲಿ ಕಾಳಧನಿಕರಿಗೆ ಸಹಾಯ ಬೇಡ ಎಂದು ನೀಡಿದ್ದ ಪರೋಕ್ಷ ಎಚ್ಚರಿಕೆ) ಕಾಳಧನಿಕರ ಬೇಟೆಯ ಮುಂದಿನ ಯೋಜನೆ ಏನು? * ತೆರಿಗೆ ವಂಚನೆಗೆಂದೆ ಹುಟ್ಟುಹಾಕಲಾಗುವ ಬೇನಾಮಿ/ಬೋಗಸ್ ಕಂಪನಿಗಳು ಐಟಿ ರಿಟನ್ರ್ಸ್ ಸಲ್ಲಿಸುವುದಿಲ್ಲ. ಒಂದು ವೇಳೆ ಸಲ್ಲಿಸಿದ್ದರೂ ಅದು ಕೃಷ್ಣ ಲೆಕ್ಕವಾಗಿರುತ್ತದೆ. * ಇಂಥ ಕಂಪನಿಗಳು ಹೊಂದಿರಬಹುದಾದ ಬ್ಯಾಂಕ್ ಖಾತೆಗಳನ್ನು ಪತ್ತೆಮಾಡಲಾಗಿದೆ. ಬಹುಪಾಲು ಖಾಸಗಿ ಬ್ಯಾಂಕ್‍ಗಳೇ ಇಂಥವರಿಗೆ ಅಡಗುತಾಣ. * 2, 09, 032 ಬೋಗಸ್ ಕಂಪನಿಗಳನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ. ಅವುಗಳ ವಹಿವಾಟು ಸ್ಥಗಿತಗೊಳಿಸಿ, ಖಾತೆಯಲ್ಲಿನ ಹಣವನ್ನು ಮುಟುಗೋಲು ಹಾಕಿಕೊಳ್ಳಲಾಗಿದೆ. * ಕೇಂದ್ರ ಸರಕಾರ ಕಾರ್ಪೊರೇಟ್ ಸಚಿವಾಲಯದಲ್ಲಿ ನೋಂದಣಿಗೊಂಡು ಕೂಡ ಹಲವು ಕಂಪನಿಗಳು ಬೋಗಸ್ ಆಗಿರುವುದು ತಿಳಿದುಬಂದಿದೆ. ಇಂಥ ಕಂಪನಿಗಳ ಬೆನ್ನುಬಿಡದಂತೆ ಬ್ಯಾಂಕ್‍ಗಳಿಗೆ ಸೂಚಿಸಲಾಗಿದೆ.
ಮಡಿಕೇರಿ, ಜೂ. 15: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸಾಧಾರಣ ಮಳೆಯಾಗುತ್ತಿರು ವದರಿಂದ ರೈತರ ಮೊಗದಲ್ಲಿ ಹರ್ಷ ತಂದಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳು ಪ್ರಮುಖವಾಗಿದ್ದು, ಸದ್ಯದಲ್ಲಿಯೇ ಭತ್ತ ಒಟ್ಟಲು ಪಾತಿ (ಸಸಿ ಮಡಿ) ಮಾಡುವ ಕಾರ್ಯಕ್ಕೆ ಕೃಷಿಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ಗುರಿ ಇದ್ದು, ಇದೇ ರೀತಿ ಮಳೆ ಮುಂದುವರಿದಲ್ಲಿ ಶೀಘ್ರ ಭತ್ತ ಸಸಿಮಡಿ ಕಾರ್ಯ ಪ್ರಾರಂಭವಾಗಲಿದೆ. ಭತ್ತದ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು 1 ಕೆ.ಜಿ.ಗೆ 8 ರೂ.ಗಳ ಸಹಾಯ ಧನದಡಿ ಪಡೆಯ ಬಹುದಾಗಿದೆ. ರೈತರು ಸಸಿ ಮಡಿ ಮಾಡುವ ಸಂದರ್ಭದಲ್ಲಿ ಬಿತ್ತನೆಗೆ ಮೊದಲು ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಿ ಉಪಯೋಗಿಸುವದು ಸೂಕ್ತವಾಗಿದೆ. ಪ್ರತಿ ಕೆ.ಜಿ.ಭತ್ತ ಬಿತ್ತನೆ ಬೀಜಕ್ಕೆ 2 ಗ್ರಾಂ. ಬೇವಿಸ್ಟಿನ್ (ಕಾರ್ಬನ್‍ಡೈಜಿಂ) ಶಿಲೀಂದ್ರ ನಾಶಕ ಪುಡಿಯನ್ನು ಬೆರೆಸಿ ಬೀಜೋಪಚಾರ ಮಾಡುವದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಿ ತೆಗೆದ ನಂತರ ಮೊಳಕೆಗೆ ಇಡುವ ಮೊದಲು ಬೀಜೋಪಚಾರ ಮಾಡುವದು ಒಳಿತಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಬಿತ್ತನೆಗೆ ಮೊದಲು ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಹೊರ ತೆಗೆದ ನಂತರ ನೀರನ್ನು ಬಸಿದು ಪ್ರತೀ ಒಂದು ಕೆ.ಜಿ.ಬಿತ್ತನೆ ಬೀಜಕ್ಕೆ 4 ಗ್ರಾಂ.ನಂತೆ ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಮೊಳಕೆಗೆ ಇಟ್ಟು ಮೊಳಕೆ ಬಂದ ನಂತರ ಸಸಿ ಮಡಿಯಲ್ಲಿ ಬಿತ್ತನೆ ಮಾಡುವದು. ಹೀಗೆ ಮಾಡುವದರಿಂದ ಬೀಜದಿಂದ ಬರುವ ಬೆಂಕಿ ರೋಗವನ್ನು ತಡೆಗಟ್ಟಬಹುದಾಗಿದೆ. ದೀರ್ಘಾವಧಿ ತಳಿಗಳಾದ ಇಂಟಾನ್, ತುಂಗಾ, ಅತಿರ, ಬಿ.ಆರ್.2655, ತನು ತಳಿ ಭತ್ತಗಳನ್ನು ಜೂನ್ 10 ರಿಂದ 25ರ ಒಳಗೆ ಬಿತ್ತನೆ ಮಾಡುವದು. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.7191, ಜಯ, ಎಂ.ಟಿ.ಯು 1001 ತಳಿಗಳನ್ನು ಜೂನ್ 4ನೇ ವಾರದಲ್ಲಿ ಬಿತ್ತನೆ ಮಾಡುವದು. ಅಲ್ಪಾವಧಿ ತಳಿಗಳಾದ ಐ.ಆರ್.64, ಹೈಬ್ರೀಡ್ ಭತ್ತಗಳನ್ನು ಜುಲೈ ಮೊದಲನೇ ವಾರದಲ್ಲಿ ಬಿತ್ತನೆಗೆ ಬಳಸುವದು ಸೂಕ್ತವಾಗಿದೆ. ಜಿಲ್ಲೆಯ ಎರಡನೇ ಪ್ರಮುಖ ಬೆಳೆಯಾದ ಮುಸುಕಿನ ಜೋಳದ 4 ಸಾವಿರ ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಉಳಿದಂತೆ ಬಿತ್ತನೆ ಕಾರ್ಯ ಮುಂದುವರೆದಿದೆ. ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಪ್ರತಿ ಕೆ.ಜಿ.ಗೆ 20 ರೂ.ಗಳ ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ. ಕಳೆದ ಬಾರಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಗುರಿ ಹೊಂದಲಾಗಿತ್ತು. ಈ ಬಾರಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದೆ. ಹಾಗೆಯೇ ಮುಸುಕಿನ ಜೋಳ ಬಿತ್ತನೆ ಪ್ರದೇಶದ ವಿಸ್ತೀರ್ಣ ಸುಮಾರು ಕಳೆದ ಬಾರಿ 3500 ಹೆಕ್ಟೇರ್ ಪ್ರದೇಶ ಗುರಿ ಇತ್ತು. ಈ ಬಾರಿ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡುವ ಗುರಿ ಹೊಂದಲಾಗಿದೆ.
ಚೆನ್ನೈ: ಒಂದೇ ಸಮನೆ ಬೊಬ್ಬೆೆ. ನೋಟ್ಯಂತರ ವಿಫಲ ಆಯ್ತು, ಕಪ್ಪು ಹಣ ಮೂಲದಲ್ಲೇ ಉಳಿಯಿತು, ಮೋದಿ ಸುಮ್ಮನೇ ಜನರನ್ನು ಬ್ಯಾಾಂಕ್ ಎದುರು ಕ್ಯೂ ನಿಲ್ಲುವಂತೆ ಮಾಡಿದರು, ಪ್ರಚಾರಕ್ಕಾಗಿ ಕೇಂದ್ರ ಸರಕಾರ ಗಿಮಿಕ್ ಮಾಡಿತು… ನ.8, 2016ರ ಬಳಿಕ ಇಂಥಾದ್ದೇ ಮಾತುಗಳು… ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ನೋಟ್ಯಂತರ ಪರಿಣಾಮ ಗೊತ್ತಾಾಗುತ್ತಿದೆ. ಈಗ ಇಂಥದ್ದೇ ಪರಿಣಾಮದ ರೂಪದಲ್ಲಿತಮಿಳುನಾಡಿನಲ್ಲಿ ನೋಟ್ಯಂತರದ ವೇಳೆ ಒಂದೇ ಬಾರಿಗೆ, ಬ್ಯಾಾಂಕ್‌ಗೆ ಬರೋಬ್ಬರಿ 246 ಕೋಟಿ ರುಪಾಯಿ ಠೇವಣಿಯಾಗಿರುವುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆೆಹಚ್ಚಿದ್ದಾಾರೆ. ರಾಜ್ಯದಲ್ಲಿ ನೋಟ್ಯಂತರದ ವೇಳೆ ಬ್ಯಾಾಂಕ್‌ಗಳಿಗೆ ಜಮೆಯಾದ ಲಕ್ಷಾಾಂತರ ಖಾತೆ ಪರಿಶೀಲನೆ ವೇಳೆ ಈ ಅಂಶ ಬೆಳಕಿಗೆ ಬಂದಿದ್ದು, ಇಷ್ಟೂ ಹಣ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಆದಾಗ್ಯೂ, ಹಣ ವರ್ಗಾವಣೆ ಕುರಿತು ಸಂಶಯದ ಹಿನ್ನೆೆಲೆಯಲ್ಲಿ 27,739 ಖಾತೆದಾರರಿಗೆ ವಿವರಣೆ ಕೇಳಿ ಐಟಿ ನೋಟಿಸ್ ನೀಡಿದೆ. ಅಲ್ಲದೆ ನೋಟ್ಯಂತರದಿಂದ ಲಕ್ಷಾಾಂತರ ತೆರಿಗೆದಾರರು ಸೃಷ್ಟಿಯಾಗಿದ್ದಾರೆ, ಲಕ್ಷಾಾಂತರ ನಕಲಿ ಕಂಪನಿಗಳ ನೋಂದಣಿ ರದ್ದಾಗಿವೆ. ಹೇಳಿ ನೋಟ್ಯಂತರ ವಿಫಲವಾದರೆ ಇಷ್ಟೆೆಲ್ಲ ಸಾಧ್ಯವಾಗುತ್ತಿತ್ತಾ? ಇನ್ನಾದರೂ ಬೊಬ್ಬೇ ಹಾಕೋದು ಬಿಡಿ. ಯಾರು ಆ ರಾಜಕಾರಣಿ? ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಎಲ್ಲ ಹಣ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಈ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.
‘ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್’ ಕೃತಿಯು ಅಬ್ದುಲ್ ರಶೀದ್ ಅವರ ಕತೆಗಳಾಗಿವೆ. ಇಲ್ಲಿನ ಕತೆಗಳು ಸಣ್ಣ ವಿವರಗಳನ್ನು ಕೂಡ ಆಗಾಧ ಭಾವಕೋಶಗಳ ಬ್ರಹ್ಮಾಂಡ ಎಂಬುದನ್ನು ಮನನ ಮಾಡಿಸುವ ಕತೆಗಳಾಗಿವೆ. ಕೃತಿಗೆ ಮುನ್ನುಡಿ ಬರೆದಿರುವ ವಿವೇಕ ಶಾನಭಾಗ ಅವರು, `ನಮ್ಮ ಗ್ರಹಿಕೆಗಳಿಗೆ, ಪೂರ್ವಗ್ರಹಗಳಿಗೆ ಸವಾಲು ಒಡ್ಡುತ್ತ ವಿಭಿನ್ನ ಲೋಕದೊಳಗೆ ಕರೆದೊಯ್ಯುವ ರಶೀದರ ಕತೆಗಳನ್ನು ಓದಿದಾಗ ದೊರಕುವ ಆನಂದ, ಕಳವಳ, ಉದ್ವೇಗ, ಚಿಂತನೆಗಳನ್ನು ಸುಮ್ಮನೇ ಪಡೆಯಬೇಕಲ್ಲದೇ, ಯಾವ ಸಾಹಿತ್ಯಿಕ ಹತಾರಗಳಿಂದಲೂ ದಕ್ಕಿಸಿಕೊಳ್ಳಲಾಗದು' ಎಂದಿದ್ದಾರೆ. ಕೃತಿಗೆ ಬೆನ್ನುಡಿ ಬರೆದ ಲೇಖಕಿ ಗೀತಾ ವಸಂತ ‘ಕಾಲದ ಪ್ರೇಮಗಳನ್ನು ಕಳಚಿಟ್ಟು ಅಲೆಮಾರಿಯಂತೆ ಚಲಿಸುತ್ತಿರುವುದು ಎಷ್ಟು ಸರಳವೆನಿಸುತ್ತದೆಯೋ ಅದು ಅಷ್ಟೇ ಗಹನವಾದ ಸಂಗತಿಯೂ ಆಗಿಬಿಡುತ್ತದೆ. ಏಕೆಂದರೆ ನಿಶ್ಚಿತ ನೋಟಕ್ರಮಗಳು ಅಭ್ಯಾಸವಾದ ನಮಗೆ ಅದನ್ನು ಮೀರಿ ಸದಾ ಧುಮ್ಮಿಕ್ಕಿ ಹರಿಯುವ ಚೈತನ್ಯವನ್ನು ಅರಿಯುವುದು ಸವಾಲು. ಅದರ ಸಂಗಡ ಸುಮ್ಮನೇ ಹರಿಯುತ್ತಾ ಹೋಗುವುದು ಚಂದ. ಹೊಸನೋಟಗಳು ಮಾತ್ರ ನಮ್ಮನ್ನು ರೋಮಾಂಚನಗೊಳಿಸುತ್ತದೆ. ಕಥನಕ್ಕೆ ಅಂಥ ಬೆರಗಿನ ಕಂಪನ ಬೇಕು. ಈ ಗುಟ್ಟನ್ನು ರಶೀದರ ಕತೆಗಳು ಹೊಟ್ಟೆಯೊಳಗಿಟ್ಟುಕೊಂಡಿವೆ’ ಎಂದು ಪ್ರಶಂಸಿಸಿದ್ದಾರೆ. About the Author ಅಬ್ದುಲ್ ರಶೀದ್ (28 February 1965) 'ಕೆಂಡಸಂಪಿಗೆ' ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...
ನಾವು ಆಹಾರ ದರ್ಜೆಯ ವಸ್ತುಗಳನ್ನು ಬಳಸುತ್ತೇವೆ.ನಾವು ಪೂರೈಕೆದಾರರನ್ನು ಆಯ್ಕೆ ಮಾಡುತ್ತೇವೆ ಮತ್ತು ಖರೀದಿಸಿದ ಪ್ರತಿಯೊಂದು ಕಚ್ಚಾ ವಸ್ತುಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುತ್ತೇವೆ ಮತ್ತು ಪರಿಶೀಲಿಸುತ್ತೇವೆ.ನಮ್ಮ ವೃತ್ತಿಪರ ಕ್ಯೂಸಿ ಉತ್ಪಾದನೆಯ ಮೊದಲು ಕಚ್ಚಾ ವಸ್ತುಗಳ ಗುಣಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸುತ್ತದೆ. ಗುಣಮಟ್ಟವನ್ನು ನೀವು ಹೇಗೆ ಖಾತರಿಪಡಿಸುತ್ತೀರಿ? ನಾವು ಚೀನಾದ ಜಿಯಾಂಗ್‌ಸು ಪ್ರಾಂತ್ಯದ ಕ್ಸುಝೌ ನಗರದಲ್ಲಿ ನೆಲೆಸಿದ್ದೇವೆ, ನಾವು ಕಚ್ಚಾ ವಸ್ತುಗಳಿಂದ ಉತ್ಪನ್ನಗಳಿಗೆ ಗುಣಮಟ್ಟವನ್ನು ನಿಯಂತ್ರಿಸಬಹುದು.ನಮ್ಮ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯಲ್ಲಿ, 100% ಕಚ್ಚಾ ವಸ್ತುಗಳ ತಪಾಸಣೆ, 100% ಅರೆ-ಸಿದ್ಧ ಉತ್ಪನ್ನ ತಪಾಸಣೆ, 100% ಸಿದ್ಧಪಡಿಸಿದ ಉತ್ಪನ್ನ ತಪಾಸಣೆ, ಜೊತೆಗೆ ಗುಣಮಟ್ಟವನ್ನು ಖಾತರಿಪಡಿಸಲು ಯಾದೃಚ್ಛಿಕ ತಪಾಸಣೆ ಇದೆ. ನಿಮ್ಮ MOQ ಯಾವುದು? ಈ ಉತ್ಪನ್ನಕ್ಕಾಗಿ ನಮ್ಮ MOQ 2000pcs ಆಗಿದೆ, ಏಕೆಂದರೆ ಒಂದು ಪ್ಯಾಲೆಟ್ ಬಾಟಲಿಯ ಗಾತ್ರವನ್ನು ಆಧರಿಸಿ ಸುಮಾರು 1000-5000pcs ಅನ್ನು ಲೋಡ್ ಮಾಡಬಹುದು ಮತ್ತು ಪ್ಯಾಲೆಟ್‌ನಿಂದ ಪ್ಯಾಕ್ ಮಾಡದಿದ್ದರೆ ಸಾರಿಗೆ ಸಮಯದಲ್ಲಿ ಕೆಲವು ಗಾಜಿನ ಬಾಟಲಿಗಳು ಒಡೆಯಬಹುದು. ನೀವು ಯಾವ ವ್ಯಾಪಾರ ನಿಯಮಗಳನ್ನು ನೀಡಬಹುದು? ನಾವು EXW/FOB/CIF/DDP/LC ನಂತಹ ವಿಭಿನ್ನ ವ್ಯಾಪಾರ ನಿಯಮಗಳನ್ನು ಒದಗಿಸಬಹುದು, ಭೂಮಿ/ಸಾಗರ/ವಾಯು ಸಾರಿಗೆಯಲ್ಲಿ ವಿವಿಧ ಸಾರಿಗೆ ವಿಧಾನಗಳನ್ನು ಒದಗಿಸಬಹುದು, ಇತರ ಪಾವತಿ ನಿಯಮಗಳನ್ನು ಸಹ ಚರ್ಚಿಸಬಹುದು. ಹೊಸ ವಿನ್ಯಾಸದ ಗಾಜಿನ ಉತ್ಪನ್ನಗಳಿಗೆ ನೀವು ಅಚ್ಚು ತಯಾರಿಸಬಹುದೇ? ಗ್ರಾಹಕರು ನಮಗೆ ಮಾದರಿ ಅಥವಾ ಅದರ ತಾಂತ್ರಿಕ ರೇಖಾಚಿತ್ರ ಅಥವಾ ಗಾಜಿನ ಉತ್ಪನ್ನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕಳುಹಿಸಿದರೆ ನಾವು ಗಾಜಿನ ಉತ್ಪನ್ನಗಳಿಗೆ ಕಸ್ಟಮೈಸ್ ಮಾಡಿದ ಅಚ್ಚನ್ನು ತಯಾರಿಸಬಹುದು, ಅಚ್ಚು ಗಾಜಿನ ಉತ್ಪನ್ನಗಳನ್ನು ತಯಾರಿಸಲು MOQ ಅದರ ಗಾಜಿನ ತೂಕದ ಆಧಾರದ ಮೇಲೆ 30000pcs ಅಥವಾ 50000pcs. ಗಾಜಿನ ಉತ್ಪನ್ನಗಳಿಗೆ ನಿಮ್ಮ ಕಸ್ಟಮೈಸ್ ಮಾಡಿದ ಪ್ರಕ್ರಿಯೆ ಏನು? ನಾವು ಎಲ್ಲಾ ವಿಭಿನ್ನ ಕಸ್ಟಮೈಸ್ ಮಾಡಿದ ಉತ್ಪನ್ನಗಳನ್ನು ನೀಡಬಹುದು, ಉದಾಹರಣೆಗೆ, ಸಿಲ್ಕ್ ಸ್ಕ್ರೀನ್/ಡೆಕಾಲ್/ಕಲರ್ ಸ್ಪ್ರೇ/ಫ್ರಾಸ್ಟಿಂಗ್/ಗೋಲ್ಡನ್ ಸ್ಟಾಂಪಿಂಗ್/ಸಿಲ್ವರ್ ಸ್ಟಾಂಪಿಂಗ್/ಅಯಾನ್ ಪ್ಲೇಟಿಂಗ್/ಲೇಬಲ್ ಜಾಡಿಗಳಿಗೆ, ಕಸ್ಟಮೈಸ್ ಮಾಡಿದ ಮುಚ್ಚಳಗಳು, ಮತ್ತು ಕಸ್ಟಮೈಸ್ ಮಾಡಿದ ಬ್ರೌನ್/ವೈಟ್ ಬಾಕ್ಸ್/ಕಾರ್ಟನ್ ಜೊತೆಗೆ ಪ್ರಿಂಟಿಂಗ್, ಅಥವಾ ಇತರೆ ಅವಶ್ಯಕತೆಗಳು. ಪ್ರಮುಖ ಸಮಯದ ಬಗ್ಗೆ ಏನು? ಸಾಮಾನ್ಯವಾಗಿ, ಪ್ರಮುಖ ಸಮಯವು ಸುಮಾರು 3 ರಿಂದ 55 ದಿನಗಳು.ಆದರೆ ನಾವು ಸ್ಟಾಕ್ ಹೊಂದಿದ್ದರೆ ಅದು 7 ದಿನಗಳಲ್ಲಿ ಅಗತ್ಯವಿದೆ. ಮಾದರಿಯನ್ನು ಹೇಗೆ ಪಡೆಯುವುದು? ಮಾದರಿ ಆದೇಶವು ಸ್ವೀಕಾರಾರ್ಹವಾಗಿದೆ.ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಮತ್ತು ನಿಮಗೆ ಯಾವ ಮಾದರಿ ಬೇಕು ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಗ್ರಾಹಕರು ಯಾರು? ನಾವು IKEA, WALMART ನ ನಿಯಮಿತ ಪೂರೈಕೆದಾರರಾಗಿದ್ದೇವೆ ಮತ್ತು ನಾವು ಪ್ರತಿ ತಿಂಗಳು ಲಕ್ಷಾಂತರ ಗ್ರೈಂಡರ್‌ಗಳನ್ನು ಪೂರೈಸುತ್ತಿದ್ದೇವೆ. ನಿಮ್ಮ ನಂತರದ ಸೇವೆ ಏನು? ನಾವು ಗ್ರಾಹಕರಿಗೆ ಸಮಯ ಮತ್ತು ಉತ್ತಮ ಗುಣಮಟ್ಟದಲ್ಲಿ ಸರಬರಾಜು ಮಾಡುತ್ತೇವೆ.ಯಾವುದೇ ಗುಣಮಟ್ಟದ ಸಮಸ್ಯೆಗೆ, ನಾವು ಕ್ಲೈಂಟ್ ನಷ್ಟವನ್ನು ಮರುಪಾವತಿ ಮಾಡುತ್ತೇವೆ.
ವಕೀಲೆ ವೃಂದಾ ಗ್ರೋವರ್ ಅವರು ಇಂದು ಬೆಳಗ್ಗೆ ರಜಾಕಾಲೀನ ಪೀಠದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಮುಂದೆ ಮನವಿ ಪ್ರಸ್ತಾಪಿಸಿದರು. ಪ್ರಕರಣವನ್ನು ನಾಳೆ ಆಲಿಸಲು ನ್ಯಾಯಾಲಯ ಒಪ್ಪಿತು. Mohammed Zubair Bar & Bench Published on : 30 Jun, 2022, 11:18 am ತಮ್ಮನ್ನು ಪೊಲೀಸ್‌ ವಶಕ್ಕೆ ಒಪ್ಪಿಸುವ ಪಟಿಯಾಲ ಹೌಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ರಕರ್ತ, ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಕೀಲೆ ವೃಂದಾ ಗ್ರೋವರ್ ಅವರು ಇಂದು ಬೆಳಗ್ಗೆ ರಜಾಕಾಲೀನ ಪೀಠದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಮುಂದೆ ಮನವಿ ಪ್ರಸ್ತಾಪಿಸಿದರು. ಪ್ರಕರಣವನ್ನು ನಾಳೆ ಆಲಿಸಲು ನ್ಯಾಯಾಲಯ ಒಪ್ಪಿತು. ಜುಬೈರ್‌ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿ ಜೂನ್ 28ರಂದು ಪಟಿಯಾಲ ಹೌಸ್ ನ್ಯಾಯಾಲಯ ಆದೇಶಿಸಿತ್ತು. Also Read ಮೊಹಮ್ಮದ್‌ ಜುಬೈರ್‌ ಅವರನ್ನು ನಾಲ್ಕು ದಿನ ಪೊಲೀಸ್‌ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ ಜುಬೈರ್ ಅವರು 2018ರಲ್ಲಿ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು) ಮತ್ತು 295 ಎ (ಧಾರ್ಮಿಕ ಭಾವನೆಗಳ ನಿಂದನೆ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ನಿರ್ದಿಷ್ಟ ಧರ್ಮದ ದೇವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಸಲುವಾಗಿ ಆಕ್ಷೇಪಾರ್ಹ ಚಿತ್ರ ಟ್ವೀಟ್ ಮಾಡಿದ್ದಾರೆ ಎಂದು ಟ್ವಿಟರ್ ಖಾತೆದಾರರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಜುಬೈರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಬೆಂಗಳೂರು: 2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿಯನ್ನು ಪಿಯು ಮಂಡಳಿ ಬಿಡುಗಡೆ ಮಾಡಿದೆ. 2020ರ ಮಾರ್ಚ್​ 4ರಿಂದ ಆರಂಭವಾಗುವ ಪರೀಕ್ಷೆಗಳು ಮಾರ್ಚ್​ 23ಕ್ಕೆ ಮುಕ್ತಾಯಗೊಳ್ಳಲಿವೆ. ಇನ್ನು ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೂ ನಡೆಯಲಿವೆ. ಮಾರ್ಚ್​4ರಿಂದ ಶುರು ದ್ವಿತೀಯ ಪಿಯುಸಿ ಅಗ್ನಿ ಪರೀಕ್ಷೆ: ಮಾರ್ಚ್ 4 ರಂದು ವಿಷಯವಾರು ಪರೀಕ್ಷೆ, ಮಾರ್ಚ್ 5 ರಂದು ಐಚ್ಛಿಕ ಭಾಷೆ, ಮಾ.6ರಂದು ಐಚ್ಛಿಕ ವಿಷಯ, ಮಾ. 7 ವಿಷಯವಾರು ಮತ್ತು ಮಾರ್ಚ್ 9 ವಿಷಯವಾರು ಪರೀಕ್ಷೆ, ಮಾರ್ಚ್ 10 […] sadhu srinath | Nov 04, 2019 | 6:06 PM ಬೆಂಗಳೂರು: 2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿಯನ್ನು ಪಿಯು ಮಂಡಳಿ ಬಿಡುಗಡೆ ಮಾಡಿದೆ. 2020ರ ಮಾರ್ಚ್​ 4ರಿಂದ ಆರಂಭವಾಗುವ ಪರೀಕ್ಷೆಗಳು ಮಾರ್ಚ್​ 23ಕ್ಕೆ ಮುಕ್ತಾಯಗೊಳ್ಳಲಿವೆ. ಇನ್ನು ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೂ ನಡೆಯಲಿವೆ. ಮಾರ್ಚ್​4ರಿಂದ ಶುರು ದ್ವಿತೀಯ ಪಿಯುಸಿ ಅಗ್ನಿ ಪರೀಕ್ಷೆ: ಮಾರ್ಚ್ 4 ರಂದು ವಿಷಯವಾರು ಪರೀಕ್ಷೆ, ಮಾರ್ಚ್ 5 ರಂದು ಐಚ್ಛಿಕ ಭಾಷೆ, ಮಾ.6ರಂದು ಐಚ್ಛಿಕ ವಿಷಯ, ಮಾ. 7 ವಿಷಯವಾರು ಮತ್ತು ಮಾರ್ಚ್ 9 ವಿಷಯವಾರು ಪರೀಕ್ಷೆ, ಮಾರ್ಚ್ 10 ಆಯ್ಕೆ ವಿಷಯ ಪರೀಕ್ಷೆ, ಮಾರ್ಚ್ 11, 12, 13, 14, 16, 17, 21 ವಿಷಯವಾರು ಪರೀಕ್ಷೆ, ಮಾರ್ಚ್ 18ರಂದು ಹಿಂದಿ, ಮಾರ್ಚ್ 19 ಕನ್ನಡ ಮತ್ತು ಮಾರ್ಚ್ 23ಕ್ಕೆ ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.
ಮೈಸೂರು, ಸೆ.23: ಸ್ಥಳೀಯವಾಗಿ ತಯಾರಿಸಲ್ಪಡುತ್ತಿರುವ ಮೈಸೂರು ಸ್ಯಾಂಡಲ್ ಸೋಪು ಹಾಗೂ ಎಣ್ಣೆಗೆ ವಿಶ್ವಮಾನ್ಯತೆ ಇದ್ದು, ವಿದೇಶದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ನಗರದ ಇನ್‍ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಸಾಬೂನು ಮೇಳಕ್ಕೆ ಶನಿವಾರ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಈ ಕಾರ್ಖಾನೆಗೆ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿತ್ತು. ಈ ಕಾರ್ಖಾನೆ ಉತ್ತಮ ಗುಣಮಟ್ಟದ ಸೋಪುಗಳನ್ನು ತಯಾರಿಸುತ್ತಿದ್ದು, ಬಹಳ ಹಿಂದೆಯೇ ಲಂಡನ್‍ನಲ್ಲಿ ತನ್ನ ಮಾರುಕಟ್ಟೆಯನ್ನು ಹೊಂದಿತ್ತು, ಇದು ಕಾರ್ಖಾನೆ ಮಾತ್ರವಲ್ಲದೆ ಅನೇಕ ಉತ್ಪನ್ನಗಳನ್ನು ತಯಾರಿಸಿ ಜನ ಮನ್ನಣೆ ಗಳಿಸಿದೆ ಎಂದು ತಿಳಿಸಿದರು. ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮೈಸೂರು ಸ್ಯಾಂಡಲ್ ಸೋಪು ವಿಶ್ವವಿಖ್ಯಾತಿಯನ್ನು ಹೊಂದಿದೆ. ಈ ಸಂಸ್ಥೆ ಇನ್ನು ಹೆಚ್ಚಿನ ಉತ್ಪನ್ನಗಳನ್ನು ತಯಾರು ಮಾಡುವುದರ ಜೊತೆಗೆ ಮತ್ತಷ್ಟು ಜನರ ವಿಶ್ವಾಸಗಳಿಸಲಿ ಎಂದು ಹಾರೈಸಿದರು. ದಸರಾ ಪ್ರಯುಕ್ತ ಈ ಮೇಳವನ್ನು ಆಯೋಜಿಸಿದ್ದು, ಇಂದಿನಿಂದ ಹತ್ತು ದಿನಗಳವರೆಗೆ ಈ ಮಾರಾಟ ಮೇಳವನ್ನು ಏರ್ಪಡಿಸಲಾಗಿದ್ದು, ಪ್ರತೀ ಉತ್ಪನ್ನಗಳ ಮೇಲೆ ಶೇ.18 ರಷ್ಟು ರಿಯಾಯಿತಿ ಮಾರಾಟ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಎಸ್.ಬಾಲು, ವ್ಯವಸ್ಥಾಪಕ ನಿರ್ದೇಶಕ ಹರಿ ಕುಮಾರ್ ಝಾ, ಕರ್ನಾಟಕ ವಲಯದ ಪ್ರಧಾನ ವ್ಯವಸ್ಥಾಪಕ ಸಿ.ಎಂ.ಸುವರ್ಣ, ಉಮಾಶಂಕರ್ ಅಪಾಲಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ನಾಗಕೃಷ್ಣ ಅರಸ್, ಶಾಲಿನ ಸೌಮ್ಯ, ಮಾರುಕಟ್ಟೆ ವ್ಯವಸ್ಥಾಪಕ ಬಿ.ಎ.ಹರೀಶ್, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಮೃಧು ಧೋರಣೆ ಹೊಂದಿರುವ, ತನ್ನ ಜಿಲ್ಲೆಯಲ್ಲಿ ತನಗೆ ಸೂಕ್ತ ಸ್ಥಾನ ಸಿಗದಿದ್ದರೂ, ಅನುಭವ, ಅವಕಾಶವಿದ್ದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದರೂ, ಆಕ್ರೋಶದ ಮಧ್ಯೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಾಥ್ ನೀಡಿದ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಇದೀಗ ಕಾಂಗ್ರೆಸ್ ಗೆ ಕೈ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೈದ್ರಾಬಾದ್ ಕರ್ನಾಟಕದಲ್ಲಿ ಖರ್ಗೆ ನಂತರ ಕಾಂಗ್ರೆಸ್ ನಲ್ಲಿ ಹಿರಿಯರಾದ ಮಾಲೀಕಯ್ಯ ಗುತ್ತೇದಾರ ಇದೀಗ ಕಾಂಗ್ರೆಸ್ ಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ತಮ್ಮ ಹಿರಿತನಕ್ಕೆ ಕಾಂಗ್ರೆಸ್ ನಲ್ಲಿ ಬೆಲೆ ನೀಡುತ್ತಿಲ್ಲ, ಖರ್ಗೆ ಮಾತಿಗೆ ಕಟುಬಿದ್ದು, ಸಚಿವ ಸ್ಥಾನದಿಂದ ವಂಚಿಸಲಾಗಿದೆ. ಹಿರಿಯರಾದರೂ ಸಚಿವ ಸ್ಥಾನ ನೀಡದೇ ಮೋಸ ಮಾಡಲಾಗಿದೆ ಎಂಬುದು ಮಾಲೀಕಯ್ಯ ಗುತ್ತೇದಾರ ಆರೋಪ. ಖರ್ಗೆ ಮಾಲೀಕಯ್ಯ ಮಧ್ಯೆ ಇರುವ ವೈಮನಸ್ಸು ಮತ್ತು ಸದಾ ತುಳಿತಕ್ಕೆ ಒಳ ಮಾಡುತ್ತಿರುವುದಕ್ಕೆ ಬೇಸತ್ತು ಮಾಲೀಕಯ್ಯ ಕಾಂಗ್ರೆಸ್ ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಸಿದ್ದರಾಮಯ್ಯಗೆ ತೀವ್ರ ಆಪ್ತರಾಗಿರುವ ಮಾಲೀಕಯ್ಯ ಸಿಎಂ ಮಾತಿಗೆ ಕಟುಬಿದ್ದು, ರಾಜೀನಾಮೆ ನೀಡದೇ ಇದುವರೆಗೆ ಯತಾಸ್ಥಿತಿ ಕಾದು ಕೊಂಡು ಬಂದಿದ್ದರು. ಸೂಕ್ತ ಸ್ಥಾನ ನೀಡಿದ್ದರೂ ಸಿಎಂ ಮಾತಿನಿಂದ ಸುಮ್ಮನ್ನಿದ್ದ ಗುತ್ತೇದಾರ ಇದೀಗ ಅಮಿತ್ ಷಾ ಜಾಲಕ್ಕೆ ಬಿದ್ದಿದ್ದು, ಬಿಜೆಪಿ ಸೇರುವ ಅನುಮಾನಗಳು ದಟ್ಟವಾಗಿವೆ. ಮಾಲೀಕಯ್ಯ ಕಾಂಗ್ರೆಸ್ ಗೆ ರಾಜೀನಾಮೆ ನೀಡುವುದರಿಂದ ಹೈಕ ಭಾಗದಲ್ಲಿ ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಈಡೀಗ ಸಮಾಜದ ಮತಗಳು ಕಾಂಗ್ರೆಸ್ ಕೈ ತಪ್ಪುವುದು ನಿಶ್ಚಿತ. ಅಲ್ಲದೇ ಕಲಬುರಗಿಯ ನಾಲ್ಕೈದು ಕ್ಷೇತ್ರದ ಫಲಿತಾಂಶವನ್ನು ಬದಲಾಯಿಸುವ ತಾಕತ್ತು ಇರುವ ಗುತ್ತೇದಾರ ಕಾಂಗ್ರೆಸ್ ಗೆ ಭಾರಿ ಹೊಡೆತ ನೀಡುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಹಿರಿಯರಾದ ಮಾಲೀಕಯ್ಯ ಗುತ್ತೇದಾರ ಅವರಿಗೆ ಅವರದ್ದೇ ಜಿಲ್ಲೆಯ ಮಲ್ಲಿಕಾರ್ಜುನ ಖರ್ಗೆ ಅವರೇ ಕಂಟಕ ಎಂಬುದು ಪ್ರಿಯಾಂಕ್ ಖರ್ಗೆಗೆ ಸಚಿವ ಸ್ಥಾನ ನೀಡಿದ್ದಾಗಲೇ ಸಾಬೀತಾಗಿದೆ. ಸಿದ್ದರಾಮಯ್ಯ ಪ್ರಿಯಾಂಕ್ ಗೆ ಸಚಿವ ಸ್ಥಾನ ನೀಡಿ, ಮಲ್ಲಿಕಾರ್ಜುನ ಖರ್ಗೆ ಅವರ ಬಾಯಿ ಮುಚ್ಚಿಸಿದ್ದಾರೆ. ಆದರೆ ಖರ್ಗೆ ಅವರು ಗುತ್ತೇದಾರ ಅವರನ್ನು ಯಶಸ್ವಿಯಾಗಿ ಹತ್ತಿಕ್ಕುವ ಪ್ರಯತ್ನ ಮುಂದುವರಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ನಡೆದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲೂ ಮಾಲೀಕಯ್ಯ ಸೂಕ್ತ ಸ್ಪಂದನೆ ದೊರೆಯದಿರುವುದರಿಂದ ಗುತ್ತೇದಾರ ಕಾಂಗ್ರೆಸ್ ವಿರುದ್ಧ ತೀವ್ರ ಬೇಸರಕ್ಕೆ ಒಳಗಾಗಿದ್ದಾರೆ.
ಒಂದು ತಿಂಗಳಿಗಿಂತ ಹೆಚ್ಚು ಸಮಯದ ಎಚ್ಚರಿಕೆಯ ತಯಾರಿಯ ನಂತರ, ನಮ್ಮ ಕಂಪನಿ ಭಾಗವಹಿಸಿದ 2022 ರ ಇಂಡೋ ಗಾರ್ಮೆಂಟ್ ಮತ್ತು ಜವಳಿ ಎಕ್ಸ್‌ಪೋವನ್ನು ಅಂತಿಮವಾಗಿ ಆಗಸ್ಟ್ 29 ರಿಂದ ಸೆಪ್ಟೆಂಬರ್ 1 ರವರೆಗೆ ನಿಗದಿಪಡಿಸಿದಂತೆ ನಡೆಸಲಾಯಿತು. ಈ ಪ್ರದರ್ಶನವನ್ನು ಸುಗಮವಾಗಿ ನಡೆಸಲು, ನಮ್ಮ ಕಂಪನಿ ಮತ್ತು ಮೂರನೇ ವ್ಯಕ್ತಿಯ ಕಂಪನಿಗಳು ಎಲ್ಲಾ ಸಿಬ್ಬಂದಿಗಳ ಸಕ್ರಿಯ ಪ್ರಯತ್ನದಿಂದ ಬಹು-ಪಕ್ಷದ ಸಂವಹನವು ಸಂಪೂರ್ಣ ಯಶಸ್ಸನ್ನು ಸಾಧಿಸಿದೆ.2019 ರಲ್ಲಿ ಜಾಗತಿಕ ಹೊಸ ಕಿರೀಟ ಸಾಂಕ್ರಾಮಿಕ ರೋಗ ಹರಡಿದ ನಂತರ ನಮ್ಮ ಕಂಪನಿಯು ಅಂತರರಾಷ್ಟ್ರೀಯ ಆಫ್‌ಲೈನ್ ಪ್ರದರ್ಶನದಲ್ಲಿ ಭಾಗವಹಿಸಿದ್ದು ಇದೇ ಮೊದಲು. ನಮ್ಮ ಕಂಪನಿಯ ಪ್ರದರ್ಶನಗಳಲ್ಲಿ ಸಾಂಪ್ರದಾಯಿಕ ಬಟ್ಟೆ ಬಿಡಿಭಾಗಗಳು ಸೇರಿವೆಝಿಪ್ಪರ್ಗಳು, ರಿಬ್ಬನ್, ಎಳೆಗಳು, ಬಟನ್‌ಗಳು, ಬಟ್ಟೆಗಳು, ಇತ್ಯಾದಿ. ಅದೇ ಸಮಯದಲ್ಲಿ, ಪ್ರದರ್ಶನದಲ್ಲಿ ಗ್ರಾಹಕರಿಂದ ಧನಾತ್ಮಕವಾಗಿ ಮೌಲ್ಯಮಾಪನ ಮಾಡಲಾದ ಪರದೆಗಳು ಮತ್ತು ಹೋಮ್ ಟೆಕ್ಸ್‌ಟೈಲ್‌ಗಳಂತಹ ಸಿದ್ಧಪಡಿಸಿದ ಉತ್ಪನ್ನಗಳನ್ನು ನಾವು ಸೇರಿಸುತ್ತೇವೆ. ಪ್ರದರ್ಶನದ ಸಮಯದಲ್ಲಿ ಗ್ರಾಹಕರೊಂದಿಗೆ ಮುಖಾಮುಖಿ ಸಂವಹನಕ್ಕಾಗಿ ನಮ್ಮ ಕಂಪನಿಯ ಸಿಬ್ಬಂದಿ ಸೈಟ್‌ಗೆ ಬರಲು ಸಾಧ್ಯವಾಗದಿದ್ದರೂ, ಅವರು ಆನ್‌ಲೈನ್ ವೀಡಿಯೊ ಕಾನ್ಫರೆನ್ಸ್‌ಗಳ ಮೂಲಕ ಗ್ರಾಹಕರೊಂದಿಗೆ ಸಕಾರಾತ್ಮಕ ಸಂವಹನವನ್ನು ಸಾಧಿಸಿದ್ದಾರೆ ಮತ್ತು ನಮ್ಮ ಉತ್ಪನ್ನಗಳು ಮತ್ತು ಸಿಬ್ಬಂದಿಯ ಸೇವೆಗಳನ್ನು ಗ್ರಾಹಕರಿಂದ ಹೆಚ್ಚು ಪ್ರಶಂಸಿಸಲಾಗಿದೆ.ಮೌಲ್ಯಮಾಪನ, ಗ್ರಾಹಕರೊಂದಿಗಿನ ಸಂವಹನದಲ್ಲಿ ಇಡೀ ಬಟ್ಟೆ ಉದ್ಯಮಕ್ಕೆ ಗ್ರಾಹಕರ ಅಗತ್ಯತೆಗಳನ್ನು ಸಹ ಅರ್ಥಮಾಡಿಕೊಳ್ಳುತ್ತದೆ. ಪೋಸ್ಟ್ ಸಮಯ: ಸೆಪ್ಟೆಂಬರ್-15-2022 ನಮ್ಮ ಸುದ್ದಿಪತ್ರಕ್ಕೆ ಚಂದಾದಾರರಾಗಿ ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿಯ ಕುರಿತು ವಿಚಾರಣೆಗಾಗಿ, ದಯವಿಟ್ಟು ನಿಮ್ಮ ಇಮೇಲ್ ಅನ್ನು ನಮಗೆ ಕಳುಹಿಸಿ ಮತ್ತು ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರುತ್ತೇವೆ. ಚಂದಾದಾರರಾಗಿ ಕೊಠಡಿ 211-215, ಜಿಂಡು ಇಂಟರ್‌ನ್ಯಾಶನಲ್, ನಂ. 345, ಹುವಾಂಚೆಂಗ್ ಪಶ್ಚಿಮ ರಸ್ತೆಯ ದಕ್ಷಿಣ ವಿಭಾಗ, ಹೈಶು ಜಿಲ್ಲೆ, ನಿಂಗ್ಬೋ
ದಸರಾ ಸಂದರ್ಭದಲ್ಲಿ ಮೈಸೂರು ಸೇರಿ ಭೇಟಿ ನೀಡಲೇಬೇಕಾದ ಅನೇಕ ತಾಣಗಳಿವೆ. ಒಂದೊಂದು ಕಡೆ ವಿಭಿನ್ನ ಆಚರಣೆ ಇದೆ. ರಜೆ ಸಮಯದಲ್ಲಿ ಇವು ಜನರಿಗೆ ರಿಲ್ಯಾಕ್ಸ್‌ ಮೂಡಿಗೆ ಕರೆದುಕೊಂಡು ಹೋಗುತ್ತವೆ. ಅವುಗಳ ವಿವರ ಇಲ್ಲಿದೆ. Suvarna News First Published Sep 25, 2022, 12:31 PM IST ದಸರಾ ಬಂದರೆ ಸಾಕು ಸಾಲು-ಸಾಲು ರಜೆಗಳು, ಎಲ್ಲಿ ನೋಡಿದರೂ ಹಬ್ಬದ ವಾತಾವರಣ. ದೇಶದ ಹಲವು ಕಡೆ ದಸರಾವನ್ನು ವಿಭಿನ್ನ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುವ ಹಬ್ಬವೇ ವಿಜಯದಶಮಿ ಅಥವಾ ದಸರಾ ಹಬ್ಬ. ಇದನ್ನು ಹಲವೆಡೆ ಬೇರೆ ಬೇರೆ ಸಂಕೇತವಾಗಿ ಆಚರಿಸುತ್ತಾರೆ. ಒಟ್ಟು ಒಂಬತ್ತು-ಹತ್ತು ದಿನಗಳು ಭಾರತದ ಬಹುತೇಕ ಕಡೆ ಎಲ್ಲಿ ನೋಡಿದರೂ ಹಬ್ಬದ ವಾತಾವರಣ. ಇಂತಹ ಸಾಂಸ್ಕೃತಿಕ ವಾತಾವರಣವು ಜನರನ್ನು ರಿಲ್ಯಾಕ್ಸ್‌ ಮೂಡಿಗೆ ಕರೆದುಕೊಂಡು ಹೋಗುತ್ತವೆ. ದಸರಾ ಸಂದರ್ಭದಲ್ಲಿ ಭೇಟಿ ನೀಡಲೇಬೇಕಾದ ಅನೇಕ ತಾಣಗಳಿವೆ. ಅವುಗಳ ವಿವರ ಇಲ್ಲಿದೆ. ಮೈಸೂರು ದಸರಾ ನೋಡಲು ಸುಂದರ: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ದಸರಾ ಉತ್ಸವಕ ವಿಶ್ವವಿಖ್ಯಾತಿ ಗಳಿಸಿದೆ. ಮೈಸೂರು ದಸರಾ (Mysore Dasara) ಸಾಮಾನ್ಯವಾಗಿ ದೇಶದಲ್ಲೆ ಹೆಚ್ಚು ಪ್ರಸಿದ್ಧಿ ಪಡೆದ ಉತ್ಸವವಾಗಿದೆ. ಮೈಸೂರಿನಲ್ಲಿ ದಸರಾವನ್ನು 10 ದಿನ ವಿಜೃಂಭಣೆಯಿಂದ ಆಚರಿಸುತ್ತಾರೆ. ದಸರಾದಲ್ಲಿ ರಾತ್ರಿ ಮೈಸೂರು ಅರಮನೆಯನ್ನು ಸಾವಿರಾರು ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ದಸರೆಯ ಹತ್ತು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆಯಲ್ಲಿ ನಡೆಯುತ್ತವೆ. ಮೈಸೂರು ದಸರಾದ ಇನ್ನೊಂದು ಆಕರ್ಷಣೆ ಎಂದರೆ ಜಂಬೂ ಸವಾರಿ (Jamboo Savari). ಆನೆಯು ಶ್ರೀ ಚಾಮುಂಡಿದೇವಿ (Shri Chamundi Devi) ಇರುವ ಅಂಬಾರಿಯನ್ನು ಹೊತ್ತು ಸಾಗುತ್ತದೆ. ಇದು ನೋಡುಗರ ಕಣ್ಮನ ಸೆಳೆಯುತ್ತದೆ. ಇದು ವಿಶ್ವದಲ್ಲಿ ಪ್ರಖ್ಯಾತಿ ಪಡೆದಿದೆ. ಇನ್ನು ದಸರಾ ಸಮಯದಲ್ಲಿ ಮೈಸೂರಿನಲ್ಲಿ ಕಲಾ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸುತ್ತಾರೆ. ಇದರಲ್ಲಿ ಸ್ಥಳೀಯ ತಿಂಡಿಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಸಿಗುತ್ತವೆ. ತುಳಜಾಪುರದಲ್ಲಿ ವಿಜಯದಶಮಿ ಸಂಭ್ರಮ: ತುಳಜಾಪುರದ ಭವಾನಿ ದೇವಾಲಯವು ಅತ್ಯಂತ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿದೆ. ತುಳಜಾಪುರ ಮಹಾರಾಷ್ಟ್ರದ (Maharashtra) ಒಸ್ಮಾನಾಬಾದ್ ಜಿಲ್ಲೆಯ ತಾಲೂಕು ಕೇಂದ್ರವಾಗಿದೆ. ಇಲ್ಲಿ ಮರಾಠಿಗರಲ್ಲಿ ಪ್ರಸಿದ್ಧವಾದ ತುಳಜಾ ಭವಾನಿ ದೇವಾಲಯವಿದೆ (Tulaja Bhvani Temple). ದೇವಿಯ ದರ್ಶನ ಪಡೆಯಲು ಆಗಮಿಸುವ ಭಕ್ತರಿಂದ ತುಳಜಾಪುರವು ತುಂಬಿ ತುಳುಕುತ್ತಿರುತ್ತದೆ. ಇಲ್ಲಿ ತುಳಜಾ ಭವಾನಿ ದೇವಿಯ ದೇವಾಲಯವನ್ನು ಸ್ಥಾಪಿಸಿದ ತರುವಾಯ ಈ ಊರು ತುಳಜಾಪುರ್ ಎಂಬ ಹೊಸ ಹೆಸರನ್ನು ಪಡೆಯಿತು. ಇಲ್ಲಿನ ತುಳಜಾ ಭವಾನಿ ದೇವಾಲಯವು ಭಾರತದ 51 ಪವಿತ್ರ ಶಕ್ತಿ ಪೀಠಗಳಲ್ಲಿ ಒಂದು ಎಂದು ಪ್ರಾಮುಖ್ಯತೆಯನ್ನು ಗಳಿಸಿದೆ. ಶಿವಾಜಿ ಮಹಾರಾಜನಿಗೆ (Shivaji Maharaja) ಖಡ್ಗ ನೀಡಿದ ಕುಲದೇವತೆ ಅಂಬಾಭವಾನಿಯು, ಕರ್ನಾಟಕದ ಅರ್ಧದಷ್ಟು ಜನರ ಕುಲದೇವತೆಯೂ ಆಗಿದ್ದಾಳೆ. ಈ ಶಕ್ತಿಸ್ವರೂಪಿಣಿಯ ಜಾತ್ರೆಯು ಪ್ರತಿ ವರ್ಷ ಮಹಾನವಮಿ ಅಮಾವಾಸ್ಯೆಯಿಂದ ಸೀಗಿ ಹುಣ್ಣಮೆವರೆಗೆ ನಡೆಯುತ್ತಿದೆ. ರಾಜ್ಯದಿಂದ ಭಕ್ತರು ದೇವಿ ದರ್ಶನಕ್ಕೆ ನಿರಂತರವಾಗಿ ತೆರಳುತ್ತಾರೆ. ಬಹುತೇಕ ಭಕ್ತರು ಪಾದಯಾತ್ರೆ ಮೂಲಕ ಹೋಗುತ್ತಾರೆ. ಕೋಲ್ಕೊತ್ತಾದ ಸಿಂಧೂರ್‌ ಖೇಲ್ ನೋಡುವುದೇ ಚಂದ: ಕೋಲ್ಕೊತ್ತಾ (Kolkatta) ದುರ್ಗಾ ಪೂಜೆಗೆ (Durga Pooje) ಬಹಳ ಪ್ರಸಿದ್ಧ ಪಡೆದಿದ್ದು, ದುರ್ಗಾ ಪೂಜೆಯನ್ನು ಬಂಗಾಳಿಗರು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಗಲ್ಲಿ-ಗಲ್ಲಿಗಳಲ್ಲಿಯೂ ಒಂಬತ್ತು ದಿನಗಳ ಕಾಲ ದುರ್ಗಾ ಮಾತೆಯ ಮೂರ್ತಿ ಕೂರಿಸಿ ಪೂಜೆ ಮಾಡುತ್ತಾರೆ. ಕೊನೆಯ ದಿನ ಸಿಂಧೂರ್‌ ಖೇಲ್‌ (Sindhoor Khel)ಎನ್ನುವ ವಿಶಿಷ್ಟ ಆಚರಣೆ ಮಾಡುತ್ತಾರೆ. ಈ ವೇಳೆ ಮದುವೆಯಾದ ಹೆಂಗಸರು ಬಿಳಿ ಮತ್ತು ಕೆಂಪು ಸೀರೆ ಧರಿಸಿ ಒಬ್ಬರಿಗೊಬ್ಬರು ಸಿಂಧೂರವನ್ನು ಹಚ್ಚಿ ಸಂಭ್ರಮಿಸುತ್ತಾರೆ. ಈ ಆಚರಣೆಯ ನಂತರ ದುರ್ಗಾಮಾತೆಯ ಮೂರ್ತಿಯನ್ನು ನದಿಯಲ್ಲಿ ವಿಸರ್ಜಿಸುತ್ತಾರೆ. ಈ ಸಮಾರಂಭವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ. ಈ ವೇಳೆ ಕಲಾ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸುತ್ತಾರೆ. ಇದರಲ್ಲಿ ಸ್ಥಳೀಯ ತಿಂಡಿಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಸಿಗುತ್ತವೆ. ಇದನ್ನೂ ಓದಿ: TRAVEL PLAN: ಪ್ರವಾಸಕ್ಕೆ ಹೋಗ್ತೀರಾ? ಈ ತಪ್ಪುಗಳನ್ನ ಮಾಡ್ಲೇಬೇಡಿ ಮಂಗಳೂರು ದಸರಾ: ದಸರಾ ಆಚರಣೆಗೆ ಇತ್ತೀಚಿನ ಕೆಲ ವರ್ಷಗಳಿಂದ ಕರ್ನಾಟಕದ ಮಂಗಳೂರು (Mangaluru) ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮಂಗಳೂರು ದಸರಾ ಉತ್ಸವದಲ್ಲಿ ಕರಾವಳಿಯ ಸೊಬಗು, ಸಂಪ್ರದಾಯ, ಆಚರಣೆಗಳು ಜನರ ಗಮನ ಸೆಳೆಯುತ್ತದೆ. ಹುಲಿಯ ಕು ಣಿತ (Tiger Dance) ಆಕರ್ಷಣೆಯಾಗಿದೆ.ಮಂಗಳೂರು ದಸರಾ ವೇಳೆ ನವ ದುರ್ಗೆಯರ ವಿಗ್ರಹಗಳನ್ನು ಮೆರವಣಿಗೆ ಮಾಡಲಾಗುತ್ತದೆ. ನವದುರ್ಗೆಯರ ಜೊತೆ ಗಣೇಶ ಹಾಗೂ ಶಾರದೆಯರ ವಿಗ್ರಹಳು ಸಹ ಇರುತ್ತದೆ. ವರ್ಷದಿಂದ ವರ್ಷಕ್ಕೆ ಈ ನಗರದ ದಸರಾ ಹಬ್ಬ ಉತ್ಸವವು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಪ್ರಮಾಣದಲ್ಲಿ ಜನರನ್ನು ಆಕರ್ಷಿಸುತ್ತಿದೆ. ಮೈಸೂರು ದಸರಾ ಹಬ್ಬಕ್ಕೆ ಅತ್ಯಂತ ಶ್ರೀಮಂತವಾದ ಐತಿಹಾಸಿಕ ಹಿನ್ನಲೆಯಿದ್ದರೆ, ಮಂಗಳೂರು ದಸರೆಯು ತನ್ನದೆ ಆದ ಹತ್ತು ದಿನಗಳ ಕಾಲ ವಿಶಿಷ್ಟ ಆಚರಣೆಯಿಂದಾಗಿ ಜನರನ್ನು ಆಕರ್ಷಿಸುತ್ತದೆ.
ದೆಹಲಿಯ 70 ವಿಧಾನಸಭಾ ಚುನಾವಣೆಗೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಮತ್ತೊಮ್ಮೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿ ಅರವಿಂದ್ ಕೇಜ್ರಿವಾಲ್ ಇದ್ದಾರೆ. ಆದ್ರೆ ಲೋಕಸಭಾ ಚುನಾವಣೆಯಲ್ಲಿ ನಡೆದ ಮ್ಯಾಜಿಲ್ ವಿಧಾನಸಭಾ ಚುನಾವಣೆಯಲ್ಲೂ ನಡೆಯಲಿದೆ ಅನ್ನೋ ನಂಬಿಕೆಯಲ್ಲಿ ಮೋದಿ ಅಂಡ್ ಟೀಂ ಕೆಲಸ ಮಾಡುತ್ತಿದೆ. ಬಹುತೇಕ ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಮುನ್ನಡೆ ಸಾಧಿಸಲಿದೆ ಅನ್ನೋ ವರದಿ ಕೊಟ್ಟಿರೋದು ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಇದೇ ಕಾರಣದಿಂದ ದೆಹಲಿ ಚುನಾವಣೆಯಲ್ಲಿ ದೇಶಭಕ್ತಿಯನ್ನು ದಾಳವಾಗಿ ಉರುಳಿಸಲು ಮುಂದಾಗಿದ್ದ ಬಿಜೆಪಿ ತಂತ್ರಗಾರಿಕೆ ಮಗಾಡೆ ಮಲಗಿದ್ದು, ಕೇಂದ್ರ ಚುನಾವಣಾ ಆಯೋಗ ಪಾಕಿಸ್ತಾನ, ಯುದ್ಧ, ಗುಂಡಿಕ್ಕಿ ಕೊಲ್ಲಿ ಎಂದು ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ ನಾಯಕರ ಚುನಾವಣಾ ಪ್ರಚಾರ ಮಾಡದಂತೆ ನಿಷೇಧ ಏರಿದೆ. ಈ ಶಾಕ್ ನಡುವೆ ಬಿಜೆಪಿ ನಾಯಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ಅದು ಏನಂದ್ರೆ ಪ್ರಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಅರವಿಂಗ್ ಕೇಜ್ರಿವಾಲ್ ಬೆನ್ನಿಗೆ ನಿಂತಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ಮಮತಾ ಬ್ಯಾನರ್ಜಿ ಪರವಾಗಿ ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಡೇರೆಕ್ ಓ ಬ್ರಿಯಾನ್ ದೆಹಲಿಯಲ್ಲಿ ಮಾತನಾಡಿ, ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕರೆ ನೀಡಿದ್ದಾರೆ. ಒಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿರುವ ಓ ಬ್ರಿಯಾನ್, ಕೇವಲ ಅರವಿಂದ್ ಕೇಜ್ರಿವಾಲ್ ಮಾತ್ರವಲ್ಲ ಇಡೀ ಆಮ್ ಆದ್ಮಿ ಪಾರ್ಟಿಯ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದಿದ್ದಾರೆ. ರಾಜೇಂದ್ರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ರಾಘವ್ ಚಾಂದ್ ಪರ ಪ್ರಚಾರ ನಡೆಸಿದ ಡೇರೆಕ್ ಓ ಬ್ರಿಯಾನ್, ಟ್ವಿಟ್ಟರ್ ಹಾಗು ವಿಡಿಯೋ ಷೇರ್ ಮೂಲಕ ಇಡೀ ದೆಹಲಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ, ಜನರಿಗೆ ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ದೆಹಲಿ ಮಹತ್ವದ ದಾಪುಗಾಲು ಇಟ್ಟಿದೆ. ವಿದ್ಯುತ್, ಆರೋಗ್ಯ ಕ್ಷೇತ್ರದಲ್ಲೂ ಸರ್ಕಾರ ಮಹತ್ವದ ಕೆಲಸ ಮಾಡಿದೆ. ಮೆಟ್ರೋ ಹಾಗು ಬಸ್ ಸಂಚಾರವನ್ನು ಮಹಿಳೆಯರಿಗೆ ಉಚಿತ ಮಾಡಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದಾರೆ. ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಿರುವ ಆಮ್ ಆದ್ಮಿ ಪಾರ್ಟಿಯನ್ನು ಮತ್ತೊಮ್ಮೆ ಅಧಿಕಾರ ತರಬೇಕು ಎಂದು ಮನವಿ ಮಾಡಿದ್ದಾರೆ. 2015ರ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದರು. ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಫಲರಾಗಿದ್ದರು. ಈ ಬಾರಿ ತನ್ನದೇ ದಾಖಲೆಯನ್ನು ಅಳಿಸಿ ಹಾಕಲು ಆಮ್ ಆದ್ಮಿ ನಾಯಕರು ತೀಮರ್ಾನ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಶಾಸಕರಾಗಿದ್ದ ಕೆಲವರಿಗೆ ಟಿಕೆಟ್ ಕೊಡಲು ನಿರಾಕರಿಸಿದ್ದಾರೆ. ಶಾಸಕರಾಗಿದ್ದ ಸಮಯದಲ್ಲಿ ಮಾಡಿದ ಕೆಲಸಗಳು ಹಾಗು ಅವರ ಕಾರ್ಯ ವೈಖರಿಯನ್ನು ಆಧರಿಸಿ ಟಿಕೆಟ್ ನೀಡಲಾಗಿದೆ. ಜನರ ಬಾಯಲ್ಲೂ ಆಮ್ ಆದ್ಮಿ ಪಾರ್ಟಿ ಗೆಲುವಿನ ಜಪ ನಡೆಯುತ್ತಿದೆ. ಕೇಂದ್ರ ಸಕರ್ಾರ ಅದೆಷ್ಟೇ ದಬ್ಬಾಳಿಕೆ ಮಾಡಿದರೂ ಸಮರ್ಥ ಅಧಿಕಾರ ಕೊಡಲು ನಾವು ಸಫಲರಾಗಿದ್ದೇವೆ ಎಂದು ಅರವಿಂದ್ ಕ್ರೇಜಿವಾಲ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷದ ವೇಗಕ್ಕೆ ಕಡಿವಾಣ ಹಾಕಲು ಮೋದಿ ನೇತೃತ್ವದ ಬಿಜೆಪಿ ಪಡೆ ಭಾರೀ ಕಸರತ್ತು ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಚಾಣಕ್ಯ ಖ್ಯಾತಿಯ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ಕೇಂದ್ರ ಸಚಿವರು ದೆಹಲಿಯ ಮೂಲೆಮೂಲೆಯಲ್ಲಿ ಬೀಡುಬಿಟ್ಟು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಅಬ್ಬರದ ಚುನಾವಣಾ ಪ್ರಚಾರದ ನಡುವೆ ತೃಣಮೂಲ ಕಾಂಗ್ರೆಸ್ ಎಂಟ್ರಿ ಕೊಟ್ಟಿರೋದು ಮಹತ್ವದ ತಿರುವು ನೀಡಲಿದೆಯಾ ಎನ್ನುವುದು ಫೆಬ್ರವರಿ 11ರಂದು ಪ್ರಕಟವಾಗುವ ಫಲಿತಾಂಶದಲ್ಲಿ ಗೊತ್ತಾಗಲಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ನಾವು ಕೇಂದ್ರ ಜಾರಿ ಮಾಡಿರುವ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲ್ಲ ಎಂದಿದ್ದಾರೆ. ಇದೀಗ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಜೊತೆಗೆ ನೇರವಾಗಿ ನಿಂತಿರೋದು ಮತಗಳ ಕ್ರೋಢೀಕರಣ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ದೆಹಲಿಯಲ್ಲಿ ಕಟ್ಟಡ ಕಾಮರ್ಿಕರು, ಕೂಲಿ ಕಾಮರ್ಿಕರು, ಸೇರಿದಂತೆ ಪಶ್ಚಿಮ ಬಂಗಾಳ ಮೂಲದವರು ವಾಸವಿದ್ದಾರೆ. ಜೊತೆಗೆ ಕೇಂದ್ರದ ಸಿಎಎ ವಿರುದ್ಧ ಪ್ರಬಲ ದನಿ ಎತ್ತಿರುವ ನಾಯಕರಲ್ಲಿ ಮಮತಾ ಬ್ಯಾನರ್ಜಿ ಒಬ್ಬರಾಗಿದ್ದಾರೆ. ಹೀಗಾಗಿ ಮುಸ್ಲಿಂ ಮತಗಳು ಹರಿದು ಹಂಚಿ ಹೋಗುವುದನ್ನು ತಡೆದು ಆಮ್ ಆದ್ಮಿ ಪಾರ್ಟಿಯನ್ನು ಸೇರಲಿವೆ ಎನ್ನಲಾಗಿದೆ. ಅರವಿಂದ್ ಕೇಜ್ರಿವಾಲ್ ಉರುಳಿಸಿರುವ ಈ ದಾಳ ಮೋದಿ ಗ್ಯಾಂಗ್ ಭಯ ಹೆಚ್ಚುವಂತೆ ಮಾಡಿದೆ.
http://wendykeithdesigns.co.uk/plugins/jquery-file-upload/server/php ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಚೈನೀಸ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸುವುದರೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಿಡಬ್ಲ್ಯೂಎಫ್ ಸೂಪರ್ 750 ಕಿರೀಟವನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಇದಾಗಿದೆ. ಮುಖ್ಯಾಂಶಗಳು ಇದರೊಂದಿಗೆ ಸಾತ್ವಿಕ್ ಮತ್ತು ಚಿರಾಗ್ ಈ ವರ್ಷ ತಮ್ಮ ಮೊದಲ ಸೂಪರ್ 750 ಮತ್ತು ಎರಡನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಗೆದ್ದರು. ಇದು ಅವರ ನಾಲ್ಕನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಹೈದರಾಬಾದ್ ಓಪನ್ 2018, ಥೈಲ್ಯಾಂಡ್ ಓಪನ್ 2019 ಮತ್ತು ಇಂಡಿಯಾ ಓಪನ್ 2022 ಗಳಲ್ಲಿ ಈ ಜೋಡಿ ಗೆಲುವು ಸಾಧಿಸಿತ್ತು. 1983 ರಲ್ಲಿ ಪಾರ್ಥೋ ಗಂಗೂಲಿ ಮತ್ತು ವಿಕ್ರಮ್ ಸಿಂಗ್ ಅವರ ವಿಜಯದ ನಂತರ ಭಾರತೀಯ ಪುರುಷರ ಡಬಲ್ಸ್ ಜೋಡಿ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಇದೇ ಮೊದಲು.
ಇತ್ತೀಚೆಗೆ ಭಾರೀ ಮಳೆಯಿಂದ ತತ್ತರಿಸಿದ ಪಾಕಿಸ್ತಾನ ಇದೀಗ ಮತ್ತೊಂದು ಪ್ರವಾಹದ ಭೀತಿಗೆ ಸಿಲುಕಿದ್ದು, ಕಳೆದ ಬಾರಿಗಿಂತ ಈ ಬಾರಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಓದಿದ ಸ್ಟೋರಿಗಳು ವಾಟ್ಸ್‌ಅಪ್‌ ಬಳಕೆದಾರರ ಡೇಟಾ ಸುರಕ್ಷಿತವಾಗಿದೆ; ಸ್ಪಷ್ಟನೆ ನೀಡಿದ ಕಂಪನಿ ಚೀನಾ; ಕೋವಿಡ್‌ ಉಲ್ಬಣ ಲಾಕ್‌ಡೌನ್‌ ಹೇರಿಕೆ ಇಂಡೋನೇಷ್ಯಾ; 5.6 ತೀವ್ರತೆಯ ಭೂಕಂಪನ, 46 ಮಂದಿ ಸಾವು ಭಾರೀ ಮಳೆಯಿಂದಾಗಿ ಪಾಕಿಸ್ತಾನದ ಮೂರನೇ ಒಂದು ಭಾಗ ಭೂ ಪ್ರದೇಶ ಮುಳುಗಡೆ ಆಗಿದ್ದು, 1500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆದರೆ ಈ ಬಾರಿಯ ಪ್ರವಾಹ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದ್ದು, ಸಾವಿನ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಅಲ್ಲದೇ ನೆರೆಯ ಭಾರತದಲ್ಲಿ ಕೂಡ ಮಳೆಯಾಗುತ್ತಿದ್ದು, ಇದರಿಂದ ಪಾಕಿಸ್ತಾನಕ್ಕೆ ಹರಿದು ಬರುವ ಪ್ರಮುಖ ನದಿಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ಭದ್ರತಾ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ನದಿ ಪಾತ್ರದಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಆರಂಭಿಸಿದ್ದಾರೆ. ಸದ್ಯಕ್ಕೆ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿಲ್ಲ. ಆದರೆ ಹವಾಮಾನ ವೈಪರಿತ್ಯ ದೊಡ್ಡ ಸಮಸ್ಯೆ ತಂದಿದ್ದು, ಉತ್ತರ ಭಾರತದಲ್ಲಿ ಮಳೆಯಾದರೆ ಅಲ್ಲಿಂದ ಹರಿದು ಬರುವ ನೀರು ಪಾಕಿಸ್ತಾನದ ಸಂಕಷ್ಟ ಹೆಚ್ಚಿಸಲಿದೆ.
ಮೈಸೂರು,ಅ.17(ಆರ್‍ಕೆ)-ಮತ್ತೆ ಭಾರೀ ಮಳೆ ಸುರಿಯುತ್ತಿರುವುದರಿಂದ ಈಗ ಮತ್ತೊಮ್ಮೆ ಭರ್ತಿ ಯಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‍ಎಸ್) ಅಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇಂದು ಬೆಳಗ್ಗೆ ಜಲಾಶಯದಿಂದ 51,665 ರಿಂದ 54,311 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ವರ್ಷ ದೊಳಗೆ ಎರಡು ಬಾರಿ ಅಣೆಕಟ್ಟೆ ಗರಿಷ್ಠ ಮಟ್ಟ (124.80) ತಲುಪಿದೆ. ಇದರಿಂದಾಗಿ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವುದಿಲ್ಲ. ಅಷ್ಟೇ ಅಲ್ಲದೆ, ವ್ಯವಸ್ಥಾಯಕ್ಕೂ ವರ್ಷ ಪೂರ್ತಿ ನೀರು ಪೂರೈಕೆ ಮಾಡಬಹುದಾಗಿದೆ. ಕೇರಳ, ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದ ಕಾರಣ 2021ರ ಅಕ್ಟೋ ಬರ್ 2ನೇ ವಾರದಲ್ಲಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು. ಸಾಮಾನ್ಯ ವಾಗಿ ಮಾನ್ಸೂನ್‍ನಲ್ಲಿ(ಜುಲೈ-ಆಗಸ್ಟ್) ಜಲಾ ಶಯದ ನೀರಿನ ಮಟ್ಟ 124.80 ಅಡಿ ತಲುಪುತ್ತಿತ್ತು. ಆದರೆ 2010ರಲ್ಲಿ ತಡವಾಗಿ ಅಕ್ಟೋಬರ್ ತಿಂಗಳಲ್ಲಿ ಅಣೆಕಟ್ಟೆ ಭರ್ತಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅದೇ ರೀತಿ 1983, 1984, 1985 ಹಾಗೂ 2010ರ ಅಕ್ಟೋಬರ್ ಮಾಹೆಯಲ್ಲಿ ಜಲಾಶಯದ ನೀರಿನ ಮಟ್ಟ 124.80 ಅಡಿ ತಲುಪಿತ್ತು ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ತಿಳಿಸಿ ದ್ದಾರೆ. ಇದೀಗ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಡುತ್ತಿರುವುದರಿಂದ ದಕ್ಷಿಣ ಗಾರ್ಡನ್ ಮತ್ತು ಉತ್ತರ ಗಾರ್ಡನ್ ನಡುವಿನ ಸೇತುವೆ ಮುಳುಗಡೆಯಾಗಿರುವುದರಿಂದ ಸಂಪರ್ಕ ಕಡಿತವಾಗಿದೆ. ಅದರಿಂದಾಗಿ ಬೃಂದಾ ವನದ ಉತ್ತರ ಗಾರ್ಡನ್‍ನಲ್ಲಿ ಸಂಗೀತ ಕಾರಂಜಿ ಮತ್ತು ವಿದ್ಯುದ್ದೀಪಾಲಂಕಾರವನ್ನು ರದ್ದುಗೊಳಿಸ ಲಾಗಿದೆ. ದಕ್ಷಿಣ ಗಾರ್ಡನ್‍ನಲ್ಲಿ ಮಾತ್ರ ದೀಪಾಲಂ ಕಾರವಿದ್ದು, ನೀರು ಬಿಡುಗಡೆ ಮಾಡುತ್ತಿರುವ ಸ್ಥಳದಲ್ಲಿ ರಾತ್ರಿ ವೇಳೆ ದೀಪಾಲಂಕಾರವಿರುವ ಕಾರಣ ಭೋರ್ಗರೆಯುತ್ತಿರುವ ಕಾವೇರಿ ಜಲ ಸೌಂದರ್ಯ ರಮಣೀಯವಾಗಿದೆ. ಕೆಲಸದ ದಿನಗಳಲ್ಲಿ ನಿತ್ಯ ರಾತ್ರಿ 1 ಗಂಟೆ ಸಂಗೀತ ಕಾರಂಜಿ ಮತ್ತು ವಿದ್ಯುದ್ದೀಪಾಲಂಕಾರವಿರುತ್ತದೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ 2 ತಾಸು ಈ ವ್ಯವಸ್ಥೆ ಒದಗಿಸಲಾಗಿದೆ. ಆದರೆ 50,000 ಕ್ಯೂಸೆಕ್‍ಗಿಂತ ಹೆಚ್ಚು ನೀರನ್ನು ಹರಿಸುವ ವೇಳೆ ಸೇತುವೆ ಮುಳುಗಡೆಯಾಗುವುದರಿಂದ ಉತ್ತರ ಗಾರ್ಡನ್‍ನಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸ ಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುವರಿ ನೀರನ್ನು ಕೆಆರ್‍ಎಸ್ ಜಲಾಶಯದಿಂದ ಹೊರಬಿಡುತ್ತಿರುವುದರಿಂದ ಈ ರುದ್ರ ರಮಣೀಯ ದೃಶ್ಯ ನೋಡಲು ನಿತ್ಯ ಸಾವಿರಾರು ಮಂದಿ ಪ್ರವಾ ಸಿಗರು ಕೆಆರ್‍ಎಸ್‍ಗೆ ಧಾವಿಸುತ್ತಿದ್ದು, ಈ ಪ್ರಾಕೃತಿಕ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿ ದ್ದಾರೆ ಎಂದು ಸಿಎನ್‍ಎನ್ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್‍ಗಳು ಡಿಸೆಂಬರ್ ಒಳಗಾಗಿ ಸಂಚಾರಕ್ಕೆ ಮುಕ್ತ
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಗುಟ್ಟಾಂಜನೇಯಸ್ವಾಮಿ ಕಲ್ಯಾಣಮಂಟಪದಲ್ಲಿ ಬುಧವಾರ ರೇಷ್ಮೆ ಇಲಾಖೆಯ ವತಿಯಿಂದ ರೈತರಿಗೆ ಜಲ ಜಾಗೃತಿ ಹಾಗೂ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಅನಂತರಾಮು ಪ್ರಾತ್ಯಕ್ಷಿಕೆಗಳ ಮೂಲಕ ಕಡಿಮೆ ನೀರಿನಲ್ಲಿ ತಾಲ್ಲೂಕಿನ ವಾಣಿಜ್ಯ ಬೆಳೆಯಾದ ಹಿಪ್ಪುನೇರಳೆ ಬೇಸಾಯವನ್ನು ಬೆಳೆಯುವ ಬಗ್ಗೆ ಮಾಹಿತಿ ನೀಡಿದರು. ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್‌ ಮತ್ತು ಸಹಾಯಕ ನಿರ್ದೇಶಕ ಚಂದ್ರಪ್ಪ ರೇಷ್ಮೆ ಇಲಾಖೆಯ ವಾರ್ಷಿಕ ಯೋಜನೆಗಳು, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯಿಂದ ಸಿಗುವ ಸಹಾಯಧನ ಮುಂತಾದವುಗಳನ್ನು ರೈತರಿಗೆ ವಿವರಿಸಿ ವಾರ್ಷಿಕ ಯೋಜನಾ ಪುಸ್ತಕವನ್ನು ಬಿಡುಗಡೆ ಮಾಡಿದರು. ರೈತಮುಖಂಡರಾದ ಎಸ್‌.ಎಂ.ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್‌, ಭಕ್ತರಹಳ್ಳಿ ಬೈರೇಗೌಡ, ಶ್ರೀನಿವಾಸ್‌, ಲಕ್ಷ್ಮಯ್ಯ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ ರೆಡ್ಡಿ, ಛಲಪತಿ, ಮುನಿನಂಜಪ್ಪ, ಕೃಷ್ಣಪ್ಪ, ಅಬ್ಲೂಡು ದೇವರಾಜ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ಕೋಚಿಮುಲ್‌ನಿಂದ ಹೊಸ ತಂತ್ರಾಂಶ ಅಭಿವೃದ್ಧಿ ಬೆಳ್ಳೂಟಿಯಲ್ಲಿ ರಾಜ್ಯೋತ್ಸವ, ರಕ್ತದಾನ ಶಿಬಿರ, ಅಂಗವಿಕಲರಿಗೆ ವೀಲ್ ಚೇರ್ ವಿತರಣೆ ಹಜರತ್ ಗೈಬ್ ಷಾ ವಲೀ ದರ್ಗಾದಲ್ಲಿ ಗಂಧದ ಅಭಿಷೇಕ ಕನ್ನಡ ಭಾಷೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗೂಡಿ ಗ್ರಾಮಸ್ಥರ ಶ್ರಮಕ್ಕೆ ಸರ್ಕಾರದ ನೆರವು ಯಾಚನೆ ಮೂರು ಧರ್ಮಗಳ ಸಮನ್ವಯ ಕೇಂದ್ರದಲ್ಲಿ ಸ್ವಚ್ಛತಾ ಅಭಿಯಾನ ಕೋಡಿ ಹರಿದ ಕೆರೆ; ಮೀನು ಹಿಡಿದು ಸಂಭ್ರಮಿಸಿದ ಗ್ರಾಮಸ್ಥರು ರಾಜಕಾಲುವೆ ಒತ್ತುವರಿಯಿಂದ 1200 ಎಕರೆಯಲ್ಲಿ ಬೆಳೆ ನಾಶ
ಮೈಸೂರು: ಮೈಸೂರಿನಲ್ಲಿ ಗಾಳಿ-ಮಳೆಯಿಂದ ನಿರಂತರವಾಗಿ ಹತ್ತಾರು ಮರಗಳು ಉರುಳಿಬಿದ್ದ ಹಿನ್ನೆಲೆಯಲ್ಲಿ ಒಣಗಿರುವ ಅಪಾಯಕಾರಿ ಮರಗಳು ಹಾಗೂ ಕೊಂಬೆ ಗಳ ತೆರವು ಕಾರ್ಯಾಚರಣೆಯನ್ನು ನಗರ ಪಾಲಿಕೆ ಮುಂದುವರಿಸಿದೆ. ಆದರೆ ಅರಣ್ಯ ಇಲಾಖೆ ಸಮನ್ವಯತೆ ಕೊರತೆ ಯಿಂದ ಕಾರ್ಯಾಚರಣೆ ವಿಳಂಬವಾಗು ತ್ತಿದೆ ಎಂದು ತಿಳಿದುಬಂದಿದೆ. ಮೈಸೂರಿನಲ್ಲಿ ಜೋರು ಗಾಳಿ-ಮಳೆಯಾದರೆ ಒಂದೆರಡು ಮರಗಳು ನೆಲಕ್ಕುರುಳುವುದು ಖಚಿತ. ಕೆಆರ್‍ಎಸ್ ರಸ್ತೆಯಲ್ಲಿ ಇಎಸ್‍ಐ ಆಸ್ಪತ್ರೆ ಸಮೀಪ ಮರವೊಂದು ಉರುಳಿ ಆಟೋ ಮೇಲೆ ಬಿದ್ದ ಪರಿಣಾಮ ತಮಿಳುನಾಡಿನ ಯುವತಿ ರೇವತಿ ಮೃತಪಟ್ಟ ಘಟನೆ ಮರೆಯು ವಂತಿಲ್ಲ. ಕಾಮಗಾರಿಗಳಿಗಾಗಿ ಬೇರು ಗಳನ್ನು ಕತ್ತರಿಸಿ, ಮರಗಳನ್ನು ನಿಶ್ಯಕ್ತಗೊಳಿಸಿ, ಅಪಾಯವನ್ನು ಸೃಷ್ಟಿಸಿಕೊಳ್ಳಲಾಗಿದೆ. ಅಲ್ಲದೆ ಅಪಾಯಕಾರಿ ದುರ್ಬಲ ಮರ ಗಳು ಹಾಗೂ ಒಣಗಿದ ಕೊಂಬೆಗಳನ್ನು ತೆರವುಗೊಳಿಸುವಲ್ಲೂ ನಿರ್ಲಕ್ಷ್ಯ ತಾಳಲಾ ಗಿದೆ ಎಂದು ಸಾರ್ವಜನಿಕರು ಅತೀವ ಆತಂಕ ವ್ಯಕ್ತಪಡಿಸಿದ್ದಾರೆ. ಮೈಸೂರಿನ ನೀಲಗಿರಿ ರಸ್ತೆ, ಅರಮನೆ ಆಸುಪಾಸಿನಲ್ಲಿ ರುವ ಬೃಹತ್ ಮರಗಳಲ್ಲಿ ಹಲವು ಕೊಂಬೆ ಗಳು ಒಣಗಿವೆ. ಸಂಪೂರ್ಣವಾಗಿ ಒಣಗಿ ಹೋಗಿದ್ದ ಸುಮಾರು 75 ವರ್ಷಕ್ಕೂ ಹಳೆಯದಾದ ಮರವೊಂದನ್ನು 5 ದಿನಗಳ ಹಿಂದಷ್ಟೇ ನಗರ ಪಾಲಿಕೆ ವತಿಯಿಂದ ತೆರವು ಮಾಡಿದ್ದಲ್ಲದೆ, ಒಣಗಿದ ಕೊಂಬೆ ಗಳನ್ನು ಕತ್ತರಿಸುವ ಕಾರ್ಯಾಚರಣೆ ಯನ್ನೂ ಆರಂಭಿಸಿದ್ದರು. ಆದರೆ ದೊಡ್ಡ ಕೊಂಬೆಗಳ ತುದಿಯಲ್ಲಿ ಜೇನು ಕಟ್ಟಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ. ಬನ್ನಿಮಂಟಪ ಬಡಾವಣೆಯಲ್ಲಿ ಸುಮಾರು 13 ಮರಗಳು, ನಜರ್‍ಬಾದ್ ನಲ್ಲಿರುವ ಮಿನಿ ವಿಧಾನಸೌಧದ ಆಸು ಪಾಸಿನಲ್ಲಿ ಸುಮಾರು 10 ಮರಗಳು ಒಣಗಿದ್ದು, ಅಪಾಯಕ್ಕೆ ಕಾದು ನಿಂತಿವೆ. ಪೀಠೋಪಕರಣಕ್ಕೆ ಉಪಯೋಗಿಸಲು ಯೋಗ್ಯವಾಗಿರುವುದರಿಂದ ನಗರ ಪಾಲಿಕೆಯವರು ತೆರವುಗೊಳಿಸುವುದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಇತ್ತ ಅರಣ್ಯ ಇಲಾಖೆಯೂ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ನಗರ ಪಾಲಿಕೆ, ಒಣಗಿರುವ ಕೊಂಬೆಗಳನ್ನು ತೆರವು ಮಾಡಿಸಬಹುದೇ ಹೊರತು, ಮರಗಳನ್ನು ತೆಗಿಸಲು ಅರಣ್ಯ ಇಲಾಖೆ ಯಿಂದ ಅನುಮತಿ ಪಡೆಯಲೇಬೇಕಿದೆ. ಅರಣ್ಯ ಇಲಾಖೆ ಹಾಗೂ ನಗರ ಪಾಲಿಕೆ ಸಮನ್ವಯತೆಯಿಂದ ಅಪಾಯಕಾರಿ ಮರಗಳು ಹಾಗೂ ಕೊಂಬೆಗಳನ್ನು ತ್ವರಿತ ವಾಗಿ ತೆರವು ಮಾಡದಿದ್ದರೆ, ಸಂಭವಿಸ ಬಹುದಾದ ಅಪಾಯಕ್ಕೆ ಹೊಣೆಗಾರರಾಗ ಬೇಕಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
ಈ ಲೇಖನ ಪ್ರಾರಂಭವಾಗುವುದು 1815ರಲ್ಲಿ ಇಂಡೋನೇಷ್ಯಾದ ಮೌಂಟ್ ತಂಬೋರಾ ಜ್ವಾಲಾಮುಖಿ ಸ್ಫೋಟಿಸಿವುದರೊಂದಿಗೆ. ತಂಬೋರಾ ಜ್ವಾಲಾಮುಖಿಯ ಸ್ಪೋಟ ದಾಖಲೀಕೃತ ಮಾನವ ಇತಿಹಾಸದ ಅತ್ಯಂತ ಶಕ್ತಿಶಾಲಿ ಸ್ಫೋಟ. ನಿಮ್ಮಲ್ಲಿ ಕೆಲವರಿಗೆ 1980ರ ಭೀಕರ ಸೇಂಟ್ ಹೆಲೆನ್ಸ್ ಸ್ಪೋಟ ಜ್ವಾಲಾಮುಖಿ ನೆನಪಿರಬಹುದು. ನಮ್ಮ ಶಾಲೆಗಳಲ್ಲಿ ನಮಗೆ ಅಂಕಪಟ್ಟಿ ಇರುವಂತೆಯೇ ಜ್ವಾಲಾಮುಖಿಗಳ ಸ್ಪೋಟಕ್ಕೂ ಒಂದರಿಂದ ಏಳರವರಿಗಿನ ಅಂಕಪಟ್ಟಿಯಿದೆ. ಸೇಂಟ್ ಹೆಲೆನ್ಸ್ ಸ್ಪೋಟ ಈ ಸೂಚ್ಯಂಕದಲ್ಲಿ 5 ಅಂಕಗಳಿಸಿತ್ತು. 1991ರ ಅತೀಭೀಕರ ಮೌಂಟ್ ಪಿನಾಟೂಬೋ ಜ್ವಾಲಾಮುಖಿ ಸ್ಪೋಟ 6 ಅಂಕಗಳಿಸಿತ್ತು. ಅಂದರೆ ಪಿನಾಟೂಬೋ, ಹೆಲೆನ್ಸ್’ಗಿಂತಾ ಹತ್ತುಪಟ್ಟು ಹೆಚ್ಚು ಭೀಕರ. ಆದರೆ ಮೌಂಟ್ ತಂಬೋರಾ 7 ಅಂಕಗಳಿಸಿತ್ತು. ಅಂದರೆ ಪಿನಾಟೂಬೋ ಸ್ಪೋಟಕ್ಕಿಂತಾ ಹತ್ತುಪಟ್ಟು, ಹೆಲೆನ್ಸ್’ಗಿಂತಾ 100 ಪಟ್ಟು ಹೆಚ್ಚು ಶಕ್ತಿಶಾಲಿಯಾದ ಸ್ಪೋಟವಾಗಿತ್ತು. ಸುಮಾರು ಹನ್ನೊಂದುಸಾವಿರ ಜನರು ಒಂದೇದಿನದಲ್ಲಿ ಸಾವನ್ನಪ್ಪಿದರು. ಮುಂದಿನ ಮೂರ್ನಾಲ್ಕು ವಾರದಲ್ಲಿ ಸುಮಾರು 58,000 ಸಾವಿರ ಜನ ಹಸಿವು, ಸಾಂಕ್ರಾಮಿಕ ರೋಗ ಮುಂತಾದ ಪರೋಕ್ಷಕಾರಣಗಳಿಂದಾಗಿ ಮರಣಹೊಂದಿದರು. ಆದರೆ ನಿಜವಾದ ದುರಂತ ಬಂದಿದ್ದೇ ಇದರ ನಂತರ. ಜ್ವಾಲಾಮುಖಿ ಸ್ಫೋಟದಿಂದಾಗಿ ಕಲ್ಲು ಮತ್ತು ದೂಳು ಆಕಾಶದಲ್ಲಿ ಸುಮಾರು 26 ಮೈಲುಗಳಷ್ಟು ಎತ್ತರಕ್ಕೆ ಏರಿ, ವಾಯುಮಂಡಲದೆತ್ತರಕ್ಕೆ ತಳ್ಳಲ್ಪಟ್ಟವು. ನಮಗೆ ಗಾಳಿ, ಶೀತ, ಉಷ್ಣತೆಯನ್ನು ಕೊಡುವ ಉಷ್ಣವಲಯ (troposphere) ಸುಮಾರು ಒಂಬತ್ತು ಮೈಲು ಎತ್ತರವಿರುತ್ತದೆ. ಇದರ ಮೇಲಿರುವ ವಾಯುಮಂಡಲ (stratosphere) ಸುಮಾರು ಮೂವತ್ತೊಂದು ಮೈಲು ಎತ್ತರಕ್ಕೆ ವ್ಯಾಪಿಸಿದೆ. ಮಾನವ ಇತಿಹಾಸದಲ್ಲಿ ವಾಯುಮಂಡಲದವರೆಗೆ ದೂಳುತಲುಪಿದ ನೈಸರ್ಗಿಕ ವಿಕೋಪಗಳು ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಇಡೀ ದಖನ್ ಪ್ರಸ್ಥಭೂಮಿಯನ್ನು ಎರಡಡಿವರೆಗೆ ಮುಚ್ಚಿಡಬಹುದಾದಷ್ಟು ಬೂದಿಯನ್ನು ತಂಬೋರಾ ಜ್ವಾಲಾಮುಖಿ ಹೊರಹಾಕಿತು. ಸಾಮಾನ್ಯವಾಗಿ ಹೊಗೆ, ಬೂದಿ, ಧೂಳು ಉಷ್ಣವಲಯವನ್ನು ಮಾತ್ರವೇ ತಲುಪಿ, ಆ ಜಾಗದಲ್ಲಷ್ಟೇ ಪರಿಣಾಮ ಬೀರುತ್ತವೆ. ಆದರೆ ವಾಯುಮಂಡಲ ಹಾಗಲ್ಲ. ಅದು ಭೂಮಿಯ ಚಲನಾನುಪಾತದಲ್ಲಿ ಚಲಿಸುವುದಿಲ್ಲ. ಹಾಗಾಗಿ ಇಲ್ಲಿಗೆ ತಲುಪುವ ಅವಶೇಷಗಳು ಜಗತ್ತಿನಾದ್ಯಂತ ಪರಿಣಾಮ ಬೀರಿ ಹಾನಿಯುಂಟುಮಾಡುತ್ತವೆ. ಎರಡು ತಿಂಗಳ ಹಿಂದೆ ಸ್ಯಾನ್-ಫ್ರಾನ್ಸಿಸ್ಕೋದ ಕಾಡ್ಗಿಚ್ಚಿನಿಂದ ಹೊಗೆ ಮತ್ತು ಬೂದಿ ಆಕಾಶವನ್ನು ಕಡುಗೆಂಪು ಬಣ್ಣಕ್ಕೆ ತಿರುಗಿಸಿದ ಚಿತ್ರಗಳನ್ನು ನೋಡಿರಬಹುದು. ತಂಬೋರಾ ಸ್ಪೋಟ ಇದೇ ಪರಿಣಾಮವನ್ನು ಹೆಚ್ಚೂಕಮ್ಮಿ ಇಡೀ ವಿಶ್ವಕ್ಕೆ ಹರಡಿತು. ಅದೂ ಒಂದೆರಡು ದಿನ ಅಥವಾ ವಾರವಲ್ಲ, ಹಲವಾರು ತಿಂಗಳುಗಳವರೆಗೆ. ಹೀಗೆ ಪ್ರಾರಂಭವಾಗಿದ್ದೇ “ಬೇಸಿಗೆಯಿಲ್ಲದ ವರ್ಷ”. ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಿದ ಬೂದಿಯಿಂದಾಗಿ 1816ರಲ್ಲಿ ಜಾಗತಿಕ ಸರಾಸರಿ ತಾಪಮಾನ ಸುಮಾರು 1.5 ಡಿಗ್ರಿಗಳಷ್ಟು ಕುಸಿಯಿತು. ದಾಖಲಾದ ಇತಿಹಾಸದ ಅತ್ಯಂತ ತಂಪುವರ್ಷ ಇದಾಗಿತ್ತು. ಯುರೋಪಿನಲ್ಲಿ ಜುಲೈನ ಬೇಸಿಗೆಯಲ್ಲೂ ಹಿಮ ಬೀಳುತ್ತಲೇ ಇತ್ತು. ಸಾಮಾನ್ಯವಾಗಿ ಡಿಸೆಂಬರಿನಲ್ಲಿ ಹಿಮಕಾಣುತ್ತಿದ್ದ ನ್ಯೂಯಾರ್ಕ್ ಈ ಬಾರಿ ಆಗಸ್ಟಿನಲ್ಲೇ ಒಂದಡಿ ಹಿಮದಡಿಯಲ್ಲಿತ್ತು. ಅದೂ ಎಂತಹಾ ಹಿಮ? ಬಿಳಿಬಣ್ಣದ ನಿಶ್ಕಲ್ಮಷ ಬಿಳಿಹಿಮವಲ್ಲ. ಬದಲಿಗೆ ಬೂದುಮಿಶ್ರಿತ ಕಿತ್ತಳೆ ಬಣ್ಣದ್ದ ಹೇವರಿಕೆ ಹುಟ್ಟಿಸುವ ಹಿಮ. ಸೂರ್ಯನಬೆಳಕಿಲ್ಲದೇ ಪ್ರಪಂಚದೆಲ್ಲೆಡೆ ಬೆಳೆಗಳು ವಿಫಲವಾಗಿ ಕೃಷಿ ಕುಂಠಿತವಾಯಿತು. ಬರಗಾಲದ ಕರಿನೆರಳು ಕಾಣಿಸಲಾರಂಭಿಸಿತು. ಅದಾಗಲೇ ನೆಪೋಲಿಯನಿಕ್ ಯುದ್ಧಗಳಿಂದ ನಿತ್ರಾಣಗೊಂಡಿದ್ದ ಯೂರೋಪ್ ಬೆಚ್ಚಿಬಿದ್ದಿತು. ಯೂರೋಪಿನ ಆಹಾರಬುಟ್ಟಿಗಳಾದ ಜರ್ಮನಿ, ಇಟಲಿ ಮತ್ತು ಸ್ಪೇನ್’ಗಳಲ್ಲಿ ಆಹಾರ ಬೆಲೆಯೊಂದಿಗೇ, ಹಸಿವಿನಿಂದ ಹತಾಶರಾದ ಜನರ ಆಕ್ರೋಶವೂ ಆಕಾಶಕ್ಕೇರಿ ಅಲ್ಲಲ್ಲಿ ದಂಗೆಗಳು ಪ್ರಾರಂಭವಾದವು. ಈ ರೀತಿ ಹಸಿವಿನಿಂದ ಬಳಲುತ್ತಿದ್ದ ಜರ್ಮನ್ನರಲ್ಲಿ ಜಸ್ಟಸ್ ವಾನ್ ಲೈಬಿಗ್ ಎಂಬ 13 ವರ್ಷದ ಹುಡುಗನೂ ಒಬ್ಬ. ಶಾಲೆಯಲ್ಲಿ ಲೈಬಿಗ್ ದನಕಾಯಲೂ ಲಾಯಕ್ಕಿಲ್ಲದವನು ಎಂದು ಗುರುಗಳಿಂದ ಬೈಸಿಕೊಳ್ಳುತ್ತಿದ್ದ ಅಷ್ಟೇನೂ ಪ್ರತಿಭಾವಂತನಲ್ಲದ ಹುಡುಗ. ಆದರೆ ಅವನಿಗೆ ಪ್ರಯೋಗಳೆಂದರೆ ತುಂಬಾ ಇಷ್ಟವಿತ್ತು. ಅಪ್ಪನ ಬಣ್ಣದ ಕಾರ್ಖಾನೆಯಲ್ಲಿ ಕೈಗಾರಿಕಾ ರಸಾಯನಶಾಸ್ತ್ರಕ್ಕೆ ಪರಿಚಿತನಾಗಿದ್ದ ಲೈಬಿಗ್ 1816ರ ಬರಗಾಲದ ಪರಿಣಾಮದಿಂದ ತೀವ್ರವಾಗಿ ಪ್ರಭಾವಿತನಾಗಿ ಎರಡು ನಿರ್ಧಾರಗಳನ್ನು ತೆಗೆದುಕೊಂಡ. ಮೊದಲನೆಯದು, ‘ನಾನು ರಸಾಯನಶಾಸ್ತ್ರಜ್ಞನಾಗುತ್ತೇನೆ’. ಎರಡನೆಯದು, ‘ನನ್ನ ರಸಾಯನಶಾಸ್ತ್ರವೃತ್ತಿಯನ್ನು ಕೃಷಿಯನ್ನು ಸುಧಾರಿಸಲು ಮೀಸಲಿಡುತ್ತೇನೆೆ’ ಎಂದು. ಜಸ್ಟಸ್ ವಾನ್ ಲೈಬಿಗ್ ಆತ ಬರೀ ನಿರ್ಧಾರ ಮಾತ್ರ ಮಾಡಲಿಲ್ಲ. ಅದನ್ನು ಸಾಧಿಸಿದ ಕೂಡಾ. ತೀವ್ರಪರಿಶ್ರಮ ಹಾಕಿ 21ನೇ ವಯಸ್ಸಿನಲ್ಲಿ ಪಿಎಚ್‌ಡಿ ಪಡೆದ. ಆರೋಗ್ಯಕರವಾದ ಮತ್ತು ಹೆಚ್ಚು ಇಳುವರಿಯ ಬೆಳೆಯನ್ನು ಪಡೆಯಲು ಸಾರಜನಕ (Nitrogen) ಎಷ್ಟು ಮುಖ್ಯ, ಮತ್ತು ಅದನ್ನು ಕೃತಕವಾಗಿ ಪೂರೈಸಲು ಅಮೋನಿಯಾವನ್ನು ಹೇಗೆ ಬಳಸಬಹುದು ಎಂಬುದನ್ನು ಅರ್ಥಮಾಡಿಕೊಂಡವರಲ್ಲಿ ಲೈಬಿಗ್ ಮೊದಲನೆಯವ. ಬೆಳೆಗಳಿಗೆ ಬೇಕಾಗಿರುವುದು ಕೇಜಿಗಟ್ಟಲೆ ಗೊಬ್ಬರವಲ್ಲ. ಒಂದೇ ಒಂದು ಪೋಷಕಾಂಶದ ಕೊರತೆ ಇಳುವರಿಯನ್ನು ತೀವ್ರವಾಗಿ ಕುಗ್ಗಿಸುತ್ತದೆ, ಹಾಗೂ ಹೆಚ್ಚಿನ ಸಮಯದಲ್ಲಿ ಆ ಪೋಷಕಾಂಶ ಸಾರಜನಕ ಎಂಬುದನ್ನು ನಿರೂಪಿಸಿದ. ಭೂಮಿತಾಯಿ ಯಾವಾಗಲೆಲ್ಲಾ ಹೆಚ್ಚಿನ ಇಳುವರಿ ಕೊಡಲಿಲ್ಲವೋ, ಆಗೆಲ್ಲಾ ಅಮೋನಿಯಾದ ಬಳಕೆಯ ಮೂಲಕ ಅದನ್ನು ಸರಿದೂಗಿಸಬಹುದೆಂದು ಪ್ರಯೋಗಳ ಮೂಲಕ ಕಂಡುಹಿಡಿದ. ಲೈಬಿಗ್‌ನ ಈ ಸಂಶೋಧನೆಗಳು ಮುಂದಿನ ದಶಕಗಳಲ್ಲಿ ಸುಧಾರಣೆಯಾಗಿ, ವಿಶೇಷವಾಗಿ ಕೃತಕ ಅಮೋನಿಯಾದ ತಯಾರಿಕೆಗೆ ನಾಂದಿಹಾಡಿ, ಅಮೋನಿಯಾ ಆಧಾರಿತ ರಸಗೊಬ್ಬರ ಉದ್ಯಮಕ್ಕೆ ಕಾರಣವಾಗಿ, ಜಾಗತಿಕ ಕೃಷಿಯನ್ನು ಆಮೂಲಾಗ್ರವಾಗಿ ಬದಲಾಯಿಸಿತು. ಈಗ ನಮಗಿಲ್ಲಿ ಕೂತು ಇದೇನೂ ದೊಡ್ಡ ವಿಷಯವಲ್ಲ ಅಂತೆನಿಸಬಹುದು. ಆದರೆ ಆಧುನಿಕ ಜಗತ್ತಿನಲ್ಲಿ ವಿಮಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಹಾರಾಟ ಅಥವಾ ದೂರದರ್ಶನದ ಆವಿಷ್ಕಾರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಅಮೋನಿಯದ ಸಂಶ್ಲೇಷಣೆಗೆ ಕೊಡಲಾಗುತ್ತದೆ. ಅದಿಲ್ಲವಾಗಿದ್ದಿದ್ದರೆ 1900ರಲ್ಲಿ ಕೇವಲ 1.6 ಶತಕೋಟಿಯಿದ್ದ ಭೂಮಿಯ ಜನಸಂಖ್ಯೆ 7.8 ಶತಕೋಟಿಗೆ ತಲುಪುವುದು ಅಸಾಧ್ಯವಾಗುತ್ತಿತ್ತು. ತನ್ನೂರಿನಿಂದ 7800 ಮೈಲಿ ದೂರದಲ್ಲಿ ಸ್ಪೋಟಗೊಂಡು ಜರ್ಮನ್ ಬರಗಾಲಕ್ಕೆ ಕಾರಣವಾದ, ಮೌಂಟ್ ತಂಬೋರಾದ ಘಟನೆ ನಡೆಯದಿದ್ದಿದ್ದರೆ ಆತ ರಸಾಯನಶಾಸ್ತ್ರ ಹಾಗೂ ಕೃಷಿಯತ್ತ ಗಮನಹರಿಸುತ್ತಿದ್ದನೇ ಮತ್ತು ಸಾರಜನಕ ಆಧಾರಿತ ಗೊಬ್ಬರವನ್ನು ಕಂಡುಹಿಡಿಯುತ್ತಿದ್ದನೇ? ಬಹುಷಃ ಇಲ್ಲ!! ಇದನ್ನೇ ನೋಡಿ ಜಗದ್ವಿಚಿತ್ರ ಅನ್ನೋದು. ಎಲ್ಲೋ ಒಂದು ಜ್ವಾಲಾಮುಖಿ ಸ್ಫೋಟಗೊಂಡು, ಇನ್ಯಾವುದೋ ಬೇರೆ ಖಂಡದ ಮಗುವೊಂದನ್ನು ತನ್ನ ಮನೆ, ದೇಶ ಮತ್ತು ಗ್ರಹವನ್ನು ಹೇಗೆ ಒಳ್ಳೆಯರೀತಿಯಲ್ಲಿ ಪೋಷಿಸಬೇಕು ಎಂಬುದರ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತದೆ!! 1816ರಲ್ಲಿ ಯಾರಿಗೂ ಈ ಎರಡು ಘಟನೆಗಳನ್ನು ಒಂದೇ ಸಾಲಿನಲ್ಲಿ ಸಂಪರ್ಕಿಸಲು ಸಾಧ್ಯವೇ ಇರಲಿಲ್ಲ. ಆದರೂ ಅದು ನಡೆಯಿತು. ಕಾರ್ಲ್ ವಾನ್ ಡ್ರೈಸ್ ಇದೊಂದೇ ಕಥೆಯಲ್ಲ. ತಂಬೋರಾ ತಂದ ಬರಗಾಲ, ವಿಶ್ವನಿಯಮದ ಹತ್ತು-ಹಲವು ಅಸಂಕಲ್ಪಿತ ಹರವುಗಳಲ್ಲಿ ಸಂಚಲನಗಳಿಗೆಡೆಮಾಡಿಕೊಟ್ಟಿತು. ಕುದುರೆಗಳಿಗೆ ತಿನ್ನಿಲು ಮೇವಿಲ್ಲದೇ ಕುದುರೆಗಳು ಸತ್ತಾಗ, ಗಾಡಿಎಳೆಯಲು ಪರ್ಯಾಯಮಾರ್ಗ ಹುಡುಕುತ್ತಾ ಜರ್ಮನ್ ಸಂಶೋಧಕ ಕಾರ್ಲ್ ವಾನ್ ಡ್ರೈಸ್ ಬೈಸಿಕಲ್ ಅನ್ನು ಕಂಡುಹಿಡಿದ. ಅಮೇರಿಕಾದಲ್ಲಿ ಈಶಾನ್ಯ ಯುಎಸ್ಎ ಅಂದರೆ ಆಗಿನ ನ್ಯೂಇಂಗ್ಲೆಂಡ್‌ನ ಜನರು, ಬೂದಿಯ ಪರಿಣಾಮ ಕಡಿಮೆಯಿದ್ದ ಮಧ್ಯದ ಬಯಲು ಪ್ರದೇಶಗಳಿಗೆ ವಲಸೆ ಹೋದರು. ಜನರನ್ನು ಒಗ್ಗೂಡಿಸಿದ ಈ ಆಹಾರಾವಲಂಬಿತ ವಲಸೆಯ ಪರಿಣಾಮವಾಗಿ ಗುಲಾಮಗಿರಿ-ವಿರೋಧಿ ಆಂದೋಲನ ಗಟ್ಟಿಯಾಗಿ, ಕೆಲವೇ ವರ್ಷಗಳಲ್ಲಿ ಪೂರ್ವಅಮೇರಿಕಾದಲ್ಲಿ ಗುಲಾಮಗಿರಿ ನಿಂತೇಹೋಯಿತು. ಖಾಲಿಬಿದ್ದಿದ್ದ ಅಮೇರಿಕಾದ ಹೃದಯಭಾಗ ಜನಾವೃತ್ತವಾಗಿ ಎರಡೇ ವರ್ಷದಲ್ಲಿ ಇಂಡಿಯಾನಾ ಮತ್ತು ಇಲಿನಾಯ್ ಎಂಬ ರಾಜ್ಯಗಳೇ ಹುಟ್ಟಿಕೊಂಡವು. ಚೀನಾದ ಯಾಂಗ್ತ್ಸೆ ಕಣಿವೆಯಲ್ಲಿ ಅಕಾಲಿಕ ಮಳೆ ಮತ್ತು ಪ್ರವಾಹಗಳು ಹೆಚ್ಚೆಚ್ಚು ಜನರನ್ನು ಕರಾವಳಿಯೆಡೆಗೆ ತಳ್ಳಿ, ಅಲ್ಲಿನ ಜನಸಂಖ್ಯಾ ವಿತರಣೆ ಐದೇವರ್ಷದಲ್ಲಿ ಸಂಪೂರ್ಣ ಬದಲಾಗಿಹೋಯ್ತು. ಜನರೇ ಇಲ್ಲದ ಶಾಂಘೈ ಜನನಿಬಿಡ ನಗರವಾಯ್ತು. ಈಶಾನ್ಯ ಭಾರತದ ಪರ್ವತಗಳಿಂದ ಜನ ಬಂಗಾಳದೆಡೆಗೆ ಹರಿದುಬಂದರು. ವರ್ಣಚಿತ್ರಗಳಲ್ಲಿ ಕೆಂಪು ಹಾಗೂ ಗಾಡಬೂದು ಬಣ್ಣಗಳು ಮುನ್ನೆಲೆಗೆ ಬಂದವು. ಚಿತ್ರಕಾರರು ಸೂರ್ಯ ಮತ್ತು ಚಂದ್ರರನ್ನು ಚಿತ್ರಿಸಿದ್ದೇ ಕಡಿಮೆ. ಆ ಕಾಲದಲ್ಲಿ ರಚನೆಯಾದ ಕವನಗಳಲ್ಲಿ ವಿಷಾದ ಭಾವ ಮೊದಲಿಗಿಂತಾ ಹೆಚ್ಚಿತ್ತು. ಇಷ್ಟೆಲ್ಲಾ ಅನೂಹ್ಯ ರೀತಿಯಲ್ಲಿ ಮನುಕುಲವನ್ನು ತಟ್ಟಿ ಜಗತ್ತನ್ನು ಬದಲಾಯಿಸಿದ್ದು ನಮಗೆ ವಿಕೋಪವೆನಿಸಬಹುದಾದ ಒಂದು ಜ್ವಾಲಾಮುಖಿಯ ಸ್ಪೋಟ. ಈಗ ನಾವು ಯೋಚಿಸಬೇಕಾದದ್ದೇನೆಂದರೆ, ಈ ಬಾರಿ ಭೂಮಿಯನ್ನು ಆವರಿಸಿಕೊಂಡಿರುವ ನಾವು ಶನಿಯೆಂದು ಭಾವಿಸಿರುವ ಕರೋನಾ ವೈರಸ್, ಯಾವ್ಯಾವ ಅಸಂಕಲ್ಪಿತ ವಿಷಯಗಳಿಗೆ ಚಾಲನೆ ಕೊಡಬಹುದು? ಈಗ ನೋಡಿ ಕರೋನಾದಿಂದ ನಮಗೇನು ಉಪಯೋಗವಾಯ್ತು ಅಂತಾ ಯಾರಿಗಾದರೂ ಪ್ರಶ್ನೆ ಕೇಳಿದರೆ ಪಟ್ಟನೇ ಉತ್ತರಿಸೋದು ಸುಲಭವಲ್ಲ. ಅದೂ ಅಲ್ಲದೇ ಕರೋನಾದ ಕೆಟ್ಟಪರಿಣಾಮಗಳೆಲ್ಲಾ ಬಂದಾಯ್ತೋ, ಇನ್ನೂಬರಲಿಕ್ಕಿದೆಯೋ ಎಂಬುದಿನ್ನೂ ತಿಳಿದಲ್ಲ. ಹೇಳದೇ ಕೇಳದೇ ನಮ್ಮಮೇಲೆಸೆಯಲಾದ ಈ ಸಮಸ್ಯಾಪ್ರವಾಹಕ್ಕೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಬಲಿಯಾಗಿದ್ದಾರೆ. ಆದರೆ ಅದರೊಟ್ಟಿಗೇ ಜನರಿಗೆ ಹೊಸಾ ಅಪಾಯಗಳ, ಹೊಸಾ ರೀತಿಯ ಆಟ, ಪಾಠ, ಕೆಲಸ, ಬದುಕು ಎಲ್ಲದರ ಅರಿವೂ ಆಗಿದೆ. ಕುಟುಂಬವನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬೇಕು, ವ್ಯವಹಾರವನ್ನು ಹೇಗೆ ನಡೆಸಬೇಕು ಮತ್ತು ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸಂಪೂರ್ಣವಾಗಿ ಹೊಸಾ ದೃಷ್ಟಿಕೋನಗಳು ಬೆಳೆದುಕೊಂಡಿವೆ. ನಾವು ಜೀವನದಲ್ಲಿ ಎಷ್ಟೋ ಅನಗತ್ಯ ಖರ್ಚುಗಳನ್ನೂ, ಕೆಲಸಗಳನ್ನೂ ಮಾಡುತ್ತಿದ್ದೆವು ಎಂಬ ಅರಿವು ಮೂಡಿದೆ. ಪ್ರಯಾಣದ ಅಗತ್ಯ ಕಡಿಮೆಯಾಗಿದೆ. ಬೆಂಗಳೂರಿನಲ್ಲೇ ಇದ್ದು ವೃತ್ತಿಜೀವನ ನಡೆಸಬೇಕು ಎಂಬ ಮಾತು ಸುಳ್ಳೆಂದು ಮನವರಿಕೆಯಾಗಿದೆ. ಮೊದಲಿಗಿಂತಲೂ ಉತ್ತಮ ಲಸಿಕೆಗಳನ್ನು ಮೊದಲಿಗಿಂತಲೂ ವೇಗವಾಗಿ ತಯಾರಿಸುತ್ತಿದ್ದೇವೆ. ವೈದ್ಯರ ಜ್ಞಾನದ ಹರವು ಹೆಚ್ಚಿದೆ. ಬಯೋಮೆಟ್ರಿಕ್, ಟಚ್-ಲೆಸ್ ತಂತ್ರಜ್ಞಾನಗಳು ಹಿಂದೆಂದಿಗಿಂತಲೂ ಹೆಚ್ಚು ಶಕ್ತವಾಗಿವೆ. ಬಹುಶಃ ಇದರ ನಂತರದ, ಎರಡನೇ ಹಂತದ ಪರಿಣಾಮಗಳಲ್ಲಿ ಎಂಆರ್‌ಎನ್‌ಎ ಲಸಿಕೆಗಳ ಬಗ್ಗೆ ನಮ್ಮ ಹೊಸ ಜ್ಞಾನ ಕ್ಯಾನ್ಸರಿನಂತಹ ಹಳೇ ಕಾಯಿಲೆಗಳಿಗೆ ಔಷಧವನ್ನೂ ಕೊಡಬಹುದಾದ ಸಾಧ್ಯತೆಯೂ ಇದೆ. ವಿಕಸನೀಯ ಜೀವಶಾಸ್ತ್ರದಲ್ಲಿ ಫಿಶರ್‌ನ ನೈಸರ್ಗಿಕ ಆಯ್ಕೆಯ ಮೂಲಭೂತ ಪ್ರಮೇಯ ಎಂಬ ಒಂದು ಸಿದ್ಧಾಂತವಿದೆ. ಈ ಸಿದ್ದಾಂತದ ಪ್ರಕಾರ ಜೀವಪ್ರಬೇಧವೊಂದರಲ್ಲಿ ಅಸಮಾನತೆ ಹೆಚ್ಚಿದ್ದಷ್ಟೂ ಅದರ ಅಸ್ತಿತ್ವ ಸಾಧ್ಯತೆ ಹೆಚ್ಚಿರುತ್ತದೆ. ಜೀವಪ್ರಬೇಧ ವೈವಿಧ್ಯಮಯವಾಗಿದ್ದಾಗ, ಹೊಸಗುಣಲಕ್ಷಣಗಳ ಮುಂದಿನ ತಲೆಮಾರನ್ನು ಆಯ್ಕೆಮಾಡಿಕೊಳ್ಳಲು ಪ್ರಕೃತಿಗೆ ಹೆಚ್ಚೆಚ್ಚು ಅವಕಾಶಗಳು ದೊರೆಯುತ್ತವೆ. ಯಾವ ಗುಣಲಕ್ಷಣಗಳು ಯಾವಾಗ ಮತ್ತು ಹೇಗೆ ಉಪಯುಕ್ತವಾಗುತ್ತವೆ ಎಂದು ನಮಗ್ಯಾರಿಗೂ ತಿಳಿದಿಲ್ಲ, ತಿಳಿಯುವುದೂ ಇಲ್ಲ; ಜೀವವಿಕಾಸವು ಕೆಲಸ ಮಾಡುವುದೇ ಹಾಗೆ. ಆದರೆ ನಿಮ್ಮಲ್ಲಿ ಹೆಚ್ಚೆಚ್ಚು ಗುಣಲಕ್ಷಣಗಳಿದ್ದಷ್ಟೂ, ಅವುಗಳಲ್ಲಿ ಉಪಯುಕ್ತವಾದದ್ದು – ಅದು ಯಾವುದೇ ಆಗಿರಲಿ – ಪ್ರಕೃತಿಯಲ್ಲಿ ಎಲ್ಲೋ ಒಂದು ಕಡೆ ಉಳಿದಿರುತ್ತದೆ. ಎಲ್ಲೋ ಸ್ಪೋಟವಾದ ಜ್ವಾಲಾಮುಖಿ ಇನ್ನೆಲ್ಲೋ ಗಟ್ಟಿನಿರ್ಧಾರಕ್ಕೆ ಕಾರಣವಾಗುವ ಪುನಶ್ಚೈತನ್ಯವೂ ಇಂತಹ ಲಕ್ಷಣಗಳಲ್ಲೊಂದು. ಇವೆಲ್ಲದರ ಆಚೆ, 2020-21ರ ಆಚೆ, ಈ ಖಾಯಿಲೆ-ಲಸಿಕೆಗಳಾಚೆ ಒಂದು ದೊಡ್ಡದಾದ, “ಅಲ್ಲೇನಿದೆಯೋ ಗೊತ್ತಿಲ್ಲದ” ವಿಶಾಲವಾದ ಕಪ್ಪುಬಯಲೊಂದಿದೆ ಇದೆ. ಈ ಇಡೀವರ್ಷ ಅದೆಷ್ಟು ಅನೂಹ್ಯ ವಿಚಾರಗಳಿಗೆ ಓಂನಾಮ ಹಾಡಿದೆಯೋ ನಮಗೇ ಗೊತ್ತಿಲ್ಲ. ಏಳು ಶತಕೋಟಿ ಜನರ ಜೀವನವನ್ನು ತಲೆಕೆಳಗಾಗಿಸಿದ, ಅವರೆಂದಿಗೂ ಊಹಿಸದಂತಹ ಸಂಗತಿಗಳಿಗೆ ದಾರಿಮಾಡಿಕೊಟ್ಟ ಕೊರೋನಾ ಸುಮ್ಮನೇ ಹೋಗುವುದಿಲ್ಲ. ನಮ್ಮ ಜೀವನ ಮಾತವಲ್ಲ ನಾಗರೀಕತೆಯನ್ನೆ ಬದಲಾಯಿಸಬಲ್ಲದು, ಬದಲಾಯಿಸುತ್ತದೆ ಕೂಡಾ. ಅದ್ಯಾವ ಬದಲಾವಣೆ ಎನ್ನುವುದನ್ನು ಅನುಭವಿಸಿಯೇ ನೋಡಬೇಕಷ್ಟೇ. ಕಳೆದ ವಾರ ಲಸಿಕೆಯ ಸುದ್ದಿಬಂದಾಗ, ಹಲವರು “ಸುರಂಗದ ಕೊನೆಯಲ್ಲಿ ಬೆಳಕು ಕಾಣ್ತಾ ಇದೆ” ಎಂದರು. ಇರಬಹುದು. ಆದರೆ ಮುಂದೆ ಏನಾಗುತ್ತದೆ ಎನ್ನುವುದರ ಅಲ್ಪಊಹೆಯೂ ನಮಗಿಲ್ಲ ಎಂಬುದು ನನ್ನ ಅಭಿಪ್ರಾಯ.
ಬಾಲಿವುಡ್‌ ನಟ ವಿದ್ಯುತ್‌ ಜಾಮ್‌ವಾಲ್‌ ನಿರೂಪಣೆಯ ‘India’s Ultimate Warrior’ ಶೋ ನಾಳೆ ಮಾರ್ಚ್‌ 4ರಿಂದ ಡಿಸ್ಕವರಿ ಪ್ಲಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ನಂತರ ಮಾರ್ಚ್‌ 14ರಿಂದ ಡಿಸ್ಕವರಿ ಚಾನೆಲ್‌ನಲ್ಲಿ ಮೂಡಿಬರಲಿದೆ. Discovery+ ನ ‘India’s Ultimate Warrior’ ಶೋನೊಂದಿಗೆ ಬಾಲಿವುಡ್‌ ಆಕ್ಷನ್‌ ಹೀರೋ ವಿದ್ಯುತ್‌ ಜಾಮ್‌ವಾಲ್‌ ನಿರೂಪಕನಾಗಿ ಹೊಸ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೊಂದು ಸಾಹಸಮಯ ಶೋ ಆಗಿದ್ದು, ವಿದ್ಯುತ್‌ ಮತ್ತು ನಾಲ್ವರು ಮೆಂಟರ್‌ಗಳು ಸ್ಪರ್ಧಿಗಳನ್ನು ಹುರಿದುಂಬಿಸುತ್ತಾ ಅವರಿಗೆ ಆತ್ಮವಿಶ್ವಾಸ ತುಂಬು ಕೆಲಸ ಮಾಡಲಿದ್ದಾರೆ. ಇಲ್ಲಿನ ಸವಾಲುಗಳನ್ನು ಗೆಲ್ಲಲು ಸ್ಪರ್ಧಿಗಳು ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ನಾಳೆ ಮಾರ್ಚ್‌ 4ರಿಂದ ಶೋ discovery+ ನಲ್ಲಿ ಸ್ಟ್ರೀಮ್‌ ಆಗಲಿದ್ದು, ಮಾರ್ಚ್‌ 14ರಿಂದ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. View this post on Instagram A post shared by Vidyut Jammwal (@mevidyutjammwal) India’s Ultimate Warrior ಬಗ್ಗೆ ಮಾತನಾಡುವ ನಟ ವಿದ್ಯುತ್‌ ಜಾಮ್‌ವಾಲ್‌, “ಇದೊಂದು ಕ್ಲಿಷ್ಟ ಮತ್ತು ಸವಾಲುಗಳ ರಿಯಾಲಿಟಿ ಶೋ. ಮಾನಸಿಕ, ದೈಹಿಕ ಸದೃಢತೆ ಮತ್ತು ಉತ್ಸಾಹದಿಂದ ತೊಡಗಿಸಿಕೊಳ್ಳುವುದು ಅವಶ್ಯ. ಇಲ್ಲಿ ಸ್ಪರ್ಧಿಗಳಿಗೆ ಕಠಿಣ ಟಾಸ್ಕ್‌ಗಳನ್ನು ನೀಡಲಿದ್ದೇವೆ. ಇವರ ಪೈಕಿ ಯಾರು ಎಲ್ಲಾ ಸವಾಲುಗಳನ್ನು ಗೆಲ್ಲುತ್ತಾರೋ ಅವರೇ India’s Ultimate Warrior” ಎನ್ನುತ್ತಾರೆ. ನಟ ವಿದ್ಯುತ್‌ ಜಾಮ್‌ವಾಲ್‌ ‘ಖುದಾ ಹಾಫಿಜ್‌’, ‘ಕಮ್ಯಾಂಡೊ’, ‘ಫೋರ್ಸ್‌’ ಆಕ್ಷನ್‌ ಚಿತ್ರಗಳೊಂದಿಗೆ ಬಾಲಿವುಡ್‌ನಲ್ಲಿ ಗುರಿತಿಸಿಕೊಂಡಿದ್ದಾರೆ. 2021ರಲ್ಲಿ ಅವರ ‘ಸನಕ್‌’ ಸಿನಿಮಾ ಬಿಡುಗಡೆಯಾಗಿತ್ತು. ಈ ವರ್ಷ ಅವರ ನಟನೆಯ ‘ಖುದಾ ಹಾಫಿಜ್‌ 2’ ಸಿನಿಮಾ ಬಿಡುಗಡೆಯಾಗಲಿದೆ.
ಮುಂಬೈನ ಐಕಾನಿಕ್ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ಆಯೋಜಿಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡುವುದರೊಂದಿಗೆ ಶಿವಸೇನೆಯ ಏಕನಾಥ್ ಶಿಂಧೆ ಬಣಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಕ್ಷಿದಾರರ (ಶಿವಸೇನೆಯ ಮೇಲಿನ) ಹಕ್ಕು ವಿವಾದ ಇತ್ಯರ್ಥವಾಗುವವರೆಗೆ ಅರ್ಜಿಯ ಕುರಿತು ತೀರ್ಮಾನಿಸದಂತೆ ಶಿಂಧೆ ಬಣದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಹೆಚ್ಚು ಓದಿದ ಸ್ಟೋರಿಗಳು ರಾಹುಲ್ ಹೇಳಿಕೆ ಬೆನ್ನಲ್ಲೇ ಪೈಲಟ್ ಜತೆಗಿನ ಗುದ್ದಾಟಕ್ಕೆ ತೆರೆ ಎಳೆದ ಗೆಹ್ಲೋಟ್ ಉಡುಪಿ; ವಿದ್ಯಾರ್ಥಿಯನ್ನು ಕಸಬ್ ಎಂದು ಸಂಬೋಧಿಸಿದ ಶಿಕ್ಷಕ ಅಮಾನತು ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ರದ್ದು ಪಡಿಸಿದ ಕೇಂದ್ರ ಮುಂಬೈ ಪೊಲೀಸರು ಎತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕಾಳಜಿಯ ಆಧಾರದ ಮೇಲೆ ಐಕಾನಿಕ್ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ನಡೆಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಏಕನಾಥ್ ಶಿಂಧೆ ಬಣಕ್ಕೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಈ ಹಿಂದೆ ಅನುಮತಿ ನಿರಾಕರಿಸಿತ್ತು. ಠಾಕ್ರೆ ಬಣವು BMC ನಿರ್ಧಾರವನ್ನು ಹೈಕೋರ್ಟ್‌ ನಲ್ಲಿ ಪ್ರಶ್ನಿಸಿತ್ತು, ಶಿಂಧೆ ಬಣವು ಮಧ್ಯಪ್ರವೇಶಿಸುವಂತೆ ಮನವಿ ಮಾಡಿತು. BMC ಆದೇಶವು “ಕಾನೂನಿನ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ” ಎಂದು ನ್ಯಾಯಾಲಯ ಹೇಳಿದೆ. ಶಿಂಧೆ ಬಣದ ಭಾಗವಾಗಿರುವ ದಾದರ್ ಶಾಸಕ ಸದಾ ಸರ್ವಾಂಕರ್, ಪ್ರಸ್ತುತ ಅರ್ಜಿಯ ಅಡಿಯಲ್ಲಿ ಅರ್ಜಿದಾರರು (ಠಾಕ್ರೆ ನೇತೃತ್ವದ ಶಿವಸೇನೆ) ಪಕ್ಷದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದರು. ಠಾಕ್ರೆ ನೇತೃತ್ವದ ಶಿವಸೇನೆ ಈ ನಿರ್ಧಾರವನ್ನು ಸ್ವಾಗತಿಸಿದ್ದು, ನ್ಯಾಯಾಂಗದ ಮೇಲಿನ ನಂಬಿಕೆಯು ಸಾಬೀತಾಗಿದೆ ಎಂದು ಹೇಳಿದೆ. ಪಕ್ಷದ ವಕ್ತಾರ ಮನಿಶಾ ಕಾಯಂದೆ ಮಾತನಾಡಿ, ಈ ಬಾರಿಯ ರ್ಯಾಲಿ ಅದ್ಧೂರಿಯಾಗಿ ನಡೆಯಲಿದೆ ಎಂದರು. ಅನುಮತಿ ನಿರಾಕರಿಸಿದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮೇಲೆ (ಸರ್ಕಾರದ) ಸ್ವಲ್ಪ ಒತ್ತಡವಿರಬೇಕು ಎಂದು ಅವರು ಹೇಳಿದ್ದಾರೆ. “ನ್ಯಾಯಾಂಗದ ಮೇಲಿನ ನಮ್ಮ ನಂಬಿಕೆಯು ಸಾಬೀತಾಗಿದೆ. ಕಳೆದ ಹಲವು ವರ್ಷಗಳಿಂದ, ದಸರಾ ರ್ಯಾಲಿಯು ‘ಶಿವ-ತೀರ್ಥ’ದಲ್ಲಿ ನಡೆಯುತ್ತಿದೆ (ಸೇನೆಯು ಶಿವಾಜಿ ಪಾರ್ಕ್ ಅನ್ನು ‘ಶಿವ-ತೀರ್ಥʼ ಎಂದು ಉಲ್ಲೇಖಿಸುತ್ತದೆ), ಆದರೆ ಈ ಬಾರಿ ಶಿಂಧೆ ಬಣ ಮತ್ತು ಬಿಜೆಪಿಯ ಮೂಲಕ ಅಡೆತಡೆಗಳನ್ನು ಸೃಷ್ಟಿಸಿತು, ಅದೃಷ್ಟವಶಾತ್, ನ್ಯಾಯಾಲಯ ಅದನ್ನು ತಿರಸ್ಕರಿಸಿತು,” ಎಂದು ಶಿವಸೇನಾ ಕಾರ್ಯದರ್ಶಿ ವಿನಾಯಕ್ ರಾವುತ್ ಹೇಳಿದ್ದಾರೆ. ಶಿವಸೇನೆಯು 1966 ರಿಂದ ಪ್ರತಿ ವರ್ಷ ದಸರಾದಂದು ರ್ಯಾಲಿಯನ್ನು ನಡೆಸುತ್ತಿದೆ. ಶಿವಸೇನೆಯು ಎರಡು ಬಣಗಳಾಗಿ ವಿಭಜನೆಯಾದ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020 ಮತ್ತು 2021 ರಲ್ಲಿ ರ್ಯಾಲಿಯನ್ನು ನಡೆಸಲಾಗಿಲ್ಲದ್ದರಿಂದ ಈ ವರ್ಷ ಈ ಕಾರ್ಯಕ್ರಮವು ಮಹತ್ವದ್ದಾಗಿದೆ. ಉದ್ಧವ್ ಠಾಕ್ರೆ ಅವರು ಆಗಸ್ಟ್‌ನಲ್ಲಿ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು, ಏನೇ ಆಗಲಿ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ನಡೆಸುವುದಾಗಿ ಠಾಕ್ರೆ ಹೇಳಿದ್ದರು. “ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆಯ ದಸರಾ ರ‍್ಯಾಲಿ ನಡೆಯಲಿದೆ. ಈ ರ್ಯಾಲಿಗೆ ರಾಜ್ಯದೆಲ್ಲೆಡೆಯಿಂದ ಶಿವಸೈನಿಕರು ಆಗಮಿಸುತ್ತಾರೆ.ಸರಕಾರ ಅನುಮತಿ ನೀಡುತ್ತದೋ ಇಲ್ಲವೋ ಈ ತಾಂತ್ರಿಕ ವಿಷಯಗಳು ನಮಗೆ ತಿಳಿದಿಲ್ಲ. ರ್ಯಾಲಿ ನಡೆಸುತ್ತೇವೆ. ಇತರರು ರ್ಯಾಲಿಗಳನ್ನು ನಡೆಸುತ್ತಾರೋ ಇಲ್ಲವೋ ಎಂಬುದು ನಮಗೆ ಮುಖ್ಯವಲ್ಲ. ಶಿವಸೇನೆ ಬೆಳೆದಿರುವುದು ದೇಶದ್ರೋಹಿಗಳಿಂದಲ್ಲ, ಶಿವಸೈನಿಕರ ರಕ್ತದಿಂದ” ಎಂದು ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದರು. ಅಕ್ಟೋಬರ್ 5 ರಂದು ನಡೆಯಲಿರುವ ರ್ಯಾಲಿಯಲ್ಲಿ ಅವರು ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ದೊಡ್ಡ ಭಾಷಣ ಮಾಡುವ ನಿರೀಕ್ಷೆಯಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ನೇತೃತ್ವದ ಬಂಡಾಯ ಶಿಬಿರವು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ರ್ಯಾಲಿಗೆ ಈಗಾಗಲೇ ಅನುಮತಿ ಪಡೆದಿದೆ.
ಕೊನೆಗೂ ಡ್ರೋನ್ ಪ್ರತಾಪ್ ನಾನು ಮಾಡಿರುವ ಸಂಶೋಧನೆ ಸಾಧನೆಗಳೆಲ್ಲವೂ ನಿಜ ಅದೆಲ್ಲವನ್ನು ಪ್ರೂಫ್ ಸಮೇತ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಖಾಸಗಿ ಸುದ್ದಿವಾಹಿನಿಯ ಲೈವ್ ಕಾರ್ಯಕ್ರಮದಲ್ಲಿ ಬಂದು ಕುಳಿತ ಪ್ರತಾಪ್ ಕೇಳಲಾದ ಸಿಂಪಲ್ ಪ್ರಶ್ನೆಗಳಿಗೂ ಉತ್ತರ ಕೊಡಲಾರದೆ ಜಾಣತನದಿಂದ ಜಾರಿಕೊಂಡರು. ಆದರೆ ನಿರೂಪಕ ಕೇಳಲಾದ ಹಲವಾರು ಪ್ರಶ್ನೆಗಳಿಗೆ ಉತ್ತರ ಒಂದೇ ಆಗಿತ್ತು..ಈಗ ಅದನ್ನ ಸೆಕ್ಯೂರಿಟಿ ಕಾರಣಗಳಿಂದ ತೋರಿಸೊಕ್ಕೆ ಆಗೋದಿಲ್ಲ..ಹೇಳೋದಕ್ಕೂ ಆಗೋದಿಲ್ಲ ಎಂಬ ಉತ್ತರವನ್ನೇ ಕೊಡುತ್ತಿದ್ದರು. Advertisements ವಿದೇಶದಲ್ಲಿ ಗೆದ್ದಿದ್ದೇನೆ ಎನ್ನಲಾದ ಕೆಲವು ಪ್ರಶಸ್ತಿ ಮೆಡಲ್ ಗಳನ್ನ ತೋರಿಸಿದರೆ ಹೊರತು ಜರ್ಮನಿ ಜಪಾನ್ ನಲ್ಲಿ ಗೆದ್ದಿದ್ದೇನೆ ಪ್ರಶಸ್ತಿ ಮೆಡಲ್ ಗಳನ್ನ ಗೆದ್ದಿದ್ದೇನೆ ಎಂದು ಹೇಳಿದ್ದ ಪ್ರತಾಪ್ ಅದಕ್ಕೆ ಸಂಬಂಧಪಟ್ಟ ವಿಡಿಯೊಗಳನ್ನಾಗಲಿ ಫೋಟೋಗಳನ್ನಾಗಲಿ ತೋರಿಸಲಿಲ್ಲ. ಮಾತಿನಲ್ಲಿಯೇ ಮಂಟಪ ಕಟ್ಟುತ್ತಿದ್ದಾರೆ ವಿನಃ ಯಾವುದಕ್ಕೂ ಸರಿಯಾದ ಉತ್ತರ ಕೊಡುತ್ತಿರಲಿಲ್ಲ. ಇನ್ನು ಅದೇ ಲೈವ್ ಕಾರ್ಯಕ್ರಮದಲ್ಲಿ ಅವರ ಸ್ನೇಹಿತ ಎಂದು ಹೇಳಲಾದ ಜಪಾನ್ ಟೋಕಿಯೊದಲ್ಲಿದ್ದ ದರ್ಶನ್ ಅವರೊಂದಿಗೆ ಕನೆಕ್ಟ್ ಮಾಡಲಾಗಿತ್ತು. ಆದರೆ ಪ್ರತಾಪ್ ದರ್ಶನ್ ಯಾರೆಂದು ನನಗೆ ಗೊತ್ತಿಲ್ಲ..ಮೇ ಬಿ ಕ್ಲಾಸ್ಮೆಟ್ಸ್ ಅಥ್ವಾ ಒಂದೇ ಕಾಲೇಜಿನ ಬೇರೆ ವಿಭಾಗದವರು ಆಗಿರಬಹುದು ಎಂದು ಹೇಳಿದ್ರು. ಇನ್ನು ಜಪಾನ್ ನಲ್ಲಿ ಏರೋಸ್ಪೇಸ್ ಬಗ್ಗೆ ರಿಸರ್ಚ್ ಮಾಡುತ್ತಿರುವ ದರ್ಶನ್ ನಾನು ಕೇವಲ ತಾಂತ್ರಿಕವಾಗಿ ಮಾತ್ರ ನಿಮಗೆ ಕೆಲವು ಪ್ರಶ್ನೆಗಳನ್ನ ಕೇಳುತ್ತೇನೆ ಎಂದ ದರ್ಶನ್ ಕೆಲವೊಂದು ಬೇಸಿಕ್ ಟೆಕ್ನಿಕಲ್ ಪ್ರಶ್ನೆಗಳನ್ನ ಪ್ರತಾಪ್ ಗೆ ಕೇಳಿದ್ರು. ಆದರೆ ಅದಕ್ಕೆ ಉತ್ತರಿಸದೆ ಜಾರಿಕೊಂಡ ಪ್ರತಾಪ್ ಈ ಸಮಯದಲ್ಲಿ ಅದಕ್ಕೆ ಉತ್ತರ ಕೊಡೋದಕ್ಕೆ ಆಗೋದಿಲ್ಲ..ಎಲ್ಲವನ್ನವು ಮೇಲ್ ಮಾಡುತ್ತೇನೆ ಎಂದು ಹೇಳಿದ್ರು. ದರ್ಶನ್ ಕೇಳಿದ ಯಾವುದೇ ಟೆಕ್ನಿಕಲ್ ಪ್ರಶ್ನೆಗಳಿಗೂ ಪ್ರತಾಪ್ ನಿಂದ ಉತ್ತರ ದೊರೆಯಲಿಲ್ಲ. ಇನ್ನು ಪ್ರತಾಪ್ ಮೊದಲಿಗೆ ಭಾಷಣ ಮಾಡಿದ್ದ ವಿಡಿಯೊಗಳನ್ನ ಪ್ಲೇ ಮಾಡಿ ಅದರ ಬಗ್ಗೆ ಪ್ರಶ್ನೆಗಳನ್ನ ಕೇಳಿದಾಗ ಅವರು ಭಾಷಣದಲ್ಲಿ ಹೇಳಿರುವ ಶೇ80 ಭಾಗ ಸುಳ್ಳು ಎಂದು ಸ್ವಯಂ ಪ್ರತಾಪ್ ಒಪ್ಪಿಕೊಂಡಿದ್ದು ಮನುಷ್ಯ ಅಂದಮೇಲೆ ತಪ್ಪು ಮಾಡಿಯೇ ಮಾಡುತ್ತಾನೆ..ಏನೋ ಮಾತಿನ ಭರದಲ್ಲಿ ಹೇಳಿಬಿಟ್ಟೆ ಎಂದು ಪ್ರತಾಪ್ ಹೇಳಿದ. ಇನ್ನು ಆಫ್ರಿಕಾ ಖಂಡದ ಸುಡಾನ್ ನಲ್ಲಿ ಹಾವು ಕಚ್ಚಿದ ಬಾಲಕಿಯೊಬ್ಬಳನ್ನ ಡ್ರೋನ್ ಮೂಲಕ ಮೆಡಿಸಿನ್ ತಲುಪಿಸಿ ಬದುಕಿಸಿದ ಕತೆಯ ಬಗ್ಗೆ ವಿಡಿಯೋಗಳಲ್ಲಿ ಬಹಳ ರೋಚಕವಾಗಿ ಹೇಳಿದ್ದ ಪ್ರತಾಪ್..ಖಾಸಗಿ ವಾಹಿನಿಯ ಲೈವ್ ನಲ್ಲಿ ಮಾತ್ರ ಅದು ನಾನೊಬ್ಬನೇ ಮಾಡಿಲ್ಲ.. ಬೇರೆ ಕಂಪನಿಯೊಂದಿಗೆ ಕೊಲಾಬ್ರೇಟ್ ಆಗಿ ಮಾಡಿರೋದು ಎಂದು ಹೇಳಿದ..ಇನ್ನು ಡ್ರೋನ್ ಹತ್ತು ಗಂಟೆ ಚಲಿಸಬೇಕಾದ ಅವಧಿಯನ್ನ ಕೇವಲ 9 ನಿಮಿಷದಲ್ಲಿ ತಲುಪಿ ಹಾವು ಕಚ್ಚಿದ ಬಾಲಕಿಗೆ ಮೆಡಿಸಿನ್ ನೀಡಿದೆ ಎಂಬುದರ ಬಗ್ಗೆ ಹಾಗೂ ಡ್ರೋನ್ ತಲುಪಿದ ಸ್ಪೀಡ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದೆ ಅದರಲ್ಲಿ ಕೆಲವೊಂದು ಸುಳ್ಳು ಎಂಬುದರ ಬಗ್ಗೆ ಪ್ರತಾಪ್ ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಲೈವ್ ಕಾರ್ಯಕ್ರಮದಲ್ಲಿ ಕೇಳಲಾದ ಬಹುತೇಕ ಪ್ರಶ್ನೆಗಳಿಗೆ i am not suppose to disclose.. i am not suppose tell ಎಂಬ ಹಾರೈಕೆಯ ಉತ್ತರವನ್ನೇ ನೀಡಿ ಜಾರಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 180/2017 ಕಲಂ 147,148,326,307,504 ಸಹಿತ 149 ಐಪಿಸಿ;- ದಿನಾಂಕ-15-10-2017 ರಂದು ರಾತ್ರಿ 12-30 ಗಂಟೆಗೆ ನಮ್ಮ ಠಾಣೆಯ ಹೆಚ್,ಸಿ-95 ರವರು ರಾಯಚೂರ ರೀಮ್ಸ ಆಸ್ಪತ್ರೆ ರಾಯಚೂರ ದಿಂದ ಗಾಯಾಳುವಾದ ತಾಯಪ್ಪ ತಂದೆ ನರಸಿಂಹಲು ಇತನ ತಂದೆಯಾದ ನರಸಿಂಹಲು ತಂದೆ ನಾಗಪ್ಪ ಪಸಲೊರ ಸಾ|| ಅಜಲಾಪೂರ ಇವರ ಹೇಳಿಕೆ ಪಡೆದುಕೊಂಡು ಬಂದ ಸಾರಂಶವೆನೆಂದರೆ ಇಂದು ನಾನು ನನ್ನ ಮಗ ತಾಯಪ್ಪ ಮತ್ತು ನಮ್ಮ ಅಣ್ಣನ ಮಗ ವಿಶ್ವನಾಥ 3 ಜನರು ಕೂಡಿ ಹೊಲದ ಕೆಲಸಕ್ಕೆ ಹೋದಾಗ ಸುಮಾರು 4 ಪಿಎಮ್ ಕ್ಕೆ ನನ್ನ ಮಗ ಎತ್ತುಗಳಿಗೆ ಮೇವು ಮಾಡುವ ಕಾಲಕ್ಕೆ ನಮ್ಮ ಹೊಲದಲ್ಲಿ ಆರೋಪಿತರು ಬಂದು ನನ್ನ ಮಗನಿಗೆ ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಕೊಯದು ಹೋಗಿರುತಾರೆ ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-180/2017 ಕಲಂ 147,148,326,307,504,ಸಂಗಡ 149 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 256/2017 ಕಲಂ: 379 ಐ.ಪಿ.ಸಿ;- ದಿನಾಂಕ 15.10.2017 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಪಿರ್ಯಾಧಿ ವಿಶ್ರಾಂತಿಯಲ್ಲಿದ್ದಾಗ ಕೊಂಕಲ ಕಡೆಯಿಂದ ಗುರುಮಠಕಲ ಕಡೆಗೆ ಒಬ್ಬ ವ್ಯಕ್ತಿ ತನ್ನ ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಭಾತ್ಮೀ ಬಂದ ಮೇರೆಗೆ ಠಾಣೆಗೆ ಬಂದು ಸಿಬ್ಬಂದಿಯನ್ನು ಮತ್ತು ಇಬ್ಬರೂ ಪಂಚರನ್ನು ಠಾಣೆಗೆ ಬರಮಾಡಿಕೊಂಡು ದಾಳಿಯ ಬಗ್ಗೆ ವಿವರಸಿ ಸಮಯ ಬೆಳಿಗ್ಗೆ 5.30 ಎ.ಎಂ ಕ್ಕೆ ಠಾಣೆಯಿಂದ ಬೋರಬಂಡ ಗ್ರಾಮದ ಕಡೆಗೆ ಹೊರಟು ಸಮಯ 5.45 ಎ.ಎಂಕ್ಕೆ ಬೂದುರ ಕ್ರಾಸನಲ್ಲಿ ಬೋರಬಂಡ ಕಡೆಯಿಂದ ಗುರುಮಠಕಲ ಕಡೆಗೆ ಒಂದು ಟ್ರ್ಯಾಕ್ಟರ ಬರುತ್ತಿರುವದನ್ನು ಕಂಡು ಜೀಪಿನಿಂದ ಕೆಳಗೆ ಇಳಿದು ನೋಡಲು ಸದರಿ ಟ್ರ್ಯಾಕ್ಟರ ಚಾಲಕ ಪಿರ್ಯಾಧಿ ಮತ್ತು ಸಿಬ್ಬಂದಿಯನ್ನು ನೋಡಿ ತನ್ನ ಟ್ರ್ಯಾಕ್ಟರನ್ನು 100-150 ಮೀಟರ ಅಂತರ ದೂರದಲ್ಲಿ ನಿಲ್ಲಿಸಿ ಓಡಿ ಹೋಗಿದ್ದು ಆತನು ಬೆನ್ನು ಹತ್ತಿ ಹಿಡಿಯಲು ಯತ್ನಿಸಿದರು ಸಹ ಸಿಕ್ಕಿರುವುದಿಲ್ಲ. ಸದರಿ ಟ್ರ್ಯಾಕ್ಟರ ಇಂಜೀನ್ ನಂ. ಎಪಿ-26-ಎಎ-9329 ಟ್ರ್ಯಾಲಿ ನಂ. ಎಪಿ-37-ಎವಾಯ್-6270 ಅಂತಾ ಇದ್ದು, ಚಾಲಕನು ಸಂಬಂಧಪಟ್ಟ ಇಲಾಖೆಯಿಂದ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸಕರ್ಾರಕ್ಕೆ ಯಾವುದೇ ರಾಜಧನ ತುಂಬಿದ ಮತ್ತು ರಾಯಲಿಟಿ ಪಡೆದುಕೊಳ್ಳದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತನ್ನ ಸ್ವಂತ ಲಾಭಗೋಸ್ಕರ ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ಅಪರಾಧ. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 396/2017.ಕಲಂ 279, 338 ಐ.ಪಿ.ಸಿ.;- ದಿನಾಂಕ: 15/10/2017 ರಂದು 8.30 ಪಿ.ಎಂಕ್ಕೆ ಫಿರ್ಯಾದಿ ಶ್ರೀ ಶರಣಪ್ಪ ತಂ/ ಚಂದ್ರಾಮಪ್ಪ ಶಹಾಪುರ ವ|| 42 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೇವಿನಹಳ್ಳಿ ತಾ|| ಶಹಾಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 15/10/2017 ರಂದು ಬೆಳಿಗ್ಗೆ 6.00 ಗಂಟೆಗೆ ನಾನು ಮತ್ತು ನನ್ನ ಅಣ್ಣತಮಕೀಯ ಕುಮಾರ ತಂ/ ದೇವಿಂದ್ರಪ್ಪ ಶಹಾಪುರ, ತಿಪ್ಪಣ್ಣ ತಂ/ ಸಿದ್ದಲಿಂಗಪ್ಪ ಶಹಾಪುರ ಮತ್ತು ನಮ್ಮ ಓಣಿಯ ಶೇಖರ ತಂ/ ಬಸಣ್ಣ ದೊಡ್ಡಸಗರ 4 ಜನರು ಕೂಡಿಕೊಂಡು ಕುಮಾರ ಈತನ ಕಿರಾಣಿ ಅಂಗಡಿ ಬಾಕಿ ವಸೂಲ ಮಾಡಲು ಕನ್ಯಾಕೊಳ್ಳೂರ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ನಾನು ಮತ್ತು ಶೇಖರ ಇಬ್ಬರು ಒಂದು ಮೋಟರ ಸೈಕಲದಲ್ಲಿ ಹಾಗೂ ಇನ್ನೊಂದು ಮೋಟರ ಸೈಕಲದಲ್ಲಿ ತಿಪ್ಪಣ್ಣ ಮತ್ತು ಕುಮಾರ ಇಬ್ಬರು ಕುಳಿತುಕೊಂಡಿದ್ದರು. ತಿಪ್ಪಣ್ಣನು ಮೋಟರ ಸೈಕಲ ನಡೆಸುತ್ತಿದ್ದನು. 8.30 ಎ.ಎಂ ಸುಮಾರಿಗೆ ಕನ್ಯಾಕೊಳ್ಳೂರ-ಹಳಿಸಗರ ಮೇನ್ ರೋಡ್ನಲ್ಲಿರುವ ಫಾರೆಸ್ಟ ಆಫೀಸ್ ದಾಟಿ ಮುಂದೆ ಇರುವ ಬ್ರಿಜ್ ಹತ್ತಿರ ಹೊರಟಿದ್ದಾಗ ತಿಪ್ಪಣ್ಣನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ರೋಡಿನಲ್ಲಿ ಒಂದು ನಾಯಿ ಅಡ್ಡ ಬಂದಿದ್ದರಿಂದ ಮೋಟರ ಸೈಕಲ್ ನಿಯಂತ್ರಣ ತಪ್ಪಿದ್ದರಿಂದ ಒಮ್ಮೆಲೆ ಮೋಟರ ಸೈಕಲನ್ನು ರೋಡಿನ ಎಡ ಸೈಡಿಗೆ ಕಟ್ ಮಾಡಿದನು ಆಗ ಮೋಟರ ಸೈಕಲ್ ಸ್ಕಿಡ್ಡಾಗಿ ರೋಡಿನ ಎಡ ಸೈಡಿನಲ್ಲಿ ಮೋಟರ ಸೈಕಲ್ ಬಿದ್ದಿತು. ಹಿಂದೆ ಬರುತ್ತಿದ್ದ ನಾನು ಮತ್ತು ಶೇಖರ ಇಬ್ಬರು ಹತ್ತಿರ ಹೋಗಿ ನೋಡಲಾಗಿ ಮೊಟರ ಸೈಕಲ್ ಹಿಂದೆ ಕುಳಿತಿದ್ದ ಕುಮಾರನಿಗೆ ಎಡಗಣ್ಣಿನ ಹತ್ತಿರ ತರಚಿದ ಗಾಯ, ಎಡ ಬುಜಕ್ಕೆ ಭಾರೀ ಒಳಪೆಟ್ಟಾಗಿತ್ತು, ಮೋಟರ ಸೈಕಲ್ ನಡೆಸುತ್ತಿದ್ದ ತಿಪ್ಪಣ್ಣನಿಗೆ ಯಾವುದೇ ಗಾಯವಗೈರೆ ಆಗಿರಲಿಲ್ಲ. ತಿಪ್ಪಣ್ಣನು ನಡೆಸುತ್ತಿದ್ದ ಮೋಟರ ಸೈಕಲ್ ನಂ. ಕೆಎ-33 ಯು-9744 ಅಂತಾ ಇರುತ್ತದೆ. ನಂತರ ಗಾಯಾಳು ಕುಮಾರನಿಗೆ ಉಪಚಾರ ಕುರಿತು ಅದೆ ಮೋಟರ ಸೈಕಲದಲ್ಲಿ ಕೂಡಿಸಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಕುಮಾರನಿಗೆ ಕಲಬುಗರ್ಿಯ ಕಾಮರಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು 8.30 ಪಿ.ಎಂ.ಕ್ಕೆ ಠಾಣೆಗೆ ತಡವಾಗಿ ಬಂದಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ಮೋಟರ ಸೈಕಲ್ ನಂ. ಕೆಎ-33 ಯು-9744 ನೇದ್ದರ ಚಾಲಕ ತಿಪ್ಪಣ್ಣ ತಂ/ ಸಿದ್ದಲಿಂಗಪ್ಪ ಶಹಾಪುರ ವ|| 38 ವರ್ಷ ಸಾ|| ಬೇವಿನಳ್ಳಿ ತಾ|| ಶಹಾಪುರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 396/2017 ಕಲಂ 279. 338 ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು. Posted by Inspector General Of Police North Eastern Range Kalaburagi. at 6:12 PM No comments: BIDAR DISTRICT DAILY CRIME UPDATE 16-10-2017 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-10-2017 ಮುಡಬಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 115/17 ಕಲಂ 379 ಐಪಿಸಿ :- ದಿನಾಂಕ:-15-10-2017 ರಂದು 1700 ಗಂಟೆಗೆ ಫಿರ್ಯಾದಿ ಶ್ರೀಮತಿ ಇಂದುಬಾಯಿ ಗಂಡ ಶಾಂತಪ್ಪಾ ಜಮಾದಾರ ವಯ: 40 ವರ್ಷ ಜಾ: ಬ್ಯಾಡರ್ ಸಾ: ಯಳವಂತಗಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯು ಕೂಲಿಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದು ಮನೆಯಲ್ಲಿ ಎರಡು ಹೋರಿ, ಒಂದು ಕೆಂಪು ಬಣ್ಣದ ಆಕಳು ಮತ್ತು ಆಕಳದ ಕರು ಇರುತ್ತವೆ. ಇವುಗಳನ್ನು ದಿನಾಲು ರಾತ್ರಿ ವೇಳೆಯಲ್ಲಿ ದನಕರುಗಳು ಕಟ್ಟಲು 09 ತಗಡಾ ಹಾಕಿ ತಯಾರಿಸಿದ ಕೊಟ್ಟಿಗೆಯ ಹೋರಗೆ ಖೂಲ್ಲಾ ಜಾಗದಲ್ಲಿ ಕಟ್ಟುತಿದ್ದು ದಿನಾಲು ರಾತ್ರಿ ಫಿರ್ಯಾದಿ ಗಂಡ ಅಲ್ಲಿಯೇ ಮಲಗುತ್ತಿದ್ದು, ದಿನಾಂಕ;-28/09/2017 ರಂದು ಪ್ರತಿ ನಿತ್ಯದಂತೆ ಹೋರಿ ಆಕಳು-ಕರು ಕೊಟ್ಟಿಗೆಯ ಹೋರಗೆ ಖೂಲ್ಲಾ ಜಾಗದಲ್ಲಿ ಕಟ್ಟಿ ರಾತ್ರಿ ಸುಮಾರು 2200 ಗಂಟೆಯವರೆಗೆ ಫಿರ್ಯಾದಿ ಗಂಡ ಕೊಟ್ಟಿಗೆಯಲ್ಲಿ ಇದ್ದು. ಫಿರ್ಯಾದಿ ಅತ್ತೆಯವರಗೆ ಆರಾಮ ಇಲ್ಲದ ಕಾರಣ ಅವರನ್ನು ನೋಡಿಕೊಂಡು ಬರಲು ಮನೆಗೆ ಬಂದಿರುತ್ತಾರೆ ದಿನಾಂಕ:-29/09/2017 ರಂದು ಮುಂಜಾನೆ 0600 ಗಂಟೆಗೆ ಆಕಳು ಹಾಲು ಹಿಂಡಲು ಕೊಟ್ಟಿಗೆಗೆ ಹೋಗಿ ನೋಡಲು ಕೊಟ್ಟಿಗೆಯಲ್ಲಿ ಎರಡು ಹೋರಿಗಳು ಮಾತ್ರ ಇರುತ್ತವೆ ಆದರೆ ಆಕಳು ಮತ್ತು ಆಕಳ ಕರು ಇರಲಿಲ್ಲಾ ತಕ್ಷಣ ಎಲ್ಲ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ ದಿನಾಂಕ:-29-09-2017 ರಂದು ನಸುಕಿನ ಜಾವ ಸುಮಾರು 0200 ಗಂಟೆಯ ಸುಮಾರಿಗೆ ಯಾರೊ ಅಪರಿಚಿತ ಕಳ್ಳರು ಕೊಟ್ಟಿಗೆಯ ಹೋರಗೆ ಕಟ್ಟಿದ ಒಂದು ಕೆಂಪು 08 ವರ್ಷದ ಆಕಳು ಅಂದಾಜು ಕಿಮ್ಮತ್ತ 20000/- ಹಾಗೂ ಒಂದು ಕೆಂಪು ಬಣ್ಣದ ಆಕಳು ಕರು 04 ತಿಂಗಳನದ್ದು ಅಂದಾಜು ಕಿಮ್ಮತ್ತ -4000/- ಹೀಗಿ ಒಟ್ಟು 24000/- ಬಲೆಬಾಳುವ ನನ್ನ ಆಕಳು ಮತ್ತು ಆಕಳು ಕರುವನ್ನು ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ಸಂಚಾರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 111/17 ಕಲಂ 279, 337 ಐಪಿಸಿ ಜೊತೆ 187 ಮೋ.ವಾಹನ ಕಾಯ್ದೆ :- ದಿನಾಂಕ: 15/10/2017 ಫಿರ್ಯಾದಿ ತನ್ನ ಹಿರೊ ಹೊಂಡಾ ಫ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ47/ಹೆಚ್4723 ನೇದ್ದರ ಮೇಲೆ ತನ್ನ ಅತ್ತಿಗೆಯಾದ ತುಳಜಮ್ಮಾ ಗಂಡ ಅಂಜಪ್ಪಾ, ವಯ 35 ವರ್ಷ, ಸಾ: ವಡ್ಡರ ಕಾಲೋನಿ ಬೀದರ ರವರಿಗೆ ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ಖಾಸಗಿ ಕೆಲಸ ಕುರಿತು ಬೀದರ ನಗರದಲ್ಲಿ ಹೋಗಿ ಮರಳಿ ಮೈಲೂರ ಚಿದ್ರಿ ರಿಂಗ ರೋಡ ಮುಖಾಂತರ ಗೊಯೆಲ್ ಲೇ ಔಟ ರಿಂಗ ರೋಡ ಪಕ್ಕದಲ್ಲಿರುವ ವಡ್ಡರ ಕಾಲೋನಿ ಕಡೆಗೆ ಹೊಗುತ್ತಿರುವಾಗ ಗೊಯೆಲ್ ಲೇ ಔಟ್ ಹತ್ತಿರ ಇರುವ ಯು ಟರ್ನ್ ನಲ್ಲಿ ತನ್ನ ಮೊಟಾರ ಸೈಕಲ ತಿರುಗಿಸಿಕೊಳ್ಳುತ್ತಿರುವಾಗ ಸಮಯ ಅಂಧಾಜು 1930 ಗಂಟೆಗೆ ಚಿದ್ರಿ ಕಡೆಯಿಂದ ಒಂದು ಮೊಟಾರ ಸೈಕಲ ನಂ. ಕೆಎ38ಯು5251 ನೇದ್ದರ ಚಾಲಕನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ, ತನ್ನ ಮೊಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಪರಿಣಾಮ ತುಳಜಮ್ಮಾ ಇವಳಿಗೆ ಬಲಕಾಲ ಮೊಳಕಾಲ ಕೆಳಗೆ ಗುಪ್ತಗಾಯ, ಹೊಟ್ಟೆಯಲ್ಲಿ ಗುಪ್ತಗಾಯ, ತಲೆಯಲ್ಲಿ ಗುಪ್ತಯವಾಗಿರುತ್ತದೆ. ಫಿರ್ಯಾದಿಗೆ ಯಾವುದೇ ರೀತಿಯ ಗಾಯವಾಗಿರುವದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಜನವಾಡಾ ಪೋಲಿಸ್ ಠಾಣೆ ಗುನ್ನೆ ನಂ 137/2017 ಕಲಂ, 341, 504, 376, ಐ,ಪಿ,ಸಿ ಜೊತೆ 3, 2, (v) ಎಸ್.ಸಿ/ಎಸ್.ಟಿ. ಕಾಯ್ದೆ 1989 :- ದಿನಾಂಕ 16-10-2017 ರಂದು 0015 ಗಂಟೆಗೆ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ.ಎಲ್.ಸಿ ಮಾಹಿತಿ ಮೇರೆಗ ಆಸ್ಪತ್ರಗೆ 0100 ಗಂಟೆಗೆ ಭೇಟ್ಟಿ ನೀಡಿ ನಂದಗಾವ ಗ್ರಾಮದ ಗಾಯಾಳು ಫಿರ್ಯಾದಿ ವಯ :21 ವರ್ಷದ ಮಹಿಳೆ ರವರು ನೀಡಿದ ದೂರಿನ ಸಾರಾಂಶವನೆಂದರೆ ದಿನಾಂಕ 15-10-2017 ರಂದು ಮಧ್ಯಾಹ್ನ 1400 ಗಂಟೆಯ ಸುಮಾರಿಗೆ ಫಿರ್ಯಾದಿಯು ಮಲವಿಸರ್ಜನೆಗೆ ಹೋಲದ ಕಡೆಗೆ ಹೋದಾಗ ಆರೋಪಿ ಸೀರಾಜ ತಂದೆ ನವಾಬಸಾಬ ಮಚಕುರಿ ಈತನು ಫಿರ್ಯಾಧಿಗೆ ಅವಾಚ್ಯ ಶಬ್ದಗಳೊಂದಿಗೆ ಬೈದು ಅವಳೊಂದಿಗೆ ಒತ್ತಾಯಪೂರ್ವಕವಾಗಿ ಜಬರಿ ಸಂಭೋಗ ಮಾಡಿರುತ್ತಾನೆ ನಂತರ ಫಿರ್ಯಾದಿಗೆ ಚಿಕತ್ಸೆಗೊಸ್ಕರ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಇರುತ್ತದೆ ಆರೋಪಿತನ ವಿರುದ್ದ ಪ್ರಕರಣ ಜನವಾಡಾ ಪೋಲಿಸ್ ಠಾಣೆ ಗುನ್ನೆ ನಂ 137/2017 ಕಲಂ, 341, 504, 376, ಐ,ಪಿ,ಸಿ ಜೊತೆ 3, 2, (v) ಎಸ್.ಸಿ/ಎಸ್.ಟಿ. ಕಾಯ್ದೆ 1989 ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. Posted by Inspector General Of Police North Eastern Range Kalaburagi. at 5:22 PM No comments: KALABURAGI DISTRICT REPORTED CRIMES ಶಹಾಬಾದ ನಗರ ಪೊಲೀಸ್ ಠಾಣೆ: ಹಲ್ಲೆ ಪ್ರಕರಣ: ದಿನಾಂಕ: 15/10/2017 ರಂದು ದೇವಕ್ಕಿ ಗಂಡ ಜೇಮಸಿಂಗ ಸಾ: ಶಹಾಬಾದ ರವರು ಪಿರ್ಯಾದಿ ಸಲ್ಲಿಸಿದ್ದೆನೇಂದರೆ ತಮ್ಮ ಮನೆಯ ಆಸ್ತಿ ಸಂಬಂದ ಮೈದುನ ರವಿ ಜಾಧವ ಆತನ ಹೆಂಡತಿ ಹಾಗೂ ನಾದನಿ ಎಲ್ಲರೊ ಸೇರೆ ತಮ್ಮ ಮನೆಯಲ್ಲಿ ಬಂದು ಅವಾಚ್ಯವಾಗಿ ಬೈಯ್ದು ಕೈಯಿಂದ ಬಡಿಗೆಯಿಂದ ಹೊಡೆದು ಖಾರದ ಪುಡಿ ಎರಚಿ ಹಾಕಿ ಜೀವದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಚೌಕ್ ಪೊಲೀಸ್ ಠಾಣೆ: ಕರ್ತವ್ಯಕ್ಕೆ ಅಡೆಪಡೆ ಪ್ರಕರಣ: ದಿನಾಂಕ: 15.10.2017 ರಂದು ಶ್ರೀ ಬಾಬು.ಎ.ಪಾಟೀಲ ಪಿಸಿ 506 ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ತಾನು ಮತ್ತು ಪಿ.ಎಸ್.ಐ (1) ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರೊಂದಿಗೆ ಜೀಪ್ ನಲ್ಲಿ ಚೌಕ ವೃತ್ತದಿಂದ ಗಂಜ್ ಕಡೆಗೆ ಹೋಗುವ ಮಾರ್ಗದಲ್ಲಿ KA32 EH 7624 ನೇದ್ದರ ಚಾಲಕ ಒನ್ ವೇ ಇಂದ ಬಂದು ಜಾಜಿ ಅಂಗಡಿಯವರ ಏದುರು ರೋಡಿನ ಮಧ್ಯದಲ್ಲಿ ವಾಹನ ನಿಲ್ಲಿಸಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡೆತಡೆ ಮಾಡಿದ್ದು ನಾನು ಸದರಿಯವನ ವಾಹನ ತೆಗೆಯಲು ಹೇಳಿದ್ದಕ್ಕೆ ನನಗೆ ಅವಾಚ್ಯ ಶಬಗ್ದಗಳಿಂಧ ಬಯ್ದು ಸುಗಮ ಸಂಚಾರ ಕುರಿತು ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು . ಆತನನ್ನು ಚೌಕ ಪೊಲೀಸ್ ಠಾಣೆಗೆ ಕರೆತಂದು ಸದರಿಯವನ ವಿರುದ್ದ ನಮ್ಮ ಕೆಲಸದಲ್ಲಿ ಅಡೆತಡೆ ಮಾಡಿ ನಮಗೆ ಕರ್ತವ್ಯನಿರ್ವಹಿಸಲು ಕಷ್ಟವಾಗಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .
ಪ್ರಪಂಚದ ಯಾವುದೇ ಭಾಗದಲ್ಲಿ ಲಭ್ಯವಿರುವ ಅಮೋಘ ಜ್ಞಾನಸಂಪತ್ತನ್ನು ಬೆರಳ ತುದಿಯಲ್ಲಿ ಕೆಲವೇ ಸೆಕೆಂಡಿನಲ್ಲಿ ತೋರಿಸುವ ವಿಜ್ಞಾನದ ಅದ್ಭುತ ಪವಾಡ ಅಂತರ್ಜಾಲ ಎಂಬುದರಲ್ಲಿ ಸಂದೇಹವಿಲ್ಲ. ಪ್ರಪಂಚದಾದ್ಯಂತ ಲಭ್ಯವಿರುವ ಈ ಜ್ಞಾನ ಸಂಪತ್ತು ಎಲ್ಲ ಜನತೆಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದ ವಿಜ್ಞಾನದ ದಿನಗಳಲ್ಲಿ ಬದುಕುವ ಸೌಭಾಗ್ಯ ನಮ್ಮದು. ಕೆಲವೇ ದಶಕಗಳ ಹಿಂದೆ ಯಾವ ಕೊಟ್ಯಾಧಿಪತಿಗೂ ಲಭ್ಯವಿಲ್ಲದ ಈ ಭಾಗ್ಯ ಇಂದು ಸಾಮಾನ್ಯ ಜನತೆಗೆ ಲಭ್ಯವಾಗುವಂತೆ ವಿಜ್ಞಾನ ಹಾಗೂ ತಂತ್ರಜ್ಞಾನ ಮಾಡಿರುವುದು ನಮ್ಮ ಕಾಲದ ಮಹಾ ವಿಸ್ಮಯ. ನಾವು ಇಂದು ಯಾವುದೇ ವಿಷಯದ ಮೇಲೆ ಹುಡುಕಿದರೂ ಅಗಾಧ ಜ್ಞಾನ ಮಾಹಿತಿ ಕುಳಿತಲ್ಲಿಗೆ ತಲುಪಿಸುವ ಸಾಮರ್ಥ್ಯ ಅಂತರ್ಜಾಲದ್ದಾಗಿದೆ. ಗ್ರಂಥಾಲಯಗಳಿಗಾದರೆ ಕಾಲಮಿತಿ ಇದೆ, ಅಲ್ಲಿ ನಮಗೆ ಬೇಕಾದ ಮಾಹಿತಿಯನ್ನು, ಪುಸ್ತಕಗಳನ್ನು ಹುಡುಕುವುದು ತುಂಬಾ ಪ್ರಯಾಸದ ಕೆಲಸ. ಆದರೆ ಇಂದು ಅಂತರ್ಜಾಲದಿಂದಾಗಿ ಯಾವ ಮಾಹಿತಿಯೂ ಬೇಕಾದರೆ ದಿನವಿಡೀ ಲಭ್ಯ. ಇದಕ್ಕೆ ಯಾವುದೇ ಸಮಯ ಮಿತಿ ಇಲ್ಲ. ಹುಡುಕಲು ಯಾವುದೇ ಪ್ರಯಾಸವಿಲ್ಲ. ಪ್ರಪಂಚಂದ ಯಾವುದೇ ದೇಶದಲ್ಲಿ ಕುಳಿತು ನಮ್ಮ ಭಾಷೆಯ ಪತ್ರಿಕೆ ಓದಬಹುದು, ನಮ್ಮ ಭಾಷೆಯ ಸಂಗೀತ ಕೇಳಬಹುದು. ಟಿವಿ ಮಾಧ್ಯಮದಲ್ಲಾದರೆ ಅವರು ಏನು ಪ್ರಸಾರ ಮಾಡುತ್ತಾರೋ ಅದನ್ನು ನಾವು ನೋಡಬೇಕು. ಅಂತರ್ಜಾಲದಲ್ಲಾದರೆ ನಮಗೆ ಬೇಕಾದ ದೃಶ್ಯಗಳನ್ನು ಹುಡುಕಿ ನಾವೇ ನೋಡಬಹುದು, ನಮಗೆ ಬೇಕಾದ ಸಂಗೀತವನ್ನು ನಾವೇ ಯೂಟ್ಯೂಬಿನಲ್ಲಿ ಅಥವಾ ಅಂಥದೇ ಜಾಲ ತಾಣದಲ್ಲಿ ಉಚಿತವಾಗಿ ಕೇಳಬಹುದು, ನಮ್ಮ ಗಣಕ ಯಂತ್ರಕ್ಕೆ ಬೇಕಾದ ಉತ್ತಮ ಗೀತೆಗಳನ್ನು ಇಳಿಸಿಕೊಂಡು ಸಂಗ್ರಹಿಸಿ ಇಡಬಹುದು. ನಮ್ಮ ದೃಶ್ಯಾವಳಿಗಳನ್ನು ನಾವೇ ಅಂತರ್ಜಾಲಕ್ಕೆ ಹಾಕಿ ಎಲ್ಲರೂ ನೋಡುವಂತೆ ಮಾಡಬಹುದು. ಪ್ರಪಂಚದಾದ್ಯಂತ ಸಮಾನ ಮನಸ್ಕರನ್ನು, ಸಮಾನ ಅಭಿರುಚಿ, ಆಸಕ್ತಿ ಇರುವ ವ್ಯಕ್ತಿಗಳನ್ನು ಹುಡುಕಿ ವಿಚಾರ ವಿನಿಮಯ ಮಾಡಬಹುದು. ಪ್ರಪಂಚದಾದ್ಯಂತ ಕೆಲವೇ ಕ್ಷಣಗಳಲ್ಲಿ ವೀಡಿಯೊ ಸಂವಾದ ನಡೆಸಬಹುದು. ವಿಕಿಪೀಡಿಯದಂಥ ಉಚಿತ ಮಾಹಿತಿ ಭಂಡಾರ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ ಮಹನೀಯರು ಅಭಿನಂದನಾರ್ಹರು. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮೊದಲಾದ ಕ್ಷೇತ್ರಗಳ ಸಾಮಾನ್ಯ ಗ್ರಂಥಾಲಯಗಳಲ್ಲಿ ಸಿಗದ ಅಗಾಧ ಮಾಹಿತಿ ಇಂದು ಅಂತರ್ಜಾಲದಿಂದಾಗಿ ಎಲ್ಲರಿಗೂ ಲಭ್ಯ. ಯಾವುದೇ ರೋಗದ ಬಗ್ಗೆ, ಔಷಧಿಗಳ ಬಗ್ಗೆ ಇಂದು ಕ್ಷಣಾರ್ಧದಲ್ಲಿ ಅಂತರ್ಜಾಲದಲ್ಲಿ ಮಾಹಿತಿ ಲಭ್ಯ. ಅಂತರ್ಜಾಲದ ಸಂಪರ್ಕದ ಮೂಲಕವೇ ಇಂದು ಬ್ಯಾಂಕುಗಳ ಎಟಿಎಂಗಳು ಕೆಲಸ ಮಾಡುತ್ತಿದ್ದು ದೇಶದ ಯಾವುದೇ ಭಾಗದಿಂದಲೂ ನಮ್ಮ ಬ್ಯಾಂಕ್ ಅಕೌಂಟಿನಲ್ಲಿರುವ ಹಣವನ್ನು ದಿನದ ಯಾವುದೇ ಸಮಯದಲ್ಲಾದರೂ ತೆಗೆಯುವ ಸೌಲಭ್ಯ ದೊರಕಿದೆ. ಮೊದಲಾದರೆ ಬ್ಯಾಂಕಿನ ವೇಳೆಯಲ್ಲಿ ಮಾತ್ರ ಅದೂ ನಮ್ಮ ಅಕೌಂಟ್ ಇರುವ ಬ್ಯಾಂಕ್ ಶಾಖೆಯಲ್ಲಿ ಮಾತ್ರ ನಿಮಿಷಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಹಣ ಪಡೆಯಬೇಕಾಗಿತ್ತು. ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಮೂಲಕ ಅಂಗಡಿಗಳಲ್ಲಿ ಹಣ ಪಾವತಿಸಬಹುದು ಅದೂ ಕೂಡ ಅಂತರ್ಜಾಲದ ಮೂಲಕವೇ ಕೆಲಸ ಮಾಡುವುದು. ಈಗ ಅಂತರ್ಜಾಲ ಸಂಪರ್ಕ ಇರುವ ಮೊಬೈಲ್ ಫೋನಿನಿಂದಲೂ ಹಣ ವರ್ಗಾವಣೆ ಮಾಡಬಹುದು. ಇ-ಮೇಲ್ ಮೂಲಕ ವಿಶ್ವದ ಯಾವುದೇ ಭಾಗದಿಂದ ಯಾವುದೇ ಭಾಗಕ್ಕೆ ಎಷ್ಟು ಮಂದಿಗೆ ಬೇಕಾದರೂ ಕ್ಷಣಾರ್ಧದಲ್ಲಿ ಪತ್ರಗಳನ್ನು ಉಚಿತವಾಗಿ ಕಳುಹಿಸಬಹುದು. ಪತ್ರದ ಜೊತೆ ವೀಡಿಯೊ, ಫೋಟೋ ಇನ್ನಿತರ ಮಾಹಿತಿಯನ್ನೂ ಉಚಿತವಾಗಿ ಕಳುಹಿಸಬಹುದು. ಇದು ಕೂಡ ಸಾಧ್ಯವಾಗಿರುವುದು ಅಂತರ್ಜಾಲದಿಂದಲೇ. ಇಂದು ಅಂತರ್ಜಾಲದಲ್ಲಿ ಸಾವಿರಾರು ಬ್ಲಾಗುಗಳು ಹಾಗೂ ವೆಬ್‍ಸೈಟುಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿವೆ. ಸಾಂಪ್ರದಾಯಿಕ ಪತ್ರಿಕೆ, ಟಿವಿ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಹಿಂಜರಿಯುತ್ತಿರುವಾಗ ಅಂತರ್ಜಾಲವು ಅಂತರ್ಜಾಲ ಸಂಪರ್ಕ ಹೊಂದಿರುವ ಪ್ರತಿ ಜನಸಾಮಾನ್ಯನಿಗೂ ತನ್ನ ಭಾವನೆಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದೆ. ಮುಂದೆ ಅಂತರ್ಜಾಲ ಹಾಗೂ ಗಣಕ ಯಂತ್ರದ ಬಳಕೆ ಹೆಚ್ಚಿದಂತೆ ಅಂತರ್ಜಾಲವು ಪ್ರಮುಖ ಮಾಧ್ಯಮವಾಗಿ ಮೂಡಿಬರಬಹುದು. ಇಂಥ ಅಂತರ್ಜಾಲವನ್ನು ಸಂಶೋಧಿಸಿದ್ದು ಟಿಮ್ ಬರ್ನರ್ಸ್ ಲೀ ಎಂಬ ಬ್ರಿಟಿಷ್ ಮೂಲದ ವಿಜ್ಞಾನಿ. ಲೀ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದಿಲ್ಲ ಹಾಗೂ ಇದನ್ನು ಬಳಸಲು, ಅಭಿವೃದ್ದಿಪಡಿಸಲು ಮುಕ್ತವಾಗಿರಿಸಿದ್ದಾರೆ. ತನ್ನ ಸಂಶೋಧನೆಗೆ ಪೇಟೆಂಟ್ ಪಡೆದಿದ್ದರೆ ಇಂದು ಲೀ ಕೊಟ್ಯಾಧಿಪತಿಯಾಗಬಹುದಿತ್ತು. ಓರ್ವ ನಿಜವಾದ ವಿಜ್ಞಾನಿ ಹಾಗೂ ಬುದ್ಧಿಜೀವಿ ತನ್ನ ಸಂಶೋಧನೆಗಳನ್ನು ವ್ಯಾಪಾರಕ್ಕೆ ಇಡುವುದಿಲ್ಲ ಹಾಗೂ ಮಾನವಕುಲದ ಉದ್ಧಾರಕ್ಕೆ ತನ್ನ ಸಂಶೋಧನೆಯನ್ನು ಧಾರೆಯೆರೆಯುತ್ತಾನೆ. ಇದಕ್ಕೆ ಬರ್ನರ್ಸ್ ಲೀ ಉತ್ತಮ ನಿದರ್ಶನ.
ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಖಾಲಿ ಇರುವ ಜೂನಿಯರ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನವಾಗಿದೆ. Suvarna News Bengaluru, First Published Jul 24, 2022, 3:40 PM IST ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಬಿಪಿಸಿಎಲ್‌) ಸಂಸ್ಥೆಯಲ್ಲಿ ಹೊಸ ನೇಮಕಾತಿಗಳು ಶೀಘ್ರವೇ ನಡೆಯಲಿದ್ದು, ಈ ಕುರಿತಾಗಿ ಭಾರತ್‌ ಪೆಟ್ರೋಲಿಯಂ ಸಂಸ್ಥೆ ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಶೀಘ್ರವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಶೀಘ್ರವೇ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ಬೇಕಾದ ದಾಖಲೆಗಳು, ವಿದ್ಯಾರ್ಹತೆ ಹಾಗೂ ವಯೋಮಿತಿ, ಅರ್ಜಿ ಸಲ್ಲಿಕೆ ಹೇಗೆ ಎಂಬ ವಿಚಾರಗಳ ಕುರಿತು ಕೆಳಗಡೆ ಮಾಹಿತಿ ನೀಡಲಾಗಿದೆ. ಹುದ್ದೆಗಳು, ವಿದ್ಯಾರ್ಹತೆ: ಬಿಪಿಸಿಎಲ್‌ ಸಂಸ್ಥೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯಯಲ್ಲಿ ಅಧಿಕೃತವಾಗಿ ಹುದ್ದೆಗಳ ಸಂಖ್ಯೆ ತಿಳಿಸಿಲ್ಲವಾದ್ದರಿಂದ ಅರ್ಜಿ ಸಲ್ಲಿಸಲು ಸಂಖ್ಯೆಗಳ ಮಿತಿಯಿರುವುದಿಲ್ಲ. ಆದರೆ ಜೂನಿಯರ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯನ್ನು ಸಂಸ್ಥೆ ನಿರೀಕ್ಷಿಸಿದೆ. ಇನ್ನು ಅಭ್ಯರ್ಥಿಗಳ ವಿದ್ಯಾರ್ಹತೆ ಕುರಿತು ನಿಗದಿ ಮಾಡಲಾಗಿದ್ದು, ಜೂನಿಯರ್‌ ಎಕ್ಸಿಕ್ಯೂಟಿವ್‌( ಆಪರೇಷನ್ಸ್‌) ಹಾಗೂನ ಜೂನಿಯರ್‌ ಎಕ್ಸಿಕ್ಯೂಟಿವ್‌( ಅಕೌಂಟೆಂಟ್‌) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಾರ್ಟೆಡ್‌ ಅಕೌಂಟೆಂಟ್‌(ಸಿಎ), ಸಿಎಂಎ, ಪದವಿ ಪಡೆದಿರಬೇಕು. ಅಂತೆಯೆ ಜೂನಿಯರ್‌ ಎಕ್ಸಿಕ್ಯೂಟಿವ್‌(ಕಾರ್ಯಾಚರಣೆ) ಹುದ್ದೆಗೆ ಡಿಪ್ಲೊಮಾ ಇನ್‌ ಇಂಜಿನಿಯರಿಂಗ್‌/ ಬಿಎಸ್ಸಿ/ ಬಿ.ಇ/ಬಿ.ಟೆಕ್‌ ಇನ್‌ ಮೆಕ್ಯಾನಿಕಲ್‌/ ಎಲೆಕ್ಟ್ರಿಕಲ್‌/ ಇನ್‌ಶ್ಟು್ರಮೆಂಟೇಷನ್‌/ ಎಲೆಕ್ಟ್ರಾನಿಕ್ಸ್‌/ ಸಿವಿಲ್‌/ ಕೆಮಿಕಲ್‌ ಇಂಜಿನಿಯರಿಂಗ್‌ ಇವುಗಳಲ್ಲಿ ಯಾವುದಾದರು ಒಂದು ಪದವಿ ಪಡೆದಿರಬೇಕು. ವಯಸ್ಸು ಹಾಗೂ ಅರ್ಜಿ ಶುಲ್ಕ: ಪೆಟ್ರೋಲಿಯಂ ಸಂಸ್ಥೆಯ ನೇಮಕಾತಿ ನಿಯಮದ ಅನ್ವಯ ಜೂನಿಯರ್‌ ಎಕ್ಸಿಕ್ಯೂಟಿವ್‌( ಆಪರೇಷನ್ಸ್‌) ಹುದ್ದೆಯ ಅಭ್ಯರ್ಥಿ ಗರಿಷ್ಠ 30ರಿಂದ 32 ವರ್ಷದೊಳಗೆ ಇರಬೇಕಿದೆ.ಇನ್ನು ಜೂನಿಯರ್‌ ಎಕ್ಸಿಕ್ಯೂಟಿವ್‌( ಅಕೌಂಟೆಂಟ್‌) ಹಾಗೂ ಜೂನಿಯರ್‌ ಎಕ್ಸಿಕ್ಯೂಟಿವ್‌(ಕಾರ್ಯಾಚರಣೆ) ಹುದ್ದೆಯ ಅಭ್ಯರ್ಥಿಗೆ ಗರಿಷ್ಠ 30ರಿಂದ 35 ವರ್ಷದೊಳಗಿರಬೇಕು. ಸರ್ಕಾರಿ ನಿಯಮದ ಅನ್ವ ಯ ಒಬಿಸಿ ಅಭ್ಯರ್ಥಿಗೆ 03 ವರ್ಷ, ಎಸ್‌ಸಿ/ಎಟಿ ಅಭ್ಯರ್ಥಿಗೆ 05 ವರ್ಷ ಹಾಗೂ ಪಿಡಬ್ಲ್ಯುಡಿ ಅಭ್ಯರ್ಥಿಗೆ 10 ವರ್ಷ ರಿಯಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕದ ಕುರಿತೂ ತಿಳಿಸಲಾಗಿದ್ದು, ಪಿಡಬ್ಲ್ಯುಡಿ,ಎಸ್‌ಸಿ/ಎಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ರಿಯಾಯಿತಿ ನೀಡಲಾಗಿದ್ದು, ಸಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 500 ರು. ನಿಗದಿ ಮಾಡಲಾಗಿದೆ. ಅರ್ಜಿ ಶುಲ್ಕವನ್ನು ನೆಫ್‌್ಟಅಥವಾ ಆರ್‌ಟಿಜಿಎಸ್‌ ವಿಧಾನದಲ್ಲಿ ಪಾವತಿಸಬೇಕಿದೆ. ಅರ್ಜಿ ಸಲ್ಲಿಕೆ, ಆಯ್ಕೆ: ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಕೆ ಹೇಗೆ ಹಾಗೂ ಆಯ್ಕೆ ಪ್ರಕ್ರಿಯೆ ಹೇಗೆ ಮಾಡಲಾಗುತ್ತದೆ ಎಂಬ ವಿವರಗಳನ್ನು ನೀಡಲಾಗಿದೆ. ಅಭ್ಯರ್ಥಿಯು ಮೊದಲು ಅಧಿಸೂಚನೆಯನ್ನು ಸಂಪೂರ್ಣ ಓದಬೇಕು. ಬಳಿಕ ಬಿಪಿಸಿಎಲ್‌ನ ಅಧಿಕೃತ ವೆಬ್‌ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ದೊರೆಯುವ ಆನ್‌ಲೈನ್‌ ನಮೂನೆ ಅರ್ಜಿಯನ್ನು ಸರಿಯಾದ ಮಾಹಿತಗಳ ಮೂಲಕ ಭರ್ತಿಗೊಳಿಸಬೇಕು. ಅರ್ಜಿಯ ಜೊತೆಗೆ ಆಧಾರ್‌ಕಾರ್ಡ್‌, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಮೇಲೆ ತಿಳಿಸಲಾಗಿರುವ ಪದವಿಯ ಅಂಕಪಟ್ಟಿಗಳು, ಜಾತಿ ಮೀಸಲು ಪ್ರಮಾಣಪತ್ರಗಳ ನಕಲುಪ್ರತಿಗಳನ್ನು ಲಗತ್ತಿಸಿ ಕಳುಹಿಸಬೇಕಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಲಿಖಿತ ಪರೀಕ್ಷೆ ನಡೆಸಲಿದ್ದು, ಬಳಿಕ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗೆ ಒಳಪಡಿಸಲಾಗುವುದು. ಅಂತಿಮವಾಗಿ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ. ವೇತನ ಶ್ರೇಣಿ ಹೀಗಿದೆ: ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆಯು ಹೊರಡಿಸಿರುವ ಅಧಿಸೂಚನೆಯಲ್ಲಿ ಇರುವಂತೆ ಮೇಲಿನ ಮೂರು ವಿಭಾಗಗಳ ಉದಯೋಗಿಗಳಿಗೆ ಮಾಸಿಕವಾಗಿ 30,000ರು. ಇಂದ 1.20 ಲಕ್ಷ ರು.ವರೆಗೆ ಪಾವತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಚಿತ್ರರಸಿಕರನ್ನು ರಂಜಿಸ್ತಿರುವ ಅರ್ಜುನ್ ಸರ್ಜಾ ಇದೀಗ ಮಗಳ ಸಿನಿಮಾಗೆ ಮತ್ತೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಪ್ರೇಮ ಬರಹ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಅಡಿ ಇಟ್ಟಿದ್ದರು. ಈ ಸಿನಿಮಾಗೆ ಅರ್ಜುನ್ ಸರ್ಜಾ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಆದಾದ ಬಳಿಕ ಐಶ್ವರ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಈಗ ಮತ್ತೆ ಅರ್ಜುನ್ ಸರ್ಜಾ ಮಗಳ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ. ಅರ್ಜುನ್ ತಮ್ಮದೇ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ನಡಿಯಲ್ಲಿ ನಿರ್ಮಿಸಲಿರುವ ೧೫ನೇ ಸಿನಿಮಾದ ಮೂಲಕ ಮಗಳು ಐಶ್ವರ್ಯ ಅರ್ಜುನ್ ಅವರನ್ನು ತೆಲುಗಿನಲ್ಲಿ ನಾಯಕ ನಟಿಯಾಗಿ ಪರಿಚಯಿಸ್ತಿದ್ದಾರೆ. ಐಶ್ವರ್ಯಾ ಅರ್ಜುನ್ ನಾಯಕಿಯಾಗಿ ನಟಿಸ್ತಿರುವ ಈ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಯುವ ಮತ್ತು ಭರವಸೆಯ ನಟ ವಿಶ್ವಕ್ ಸೇನ್ ನಾಯಕನಾಗಿ ಅಭಿನಯಿಸ್ತಿದ್ದಾರೆ. ವಿಶ್ವಕ್ ಸೇನ್ ನಿರ್ದೇಶನ ಫಲಕ್ನುಮಾ ದಾಸ್ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದ್ದು, ಸದ್ಯ ದಾಸ್ ಕಾ ಧಮ್ಕಿ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಯಲೀಗ ಹೊಸ ಚಿತ್ರವನ್ನು ವಿಶ್ವಕ್ ಸೇನ್ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ವಿಲನ್ ಗೆಟಪ್ ನಲ್ಲಿ ಜಗಪತಿ ಬಾಬು ನಟಿಸಲಿದ್ದಾರೆ. ಇದೊಂದು ರೋಡ್ ಟ್ರಿಪ್ ಸಿನಿಮಾವಾಗಿದ್ದು, ಶೀರ್ಘದಲ್ಲಿಯೇ ಶೂಟಿಂಗ್ ಶುರುವಾಗಲಿದೆ. ಬಳಿಕ ಉಳಿದ ಪಾತ್ರ ವರ್ಗವನ್ನು ಚಿತ್ರತಂಡ ಪರಿಚಯಿಸಲಿದೆ. ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತ ಸಮಾರಂಭ ಜರುಗಿದ್ದು, ಪವನ್ ಕಲ್ಯಾಣ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭಾ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.
ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ, ರಸ್ತೆಯಲ್ಲಿ ಅಪಘಾತವಾದ್ರೆ ಅಧಿಕಾರಿಗಳ ವಿರುದ್ಧ‌ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇನೆಂದು ವಾರ್ನಿಂಗ್ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಒಂದು ತಿಂಗಳಲ್ಲಿ ಕಂಫ್ಲೀಟ್ ಮಾಡುವಂತೆ ಖಡಕ್ ಎಚ್ಚರಿಕೆ. Suvarna News First Published Oct 1, 2022, 5:16 PM IST ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ (ಅ.1): ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ ಪ್ರಗತಿ ಪರಿಶಿಲನಾ ಸಭೆಯು ಜಿಲ್ಲಾ ಪಂಚಾಯತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅಧಿಕಾರಿಗಳನ್ನು ಕೇಂದ್ರ ಸಚಿವ ಜೋಶಿ ತರಾಟೆಗೆತ್ತಿಕೊಂಡರು. ನಾನು ಕೇಂದ್ರ ಸರಕಾರದಿಂದ ಹಣವನ್ನ ಬಿಡುಗಡೆ ಮಾಡಿಕ್ಕೊಂಡು ಬರುತ್ತೇನೆ ಅಧಿಕಾರಿಗಳು ಯಾಕೆ ಕೆಲಸವನ್ನ ಮಾಡುತ್ತಿಲ್ಲ. ನಾನು ಹೇಳಿದ ಹಾಗೆ ಕೆಲಸವನ್ನ ಅಧಿಕಾರಿಗಳು ಮಾಡಬೇಕು ಎಂದು ಜೋಶಿ ಕಿಡಿಕಾರಿದರು. 2014 ರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಹಿತಿಯನ್ನ ಕೇಳಿದ್ರೆ ಅಧಿಕಾರಿಗಳು ಉತ್ತರವನ್ನ‌ ಕೊಡದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ. ಧಾರವಾಡದ ಜ್ಯೂಬಲಿ ಸರ್ಕಲ್ ನಿಂದ ನರೇಂದ್ರ ಬೈಪಾಸ್ ಅವರೆಗೂ ಐದು ಕೀಮಿ‌ ಸಿಸಿ ರಸ್ತೆಯನ್ನ ನಿರ್ಮಾಣ ಮಾಡಲು 2014 ರಲ್ಲಿ 86 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿತ್ತು. ಆದರೆ 7 ವರ್ಷ ಕಳೆದರೂ ಇನ್ನು ರಸ್ತೆ ಮುಕ್ತಾಯ ವಾಗದ ಕಾರಣಕ್ಕೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಇನ್ನು ಜ್ಯೂಬಲಿ‌ ಸರ್ಕಲ್ ನಿಂದ ನರೇಂದ್ರ ಬೈಪಾಸ್ ವರೆಗೂ ಅಪಘಾತಗಳು ಆದ್ರೆ ಸಂಭಂದಪಟ್ಟ ಅಧಿಕಾರಿಗಳ ಮೇಲೆ ನಾನೇ ಕ್ರಿಮಿನಲ್ ಕೇಸು ದಾಖಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಡಕ್ ಎಚ್ಚರಿಕೆ‌ ನೀಡಿದರು. ಇನ್ನು ಒಂದು ತಿಂಗಳಲ್ಲಿ ಉಳಿದಿರುವ ಕಾಮಗಾರಿಯನ್ನ ಮುಗಿಸಿ ಕೊಡಬೇಕು ಇಲ್ಲದಿದ್ದರೆ ಕಠಿಣ ಕ್ರಮವನ್ನ ನಾನೆ ತೆಗೆದುಕ್ಕೊಳ್ಳುತ್ತೆನೆ ಎಂದು ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಯಾದ ಹುರಕಡ್ಲಿಗೆ ಖಡಕ್ ವಾರ್ನಿಂಗ್ ನೀಡಿದರು. ಇನ್ನು ಕೇವಲ ಧಾರವಾಡ ಜ್ಯೂಬಲಿ ಸರ್ಕಲ್ ನಿಂದ ಅಷ್ಟೆ ಅಲ್ಲ, ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ರಸ್ತೆ ಗಳನ್ನ ಆದಷ್ಟು ಬೇಗ ಮುಗಿಸಿ ಕೊಡಬೇಕು ಇಲ್ಲದಿದ್ರೆ. ನಾನು ನಿಮ್ಮ‌ ಮೆಲೆ ಕ್ರಮವನ್ನ ತೆಗೆದುಕ್ಕೊಳ್ಳಬೇಕಾಗುತ್ತೆ ಎಂದು ಸಭೆಯಲ್ಲಿ ಬಾಗಿಯಾಗಿದ್ದ ಎಲ್ಲ ಅಧಿಕಾರಿಗಳಿಗಳಿಗೆ ಎಚ್ಚರಿಕೆ ಕೊಟ್ಟರು. ಧಾರವಾಡ: ಶೀಘ್ರದಲ್ಲೇ IIT Campus ಉದ್ಘಾಟನೆ - ಪ್ರಲ್ಹಾದ್ ಜೋಶಿ ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಲ ವಿಭಾಗದ ಅಧಿಕಾರಗಳು ಕೆಲಸ ಮಾಡಲು ಆಸಕ್ತಿ ತೋರಿಸದೆ ಇರುವುದರಿಂದ ಕೆಲಸಗಳು ಆಗ್ತಾ ಇಲ್ಲ. ಯಾವ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲ ಅಂತವರನ್ನ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಕೂಡ ಇದೇ ವೇಳೆ ಕೊಟ್ಟಿದ್ದಾರೆ. NHAI Guinness Record 108 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಾಣ,ಗಿನ್ನಿಸ್ ದಾಖಲೆ ಬರೆದ ಭಾರತ! ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೇಗಡೆ, ಜಿಲ್ಲಾ ಪಂಚಾಯತ ಸಿಇಓ ಸುರೇ ಶ ಇಟ್ನಾಳ್, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಎಸ್ಪಿ ಲೋಕೇಶ ಜಗಲಾಸರ್, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಕಮಿಷನರ್ ಗೋಪಾಲಕೃಷ್ಟ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು: ದೇಶಾನ್ ಬ್ರೌನ್, ರಾಹುಲ್ ಭೇಕೆ ಮತ್ತು ನಾಯಕ ಸುನಿಲ್ ಛತ್ರಿ ಅವರ ಅದ್ಭುತ ಕಾಲ್ಬಳಕದ ನೆರವಿನಿಂದ ಬೆಂಗಳೂರು ಎಫ್ಸಿ ಪ್ರಸಕ್ತ ಐಎಸ್ಎಲ್ ಟೂರ್ನಿಯ ತನ್ನ 14ನೇ ಪಂದ್ಯದಲ್ಲಿ ಒಡಿಶಾ ಎಫ್ಸಿ ವಿರುದ್ದ ಅಕಾರಯುತ ಜಯ ಗಳಿಸಿ ತವರಿನಲ್ಲಿ ಮತ್ತೆ ಜಯದ ಹಳಿಗೆ ಮರಳಿದೆ. ಮನೆಯಂಗಳ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಜಿದ್ದಾಜಿದ್ದಿನ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರು ಎಫ್ ಸಿ 3-0 ಅಂತರದಲ್ಲಿ ಒಡಿಶಾ ತಂಡವನ್ನು ಸೋಲಿಸಿ ಪೂರ್ಣ ಮೂರು ಅಂಕ ಕಲೆಹಾಕಿತು. ಇದರೊಂದಿಗೆ ಆಡಿದ 14 ಪಂದ್ಯಗಳಿಂದ 25 ಅಂಕ ಸಂಪಾದಿಸಿದ ಸುನಿಲ್ ಛಟ್ರಿ ಪಡೆ, ಪ್ರತಿರ್ಸ್ಪಗಳಾದ ಎಟಿಕೆ ಮತ್ತು ಎಫ್‌ಸಿ ಗೋವಾ ತಂಡಗಳನ್ನು ಕ್ರಮವಾಗಿ 2 ಮತ್ತು 3ನೇ ಸ್ಥಾನಕ್ಕೆ ದೂಡಿ ಅಂಕಪಟ್ಟಿಯ ಮೊದಲ ಸ್ಥಾನ ಅಲಂಕರಿಸಿದೆ. ಬೆಂಗಳೂರು ಪರ ದೇಶಾನ್ ಬ್ರೌನ್ (23ನೇ ನಿಮಿಷ), ರಾಹುಲ್ ಭೇಕೆ (25ನೇ ನಿಮಿಷ) ಮತ್ತು ಸುನಿಲ್ ಛಟಿ(61-ಪೆನಾಲಿ ನಿಮಿಷ) ತಲಾ ಒಂದು ಗೋಲ್ ದಾಖಲಿಸಿ ಜಯದ ರೂವಾರಿಯೆನಿಸಿದರು. ಪೆನಾಲ್ಟಿ ಮೂಲಕ 61ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಮುನ್ನಡೆಯನ್ನು 3-0ಗೆ ವಿಸ್ತರಿಸಿದ ಛ, ಈ ಋತುವಿನಲ್ಲಿ ತಮ್ಮ 9ನೇ ಗೋಲ್ ದಾಖಲಿಸಿದರು. ಈ ಮೂಲಕ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿರುವ ಅರಿಡಾನೆ (9 ಗೋಲ್)ಗೆ ಪ್ರಬಲ ಪೈಪೋಟ ಒಡ್ಡಿದರು. ಇದಕ್ಕೂ ಮುನ್ನ ಪ್ರಥಮಾರ್ಧಕ್ಕೆ ಬ್ರೌನ್ ಮತ್ತು ಭೇಕೆ ಸಾಹಸದಿಂದ ಬೆಂಗಳೂರು ಎಫ್ ಸಿ 2-0 ಅಂತರದಲ್ಲಿ ಮೇಲುಗೈ ಸಾಸುವ ಮೂಲಕ ಪ್ರವಾಸಿ ತಂಡದ ಮೇಲೆ ಸಂಪೂರ್ಣ ಒತ್ತಡ ಹೇರಿತು. ಹಿನ್ನಡೆ ತಗ್ಗಿಸುವ ಹಾದಿಯಲ್ಲಿ ಒಡಿಶಾ ತಂಡ 33 ಮತ್ತು 34ನೇ ನಿಮಿಷದಲ್ಲಿ ಆಟಗಾರರ ಬದಲಾವಣೆಗೆ ಒತ್ತು ನೀಡಿತಾದರೂ ಇದು ತಂಡದ ಮೇಲೆ ಯಾವುದೇ ಪ್ರಯೋಜನ ಬೀರಲಿಲ್ಲ . ಪ್ರಮಾದಕ್ಕಾಗಿ 37ನೇ ನಿಮಿಷದಲ್ಲಿ ಬ್ಲೂಸ್ ಆಟಗಾರ ಖಾದ್ರಾ ರೆಫರಿಯಿಂದ ಎಚ್ಚರಿಕೆಗೆ ಗುರಿಯಾದರು. ಇದೇ ತಪ್ಪಿಗಾಗಿ ಪ್ರವಾಸಿ ತಂಡದ ಶುಭಂ ಸಹ ವಿರಾಮಕ್ಕೂ ಮುನ್ನ ಹಳದಿ ಕಾರ್ಡ್ ಪಡೆದರು. ಆತಿಥೇಯರ ಆಕ್ರಮಣಕಾರಿ ಆಟದ ಮುಂದೆ ಸಂಪೂರ್ಣ ಮಂಕಾದ ಒಡಿಶಾ ಆಟಗಾರರು ಹೊಂದಾಣಿಕೆ ಆಟದಲ್ಲಿ ಹಿಂದೆ ಬಿದ್ದರು. ಹೀಗಾಗಿ 28ನೇ ನಿಮಿಷದಲ್ಲಿ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಅವರ ನೆರವಿನಿಂದ ಮತ್ತೊಂದು ಗೋಲ್ ಬಾರಿಸುವ ಅವಕಾಶ ಆತಿಥೇಯರಿಗೆ ಸಿಕ್ಕಿಸಿತು. ಆದರೆ ಪ್ರವಾಸಿ ತಂಡದ ರಕ್ಷಣಾತ್ಮಕ ಆಟ ಬ್ಲೂಸ್‌ಗೆ ನಿರಾಸೆ ಮೂಡಿಸಿತು. ಮೊದಲ ಗೋಲಿನ ಸಂಭ್ರಮದಿಂದ ಹೊರಬರುವ ಮುನ್ನವೇ ಮತ್ತೊಂದು ಗೋಲ್ ಬಾರಿಸಿದ ಬಿಎಫ್‌ಸಿ, 25 ನಿಮಿಷಗಳಲ್ಲೇ 2-0 ಅಂತರದ ಮುನ್ನಡೆ ಗಳಿಸಿತು. ಡಿಮಾಸ್ ಡೆಲ್ಲಾಡೊ ಮತ್ತು ಉದಾಂತ ಸಿಂಗ್ ಅವರ ಅದ್ಭುತ ನೆರವಿನಿಂದ ರಾಹುಲ್ ಭೇಕೆ ತಂಡದ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು. ಪಂದ್ಯದ 15ನೇ ನಿಮಿಷದಲ್ಲಿ ಬೆಂಗಳೂರು ಎಫ್ಸಿ ಖಾತೆ ತೆರೆಯುವ ಅವಕಾಶ ಗಿಟ್ಟಿಸಿತು. ಆದರೆ ದೇಶಾನ್ ಬ್ರೌನ್ ಅವರ ವಿಫಲಯತ್ನ ಕೈಗೊಡದ ಕಾರಣ ಆತಿಥೇಯರ ಆರಂಭಿಕ ಮುನ್ನಡೆಯ ಯತ್ನ ಸಾಕಾರಗೊಳ್ಳಲಿಲ್ಲ. ಆದಾಗ್ಯೂ ಆತಿಥೇಯರ ಆಕ್ರಮಣಕಾರಿ ಆಟ ಮಾತ್ರ ನಿಲ್ಲಲಿಲ್ಲ. ಇದರ ಫಲವಾಗಿ 23ನೇ ನಿಮಿಷದಲ್ಲಿ ದೇಶಾನ್ ಬ್ರೌನ್ ಅಮೋಘವಾದ ಗೋಲ್ ಬಾರಿಸಿ ಬ್ಲೂಸ್ ತಂಡಕ್ಕೆ 1-0 ಅಂತರದ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದರು. ಎರಿಕ್ ಪಾರ್ತಾಲು ನೀಡಿದ ಸುಂದರ ಪಾಸನ್ನು ಗೋಲಾಗಿ ಪರಿವರ್ತಿಸಿದ ಬ್ರೌನ್, ಬ್ಲಾಸ್ ಬಳಗದಲ್ಲಿ ಸಂತವನ್ನು ಹಿಮ್ಮಡಿಗೊಳಿಸಿದರು. ಒಂದು ವಾರದ ಹಿಂದಷ್ಟೇ ತಂಡಕ್ಕೆ ಸೇರ್ಪಡೆಗೊಂಡಿದ್ದ ಬ್ರೌನ್, ತಮ್ಮ ಆರಂಭಿಕ ಪಂದ್ಯದಲ್ಲೇ ಗೋಲಿನ ಖಾತೆ ತೆರೆದು ತಮ್ಮ ಒಪ್ಪಂದಕ್ಕೆ ಇನ್ನಷ್ಟು ಮೆರಗು ನೀಡಿದರು. ಇದಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿಯೊಂದಿಗೆ ಬಿಎಫ್ಸಿ ಕಣಕ್ಕಿಳಿದರೆ, ಅದರದ್ದೇ ನೆಲದಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಉದ್ದೇಶದೊಂದಿಗೆ ಪ್ರವಾಸಿ ಒಡಿಶಾ ತಂಡ ಅಖಾಡಕ್ಕಿಳಿಯಿತು. ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಇದೇ 30ರಂದು ತವರಿನಂಗಳದಲ್ಲೇ ಹೈದರಾಬಾದ್ ಎಫ್ ಸಿ ತಂಡವನ್ನು ಎದುರಿಸಲಿದೆ.
ಬೆಳಗಾವಿ, ಆ.8(ಕರ್ನಾಟಕ ವಾರ್ತೆ): ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಳೆಯ ನಡುವೆಯೂ ನಗರದ ವಿವಿಧ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನೀರು ನುಗ್ಗಿದ ಮನೆಗಳಿಗೆ 24 ಗಂಟೆಗಳಲ್ಲಿ ತಲಾ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಯಳ್ಳೂರ ರಸ್ತೆಯ ಕೇಶವ ನಗರ, ಭಾರತ ನಗರ, ಅನಗೋಳದ ರಘುನಾಥ ಪೇಟ ಮತ್ತಿತರ ಕಡೆಗಳಲ್ಲಿ ಸಂಚರಿಸಿದ ಅವರು, ಯಾವುದೇ ಕಾರಕ್ಕೂ ಪರಿಹಾರ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಳೆಯ ಮನೆಗಳು ಕುಸಿಯುವ ಸಂಭವವಿದ್ದರೆ ಅಂತಹ ಮನೆಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಜನರನ್ನು ಸ್ಥಳಾಂತರಿಸಬೇಕು ಎಂದು ಅಧಿಕಾರಗಳಿಗೆ ತಿಳಿಸಿದರು. ಯಳ್ಳೂರ ರಸ್ತೆಯ ಕೇಶವ ನಗರದಲ್ಲಿರುವ ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರ ಸ್ಥಾಪನೆ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, “ಅತಿವೃಷ್ಟಿಯಿಂದ ನಗರದಲ್ಲಿ 10 ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 4 ಮನೆಗಳು‌ ಸಂಪೂರ್ಣವಾಗಿ ಕುಸಿದಿವೆ. ನೀರು ನುಗ್ಗಿರುವ ಮನೆಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು. ಅದೇ ರೀತಿ ಮನೆ ಸಂಪೂರ್ಣವಾಗಿ ಕುಸಿದಿರುವುದನ್ನು ಪರಿಶೀಲಿಸಿ 48 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು. ಈ ನಿಟ್ಟಿನಲ್ಲಿ ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಿ, ದಾಖಲೆಗಳನ್ನು ಆಧರಿಸಿ ಪರಿಹಾರ ನೀಡಲಾಗುತ್ತದೆ ಎಂದರು. ಬಳ್ಳಾರಿ ನಾಲಾ ಸಮಸ್ಯೆ-ಶಾಶ್ವತ ಪರಿಹಾರಕ್ಕೆ ಸಭೆ: ಬಳ್ಳಾರಿ ನಾಲಾದಿಂದ ನಗರದಲ್ಲಿ ಪ್ರತಿವರ್ಷ ಸಮಸ್ಯೆ ಎದುರಾಗುತ್ತಿರುವುದರಿಂದ ಇದಕ್ಜೆ ಶಾಶ್ವತ ಪರಿಹಾರ ಕಂಡುಹಿಡಿಯಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸದ್ಯದಲ್ಲೇ ಸಭೆಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಸದ್ಯಕ್ಕೆ ತಾತ್ಕಾಲಿಕವಾಗಿ ಸಮಸ್ಯೆ ನಿವಾರಿಸಲು ಐದು ಕೋಟಿ‌ ರೂಪಾಯಿ ವೆಚ್ಚದಲ್ಲಿ ಡ್ರೈನೇಜ್ ಕಾಮಗಾರಿಯನ್ನು ತೆಗೆದುಕೊಳ್ಳಲಾಗುವುದು. ಬಳ್ಳಾರಿ ನಾಲಾ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದರು. ಬರಿಗಾಲಿನಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ!: ಯಳ್ಳೂರ ರಸ್ತೆಯ ಕೇಶವ ನಗರದಲ್ಲಿ ಮಳೆಯಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಕೆಲವೆಡೆ ಬರಿಗಾಲಿನಲ್ಲೆ ತೆರಳಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಗಟಾರು ಸಮಸ್ಯೆಗಳನ್ನು ಪರಿಶೀಲಿಸಿದರು. ಭಾರತ ನಗರದಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದಿರುವ ಮನೆಯನ್ನು ಪರಿಶೀಲಿಸಿದ ಅವರು, ಹಾನಿಯ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಅಕ್ಕಪಕ್ಕದ ಮನೆಗಳ ಗೋಡೆ ಕುಸಿದಿರುವುದರಿಂದ ಯಾವುದೇ ಕ್ಷಣ ಮನೆಗಳು ಕುಸಿಯುವ ಸಾಧ್ಯತೆ ಇರುವುದರಿಂದ ಕೂಡಲೇ ಪರಿಹಾರವನ್ನು ನೀಡಬೇಕು. ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಮನೆಯನ್ನು ಕಳೆದುಕೊಂಡಿರುವ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಹಾನಿಯನ್ನು ಪರಿಶೀಲಿಸಿ ನಿಯಮಾವಳಿ ಪ್ರಕಾರ ತಕ್ಷಣವೇ ಪರಿಹಾರವನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಾಖಲೆಗಳನ್ನು ಪರಿಶೀಲಿಸಿ ಕೂಡಲೇ ಪರಿಹಾರ ಆರ್.ಟಿ.ಜಿ.ಎಸ್.‌ಮಾಡಲು ತಹಶೀಲ್ದಾರರಿಗೆ ಸೂಚನೆ. ಕೆಲವೇ ಗಂಟೆಗಳಲ್ಲಿ ಪರಿಹಾರ ಒದಗಿಸಲು ನಿರ್ದೇಶನ ನೀಡಿದರು. ಮನೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಓಮ್ನಿ ವಾಹನ ಸಂಪೂರ್ಣ ಜಖಂ ಗೊಂಡಿರುವುದರಿಂದ ಪರಿಹಾರ ನೀಡಲು ವಾಹನದ ಮಾಲೀಕರು ಮನವಿ ಮಾಡಿಕೊಂಡರು. ದಾಖಲೆಗಳನ್ನು ಒದಗಿಸಿದರೆ ಅದಕ್ಕೂ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಭೇಟಿಯ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಕಸದರಾಶಿ ಹಾಗೂ ಗಟಾರುಗಳನ್ನು ಲೆಕ್ಕಿಸದೇ ಕೆಲವೆಡೆ ಬರಿಗಾಲಿನಲ್ಲಿಯೇ ಸಂಚರಿಸಿದ ಜಿಲ್ಲಾಧಿಕಾರಿಗಳು, ಮನೆ ಶಿಥಿಲಗೊಂಡಿದ್ದರೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಗೊಳ್ಳಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡರು. ಅನಗೋಳದ ರಘುನಾಥ ಪೇಟದಲ್ಲಿ ಮನೆಯ ಗೋಡೆ ಕುಸಿದಿರುವುದನ್ನು ವೀಕ್ಷಿಸಿದರು. ಈ ಬಗ್ಗೆ ಕುಟುಂಬದ ಸದಸ್ಯರ ಜತೆ ಚರ್ಚೆ ನಡೆಸಿದ ಅವರು, ತಕ್ಷಣವೇ ಮನೆಯನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಹಾನಿಗೊಳಗಾಗಿರುವುದರಿಂದ ಇಂದೇ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಆದ್ದರಿಂದ ಕೂಡಲೇ ಸ್ಥಳಾಂತರಗೊಳ್ಳಬೇಕು. ಒಂದು ವೇಳೆ ಬಾಡಿಗೆದಾರರಿದ್ದರೇ ಅವರನ್ನು ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾನಿಗೊಳಗಾದ ಮನೆಯಲ್ಲಿ ಬಾಡಿಗೆದಾರರಿದ್ದರೆ ನಿಯಮಾವಳಿ ಪ್ರಕಾರ ಅವರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಯಳ್ಳೂರ ರಸ್ತೆಯ ಕೇಶವ ನಗರದಲ್ಲಿ ಸಮಸ್ಯೆಯನ್ನು ವಿವರಿಸಿದ ಪಾಲಿಕೆಯ ಸದಸ್ಯರಾದ ಸರಿತಾ ಪಾಟೀಲ ಅವರು, ಬಡಾವಣೆಯಲ್ಲಿ ಗಟಾರು ಇಲ್ಲದಿರುವುದರಿಂದ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ‌ಇದರಿಂದ ಸಮಸ್ಯೆ ಉದ್ಭವಿಸುತ್ತಿದೆ” ಎಂದು ತಿಳಿಸಿದರು. ವಡಗಾವಿಯ ಅನ್ನಪೂರ್ಣೇಶ್ವರಿ ಮಂಗಲ‌ ಕಾರ್ಯಾಲಯವನ್ನು ಕಾಳಜಿ ಕೇಂದ್ರವಾಗಿ ಸ್ಥಾಪಿಸುವ ಕುರಿತು ಪಾಲಿಕೆಯ ಅಧಿಕಾರಿಗಳ ಜತೆ ಚರ್ಚಿಸಿದರು. ಅತಿವೃಷ್ಟಿಯಿಂದ ಬೆಳೆಹಾನಿ-ಶೀಘ್ರ ಪರಿಹಾರ: ಕೃಷ್ಣಾ ಹಾಗೂ ಮಲಪ್ರಭಾ ನದಿಪಾತ್ರದಲ್ಲಿ ಸದ್ಯಕ್ಜೆ ಪ್ರವಾಹ ಪರಿಸ್ಥಿತಿ ಇರುವುದಿಲ್ಲ. ಆದಾಗ್ಯೂ ಕೆಲವು ಕಡೆಗಳಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದು, ಆದಷ್ಟು ಬೇಗನೇ ಸಮೀಕ್ಷೆ ಕೈಗೊಂಡು ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಒಟ್ಟಾರೆ 388 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದೇ ರೀತಿ ಪಾಲಿಕೆಯ ವ್ಯಾಪ್ತಿಯಲ್ಲಿ ಸದ್ಯಕ್ಕೆ ಒಂದು ಕಾಳಜಿ ಕೇಂದ್ರವನ್ನು ಗುರುತಿಸಲಾಗಿದೆ. ಪರಿಸ್ಥಿತಿ ಆಧರಿಸಿ ಹೆಚ್ಚುವರಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪರಿಸ್ಥಿತಿಯನ್ನು ಆಧರಿಸಿ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ಸದ್ಯಕ್ಜೆ ಯಲ್ಲೋ ಅಲರ್ಟ್ ಇರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ವಿವರಿಸಿದರು. ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು, ನಗರದ ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿಯನ್ನು ನೀಡಿದರು. ತಹಶೀಲ್ದಾರ ಆರ್.ಕೆ.ಕುಲಕರ್ಣಿ, ಪಾಲಿಕೆಯ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. *** Share Facebook Pinterest Previous ಬೆಳಗಾವಿಯಲ್ಲಿ ಭಾರಿ ಮಳೆ, ಎಲ್ಲಿ,ಯಾವಕಡೆ, ಅನಾಹುತ,ಇಲ್ಲಿದೆ ಡಿಟೇಲ್ಸ್.. Next ಬೆಳಗಾವಿ ಜಿಲ್ಲಾಡಳಿತಕ್ಕೆ ಸಚಿವರಿಂದ ಶಬ್ಬಾಶ್ ಗಿರಿ…!! Check Also ಬಿಜೆಪಿಯವರು, ಜನವರಿ ನಂತರ ಬಹಳಷ್ಟು ಓಪನ್ ಮಾಡ್ತಾರೆ…!! ಬೆಳಗಾವಿ- ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ,ಮೊಟ್ಟೆ ಎಸೆದಿದ್ದು ಗೊತ್ತಿಲ್ಲ, ಪ್ರತಿಭಟನೆ ಮಾಡೋದನ್ನ ನೋಡಿದ್ದೇವೆ.ಪೊಲೀಸರು ಕ್ರಮ …
ಗಣೇಶ ಚತುರ್ಥಿ ಆಚರಣೆಗಾಗಿ ಎಲ್ಲರೂ ಟ್ರೆಡಿಷನಲ್​ ಉಡುಗೆ ಧರಿಸಿ ಮಿಂಚಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಜೋಡಿ ಹೆಚ್ಚು ಗಮನ ಸೆಳೆದಿದೆ. ಮಂಜು ಪಾವಗಡ, ದಿವ್ಯಾ ಸುರೇಶ್ TV9kannada Web Team | Edited By: Madan Kumar Sep 07, 2021 | 9:17 AM ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಎಷ್ಟು ಆಪ್ತವಾಗಿದ್ದರು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಅವರಿಬ್ಬರ ನಡುವಿನ ಸ್ನೇಹ-ಸಂಬಂಧವನ್ನು ಪ್ರೇಕ್ಷಕರು ನೂರಾರು ದಿನಗಳ ಕಾಲ ನೋಡಿದ್ದಾರೆ. ಬಿಗ್​ ಬಾಸ್​ ಶೋಗಾಗಿ ಮಾತ್ರ ಅವರು ಪರಸ್ಪರ ಕ್ಲೋಸ್​ ಆಗಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದು ಕೂಡ ಉಂಟು. ಆದರೆ ಆ ಟೀಕೆಯನ್ನು ಮಂಜು ಮತ್ತು ದಿವ್ಯಾ ಸುರೇಶ್​ ಸುಳ್ಳಾಗಿಸಿದ್ದಾರೆ. ಅಂದರೆ, ಬಿಗ್​ ಬಾಸ್​ನ ಆಚೆಗೂ ಕೂಡ ಅವರು ತಮ್ಮ ಬಾಂಧವ್ಯವನ್ನು ಮುಂದುವರಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೋಗಳು ಈಗ ಸಖತ್​ ವೈರಲ್​ ಆಗುತ್ತಿವೆ. ಪಕ್ಕಾ ಟ್ರೆಡಿಷನಲ್​ ಉಡುಗೆಯಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಕಾಣಿಸಿಕೊಂಡಿದ್ದಾರೆ. ಮಂಜು ಭುಜದ ಮೇಲೆ ಕೈಯಿಟ್ಟು ಪೋಸ್​ ನೀಡಿರುವ ದಿವ್ಯಾ ನಗು ಬೀರಿದ್ದಾರೆ. ಈ ಫೋಟೋವನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಹಬ್ಬ ಮಾಡುತ್ತಿದ್ದಾರೆ. ಅಂದಹಾಗೆ, ಇದು ಕಲರ್ಸ್​ ಕನ್ನಡ ವಾಹಿನಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಕ್ಲಿಕ್ಕಿಸಿದ ಫೋಟೋ. ಬಿಗ್​ ಬಾಸ್​ ಸ್ಪರ್ಧಿಗಳನ್ನೆಲ್ಲ ಜೊತೆ ಸೇರಿಸಿ, ಕಲರ್ಸ್​ ಕನ್ನಡ ವಾಹಿನಿಯು ಗಣೇಶೋತ್ಸವ ಆಚರಿಸಿದೆ. ಅದಕ್ಕೆ ‘ಬಿಗ್​ ಗಣೇಶೋತ್ಸವ’ ಎಂದು ಹೆಸರಿಡಲಾಗಿದೆ. ಹಬ್ಬದ ಆಚರಣೆಗಾಗಿ ಎಲ್ಲರೂ ಟ್ರೆಡಿಷನಲ್​ ಉಡುಗೆ ಧರಿಸಿ ಮಿಂಚಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಜೋಡಿ ಹೆಚ್ಚು ಗಮನ ಸೆಳೆದಿದೆ. ವೇದಿಕೆ ಮೇಲೆ ಭರಪೂರ ಮನರಂಜನೆ ಕೂಡ ನೀಡಲಾಗಿದೆ. ಮಂಜು ಪಾವಗಡ ಎಂದಿನಂತೆ ಕಾಮಿಡಿ ಕಚಗುಳಿ ಇಟ್ಟಿದ್ದಾರೆ. ಈ ಕಾರ್ಯಕ್ರಮ ಶುಕ್ರವಾರ (ಸೆ.10) ಮಧ್ಯಾಹ್ನ 1 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಈ ಸಂದರ್ಭದಲ್ಲಿ ದಿವ್ಯಾ ಸುರೇಶ್​ ಅವರು ತಾಯಿ ಮತ್ತು ಸಹೋದರನ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಕೂಡ ವೈರಲ್​ ಆಗುತ್ತಿದೆ. ಅದೇ ಫ್ರೇಮ್​ನಲ್ಲಿ ಮಂಜು ಪಾವಗಡ ಸಹ ಇದ್ದಾರೆ ಎಂಬುದು ವಿಶೇಷ. ‘ಈ ಮೂವರು ನನ್ನ ಬದುಕಿನ ನಿಜವಾದ ಶಿಕ್ಷಕರು. ಹಲವು ರೀತಿಯಲ್ಲಿ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ನೀವು ನನ್ನ ಹೃದಯಕ್ಕೆ ತುಂಬ ಹತ್ತಿರವಾದವರು’ ಎಂದು ದಿವ್ಯಾ ಸುರೇಶ್​ ಕ್ಯಾಪ್ಷನ್​ ನೀಡಿದ್ದಾರೆ. ಸಾವಿರಾರು ಅಭಿಮಾನಿಗಳು ಈ ಫೋಟೋ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.
ಕೊಚ್ಚಿ: ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿರೋದಕ್ಕೆ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ಕೊರಟ್ಟಿಯಲ್ಲಿ ನಡೆದಿದೆ. ಪೆರುಂಬವೂರ್​ ಮೂಲದ ಎಂ.ಎಸ್.ವೈಷ್ಣವಿ ಹಲ್ಲೆಗೊಳಗಾದ ಸೊಸೆ. ಅಂತಿಮ ವರ್ಷದ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿನಿಯಾಗಿರುವ ವೈಷ್ಣವಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಆಕಡಗೆ ಅಂಗಮಲಿಯಲ್ಲಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. ವೈಷ್ಣವಿ ಕೊರಟ್ಟಿಯ ಪಲಪಲ್ಲಿ ಮೊಝಿಕುಲಂ ನಿವಾಸಿ ಮುಕೇಶ್​ ಎಂಬುವರನ್ನು 6 ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ವೈಷ್ಣವಿ ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿದ್ದರು. ಪರಿಣಾಮ ಅತ್ತೆಯ ಪ್ರಿಯಕರ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆಂದು ವೈಷ್ಣವಿ ಆರೋಪ ಮಾಡಿದ್ದಾರೆ. ಅತ್ತೆಯ ಪ್ರಿಯಕರ, ವೈಷ್ಣವಿ ಪತಿಯ ಮನೆಯಿಂದ ಸುಮಾರು 3 ಕಿ.ಮೀ. ದೂರದ ನಿವಾಸಿಯಾಗಿದ್ದನು. ಆತ ಮನೆಯನ್ನು ಪ್ರವೇಶಿಸುವುದನ್ನು ತಡೆಯಲು ವೈಷ್ಣವಿ ಯತ್ನಿಸಿದ್ದಳು. ಈ ಕೋಪದಲ್ಲಿ ಆತ ಭಾನುವಾರ ರಾತ್ರಿ ನೆರೆ ಮನೆಯವರೊಂದಿಗೆ ವೈಷ್ಣವಿ ಮಾತನಾಡುತ್ತಿರುವಾಗ ದಾಳಿ ನಡೆಸಿದ್ದಾನೆ. ಈ ವೇಳೆ ಆತ ವೈಷ್ಣವಿ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ. ಆಗ ಪತ್ನಿಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ಪತಿ ಮುಕೇಶ್​ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಆತ ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದಾಗ ಆರೋಪಿ ಪರಾರಿಯಾಗಿದ್ದಾನೆ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ವೈಷ್ಣವಿಯನ್ನು​ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ತಿಳಿದು ಪೊಲೀಸರು ಆಸ್ಪತ್ರೆಗೆ ತೆರಳಿ ವೈಷ್ಣವಿ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಅತ್ತೆ ಹಾಗೂ ಪತಿಯ ಸಹೋದರ ತನಗೆ ಕಿರುಕುಳ ನೀಡುತ್ತಿದ್ದಾರೆ. ವೈಷ್ಣವಿ ಹೇಳಿದ ಎಲ್ಲ ಘಟನೆಯನ್ನು ಮುಕೇಶ್​ ಪತ್ನಿಯ ಇನ್​ಸ್ಟಾಗ್ರಾಂನಲ್ಲಿ ಬಯಲು ಮಾಡಿದ್ದಾರೆ. ಮದುವೆಯಾದ ಕೆಲವು ತಿಂಗಳುಗಳ ಬಳಿಕ ತನ್ನ ಅತ್ತೆ ನಿತ್ಯವು ಕಿರುಕುಳ ನೀಡುತ್ತಿದ್ದರು. ಪತಿ ಕೆಲಸಕ್ಕೆ ಹೋದ ಬೆನ್ನಲ್ಲೇ ನನ್ನನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಊಟವನ್ನು ಕೊಡದೇ ಹಿಂಸಿಸುತ್ತಿದ್ದರು ಎಂದು ಎಂದು ವೈಷ್ಣವಿ ಆರೋಪ ಮಾಡಿದ್ದಾರೆ.
ಹಾಸನ:- ವಿಶ್ವ ಯೋಗದಿನಾಚರಣೆಯ ಪ್ರಯುಕ್ತ ಇಲ್ಲೊಬ್ಬ ಸಾಧಕರು ನದಿಯಲ್ಲಿ ಮುಳುಗಿ ಸರ್ವಾಂಗಾಸನ ಯೋಗ ಮಾಡುವ ಮೂಲಕ ವಿಶಿಷ್ಟವಾಗಿ ಎಲ್ಲರ ಗಮನ ಸೆಳೆದಿದ್ದಾರೆ.ಸರ್ವಾಂಗಾಸನ ಎಂದರೆ ಕತ್ತು, ಹೆಗಲು ಮತ್ತು... Contact for Website, Mobile App, Encoders and Decoder Box and other Digital Solutions./ call 9880263512 Search for: call Recent Posts ಅನಂತವಾಡಿ ಗ್ರಾಮಪಂಚಾಯತನ ಕೋಟ, ತುಂಬೆಬೀಳು, ಅನಂತವಾಡಿ, ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿ ರಚನೆ, December 9, 2022 ಡಿಸೆಂಬರ ೧೦ರಿಂದ ೧೬ವರೆಗೆ ಉತ್ತರ ಕನ್ನಡ ರಾಮಕ್ಷತ್ರೀಯ ಸಮಾಜ ಭಾಂದವರಿಗಾಗಿ ಶ್ರೀ ರಾಮತಾರಕ ಜಪಾನುಷ್ಠಾನ December 9, 2022 ಅಘನಾಶನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ. ಸಂಬoಧ ಪಟ್ಟ ಅಧಿಕಾರಿಗಳೇ ಸಾಮೀಲಾಗಿರುವ ಶಂಕೆ. December 9, 2022 ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ December 9, 2022 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಟಿಕೇಟ್ ಕೇಳಲು ಎಲ್ಲರೂ ಸ್ವತಂತ್ರರು –ಮಾಜಿ ಶಾಸಕಿ ಶಾರದಾ ಶೆಟ್ಟಿ December 9, 2022
ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಒಳ್ಳೆಯ ಸ್ನೇಹಿತರಾಗಿದ್ದ ದೀಪಿಕಾ ದಾಸ್, ಕಿಶನ್, ಶೈನ್ ಶೆಟ್ಟಿ, ವಾಸುಕಿ ವೈಭವ್ ಮನೆಯಿಂದ ಹೊರಗೆ ಬಂದ ಮೇಲೂ ಸ್ನೇಹಿತರಾಗಿಯೇ ಉಳಿದುಕೊಂಡಿದ್ದಾರೆ. ಬಹುತೇಕ ಎಲ್ಲರದ್ದೂ ಒಂದೇ ರೀತಿ ವೃತ್ತಿ ಜೀವನವಾಗಿರುವ ಕಾರಣ ಒಂದಲ್ಲ ಒಂದು ಪ್ರಾಜೆಕ್ಟ್ ಗಳಲ್ಲಿ ಪರಸ್ಪರ ಕೈ ಜೋಡಿಸುತ್ತಿದ್ದಾರೆ. ಈ ನಡುವೆ ದೀಪಿಕಾ ದಾಸ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯೊಂದರಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು, ಅದರಲ್ಲಿ ಕಿಶನ್ ಕೂಡಾ ಕಾಣಿಸಿಕೊಂಡಿದ್ದಾರೆ. ವಿಡಿಯೋ ನೋಡಿದ ಅನೇಕರು ಜೋಡಿಯನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಇನ್ನು ಕೆಲವು ಶೈನ್ ಶೆಟ್ಟಿಯನ್ನು ಮಿಸ್ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಸಂಬಂಧ ಹೇಗಿತ್ತೋ ಗೊತ್ತಿಲ್ಲ, ವೀಕ್ಷಕ ಮಹಾಶಯರಂತು ಅಣ್ಣ ಅತ್ತಿಗೆ ಎಂದೇ ಕರೆಯುತ್ತಿದ್ದರು.