text
stringlengths
468
101k
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಯರಿಗೇನಹಳ್ಳಿಯಲ್ಲಿ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರವಾಗಿದ್ದು, ಕಳಶಾರೋ ಹಣ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕೆಂಡೋತ್ಸವ ಕಾರ್ಯಕ್ರಮ ಬಲು ಭಕ್ತಿಭಾವದೊಂದಿಗೆ ಜರುಗಿತು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪಾಂಡೋಮಟ್ಟಿಯ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಆಧ್ಯಾತ್ಮಿಕ ಚಿಂತನೆಯ ತಳಹದಿಯಲ್ಲಿ ಮಠ ಮಂದಿರ ಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಬೇಕೇ ಹೊರತು, ಸಂಘರ್ಷದ ಕಿಡಿ ಹೊತ್ತಿಸುವ ತಾಣಗಳಾಗಬಾರದು ಎಂದರು. ಸಮಾಜಮುಖಿ ಕಾರ್ಯಗಳನ್ನು ಮಾಡು ವಾಗ ಸ್ವಾರ್ಥ ಹಾಗೂ ಸಂಕುಚಿತ ಬುದ್ಧಿ ಮೊದಲು ತೊಲಗಬೇಕು. ಧರ್ಮದ ಹೆಸರಿ ನಲ್ಲಿ ಸಂಘರ್ಷದ ಕಿಡಿ ಹೊತ್ತಿಸುವುದು ಅತ್ಯಂತ ಅಪಾಯಕಾರಿ ಎಂದು ಹೇಳಿದರು. ಇತ್ತೀಚೆಗೆ ಕೆಲ ದೃಶ್ಯಮಾಧ್ಯಮಗಳು ತಮ್ಮ ಸ್ಟುಡಿಯೋಗೆ ಜ್ಯೋತಿಷಿಗಳನ್ನು ಕರೆಸಿ ಭವಿಷ್ಯ ಹೇಳಿಸುವ ನೆಪದಲ್ಲಿ ಮೌಢ್ಯ ಹರಡುತ್ತಾ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇಂತಹ ಅಜ್ಞಾನ, ಮೌಢ್ಯಗಳನ್ನು ಹೊರ ಹಾಕಿ ಮುಂದಿನ ಪೀಳಿಗೆಗೆ ನಾವೆಲ್ಲರೂ ದಾರಿ ದೀಪವಾಗಬೇಕು ಎಂದು ಉಪನ್ಯಾಸಕ ಡಾ.ಕೆ.ಎಸ್.ಹರಶಿವಮೂರ್ತಿ ಹೇಳಿದರು. ಮಾಡಾಳು ನಿರಂಜನ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಡಿ.ಎಂ.ಕುರ್ಕೆ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಜಿಪಂ ಸದಸ್ಯ ಮಾಡಾಳು ಸ್ವಾಮಿ, ಕೆಪಿಸಿಸಿ ಸದಸ್ಯ ಹಿರಿಯೂರು ರೇವಣ್ಣ, ಜಿಪಂ ಮಾಜಿ ಸದಸ್ಯ ಕಲ್ಲುಸಾದರಹಳ್ಳಿ ಶಿವಮೂರ್ತಿ, ಜಯಪ್ಪ, ಶ್ಯಾಮ್‍ಸುಂದರ್, ತಾ.ಪಂ. ಸದಸ್ಯ ಸಿ.ಸಿ.ಮಹೇಶ್ವರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.
ಅಂಜಲಿ ಅವತ್ತು ಬೆಳಗಿನ ಜಾವ ಮೂರೂವರೆಗೆ ಹೊರಡುವ ವಿಮಾನದಲ್ಲಿ ದುಬೈಗೆ, ತನ್ನ ಗಂಡನ ಹತ್ತಿರ ಹೊರಟ್ಟಿದ್ದಳು. ಅಂಜಲಿ ಮತ್ತು ಅವಳ ಗಂಡ ಸುಮಿತ್ ಮದುವೆ ಆದ ಮೇಲೆ ದುಬೈಗೆ ಹೋಗಿ ನೆಲೆಸಿದ್ದರು. ಹೋಗಿ ಎರಡು ವರುಷಗಳ ನಂತರ ಅಂಜಲಿ ಆರು ತಿಂಗಳ ಗರ್ಭಿಣಿ ಆಗಿದ್ದಾಗ, ಡೆಲಿವರಿಗೆ ಅಂತ ಭಾರತಕ್ಕೆ ಬಂದಿದ್ದಳು. ಡೆಲಿವರಿ ಆದ ಮೇಲೆ , ಮೂರು ತಿಂಗಳು ಅಮ್ಮನ ಬಳಿ ಬಾಣಂತನ ಮಾಡಿಸಿಕೊಂಡು ಮತ್ತೆ ವಾಪಸು ಸುಮಿತನ ಹತ್ತಿರ ಮಗುವನ್ನು ಕರೆದುಕೊಂಡು ಹೊರಟ್ಟಿದ್ದಳು. ಅಂಜಲಿಗೆ ಆ ಪುಟ್ಟ ಮಗುವನ್ನು ಹೇಗಪ್ಪಾ ಒಬ್ಬಳೇ ಕರೆದುಕೊಂಡು ಹೋಗುವುದು ಅಂತ ಬಹಳ ಆತಂಕವಾಗಿತ್ತು. ವಿಮಾನದಲ್ಲಿ ಅಳಲು ಶುರು ಮಾಡಿದರೆ ಹೇಗೆ ಸಮಾಧಾನ ಮಾಡುವುದು, ಏನಾದರೂ ಅರೋಗ್ಯ ಕೈ ಕೊಟ್ಟರೆ ಏನು ಮಾಡುವುದು ಅಂತ ಬೇಡದ ಯೋಚನೆಗಳು ಬಂದು ಸ್ವಲ್ಪ ಉದ್ವೇಗಕ್ಕೆ ಒಳಗಾಗಿದ್ದಳು. ವಿಮಾನ ಮೇಲೆ ಏರಬೇಕಾದರೆ ಮತ್ತು ಇಳಿಯಬೇಕಾದರೆ ಮಗುವಿಗೆ ಹಾಲು ಕುಡಿಸುತ್ತಾ ಇರು, ಇಲ್ಲದಿದ್ದರೆ ಅದಕ್ಕೆ ಕಿವಿ ನೋವು ಬಂದು ಅಳಬಹುದು, ಆದಷ್ಟು ಮಲಗಿಸಲು ಪ್ರಯತ್ನ ಪಡು, ಗಗನ ಸಖಿಯರು ಸಹಾಯ ಮಾಡುತ್ತಾರೆ, ನೀನೇನು ಅಷ್ಟು ಭಯಪಡಬೇಕಾಗಿಲ್ಲ… ಹೀಗೆ ವಿಮಾನ ನಿಲ್ದಾಣದೊಳಗೆ ಹೋಗುವವರೆಗೂ ಅನೇಕ ಸಲಹೆಗಳು ಎಲ್ಲರಿಂದ ಬರುತ್ತಿದ್ದವು. ಅಂಜಲಿ ವಿಮಾನ ನಿಲ್ದಾಣಕ್ಕೆ ಅವಳನ್ನು ಬಿಡಲು ಬಂದಿದ್ದ ಅಪ್ಪ ಅಮ್ಮನಿಗೆ ಹೋಗಿ ಬರುತ್ತೇನೆ ಅಂತ ಹೇಳಿ ನಿಲ್ದಾಣದೊಳಗೆ ಬಂದಳು. ನಂತರ ಬೋರ್ಡಿಂಗ್ ಪಾಸ್ ತೆಗೆದುಕೊಂಡು, ಭದ್ರತಾ ತಪಾಸಣೆ ಮುಗಿಸಿ, ವಿಮಾನದೊಳಗೆ ಹೋಗುವ ಬಾಗಿಲ ಬಳಿ ಬಂದು ಕೂತು, ಅಪ್ಪ ಅಮ್ಮನಿಗೆ ಫೋನ್ ಮಾಡಿ , ನೀವೇನು ಯೋಚನೆ ಮಾಡಬೇಡಿ , ಅಲ್ಲಿಗೆ ತಲುಪಿ ನಿಮಗೆ ಫೋನ್ ಮಾಡುತ್ತೇನೆ ಅಂತ ತಿಳಿಸಿದಳು. ಸ್ವಲ್ಪ ಹೊತ್ತಿಗೆ ಮಗುವಿನೊಟ್ಟಿಗೆ ವಿಮಾನದೊಳಗೆ ಹೋಗಿ ಕುಳಿತಳು. ವಿಮಾನ ಹೊರಡುವಾಗ ಮಗುವಿಗೆ ಹಾಲು ಕುಡಿಸುತ್ತಾ ಇದ್ದಿದ್ದರಿಂದ ಮಗು ಚೂರು ಅಳಲಿಲ್ಲ. ಅಂಜಲಿಗೆ ಸ್ವಲ್ಪ ಸಮಾಧಾನವಾಗಿ, ಇದ್ದ ಆತಂಕ ದೂರವಾಯಿತು. ಆದರೆ ಮನಸ್ಸಿನಲ್ಲಿದ್ದ ಭಯ ಕಮ್ಮಿ ಆಗಿರಲಿಲ್ಲ. ಹಿಂದಿನ ತಿಂಗಳಷ್ಟೇ ಮಲೇಷ್ಯಾ ಏರ್ಲೈನ್ ಅಪಘಾತಕ್ಕೀಡಾಗಿ ಒಬ್ಬರು ಬದುಕುಳಿದಿರಲಿಲ್ಲ. ಎಲ್ಲೋ ಮನಸ್ಸಿನ ಮೂಲೆಯಲ್ಲಿ ಆ ವಿಷಯ ಬೇರೆ ಕೊರೆಯುತ್ತಿತ್ತು. ದೇವರೇ ಏನು ಆಗದೆ ಸುರಕ್ಷಿತವಾಗಿ ಸೇರುವಂತೆ ಮಾಡು ಕಣ್ಣು ಮುಚ್ಚಿ ದೇವರನ್ನು ನೆನೆಯುತ್ತ ಕುಳಿತಳು. ವಿಮಾನ ಭಾರತ ಬಿಟ್ಟು ಆಗಲೇ ೨ ಗಂಟೆಗಳಾಗಿತ್ತು. ಅಂಜಲಿ ಕಿಟಕಿಯನ್ನು ತೆಗೆದು ಹೊರಗಡೆ ನೋಡಿದಳು. ಹೊರಗಡೆ ಏನು ಕಾಣಿಸಲಿಲ್ಲ ಅಷ್ಟು ಕಗ್ಗತ್ತಲಿತ್ತು. ವಿಮಾನದ ರೆಕ್ಕೆಯ ಮೇಲಿನ ಕೆಂಪು ದೀಪ ಆಗಾಗ ಮಿಣುಕು ಮಿಣುಕು ಅಂತ ಹೊಳೆಯುವುದು ಬಿಟ್ಟರೆ ಏನು ಕಾಣಿಸುತ್ತಿರಲಿಲ್ಲ, ಆಗಾಗ ದೂರದಲ್ಲಿ ಎಲ್ಲೋ ಮಿಂಚಿನ ಬೆಳಕು ಕಾಣಿಸುತ್ತಿತ್ತು. ಅವಳು ಕಿಟಕಿ ಮುಚ್ಚಿ ಮತ್ತೆ ಕಣ್ಣು ಮುಚ್ಚಿದಳು. ಆಗ ಇದ್ದಕ್ಕಿದ್ದಂತೆ ವಿಮಾನ ಜೋರಾಗಿ ಅಲುಗಾಡತೊಡಗಿತು. ಪೈಲಟ್ ಹೊರಗಡೆ ವಾತಾವರಣ ಚೆನ್ನಾಗಿಲ್ಲ, ಎಲ್ಲರು ಕುಳಿತುಕೊಳ್ಳ ಬೇಕು ಹಾಗು ಸೀಟ್ ಬೆಲ್ಟ್ ಹಾಕಿಕೊಳ್ಳಿ, ಯಾರು ಟಾಯ್ಲೆಟ್ ಉಪಯೋಗಿಸಬೇಡಿ ಅಂದು ಅನೌನ್ಸ್ ಮಾಡಿದ. ಕೆಲವರು ಸ್ವಲ್ಪ ಆತಂಕಕ್ಕೆ ಈಡಾದರು, ವಿಮಾನದಲ್ಲಿ ಯಾವಾಗಲು ಓಡಾಡುವವರು ಇವೆಲ್ಲ ಸಾಮಾನ್ಯ ಎಂಬಂತೆ ಆರಾಮಾಗಿದ್ದರು. ೫ ನಿಮಿಷಗಳ ನಂತರ ಅಲುಗಾಟ ವಿಪರೀತ ಜೋರಾಯಿತು. ಇದ್ದಕ್ಕಿದ್ದಂತೆ ಭಾರಿ ಸದ್ದು ಕೇಳಿಸಿತು. ಪೈಲೆಟ್ ಮತ್ತೆ ಅನೌನ್ಸ್ ಮಾಡಿದ, ವಿಮಾನದ ಇಂಜಿನ್ನಲ್ಲಿ ತೊಂದರೆ ಕಾಣಿಸಿದೆ, ಹಾಗಾಗಿ ನಾವು ತುರ್ತಾಗಿ ಲ್ಯಾಂಡ್ ಮಾಡಬೇಕಾಗಿದೆ, ಉಸಿರಾಟದ ತೊಂದರೆ ಆದರೆ ಆಕ್ಸಿಜನ್ ಮಾಸ್ಕ್ ಉಪಯೋಗಿಸಿ ಅಂತ ಹೇಳುತ್ತಿರುವಾಗಲೇ, ತಲೆಯ ಮೇಲಿಂದ ಆಕ್ಸಿಜನ್ ಮಾಸ್ಕ್ ಕೆಳಕ್ಕೆ ಬಂದಿತು. ಆಗ ಒಳಗಿದ್ದ ಎಲ್ಲರಿಗು ಪರಿಸ್ಥಿತಿಯ ಅರಿವಾಗಿ ಭಯದಿಂದ ನಡುಗತೊಡಗಿದರು, ಎಲ್ಲರು ಮಾಸ್ಕ್ ಹಾಕಿಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ಬಾರಿ ಸದ್ದು ಕೇಳಿತು. ಅಂಜಲಿ ಹೆದರಿ, ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಳು. ವಿಮಾನದ ಒಳಗೆ ನಿಧಾನವಾಗಿ ಹೊಗೆ ತುಂಬಿಕೊಂಡು ಯಾರಿಗೆ ಯಾರು ಕಾಣಸಿದ ಹಾಗೆ ಆಯಿತು. ಪ್ರತಿಯೊಬ್ಬರಿಗೆ ಇನ್ನು ನಾವು ಯಾರು ಬದುಕಲ್ಲ ಅಂತ ಅನಿಸತೊಡಗಿತು. ಹೆಂಗಸರು, ಮಕ್ಕಳು ಭಯದಿಂದ ಜೋರಾಗಿ ಕೂಗತೊಡಗಿದರು. ಅಂಜಲಿ ಭಯಕ್ಕೆ ಮಗುವನ್ನು ಗಟ್ಟಿಯಾಗಿ ಹಿಡಿಕೊಂಡು ಕಣ್ಣುಮುಚ್ಚಿ ಕುಳಿತ್ತಿದ್ದಳು. ಅಷ್ಟರಲ್ಲಿ ಪೈಲಟ್ ” ಇನ್ನು ನಾಲಕ್ಕು ನಿಮಿಷಗಳಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡುತ್ತಿದ್ದೇವೆ, ಪ್ರತಿಯೊಬ್ಬರು ಬಗ್ಗಿ ಮುಂದಿನ ಸೀಟಿಗೆ ತಲೆ ಇಟ್ಟು ಕುಳಿತುಕೊಳ್ಳಿ ” ಎಂದು ಅನೌನ್ಸ್ ಮಾಡಿದ. ಅಂಜಲಿ ಮನಸ್ಸಿನಲ್ಲಿ ” ಸುಮಿತ್ ನಿನ್ನ ನೋಡದೆ ನಾನು ಸತ್ತೇ ಹೋಗುತ್ತೀನೋ ಏನೋ, ನನ್ನ ಪಾಪುವನ್ನು ಕಾಪಾಡು ದೇವರೇ ಎಂದು ಬೇಡಿಕೊಳ್ಳುತ್ತ, ಮಗುವನ್ನು ಮುದ್ದು ಮಾಡಿ, ಮುಂದಿನ ಸೀಟಿಗೆ ತಲೆ ಒತ್ತಿ ಇಟ್ಟು ಬಗ್ಗಿ ಕುಳಿತಳು. ವಿಮಾನ ರನ್ ವೇಗೆ ಲ್ಯಾಂಡಿಂಗ್ ಆಗುತ್ತಿದ್ದಂತೆ ವಿಮಾನ ಜೋರಾಗಿ ಎತ್ತಿ ಕುಟ್ಟಿದಂತೆ ಆಗಿ, ಅಂಜಲಿಯಾ ಸೀಟ್ ಬೆಲ್ಟ್ ಕಿತ್ತು ಮೇಲೆ ಹಾರಿ ಕೆಳಕ್ಕೆ ಬಿದ್ದಳು. ಬಿದ್ದ ಹೊಡೆತಕ್ಕೆ ಮಗು ಕೈಯಿಂದ ಜಾರಿ ಹೋಯಿತು. ಅಂಜಲಿ “ಪಾಪು ” ಎಂದು ಜೋರಾಗಿ ಕೂಗಿ ತನ್ನ ಕೈಯನ್ನು ಪಾಪುವನ್ನು ಹಿಡಿಯಲು ಮುಂದೆ ಮಾಡಿದಳು. ಆದರೆ ಪಾಪು ಕೈ ತಪ್ಪಿ ಜಾರಿ ಹೊಗೆಯಲ್ಲಿ ಕಾಣದಾಯಿತು. ಆಗ ಯಾರೋ ” ಮ್ಯಾಡಮ್” ಅಂತ ಕರೆದು ಅಂಜಲಿಯ ಭುಜ ಹಿಡಿದು ಅಲ್ಲಾಡಿಸಿದರು. ಗಗನ ಸಖಿ ನಿದ್ದೆಯಲ್ಲಿ ಜೋರಾಗಿ ಕೂಗಿದ್ದ ಅಂಜಲಿಯನ್ನು ಎಚ್ಚರ ಮಾಡಿದ್ದಳು. ಕೆಟ್ಟ ಕನಸಿಗೆ ಹೆದರಿ, ಅಂಜಲಿ ಬೆವೆತುಹೋಗಿದ್ದಳು. ದೇವರ ನೆನೆಯುತ್ತ ಕಣ್ಣು ಮುಚ್ಚಿದ ಕೂಡಲೇ ಅಂಜಲಿ ನಿದ್ದೆಗೆ ಜಾರಿದ್ದಳು. ಅಂಜಲಿಗೆ ಅವಳ ಮನದ ಮೂಲೆಯಲ್ಲಿದ್ದ ಭಯ ಕೆಟ್ಟ ಕನಸಾಗಿ ಬಿದ್ದಿತ್ತು.
ಮಂಗಳೂರಿಗೆ ಕಾರ್ಯನಿಮಿತ್ತ ಡಿಸೆಂಬರ್ ೨೨ಕ್ಕೆ ಹೋಗಿದ್ದಾಗ ದಿನಕರ್ ಮೊಗೇರ್ ನನಗಾಗಿ ಕಾಯುತ್ತಿರುವಂತೆ ಫೋನ್ ಮಾಡಿದರು, ಭೇಟಿಗೆಂದೇ ನಮ್ಮ ಮೀನುಗಾರಿಕಾ ಮಹಾವಿದ್ಯಾಲಯದ ಆವರಣಕ್ಕೆ ಬಂದು ಕಾದಿದ್ದರು. ತಮ್ಮ ಶ್ರೀಮತಿಯವರೊಂದಿಗೆ ಬಂದಿದ್ದ ಅವರ ಆತ್ಮೀಯತೆಗೆ ನಾನು ಮೂಕನಾಗಿದ್ದೆ. ಯಾವುದೋ ಸಂದರ್ಭದಲ್ಲಿ "ನಿಮ್ಮ ಊರಿಗೆ ಬರುವೆ" ಎಂದು ತಾರೀಖು ತಿಳಿಸಿದ್ದೆ ಅಷ್ಟೇ. ಇದನ್ನು ಯಾವ ರೀತಿಯ ಬಾಂಧವ್ಯ ಎನ್ನಬೇಕು? ಕಾಲೇಜಿನಲ್ಲಿ ನನ್ನ ಸ್ನೇಹಿತರಂತೂ ಈ ರೀತಿಯ ಉತ್ಕಟ ಬಂಧ-ಬಾಂಧವ್ಯ ಬ್ಲಾಗಿನ ಮೂಲಕ ಬರಲು ಸಾಧ್ಯವೇ ಎಂದು ಆಶ್ಚರ್ಯ ಪಟ್ಟರು. ನನ್ನ ಘನಿಷ್ಟ ಮಿತ್ರ ಡಾ.ಶಿವಪ್ರಕಾಶ್ ಅಂತೂ ಮೂಕನಾಗಿದ್ದ ಅವರ ಆತ್ಮೀಯತೆ ಕಂಡು..ಅವನು ಆಗಲೇ ನಿರ್ಧರಿಸಿದ ತಾನೂ ಬ್ಲಾಗ್ ರಚಿಸಬೇಕೆಂದು. ಈ ಚಿತ್ರದಲ್ಲಿ ನಾನು, ದಿನಕರ್, ವನಿತಾ (ಶ್ರೀಮತಿ ದಿನಕರ್) ಮತ್ತು ನನ್ನ ಮಿತ್ರ ಡಾ. ಶಿವಪ್ರಕಾಶ್, ಎಸ್.ಎಮ್. ಚಾಟ್ನಲ್ಲಿ ಡಿ.೨೪ಕ್ಕೆ ತನ್ನ ಹುಟ್ಟುಹಬ್ಬ ನೀವು ಬಂದಾಗ ಖಂಡಿತಾ ಮನೆಗೆ ಬರಬೇಕು ಎಂದು ಒತ್ತಾಯಿಸಿದ್ದ ಶಿವುವನ್ನು ಕಾಣಲು ಅವರ ಮನೆಗೆ ಹೊರಟೆ. ಮಲ್ಲೇಶ್ವರಂ ಸರ್ಕಲ್ ನಿಂದ ಹೊರಟು ನವರಂಗ ಟಾಕೀಸಿನ ದಾರಿಯಲ್ಲಿ ಪಾರ್ಕಿನ ಬಳಿ ಬಸ್ಸಿನಿಂದಿಳಿದೆ. ಶಿವುಗೆ ಫೋನ ಮಾಡಿದೆ..ತಮ್ಮ ಸ್ಕೂಟಿಯಲ್ಲಿ ಬಂದೇ ಬಿಟ್ತರು ಶಿವು ನನ್ನ ಪಿಕ್-ಅಪ್ ಮಾಡಲು...ಅವರ ಮತ್ತು ಹೇಮಾಶ್ರೀ (ಶ್ರೀಮತಿ ಶಿವು) ಅವರ ಸಂಭ್ರಮ ನನ್ನನ್ನು ಮೂಕನ್ನನ್ನಾಗಿಸಿದವು. ಅವರ ಮನೆಯಲ್ಲಿ ಒಪ್ಪವಾಗಿ ಜೋಡಿಸಿದ್ದ ಶಿವುಗೆ ಸಂದಿದ್ದ ಪ್ರಶಸ್ತಿಗಳ ಮತ್ತು ಮನೆಯ ವೀಡಿಯೋ ಕ್ಲಿಪ್ ತೆಗೆದೆ.. ನನ್ನ, ಶಿವು ಮತ್ತು ಅವರ ಶ್ರೀಮತಿಯರ ಜೊತೆ ಫೋಟೋ ತೆಗೆದರು. ಬಿಸಿ ಬಿಸಿ ದೋಸೆಯ ಸೇವೆ, ಹಬೆಯಾಡುವ ಕಾಫಿ..ನನ್ನ ಹೊಟ್ಟೆ ತುಂಬಿಸಿದರೆ ನನ್ನ ಮನದಾಳಕ್ಕೆ ಅವರ ಅತ್ಮೀಯತೆ ಹೊಕ್ಕಿತ್ತು.. ಬೆಂಗಳೂರಿನ ಸಿಟಿ ಟ್ಯಾಕ್ಸಿಯಲ್ಲಿ ಕುಳಿತು ಸಹಕಾರನಗರಕ್ಕೆಂದು ಹೇಳಿದಾಗ ಹರೀಶ್ (ಟ್ಯಾಕ್ಸಿ ಚಾಲಕ) ಕೇಳಿದ್ದು "ಸ್ಥಳದ ಪರಿಚಯ ನಿಮಗಿದೆಯಾ ಎಂದು. ಇಲ್ಲ ಎಂದಾಗ "ಸಹಕಾರ ನಗರ ಗೊತ್ತು ಅಲ್ಲಿ ಯಾವ ನಿಗದಿತ ಜಾಗ ಎಂದು ತಿಳಿದುಕೊಳ್ಳಿ" ಎಂದಾಗ ಪ್ರಕಾಶ್ ಗೆ ಫೋನಾಯಿಸಿದೆ. ಪಾರ್ಕಿನ ಬಳಿ ಎಂದಾಗ "ಆ ಜಾಗ ಗೊತ್ತು ಅಲ್ಲಿಗೆ ಹೋಗೋಣ ನಂತರ ನಿಮ್ಮ ಸ್ನೇಹಿತರಿಗೆ ಫೋನು ಮಾಡಿ" ಎಂದು ಟ್ಯಾಕ್ಸಿ ಹೊರಡಿಸಿದ ಹರೀಶ. ಅ ಜಾಗಕ್ಕೆ ಬಂದಾಗ..ಕಾರಿನಲ್ಲಿ ಕುಳಿತಲ್ಲಿಂದಲೇ ನಮ್ಮೆಡೆ ಕೈಬೀಸಿದ್ದರು ಪ್ರಕಾಶ್...!!! ಹರೀಶನಿಗೆ ನಾವು ಒಬ್ಬರನ್ನೊಬ್ಬರು ನೋಡುತ್ತಿರುವುದು ಇದೇ ಮೊದಲಿಗೆ ಎಂದಾಗ ನಂಬಲಿಲ್ಲ...ಅದುಹೇಗೆ..ಈ ರೀತಿಯ ಸ್ನೇಹ-ಬಂಧ ಹೇಗೆ ತಿಳಿಯಿತು ಇವರೇ ಎಂದು? ಎಂದೆಲ್ಲಾ ಅವನಿಗೆ ಪ್ರಶ್ನೆ ಕಾಡತೊಡಗಿದುವಂತೆ. ಮೀನು, ಮತ್ಸ್ಯಶಾಸ್ತ್ರ ಮತ್ತು ಮತ್ಸ್ಯಕೃಷಿಗಳಲ್ಲಿ ಮುಳುಗಿದ್ದ ನನಗೆ ... ಇಷ್ಟೇ ಅಲ್ಲ ಪ್ರಪಂಚ ಎನ್ನುವುದನ್ನು ಸಾದರಪಡಿಸುವಂತೆ ಪರಿಚಯಿಸಿದ ಶ್ರೇಯ -ಮೃದುಮನಸು- ಗೆ ಸಲ್ಲಬೇಕು. ಬಹುಶಃ ಒಂದು ವರ್ಷದ ನನ್ನ ಗಳಿಕೆ... ಆತ್ಮೀಯರ, ನನ್ನ ಲೇಖನ ಅದು ಹೇಗೇ ಇದ್ದರೂ ಮೆಚ್ಚಿ ಪ್ರೋತ್ಸಾಹಿಸುವ ಬ್ಲಾಗು-ಮಿತ್ರರ ಸ್ನೇಹ. ತುಂಬು ಮನಸ್ಸಿನಿಂದ ಅಣ್ಣ ಎನ್ನುವ ತಂಗಿಯರು, ತಮ್ಮಂದಿರು, ಅಲ್ಪಸ್ವಲ್ಪ ಹತ್ತಿರ ವಯಸ್ಕರು, ಹೀಗೆ ಹಲವಾರು ಸ್ನೇಹಿತರು...ಜೊತೆಗಿದ್ದು ಹುಟ್ಟಿನಿಂದ ಪರಿಚಿತ ಬಂಧುಗಳಿಗಿಲ್ಲದ ಆಪ್ಯಾಯತೆ ಇವರಲ್ಲಿ ಕಂಡೆ... ಬ್ಲಾಗು ಬ್ರಹ್ಮ ಬ್ಲಾಗು ವಿಷ್ಣು ಬ್ಲಾಗುದೇವೋ ಮಹೇಶ್ವರಃ ಬ್ಲಾಗೇ ಸಾಕ್ಶಾತ್ ಪರ ಬ್ರಹ್ಮ ತಸ್ಮೈಶ್ರೀ ಬ್ಲಾಗುವೇ ನಮಃ...........ಅಲ್ಲವೇ...??. Posted by ಜಲನಯನ at 10:28 AM 22 comments: Friday, December 11, 2009 ಯಾರಲ್ಲಿ ಹೇಳಿಕೊಳ್ಳಲಿ ನನ್ನ ಗೋಳು..?? ನಾನು ಗಂಡಾಗಿ ಹುಟ್ಟಿದ್ದೇ ತಪ್ಪೇ??...ನನ್ನ ನೋವನ್ನೇಕೆ ಈ ಹೆಣ್ಣುಗಳು ಅರ್ಥಮಾಡಿಕೊಳ್ಳುವುದಿಲ್ಲ..??!! ದೇವರೇ..ಯಾವ ಜನ್ಮಕ್ಕೂ ಬೇಡ ಈ ಗಂಡಾಗುವ ಕರ್ಮ... ಹಯವದನ ಮನಸ್ಸಿನಲ್ಲೇ ನೋವು ಅನುಭವಿಸುತ್ತಾ...ದೇವರಲ್ಲಿ ಬೇಡಿಕೊಳ್ಳತೊಡಗಿದ... ಅಂದು.. ಹೊರಗಡೆ ಅಡ್ಡಾಡಿ...ಮನೆಗೆ ಅಲ್ಪಸ್ವಲ್ಪ ಏನಾದರೂ ತರೋಣ ಅಂತ ಹೊರಟಿದ್ದ ಹಯವದನ... ಇಡೀ ಕಾಲೊನಿಯಲ್ಲೇ ಬಹುಸ್ಫುರದ್ರೂಪಿ ಕಟ್ಟುಮಸ್ತಾದ ಅಂಗಸೌಸ್ಠವ ಹೊಂದಿದ್ದ ಯುವ ಚೇತನ ಪುಟಿಯುವ ನವ ಯುವಕ ಇವನು. ಎಲ್ಲ ಹೆಣ್ಣುಗಳ ಕಣ್ಣೂ ಇವನಮೇಲೆಯೇ.. ಆಜಾನುಬಾಹು ವ್ಯಕ್ತಿತ್ವ...ಮುಖದಲ್ಲಿ ಬಹು ಆಕರ್ಷಣೀಯ ಕಾಂತಿ, ನಡೆದಾಡಿದರೆ ರಾಜಗಾಂಭೀರ್ಯ ತುಳುಕುತ್ತಿತ್ತು. ಯಾವುದೇ ಹೆಣ್ಣು ಆಸೆ ಪಡುವ ಎಲ್ಲ ಗುಣ ಅವನಲ್ಲಿದ್ದುದರಿಂದಲೇ ಎಲ್ಲ ಹೆಣ್ಣುಗಳ ಕಣ್ಣೂ ಇವನ ಮೇಲೆ. ಕಾಲೋನಿಯ ಬಹು ಕ್ವಾಲಿಫೈಯ್ಡ್ ಗಂಡುಗಳಲ್ಲಿ ಒಬ್ಬನಾದರೂ ಇವನ ರೂಪಕ್ಕೆ ಎಲ್ಲ ಹೆಣ್ಣುಗಳೂ ಮಾರುಹೋಗಿದ್ದವು. ತನ್ನ ಮನೆಗೆ ಬೇಕಾದ ಸಾಮಾನು ಸರಂಜಾಮನ್ನು ಹುಡುಕುವ ಅವನ ಕಣ್ಣಿಗೆ ಮೂರು ನವ ಯುವತಿಯರ ಕಣ್ಣುಗಳು ಹಿಂಬಾಲಿಸುವುದನ್ನು ಕಂಡುಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಬೇಗ ಬೇಗ ..ಅವಸವಸರದಲ್ಲಿ ಸಾಮಾನನ್ನು ತೆಗೆದುಕೊಂಡು ಕಡೆದಾಗಿ ಬೇಕಾಗಿದ್ದ ವಸ್ತುವಿಗೆ ಸ್ವಲ್ಪ ಬಿಕೋ ಎನ್ನುವ ಜಾಗಕ್ಕೆ ಬಂದಿದ್ದ...ಸಂಜೆ ಗತ್ತಲು ..ಅವರಿಸಿದ್ದರಿಂದ..ಭಯ ಆವರಿಸಿತು. ಹಯವದನ ಹಿಂಬಾಲಿಸಿದ ಕಣ್ಣುಗಳು ಕತ್ತಲಲ್ಲಿ ಇನ್ನೂ ಹೆಚ್ಚಾಗಿ ಮಿನುಗುತ್ತಾ ಘೋರವೆನಿಸತೊಡಗಿತು.. ತನ್ನ ಬೇಕಾದ ಸಾಮಾನನ್ನು ಇನ್ನೇನು ತಗೆದುಕೊಳ್ಳಬೇಕು ಎನ್ನುವಾಗ ಮೂವರು ಯುವತಿಯರೂ ಸುತ್ತುಗಟ್ಟಿದರು..ಅವನ ಅಂಗಗಳ ಬಗ್ಗೆ ವಿವರಿಸುತ್ತಾ ಛೇಡಿಸತೊಡಗಿದರು.. ಒಬ್ಬಳು ಅವನ ಮೈಮೇಲೆ ಮೃದುವಾಗಿ ಕೈಯಾಡಿಸಿದಳು...ಇನ್ನೊಬ್ಬಳು ತನ್ನ ಬಾಹುಗಳಿಂದ ಗಟ್ಟಿಯಾಗಿ ತಬ್ಬಿಕೊಳ್ಳಲು ಮುಂದಾದಳು...ಕೊಸರಿಕೊಂಡ ಹಯವದನ..ತಪ್ಪಿಸಿಕೊಂಡು ಸತ್ತೆನೋ ಕೆಟ್ಟೆನೋ ಎಂದು.. ಓಡಲಾರಂಭಿಸಿದ...ಕತ್ತಲಾಗಿತ್ತು.. ಗಾಭರಿಯಲ್ಲಿ ದಾರಿ ತಪ್ಪಿದ..ಕುರುಚುಲು ಗಿಡ ಎತ್ತರ ಹುಲ್ಲಿನ ಬಯಲಿಗೆ ಬಂದಿದ್ದ...ದಾರಿತಪ್ಪಿದ ಗಂಡು ಈಗ ಸುಲಭವಾಗಿ ಸಿಗುವಂತಾದ... ಇಬ್ಬರು ಹೆಣ್ಣುಗಳು ಅವನಮೇಲೆ ಬಿದ್ದು ಕೆಡಹಿದರು..ಹಯವದನನ ಕೊಸರಾಡಿದರೂ ಆಗಲಿಲ್ಲ .. ವಿಲಕ್ಷಣ ಮತ್ತು ಬಿಡೆವೆಂಬ ಛಲ ಆ ಹೆಣ್ಣುಗಳಲ್ಲಿತ್ತು...ಹಯವದನನ ಶಕ್ತಿ ಕುಗ್ಗತೊಡಗಿತು....ಕತ್ತಲೂ ಹೆಚ್ಚಾಯಿತು...ಸೋಲತೊಡಗಿದ..ಹೆಣ್ಣುಗಳು ಗೆಲ್ಲತೊಡಗಿದವು......ಏನಾಗಬಾರದೆಂದು ಜಾಗರೂಕನಾಗಿದ್ದನೋ ಅದು ಅಂದು ಆಗೇ ಹೋಯಿತು..ಹಯವದನನ ಜೀವನದಲ್ಲಿ.....ಛೇ..ದೈವವೇ..ಗಂಡಿಗೇಕೆ ಇಂಥ ಶಿಕ್ಷೆ ಎಂದು..ಗೋಳಾಡಿದ. ಈಗ..ಪಾಪದ..ಫಲ ಬೆಳೆಯುತ್ತಿದೆ ಇವನ ಹೊಟ್ಟೆಯಲ್ಲಿ..ಅದಕ್ಕೆ ಕಾರಣರಾದ ಆ ಮೂರೂ ಹೆಣ್ಣುಗಳು...ರಾಜಾರೋಷವಾಗಿ ತಿರುಗುತ್ತಿವೆ..ಊರಲ್ಲೆಲ್ಲಾ... ತನ್ನ ಪ್ರಸವ ವೇದನೆಯನ್ನು ನೆನೆದು ಹಲುಬುತ್ತಿದ್ದಾನೆ ಹಯವದನ..... ಇಗೋ ಇಲ್ಲಿದೆ ನೀವೇ ನೋಡಿ ಅವನ ಗೋಳು ಎಂತಹುದೆಂದು.... ಸ್ನೇಹಿತರೇ..ಇದು ಹೆರುವ ಗಂಡು....ಸಮುದ್ರಕುದುರೆ...ಇದೊಂದು ಮೀನು......ಇದರ ಬಗ್ಗೆ ವಿವರ ನನ್ನ ಮೇ ಬ್ಲಾಗ್ ಪೋಸ್ಟ್ ನೋಡಿ.....ಹಹಹಹ...
ಆಫೀಸಿನಿಂದ ಮನೆಗೆ ಬಂದ ಮೇಲೆ ರಾತ್ರಿ ಬಹಳ ಸಮಯದವರೆಗೂ ನನ್ನ ವೆಬ್ ಸೈಟ್ ಕೆಲಸ ಮಾಡುತ್ತಾ ಇದ್ದೆ. ಕೊನೆಗೂ ಅದು ಒಂದು ಹಂತಕ್ಕೆ ತಲುಪಿದ್ದು ಮೊದಲ ಆವೃತ್ತಿ ಬಿಡುಗಡೆಗೊಂಡಿದೆ. ಹಾಗಾಗಿ ಇವತ್ತು ಮನೆಗೆ ಬಂದಾಗ ಮಾಡಲು ಏನೂ ಕೆಲಸ ಇಲ್ಲ ಅಂತ ಅನ್ನಿಸುತ್ತಿತ್ತು, ಏನೋ ಕಳೆದು ಕೊಂಡಂತಹ ಅನುಭವ, ಜೊತೇಗೆ ನಂದೂ ಒಂದು ವೆಬ್ ಸೈಟ್ ಆಯ್ತು ಅಂತ ಖುಷಿನೂ ಆಗ್ತಿತ್ತು. ಇವತ್ತು ಬಹಳ ದಿನಗಳ ಬಳಿಕ ವ್ಯಾಯಾಮ ಮಾಡಿದೆ, ತಂದು ಓದದೇ ಇಟ್ಟಿದ್ದ ಪೂರ್ಣಚಂದ್ರ ತೇಜಸ್ವಿಯವರ "ಪಾಕಕ್ರಾಂತಿ ಮತ್ತು ಇತರ ಕಥೆಗಳು" ಸಲ್ಪ ಓದಿದೆ. ಬಹಳ ದಿನಗಳ ನಂತರ ಗೆಳೆಯನ ಜೊತೆ ಫೋನಿನಲ್ಲಿ ಮಾತಾಡಿದೆ. ಆಮೇಲೆ ಊಟ ಮಾಡಿ ಬಂದು ಹಾಗೇ ನನ್ನ ಐಡಿಯಾಗಳ ಪುಸ್ತಕ (ನನಗೆ ಹೊಳೆದ ಐಡಿಯಾಗಳು, ಮಾಡಬೇಕಾದ ಕೆಲಸಗಳನ್ನು ಬರೆದಿಟ್ಟುಕೊಂಡ ಪುಸ್ತಕ :) ) ನೋಡುತ್ತಿರುವಾಗ, ಅದರ ಒಂದು ಪುಟದಲ್ಲಿ ಮಾಡದೇ ಉಳಿದ ಕೆಲಸಗಳ ಪಟ್ಟಿ ೨೫ಕ್ಕೂ ಹೆಚ್ಚು ಇರುವುದನ್ನು ನೋಡುತ್ತಾ ಹಂಗೇ ನಿದ್ರೆ ಹೋದೆ. About Aravinda Vishwanathapura Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
ಮೈಸೂರು: ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಾರ್ವಜನಿಕ ಕುಂದುಕೊರತೆಗಳ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಾಹನಗಳ ಹೈಬೀಮ್ ದೀಪ ಗಳಿಂದ ಕಿರಿಕಿರಿ ತಪ್ಪಿಸಿ, ಖಾಸಗಿ ಆಯುರ್ವೇದಿಕ್ ಕ್ಲಿನಿಕ್‍ಗಳಲ್ಲಿ ಅಲೋಪತಿ ಔಷಧಿಗಳ ವಿತರಣೆ ನಿಲ್ಲಿಸಿ, ಸಿಗ್ನಲ್ ದೀಪ ಅಳವಡಿಸಿ, ಜನರಿಗೆ ತೊಂದರೆಯಾ ಗುವ ಮುನ್ನ ಒಣಗಿದ ಮರಗಳನ್ನು ಕಡಿಯಬೇಕು. ರಸ್ತೆ, ಚರಂಡಿ, ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಬೇಕು ಎಂಬಿತ್ಯಾದಿ ಹಲವು ಸಮಸ್ಯೆಗಳು ಅನಾವರಣಗೊಂಡವು. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧೆಡೆಯಿಂದ ಬಂದ ದೂರವಾಣಿ ಕರೆ ಗಳ ಮೂಲಕ 18 ದೂರುಗಳು ದಾಖಲಾದವು. ಮೈಸೂರಿನ ಶ್ರೀರಾಂಪುರ ಬಡಾವಣೆ ಸುತ್ತಮುತ್ತ ಆಯುರ್ವೇದ ವೈದ್ಯರ ಖಾಸಗಿ ಕ್ಲಿನಿಕ್‍ಗಳಲ್ಲಿ ಆಯು ರ್ವೆದ ಔಷಧಿಗಳಿಗೆ ಬದಲು ಅಲೋಪತಿ ಔಷಧಿ ಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಇದರಿಂದ ರೋಗಿಗಳಿಗೆ ಇತರೆ ಸಮಸ್ಯೆ ಉಂಟಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಇಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಕೂಡಲೇ ದೂರುದಾರರಿಂದ ಈ ಬಗೆಗಿನ ಮಾಹಿತಿ ಪಡೆದು ಅಂತಹ ಕ್ಲಿನಿಕ್‍ಗಳ ಮೇಲೆ ದಿಢೀರ್ ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ಡಿಹೆಚ್‍ಓಗೆ ಸೂಚಿಸಿದರು. ಸಿಗ್ನಲ್ ಲೈಟ್: ಮೈಸೂರಿನ ಮಾನಂದವಾಡಿ ರಸ್ತೆ ಬಳಿ ಪ್ರಮುಖ ನಾಲ್ಕು ರಸ್ತೆಗಳು ಕೂಡುವ ರಿಂಗ್‍ರಸ್ತೆ ಜಂಕ್ಷನ್‍ನಲ್ಲಿ ಹೆಚ್ಚಿನ ವಾಹನಗಳ ಸಂಚಾರವಿದ್ದು, ಇಲ್ಲಿ ಸಿಗ್ನಲ್ ದೀಪ ಅಳವಡಿಸಬೇಕು. ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿಯೂ ನೇರ ಫೋನ್ ಇನ್‍ನಲ್ಲಿ ದೂರು ನೀಡಿದ್ದು, ಕೆ.ಆರ್.ಸಂಚಾರ ವಿಭಾಗದ ಅಧಿಕಾರಿಗಳು ಹಿಂಬರಹ ಸಹ ನೀಡಿದ್ದಾರೆ. ಇದನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ ಎಂದಷ್ಟೆ ಹೇಳಿ ಸುಮ್ಮನಾಗಿದ್ದಾರೆ. ಅನಾಹುತಗಳು ಸಂಭವಿಸುವ ಮುನ್ನ ಇಲ್ಲಿ ಸಿಗ್ನಲ್ ದೀಪ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಮುರಳಿ ಎಂಬುವರು ಮನವಿ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ರಸ್ತೆ ಯಲ್ಲಿ ಕೇರಳದಿಂದ ಹೆಚ್ಚು ಜನ ಮೈಸೂರು ಕಡೆಗೆ ಬರುತ್ತಾರೆ. ಅಲ್ಲದೆ ದಸರಾ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಹೆಚ್ಚು ವಾಹನ ಸಂಚಾರ ಇರುತ್ತದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ, ದಸರಾ ಒಳಗಾಗಿಯಾದರೂ ಸಿಗ್ನಲ್ ಲೈಟ್ ಅಳವಡಿಸಲು ಕ್ರಮ ವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಮೈಸೂರಿನಲ್ಲಿ ವಾಹನಗಳ ಹೈಬೀಮ್ ಲೈಟ್ (ಪ್ರಖರ ಬೆಳಕಿನ ದೀಪ) ಹೆಚ್ಚಾಗಿದ್ದು, ಕಣ್ಣು ಕೋರೈಸುವ ಇಂತಹ ದೀಪಗಳಿಂದ ಎದುರಿನಿಂದ ಬರುವ ವಾಹನ ಚಲಾ ಯಿಸುವವರಿಗೆ ಮತ್ತು ಸಾರ್ವಜನಿಕರಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ, ಕಣ್ಣು ಕೋರೈ ಸುವ ಇಂತಹ ಹೈಬೀಮ್ ಲೈಟ್‍ಗಳ ಬಳಕೆಗೆ ಕಡಿ ವಾಣ ಹಾಕಿ. ಇದು ಕುವೆಂಪುನಗರದ ಪುಟ್ಟಸ್ವಾಮಿ ಅವರ ದೂರು. ಈ ಸಂಬಂಧ ಪೊಲೀಸ್ ಹಾಗೂ ಆರ್‍ಟಿಓ ಜಂಟಿಯಾಗಿ ಕ್ರಮ ಕೈಗೊಂಡು ಸಾರ್ವ ಜನಿಕರಿಗಾಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಜಿಲ್ಲಾ ಧಿಕಾರಿ ಸೂಚನೆ ನೀಡಿದರು. ಕೆರೆ ಒತ್ತುವರಿ: ಜಿಲ್ಲೆಯ ಹಲವು ಕೆರೆಗಳ ಒತ್ತುವರಿ ಹಾಗೂ ಹೂಳೆತ್ತುವ ಕುರಿತು ಹಲವು ದೂರುಗಳು ಕೇಳಿ ಬಂದವು. ಈ ಪೈಕಿ ಸರಗೂರು ಗ್ರಾಮದ ವಿವಿಧ ಸರ್ವೆ ನಂಬರ್‍ನಲ್ಲಿರುವ ಕೆರೆ ಒತ್ತುವರಿಯಾಗಿದೆ ಎಂದು ಸರಗೂರು ಕೃಷ್ಣ ದೂರಿದರು. ಹೆಚ್.ಡಿ.ಕೋಟೆ ತಾಲೂ ಕಿನ ಹೊಮ್ಮರಗಳ್ಳಿಯ ಪುಟ್ಟರಾಜು ಅವರು, ಹಂಪಾ ಪುರ ಮತ್ತು ಹನುಮಂತನರಾಯನ ಕೆರೆ ಒತ್ತುವರಿ ಮತ್ತು ಹೂಳು ತೆಗೆಸುವ ಕುರಿತು ಪ್ರತ್ಯೇಕ ದೂರು ಗಳನ್ನು ದಾಖಲಿಸಿದರು. ಇದರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ರಸ್ತೆ ದುರಸ್ತಿಗೆ ಸೂಚನೆ: ಮೈಸೂರಿನ ಬನ್ನೂರು ರಸ್ತೆಯ ಹೆಚ್.ಡಿ.ದೇವೇಗೌಡ ವೃತ್ತದ ಬಳಿಯ ಉರ್ದು ಶಿಕ್ಷಕರ ಕಾಲೋನಿಯಲ್ಲಿ ಸಮರ್ಪಕ ನೀರು ಸರಬ ರಾಜಿಲ್ಲ. ರಸ್ತೆಗೆ ಜಲ್ಲಿ ಹಾಕಿದ್ದು, ಡಾಂಬರೀಕರಣ ಮಾಡಿಲ್ಲ. ಇದರಿಂದ ಜನ ಓಡಾಡಲು ತೊಂದರೆಯಾ ಗಿದೆ. ಸಾಯಿಬಾಬಾ ದೇವಸ್ಥಾನದಿಂದ ಎಡಕ್ಕೆ ಈ ಸಮಸ್ಯೆ ಇದೆ. ಜನರಿಗೆ ಧೂಳಿನ ಸ್ನಾನವಾಗುತ್ತಿದೆ. ಹಿರಿಯರು ಮತ್ತು ಮಕ್ಕಳಿಗೆ ಆರೋಗ್ಯದ ತೊಂದರೆಗಳು ಕಾಣಿಸಿ ಕೊಳ್ಳುತ್ತಿದೆ. ಮನೆ ಕಂದಾಯ, ನೀರು ಕಂದಾಯ ಸೇರಿ ದಂತೆ ಎಲ್ಲವನ್ನೂ ಕಟ್ಟಿದ್ದೇವೆ. ನಮಗೇಕೆ ಇಷ್ಟು ತೊಂದರೆ ನೀಡುತಿದ್ದೀರಿ. ಸ್ವಚ್ಛ ಭಾರತ್‍ನಲ್ಲಿ ಮೊದಲ ಸ್ಥಾನ ಪಡೆದ ಮೈಸೂರಿಗೆ ಈ ನಮ್ಮ ಬಡಾವಣೆ ಸೇರಿಲ್ಲವೇ? ಎಂಬುದು ಅಲ್ಲಿನ ಪುಟ್ಟಹನುಮೇಗೌಡ ಅವರ ಪ್ರಶ್ನೆ. ಇದನ್ನು ಆಲಿಸಿದ ಡಿಸಿ, ಕೂಡಲೇ ಸಮಸ್ಯೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರಿಗೆ ಸೂಚನೆ ನೀಡಿದರು. ಮೈಸೂರಿನ ಎನ್.ಆರ್.ಮೊಹಲ್ಲಾದ ಶ್ಯಾಮಲಾ ಅವರ ಪ್ರಕಾರ, ಎನ್‍ಜಿಓ ಕಾಲೋನಿಯ ಮೊದ ಲನೇ ಕ್ರಾಸ್‍ನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಕಸ ಹಾಕಲಾಗುತ್ತಿದೆ. ರೋಗ ರುಜಿನ ಹರಡುವ ಸಾಧ್ಯತೆ ಇದ್ದು, ಕೂಡಲೇ ತೆರವುಗೊಳಿಸಲು ಮನವಿ ಮಾಡಿ ದರು. ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮ ದಲ್ಲಿ ಖಾಸಗಿ ಅಂಗಡಿಗಳಲ್ಲಿ ಕೃಷಿ ಮತ್ತು ಆಹಾರ ಪದಾರ್ಥಗಳಿಗೆ ಎಂಆರ್‍ಪಿ ದರಕ್ಕಿಂತ ಹೆಚ್ಚಿನ ದರ ಪಡೆಯಲಾಗುತ್ತಿದ್ದು, ಕ್ರಮ ಕೈಗೊಳ್ಳಿ ಎಂಬುದು ಅಲ್ಲಿನ ನಾಗರಿಕರ ದೂರು. ಪಿರಿಯಾಪಟ್ಟಣ ತಾಲೂ ಕಿನ ಕಗ್ಬುಂಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಯಿಂದ ತೆಗೆದುಕೊಂಡ ಉಪಕರಣಗಳಿಗೆ ಇಲಾಖೆ ಯಿಂದ ಸಹಾಯಧನ ನೀಡುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.
ವಿಧಾನಸೌಧ ಸ್ಟಾಪಿನಲ್ಲಿ ಮೆಟ್ರೋ ನಿಂತಾಗ, ನನ್ನ ಪಕ್ಕದಲ್ಲೇ ಒಬ್ಬರು ಹಿರಿಯ ಮಹಿಳೆ ಬಂದು ನಿಂತರು. ಲಗುಬಗೆಯಿಂದ ಮೊಬೈಲು ತೆಗೆದೋರೇ, ಹೆಡ್ ಸೆಟ್ಟು ಸಿಕ್ಕಿಸಿಕೊಂಡು, ಅದ್ಯಾವುದೋ ಸಿನಿಮಾ ನೋಡಲು ಶುರುಮಾಡಿದರು. ಅಷ್ಟು ಗಡಿಬಿಡಿಯಿಂದ ಅದೇನು ನೋಡುತ್ತಿದ್ದಾರೆ ಎಂದು ಸಹಜ ಕುತೂಹಲದಿಂದ ಕಣ್ಣಾಡಿಸಿದರೆ, ಆಪ್ ಒಂದರಲ್ಲಿ ಮೊದಲೇ ಡೌನ್ ಲೋಡು ಮಾಡಿಟ್ಟುಕೊಂಡಿದ್ದ ಹಾಲಿವುಡ್ ಸಿನಿಮಾ, ಐರನ್ ಮ್ಯಾನ್. ನನ್ನಮ್ಮನ ವಯಸ್ಸಿನ ಮಹಿಳೆಯೊಬ್ಬರು ಈ ಚಿತ್ರ ನೋಡುತ್ತಿದ್ದಾರಲ್ಲ ಎಂದು ಅಚ್ಚರಿಯೂ, ಖುಷಿಯೂ ಆಯಿತು. ಹಾಂ, ಇಂತಹ ಅನುಭವ ಇದೇ ಮೊದಲೇನೂ ಅಲ್ಲ. ಬೆಂಗಳೂರಿನ ಮೆಟ್ರೋ ಹತ್ತಿದ ಕೂಡಲೇ, ಅದರ ಅಂದ ಚಂದ ಗಮನ ಸೆಳೆಯುತ್ತದೋ ಇಲ್ಲವೋ, ಇದೊಂದು ವಿಚಾರ ಮಾತ್ರ ಸಟ್ಟನೆ ತಲೆಗೆ ಹೋಗುತ್ತದೆ. ಏರು ಹೊತ್ತಿನ ಕಿಕ್ಕಿರಿದ ಸಂದಣಿಯಲ್ಲೂ ವಯಸ್ಸಿನ ಯಾವುದೇ ಬೇಧಭಾವ ಇಲ್ಲದೇ, ಎಲ್ಲರೂ ಎರಡೂ ಕಿವಿಗಳಿಗೆ ಹೆಡ್ಫೋನು ಸಿಕ್ಕಿಸಿಕೊಂಡು ತಮ್ಮದೇ ಏಕಾಂತವನ್ನು ಸೃಷ್ಟಿ ಮಾಡಿಕೊಂಡು ಮೊಬೈಲಿನೊಳಗೆ ಕಳೆದು ಹೋಗಿರುತ್ತಾರೆ. ತಮ್ಮಕ್ಕಷ್ಟೆ ತಾವು ನಗುತ್ತ, ಪೆಚ್ಚುಮೋರೆ ಹಾಕುತ್ತ ಪಕ್ಕದವನ ಜಗತ್ತಿಗೂ ತನಗೂ ಸಂಬಂಧವೇ ಇಲ್ಲದ ಹಾಗೆ ನಿಂತಿರುತ್ತಾರೆ. ಯೂಟ್ಯೂಬು, ಫೇಸ್ ಬುಕ್ಕು, ಹಾಟ್ ಸ್ಟಾರುಗಳೇ ಮೊದಲಾದ ಥರಹೇವಾರಿ ಅಪ್ಲಿಕೇಶನ್ನುಗಳಲ್ಲಿನ ರಂಜನೆಯ ಲೋಕದಲ್ಲಿ ಸೇರಿಕೊಂಡಿರುತ್ತಾರೆ. ಬೆಂಗಳೂರು ಮಾತ್ರವಲ್ಲ, ಜಗತ್ತಿನ ಎಲ್ಲಕಡೆ ಇವತ್ತಿನ ಹೊತ್ತಿನಲ್ಲಿ ಕಾಣುವ ಸರಳ ದೃಶ್ಯ ಇದು. ಬೇರೆಡೆಗಳಲ್ಲಿ ಕೊಂಚ ಬೇಗ ಶುರುವಾಗಿದ್ದು, ಭಾರತಕ್ಕೆ ಮಾತ್ರ ತಡವಾಗಿ ಬಂದಿದೆ, ಅಷ್ಟೆ. ಅಂತರ್ಜಾಲ ಬಳಕೆಯ ಕ್ರಾಂತಿ ಭಾರತದಲ್ಲಿ ಇಪ್ಪತ್ತನೇ ಶತಮಾನದ ಅಂತ್ಯದಲ್ಲಾಯಿತು. ಸ್ಮಾರ್ಟ್ ಫೋನುಗಳು ಇಲ್ಲಿಗೆ ಕಾಲಿಟ್ಟದ್ದೂ ಅಲ್ಲಿಂದ ಕೆಲ ವರುಷಗಳ ನಂತರ. ಮೊಬೈಲ್ ಫೋನೆಂಬುದರಲ್ಲಿ ಕರೆ ಮಾಡುವ ಸೌಲಭ್ಯಕ್ಕಿಂತ ಬೇರೆಲ್ಲ ವಿಚಾರಗಳು ಮಹತ್ವ ಪಡೆದುಕೊಳ್ಳಲು ಆರಂಭವಾಗಿದ್ದೂ ಆವಾಗಲೇ. ಆಂಡ್ರಾಯ್ಡ್, ವಿಂಡೋಸ್, ಐಓಎಸ್ ಗಳೆಂಬ ಥರಹೇವಾರಿ ಆಪರೇಟಿಂಗ್ ಸಿಸ್ಟಂ ಗಳನ್ನು ಹೊಂದಿದ ಸ್ಮಾರ್ಟ್ ಫೋನುಗಳು ಭಾರತೀಯ ತಂತ್ರಜ್ಞಾನ ಮಾರುಕಟ್ಟೆಯ ಮೇಲೆ ಅಕ್ಷರಶಃ ದಾಳಿಯನ್ನೇ ನಡೆಸಿ, ಇಲ್ಲಿನ ಗ್ರಾಹಕರಿಗೆ ದಿಗಿಲಾಗುವ ಮಟ್ಟದ ಆಕರ್ಷಕ ಆಯ್ಕೆಗಳು ಲಭ್ಯವಾದವು. ಬೆರಳಂಚಿನ ಸ್ಪರ್ಶಕ್ಕೆ ಜಗತ್ತೇ ತೆರೆದುಕೊಳ್ಳುವ ಈ ರೋಮಾಂಚನ ಯಾವಾಗ ಆರಂಭವಾಯಿತೋ, ಅಂದಿನಿಂದ ಇಂದಿನವರೆಗೂ, ತೋರು ಬೆರಳ ತುದಿಗೆ ಮಾಹಿತಿ ಪ್ರವಾಹವೇ ಹರಿದು ಬರುತ್ತಿದೆ. ಬೇಕೋ ಬೇಡವೋ ಧಂಡಿಯಾಗಿ ಮೊಬೈಲು ತುಂಬ ಮನೋರಂಜನೆ ತುಂಬಿಕೊಂಡಿದೆ. ಮೊಬೈಲ್ ಜಾಹೀರಾತಿನ ಬಣ್ಣ ಬಣ್ಣದ ನೀಯಾನು ಫಲಕಗಳು ಬಸರೀಕಟ್ಟೆಯಿಂದ ಬೆಂಗಳೂರು ತುದಿಯವರೆಗೆ ತಲುಪಲು ಮುಖ್ಯ ಕಾರಣ ಕಿಸೆಗೆ ಬಿಸಿಯಾಗದ ದರ ಮತ್ತು ಈ ರಂಜನೆ ಎನ್ನುವ ಆಯಾಮ. ಚಲನಚಿತ್ರಗಳ ಪುಟ್ಟ ತುಣುಕುಗಳೂ, ಇಷ್ಟದ ಹಾಡುಗಳ ಡೌನ್ ನೋಡು ಮತ್ತು ನಾಲ್ಕಾರು ಎಂಬೀಗಳ ವಾಟ್ಸಪ್ ಸಂದೇಶಗಳಿಂದ ಆರಂಭವಾದ ಈ ಗೀಳು, ಈಗ ಮರಳಿ ಹೋಗಲಾದಷ್ಟು ದೂರದ ದಾರಿಯಲ್ಲಿ ನಮ್ಮನ್ನ ಕರೆತಂದು ಬಿಟ್ಟಿದೆ. ಯಾವಾಗ ಜಿಯೋ ಎಂಬ ದೂರವಾಣಿ ದೈತ್ಯ ಬಂದು, ಮೆಗಾಬೈಟುಗಳ ಪ್ರಪಂಚದಿಂದ ಗಿಗಾಬೈಟುಗಳ ಅಗಾಧ ಅಂತರ್ಜಾಲ ಪ್ರಪಂಚವನ್ನು ದರ್ಶನ ಮಾಡಿಸಿತೋ, ಅಲ್ಲಿಂದಾಚೆಗೆ ನಡೆದದ್ದು ಮನರಂಜನೆಯ ಮೇಘಸ್ಪೋಟ! ಆಮೇ ವೇಗದಲ್ಲಿ ದಿನಕ್ಕೆ ಐವತ್ತು ಅರವತ್ತು ಎಂಬೀಗಳಲ್ಲಿ ಬದುಕುತ್ತಿದ್ದ ಜಂಗಮಜೀವಿಗಳಿಗೆ ಒಮ್ಮೆಗೇ ತಿಂಗಳುಗಳ ಕಾಲ ಉಚಿತವಾಗಿ ನಾಲ್ಕಾರು ಜೀಬಿಗಳ ಡಾಟಾ ಪ್ಯಾಕ್, ಅದೂ ಭರಪೂರ ವೇಗದಲ್ಲಿ! ನಿತ್ಯ ಗಂಜಿಯುಣ್ಣುತ್ತಿದ್ದವನಿಗೆ ಮೃಷ್ಟಾನ್ನ ಭೋಜನದ ಸಂಭ್ರಮ. ಇದೇನು ಭ್ರಮೆಯೋ ಸತ್ಯವೋ ಅರಿಯಲಾಗದ ಪರಿಸ್ಥಿತಿ. ಮೊದಮೊದಲು ಹೀಗಳೆದವರೂ ಕೊನೆಗೆ ಅದೇ ದಾರಿಗೆ ಬಂದರು. ಒಂದು ಜೀಬಿ ಇಂಟರ್ ನೆಟ್ ಗೆ ನಾಲ್ಕುನೂರು ರೂಪಾಯಿಗಳಿಂದ ನಾಲ್ಕೆಂಟು ರೂಪಾಯಿಗೆ ಇಳಿದದ್ದು ಪವಾಡ ಸದೃಶವಾಗಿತ್ತು. ಇದಾದಮೇಲೆ ಭಾರತದ ಸಕಲೆಂಟು ದೂರವಾಣಿ ಕಂಪನಿಗಳೂ ತಮ್ಮ ಅಂತರ್ಜಾಲ ದರವನ್ನು ಇಳಿಸಲೇಬೇಕಾಯಿತು. ಈ ಮೊಬೈಲ್ ಕಂಪನಿಗಳ ಡಾಟಾಸಮರದಲ್ಲಿ ಕೊನೆಗೂ ಗೆದ್ದಿದ್ದು, ಬಳಕೆದಾರನೇ. ತಿಂಗಳಿಗೆ ಸಾಕಾಗುತ್ತಿದ್ದ ಒಂದು ಜಿಬಿ ಎಂಬ ಮಾಯಾಂಗನೆ, ಈಗ ಒಂದನೇ ದಿನ ಸಂಜೆಯವರೆಗೂ ಬರುವುದಿಲ್ಲ ಎಂಬಲ್ಲಿಗೂ ಬಂತು! ಹೆಚ್ಚೂಕಡಿಮೆ ಉಚಿತವಾಗಿ ದೊರಕಿದ ಈ 4ಜಿ ಇಂಟರ್ ನೆಟ್ ಭಾರತದ ಮನರಂಜನಾ ಪ್ರಪಂಚದ ದಿಕ್ಕನ್ನು ಶಾಶ್ವತವಾಗಿ ಬದಲಾಯಿಸಿಬಿಟ್ಟಿತು. ಕುಟುಂಬವೆಲ್ಲ ಕೂತು ಸಂಜೆಯಿಂದ ರಾತ್ರಿಯವರೆಗೆ ಮನೆಯಲ್ಲಿ ಟೀವಿ ಧಾರಾವಾಹಿಗಳನ್ನು, ಸಿನಿಮಾಗಳನ್ನು ನೋಡುವ ಕಾಲ, ನಿಧಾನಕ್ಕೆ ಮಾಯವಾಗುತ್ತಿದೆ. ಯಾಕೆಂದರೀಗ ಅಪ್ಪ ಅಮ್ಮ ಮಗ ಮಗಳು, ಎಲ್ಲರ ಕೈಯಲ್ಲೂ 4ಜಿ ಮೊಬೈಲು. ಪ್ರತೀ ಮೊಬೈಲುಗಳಲ್ಲೂ ಹತ್ತಾರು ಅಪ್ಲಿಕೇಶನ್ನುಗಳು. ರಾತ್ರಿ ನೋಡಲಾಗದ ಸೀರಿಯಲ್ಲು ಅಲ್ಲೇ ಕೈಯಂಚಿನ ಮೊಬೈಲ್ ನಲ್ಲಿ ಈ ಕ್ಷಣ ಪ್ರತ್ಯಕ್ಷ. ಹೆಂಡತಿ ಸೀರಿಯಲ್ ನೋಡಿದರೆ ನೋಡಿಕೊಳ್ಳಲಿ, ಐಪೀಎಲ್ ಮ್ಯಾಚು ಕರತಲದಲ್ಲೇ ಕಾಣಿಸುತ್ತದೆ. ರಿಮೋಟ್ ಗಾಗಿ ಹೋರಾಟವಿಲ್ಲ, ಇಷ್ಟದ ಕಾರ್ಯಕ್ರಮಕ್ಕಾಗಿ ಕಾದಾಟವಿಲ್ಲ. ಗಂಡ ಹೆಂಡಿರಿಬ್ಬರೇ ಇರುವ ನ್ಯೂಕ್ಲಿಯರ್ ಕುಟುಂಬ ಕೂಡ ಮತ್ತೂ ವಿಭಜನೆಗೆ ಒಳಗಾಗಿ ಸೋಫಾದ ಒಂದೊಂದು ಮೂಲೆಗೆ ಸೇರಿ ಹೋಗಿವೆ ಮತ್ತು ತಮ್ತಮ್ಮ ಮೊಬೈಲು ಸ್ಕ್ರೀನುಗಳೊಳಗೆ ಕಣ್ಣು ಕೀಲಿಸಿವೆ. ಮೊಬೈಲ್ ಎಂಬ ತೀರದ ದಾಹದಲ್ಲಿರುವ ಬಳಕೆದಾರರ ಬಾಯಾರಿಕೆ ತಣಿಸಲೆಂದೇ, ಮನರಂಜನೆಯ ಕಂಟೆಂಟ್ ಸೃಷ್ಟಿ ಮಾಡುವ ದೊಡ್ಡದೊಂದು ಸಮೂಹವೇ ನಮ್ಮಲ್ಲಿ ತಯಾರಾಗಿ ಕುಳಿತಿದೆ. ಮುಂದೊಂದು ದಿನ ಭಾರತದಲ್ಲಿ ಇಂತಹ ನೆಟ್ ಕ್ರಾಂತಿ ಆಗುತ್ತದೆ ಎಂಬ ಅಂದಾಜಿದ್ದ ಕಂಪನಿಗಳು ಹಲವು. ಅವರುಗಳ ದೂರದೃಷ್ಟಿ, ನಮ್ಮ ಮಾರುಕಟ್ಟೆಯನ್ನು ಮೊದಲೇ ಅಧ್ಯಯನ ಮಾಡಿತ್ತು ಕೂಡ. ಜಿಯೋ ಗುಲ್ಲೆಬ್ಬಿಸಿದ ಹೊತ್ತಲ್ಲೇ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂತು, ಅದರ ಬೆನ್ನಿಗೇ ಹಾಟ್ ಸ್ಟಾರ್, ಅಮೇಜಾನ್ ಪ್ರೈಮ್ ಬಂದವು. ಈ ಆಪ್ ಗಳೀಗ ನಮ್ಮ ಮೊಬೈಲುಗಳಲ್ಲಿ ವಿರಾಜಮಾನರಾಗಿ ಒಂದೆರಡು ವರುಷಗಳೇ ಕಳೆದಿವೆ. ಇವರಿಗೆ ಸೆಡ್ಡು ಹೊಡೆಯಲೆಂದೇ ನಮ್ಮ ನೆಲದ ಮಂದಿಯೂ ಎದ್ದು ನಿಂತಿದ್ದಾರೆ. Alt Balaji ಎಂಬ ರಂಜನಾತ್ಮಕ ಆಪ್ ಅನ್ನು ಎಕ್ತಾಕಪೂರ್ ಹೊರ ತಂದಿದ್ದರೆ, ಎರೋಸ್ ನೌ ಸೇರಿದಂತೆ ಹಲ ಸಿನಿಮಾ ತಯಾರಿಕಾ ಕಂಪನಿಗಳು ಅಪ್ಲಿಕೇಶನ್ ತಂದಿವೆ, ಜಿಯೋ ಟೀವಿ, ಏರ್ ಟೆಲ್ ಟಿವಿ, ಮೊದಲಾದ ಆಪ್ ಗಳು ಶುರುವಾಗಿದೆ. ಪ್ರಾಯಶಃ ಹೆಚ್ಚಿನೆಲ್ಲ ಪ್ರಮುಖ ಮನರಂಜನಾ ಟಿವಿ ವಾಹಿನಿಗಳಂತೂ ತಮ್ಮ ಅಪ್ಲಿಕೇಶನ್ ಈಗಾಗಲೇ ಹೊರತಂದಿವೆ. ಕಲರ್ಸ್ ನ ವೂಟ್, ಝೀ ವಾಹಿನಿಯ ಝೀ5, ಸನ್ ನೆಟ್ ವರ್ಕ್ ನ ಸನ್ ನೆಕ್ಸ್ಟ್, ಸ್ಟಾರ್ ಚಾನಲುಗಳ ಹಾಟ್ ಸ್ಟಾರ್, ಸೋನಿಯ ಸೋನಿಲೈವ್, ಹೀಗೆ ಎಲ್ಲ ಮನರಂಜನಾ ವಾಹಿನಿಗಳ ಧಾರಾವಾಹಿಗಳು, ಸಿನಿಮಾಗಳು ಮೊಬೈಲ್ ನಲ್ಲೇ ಲಭ್ಯ ಈಗ. ಕನ್ನಡದ ಧಾರಾವಾಹಿಯೊಂದು ಅನಾಯಾಸವಾಗಿ ಮೊಬೈಲ್ ನಲ್ಲೇ ನೋಡಲು ಸಿಕ್ಕರೆ, ಅದೂ ಹೆಚ್ಚಿನ ಜಾಹೀರಾತುಗಳ ಕಿರಿಕಿರಿ ಇಲ್ಲದೇ- ಟಿವಿಯಲ್ಲಿ ನೋಡುವ ರಗಳೆ ಯಾಕೆ ಬೇಕು ಹೇಳಿ? ಇಷ್ಟವಾದ ಸಂಚಿಕೆಗಳ ಮರುವೀಕ್ಷಣೆ, ಸರಳವಾಗಿ ಇತರರೊಡನೆ ಹಂಚಿಕೊಳ್ಳುವ ಅವಕಾಶ, ಹೊಸ ಎಪಿಸೋಡು ಬಂದರೆ ಠಣ್ಣೆನ್ನುವ ನೋಟಿಫಿಕೇಷನ್ನು! ಇನ್ನೇನು ಬೇಕು? ಇಂತಹ ಎಲ್ಲ ಅಪ್ಲಿಕೇಶನ್ನುಗಳ ಡೌನ್ ಲೋಡ್ ಸಂಖ್ಯೆಯನ್ನು ಗಮನಿಸಿದಾಗ ದಿನೇ ದಿನೇ ಇವುಗಳ ಜನಪ್ರಿಯತೆ ಹೆಚ್ಚುತ್ತಿರುವುದಂತೂ ಸ್ಪಷ್ಟ. ವಿದೇಶೀ ಸಿನಿಮಾಗಳು, ಸೀರಿಸ್ ಗಳಿಗಷ್ಟೇ ಸೀಮಿತವಾದ ಅಪ್ಲಿಕೇಶನ್ ಗಳಾಗಿದ್ದ ನೆಟ್ ಫ್ಲಿಕ್ಸ್, ಅಮೇಜಾನ್ ಕೂಡ ಈಗ ಇದೇ ಜಾಡು ಹಿಡಿದಿವೆ. ಭಾರತದ ಮಂದಿ ತಮ್ಮ ಮಣ್ಣಿನ ಇಲ್ಲಿನ ಕಥೆಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ ಎಂಬುದನ್ನು ಅರಿತುಕೊಂಡಿರುವ ಇವರುಗಳು ಈಗ ಇಲ್ಲಿನದೇ ಕಥೆಗಳನ್ನು ಧಾರಾವಾಹಿ, ಸಿನಿಮಾಗಳ ರೂಪದಲ್ಲಿ ನೇರವಾಗಿ ಮೊಬೈಲ್ ತೆರೆಗೆ ತರುತ್ತಿದ್ದಾರೆ. ’ಒರಿಜಿನಲ್ಸ್’ ಎಂದೇ ಪ್ರಸಿದ್ಧವಾಗಿರುವ ಈ ಮಾದರಿಯನ್ನು ನಮ್ಮ ಜನ ಇಷ್ಟಪಟ್ಟು ಸ್ವೀಕರಿಸುತ್ತಿದ್ದಾರೆ. ಶಾರುಕ್ ಖಾನ್, ನವಾಜುದ್ದೀನ್ ಸಿದ್ದಿಕಿ, ಸೈಫ್ ಅಲಿ ಖಾನ್, ವಿವೇಕ್ ಒಬೆರಾಯ್- ಇವರುಗಳೆಲ್ಲ ಈ ಕಿರುಸ್ಕ್ರೀನಲ್ಲಿ ಕಾಣಿಸಿಕೊಂಡಿದ್ದಾರೆ, ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನೆಲ್ಲ ಬಾಲಿವುಡ್ ನಟರು, ಅಷ್ಟೇಕೆ- ನಮ್ಮ ದಕ್ಷಿಣ ಭಾರತದ ನಟರುಗಳು ಕೂಡ ಒಂದಿಲ್ಲೊಂದು ಬಗೆಯಲ್ಲಿ ಈ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಹೊಂದಲು ಪ್ರಯತ್ನ ಮಾಡುತ್ತಿದ್ದಾರೆ. ಬಾಹುಬಲಿಯಂತ ಮಹೋನ್ನತ ಚಿತ್ರದಲ್ಲಿ ಅಭಿನಯಿಸಿ ಬಂದ ಕೂಡಲೇ ರಾಣಾ ದಗ್ಗುಬಾಟಿ ಮಾಡಿದ್ದು, ’ಸೋಶಿಯಲ್’ ಎಂಬ ವೆಬ್ ಸೀರೀಸ್! ಹಿರಿತೆರೆಯ ಅನೇಕ ಕಲಾವಿದರು ಈಗಾಗಲೇ ಮೊಬೈಲ್ ಮನರಂಜನೆಯ ಕಡೆಗೆ ಹೈಜಂಪ್ ಮಾಡಿದ್ದು, ಮುಂಬರುವ ದಿನಗಳಲ್ಲಿ ಇವರೆಲ್ಲ ಸಿನಿಮಾಗಳಿಗಿಂತ ಜಾಸ್ತಿ ಈ ಜಗತ್ತಿನಲ್ಲೇ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಮೊಬೈಲ್ ಬಳಕೆ ಶರವೇಗದಲ್ಲಿ ಹೆಚ್ಚುತ್ತಿದ್ದು, ಭವಿಷ್ಯದ ರಂಜನೆಯ ಜಾಗ ಇದೇ ಅಂಗೈ ಅಗಲದ ಅರಮನೆಯಲ್ಲಿದೆ! OTT- ಓವರ್ ದಿ ಟಾಪ್ ಎಂದು ಕರೆಯಲ್ಪಡುವ ಈ ತರಹದ ಆಪ್ ಗಳಿಗಾಗಿ ರಂಜನಾತ್ಮಕ ಕಂಟೆಂಟ್ ಸಿದ್ದಪಡಿಸಲು ಹೊರಟಿರುವ ಹೊಸ ಬಳಗವೇ ಕಣ್ಣೆದುರಿಗೆ ಇದೆ. ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವೆಬ್ ಸೀರೀಸ್ ಮಾಡಲು ದಂಡೇ ಸಜ್ಜಾಗಿದೆ. ಬೇರೆ ಭಾಷೆಗಳಿಗೆ ಸೇರಿದರೆ ಕನ್ನಡದಲ್ಲಿ ಪ್ರಯತ್ನಗಳಿನ್ನೂ ಜೋರಾಗಿಲ್ಲ. ಅಲ್ಲೊಂದು ಇಲ್ಲೊಂದು ವೆಬ್ ಸೀರೀಸ್ ಗಳು ಯೂಟ್ಯೂಬ್ ನಲ್ಲಿವೆಯಷ್ಟೇ.’ಲೂಸ್ ಕನೆಕ್ಷನ್’ ಎಂಬ ಸೀರೀಸ್ ಕೊಂಚ ಸದ್ದು ಮಾಡಿದ್ದು ಬಿಟ್ಟರೆ, ಇನ್ನು ಮೇಲಷ್ಟೇ ಈ ಯತ್ನಗಳು ತೆರೆಗಾಣಬೇಕಿವೆ. ಜಾಹೀರಾತು ಕ್ಷೇತ್ರ ಕೂಡ ಈಗ ಟೀವಿಯಿಂದಾಚೆಗೆ ಯೋಚನೆ ಮಾಡಲು ಆರಂಭಿಸಿದ್ದು ತಮ್ಮ ಬಂಡವಾಳದ ಬಹುಪಾಲನ್ನು ಅಂತರ್ಜಾಲಕ್ಕೆ-ಮೊಬೈಲ್ ಅಪ್ಲಿಕೇಶನ್ ಗಳಿಗೆ ಮೀಸಲಿಟ್ಟಿವೆ. ಇನ್ನು ಕೇವಲ ಎರಡೇ ವರುಷಗಳಲ್ಲಿ ನಮ್ಮ ದೇಶದಲ್ಲಿ ಸುಮಾರು ಐವತ್ತು ಕೋಟಿ ಮಂದಿ ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಕೆದಾರರಾಗಿರುತ್ತಾರೆ ಎಂದು ಸರ್ವೇಯೊಂದು ಹೇಳುತ್ತದೆ. ಎಂದರೆ, ದೇಶದ ಸುಮಾರು ನಲವತ್ತು ಶೇಕಡಾ ಮಂದಿ, ಅಂತರ್ಜಾಲದ ನೇರ ಸಂಪರ್ಕ ಹೊಂದಿರುತ್ತಾರೆ. ಊರಿಗೆ ಬಂದ ಮೇಲೆ ನೀರಿಗೆ ಬರಲೇಬೇಕು ಎಂಬ ಪುರಾತನ ಗಾದೆಯನ್ವಯ-ಇವರೆಲ್ಲರೂ ಕೂಡ ಮೊಬೈಲ್ ಮಾಯಾಜಾಲದ ಪ್ರಮುಖ ಅಂಗವಾದ ವೀಡಿಯೋ ಸ್ಟ್ರೀಮಿಂಗ್ ಸೌಲಭ್ಯವನ್ನು ಬಳಸಲು ಆರಂಭಿಸುತ್ತಾರೆ. ದಿಲ್ಲಿಯಿಂದ ಹಳ್ಳಿಯವರೆಗೆ ಈಗಾಗಲೇ ವ್ಯಾಪಿಸಿರುವ ಈ ಹವ್ಯಾಸವು ಆಳಕ್ಕೆ ತನ್ನ ಬೇರುಗಳನ್ನು ಇಳಿಸಿ, ಇನ್ನೂ ಸುಭದ್ರಗೊಳ್ಳಲಿದೆ. ಹೀಗೇ ಮುಂದುವರಿದರೆ, ಸರಿಸುಮಾರು ಮುಂದಿನ ದಶಕದ ಮಧ್ಯಭಾಗದಲ್ಲಿ ಟಿವಿ ವೀಕ್ಷಣೆಯನ್ನೂ ಮೀರಿ ಡಿಜಿಟಲ್ ಜಗತ್ತು ತನ್ನ ಪಾರಮ್ಯವನ್ನು ಮೆರೆಯಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಇಂದು ಮನರಂಜನೆಗೆ ಯಾವುದೇ ಪರದೆಯ ಹಂಗಿಲ್ಲ. ದೊಡ್ಡ ಥಿಯೇಟರಿನಲ್ಲಿ ನೋಡಿದರೂ, ಮೊಬೈಲ್ ಪರದೆಯಲ್ಲಿ ನೋಡಿದರೂ, ಕೊನೆಗೆ ಮನದಲ್ಲಿ ಉಳಿಯುವುದು ಅಭಿನಯ, ಕಥೆ ಮಾತ್ರ. ಇದನ್ನೇ ಮನಗಂಡಿರುವ ನೆಟ್ ಫಿಕ್ಸ್ ತರದ ಅಪ್ಲಿಕೇಶನ್ ಹೊಸ ಚಿತ್ರಗಳನ್ನು ಇದಕ್ಕಾಗಿಯೇ ನಿರ್ಮಿಸುತ್ತಿದ್ದಾರೆ. ಯಾವುದೇ ಮಾಲು, ಥಿಯೇಟರುಗಳ ನ ಹಂಗಿಲ್ಲದೇ ನೇರವಾಗಿ ನಮ್ಮ ಮೊಬೈಲ್ ಗೇ ರಿಲೀಸ್ ಆಗುವ ಚಿತ್ರಗಳನ್ನು ನೋಡದೇ ಇರಲು ಯಾವ ಕಾರಣವೂ ಇಲ್ಲ. ಅಷ್ಟೇ ಅಲ್ಲದೇ, ಇತ್ತೀಚಿಗೆ ಗಮನಿಸಿದಂತೆ- ಈಗ ತಾನೇ ಬಿಡುಗಡೆಗೊಂಡ ಚಿತ್ರಗಳು ಕೂಡ ಒಂದು-ಎರಡು ತಿಂಗಳ ಅಂತರದಲ್ಲಿ ನೆಟ್ ಫಿಕ್ಸಲ್ಲೋ, ಅಮೇಜಾನ್ ಪ್ರೈಮ್ ನಲ್ಲೋ ಲಭ್ಯವಾಗಿರುತ್ತವೆ ಬೇರೆ. ಹೆಚ್ಚಿನ ದುಡ್ಡು ಪಾವತಿಸದೇ, ತಿಂಗಳ ಚಂದಾ ದುಡ್ಡಲ್ಲಿ ನೂತನ ಸಿನಿಮಾಗಳನ್ನು ನೋಡುವ ಭಾಗ್ಯವನ್ನು ಬಿಟ್ಟುಕೊಳ್ಳುವರುಂಟೇ? ಹೀಗೆ, ಮೇಲಿಂದ ಮೇಲೆ ಲಭ್ಯವಾಗುತ್ತಿರುವ ಬಗೆಬಗೆಯ ಮನರಂಜನೆಯ ಸರಕು, ಇಂಟರ್ ನೆಟ್ ಡಾಟಾದ ಕಡಿಮೆ ಬೆಲೆ, ಉತ್ತಮ ಸಿಗ್ನಲ್ ವ್ಯವಸ್ಥೆ ಒಟ್ಟಾರೆ ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸುತ್ತಿದೆ. ನೀವು ಈ ಬರಹವನ್ನು ಓದುವ ಹೊತ್ತಿಗೆ ನೂರಾರು ಗಂಟೆಗಳ ಹೊಸ ಸರಕು ಸಿದ್ಧವಾಗಿ ಮೊಬೈಲಿನೊಳಕ್ಕೆ ಬಂದು, ನಿಮ್ಮ ಬೆರಳತುದಿಯು ತನ್ನನ್ನು ಮುಟ್ಟುವುದನ್ನೇ ಕಾಯುತ್ತಿದೆ! ಇನ್ನೊಂದು ನೂರು ಮಂದಿ ಹೊಸ ಸಿಮ್ ಕಾರ್ಡನ್ನು ಮೊಬೈಲಿಗೆ ತೂರಿಸುತ್ತ ಅಗಾಧ ವೈಶಾಲ್ಯತೆಯ ಜಾಲ ಪ್ರಪಂಚದ ಹೊಸ್ತಿಲಲ್ಲಿ ನಿಂತಿದ್ದಾರೆ. ಬನ್ನಿ, ಒಳಗೆ ಬನ್ನಿ. ಒಮ್ಮೆ ಒಳಗೆ ಬಂದ ಮೇಲೆ ಹೊರ ಹೋಗುವ ದಾರಿ ಕಾಣಿಸುವುದಿಲ್ಲ. ಕಂಡರೂ ನಿಮಗದು ಬೇಕಿರುವುದಿಲ್ಲ! ಬಾಕ್ಸ್ ೧ ಭಾರತದಲ್ಲಿ ಈಗ ಸುಮಾರು 47 ಕೋಟಿ ಅಂತರ್ಜಾಲ ಬಳಕೆದಾರರಿದ್ದು, ಅದರಲ್ಲಿ ಸುಮಾರು ಮೂವತ್ತು ಕೋಟಿ ಮಂದಿ ಮೊಬೈಲ್ ನಲ್ಲಿಯೇ ಜಾಲ ಜಾಲಾಡುತ್ತಾರಂತೆ! ಹೇಳಿದರೆ ಅಚ್ಚರಿ ಅನ್ನಿಸಬಹುದು, ಸಾಮಾಜಿಕ ಜಾಲತಾಣಗಳಿಗಿಂತ ಹೆಚ್ಚಿನ ಹೊತ್ತನ್ನ ಮಂದಿ ವೀಡಿಯೋ-ಹಾಡು ಇತ್ಯಾದಿಗಳನ್ನ ನೋಡುವುದರಲ್ಲಿ ಕಳೆಯುತ್ತಿದ್ದಾರೆ. ಹದಿನಾರರಿಂದ ಮೂವತ್ತರ ವಯೋಮಾನದವರು ಸುಮಾರು ಎರಡೂವರೆ ತಾಸುಗಳನ್ನೂ, ನಲವತ್ತರಿಂದ ಅರವತ್ತರ ವಯಸ್ಸಿನವರು ಸುಮಾರು ಒಂದೂವರೆ ತಾಸಿಗೂ ಹೆಚ್ಚು ಸಮಯವನ್ನು ಮೊಬೈಲ್ ನಲ್ಲಿ ಸಿನಿಮಾ-ಧಾರಾವಾಹಿ ಇತ್ಯಾದಿ ನೋಡುವುದಕ್ಕಾಗಿ ಮೀಸಲಿಟ್ಟಿದ್ದಾರೆ. ದೆಹಲಿ ಮುಂಬೈ ಬೆಂಗಳೂರು ಕೊಲ್ಕೊತಾ ಹೈದರಾಬಾದ್ ತರಹದ ದೊಡ್ಡ ನಗರಗಳಲ್ಲಿ ಈ ಪ್ರಮಾಣ ಇನ್ನೂ ಜಾಸ್ತಿ ಇದೆ. ಬಾಕ್ಸ್- ೨ ನಮ್ಮ ದೇಶದ ಒಟ್ಟು ಮೂವತ್ತು ಕೋಟಿ ಮೊಬೈಲ್ ಅಂತರ್ಜಾಲ ಬಳಕೆದಾರರಲ್ಲಿ ಸುಮಾರು ಹದಿಮೂರು ಕೋಟಿ ಹಳ್ಳಿಗರು ಭಾರತದಲ್ಲಿ ಈಗ ಇಂಟರ್ ನೆಟ್ ಬಳಸುತ್ತಿದ್ದಾರೆ. ಸುಮಾರು ಇಪ್ಪತ್ತು ಕೋಟಿ ಗಂಡಸರೂ, ಹತ್ತುಕೋಟಿ ಹೆಂಗಸರೂ ಅಂತರ್ಜಾಲ ಬಳಕೆದಾರರು. ಮೊಬೈಲ್ ಇಂಟರ್ ನೆಟ್ ಬಳಕೆಯಲ್ಲಿ ಭಾರತ 2010 ರ ವೇಳೆಗೆ 150ನೇ ಸ್ಥಾನದಲ್ಲಿತ್ತು. ಈಗ ಭಾರತಕ್ಕೆ ಇದರಲ್ಲಿ ಮೊದಲನೇ ಸ್ಥಾನ! ನೆಟ್ ಬಳಕೆಯಲ್ಲಿ ಅಮೆರಿಕ ಮತ್ತು ಚೀನಾವನ್ನು ಕೂಡ ಭಾರತ ಹಿಂದಿಕ್ಕಿದೆ. ಬಾಕ್ಸ್ -3 Youtube ಒಂದರಲ್ಲೇ ಪ್ರತಿ ನಿಮಿಷಕ್ಕೆ 72 ತಾಸುಗಳ ವೀಡೀಯೋ ಅಪ್ ಲೋಡ್ ಆಗುತ್ತದೆ. ದಿನಕ್ಕೆ ಸುಮಾರು ಐವತ್ತು ಕೋಟಿ ಗಂಟೆಗಳಷ್ಟು ವೀಡಿಯೋವನ್ನು ಜನ ಯೂಟ್ಯೂಬ್ ಒಂದರಲ್ಲೇ ನೋಡುತ್ತಾರಂತೆ. ಐವತ್ತು ಕೋಟಿ ಮಂದಿ, ಫೇಸ್ ಬುಕ್ ನಲ್ಲಿ ಪ್ರತಿದಿನ ವೀಡಿಯೋ ವೀಕ್ಷಿಸುತ್ತಾರೆ.
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ಚಿತ್ರದುರ್ಗ(ಅ.05): ಮಧ್ಯ ಕರ್ನಾಟಕದ ಜನರ ಪಾಲಿಗೆ ಮಿನಿ ದಸರಾ ಎಂದೇ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಪ್ರಖ್ಯಾತಿ ಪಡೆದಿದೆ. ಆದ್ರೆ ಈ ಬಾರಿ ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿ ಇರೋದ್ರಿಂದ ಮಠದಲ್ಲಿ ಎಲ್ಲಾ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿವೆ. ಇಂದು(ಬುಧವಾರ) ಕೋಟೆಗೆ ತೆರಳಿ ರಾಜವಂಶಸ್ಥರಿಂದ ಪ್ರಭಾರ ಪೀಠಾಧ್ಯಕ್ಷರು ಭಕ್ತಿ ಸಮರ್ಪಣೆ ಸ್ವೀಕರಿಸಿದರು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೀಗೆ ಮುರುಘಾ ಮಠದಿಂದ ಬೈಕ್ ರ್ಯಾಲಿ ಮೂಲಕ ಕೋಟೆಗೆ ಆಗಮಿಸ್ತಿರೋ ಭಕ್ತ ಸಮೂಹ. ಮತ್ತೊಂದೆಡೆ ಕಲ್ಲಿನ ಕೋಟೆಯನ್ನು ಏರುತ್ತಿರುವ ಮಠಾಧೀಶರ ದಂಡು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಬಳಿ. ಹೌದು, ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಎಷ್ಟು ಕಳೆಗಟ್ಟಿದೆಯೋ ಅದೇ ರೀತಿ ಮಧ್ಯ ಕರ್ನಾಟಕ ಜನರ ಪಾಲಿಗೆ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಮಿನಿ ದಸರಾ ಇದ್ದಂತೆ. ಪ್ರತೀ ವರ್ಷ ಸುಮಾರು 9 ದಿನಗಳ ಕಾಲ ನಡೆಯುತ್ತಿದ್ದ ಕಾರ್ಯಕ್ರಮ ಈ ಬಾರಿ ಕೇವಲ ಮೂರು ದಿನಗಳ ಕಾಲ ಸರಳವಾಗಿ ನಡೆಯುತ್ತಿದೆ. ಅದಕ್ಕೆ ಕಾರಣ ಪೋಕ್ಸೋ ಪ್ರಕರಣದಡಿ ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿ ಇರೋದು ಎಂದ್ರೆ ತಪ್ಪಾಗಲಿಕ್ಕಿಲ್ಲ. ಪ್ರತೀ ವರ್ಷ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿಯೇ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದ್ರೆ ಈ ಬಾರಿ ಪ್ರಭಾರ ಪೀಠಾಧ್ಯಕ್ಷರಾದ ಹೆಬ್ಬಾಳ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಗಳು ಅದರ ನೇತೃತ್ವ ವಹಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂದು ಮುರುಘಾ ಮಠದಲ್ಲಿ ನಡೆದ ಸಮಾಹಿಕ ಕಲ್ಯಾಣ ಮಹೋತ್ಸವದಲ್ಲಿ ಕೇವಲ ಒಂದು ಜೋಡಿ ಭಾಗಹಿಸಿದ್ದು ವಿಶೇಷವಾಗಿತ್ತು. ಹಾಗೂ ಕೋಟೆಯಲ್ಲಿ ನಡೆದ ರಾಜವೀರ ಮದಕರಿ ನಾಯಕರ ರಾಜವಂಶಸ್ಥರಿಂದ ಮುರುಘಾ ಮಠದ ಪ್ರಭಾರ‌ ಶ್ರೀಗಳು ಭಕ್ತಿ ಸಮರ್ಪಣೆ ಸ್ವೀಕರಿಸಿದರು. ಉಡುಪಿ: ಕಡಿಯಾಳಿ ಮಹಿಷ ಮರ್ದಿನಿ ಸನ್ನಿಧಾನದಲ್ಲಿ ಶಮಿ ವೃಕ್ಷ ಪೂಜೆ ಇನ್ನೂ ಕೋಟೆಯಲ್ಲಿ ನಡೆದ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು ಹಾಗು ಅನೇಕ ಸಮುದಾಯದ ಮುಖಂಡರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಪ್ರತೀ ವರ್ಷದಂತೆ ಸಾಂಪ್ರದಾಯಿಕವಾಗಿ ರಾಜ ವಂಶಸ್ಥರು ತಮ್ಮ ಗುರುಗಳಿಗೆ ಭಕ್ತಿ ಸಮರ್ಪಣೆ ಸಲ್ಲಿಸಿದರು. ಈ ದೇಶದಲ್ಲಿ ಯಾರಾದ್ರು ರಾಜ ವಂಶಸ್ಥರು ಗುರು ಪರಂಪರೆಗೆ ಗೌರವವಾಗಿ ಭಕ್ತಿ ಸಮರ್ಪಣೆ ಸಲ್ಲಿಸ್ತಾರೆ ಅಂದ್ರೆ ಅದು ನಮ್ಮ ಮದಕರಿ ನಾಯಕ ವಂಶಸ್ಥರು ಮಾತ್ರ. ಭಕ್ತರನ್ನು ರಾಜರನ್ನಾಗಿ ಮಾಡಿಸಿದ ಮಠ ಯಾವುದಾದ್ರು ಇದ್ರೆ ಅದು ಮುರುಘಾ ಮಠ. ಇಂತಹ ಪರಿಸ್ಥಿತಿಯಲ್ಲಿಯೂ ಈ ಸಂಭ್ರಮ ನಡೆದುಕೊಂಡು ಹೋಗ್ತಿದೆ ಎಂದ್ರೆ ಅದಕ್ಕೆ ಕಾರಣ ನಮ್ಮ‌ರಾಜ ವಂಶಸ್ಥರು ಎಂದು ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ ಎಸ್. ಲಿಂಗಮೂರ್ತಿ ಗುಣಗಾನ ಮಾಡಿದರು. ಒಟ್ಟಾರೆಯಾಗಿ ಇತ್ತ ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿ ಇದ್ರೆ, ಮತ್ತೊಂದೆಡೆ ಮುರುಘಾ ಮಠದಲ್ಲಿ ಸರಳವಾಗಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಮುರುಘಾ ಶ್ರೀಗಳ ಅನುಪಸ್ಥಿತಿ ಮಠದಲ್ಲಿ ಕಾಡ್ತಿದೆ ಎಂದು ಕೆಲ ಭಕ್ತರು ಮಾತಮಾಡಿದ್ದು ವಿಪರ್ಯಾಸವೆನಿಸಿತ್ತು.
Kannada News » Karnataka » Dakshina kannada » Banner Appeared in Kukke Subramanya Saying Other Religion Traders Not Allowed before Champa Shashti Champa Shashti: ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಉತ್ಸವದಲ್ಲಿ ಅಂಗಡಿ ಹಾಕಲು ಹಿಂದೂಗಳಿಗೆ ಮಾತ್ರ ಅವಕಾಶ; ಕಾಣಿಸಿಕೊಂಡಿದೆ ಬ್ಯಾನರ್ ‘ಹಿಂದೂ ಜಾಗರಣ ವೇದಿಕೆ, ಸುಬ್ರಹ್ಮಣ್ಯ ಘಟಕ’ ಹೆಸರಿನಲ್ಲಿ ಕಾಣಿಸಿಕೊಂಡಿರುವ ಈ ಬ್ಯಾನರ್​ನ ಒಕ್ಕಣೆಯು ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಅಂತ್ಯಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಕಾಣಿಸಿಕೊಂಡಿರುವ ಬ್ಯಾನರ್ TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Nov 24, 2022 | 11:40 AM ಮಂಗಳೂರು: ಪ್ರಸಿದ್ಧ ಯಾತ್ರಾಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಸಂಭ್ರಮ ಮೈದುಂಬುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾರಣದಿಂದಾಗಿ ಚಂಪಾಷಷ್ಠಿ ಉತ್ಸವ ಕಳೆಗಟ್ಟಿರಲಿಲ್ಲ. ಆದರೆ ಈ ಬಾರಿ ಹೆಚ್ಚಿನ ಜನಸಂದಣಿ ಸೇರುವ ಸಾಧ್ಯತೆಯಿದ್ದು, ದೇಗುಲ ಸಮಿತಿ ಮತ್ತು ಸ್ಥಳೀಯ ಆಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಬ್ಯಾನರ್ ಸುದ್ದಿಯಾಗಿದೆ. ‘ಹಿಂದೂ ಜಾಗರಣ ವೇದಿಕೆ, ಸುಬ್ರಹ್ಮಣ್ಯ ಘಟಕ’ ಹೆಸರಿನಲ್ಲಿ ಕಾಣಿಸಿಕೊಂಡಿರುವ ಈ ಬ್ಯಾನರ್​ನ ಒಕ್ಕಣೆಯು ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಅಂತ್ಯಗೊಂಡಿದೆ. ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 29ರಂದು ಚಂಪಾ ಷಷ್ಠಿ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ. ದೇವಸ್ಥಾನದ ಜಾತ್ರೆಗಳಲ್ಲಿ ಮೊದಲಿನಿಂದಲೂ ಜಾತಿ ಮತ್ತು ಧರ್ಮ ಭೇದವಿಲ್ಲದೆ ವರ್ತಕರು ಅಂಗಡಿಗಳನ್ನು ಹಾಕಿ, ವ್ಯಾಪಾರ ಮಾಡುತ್ತಿದ್ದರು. ಆದರೆ, ಇದೀಗ ಕಾಣಿಸಿಕೊಂಡಿರುವ ಬ್ಯಾನರ್​ನಲ್ಲಿ ‘ಕುಕ್ಕೆ ಸುಬ್ರಮಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ’ ಎಂದು ಬ್ಯಾನರ್​ನಲ್ಲಿ ಹೇಳಲಾಗಿದೆ. ‘ಕುಕ್ಕೆ ಸುಬ್ರಹ್ಮಣ್ಯ ಜಾತ್ರಾ ಸಂದರ್ಭದಲ್ಲಿ ಹಿಂದೂಗಳಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು’ ಎಂದು ಪೊಲೀಸ್ ಠಾಣೆಗೂ ಹಿಂದೂ ಜಾಗರಣ ವೇದಿಕೆಯ ಸುಬ್ರಹ್ಮಣ್ಯ ಘಟಕದ ವತಿಯಿಂದ ದೂರು ನೀಡಲಾಗಿದೆ. Karnataka | Hindu Jagaran Vedike put up a poster announcing the banning of other communities’ shops and stalls during the ‘Champa Shashti’ of the Kukke Subrahmanya Temple in Subramanya of Dakshina Kannada district. pic.twitter.com/HGswvSk0i9 — ANI (@ANI) November 24, 2022 ರಂಗಪೂಜೆ, ಅಂಕುರಾರ್ಪಣೆ ಚಂಪಾಷಷ್ಠಿ ರಥೋತ್ಸವದ ಹಿನ್ನೆಲೆಯಲ್ಲಿ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಲಂಕೃತ ರಂಗಪೂಜೆ, ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಣ ಮಾಡಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ವಿಧಿಗಳು ಬುಧವಾರ (ನ23) ನೆರವೇರಿದವು. ಹೊರಾಂಗಣ ಉತ್ಸವದಲ್ಲಿ ಕಾಚುಕುಜುಂಬ ದೈವವು ಶ್ರೀದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ಬಳಿಕ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಲ್ಲಕ್ಕಿ ಉತ್ಸವ ನೆರವೇರಿತು. ರಥಬೀದಿಯಲ್ಲಿ ಪಂಚ ಶಿಖರಗಳನ್ನಳಗೊಂಡ ಚಂದ್ರಮಂಡಲ ರಥದಲ್ಲಿ ಆರೂಢರಾದ ಶ್ರೀ ದೇವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಶಿಕಟ್ಟೆ ತನಕ ಉತ್ಸವ ನೆರವೇರಿತು. ಶ್ರೀದೇವರು ಚಂದ್ರಮಂಡಲ ರಥದಲ್ಲಿ ಆಗಮಿಸುವುದು ಲಕ್ಷ ದೀಪೋತ್ಸವದ ದಿನ ಮಾತ್ರ. ಲಕ್ಷದೀಪೋತ್ಸವ ಕಾರ್ತಿಕ ಮಾಸದ ಅಮಾವಾಸ್ಯೆ ನಿಮಿತ್ತ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಬುಧವಾರ ಸಡಗರ ಸಂಭ್ರಮದಿಂದ ನೆರವೇರಿತು. ರಥಬೀದಿಯಿಂದ ಕಾಶಿಕಟ್ಟೆ ತನಕ ಲಕ್ಷ ಹಣತೆಗಳು ಬೆಳಗಿದವು. ದೇವಸ್ಥಾನದ ಗೋಪುರದಿಂದ ಕಾಶಿಕಟ್ಟೆಯವರೆಗೆ, ಹನುಮಂತಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್, ಕುಮಾರಧಾರ ಸೇರಿದಂತೆ ಕ್ಷೇತ್ರದ ವಿವಿಧೆಡೆ ಹಣತೆಗಳು ಬೆಳಗಿದವು.
ಮೈಸೂರು,ಜ.20(ಪಿಎಂ)- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶಾಲಾ-ಕಾಲೇಜು ಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯ ಕ್ರಮದಡಿ ಗುರುವಾರ ಮೈಸೂರು ವಿಭಾಗದ 8 ಜಿಲ್ಲೆಗಳ 198 ಶಾಲಾ-ಕಾಲೇಜುಗಳಿಗೆ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ವಿತ ರಣೆ ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬಳಿಕ ಸಾಂಕೇತಿಕವಾಗಿ 5 ಶಾಲಾ-ಕಾಲೇಜು ಗಳ ಮುಖ್ಯಶಿಕ್ಷಕರು ಮತ್ತು ಪ್ರಾಂಶುಪಾಲ ರಿಗೆ ಪುಸ್ತಕಗಳ ವಿತರಣೆ ಮಾಡಿದರು. ಚಾಮರಾಜನಗರದ ಜೆಎಸ್‍ಎಸ್ ಮಹಿಳಾ ಕಾಲೇಜು, ಕೊಡಗು ಜಿಲ್ಲೆಯ ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು, ದಕ್ಷಿಣ ಕನ್ನಡ ಜಿಲ್ಲೆಯ ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರು ಜಿಲ್ಲೆಯ ಕೆಆರ್ ನಗರದ ಶ್ರೀ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಟಿ. ನರಸೀಪುರ ತಾಲೂಕು ವಾಟಾಳು ಸರ್ಕಾರಿ ಪ್ರೌಢಶಾಲೆಗೆ ಸಾಂಕೇತಿಕವಾಗಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಬಳಿಕ ಒಟ್ಟಾರೆ 198 ಶಾಲಾ-ಕಾಲೇಜುಗಳಿಗೆ ಕನ್ನಡ ಸಾಹಿ ತ್ಯಕ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾ ವಿಕವಾಗಿ ಮಾತನಾಡಿದ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್‍ಸಿಂಗ್, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ನೀಡುವ ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ಜ್ಞಾನಾರ್ಜನೆ ವೃದ್ಧಿಸಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಸಗಟು ಪುಸ್ತಕ ಖರೀದಿ ಯೋಜನೆಯಡಿ ರಾಜ್ಯದ ಪ್ರಕಾ ಶಕರು ಆಯಾಯ ವರ್ಷದಲ್ಲಿ ಪ್ರಕಟಿಸಿದ ಪುಸ್ತಕಗಳನ್ನು ಪ್ರಾಧಿಕಾರದಿಂದ ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದರು. ಪ್ರಕಾಶಕರಿಂದ ತಲಾ ಒಂದು ಲಕ್ಷ ರೂ. ವೆಚ್ಚದಲ್ಲಿ ಹಾಗೂ ಒಬ್ಬ ಬರಹಗಾರರಿಂದ ಏಳೂವರೆ ಸಾವಿರ ರೂ. ವೆಚ್ಚದಲ್ಲಿ ಪುಸ್ತಕ ಖರೀದಿ ಪ್ರಕ್ರಿಯೆ ನಡೆಯಲಿದೆ. ವಾರ್ಷಿಕ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಪುಸ್ತಕ ಗಳನ್ನು ಖರೀದಿಸಿ, ಶಾಲಾ ಕಾಲೇಜು ಗಳಿಗೆ ವಿತರಣೆ ಮಾಡಲಾಗುತ್ತದೆ. ಈ ಬಾರಿ ಒಂದು ಶಿಕ್ಷಣ ಸಂಸ್ಥೆಗೆ 15ರಿಂದ 20 ಸಾವಿರ ರೂ. ಮೌಲ್ಯದ ಪುಸ್ತಕ ಗಳನ್ನು ನೀಡಲಾಗುತ್ತದೆ ಎಂದರು. ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಮಾತನಾಡಿ, ಪ್ರಾಧಿಕಾರ ಪ್ರತಿ ವರ್ಷ ಸುಮಾರು 1 ಕೋಟಿ ರೂ. ವೆಚ್ಚ ದಲ್ಲಿ ಪುಸ್ತಕ ಖರೀದಿಸಿ, ಶಾಲಾ ಕಾಲೇಜು ಗಳಿಗೆ ಉಚಿತವಾಗಿ ನೀಡುವ ಯೋಜನೆ ನಡೆಸಿಕೊಂಡು ಬಂದಿದೆ. ಆದರೆ ಸದರಿ ಯೋಜನೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಪ್ರಾಧಿಕಾರದ ಹೊಸ ಸಮಿತಿ ರೂಪುಗೊಂಡ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿ, ವಿಭಾಗವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈಗಾಗಲೇ ಬೆಂಗಳೂರು ವಿಭಾಗದಲ್ಲಿ ಕಾರ್ಯಕ್ರಮ ನಡೆದಿದ್ದು, ಇಂದು ಮೈಸೂ ರಿನಲ್ಲಿ ಮೈಸೂರು ವಿಭಾಗದ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಉಳಿ ದೆರಡು ವಿಭಾಗಗಳಲ್ಲಿ ಮಾತ್ರವಲ್ಲದೆ, ಐದು ಗಡಿ ಜಿಲ್ಲೆಗಳಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆ ಮೂಲಕ ಕನ್ನಡ ಪುಸ್ತಕ ಓದುವ ಹವ್ಯಾಸಕ್ಕೆ ಉತ್ತೇ ಜನ ನೀಡಲಾಗುವುದು ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ಪ್ರಾಧಿಕಾರ ನೀಡುವ ಈ ಉಚಿತ ಪುಸ್ತಕಗಳನ್ನು ಶಾಲಾ-ಕಾಲೇಜು ಗಳ ಗ್ರಂಥಾಲಯದಲ್ಲಿ ಇಟ್ಟು ವಿದ್ಯಾರ್ಥಿ ಗಳಲ್ಲಿ ಓದುವ ಅಭಿರುಚಿ ಬೆಳೆಸಬೇಕು. ಸಾಹಿತ್ಯಕ ಪುಸ್ತಕಗಳು ನಮ್ಮಲ್ಲಿ ಸೃಜನ ಶೀಲತೆ ಬೆಳೆಸಲಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕೋವಿಡ್ ಸಂದರ್ಭದಲ್ಲೂ ಈ ರೀತಿಯ ವಿಶೇಷ ಕಾರ್ಯಕ್ರಮದ ಮೂಲಕ ಶಾಲಾ ಕಾಲೇಜುಗಳಿಗೆ ಪುಸ್ತಕ ನೀಡುತ್ತಿರುವುದು ಒಳ್ಳೆಯ ಕೆಲಸ. ಕಾರ್ಯ ಕ್ರಮ, ಸಮಾರಂಭಗಳಲ್ಲಿ ಹಾರ ತುರಾಯಿ ಹಾಕದೇ ಕನ್ನಡ ಪುಸ್ತಕ ಕೊಡಿ ಎಂದು ಮುಖ್ಯ ಮಂತ್ರಿಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಕನ್ನಡ ಪುಸ್ತಕ ಖರೀದಿ ಚುರುಕು ಗೊಂಡಿದೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತೇನೆ ಎಂದರು. ಗುಂಡ್ಲು ಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಪಂ ಸಿಇಓ ಯೋಗೀಶ್ ಮತ್ತಿತರರು ಹಾಜರಿದ್ದರು.
ರಾಜ್ಯದ ಆಶಾ ಕಾರ್ಯಕರ್ತೆಯರು ತಮಗೆ ಸಿಗುತ್ತಿದ್ದ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕಳೆದ ವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಬಹಳ ವರ್ಷಗಳಿಂದ ಬಾಕಿ ಇರುವ ಹಲವು ಬೇಡಿಕೆಗಳ ಈಡೇರಿಸಲೇ ಬೇಕು ಎಂದು ಆಗ್ರಹಿಸಿದ್ದರು. ಜನವರಿ 3ರಂದು ಫ್ರೀಡಂ ಪಾರ್ಕ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೂಡಲೇ 15 ತಿಂಗಳಿನಿಂದ ಬರಬೇಕಿದ್ದ ಪ್ರೋತ್ಸಾಹಧನ ನೀಡಬೇಕೆಂದು ಆಗ್ರಹಿಸಿದ್ದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಭಟನೆಯನ್ನು ಉದ್ದೇಶಿಸಿ “ ಸರ್ಕಾರ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಸಿದ್ಧ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ. ಸರ್ಕಾರ ನಿಮ್ಮೊಂದಿಗೆ ಯಾವಾಗಲೂ ಇರುತ್ತದೆ. ಆತಂಕಪಡಬೇಡಿ, ನಿಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತದೆ. ನೀವೆಲ್ಲರೂ ನಮ್ಮ ಅಕ್ಕ, ತಂಗಿಯರಿದ್ದಂತೆ, ತುಂಬಾ ಕಷ್ಟಪಟ್ಟುಕೊಂಡು ಬಂದಿದ್ದೀರಿ. ನಿಮ್ಮ ಅಧ್ಯಕ್ಷರು ನನ್ನನ್ನು ಭೇಟಿ ಆಗಿದ್ದರು. ಈ ವಿಚಾರ ಕುರಿತು ಚರ್ಚೆಯಾಗಿದೆ. ಸರ್ಕಾರದ ಕಾರ್ಯದರ್ಶಿಗಳ ಜೊತೆಗೆ ಮಾತನಾಡಿದ್ದೇನೆ. ಆದಷ್ಟು ನಿಮ್ಮ ಬೇಡಿಕೆ ಈಡೇರಿಸುತ್ತೇವೆ. ಈ ಕಾರಣದಿಂದಾಗಿ ಪ್ರತಿಭಟನೆಯನ್ನು ವಾಪಸ್‌ ಪಡೆಯಬೇಕು” ಎಂದು ಭರವಸೆ ನೀಡಿದ್ದರು. ಹೆಚ್ಚು ಓದಿದ ಸ್ಟೋರಿಗಳು ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳ ಗೋಡೆ ಬರಹ :ಬಿಜೆಪಿ ನಾಯಕರ ಖಂಡನೆ ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಸಂಭ್ರಮ:ಸಂಕೀರ್ತನಾ ಯಾತ್ರೆ ಆರಂಭ ಶಿವಮೊಗ್ಗ; CFI ಸೇರುವಂತೆ ಗೋಡೆ ಬರಹ ಅಲ್ಲದೆ, ಸಚಿವರು ಮುಂದುವರಿದು ಮಾತನಾಡಿ “ಪ್ರತಿ ತಿಂಗಳ 15ನೇ ತಾರೀಖಿನೊಳಗೆ ಎರಡು ತಿಂಗಳ ಸಂಬಳ ಜೊತೆಗೆ ಹಾಕಲು ಅನುಮತಿ ಕೊಟ್ಟಿದ್ದೇನೆ. ನೆರೆಯ ಆಂಧ್ರ ಪ್ರದೇಶ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಇಲ್ಲಿ ಈ ಹಿಂದೆ 5,500 ರೂಪಾಯಿಗಳಿದ್ದು ಈಗ ನಮ್ಮ ಸರ್ಕಾರ ಬಂದ ಮೇಲೆ ಅದನ್ನು 6 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ನನ್ನ ಅಧಿಕಾರದಲ್ಲಿ ಕಾರ್ಯಕರ್ತೆಯರ ವೇತನವನ್ನು 10 ಸಾವಿರಕ್ಕೆ ಹೆಚ್ಚಿಸುವ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ಕೊಟ್ಟರು. ಸುಮಾರು 15 ತಿಂಗಳಿನಿಂದ ಯಾವುದೇ ಪ್ರೋತ್ಸಾಹಧನ ಪಡೆಯದಿದ್ದರಿಂದ ಆಶಾ ಕಾರ್ಯಕರ್ತೆಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಲೇಬೇಕಾಯಿತು. ಆದರೆ ಸಚಿವರ ವಿನಂತಿಗೆ ಸುಮ್ಮನಾಗುವುದು ಬೇಡವೆಂದು, ಸರ್ಕಾರ ಪ್ರೋತ್ಸಾಹಧನ ಬಿಡುಗಡೆ ಮಾಡುವವರೆಗೂ ಕೆಲಸಕ್ಕೆ ಹಾಜರಾಗದೇ, ಮನೆಯಲ್ಲೇ ಧರಣಿ ನಡೆಸಲು ಆಶಾ ಕಾರ್ಯಕರ್ತೆಯರು ತೀರ್ಮಾನಿಸಿದ್ದರು. ಆದರೆ ಧೀಡಿರ್‌ ಅಂತ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರಿಗೆ ಬಿಗ್‌ ಶಾಕ್‌ ನೀಡಿತು. ಇವರ ತೀರ್ಮಾನದಿಂದಾಗಿ ಕೋಪಗೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೆಲಸಕ್ಕೆ ಹಾಜರಾಗದಿರುವವರ ಪ್ರೋತ್ಸಾಹಧನ ಬಿಡುಗಡೆ ಮಾಡುವುದಿಲ್ಲ ಎಂದು ಸೋಮವಾರ ಸುತ್ತೋಲೆ ಹೊರಡಿಸಿ, ಕೆಲಸಕ್ಕೆ ಹಾಜರಾಗದೇ ಮನೆಯಲ್ಲಿದ್ದರೆ ಪ್ರೋತ್ಸಾಹಧನ ಬಿಡುಗಡೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪ್ರತಿಭಟನೆಯ ವೇಳೆ ಸಚಿವ ಶ್ರೀರಾಮುಲು ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರುಸುತ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೆ, ಇಲಾಖೆಯ ಅಧಿಕಾರಗಳಂತೆ, ಶ್ರೀರಾಮುಲು ಕೂಡ “ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಕುಳಿತು ಧರಣಿ ನಡೆಸುವುದು ಸರಿಯಲ್ಲ. ಕೆಲಸಕ್ಕೆ ಹಾಜರಾಗದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇಲ್ಲಿ ಆಶಾ ಕಾರ್ಯಕರ್ತೆಯರ ಮುಖ್ಯವಾದ ಬೇಡಿಕೆಗಳೇನೆಂದರೆ, ಕೇಂದ್ರ ಮತ್ತು ರಾಜ್ಯದಿಂದ ಮಾಸಿಕ 12,000/- ಪ್ರೋತ್ಸಾಹ ನೀಡಬೇಕು, 15 ತಿಂಗಳ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು, ಆಶಾ ಕ್ಷೇಮಾವೃದ್ಧಿ ನಿಧಿ ಸ್ಥಾಪಿಸಬೇಕು, ಮಾರಣಾಂತಿಕ ಕಾಯಿಲೆ ಹಾಗೂ ಮರಣ ಹೊಂದಿದರೆ ನೆರವು ನೀಡಬೇಕು, ವಿವಿಧ ಸರ್ವೆಗಳ ಬಾಕಿ ಪ್ರೋತ್ಸಾಹಧನ ಕೂಡಲೇ ಪಾವತಿಸಬೇಕು, ಜಿಲ್ಲಾ ಮತ್ತು ತಾಲೂಕು ಕೇಂದ್ರದ ಸಭೆಗಳಿಗೆ ದಿನಭತ್ಯೆ ಹೆಚ್ಚಿಸಬೇಕು, ದಿನಕ್ಕೆ 300 ರೂ. ನಿಗದಿಪಡಿಸಿ, ಅಂದೇ ಪಾವತಿಸಬೇಕು, ಆಶಾ ಸುಗಮಗಾರರನ್ನು ನೇಮಿಸಿ, ಮಾಸಿಕ 12,000 ರೂ. ಜೊತೆಗೆ ಟಿಎ ನೀಡಬೇಕು ಎಂದು ಬೇಡಿಕೆಗಳನ್ನು ಇಟ್ಟಿದ್ದಾರೆ. ರಾಜ್ಯದಲ್ಲಿ ಸರಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಸರ್ಕಾರದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸಲು ಆಶಾ ಕಾರ್ಯಕರ್ತೆಯರ ಸೇವೆ ಅತಿಮುಖ್ಯ. ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕುವುದರಿಂದ ಹಿಡಿದು, ಗರ್ಭಿಣಿ, ಬಾಣಂತಿಗೆ ಪೋಷಣೆ ಜೊತೆಗೆ ಸರ್ವೇ ಕೆಲಸಗಳನ್ನೂ ಸಹ ಮಾಡುತ್ತಾರೆ. ಅಲ್ಲದೆ, ಇದೇ ತಿಂಗಳು ಸರ್ಕಾರ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಸಲಿದೆ. ಇದಕ್ಕೆ ಆಶಾ ಕಾರ್ಯಕರ್ತೆಯರ ಸೇವೆ ಬೇಕೆ ಬೇಕು. ಇಲ್ಲಿ ಆಶಾ ಕಾರ್ಯಕರ್ತೆಯರು ಬಹಳ ವರ್ಷಗಳಿಂದ ಇಂತಹ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಇರುವುದು ವಿಷಾದನೀಯ. ಸಚಿವ ಶ್ರೀರಾಮುಲು ಕೂಡ ಒಮ್ಮೆ ಭರವಸೆ ನೀಡಿ, ಎಚ್ಚರಿಕೆಯನ್ನೂ ಸಹ ಕೊಟ್ಟಿದ್ದಾರೆ. ರಾಜ್ಯದ 40 ಸಾವಿರ ಆಶಾ ಕಾರ್ಯಕರ್ತೆಯರು ಪ್ರೋತ್ಸಾಹಧನವನ್ನು ನಂಬಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದರೆ 15 ತಿಂಗಳಿನಿಂದ ಪ್ರೋತ್ಸಾಹಧನ ನೀಡದೆ ಇರುವುದು ವಿಪರ್ಯಾಸ. ದೇಶದ ಆರೋಗ್ಯ ಕ್ಷೇತ್ರ ಉನ್ನತಿ ಕಾಣಬೇಕೆಂದರೆ ಹಾಗೂ ಆರೋಗ್ಯ ಪೂರ್ಣ ಸಮಾಜ ರೂಪಿಸುವುದಕ್ಕೆ ಆಶಾ ಕಾರ್ಯಕರ್ತೆಯ ಸೇವೆ ಅತ್ಯಗತ್ಯ.
Homeನವದೆಹಲಿ'ಆರ್ಥಿಕ ದುರ್ಬಲ ವರ್ಗಕ್ಕೆ 8 ಲಕ್ಷ ರೂ.ಮಿತಿಯಾಗಿದ್ದರೆ, 2.5ಲಕ್ಷ ರೂ. ಇದ್ದವರು ಆದಾಯ ತೆರಿಗೆ ಏಕೆ ಕಟ್ಟಬೇಕು?' 'ಆರ್ಥಿಕ ದುರ್ಬಲ ವರ್ಗಕ್ಕೆ 8 ಲಕ್ಷ ರೂ.ಮಿತಿಯಾಗಿದ್ದರೆ, 2.5ಲಕ್ಷ ರೂ. ಇದ್ದವರು ಆದಾಯ ತೆರಿಗೆ ಏಕೆ ಕಟ್ಟಬೇಕು?' 0 samarasasudhi November 22, 2022 ನವದೆಹಲಿ:ಸರ್ವೋಚ್ಚ ನ್ಯಾಯಾಲಯವು ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲುಎಸ್)ಕ್ಕೆ ಸೇರಲು ವಾರ್ಷಿಕ ಎಂಟು ಲ.ರೂ.ಗಿಂತ ಕಡಿಮೆ ಆದಾಯವನ್ನು ನಿಗದಿಗೊಳಿಸಿರುವ ನಿರ್ಧಾರವನ್ನು ಎತ್ತಿ ಹಿಡಿದಿರುವಾಗ ಆದಾಯ ತೆರಿಗೆ ಸಂಗ್ರಹಕ್ಕೆ 2.5 ಲ.ರೂ.ಗಳು ಮೂಲ ವಾರ್ಷಿಕ ಆದಾಯವಾಗುವುದು ಹೇಗೆ ಸಾಧ್ಯ? ಇದು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯೊಂದರ ಕೇಂದ್ರವಾಗಿರುವ ಪ್ರಶ್ನೆಯಾಗಿದೆ. ಅರ್ಜಿಗೆ ಉತ್ತರಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚಿಸಿದೆ.ಮೇಲ್ಜಾತಿಗಳಲ್ಲಿಯ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ಒದಗಿಸಿರುವ 103ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಸರ್ವೋಚ್ಚ ನ್ಯಾಯಾಲಯವು ನ.7ರಂದು 3:2 ಬಹುಮತದಿಂದ ಎತ್ತಿ ಹಿಡಿದಿತ್ತು. ಇಡಬ್ಲುಎಸ್ ಕೋಟಾ 'ಆರ್ಥಿಕವಾಗಿ ದುರ್ಬಲ'ವರ್ಗಕ್ಕೆ ಸೇರ್ಪಡೆಗೆ ಆದಾಯವನ್ನು ನಿರ್ಣಾಯಕ ಅಂಶವನ್ನಾಗಿ ಪರಿಗಣಿಸುತ್ತದೆ. ಆದಾಗ್ಯೂ ಅರ್ಜಿಯಲ್ಲಿ ಎತ್ತಿ ತೋರಿಸಿರುವಂತೆ ಕೋಟಾದೊಳಗಿನ ದೊಡ್ಡ ವಿಭಾಗವು ಆದಾಯ ತೆರಿಗೆಯನ್ನು ಪಾವತಿಸಬೇಕಾದ ಆದಾಯ ಸ್ತರದಲ್ಲಿದೆ. ಅರ್ಜಿದಾರರಾಗಿರುವ ಕೃಷಿಕ ಹಾಗೂ ಡಿಎಂಕೆ ಸದಸ್ಯ ಕುನ್ನೂರ್ ಸೀನಿವಾಸನ್ ಅವರು ಹಣಕಾಸು ಕಾಯ್ದೆ,2022ರ ಮೊದಲ ಅನುಬಂಧದ ಭಾಗ 1ರ ಪ್ಯಾರಾ ಎ ಅನ್ನು ತೆಗೆಯುವಂತೆ ಕೋರಿದ್ದಾರೆ. ಈ ಭಾಗವು ಆದಾಯ ತೆರಿಗೆ ದರವನ್ನು ನಿಗದಿಗೊಳಿಸುತ್ತದೆ ಮತ್ತು ಇದರಂತೆ 2.5 ಲ.ರೂ.ಗಿಂತ ಕಡಿಮೆ ಒಟ್ಟು ವಾರ್ಷಿಕ ಆದಾಯವನ್ನು ಹೊಂದಿರುವವರು ತೆರಿಗೆಯನ್ನು ಪಾವತಿಸಬೇಕಿಲ್ಲ. ಈ ಭಾಗವು ಈಗ ಸಂವಿಧಾನದ 14,15,16,21 ಮತ್ತು 265ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಸೀನಿವಾಸನ್ ಅರ್ಜಿಯಲ್ಲಿ ಬೆಟ್ಟು ಮಾಡಿದ್ದಾರೆ.ಡಿಎಂಕೆಯ ಆಸ್ತಿ ಸಂರಕ್ಷಣಾ ಮಂಡಳಿಯ ಸದಸ್ಯರಾಗಿರುವ 82ರ ಹರೆಯದ ಸೀನಿವಾಸನ್,2.5 ಲ.ರೂ.ಆದಾಯವಿರುವ ವ್ಯಕ್ತಿಯಿಂದ ತೆರಿಗೆಯನ್ನು ಸಂಗ್ರಹಿಸುವುದು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದಾರೆ. ಸರಕಾರವು ಇಡಬ್ಲುಎಸ್ ಮೀಸಲಾತಿಯಲ್ಲಿ ಸೇರ್ಪಡೆಗೆ ಎಂಟು ಲ.ರೂ.ಗೂ ಕಡಿಮೆ ಒಟ್ಟು ವಾರ್ಷಿಕ ಆದಾಯವನ್ನು ನಿಗದಿಗೊಳಿಸಿರುವುದರಿಂದ ಆದಾಯ ತೆರಿಗೆಗಾಗಿ ಆದಾಯ ಸ್ತರವನ್ನೂ ಹೆಚ್ಚಿಸಬೇಕು. ಸಮಾಜದ ಇತರ ವರ್ಗಗಳಿಗೂ ಇದೇ ಅಳತೆಗೋಲನ್ನು ಅನ್ವಯಿಸಬೇಕು. ವಾರ್ಷಿಕ 7,99,999 ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿಯಿಂದ ಸರಕಾರವು ಆದಾಯ ತೆರಿಗೆಯನ್ನು ಸಂಗ್ರಹಿಸಬಾರದು. ಇಂತಹವರಿಂದ ತೆರಿಗೆ ವಸೂಲು ಮಾಡುವುದರಲ್ಲಿ ಯಾವುದೇ ವೈಚಾರಿಕತೆ ಮತ್ತು ಸಮಾನತೆ ಇಲ್ಲ ಎಂದು ಸೀನಿವಾಸನ್ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ,ಹಣಕಾಸು,ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯಗಳಿಗೆ ನೋಟಿಸ್ ಹೊರಡಿಸಿರುವ ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಮತ್ತು ನಾರಾಯಣ ಪ್ರಸಾದ ಅವರ ಪೀಠವು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
ಅಲ್ಲಲ್ಲಿ ಗುಸು-ಗುಸು ಮೂಲಕ ಆರಂಭವಾದ ಸುದ್ದಿಯೊಂದು ಮೊನ್ನೆ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಅವರ ರಾಜೀನಾಮೆಯೊಂದಿಗೆ ಒಂದು ಹಂತಕ್ಕೆ ಬಂದಿದೆ. ಎಂ.ಎಸ್ ಬಿಲ್ಡಿಂಗ್ ನ ಕಾರಿಡಾರ್ ಗಳಲ್ಲಿ, ಮೀಡಿಯಾ ಕಚೇರಿಗಳಲ್ಲಿ ಹಾಗೂ ಅಧಿಕಾರಗಳ ಖಾಸಬಾತ್ ನಲ್ಲಿ ಲೋಕಾಯುಕ್ತ ಹಗರಣದ ಸುದ್ದಿ ಹರಿದಾಡುತ್ತಿತ್ತು. ಕೃಷ್ಣಮೂರ್ತಿ ಎಂಬುವವರು ದೂರು ಕೊಟ್ಟಿದ್ದಾರೆ ಎಂದಾಗಲೂ, ಅನೇಕರು ವಿಷಯ ಇಷ್ಟೊಂದು ಗಂಭೀರ ಇದೆ ಎಂದು ಪರಿಗಣಿಸಿರಲಿಲ್ಲ. ಆದರೆ, ಕೆಲ ಸುದ್ದಿ ಮಾಧ್ಯಮಗಳ ಆಸಕ್ತಿ ಜೊತೆಗೆ ಈ ವಿಚಾರದ ಕಾವನ್ನು ಹಾಗೇ ಕಾಪಾಡಿಕೊಂಡು ಬಂದವರು ಸಮಾಜ ಪರಿವರ್ತನ ಸಂಸ್ಥೆಯ ಎಸ್.ಆರ್. ಹಿರೇಮಠ ಹಾಗೂ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಾಯಕರು. ಈ ಪಕ್ಷದಲ್ಲಿ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಗೆದ್ದುಬಂದ ಒಬ್ಬೇ ಒಬ್ಬ ಜನಪ್ರತಿನಿಧಿ ಇಲ್ಲದಿದ್ದರೂ, ವಿಚಾರವನ್ನು ಜನರಿಗೆ ರವಾನಿಸಿ, ಲೋಕಾಯುಕ್ತ ಸಂಸ್ಥೆಯಲ್ಲಿ ನಡೆಯುತ್ತಿರುವ ಭಾನಗಡಿಗಳ ಬಗ್ಗೆ ಒಂದು ಅಭಿಪ್ರಾಯ ರೂಪಿಸುವಲ್ಲಿ ಶ್ರಮ ಪಟ್ಟರು. ಹಲವರು ಬಂಧನಕ್ಕೊಳಗಾದರು. ಇಷ್ಟೆಲ್ಲಾ ಆದ ನಂತರ ಭಾಸ್ಕರ್ ರಾವ್ ರಾಜೀನಾಮೆ ನೀಡಿದರು. ಅದಕ್ಕಿಂತ ಮುಖ್ಯವಾದದ್ದು ಈ ಪ್ರಕರಣದ ತನಿಖೆ ಆರಂಭವಾಗಿ ಕೆಲವರಾದರೂ ಜೈಲುಪಾಲಾಗಿದ್ದು. ನ್ಯಾಯಾಂಗ ಬಂಧನದಲ್ಲಿರುವವರು ಜಾಮೀನಿಗಾಗಿ ಸುಪ್ರಿಂ ಕೋರ್ಟ್ ಗೆ ಮೊರೆ ಇಡುತ್ತಿದ್ದಾರೆ. ಮಾಧ್ಯಮ ಹಾಗೂ ಸಮಾಜದ ಬಗ್ಗೆ ಕಳಕಳಿ ಇರುವ ಕೆಲವರು ನಿಯಮಿತವಾಗಿ ಈ ಬಗ್ಗೆ ದನಿ ಎತ್ತದೇ ಹೋಗಿದ್ದರೆ ವಿಷಯ ಈ ಹಂತ ತಲುಪುತ್ತಿರಲಿಲ್ಲ. ರಾಜೀನಾಮೆ ಅಂಗೀಕಾರ ಆದ ತಕ್ಷಣ ಕೆಲವೆಡೆ ರಾಹುಕಾಲ ಮುಗಿಯಿತು, ರಾಜ್ಯಕ್ಕೆ ಅಂಟಿದ್ದ ಭ್ರಷ್ಟ ಕಳಂಕ ತೊಲಗಿತು..ಎಂಬರ್ಥದ ಹೇಳಿಕೆಗಳು ಕೇಳಿಬಂದವು. ಆ ಕ್ಷಣಕ್ಕೆ catchy ಆಗಿರಲೆಂದು ಕೊಟ್ಟ ತಲೆಬರಹಗಳಿರಬಹುದು ಇವು. ಆದರೆ, ಅಂತ ಹ ಮಹತ್ವದ್ದೇನೂ ಆಗಿಲ್ಲ ಎನ್ನುವುದು ಅಷ್ಟೇ ಸತ್ಯ. ಭ್ರಷ್ಟಾಚಾರ ನಿಗ್ರಹಕ್ಕೆಂದು ಇರುವ ಸಂಸ್ಥೆಗೆ ರಾಜಕಾರಣಿಗಳು ದುಡ್ಡು ಪಡೆದು ನೇಮಕ ಮಾಡುತ್ತಾರೆ. ಹಾಗೆ ನೇಮಕ ಆದವರಿಂದ ಆದಷ್ಟು ಲಾಭ ಪಡೆದು, ಅವರನ್ನು ರಕ್ಷಿಸಲು ಕೆಲವರು ಹೊರಡುತ್ತಾರೆ. ಇಡೀ ಸಂಚಿನಲ್ಲಿ ಪಾಲ್ಗೊಂಡ ಪ್ರಮುಖರನ್ನು ಹೊರತು ಪಡಿಸಿ, ಸಣ್ಣ ಪುಟ್ಟವರಷ್ಟೆ ಕೇಸು ಹಾಕಿಸಿಕೊಂಡು ಜೈಲು ಸೇರುತ್ತಾರೆ. ಇಷ್ಟೆಲ್ಲಾ ಗೊತ್ತಾದ ಮೇಲೆ, ಎಂಥ ಮೂಢನಿಗೂ ಅನ್ನಿಸುವ ಸತ್ಯವೆಂದರೆ, ಅಶ್ವಿನ್ ರಾವ್ ಗಿಂತ ಅವರಪ್ಪ ಈ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ಆದರೆ ಅಶ್ವಿನ್ ರಾವ್ ಮಾಡಿದ ತಪ್ಪಿಗೆ ಅವರಪ್ಪ ಸಾಕ್ಷಿಯಂತೆ, ಹಾಗಾಗಿ ಅವರು ರಾಜಿನಾಮೆ ಕೊಟ್ಟರಷ್ಟೆ ಸಾಕು! ಇಂತಹ ಭ್ರಷ್ಟನನ್ನು ತಂದು ಈ ಸ್ಥಾನಕ್ಕೆ ಕೂರಿಸಿದವರಲ್ಲಿ ಹಲವರ ಪಾತ್ರವಿದೆ. ಹಿಂದಿನ ಸರಕಾರದಲ್ಲಿದ್ದವರು, ಅವರ ಮೇಲೆ ಕೂತಿದ್ದ ಮತ್ತೊಬ್ಬ ತೂಕದ (ಅಲ್ಲಲ್ಲ..’ಭಾರ’ದ) ವ್ಯಕ್ತಿ, ನಂತರ ತಮ್ಮ ಅನುಕಾಲಕ್ಕಾಗಿ ಬಳಸಿಕೊಂಡ ಈಗಿನವರು -ಎಲ್ಲರದೂ ಪಾತ್ರವಿದೆ. ಆದರೆ, ಇವಾರಾರೂ ಜೈಲುಪಾಲಾಗಲಿಲ್ಲ. ಈ ನ್ಯಾಯಮೂರ್ತಿಯವರೂ ಜೈಲುಪಾಲಾಗುತ್ತಾರೇನೋ ಎಂಬ ಬಗ್ಗೆ ಖಾತ್ರಿಯಿಲ್ಲ. ಇದುವರೆಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತಿತ್ತು. ಈ ಪ್ರಕರಣದಿಂದ ನ್ಯಾಯಾಂಗ ಹಾಗೂ ಪತ್ರಿಕೋದ್ಯಮದಲ್ಲಿನ ಭ್ರಷ್ಟತೆ ಬಗ್ಗೆ ಚರ್ಚೆ ಒಂದಿಷ್ಟು ವಿಸ್ತಾರ ಪಡೆದುಕೊಂಡಿತು. ಹೀಗೆ ಹಿಂದೆ ಬಳ್ಳಾರಿ ಗಣಿ ಬಗ್ಗೆ ವರದಿಗಳು ಬಂದಾಗ, ಲೋಕಾಯುಕ್ತ ತನಿಖೆ ಸಂದರ್ಭದಲ್ಲಿ ಗಣಿ ಉದ್ಯಮಿಗಳಿಂದ ಕೆಲ ಮಾಧ್ಯಮದವರಿಗೆ ನಿಯಮಿತವಾಗಿ ಹಣ ರವಾನೆಯಾಗಿದ್ದು ಸುದ್ದಿಯಾಗಿತ್ತು. ಆ ನಂತರ ಅದು ಚರ್ಚೆಯಾಗಲಿಲ್ಲ. ಲೋಕಾಯುಕ್ತ ವ್ಯಾಪ್ತಿಯಲ್ಲಿ ಪತ್ರಿಕೋದ್ಯಮ, ಪತ್ರಕರ್ತರು ಬರುವುದಿಲ್ಲ ಎಂಬ ಕಾರಣಕ್ಕೆ, ಆ ವಿಚಾರ ಅಲ್ಲಿಗೇ ನಿಂತಿತು. ಆ ಬಗ್ಗೆ ಆಗಲೇ ಒಂದು ವಿಚಾರಣೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಬೇಡ, ಕನಿಷ್ಟ ಅಂತಹವರ ಬಗ್ಗೆ ಸಮಾಜದಲ್ಲಿ ಅಸಹ್ಯ ಹುಟ್ಟಿದ್ದರೆ ಸಾಕಿತ್ತು. ಅಂತಹದೊಂದು ಪ್ರಯತ್ನ ಈಗಲಾದರೂ ಆದರೆ ಒಳ್ಳೆಯದು. ಅದರೊಟ್ಟಿಗೆ ನ್ಯಾಯಮೂರ್ತಿ ಎಂಬ ಕಾರಣಕ್ಕೆ ಭಾಸ್ಕರ್ ರಾವ್ ಯಾವುದೋ ನೆಪ ಮಾಡಿಕೊಂಡು ಪ್ರಕರಣದಲ್ಲಿ ಕೇವಲ ಸಾಕ್ಷಿಯಾಗಿ ಉಳಿದರೆ, ನ್ಯಾಯದಾನ ಪ್ರಕ್ರಿಯೆ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತದೆ. ಜೊತೆಗೆ ಮುಂದೆ ಇಂತಹ ಪ್ರಮುಖ ಸ್ಥಾನಗಳಿಗೆ ಬರುವವರು ಎಂತಹವರಿರುತ್ತಾರೋ ಎಂಬ ಬಗ್ಗೆ ಅನುಮಾನಗಳಿವೆ. ಈಗಿನ “ಘನ” ಸರಕಾರ ಒಂದೇ ಹೆಸರನ್ನು ಪದೇ ಪದೇ ಕಳುಹಿಸಿ ಒತ್ತಾಯ ಹಾಕಿದ್ದು ಗೊತ್ತೇ ಇದೆ. ತಮ್ಮ ರಾಜಕೀಯ ಲಾಭಕ್ಕಾಗಿ ನೇಮಕ ಮಾಡುವುದಾದರೆ, ಅದರಿಂದ ಅನಾಹುತಗಳೇ ಹೆಚ್ಚು. ಆ ಕಾರಣಕ್ಕೆ ನ್ಯಾಯಾಂಗದ ಭ್ರಷ್ಟ ವ್ಯವಸ್ಥೆ ಬಗ್ಗೆಯೂ ಮುಕ್ತವಾಗಿ ಚರ್ಚೆಯಾಗಲಿ. ಯಾರೂ ಪ್ರಶ್ನಾತೀತರಾರಿ ಉಳಿಯಬಾರದು.
ವಿಷ ಪದಾರ್ಥ ಸೇವಿಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮೃತಪಟ್ಟಘಟನೆ ಮಂಗಳವಾರ ತಾಲೂಕಿನ ಪುದುವೆಟ್ಟಿನಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ (80) ಹಾಗೂ ಇವರ ಪುತ್ರ ಓಡಿಯಪ್ಪ (41) ಮೃತರು. Govindaraj S First Published Nov 23, 2022, 1:19 PM IST ಬೆಳ್ತಂಗಡಿ (ನ.23): ವಿಷ ಪದಾರ್ಥ ಸೇವಿಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮೃತಪಟ್ಟಘಟನೆ ಮಂಗಳವಾರ ತಾಲೂಕಿನ ಪುದುವೆಟ್ಟಿನಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ (80) ಹಾಗೂ ಇವರ ಪುತ್ರ ಓಡಿಯಪ್ಪ (41) ಮೃತರು. ಮನೆಯಲ್ಲಿ ಗುರುವ ಸಹಿತ ಇಬ್ಬರು ಮಕ್ಕಳು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು ಕಂಡು ಆತಂಕಕ್ಕೀಡಾಗಿದ್ದರು. ಪರಿಶೀಲಿಸಿದಾಗ ಸೋಮವಾರ ರಾತ್ರಿ ಕಾಡಿನ ಯಾವುದೋ ವಿಷಪೂರಿತ ಅಣಬೆ ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮತ್ತೋರ್ವ ಮಗ ಮನೆಯಲ್ಲಿ ಇಲ್ಲದ್ದರಿಂದ ಮತ್ತೊಂದು ಅವಘಡ ತಪ್ಪಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿನ ನಿಖರ ಕಾರಣ ತನಿಖೆ ಬಳಿಕ ಸ್ಪಷ್ಟವಾಗಿ ತಿಳಿದು ಬರಬೇಕಾಗಿದೆ. ತೀರಾ ಬಡ ಕುಟುಂಬವಾಗಿದ್ದು,ಮನೆಯಲ್ಲಿ ಮೂವರು ಪುರುಷರು ಮಾತ್ರ ವಾಸವಾಗಿದ್ದರು. ಬೆಳಗಿನ ವೇಳೆ ಮನೆಯಲ್ಲಿದ್ದ ಇಬ್ಬರ ಶವಗಳು ಅಂಗಳದಲ್ಲಿ ಕಂಡು ಬಂದಿದ್ದವು. ಮನೆ ಒಳಗೆ ಅನ್ನ ಹಾಗೂ ಉಳಿದ ಅಣಬೆ ಪದಾರ್ಥ ಪಾತ್ರೆಗಳಲ್ಲಿ ಕಂಡು ಬಂದಿದೆ. ಬೆಂಗಳೂರು: ಸ್ನೇಹಿತನ ಕೊಂದು ಠಾಣೆಗೆ ಶವ ಸಮೇತ ಠಾಣೆಗೆ ಬಂದ..! ಅಣಬೆಗಳನ್ನು ಅವುಗಳ ಬಣ್ಣಗಳ ಮೂಲಕ ಗುರುತಿಸಿ ಉಪಯೋಗಿಸಲಾಗುತ್ತದೆ. ‘ಅಮಾನಿಟ’ ಎಂಬ ಜಾತಿಯ ಅಣಬೆಗಳು ಕಾಡಲ್ಲಿ ಸಾಮಾನ್ಯವಾಗಿ ಸಿಗುತ್ತವೆ. ಇವು ತೀವ್ರ ವಿಷಕಾರಿ ಹಾಗೂ ಇವನ್ನು ಸೇವಿಸಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಆಹಾರಕ್ಕೆ ಬಳಸುವ ‘ಪ್ಲೀವ್‌ ರೋಟಸ್‌’ ಜಾತಿ ಅಣಬೆಗಳನ್ನು ಎರಡು ಮೂರು ದಿನ ಯಾವುದೇ ಮುಂಜಾಗ್ರತೆ ವಹಿಸದೆ ಇಟ್ಟು ಸೇವಿಸಿದರೆ ಇದರಲ್ಲಿಯು ತೀವ್ರ ಅನಾರೋಗ್ಯ ಬರುವ ಸಂಭವ ಇದೆ. -ಡಾ.ಕುಮಾರ್‌ ಹೆಗ್ಡೆ, ಮುಖ್ಯಸ್ಥರು, ಸಸ್ಯಶಾಸ್ತ್ರ ವಿಭಾಗಹಾಗೂ ವಿಜ್ಞಾನ ನಿಕಾಯದ ಡೀನ್‌, ಎಸ್‌ಡಿಎಂ ಕಾಲೇಜ್‌ ಉಜಿರೆ. ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು: ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ದನಕರುಗಳಿಗೆ ಮೇವು ತರಲು ಹೋಗಿದ್ದ ಯುವಕನೊಬ್ಬ ನೀರು ತುಂಬಿದ ಸವಳಿನ ಹೊಂಡಕ್ಕೆ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು, ಈವರೆಗೂ ಮೃತದೇಹ ಪತ್ತೆಯಾಗಿಲ್ಲ ಎಂದು ಪಿಎಸ್‌ಐ ಸುಖಾನಂದ ಸಿಂಧೆ ತಿಳಿಸಿದ್ದಾರೆ. ಸುಲೇಪೇಟ ಗ್ರಾಮದ ಸಿದ್ದಾರ್ಥ ನಗರದ ನಿವಾಸಿ ಪ್ರಕಾಶ ಶಾಮರಾವ (27) ಮೃತಪಟ್ಟಿರುವ ಯುವಕ. ಮೃತನು ಮೊನ್ನೆ ಸಂಜೆ ಹುಲ್ಲು ತರಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದೆ. ಶವ ಪತ್ತೆಗಾಗಿ ಚಿಂಚೋಳಿ ಅಗ್ನಿಶಾಮಕ ದಳ ಮತ್ತು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಶೋಧನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸುಲೇಪೇಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು: ಸಹೋದರನ ಮಗನ ಸಾವಿನ ಸುದ್ದಿ ಕೇಳಿ ಚಿಕ್ಕಪ್ಪನೂ ಸಾವು..! ಮೃತ ಯುವಕನು ಸೇಂದಿ ಮರದ ಪೊರಕೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದನು. ಮೃತನ ಶವ ಈವರೆಗೂ ಪತ್ತೆಯಾಗಿಲ್ಲ ಕಂದಾಯ ಇಲಾಖೆ ಅ​ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಗ್ರಾಮಸ್ಥರು ಹಾಗೂ ಮೃತನ ಕುಟುಂಬಸ್ಥರು ಚಿಂಚೋಳಿ-ಕಲಬುರಗಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆಂದು ಗ್ರಾಪಂ ಸದಸ್ಯ ರುದ್ರಮುನಿ ರಾಮತೀರ್ಥಕರ ತಿಳಿಸಿದ್ದಾರೆ. ಸವಳು ಮಣ್ಣಿನ ಅಕ್ರಮ ಗಣಿಗಾರಿಕೆಗಳು ಸುಲೇಪೇಟ ಗ್ರಾಮದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅ​ಧಿಕಾರಿಗಳು ಇವುಗಳ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಆಳವಾದ ಹೊಂಡಾದಲ್ಲಿ ದನಕರುಗಳು ಅಮಾಯಕರು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ಮಾಡಿದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು. ಅಲ್ಲದೇ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸಮಾಜ ಸೇವಕ ಅಂಬರೀಶ ಗೋಣಿ ಒತ್ತಾಯಿಸಿದ್ದಾರೆ.
ಬೆಂಗಳೂರು(ನ.02): ನಗರದಲ್ಲಿ ಕಳೆದ ಕೆಲವು ದಿನಗಳ ಕಾಲ ಬಿಡುವು ನೀಡಿದ ಮಳೆರಾಯನ ಆಗಮನ ಮತ್ತೆ ಆಗಿದ್ದು, ನಗರದಾದ್ಯಂತ ಮಂಗಳವಾರ ಧಾರಾಕಾರ ಮಳೆ ಸುರಿದಿದೆ. ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿರುವ ಪರಿಣಾಮ ನಗರದಲ್ಲಿ ಮತ್ತೆ ಮಳೆ ಆರಂಭಗೊಂಡಿದೆ. ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಉಂಟಾಗಿತ್ತು. ಸಂಜೆ 4 ಗಂಟೆಯ ಸುಮಾರಿಗೆ ಮಳೆ ಆರಂಭವಾಯಿತು. ರಾತ್ರಿವರೆಗೂ ಜಿಟಿ ಜಿಟಿ ಮಳೆ ಮುಂದುವರೆದಿತ್ತು. ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್‌.ರಸ್ತೆ, ಮೆಜೆಸ್ಟಿಕ್‌, ಶಿವಾಜಿ ನಗರ, ರೇಸ್‌ ಕೋರ್ಸ್‌ ರಸ್ತೆ, ಶಿವಾನಂದ ರೈಲ್ವೆ ಅಂಡರ್‌ ಪಾಸ್‌, ಕೆ.ಆರ್‌.ಮಾರುಕಟ್ಟೆ, ಬಳ್ಳಾರಿ ರಸ್ತೆ, ಎಂಜಿ ರಸ್ತೆ, ಆನಂದ್‌ ರಾವ್‌ ವೃತ್ತ, ಮಾಗಡಿ ರಸ್ತೆ, ಓಕಳಿಪುರ ಜಂಕ್ಷನ್‌ ಸೇರಿದಂತೆ ಹಲವು ಕಡೆ ಮಳೆಯಿಂದ ವಾಹನ ಸಂಚಾರದಲ್ಲಿ ದಟ್ಟಣೆ ಉಂಟಾಯಿತು. ಈಶಾನ್ಯ ಮುಂಗಾರು ಹೊಡೆತ, ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ 3 ದಿನ ಭಾರಿ ಮಳೆ! ನಗರದ ವಿವಿಧ ರಸ್ತೆ ಮತ್ತು ಜಂಕ್ಷನ್‌ಗಳಲ್ಲಿ ಭಾರೀ ಪ್ರಮಾಣ ನೀರು ಶೇಖರಣೆಗೊಂಡ ಪರಿಣಾಮ ವಾಹನ ಸವಾರರು ಪರದಾಡಿದರು. ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಲಯ, ಹೊರಮಾವು, ಬಾಣಸವಾಡಿ, ಕೆಆರ್‌ಪುರ ಸೇರಿದಂತೆ ವಿವಿಧ ಕಡೆ ಮರ ಹಾಗೂ ಮರ ಕೊಂಬೆ ಧರೆಗುರುಳಿದ ವರದಿಯಾಗಿದೆ. ಹೊರಮಾವಿನಲ್ಲಿ 3.45 ಸೆಂ.ಮೀ. ಬೆಂಗಳೂರಿನಲ್ಲಿ ಮಂಗಳವಾರ ಸರಾಸರಿ 0.6 ಸೆಂ.ಮೀ ಮಳೆಯಾಗಿದೆ. ಮಹದೇವಪುರದ ಹೊರಮಾವಿನಲ್ಲಿ ಅತಿ ಹೆಚ್ಚು 3.45 ಸೆಂ.ಮೀ. ಮಳೆಯಾದ ವರದಿಯಾಗಿದೆ. ಉಳಿದಂತೆ, ಬಾಣಸವಾಡಿಯಲ್ಲಿ 2.65 ಸೆಂ.ಮೀ, ಕೆ.ಆರ್‌ಪುರ 1.9, ಎಚ್‌ಎಎಲ್‌ ವಿಮಾನ ನಿಲ್ದಾಣ ಮತ್ತು ದೊಡ್ಡಾನೆಕುಂದಿಯಲ್ಲಿ ತಲಾ 1.85, ಕಮ್ಮನಹಳ್ಳಿಯಲ್ಲಿ 1.8, ದೊಮ್ಮಲೂರು ಮತ್ತು ಕೋನೇನ ಆಗ್ರಹಾರದಲ್ಲಿ ತಲಾ 1.7, ಹೊಯ್ಸಳ ನಗರ 1.6, ವನ್ನಾರ್‌ ಪೇಟೆ 1.55, ಯಲಹಂಕ 1.4, ಹೆಮ್ಮಿಗೆಪುರ 1.35, ಪುಲಕೇಶಿನಗರ 1.3, ಬೆಳ್ಳಂದೂರು ಮತ್ತು ಬೊಮ್ಮನಹಳ್ಳಿಯಲ್ಲಿ 1.25, ಮಾರತ್‌ಹಳ್ಳಿ ಮತ್ತು ಎಚ್‌ಎಸ್‌ಆರ್‌ನಲ್ಲಿ ತಲಾ 1.2 ಸೆಂ.ಮೀ ಮಳೆಯಾದ ವರದಿಯಾಗಿದೆ.
ಮೇಷ ರಾಶಿ : ನಿಮ್ಮ ನಡವಳಿಕೆಯ ಮೇಲೆ ಹಿಡಿತ ಇಟ್ಟುಕೊಳ್ಳಿ. ಇಂದು ನಿಮಗೆ ಸಾಮಾನ್ಯ ದಿನವಾಗಿರಲಿದೆ. ದೂರದ ಪ್ರಯಾಣ ಉತ್ತಮವಲ್ಲ‌. ನಿಮ್ಮ ನಾಲಿಗೆಯೆ ನಿಮ್ಮ ಶತ್ರುವಾಗಲಿದೆ. ಇಂದಿನ ನಿಮ್ಮ ಮಾತು ಮುಂದೆ ನಿಮ್ಮನ್ನು ಕಾಡಲಿದೆ. ಇಂದು ನಿಮಗೆ ಮಿಶ್ರ ಫಲ ದೊರೆಯಲಿದೆ. ಪ್ರಣಯ ಜೀವನ ಸಾಮಾನ್ಯವಾಗಿರಲಿದೆ. ವೃಷಭ ರಾಶಿ : ಇಂದು ನೀವು ವಿಶೇಷವಾದ ಸಾಧನೆಯನ್ನು ಮಾಡಲಿದ್ದೀರಿ. ಪ್ರಯಾಣವನ್ನು ಮಾಡುತ್ತಿದ್ದರೆ ನಿಮ್ಮ ಅಮೂಲ್ಯ ವಸ್ತುಗಳ ಮೇಲೆ ಗಮನವಿರಲಿ. ಹಣಕಾಸಿ ವ್ಯವಹಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಆರೋಗ್ಯ ಸ್ಥಿತಿಯು ಸ್ಥಿರವಾಗಿ ಇರಲಿದೆ. ಮಿಥುನ ರಾಶಿ : ಇಂದು ನೀವು ನಿರೀಕ್ಷಿಸಿದಂತೆ ಲಾಭವಾಗುವುದಿಲ್ಲ. ಕುಟುಂಬದೊಂದಿಗೆ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ. ಉಧ್ಯಮಿಗಳಿಗೆ ಹೆಚ್ಚಿನ‌ ಪ್ರಯೋಜನಕಾರಿಯಾದ ದಿನವಲ್ಲ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾದ ದಿನವಾಗಿದೆ. ಖರ್ಚು ಹೆಚ್ಚುವ ಸಂಭವ ಎದ್ದು ಕಾಣುತ್ತಿದೆ. ಆರೋಗ್ಯ ಸಮಸ್ಯೆಯು ನಿಮ್ಮನ್ನು ಕಾಡಬಹುದು. ಕರ್ಕಾಟಕ ರಾಶಿ: ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ. ನಿಮ್ಮ ಮನಸ್ಸನ್ನು‌ ಶಾಂತವಾಗಿರಿಸಿಕೊಳ್ಳಿ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ನೀಡುವುದು ಉತ್ತಮ. ವಿವಾಹಿತರಿಗೆ ಉತ್ತಮ ದಿನವಾಗಿದೆ. ಭವಿಷ್ಯದ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಿ. ಇಂದು ನೀವು ನಿಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು. ಸಿಂಹರಾಶಿ : ಇಂದು ನೀವು ದೈನಂದಿನ ಒತ್ತಡದಿಂದ ಹೊರಬಂದು ಚಿಕ್ಕ ಪ್ರಯಾಣವನ್ನು ಮಾಡಬಹುದು. ಇದರಿಂದಾಗಿ ಮನಃಶಾಂತಿ ದೊರೆಯುತ್ತದೆ. ಹಣದ ವಿಷಯದಲ್ಲಿ ಉತ್ತಮ ದಿನವಾಗಿದೆ. ನಿಮ್ಮ ಆರೋಗ್ಯಕ್ಕೆ ಆಹಾರವು ಕೆಡುಕನ್ನು ತರಬಹುದು, ಎಚ್ಚರಿಕೆ ಅಗತ್ಯ. ವೇಗದ ವಾಹನ ಚಲಾವಣೆ ತೊಂದರೆಯನ್ನು ಉಂಟು ಮಾಡಬಹುದು. ಕನ್ಯಾ ರಾಶಿ : ನಿಮ್ಮ ಕೆಲಸಗಳು ಇಂದು ಸುಲಭವಾಗಿ ಕೈಗೂಡುತ್ತದೆ. ಬಹಳ ದಿನಗಳಿಂದ ಒಂದೆಡೆ ನಿಂತ ಕೆಲಸಗಳು ಪ್ರಾರಂಭವಾಗುತ್ತದೆ. ಆಲಸ್ಯವು ನಿಮ್ಮ ಎಲ್ಲ ಪ್ರಯತ್ನವನ್ನು ಹಾಳುಗೆಡವುತ್ತದೆ. ಇಂದು ನಿಮ್ಮ ಮನೆಯಲ್ಲಿ ಸಂತೋಷದ ಘಟನೆ ನಡಯುತ್ತದೆ. ಕುಟುಂಬ ಸದಸ್ಯರ ಜೊತೆಯಲ್ಲಿ ಹಬ್ಬದ ಭೋಜನ ಸವಿಯುತ್ತೀರಿ. ತುಲಾರಾಶಿ : ಆರೋಗ್ಯದಲ್ಲಿ ಕೆಲವು ತೊಂದರೆಗಳು ಕಂಡುಬರಲಿವೆ. ಇದರಿಂದ ಮನೆಯಲ್ಲಿ ಭಯ, ನೋವು ಕಂಡುಬರಲಿವೆ. ಹಣಕಾಸಿನ ವ್ಯರ್ಥ ಖರ್ಚು ಉಂಟಾಗಬಹುದು. ಹಲವರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಶತ್ರುಗಳು ನಿಮ್ಮನ್ನು ಹಣಿಯಲು ಹಾತೊರೆಯುತ್ತಿದ್ದಾರೆ. ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಬೆನ್ನೇರುತ್ತವೆ. ವೃಶ್ಚಿಕ ರಾಶಿ : ಆಧ್ಯಾತ್ಮಿಕ ಆಸಕ್ತಿಗಳನ್ನು ಪೂರೈಸಿಕೊಳ್ಳಲು ಉತ್ತಮ ದಿನವಾಗಿದೆ. ಪ್ರಣಯ ಜೀವನವು ಉತ್ತಮವಾಗಿರಲಿದೆ, ಆದರೆ ನಿಮ್ಮಿಬ್ಬರ ನಡುವೆ ಪಾರದರ್ಶಕತೆ ಇರಲಿ. ಕೆಲಸದ ಸ್ಥಳದಲ್ಲಿ ಹೊಂದಾಣಿಕೆ ಕಂಡುಬರಲಿದೆ. ಸಣ್ಣ ಪ್ರಮಾಣದ ಅನಾರೋಗ್ಯ ಕಾಡಬಹುದು. ದೇಹದ ಕಡೆಗೆ ಗಮನ ಹರಿಸುವುದು ಅಗತ್ಯವಾಗಿದೆ. ಧನು ರಾಶಿ : ಇಂದು ನಿಮಗೆ ಹೆಚ್ಚಿನ ಒತ್ತಡ ಇರಲಿದೆ. ಬಹಳ ದಿನಗಳ ಹಿಂದೆ ನೀಡಿರುವ ಹಣ ಹಿಂದಿರುಗುವ ಸಾಧ್ಯತೆ. ಕೆಲಸದಲ್ಲಿ ನೀವು ನಿರೀಕ್ಷಿಸಿದ ಪ್ರಗತಿ ದೊರೆಯಲಿದೆ. ಇಂದಿನ ದಿನ ಸಂತೋಷದಿಂದ ಕಳೆಯುವಿರಿ. ಅಧ್ಯಯನದ ಅವಶ್ಯಕತೆ ಇದೆ. ಸಂಗಾತಿಯ ಬೇಡಿಕೆಯನ್ನು ಈಡೇರಿಸಿ. ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಹೂಡಿಕೆ ಮಾಡಲು ಉತ್ತಮ ದಿನವಾಗಿದೆ. ಮಕರ ರಾಶಿ : ಇಂದು ನಿಮ್ಮ ಅಮೂಲ್ಯ ಸಮಯವನ್ನು ಸಾಧ್ಯವಾದಷ್ಟು ಮಕ್ಕಳ ಜೊತೆಯಲ್ಲಿ ಕಳೆಯಿರಿ. ನಿಮ್ಮ ಏಳಿಗೆಯನ್ನು ಸಹಿಸದವರು ನಿಮ್ಮನ್ನು ಕಾಡುತ್ತಾರೆ. ಹಣಕಾಸಿನ ಹರಿವು ಸಾಮಾನ್ಯವಾಗಿದೆ. ಇಂದು ಯಾವುದೇ ತರಹದ ದೂರದ ಪ್ರಯಾಣ ಒಳ್ಳೆಯದಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ. ಕುಂಭ ರಾಶಿ : ಇಂದು ನೀವು‌ ಸುಖಮಯ ಜೀವನ ಅನುಭವಿಸುವಿರಿ. ಬೇರೆಯವರ ಮಾತನ್ನು ಕೇಳಿ ಹೂಡಿಕೆ ಮಾಡಿದಲ್ಲಿ ನಷ್ಟವನ್ನು ಅನುಭವಿಸುತ್ತೀರಿ. ಯಾವುದೋ ಒಂದು ಅಹಿತಕರ ಘಟನೆಯ ನೆನಪು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಸಂಬಂಧಿಗಳಿಂದ ಒಳ್ಳೆಯ ಸುದ್ದಿಯು ಬರಲಿದೆ. ಮೀನ ರಾಶಿ : ಇಂದಿನ ದಿನದ ಆರಂಭ ನಿಮಗೆ ಕಿರಿಕಿರಿ ಉಂಟು ಮಾಡಬಹುದು. ಬೇರೆಯವರ ಭಾವನೆಗಳಿಗೆ ಗೌರವ ನೀಡಿ. ಹಣಕಾಸಿನ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರಿಗೆ ಇಂದು ಎಲ್ಲಿಂದಲೋ ಹಣ ಬರಬಹುದು. ಸಂಗಾತಿಯೊಂದಿಗೆ ಸಂತೋಷದ ಸಮಯ ಕಳೆಯುವಿರಿ. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
January 25, 2022 January 25, 2022 kavyaLeave a Comment on ಇದೆ ಜನವರಿ 26ರಿಂದ 5 ರಾಶಿಯವರಿಗೆ 2050ರವರೆಗೂ ಅದೃಷ್ಟ ಶುಕ್ರದೆಸೆ ಆಂಜನೇಯಸ್ವಾಮಿ ಅನುಗ್ರಹ ಸ್ನೇಹಿತರೆ ನಮಸ್ಕಾರ ಇದೇ ಜನವರಿ 26 ನೇ ತಾರೀಖಿನಿಂದ ಆಂಜನೇಯ ಸ್ವಾಮಿಯ ಆಶೀರ್ವಾದ ಈ ಕೆಲವು ರಾಶಿಯವರಿಗೆ ಸಿಗುವುದರಿಂದ ಈ ರಾಶಿಯವರಿಗೆ ರಾಜಯೋಗ ಶುಕ್ರದಶೆ ಹಾಗೂ ಈ ರಾಶಿಯವರ ಜೀವನವೇ ಬದಲಾಗಿ ಹೋಗುತ್ತದೆ ಅಂತ ಹೇಳಬಹುದು ಇವರ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ಜನವರಿ 26 ನೇ ತಾರೀಖಿನಿಂದ ಎಲ್ಲವೂ ಮಾಯವಾಗಿ ಹೋಗುತ್ತದೆ ರಾಶಿ ಮಂಡಲದಲ್ಲಿ ಆಗುವ ಕೆಲವು ವಿಶೇಷವಾದ ಅದ್ಭುತ ಬದಲಾವಣೆಯಿಂದ ಈ ಕೆಲವು ರಾಶಿಯವರ ಜೀವನದಲ್ಲಿ ತುಂಬಾ ಉತ್ತಮವಾದ ಬದಲಾವಣೆಗಳು ಕಂಡುಬರುತ್ತವೆ ಇಷ್ಟು ದಿನ ಈ ರಾಶಿಯವರು ಅನುಭವಿಸಿದ ಎಲ್ಲಾ ಕಷ್ಟಗಳು ಒಂದೊಂದಾಗಿ ಬಗೆಹರಿಯುತ್ತವೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟಗಳು ಸರ್ವೇಸಾಮಾನ್ಯ ಕಷ್ಟಗಳಿಲ್ಲದ ಮನುಷ್ಯನಿಲ್ಲ ಆದರೆ ಕಷ್ಟಗಳಿಗೆ ಹೆದರಬಾರದು ಬರುವ ಎಲ್ಲಾ ಕಷ್ಟಗಳನ್ನು ಎದುರಿಸಿ ನಡೆಯುವ ಧೈರ್ಯ ಪ್ರತಿಯೊಬ್ಬರಲ್ಲಿ ಇರಬೇಕು ಆಗ ಮಾತ್ರ ಜೀವನ ಸುಂದರವಾಗಿ ನಡೆದುಕೊಂಡು ಹೋಗುತ್ತದೆ ಜೀವನದಲ್ಲಿ ಹೊಸ ಬೆಳವಣಿಗೆಯನ್ನು ಕಾಣುತ್ತಾರೆ ಜನವರಿ 26 ನೇ ತಾರೀಖಿನಿಂದ ಯಾವೆಲ್ಲ ರಾಶಿಯವರಿಗೆ ಯಾವ ಅದೃಷ್ಟ ತರುತ್ತದೆ ಅನ್ನುವುದನ್ನು ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಇದೇ ಜನವರಿ 26 ನೇ ತಾರೀಖಿನಿಂದ 2050 ವರೆಗೂ ಕೂಡ ಆಂಜನೇಯ ಸ್ವಾಮಿಯ ಆಶೀರ್ವಾದ ಹಾಗೂ ಅನುಗ್ರಹ ಈ ರಾಶಿಯವರಿಗೆ ದೊರೆಯುತ್ತದೆ ಹಾಗಾಗಿ ಈ ರಾಶಿಯವರು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕಾಣುತ್ತಾರೆ ಯಾವುದೇ ಒಂದು ಕಷ್ಟಗಳು ಎದುರಾಗುವುದಿಲ್ಲ ಕಷ್ಟಗಳು ಎದುರಾದರೂ ಕೂಡ ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಇವರು ಹೊಂದಿರುತ್ತಾರೆ ಉತ್ತಮ ಸರ್ಕಾರಿ ನೌಕರಿಯನ್ನು ಪಡೆಯುತ್ತಾರೆ ಉದ್ಯೋಗದಲ್ಲಿ ವರ್ಗಾವಣೆಯಾಗುತ್ತದೆ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು ಸಾಲದ ಸಮಸ್ಯೆಗಳು ಜನವರಿ 26 ನೇ ತಾರೀಖಿನಿಂದ ಬಗೆಹರಿಯುತ್ತವೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಸಕಲ ಸಂಪತ್ತು ಅಷ್ಟೈಶ್ವರ್ಯಗಳನ್ನು ಹೊಂದಿ ಐಷಾರಾಮಿ ಜೀವನವನ್ನು ನಡೆಸಬಹುದು ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ ಅದು ಬಗೆಹರಿಯುತ್ತದೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಮನೆಯ ಮೇಲೆ ಆಗುವುದಿಲ್ಲ ಬೇರೆಯವರ ವಕ್ರದೃಷ್ಟಿ ಮನೆಯವರ ಮೇಲೆ ಬೀಳುವುದಿಲ್ಲ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುದೆಂದರೆ ಮೀನ ರಾಶಿ ಕಟಕ ರಾಶಿ ಧನು ರಾಶಿ ಮೇಷ ರಾಶಿ ಮತ್ತು ವೃಷಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶ್ರೀ ಆಂಜನೇಯ ನಮಃ ಅಂತ ಕಾಮೆಂಟ್ ಮಾಡಿ ಹಾಗೂ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
Kannada News » Entertainment » Sandalwood » ‘ದರ್ಶನ್​-ಇಂದ್ರಜಿತ್​ರನ್ನು ಐದು ವರ್ಷ ಚಿತ್ರರಂಗದಿಂದ ಬ್ಯಾನ್​ ಮಾಡಿ’; ಕೇಳಿ ಬಂತು ಹೊಸ ಆಗ್ರಹ ‘ದರ್ಶನ್​-ಇಂದ್ರಜಿತ್​ರನ್ನು ಐದು ವರ್ಷ ಚಿತ್ರರಂಗದಿಂದ ಬ್ಯಾನ್​ ಮಾಡಿ’; ಕೇಳಿ ಬಂತು ಹೊಸ ಆಗ್ರಹ ಸುದ್ದಿಗೋಷ್ಠಿ ನಡೆಸುವಾಗ ಇಂದ್ರಜಿತ್​ ಹಾಗೂ ದರ್ಶನ್​ ಇಬ್ಬರೂ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದರು. ಇನ್ನು, ದರ್ಶನ್​ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್​ ಆಗಿತ್ತು. ಈ ಆಡಿಯೋದಲ್ಲಿ ಅತೀ ಕೆಟ್ಟ ಶಬ್ದಗಳಿಂದ ದರ್ಶನ್​ ಮಾಧ್ಯಮಗಳಿಗೆ ಬೈದಿದ್ದರು. ಇಂದ್ರಜಿತ್​ ಲಂಕೇಶ್​-ದರ್ಶನ್​ TV9kannada Web Team | Edited By: Rajesh Duggumane Jul 20, 2021 | 3:17 PM ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಡುವಿನ ಮಾತಿನ ಗುದ್ದಾಟ ಮುಂದುವರಿದಿದೆ. ಇಬ್ಬರೂ ಸುದ್ದಿಗೋಷ್ಠಿ ನಡೆಸಿ ಪರಸ್ಪರ ಕಿತ್ತಾಡುತ್ತಿದ್ದಾರೆ. ಈ ವೇಳೆ ಇಬ್ಬರೂ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಹೀಗಾಗಿ ದರ್ಶನ್ ಮತ್ತು ಇಂದ್ರಜಿತ್‌ ಅವರನ್ನು 5 ವರ್ಷ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ಗೆ ದೂರು ದಾಖಲು ಮಾಡಲಾಗಿದೆ. ಸುದ್ದಿಗೋಷ್ಠಿ ನಡೆಸುವಾಗ ಇಂದ್ರಜಿತ್​ ಹಾಗೂ ದರ್ಶನ್​ ಇಬ್ಬರೂ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದರು. ಇನ್ನು, ದರ್ಶನ್​ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್​ ಆಗಿತ್ತು. ಈ ಆಡಿಯೋದಲ್ಲಿ ಅತೀ ಕೆಟ್ಟ ಶಬ್ದಗಳಿಂದ ದರ್ಶನ್​ ಮಾಧ್ಯಮಗಳಿಗೆ ಬೈದಿದ್ದರು. ಹೀಗಾಗಿ, ಮಾನವಹಕ್ಕು, ಭ್ರಷ್ಟಚಾರ ನಿಗ್ರಹದಳ ಸಂಸ್ಥೆ ಫಿಲ್ಮ್ ಚೇಂಬರ್‌ಗೆ ದೂರು ನೀಡಿದೆ. ‘ನಟ ದರ್ಶನ್ ಮತ್ತು ಇಂದ್ರಜಿತ್‌ ಅವರನ್ನು 5 ವರ್ಷ ಬ್ಯಾನ್ ಮಾಡಬೇಕು. ದರ್ಶನ್ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದಾರೆ. ದರ್ಶನ್ ಮಾತಿಗೆ ಕಡಿವಾಣ ಹಾಕಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ. ಮೈಸೂರಿನ ದಿ ಪ್ರಿನ್ಸ್​ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್​ ಆರೋಪಿಸಿದ್ದರು. ದರ್ಶನ್​ ವಿರುದ್ಧ ಮಾಡಿರುವ ಗಂಭೀರ ಆರೋಪದಿಂದ ಇಂದ್ರಜಿತ್​ ಬೆದರಿಕೆ ಎದುರಿಸುತ್ತಿದ್ದಾರೆ. ‘ಪ್ರಕರಣದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಅದನ್ನು ಕಾನೂನಾತ್ಮಕವಾಗಿ ಹೋರಾಡುತ್ತೇನೆ. ದರ್ಶನ್​ ಪ್ರಚೋದನೆ ಮೂಲಕ ದರ್ಶನ್​ ಹಿಂಬಾಲಕರು, ಅವರ​ ರೌಡಿಗಳು ಫೋನ್​ ಮೂಲಕ, ವಾಟ್ಸ್​ ಆ್ಯಪ್​ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ ಪ್ರತಿ 30 ಸೆಕೆಂಡ್​ಗೆ ಒಂದು ಕರೆ ಬರ್ತಿದೆ. ಅಶ್ಲೀಲ ಚಿತ್ರಗಳಲ್ಲದೆ, ಅಶ್ಲೀಲ ಮೆಸೇಜ್​ಕೂಡ ಬರ್ತಿದೆ. ಹೀಗಾಗಿ ಸೈಬರ್​ ಕ್ರೈಮ್​ಗೆ ದೂರು ನೀಡುತ್ತಿದ್ದೇನೆ. ಅವರಿಗೆ ಪಾಠ ಕಲಿಸುತ್ತೇನೆ’ ಎಂದು ಎಚ್ಚರಿಸಿದ್ದಾರೆ ಇಂದ್ರಜಿತ್​. ಇದನ್ನೂ ಓದಿ: ದದರ್ಶನ್ ಹಲ್ಲೆ ಆರೋಪ ಪ್ರಕರಣ: ಪೊಲೀಸರಿಗೆ ಇನ್ನೂ ಸಿಗದ ಭದ್ರತಾ ಸಿಬ್ಬಂದಿ ಪ್ರಕಾಶ್ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ: ದರ್ಶನ್ ಹಿಂಬಾಲಕರು, ರೌಡಿಗಳು ಬೆದರಿಕೆ ಹಾಕ್ತಿದಾರೆ, ಇವರಿಗೆ ಪಾಠ ಕಲಿಸುತ್ತೇನೆ; ಇಂದ್ರಜಿತ್ ಎಚ್ಚರಿಕೆ
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9036527301 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ 9036527301 ಮೇಷ(12 ಜುಲೈ, 2020) ಸಂತೋಷದ ಸುದ್ದಿ ಪಡೆಯುವ ಸಾಧ್ಯತೆಯಿದೆ. ಭೂಮಿಯನ್ನು ಖರೀದಿಸಿದ ಮತ್ತು ಈಗ ಅದನ್ನು ಮಾರಾಟ ಮಾಡಲು ಬಯಸುವ ಜನರು ಇಂದು ಉತ್ತಮ ಖರೀದಿದಾರರನ್ನು ಕಾಣಬಹುದು ಮತ್ತು ಭೂಮಿಯನ್ನು ಮಾರಾಟ ಮಾಡುವ ಮೂಲಕ ಅವರು ಉತ್ತಮ ಹಣವನ್ನು ಪಡೆಯಬಹುದು. ಒಂದು ವೈವಾಹಿಕ ಸಂಬಂಧವನ್ನು ಹೊಂದಲು ಒಳ್ಳೆಯ ಸಮಯ. ಪ್ರೇಮನಿವೇದನೆ ನಿಮ್ಮ ಹೊರೆಯನ್ನು ಇಳಿಸುವುದರಿಂದ ನಿಮಗೆಆನಂದವಾಗಬಹುದು. ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ಹಾಗೆ, ನೀವು ನಿಮ್ಮ ಸಂಗಾತಿಯ ಮೇಲೆ ಇಂದು ಬಹಳ ಹಣ ಖರ್ಚು ಮಾಡುವಂತೆ ತೋರುತ್ತದೆ, ಆದರೆ ಒಳ್ಳೆಯ ಸಮಯವನ್ನಂತೂ ಹೊಂದಿರುತ್ತೀರಿ. ಇಂದಿನ ದಿನ ಸಂಬಂಧಿಕರೊಂದಿಗೆ ಭೇಟಿಮಾಡಿ, ನೀವು ಸಾಮಾಜಿಕ ಕಟ್ಟುಪಾಡುಗಳನ್ನು ಪೂರೈಸಬಹುದು. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 6 ವೃಷಭ(12 ಜುಲೈ, 2020) ಇಂದುನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಯಾವುದೇ ಹಳೆಯ ಸ್ನೇಹಿತ ಇಂದು ನಿಮ್ಮ ಬಳಿ ಹಣವನ್ನು ಕೇಳಬಹುದು. ನೀವು ಅವರಿಗೆ ಸಹಾಯ ಮಾಡಿದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆಗೊಳಗಾಗಬಹುದು।. ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುತ್ತದೆ. ಕೆಲಸದ ಒತ್ತಡ ಹೆಚ್ಚುತ್ತಿದ್ದ ಹಾಗೆ ಮಾನಸಿಕ ಕ್ಷೋಭೆ ಮತ್ತು ಪ್ರಕ್ಷುಬ್ಧತೆ. ದಿನದ ಉತ್ತರಾರ್ಧದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ಈ ರಾಶಿಚಕ್ರದ ವಿದ್ಯಾರ್ಥಿಗಳು ಇಂದು ಅಧ್ಯಯನದಲ್ಲಿ ಮನಸ್ಸನ್ನು ಹೊಂದಲು ತೊಂದರೆಗಳು ಬರಬಹುದು. ಅದೃಷ್ಟ ಸಂಖ್ಯೆ: 5 ಮಿಥುನ(12 ಜುಲೈ, 2020) ಧ್ಯಾನ ಪರಿಹಾರ ತರುತ್ತದೆ. ಈ ರಾಶಿಚಕ್ರದ ಕೆಲವರು ಇಂದು ಭೂಮಿಗೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ಹಣವನ್ನು ಖರ್ಚು ಮಾಡಬೇಕಾಗಬಹುದು. ಹತ್ತಿರದ ಗೆಳೆಯರು ಹಾಗು ಸ್ನೇಹಿತರು ಆಕ್ರಮಣಕಾರಿಯಾಗುತ್ತಾರೆ ಪಡೆಯಲು ಮತ್ತು ನಿಮಗೆ ಜೀವನವನ್ನು ಕಠಿಣಗೊಳಿಸುತ್ತಾರೆ. ವೈಯಕ್ತಿಕ ಸಂಬಂಧಗಳು ಸೂಕ್ಷ್ಮ ಹಾಗೂ ಸಂವೇದನಾಶೀಲವಾಗಿವೆ. ಈ ರಾಶಿಚಕ್ರದಜನರು ಇಂದು ಮಾದಕ ಸಿಗರೇಟ್ನಿಂದ ದೂರವಿರುವ ಅಗತ್ಯವಿದೆ ಏಕೆಂದರೆ ಇದರಿಂದ ನಿಮ್ಮ ಅಮೂಲ್ಯ ಸಮಯ ಹಾಳಾಗಬಹುದು ನಿಮ್ಮ ಸಂಗಾತಿಗೆ ನಿಮ್ಮ ಒತ್ತಡದ ವೇಳಾಪಟ್ಟಿಯಿಂದಾಗಿ ತಾವು ಅಪ್ರಾಮುಖ್ಯರು ಎಂದೆನಿಸಬಹುದು, ಮತ್ತು ಅವರು ಸಂಜೆ ತಮ್ಮ ಅಸಮಾಧಾನವನ್ನು ತೋರಿಸಬಹುದು. ಸಣ್ಣ ಉದ್ಯಮಗಳು ತಮ್ಮ ಕಾರ್ಮಿಕರಿಗೆ ಸಂತೋಷವನ್ನುಂಟುಮಾಡಲು ಇಂದು ಒಂದುಪಾರ್ಟಿಯನ್ನು ನೀಡಬಹುದು. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 4 ಕರ್ಕ(12 ಜುಲೈ, 2020) ನಿಮ್ಮನ್ನು ಪ್ರೇರೇಪಿಸುವ ಭಾವನೆಗಳನ್ನು ಗುರುತಿಸಿ. ನೀವು ಭಯ, ಅನುಮಾನ, ಕೋಪ, ದುರಾಸೆಯಂಥ ನಕಾರಾತ್ಮಕ ಆಲೋಚನೆಗಳನ್ನು ಬಿಡಬೇಕು. ಏಕೆಂದರೆ ಇವುಗಳು ನೀವು ಬಯಸುವುದಕ್ಕೆ ವಿರುದ್ಧವಾದವುಗಳನ್ನು ಆಕರ್ಷಿಸಲು ಆಯಸ್ಕಾಂತದಂತೆ ಕೆಲಸ ಮಾಡುತ್ತದೆ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಮಕ್ಕಳು ನಿಮಗೆ ಮನೆಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ. ನೀವು ಸ್ವಲ್ಪ ಪ್ರೀತಿ ಹಂಚಿಕೊಂಡಲ್ಲಿ ಇಂದು ನಿಮ್ಮ ಪ್ರಿಯತಮೆ ನಿಮ್ಮ ದೇವತೆಯಾಗುತ್ತಾಳೆ. ನಿಮ್ಮ ದಾರಿಯಲ್ಲಿಯಾರೇ ಬಂದರೂ ಸಭ್ಯರೂ ಮತ್ತು ಆಕರ್ಷಕರೂ ಆಗಿರಿ – ನಿಮ್ಮ ಇಂದ್ರ ಜಾಲದಂಥ ಆಕರ್ಷಣೆಯ ಹಿಂದಿನ ರಹಸ್ಯ ಕಲವರಿಗೆ ಮಾತ್ರವೇ ತಿಳಿದಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಭಾವನಾತ್ಮಕ ಬಂಧವನ್ನು ಅನುಭವಿಸಲು ನಿಮಗೆ ಸಾಧ್ಯವಾಗುವಾಗ ಪ್ರಣಯ ಅತ್ಯುತ್ತಮವಾಗಿರುತ್ತದೆ. ನಿಮ್ಮೊಂದಿಗೆ ಯಾರೂ ಇಲ್ಲದೆ ನಿಮ್ಮ ದಿನವನ್ನುಪೂರ್ಣವಾಗಿ ಆನಂದಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 7 ಸಿಂಹ(12 ಜುಲೈ, 2020) ನೀವು ಕೆಲವು ಉನ್ನತ ವ್ಯಕ್ತಿಗಳನ್ನು ಭೇಟಿಯಾಗಬಹುದಾದ್ದರಿಂದ ಗಾಬರಿಯಾಗಬೇಡಿ ಮತ್ತು ವಿಶ್ವಾಸ ಕಳೆದುಕೊಳ್ಳದಿರಿ. ಇದು ವ್ಯಾಪಾರಕ್ಕೆ ಬಂಡವಾಳದಂತೆ ಉತ್ತಮ ಆರೋಗ್ಯಕ್ಕೆಅಗತ್ಯವಾಗಿದೆ. ಮನೆಯ ಅಗತ್ಯಗಳನ್ನು ನೋಡುತ್ತಾ, ಇಂದು ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು, ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆಗೊಳಗಾಗಬಹುದು. ಕೌಟುಂಬಿಕ ಸಮಸ್ಯೆಗೆ ಮೊದಲ ಆದ್ಯತೆ ನೀಡಬೇಕು. ನೀವು ವಿಳಂಬವಿಲ್ಲದೇ ಇದನ್ನು ಚರ್ಚಿಸಬೇಕು, ಏಕೆಂದರೆ ಒಮ್ಮೆ ಇದನ್ನು ಬಗೆಹರಿಸಿದ ನಂತರ ಮನೆಯಲ್ಲಿನ ಜೀವನ ನಡೆಸಲು ಹೆಚ್ಚು ಸುಲಭವಾಗುತ್ತದೆ ಮತ್ತು ನಿಮ್ಮ ಕುಟುಂಬದ ಸದಸ್ಯರ ಮೇಲೆ ಪ್ರಭಾವ ಬೀರಲು ನಿಮಗೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಇದನ್ನು ಒಂದು ವಿಶೇಷ ದಿನವಾಗಿಸಲು ದಯೆ ಮತ್ತು ಪ್ರೀತಿಯ ಸಣ್ಣ ತುಣುಕುಗಳನ್ನು ನೀಡಿ. ಈ ರಾಶಿಚಕ್ರದ ಜನರು ಬಹಳ ಆಸಕ್ತಿದಾಯಕರು. ಇವರು ಕೆಲವೊಮ್ಮೆ ಎಲ್ಲಾ ಜನರ ನಡುವೆ ಸಂತೋಷವಾಗಿರುತ್ತಾರೆ, ಕೆಲವೊಮ್ಮೆ ಒಂಟಿಯಾಗಿ. ಆದಾಗ್ಯೂ ಒಂಟಿಯಾಗಿ ಸಾಮ್ಯವನ್ನು ಕಳೆಯುವುದು ಅಷ್ಟು ಸುಲಭವಲ್ಲ, ಆದರೂ ಇಂದು ನೀವು ಖಂಡಿತವಾಗಿಯೂ ನಿಮಗಾಗಿ ಸ್ವಲ್ಪ ಸಮಯವನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಸುತ್ತಲಿರುವ ಜನರು ಏನಾದರೂ ಮಾಡಿ ನಿಮ್ಮ ಜೀವನ ಸಂಗಾತಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು. ಇಂದುನೀವು ಟಿವಿ ನೋಡುವುದರಲ್ಲಿ ನಿಮ್ಮ ದಿನವನ್ನು ಕಳೆಯಬಹುದು ಎಂದು ನಕ್ಷತ್ರಗಳು ಸೂಚಿಸುತ್ತಿದ್ದವೆ. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 5 ಕನ್ಯಾ(12 ಜುಲೈ, 2020) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದಿನವರೆಗೂ ಅಗತ್ಯವಿಲ್ಲದೆ ಹಣವನ್ನು ಖರ್ಚು ಮಾಡುತ್ತಿದ್ದ ಜನರು, ಇಂದು ಅವರು ತನ್ನನ್ನು ನಿಯಂತ್ರಿಸಬೇಕು ಮತ್ತು ಹಣವನ್ನು ಉಳಿಸಬೇಕು. ನಿಮ್ಮ ವಂಶಸ್ಥರಿಗೆ ಏನಾದರೂ ವಿಶೇಷವಾದದ್ದನ್ನು ಯೋಜಿಸಿ. ನಿಮಗೆ ಕಾರ್ಯಗತಗೊಳಿಸಲು / ಸಾಧಿಸಲು ಸಾಧ್ಯವಾಗುವ ಹಾಗೆ ಏನಾದರೂ ವಾಸ್ತವವಾದದ್ದನ್ನು ಯೋಜಿಸಿ. ನಿಮ್ಮ ಮುಂದಿನ ಪೀಳಿಗೆ ಈ ಕೊಡುಗೆಗಾಗಿ ನಿಮ್ಮನ್ನು ಯಾವತ್ತೂ ನೆನಪಿಡುತ್ತದೆ. ನೀವು ಯಾವಾಗಲೂ ಪರಸ್ಪರರ ಪ್ರೀತಿಯಲ್ಲಿದ್ದೀರೆಂದು ಅನಿಸುವುದರಿಂದ ಭೌತಿಕ ಅಸ್ತಿತ್ವಕ್ಕೆ ಯಾವುದೇ ಮಹತ್ವವಿರುವುದಿಲ್ಲ. ಸಮಯದ ಸೌಂದರ್ಯವನ್ನು ಅರ್ಥಮಾಡಿಕೊಳ್ಳುತ್ತ, ಇಂದು ನೀವು ಎಲ್ಲಾ ಜನರಿಂದ ದೂರವಾಗಿ ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವಿರಿ. ಅದನ್ನು ಮಾಡುವುದು ನಿಮಗೆ ಉತ್ತಮವಾಗಲಿದೆ. ವಿವಾಹಿತ ಜೋಡಿಗಳು ಒಟ್ಟಾಗಿ ವಾಸಿಸುತ್ತಾರೆ, ಆದರೆ ಅದು ಯಾವಾಗಲೂ ಪ್ರಣಯಭರಿತವಾಗಿರಲೇಬೇಕೆಂದಿಲ್ಲ. ಆದ್ದರಿಂದ ಇಂದು, ಇದು ನಿಜವಾಗಿಯೂ ಪ್ರಣಯಭರಿತವಾಗಿರುತ್ತದೆ. ವಿಷಯನಿಜವಾಗಿದ್ದರೆ ಅದನ್ನು ಹೇಳಲು ನಿಮ್ಮ ಪದಗಳು ಕಡಿಮೆಯಾಗುತ್ತವೆ. ಆದ್ದರಿಂದ ಇಂದು ನೀವು ನಿಮ್ಮ ಕೆಲಸ ಮತ್ತು ಮಾತುಗಳಲ್ಲಿ ಸತ್ಯವನ್ನು ಇರಿಸಿ ಎಂದು ಸಲಹೆ ನೀಡಲಾಗಿದೆ. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 4 ತುಲಾ(12 ಜುಲೈ, 2020 ಆರೋಗ್ಯ ಪರಿಪೂರ್ಣವಾಗಿರುತ್ತದೆ. ಇಂದು ಹಣಕಾಸಿನ ಭಾಗವು ಉತ್ತಮವಾಗಿರುತ್ತದೆ ಆದರೆ ಇದರೊಂದಿಗೆ ನೀವು ನಿಮ್ಮ ಹಣವನ್ನುವ್ಯರ್ಥವಾಗಿ ಖರ್ಚು ಮಾಡದಂತೆ ನೋಡಿಕೊಳ್ಳಬೇಕು. ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ನೀವು ಪ್ರೀತಿಯ ಮನೋಭಾವದಲ್ಲಿರುತ್ತೀರಿ ಮತ್ತು ಅದಕ್ಕೆ ಅವಕಾಶಗಳೂ ಸಾಕಷ್ಟಿರುತ್ತವೆ. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ಒದಗಿಸುತ್ತಾರೆ. ನಿಮ್ಮ ಸಂಗಾತಿ ಇಂದು ನಿಜವಾಗಿಯೂ ವಿಶೇಷವಾದದ್ದೇನಾದರೂ ಮಾಡುತ್ತಾರೆ ಸಮಯವನ್ನು ವ್ಯರ್ಥ ಮಾಡುವ ಬದಲು, ಇಂದು ವಿದೇಶಿ ಭಾಷೆಯನ್ನು ಕಲಿಯುವುದರಿಂದ ನಿಮ್ಮಸಂಭಾಷಣಾ ವಿಧಾನಗಳನ್ನು ಹೆಚ್ಚಿಸಬಹುದು. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 6 ವೃಶ್ಚಿಕ(12 ಜುಲೈ, 2020) ಒಬ್ಬ ಸಂತನಿಂದ ಆಧ್ಯಾತ್ಮಿಕ ಜ್ಞಾನ ಸಾಂತ್ವನ ಮತ್ತು ಆರಾಮವನ್ನು ಒದಗಿಸುತ್ತದೆ. ಇಂದು ನೀವು ನಿಮ್ಮ ಮಕ್ಕಳ ಕಾರಣದಿಂದ ಆರ್ಥಿಕ ಲಬಹವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ನಿಮ್ಮ ಮನೆಯಲ್ಲಿ ಸಾಮರಸ್ಯ ತರಲು ನಿಕಟಸಹಕಾರದೊಂದಿಗೆ ಕೆಲಸ ಮಾಡಬೇಕು. ತಮ್ಮ ಪ್ರೀತಿಪತ್ರರೊಡನೆ ಸಣ್ಣ ಪ್ರಯಾಣ ಕೈಗೊಳ್ಳುವವರು ಅತ್ಯಂತ ಸ್ಮರಣೀಯ ಸಮಯವನ್ನು ಹೊಂದುತ್ತಾರೆ. ಇಂದು ಬೇರೆಯವರಿಗೆ ನೀವು ನೀಡಿದ ನೆರವನ್ನು ಒಪ್ಪಿಕೊಂಡಾಗ ನೀವೇ ಕೇಂದ್ರಬಿಂದುವಾಗಿರುತ್ತೀರಿ. ನಿಮ್ಮ ಸಂಗಾತಿಯ ಎಂದಿಗೂ ಇಷ್ಟೊಂದು ಅದ್ಭುತವಾಗಿರಲಿಲ್ಲ. ನೀವು ನಿಮ್ಮ ಸಂಗಾತಿಯಿಂದ ಒಂದು ಸಂತೋಷಮಯ ಆಶ್ಚರ್ಯವನ್ನು ಪಡೆಯುತ್ತೀರಿ. ಸಮಯ ಹೇಗೆ ಹಾದುಹೋಗುತ್ತದೆ, ನಿಮ್ಮ ಹಳೆಯ ಸ್ನೇಹಿತರೊಬ್ಬರನ್ನು ಭೇಟಿಯಾಗುವ ಮೂಲಕನೀವು ಇದನ್ನು ಇಂದು ಅನುಭವಿಸಬಹುದು. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 8 ಧನಸ್ಸು(12 ಜುಲೈ, 2020) ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನಿಮ್ಮಲ್ಲಿ ಕೆಲವು ಆಭರಣ ಅಥವಾ ಗೃಹಬಳಕೆಯ ಸಾಧನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ನಿಮ್ಮ ಪ್ರೀತಿಪಾತ್ರರ ತೋಳುಗಳಲ್ಲಿ ಆರಾಮ- ಆನಂದ ಮತ್ತು ಭಾವಪರವಶತೆಯನ್ನು ನೀವು ಕಾಣುವುದರಿಂದ ನಿಮ್ಮ ಕೆಲಸ ಹಿಂದೆ ಬೀಳುತ್ತದೆ. ಈ ರಾಶಿಚಕ್ರದ ಜನರು ಇಂದು ತಮಗಾಗಿ ಸಾಕಷ್ಟು ಸಮಯವನ್ನು ಪಡೆಯುತ್ತಾರೆ. ನಿಮ ಹವ್ಯಾಸಗಳನ್ನು ಪೂರೈಸಲು ನೀವು ಈ ಸಮಯವನ್ನು ಬಳಸಬಹುದು. ನೀವುಯಾವುದಾದರು ಪುಸ್ತಕವನ್ನು ಓದಬಹುದ್ ಅಥವಾ ನಿಮಗೆ ನೆಚ್ಚಿದ ಸಂಗೀತ ಕೇಳಬಹುದು. ಸುದೀರ್ಘ ಸಮಯದ ನಂತರ, ನೀವು ಮತ್ತು ನಿಮ್ಮ ಸಂಗಾತಿ ಯಾವುದೇ ಜಗಳಗಳು ಮತ್ತು ವಾದಗಳಿಲ್ಲದೇ ಒಟ್ಟಾಗಿ ಪ್ರೇಮಭರಿತವಾದ ಶಾಂತಿಯುತ ದಿನವನ್ನು ಕಳೆಯುತ್ತೀರಿ. ಭವಿಷ್ಯದ ಬಗ್ಗೆ ಚಿಂತೆ ಮಾಡಲು ಹೆಚ್ಚಿನ ಆಲೋಚನೆ ಅಗತ್ಯವಿರುತ್ತದೆ, ಆದ್ದರಿಂದಅನಗತ್ಯವಾಗಿ ಚಿಂತೆ ಮಾಡುವ ಬದಲು, ನೀವು ಸೃಜನಶೀಲ ಯೋಜನೆಯನ್ನು ಮಾಡಬಹುದು. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 5 ಮಕರ(12 ಜುಲೈ, 2020) ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು. ಪೋಷಕರ ಆರೋಗ್ಯ ಸುಧಾರಿಸುತ್ತದೆ ಮತ್ತು ಅವರು ನಿಮ್ಮ ಮೇಲೆ ಪ್ರೀತಿಯ ಮಳೆಗೈಯುತ್ತಾರೆ. ನಿಮ್ಮ ಪ್ರೇಮ ಜೀವನ ಶರದೃತುವಿನಲ್ಲಿನ ಮರದ ಎಲೆಯಂತಿರುತ್ತದೆ. ಪ್ರಯಾಣ ಮತ್ತು ಶೈಕ್ಷಣಿಕಅನ್ವೇಷಣೆಗಳು ನಿಮ್ಮಲ್ಲಿ ಜಾಗೃತಿ ಮೂಡಿಸುತ್ತವೆ. ನಿಮ್ಮ ಸಂಗಾತಿಯ ಒಂದು ಕೆಲಸದ ಬಗ್ಗೆ ನಿಮಗೆ ಇರುಸುಮುರುಸಾಗಬಹುದು. ಆದರೆ ನಂತರ ನಿಮಗೆ ಇದು ಒಳ್ಳೆಯದಕ್ಕೇ ಆಯಿತೆಂದು ಅರಿವಾಗುತ್ತದೆ. ತೋಟಗಾರಿಕೆ ನಿಮಗೆ ವಿಶ್ರಾಂತಿಯಿಂದ ತುಂಬಿರಬಹುದು – ಇದರಿಂದ ಪರಿಸರಕ್ಕೂ ಪ್ರಯೋಜನ ಸಿಗುತ್ತದೆ. ಅದೃಷ್ಟ ಸಂಖ್ಯೆ: 5 ಕುಂಭ(12 ಜುಲೈ, 2020) ನಿಮ್ಮಲ್ಲಿ ಶಕ್ತಿಯ ಕೊರತೆಯಿರದೇ ಆತ್ಮವಿಶ್ವಾಸದ ಕೊರತೆಯಿರುವುದರಿಂದ ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಿ. ಇಂದು ಈ ರಾಶಿಚಕ್ರದ ಕೆಲವು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬಹುದು. ಇದು ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ ನಿಮ್ಮ ಕುಟುಂಬದ ಸಲುವಾಗಿ ಏನಾದರೂ ಉದಾತ್ತ ಮತ್ತು ಉಪಯುಕ್ತವಾದದ್ದರ ಸಲುವಾಗಿ ಶ್ರಮಪಡಿ. ಒಂದು ತಪ್ಪಿದ ಅವಕಾಶ ಮತ್ತೆ ಮರಳದೇ ಇರಬಹುದಾದ್ದರಿಂದ ಹಿಂಜರಿಯಬೇಡಿ. ನಿಮ್ಮ ಕಣ್ಣುಗಳು ಅದೆಷ್ಟು ಪ್ರಕಾಶಮಾನವಾಗಿವೆಯೆಂದರೆ ಅವು ನಿಮ್ಮ ಪ್ರೇಮಿಯ ಕಾಳರಾತ್ರಿಯನ್ನು ಬೆಳಗಬಹುದು. ಹೆಚ್ಚು ಜನರನ್ನು ಭೇಟಿಯಾದಾಗ ಅಸಮಾಧಾನಗೊಳ್ಳುವಂತಹ ವ್ಯಕ್ತಿತ್ವ ನಿಮ್ಮದು ಮತ್ತು ನಿಮಗಾಗಿ ಸಾಮ್ಯವನ್ನು ತೆಗೆಯಲು ಪ್ರಯತ್ನಿಸುತ್ತೀರಿ. ಈ ಸಂದರ್ಭದಲ್ಲಿ ಇಂದಿನ ದಿನ ನಿಮಗೆ ಉತ್ತಮವಾಗಲಿದೆ. ಇಂದು ನಿಮಗೆ ನಿಮ್ಮ ಉಚಿತ ಸಮಯ ಸಿಗುತ್ತದೆ. ನೀವು ಹಿಂದಿನಿಂದಲೂ ಶಾಪಗ್ರಸ್ತವಾಗಿದ್ದೀರೆನ್ನುವ ಭಾವನೆ ಹೊಂದಿದ್ದಲ್ಲಿ, ಇಂದುನೀವು ಆಶೀರ್ವಾದ ಹೊಂದಿದಂತೆ ಅನಿಸುತ್ತದೆ. ನಿಮಗೆ ಇಂದು ಹೆಚ್ಚು ಕೆಲಸವಿಲ್ಲದಿದ್ದರೆ, ನಿಮ್ಮ ಮನೆಯ ವಸ್ತುಗಳನ್ನು ರಿಪೇರಿ ಮಾಡುವ ಮೂಲಕ ನೀವು ನಿರತರಾಗಿರಬಹುದು. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ ಅದೃಷ್ಟ ಸಂಖ್ಯೆ: 3 ಮೀನ(12 ಜುಲೈ, 2020 ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ. ಅವುಗಳನ್ನು ಶಾಶ್ವತವಾಗಿ ದೂರವಿಸಿರಿಸಲು ನಿಮ್ಮ ಜೀವನಶೈಲಿಯನ್ನು ಬದಲಿಸಲು ಇದು ಸರಿಯಾದ ಸಮಯ. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಮಕ್ಕಳು ನಿಮ್ಮ ದಿನವನ್ನು ಕಠಿಣಗೊಳಿಸುತ್ತಾರೆ. ಅವರ ಆಸಕ್ತಿ ಕಾಯ್ದುಕೊಳ್ಳಲು ಪ್ರೀತಿಯ ಅಸ್ತ್ರ ಬಳಸಿ ಮತ್ತು ಯಾವುದೇ ಅನಗತ್ಯ ಒತ್ತಡ ತಪ್ಪಿಸಿ. ಪ್ರೀತಿಯಿಂದ ಪ್ರೀತ ಜನಿಸುತ್ತದೆಂದು ನೆನಪಿಡಿ. ಸರೋವರದಲ್ಲಿನ ಸೊಗಸಾದ ಮೀನನ್ನು ಸಂಧಿಸುವ ಅವಕಾಶಗಳುಸಾಧ್ಯತೆಗಳು ಇಂದು ಹೆಚ್ಚಿವೆ. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ಇಂದು, ನೀವು ನಿಮ್ಮ ಸಂಗಾತಿಯ ಪ್ರೀತಿಯ ಜೊತೆ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಮರೆಯುತ್ತೀರಿ. ಸ್ವಯಂಸೇವಕ ಕೆಲಸ ಅಥವಾ ಯಾರಿಗಾದರೂ ಸಹಾಯ ಮಾಡುವುದು ನಿಮ್ಮ ಮಾನಸಿಕ ಶಾಂತಿಗೆ ಉತ್ತಮಟಾನಿಕ್ ಆಗಿರಬಹುದು. ನಿಮ್ಮ ಯಾವುದೇ ಸಮಸ್ಯೆ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ವಿದ್ಯಾಧರ್ ನಕ್ಷತ್ರಿ ಕರೆ ಮಾಡಿ 9036527301 ಪರಿಹಾರದಲ್ಲಿ ಚಾಲೆಂಜ್ Post navigation ಬ್ರೇಕಿಂಗ್ ನ್ಯೂಸ್: ರಾಜ್ಯದ ಈ ಜಿಲ್ಲೆಗಳಿಗೆ 7 ದಿನಗಳ ಕಂಪ್ಲೀಟ್ ಲಾಕ್ ಡೌನ್ ಘೋಷಣೆ ಮಾಡಿದ ಸರ್ಕಾರ ! ತನ್ನ ಮೇಲೆ ಬಂದಿರುವ ಸುದ್ದಿಗಳ ಬಗ್ಗೆ ಸ್ಪಷನೆ ಕೊಟ್ಟ ಡ್ರೋನ್ ಪ್ರತಾಪ್ ? ನನಗೆ ಸಮಯ ಕೊಡಿ ಎಂದು ಕೇಳಿದ್ದೇಕೆ ಗೊತ್ತಾ !
ಹೆರಾಕ್ಲೀಸ್ ಹೀರಾ ದೇವಿಯ ಪಿತೂರಿಯಿಂದ 12 ಸಾಹಸ ಕಾರ್ಯಗಳನ್ನು ಮಾಡಬೇಕಾಗಿ ಬಂದ ಪ್ರಕರಣವನ್ನು ಇಲ್ಲಿ (https://aralimara.com/2018/05/14/greek16/ ಮತ್ತು https://aralimara.com/2018/05/15/greek17/ ಕೊಂಡಿಯನ್ನು ಕ್ಲಿಕ್ ಮಾಡಿ) ಓದಿದ್ದೀರಿ. ಈ ಹನ್ನೆರಡು ಸಾಹಸಗಳಲ್ಲಿ – ಹೆರಾಕ್ಲೀಸನು ಅಲ್ಫೀಯಸ್ ಮತ್ತು ಪೆನೀಯಸ್ ನದಿಗಳನ್ನು ಹರಿಸಿ ಆಜೀಯಸನ ಕೊಟ್ಟಿಗೆ ತೊಳೆದದ್ದು ಐದನೇ ಸಾಹಸವಾಗಿತ್ತು. ಅವನ ಈ ಸಾಹಸ Cleaning the Augean stables ಎಂಬ ನುಡಿಗಟ್ಟು ಚಾಲ್ತಿಗೆ ಬರಲು ಕಾರಣವಾಯಿತು. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಹೆರಾಕ್ಲೀಸ್ ವಾಸವಿದ್ದ ಮೈಕಿನೀ ನಗರದಿಂದ ಬಹಳ ದೂರ, ಪಶ್ಚಿಮದಲ್ಲಿ ಈಲಿಸ್ ಎಂಬ ನಗರವಿತ್ತು. ಸೂರ್ಯ ದೇವನ ಮಗ ಆಜೀಯಸ್ ಎಂಬುವವನು ಅದನ್ನು ಆಳುತ್ತಿದ್ದ. ಅವನ ಬಳಿ ಸಾವಿರಾರು ದನಕರುಗಳು ಮತ್ತು ಕುರಿಗಳು ಇದ್ದವು. ಅವೆಲ್ಲಕ್ಕೂ ವಿಶಾಲವಾದ ಕೊಟ್ಟಿಗೆಗಳನ್ನು ಮಾಡಿಸಿದ್ದ ಆಜೀಯಸ್, ಅವುಗಳನ್ನು ಶುಚಿಗೊಳಿಸಲು ಮಾತ್ರ ಯಾರನ್ನೂ ನೇಮಿಸಿರಲಿಲ್ಲ. ಹೀಗಾಗಿ ವರ್ಷಗಟ್ಟಲೆಯ ಗೊಬ್ಬರ ರಾಶಿ ಬಿದ್ದು ಚಿಬ್ಬಗಳೇ ನಿರ್ಮಾಣವಾಗಿಬಿಟ್ಟಿದ್ದವು. ಇದರಿಂದ ಸುತ್ತಮುತ್ತಲ ರಾಜ್ಯಗಳಿಗೂ ದುರ್ಗಂಧ ಹಬ್ಬಿತ್ತು. ಆದರೆ ದೈವಾನುಗ್ರಹವಿದ್ದ ಅವನ ಕೊಟ್ಟಿಗೆಗಳ ಜಾನುವಾರುಗಳು ಈ ಕೊಳಕಿನ ನಡುವೆಯೂ ದಷ್ಟಪುಷ್ಟವಾಗಿ. ಆರೋಗ್ಯದಿಂದಿದ್ದವು. ಆಜೀಯಸ್ ಶುಚಿತ್ವದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರಲು ಇದೂ ಒಂದು ಕಾರಣವಾಗಿತ್ತು. ಯೂರಿಸ್ತ್ಯೂಸ್ ಈ ರಾಜ್ಯದ ಬಗ್ಗೆ ಕೇಳಿಪಟ್ಟಿದ್ದ. ಅಲ್ಲಿಯ ಗೊಬ್ಬರದ ರಾಶಿ ಮತ್ತು ದುರ್ಗಂಧದ ಬಗ್ಗೆ ಕೇಳಿದ ಕೂಡಲೇ ಅವನಿಗೆ ನೆನಪಾಗಿದ್ದು ಹೆರಾಕ್ಲೀಸ್! ಹೀರಾ ದೇವಿಯ ಸೂಚನೆಯಂತೆ ಆತ ಈವರೆಗೆ ಹೆರಾಕ್ಲೀಸನಿಗೆ 4 ಕೆಲಸಗಳನ್ನು ಕೊಟ್ಟಿದ್ದು, ಆತ ಎಲ್ಲದರಲ್ಲೂ ವಿಜಯಿಯಾಗಿದ್ದ. ಈಗ ಐದನೆಯ ಕೆಲಸವಾಗಿ ಯೂರಿಸ್ತ್ಯೂಸ್, ಆಜೀಯಸನ ಕೊಟ್ಟಿಗೆ ಶುಚಿಗೊಳಿಸುವ ಕೆಲಸವನ್ನು ವಹಿಸಿದ. ಇದರಲ್ಲಿ ಆತ ಸೋಲುವುದು ಖಚಿತ ಎಂದೇ ಭಾವಿಸಿದ. (ಅಲ್ಲಿಗೆ. ಆಜೀಯಸನ ಕೊಟ್ಟಿಗೆ ಅದ್ಯಾವ ಕುಖ್ಯಾತಿ ಪಡೆದಿತ್ತು ಊಹಿಸಿ!) ಅದರಂತೆ ಹೆರಾಕ್ಲೀಸನು ಈಲಿಸ್’ಗೆ ಬಂದ. ದೊರೆ ಆಜೀಯಸ್’ನನ್ನು ಕಂಡು, “ನಿನ್ನ ರಾಜ್ಯದಲ್ಲಿ ಶೇಖರವಾಗಿರುವ ಗೊಬ್ಬರದಿಂದ ನೆರೆಯ ರಾಜ್ಯಗಳಿಗೂ ದುರ್ಗಂಧ ಹರಡುತ್ತಿದೆ. ನಿನ್ನ ಜನರನ್ನು ಬಿಟ್ಟು ಅದನ್ನು ಶುಚಿಗೊಳಿಸಬಾರದೆ?” ಎಂದು ಕೇಳಿದ. ಆಜೀಯಸ್, “ಅದು ನನ್ನಿಷ್ಟ. ನಿನಗೆ ಸಹಿಸಲಾಗದೆ ಹೋದರೆ ನೀನೇ ಶುಚಿ ಮಾಡಿಸು” ಅಂದ. “ಆಗಲಿ, ನಾನು ಇಂದು ಸಂಜೆಯೊಳಗೆ ನಿನ್ನ ಕೊಟ್ಟಿಗೆಯನ್ನು ಶುಚಿ ಮಾಡಿಸುತ್ತೇನೆ. ನನಗೇನು ಕೊಡುತ್ತೀಯ?” ಎಂದು ಕೇಳಿದ ಹೆರಾಕ್ಲೀಸ್. ಆಜೀಯಸ್ ನಗುತ್ತಾ, “ಅಸಾಧ್ಯವಾದ ಸವಾಲನ್ನು ಹಾಕುತ್ತಿದ್ದೀಯ. ಇರಲಿ, ನಿನಗೆ ನನ್ನ ಗೋಸಂಪತ್ತಿನ ಹತ್ತನೇ ಒಂದು ಪಾಲನ್ನು ಕೊಡುತ್ತೇನೆ” ಎಂದು ಹೇಳಿದ. ಸಾವಿರಾರು ಸಂಖ್ಯೆಯಲ್ಲಿದ್ದ ಗೋವುಗಳ ಪೈಕೆ ಹತ್ತನೇ ಒಂದು ಭಾಗವೆಂದರೂ ಸಾಕಷ್ಟಾಯಿತು! ಹೆರಾಕ್ಲೀಸ್ ಅದಕ್ಕೊಪ್ಪಿದ. ಅಜೀಯಸ್’ಗೆ ಯೂರಿಸ್ತ್ಯೂಸ್ ಕೂಡಾ ಇದೇ ಕೆಲಸ ವಹಿಸಿದ್ದಾನೆಂಬ ಅರಿವಿಲ್ಲದೆ, ತನ್ನ ಮಾತನ್ನು ಅಧಿಕೃತಗೊಳಿಸಿ ಆದೇಶ ಹೊರಡಿಸಿದ. ಹೆರಾಕ್ಲೀಸ್ ಕೊಟ್ಟಿಗೆಯ ಬಳಿ ಬಂದ. ಪುಟ್ಟ ಬೆಟ್ಟದಷ್ಟು ಎತ್ತರಕ್ಕೆ ಗೊಬ್ಬರದ ರಾಶಿಗಳಿದ್ದವು. ಉಸಿರಾಡಲು ಉಬ್ಬಸಪಡುವಷ್ಟು ಕೆಟ್ಟ ವಾಸನೆ ಬೇರೆ. ಸಾವಿರ ಕೆಲಸಗಾರರನ್ನು ನೇಮಿಸಿ ಒಂದು ವರ್ಷ ಕೆಲಸ ಮಾಡಿದರೂ ಅದನ್ನು ಶುಚಿಗೊಳಿಸುವುದು ಕಷ್ಟವಿತ್ತು. ಅವನೊಂದು ಉಪಾಯ ಹೂಡಿದ. ಮೊದಲಿಗೆ ಕೊಟ್ಟಿಗೆಯ ಗೋಡೆಗಳನನು ಒಡೆಸಿದ. ಈಲಿಸ್ ಬಳಿ ಹರಿಯುತ್ತಿದ್ದ ಅಲ್ಫೀಯಸ್ ಮತ್ತು ಪೆನೀಯಸ್ ನದಿಗಳ ಪ್ರವಾಹವನ್ನು ಊರ ಕಡೆಗೆ ತಿರುಗಿಸಿದ. ಎರಡೂ ನದಿಗಳ ನೀರು ಇಕ್ಕೆಲಗಳಿಂದ ನುಗ್ಗಿ ಬಂದು ಕೊಟ್ಟಿಗೆಯ ಕೊಳಕನ್ನೆಲ್ಲ ಕೊಚ್ಚಿಕೊಂಡು ಹರಿದವು. ಅವುಗಳ ರಭಸಕ್ಕೆ ಗೊಬ್ಬರದ ದಿಬ್ಬಗಳು ಹೇಳಹೆಸರಿಲ್ಲವಾದವು. ಕೆಲವೇ ನಿಮಿಷಗಳಲ್ಲಿ ಆಜೀಯಸನ ಕೊಟ್ಟಿಗೆ ತೊಳೆದಿಟ್ಟಂತೆ ಶುಚಿಯಾಯಿತು. ಯಾವ ಕೆಲಸವನ್ನು ಸಾಧ್ಯವೇ ಇಲ್ಲವೆಂದು ಭಾವಿಸಲಾಗಿತ್ತೋ ಆ ಕೆಲಸವನ್ನು ಹೆರಾಕ್ಲೀಸ್ ಸಾಧಿಸಿದ್ದ. (ಹೀಗೆ ಅಸಾಧ್ಯವಾದ ಕೆಲಸವನ್ನು ಸಾಧಿಸುವುದಕ್ಕೆ Cleaning the Augein stables ಎಂಬ ನುಡಿಗಟ್ಟು ಚಾಲ್ತಿಗೆ ಬಂದಿದ್ದು ಹೀಗೆ) ಆದರೆ ಅಜೀಯಸ್, ನದಿಗಳ ಸಹಾಯ ಪಡೆದ ಕಾರಣವೊಡ್ಡಿ ದನಗಳನ್ನು ಕೊಡಲು ನಿರಾಕರಿಸಿದ. ಅತ್ತ ಯೂರಿಸ್ತ್ಯೂಸನೂ ಸವಾಲಿನ ವಿಷಯ ತಿಳಿದು, “ಹೆರಾಕ್ಲೀಸನು ಮಾಡಿರುವುದು ನನ್ನ ಕೆಲಸ, ಅದಕ್ಕೆ ಯಾವ ಕೊಡುಗೆಯನ್ನೂ ಕೊಡಬೇಕಾದ್ದಿಲ್ಲ” ಎಂದು ದೂತನ ಮೂಲಕ ಹೇಳಿ ಕಳುಹಿಸಿದ್ದ. ಒಟ್ಟಾರೆ, ವಹಿಸಲಾಗಿದ್ದ ಕೆಲಸವನ್ನು ಜಾಣ್ಮೆಯಿಂದ ಮಾಡಿಯೂ ಹೆರಾಕ್ಲೀಸನಿಗೆ ಫಲ ದೊರೆಯದೆ ಹೋಯಿತು. ಇದನ್ನು ಮನಸಿನಲ್ಲಿಟ್ಟುಕೊಂಡ ಹೆರಾಕ್ಲೀಸ್, ಮುಂದಿನ ದಿನಗಳಲ್ಲಿ ಸರಿಯಾಗಿಯೇ ಪ್ರತೀಕಾರ ತೀರಿಸಿಕೊಂಡ.
ಅರುಣಾ ಕೊಯಮತ್ತೂರಿನಲ್ಲಿ ನರ್ಸಿಂಗ್‌ ಅಧ್ಯಯನ ಮಾಡುತ್ತಿದ್ದು, ತಾನು ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಅರುಣಾ ಥೇವರ್‌ ಸಮುದಾಯದವರಾದರೆ, ಆಕೆ ಪ್ರೀತಿಸುತ್ತಿದ್ದ ವ್ಯಕ್ತಿ ನಡಾರ್‌ ಸಮುದಾಯದವರು ಎಂದು ತಿಳಿದುಬಂದಿದೆ. BK Ashwin First Published Nov 24, 2022, 5:04 PM IST ತಮಿಳುನಾಡಿನಲ್ಲಿ (Tamil Nadu) ಮತ್ತೊಂದು ಮರ್ಯಾದಾ ಹತ್ಯೆ (Honour Killing) ಪ್ರಕರಣ ನಡೆದಿರುವ ಆರೋಪ ಕೇಳಿಬಂದಿದೆ. ಬೇರೆ ಜಾತಿಯ (Different Caste) ಯುವಕನನ್ನು ಪ್ರೀತಿಸುತ್ತಿದ್ದಕ್ಕೆ 19 ವರ್ಷದ ಮಗಳನ್ನು ತಾಯಿಯೇ (Mother) ಕೊಲೆ (Murder) ಮಾಡಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದೆ. ಇನ್ನು, ಕೊಲೆ ಮಾಡಿದ ಬಳಿಕ ತಾಯಿ ಆತ್ಮಹತ್ಯೆ (Suicide) ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದೂ ಹೇಳಲಾಗಿದ್ದು, ಆದರೆ ಸ್ಥಳಿಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದುಬಂದಿದೆ. ತಮಿಳುನಾಡಿನ ಸಿವಲ್ಪೇರಿ ಗ್ರಾಮದ ಆರುಮುಗ ಕನಿ ಎನ್ನುವ ಮಹಿಳೆ ಈ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಆಕೆ ಚೆನ್ನೈನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪಿಚೈ ಎಂಬಾತನನ್ನು ಮದುವೆಯಾಗಿದ್ದರು. ಈ ದಂಪತಿಗೆ 19 ವರ್ಷದ ಮಗಳು ಅಂದ್ರೆ ಮೃತ ಸಂತ್ರಸ್ಥೆಯನ್ನು ಅರುಣಾ ಎಂದು ಗುರುತಿಸಲಾಗಿದೆ. ಅರುಣಾ ಕೊಯಮತ್ತೂರಿನಲ್ಲಿ ನರ್ಸಿಂಗ್‌ ಅಧ್ಯಯನ ಮಾಡುತ್ತಿದ್ದು, ತಾನು ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಅರುಣಾ ಥೇವರ್‌ ಸಮುದಾಯದವರಾದರೆ, ಆಕೆ ಪ್ರೀತಿಸುತ್ತಿದ್ದ ವ್ಯಕ್ತಿ ನಡಾರ್‌ ಸಮುದಾಯದವರು ಎಂದು ತಿಳಿದುಬಂದಿದೆ. ಇದನ್ನು ಓದಿ: 'ಕುರುಬನ ರಾಣಿ' ಆಗ್ತೀನಿ ಅಂದ ಮಗಳ ಕಥೆಯನ್ನೇ ಮುಗಿಸಿದ ಅಪ್ಪ! ಈ ಸಂಬಂಧ ಮಾತನಾಡುವುದಾಗಿ ಅರುಣಾಗೆ ಹೇಳಿದ ತಾಯಿ ಆರುಮುಗ ಕನಿ ಮನೆಗೆ ಕರೆಸಿಕೊಂಡಿದ್ದಳು. ಆದರೆ, ಅರುಣಾ ಮನೆಗೆ ಹೋದ ಬಳಿಕ ತನ್ನನ್ನು ಮದುವೆಯಾಗಲು ಬೇರೆ ಹುಡುಗನನ್ನು ಗೊತ್ತುಪಡಿಸಿದ್ದಾರೆ. ನಮ್ಮ ಜಾತಿಗೆ ಸೇರಿದ ಹುಡುಗನೊಬ್ಬನ ಜತೆ ಮದುವೆ ಮಾಡಲು ಪ್ಲ್ಯಾನ್‌ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿ ಆಘಾತಕ್ಕೊಳಗಾಗಿದ್ದಾಳೆ. ಹುಡುಗಿಯ ಮನೆಗೆ ನವೆಂಬರ್‌ 23 ಅಂದರೆ ಬುಧವಾರವೇ ಹುಡುಗ ಬರುವಂತೆ ತಾಯಿ ಪ್ಲ್ಯಾನ್‌ ಮಾಡಿದ್ದರು. ಆದರೆ, ಅರುಣಾ ಆ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ್ದು, ಭೇಟಿ ಮಾಡಲು ಸಹ ನಿರಾಕರಿಸಿದ್ದಾಳೆ. ಹಾಗೂ, ಒಂದು ವೇಳೆ ಒತ್ತಾಯ ಮಾಡಿದರೆ, ನಾನು ಈಗಾಗಲೇ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸೋದಾಗಿ ತಾಯಿಗೆ ಬೆದರಿಕೆ ಹಾಕಿದ್ದಾಳೆ. ಇದನ್ನೂ ಓದಿ: ಛೇ ಇದೆಂಥಾ ಮೋಸ: ಮದುವೆ ಮಾಡಿಸುವ ನೆಪದಲ್ಲಿ ಕರೆತಂದು ಪ್ರೇಮಿಗಳ ಕೊಲೆ ಇದರಿಂದ ಸಿಟ್ಟಿಗೆದ್ದ ತಾಯಿ, ಸ್ಕಾರ್ಫ್‌ನಿಂದ ಅರುಣಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಾನು ನನ್ನ ಮಗಳನ್ನು ಕೊಲೆ ಮಾಡಿದ್ದೇನೆ ಎಂದು ಅರಿವಾದ ನಂತರ, ಆಕೆ ಹೇರ್‌ ಡೈ ಪುಡಿಯನ್ನು ಸೇವಿಸಿ ಆತಹ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದೂ ತಿಳಿದುಬಂದಿದೆ. ಆದರೆ, ನೆರೆ ಮನೆಯವರು ತಾಯಿಯನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರುಮುಗ ಕನಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಈ ಪ್ರಕರಣ ಸಂಬಂಧ ಸಿವಲ್ಪೇರಿ ಪೊಲೀಸರು ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ, ತಾಯಿ ಈ ಪ್ರಕರಣದ ಬಗ್ಗೆ ಏನೂ ಬಾಯಿ ಬಿಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹಾಗೂ, ಇದು ಮರ್ಯಾದಾ ಹತ್ಯೆ ಪ್ರಕರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದೂ ತಿಳಿಸಿದ್ದಾರೆ.
ದೇವರಗುಡ್ಡ - ಬ್ಯಾಡಗಿ ಮಾರ್ಗದಲ್ಲಿ ಲೈನ್‌ ಬ್ಲಾಕ್‌ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೆಎಸ್‌ಆರ್‌ ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ರೈಲನ್ನು ಹರಿಹರದಿಂದ ಹುಬ್ಬಳ್ಳಿವರೆಗೂ ಸ್ಥಗಿತಗೊಳಿಸಲಾಗಿದ್ದು, ಬೆಂಗಳೂರಿನಿಂದ ಹರಿಹರವರೆಗೂ ಮಾತ್ರ ಸಂಚಾರ Kannadaprabha News First Published Oct 29, 2022, 9:00 AM IST ಬೆಂಗಳೂರು(ಅ.29): ರೈಲ್ವೆ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ (ಅ.30) ಜನಶತಾಬ್ದಿ ರೈಲು ಸೇರಿದಂತೆ ಬೆಂಗಳೂರು - ಹುಬ್ಬಳ್ಳಿ ಮಾರ್ಗದ ರೈಲುಗಳ ಓಡಾಟ ಭಾಗಶಃ ವ್ಯತ್ಯಯ ಉಂಟಾಗಲಿದೆ. ದೇವರಗುಡ್ಡ - ಬ್ಯಾಡಗಿ ಮಾರ್ಗದಲ್ಲಿ ಲೈನ್‌ ಬ್ಲಾಕ್‌ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೆಎಸ್‌ಆರ್‌ ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ರೈಲನ್ನು ಹರಿಹರದಿಂದ ಹುಬ್ಬಳ್ಳಿವರೆಗೂ ಸ್ಥಗಿತಗೊಳಿಸಲಾಗಿದ್ದು, ಬೆಂಗಳೂರಿನಿಂದ ಹರಿಹರವರೆಗೂ ಮಾತ್ರ ಸಂಚರಿಸಲಿದೆ. ಈ ರೈಲು ಹರಿಹರದಿಂದ ಬೆಂಗಳೂರಿಗೆ ಹಿಂದಿರುಗಲಿದೆ. ಬೆಳಗಾವಿ ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್‌ ಬೆಳಗಾವಿಯಿಂದ ರಾಣೆಬೆನ್ನೂರು ನಿಲ್ದಾಣವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಅರಸಿಕೆರೆ ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲು ಅರಸಿಕೆರೆ - ಹಾವೇರಿ ನಿಲ್ದಾಣದ ನಡುವೆ ಸ್ಥಗಿತಗೊಳಿಸಲಾಗಿದೆ. ಈ ಎಲ್ಲಾ ರೈಲುಗಳ ಸಂಚರಿಸುವ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಹುಬ್ಬಳ್ಳಿ ಚಿತ್ರದುರ್ಗ ಎಕ್ಸ್‌ಪ್ರೆಸ್‌ ಓಡಾಟ ಪೂರ್ಣಪ್ರಮಾಣದಲ್ಲಿ ರದ್ದಾಗಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ನಿಮ್ಮ ಸೇವೆಯಲ್ಲಿ ಭಾರತೀಯ ರೈಲ್ವೆ.. ಪ್ರಯಾಣಿಕರಿಗೆ ಉಚಿತ ಸ್ನಾನ..! ಬೆಂಗಳೂರು-ಮೈಸೂರು ರೈಲುಗಳ ವೇಗ ಹೆಚ್ಚಳ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಎಂಟು ರೈಲುಗಳನ್ನು ಸೂಪರ್‌ ಫಾಸ್ಟ್‌ ರೈಲುಗಳಾಗಿ ಮರು ವಿನ್ಯಾಸಗೊಳಸಲಾಗಿದೆ. ಜತೆಗೆ ಈ ಮಾರ್ಗದ ಹಲವು ರೈಲುಗಳ ವೇಗವನ್ನು ಕೂಡಾ ಹೆಚ್ಚಿಸಲಾಗಿದೆ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನೈಋುತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಮೈಸೂರು ರಾಜ್ಯ ರಾಣಿ ಎಕ್ಸಪ್ರೆಸ್‌, ಮಾಲ್ಗುಡಿ ಎಕ್ಸ್‌ಪ್ರೆಸ್‌, ಮೈಸೂರು-ಮೈಲಾಡುತುರೈ ಎಕ್ಸ್‌ಪ್ರೆಸ್‌, ಮೈಸೂರು ಸಾಯಿ ನಗರ ಶಿರಡಿ ಎಕ್ಸ್‌ಪ್ರೆಸ್‌ ಸೇರಿ ಎಂಟು ಎಕ್ಸ್‌ಪ್ರೆಸ್‌ ರೈಲುಗಳನ್ನು ಸೂಪರ್‌ ಫಾಸ್ಟ್‌ ರೈಲುಗಳಾಗಿ ಮರು ವಿನ್ಯಾಸಗೊಸಲಾಗಿದೆ. ಜತೆಗೆ ಹೌರಾ-ಮೈಸೂರು ಸಾಪ್ತಾಹಿಕ ಸೂಪರ್‌ಫಾಸ್ವ್‌ ಎಕ್ಸ್‌ಪ್ರೆಸ್‌, ಎಂಜಿಆರ್‌ ಚೆನ್ನೈ ಸೆಂಟ್ರಲ್‌-ಮೈಸೂರು ಸೂಪರ್‌ಫಾಸ್ವ್‌ ಎಕ್ಸ್‌ಪ್ರೆಸ್‌, ಹುಬ್ಬಳ್ಳಿ-ಮೈಸೂರು ಎಕ್ಸ್‌ಪ್ರೆಸ್‌, ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್‌, ಅಜ್ಮಿರ್‌ -ಮೈಸೂರು ಪಾಕ್ಷಿಕ ಎಕ್ಸ್‌ಪ್ರೆಸ್‌, ಬೆಂಗಳೂರು-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌, ಚಾಮರಾಜ ನಗರ-ತುಮಕೂರು ದೈನಂದಿನ ಪ್ಯಾಸೆಂಜರ್‌, ಮೈಸೂರು ಯಶವಂತಪುರ ಎಕ್ಸ್‌ಪ್ರೆಸ್‌ಗಳ ವೇಗ ಹೆಚ್ಚಸಲಾಗಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
Kannada News » Entertainment » Bollywood » Drishyam 2 Box Office Collection: Ajay Devgn Tabu starrer Drishyam 2 mints Rs 76 Cr in 4 days Drishyam 2: 76 ಕೋಟಿ ರೂ. ಕಲೆಕ್ಷನ್​ ಮಾಡಿದ ‘ದೃಶ್ಯಂ 2’; ಅಜಯ್​ ದೇವಗನ್​ ಸಿನಿಮಾ ಸೂಪರ್​ ಹಿಟ್​ Drishyam 2 Box Office Collection Day 4: ಸೋಮವಾರದ ಪರೀಕ್ಷೆಯಲ್ಲಿ ‘ದೃಶ್ಯಂ 2’ ಸಿನಿಮಾ ಪಾಸ್​ ​ ಆಗಿದೆ. ಒಟ್ಟು ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ‘ದೃಶ್ಯಂ 2’ ಚಿತ್ರದ ಪೋಸ್ಟರ್​ TV9kannada Web Team | Edited By: Madan Kumar Nov 22, 2022 | 12:54 PM ಅಜಯ್​ ದೇವಗನ್​ ನಟನೆಯ ‘ದೃಶ್ಯಂ 2’ (Drishyam 2) ಚಿತ್ರ ಈ ಪರಿ ಕಲೆಕ್ಷನ್​ ಮಾಡುತ್ತದೆ ಎಂದು ಬಹುತೇಕರು ಊಹಿಸಿರಲಿಲ್ಲ. ಯಾಕೆಂದರೆ ಇದು ಮಲಯಾಳಂನಿಂದ ಹಿಂದಿಗೆ ರಿಮೇಕ್​ ಆದ ಸಿನಿಮಾ. ಒಟಿಟಿಯಲ್ಲಿ ಮಲಯಾಳಂ ‘ದೃಶ್ಯಂ 2’ ಚಿತ್ರವನ್ನು ಪ್ರೇಕ್ಷಕರು ಈ ಮೊದಲೇ ನೀಡಿದ್ದರು. ಹಾಗಿದ್ದರೂ ಕೂಡ ಹಿಂದಿ ರಿಮೇಕ್​ ನೋಡಲು ಉತ್ತರ ಭಾರತದ ಮಂದಿ ಮುಗಿ ಬಿದ್ದಿದ್ದಾರೆ. ಅದರ ಪರಿಣಾಮವಾಗಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ (Drishyam 2 Box Office Collection) ಆಗುತ್ತಿದೆ. 4 ದಿನಕ್ಕೆ ಬರೋಬ್ಬರಿ 76 ಕೋಟಿ ರೂಪಾಯಿ ಹರಿದುಬಂದಿದೆ. ಸೋಮವಾರದ ಪರೀಕ್ಷೆಯಲ್ಲೂ ಈ ಸಿನಿಮಾ ಪಾಸ್​ ಆಗಿದ್ದು, ಶೀಘ್ರವೇ ನೂರು ಕೋಟಿ ರೂಪಾಯಿ ಕ್ಲಬ್​ ಸೇರಲಿದೆ. ಈ ಸಿನಿಮಾದಿಂದ ನಟ ಅಜಯ್​ ದೇವಗನ್ (Ajay Devgn) ಅವರು ಮತ್ತೆ ಮೊದಲಿನ ಚಾರ್ಮ್​ ಪಡೆದುಕೊಂಡಿದ್ದಾರೆ. ಮೊದಲ ವೀಕೆಂಡ್​ನಲ್ಲಿಯೇ ‘ದೃಶ್ಯಂ 2’ ನಿರ್ಮಾಪಕರ ಜೇಬು ತುಂಬಿದೆ. ನ.18ರಂದು ತೆರೆಕಂಡ ಈ ಚಿತ್ರದಲ್ಲಿ ಅಜಯ್​ ದೇವಗನ್​ ಜೊತೆ ಶ್ರೀಯಾ ಶರಣ್​, ಟಬು, ಅಕ್ಷಯ್​ ಖನ್ನಾ, ಇಶಿತಾ ದತ್ತ ಮುಂತಾದವರು ನಟಿಸಿದ್ದಾರೆ. ಮೊದಲ ದಿನ ಸಂಗ್ರಹ ಆಗಿದ್ದು 15.38 ಕೋಟಿ ರೂಪಾಯಿ. ಎರಡನೇ ದಿನ ಕಲೆಕ್ಷನ್​ ಹೆಚ್ಚಿತು. ಶನಿವಾರ (ನ.19) ಬರೋಬ್ಬರಿ 21.59 ಕೋಟಿ ರೂಪಾಯಿ ಆದಾಯ ಹರಿದು ಬಂತು. ಭಾನುವಾರ (ನ.20) 27.17 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದು ಈ ಚಿತ್ರದ ಹೆಚ್ಚುಗಾರಿಗೆ. ಯಾವುದೇ ಚಿತ್ರಕ್ಕೆ ಸೋಮವಾರದ ಗಳಿಕೆ ತುಂಬ ಮುಖ್ಯವಾಗುತ್ತದೆ. ಸೋಮವಾರದ ಪರೀಕ್ಷೆಯಲ್ಲಿ ಚಿತ್ರ ಪಾಸ್​ ಆದರೆ ಇನ್ನೂ ಒಂದಷ್ಟು ದಿನ ಉತ್ತಮ ಗಳಿಕೆ ಮಾಡುವುದು ಖಚಿತ. ಈ ವಿಚಾರದಲ್ಲಿ ‘ದೃಶ್ಯಂ 2’ ಸಿನಿಮಾ ಯಶಸ್ವಿ ಆಗಿದೆ. ಸೋಮವಾರ (ನ.21) 11.87 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಒಟ್ಟು ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಸಂಗ್ರಹ ಆಗಿದೆ. #Drishyam2 continues its VICTORIOUS RUN… Trends EXCEPTIONALLY WELL on Day 4 [Mon]… Hits double digits… Crosses ₹ 75 cr… Racing towards ₹ 💯 cr… #D2 is NOT slowing down soon… Fri 15.38 cr, Sat 21.59 cr, Sun 27.17 cr, Mon 11.87 cr. Total: ₹ 76.01 cr. #India biz. pic.twitter.com/zvLDBp1EUY — taran adarsh (@taran_adarsh) November 22, 2022 ‘ದೃಶ್ಯಂ 2’ ಚಿತ್ರಕ್ಕೆ ಅಭಿಷೇಕ್​ ಪಾಠಕ್​ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆತ್ಮರಕ್ಷಣೆಗಾಗಿ ನಡೆದ ಒಂದು ಕೊಲೆಯನ್ನು ಕಥಾನಾಯಕ ಮುಚ್ಚಿ ಹಾಕುತ್ತಾನೆ. ತನ್ನ ಕುಟುಂಬದವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಚಾಲಾಕಿತನದಿಂದ ಬಚಾವ್​ ಮಾಡುತ್ತಾನೆ. ಇದು ‘ದೃಶ್ಯಂ’ ಮೊದಲ ಪಾರ್ಟ್​ ಕಥೆ. ಎರಡನೇ ಪಾರ್ಟ್​ನಲ್ಲಿ ಆ ಕೇಸ್​ ಮತ್ತೆ ಓಪನ್​ ಆಗುತ್ತದೆ. ಹಲವು ಟ್ವಿಸ್ಟ್​ಗಳ ಮೂಲಕ ಕಥೆ ಸಾಗುತ್ತದೆ. ಈ ಬಾರಿ ಹೀರೋ ತನ್ನ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಎಂಬುದು ‘ದೃಶ್ಯಂ 2’ ಕಥಾಹಂದರ. ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಇದನ್ನೂ ಓದಿ ‘ಯಶೋದಾ’ ಚಿತ್ರದ ಮೊದಲನೇ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು? Puri Jagannadh: ‘ಬಾಕ್ಸ್​ ಆಫೀಸ್​ ಲೆಕ್ಕ ಸುಳ್ಳು ಹೇಳ್ತಾರೆ, ಅಸಹ್ಯ ಆಗತ್ತೆ’: ನಿರ್ದೇಶಕ ಪುರಿ ಜಗನ್ನಾಥ್ ಆಡಿಯೋ ವೈರಲ್​ Rishab Shetty: ಐಎಂಡಿಬಿಯಲ್ಲಿ ಗಮ್ಮತ್​ ರೇಟಿಂಗ್​ ಪಡೆದ ‘ಕಾಂತಾರ’; ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ರಿಷಬ್​ ಸಿನಿಮಾ
ಹಾಂ...ಯಾರೋ ಹೇಳಿದ್ದು... ಆದರೂ ನಿಮ್ಮ ಹತ್ರ ಕನ್ಫರ್ಮ್ ಮಾಡ್ಕೊಳ್ಳೋಕೆ ...ಬಂದೆ... , ನೀವು ವಿಧಾನ ಸಭೆ ಚುನಾವಣೆಲಿ ಕೆಲ್ಸ ಮಾಡೋಕೆ ಹೋಗ್ತಿದ್ದೀರಂತೆ.... ?? ಚುನಾವಣೆಲಿ ಕೆಲ್ಸ ಮಾಡೋಕಲ್ರೀ... .. ಎಂ ಎಲ್ ಎ ಗೆ ನಿಲ್ತಾ ಇದ್ದೀನಿ. ಹಹಹ..ಏನ್ಸಾರ್..ತಮಾಶೆ ಮಾಡ್ತಿದ್ದೀರಾ...?? ನಿಮಗೆ ಅಷ್ಟು ಓಟು ಸಿಗುತ್ತಾ...?? ನಾನೆಲ್ಲಿ ಹೇಳ್ದೆ...ಗೆಲ್ತೀನಿ ಅಂತ...??.. ನಿಂತವರೆಲ್ಲಾ ಗೆಲ್ತಾರೆ ಅಂತಾನಾ...ನಿಮ್ಮ ಅಭಿಪ್ರಾಯ...?? ಅಲ್ಲಾ ಸರ್..ಇಲ್ಲಿನ ಕೆಲ್ಸ, ಎಸಿ ಮನೆ, ಎಸಿ ಕಾರು, ಎಸಿ ಆಫೀಸು, ಎಸಿ ಮಾಲು......? ರೀ...ಮೆತ್ತಗೆ ಮಾತನಾಡ್ರಿ...ಮಾಲು ಗೀಲು..ಅಂದ್ರೆ ಮನೆಗೆ ಸೇರ್ಸೊಲ್ಲ ನನ್ನ ಹೆಂಡ್ತಿ ಆಮೇಲೆ... ರಸ್ತೆಲಿ ಎಸಿ ಇರೊಲ್ಲ ಗೊತ್ತಾ..?? ರಾತ್ರಿ ಇಡೀ..ss ಹೊರಗಡೆ ? ಬೆಂಚ್ ಮೇಲೆ ಮಲಗ್ಬೇಕಾಗ್ತದೆ ಪಾರ್ಕಲ್ಲಿ...!! ಇನ್ನು ಈ ಕುವೈತ್ ವೆದರ್ರೋ,,,ದೇವರಿಗೂ ಗೊತ್ತಿರೊಲ್ಲ ಯಾವಾಗ ಹೇಗೆ ಅಂತ... ಡಸ್ಟ್ ಸ್ಟಾರ್ಮ್ ಬಂದ್ರೆ ಉಸಿರು ಕಟ್ಟಿ ಸಾಯ್ತೀನಿ... ಆಮೇಲೆ ಕನ್ನಡಿಗ ವಿಜ್ಞಾನಿಯೊಬ್ಬನ ಸಾವಿಗೆ ಕಾರಣನಾದ ಮತ್ತೊಬ್ಬ ಕನ್ನಡಿಗ ಅಂತ ನನ್ನ ಸಾವಿಗೂ ಕನ್ನಡಕ್ಕೂ ಸಂಬಂಧ ಕಟ್ಟಿ ಮಾನ ಮರ್ವಾದೆ ಹರಾಜ್ ಹಾಕಿಬಿಡ್ತಾರೆ ಪೇಪರ್ ಟಿವಿಯವರು. ಛೇ..ಛೇ...ಛೇ... ನಾನು ಹೇಳಿದ್ದು ಮಾಲ್ (ಇಂಗ್ಲೀಷ್ದು...)... ಶಾಪಿಂಗ್ ಮಾಲ್.. ಹಂಗೆ ಹೇಳಿ ಮತ್ತೆ, ಸರಿಯಾಗಿ... ಎಲ್ಲೆಲ್ಲೋ ಇಂಗ್ಳೀಷ ಮಧ್ಯೆ ಮಧ್ಯೆ ಸೇರ್ಸಿದ್ರೆ ಹಿಂಗೇ ಆಗೋದು... ಮೊನ್ನೆ ತೆಲುಗಿನವನೊಬ್ಬ ಹಿಂದಿ ಹುಡುಗಿಗೆ ಕಷ್ಟಪಟ್ಟು ಹಿಂದಿಲಿ ಹೇಳ್ತಾ... ಮಧ್ಯೆ ತೆಲುಗು ಪದ ಸೇರ್ಸಿ... ಧರ್ಮದ ಏಟು ತಿಂದ...ಗೊತ್ತಾ...?? ಯಾರು ಸರ್...? ಏನು ಹೇಳ್ದ...?? ಆ ಹುಡುಗಿಗೆ “ ಮೇರೆಕು ತುಮ್ ಬೋಲ್ನಾಜಿ... ಮೈ ತೆರೆಕು ರೇಪು ಕರೇಗಾ” ಅಂದ.... ಅಯ್ಯೋ ಸಿವ್ನೇ...ರೇಪ ಮಾಡ್ತೀನಿ ಅಂದ್ರೆ ಯಾರು ತಾನೇ ಸುಮ್ನೆ ಇರ್ತಾರೆ ಸರ್...?? ಅಲ್ಲಾ ರೀ “ರೇಪು” ಅಂದರೆ ತೆಲುಗಲ್ಲಿ ನಾಳೆ ಅಂತ. ಆಕೆಯ ಒಂದು ಕೆಲಸ ಕುವೈತ್ ಟ್ರಾಫಿಕ್ ಆಫೀಸಲ್ಲಿ ಮಾಡಿಸಿಕೊಡೋಕೆ ಕೇಳಿಕೊಂಡಿದ್ದಳಂತೆ ಆಕೆ. ಅದನ್ನೇ ಆತ.. ನಾಳೆ ಮಾಡಿಸಿ ಕೊಡ್ತೀನಿ ಅನ್ನೋ ಅರ್ಥದಲ್ಲಿ ಹೇಳಿದ್ದು.... ಹಹಹಹ, ಹಾಗಾ....??!! ಅದು ಹೋಗಲಿ ನೀವು ಗೆಲ್ಲೋಕೆ ಅಲ್ವಾ ಹೋಗೋದು... ಮತ್ತೆ?? ಇಲ್ಲಿನ ಕೆಲ್ಸ ಬಿಟ್ಟು ಯಾಕೆ ಹೋಗ್ತಿದ್ದೀರಾ...?? ಮತ್ತೆ ನೋಡಿ, ಪೂರ್ತಿ ವಿಷಯ ತಿಳಿದುಕೊಳ್ಳದೇ ನಿಮ್ಮದೇ ವ್ಯಾಖ್ಯಾನ ಕಲ್ಪಿಸಿ ಅದಕ್ಕೆ ಕಥೆ ಕಟ್ಟೋದು ನಮ್ಮ ಟಿವಿ ಪತ್ರಿಕೆ ವರದಿಗಾರರ ಕೆಲ್ಸ...ನೀವು ಪೂರ್ತಿ ತಿಳ್ಕೊಳ್ಳಿ ಮೊದಲು... ನಾನು ಕೆಲ್ಸ ಎಲ್ಲಿ ಬಿಡ್ತಿದ್ದೀನಿ..? ಮೂರು ತಿಂಗಳ ರಜೆ ತಗೊಂಡು ಹೋಗ್ತಿದ್ದೀನಿ, ಕಲ್ಲು ಎಸೆಯೋದುss. ಬಿದ್ರೆ ಮಾವಿನ ಹಣ್ಣುss... ಬೀಳದೇ ಇದ್ರೆss..? ಸರ್ಕಾರಿ ರೋಡಿನ ಸರ್ಕಾರಿ ಕಲ್ಲು!! ಬಿದ್ದ ಕಲ್ಲಿನ ಹೆಸರಲ್ಲಿ ಕಂಟ್ರಾಕ್ಟರ್ ಕಾಣೆಯಾಯ್ತು ಅಂತ ಅಡಿಶನಲ್ ಬಿಲ್ ಹಾಕ್ಸಿ ಅವನ ಹೊಟ್ಟೆ ಪಾಡು ಪೂರೈಸ್ಕೋತಾನೆ. ಹೌದು ನಿಮಗೆ ಏನು ಲಾಭ...?? ಇಲ್ಲಿದ್ರೆ ಏನಿಲ್ಲಾಂದ್ರೂ ದೇಶಕ್ಕೆ ಐದಾರು ಲಕ್ಷ ಮೂರು ತಿಂಗಳಲ್ಲಿ ವಿದೇಶಿ ವಿನಿಮಯ ಸಿಗ್ತಿತ್ತು.. ಬಿಡ್ರೀ..., ಮೊನ್ನೆ ನೋಡಿದ್ರಾ..? ಯಾವುದೋ ಟಿವಿ ಚಾನಲ್ ನವ್ರು ಎನ್ನಾರೈಗಳು ವಿದೇಶದಲ್ಲಿ ಈಗ ನೀವು ಹೇಳಿದ್ರಲ್ಲಾ ಹಾಗೆ...ಎಸಿ ಕಾರು, ಎಸಿ ಮನೆ ಎಲ್ಲಾ ಇಟ್ಕೊಂಡು ಇಲ್ಲಿಗೆ ಬಂದು ದೌಲತ್ತು ತೋರ್ಸಿ ಓಡೋಗ್ತಾರೆ ದೇಶ ದ್ರೋಹಿಗಳು...ಅಂತೆಲ್ಲಾ ಹೇಳಿರ್ಲಿಲ್ವಾ...?? ಹೌದು ಸರ್...ನನಗೂ ಎಂಥ ಕೋಪ ಬಂತು ಅಂತೀರಿ..., ಅಲ್ಲಾss,.. ಅಪ್ಪ, ಅಮ್ಮ, ಬಂಧು-ಬಳಗ..ಅಷ್ಟ್ಯಾಕೆ ? ತಮ್ಮ ಮಕ್ಕಳ ವಿದ್ಯಾಭ್ಯಾಸ ನಾಡಲ್ಲಿ ನಡೀಲಿ ಅಂತ ಮಕ್ಕಳನ್ನೂ ಅಲ್ಲಿ ಬಿಟ್ಟು ಇಲ್ಲಿ ಜೀತದ ಆಳಿನ ತರಹ ದಿನರಾತ್ರಿ ದುಡಿದು ಲಕ್ಷ ಲಕ್ಷ ವಿದೇಶೀ ವಿನಿಮಯದ ದೇಶಕ್ಕೆ ಜಮಾವಣೆ ಮಾಡುವ ನಮ್ಮಂತಹ ಎನ್ನಾರೈ ಗಳು ಅಲ್ಲಿದ್ದು ಬಡವರ ಹೊಟ್ಟೆ ಹೊಡೆದು, ಕೋಟಿ ಕೋಟಿ ದೋಚಿ ವಿದೇಶೀ ಬ್ಯಾಂಕುಗಳಲ್ಲಿ ಬೇನಾಮಿ ಖಾತೆಗಳಲ್ಲಿ ಕೂಡಿಡುವ ಹೆಗ್ಗಣಗಳದ್ದು ದೇಶ ಸೇವೆ ಅನ್ನೋದಾದ್ರೆ... ನಮ್ಮದು ದೇಶ ದ್ರೋಹವೇ..??? ಉಗೀರಿ ಮುಖಕ್ಕೆ ಇಂತಹ ಭಟ್ಟಂಗಿ ಟಿವಿಯವರಿಗೆ. ಅದು ಹೋಗಲಿ..., ನಿಮಗೆ ಹೇಗೆ ಲಾಭ ಆಗುತ್ತೆ ಹೇಳ್ಲಿಲ್ಲ.. ನೋಡಿ, ಊರಿಗೆ ಹೋಗಿ, ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಹಾಕ್ತೀನಿ. ಆಗ ನನ್ನ ಬ್ಲಾಗ್, ಫೇಸ್ಬುಕ್ ಫ್ರೆಂಡ್ಸ್ ಎಲ್ಲಾರ್ಗೂ ಪಾರ್ಟಿ ಕೊಡ್ತೇನೆ...ಏನಿಲ್ಲ ಅಂದ್ರೂ ಎರಡು ಮೂರು ಸಾವಿರ ಜನ ಸೇರ್ತಾರೆ, ಯಾವ ಪಾರ್ಟಿಯವರಿಗೂ ಛಳಿ-ಜ್ವರ ಬರೋ ವಿಷಯ ಅದಾಗುತ್ತೆ..... ಎರಡು-ಮೂರು ಸಾವಿರ ಜನಕ್ಕೆ ಅವರು ಹೆದರ್ತಾರಾ...ಹ್ಯಾಗೆ ಸರ್? ನೋಡಿದ್ರಾ ಅದಕ್ಕೇ ಸ್ವಲ್ಪ ಸಾಮಾನ್ಯ ಜ್ಞಾನ ಇರ್ಬೇಕು ಅನ್ನೋದು....!!, ಅಲ್ಲಾ ರೀ ಚುನಾವಣೆ ರಾಲಿಲಿ ೧೦ ಸಾವಿರ ಜನ ಸೇರಿದ್ರೆ ೫೦-೬೦ ಸಾವಿರ ಓಟು ಗ್ಯಾರಂಟಿ ಅಂತಾರೆ ಅತಹುದರಲ್ಲಿ ನನ್ನ ಪಾರ್ಟಿಗೆ ಬರೋ ಮೂರು ಸಾವಿರ ಜನ ಅಂದರೆ ೩೦ ಸಾವಿರ ಓಟು..!!! ಈಗ ಕರ್ನಾಟಕದಲ್ಲಿ ಎಷ್ಟು ಪಾರ್ಟಿ ಇವೆ ಹೇಳಿ? ಬಿಜೆಪಿ ಲೇ ಮೂರು, ಇನ್ನು ಅವರ ಬಂಡಾಯ ಅಭ್ಯರ್ಥಿಗಳು, ಎರಡು ಕಾಂಗ್ರೆಸ್, ಎರಡು ಕಮ್ಯುನಿಸ್ಟ್, ಎರಡು ಜನತಾ, ಅಲ್ಲಿಗೆ ೧೦-೧೧ ಪಾರ್ಟಿ, ಕ್ಷೇತ್ರದ ಮತದಾರರ ಸಂಖ್ಯೆ ೨-೩ ಲಕ್ಷ, ಸರೀನಾ?? ಹೌದು..ಸರ್..ನಿಜ... ಆದರೆ ನಿಮ್ಮ ಪಾರ್ಟಿಗೆ ಬರುವವರು ಒಂದೇ ಮತಕ್ಷೇತ್ರದವರಲ್ಲವಲ್ಲ...?? ಹೌದು...ಆದರೆ ಅದು ನನಗೆ ಗೊತ್ತು, ಚುನಾವಣೆ ಸಮಯದಲ್ಲಿ ಜನ ಸೇರಿದ್ದಾರೆ ಅಂದರೆ ಅವರು ಮತದಾರರು, ಬೆಂಬಲಿಗರು ಎನ್ನುವುದೇ ನಂಬಿಕೆ.... ಇನ್ನು ೫೦% ಮತ ಚಲಾಯಿಸೋದು ಹೆಚ್ಚು ಅಂದ್ರೆ ೧೫೦ ಸಾವಿರ (೧.೫ ಲಕ್ಷ), ಅಂದರೆ ಪ್ರತಿ ಪಕ್ಷಕ್ಕೆ ೧೫ ಸಾವಿರ ಅಥವಾ ಹೆಚ್ಚೆಂದರೆ ೨೫ ಸಾವಿರ, ಸರಿನಾ? ಹೌದು....ಹಾಗಾದ್ರೆ...??? ನಿಮ್ಮ ೨೦-೩೦ ಸಾವಿರ ಓಟಿನ ಕಲ್ಪನೆಯೇ ಅವರಿಗೆ ನಡುಕ ತರಿಸೋದು... ಅಲ್ವಾ..? ಅಯ್ಯೋ ಅಲ್ಲೇ ಇರೋದು..ಗಮ್ಮತ್ತು...೨೦-೩೦ ಇರ್ಲಿ ೨-೩ ಸಾವಿರಾನೂ ಸಿಗೊಲ್ಲ ನನಗೆ ಅಂತ ಗೊತ್ತು, ಆದರೆ ಅವರಿಗೆ ಇದು ಬೆದರುಬೊಂಬೆ... ಅಂತಿಮ ಕ್ಷಣದಲ್ಲಿ ನನ್ನ ನಾಮಪತ್ರ ವಾಪಸ್ ಅತಗೋತೀನಿ ಅಂತ...ಮುಖ್ಯವಾದ ಪಾರ್ಟಿಗಳಿಂದ ಹದಿನೈದು ಇಪ್ಪತ್ತು ಲಕ್ಷ ತಗೊಂಡು, ಐವತ್ತು ಅರವತ್ತು ಲಕ್ಷ ಮಾಡೊಂಡು ವಾಪಸ್ ಕುವೈತಿಗೆ... ಮತ್ತೆ ನನ್ನ ಕೆಲ್ಸಕ್ಕೆ...?? ಹ್ಯಾಗೆ..?? ಓಹ್..ಅಬ್ಬಬ್ಬಾ...ಎಂಥಾ ಪ್ಲಾನು... ಹೌದು ೫೦-೬೦ ಲಕ್ಷ, ಏನ್ಮಾಡ್ತೀರಾ...?? ನಿಮಗೆ ಗೊತ್ತಿಲ್ವೇನ್ರೀ...?? ನನಗೆ ಬರೋ ಸಂಬಳಾನೇ ನನಗೆ ಸಾಕು... ಸಂಬಳದ ಸಮಾನ ಮತ್ತು ಅಲ್ಲಿ ಖರ್ಚಾದ ಹಣ ಇಟ್ಟುಕೊಂಡು ಮಿಕ್ಕಿದ್ದು ಕನ್ನಡ ನಾಡಲ್ಲೇ ನನ್ನ ಫೇಸ್ಬುಕ್ ಮಿತ್ರರು, ಬ್ಲಾಗ್ ಮಿತ್ರರು ಮಾಡ್ತಿರೋ ಹಲವಾರು ಪುಣ್ಯಕಾರ್ಯಗಳಿಗೆ ಕೊಟ್ಟು ಬಿಡ್ತೇನೆ... ಗೋಸುಂಬೆ ರಾಜಕಾರಣಿಗಳು ಅನಾಥಾಶ್ರಮಗಳಿಗೆ ಅಂತ ಏನೂ ಕೊಡೊಲ್ಲ...ಅವರಿಗೆ ಕೊಡ್ತೇನೆ... ಸೂಪರ್ ಐಡಿಯಾ ಸರ್... ನಾನೂ ಬರ್ತೀನಿ...ನನ್ನ ಕೆಲ ಸ್ನೇಹಿತರೂ ನಿಮ್ಮ ಪಾರ್ಟಿ ಸಮಯಕ್ಕೆ ಬಂದು ನಿಮ್ಮ ತೂಕ ಇನ್ನೂ ಹೆಚ್ಚುವಂತೆ ನೋಡ್ಕೋತೇವೆ..... ನಿಮ್ಮ ಈ “ಕೆರೆಯ ನೀರನು ಕೆರೆಗೆ ಚಲ್ಲಿ” ಕಾಯಕಕ್ಕೆ ನಮ್ಮ ಕೈಲಾದ ಸಹಾಯ ಮಾಡ್ತೀವಿ.
T20:(ಜೂ.9): ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ರನ್ ಮಳೆಯನ್ನೇ ಹರಿಸಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ಕಿಶನ್, ಹರಿಣಗಳನ್ನು ಮನಬಂದಂತೆ ಚೆಂಡಾಡಿದರು. ಹೌದು, ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ-20 ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್​​ಮನ್​​ ಇಶಾನ್​ ಕಿಶನ್​​ ಅದ್ಭುತ ಬ್ಯಾಟಿಂಗ್​ ಮಾಡಿದರು. Setting the stage on fire, @ishankishan51 hammered 76 & was #TeamIndia's top performer in the first innings. 👍 👍 #INDvSA | @Paytm A summary of his knock 🔽 pic.twitter.com/3qUAZZKPf3 — BCCI (@BCCI) June 9, 2022 48 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ 76 ರನ್ ಗಳಿಸಿದರು. ಕೇಶವ ಮಹಾರಾಜ್ ಬೌಲಿಂಗ್ ನಲ್ಲಿ ಸತತ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಸಿಡಿಸಿದ್ದ ಕಿಶನ್, ಮತ್ತೊಂದು ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು. ಟಾಸ್​​ ಸೋತರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ಟೀಂ ಇಂಡಿಯಾ ಪರ ಇನ್ನಿಂಗ್ಸ್​ ಶುರು ಮಾಡಿದ ಇಶಾನ್​​​ ಸೌತ್​ ಆಫ್ರಿಕಾ ಬೌಲರ್ಸ್​ ಬೆಂಡೆತ್ತಿದರು. ಕೇವಲ 48 ಬಾಲ್​​ನಲ್ಲಿ ಬರೋಬ್ಬರಿ 76 ರನ್​​ ಸಿಡಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದರು
ಶಿರಾ: ತಾಲೂಕು ಬರಗೂರು ಗ್ರಾಪಂ ಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿದ್ಯಾಕುಮಾರಿ ದಿಢೀರ್ ಭೇಟಿ ನೀಡಿ ಅಮೃತ ಯೋಜನೆ ಹಾಗೂ ಇನ್ನಿತರ ಯೋಜನೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಮಂಗಳವಾರ ಬರಗೂರು ಗ್ರಾಮಪಂಚಾಯ್ತಿಗೆ ಭೇಟಿ ನೀಡಿ, ಕುಡಿಯುವ ನೀರು, ಚರಂಡಿ, ಕಸವಿಲೇವಾರಿ ಘಟಕ, ಡಿಜಿಟಲ್ ಲೈಬ್ರರಿ, ಅಮೃತ ಪಾರ್ಕು, ಶಾಲಾ ಕಾಂಪೌಂಡ್, ಆಟದ ಮೈದಾನ, ಅಡುಗೆ ಕೊಠಡಿಗಳು, ಶೌಚಾಲಯಗಳನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಅಮೃತ ಯೋಜನೆ ಅಡಿ ನೀಡಲಾಗಿರುವ ಕಾಮಗಾರಿಗಳನ್ನು ಚನ್ನಾಗಿಯೇ ನಿರ್ವಹಿಸಿದ್ದಾರೆ. ಆದರೂ ಕೆಲವು ಸಲಹೆಗಳನ್ನು ನೀಡಿದ್ದೇನೆ. ಇದರ ಜೊತೆಗೆ ಜಿಲ್ಲಾ ಪಂಚಾಯ್ತಿಯ ಇತರೆ ಕಾರ್ಯಗಳನ್ನು ಸದರಿ ಗ್ರಾಮಪಂಚಾಯ್ತಿತಿ ಯಲ್ಲಿ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಪ್ರಶಂಶೆ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ ಶಿರಾ ತಾಲೂಕು ಬರಗೂರು ಗ್ರಾಮಪಂಚಾಯಿತಿಯನ್ನು ಅಮೃತ ಯೋಜನೆಯಡಿ ಆಯ್ಕೆ ಮಾಡಲಾಗಿದ್ದು, ಗ್ರಾಪಂ. ವ್ಯಾಪ್ತಿಯ ಜನರಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಿದ್ದಾರೆ ಎಂದರು. ಅಮೃತ ಯೋಜನೆಯಡಿ ಒಂದು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೂ ಅಗತ್ಯವಿದ್ದ ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯ, ಮಕ್ಕಳಿಗೆ ಅಗತ್ಯವಿರುವ ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಲೋನಿಯ ಸಮಗ್ರ ಅಭಿವೃದ್ಧಿಗೆ ಕಾಮಗಾರಿಗಳನ್ನು ನೀಡಲಾಗಿದೆ. ಬರಗೂರು ಗ್ರಾಪಂ ನಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಅಧಿಕಾರಿಗಳು ಮತ್ತು ಚುನಾಯಿತ ಮಂಡಳಿ ಸೇರಿ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ ಎಂದರು. ಈ ವೇಳೆ ಬರಗೂರು ಗ್ರಾಪಂ ಅಧ್ಯಕ್ಷ ಟಿ.ರವಿಕುಮಾರ್, ಉಪಾಧ್ಯಕ್ಷರಾದ ಯಶೋಧ ದೇವರಾಜು, ಸದಸ್ಯರಾದ ಲೋಕೇಶ್ ಹಾರೋಗೆರೆ, ಕಂಬಿ ಮಂಜು, ಪಂಕಜಾಕ್ಷಿ ಜಯರಾಮಯ್ಯ, ಬಾಲು, ಸಿದ್ದಪ್ಪ, ತಾಪಂ ಇಒ ಅನಂತರಾಜು, ಎಡಿ ವೆಂಕಟೇಶ್, ಪಿಡಿಒ ನಾಗರಾಜಯ್ಯ, ಇಂಜಿನಿಯರ್ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಅಂಬೇಡ್ಕರ್ ಅವರ 127ನೇ ಜನ್ಮದಿನದ ಅಂಗವಾಗಿ ಕರ್ನಾಟಕ ವಿದ್ಯುತ್ ಮಂಡಳಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಭೀಮ ಸಂಭ್ರಮ-2018 ಕ್ರಿಕೆಟ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ವಿದ್ಯುತ್ ವಿಭಾಗೀಯ ಕಚೇರಿಯ ಲೆಕ್ಕಾಧಿಕಾರಿ ಭಾಸ್ಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಸಾಧ್ಯವಾಗಿದೆ. ವಿಭಾಗೀಯ ಕಚೇರಿಯ ನೌಕರರಿಗೆ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಎಲ್ಲ ನೌಕರರು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಸದಾ ಕೆಲಸಗಳ ಒತ್ತಡದಲ್ಲಿರುವ ನೌಕರರು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಕ್ರೀಡಾಕೂಟದ ಪಾಲ್ಗೊಳ್ಳುವ ನೌಕರರನ್ನು ಪ್ರೋತ್ಸಾಹಿಸಲು ಬಹುಮಾನ ನೀಡಲಾಗುವುದು ಎಂದರು. ಭೀಮ್ ಸಂಭ್ರಮ-2018ರ ಕಪ್‍ಗೆ ಹರದನಹಳ್ಳಿ, ರಾಮಸಮುದ್ರ, ಚಾಮರಾಜನಗರ ವಿಭಾಗೀಯ ಕಚೇರಿ, ಕುದೇರು, ತೆರಕಣಾಂಬಿ, ಗುಂಡ್ಲುಪೇಟೆ, ಅರಕಲವಾಡಿ ಸೇರಿದಂತೆ ವಿದ್ಯುತ್ ಜಾಗೃತದಳ ಸೇರಿದಂತೆ ಇತರೆ ತಂಡಗಳು ಭಾಗವಹಿಸಿದವು. ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಯಕಾರಿಣ ಸಮಿತಿಯ ಮಹೇಶ್, ಎಂಜಿನಿಯರ್ ನಂಜುಂಡಸ್ವಾಮಿ, ಎನ್.ಮಹೇಶ್, ಮಾಜಿ ನಿರ್ದೇಶಕ ಚಿಕ್ಕಸಿದ್ದಶೆಟ್ಟಿ, ಮುಖಂಡರಾದ ಬಸವಣ್ಣ, ದೇವರಾಜಯ್ಯ, ಶಿವಶಂಕರ್, ಮಲ್ಲೇಶ್, ರಮೇಶ್, ಪ್ರಶಾಂತ್, ಆರ್.ಡಿ.ನಾಗರಾಜ್ ಹಾಜರಿದ್ದರು.
ಉತ್ತರ ಕೋರಿಯಾ: ಔತಣ ಕೂಟವೊಂದರಲ್ಲಿ ದೇಶದ ಆರ್ಥಿಕ ಮತ್ತು ಆಡಳಿತ ನೀತಿಯನ್ನು ಟೀಕಿಸಿದ ಐವರು ಅಧಿಕಾರಿಗಳಿಗೆ ಮರಣದಂಡನೆಯ ಶಿಕ್ಷೆಯನ್ನು ಕಿಮ್ ಜೊಂಗ್ ಉನ್ ನೀಡಿದ ಘಟನೆಯು ಉತ್ತರ ಕೋರಿಯಾದಲ್ಲಿ ನಡೆದಿದೆ. ಸರಕಾರದ ನೀತಿಯನ್ನು ಪ್ರಶ್ನಿಸಿದ ಕಾರಣಕ್ಕಾಗಿ ಶೂಟ್ ಮಾಡಿ ಐವರು ಅಧಿಕಾರಿಗಳನ್ನು ಕೊಲ್ಲಲಾಯಿತು. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ತನ್ನ ಅಧಿಕಾರಿಗಳ ಔತಣಕೂಟವನ್ನು ಏರ್ಪಡಿಸಿದ್ದನು. ಇಲ್ಲಿ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು ಎನ್ನಲಾಗಿದೆ. ಇದೆ ಸಮಯದಲ್ಲಿ ಸರಕಾರದ ಅಧಿಕಾರಿಗಳಾದ ಐವರು ಕಿಮ್ ಆಡಳಿತ ನೀತಿಗಳ ಕುರಿತಾಗಿ ಟೀಕೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ದೇಶದಲ್ಲಿನ ಕೈಗಾರಿಕಾ ನೀತಿಯ ಸುಧಾರಣೆಯ ಅಗತ್ಯತೆ ಕುರಿತಂತೆ ತಿಳಿಸಿದ್ದರು. ಕೊರೊನಾ ಸಂಕಷ್ಟದಿಂದಾಗಿ ಘೋಷಿಸಿದ್ದ ನಿರ್ಬಂಧಗಳ ತೆರವಿಗೆ ವಿದೇಶಿ ಸಹಾಯವನ್ನು ಪಡೆಯಬೇಕು ಎಂದು ಒತ್ತಾಯಿಸಿದರು. ಐವರಿಗೆ ಮರಣದಂಡನೆ ಶಿಕ್ಷೆ ಐವರು ಅಧಿಕಾರಿಗಳನ್ನು ಕರೆಸಿ, ಉತ್ತರ ಕೊರಿಯಾದ ಆಡಳಿತವನ್ನು ದುರ್ಭಲಗೊಳಿಸಲು ಪಿತೂರಿ ನಡೆಸಿದ್ದೇವೆ ಎಂದು ತಪ್ಪೋಪ್ಪಿಕೊಳ್ಳುವಂತೆ ಒತ್ತಾಯ ಮಾಡಲಾಯಿತು. ನಂತರ ಐವರು ಅಧಿಕಾರಿಗಳನ್ನು ಗುಂಡಿಟ್ಟು ಕೊಲ್ಲುವಂತೆ ತನ್ನ ಅಧಿಕಾರಿಗಳಿಗೆ ಕಿಮ್ ಜೊಂಗ್ ಉನ್ ಆದೇಶವನ್ನು ನೀಡಿದ ಎನ್ನಲಾಗಿದೆ. ಈ ದೇಶದಲ್ಲಿ ಸರ್ವಾಧಿಕಾರಿಯ ವಿರುದ್ಧ ಮಾತನಾಡುವ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯ ಮರಣದಂಡನೆ ಶಿಕ್ಷೆಯು ದೊರೆಯುತ್ತದೆ. ಕೊರೊನಾ ನಿಯಂತ್ರಣಕ್ಕಾಗಿ ಗುಂಡಿಟ್ಟು ಕೊಲ್ಲುವಂತೆ ಆದೇಶ ಉತ್ತರ ಕೊರಿಯಾದಲ್ಲಿ ಯಾವುದೇ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿರುವ ಕಿಮ್ ತನ್ನ ದೇಶದಲ್ಲಿ ಸೊಂಕಿತರಿಗೆ ಗುಂಡಿಟ್ಟು ಕೊಲ್ಲುವ ಶಿಕ್ಷೆಯನ್ನು ವಿದಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸೋಂಕು ದೇಶವನ್ನು ಪ್ರವೇಶಿಸಬಾರದು ಎನ್ನುವ ಕಾರಣಕ್ಕಾಗಿ ಚೀನಾದಿಂದ ದೇಶಕ್ಕೆ ಬರುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿಸಿದ್ದಾನೆ. ಅಲ್ಲದೇ ಬಂದಿರುವವರನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಚೀನಾದಿಂದ ಬಂದರೆ ಗುಂಡಿಟ್ಟು ಕೊಳ್ಳಲಾಗುವುದು ಎಂದು ಆದೇಶ ಹೊರಡಿಸಿದ್ದಾನೆ. ಕ್ರೂರವಾಗಿ ತನ್ನ ಪರಿವಾರದವರನ್ನೇ ಕೊಲ್ಲಿಸಿದ್ದ ಕಿಮ್ ಜೊಂಗ್ ಉನ್ ಕ್ರೂರಿ ಕಿಮ್ ಅಧಿಕಾರವನ್ನು ಹೀಡಿಯಲು ತನ್ನ ಚಿಕ್ಕಪ್ಪ ಕಿಮ್ ಜೊಂಗ್ ಥೆಕ್ ನನ್ನು ಬಂಧಿಸಿ, ಹಸಿದ 120 ನಾಯಿಗಳಿರುವ ಬೋನಿಗೆ ನೂಕಿದ್ದ. ಅಲ್ಲದೇ ಈ ಕ್ರೂರತೆಯನ್ನು 300 ಅಧಿಕಾರಿಗಳ ಜೊತೆಯಲ್ಲಿ ಕುಳಿತು ವಿಕ್ಷಣೆಯನ್ನು ಮಾಡಿದ್ದ ಎನ್ನಲಾಗಿದೆ. 67 ವರ್ಷ ವಯಸ್ಸಿನ ಕಿಮ್ ಜೊಂಗ್ ಥೆಕ್ ನನ್ನು ನಾಯಿಗಳು ಕಚ್ಚಿ ಕಚ್ಚಿ ತಿಂದು ಸಾಯಿಸಿದ್ದವು. ಇದನ್ನು ಪ್ರಶ್ನಿಸಿದ ಕಿಮ್ ಜೊಂಗ್ ಥೆಕ್ ಪತ್ನಿಯನ್ನು ವಿಷ ಉಣಿಸಿ ಕೊಲ್ಲಲಾಯಿತು. ಆದರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಲಾಯಿತು. ಕಿಮ್ ಜೊಂಗ್ ಉನ್ ಎಷ್ಟು ಕ್ರೂರಿ ಎಂದರೆ ಮಲೇಷ್ಯಾದಲ್ಲಿ ವಾಸವಿದ್ದ ತನ್ನ ಅಣ್ಣ ಮತ್ತು ಮಲ ಸೋದರ ನನ್ನು ವಿಷದ ಸೂಜಿಗಳನ್ನು ಚುಚ್ಚಿ ಕೊಲ್ಲಲಾಯಿತು. ಅಲ್ಲದೇ ಉತ್ತರ ಕೊರಿಯಾದ ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪವನ್ನು ಹೊರಿಸಲಾಯಿತು. ಹೀಗೆ ಯಾವುದೇ ಅನುಕಂಪ ತೋರದೇ ತನ್ನ ಸೋದರಿಯೋಬ್ಬರನ್ನು ಬಿಟ್ಟು ತನ್ನ ಪರಿವಾರದ ಎಲ್ಲರನ್ನೂ ಕೊಲ್ಲಿಸಿದ್ದಾನೆ. ಈ ದೇಶದಲ್ಲಿ ಸರಕಾರ ಮತ್ತು ಆಡಳಿತದ ವಿರುದ್ಧ ಯಾವುದೇ ರೀತಿಯಲ್ಲಿ ಧ್ವನಿ ಏರಿಸಿದರೆ ಯಾರನ್ನೂ ಸಹ ಬಿಡದೆ ಕೊಲ್ಲಲಾಗುತ್ತದೆ. ಅಲ್ಲದೇ ಇಲ್ಲಿನ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮವು ಸರಕಾರ ಹೇಳಿದ್ದನ್ನು ಮಾತ್ರ ಪ್ರಕಟಿಸುತ್ತವೆ. ಅಲ್ಲಿನ ಜನರು ಕಟ್ಟುಪಾಡುಗಳಿಗೆ ಬದ್ಧರಾಗಿ ಹೊರಜಗತ್ತಿನ ಯಾವುದೇ ಅರಿವಿಲ್ಲದೆ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.
ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಹಳೇ ಮನುಷ್ಯನನ್ನು ಅವನ ಕೃತ್ಯಗಳ ಕೂಡ ತೆಗೆದುಹಾಕಿದ್ದೀರಲ್ಲವೇ? ಕೊಲೊಸ್ಸೆಯವರಿಗೆ 3:9 ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವ ವಾದದ್ದೋ ಅದನ್ನೇ ಮಾಡುವವರಾಗಿರ್ರಿ. ರೋಮಾಪುರದವರಿಗೆ 12:17 ಯಾಕಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವ ವಾದವುಗಳನ್ನು ಯೋಚನೆಗೆ ತಂದುಕೊಳ್ಳುವವರಾ ಗಿದ್ದೇವೆ. 2 ಕೊರಿಂಥದವರಿಗೆ 8:21 ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು. ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು. ಙ್ಞಾನೋಕ್ತಿಗಳು 11:1, 3 ತನ್ನ ತುಟಿಗಳ ದೋಷದಿಂದ ದುಷ್ಟನು ಉರ್ಲಿಗೆ ಬೀಳುವನು; ನೀತಿವಂತರು ಇಕ್ಕಟ್ಟಿ ನೊಳಗಿಂದ ತಪ್ಪಿಸಿಕೊಳ್ಳುವರು. ಸತ್ಯವನ್ನಾ ಡುವವನು ನ್ಯಾಯವನ್ನೂ ಸುಳ್ಳುಸಾಕ್ಷಿಯು ಮೋಸ ವನ್ನೂ ತೋರ್ಪಡಿಸುತ್ತಾನೆ. ಙ್ಞಾನೋಕ್ತಿಗಳು 12:13, 17 ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು. ಙ್ಞಾನೋಕ್ತಿಗಳು 28:13 ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ. ಯಾಕೋಬನು 5:16 ಆದರೆ ನಾಚಿಕೆಗೆ ಕಾರಣ ವಾಗುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆಯೂ ವಂಚನೆಯಿಂದ ದೇವರ ವಾಕ್ಯವನ್ನು ಕೆಡಿಸದೆಯೂ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಯೋಗ್ಯರೆಂದು ಪ್ರತಿ ಮನುಷ್ಯನ ಮನಸ್ಸಾಕ್ಷಿಯು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನ 2 ಕೊರಿಂಥದವರಿಗೆ 4:2 Wordproject® is a registered name of the International Biblical Association, a non-profit organization registered in Macau, China.
ಫಿರ್ಯಾದಿ ಶೋಭಾ ಗಂಡ ಪಂಡೀತ ಹಲಗೆ ಸಾ: ರುದನೂರ ರವರಿಗೆ ತಮ್ಮೂರ ಶಿವಾರದಲ್ಲಿ ಹೊಲ ಸರ್ವೆ ನಂ. 22 ನೇದರಲ್ಲಿ 4 ಎಕರೆ ಜಮೀನು ಇದ್ದು, ಕಳೆದ 3-4 ವರ್ಷಗಳಿಂದ ಹೊಲದಲ್ಲಿ ಬೆಳೆ ಬರದೆ ಬಹಳ ಕಂಗಾಲು ಆಗಿದ್ದು, ಬಿತ್ತನೆಗಾಗಿ ಕೃಷಿ ಕೆಲಸಕ್ಕಾಗಿ ಖಾಸಗಿ ಜನರಿಂದ ಕೈ ಕಡ ರೂಪದಲ್ಲಿ ಮತ್ತು ಸ್ವ ಸಹಾಯ ಸಂಘಗಳಿಂದ ಸಾಲ ಪಡೆದಿದ್ದು ಇರುತ್ತದೆ, ಪ್ರಸ್ತೂತ ವರ್ಷ ಸಹ ಹೊಲದಲ್ಲಿ ಯಾವುದೇ ಬೆಳೆ ಬರದೆ ಇದ್ದುದ್ದರಿಂದ ಕುಟುಂಬ ಹತಾಶೆಯಲ್ಲಿ ಬೆಂದು ಹೊಗಿರುತ್ತದೆ, ಜೀವನ ಹೇಗೆ ನಿರ್ವಹಣೆ ಮಾಡಬೇಕು ತೊಚುತ್ತಿಲ್ಲಾ ಅಂತಲು ಮತ್ತು ಜನರಿಂದ ಕೃಷಿಗಾಗಿ ಸಾಲ ತಂದಿದ್ದು ಅದನ್ನು ಹೇಗೆ ತೀರಿಸುವುದು ಅಂತ ಫಿರ್ಯಾದಿಯವರ ಗಂಡ ಕಳೆದ 3-4 ತಿಂಗಳಿಂದ ಖಿನ್ನತೆಗೆ ಒಳಗಾಗಿ ಮನೆಯಲ್ಲಿಯೇ ಇರುತ್ತಿದ್ದರು, ಯಾರ ಜೊತೆಯಲ್ಲಿ ಮಾತುಕತೆ ಆಡುತ್ತಿರಲಿಲ್ಲಾ, ಹೀಗಿರುವಲ್ಲಿ ದಿನಾಂಕ 28-01-2018 ರಂದು ಫಿರ್ಯಾದಿಯವರ ಗಂಡ ಪಂಡಿತ ತಂದೆ ಬಾಬುರಾವ ಹಲಗೆ ವಯ: 50 ವರ್ಷ, ಜಾತಿ: ಮಾದಿಗ, ಸಾ: ರುದನೂರ ಇವರು ಹೊಲಕ್ಕೆ ಹೊಗಿ ಬರುವುದಾಗಿ ಹೇಳಿ ಹೊಗಿ ಸಾಲದ ಬಾದೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಯಲ್ಲಿ ಬಿದ್ದು ಆತ್ಮಹತ್ಯ ಮಾಡಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 04/2018, PÀ®A. 302, 201 eÉÆvÉ 34 L¦¹ ªÀÄvÀÄÛ PÀ®A. 3(1) (10), 3(2)(5) J¸ï.¹/J¸ï.n ¦J PÁAiÉÄÝ :- ¢£ÁAPÀ 21-01-2018 gÀAzÀÄ ¦üAiÀiÁ𢠣ÁUÀªÀiÁä UÀAqÀ ¨Á§Ä »gÉÆÃ¼É ªÀAiÀÄ: 50 ªÀµÀð, eÁw: J¸ï.¹ ªÀiÁ¢UÀ, ¸Á: E¯Áè¼À gÀªÀgÀÄ vÀ£Àß ªÀÄUÀ ºÀtªÀÄAvÀ@¸Àa£À EªÀ£ÀÄ ¢£ÁAPÀ 18-01-2018 jAzÀ ¢£ÁAPÀ 19-01-2018 gÀ gÁwæ ªÉüÉAiÀÄ 2300 UÀAmɬÄAzÀ £À¸ÀÄQ£À eÁªÀ 0400 UÀAmÉAiÀÄ ªÀÄzsÀåzÀ CªÀ¢üAiÀÄ°è PÁuÉAiÀiÁVgÀÄvÁÛ£É CAvÀ zÀÆgÀÄ ¤ÃrzÀÄÝ, £ÀAvÀgÀ ¢£ÁAPÀ 27-01-2018 gÀAzÀÄ Hj£À ®PÀëöät vÀAzÉ ²ªÀgÁªÀÄ ªÉÄPÁ¯É EªÀ£ÀÄ ªÀÄUÀ E¸Áä¬Ä¯ï EªÀ£À ªÉƨÉʯïUÉ PÀgÉ ªÀiÁr w½¹zÉÝ£ÉAzÀgÉ ªÀÄAoÁ¼Á UÁæªÀÄ ²ªÁgÀzÀ°è dUÀ£ÁßxÀ ¥Ánïï gÀªÀgÀ ºÉÆ®zÀ ¨Á«AiÀÄ°è MAzÀÄ ªÀÄÈvÀzÉúÀ ¤Ãj£À ªÉÄÃ¯É vÉïÁrwÛzÉ CAvÀ ªÀiÁ»w ¤ÃrzÀ ªÉÄÃgÉUÉ ¦üAiÀiÁð¢AiÀÄÄ vÀ£Àß ªÀÄUÀ E¸Áä¬Ä¯ï, UÀAqÀ ¨Á§Ä »gÉÆÃ¼É ºÁUÀÄ EvÀgÀgÀÄ ¸ÀzÀj ºÉÆ®PÉÌ ºÉÆÃV £ÉÆÃqÀ®Ä ¨Á«AiÀÄ ¤Ãj£À ªÉÄ¯É MAzÀÄ ªÀÄÈvÀ zÉúÀ ¨ÉÆÃgÀ¯ÁV vÉïÁqÀÄwÛzÀÄÝ, ªÉÄÊ ªÉÄÃ¯É ¤Ã° §tÚzÀ fãïì ¥ÁåAmï, PÁ®°è ¸ÁåAqÀ¯ï ZÉ¥Àà¯ï EgÀÄvÀÛªÉ, vÀ¯É¬ÄAzÀ ¸ÉÆAlzÀªÀgÉUÉ UÉÆÃt aî¢AzÀ ªÀÄÄaÑgÀÄvÀÛzÉ, »UÁV ¸ÀzÀj ªÀÄÈvÀ zÉúÀ vÀ£Àß ªÀÄUÀ£ÀzÉà ªÀÄÈvÀ zÉúÀªÉAzÀÄ UÀÄgÀÄw¸À®Ä gÁwæ ¸ÀªÀÄAiÀÄzÀ°è ¸ÁzsÀåªÁVgÀĪÀÅ¢®è, gÁwæ ¸ÀªÀÄAiÀÄ 1930 UÀAmÉUÉ oÁuÉUÉ ºÉÆÃV ªÀÄAoÁ¼À ²ªÁgÀzÀ dUÀ£ÁxÀ ¥Ánïï gÀªÀgÀ ºÉÆ®zÀ ¨Á«AiÀÄ°è MAzÀÄ zÉúÀªÀ£ÀÄß vÀ¯É¬ÄAzÀ ¸ÉÆAlzÀªÀgÉUÉ MAzÀÄ UÉÆÃt aîzÀ°è ªÀÄÄaÑ ¨Á«AiÀÄ°è ºÁQgÀÄvÁÛgÉ D zÉúÀªÀ£ÀÄß ¦üAiÀiÁð¢AiÀÄÄ vÀ£Àß ªÀÄUÀ£ÀzÉà EzÉ JAzÀÄ UÀÄgÀÄw¸À®Ä DUÀÄwÛ®è JAzÀÄ ªÀiÁ»w ¤ÃrzÀÄÝ, £ÀAvÀgÀ ¢£ÁAPÀ 28-01-2018 gÀAzÀÄ ªÀÄÈvÀ zÉúÀªÀ£ÀÄß ¦üAiÀiÁð¢AiÀÄ ¸ÀªÀÄPÀëªÀÄ ¥ÉưøÀgÀÄ ºÁUÀÆ vÀªÀÄÆäj£À PÉ® d£ÀgÀÄ ªÀÄÈvÀ zÉúÀ ªÉÄÃ¯É vÉUÀzÀÄ £ÉÆÃqÀ®Ä ªÀÄÈvÀ zÉúÀ ¥ÀÆwð G©â ºÉÆVzÀÄÝ, ªÉÄÊ ªÉÄð£À ZÀªÀÄð QvÀÄÛ ºÉÆVgÀÄvÀÛzÉ, ªÉÄÊ ªÉÄð£À CAV ©Ã½ §tÚzÀ M¼ÀUÉ PÀ¥ÀÄà §tÚzÀ ZËPÀr G¼Àî CAV, ¤Ã° f£ïì ¥ÁåAmï, PÉÊAiÀÄ°è ªÀÄt PÀnÖ£À ¸ÀgÀ, PÉÆÃgÀ¼À°è PÁ² zÁgÀ, ¸ÉÆAlzÀ°è£À GqÀzÁgÀ ªÀÄvÀÄÛ CªÀ£À eÉé£À°ègÀĪÀ ¥ÁPÉÃmï £ÉÆÃqÀ®Ä CzÀgÀ°è ªÀÄUÀ ºÀtªÀÄAvÀ£À ¨sÁªÀavÀæ ªÀÄvÀÄÛ ¦üAiÀiÁ𢠺ÁUÀÆ ¦üAiÀiÁð¢AiÀÄ UÀAqÀ E§âgÀ ¨sÁªÀavÀæUÀ½zÀݪÀÅ ªÀÄvÀÄÛ ªÀÄUÀ£À ªÀÄÄR PÀÆzÀ®Ä zÉúÀªÀ£ÀÄß £ÉÆÃr ªÀÄÈvÀ zÉúÀªÀ£ÀÄß vÀ£Àß ªÀÄUÀ ºÀtªÀÄAvÀ @ ¸ÀaãÀzÉ EgÀÄvÀÛzÉ CAvÀ UÀÄgÀÄw¹zÀÄÝ, ¦üAiÀiÁð¢AiÀĪÀgÀ ªÀÄUÀ ºÀtªÀÄAvÀ@¸Àa£ï EªÀ£ÀÄ vÀªÀÄÆägÀ ºÀtªÀÄAvÀ vÀAzÉ ¨Á§Ä Vgï EªÀ£À ªÀÄUÀ¼ÁzÀ C²é¤ CªÀ¼ÉÆA¢UÉ ¦æÃw ªÀiÁqÀÄwÛzÁÝ£É CAvÀ ¸ÀA±ÀAiÀÄ ¥ÀlÄÖPÉÆAqÀÄ CªÀ¼À vÀAzÉAiÀiÁzÀ 1) ºÀtªÀÄAvÀ vÀAzÉ ¨Á§Ä Vgï ªÀÄvÀÄÛ CªÀ£À vÀªÀÄäA¢gÁzÀ 2) CvÀįï vÀAzÉ ¨Á§Ä Vgï, 3) ¤w£ï vÀAzÉ ¨Á§Ä Vgï EªÀgÀÄ PÀÆrPÉÆAqÀÄ PÉÆ¯É ªÀiÁrgÀÄvÁÛgÉ ªÀÄvÀÄÛ CªÀgÀÄ vÁªÀÅ PÉÆ¯É ªÀiÁrzÀ «µÀAiÀÄ ªÀÄÄaÑqÀĪÀ GzÉÝñÀ¢AzÀ ªÀÄÄR¢AzÀ ¸ÉÆAlzÀªÀgÉUÉ UÉÆÃt aî ºÁQ ªÀÄAoÁ¼À UÁæªÀÄ ²ªÁgÀzÀ dUÀ£ÁßxÀ ¥Ánïï gÀªÀgÀ ºÉÆ®zÀ°è£À ¨Á«AiÀÄ°è ºÁQgÀÄvÁÛgÉ, ¦üAiÀiÁð¢AiÀĪÀgÀÄ ªÀiÁ¢UÀ eÁwUÉ ¸ÉÃjzÀ zÀ°vÀ ¸ÀªÀÄÄzÁAiÀÄzÀªÀgÀÄ JAzÀÄ UÉÆwÛzÀgÀÆ ¸ÀºÀ ªÉÄïÁÓwAiÀĪÀgÁzÀ ºÀtªÀÄAvÀ VÃgï, CvÀįï VÃgï ªÀÄvÀÄÛ ¤Ãw£ï VÃgï, EªÀgÀÄ ¦üAiÀiÁð¢AiÀĪÀgÀ ªÀÄUÀ£À PÉÆÃ¯É ªÀiÁr zÀ°ÃvÀgÀ ªÉÄÃ¯É zËdð£Àå ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 6:48 PM No comments: Yadgir District Reported Crimes Updated on 29-01-2018 Yadgir District Reported Crimes ಯಾದಗಿರಿ ಪೊಲೀಸ್ ಠಾಣೆ ಗುನ್ನೆ ನಂ. 10/2018 ಕಲಂ: 302, 201 ಐಪಿಸಿ;- ದಿನಾಂಕ 28/01/2018 ರಂದು 10 ಎಎಂಕ್ಕೆ ಶ್ರೀ ಹಣಮಂತ್ರಾಯ ತಂ.ಮಲ್ಲಪ್ಪ ಮುಂಡರಿಗಿ ವಃ37 ಜಾಃ ಕಬ್ಬಲಿಗ ಉಃ ಒಕ್ಕಲುತನ ಸಾಃ ಬೋವಿವಾಡ ಯಾದಗಿರಿ ಇವರು ಠಾಣೆಗೆ ಬಂದು ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವೆನೆಂದರೆ ಮೇಲಿನ ವಿಳಾಸದವನಿದ್ದು ಒಕ್ಕಲುತನ ಮಾಡಿಕೊಂಡು ಇರುತ್ತೇನೆ. ನಿನ್ನೆ ದಿನಾಂಕ.27/01/2018 ರಂದು ನಮ್ಮ ಅಳಿಯ ಭಿಮು ತಂ. ಬಸವರಾಜ ತಳವಾರ ಈತನು ರಾತ್ರಿ 9 ಗಂಟೆವರೆಗೆ ನಮ್ಮ ಮನೆಯಲ್ಲಿದ್ದು ನಂತರ ಆತನು ತಮ್ಮ ಮನೆಗೆ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು ಇರುತ್ತದೆ.ಹೀಗಿದ್ದು ಇಂದು ದಿನಾಂಕ; 28.01.2018 ರಂದು ಬೆಳೆಗ್ಗೆ 8-30 ಗಂಟೆ ಸೂಮಾರಿಗೆ ನಾನು ಗಾಂಧಿಚೌಕದಲ್ಲಿ ಇದ್ದಾಗ ಶಶಾಂಕ ನಾಲಡಗಿ ಇವರು ಬಂದು ನನಗೆ ತಿಳಿಸಿದ್ದನೆಂದರೆ, ಇಂದು ದಿನಾಂಕ 28/01/2018 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಾನು ಹತ್ತಿಕುಣಿ ಕ್ರಾಸನಲ್ಲಿದ್ದಾಗ ಕಿಶನರಾವ ಚವ್ಹಾಣ ಇವರ ಕಟ್ಟಿಗೆ ಅಡ್ಡದ ಮುಂದೆ ಯಾವುದೋ ಒಂದು ಹೆಣ ಬಿದ್ದಿರುತ್ತದೆ ಅಂತಾ ಜನರು ಅಂದಾಡುತ್ತಿರುವುನ್ನು ಕೇಳಿ ನಾನು ಅಲ್ಲಿಗೆ ಹೋಗಿ ನೋಡಲು ನಿಮ್ಮ ಅಳಿಯ ಭೀಮು ತಳವಾರ ಈತನ ಶವ ಇದ್ದು ಯಾರೋ ಈತನಿಗೆ ಕೊಲೆ ಮಾಡಿ ಹಾಕಿರುತ್ತಾರೆ. ಅಂತಾ ತಿಳಿಸಿದಾಗ ನಾನು ಮತ್ತು ಶಶಾಂಕ ಹಾಗೂ ಭಿಮು ಈತನ ತಮ್ಮ ಸುರೇಶ ಹಾಗೂ ಈತರರು ಕೂಡಿಕೊಂಡು ಹೊಗಿ ನೋಡಲು ಹತ್ತಿಕುಣಿ ರಸ್ತೆಯ ಕಿಶನರಾವ ತಂದೆ ನಾಗಪ್ಪ ಚವ್ಹಾಣ ಇವರ ಕಟ್ಟಿಗೆ ಅಡ್ಡದ ಮುಂದೆ ಇರುವ ಖುಲ್ಲಾ ಜಾಗೆಯ ಕಂಟಿಯಲ್ಲಿ ಬಿದ್ದಿದ್ದು ನೋಡಲಾಗಿ ನಮ್ಮ ಅಳಿಯ ಭಿಮು ತಂ. ಬಸವರಾಜ ತಳವಾರ ವಃ 19 ಈತನ ಶವವಿದ್ದು, ನೋಡಲು ಸದರಿ ಮೃತ ಭಿಮು ಈತನ ತಲೆಯೆ ಎಡಭಾಗ, ಹಣೆಯೆ ಹುಬ್ಬಿನ ಹತ್ತಿರ ಹಾಗೂ ಕುತ್ತಿಗೆಗೆ ಯಾವುದೋ ಆಯುಧದಿಂದ ಹೊಡೆದ ಭಾರಿ ರಕ್ತ ಗಾಯವಾಗಿದ್ದು ಮತ್ತು ಬಲಕಣ್ಣಿಗೆ ಗುಪ್ತಗಾಯ ಎಡಕಣ್ಣಿಗೆ ಬಾಯಿಗೆ, ಗದ್ದಕ್ಕೆ ರಕ್ತಗಾಯವಾಗಿದ್ದು ಅಲ್ಲದೇ ಹೊಟ್ಟೆ, ಎದೆ, ಸೊಂಟ ಕೈಗಳಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ನನ್ನ ಅಳಿಯ ಭೀಮು ಈತನಿಗೆ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ, ಯಾವುದೋ ಆಯುಧಗಳಿಂದ ಎಲ್ಲಿಯೋ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಕಿಶನರಾವ ಕಟ್ಟಿಗೆ ಅಡ್ಡೆಯ ಮುಂದೆ ಇರುವ ಕಂಟಿಯಲ್ಲಿ ಬಿಸಾಕಿದ್ದು ಇರುತ್ತದೆ ಸದರಿ ಘಟನೆಯು ದಿನಾಂಕ.27/01/2018 ರ ರಾತ್ರಿ 9-30 ಗಂಟೆಯಿಂದ ಇಂದು ದಿನಾಂಕ.28/01/2018 ರಂದು ಬೆಳಗ್ಗೆ 8 ಗಂಟೆಯ ಮದ್ಯದ ಅವಧಿಯಲ್ಲಿ ಜರುಗಿದ್ದು ಇರುತ್ತದೆ ನಮ್ಮ ಅಳಿಯನ ಕೊಲೆ ಮಾಡಿದ ಆರೋಪಿತರಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೆಕು ಅಂತಾ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.10/2018 ಕಲಂ.302, 201 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 23/2018 ಕಲಂ 323, 324,504, 506 ಸಂಗಡ 34 ಐಪಿಸಿ;- ದಿನಾಂಕ 28-01-2018 ರಂದು 4 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಹಣಮಂತ ತಂದೆ ಮಲ್ಲಯ್ಯಾ ಡೊಂಗೇರ ವಯಾ:55 ಉ: ಒಕ್ಕಲುತನ ಜಾ: ಕಬ್ಬೇರ ಸಾ: ಕೌಳೂರು ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧೀ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ನನಗೆ 6 ಗಂಡು ಜನ ಮಕ್ಕಳಿದ್ದು ನನಗಿದ್ದ ಒಟ್ಟು 33 ಎಕರೇ ಹೊಲದಲ್ಲಿ ಎಲ್ಲರಿಗೂ ಸಮನಾಗಿ ಉಪಭೋಗ ಮಾಡಲಿಕ್ಕೆ ಮಾಡಿಕೊಟ್ಟಿರುತ್ತೆನೆ. ನಾನು ಕೇವಲ 3 ಎಕರೇ ಹೋಲವನ್ನು ಸಾಗುವಳಿ ಮಾಡಿಕೊಂಡು ಉಪಜೀವಿಸುತ್ತೆನೆ. ನಾವು ಹೋಲ ಸಾಗುವಳಿ ಮಾಡುವ ಸಮಯದಲ್ಲಿ ಸಾಲ ಮಾಡಿಕೊಂಡಿದ್ದು ನಮಗೆ ಮರಳಿ ಸಾಲ ತಿರಿಸಲಾಗದ ಸಂಬಂಧವಾಗಿ ನಮ್ಮ 5 ಎಕರೇ ಹೋಲ ನಮಗೆ ಸಾಲ ಕೊಟ್ಟವರಿಗೆ ಮುದ್ದತ್ತು ರಜಿಸ್ಟ್ರೇಷನ್ ಮಾಡಿಸಿ ಕೊಟ್ಟಿರುತ್ತೆ್ತೆನೆ. ನನ್ನ ಮಕ್ಕಳಿಗೆ ಸಾಲ ತಿರಿಸಲು ಹಣ ಕೇಳಿದಾಗ ಅವರು ನನ್ನ ಜೋತೆ ತಕರಾರು ಮಾಡಿಕೊಳ್ಳುತ್ತಾ ಬಂದು ಅದೇ ವಿಷಯದಲ್ಲಿ ಈ ಮೊದಲು ದಿನಾಂಕ 08-01-2018 ರಂದು ನನ್ನ ಮಕ್ಕಳಾದ ಮಲ್ಲಯ್ಯಾ, ಗಂಗಪ್ಪಾ ಹಾಗೂ ಮರಲಿಂಗ ಹಾಗೂ ನನ್ನ ಹೆಂಡತಿಯಾದ ಗಂಗಮ್ಮಾ 4 ಜನರು ಹೊಡೆಬಡಿ ಮಾಡಿದ್ದರಿಂದ ನಾನು ದಿನಾಂಕ 09-01-2018 ರಂದು ಠಾಣೆಗೆ ಬಂದು ಅವರ ಮೇಲೆ ಕೇಸು ಮಾಡಿಸಿರುತ್ತೆನೆ. ನಾನು ನಮ್ಮ ಗ್ರಾಮದ ಹಣಮಂತಿ ಗುಡುಸಲೇರ ಇವರ ಗದ್ದೆಯನ್ನು ಪಾಲಿಗೆ ಮಾಡಿದ್ದು ಸದರಿ ಹೋಲ ನಮ್ಮ ಹೋಲದ ಪಕ್ಕದಲ್ಲಿಯೇ ಇದ್ದುದ್ದರಿಂದ ಆ ಗದ್ದೆಗೆ ನಮ್ಮ ಹೋಲದಿಂದಲೇ ನೀರು ಬಿಡುತ್ತಾ ಬಂದಿರುತ್ತೆನೆ. ಅದರಂತೆ ನಿನ್ನೆ ದಿನಾಂಕ 27-01-2018 ರಂದು ನಮ್ಮ ಹೋಲದಿಂದಸದರಿ ಬಸವರಾಜ ಇವರ ಹೋಲಕ್ಕೆ ನೀರು ಬೀಡಬೇಕೆಂದು ಮೋಟಾರ ಚಾಲು ಮಾಡುತ್ತಿರುವಾಗ ನನ್ನ ಮಗ ಮಲ್ಲಯ್ಯಾ ಇತನು ಬಂದು ಮಗನೇ ಮೋಟಾರ ಚಾಲು ಮಾಡಿದರೇ ನಿನಗೆ ಒಂದು ಗತಿ ಕಾಣೀಸುತ್ತೆನೆ ಅಂತಾ ಹೊಲಸು ಶಬ್ದಗಳಿಂದ ಬೈದು ಹೋಗಿದ್ದನು. ಹೀಗಿದ್ದು ನಿನ್ನೆ ದಿನಾಂಕ 27-01-2018 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ಹಣಮಂತ ತಂದೆ ಭೀಮಪ್ಪಾ ಗಡ್ಡೆಸೂಗೂರ, ರಾಜಪ್ಪಾ ತಂದೆ ಭೀಮಶೆಪ್ಪಾ ಸೂಗೂರ ಶಿವನೂರು ಎಲ್ಲರೂ ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತಿದ್ದೆವು. ಅದೇ ವೇಳೆಗೆ ನನ್ನ ಮಕ್ಕಳಾದ ಮಲ್ಲಯ್ಯಾ ಮತ್ತು ಗಂಗಪ್ಪಾ ಹಾಗೂ ನಮ್ಮ ಗ್ರಾಮದ ಮೋನಪ್ಪಾ ತಂದೆ ಹಣಮಂತ ಮಡಿವಾಳ ಮತ್ತು ಮಡಿವಾಳಪ್ಪಾ ತಂದೆ ಹಣಮಂತ ಮಡಿವಾಳ 4 ಜನರು ನಮ್ಮ ಮನೆಯ ಹತ್ತಿರ ಬಂದವರೇ ಅವರಲ್ಲಿ ನನ್ನ ಮಗ ಮಲ್ಲಯ್ಯಾ ಇತನು ಭೋಸಡಿ ಮಗನೇ ನೀನು ಬೇರೆ ಯಾವುದೋ ನಮ್ಮ ಹೊಲದ ನೀರು ಬಿಡುತ್ತಿ ಮೊದಲೇ ನಮ್ಮ ಹೋಲದ ಬೇಳೆಗಳಿಗೆ ನೀರಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯಹತ್ತಿದನು. ಆಗ ನಾನು ಈ ಮೊದಲಿ ನಿಂದಲೂ ಪಾಲಿಗೆ ಮಾಡಿದ ಆ ಹೊಲಕ್ಕೆ ನಮ್ಮ ಹೊಲದಿಂದಲೇ ನೀರು ಬಿಡುತ್ತಾ ಬಂದಿದ್ದೆನೆ ಅಂತಾ ಅವನಿಗೆ ತಿಳಿಸಿ ಹೇಳುತ್ತಿದ್ದಾಗ ರಂಡಿ ಮಗನೇ ಮತ್ತೆ ಎದರು ಮಾತಾಡುತ್ತಿ ನಿನ್ನ ಇನ್ನೂ ಸೊಕ್ಕು ಮುರಿದಿಲ್ಲಾ ಮತ್ತು ಈ ಮೊದಲೇ ಸುಮ್ಮನೇ ನಮ್ಮ ಮೇಲೆ ಕೇಸು ಮಾಡಿಸಿದ್ದಿ ಅಂತಾ ಅಂದವನೇ ಅಲ್ಲಿಯೇ ಬಿದ್ದ ಒಂದು ಕಟ್ಟಿಗೆ ಬಡಿಗೆ ಎತ್ತಿಕೊಂಡು ನನ್ನ ಬಲಪಕ್ಕೆಗೆ ಮತ್ತು ತಲೆಯ ಮೇಲೆ ಹೊಡೆದು ಗುಪ್ತಗಾಯ ಗೊಳಿಸಿದನು. ಇನ್ನೊಬ್ಬ ಮಗ ಗಂಗಪ್ಪಾ ಇತನು ಕೈಮುಷ್ಟಿಮಾಡಿ ಹೊಟ್ಟೆಗೆ ಗುದ್ದಿದನು. ಮತ್ತು ಮೋನಪ್ಪಾ ತಂದೆ ಹಣಮಂತ ಮಡಿವಾಳ ಮತ್ತು ಮಡಿವಾಳಪ್ಪಾ ತಂದೆ ಹಣಮಂತ ಮಡಿವಾಳ ಇಬ್ಬರೂ ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದರು. ಮತ್ತು ನೆಲದ ಮೇಲೆ ದರ ದರನೇ ಎಳೆದಾಡಿದರು. ಆಗ ಅಲ್ಲಿಯೇ ಇದ್ದ ಹಣಮಂತ ತಂದೆ ಭೀಮಪ್ಪಾ ಗಡ್ಡೆಸೂಗೂರ, ರಾಜಪ್ಪಾ ತಂದೆ ಭೀಮಶೆಪ್ಪಾ ಸೂಗೂರ ಶಿವನೂರು ಇವರು ಜಗಳಾ ಬಿಡಿಸಿರುತ್ತಾರೆ. ಆಗ ಅವರು ಮತ್ತೆ ನಮ್ಮ ಮೇಲೆ ಕೇಸು ಮಾಡಿ ಇನ್ನೊಮ್ಮೆ ನಮ್ಮ ಕೈಯಲ್ಲಿ ಸೀಗು ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದರು. ನಂತರ ನಾನು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆನೆ. ಈ ರೀತಿಯಾಗಿ ನನಗೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆಬಡಿ ಮಾಡಿ ಜೀವದ ಭಯ ಹಾಕಿದ 4 ಜನರ ವಿರುದ್ದ ಕಾನೂನು ಪ್ರಕಾರ ಕೈಗೊಳ್ಳಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿದೆ. ನನಗೆ ಹೊಡೆಬಡಿ ಮಾಡಿದ ಬಗ್ಗೆ ನಾನು ವಿಚಾರ ಮಾಡಿ ತಡವಾಗಿ ತಡವಾಗಿ ಠಾಣೆಗೆ ಬಂದಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 23/2018 ಕಲಂ 323, 324, 504, 506 ಸಂ: 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 07/2018 ಕಲಂ: 379 ಐಪಿಸಿ ;- ದಿನಾಂಕ: 28/01/2018 ರಂದು 3-30 ಪಿಎಮ್ ಕ್ಕೆ ಶ್ರೀ ಕಾಳಪ್ಪ ಎಮ್. ಬಡಿಗೇರ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟಿಪ್ಪರ ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಈ ದಿವಸ ದಿನಾಂಕ: 28/01/2018 ರಂದು ನಾನು ಪೆಟ್ರೋಲಿಂಗ ಕುರಿತು ಸಿಬ್ಬಂದಿಯವರಾದ ಶ್ರೀ ಪ್ರಕಾಶ ಹೆಚ್.ಸಿ 18 ಮತ್ತು ಶಿವಪುತ್ರ ಹೆಚ್.ಸಿ 82 ರವರೊಂದಿಗೆ ಹೊರಟು ಹಾಲಗೇರಾ, ಗಡ್ಡೆಸೂಗೂರು ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಹುಲಕಲ್ ಹತ್ತಿರ ಹೋಗುತ್ತಿದ್ದಾಗ ಬಾತ್ಮಿದಾರರಿಂದ ಕೆಲವರು ಐಕೂರು ಗ್ರಾಮದ ಕೃಷ್ಣಾ ನದಿ ದಡದಿಂದ ಟಿಪ್ಪರಗಳಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ಮೇನ ರೋಡ ಮುಖಾಂತರ ಯಾದಗಿರಿಗೆ ಸಾಗಿಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ನಾನು ವಡಗೇರಾ ಕ್ರಾಸಗೆ ಭೇಟಿ ನೀಡಿದಾಗ ಸಮಯ ಸುಮಾರು 3 ಪಿಎಮ್ ಆಗಿದ್ದು, ಖಾನಾಪೂರ ಮೇನ ರೋಡ ಕಡೆಯಿಂದ ಒಂದು ಟಿಪ್ಪರ ಮರಳು ತುಂಬಿಕೊಂಡು ಬರುತ್ತಿರುವುದನ್ನು, ನೋಡಿ ನಾವು ಹೋಗಿ ಟಿಪ್ಪರನ್ನು ನಿಲ್ಲಿಸಿದಾಗ ಅದರ ಚಾಲಕನು ಟಿಪ್ಪರ ನಿಲ್ಲಿಸಿದ್ದು, ಟಿಪ್ಪರ ನಂಬರ ನೋಡಲಾಗಿ ಕೆಎ 34 ಬಿ 1519 ಇದ್ದು, ಸದರಿ ಟಿಪ್ಪರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಘುಪತಿ ತಂದೆ ಶರಣಪ್ಪ ಸಾ:ಗೌಡಗೇರಾ ಎಂದು ಹೇಳಿದ್ದು, ಸದರಿಯವನಿಗೆ ಮರಳು ಸಾಗಾಣಿಕೆಯ ಪರವಾನಿಗೆ/ರಾಯಲ್ಟಿ ಕೇಳಿದಾಗ ತನ್ನ ಹತ್ತಿರ ಯಾವುದೇ ಪರವಾನಿಗೆ/ರಾಯಲ್ಟಿ ಇರುವುದಿಲ್ಲವೆಂದು ಹೇಳಿದನು. ಟಿಪ್ಪರನ್ನು ಜಪ್ತಿ ಮಾಡಬೇಕು ಠಾಣೆಗೆ ಚಲಾಯಿಸಿಕೊಂಡು ನಡೆ ಅಂತಾ ಹೇಳಿದಾಗ ಅವನು ಟಿಪ್ಪರ ಚಲಾಯಿಸಲು ಹತ್ತುವವನಂತೆ ನಟನೆ ಮಾಡಿ ಅಲ್ಲಿಂದ ಓಡಿ ಹೋದನು. ನಾವು ಬೆನ್ನಹತ್ತಿದರು ಸಿಗಲಿಲ್ಲ. ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದು, ಇದರ ಚಾಲಕ ಮತ್ತು ಮಾಲಿಕ ಅಕ್ರಮವಾಗಿ ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸಿದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ನಿಲ್ಲಿಸಿದಾಗ ಟಿಪ್ಪರ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 07/2018 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 13/2018 ಕಲಂ 87 ಕೆ.ಪಿ.ಆ್ಯಕ್ಟ್;- ದಿನಾಂಕ: 28/01/2018 ರಂದು 5-30 ಪಿಎಮ್ ಕ್ಕೆ ಸರಕಾರಿ ತಪರ್ೆ ಪಿರ್ಯಾದಿದಾರರಾದ ತಿಪ್ಪಣ್ಣ ಪಿ.ಎಸ್.ಐ ಭೀ.ಗುಡಿ ಠಾಣೆ ರವರು ಠಾಣೆಗೆ ಹಾಜರಾಗಿ 5 ಜನ ಆರೋಪಿ, ಜಪ್ತಿಪಂಚನಾಮೆಯೊಂದಿಗೆ ಒಂದು ವರದಿ ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ 28/01/2018 ರಂದು 4 ಪಿಎಮ್ ಕ್ಕೆ ಹಾಲಭಾವಿ ಸೀಮಾಂತರದ ಕೆನಾಲ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲಿ ಕೆಲವು ಜನ ದುಂಡಾಗಿ ನಿಂತು ಮದ್ಯದಲ್ಲಿ ಹುಂಜಗಳಿಗೆ ಪಂಜೆ ಹಚ್ಚಿ ನಿನ್ನ ಹುಂಜ ಗೆದ್ದರೆ 200 ರೂಪಾಯಿ, ನನ್ನ ಹುಂಜ ಗೆದ್ದರೆ 400 ರೂಪಾಯಿ ಕೊಡಬೇಕು ಅಂತಾ ಅವರವರಲ್ಲಿಯೇ ಮಾತನಾಡುತ್ತಾ ಹುಂಜದ ಪಂಜೆದ ಮುಖಾಂತರ ಜೂಜಾಟ ಆಡುತ್ತಿರುವಾಗ ಪಿ.ಎಸ್.ಐ ಸಾಹೇಬರು ಸಿಪಿಐ ಸಾಹೇಬರ ನೇತೃತ್ವದಲ್ಲಿ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ 2100/- ರೂ 3 ಹುಂಜಗಳನ್ನು ಜಪ್ತಿ ಪಂಚನಾಮೆಯ ಮೂಲಕ 4-15 ಪಿಎಮ್ ದಿಂದ 5-15 ಪಿಎಮ್ ದವರೆಗೆ ಕೈಕೊಂಡು 5-45 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ನೀಡಿ ಸೂಕ್ತ ಕ್ರಮ ಕೈಕೊಳ್ಳುವಂತೆ ಆದೇಶಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 6-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 13/2018 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Karnataka Crisis | Governor | BJP Government | MLA | Congress | JDS | ಸರಿಯೋ, ತಪ್ಪೋ: ಸಂದೇಹ ಹಲವು, ಪರಿಹಾರ ಕೆಲವು... ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಸರಿಯೋ, ತಪ್ಪೋ: ಸಂದೇಹ ಹಲವು, ಪರಿಹಾರ ಕೆಲವು... (Karnataka Crisis | Governor | BJP Government | MLA | Congress | JDS) Feedback Print ಸರಿಯೋ, ತಪ್ಪೋ: ಸಂದೇಹ ಹಲವು, ಪರಿಹಾರ ಕೆಲವು... ಅವಿನಾಶ್ ಬಿ. ವಿಶ್ವಾಸಮತ ಸಾಬೀತು ಮಾಡಿದ ಸಂದರ್ಭ ಸೋಮವಾರ ವಿಧಾನಸೌಧವು ಹತ್ತು ಹಲವು ವಿಪರೀತಗಳಿಗೆ ಸಾಕ್ಷಿಯಾಯಿತು. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಓದುಗರಲ್ಲಿ ಸಂದೇಹಗಳಿರಬಹುದು. ಅವುಗಳಲ್ಲಿ ಒಂದಿಷ್ಟು ಸಂದೇಹಗಳಿಗೆ ಪರಿಹಾರ ನೀಡುವ ಯತ್ನ ಇಲ್ಲಿದೆ. ಕೇಂದ್ರದ, ರಾಜ್ಯಪಾಲರ ಮುಂದಿರುವ ಸಾಧ್ಯಾಸಾಧ್ಯತೆಗಳು ಏನು? ಕಾನೂನಿಗೆ ಸಂಬಂಧಿಸಿದಂತೆ ರಂಗೋಲಿ ಕೆಳಗೆ ತೂರುವ ಅವಕಾಶಗಳನ್ನು ಮತ್ತಷ್ಟು ಸಾಧ್ಯತೆಯೊಂದಿಗೆ ಬಳಸಿಕೊಳ್ಳದೇ ಹೋದರೆ, ಅಂದಾಜು ಈ ಕೆಳಗಿನ ಐದು ಆಯ್ಕೆಗಳಿರುತ್ತವೆ. 1. ವಿಶ್ವಾಸಮತ ಗೆದ್ದಿದ್ದು ಎಂಬುದು ಖಚಿತವಾದರೆ, ಬೇರೇನೂ ಅಡೆತಡೆಗಳಿಲ್ಲದಿದ್ದರೆ ಕನಿಷ್ಠ ಆರು ತಿಂಗಳು ತೊಂದರೆಯಿಲ್ಲದೆ ಸರಕಾರ ಮುಂದುವರಿಕೆ 2. ರಾಜ್ಯಪಾಲರ ವರದಿಗೆ ಮನ್ನಣೆ ನೀಡಿ ಅಸೆಂಬ್ಲಿ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ, ಹೊಸ ಚುನಾವಣೆಗೆ ಸಿದ್ಧತೆ. ಬಿಜೆಪಿಯು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯೂ ಇದೆ. 3. ಅಸೆಂಬ್ಲಿಯನ್ನು ಅಮಾನತಿನಲ್ಲಿರಿಸಿ (ಸಸ್ಪೆಂಡೆಡ್ ಅನಿಮೇಶನ್) ನಂತರ ರಾಷ್ಟ್ರಪತಿ ಆಳ್ವಿಕೆ ಹೇರಿ, ಬದಲಿ ಸರಕಾರ ಸಾಧ್ಯಾಸಾಧ್ಯತೆ ಬಗ್ಗೆ ಚಿಂತನೆ. 4. ಕೇಂದ್ರಕ್ಕೆ ಕಾದು ನೋಡುವ ಕೆಲಸ, ಸದ್ಯ ಹೀಗೇ ಇರಲಿ, ಇನ್ನಷ್ಟು ದಿನದ ಬಳಿಕ ನೋಡೋಣ ಅನ್ನುವ ನಿರ್ಧಾರ. 5. ಹೈಕೋರ್ಟಿನಲ್ಲಿರುವ ಕೇಸು ತೀರ್ಮಾನವಾಗಿ ಅನರ್ಹತೆಯೇನಾದರೂ ರದ್ದಾದರೆ, ರಾಜ್ಯಪಾಲರು ಮತ್ತೊಮ್ಮೆ ಬಹುಮತ ಸಾಬೀತುಪಡಿಸಲು ಕೇಳಲೂಬಹುದು. ವಿಶ್ವಾಸಮತ ಯಾಚನೆ ವೇಳೆ ವಿಧಾನ ಪರಿಷತ್ ಸದಸ್ಯರು ಸದನದೊಳಗೆ ಇರಬಹುದೇ? ಇರುವಂತಿಲ್ಲ, ಆದರೆ ಸೋಮವಾರ ಕಲಾಪದಲ್ಲಿ ಭಾಗವಹಿಸಿದವರು ಬರೇ ಸದಸ್ಯರಲ್ಲ, ಅವರು ಸರಕಾರದ ಭಾಗವಾಗಿರುವ ಸಚಿವರು (ಸೋಮಣ್ಣ, ಜನಾರ್ದನ ರೆಡ್ಡಿ, ವಿ.ಎಸ್.ಆಚಾರ್ಯ ಮತ್ತು ವಿಜಯಶಂಕರ್). ತಮ್ಮ ಸರಕಾರದ ಏಳುಬೀಳಿನ ಕ್ಷಣದಲ್ಲಿ ಅವರು ಮೂಕ ಪ್ರೇಕ್ಷಕರು ಮಾತ್ರ ಆಗಿರಬೇಕು, ಮತದಾನ ಮಾಡುವಂತಿಲ್ಲ ಎಂಬ ಅವಕಾಶವೂ ಇದೆ. ಬಿಜೆಪಿ ನಮ್ಮ ಬಳಿ 106 ಮಂದಿ ಇದ್ದಾರೆ ಎನ್ನುತ್ತಿದೆ. ಪ್ರತಿಪಕ್ಷಗಳು 120 ಮಂದಿ ಶಾಸಕರು ರಾಜ್ಯಪಾಲರೆದುರು ಹೋಗಿದ್ದೇವೆ ಎನ್ನುತ್ತಿದ್ದಾರೆ, ಇದು ಹೇಗೆ? ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ ಬಿಜೆಪಿ ತನ್ನ ಬಳಿ 106 ಶಾಸಕರಿದ್ದಾರೆ, ಆ ಮತಗಳು ತಮಗೆ ಬಿದ್ದಿದೆ ಎಂದು ಹೇಳಿಕೊಂಡಿದೆ. ಒಟ್ಟು ಇರುವುದೇ 224 ಮಂದಿ. ಕಾಂಗ್ರೆಸ್ 73, ಜೆಡಿಎಸ್ 27 (ಮತ್ತೊಬ್ಬ ಶಾಸಕ ಅಶ್ವತ್ಥ್ ಬಿಜೆಪಿ ಪರ), ಸ್ವತಂತ್ರರು 6 ಹಾಗೂ 11 ಮಂದಿ ಬಿಜೆಪಿ ಬಂಡಾಯ ಶಾಸಕರು. ಆರಂಭದಲ್ಲಿ, ಒಟ್ಟು 14 ಬಿಜೆಪಿ ಶಾಸಕರು ಬೆಂಬಲ ವಾಪಸ್ ಪತ್ರವನ್ನು ರಾಜ್ಯಪಾಲರಿಗೆ ಕೊಟ್ಟಿದ್ದರು. ಅದರಲ್ಲಿ ರಾಜೂಗೌಡ ಮತ್ತು ದೊಡ್ಡನಗೌಡ ಪಾಟೀಲ ಬಿಜೆಪಿಯತ್ತ ಮರಳಿದ್ದಾರೆ. ಎಸ್.ಕೆ.ಬೆಳ್ಳುಬ್ಬಿ ಒಮ್ಮೆ ಬಿಜೆಪಿ ಕಡೆಗೆ ಪುನಃ ವಾಲಿ, ಮತ್ತೆ ವಾಪಸ್ ಹೋಗಿದ್ದಾರೆ. ಆ ಬಳಿಕ, ಬಿಜೆಪಿಯಿಂದ ಮಾನಪ್ಪ ವಜ್ಜಲ್, ಭಿನ್ನರ ಬಣ ಸೇರಿಕೊಂಡಿದ್ದಾರೆ. ಅಂದರೆ 14ರಲ್ಲಿ ಎರಡು ಎರಡು ಮೈನಸ್ ಆಗಿದೆ. ಹೀಗಾಗಿ 12 ಪ್ಲಸ್ ಮಾನಪ್ಪ ವಜ್ಜಲ್ ಸೇರಿದ್ರೆ 13. ಹೀಗಾದರೆ ಅವರ ಒಟ್ಟು ಬಲ 119. ಆದರೂ, ಬಿಜೆಪಿ 106 ಹೇಳಿಕೊಂಡಿರುವಾಗ, ಅಲ್ಲಿ ಉಳಿದಿರುವುದು 118 ಮಾತ್ರ! ಒಬ್ಬ ಎಲ್ಲಿಂದ ಸೇರ್ಪಡೆ ಎಂಬುದು ಯಕ್ಷಪ್ರಶ್ನೆ. ಬಹುಶಃ 14 ಮಂದಿಯ ಬೆಂಬಲ ವಾಪಸಾತಿ ಪತ್ರವನ್ನೇ ಮಾನದಂಡವಾಗಿ ಇಟ್ಟುಕೊಂಡಿರಬಹುದು. ರಾಜ್ಯಪಾಲರು ತಲೆಎಣಿಕೆ ಮೂಲಕ ಸರಕಾರದ ಮತ ನಿರ್ಧರಿಸಬಹುದೇ? ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಇಲ್ಲ. ಸರಕಾರದ ಬಲಾಬಲ ನಿರ್ಧಾರವಾಗುವುದು ಸದನದಲ್ಲೇ ಹೊರತು, ರಾಜಭವನದಲ್ಲಿ ಅಲ್ಲ. ರಾಜ್ಯಪಾಲರು ಇಷ್ಟು ಅವಸರವಾಗಿ ಕೇಂದ್ರಕ್ಕೆ 'ರಾಷ್ಟ್ರಪತಿ ಆಳ್ವಿಕೆ' ಶಿಫಾರಸು ಕಳುಹಿಸಬಹುದೇ? ಒಂದು ವಾದದ ಪ್ರಕಾರ, ಸದನದಲ್ಲಿ ಏನು ನಡೆಯಿತು ಎಂಬ ಕುರಿತು ಸಭಾಧ್ಯಕ್ಷರು ರಾಜ್ಯಪಾಲರಿಗೆ ವರದಿ ಸಲ್ಲಿಸಿದ ಬಳಿಕವಷ್ಟೇ, ಅದನ್ನು ಪರಿಶೀಲಿಸಿ ಅವರು ಕೇಂದ್ರಕ್ಕೆ ಶಿಫಾರಸು ಕಳುಹಿಸಬಹುದು. ಆದರೆ, ಕಲಾಪದ ವೇಳೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ತರಾತುರಿ ನಿರ್ಧಾರ ಕೈಗೊಳ್ಳಬೇಕಾಗಿರುವುದರಿಂದ ರಾಜ್ಯಪಾಲರು ಮಾಡಿದ್ದು ಸರಿ ಎಂಬುದು ಮತ್ತೊಂದು ವಾದ. ಪಕ್ಷಾಂತರ ನಿಷೇಧ ಕಾಯಿದೆಯ ಪ್ರಕಾರ, ವಿಶ್ವಾಸಮತದ ಸ್ವಲ್ಪವೇ ಮೊದಲು ಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸಬಹುದೇ? ಹಳೆಯ ಇತಿಹಾಸ ಕೆದಕಿದರೆ, ಈ ರೀತಿ ಅನರ್ಹಗೊಳಿಸಿದ ಪ್ರಕರಣಗಳು ಸಾಕಷ್ಟು ಬರುತ್ತವೆ. ಹೀಗಾಗಿ ಬಿಜೆಪಿ ಶಾಸಕರ ಅನರ್ಹತೆಯು ಸಿಂಧು ಎಂದೇ ಹೇಳಲಾಗುತ್ತದೆ. ಸರಿ, ಬಿಜೆಪಿಯು ತನ್ನ ಪಕ್ಷೀಯರಿಗೆ ನೋಟಿಸ್ ನೀಡಿ ಅನರ್ಹಗೊಳಿಸಿರಬಹುದು. ಆದರೆ, ಇಲ್ಲಿ ಪಕ್ಷೇತರರನ್ನು ಅನರ್ಹಗೊಳಿಸಿದ್ದು ಸರಿಯೇ? ಇದು ಸರಿಯಲ್ಲ, ಆದರೆ ಇದು ಸಾಧ್ಯ ಎನ್ನುತ್ತಿದೆ ಬಿಜೆಪಿ. ಸ್ಪಷ್ಟ ಚಿತ್ರಣ ದೊರೆಯುವುದಿಲ್ಲ. ಬಿಜೆಪಿ ನೀಡುವ ಸಮರ್ಥನೆ ಪ್ರಕಾರ, ಪಕ್ಷೇತರರು ಕೂಡ ಬಿಜೆಪಿ ಸರಕಾರದ ಭಾಗವಾಗಿದ್ದು, ಅವರು ಈಗಾಗಲೇ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ, ಬಿಜೆಪಿ ಸರಕಾರದ ಉಳಿವಿಗೆ ಪ್ರಯತ್ನಿಸಿರುವಾಗ, ಅವರೂ ನಮ್ಮವರೇ. ಹೀಗಾಗಿ ಅವರ ಶಾಸಕತ್ವವನ್ನೂ ಅನರ್ಹಗೊಳಿಸಬಹುದಾಗಿದೆ. ಯಾವುದೇ ಸ್ವತಂತ್ರ ಅಭ್ಯರ್ಥಿಯು ಯಾವುದೇ ಪಕ್ಷಕ್ಕೆ ಅಫಿಲಿಯೇಶನ್ ತೋರಿಸಿದರೆ, ಅವರ ಉದ್ದೇಶ ಪ್ರಕಟಿಸಿದರೆ, ಅವರು ಅನರ್ಹತೆಗೆ ಅರ್ಹರಾಗುತ್ತಾರೆ ಎಂಬುದು ರೂಲ್ ಬುಕ್‌ನಲ್ಲಿರೋ ನಿಯಮ. ಹಾಗೆಯೇ, ಈಗಿನ ಇಂಡಿಪೆಂಡೆಂಟ್ ಸದಸ್ಯರು ಎಲ್ಲ ರೀತಿಯಲ್ಲೂ ಬಿಜೆಪಿಗೆ ಅಫಿಲಿಯೇಟ್ ಆಗಿದ್ದಾರೆ. ಸ್ಪೀಕರ್‌ಗೆ ಪತ್ರಗಳನ್ನು ಕೊಟ್ಟಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗಿ ರುಜು ಹಾಕಿದ್ದಾರೆ ಎಂಬುದು ಬಿಜೆಪಿ ಸಮರ್ಥನೆ. ರಾಜ್ಯಪಾಲರು ಅಥವಾ ಕೇಂದ್ರವು ರಾಷ್ಟ್ರಪತಿ ಆಡಳಿತ ಹೇರಬಹುದೇ? ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬಹುದು ಮಾತ್ರ. ಕೇಂದ್ರ ಸಂಪುಟವು ಈ ಕುರಿತು ಸಭೆ ಸೇರಿ, ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ಸಲ್ಲಿಸುತ್ತದೆ. ರಾಷ್ಟ್ರಪತಿಯವರು ಈ ಶಿಫಾರಸಿಗೆ ಅಂಗೀಕಾರ ಹಾಕಿದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುತ್ತದೆ. ಈ ಪ್ರಕರಣದಲ್ಲಿ ತಾಂತ್ರಿಕವಾಗಿ ಬಿಜೆಪಿ ಸರಕಾರ ವಿಶ್ವಾಸಮತವನ್ನು ಧ್ವನಿಮತದಿಂದ ಗೆದ್ದಿದೆ. ಸರಕಾರವನ್ನು ಕೇಂದ್ರವು ವಜಾಗೊಳಿಸಬಹುದೇ? ಇದು ಈ ಪ್ರಕರಣದ ವಿಶೇಷತೆ. ವಿಶ್ವಾಸಮತ ಗೆದ್ದ ಸರಕಾರದ ವಜಾ ಕಷ್ಟ ಸಾಧ್ಯ. ಸ್ಪೀಕರ್ ನಿರ್ಣಯವು ಪ್ರಶ್ನಾತೀತವಾಗಿರುವುದರಿಂದ ಬೊಮ್ಮಾಯಿ ಪ್ರಕರಣದ ತೀರ್ಪಿನ ಬೆಂಬಲ ಬಿಜೆಪಿ ಕಡೆಗಿದೆ. ವಜಾಗೊಂಡರೆ ಬಿಜೆಪಿಯು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು. ಧ್ವನಿ ಮತ ಎಂಬುದು ಅಧಿಕೃತವಾಗಿ ಪರಿಗಣಿಸಲ್ಪಡುತ್ತದೆಯೇ? ಹೌದು. ಇದಕ್ಕೆ ಅಧಿಕೃತ ಮಾನ್ಯತೆ ಇದೆ. ಅನರ್ಹಗೊಳಿಸಲು, 7 ದಿನದ ಅವಕಾಶ ನೀಡಿ ನೋಟಿಸ್ ನೀಡಬೇಕಿತ್ತು ಎಂದಿದೆಯಲ್ಲಾ? 7 ದಿನ ಮುನ್ನ ನೋಟಿಸ್ ನೀಡಬೇಕು ಎಂಬುದು ನಿಜ. ಆ ಬಳಿಕವಷ್ಟೇ ಅನರ್ಹಗೊಳಿಸಬಹುದು ಎನ್ನಲಾಗುತ್ತದೆ, ಆದರೆ, ನೋಟಿಸ್‌ಗೆ ಉತ್ತರಿಸಲು '7 ದಿನಗಳ ಒಳಗೆ' ಎಂಬುದು ನಿಯಮದಲ್ಲಿರುವ ಅಂಶ. ಏಳು ದಿನಗಳ ಒಳಗೆ ಎಂದರೆ, ಒಂದು ದಿನವೂ ಆಗಬಹುದು, ಎರಡು ದಿನವೂ ಆಗಬಹುದು. ಹೀಗಾಗಿ ಭಾನುವಾರದೊಳಗೆ ಉತ್ತರಿಸುವಂತೆ ಭಿನ್ನರಿಗೆ ಬಿಜೆಪಿ ಕೇಳಿಕೊಂಡಿತ್ತು. ಪರಿಣಾಮವಾಗಿ ರಾಜು ಗೌಡ, ರೇಣುಕಾಚಾರ್ಯ, ದೊಡ್ಡನಗೌಡ ಪಾಟೀಲ ಇತ್ತ ಮರಳಿದ್ದಾರೆ. ಬಿಜೆಪಿ ಸೇಫ್ ಸೈಡ್‌ನಲ್ಲಿದೆ. ವಿಧಾನಸೌಧಕ್ಕೆ ಖಾಕಿ ದಿರಿಸಿನಲ್ಲಿ ಪೊಲೀಸರು ಬಂದದ್ದು ಸಮ್ಮತವೇ? ವಿಧಾನಸೌಧದೊಳಗೆ ಮಾರ್ಷಲ್‌ಗಳಿರುವಾಗ ಪೊಲೀಸರು ಸದನದೊಳಗೆ ಪ್ರವೇಶಿಸಿದ ಉದಾಹರಣೆಗಳಿಲ್ಲ. ಆದರೆ ಸಭಾಧ್ಯಕ್ಷರ ಆದೇಶದ ಪ್ರಕಾರ, ರಕ್ಷಣೆಗೋಸ್ಕರ ತಾವು ಅಲ್ಲಿಗೆ ಬಂದು, ಬಂದೋಬಸ್ತ್ ವ್ಯವಸ್ಥೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಪೊಲೀಸ್ ಆಯುಕ್ತ ಶಂಕರ್ ಬಿದರಿ. ಸಭಾಧ್ಯಕ್ಷರು ಶಾಸಕಾಂಗದ ಮುಖ್ಯಸ್ಥರಾಗಿರುವುದರಿಂದ ಅವರ ಆದೇಶಕ್ಕೆ ಬೆಲೆಯಿದೆ. ಕೇಂದ್ರವು ಸದ್ಯಕ್ಕೆ ಏನು ಮಾಡಬಹುದು? ಕೇಂದ್ರ ಸರಕಾರದ ಸಂಪುಟವು ಮಂಗಳವಾರ ಸಭೆ ಸೇರಿ, ರಾಜ್ಯಪಾಲರ ಶಿಫಾರಸಿನ ಬಗ್ಗೆ ತೀರ್ಮಾನಿಸುತ್ತದೆ. ಶಿಫಾರಸನ್ನು ಅಂಗೀಕರಿಸಲೇಬೇಕಿಲ್ಲ. ಇದರಿಂದಾಗುವ ರಾಜಕೀಯ ಪರಿಣಾಮಗಳ ಕುರಿತು ಸಭೆಯಲ್ಲಿ ಚರ್ಚೆಯಾಗಬಹುದು. ಮತ್ತೊಂದು ಸರಕಾರವನ್ನು ವಜಾಗೊಳಿಸಿದ ಕಾಂಗ್ರೆಸ್ ಎಂಬ ಅಪಕೀರ್ತಿ ಅಂಟಿಕೊಳ್ಳಬಹುದೆಂಬ ಭೀತಿಯೂ ಅದಕ್ಕಿದೆ. ಬಿಹಾರ (ರಾಜ್ಯಪಾಲರಾಗಿದ್ದವರು ಬೂಟಾ ಸಿಂಗ್) ಮತ್ತು ಗೋವಾ (ರಾಜ್ಯಪಾಲರಾಗಿದ್ದವರು ಸಯ್ಯದ್ ಸಿಬ್ತೆ ರಜಿ) ಪ್ರಕರಣಗಳಲ್ಲಿ ಸುಪ್ರೀಂಕೋರ್ಟಿನಿಂದ ತಪರಾಕಿ ಹಾಕಿಸಿಕೊಂಡಿದ್ದು ಕೂಡ ನೆನಪಾಗಬಹುದು. ಮುಂದಿನ ಹೆಜ್ಜೆ ಎಚ್ಚರಿಕೆಯಿಂದ ಇಡಬಹುದು. ಮತ್ತೆ, ಮಾರ್ಷಲ್‌ಗಳಿಗೆ ಹಲ್ಲೆ ಮಾಡಿದ್ದು, ಗಾಜು ಪುಡಿ ಮಾಡಿದ್ದು, ಮಾಧ್ಯಮಗಳಿಗೇ ನಿರ್ಬಂಧ ಹೇರಿದ್ದು? ತಪ್ಪು ತಪ್ಪು ತಪ್ಪು... ಪಕ್ಷೇತರರು ಮತ್ತು ಜೆಡಿಎಸ್ ಚಿಕ್ಕಬಳ್ಳಾಪುರ ಶಾಸಕ ಕೆ.ಬಿ.ಬಚ್ಚೇಗೌಡ ಅವರು ಮಾರ್ಷಲ್‌ಗೇ ಹೊಡೆದು ಹಲ್ಲೆ ಮಾಡಿರುವ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಕೇಸು ದಾಖಲಾಗಿದೆ. 16 ಮಂದಿ ಮಾರ್ಷಲ್‌ಗಳು ಗಾಯಗೊಂಡಿದ್ದಾರೆ. ಗಾಜುಗಳನ್ನು ಪುಡಿ ಮಾಡಿದ್ದೆಲ್ಲಾ ದೃಶ್ಯಮಾಧ್ಯಮಗಳಲ್ಲಿ ಜನ ನೋಡಿದ್ದಾರೆ. ಅವಾಚ್ಯವಾಗಿ ಬೈದಾಡಿಕೊಂಡಿದ್ದು, ಹೊಡೆದಾಡುವಷ್ಟರ ಮಟ್ಟಿಗೆ ಮುಂದಾಗಿದ್ದನ್ನು ಜನ ಗಮನಿಸಿದ್ದಾರೆ. ತಾವು ಆರಿಸಿ ಕಳುಹಿಸಿದವರು ಎಂಥವರೆಂದು ಜನರಿಗೆ ಅರ್ಥವಾಗಿದೆ ಎಂದುಕೊಳ್ಳುತ್ತೇವೆ. ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು ಮಾತ್ರ ಅಕ್ಷಮ್ಯ... ಇದಕ್ಕೆ ಯಾವುದೇ ಸಮರ್ಥನೆ ಸಾಧ್ಯವಿಲ್ಲ. ಜನರಿಗೆ ಒಳಗೇನು ನಡೀತು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಖಂಡಿತಾ ಇದೆ. ಶಾಸಕಾಂಗದ ಮುಖ್ಯಸ್ಥರಾದ ಸಭಾಧ್ಯಕ್ಷರ ನಿರ್ಣಯವನ್ನು ಕೋರ್ಟಿನಲ್ಲಿ ಪ್ರಶ್ನಿಸಬಹುದೇ? ಎರಡು ಸಂದರ್ಭಗಳಲ್ಲಿ ಅವಕಾಶವಿದೆ. ಉತ್ತರಿಸಲು ಸಂತ್ರಸ್ತರಿಗೆ ಉತ್ತರಕ್ಕೆ ಅವಕಾಶ ಕೊಡದೆ ತೀರ್ಮಾನ ಕೈಗೊಂಡರೆ ಮತ್ತು ಎರಡನೆಯದು ದುರುದ್ದೇಶವೊಂದರ ಈಡೇರಿಕೆಗಾಗಿ ಕ್ರಮ ಕೈಗೊಂಡರೆ ಮಾತ್ರ ಸ್ಪೀಕರ್ ನಿರ್ಣಯವನ್ನು ಪ್ರಶ್ನಿಸಬಹುದು. ಕೊನೆಯಲ್ಲಿ... ಮಾರ್ಷಲ್‌ಗಳಿಗೇ ಥಳಿಸಿದ ನಾಯಕರೆನ್ನಿಸಿಕೊಳ್ಳುವ ಮೂರ್ಖರು, ಜವಾಬ್ದಾರಿಯುತ ಮಂತ್ರಿ ಸ್ಥಾನ ಅಲಂಕರಿಸಿ, ಸದನದಲ್ಲಿ ಅಂಗಿ ಹರಿದುಕೊಂಡು ಕೂಗಾಡಿದವರು, ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಕೆಟ್ಟ ರಾಜಕೀಯಕ್ಕೆ ವೇದಿಕೆಯಾದ ರಾಜಕಾರಣಿಗಳು.... ಇವರಿಗೆ ಛೀ... ಥೂ... ಎನ್ನುವುದು ಮತದಾರರ ಕೈಯಲ್ಲಿದೆ.
ಮಂಗಳೂರು : ಪಿಲಿಕುಳ ರಾಜ್ಯದಲ್ಲೇ ಪ್ರಸಿದ್ಧವಾದ ನಿಸರ್ಗಧಾಮವಾಗಿದ್ದು, ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಬೇರೆ ಬೇರೆ ಪಾರಂಪರಿಕ, ಪರಿಸರ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಮೀನು ಪ್ರಿಯರಿಗೆ ಒಂದು ಉತ್ತಮ ಸದವಕಾಶವನ್ನು ಕಲ್ಪಿಸುವ ದೃಷ್ಠಿಯಿಂದ ಹಾಗೂ ಮೀನುಗಾರಿಕೆ ಬಗ್ಗೆ ಅರಿವು ಮೂಡಿಸುವ ಕುರಿತು ಇಂದು ಪಿಲಿಕುಳ ದೋಣಿ ವಿಹಾರ ಕೆರೆಯ ಬಳಿ ಪಿಲಿಕುಳ ಮತ್ಸ್ಯೋತ್ಸವ (ಪಿಲಿಕುಳ ಫಿಶ್ ಕಾರ್ನಿವಾಲ್) ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಪಿಲಿಕುಳ ಮತ್ಸ್ಯೋತ್ಸವ ಉದ್ಘಾಟಿಸಿದರು. ಉದ್ಯಮಿ ಎ.ಸದಾನಂದ್ ಶೆಟ್ಟಿ ಸಹಿತ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಪಿಲಿಕುಳ ಕೆರೆಯ ಮೀನನ್ನು ಹಿಡಿದು ಮಾರಾಟ ಮಾಡಲಾಯಿತು., ಗಾಳ ಹಾಕುವ ಹವ್ಯಾಸಕ್ಕೆ ಪ್ರೋತ್ಸಾಹ ನೀಡುವುದು, ಸ್ಥಳದಲ್ಲೇ ತಾಜಾ ಮೀನುಗಳ ಖಾದ್ಯ ತಯಾರಿಸುವುದು, ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ಮೀನುಗಾರಿಕೆ ಬಗ್ಗೆ ಅರಿವು ಮೂಡಿಸುವುದು ಇತ್ಯಾದಿ ಕಾರ್ಯಕ್ರಮಗಳು ಜರಗಿದವು. ಮೀನುಗಾರಿಕೆ ಮಾಹಾವಿದ್ಯಾಲಯ ಮಂಗಳೂರು, ಮೀನುಗಾರಿಕೆ ಅಭಿವೃದ್ಧಿ ನಿಗಮ, ಮೀನುಗಾರಿಕಾ ಇಲಾಖೆ ಇವರ ಸಹಯೋಗದಲ್ಲಿ ಪಿಲಿಕುಳ ಮತ್ಸ್ಯೋತ್ಸವ (ಪಿಲಿಕುಳ ಫಿಶ್ ಕಾರ್ನಿವಾಲ್) ಹಮ್ಮಿಕೊಳ್ಳಲಾಗಿತ್ತು. More in this category: « ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಯಿಂದ ಮಕ್ಕಳ ಭವಿಷ್ಯಕ್ಕೆ ಮಾರಕ: ಕಾಂಗ್ರೆಸ್ ವತಿಯಿಂದ ನಿರಂತರ ಉಚಿತ ವ್ಯೆದ್ಯಕೀಯ ಶಿಬಿರ: ಜೆ.ಆರ್. ಲೋಬೊ »
ದುಬೈ : ಧಾರ್ಮಿಕ ವಸ್ತ್ರಸಂಹಿತೆಯ ಕಟ್ಟುಪಾಡು ವಿರೋಧಿಸಿ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ ಇನ್ನಷ್ಟು ತೀವ್ರಗೊಂಡಿದೆ. ರಸ್ತೆಗಳಲ್ಲಿ ಗುಂಡಿನ ಮೊರೆತ ಸಾಮಾನ್ಯವಾಗಿದೆ. ಮಂಗಳವಾರವು ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿಗೆ ಪ್ರತಿಭಟನಕಾರನೊಬ್ಬರು ಮೃತಪಟ್ಟಿದ್ದಾರೆ. ನಗರ, ಪಟ್ಟಣ, ಗ್ರಾಮಗಳಿಗೂ ಪ್ರತಿಭಟನೆ ವ್ಯಾಪ್ತಿಸಿದೆ. ಧಾರ್ಮಿಕ ವಸ್ತ್ರಸಂಹಿತೆ ಉಲ್ಲಂಘಿಸಲಾಗಿದೆ ಎಂದು ಟೆಹರಾನ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ 22 ವರ್ಷದ ಮಹಿಳೆ ಮಾಶಾ ಅಮೈನಿ ಅವರ ಶಂಕಾಸ್ಪದ ಸಾವಿನ ಹಿಂದೆಯೇ ಸೆ. 17ರಿಂದ ಇರಾನ್‌ನಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಹಿಂಸಾತ್ಮಕ ಘಟನೆಗಳು, ಭದ್ರತಾ ಸಿಬ್ಬಂದಿ ಗುಂಡಿನಿಂದ ಎಷ್ಟು ಮಂದಿ ಪ್ರತಿಭಟನಕಾರರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಅಧಿಕೃತ ಟಿ.ವಿ. ಮಾಧ್ಯಮದ ವರದಿ ಅನುಸಾರ ಸೆ.24ರಲ್ಲಿ ಇದ್ದಂತೆ 41 ಮಂದಿ ಮೃತಪಟ್ಟಿದ್ದರು. ಆ ನಂತರದ ಸಾವುಗಳ ಕುರಿತ ವರದಿಗಳನ್ನು ಸರ್ಕಾರ ಖಚಿತಪಡಿಸಿಲ್ಲ. ವರದಿಗಳ ಪ್ರಕಾರ, ಸಲಸ್‌ ಬಾಬಾಜಾನಿ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿನಿಂದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಒಸ್ಲೊ ಮೂಲದ ಮಾನವ ಹಕ್ಕುಗಳ ಸಂಘಟನೆ ಪ್ರಕಾರ, ಈವರೆಗೆ ಸುಮಾರು 185 ಜನರು ಸತ್ತಿದ್ದಾರೆ. ಈ ಪೈಕಿ ಝೆಹೆದಾನ್‌ ನಗರದಲ್ಲಿಯೇ ಹಿಂಸಾ ಕೃತ್ಯಗಳಿಂದ ಸುಮಾರು 90 ಜನ ಮೃತಪಟ್ಟಿದ್ದಾರೆ. ಅಮೈನಿ ಅವರ ಮೇಲೆ ಪೊಲೀಸರು ದೌರ್ಜನ್ಯ ಎಸಗಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ, ಹಿಜಾಬ್ ಧರಿಸುವ ಕುರಿತಂತೆ ಅವರು ಸಂಘರ್ಷ ನಡೆಸಿರುವ ವಿಡಿಯೊಗಳು ಹರಿದಾಡಿದ್ದು, ಪೊಲೀಸರು ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಅಭಿಪ್ರಾಯ ದಟ್ಟವಾಗಿದೆ. ಇರಾನ್‌ನ ರಾಜಧಾನಿ ಕುರ್ದಿಸ್ತಾನ್‌ ಪ್ರಾಂತ್ಯದ ಸನಾಂಡೈ ಪಟ್ಟಣ ಮತ್ತು ಸಲಸ್‌ ಬಾಬಾಜಾನಿ ಗ್ರಾಮದಲ್ಲಿ ಸೋಮವಾರವೂ ಹಿಂಸಾಚಾರ ಕಾಣಿಸಿಕೊಂಡಿತ್ತು ಎಂದು ಕುರ್ದಿಶ್‌ ಗುಂಪಿನ ಮಾನವಹಕ್ಕುಗಳ ಸಂಘಟನೆ ಹೆಂಗಾವ್‌ ಹೇಳಿದೆ. ಜನ ಗಾಯಗೊಂಡಿದ್ದಾರೆಯೇ ಎಂಬ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಆದರೆ, ಗುಂಡು ಹಾರಿಸಿರುವ ಹಾಗೂ ಅಶ್ರುವಾಯು ಸಿಡಿಸಿರುವ ದೃಶ್ಯಗಳು ವಿಡಿಯೊದಲ್ಲಿ ದಾಖಲಾಗಿದೆ. ಕುರ್ದಿಸ್ತಾನ್‌ ಪ್ರಾಂತ್ಯದ ಗವರ್ನರ್ ಇಸ್ಮಾಯಿಲ್‌ ಝರೇ ಕೌಶಾ ಅವರು, ಕೆಲ ಸಂಘಟನೆಗಳು ರಸ್ತೆಯಲ್ಲಿಯೇ ಯುವಜನರನ್ನು ಕೊಲ್ಲಲು ಸಂಚು ನಡೆಸಿವೆ ಎಂದು ಆರೋಪಿಸಿದ್ದಾರೆ. ಅಪರಿಚಿತ ಗುಂಪುಗಳು ಹಿಂಸಾಕೃತ್ಯದಲ್ಲಿ ತೊಡಗಿವೆ. ಆದರೆ, ಭದ್ರತಾ ಸಿಬ್ಬಂದಿ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದೂ ಹೇಳಿದ್ದಾರೆ. ವಾಹನಗಳ ಹಾರ್ನ್‌ನಿಂದ ಜೋರಾದ ಶಬ್ಧ ಹೊರಡಿಸುವ ಮೂಲಕ ಜನರು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರನ್ನು ಗುರಿಯಾಗಿಸಿ ಗುಂಪೊಂದು ಹಾರ್ನ್ ಮಾಡಿದ್ದರಿಂದ ಸನಾಂಡೈ ಪಟ್ಟಣದಲ್ಲಿ ರೊಚ್ಚಿಗೆದ್ದ ಪೊಲೀಸರು ಹಾದುಹೋಗುತ್ತಿದ್ದ ವಾಹನಗಳ ಗಾಜುಗಳನ್ನು ಒಡೆದಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ರಶ್ತ್‌ ನಗರದಲ್ಲಿನ ಲಖನ್ ಕಾರಾಗೃಹದಲ್ಲಿಯೂ ದೊಂಬಿ ನಡೆದಿದ್ದು, ಕೆಲ ವಿಚಾರಣಾಧೀನ ಕೈದಿಗಳು ಮೃತಪಟ್ಟಿದ್ದಾರೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಗಳಿದ್ದ ವಿಭಾಗದಲ್ಲಿ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಆದರೆ, ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.
ಶಿವಮೊಗ್ಗ (ನ.25) : ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶಿಕಾರಿಪುರದ ಶ್ರೀ ಹುಚ್ಚುರಾಯಸ್ವಾಮಿ ದೇವರು ಕ್ಷಮಿಸುವುದಿಲ್ಲ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್‌ ಹರಿಹಾಯ್ದರು. ಇಲ್ಲಿನ ಪ್ರೆಸ್‌ ಟ್ರಸ್ಟ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 20 ದಿನಗಳಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದಾರೆ. ಆದರೆ, ಅವರ ಕ್ಷೇತ್ರದಲ್ಲೇ ಅಂದಾಜು 14 ಸಾವಿರ ರೈತರ ಸಾಗುವಳಿ ಅರ್ಜಿಯನ್ನು ವಿಚಾರಣೆ ಮಾಡದೆ ವಜಾ ಮಾಡಲಾಗಿದೆ ಎಂದು ಕುಟುಕಿದರು. ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಕೈ-ಕಮಲ ರಾಜಕಾರಣ ಬಿ.ಎಸ್‌. ಯಡಿಯೂರಪ್ಪ ಅವರು ಸಾಗುವಳಿದಾರರ ಬಗ್ಗೆ ಅಪಾರ ಪ್ರೇಮ ಇಟ್ಟುಕೊಂಡವರು, ಬಗರ್‌ಹುಕುಂ ಚಾಂಪಿಯನ್‌ ಎಂದು ಘೋಷಿಸಿಕೊಂಡವರು. ಅರಣ್ಯ ಭೂಮಿ ಸಾಗುವಳಿದಾರರ ಪರ ಪಾದಯಾತ್ರೆ ಮಾಡಿದವರು. ಈಗ ಅವರಿಗೆ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲವಾಗಿದೆ. ಈಗೀನ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರೂ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ದೂರಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಬಂದಾಗ ಸಂತ್ರಸ್ತರ ಹಾಗೂ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಹೋಗಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ 20 ದಿನಗಳಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಾತು ಕೊಟ್ಟಿದ್ದಾರೆ. ಮಾತು ಕೊಟ್ಟು ಒಂದು ವಾರವಾರ ಕಳೆದಿದೆ. ಯಡಿಯೂರಪ್ಪ ಅಲ್ಲ, ಮುಖ್ಯಮಂತ್ರಿ ಅವರಿಗೂ ಆ ಬಗ್ಗೆ ಮನಸ್ಸಿಲ್ಲ. ಜೊತೆಗೆ ಬಿಜೆಪಿ ಶಾಸಕರಿಗೂ ಆಸಕ್ತಿ ಇಲ್ಲ. ಸಂಸದರೂ ಸುಮ್ಮನಿದ್ದಾರೆ. ಇಡೀ ಸರ್ಕಾರವೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಗೋಡು ತಿಮ್ಮಪ್ಪ ಅವರು ಸಾವಿರ ಜನರಿಗೆ ಹಕ್ಕುಪತ್ರ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಯಾವುದೋ ಒಂದೆರಡು ಕೇಸುಗಳಲ್ಲಿ ನ್ಯಾಯಾಲಯದ ತೀರ್ಪು ಬಂದಿರುವುದನ್ನೇ ಗಮನದಲ್ಲಿಟ್ಟುಕೊಂಡು ಎಲ್ಲ ಸಂತ್ರಸ್ತರಿಗೂ ಅನ್ವಯಿಸುವಂತೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಿಂದ ಹಕ್ಕುಪತ್ರ ಪಡೆದಿರುವವರೂ ಕೂಡ ಸಂಕಟ ಅನುಭವಿಸುತ್ತಿದ್ದಾರೆ. ವಿಚಾರಣೆ ಮಾಡದೇ ಸಾವಿರಾರು ಅರ್ಜಿಗಳನ್ನು ವಜಾ ಮಾಡುತ್ತಿದ್ದಾರೆ. ಈಗಾಗಲೇ ಹಕ್ಕುಪತ್ರ ಪಡೆದವರ ಮೇಲೂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಶಿವಮೊಗ್ಗದಲ್ಲಿ ಎರಡು ದಿನ ಇದ್ದು ಹೋಗಲಿ: ಬಿಜೆಪಿ ತಂಡ ಸಮಸ್ಯೆ ಆಲಿಸಲು ಶಿವಮೊಗ್ಗಕ್ಕೆ ಬರುತ್ತಿಲ್ಲ. ಬದಲು ಚುನಾವಣಾ ಸಮಾಲೋಚನೆ ಮಾಡಲು ಬರುತ್ತಿದ್ದಾರೆ ಎಂದು ತೀ.ನಾ.ಶ್ರೀನಿವಾಸ್‌ ಆರೋಪಿಸಿದರು. ಈಗ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಬಿಜೆಪಿ ಕಾರ್ಯಕ್ರಮ ಹಿನ್ನೆಲೆ ನ.25ರಂದು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಅವರು ಹಾಗೆ ಬಂದು ಹೀಗೆ ಹೋಗುವುದಲ್ಲ. ಮಲೆನಾಡಿನಲ್ಲಿ ಒಂದೆರಡು ದಿನ ಉಳಿದು ಇಲ್ಲಿನ ಜನರ ಪರಿಸ್ಥಿತಿಯನ್ನು ಆಲಿಸಬೇಕು. ಎಲೆಚುಕ್ಕೆ ರೋಗದಿಂದ ಸುಮಾರು 40 ಸಾವಿರ ರೈತರು ಬೀದಿಪಾಲಾಗಿದ್ದಾರೆ. ಕೊಳೆ ರೋಗದಿಂದ ತತ್ತರಿಸಿ ಹೋಗಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಸಿಎಂ ಖುದ್ದು ಪರಿಶೀಲನೆ ನಡೆಸಿದರೆ ಅವರಿಗೆ ಸಮಸ್ಯೆ ಬಗ್ಗೆ ಅರಿವಾಗಲಿದೆ ಎಂದರು. ಸಿಎಂಗೆ ತಾಕತ್ತಿದ್ರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ: ಮಧು ಬಂಗಾರಪ್ಪ ಕಾಂಗ್ರೆಸ್‌ ಆಗಲಿ, ಬಿಜೆಪಿಯಾಗಲಿ, ಜೆಡಿಎಸ್‌ ಆಗಲಿ ನಮ್ಮ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ನಮ್ಮ ಹೋರಾಟ ಅನಿವಾರ್ಯ. ಸಂತ್ರಸ್ತರ ನಡೆ ಶರಾವತಿ ಡ್ಯಾಮಿನ ಕಡೆ ಚಳುವಳಿಯನ್ನು ಆರಂಭಿಸುತ್ತೇವೆ. ಕಾಂಗ್ರೆಸ್‌ ನೇತೃತ್ವದಲ್ಲಿ ನ.28ರಂದು ನಡೆಯುವ ಸಂತ್ರಸ್ತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ
Categories Select Category Location ಆಫ್ರಿಕಾ ಆಸ್ಟ್ರೇಲಿಯಾ ಉತ್ತರ ಅಮೇರಿಕಾ ಏಷ್ಯಾ ಇಂಡೋನೇಶಿಯಾ ಚೀನಾ ನೇಪಾಲ ಪಾಕಿಸ್ತಾನ ಬಾಂಗ್ಲಾದೇಶ ಭಾರತ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಸ್ಸಾಂ ಉತ್ತರ ಪ್ರದೇಶ ಉತ್ತಾರಾಖಾಂಡ ಒಡಿಶಾ ಕರ್ನಾಟಕ ಕೇರಳ ಗುಜರಾತ ಗೋವಾ ಛತ್ತೀಸಗಡ ಜಮ್ಮು-ಕಾಶ್ಮೀರ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದೆಹಲಿ ನಾಗಾಲ್ಯಾಂಡ ಪಂಜಾಬ ಪಾಂಡಿಚೆರಿ ಬಂಗಾಲ ಬಿಹಾರ ಮಣಿಪುರ ಮಧ್ಯಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಸ್ಥಾನ ಲಡಾಖ ಹರಿಯಾಣಾ ಹಿಮಾಚಲ ಪ್ರದೇಶ ಮ್ಯಾನ್ಮಾರ್ ಶ್ರೀಲಂಕಾ ದಕ್ಷಿಣ ಅಮೇರಿಕಾ ಯುರೋಪ PDF Post Type ಚೌಕಟ್ಟು ಮನವಿ ರಾಷ್ಟ್ರ ಧರ್ಮದ ಚೌಕಟ್ಟು ಸಾಧನೆ ಚೌಕಟ್ಟು ಜಾಗೊ ಪ. ಪೂ. ಡಾ. ಆಠವಲೆ ಫಲಕ ಪ್ರಸಿದ್ಧಿ ರಾಷ್ಟ್ರ ಧರ್ಮದ ವಿಶೇಷ ಆಪತ್ಕಾಲ ರಾಷ್ಟ್ರ ಮತ್ತು ಧರ್ಮ ಸಂಪಾದಕೀಯ ವಾರ್ತೆಗಳು ಅಂತರರಾಷ್ಟ್ರೀಯ ರಾಜ್ಯದ ವಾರ್ತೆಗಳು ರಾಷ್ಟ್ರೀಯ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ವೃತ್ತ ವಿಶೇಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಾಧಕರಿಗಾಗಿ ಸೂಚನೆ ಅನುಭೂತಿ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ನವರಾತ್ರಿ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಿತೃಪಕ್ಷ ಮಹಾಶಿವರಾತ್ರಿ ವಿಶೇಷಾಂಕ ಯುಗಾದಿ ವಿಶೇಷಾಂಕ ಲೇಖನಗಳು ಹಬ್ಬ-ವ್ರತಗಳು ವಿಶೇಷ ಸ್ಮರಣಿಕೆ ಆಯುರ್ವೇದ ಆಹಾರ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಮರ್ಥ ಸಾಧನೆ ಸುವಚನ ಹಿಂದೂ ಧರ್ಮ ದೈವೀ ಬಾಲಕರು ಧರ್ಮಶಿಕ್ಷಣ ಸಂಶೋಧನೆ ಸೂಕ್ಷ್ಮ ಪರೀಕ್ಷಣೆ Tags Select Tag ೩೧ ಡಿಸೆಂಬರ ಅಕ್ಷಯ ತದಿಗೆ ವಿಶೇಷಾಂಕ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂತರರಾಷ್ಟ್ರೀಯ ಅಂತರರಾಷ್ಟ್ರೀಯ ಗಡಿ ವಿವಾದ ಅತ್ಯಾಚಾರ ಅಧ್ಯಾತ್ಮ ಅಧ್ಯಾತ್ಮಿಕ ಸಂಶೋಧನೆ ಅನುಭೂತಿ ಅಪರಾಧ ಅಫ್ಘಾನಿಸ್ತಾನ ಅಭಯ ವರ್ತಕ ಅಮರನಾಥ ಅಮಿತ ಶಾಹ ಅಮೇರಿಕಾ ಅರವಿಂದ ಕೆಜರಿವಾಲ ಅಲ್ ಖೈದಾ ಅಲ್ಪಸಂಖ್ಯಾತ-ಹಿಂದೂ ಅಲ್ಪಸಂಖ್ಯಾತರ ಓಲೈಕೆ ಅಸುರಕ್ಷಿತ ಹಿಂದೂ ದೇವಸ್ಥಾನಗಳು ಆಡಳಿತ ಆಡಳಿತದ ದುರುಪಯೋಗ ಆತ್ಮಹತ್ಯೆ ಆಂದೋಲನ ಆಂಧ್ರ ಪ್ರದೇಶ ಆಪತ್ಕಾಲ ಆಮ್ ಆದ್ಮಿ ಪಕ್ಷ ಆಯುರ್ವೇದ ಆರೋಗ್ಯ ಆರೋಗ್ಯ ಸಹಾಯ ಸಮಿತಿ ಆಸ್ಪತ್ರೆ ಇಮ್ರಾನ್ ಖಾನ್ ಇಸ್ಲಾಂ ಉಚ್ಚ ನ್ಯಾಯಾಲಯ ಉತ್ತರ ಪ್ರದೇಶ ಎನ್.ಸಿ.ಇ.ಆರ್.ಟಿ ಐಸಿಸ್ ಔಷಧಿ ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 11 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 12 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 13 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 14 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 15 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 16 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 17 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 18 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 19 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 20 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 21 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 22 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 23 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 24 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 25 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 26 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 27 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 28 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 29 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 30 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 31 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 32 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 33 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 34 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 35 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 36 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 37 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 38 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 39 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 40 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 41 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 42 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 10 ಕಲ್ಲುತೂರಾಟ ಕಳ್ಳತನ ಕಾಂಗ್ರೆಸ್ ಕಾನೂನು ಕಾಶ್ಮೀರ ಪ್ರಶ್ನೆ ಕಾಶ್ಮೀರೀ ಪಂಡಿತ ಕುಂಭಮೇಳಾ ಕೃತಜ್ಞತಾ ವಿಶೇಷಾಂಕ ಕೆ. ಚಂದ್ರಶೇಖರ ರಾವ್ ಕೇರಳ ಕೇರಳ ದೇವಸ್ಥಾನ ಕೊರೋನಾ ರೋಗಾಣು ಕ್ರಾಂತಿಕಾರಕ ಕ್ರೈಸ್ತ ಖಂಡನೆ ಗಣೆಶೋತ್ಸವ ಗಲಭೆ ಗುರುಪೂರ್ಣಿಮಾ ಮಹೋತ್ಸವ ೨೦೨೧ ಗುರುಪೂರ್ಣಿಮಾ ವಿಶೇಷಾಂಕ ಗೋ ಮಾತೆ ಗೋ ಸಾಗಾಟ ಗೋಮಾಂಸ ಚಲನಚಿತ್ರದ ಮೂಲಕ ವಿಡಂಬನೆ ಚೀನಾ ಚೀನಾದ ಪ್ರಶ್ನೆ ಚುನಾವಣೆ ಚೇತನ ರಾಜಹಂಸ ಚೌಕಟ್ಟು ಛತ್ರಪತಿ ಶಿವಾಜಿ ಮಹಾರಾಜ ಜಾಕಿರ ನಾಯಿಕ ಜಾಗೊ ಜಾತ್ಯತೀತ ಜಾರಿ ನಿರ್ದೇಶನಾಲಯ ಜಿಹಾದ್ ಜೆಎನ್‌ಯು ಜೈಶ್-ಎ-ಮೊಹಮ್ಮದ್ ಜೋ-ಬೈಡನ್ ಜ್ಞಾನವಾಪಿ ಟಿ. ರಾಜಾಸಿಂಗ್ ಡಿ.ಕೆ. ಶಿವಕುಮಾರ ತಸ್ಲೀಮಾ ತಾಲಿಬಾನ್‍ ತೃಣಮೂಲ ಕಾಂಗ್ರೆಸ್ ದ ಕಾಶ್ಮೀರ ಫೈಲ್ಸ್ ದತ್ತ ವಿಶೇಷಾಂಕ ದಾಳಿ ದಿನವಿಶೇಷ ದಿವ್ಯ ರಥೋತ್ಸವ ವಿಶೇಷಾಂಕ ದೀಪಾವಳಿ ೨೦೨೨ ದೀಪಾವಳಿ ವಿಶೇಷಾಂಕ ದುಷ್ಕೃತ್ಯ ದೇವಸ್ಥಾನ ದೇವಸ್ಥಾನದ ಸರಕಾರಿಕರಣ ದೇಶದ್ರೋಹಿ ದೈವೀ ಬಾಲಕರು ದ್ರೌಪದಿ ಮುರ್ಮು ಧರ್ಮಜಾಗೃತಿ ಸಭೆ ಧರ್ಮದ್ರೋಹಿ ಧರ್ಮಶಿಕ್ಷಣ ನಕ್ಸಲರು ನರಮೇಧ ನರೇಂದ್ರ ಮೋದಿ ನವರಾತ್ರಿ ವಿಶೇಷಾಂಕ ನವರಾತ್ರೋತ್ಸವ ನಿಧನ ನೇಪಾಳ ನೈಸರ್ಗಿಕ ಆಪತ್ತು ನೌಕಾದಳ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ್ ನ್ಯಾಯಾಲಯ ಪ.ಪೂ. ಪಾಂಡೆ ಮಹಾರಾಜ ಪತಂಜಲಿ ಪತ್ರಿಕಾಗೋಷ್ಠೀ ಪನೂನ್ ಕಾಶ್ಮೀರ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಕಿಸ್ತಾನದ ಓಲೈಕೆ ಪಾದ್ರಿ ಪಿಎಫ್‌ಐ ಪಿಡಿಪಿ ಪಿಣರಾಯಿ ವಿಜಯನ್‌ ಪಿತೃಪಕ್ಷ ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ ಪೂ. ಸಂದೀಪ ಆಳಶಿ ಪೊಲೀಸ್ ಪೋಪ್ ಫ್ರಾನ್ಸಿಸ್ ಪ್ರತಿಭಟನೆ ಪ್ರತ್ತೇಕತವಾದಿ ಪ್ರಮೋದ ಮುತಾಲಿಕ ಪ್ರವಾಹ ಪ್ರಸಾರ ಮಾಧ್ಯಮ ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಫಲಕ ಬಂಧನ ಬಸವರಾಜ ಬೊಮ್ಮಾಯಿ ಬಾಂಗ್ಲಾದೇಶ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಅಕ್ಟೋಬರ್ 2021 ಬಾಂಗ್ಲಾದೇಶಿ ನುಸುಳುಖೋರ ಬೆಂಬಲ ಬ್ರಿಗೇಡಿಯರ್ ಹೇಮಂತ ಮಹಾಜನ ಭಕ್ತಿ ಭಾವ ಭಜರಂಗ ದಳ ಭಯೋತ್ಪಾದನೆ ಭಾರತ ಭಾರತದ ಇತಿಹಾಸ ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರ ಮಕರ ಸಂಕ್ರಾಂತಿ ಮತಾಂಧ ಮದರಸಾ ಮನವಿ ಮಮತಾ ಬ್ಯಾನರ್ಜಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಹಾಶಿವರಾತ್ರಿ ಮಹಿಳೆಯರ ಮೇಲೆ ದೌರ್ಜನ್ಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಮೀಸಲಾತಿ ಮುಸಲ್ಮಾನ ಮೆಹಬೂಬಾ ಮುಫ್ತಿ ಮೇಘಾಲಯ ಮೋಹನ ಭಾಗವತ ಮೌಲ್ವಿ ಯಜ್ಞ ಯುಗಾದಿ ಹಬ್ಬ ವಿಶೇಷಾಂಕ ಯುವ ಮತ್ತು ಭಾರತ ವಿಶೇಷಾಂಕ ಯೆಡಿಯೂರಪ್ಪ ಯೋಗ ಯೋಗಿ ಆದಿತ್ಯನಾಥ ರಮೇಶ ಶಿಂದೆ ರಷ್ಯಾ-ಯುಕ್ರೇನ್-ಸಂಘರ್ಷ ರಾ ರಾಜಕೀಯ ರಾಜನಾಥ ಸಿಂಗ್ ರಾಜ್ಯಸಭೆ ರಾಮ ಜನ್ಮಭೂಮಿ ರಾಮದೇವ ಬಾಬಾ ರಾಷ್ಟ್ರಪುರುಷ ರಾಷ್ಟ್ರೀಯ ರಾಷ್ಟ್ರೀಯ ಜನತಾದಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಹುಲ ಗಾಂಧಿ ರೋಹಿಂಗ್ಯಾ ಪ್ರಶ್ನೆ ಲವ್ ಜಿಹಾದ್ ಲಷ್ಕರ್-ಎ-ತೋಯಿಬಾ ಲೇಖನ ಲೋಕಸಭೆ ಲ್ಯಾಂಡ್ ಜಿಹಾದ್ ವಾಯುದಳ ವಾರಕರಿ ವಿದೇಶಾಂಗ ನೀತಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಹಿಂದೂ ಪರಿಷತ್ತು ವೃತ್ತ ವಿಶೇಷ ವೈದ್ಯಕೀಯ ವ್ಲಾದಿಮೀರ ಪುತಿನ್ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಶಬರಿಮಲೈ ದೇವಸ್ಥಾನ ಶಿವರಾಜ ಸಿಂಹ ಚೌಹಾಣ ಶಿವಸೇನೆ ಶೀ-ಜಿನಪಿಂಗ್ ಶೈಕ್ಷಣಿಕ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗಿಳ ಶ್ರೀಕೃಷ್ಣ ಜನ್ಮಭೂಮಿ ಶ್ರೀರಾಮ ಸೇನೆ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಂತರ ಅವಮಾನ ಸಂತರ ಆಶಿರ್ವಾದ ಸಂತರ ಮಾರ್ಗದರ್ಶನ ಸದ್ಗುರು (ಡಾ.) ಮುಕುಲ ಗಾಡಗಿಳ ಸದ್ಗುರು ಚಾರುದತ್ತ ಪಿಂಗಳೆ ಸದ್ಗುರು ರಾಜೇಂದ್ರ ಶಿಂದೆ ಸನಾತನ ಆಶ್ರಮ ರಾಮನಾಥಿ ಸನಾತನ ಪ್ರಭಾತ ಸನಾತನ ಪ್ರಭಾತ ವರ್ಧ್ಯಂತೂತ್ಸವ ಸನಾತನ ಸಂಸ್ಥೆ ಸನಾತನ ಸಂಸ್ಥೆಗೆ ವಿರೋಧ ಸನಾತನದ ಸಂತರು ಸಂಪಾದಕೀಯ ಸಮರ್ಥ ಸಮಾಜವಾದಿ ಪಕ್ಷ ಸರ್ವೋಚ್ಛ ನ್ಯಾಯಾಲಯ ಸಂಶೋಧನೆ ಸಂಸ್ಕೃತ ಭಾಷೆ ಸಂಸ್ಥೆಗಳ ಹಿಂದೂದ್ವೇಷ ಸಾಧಕರಿಗೆ ಸೂಚನೆ ಸಾಧನೆ ಸಾಧ್ವಿ ಪ್ರಜ್ಞಾಸಿಂಗ್ ಸಾಪ್ತಾಹಿಕ ಸಾಮಾಜಿಕ ಸಾಮಾಜಿಕ ಜಾಲತಾಣ ಸಾಮಾಜಿಕ ಪ್ರಸಾರ ಮಾಧ್ಯಮ ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಸಿಬಿಐ ಸುನೀಲ ಘನವಟ ಸುಬ್ರಮಣ್ಯಮ್ ಸ್ವಾಮಿ ಸುರೇಶ ಚೌವಾಣಕೆ ಸುವಚನ ಸೂಕ್ಷ್ಮ ಪರೀಕ್ಷಣೆ ಸೂನಿಯಾ ಗಾಂಧಿ ಸೆನ್ಸಾರ್ ಬೋರ್ಡ್ ಸೆರೆಮನೆ ಸೈನಿಕರು ಸೈಬರ ಅಪರಾಧ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಸ್ವಾ. ಸಾವರಕರ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹತ್ಯೆ ಹಬ್ಬ ಹಲಾಲ್ ಹಿಜಾಬ್ / ಬುರ್ಖಾ ವಿವಾದ ಹಿಜ್ಬುಲ್ ಮುಜಾಹಿದ್ದೀನ್ ಹಿಂದು ರಾಷ್ಟ್ರಜಾಗೃತಿ ಅಭಿಯಾನ ಹಿಂದುತ್ವನಿಷ್ಠ ಸಂಘಟನೆ ಹಿಂದೂ ಅಧಿವೇಶನ ಹಿಂದೂ ಜನಜಾಗೃತಿ ಸಮಿತಿ ಹಿಂದೂ ದೇವತೆಗಳ ವಿಡಂಬನೆ ಹಿಂದೂ ಧರ್ಮ ಹಿಂದೂ ಧರ್ಮ ಸಂಸ್ಕಾರ ಹಿಂದೂ ಧರ್ಮಜಾಗೃತಿ ಸಭೆ ಹಿಂದೂ ನಾಯಕ ಹಿಂದೂ ರಾಷ್ಟ್ರ ಹಿಂದೂ ವಿಧಿಜ್ಞ ಪರಿಷತ್ತು ಹಿಂದೂ ವಿರೋಧಿ ಹಿಂದೂ ವಿರೋಧಿ ಹೇಳಿಕೆ ಹಿಂದೂಗಳ ಇತಿಹಾಸ ಹಿಂದೂಗಳ ಮತಾಂತರ ಹಿಂದೂಗಳ ಮೇಲೆ ಆಘಾತ ಹಿಂದೂಗಳ ಮೇಲೆ ದಾಳಿ ಹಿಂದೂಗಳ ರಾಜ ಹಿಂದೂಗಳ ವಿರೋಧ ಹಿಂದೂಗಳಿಗೆ ಜಯ ಹಿಂದೂಗಳಿಗೆ ಸಕಾರಾತ್ಮಕ ಹಿಂದೂರಾಷ್ಟ್ರ ಸಂಕಲ್ಪ ಅಭಿಯಾನ Archives Archives Select Month November 2022 October 2022 September 2022 August 2022 July 2022 June 2022 May 2022 April 2022 March 2022 February 2022 January 2022 December 2021 November 2021 October 2021 September 2021 August 2021 July 2021 June 2021 May 2021 April 2021 March 2021 February 2021 January 2021 December 2020 November 2020 October 2020 September 2020 August 2020 July 2020 June 2020 May 2020 April 2020 Categories Categories Select Category PDF ಅಂತರರಾಷ್ಟ್ರೀಯ ಅನುಭೂತಿ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಪತ್ಕಾಲ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಆಫ್ರಿಕಾ ಆಯುರ್ವೇದ ಆಸ್ಟ್ರೇಲಿಯಾ ಆಸ್ಸಾಂ ಆಹಾರ ಇಂಡೋನೇಶಿಯಾ ಉತ್ತರ ಅಮೇರಿಕಾ ಉತ್ತರ ಪ್ರದೇಶ ಉತ್ತಾರಾಖಾಂಡ ಏಷ್ಯಾ ಒಡಿಶಾ ಕರ್ನಾಟಕ ಕೇರಳ ಗುಜರಾತ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ಗೋವಾ ಚೀನಾ ಚೌಕಟ್ಟು ಛತ್ತೀಸಗಡ ಜಮ್ಮು-ಕಾಶ್ಮೀರ ಜಾಗೊ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದಕ್ಷಿಣ ಅಮೇರಿಕಾ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ದೆಹಲಿ ದೈವೀ ಬಾಲಕರು ಧರ್ಮಶಿಕ್ಷಣ ನವರಾತ್ರಿ ವಿಶೇಷಾಂಕ ನಾಗಾಲ್ಯಾಂಡ ನೇಪಾಲ ಪ. ಪೂ. ಡಾ. ಆಠವಲೆ ಪಂಜಾಬ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಂಡಿಚೆರಿ ಪಿತೃಪಕ್ಷ ಫಲಕ ಪ್ರಸಿದ್ಧಿ ಬಂಗಾಲ ಬಾಂಗ್ಲಾದೇಶ ಬಿಹಾರ ಭಾರತ ಮಣಿಪುರ ಮಧ್ಯಪ್ರದೇಶ ಮನವಿ ಮಹಾರಾಷ್ಟ್ರ ಮಹಾಶಿವರಾತ್ರಿ ವಿಶೇಷಾಂಕ ಮೇಘಾಲಯ ಮ್ಯಾನ್ಮಾರ್ ಯುಗಾದಿ ವಿಶೇಷಾಂಕ ಯುರೋಪ ರಾಜಸ್ಥಾನ ರಾಜ್ಯದ ವಾರ್ತೆಗಳು ರಾಷ್ಟ್ರ ಧರ್ಮದ ಚೌಕಟ್ಟು ರಾಷ್ಟ್ರ ಮತ್ತು ಧರ್ಮ ರಾಷ್ಟ್ರೀಯ ಲಡಾಖ ವಾರ್ತೆಗಳು ವೃತ್ತ ವಿಶೇಷ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀಲಂಕಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಂಪಾದಕೀಯ ಸಮರ್ಥ ಸಂಶೋಧನೆ ಸಾಧಕರಿಗಾಗಿ ಸೂಚನೆ ಸಾಧನೆ ಸಾಧನೆ ಚೌಕಟ್ಟು ಸುವಚನ ಸೂಕ್ಷ್ಮ ಪರೀಕ್ಷಣೆ ಹಬ್ಬ-ವ್ರತಗಳು ಹರಿಯಾಣಾ ಹಿಂದೂ ಧರ್ಮ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ಹಿಮಾಚಲ ಪ್ರದೇಶ
ಜಗದ್ಗುರು ಶ್ರೀಮನ್ಮಧ್ವಾಚಾರ್ಯರು ದ್ವಾರಕೆಯ ಕೃಷ್ಣಪ್ರತಿಮೆಯನ್ನು ಉಡುಪಿಯಲ್ಲಿ ಪ್ರತಿಷ್ಠೆಗೈದು ದ್ವಾಪರದ ಕೃಷ್ಣನನ್ನು ಕಲಿ ಯುಗದ ಭಕ್ತರಿಗೆ ಸಿಗುವಂತೆ ಅನುಗ್ರಹಿಸಿದ್ದಾರೆ. ಈ ಮೂಲಕ ಸಾಕ್ಷಾತ್ ಕೃಷ್ಣನೇ ತನ್ನ ಮಡದಿ ರುಕ್ಮಿಣಿಗೆ ದೇವಶಿಲ್ಪಿ ವಿಶ್ವಕರ್ಮ ನಿಂದ ನಿರ್ಮಾಣಗೈಸಿದ ತನ್ನದೇ ಪ್ರತಿಮೆಯ ಮೂಲಕ ತನ್ನ ಉಪಾಸನೆಗೈಯುವ ಮಹಾಭಾಗ್ಯವನ್ನು ನಮಗೆಲ್ಲಾ ಕರುಣಿ ಸಿದ್ದಾನೆ. ಕಾಲಕಾಲಕ್ಕೆ ಆಚಾರ್ಯರ ಎಂಟು ಜನ ಸಂನ್ಯಾಸಿ ಶಿಷ್ಯರ ಭವ್ಯಪರಂಪರೆ ಪರ್ಯಾಯಕ್ರಮದಲ್ಲಿ ಈ ಕೃಷ್ಣದೇವರ ಆರಾಧನೆಯನ್ನು ನಡೆಸಿ, ಮಧ್ವಾಚಾರ್ಯರ ಭಕ್ತಿ ಸಿದ್ಧಾಂತವನ್ನು ಪಸರಿಸಿ, ಭಕ್ತರೆಲ್ಲರನ್ನು ಹರಸುತ್ತಾ ಬಂದಿದ್ದಾರೆ. ಇತಿಹಾಸವನ್ನು ಪರಿಕಿಸಿದಾಗ ಅನೇಕ ಸಾಧಕರಾಜ-ಮಹಾರಾಜರು ಅಷ್ಟಮಠದ ಯತಿಶ್ರೇಷ್ಠರಿಂದ ಪ್ರಭಾವಿತರಾಗಿ ಅವರ ಸೇವೆಗೈದು, ಅವರ ಮೂಲಕ ಉಡುಪಿಯ ಕೃಷ್ಣನನ್ನು ಭಜಿಸಿ ಕೃತಾರ್ಥರಾಗಿದ್ದಾರೆ. ವಿಜಯನಗರದ ಭವ್ಯಪರಂಪರೆಯನ್ನು ಮುಂದುವರೆಸಿಕೊಂಡು ಬಂದ ಮೈಸೂರು ಅರಸರನೇಕರು, ಅಷ್ಟಮಠಾಧೀಶರನೇಕರ ಸಂಪರ್ಕಕ್ಕೆ ಬಂದುದನ್ನು ಐತಿಹಾಸಿಕವಾಗಿ ಗುರುತಿಸಬಹುದು. ಪಲಿಮಾರು ಮಠಾಧೀಶರ ಅವಧಿಯಲ್ಲಿ : ಶ್ರೀ ಪಲಿಮಾರು ಮಠದ ಪರಂಪರೆಯ 27ನೇ ಯತಿಗಳಾದ ಶ್ರೀ ರಘುಮಾನ್ಯತೀರ್ಥರು (ಪೀಠ ಕಾಲ 1915-47) ತಪಸ್ವಿಗಳು. ಅದಮಾರು ಮಠದ ಶ್ರೀ ವಿಬುಧಪ್ರಿಯತೀರ್ಥರಿಂದ ವೇದಾಂತ ಅಧ್ಯಯನವನ್ನು ನಡೆಸಿದವರು. ಎರಡು ಪರ್ಯಾಯಗಳನ್ನು ನಡೆಸಿದ್ದಾರೆ. ಇವರ ವೃಂದಾವನ ಘಟಿಕಾಚಲದಲ್ಲಿದೆ. ಇವರ ದ್ವಿತೀಯ ಪರ್ಯಾಯ ಕಾಲದಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್(ಆಡಳಿತ ಕಾಲ 1895-1940) ಉಡುಪಿಗೆ ಭೇಟಿ ನೀಡಿ, ಶ್ರೀಕೃಷ್ಣನ ವಿಶೇಷ ಸೇವೆಯನ್ನು ನಡೆಸಿದ್ದರು. ವಿಶೇಷ ಸೂಕ್ಷ್ಮ ಸಂವೇದನಾ ಶೀಲರೂ, ಧಾರ್ಮಿಕ ಶ್ರದ್ಧಾವಂತರೂ ಆಗಿದ್ದ ಅರಸರು ಪಲಿಮಾರು ಶ್ರೀಪಾದರ ವೈದುಷ್ಯಕ್ಕೆ ಮಾರುಹೋದದ್ದರಲ್ಲಿ ಅಚ್ಚರಿಯೇನಿಲ್ಲ. ಅದಮಾರು ಮಠಾಧೀಶರ ಅವಧಿಯಲ್ಲಿ : ಶ್ರೀ ಅದಮಾರುಮಠದ ಪರಂಪರೆಯ 31ನೇ ಯತಿಗಳಾದ ಶ್ರೀ ಶ್ರೀ ವಿಬುಧೇಶ ತೀರ್ಥರು (ಪೀಠಕಾಲ 1945-2009) ಮಹಾಪಂಡಿತರೂ, ಸಮಾಜಮುಖಿ, ದೂರದರ್ಶಿತ್ವದ ಚಿಂತನೆಯುಳ್ಳವರೂ, ಅನೇಕ ವಿದ್ಯಾಸಂಸ್ಥೆಗಳ ಸ್ಥಾಪಕರೂ ಆಗಿರುವರು. ನಾಡಿನೆಲ್ಲೆಡೆ ಶಿಕ್ಷಣಸಂಸ್ಥೆಗಳ ಮೂಲಕ ಶ್ರೀಪಾದರು ನಡೆಸಿದ ವಿದ್ಯಾಕ್ರಾಂತಿ ಯಿಂದ ಪ್ರಭಾವಿತಗೊಂಡ ಮೈಸೂರಿನ ಕೊನೆಯ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಶ್ರೀಪಾದರ ವಿಶೇಷ ಸಂಪರ್ಕವನ್ನು ಹೊಂದಿದ್ದರು. ಉಡುಪಿಗೆ ಆಗಮಿಸುವ ಕೃಷ್ಣಭಕ್ತರ ಅನುಕೂಲಕ್ಕಾಗಿ1964ರಲ್ಲಿ ಶ್ರೀಪಾದರು ಅದಮಾರು ಮಠದ ಅತಿಥಿ ಗೃಹ ವೊಂದನ್ನು ನಿರ್ಮಿಸಿದರು. ಅತಿಥಿಗೃಹದ ಉದ್ಘಾಟನೆಯನ್ನು ಅಂದು ರಾಜಪ್ರತಿನಿಧಿಗಳಾಗಿದ್ದ ಒಡೆಯರೇ ಉದ್ಘಾಟಿ ಸಿದರು. ಉಡುಪಿಯ ಕೃಷ್ಣನಿಗೆ ವಿಶೇಷ ಸೇವೆಯನ್ನು ಸಲ್ಲಿಸಿದ್ದರು. ಶ್ರೀಮಠದ ಪರಂಪರೆಯ 32ನೇ ಯತಿಗಳಾದ ಶ್ರೀ ವಿಶ್ವಪ್ರಿಯ ತೀರ್ಥರ ಕಾಲದಲ್ಲಿ ಇದೇ ಅದಮಾರುಮಠದ ಅತಿಥಿಗೃಹನಿರ್ಮಾಣದ ಸುವರ್ಣಮಹೋತ್ಸವದ ಸಂದರ್ಭದಲ್ಲಿ ಮೈಸೂರಿನ ರಾಜವಂಶದ ಕುಡಿ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಹಿರಿಯರ ಸ್ಮರಣೆಯೊಂದಿಗೆ ಉಡುಪಿಗಾಗಮಿಸಿ ಸಮಾರಂಭದಲ್ಲಿ ಭಾಗವಹಿಸಿ ಶ್ರೀಪಾದರಿಂದ, ಶ್ರೀಕೃಷ್ಣನಿಂದ ಅನುಗ್ರಹವನ್ನು ಪಡೆದು ಪರಂಪರೆಯನ್ನು ಮುಂದುವರಿಸಿರುವರು. ಶ್ರೀಮಠದ ಪರಂಪರೆಯ 33ನೇ ಯತಿಗಳಾದ ಕಿರಿಯ ಪಟ್ಟದಲ್ಲಿರುವ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಕ್ಕಿಮುಹೂರ್ತದ ಸಂದರ್ಭದಲ್ಲೂ ಶ್ರೀ ಯದುವೀರರು ಭಾಗವಹಿಸಿದ್ದರು. ಮತ್ತೀಗ ಪರ್ಯಾಯದ ಸಂದರ್ಭದಲ್ಲೂ ಶ್ರೀಯುತರು ಆಹ್ವಾನಿತರು. ಪುತ್ತಿಗೆ ಮಠಾಧೀಶರ ಅವಧಿಯಲ್ಲಿ : ಶ್ರೀಪುತ್ತಿಗೆ ಮಠದ ಪರಂಪರೆಯ 24ನೇ ಯತಿಗಳಾದ ಶ್ರೀ ವನೇಂದ್ರತೀರ್ಥರು (ಪೀಠಕಾಲ 1789-1827 ಮಹಾ ತಪಸ್ವಿಗಳು, ಶತಾಯುಷಿಗಳು. ಅವರ ಶಿಷ್ಯ ಶ್ರೀ ರಾಜೇಂದ್ರತೀರ್ಥರು ಮಹಾಪಂಡಿತರು, ನಾಡಿನೆಲ್ಲೆಡೆ ಸಂಚಾರಗೈದು ಮಧ್ವಾಚಾರ್ಯರ ಸಿದ್ಧಾಂತವನ್ನು ಸ್ಥಾಪನೆಗೈದವರು. ಮೈಸೂರಿನ ಅರಸರಿಂದಲೂ ವಿದ್ವತ್ ಸಭೆಗೆ ಆಹ್ವಾನಿ ತರಾಗಿ, ವಾದಕಥೆಯನ್ನು ನಡೆಸಿ ವಿಜಯಶಾಲಿಗಳಾದರು. ಆಚಾರ್ಯಮಧ್ವರ ತತ್ವವಾದದ ಹಿರಿಮೆಯನ್ನು ಅರಮನೆ ಯಲ್ಲಿ ಸಾರಿದರು. ಅಂದಿನ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್(ಆಡಳಿತ ಕಾಲ 1794-1868) ಶ್ರೀ ರಾಜೇಂದ್ರ ತೀರ್ಥರ ವಿದ್ವತ್ತನ್ನು ಗೌರವಿಸಿ ಕನಕಾಭಿಷೇಕ ನಡೆಸಲು ಉದ್ಯುಕ್ತರಾದರು. ಶಿಷ್ಯರಾದ ಶ್ರೀ ರಾಜೇಂದ್ರತೀರ್ಥರು ಗುರುಗಳಿಲ್ಲದೆ ಅಭಿಷೇಕ ಸ್ವೀಕರಿಸಲು ಒಪ್ಪದೆ ಮತ್ತೊಮ್ಮೆ ಅರಸನ ಪ್ರಾರ್ಥನೆಯಂತೆ ಗುರುಗಳೊಡನೆ ಅರಮನೆಗೆ ಚಿತ್ತೈಸಿ ತನ್ನೆಲ್ಲ ಸಾಧನೆಗಳಿಗೆ ಮೂಲಕಾರಣರಾದ ಗುರುಗಳಿಗೇ ಕನಕಾಭಿಷೇಕ ನಡೆಸುವಂತೆ ಪ್ರೇರೇಪಿಸಿದರು. ಒಡೆಯರ್ ಬಹು ಧನ-ಕನಕ ಗಳನ್ನು ಶ್ರೀಮಠಕ್ಕೆ ಅರ್ಪಿಸಿದರು. ಅಂದಿನಿಂದ ಪುತ್ತಿಗೆ ಮಠ ಪುತ್ಥಳಿ ಮಠ ಎಂದು ಪ್ರಸಿದ್ಧಿಗೊಂಡಿತು. ಉಡುಪಿಯ ಶ್ರೀ ಅನಂತೇಶ್ವರ ದೇವಳದ ಮುಖ್ಯಸ್ಥರಾಗಿದ್ದ ಶ್ರೀ ಭುವನೇಂದ್ರತೀರ್ಥರಿಗೆ ಸನ್ನಿಧಿಯಲ್ಲಿ ಮೃಷ್ಟಾನ್ನ ಭೋಜನ ಸೇವೆಯನ್ನು ನಡೆಸಲು ಉಂಬಳಿಯನ್ನು ಮೈಸೂರು ಅರಸರು ನೀಡಿದ್ದರು. ಶ್ರೀಪುತ್ತಿಗೆ ಮಠದ ಪರಂಪರೆಯ ೨೮ನೇ ಯತಿಗಳಾದ ಶ್ರೀ ಸುಜ್ಞಾನೇಂದ್ರ ತೀರ್ಥರ (ಪೀಠಕಾಲ 1954-74)ರ ಕಾಲದಲ್ಲೂ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಉಡುಪಿಯ ಶ್ರೀಮಠಕ್ಕೆ ಆಗಮಿಸಿ ಶ್ರೀಪಾದರ ಅನುಗ್ರಹವನ್ನು ಪಡೆದಿದ್ದರು. ಶ್ರೀಪುತ್ತಿಗೆಮಠದ ಪರಂಪರೆಯ 29ನೇ ಯತಿಗಳಾದ ಶ್ರೀಸುಗುಣೇಂದ್ರ ತೀರ್ಥರ ಬಳಿಯೂ ಅನೇಕ ಸಲ ಆಗಮಿಸಿದ ರಾಜವಂಶಸ್ಥ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಶ್ರೀಪಾದರ ಅನುಗ್ರಹವನ್ನು ಪಡೆದಿದ್ದಾರೆ. ಸೋದೆ ಮಠಾಧೀಶರ ಅವಧಿಯಲ್ಲಿ : ಶ್ರೀ ಸೋದೆ ಮಠದ ೩೨ನೇ ಯತಿಗಳಾದ ಶ್ರೀ ವಿಶ್ವಪ್ರಿಯತರ‍್ಥರು(ಪೀಠಕಾಲ 1794-1865) ಮಹಾತಪಸ್ವಿಗಳು. ವಾದಿರಾಜರ ವೃಂದಾವದಿಂದಲೇ ಅನುಗ್ರಹಪೂರ್ವಕವಾಗಿ ಮಂತ್ರಾಕ್ಷತೆಯನ್ನು ಪಡೆದು ವಿದ್ಯೆ ಯನ್ನು ಪಡೆದ ಮಹಾಮಹಿಮರು. ವೃಂದಾವನಾಚಾರ್ಯರು ಎಂದೇ ಪ್ರಸಿದ್ಧರು. ಮೈಸೂರು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನಕ್ಕೆ ಶ್ರೀಪಾದರನ್ನು ಬರಮಾಡಿಕೊಂಡು ಬಹುವಾಗಿ ಸಮ್ಮಾನಿಸಿದ್ದರು. ಶ್ರೀಪಾದರ ಮೂರನೆಯ ಪರ್ಯಾಯ(1836-38)ದ ಸಂದರ್ಭದಲ್ಲಿ ದರ್ಬಾರ್ ಸಭೆಯಲ್ಲಿ ಪಾಲ್ಗೊಂಡ ಮಹಾರಾಜರು ಹಾಗೂ ರಾಜಮಹಿಳೆಯರು, ಕೇವಲ ಕೌಪೀನಧಾರಿಗಳಾಗಿ ಪರಮವಿರಕ್ತರಾಗಿದ್ದ ಶ್ರೀಪಾದರನ್ನು ಕಂಡು ಪ್ರಭಾವಿತಗೊಂಡರು. ಪರ್ಯಾಯ ಸಂದರ್ಭದಲ್ಲಿ ಅನೇಕ ಸೈನಿಕರ ಪಡೆಗಳನ್ನೂ ಶ್ರೀಪಾದರ ರಕ್ಷಣೆಗಾಗಿ ಸನ್ನದ್ಧಗೊಳಿಸಿದ್ದರು. ಶ್ರೀಕೃಷ್ಣನಿಗೆ ತುರಗ ಆಂದೋಲಿಕಾದಿ ಅನೇಕ ಸಂಪತ್ತುಗಳನ್ನು ಸಮರ್ಪಿಸಿ ಕೃತಾರ್ಥರಾದರು. ಈ ಬಗ್ಗೆ ಶಾಸನವೂ ಉಪಲಬ್ಧವಿದೆ. ಶ್ರೀಮಠದ 33ನೇ ಯತಿಗಳಾದ ಶ್ರೀ ವಿಶ್ವಾಧೀಶತೀರ್ಥರು ಹಾಗೂ ೩೪ನೇ ಯತಿಗಳಾದ ಶ್ರೀ ವಿಶ್ವೇಂದ್ರತೀರ್ಥರಿಗೂ ಮೈಸೂರು ಅರಸರ ಸಂಪರ್ಕವಿದ್ದುದು ತಿಳಿದುಬರುತ್ತದೆ. ರಾಜವಂಶದ ಕುಡಿ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಶ್ರೀಮಠದ 35ನೇ ಯತಿಗಳಾದ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರಿಂದ ಅನುಗ್ರಹೀತರು. ಕಾಣಿಯೂರು ಮಠಾಧೀಶರ ಕಾಲದಲ್ಲಿ : ಶ್ರೀ ಕಾಣಿಯೂರು ಮಠದ 25ನೆಯ ಯತಿಗಳಾದ ಶ್ರೀ ವಿದ್ಯಾಪತಿ ತರ‍್ಥರು ಮಹಾ ಪಂಡಿತರು. ಅವರ ಪರ್ಯಾಯ ಕಾಲದಲ್ಲಿ ಮೈಸೂರಿನ ಕೃಷ್ಣರಾಜ ಒಡೆಯರ್ ಉಡುಪಿಗೆ ಕೃಷ್ಣದರ್ಶನಕ್ಕಾಗಿ ಆಗಮಿಸಿದ್ದರು. ಕಾಲಮಾನದ ತಾಳೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರೇ ಉಡುಪಿಗೆ ಆಗಮಿಸಿದ್ದಿರಬೇಕು. ಪೇಜಾವರ ಮಠಾಧೀಶರ ಅವಧಿಯಲ್ಲಿ : ಪೇಜಾವರ ಮಠದ 33ನೇ ಯತಿಗಳಾದ ಶ್ರೀ ವಿಶ್ವೇಶತೀರ್ಥ (ಪೀಠಕಾಲ 1938-2019)ರ ಎಳೆಯ ಪ್ರಾಯದಲ್ಲಿಯೇ ಮೈಸೂರುಸೀಮೆಯಲ್ಲಿ ನಡೆದ ವೈದಿಕ ಮಹಾಸಮ್ಮೇಳನದಲ್ಲಿ ಶ್ರೀಪಾದರು ನೀಡಿದ್ದ ಪ್ರಬುದ್ಧ ಪಾಂಡಿತ್ಯಪುರ್ಣ ಅಧ್ಯಕ್ಷೀಯ ನುಡಿಗಳನ್ನು ಆಲಿಸಿ ಬಹುಪ್ರಭಾವಿತರಾಗಿದ್ದ ಮೈಸೂರಿನ ಕೊನೆಯ ಮಹಾರಾಜ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಶ್ರೀಪಾದರನ್ನು ಬಹುವಾಗಿ ಸ್ತುತಿಸಿದ್ದರು. ಮುಂದೆ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯ ಕಾಲದಲ್ಲಿ ನಡೆಸಿದ ಮಾಧ್ವ ತತ್ವಜ್ಞಾನ ಸಮ್ಮೇಳನದಲ್ಲಿ ಮುಖ್ಯ ವ್ಯಕ್ತಿಗಳಾಗಿ ಒಡೆಯರ್ ಉಪಸ್ಥಿತಿ ಉಡುಪಿಯಲ್ಲಿ ಅತ್ಯಂತ ವೈಭವವನ್ನು ತಂದಿತ್ತು. ಈಗಿನ ರಾಜವಂಶಸ್ಥ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೇಜಾವರ ಶ್ರೀಪಾದರ ಮೇಲೆ ಅತ್ಯಂತ ಗೌರವವನ್ನು ಹೊಂದಿರುವವರಾಗಿದ್ದಾರೆ. ಹೀಗೆ ವಿಜಯನಗರ, ಕೊಚ್ಚಿ, ತಿರುವಾಂಕೂರು, ಮಾಯಿಪ್ಪಾಡಿ ಅರಸರು, ಬಾರ್ಕೂರಿನ ಸಾಮಂತರು ಇನ್ನಿತರರು ಅನೇಕ ಶ್ರೀಕೃಷ್ಣನ ಪಾದಪದ್ಮಾರಾಧಕರಾದ ಅಷ್ಟಮಠಾಧೀಶರ ಸಂಪರ್ಕವನ್ನು ಅನುಗ್ರಹವನ್ನು ಹೊಂದಿರುವುದು ಐತಿಹಾಸಿಕವಾಗಿ ತಿಳಿದುಬರುವುದು. ಈ ಮೂಲಕ ಉಡುಪಿಯ ಅಷ್ಟಮಠಾಧೀಶರ ಪ್ರಭಾವಪೂರ್ಣ ವ್ಯಕ್ತಿತ್ವವೂ, ಇತಿಹಾಸದ ರಾಜರ ಧಾರ್ಮಿಕ ಶ್ರದ್ಧೆಯೂ ಇಂದಿನವರಿಗೆ ಆದರ್ಶ ಪ್ರಾಯವಾಗಿದೆ.
ಓಟಿಟಿ ``ಬಿಗ್ ಬಾಸ್`` ನಲ್ಲಿ ಪಾಲ್ಗೊಂಡಿದ್ದ ಅರ್ಜುನ್ ರಮೇಶ್ ನಾಯಕನಾಗಿ ನಟಿಸಿರುವ ``ಕೌಟಿಲ್ಯ``ಚಿತ್ರ ಇದೇ ಶುಕ್ರವಾರ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿದೆ.. ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರಕ್ಕೆ ನೀವು, ಆರಂಭದಿಂದಲೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನನ್ನ ಧನ್ಯವಾದ. ಈಗಾಗಲೇ ಬಿಡುಗಡೆಯಾಗಿರುವ ನಮ್ಮ ಚಿತ್ರದ ಟ್ರೇಲರ್ ಪ್ರೇಕ್ಷಕರ ಮನ ತಲುಪಿದೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಸೂರಿ ಸೇರಿದಂತೆ ಸಾಕಷ್ಟು ಗಣ್ಯರು ಸಹ ಟ್ರೇಲರ್ ಬಗ್ಗೆ ಉತ್ತಮ ಮಾತುಗಳಾಡಿದ್ದಾರೆ. ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಪ್ರಭಾಕರ್ ಶೇರಖಾನೆ ತಿಳಿಸಿದರು. ನಾನು ಈ ಹಿಂದೆ ``ಶನಿ`` ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಗಿನಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆದಿದೆ. ನನ್ನದು ಈ ಚಿತ್ರದಲ್ಲಿ ಆರ್ಕಿಟೆಕ್ಟ್ ಇಂಜಿನಿಯರ್‌ ಪಾತ್ರ. ಒಬ್ಬ ಇಂಜಿನಿಯರ್ ಚಾಣಕ್ಯನ ತಂತ್ರಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ನಾಯಕ ಅರ್ಜುನ್ ರಮೇಶ್ ತಮ್ಮ ಪಾತ್ರ‌ ಹಾಗೂ ಚಿತ್ರದ ಕುರಿತು ಮಾತನಾಡಿದರು. ನಾನು ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನನ್ನು ಧಾರಾವಾಹಿಗಳಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಇದರಲ್ಲಿ ಒಬ್ಬರೂ ಬಯ್ದರೆ ವಾಪಸ್ ಬಯ್ಯುವ ಹುಡುಗಿ ನಾನು. ವಿಭಿನ್ನ ಪಾತ್ರ ನೀಡಿರುವ ನಿರ್ದೇಶಕರಿಗೆ ಧನ್ಯವಾದ ಎನ್ನುತ್ತಾರೆ ನಾಯಕಿ ಪ್ರಿಯಾಂಕ ಚಿಂಚೋಳಿ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ನಿರ್ಮಾಪಕ ವಿಜೇಂದ್ರ.ಬಿ.ಎ ವಿಶೇಷ ಧನ್ಯವಾದಗಳನ್ನು ತಿಳಿಸಿದರು.
far-forth ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ಡಿಬಿಟಿ ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು. ಮುಖ್ಯಾಂಶಗಳು ದಿವ್ಯ ಕಾಶಿ – ಭವ್ಯ ಕಾಶಿಯಾಗಿ ಅನಾವರಣಗೊಂಡಿರುವ ಕಾಶಿಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆ ಪ್ರಾರಂಭಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಇದಕ್ಕಾಗಿ ಅಗತ್ಯ ಅನುದಾನವನ್ನೂ ನೀಡಲಾಗಿದೆ. ಯಾತ್ರಾರ್ಥಿಗಳು ಸುಲಭವಾಗಿ ಸಹಾಯಧನ ಪಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುವ ವೆಬ್‌ಪೋರ್ಟಲ್‌ನ್ನು ಸೇವಾಸಿಂಧು ವೆಬ್‌ಪೋರ್ಟ್‌ಲ್‌ನಲ್ಲಿ ಸಿದ್ದಪಡಿಸಲಾಗಿದೆ. ಯಾತ್ರಾರ್ಥಿಗಳು ಕಾಶಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಅಲ್ಲಿನ ಕರ್ನಾಟಕ ಛತ್ರದಲ್ಲಿ ತಮ್ಮ ಹೆಸರು ನೊಂದಣಿ ಮಾಡಿಸಿಕೊಂಡು ಅಗತ್ಯ ದಾಖಲಾತಿಗಳನ್ನು ವೆಬ್‌ಪೋರ್ಟ್‌ಲ್‌ ಮೂಲಕ ಸಲ್ಲಿಸಬಹುದು. ಈ ರೀತಿಯಾಗಿ ಅಪ್‌ಲೋಡ್‌ ಮಾಡಲಾದ ದಾಖಲೆಗಳನ್ನು ಪರಿಶೀಲಿಸಿ ಅರ್ಜಿದಾರರ ಆಧಾರ್‌ ಲಿಂಕ್‌ ಹೊಂದಿರುವ ಬ್ಯಾಂಕ್‌ ಖಾತೆಗೆ ರೂ. 5,000 ಗಳ ಸಹಾಯ ಧನವನ್ನು ನೇರವಾಗಿ ಡಿ.ಬಿ.ಟಿ ಮೂಲಕ ಜಮಾ ಮಾಡಲಾಗುವುದು.
ಬುಧವಾರ ಬೆಳಗ್ಗೆ ಸಿಟಿ ಸಿವಿಲ್ ನ್ಯಾಯಾಲಯದಿಂದ ಭುವನೇಶ್ವರಿ ದೇವಿ ಜ್ಯೋತಿ ಮೆರವಣಿಗೆ ಹಾಗೂ ಬೈಕ್ ಮೂಲಕ ಹೈಕೋರ್ಟ್‌ಗೆ ತೆರಳಿದ ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಸದಸ್ಯರು ರಿಜಿಸ್ಟ್ರಾರ್ ಜನರಲ್‌ಗೆ ಮನವಿ ಸಲ್ಲಿಸಿದರು. Bar & Bench Published on : 2 Nov, 2022, 5:29 pm ರಾಜ್ಯದ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಂತೆ ಕೋರಿ ಬೆಂಗಳೂರು ವಕೀಲರ ಸಾಹಿತ್ಯ ಕೂಟ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ. ಬುಧವಾರ ಬೆಳಗ್ಗೆ ಸಿಟಿ ಸಿವಿಲ್ ನ್ಯಾಯಾಲಯದಿಂದ ಭುವನೇಶ್ವರಿ ದೇವಿ ಜ್ಯೋತಿ ಮೆರವಣಿಗೆ ಹಾಗೂ ಬೈಕ್ ರ್‍ಯಾಲಿ ಮೂಲಕ ಹೈಕೋರ್ಟ್‌ಗೆ ತೆರಳಿದ ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಸದಸ್ಯರು ರಿಜಿಸ್ಟ್ರಾರ್ ಜನರಲ್‌ಗೆ ಮನವಿ ಸಲ್ಲಿಸಿದರು. ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ವಕೀಲರಿಗೆ ಕನ್ನಡದಲ್ಲಿ ವಾದ ಮಂಡಿಸಲು ಹಾಗೂ ನ್ಯಾಯಾಧೀಶರಿಗೆ ಕನ್ನಡದಲ್ಲಿ ತೀರ್ಪು ಬರೆಸಲು ಅವಕಾಶ ಕಲ್ಪಿಸಬೇಕು ಎಂದು ವಕೀಲರ ಸಾಹಿತ್ಯ ಕೂಟ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದೆ. ನ್ಯಾಯಾಲಯದ ಕಲಾಪಗಳಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಬಹುದೊಡ್ಡ ಅಭಿಯಾನ ಇದಾಗಿದೆ. ಈ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಗಿದೆ. ಜತೆಗೆ, ಬೆಂಗಳೂರು ವಕೀಲರ ಸಂಘ ಹಾಗೂ ಸಾಹಿತ್ಯ ಕೂಟದ ವತಿಯಿಂದ ಕಾನೂನು ಪದಗಳನ್ನು ಕನ್ನಡೀಕರಣಗೊಳಿಸಿ ವಕೀಲರಿಗೆ ಕೈಪಿಡಿಗಳನ್ನು ಒದಗಿಸಲಾಗುತ್ತಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೇಳಿದರು.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮೇಷ ರಾಶಿ: ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಆರೋಗ್ಯ ಸುಧಾರಿಸಲಿದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಂತುಹೋದ ಕಾರ್ಯ ಮತ್ತೆ ಪ್ರಾರಂಭವಾಗುವುದಕ್ಕೆ ಅವಕಾಶಗಳು ದೊರೆಯಲಿವೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ.http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ವೃಷಭ ರಾಶಿ: ಇಂದು ನಿಮ್ಮ ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳುತ್ತದೆ ಮತ್ತು ನೀವು ಹೂಡಿಕೆಯಲ್ಲಿ ಲಾಭ ಪಡೆಯುತ್ತೀರಿ. ಕುಟುಂಬದಲ್ಲಿ ಪರಸ್ಪರ ಪ್ರೀತಿ ಕಾಳಜಿಯಿಂದ ನಿಮಗೆ ಸಂತೋಷ ಸಿಗುತ್ತದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. . ಮಿಥುನ ರಾಶಿ: ಎಲ್ಲಾ ಕೆಲಸ ಕಾರ್ಯಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳಿ. ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಿಮ್ಮ ಹಿರಿಯರ ಮಾತಿಗೆ ಬೆಲೆ ಕೊಟ್ಟು ಅವರ ಮಾತಿನಂತೆ ನಡೆದುಕೊಳ್ಳಿ. ಯಶಸ್ಸಿದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ ಕಟಕ ರಾಶಿ: ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇತರರ ಸಹಾಯದಿಂದ ನೀವು ಸ್ಥಗಿತಗೊಂಡ ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಸಿಂಹ ರಾಶಿ: ಜನಬೆಂಬಲಗಳನ್ನು ಕ್ರೋಢೀಕರಿಸಿಕೊಳ್ಳಲು ರಾಜಕೀಯ ಕ್ಷೇತ್ರದವರಿಗೆ ಯೋಗ್ಯ ದಿನ. ಭಾವನಾತ್ಮಕ ತಲ್ಲಣಗಳನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ತೊಂದರೆ ಎದುರಾಗುವುದು ನಿಶ್ಚಿತ. ಸಮಯದ ಲಾಭವನ್ನು ಪಡೆದುಕೊಳ್ಳಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕನ್ಯಾ ರಾಶಿ: ದೂರದ ಬಂಧುವೊಬ್ಬರನ್ನು ಭೇಟಿಯಾಗಲು ಹಲವು ಕಾರಣಗಳು ಕೂಡಿ ಬರಬಹುದು. ವಿಭಿನ್ನ ಅನುಭವಗಳು ಎದುರಾಗಲಿವೆ. ಸಮಾಜದಲ್ಲಿಸಕಾರಾತ್ಮಕವಾಗಿ ಗುರುತಿಸಿಕೊಂಡ ನೀವು ಅದರಿಂದಾಗಿಯೇ ಹೆಚ್ಚು ಹೆಚ್ಚು ಅರ್ಥಪೂರ್ಣತೆ ಪಡೆಯಲಿದ್ದೀರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ತುಲಾ ರಾಶಿ: ವಿವಾಹಾಪೇಕ್ಷಿ ಯೋಗ್ಯವಾದ ಸಂಗಾತಿಯ ಹುಡುಕಾಟದಲ್ಲಿದ್ದರೆ ಇಂದು ಸಿದ್ಧಿ ಪಡೆಯುವ ವಿಶೇಷ ಅವಕಾಶವಿದೆ. ವ್ಯರ್ಥ ಖರ್ಚು ಇರುತ್ತದೆ. ಕೆಲವರು ದೂರ ಅಥವಾ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸಬೇಕಾಗಬಹುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ವೃಶ್ಚಿಕ ರಾಶಿ: ಒತ್ತಡವನ್ನು ನಿವಾರಿಸುವ ಮೂಲಕ ನಿಮ್ಮ ಎಲ್ಲಾ ಕಾರ್ಯಗಳನ್ನು ನೀವು ಸಮರ್ಥವಾಗಿ ನಿಭಾಯಿಸುವಿರಿ. ಇಂದು, ಯಾರೊಂದಿಗೂ ವಿವಾದಕ್ಕೆ ಸಿಲುಕಿಕೊಳ್ಳದಿರುವುದು ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಧನುಸ್ಸು ರಾಶಿ: ಸಾಕು ಪ್ರಾಣಿಗಳು ಕಿರಿಕಿರಿ ಉಂಟುಮಾಡಬಹುದು. ಹೀಗಾಗಿ ಅವುಗಳಿಗೆ ಅನಗತ್ಯ ಸಲುಗೆ ನೀಡಬೇಡಿ. ವೃತ್ತಿಯಲ್ಲಿ ತುಸು ಏರುಪೇರು ಆಯಿತೆಂದು ಅನಿಸಿದರೂ ದಿನದ ಕೊನೆಯ ಹೊತ್ತಿಗೆ ಶುಭ ಸಮಾಚಾರವನ್ನು ಕೇಳುವಿರಿ.ಇಂದು ಬಿಡುವಿಲ್ಲದ ದಿನವಾಗಿರುತ್ತದೆ, ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮಕರ ರಾಶಿ: ಕುಟುಂಬದ ಸದಸ್ಯರ ಬೆಂಬಲದೊಂದಿಗೆ ಧೈರ್ಯದಿಂದ ಮುನ್ನುಗ್ಗಿದರೆ ಕ್ರಿಯಾಶೀಲತೆ ನಿಮ್ಮ ಕೈ ಹಿಡಿಯಲಿದೆ. ಕಚೇರಿಯಲ್ಲಿ ವಿಶೇಷವಾದ ಸೌಲಭ್ಯಗಳಿಗೆ ಪಾತ್ರರಾಗಲಿದ್ದೀರಿ. ಮಿತ್ರರೊಂದಿಗೆ ಸಮಯ ಕಳೆಯುವಿರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕುಂಭ ರಾಶಿ: ಸಂಬಂಧಿಕರೊಂದಿಗಿದ್ದ ಯಾವುದೇ ರೀತಿಯ ದ್ವೇಷವನ್ನು ತೆಗೆದುಹಾಕುವುದು ಮತ್ತು ಹಳೆಯ ಎಲ್ಲ ವಿಷಯಗಳನ್ನು ಮರೆತು ಮುಂದೆ ಸಾಗುವ ದಿನ ಇದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮಿನ ರಾಶಿ: ಮನಬಂದಂತೆ ಚಿನ್ನಾಭರಣಗಳನ್ನು ಖರೀದಿ ಮಾಡುವುದು ಒಳಿತನ್ನು ತರಲಾರದು. ಉಳಿತಾಯದಿಂದ ಒಳಿತಿದೆ. ನಂಬಿಕೆಗಳ ಪ್ರಶ್ನೆ ಈಗ ಪ್ರಮುಖವಲ್ಲ. ಇಂದಿನ ವ್ಯವಹಾರದ ಕಾರ್ಯಶೀಲತೆಯೇ ನಿಮ್ಮ ಪ್ರಮುಖ ಆದ್ಯತೆಯಾಗಿರಲಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags daily bhavishya daily horoscope daily panchanga daily rashi bhavishya horoscope my acharya nithya bhavishya Nithya Bhavishya nithya bhavishya in kannada nithya panchanga rashi bavishya rashi bhavishya rashi bhavishya 2020
ರಾಜ್ಯದಲ್ಲಿ ಈಗಾಗಲೆ ವರುಣನ ಅಬ್ಬರ ಜೋರಾಗಿದೆ. ಇನ್ನು 4 ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ಕಳೆದ ಹತ್ತು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ (Karnataka Rain). ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಮಳೆ ಸುರಿಯಲಿದೆ (Monsoon 2021) ಎಂದು ಹವಾಮಾನ ಇಲಾಖೆ ಕೆಲ ದಿನಗಳ ಹಿಂದೆಯೇ ಮುನ್ಸೂಚನೆ (Weather Forecast) ನೀಡಿತ್ತು. ಇದೀಗ ಕನಿಷ್ಟ ಜುಲೈ 21ರ ತನಕ ಮಳೆಯ ವಾತಾವರಣ ಏರಿಳಿತದೊಂದಿಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ. ಕರ್ನಾಟಕದಲ್ಲಿ ನಾಳೆ (ಜುಲೈ 19) ಹಾಗೂ ಜುಲೈ 22ರಂದು ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು ಪರೀಕ್ಷಾ ಕೇಂದ್ರಗಳಿಗೆ ತೆರಳುವಾಗ ಮಕ್ಕಳು ಜಾಗ್ರತೆಯಿಂದ ಹೋಗುವಂತೆ ನೋಡಿಕೊಳ್ಳಬೇಕಿದೆ. ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಜುಲೈ 21ರವರೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗ ಕೆಲವೆಡೆ ಗುಡುಗು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜು.18 ಮತ್ತು 21ರವರೆಗೆ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ. 4 ದಿನ ವ್ಯಾಪಕ ಮಳೆ ಸಾಧ್ಯತೆ : ಮಲೆನಾಡಿಗೆ ಆರೆಂಜ್‌ ಅಲರ್ಟ್‌ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ 18ರಿಂದ 19ರವರೆಗೆ ಆರೆಂಜ್‌ ಅಲರ್ಟ್‌ ಇದ್ದು, ಜುಲೈ 20 ಮತ್ತು 21ರಂದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ ಇದ್ದು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ಜು.19 ರಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕೇರಳದಿಂದ ಮಹಾರಾಷ್ಟ್ರದ ಕಡೆಗೆ ವೇಗವಾದ ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದು, ಅದರ ಪ್ರಭಾವದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಇಂದು ಧಾರಾಕಾರ ಮಳೆಯಾಗಲಿದೆ. ಜತೆಗೆ ದಕ್ಷಿಣ ಒಳನಾಡಿನಲ್ಲೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಒಂದು ವಾರದ ತನಕ ಇದೇ ರೀತಿ ಮಳೆಯ ವಾತಾವರಣ ಮುಂದುವರೆಯಲಿದ್ದು ನಂತರ ಕಡಿಮೆಯಾಗುವ ನಿರೀಕ್ಷೆ ಇದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ಸದ್ಯಕ್ಕೆ ನಿಲ್ಲುವುದು ಅನುಮಾನ ಎನ್ನಲಾಗಿದೆ. ಈಗಾಗಲೇ ಕೆಲ ದಿನಗಳಿಂದ ಮಲೆನಾಡು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸೂಕ್ತ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ಇಂದು ಮತ್ತು ನಾಳೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಭಾರೀ ಮಳೆಯ ನಿರೀಕ್ಷೆಯಿದೆ.
ಸುಪ್ರೀಂಕೋರ್ಟ್‌ ಕಲಾಪ ಇಂದಿನಿಂದ ನೇರಪ್ರಸಾರ ಆರಂಭವಾಗಲಿದ್ದು, ಮೊದಲು ಸಾಂವಿಧಾನಿಕ ಪೀಠದ ಅರ್ಜಿಗಳ ವಿಚಾರಣೆ ಮಾತ್ರ ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ. ಇನ್ನು, ತಾತ್ಕಾಲಿಕವಾಗಿ ಯೂಟ್ಯೂಬ್‌ ಮೂಲಕ ಪ್ರಸಾರವಾಗಲಿದ್ದು, ನಂತರ ತನ್ನದೇ ಆದ ಪ್ಲಾಟ್‌ಫಾರ್ಮ್‌ ಮೂಲಕ ಪ್ರಸಾರ ಮಾಡಲಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೇಳಿದರು. Kannadaprabha News First Published Sep 27, 2022, 8:12 AM IST ನವದೆಹಲಿ: ನ್ಯಾಯಾಲಯದ ಕಲಾಪಗಳನ್ನು (Court Proceedings) ನೇರಪ್ರಸಾರ (Live Stream) ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡ ಸುಮಾರು 4 ವರ್ಷಗಳ ಬಳಿಕ, ಸೆಪ್ಟೆಂಬರ್ 27ರ ಸೋಮವಾರದಿಂದ ಸುಪ್ರೀಂಕೋರ್ಟ್‌ನ (Supreme Court) ವಿಚಾರಣೆಯ ನೇರ ಪ್ರಸಾರಕ್ಕೆ ಚಾಲನೆ ನೀಡಲಾಗುತ್ತಿದೆ. ಆದರೆ, ಪ್ರಾರಂಭಿಕ ಹಂತದಲ್ಲಿ ಕೇವಲ ಸಾಂವಿಧಾನಿಕ ಪೀಠದಲ್ಲಿ (Constitution Bench) ವಿಚಾರಣೆಯಾಗುವ ಅರ್ಜಿಗಳ ವಿಚಾರಣೆ ಮಾತ್ರವೇ ಯೂಟ್ಯೂಬ್‌ (You Tube) ಮೂಲಕ ನೇರ ಪ್ರಸಾರ ಮಾಡಲಾಗುವುದು. ಸಾಂವಿಧಾನಿಕ ಮಹತ್ವದ ಅರ್ಜಿಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡುವುದರಿಂದ ಜನರಿಗೂ ಅವುಗಳ ಕುರಿತು ಅರಿವು ಮೂಡುತ್ತದೆ ಮತ್ತು ವಿಚಾರಣೆಯ ಮಾಹಿತಿಯ ಸಂಗ್ರಹವು ಭವಿಷ್ಯಕ್ಕೆ ಉತ್ತಮ ಸಂಗ್ರಹವೂ ಆಗುತ್ತದೆ. ಹೀಗಾಗಿ ಶೀಘ್ರವೇ ಕಲಾಪ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಇತ್ತೀಚೆಗೆ ಹಿರಿಯ ವಕೀಲೆ (Senior Lawyer) ಇಂದಿರಾ ಜೈಸಿಂಗ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ಸಭೆ ಸೇರಿ ಸೆಪ್ಟೆಂಬರ್‌ 27ರಿಂದಲೇ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡುವ ನಿರ್ಧಾರವನ್ನು ಇತ್ತೀಚೆಗೆ ಪ್ರಕಟಿಸಿದ್ದರು. ಅದರಂತೆ ಮಂಗಳವಾರ ಸಾಂವಿಧಾನಿಕ ಪೀಠದ ಅರ್ಜಿಯ ವಿಚಾರಣೆ ಪ್ರಸಾರವಾಗಲಿದೆ. ಕಳೆದ ಆಗಸ್ಟ್ 26ರಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠದ ವಿಚಾರಣೆಯನ್ನು ಮೊಟ್ಟ ಮೊದಲ ಬಾರಿಗೆ ನೇರಪ್ರಸಾರ ಮಾಡಲಾಗಿತ್ತು. ಆದರೆ ಅದು ಪ್ರಾಯೋಗಿಕವಾಗಿತ್ತು. ಇದನ್ನು ಓದಿ: Hijab Controversy ಪಿಎಫ್‌ಐನ ಬಹುದೊಡ್ಡ ಪಿತೂರಿ: ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ ನೇರ ಪ್ರಸಾರಕ್ಕೆ ಶೀಘ್ರ ಪ್ರತ್ಯೇಕ ವ್ಯವಸ್ಥೆ: ಈ ನಡುವೆ ಯುಟ್ಯೂಬ್‌ನಲ್ಲಿ ಪ್ರಸಾರವಾಗುವ ನ್ಯಾಯಾಲಯದ ಕಲಾಪದ ಮೇಲಿನ ಹಕ್ಕುಸ್ವಾಮ್ಯ ಯುಟ್ಯೂಬ್‌ಗೆ ಹೋಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎನ್‌.ಗೋಂವಿದಾಚಾರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಇದು ತಾತ್ಕಾಲಿಕ ವ್ಯವಸ್ಥೆ. ಮುಂದೆ ನ್ಯಾಯಾಲಯದ ಕಲಾಪ ನೇರ ಪ್ರಸಾರಕ್ಕೆ ನಾವು ನಮ್ಮದೇ ಆದ ಪ್ರತ್ಯೇಕ ವ್ಯವಸ್ಥೆ ರೂಪಿಸಿಕೊಳ್ಳಲಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ ನ್ಯಾಯಪೀಠ ಸೋಮವಾರ ಹೇಳಿತು. ತನ್ನ ಪ್ರಕ್ರಿಯೆಗಳನ್ನು ಲೈವ್-ಸ್ಟ್ರೀಮ್ ಮಾಡಲು ತನ್ನದೇ ಆದ "ಪ್ಲಾಟ್‌ಫಾರ್ಮ್" ಅನ್ನು ಹೊಂದಿರುತ್ತದೆ ಮತ್ತು ಯೂಟ್ಯೂಬ್ ಬಳಕೆ ತಾತ್ಕಾಲಿಕವಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ದೇಶದ ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ಬಿಜೆಪಿಯ ಮಾಜಿ ನಾಯಕ ಕೆ.ಎನ್. ಸುಪ್ರೀಂ ಕೋರ್ಟ್ ಕಲಾಪಗಳ ಹಕ್ಕು ಸ್ವಾಮ್ಯವನ್ನು ಯೂಟ್ಯೂಬ್‌ನಂತಹ ಖಾಸಗಿ ವೇದಿಕೆಗಳಿಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಗೋವಿಂದಾಚಾರ್ಯ ಅವರ ವಕೀಲರು ವಾದಿಸಿದರು. "YouTube ವೆಬ್‌ಕಾಸ್ಟ್‌ನಲ್ಲಿ ಹಕ್ಕು ಸ್ವಾಮ್ಯವನ್ನು ಸ್ಪಷ್ಟವಾಗಿ ಕೇಳಿದೆ" ಎಂದು ವಕೀಲ ವಿರಾಗ್ ಗುಪ್ತಾ ಅವರು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. ಇದಕ್ಕೆ ಉತ್ತರ ನೀಡಿದ ಸುಪ್ರೀಂಕೋರ್ಟ್‌ ಸಿಜೆಐ "ಇವು ಆರಂಭಿಕ ಹಂತಗಳು. ನಾವು ಖಂಡಿತವಾಗಿಯೂ ನಮ್ಮದೇ ಆದ ವೇದಿಕೆಗಳನ್ನು ಹೊಂದುತ್ತೇವೆ. ಅದನ್ನು (ಹಕ್ಕುಸ್ವಾಮ್ಯ ಸಮಸ್ಯೆ) ನಾವು ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು ಮತ್ತು ಗೋವಿಂದಾಚಾರ್ಯರ ಮಧ್ಯಂತರ ಮನವಿಯನ್ನುಅಕ್ಟೋಬರ್ 17 ರಂದು ವಿಚಾರಣೆಗೆ ಪಟ್ಟಿ ಮಾಡಿದರು. 2018 ರ ತೀರ್ಪನ್ನು ಉಲ್ಲೇಖಿಸಿದ ವಕೀಲರು "ಈ ನ್ಯಾಯಾಲಯದಲ್ಲಿ ರೆಕಾರ್ಡ್ ಮಾಡಿದ ಮತ್ತು ಪ್ರಸಾರವಾದ ಎಲ್ಲಾ ವಸ್ತುಗಳ ಮೇಲಿನ ಹಕ್ಕು ಸ್ವಾಮ್ಯವು ಈ ನ್ಯಾಯಾಲಯಕ್ಕೆ ಮಾತ್ರ ಇರುತ್ತದೆ" ಎಂದು ಹೇಳಿದರು. ಹಾಗೂ, ವಕೀಲರು YouTube ಬಳಕೆಯ ನಿಯಮಗಳನ್ನು ಉಲ್ಲೇಖಿಸಿದರು ಮತ್ತು ಈ ಖಾಸಗಿ ವೇದಿಕೆಯು ಹಕ್ಕು ಸ್ವಾಮ್ಯವನ್ನು ಸಹ ಪಡೆಯುತ್ತದೆ ಎಂದು ಹೇಳಿದರು.
ಮಣಿಪುರದ ಮೇಲಿನ ಸಾಂಸ್ಕೃತಿಕ ದಾಳಿ 19ನೇ ಶತಮಾನದಿಂದ ಪ್ರಾರಂಭಗೊಂಡಿತು. ಸೇವೆಯ ಸೋಗಿನಲ್ಲಿ ಬಂದ ಕ್ರಿಶ್ಚಿಯನ್ ಮಿಷನರಿಗಳು ಮಣಿಪುರದ ಗುಡ್ಡಗಾಡುಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಪ್ರಕೃತಿಯನ್ನು ಆರಾಧಿಸುತ್ತಿದ್ದ ಸ್ಥಳೀಯರ ಕೈಗೆ ಶಿಲುಬೆಯನ್ನಿಟ್ಟರು. ನೆನಪಿರಲಿ, ಮಿಷನರಿಗಳಿಗೆ ಮತಾಂತರಕ್ಕಾಗಿ ಗುಡ್ಡಹತ್ತುವ ಮುನ್ನ ಕಣಿವೆ ಪ್ರದೇಶದಲ್ಲಿದ್ದ ವೈಷ್ಣವರನ್ನೂ ಕ್ರಿಶ್ಚಿಯನ್ ರಿಲಿಜನ್ ಎಡೆಗೆ ಎಳೆಯಲು ಪ್ರಯತ್ನಿಸಿದ್ದವು. ಕಣಿವೆಯ ಜನ ಕೇಳಿದ ಬೌದ್ಧಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸೋತ ಮಿಷನರಿಗಳು, ಮುಖ ಮಾಡಿದ್ದು ಗುಡ್ಡ ಕಾಡುಗಳಲ್ಲಿ ವಾಸವಿದ್ದ ಅರಣ್ಯವಾಸಿಗಳ ಕಡೆಗೆ. ಇಂದು ಮಣಿಪುರವನ್ನು ನಾಶಪಡಿಸಲು ಹಲವು ಶಕ್ತಿಗಳು ಶತ್ರುಗಳಾಗಿ ನಿಂತಿವೆ. ಅವುಗಳಲ್ಲಿ ಮುಖ್ಯವಾದವು ಕ್ರಿಶ್ಚಿಯನ್ ಮಿಷನರಿಗಳು, ಡ್ರಗ್ಸ್ ಮಾಫಿಯಾ, ಬಾಂಗ್ಲಾದೇಶಿ ನುಸುಳುಕೋರರು, ಇಸ್ಲಾಂಮಿಕ್ ಮೂಲಭೂತವಾದ ಮತ್ತು ಎಡಪಂಥೀಯರು. ಈ ದುಷ್ಟ ಶಕ್ತಿಗಳ ಉಪಟಳದಿಂದಾಗಿ ಇಂದು ಮಣಿಪುರದಲ್ಲಿ ಮಣಿಪುರಿ ಹೊರತುಪಡಿಸಿ ಬೇರಾವುದೇ ಭಾಷೆಯ ಸಿನಿಮಾ ಪ್ರದರ್ಶನ ಕಾಣುವುದಿಲ್ಲ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವಗಳನ್ನು ಶಾಲೆಗಳಲ್ಲೂ ಆಚರಿಸುತ್ತಿಲ್ಲ. ಸಾರ್ವಜನಿಕವಾಗಿ ತ್ರಿವರ್ಣವನ್ನು ಹಾರಿಸಿ ರಾಷ್ಟ್ರಗೀತೆ ಹಾಡಿ, ಭಾರತ್ ಮಾತಾ ಕೀ ಜೈ ಎಂದರೆ ಗುಂಡೇಟು ತಿನ್ನಬೇಕಾದೀತು. ಇದರೊಟ್ಟಿಗೆ ಮಹಾಭಾರತದ ಬಬ್ರುವಾಹನನ ಮೂಲಕ ಐತಿಹಾಸಿಕ ಸ್ಥಾನ ಪಡೆದಿರುವ ರಾಜ್ಯ ಮಣಿಪುರ. ಆದರೆ ಅಲ್ಲಿಯ ಜನರಿಗೆ ಈ ಇತಿಹಾಸಗಳು ಮರೆತು ಹೋಗಿವೆ. ಮಣಿಪುರವನ್ನು ನುಂಗಲು ಸಿದ್ಧವಾಗಿರುವ ಈ ತಿಮಿಂಗಿಲಗಳಿಂದ ಆ ರಾಜ್ಯವನ್ನು ರಕ್ಷಿಸಿರುವುದು ವೈಷ್ಣವ ಪಂಥ ಮತ್ತು ನೃತ್ಯ! ಮಹಾರಾಜ ಭ್ಯಾಗ್ಯಚಂದ್ರನ ಮೂಲಕ ಮಣಿಪುರದಲ್ಲಿ ವೈಷ್ಣವಪಂಥ ಪ್ರವರ್ಧಮಾನಕ್ಕೆ ಬಂತು. ಅದರೊಟ್ಟಿಗೇ ಕಲೆಗಳು. ಮುಖ್ಯವಾಗಿ ನೃತ್ಯ. ಮಣಿಪುರದ ನೃತ್ಯ ಪ್ರಾಕಾರಗಳ ಬಗ್ಗೆ ಒಂದಷ್ಟು ತಿಳಿಯೋಣ. ಲೇಖನದ ಮುಂದಿನ ಭಾಗಗಳನ್ನು ಓದುವಾಗ ತೀರಾ ಅಕಾಡೆಮಿಕ್ ಎನಿಸಬಹುದು. ಸ್ವಲ್ಪ ಸಹಿಸಿಕೊಳ್ಳಿ. ಮಣಿಪುರಿ ನೃತ್ಯವನ್ನು ಭಾರತದ ಪ್ರಮುಖ ಶಾಸ್ತ್ರೀಯ ನೃತ್ಯಗಳ ಪೈಕಿ ಒಂದನ್ನಾಗಿ ಪರಿಗಣಿಸಲಾಗಿದೆ. ವಿಶೇಷವಾಗಿ ವೈಷ್ಣವಸಿದ್ಧಾಂತದ ಅಡಿಯಲ್ಲಿ ಹುಟ್ಟಿಕೊಂಡಿರುವ ರಾಸ್ ಲೀಲಾ ಅತ್ಯಂತ ಸಂದರವಾದ ರಚನೆ. ರಾಧೆ ಮತ್ತು ಕೃಷ್ಣರ ನಡುವಿನ ಪ್ರೀತಿಯನ್ನು ಈ ನೃತ್ಯ ಅಭಿವ್ಯಕ್ತಗೊಳಿಸುತ್ತದೆ. ಶೈವ ಮತ್ತು ಶಕ್ತಿ ಪಂಥಗಳ ವಿಚಾರಗಳನ್ನೂ ಮಣಿಪುರ ನೃತ್ಯದಲ್ಲಿ ಕಾಣಬಹುದು. ಮಣಿಪುರಿ ನೃತ್ಯದ ಬೇರುಗಳನ್ನು ಹುಡುಕುತ್ತ ಹೊರಟರೆ ಅದು ಇಳಿಯುವುದು ಭರತನ ನಾಟ್ಯಶಾಸ್ತ್ರದೊಳಗೆ. ಈ ನಾಟ್ಯಗಳಲ್ಲಿ ಭಾರತ ಮತ್ತು ಆಗ್ನೇಯ ಏಶಿಯಾದ ಸಂಸ್ಕೃತಿಯ ಮಿಶ್ರಣವಿದೆ. ಮಣಿಪುರ ನೃತ್ಯ ವ್ಯಕ್ತವಾಗಿರುವುದೇ ಭಾರತೀಯ ಇತಿಹಾಸ ಆಧಾರಿತ ರಾಮಾಯಣ ಮತ್ತು ಮಹಾಭಾರತಗಳಿಂದ. ಹಿಂದು ಉತ್ಸವಗಳು ಮತ್ತು ಮದುವೆಯಂತಹ ಇತರ ಪ್ರಮುಖ ಸಾಂಸ್ಕೃತಿಕ ಸಂದರ್ಭಗಳಲ್ಲಿ ಈ ನೃತ್ಯಗಳನ್ನು ಕಾಣಬಹದು. ಆಧ್ಯಾತ್ಮಿಕ ಮೌಲ್ಯಗಳನ್ನು ವ್ಯಕ್ತಪಡಿಸುವುದು ಇದರ ಹಿಂದಿರುವ ಉದ್ದೇಶ. ಮಣಿಪುರದಲ್ಲಿ ನಡೆಯುವ ಮದುವೆ ಹಾಗೂ ಇತರ ಶುಭಸನ್ನಿವೇಶಗಳಲ್ಲಿ ನಡೆಯುವ ನೃತ್ಯ ಹಾಗೂ ಸಂಗೀತವನ್ನು ಆಸ್ವಾದಿಸುವುದೇ ದೊಡ್ಡ ಹಬ್ಬ. ಇತಿಹಾಸ ಮಣಿಪುರದ ಜನರು ತಮ್ಮನ್ನು ದೇವತೆಗಳ ಆಸ್ಥಾನದಲ್ಲಿ ಹಾಡಿ-ಕುಣಿಯುವ ಗಂಧರ್ವರ ವಂಶಸ್ಥರೆಂದು ನಂಬುತ್ತಾರೆ. ವೇದಗಳಲ್ಲಿ ಗಂಧರ್ವರ ಉಲ್ಲೇಖವಿದೆ. ಹಿಂದು ದೇವಸ್ಥಾನಗಳಲ್ಲಿ ಗಂಧರ್ವರ ಶಿಲ್ಪಗಳನ್ನು ಕಾಣಬಹುದು. ಮಣಿಪುರ ಪ್ರಚೀನ ಕೃತಿಗಳಲ್ಲಿ ಈ ಪ್ರದೇಶವನ್ನು ಗಂಧರ್ವದೇಶವೆಂದೇ ಕರೆಯಲಾಗಿದೆ. ಉಷಾ ದೇವಿಯೇ ಮಹಿಳೆಯರಿಗಾಗಿ ಹೊಸ ನೃತ್ಯಶೈಲಿಯನ್ನು ರಚಿಸಿ ಅದನ್ನು ಮಣಿಪುರದ ಮಹಿಳೆಯರಿಗೆ ಹೇಳಿಕೊಟ್ಟಳು ಎಂಬುದು ಪ್ರತೀತಿ. ರಾಜರ್ಶ್ರೀ ಭಾಗ್ಯಚಂದ್ರನ ಕಾಲದಲ್ಲಿ ಮಣಿಪುರದಲ್ಲಿ ನೃತ್ಯಕಲೆಗೆ ರಾಸಲೀಲೆ ಸೇರಿಕೊಂಡಿತು. ರಾಸಲೀಲೆ ನೃತ್ಯಪ್ರಾಕಾರವನ್ನು ಪ್ರಾರಂಭಿಸಿದ ಶ್ರೇಯಸ್ಸು ಆತನಿಗೇ ಸೇರುತ್ತದೆ. ನೂಪಾ, ಪುಂಗ್ ಚೋಲಮ್, ಖಾಂಬಾ ಥೋಯ್ಬಿ, ಧೋಲ್ ಚೋಲಮ್ ಮಣಿಪುರಿ ನೃತ್ಯ ಪ್ರಕಾರದ ಪ್ರಮುಖ ಉಪವಿಭಾಗಗಳು. ಮಿಷನರಿಗಳಿಂದ ನೃತ್ಯ ವಿರೋಧಿ ನೀತಿ! ಸಂಗೀತ-ನೃತ್ಯಗಳೇ ಜೀವಾಳವಾಗಿರುವ ಗಂಧರ್ವರಿಗೆ ನಾಳೆಯಿಂದ ನೃತ್ಯ ಮಾಡಬೇಡಿ ಎಂದರೆ ಹೇಗಾದೀತು? ಮೀನಿಗೆ ನಾಳೆಯಿಂದ ಈಜಬೇಡ ಎಂದಂತೆ! ಅಂತಹ ಪರಿಸ್ಥಿತಿ ಉದ್ಭವಿಸಿದ್ದು 19ನೇ ಶತಮಾನದಲ್ಲಿ. 1891ರಲ್ಲಿ ಮಣಿಪುರವನ್ನು ಬ್ರಿಟಿಷರು ತಮ್ಮ ಹಿಡಿತಕ್ಕೆ ಪಡೆದ ನಂತರ ಮಣಿಪುರದ ನೃತ್ಯ ವೈಭವವು ಕಲೋನಿಯಲ್ ದಾಳಿಗೆ ಒಳಪಟ್ಟಿತು. ಮಣಿಪುರಿ ನೃತ್ಯಗಾರರು ಇಂಫಾಲದ ಗೋವಿಂದಜೀ ದೇವಸ್ಥಾನ ಹಾಗೂ ಇತರ ದೇವಸ್ಥಾನಗಳಲ್ಲಿ ಆಶ್ರಯ ಪಡೆದು ಕಲೆಯನ್ನು ಮುಂದುವರೆಸಿದರು. 1892ರಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನೃತ್ಯ ವಿರೋಧಿ ನೀತಿಯನ್ನು ಜಾರಿಗೆ ತಂದವು. ನಂತರ 1910ರಲ್ಲಿ ಮದ್ರಾಸ್ ಪ್ರೆಸೆಡೆನ್ಸಿಯು ದೇವಸ್ಥಾನಗಳಲ್ಲಿ ನೃತ್ಯ ಮಾಡುವುದನ್ನು ನಿಷೇಧಿಸಿತು. ಆಹೊತ್ತಿಗಾಗಲೇ ಪ್ರಖರವಾಗಿ ಉರಿಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಮತ್ತಷ್ಟು ಪ್ರಜ್ವಲಿಸಿತು. ಬ್ರಿಟಿಷರ ಅಸಹಿಷ್ಣುತೆ ವಿರುದ್ಧ ತಿರುಗಿಬಿದ್ದ ಕಲಾವಿದರು ಭಾರತದ ಪ್ರಾಚೀನ ಕಲೆಗಳನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ 1920-1950ರ ನಡುವೆ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಠ್ಯಾಗೋರರು ಮತ್ತು ಮಣಿಪುರಿ ನೃತ್ಯ ರವೀಂದ್ರನಾಥ್ ಠ್ಯಾಗೋರರು ಮಣಿಪುರಿ ನೃತ್ಯವನ್ನು ಪುನರುಜ್ಜೀವನಗೊಳಿಸಿದವರು ಎಂದರೆ ತಪ್ಪಾಗಲಾರದು. 1919ರಲ್ಲಿ ಸಿಲ್ಹೆಟ್ಟ್ ನಲ್ಲಿ (ಈಗಿನ ಬಾಂಗ್ಲಾದೇಶದಲ್ಲಿ) ನಡೆದ ಗೋಸ್ಥಾ ಲೀಲವನ್ನು ವೀಕ್ಷಿಸಿ ಆಕರ್ಷಿತರಾದರು. ಭಾರತೀಯ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾದ ಶಾಂತಿನಿಕೇತನದಲ್ಲಿ ನೃತ್ಯ ಶಿಕ್ಷಕಿಯಾಗಿ ಬರುವಂತೆ ಮಣಿಪುರದ ಬಹುದೊಡ್ಡ ನೃತ್ಯಪಟು ಗುರು ಬುಧಿಮಾಂತ್ರ ಸಿಂಗ್ ಅವರನ್ನು ಆಹ್ವಾನಿಸಿದರು. ರಾಸ್ ಲೀಲಾವನ್ನು ಹೇಳಿಕೊಡುವ ಶಿಕ್ಷಕರಾಗಿ ಸೇರುವಂತೆ ಗುರು ನಾಬಾ ಕುಮಾರ್ ಅವರನ್ನು ಠ್ಯಾಗೋರರು ಕೇಳಿಕೊಂಡು. ಗುರು ನಾಬಾ ಕುಮಾರರು ಶಾಂತಿನಿಕೇತನ ಸೇರಿದ್ದು 1926ರಲ್ಲಿ. ಮುಂದಿನ ದಿನಗಳಲ್ಲಿ ಅತೋಂಬ ಸಿಂಗ್, ನೀಲೇಶ್ವರ್ ಮುಖರ್ಜೀ, ಸೇನರಿಕ್ ಸಿಂಗ್ ರಾಜ್ ಕುಮಾರ್ ಮುಂತಾದವರು ಶಾಂತಿನಿಕೇತನಕ್ಕೆ ಸೇರ್ಪಡೆಗೊಂಡರು. ಈ ಮಹಾ ನಾಟ್ಯಗಾರರ ಸೃಜನಶೀಲತೆಯಿಂದಾಗಿ ಠ್ಯಾಗೋರರು ಹಲವಾರು ಪ್ರದರ್ಶನಗಳನ್ನು ಏರ್ಪಡಿಸಿದರು. ವಸ್ತ್ರವಿನ್ಯಾಸ ಮಣಿಪುರಿ ನೃತ್ಯಗಳಲ್ಲಿ ಪುರುಷರು ಬಿಳಿ ಬಣ್ಣದ ಧೋತಿ ತೊಡುತ್ತಾರೆ. ಡೋಲು, ಮೃದಂಗ ಬಾರಿಸುತ್ತಾ ನೃತ್ಯ ಮಾಡುವುದು ಕಂಬ ತೊಯ್ಬಿ, ಪುಂಗ್ ಚೋಲಮ್ ಗಳಲ್ಲಿ ಕಂಡುಬರುತ್ತದೆ. ಅದನ್ನು ಧೋರಾ ಅಥವಾ ಧೋತ್ರಾ ಎಂದೂ ಕರೆಯುತ್ತಾರೆ. ಮಹಿಳೆಯರ ಉಡುಪು ವಿಭಿನ್ನ ಶೈಲಿಯಲ್ಲಿರುತ್ತದೆ. ಮಣಿಪುರದ ಮದುಮಗಳ ವಸ್ತ್ರ ಮತ್ತು ಮಹಿಳಾ ನೃತ್ಯ ಪಟುಗಳ ವಸ್ತ್ರಕ್ಕೆ ಹೋಲಿಕೆಯಿದೆ. ನವಿಲುಗರಿಯ ಕಿರೀಟ, ಬಣ್ಣ-ಬಣ್ಣದ ವಸ್ತ್ರ, ಆಭರಣಗಳಿಂದ ಕೂಡಿದ ನೃತ್ಯಗಾರ್ತಿ ಎದುರು ಬಂದು ನಿಂತರೆ, ನೋಡುವವರಿಗೆ ದೇವಲೋಕದ ಒಡ್ಡೋಲಗ ನೆನಪಾಗದೇ ಇರದು. ಒಟ್ಟಿನಲ್ಲಿ, ಬಂಡುಕೋರರ ಉಗ್ರವಾದ, ಎಡಪಂಥೀರ ದೇಶ ಒಡೆಯುವ ಕೆಲಸ, ಮಾರಿಯಂತೆ ಹಬ್ಬುತ್ತಿರುವ ಎಚ್.ಐ.ವಿ. ಸೋಂಕು ಇವುಗಳಿಂದ ಜರ್ಜರಿತವಾಗಿ, ತನ್ನ ಅಸ್ಮಿತೆಯನ್ನೇ ಮರೆಯುತ್ತಿರುವ ಮಣಿಪುರಕ್ಕೆ ಬೆನ್ನೆಲುಬಾಗಿ ನಿಂತಿರುವುದು ಅಲ್ಲಿನ ನೃತ್ಯ ಎಂದರೆ ತಪ್ಪಾಗಲಾರದು.
ನಮ್ಮ ನಿಜವಾದ ರೂಪ ಯಾವುದು, ನಮ್ಮೊಳಗಿನ ನಿಜವಾದ ನಮ್ಮ ಅಸ್ತಿತ್ವವನ್ನು ನಾವು ಹೇಗೆ ತಿಳಿದುಕೊಳ್ಳಬೇಕು ಎಂದು ಸ್ವಾಮಿ ರಾಮತೀರ್ಥರು ತಮ್ಮ ಪ್ರವಚನದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾರೆ…. ~ ಸಂಗ್ರಹಾನುವಾದ : ಪ್ರಣವ ಚೈತನ್ಯ ಪ್ರತಿ ಮನುಷ್ಯನಿಗು ತನ್ನದೆ ಆದ ಒಂದು ವ್ಯಕ್ತಿತ್ವವಿರುತ್ತದೆ, ತನ್ನದೆ ಒಂದು ಗುರುತು ಇರುತ್ತದೆ. ಆದರೆ ಆ ವ್ಯಕ್ತಿತ್ವವಾಗಲಿ ಗುರುತಾಗಲಿ ನಮ್ಮ ನಿಜವಾದ ರೂಪವಲ್ಲ, ಅದು ನಮ್ಮ ಅಸ್ತಿತ್ವವಲ್ಲ. ಅದು ಈ ಸಮಾಜದೊಂದಿಗೆ ಬೆರೆತು ಈ ಸಮಾಜಕ್ಕೆ ಹೊಂದಿಕೊಂಡು, ಈ ಸಮಾಜದ ನಿಯಮಗಳಿಗೆ ಬಗ್ಗಿ, ಸಮಾಜಕ್ಕಾಗಿಯೇ ಬದುಕಲು ರೂಢಿಸಿಕೊಂಡ ಒಂದು ಶೈಲಿಯಷ್ಟೆ. ಹಾಗಾದರೆ ನಮ್ಮ ನಿಜವಾದ ವ್ಯಕ್ತಿತ್ವ (ಅಥವಾ ಅಸ್ತಿತ್ವ) ಯಾವುದು? ನಮ್ಮ ನಿಜವಾದ ವ್ಯಕ್ತಿತ್ವ ನಮ್ಮ ಆತ್ಮ. ನಮ್ಮ ಆತ್ಮದಿಂದಲೆ ನಮ್ಮ ನಿಜವಾದ ಗುಣಗಳು ಹೊಮ್ಮುವವು. ನಮ್ಮ ನಿಜವಾದ ಶಕ್ತಿಯೆಂದರೆ, ಅದು ನಮ್ಮ ಆತ್ಮವೇ. ಎಲ್ಲರಿಗೂ ತಿಳಿದಿರುವಂತೆ ಆತ್ಮದಲ್ಲಿ ಆ ಪರಮಾತ್ಮನೇ ನೆಲೆಸಿರುತ್ತಾನೆ. ಹೇಗೆ ಕುದುರೆ ಎಷ್ಟೆ ಬಲಿಷ್ಟವಾಗಿದ್ದರೂ ಅದನ್ನು ಪಳಗಿಸಿ ಓಡಿಸುವವನ ಮೇಲೆ ಆ ಕುದುರೆಯ ಓಟ ನಿಂತಿರುತ್ತದೆಯೋ, ಹಾಗೆ ನಮ್ಮ ದೇಹವು ಎಷ್ಟೆ ಬಲಿಷ್ಟ ಹಾಗು ಸುಂದರವಾಗಿದ್ದರು ಒಳಗೆ ಆತ್ಮವಿರದಿದ್ದರೆ ನಾವು ಹೆಣಗಳು. ಕುದುರೆಯ ಓಟದಲ್ಲಿ ಅದರ ಸವಾರನನ್ನು ಎಷ್ಟು ಜನರು ಗಮನಿಸುತ್ತಾರೆ? ಬಹಳ ಕಡಿಮೆ, ಅಲ್ಲವೆ? ಎಲ್ಲರಿಗೂ ಕುದುರೆಯ ಬಗ್ಗೆ ತಿಳಿದುಕೊಂಡರೆ ಸಾಕು, ಈ ಕುದುರೆ ಬಲಿಷ್ಟವಿದೆ ಎಂದರೆ ಇದೇ ಗೆಲ್ಲುತ್ತದೆ ಎಂಬ ಯೋಚನೆ ಮುಖ್ಯವಾಗುತ್ತದೆ. ಆದರೆ ಬುದ್ಧಿವಂತರಿಗೆ ಮಾತ್ರ ಆ ಕುದುರೆಯನ್ನು ಓಡಿಸುವವರ ಪ್ರಾಮುಖ್ಯತೆ ತಿಳಿದಿರುತ್ತದೆ. ಹಾಗೆಯೇ ನಾವು ಕೂಡ ನಮ್ಮ ಆತ್ಮದ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಬೇಕು. ಆತ್ಮವಿಲ್ಲದಿದ್ದರೆ ನಾವು ಏನೂ ಅಲ್ಲ, ನಾವು ಕೇವಲ ಒಂದು ಹೆಣವಷ್ಟೆ ಎಂದು ಅರಿಯಬೇಕು. ಆದರೆ ಇದನ್ನು ತಿಳಿದುಕೊಳ್ಳುವುದು ಹೇಗೆ? ನಮ್ಮ ಆತ್ಮವನ್ನು ಅರಿಯಬೇಕು ಎಂದರೆ ನಾವು ಮೊದಲು ನಮ್ಮ ಆತ್ಮವನ್ನು ಜಾಗೃತಗೊಳಿಸಬೇಕು. ನಮ್ಮ ಆತ್ಮವು ನಾವು ಬದುಕುತ್ತಿರುವ ಸಮಾಜದ ಶೈಲಿಯಿಂದ ಮೌನವಾಗಿಹೋಗಿರುತ್ತದೆ. ಏಕೆಂದರೆ ನಮ್ಮ ಆತ್ಮದ ಕೋರಿಕೆಗಳು ಒಮ್ಮೊಮ್ಮೆ ಸಮಾಜದ ನಿರೀಕ್ಷೆಗಿಂತ ಬೇರೆ ಇರುತ್ತದೆ. ಹೀಗೆ ಆತ್ಮದ ದನಿಯನ್ನು ಮೌನವಾಗಿಸಿ ಬದುಕಿದರೆ ನಾವು ಕಳೆದುಕೊಳ್ಳುವುದು ನಮ್ಮನ್ನೇ… ಏಕೆಂದರೆ ಆತ್ಮವೇ ನಮ್ಮ ನಿಜವಾದ ರೂಪ, ನಿಜವಾದ ವ್ಯಕ್ತಿತ್ವ, ನಮ್ಮ ನಿಜವಾದ ರೂಪದ ಕೋರಿಕೆಗಳನ್ನು ನಾವು ಪೂರೈಸದೆ ಇದ್ದರೆ ನಾವು ಬರುಕಿರುವುದು ವ್ಯರ್ಥ. ಏಕೆಂದರೆ ಆತ್ಮವೇ ನಮ್ಮ ಜೀವದ ಮೂಲ. ಹೀಗಾಗಿ ನಾವು ಮೊದಲು ಆತ್ಮ ಜಾಗರಣೆಯನ್ನು ಮಾಡಿಕೊಳ್ಳಬೇಕು. ಆತ್ಮ ಜಾಗರಣೆಯಾಗಬೇಕೆಂದರೆ ಅದು ನಿತ್ಯ ಧ್ಯಾನದಿಂದ ಮಾತ್ರ ಸಾದ್ಯ. ಏಕೆಂದರೆ ಧ್ಯಾನ ಮಾಡುವುದರಿಂದ ನಮ್ಮೊಳಗೆ ಏನಾಗುತ್ತಿದೆ ಎಂದು ನಮಗೆ ತಿಳಿದುಬರುತ್ತದೆ. ನಮ್ಮ ಆತ್ಮದ ಮೇಲೆ ನಮ್ಮ ಗಮನವನ್ನು ಏಕಾಗ್ರತೆಯಿಂದ ನಿಲ್ಲಿಸಿದಾಗ ನಮ್ಮ ಆತ್ಮ ಜಾಗೃತವಾಗುತ್ತದೆ. ಒಮ್ಮೆ ಆತ್ಮ ಜಾಗೃತವಾದರೆ ಸಾಕು; ಅದಾದ ಮೇಲೆ ನಾವು ನಮ್ಮ ನಿಜವಾದ ರೂಪಕ್ಕೆ ಬರುತ್ತೇವೆ. ನಮ್ಮಲ್ಲಿ ಅತ್ಯಂತ ಹೆಚ್ಚು ಶಕ್ತಿ ಬರುತ್ತದೆ, ನಾವು ಅತ್ಯಂತ ಸಂತೋಷವಾಗಿ ಇರಲು ಸಾಧ್ಯವಾಗುತ್ತದೆ. ಏಕೆಂದರೆ ನಾವು ನಮ್ಮ ಆತ್ಮ ಜಾಗೃತವಾದ ಮೇಲೆ ಏನೇನು ಮಾಡಿದರೂ ಅದನ್ನು ಆತ್ಮದ ಇಚ್ಚೆಯಿಂದ ಮಾಡುತ್ತೇವೆ, ನಮ್ಮ ಜೀವದ ಇಚ್ಚೆಯಿಂದ ಮಾಡುತ್ತೇವೆ. ಆತ್ಮವೆಂದರೆ ಯಾವುದೋ ಒಂದು ಪರ ವಸ್ತು ಎಂದು ತಿಳಿಯಬೇಡಿ. ಆತ್ಮದ ಅರಿವಿಲ್ಲದೆ ಹೋದರೆ ನಾವೆಲ್ಲ ಬರೀ ಯಂತ್ರಗಳಷ್ಟೇ. ಹೀಗಾಗಿ ನಮ್ಮ ನಿಜವಾದ ರೂಪವನ್ನು, ನಮ್ಮ ಆತ್ಮವನ್ನು ನಾವು ಎಂದು ತಿಳಿದುಕೊಳ್ಳುತ್ತೇವೋ ಆಗ ಮಾತ್ರ ನಾವು ಮನುಷ್ಯರಾಗುತ್ತೇವೆ. ಇಲ್ಲವೆಂದರೆ ಸುತ್ತಲಿನ ಸಮಾಜವನ್ನು ಮೆಚ್ಚಿಸುವ, ಅದಕ್ಕಾಗಿ ದುಡಿಯುವ ಕೇವಲ ಯಂತ್ರಗಳಾಗಿದ್ದುಬಿಡುತ್ತೇವೆ – ಎಂದು ಸ್ವಾಮಿ ರಾಮತೀರ್ಥರು ಹೇಳುತ್ತಾರೆ.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
‘ನನ್ನ ನಲ್ಲ’ ಕೃತಿಯು ಮಧುರಚೆನ್ನ ಹಲಸಂಗಿ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸಿಂಪಿ ಲಿಂಗಣ್ಣ, ಚಡಚಣ ಅವರು, `ಸಾಹಸ, ತಾಳ್ಮೆ, ಪರಿಶ್ರಮ, ಅದ್ಭುತ ಅನುಭವ, ಸತ್ಯಪ್ರಮಾಣಗಳನ್ನು ಕುರಿತ ನಿಷ್ಠೆ ಇವು ಲೌಕಿಕ ವಿಷಯಗಳ ಸಂಶೋಧನೆಗೂ ಆವಶ್ಯಕವಾಗಿರುವಾಗ, ಪಾರಮಾರ್ಥಿಕ ಸಂಶೋಧನೆಗೆ ತೊಡಗಿದ ಮಧುರಚೆನ್ನರು ಇವುಗಳನ್ನೆಲ್ಲ ಅಳವಡಿಸಿಕೊಂಡು ಸ್ವತಃ ತಮ್ಮ ಬಾಳನ್ನೇ ಪ್ರಯೋಗಕ್ಕೆ ಒಡ್ಡಿ ಆತ್ಮಸಂಶೋಧನೆ ನಡೆಸಿದ ಅಪೂರ್ವ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಬಾಳನಿಂದ, ವ್ಯಾಸಂಗದಿಂದ. ಸಾಧನೆಯಿಂದ ನಮ್ಮ ನಾಡಿನಲ್ಲಿ ಹೊರಹೊಮ್ಮಿಸಿದ ಬೆಳಕು ನಮ್ಮ ನಾಡಿನ ಇಂದಿನ ವೈಭವವಾಗಿದೆ. ಈ ಕೃತಿಯ ಕವಿತೆಗಳು ಹೀಗಿವೆ : ಮೊಲೆಹಾಲ ರುಚಿಗೊಂಡು ಮನದ್ದಾಲ ಬಯಸೇನ ಗುಟುಗುಟುಕಿಗೊಮ್ಮೆ ಮಿಕಿಮಿಕಿ। ಏಳಮ್ಮಾ। ಹಸಿವೀಗಿ ಮೊಲೆಯುಂಡೆ ಕಸಿವಿಸಿಗೇನುಳ್ಳೆ ಹಾಲೊಲ್ಲೆ ಸಾಕು ಬಿಗಿದಪ್ಪ ಏಳಮ್ಯಾ| ಮೊಲೆಹಾಲು ಸಾಕಮ್ಮಾ ಸವಿಲಾಲಿ ಬೇಕಮ್ಮಾ ಮುದ್ದಾಡಿ ರಮಿಸಿ ಮೈದಡವ ಏಳಮ್ಮಾ! ಕವಿಯ ತನುವನ್ನು ನಿಸಿದಿಗೆಗಲ್ಲು ಮಾಡಿರದಿದ್ದರೆ ಮನು ಮಾಸತಿ ಕಲ್ಲು ಮಾಡಿರದಿದ್ದರೆ ಸಾಧನೆಯೊಂದು ವೀರಗಲ್ಲು ಆಗಿ ನಿಲ್ಲುತ್ತಿರಲಿಲ್ಲ. ಕಾವ್ಯರ್ಷಿಯ ಪ್ರಕೃತಿಯ ಅಣುರಚನೆಯೇ ಬೇರೆಯಾಗಿತ್ತು. ಅವರು ಹುಟ್ಟಾ ಕಮಲ, ಕೆಸರಲ್ಲಿ ಹುಟ್ಟಿದರೂ ಕಿತ್ತುಕೊಂಡು ಮೇಲೆದ್ದು ಮುಗಿಲಿಗೆ ಮುಖಮಾಡಿ ನಿಲ್ಲುವದನ್ನು ಅದಕ್ಕೆ ಯಾರೂ ಕಲಿಸಲಾರರು. ಕವಿಯ ಮಾತಿನಲ್ಲಿಯೇ ಆ ಪ್ರಶೋತ್ತರಗಳು ಕಂಗೊಳಿಸುತ್ತವೆ. ಏಳು, ಕಮಲವೆ ನಿನ್ನ ಯಾವ ಕರ್ಮದಿ ಬಂದು ಇಂಥ ಕೆಸರಲ್ಲಿ ಬಿದ್ದೇ? ಹೇಳು, ಕಮಲವೆ ನಿನ್ನ ಯಾವ ಪುಣ್ಯದಿ ಮತ್ತೆ ಮೊಗವೆತ್ತಿ ಮೇಲಕ್ಕೆದ್ದೇ? ಆದರೆ ಆರು ಬಿತ್ತಿದರು ಉರಿಯ ಬಿತ್ತವನ್ನು ನಿನ್ನ ಒಡಲಿನಲ್ಲಿ? ಎಂದು ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರೆ ಪಡುವವನು ಅದನ್ನು ಬಿತ್ತಿದನೆಂದು ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು: ಉಣಿಸಬಲ್ಲದು. ಜೀವನದ ಆರಹ ಮಹಾ ಕೃಷಿ ನಡೆಸಿದ ‘ರಂಟಿಕುಂಟಿ’ಯ ಹೆಚ್ಚು ಪರಿಚಯಕ್ಕೆ ‘ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು’ ಎಂದು ವರ್ಣಿಸಿದ್ದಾರೆ. ವರಕವಿ ದ.ರಾ.ಬೇಂದ್ರೆ ಕೃತಿಯ ಮುನ್ನುಡಿಯಲ್ಲಿ ’ಮಧುರಚೆನ್ನರ ಕೃತಿಯಲ್ಲಿ ವ್ಯಂಜನ ಶಕ್ತಿಯು ವಿಫುಲವಾಗಿದೆ. ಇವರ ಭಾವಾವೇಶವು ರಸಿಕರನ್ನು ಅಂತರ್ಮುಖರನ್ನಾಗಿ ಮಾಡುವುದು. ನನ್ನ ನಲ್ಲ ಕವಿತೆಯಲ್ಲಿ ಇವರ ಅಧ್ಯಾತ್ಮಿಕ ಪುನರ್ಜನ್ಮ ವಾಗಿದ್ದರೆ, ದೇವತಾಪೃಥವೀ ಕವನವು ಶಿರೋರತ್ನವಾಗಿದೆ. ಕವನದ ಬಂಧ ಒಂದಕ್ಕಿಂತ ಒಂದು ಚೆಂದ ಎಂದು ಶ್ಲಾಘಿಸಿದ್ದಾರೆ. ಮಾತ್ರವಲ್ಲ; ‘ತನ್ನ ಮನದ ಮಾತನ್ನು ಇನ್ನೊಂದು ಮನದಲ್ಲಿ ಇಳಿಸುವ ಸೃಷ್ಟಿಕ್ರಮದಲ್ಲಿಯೇ ಮಾತು ಮುತ್ತಿಟ್ಟಂತಾಗುವುದಾದರೂ ಮನಕ್ಕೆ ಮನವು ಕೂಡುವ ಮುನ್ನ ಮುತ್ತೂ ಕೂಡ ಮಾತಿಗೆ ಕೀಳಾಗುವುದು. ಇನ್ನೊಂದು ಮನವನ್ನು ಮುಟ್ಟಬೇಕೆಂಬ ಉರ್ಮಿಯು ಕವಿಯಲ್ಲಿ ಬೇಕು’ ಎಂದು ನೇರವಾಗಿ ಮಧುರಚೆನ್ನರ ಕವಿತೆಗಳನ್ನು ವಿಶ್ಲೇಷಿಸಿ, ಇಂತಹ ಗುಣ ಮಧುರಚೆನ್ನರ ಕವಿತೆಗಳಲ್ಲಿದೆ ಎಂದು ಸಂತೋಷಿಸಿದ್ದಾರೆ. ಸಂಕಲನದಲ್ಲಿ ನನ್ನ ನಲ್ಲ, ಶಾರದೆಗೆ, ಧ್ರುವ, ರೋಹಿಣಿ, ಕೆಸರೊಳಗಿನ ಕಮಲ, ಸುಖ-ದುಃಖ , ಮಧುರಗೀತ ಸೇರಿದಂತೆ ಒಟ್ಟು 15 ದೀರ್ಘ ಕವನಗಳಿವೆ. ಧಾರವಾಡದ ಕರ್ನಾಟಕ ಸಾಹಿತ್ಯ ಮಂದಿರವು 1933ರಲ್ಲಿ (ಪುಟ: 99) ಈ ಕವನ ಸಂಕಲನ ಪ್ರಕಟಿಸಿತ್ತು. About the Author ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ) (31 July 1903 - 15 August 1952) ಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. ಹಲಸಂಗಿಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮಧುರಚೆನ್ನರು, ಹಲಸಂಗಿ ಗೆಳೆಯರೆಂದೇ ಪ್ರಖ್ಯಾತಿ. ಬಿಜಾಪುರಕ್ಕೆ ಹೋಗಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಇಂಗ್ಲಿಷ್, ಸಂಸ್ಕೃತ, ಹಳಗನ್ನಡ ಕಲಿತರು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಇತ್ಯಾದಿ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳು. 12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ...
ಬೆಳ್ಳಿಮೋಡ- ತ್ರಿವೇಣಿ ಅವರು ಬರೆದ ಕಾದಂಬರಿ. ಬೆಳ್ಳಿಮೋಡ ತೋಟದ ಮಾಲೀಕನ ಮಗಳು ಸಾಮಾನ್ಯ ಹುಡುಗನನ್ನು ಪ್ರೀತಿಸಿ, ಮದುವೆಯಾಗುತ್ತಾಳೆ. ಮಾಲೀಕ ತೀರಿಹೋದ ಮೇಲೆ ಆತನ ಹೆಂಡತಿ ಮಗುವಿಗೆ ಜನ್ಮ ನೀಡುತ್ತಾಳೆ. ಇದು ಮಗಳ ಕನಸುಗಳನ್ನೇ ನುಚ್ಚುನೂರಾಗಿಸುತ್ತದೆ. ವಿಧಿಯು ಏಕಾಏಕಿಯಾಗಿ ಅವರ ಬದುಕಿನಲ್ಲಿ ಇಣುಕಿದ ಪರಿಯೇ ಕಥೆಯ ಅರ್ಥದ ವಿಸ್ತಾರ-ಆಳ ಹಾಗೂ ಪರಿಣಾಮಕತೆಯನ್ನು ಹೆಚ್ಚಿಸಿದೆ. ಹೆಣ್ಣಿನಲ್ಲಿ ಗಂಡಿಗಿರುವಂತೆ ಪ್ರಣಯದ ಬಯಕೆಯೂ ಹಾಗೂ ಅದರ ನಿರಾಕರಣೆಯೂ ಇದೆ. ಅದು ಆಕೆಯ ಹಕ್ಕೂ ಆಗಿದೆ. ಆದ್ದರಿಂದ, ಪ್ವ್ಯರೇಮದ ಆಳ ತಿಳಿಯದ ಹಾಗೂ ಪ್ರೇಮದಲ್ಲೂ ವ್ಯಾಪಾರಸ್ಥನಂತೆ ವರ್ತಿಸುವ ಪತಿಯನ್ನೂ ಅವಳು ತಿರಸ್ಕರಿಸುವ ಮೂಲಕ ಹೆಣ್ಣಿನ ಹಕ್ಕನ್ನು ಪ್ರತಿಪಾದಿಸುವ ಪ್ರತಿನಿಧಿಯಾಗುತ್ತಾಳೆ. ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಈ ಕಥೆಯನ್ನು ಚಲನಚಿತ್ರಕ್ಕಾಗಿ ನಿರ್ದೇಶಿಸಿದ್ದರು. About the Author ತ್ರಿವೇಣಿ (01 September 1928 - 05 July 1963) ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ತಂದೆ ಬಿ.ಎಮ್.ಕೃಷ್ಣಸ್ವಾಮಿ, ತಾಯಿ ತಂಗಮ್ಮ.ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ಇಪ್ಪತ್ತು ಕಾದಂಬರಿಗಳನ್ನು ...
ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. ‘ಬರಹಗಾರ ನೀನು ಯಾರ ಪರ?’ ಎಂದು ನಿಜಕ್ಕೂ ಆತಂಕದಿಂದ ಕೇಳಬೇಕಾದ ದಿನಗಳು ಇವು. ಬಹುಷಃ ಜಿ ಪಿ ಬಸವರಾಜು ಅವರನ್ನು ಬಿಟ್ಟು. ಅವರ ಸಮಾಜಮುಖಿ ಚಿಂತನೆಗಳು ಅವರ ಬರಹದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಪ್ರಶ್ನಾತೀತವಾಗಿಯೇ ಉಳಿದಿವೆ. ನಾನು ಬಸವರಾಜು ಅವರನ್ನು ಓದಿ ಬೆಳೆದವನು. ಅವರ ಕವಿತೆ, ಪ್ರವಾಸ ಕಥನಕ್ಕೆ ಮಾರು ಹೋದವನು. ಅವರ ಕೈಕುಲುಕಿದ್ದು ನಾನು ಇನ್ನೂ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಮಂಗಳೂರಿಗೆ ಸಂಕಿರಣಕ್ಕೆಂದು ಹೋದಾಗ. ಮಂಗಳೂರಿನಲ್ಲಿ ಕೊಣಾಜೆಯಿಂದ ಬೈಕ್ ಏರಿ ಕಡಲನ್ನು ಬಗಲಲ್ಲಿ ಇಟ್ಟುಕೊಂಡು ಸಾಗುತ್ತಿದ್ದ ಬಸವರಾಜು ಅವರ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ನಂತರ ‘ಪ್ರಜಾವಾಣಿ’ಯ ಅಂಗಳದಲ್ಲೇ ನಾವಿಬ್ಬರೂ ಇದ್ದ ಕಾರಣ ಮೇಲಿಂದ ಮೇಲೆ ಅವರೊಡನೆ ಮಾತನಾಡುವ ಅವಕಾಶ ಬಂದಿದೆ. ಬಸವರಾಜು ಅವರ ಜೊತೆಗಿನ ಚರ್ಚೆಗಳು ನನ್ನ ಪ್ರಜ್ಞೆಯನ್ನು ತಿದ್ದಿವೆ. ಬಸವರಾಜು ಅವರು ‘ಮಯೂರ’ದ ಮುಖ್ಯಸ್ಥರಾಗಿದ್ದು ಅವರೊಳಗಿನ ಬರಹಗಾರನಿಗೂ, ಪತ್ರಕರ್ತನಿಗೂ ಸಂದ ಮನ್ನಣೆಯೇ. ಜಿ ಎಸ್ ಸದಾಶಿವ, ಎ ಈಶ್ವರಯ್ಯ ಅವರ ನಂತರ ಮಾಸಿಕ ಪತ್ರಿಕೋದ್ಯಮದಲ್ಲಿ ಬಸವರಾಜು ಅವರದ್ದೇ ಮುಖ್ಯ ಹೆಸರು. ಅವರು ಸಂಪಾದಕ ಸ್ಥಾನವನ್ನು ಎಷ್ಟು ಸೃಜನಶೀಲವಾಗಿ ನಿರ್ವಹಿಸಿದರು ಎನ್ನುವುದಕ್ಕೆ ಅವರು ರೂಪಿಸಿರುವ ‘ಅವಧಿ’ ವಿಶೇಷ ಸಂಚಿಕೆಯೇ ಸಾಕ್ಷಿ. ಅವರ ಸಂಪಾದಕೀಯ ಅವರ ಒಳಗಿನ ತಳಮಳಕ್ಕೆ ಕನ್ನಡಿ. ಇಂದು ಮತ್ತು ನಾಳೆ ಎರಡು ದಿನ ಬಸವರಾಜು ಅವರ ನೇತೃತ್ವದಲ್ಲಿ ‘ಅವಧಿ’ ಹೊರಬರುತ್ತಿದೆ. ಇದು ಬಸವರಾಜು ಅವರಿಗಲ್ಲ.. ‘ಅವಧಿ’ಗೆ ಒಂದು ಮನ್ನಣೆ.
ಹೊರಗಿನ ತಾಪಮಾನ ಮೈನಸ್ ೨೫ ಫಾರನ್ ಹೈಟ್. ಅಂದರೆ ಮೈನಸ್ ೩೨ ಡಿಗ್ರಿ ಸೆಂಟಿಗ್ರೇಡ್. ಉಸಿರಾಡುವಾಗ ಮೂಗಿನ ಹೊಳ್ಳೆಗಳಲ್ಲಿ ಗಟ್ಟಿಗಟ್ಟುವ ಬರ್ಫದ ಗಡ್ಡೆ. ಸುಳಿರ್ಗಾಳಿ ಹೊಡೆದು ಇನ್ನೂ ನಲವತ್ತು ಡಿಗ್ರಿ ಕಮ್ಮಿಯಾದಾಗ ಕಣ್ಣಿಂದ ಹೊರಬರುವ ನೀರೂ ಹೆಪ್ಪುಗಟ್ಟಿರುತ್ತದೆ. ನಾಲ್ಕು ಕೈಗವಸುಗಳ ಮೂಲಕವೂ ಒಳನುಗ್ಗಿ ಕೈ,ಕಾಲ್ಬೆರಳುಗಳ ತುದಿಗಳು ನೀಲಿಗಟ್ಟಿವೆ. ನಿಜವಾಗಿಯೂ ಇಲ್ಲಿನ ಚಳಿಗಳು unforgiving. ಹೊರಗೆ ಬಿಳೀ ಮೌನ. ಮೌನಕ್ಕೆ ಬಣ್ಣವಿರುತ್ತದೆಯೇ ಎಂದು ಕೇಳುವವರು ಒಮ್ಮೆ ಸಮಶೀತೋಷ್ಣವಲಯಕ್ಕಿಂತ ಮೇಲೆ ಹೋದಾಗ ಗೊತ್ತಾಗುತ್ತದೆ. ನೀರವ ಮೌನ, ಸ್ಮಶಾನ ಮೌನಗಳು ಮೌನವನ್ನು ಗೊತ್ತಿಲ್ಲದ ವಿಭಕ್ತಿಯಲ್ಲಿ ವಿಶೇಷಣವನ್ನಿರಿಸಿ ಭಯತರಿಸಿದರೆ, ಈ ಬಿಳೀ ಮೌನ ತನ್ನ ಬಣ್ಣದಿಂದಲೇ ತನ್ನತ್ತ ಸೆಳೆಯುತ್ತದೆ. ವಿಂಟರ್ ವಂಡರ್‍ಲ್ಯಾಂಡಿನ ಈ ದಿನಗಳಲ್ಲಿ ಹೊರಗೆ ಬರಲು ಹಿಮಕರಡಿಗಳಿಗೂ ಪೆಂಗ್ವಿನ್‌ಗಳಿಗೂ ಎದೆ ಗಟ್ಟಿಯಿರಬೇಕು. ಅಕಸ್ಮಾತ್ ಹೋದರೆ ಹೆಪ್ಪುಗಟ್ಟುತ್ತಾವೋ ಏನೋ? ತುಂಬಿದ ನಯಾಗರವನ್ನು ಅಮ್ಮನಿಗೆ ತೋರಿಸಲೆಂದು ಕರಕೊಂಡು ಹೋದಾಗ ಅದೇನನ್ನಿಸಿತೋ ಸೀದಾ ನಡೆದು ಪಕ್ಕದಲ್ಲಿದ್ದ ಬ್ಯಾಕ್‌ವಾಟರಿನ ತಟಕ್ಕೆ ನಡೆದು, ಚಪ್ಪಲಿ ತೆಗೆದು ಕಾಲುತೊಳೆದು, ಎರಡು ಹನಿಯನ್ನು ತಲೆಯಮೇಲೆ ಪ್ರೋಕ್ಷಣೆ ಮಾದಿಕೊಂಡುಬಿಟ್ಟಿದ್ದಳು. ಎಲ್ಲರೂ ಏ, ಹೇ ಎಂದು ಕೂಗಿದಾಗ ಸೆಕ್ಯುರಿಟಿ ಸ್ಕ್ವಾಡಿನವರು ಬಂದು ಪಕ್ಕಕ್ಕೆ ಕರಕೊಂಡು ಹೋಗಿ, ಕೆಳಗೆ ಬಿದ್ದರಾಗಬಹುದಾದ ಅಪಾಯವನ್ನು ನಯವಾಗಿ ವಿವರಿಸಿದಾಗ ಅಮ್ಮ ಸಂಕೋಚದಿಂದ 'ನೀರೆಂದರೆ ಒಂತರಾ ಸೆಳೆತ ಕಣೋ. ಕೆಲವರಿಗೆ ತುಂಬಿದ ನೀರನ್ನು ನೋಡಿದರೆ ಮುಟ್ಟಬೇಕು, ಕಾಲು ತೊಳೆದುಕೊಳ್ಳಬೇಕು ಅನ್ನಿಸುತ್ತದ್ದೆ. ಇಂಥಾ ಚೆನ್ನಾಗಿರುವ ನೀರನ್ನು ಮುಟ್ಟಿನೋಡದಿದ್ದರೆ ಹೇಗೆ?' ಎಂದು ಕೇಳಿದ್ದಳು. ಈ ಕೊರೆಯುವ ಛಳಿಯೂ ಹಿಮಗಡ್ಡೆಯೂ ಸೆಳೆತವೇ ಮನುಷ್ಯನಿಗೆ. ಹೊರಗೆ ನೋಡಿದರೆ, ಬರೇ ದಿಗಂತದವರೆಗೂ ಬರೇ ಶ್ವೇತವರ್ಣ. ಅಲ್ಲಿ ಕಾಣಿಸುತ್ತಿದ್ದಾನೆ, ಒಬ್ಬನೇ ಒಬ್ಬ. ಮೊಳೆಗಳಿರುವ ಶೂಗಳನ್ನು ಕಾಲಿಗೆ ಹಾಕಿ, ಕಾಲಿನ ಕೆಳಗಿನ ಮಂಜುಗೆಡ್ಡೆಯನ್ನು ತರೆಯುತ್ತಾ, ಒಡೆಯುತ್ತಾ ಕಣ್ಣೆರಡು ಮಾತ್ರ ಕಾಣಿಸುವಂತೆ ಇಡೀ ಮೈಯನ್ನು ಅಂಡರ್ವೇರಿನ ಹೊರಗೆ ಐದೈದು ಪದರಗಳಿಂದ ಮುಚ್ಚಿಕೊಂದು ಒಬ್ಬನೇ ಓಡುತ್ತಿದ್ದಾನೆ. ಕಾಣಿಸುವ ಅನತಿದೂರದ ತನಕ ಇನ್ನೊಂದು ಕಾಗೆಯೂ ಇಲ್ಲ. ಪಕ್ಕದ ಬೀದಿಯಲ್ಲಿ ಕಂಬೋಡಿಯಾದ 'ನಿಲೆ' ತನ್ನ ಮಗಳ ಜತೆ ಸೇರಿ ದೊಡ್ಡ ಮಗಚುವ ಕೈಯಿಂದ ಹಿಮವನ್ನು ಬಳಿದು ಪಕ್ಕಕ್ಕೆ ಹಾಕುತ್ತಿದ್ದಾನೆ. ಸುಲಭಕ್ಕೆ ಮಣಿಯದ ಬರ್ಫ ನೆಲಗಟ್ಟಿದೆ. ಕರಕರನೆ ಕೆರೆದು ಉಪ್ಪು ಮರಳನ್ನು ಹಾಕಿದರೂ ಹೊರಗೆ ಬರದು. ಮಕ್ಕಳಿಗೆ ಸ್ಕೂಲಿಗೆ ರಜ. ಇದೊಂತರಾ ಆರ್ಕ್ಟಿಕ್ ತುರ್ತಂತೆ. ಮನೆಯಲ್ಲಿ ಟೀವಿಯ ಮುಂದೆ ಅಗಿಷ್ಟಿಕೆಯನ್ನು ಹಚ್ಚಿಕೊಂಡು ಕೂತಿಯಾವೆ. ಪಕ್ಕದ ಬೀದಿಗೆ ಬಂದ ಮೈಸೂರು ಅಂಕಲ್ ತಮ್ಮ ಪತ್ನಿಯೊಂದಿಗೆ ವಾಕಿಂಗ್ ಹೋಗಲು ಪ್ರಯತ್ನವನ್ನೇನೋ ನಡೆಸಿದ್ದಾರೆ. ಮಕ್ಕಳು ಮನೆಯಲ್ಲಿಲ್ಲವೇನೋ. ಲಕ್ಷಣವಾಗಿ ಸೀರೆಯುಟ್ಟು, ತಲೆಗೊಂದು ಮಂಕಿಕ್ಯಾಪ್ ಮತ್ತು ಮಫ್ಲರ್, ಕಾಲಿಗೆ ಹಾಕಿದ ಪೂಮ ಶೂಗಳು,ಹಾಕಿದ್ದ ಉಣ್ಣೆಯ ಮುಖಕವಚದಿಂದ ಸಣ್ಣಗೆ ಕಾಣುತ್ತಿರುವ ಗಟ್ಟಿ ಸ್ಟಿಕ್ಕರಂತಾಗಿರುವ ಕೇವಲ ಕೆಲ ಸಮಯದ ಹಿಂದೆ ಬೇಸ್‌ಮೆಂಟಿನ ದೇವರಮನೆಯಲ್ಲಿ ಕುಂಕುಮಾರ್ಚನೆ ಮಾಡಿ ನೊಸಲಿಗೆ ಹಚ್ಚಿದ ಹುಡಿಗುಂಕುಮ. ಒಂದು ಹೆಜ್ಜೆ ಮುಂದಿಟ್ಟರೆ ಎರಡು ಹೆಜ್ಜೆ ಹಿಂದಿಡುವ ಹಾಗೂ ಬಿದ್ದು ಕಾಲು ಮುರಿದುಕೊಂಡರೆ ವಿಮಾ ಕಂಪೆನಿಗಳು ಕವರ್ ಮಾಡದ ಕಾಯಿಲೆಗಳು ನೆನಪು. ಇನ್ನೆರಡು ನಿಮಿಷದ ನಂತರ ನೋಡಿದಾಗ ಇಬ್ಬರೂ ವಾಪಸ್ಸು ತಮ್ಮ ಮನೆಗೆ ಸ್ವಸ್ಥ ತೆರಳುತ್ತಿರುವುದನ್ನು ನೋಡಿ ಏನೋ ಸಮಾಧಾನ. ಮೈಸೂರಿನ ಚಳಿಯಲ್ಲಿಯೇ ವಾಕಿಂಗ್ ಹೋಗದ ಈ ದಂಪತಿಗಳನ್ನು ಮನೆಯೊಳಗೆ ಇರಿಸಿಕೊಳ್ಳದಾರದಷ್ಟು ಮೌನವೇ ಮನೆಯೊಳಗೆ. ಆದರೆ, ಆ ಮೌನಕ್ಕೆ ಈ ಮೌನ ಉತ್ತರವಲ್ಲ ಎನ್ನುವುದರ ಪ್ರಮಾಣೀಕರಣ. ಸಾಕ್ಷಿಸಮೇತ. * * * ಈ ಹಿಮದ ಮಧ್ಯೆ ಒಂದು ಪುಟ್ಟ ಚರ್ಚು. ಕಳೆದೆರಡು ವರ್ಷಗಳಿಂದ ಕಾರಣಾಂತರಗಳಿಂದ ಚರ್ಚಿನ ಬಜೆಟ್‌ನಲ್ಲಿ ಖೋತಾ, ಈ ವರ್ಷದ ಪೂಜೆ ಪುನಸ್ಕಾರಗಳಿಗೆ ಅವಕಾಶವಿಲ್ಲ. ಭಾನುವಾರದ ಚರ್ಚಿನ ಕಾರ್ಯಗಳಿರಲಿ ಆ ಚರ್ಚಿನಲ್ಲಿ ಸತ್ತವರ ಅಂತ್ಯಕಾರ್ಯಗಳೂ ನಡೆಯದಿರುವಂತ ಪರಿಸ್ಥಿತಿ. ಚರ್ಚಿನ ಕಟ್ಟಡ ಸಾವಿರದ ಎಂಟುನೂರರದ್ದಂತೆ. ಲಂಡನ್ನಿನ ಬಿಗ್‌ಬಿನ್‌ಅನ್ನು ಹೋಲುವ ಈ ಕಟ್ಟಡ ಕಟ್ಟಿಸಿದ್ದು ಸಾವಿರದ ಎಂಟನೂರರಲ್ಲಾದರೂ ಈಗ ಸರಕಾರದ ಸ್ವಾಮ್ಯದಲ್ಲಿರುವ ಆ ಕಟ್ಟಡಕ್ಕೆ ಚರ್ಚಿನ ಆಡಳಿತ ಮಂಡಳಿ ಪ್ರತಿತಿಂಗಳೂ ಬಾಡಿಗೆ ಕೊಡಬೇಕಿತ್ತು. ಸಲ್ಲಬೇಕಾಗಿದ್ದ ಬಾಡಿಗೆ ಸಲ್ಲದೇ ಇದ್ದುದರಿಂದ ಸರಕಾರ ಚರ್ಚಿನ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಂಡು ಚರ್ಚನ್ನು ಬಾಡಿಗೆಗಿಟ್ಟಿದ್ದಾರಂತೆ. ಜೀಸಸ್ ಬಡವನಾಗಿದ್ದಾನೆ. ಗುಜರಾತಿ ವ್ಯಾಪಾರಿಗಳು, ವೈದ್ಯರುಗಳು ಮತ್ತು ಇನ್ನೊಂದಿಷ್ಟು‌ಐಟಿಬಿಟಿ ಮಂದಿ ಸೇರಿ 'ಕಟ್ಟೋಣ ನಾವು ಗುಡಿಯೊಂದನು' ಎಂದರು. ಬಿಕರಿಗಿದ್ದ ಚರ್ಚನ್ನು ಮಾರ್ಕೆಟ್ ದರದಲ್ಲಿ ಖರೀದಿಸಲಾಯಿತು. ಶೇಕಡಾ ನಾಲ್ಕು ಬಡ್ಡಿಗೆ ಬ್ಯಾಂಕೂ ಸಾಲಕೊಟ್ಟಿತು. ತಿಂಗಳ ಬಾಡಿಗೆ, ಎಲಕ್ಟ್ರ್ರಿಸಿಟಿ ಖರ್ಚು ಮತ್ತು ಹೊರಗೆ ಮಂಜು ತೆಗೆಯುವ, ಹುಲ್ಲುಕತ್ತರಿಸುವ ಖರ್ಚನ್ನು ಲೆಕ್ಕಹಾಕಿ ತಿಂಗಳಿಗೆ ಇಂತಿಷ್ಟು ಖರ್ಚು ಬರಬಹುದು ಎಂದು ನಿರ್ಧರಿಸಲಾಯಿತು. ಓಂ ಎಂದು ಶುರುವಾದ ಎರಡು ಗಂಟೆಯ ಪವರ್‍ಪಾಯಿಂಟ್ ಪ್ರೆಸೆಂಟೇಶನ್ ಆಯವ್ಯಯಗಳನ್ನು ಒಪ್ಪಿಸಿದ ಮೇಲೆ ದೇವಸ್ಥಾನದ ಬೈಲಾಗನ್ನು ಮಾಡಿ ಸಹಿ ಹಾಕಿ ದೇವಸ್ಥಾನ ಶುರುವಾಗಿತ್ತು. ಆದರೆ, ಸಿಟಿ ಕೋಡಿನ ಪ್ರಕಾರ ೧೮೦೦ರ ಈ ಕಟ್ಟಡದ ಹೊರರೂಪ ಯಾವರೀತಿಯಲ್ಲಿಯೂ ಬದಲಾಗಬಾರದು. ನಗರದ ಕಾನೂನಿನ ರೀತ್ಯಾ ಒಳಗೆ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು, ಬೇಕಿದ್ದರೆ. ಶಿಲುಬೆ ಕೆಳಗಿಳಿಯಿತು. ತಿರುಪತಿಯಿಂದ ಬಂದ ಅರ್ಚಕರು ಸೇರಿ ವಾಸ್ತುಹೋಮ, ಪುಣ್ಯಾಹಗಳನ್ನು ಮಾಡಿಯಾಯಿತು. ಪೂರ್ವಾಭಿಮುಖವಾಗಿ ವೆಂಕಟರಮಣ, ಅಮೃತಶಿಲೆಯ ಗಣಪತಿ, ಸಂತೋಷಿಮಾ, ಸಾಯಿಬಾಬ, ಲಕ್ಷ್ಮೀ ಸರಸ್ವತಿಯರ ಪ್ರತಿಷ್ಠಾಪನೆಯಾಯಿತು. ಸಮುದಾಯವನ್ನು ಒಗ್ಗೂಡಿಸಲು ಸಂಜೆ ಕರ್ನಾಟಕ ಸಂಗೀತ, ವಿಷ್ಣು ಸಹಸ್ರನಾಮ, ಬಾಲ ಗೋಕುಲ, ಹಿಂದೀ ಪಾಠ ಇತರೇ ಎಲ್ಲ ಶುರುವಾಯಿತು. ಉಹೂ ಗಿಟ್ಟಲಿಲ್ಲ. ಆರು ತಿಂಗಳಾದರೂ ಬ್ಯಾಂಕಿಗೆ ಸಾಲಕಟ್ಟುವಷ್ಟೂ ದುಡ್ಡು ಹುಟ್ಟಲಿಲ್ಲ. ಮತ್ತೆ ದೇವರುಗಳೆಲ್ಲಾ ದಿವಾಳಿಯಾಗುವ ಪರಿಸ್ಥಿತಿ. ಯಾರೋ ಸೂಚಿಸಿದರು. ಕೆಳಗಿನ ನೆಲಮಾಳಿಗೆಯನ್ನು ಸ್ವಲ್ಪ ಸರಿಮಾಡಿದರೆ, ಅದು ಸಮುದಾಯಭವನವಾಗುತ್ತದೆ. ಆಗ ಅದರ ಬಾಡಿಗೆಯಿಂದ ಸ್ವಲ್ಪ ದೇವರುಗಳು ಉಳಿಯಬಹುದೇನೋ. ನೆಲಕ್ಕೆ ಮರದ ರಿಪೀಸುಗಳನ್ನು ಹಚ್ಚಿ, ಗೋಡೆಗೆ ಬಣ್ಣ ಹಚ್ಚಿ, ಹೀಟರಿನ ಗಾಳಿಯನ್ನು ಕೆಳಕ್ಕೆ ಬಾಗಿಸಿ, ಒಂದಿಷ್ಟು ಅಳ್ಳಕಗೊಳಿಸಿ ಸುಮಾರು ಇನ್ನೂರು ಜನರ ಸಣ್ಣ ಕಾರ್ಯಕ್ರಮ ನಡೆಯಬಲ್ಲ ಸಮುದಾಯ ಭವನ ಆರಂಭವಾಗಿದೆ, ಈಗತಾನೇ. ಇಂದು ಅಲ್ಲಿ ರೇಷ್ಮಾ ಮತ್ತು ಅನೂಷ ಅವಳಿಗಳ ಮೊದಲ ವರ್ಷದ ಹುಟ್ಟುಹಬ್ಬ. ಮುಸ್ತಾಫ ಮತ್ತು ಇಂದಿರಾರ ಮೊದಲ ಕರುಳ ಕುಡಿಗಳು ಅವು. ಬೇಸ್‌ಮೆಂಟಿನಲ್ಲಿ ಅರೆಚಂದ್ರ ಮತ್ತು ನಕ್ಷತ್ರದ ಸಣ್ಣ ಚಿತ್ರಪಟ. ಕೇಕಿನಲ್ಲಿ ಮೊಟ್ಟೆಯಿದ್ದರೂ ಪರವಾಗಿಲ್ಲ ಊಟ ವೆಜಿಟೇರಿಯನ್ ಆಗಲೇಬೇಕೆಂಬ ನಿಯಮಗಳು ಗುಡಿಯ ಬೈಲಾ ದಲ್ಲಿವೆ. 'ಅಸ್ಸಲಾಮ್ ವಾಲೇಖುಮ್' ಗಳ ನಡುವೆ ಮಕ್ಕಳು ಕೇಕನ್ನು ಕತ್ತರಿಸಿವೆ. ಖುದಾ ಹಫೀಜ್ ಇಂದು ಹಿಮಪಾತವಾಗದಿರಲಿ. ಒಂದು ವೇಳೆ ಆದರೂ ಚರ್ಚು, ದೇವಸ್ಥಾನಗಳು ಮುಚ್ಚಿಹೋಗದಿರಲಿ. ವರ್ತಮಾನದ ಈ ಸಂತಸದ ಘಳಿಗೆಯನ್ನು ನೋಡಿ ಸುಖಿಸಿದ ದೇವರುಗಳು ಮುಂದೆಂದೋ ಆಗುವ ಉತ್ಖನನದ ನಂತರ ಜಗಳವಾಡದಿರಲಿ.
ಕೇವಲ ಗಂಭೀರ ಮತ್ತು ಮುಕ್ತ ಡೇಟಿಂಗ್ ಮತ್ತು ಮದುವೆಗಂಭೀರ ಸಂಬಂಧ ಮಹಿಳೆಯರು ಅಥವಾ ಪುರುಷರು, ರಚಿಸಲು ಒಂದು ಜಾಹೀರಾತು ಸೇರಲು ಮತ್ತು ಒಂದು ನಿಜವಾದ ಡೇಟಿಂಗ್ ಸೇವೆ. ದುರದೃಷ್ಟವಶಾತ್, ಮೌಲ್ಯಮಾಪನ ಕ್ಲಬ್ ಅಭಿನಯ ನೋಂದಾಯಿಸಿಕೊಳ್ಳುವ ಇಲ್ಲದೆ. ಕೇವಲ ಗಂಭೀರ ಮತ್ತು ಮುಕ್ತ ಡೇಟಿಂಗ್ ಮತ್ತು ಮದುವೆ ಲಭ್ಯವಿದೆ. ಸಾವಿರಾರು ಪ್ರೊಫೈಲ್ಗಳು ážé áí ಒಂದು ಮಹಿಳೆ ಅಥವಾ ಮನುಷ್ಯ, ರಚಿಸಲು ಒಂದು ಜಾಹೀರಾತು ಸೇರಲು ಮತ್ತು ಒಂದು ನಿಜವಾದ ಡೇಟಿಂಗ್ ಸೇವೆ. ದುರದೃಷ್ಟವಶಾತ್, ಮೌಲ್ಯಮಾಪನ ಕ್ಲಬ್ ಅಭಿನಯ ನೋಂದಾಯಿಸಿಕೊಳ್ಳುವ ಇಲ್ಲದೆ, ಆಯ್ಕೆ ಯಾರು ಯಾರಾದರೂ ಭೇಟಿ ಜೀವನದಲ್ಲಿ ನೀವು ಬಳಿ ನಗರದಲ್ಲಿ. ನಮ್ಮ ಡೇಟಿಂಗ್ ಸೇವೆ ಆವರಿಸುತ್ತದೆ ಎಲ್ಲಾ ನಗರಗಳಲ್ಲಿ ರಶಿಯಾ ಮತ್ತು ನೆರೆಯ ದೇಶಗಳಲ್ಲಿ. ಉಚಿತ ಡೇಟಿಂಗ್ ಪುರುಷರು ಸ್ಯಾನ್ ಸಾಲ್ವಡಾರ್ 年代測定の地域では、無料となく登録-掲示板、ガスハイドレートの域 ಲೈವ್ ಸ್ಟ್ರೀಮಿಂಗ್ ವೀಡಿಯೊ ಚಾಟ್ ಸಂತೋಷಕ್ಕೆ ಒಂದು ážé áí ಡೇಟಿಂಗ್ ಉಚಿತ ನೋಂದಣಿ ಚಾಟ್ ರೂಲೆಟ್ ನಿಮ್ಮ ಫೋನ್ ಇಲ್ಲದೆ ನೋಂದಣಿ ಉಚಿತ ವಯಸ್ಕರ ಡೇಟಿಂಗ್ ಮಹಿಳೆಯರು ವೀಡಿಯೊ ಡೇಟಿಂಗ್ ಇಲ್ಲದೆ ನೋಂದಣಿ ಫೋಟೋಗಳನ್ನು ಗರ್ಲ್ಸ್ ಆನ್ಲೈನ್ ನೀವು ಭೇಟಿ ಪರಿಚಯ ಮಾಡಿಕೊಳ್ಳುವ ಗಂಭೀರ ಸಂಬಂಧಗಳು ಚಾಟ್ ರೂಲೆಟ್ ಹುಡುಗಿ ಉಚಿತ
ಡೇಟಿಂಗ್ ಹುಡುಗರಿಗೆ ಮತ್ತು ಹುಡುಗಿಯರಿಗೆ ಸಾಂಟಾ ಫೆ ಇಂಟರ್ನೆಟ್ ಮೂಲಕ, ಅನೇಕ ಇತರ ಆನ್ಲೈನ್ ಕೈಗಾರಿಕೆಗಳುನೀವು ಕೇಳಬಹುದು ಅನೇಕ ಕಥೆಗಳು ಹೇಗೆ ಬಗ್ಗೆ ಆನ್ಲೈನ್ ಡೇಟಿಂಗ್ ನೆರವಾಯಿತು ನೀವು ಹುಡುಕಲು ಒಂದು ಆತ್ಮ ಸಂಗಾತಿಯ ಮತ್ತು ಪ್ರಬಲ ನಿರ್ಮಿಸಲು ಕುಟುಂಬ, ಆದರೆ ಅಲ್ಲಿ ಮತ್ತೊಂದು ಟ್ರೆಂಡ್. ಅಂಕಿಅಂಶಗಳ ಪ್ರಕಾರ, ಸಂಖ್ಯೆ ವಿಚ್ಛೇದನ ಇರುತ್ತದೆ, ಮತ್ತು ಮದುವೆ ಕೊನೆಯ ಗಿಂತ ಹೆಚ್ಚು ಒಂದು ವರ್ಷ. ಮುಖ್ಯ ಪಾತ್ರವನ್ನು ಒಂದು ಹೊಂದಾಣಿಕೆಯಾಗುತ್ತದೆಯೆ ಸಂಗಾತಿ. ಡೇಟಿಂಗ್ ಸೈಟ್ ಸಾಂಟಾ ಫೆ- ಹುಡುಕಲು ಸಹಾಯ ಮಾಡುತ್ತದೆ ಒಂದು ನಿಜವಾದ ಸೋಲ್ಮೇಟ್ ನೀವು, ಸಂಬಂಧ ಯಾವ ಅಭಿವೃದ್ಧಿ ಅತ್ಯಂತ ಅನುಕೂಲಕರವಾಗಿ. ನಮ್ಮ ಸೈಟ್ ಪ್ರದರ್ಶಿಸುವ ಒಂದು ಹೊಂದಾಣಿಕೆ ಸ್ಕೋರ್ ಪ್ರತಿ ವ್ಯಕ್ತಿ ನೀವು ಮತ್ತು ಒಂದು ಪರಿಣಾಮವಾಗಿ, ಕೊಡುಗೆಗಳನ್ನು ಆನ್ಲೈನ್ ಡೇಟಿಂಗ್ Ážé ಸಂಬಂಧಗಳು ಸಾಂಟಾ ಫೆ ಮುಂದಿನ ಹಂತಕ್ಕೆ, ಮತ್ತು ಎಲ್ಲಾ ಸೇವೆಗಳು ಲಭ್ಯವಿದೆ ಸೈಟ್ ಉಚಿತ. ಏಕ ವ್ಯಕ್ತಿ ಯಾರು ಸಂತೋಷವಾಗಿರುವಿರಿ. ಸಹಜವಾಗಿ, ನೀವು ನೀವು ಏನೇ ಹೇಳಿ, ವಿಶೇಷವಾಗಿ ಯಾರಾದರೂ ಕೇಳಿದರೆ ಬಗ್ಗೆ ಅಪೇಕ್ಷಣೀಯ ನಿಯಮಿತ, ನಿಮ್ಮ ವೈಯಕ್ತಿಕ ಜೀವನದ. ಆದರೆ ನೀವು ಬಯಸುವುದಿಲ್ಲ ನಿಮ್ಮ ಮರುಳು. ಒಂದು ಸನ್ಯಾಸಿ ಅಥವಾ ಒಂದು ಸನ್ಯಾಸಿ, ಮಾತ್ರ ಎಂದು. ನಾವು ಅಗತ್ಯವಿದೆ ಸುಧಾರಿಸಲು ಪರಿಸ್ಥಿತಿ. ಮತ್ತು ಈ ನೀವು ಸರಿಯಾದ ನಿರ್ಧಾರ. ಸಮಸ್ಯೆಯನ್ನು ಪರಿಹರಿಸುವ ಒಂಟಿತನ ರಲ್ಲಿ ಆಧುನಿಕ ಜೀವನ ಪರಿಸ್ಥಿತಿಗಳು ಹೆಚ್ಚು ಸುಲಭ ಮೊದಲು, ಆದರೆ, ಮತ್ತೊಂದೆಡೆ, ಬದಲಾಗಿ, ಇದು ಹೆಚ್ಚು ಕಷ್ಟ. ನೀವು ತಿಳಿದಿರುವಂತೆ, ನಮ್ಮ ಅಜ್ಜಿ ಮತ್ತು ಪೋಷಕರು ಪ್ರಸ್ತುತ ಅಲ್ಲ ನಿಮ್ಮ ಟಿವಿ ಅಥವಾ ಎಲ್ಲಾ ಮೇಲ್ವಿಚಾರಣೆ ದಿನ. ಅವರು ಸಂಘಟಿತ ಪಕ್ಷಗಳು ಮತ್ತು ಸಭೆಗಳು, ನಾಟಕ ಪ್ರವಾಸಗಳು. ಟನ್ ಇವೆ ರೀತಿಯಲ್ಲಿ ಪೂರೈಸಲು ನಿಮ್ಮ ಸೋಲ್ಮೇಟ್. ಈ ಅರ್ಥದಲ್ಲಿ, ಪ್ರಸ್ತುತ ಪೀಳಿಗೆಯ ಆಗಿದೆ, ಆದ್ದರಿಂದ ಸರಳ ಅಲ್ಲ. ಅನೇಕ ನಿವಾಸಿಗಳು ಗಗನಚುಂಬಿ ಕಟ್ಟಡಗಳು ಮತ್ತು ತಮ್ಮ ನೆರೆ ನೋಡಿಲ್ಲದಿದ್ದರೆ ತಮ್ಮ ಮುಖಗಳನ್ನು. ಅಲ್ಲಿ ಎಲ್ಲಿಯೂ ಹೋಗಿ, ಮತ್ತು ಯಾವುದೇ ಸೂಕ್ತ ಅಭ್ಯರ್ಥಿ. ಲೆಟ್ ತಂದೆಯ ನೀವು ಹೋಗಿ ಬಯಸುವ ಒಂದು ಕ್ಲಬ್. ವ್ಯಕ್ತಿಯ ಆಸಕ್ತಿ ಇಲ್ಲ, ಕಂಪನಿ ಕಚ್ಚುವುದು ಇಲ್ಲ ಇಲ್ಲಿ. ಯಾವಾಗ ಕಂಪನಿ ದೊಡ್ಡ ಮತ್ತು ಗದ್ದಲದ, ಇದು ಆದ್ದರಿಂದ ಕಷ್ಟ ಅಲ್ಲ ಹೇಗೆ ನಿಮ್ಮ ಸೋಲ್ ಮೇಟ್. ಆದರೆ ಅಲ್ಲಿ ಇಂಟರ್ನೆಟ್ ನೆಟ್ವರ್ಕ್. ಅವರು ಬಲವಾದ ಮತ್ತು ದೊಡ್ಡ ಮತ್ತು ಸಾಕಷ್ಟು ತಿಳಿದಿದೆ, ಆದರೆ ಎಲ್ಲವೂ. ಕೆಲವೇ ನಿಮಿಷಗಳಲ್ಲಿ, ಉಚಿತ ಡೇಟಿಂಗ್ ಸೈಟ್ಗಳು ಅಗತ್ಯವಿದೆ ಸಾಂಟಾ ಫೆ. ಕೆಲವು ನಿಮಿಷಗಳ ನಂತರ, ನೀವು ಎಂದು ನೋಂದಾಯಿತ ಒಂದು ಹೊಸ ಬಳಕೆದಾರ ಎಂದು. ಒಂದು ವಿಂಡೋ ಒಂದು ದೊಡ್ಡ ಸಂಖ್ಯೆಯ ಪ್ರಶ್ನಾವಳಿಗಳು ಕಾಣಿಸಿಕೊಳ್ಳುತ್ತದೆ. ಕೆಲವು ಎಂದು ಹೇಳಲು ನಾನು ಬಯಸುವ ಒಂದು ಗಂಭೀರ ಸಂಬಂಧ, ಇತರರು ಒಂದು ಗುರಿ ಹೊಂದಿರುತ್ತದೆ - ಮದುವೆ ಮತ್ತು ಮಕ್ಕಳು, ಇತರರು ಹುಡುಕಲು ಬಯಸುವ ಜನರು ಸಾಮಾನ್ಯ ಆಸಕ್ತಿಗಳು, ಮತ್ತು ಕೆಲವು ಬಳಸಲು ಈ ಸೇವೆಗಳನ್ನು ಮನರಂಜನೆ. ಅನೇಕ ಪ್ರಶ್ನಾವಳಿಗಳು, ಇದು ಹೇಳಲಾಗುತ್ತದೆ ಯಾರು ಬಳಕೆದಾರರು ಹುಡುಕಲು ಬಯಸುವ ಒಂದು ಡೇಟಿಂಗ್ ಸೈಟ್. ಇಲ್ಲಿ, ಯಾರಾದರೂ ಅನ್ವಯಿಸಬಹುದು ಇದು ವಯಸ್ಸು, ಆಕಾರ, ಮುಖದ ಆಕಾರ, ಕೂದಲು ಬಣ್ಣ, ವ್ಯಕ್ತಿ, ಮತ್ತು ಇತರೆ ನಿಯತಾಂಕಗಳನ್ನು. ನೀವು ಓದಲು ಬಹಳಷ್ಟು ಪ್ರಶ್ನಾವಳಿಗಳು, ಗುರ ಒಂದು ವ್ಯಕ್ತಿ ನೀವು, ಮತ್ತು ನೀವು ಪ್ರಾರಂಭಿಸಿ ಒಂದು ರೀತಿಯ ಸಂಬಂಧ áí. ಕೆಲವು ಜನರು ಆದ್ಯತೆ ದೀರ್ಘಕಾಲದ áí. ಈ ರೀತಿಯಲ್ಲಿ, ವ್ಯಕ್ತಿ ನೀವು ಹೆಚ್ಚು ತಿಳಿಯಲು ಮೊದಲು ಮುಂಬರುವ ಸಭೆಯಲ್ಲಿ. ಇತರರು ಒಂದು ದಿನಾಂಕವನ್ನು ಹೋಗಲು, ಮುಂದಿನ ದಿನ. ಯಾರಾದರೂ ಮೂಲಕ ಹೋಗಲು ಹೊಂದಿದೆ ಮಧ್ಯಂತರ ಹಂತ ರಿಂದ ವಾಸ್ತವ ಪತ್ರವ್ಯವಹಾರದ ಕಳುಹಿಸಿ ನಿಜವಾದ ದಿನಾಂಕ-ಫೋನ್ ಮೂಲಕ. ನೀವು ಮಾಡಬಾರದು ಕನಸು ಯಶಸ್ವಿಯಾಗಿ ಹುಡುಕುವ ಅವರಿಗೆ ದ್ವಿತೀಯಾರ್ಧದಲ್ಲಿ ಒಂದು ಉಪಯುಕ್ತ ಡೇಟಿಂಗ್ ಸೇವೆ. ಬಹಳಷ್ಟು ಇವೆ ಎಲ್ಲೆಡೆ, ಸೇರಿದಂತೆ ನಲ್ಲಿ ಡೇಟಿಂಗ್ ಕೇಂದ್ರಗಳು ಸಾಂಟಾ ಫೆ. ಇದು ಎಂದು ಹೇಳುವುದು ಹೆಚ್ಚು ನಿಖರ ಇವೆ ಎಂದು ಸಹ ಹೆಚ್ಚು ಜನರು ಇಲ್ಲಿ ಹೆಚ್ಚು ಇತರ ಸ್ಥಳಗಳಲ್ಲಿ. ಆದಾಗ್ಯೂ, ಈ ಒಂದು ಕಾರಣ ನೀಡಿ ಅಪ್ ಕಾರಣ. ಈ ಸಂದರ್ಭದಲ್ಲಿ, ನೀವು ಅನುಭವ ಪಡೆಯಲು ಸಂವಹನ ವಿವಿಧ ಜನರು. ನೀವು ಅದೃಷ್ಟ ಕೋರುತ್ತೇವೆ, ನೀವು ಕಾಣುವಿರಿ ಯಾರಾದರೂ ಸಹ ಹತ್ತಿರ ಇಲ್ಲಿ. ಬಹುಶಃ ಅವರು ಮಾಡುವುದಿಲ್ಲ ಬೆಂಬಲ ನೀವು ಎಲ್ಲವನ್ನೂ ಮತ್ತು ನೀವು ಬೆಂಬಲಿಸಲು, ಆದರೆ ಅವರು ತಿನ್ನುವೆ ಒಂದು ಉತ್ತಮ ಸ್ನೇಹಿತ. ಮತ್ತು ಈ ಸಾಮಾನ್ಯವಾಗಿ ಸಂಭವಿಸುತ್ತದೆ. ಹೌದು, ಇದು. ಬಹಳಷ್ಟು ಹುಡುಗರಿಗೆ ಮತ್ತು ಹುಡುಗಿಯರಿಗೆ ಕೊನೆಗೊಳ್ಳುತ್ತದೆ ಇಲ್ಲಿ ಈ ರಾಜ್ಯ. ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ ವರ್ಷಗಳ ಕಾಲ, ಮಕ್ಕಳ ಸಂಗ್ರಹಿಸಲು. ಏನೂ ಅಸಾಧ್ಯ. ಇದು ಸಾಮಾನ್ಯವಾಗಿ ಒಂದು ದೀರ್ಘ ಸಮಯ ಹಿಡಿಯುತ್ತದೆ ಹೇಗೆ ಪ್ರೀತಿಪಾತ್ರರನ್ನು. ಅವರು ನಿಖರವಾಗಿ ಅನನುಭವಿ ಮತ್ತು ದರಿದ್ರ. ಆದರೆ ಹೇಗೆ ನೀವು ಕೇವಲ ಒಂದು, ನೀವು ತಕ್ಷಣ ಅರ್ಥ ಎಲ್ಲವೂ ಅಲ್ಲ ಭಾಸ್ಕರ್. ಜೊತೆಗೆ, ಇದು ಬಹಳ ಪ್ರಸ್ತುತವಾಗಿದೆ ಎಂದು ಪ್ರಸ್ತುತ ಎಲ್ಲಾ ಡೇಟಿಂಗ್ ಸೇವೆಗಳು ನೀಡಲಾಗುತ್ತದೆ ಚಾರ್ಜ್ ಸಂಪೂರ್ಣವಾಗಿ ಉಚಿತ. ಜನರಿಗೆ ನೋಂದಣಿಯಾಗಿಲ್ಲ သာ ၊တာတာချိန်းတွေ့အတွက် ವೀಡಿಯೊ ಡೇಟಿಂಗ್ ಸೈಟ್ಗಳು ಚಾಟ್ ರೂಲೆಟ್ ಇಲ್ಲದೆ ಜಾಹೀರಾತುಗಳು ವೀಡಿಯೊ ಡೇಟಿಂಗ್ ಪ್ರೊಫೈಲ್ ಟಾಪ್ ಸೈಟ್ಗಳು, ಆನ್ಲೈನ್ ಡೇಟಿಂಗ್ ವೀಡಿಯೊ ಡೇಟಿಂಗ್ ಯಾವುದೇ ನೋಂದಣಿ ಸಂವಹನ ವೀಡಿಯೊ ಚಾಟ್ ನೋಂದಣಿ ವೀಡಿಯೊ ಚಾಟ್ ಹುಡುಗಿಯರು ಉಚಿತ ಇಲ್ಲದೆ ನಿರ್ಬಂಧಗಳನ್ನು ಆನ್ಲೈನ್ ವೀಡಿಯೊ ಚಾಟ್
ಡಿಜಿಟಲ್ ಸೇವಾ ಕೇಂದ್ರ ಕೊಡವೂರು. ಇವರ ಸಹಯೋಗದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ನ.13 ರಂದು ಲಕ್ಷ್ಮೀ ನಗರ ಪೇಟೆಯಲ್ಲಿ ನಡೆಯಿತು. ಶಿಬಿರವನ್ನು ಹಿರಿಯರಾದ ಶೇಕರ್ ಲಕ್ಷ್ಮೀ ನಗರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು, ಈಗಾಗಲೇ ಕೊಡವೂರು ವಾರ್ಡಿನಲ್ಲಿ ಇಂತಹ ಶಿಬಿರವನ್ನು ಪ್ರತೀ ಪರಿಸರದಲ್ಲಿ ಸಂಘ ಸಂಸ್ಥೆಗಳ ಸಹಯೋಗದಿಂದ ಮಾಡುತ್ತಾ ಇದ್ದು, ಕೇಂದ್ರ ರಾಜ್ಯ ಸರಕಾರ ಯೋಜನೆಯನ್ನು ಎಲ್ಲಾ ಜನರಿಗೂ ಮುಟ್ಟಿಸಲು ಇಂತಹ ಚಿಕ್ಕ ಚಿಕ್ಕ ಶಿಬಿರದ ಮೂಲಕ ಮಾಡಲು ಸಹಾಯವಾಗುತ್ತದೆ ಎಂದರು. ಒಟ್ಟು 73 ಜನರು ಉಚಿತವಾಗಿ ಶಿಬಿರದ ಪ್ರಯೋಜನವನ್ನು ಪಡೆದರು. ಈ ಸಂದರ್ಬದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಪ್ರಶಾಂತ್,ಸುಶ್ಮಿತಾ ಡಿಜಿಟಲ್ ಸೇವಾ ಕೇಂದ್ರ ಕೊಡವೂರು, ಸವಿತ ಡಿ. PHCO ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಅಮಿತ್,ರಮೇಶ್, ರವಿ, ರಾಜೇಶ್, ವಿನಯ್, ಮತ್ತಿತರರು ಉಪಸ್ಥಿತರಿದ್ದರು.
Kannada News » Latest news » 2-day-old infant found abandoned on road near a school in Nippani, residents rescue it video story in Kannada ಬೆಳಗಾವಿ: ಎರಡು ದಿನದ ಹಸುಗೂಸನ್ನು ರಸ್ತೆಯಲ್ಲಿ ಬಿಸಾಡಿದ ಪಾಪಿಗಳು, ಸ್ಥಳೀಯರಿಂದ ರಕ್ಷಣೆ ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. TV9kannada Web Team | Edited By: Arun Belly Nov 24, 2022 | 2:38 PM ಬೆಳಗಾವಿ: ಇದು ಘೋರ ಅಪರಾಧವಲ್ಲದೆ ಮತ್ತೇನೂ ಅಲ್ಲ. ಯಾರೋ ಪಾಪಿಗಳು ತಮಗೆ ಬೇಡದ, ಕೇವಲ ಎರಡು-ದಿನದ ಮಗುವನ್ನು ಒಂದು ಹರಕಲು ಬ್ಯಾಗ್ ನಲ್ಲಿಟ್ಟು ಗುಂಡಿಯಲ್ಲಿ ಬಿಸಾಡಿರುವ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪಾಪಿಗಳು ನಿಪ್ಪಾಣಿಯ ಕೆಎಲ್ ಶಾಲೆ ಬಳಿಯ ಗುಂಡಿಯೊಂದರಲ್ಲಿ ಹಸುಗೂಸನ್ನು ಬಿಸಾಡಿದ್ದಾರೆ. ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ವಕೀಲರು ಪ್ರದರ್ಶಿಸಿದ ಪೌರಾಣಿಕ ನಾಟಕವನ್ನು ವೀಕ್ಷಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಿಡುವಿನ ವೇಳೆಯನ್ನು ತೆಗೆದುಕೊಂಡರು. ನಗರದ ಕಲಾಮಂದಿರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಮಾಜಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಡಿ.ತಿಮ್ಮಯ್ಯ, ಎಂಎಲ್ಸಿ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು ಸೇರಿದಂತೆ ಮತ್ತಿತರರು ವಕೀಲರು ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು. ಶನಿವಾರ ಮೈಸೂರಿನ ಕಲಾಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರು ಪ್ರದರ್ಶಿಸಿದ ಪೌರಾಣಿಕ ನಾಟಕವನ್ನು ವೀಕ್ಷಿಸಿದರು. | ಚಿತ್ರಕೃಪೆ: ಎಂಎ ಶ್ರೀರಾಮ್ ಮೈಸೂರಿನ ವಕೀಲರ ಸಂಘ ಆಯೋಜಿಸಿದ್ದ ನಾಟಕದ ಪ್ರದರ್ಶನದಲ್ಲಿ ವಕೀಲರೇ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಮೈಸೂರಿನ ವಕೀಲರ ಸಂಘದ ಆಹ್ವಾನದ ಮೇರೆಗೆ ನಾಟಕ ವೀಕ್ಷಿಸಲು ಬಂದಿದ್ದೆ ಎಂದು ಹೇಳಿದ ಸಿದ್ದರಾಮಯ್ಯ, ತಾವು ವಕೀಲರಾಗಿದ್ದಾಗ ಸಾಕಷ್ಟು ನಾಟಕಗಳನ್ನು ನೋಡುತ್ತಿದ್ದೆವು ಎಂದು ಸ್ಮರಿಸಿದರು. ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾಗ ನಾಟಕಗಳಲ್ಲಿ ನಟಿಸುತ್ತಿದ್ದುದನ್ನು ಸ್ಮರಿಸಿದ ಮಾಜಿ ಮುಖ್ಯಮಂತ್ರಿ, ಯಮದೇವರಾಯನ ಸನ್ನಿಧಿ ಎಂಬ ನಾಟಕದಲ್ಲಿ ವೈದ್ಯನ ಪಾತ್ರದಲ್ಲಿ ನಟಿಸಿದ್ದೇನೆ ಎಂದರು. ಕನ್ನಡದ ದಿವಂಗತ ರಾಜ್‌ಕುಮಾರ್ ಅವರು ಪೌರಾಣಿಕ ನಾಟಕಗಳಲ್ಲಿನ ಅಭಿನಯದಿಂದಾಗಿ ಪ್ರಸಿದ್ಧ ಕಲಾವಿದರಾಗಿ ಬೆಳೆದಿದ್ದಾರೆ ಎಂದು ಶ್ರೀ ಸಿದ್ದರಾಮಯ್ಯ ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಪೌರಾಣಿಕ ನಾಟಕಗಳ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಅವರು, ನಾಟಕಗಳು ಮತ್ತೆ ಜನಪ್ರಿಯವಾಗುವಂತೆ ಆಸಕ್ತಿ ವಹಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಯ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಜೆಡಿಎಸ್ ವಿರುದ್ಧ ತಿರುಗೇಟು ನೀಡಲು ಯತ್ನಿಸಿದರು. ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್. ಬಿಜೆಪಿಯನ್ನು ಸೋಲಿಸಬೇಕಾದರೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದಿತ್ತು ಎಂದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸ್ಮರಿಸಿದರು. ಗೌಡರ ವಿರುದ್ಧ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆಯೇ, ಜೆಡಿಎಸ್ ಕೂಡ ಈಗ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಬೆಂಬಲ ನೀಡಿತ್ತು ಎಂಬುದನ್ನು ಜೆಡಿಎಸ್‌ಗೆ ನೆನಪಿಸಲು ಸಿದ್ದರಾಮಯ್ಯ ಪ್ರಯತ್ನಿಸಿದರು. ಈ ಚುನಾವಣೆಯಲ್ಲಿ ನಾವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವು. ಬಿಜೆಪಿಯ ಗೆಲುವಿನಿಂದ ಜೆಡಿಎಸ್‌ಗೆ ಹಿನ್ನಡೆಯಾಗಿದ್ದರೆ, ಪಕ್ಷವು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕಿತ್ತು” ಎಂದು ಅವರು ಹೇಳುವ ಮೊದಲು, ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಜೆಡಿಎಸ್‌ನ ಸಂಪೂರ್ಣ ಹೊಣೆಗಾರಿಕೆ ಇದೆ ಎಂದು ಹೇಳಿದರು. Share Facebook Twitter Pinterest WhatsApp Previous articleಇಂಗ್ಲೆಂಡ್ vs ನ್ಯೂಜಿಲೆಂಡ್ ಲೈವ್ ಸ್ಕೋರ್, 2 ನೇ ಟೆಸ್ಟ್ ದಿನ 3 | ಕ್ರಿಕೆಟ್ Next articleರಣಜಿ ಟ್ರೋಫಿಗೆ ಉತ್ತಮ ಪ್ರೊಫೈಲ್ ಮತ್ತು ಗೌರವದ ಅಗತ್ಯವಿದೆ | ಕ್ರಿಕೆಟ್ RELATED ARTICLES ರಾಜ್ಯ ಸುದ್ದಿ ಬೆಂಗಳೂರಿನಲ್ಲಿ ಆಹಾರ ಮಾರಾಟ ಮಾಡುವ ಬೀದಿ ವ್ಯಾಪಾರಿಗಳಿಗೆ ಸ್ವಚ್ಛತೆ ಮತ್ತು ಆಹಾರ ಸುರಕ್ಷತೆ ಕುರಿತು ಬಿಬಿಎಂಪಿ ಮತ್ತು ಎಫ್‌ಎಸ್‌ಎಸ್‌ಎಐ ತರಬೇತಿ ನೀಡಲಿದೆ.
‘ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗೆ ಬಂದವಳೆಂದು’, ಈ ಸಾಲುಗಳನ್ನು ಕೇಳದೇ ಇರುವ ಕಿವಿಗಳೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಜನಪ್ರಿಯವಾದ ಹಾಡು ಇದು. ಜಯಂತ್ ಕಾಯ್ಕಿಣಿ ಅವರು ಬರೆದು, ಮನೋಮೂರ್ತಿ ಅವರು ಸಂಗೀತ ನೀಡಿರುವ ಈ ಸುಂದರ ಹಾಡನ್ನು, ಅಷ್ಟೇ ಸುಂದರವಾಗಿ ಹಾಡಿ, ಕನ್ನಡಿಗರು ಮಾತ್ರವಲ್ಲ, ಇತರೆ ಭಾಷೆಯ ಜನರೂ ಕೇಳಿ ಆನಂದಿಸುವಂತೆ ಮಾಡಿದವರೇ Super Singer ಸೋನು ನಿಗಮ್. ಇಷ್ಟುಮಾತ್ರವಲ್ಲ, ಕಳೆದ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡಿಗರಿಗಾಗಿ ಹತ್ತಾರು ಹಾಡುಗಳನ್ನು ಹಾಡಿರುವ ಇವರು, ಕನ್ನಡ ಅನ್ನೋ ಶಬ್ದ ಕೇಳಿದರೆ ಸಾಕು, ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು, ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ’ ಅಂತ ಹಾಡೋಕ್ಕೆ ಶುರು ಮಾಡಿಬಿಡ್ತಾರೆ. ‘ನಾನು, ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದಿರಬಹುದು’ ಎಂದು ಹೇಳುವ ಮೂಲಕ, ಕನ್ನಡ ಭಾಷೆಯ ಬಗ್ಗೆ ತಮಗಿರುವ ಪ್ರೀತಿ ತೋರ್ಪಡಿಸುತ್ತಾರೆ. ಜುಲೈ 30, ಸೋನು ನಿಗಮ್ ಹುಟ್ಟಿದ ದಿನ. ಸೋನು ನಿಗಮ್ ಅವರ ಈವರೆಗಿನ ಜೀವನ, ಸಾಧನೆ ಮತ್ತು ವಿವಾದಗಳೆಲ್ಲವನ್ನೂ ಒಳಗೊಂಡ ವಿಶೇಷ ವ್ಯಕ್ತಿ ಚಿತ್ರ ನಿಮಗಾಗಿ, ಎಲ್ಲ ಕನ್ನಡಿಗರಿಗಾಗಿ ಇಲ್ಲಿದೆ. ಸೋನು ನಿಗಮ್ ಬಾಲ್ಯದ ದಿನಗಳು ಸೋನು ನಿಗಮ್ ಹುಟ್ಟಿದ್ದು 1973 ನೇ ಇಸವಿ ಜೂನ್ 30 ರಂದು. ಹರಿಯಾಣ ರಾಜ್ಯದ ಫರೀದಾಬಾದ್ ಸೋನು ಹುಟ್ಟೂರು. ಈ ಊರು, ದೇಶದ ರಾಜಧಾನಿ ದೆಹಲಿಗೆ ಕೇವಲ 30 ಕಿ.ಮೀ ದೂರದಲ್ಲಿದೆ. ಸೋನು ತಂದೆ ಆಗಮ್ ಕುಮಾರ್ ನಿಗಮ್, ತಾಯಿ ಶೋಭಾ. ಸೋನುಗೆ ಮೀನಾಲ್ ಮತ್ತು ನಿಖಿತಾ ಎಂಬ ಸೋದರಿಯರೂ ಇದ್ದಾರೆ. ದೆಹಲಿಯ J D Titlor ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸೋನು, ದೆಹಲಿ ವಿ.ವಿಯಿಂದ ಪದವಿ ಪಡೆದಿದ್ದಾರೆ. ಸೋನು ತಂದೆ ಆಗಮ್ ಕುಮಾರ್, ಉತ್ತರ ಪ್ರದೇಶದ ಆಗ್ರಾ ಮೂಲದವರು. ಬಾಲಿವುಡ್ ನಲ್ಲೂ ಹಾಡಿರುವ ಆಗಮ್ ಕುಮಾರ್, stage showಗಳಲ್ಲಿ ಹಾಡುವುದನ್ನೇ ವೃತ್ತಿಯಾಗಿ ಮಾಡಿಕೊಂಡವರು. ತಾವು, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪುಟಾಣಿ ಸೋನುವನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಅಪ್ಪ ಹಾಡುವುದನ್ನು ನೋಡುತ್ತಿದ್ದ ಬಾಲಕ ಸೋನುವಿನಲ್ಲೂ ಹಾಡುವ ಆಸೆ ಹುಟ್ಟಿತು. ಕೇವಲ 4 ವರ್ಷ ವಯಸ್ಸಿನಲ್ಲೇ ನಾನು ಹಾಡಲೇಬೇಕು ಎಂದು ಹಠ ಹಿಡಿದ ಸೋನುವನ್ನು ವೇದಿಕೆ ಹತ್ತಿಸಲಾಯಿತು. ವೇದಿಕೆಯಲ್ಲಿ ನಿಂತು Mike ಹಿಡಿದ ಪುಟ್ಟ ಬಾಲಕ, ‘ಕ್ಯಾ ಹುವಾ ತೇರ ವಾದ’ ಅನ್ನುತ್ತಿದ್ದಾಗಲೇ ಚಪ್ಪಾಳೆಗಳ ಸುರಿಮಳೆ. ಇದು, ‘ಹಮ್ ಕಿಸೀಸೆ ಕಮ್ ನಹಿ’ ಸಿನೆಮಾದ ಸೂಪರ್ ಹಿಟ್ ಹಾಡು. ಇದನ್ನು ತಮ್ಮ ಅದ್ಭುತ ಕಂಠದಿಂದ ಹಾಡಿದ್ದವರು, ಅಮರ ಗಾಯಕ ಮೊಹಮದ್ ರಫಿ ಅವರು. ಈ ಹಾಡಿನಿಂದ ತಮ್ಮ ಸಂಗೀತ ಯಾತ್ರೆ ಆರಂಭಿಸಿದ ಸೋನು, ಅಲ್ಲಿಂದಾಚೆಗಿನ ನಲವತ್ತು ವರ್ಷಗಳನ್ನು ದಾಟಿ ಮುನ್ನಡೆದು ದೇಶ ವಿದೇಶಗಳ ಲಕ್ಷಾಂತರ ಕೇಳುಗರ ಮನಸ್ಸನ್ನು ಸೂರೆಗೊಂಡಿದ್ದಾರೆ. ಆದರೆ, ಅಂದು ನಡೆದಿದ್ದು ಕೇವಲ ಆರಂಭ. ಸೋನು ನಿಗಮ್, ಓರ್ವ ವೃತ್ತಿಪರ ಹಾಡುಗಾರನಾಗಿ ರೂಪುಗೊಳ್ಳವುದರ ಹಿಂದೆ, ಸತತ ಪ್ರಯತ್ನ ಮತ್ತು ಅಪಾರ ಪರಿಶ್ರಮವಿದೆ. ಸೋನು ಸಂಗೀತಾಭ್ಯಾಸ ಬಾಲ್ಯದಲ್ಲಿ, ಅಪ್ಪನಿಂದಲೇ ಸಂಗೀತದ ಆರಂಭಿಕ ಪಾಠಗಳನ್ನು ಕಲಿತ ಸೋನು, ಆ ಬಳಿಕ ದೆಹಲಿಯಲ್ಲಿ ನೆಲೆಸಿದ್ದ ಉಸ್ತಾದ್ ಮಹಾ ಕಂಜಾರ್ ನವೀದ್ ಅವರ ಬಳಿ ಶಾಸ್ತ್ರೀಯ ಸಂಗೀತದ ತರಬೇತಿ ಪಡೆದರು. ತಮ್ಮ ವಯಸ್ಸಿನ ಬೇರೆ ಎಲ್ಲ ಬಾಲಕರಿಗಿದ್ದ ಆಟೋಟಗಳ ಆಸಕ್ತಿಯನ್ನು ಬದಿಗಿರಿಸಿದ ಸೋನು, ಸಂಗೀತಾಭ್ಯಾಸವನ್ನೇ ತಮ್ಮ ಉಸಿರಾಗಿರಿಸಿಕೊಂಡರು. ಹಲವಾರು ಸ್ಥಳೀಯ ಮತ್ತು ರಾಷ್ಟ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಸೋನು ನಿಗಮ್, ಬಹುತೇಕ ಎಲ್ಲದರಲ್ಲೂ ಬಹುಮಾನ ಗೆದ್ದುಕೊಂಡರು. ಆ ದಿನಗಳಲ್ಲೇ, ತಾನು ಬಾಲಿವುಡ್ ನಲ್ಲಿ ಓರ್ವ ಹಿನ್ನೆಲೆ ಗಾಯಕನಾಗಿ ಹೆಸರು ಮಾಡಲು ಸಾಧ್ಯ ಎಂದು ಸೋನು ನಿಗಮ್ ಗೆ ಅನ್ನಿಸಲು ಶುರುವಾಗಿದ್ದು. ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡ ಸೋನು, ಫರೀದಾಬಾದ್ ನಿಂದ ಹಾರಿ ಮುಂಬೈ ಮಹಾನಗರಕ್ಕೆ ಬಂದರು. ಮುಂಬೈನಗರಿಯಲ್ಲಿ ಸೋನು ನಿಗಮ್ ಕೇವಲ 18ರ ವಯಸ್ಸಿನಲ್ಲೇ ಮುಂಬೈಗೆ ಬಂದ ಸೋನು, ಸುಪ್ರಸಿದ್ಧ ಹಾಡುಗಾರ ಉಸ್ತಾದ್ ಗುಲಾಮ್ ಮುಸ್ತಫ ಖಾನ್ ಅವರ ಬಳಿ ಸಂಗೀತಾಭ್ಯಾಸವನ್ನು ಮುಂದುವರೆಸಿದರು. ಅದೇವೇಳೆ, ಹಾಡುವ ಅವಕಾಶಗಳಿಗಾಗಿ ಹುಡುಕಾಟ ನಡೆಸ ತೊಡಗಿದರು. ಸೋನುಗೆ 1990ರಲ್ಲಿ ಮೊದಲ ಬಾರಿಗೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿತು. ಹಿಂದಿ ಸಿನೆಮಾ ಜಾನಮ್ ಗಾಗಿ ಸೋನು ಮೊದಲ ಹಾಡು ರೆಕಾರ್ಡ್ ಆಯಿತು. ಆದರೆ, ‘ಪ್ರಥಮ ಚುಂಬನೇ ದಂತ ಭಗ್ನಮ್’ ಅನ್ನುವ ಹಾಗೆ ಸೋನು ಹಾಡಿದ ಆ ಸಿನೆಮಾ ತೆರೆ ಕಾಣದೆ ಪೆಟ್ಟಿಗೆಯಲ್ಲೇ ಉಳಿಯಿತು. ಆ ಬಳಿಕ, T-series ಮಾಲೀಕ ದಿವಂಗತ ಗುಲ್ಷನ್ ಕುಮಾರ್, ತಮ್ಮ ಕಂಪನಿಗಾಗಿ ಹಾಡಲು ಸೋನು ಜೊತೆ ಒಪ್ಪಂದ ಮಾಡಿಕೊಂಡರು. ಆದರೆ, ಮೊದ ಮೊದಲ ದಿನಗಳಲ್ಲಿ ಇವರು ಹಾಡಿದ ಬಹುತೇಕ ಹಾಡುಗಳನ್ನು ತಿರಸ್ಕರಿಸಿ, ಅದಾಗಲೇ ಪ್ರಖ್ಯಾತರಾಗಿದ್ದ ಗಾಯಕರಿಂದ ಮತ್ತೆ ಹಾಡಿಸಲಾಯಿತು. ಇಷ್ಟಾದರೂ ಧೈರ್ಯಗೆಡದ ಸೋನುಗೆ ಬ್ರೇಕ್ ಕೊಟ್ಟಿದ್ದು 1993ರಲ್ಲಿ ತೆರೆಕಂಡ ‘Aaja Meri Jaan’ ಸಿನೆಮಾದಲ್ಲಿನ ‘O Aasmaan Wale Zameen Par Utar Ke Dekh’ ಹಾಡು. ಸಾಕಷ್ಟು ಜನಪ್ರಿಯವಾದ ಈ ಹಾಡು, ಬಾಲಿವುಡ್ ಸಿನೆಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಸೋನು ನಿಗಮ್ ಎಂಟ್ರಿಯನ್ನು ಪ್ರಕಟಿಸಿತ್ತು. ಬಾಲಿವುಡ್ ಸಂಗೀತ ಕೋವಿದರು ಎದ್ದು ಕುಂತು, ಈ ಯುವ ಪ್ರತಿಭೆಯ ಕಡೆ ನೋಡತೊಡಗಿದರು. ಆದರೆ, ಇದಾದ ಬಳಿಕವೂ ಹೆಚ್ಚಿನ ಅವಕಾಶಗಳೇನೂ ಸೋನು ನಿಗಮ್ ಕಡೆಗೆ ಹರಿದು ಬರಲಿಲ್ಲ. ಹೀಗಾಗಿ, ಮುಂಬೈನಲ್ಲಿನ ಆ ದಿನಗಳು ಇವರ ಪಾಲಿಗೆ, ಕಷ್ಟದ ದಿನಗಳೇ ಆಗಿದ್ದವು. ದೊಡ್ಡ ಅವಕಾಶಗಳು ಸಿಗದೇ ಇದ್ದ, ಆ ಸಮಯದಲ್ಲಿ ರೇಡಿಯೊ ಜಾಹೀರಾತುಗಳಿಗೆ ಧ್ವನಿ ನೀಡುತ್ತಿದ್ದ ಸೋನು ನಿಗಮ್, ಅದರಿಂದಲೇ ಬದುಕು ನಡೆಸುತ್ತಿದ್ದರು. ಆ ನಡುವೆ, ‘Shabnam’ (1993), ‘Aag’ (1994), ‘Khuddar’ (1994), ‘Hulchul’ (1994), ‘Stuntman’ (1994) ಮತ್ತು ‘Ram Jaane’ (1995) ಇತ್ಯಾದಿ ಸಿನೆಮಾಗಳಿಗಾಗಿ ಸೋನು ಹಾಡಿದರಾದರೂ, ಅವು ಯಾವೂ ಕೂಡ ನೆನಪಿನಲ್ಲಿಟ್ಟುಕೊಳ್ಳಲು ಲಾಯಕ್ಕಾಗಿದ್ದ ಹಾಡುಗಳಾಗಿರಲಿಲ್ಲ. 1995ರಲ್ಲಿ ತೆರೆಕಂಡ Bewafa Sanam ಚಿತ್ರದ ‘Achchha Sila Diya Tune Mere Pyar Ka’ ಅನ್ನುವ ಹಾಡು, ಸಿಕ್ಕಾಪಟ್ಟೆ ಜನಪ್ರಿಯವಾಯಿತು. ಸೋನು ನಿಗಮ್ ಮಿಂಚಿನ ಓಟ ಆ ಬಳಿಕ, 1997ರಲ್ಲಿ ತೆರೆಗೆ ಬಂದ ‘Border’ ಸಿನೆಮಾದ ‘Sandese Aate Hain’ ಹಾಡು ಸೋನು ಜನಪ್ರಿಯತೆ ಹೆಚ್ಚಿಸಿದ್ದರ ಜೊತೆಗೆ, Zee Cine Award ಕೂಡ ತಂದುಕೊಟ್ಟಿತ್ತು. ಆ ನಂತರ ‘Pardes’ (1999) ಚಿತ್ರದ ‘YehDil’ ಹಾಡು, ಸೋನು ನಿಗಮ್ ವೃತ್ತಿ ಜೀವನ ಗಟ್ಟಿಯಾಗಲು ನೆರವಾಯಿತು. 2004ರ ‘Kal Ho Na Ho’ ಸಿನೆಮಾದ Title Song ಅಪಾರವಾಗಿ ಜನಪ್ರಿಯವಾಯಿತು. ಅಲ್ಲಿಂದಾಚೆಗೆ ಅವಕಾಶಗಳ ಸಂಖ್ಯೆ ಹೆಚ್ಚಾದಂತೆ, ಸೋನು ನಿಗಮ್ ಗೆ ಬಾಲಿವುಡ್ ನ most experimental singer ಎಂಬ ವಿಶೇಷಣವೂ ಸೇರಿಕೊಂಡಿತು. ‘Sathiyaa’ಸಿನೆಮಾಗಾಗಿ ಎ.ಆರ್.ರಹಮಾನ್ ನಿರ್ದೇಶನದಲ್ಲಿ ಹಾಡಿದ ಹಾಡುಗಳು, ಆ ಬಳಿಕ 2001ರಲ್ಲಿ ‘Dil Chahta Hai’ಸಿನೆಮಾಗಾಗಿ ಹಾಡಿದ ‘Tanhayee’ ಹಾಡು, ಸೋನು ನಿಗಮ್ ಅವರ amazing range ಮತ್ತು versatilityಗೆ ಸಾಕ್ಷಿಯಾಯಿತು. ‘Kabhi Khushi Kabhi Gham’ ಸಿನೆಮಾದ ‘Suraj Hua Madhyam’ ಹಾಡು, ‘Paheli’ ಸಿನೆಮಾದ ಭಾವಪೂರ್ಣ ‘Dheere Jalna’ ಹಾಡುಗಳು, ಸೋನು ನಿಗಮ್ ಗೆ ಮತ್ತೊಮ್ಮೆ Best Male Playback Singer ಪ್ರಶಸ್ತಿ ತಂದುಕೊಟ್ಟವು. ಸೋನು ನಿಗಮ್ ವೃತ್ತಿ ಜೀವನದ Golden days 2010 ಮತ್ತು 2011ನೇ ವರ್ಷಗಳು ಸೋನು ನಿಗಮ್ ವೃತ್ತಿ ಜೀವನದ ಉತ್ತುಂಗದ ಸಮಯ. ಆ ದಿನಗಳಲ್ಲಿ, ಬಾಲಿವುಡ್ ನಲ್ಲಿ ತಯಾರಾಗುತ್ತಿದ್ದ ಒಟ್ಟಾರೆ ಹಾಡುಗಳಲ್ಲಿ ಅರ್ಧದಷ್ಟು ಹಾಡುಗಳು, ಸೋನು ನಿಗಮ್ ಅವರ ಕಂಠದಿಂದಲೇ ಹೊರಬರುತ್ತಿದ್ದವು. ಹೀಗಾಗಿ, ಆ ದಿನಗಳಲ್ಲಿ ಸೋನು ನಿಗಮ್, ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುವ male playback singer ಆಗಿದ್ದರು. ಭಾರತ ರತ್ನ ಲತಾ ಮಂಗೇಶ್ಕರ್ ಮತ್ತು ಪ್ರಖ್ಯಾತ ಸಂಗೀತಗಾರ ಖಯ್ಯಾಮ್ ಅವರಂಥ ದಿಗ್ಗಜರ ಜೊತೆಗೂ ಕೆಲಸ ಮಾಡುವ ಅವಕಾಶ ಸೋನು ನಿಗಮ್ ಗೆ ಸಿಕ್ಕಿತ್ತು. ಸೋನು ಹಾಡುವ ಶೈಲಿ, ಮಹಾನ್ ಗಾಯಕ ಮೊಹಮದ್ ರಫಿ ಅವರ ಗಾಯನದ ಶೈಲಿಯನ್ನು ಹೋಲುವಂತೆ ಕಾಣುತ್ತದೆ, ಹೀಗಾಗಿ ಸೋನು ಅವರನ್ನು Modern Rafi ಎಂದೂ ಕರೆಯಲಾಗುತ್ತದೆ. Actor ಆಗಿ ಸೋನು ನಿಗಮ್ ಸುಮಧುರ ಧ್ವನಿ ಹೊಂದಿರುವ ಸೋನು ನಿಗಮ್, ಸ್ಫುರದ್ರೂಪಿಯೂ ಹೌದು. 1983ರಲ್ಲಿ ತನ್ನ 10ನೇ ವಯಸ್ಸಿನಲ್ಲಿದ್ದಾಗ Betaab ಸಿನೆಮಾದಲ್ಲಿ, ಬಾಲಕ ಸನ್ನಿ ಡಿಯೋಲ್ ಪಾತ್ರ ಮಾಡಿದ್ದ ಸೋನು ನಿಗಮ್, ಮತ್ತೆ ಬಣ್ಣ ಹಚ್ಚಿದ್ದು 2002ರಲ್ಲಿ ಬಿಡುಗಡೆಯಾದ. ‘Jaani Dushman: Ek Anokhi Kahani’ ಸಿನೆಮಾದಲ್ಲಿ. 2003ರಲ್ಲಿ ‘Kash Aap Hamare Hote’ ಸಿನೆಮಾದಲ್ಲೂ ನಟಿಸಿದ ಸೋನು, 2004ರಲ್ಲಿ ಬಿಡುಗಡೆಯಾದ ‘Love in Nepal’ ಸಿನೆಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡರು. ಆದರೆ, ಸೋನು ಅಭಿನಯದ ಸಿನೆಮಾಗಳ ಪೈಕಿ ಯಾವುದೂ ಕೂಡ Box office ನಲ್ಲಿ Hit ಸಿನೆಮಾ ಅನ್ನಿಸಿಕೊಳ್ಳದಿದ್ದರಿಂದ ಅವರ Acting Career ಸದ್ಯಕ್ಕೆ ಅಲ್ಲಿಗೆ ನಿಂತಿದೆ. ಸೋನು ನಿಗಮ್ Music albumಗಳು 1992ರಲ್ಲಿ ‘Rafi Ki Yaadein’ ಎಂಬ ಮೊದಲ ನಿಂದ ಆರಂಭಿಸಿ, ಈವರೆಗೆ ಹಲವಾರು albumಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ, 1999ರಲ್ಲಿ T-series ಮೂಲಕ ‘Deewana’, 2000ದಲ್ಲಿ ‘Jaan’, 2005ರಲ್ಲಿ ‘Chanda Ki Doli’ albumಗಳು ಸೇರಿವೆ. 2007ರಲ್ಲಿ ಸೋನು ನಿಗಮ್ ಬಿಡುಗಡೆ ಮಾಡಿದ ‘Kal Aaj aur Kal’ album, ನೂರಕ್ಕೂ ಹೆಚ್ಚು ಹಾಡುಗಳನ್ನು ಹೊಂದಿತ್ತು. 2008ರಲ್ಲಿ ‘Rafi Resurrected’ ಹಾಗೂ ‘Classically Mild’ ಎಂಬ album ರಿಲೀಸ್ ಮಾಡಿದ್ದಾರೆ. 2014ರಲ್ಲಿ ಪ್ರಖ್ಯಾತ ತಬಲಾ ವಾದಕ Bickram Ghosh ಜೊತೆ ಸೇರಿ ‘The Music Room’ album ಹೊರ ತಂದಿದ್ದಾರೆ. ಹಿನ್ನೆಲೆ ಗಾಯನಕ್ಕೆ ಸೀಮಿತರಾಗದ ಸೋನು ನಿಗಮ್, ಬಾಲಿವುಡ್ ಸಿನೆಮಾಗಳಾದ ‘Singh Saab the Great’ (2013), ‘Jal’ (2014), ‘Happy Anniversary’ (2016) ಮತ್ತು ‘Tum Jo Mil Gaye Ho’ (2016) ಇತ್ಯಾದಿ ಸಿನೆಮಾಗಳಿಗೆ music composer ಆಗಿ ಕೆಲಸ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಕ್ಷೇತ್ರದಲ್ಲಿನ ಗಾಯನಕ್ಕಾಗಿ Film Fare, Zee Cine Awards ಮತ್ತು National Film Awards ಸೇರಿದಂತೆ ಈವರೆಗೆ 15ಕ್ಕೂ ಹೆಚ್ಚು ಪ್ರಶಸ್ತಿಗಳು ಸೋನು ನಿಗಮ್ ಅವರ ಸಾಧನೆಗೆ ಸಂದ ಗೌರವಗಳಾಗಿವೆ. ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪ್ರತಿಭಾವಂತ ಗಾಯಕ ಸೋನು ನಿಗಮ್, ಜಗತ್ತಿನ ಹಲವಾರು ಸಂಗೀತಗಾರರ ಜೊತೆಗೆ ಸೇರಿ ಕೆಲಸ ಮಾಡಿದ್ದಾರೆ. ಪಾಪ್ ಸಂಗೀತದ ದಂತಕತೆ Michael Jackson ನಿಧನದ ನಂತರ, ಅವರ ಸ್ಮರಣೆಗಾಗಿ ಬಂದ ‘The Beat of Our Hearts’ ಎಂಬ album ನಲ್ಲೂ ಸೋನು ಹಾಡಿದ್ದಾರೆ. 2008ರಲ್ಲಿ CBSO(City of Birmingham Symphony Orchestra) ಜೊತೆ, ಇಂಗ್ಲೆಂಡ್ ದೇಶದ ಹಲವು ನಗರಗಳಲ್ಲಿ, ಮೊಹಮದ್ ರಫಿ ಅವರ ಜನಪ್ರಿಯ ಹಾಡುಗಳನ್ನು ಹಾಡಿದ ಸೋನು, ಅದನ್ನೇ ‘Rafi Resurrected’ ಎಂಬ album ಆಗಿಸಿದ್ದರು. 2011ರಲ್ಲಿ Britney Spears ಅವರ ‘I Wanna Go’ ಎಂಬ a remix album ಗಾಗಿ ಮತ್ತು 2012ರಲ್ಲಿ DJ Avicii ಜೊತೆ ‘Indian Levels’ album ನಲ್ಲಿಯೂ ಸೋನು ನಿಗಮ್ ಹಾಡಿದ್ದಾರೆ. ಇದಲ್ಲದೆ, Hollywood ಸಿನೆಮಾಗಳಾದ Rioಹಾಗೂ Aladdinಗೆ ಹಿಂದಿ Voiceover ಕೂಡ ಕೊಟ್ಟಿದ್ದಾರೆ. ರೇಡಿಯೋ ಮತ್ತು TV ಶೋಗಳಲ್ಲಿ ಸೋನು ನಿಗಮ್ 1995ರಲ್ಲಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ‘Sa Re Ga Ma’ ದ ನಿರೂಪಕನಾಗಿ ಕೆಲಸ ಮಾಡಿದ್ದ ಸೋನು ನಿಗಮ್, ಆ ದಿನಗಳಲ್ಲೇ ಮನೆಮಾತಾಗಿದ್ದರು. ಆ ಬಳಿಕ Indian Idol (seasons 1, 2, 3, 4 ಮತ್ತು 7), Amul STAR Voice of India (seasons 1 ಮತ್ತು 2), Chhote Ustaad ಮತ್ತು X –Factor India, Kisme kitna Hai Dum ಇತ್ಯಾದಿ TV ಶೋಗಳ Judge ಆಗಿ ಜನಪ್ರಿಯರಾಗಿದ್ದರು. ಇದರ ಜೊತೆಗೆ, Radio City 91 FM, ನಲ್ಲಿ ‘Life Ki Dhun’ ಎಂಬ ರೇಡಿಯೊ Showಕೂಡ ನಡೆಸಿಕೊಟ್ಟಿದ್ದರು. ಸೋನು ನಿಗಮ್ ಮತ್ತು ವಿವಾದಗಳು ಸಿನೆಮಾ ಕ್ಷೇತ್ರದಲ್ಲಿ, ಹಿನ್ನೆಲೆ ಗಾಯಕರ Copyrightಗಾಗಿ ಸಾಕಷ್ಟು ಹೋರಾಟ ನಡೆಸಿರುವ ಸೋನು ನಿಗಮ್, ಅದಕ್ಕಾಗಿ Bollywood music industryಯನ್ನೂ ಎದುರು ಹಾಕಿಕೊಂಡಿದ್ದಾರೆ. ಇತ್ತೀಚೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ, Bollywood ನಲ್ಲಿ ಅತಿಯಾದ ಸ್ವಜನ ಪಕ್ಷಪಾತವಿದೆ ಮತ್ತು ಮುಂಬೈ ಹೊರಗಿನವರ ಬಗ್ಗೆ ಸಾಕಷ್ಟು ತಾರತಮ್ಯ ಅನುಸರಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೋನು ನಿಗಮ್, ನಾನೂ ಕೂಡ ಈ ಎಲ್ಲ ಕಿರುಕುಳಗಳನ್ನು ಅನುಭವಿಸಿದ್ದೇನೆ, ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಮಾಫಿಯಾಗಳು ಹಾವಳಿ ನಡೆಸುತ್ತಿವೆ ಎಂದು ಆರೋಪಿಸಿದ್ದರು. 2018ರ ಡಿಸೆಂಬರ್ ನಲ್ಲಿ ಖಾಸಗಿ ಟಿವಿ ಚಾನಲ್ ಒಂದರ ಸಂದರ್ಶನದಲ್ಲೂ ಬಾಲಿವುಡ್ ನ Music Industry ಬಗ್ಗೆ ಕಿಡಿಕಾರಿದ್ದ ಸೋನು, ಒಂದು ವೇಳೆ ನಾನು ಪಾಕಿಸ್ತಾನಿ ಮೂಲದ ಹಾಡುಗಾರನಾಗಿದ್ದರೆ ಹೆಚ್ಚು ಅವಕಾಶ ಸಿಗುತ್ತಿತ್ತು ಎಂದು ಹೇಳಿ ಹಲವರ ಹುಬ್ಬೇರುವಂತೆ ಮಾಡಿದ್ದರು. ಇಷ್ಟು ಮಾತ್ರವಲ್ಲದೆ, 2017ರಲ್ಲಿ ಮಸೀದಿಗಳಲ್ಲಿ Loud Speaker ಮೂಲಕ ಆಜಾನ್ ಕೂಗುವುದರಿಂದ ನನಗೆ ಭಾರಿ ಕಿರಿಕಿರಿ ಆಗುತ್ತಿದೆ ಎಂದು ಹೇಳಿ, ವಿವಾದ ಸೃಷ್ಟಿಸಿದ್ದರು. ಇದು, ಒಂದು ರೀತಿಯ ಒತ್ತಾಯಪೂರ್ವಕ ಧಾರ್ಮಿಕತೆ ಎಂದು ಟೀಕಿಸಿದ್ದರು. ಈ ಹೇಳಿಕೆಯ ನಂತರ, ಒಬ್ಬ ಮುಸ್ಲಿಮ್ ಧಾರ್ಮಿಕ ಮುಖಂಡ ಸೋನು ವಿರುದ್ಧ ಫತ್ವಾ ಜಾರಿ ಮಾಡಿದ್ದ. ಸೋನು, ತಲೆ ಬೋಳಿಸಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿದ್ದ. ಇದಕ್ಕೆ ಉತ್ತರವಾಗಿ ತಾವೇ ತಲೆ ಬೋಳಿಸಿಕೊಂಡಿದ್ದ ಸೋನು ನಿಗಮ್, 10 ಲಕ್ಷ ರೂಪಾಯಿಗಳನ್ನು ತನಗೇ ಕೊಡುವಂತೆ ಆಗ್ರಹಿಸಿದ್ದರು. ಆ ಬಳಿಕ ಹೇಳಿಕೆ ನೀಡಿದ್ದ, ಸೋನು, ‘ನಾನು ಆಕ್ಷೇಪ ವ್ಯಕ್ತಪಡಿಸಿದ್ದು ಧ್ವನಿ ವರ್ಧಕಗಳನ್ನು ಬಳಸುವುದರಿಂದ ಆಗುವ ತೊಂದರೆಯ ವಿರುದ್ಧವೇ ಹೊರತು, ಯಾವುದೇ ಧರ್ಮದ ವಿರುದ್ಧ ಅಲ್ಲ. ಅದು ಮಸೀದಿ, ಮಂದಿರ ಅಥವ ಗುರುದ್ವಾರವೇ ಆಗಿದ್ದರೂ ಕೂಡ Loud Speaker ಬಳಸಿ ಇತರರ ನೆಮ್ಮದಿ ಹಾಳು ಮಾಡುವುದನ್ನು ವಿರೋಧಿಸುತ್ತೇನೆ’ ಎಂದು ಸ್ಫಷ್ಟೀಕರಣ ನೀಡಿದ್ದರು. ಮೊಹಮದ್ ರಫಿಯವರನ್ನು ತನ್ನ ಗುರುವೆಂಬಂತೆ ಆರಾಧಿಸುತ್ತಾ ಬಂದಿದ್ದ, ಸೋನು ನಿಗಮ್, ಮುಸ್ಲಿಮ್ ಸಮುದಾಯದ ಆಕ್ರೋಶಕ್ಕೆ ಸಿಲುಕಿದ್ದೂ ಕೂಡ ಒಂದು ವಿಪರ್ಯಾಸ. Sandalwood ಮತ್ತು ಸೋನು ನಿಗಮ್ ಹಿಂದಿ ಭಾಷೆಯ ಜೊತೆಗೆ, ಬಂಗಾಳಿ, ತಮಿಳು, ಉರ್ದು, ಮಲೆಯಾಳಮ್, ಮರಾಠಿ ಮತ್ತು ತುಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿರುವ ಸೋನು ವೃತ್ತಿ ಜೀವನಕ್ಕೆ ಅತ್ಯಂತ ದೊಡ್ಡ ಯಶಸ್ಸು ನೀಡಿದ್ದು ಕನ್ನಡ ಭಾಷೆ. ಬಾಲಿವುಡ್ ನಲ್ಲಿ ಹೆಸರು ಮಾಡುತ್ತಿದ್ದ ದಿನಗಳಲ್ಲೇ Sandal woodಗೂ ಕಾಲಿಟ್ಟ ಸೋನು ನಿಗಮ್, 1996ರಲ್ಲಿ ತೆರೆ ಕಂಡ ವಿಷ್ಣುವರ್ಧನ್ ಅಭಿನಯದ ಜೀವನದಿ ಸಿನೆಮಾದ ಎಲ್ಲೋ ಯಾರೋ ಹೇಗೋ ಹಾಡಿನಿಂದ ಆರಂಭಿಸಿ, ಈವರೆಗೆ 100ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಹಾಡಿದ್ದಾರೆ. ಯಜಮಾನ ಚಿತ್ರದ ‘ಒಂದು ಮುಂಜಾನೆ’, ಮಳೆಯಲಿ ಜೊತೆಯಲಿ ಸಿನೆಮಾದ ‘ನೀ ಸನಿಹಕೆ ಬಂದರೆ’, ಈ ಬಂಧನ ಸಿನೆಮಾದ ‘ಅದೇ ಭೂಮಿ ಅದೇ ಭಾನು’, ಹುಚ್ಚ ಸಿನೆಮಾದ ‘ಉಸಿರೇ ಉಸಿರೇ’, ಆಕ್ಸಿಡೆಂಟ್ ಸಿನೆಮಾದ ‘ಬಾ ಮಳೆಯೇ ಬಾ’, ‘ಈ ಸಂಜೆ ಯಾಕಾಗಿದೆ’ (ಗೆಳೆಯ), ‘ನಿನ್ನಿಂದಲೇ’ ಮತ್ತು ‘ಮಳೆ ನಿಂತುಹೋದ ಮೇಲೆ’ (ಮಿಲನ), ‘ಮಿಂಚಾಗಿ ನೀನು ಬರಲು’ (ಗಾಳಿಪಟ), ‘ಏನಾಗಲಿ’ ಮತ್ತು ‘ನಿನ್ನ ನೋಡಲೆಂತೋ’ (ಮುಸ್ಸಂಜೆ ಮಾತು 2008), ‘ಕಣ್ ಕಣ್ಣ ಸಲಿಗೆ’ (ನವಗ್ರಹ), ‘ಕಳ್ಳಿ ಇವಳು’ (ಪ್ರೇಮ್ ಅಡ್ಡ), ‘ಕಣ್ಣಲ್ಲೇ ಕಣ್ಣಲ್ಲೇ’ (ಅಹಂ ಪ್ರೇಮಾಸ್ಮಿ) ಹೀಗೆ, ಸೋನು ಹಾಡಿರುವ ಹತ್ತಾರು ಕನ್ನಡದ ಹಾಡುಗಳು, ಅವರನ್ನು ಕನ್ನಡಿಗರ ಮನೆ-ಮನಗಳಲ್ಲಿ ನೆಲೆಯೂರುವಂತೆ ಮಾಡಿವೆ. ಹೀಗಾಗಿ, ನಾನು ಹಿಂದಿ ಸಿನೆಮಾಗಳಿಗಿಂತಲೂ ಕನ್ನಡ ಸಿನೆಮಾಗಳಲ್ಲೇ ಅತ್ಯುತ್ತಮ ಹಾಡುಗಳನ್ನು ಹಾಡಿದ್ದೇನೆ ಅನ್ನುವ ಸೋನು, ಕನ್ನಡದಲ್ಲಿ ಒಂದು Music Album ಕೂಡ ಬಿಡುಗಡೆ ಮಾಡಿ, ಕನ್ನಡಿಗರಿಗೆ ಮತ್ತಷ್ಟು ಆಪ್ತರಾಗಿದ್ದಾರೆ. Music ಶೋಗಳನ್ನು ನೀಡಲು ವಿದೇಶಗಳಿಗೆ ಹೋದಾಗ, ಅಲ್ಲಿ ಸೇರಿದ್ದ ಪ್ರೇಕ್ಷಕರಲ್ಲಿ ಯಾರಾದರೂ ಕನ್ನಡ-ಕನ್ನಡ ಎಂದು ಕೂಗಿದರೆ, ಅವರ ಆಸೆಯಂತೆ ಕನ್ನಡದ ಹಾಡನ್ನು ಹಾಡಲು ಮನಸ್ಸು ಮುಂದಾಗುತ್ತದೆ ಅನ್ನುತ್ತಾರೆ. ಸೋನು ಸಂಸಾರ ಸೋನು ನಿಗಮ್, 2002ರಲ್ಲಿ ಹಾಡುಗಾರ್ತಿ ಮಧುರಿಮ ಬ್ಯಾನರ್ಜಿ ಅವರನ್ನು ತಮ್ಮ ಜೀವನ ಸಂಗಾತಿಯಾಗಿ ಮಾಡಿಕೊಂಡರು. ಈ ದಂಪತಿಗೆ ನೀವನ್(Neevan) ಎಂಬ 13 ವರ್ಷದ ಮಗನಿದ್ದಾನೆ. ಅಂದಹಾಗೆ, ಸೋನು ಕುಟುಂಬದಲ್ಲಿ ಇನ್ನೂ ಮೂವರು ವಿಶೇಷ ಸದಸ್ಯರಿದ್ದಾರೆ. ಅವರ ಹೆಸರುಗಳು ಹೀಗಿವೆ. Goggles Nigam, Shifu Nigam, Zen Nigam ಯಾರಪ್ಪ ಇವರೆಲ್ಲ ಅಂತೀರಾ, ಇವು ಮೂರೂ ಕೂಡ ಸೋನು ಅವರ ಪ್ರೀತಿಯ ನಾಯಿಗಳು. Showman: ಸೋನು ನಿಗಮ್ ವಿಶಿಷ್ಟ ವ್ಯಕ್ತಿತ್ವದ ಸೋನು ನಿಗಮ್, ರಾಜ್ ಕಪೂರ್ ರೀತಿಯಲ್ಲೇ ಒಬ್ಬ Showman ಕೂಡ ಅನ್ನಬಹುದು. ಎಷ್ಟರಮಟ್ಟಿಗೆ ಅಂದರೆ, 2003ರಲ್ಲಿ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕಾರದ ಸಮಯದಲ್ಲಿ, ತಾವೂಕೂಡ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ರಂತೆಯೇ Hairstyle ಮಾಡಿಸಿಕೊಂಡು ಹೋಗಿ, ಅವಾರ್ಡ್ ಸ್ವೀಕರಿಸಿದ್ದರು. ಒಂದು ದಿನ, ಮುಂಬೈನ ಜುಹು ಪ್ರದೇಶದ Footpathನಲ್ಲಿ ವೇಷ ಮರೆಸಿಕೊಂಡು ಭಿಕ್ಷುಕನಂತೆ ಕುಳಿತು ಹಾಡಿ ಜನರನ್ನು ಚಕಿತಗೊಳಿಸಿದ್ದ ಸೋನು ನಿಗಮ್, Road Side ಉಸ್ತಾದ್ ಎಂದೂ ಕರೆಸಿಕೊಂಡಿದ್ದರು. ಭಾರತದ Elvis Presley ಸೋನು ನಿಗಮ್ ಅವರನ್ನು ಅಮೆರಿಕದ ಪ್ರಖ್ಯಾತ ಗಾಯಕ ಮತ್ತು ನಟ Elvis Presley ಅವರಿಗೆ ಹೋಲಿಸಲಾಗುತ್ತದೆ. ಸದಾ ಚಟುವಟಿಕೆಯಿಂದ ಕೂಡಿರುವ ಸೋನು, ಪ್ರಖ್ಯಾತ ನಟರು ಮತ್ತು ಗಾಯಕರನ್ನು ಮಿಮಿಕ್ ಮಾಡುತ್ತಾರೆ. ಕೊರಿಯ ದೇಶದ ಸಮರ ಕಲೆ(Martial art) Taekwondoದಲ್ಲಿ ನಿಪುಣರಾಗಿರುವ ಸೋನು ನಿಗಮ್ ಗೆ ಜಿರಲೆ ಕಂಡರೆ ಮಾತ್ರ ಭಾರಿ ಭಯವಂತೆ. ಹತ್ತು ಭಾಷೆ, 2000ಕ್ಕೂ ಹೆಚ್ಚು ಹಾಡುಗಳು ಈವರೆಗೆ, ಸುಮಾರು 10 ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಸೋನು ನಿಗಮ್, ‘ಸಂಗೀತ ಅನ್ನುವುದು ನಿರಂತರವಾಗಿ ಸಾಗುವ ಒಂದು ಮಹಾ ಪ್ರಯಾಣ, ನಾವು ನಮ್ಮ ಮೈಮನಗಳನ್ನು ಸಂಗೀತಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಕಲಿಯುವಿಕೆಯನ್ನು ಎಂದೂ ನಿಲ್ಲಿಸಬಾರದು’ ಅನ್ನುತ್ತಾರೆ. ಹೃದಯ ಮೀಟುವ melodious song ಇರಬಹುದು, ಶಾಸ್ತ್ರೀಯ-ಲಘು ಶಾಸ್ತ್ರೀಯ ಧಾಟಿಯ ಗಾಯನ, ಘಜಲ್ ಅಥವ Pop rock ಸಂಗೀತವಿರಬಹುದು, ಯಾವುದೇ ಶೈಲಿಯಲ್ಲೂ ಸುಲಲಿತವಾಗಿ, ಸುಶ್ರಾವ್ಯವಾಗಿ ಹಾಡಬಲ್ಲ ಸೋನು ನಿಗಮ್, ಸರ್ವತೋಮುಖ ಸಾಮರ್ಥ್ಯವುಳ್ಳ ಹಾಡುಗಾರ. ಒಬ್ಬ ಹಿನ್ನೆಲೆ ಗಾಯಕನೂ ಕೂಡ, SuperStar ಅನ್ನಿಸಿಕೊಳ್ಳುವಷ್ಟು ಎತ್ತರ ತಲುಪಬಲ್ಲ ಅನ್ನುವುದನ್ನು ಸಾಧಿಸಿ ತೋರಿಸಿದ್ದು ಸೋನು ನಿಗಮ್ ಹೆಗ್ಗಳಿಕೆ.
ಕೆರೆಬೇಟೆ ಅಂದರೆ ಮಲೆನಾಡು ಭಾಗದಲ್ಲಿ ಬಹು ಜನಪ್ರಿಯ ಸಂಸ್ಕೃತಿ. ಈ ಹಿಂದೆ ರಾಜಹಂಸ ಎಂಬ ಅಪ್ಪಟ ಪ್ರೇಮಕಥೆಯೊಂದರ ಮೂಲಕ ತೆರೆಯಮೇಲೆ ಹೀರೋ ಆಗಿ ಗುರುತಿಸಿಕೊಂಡಿದ್ದ ನಟ ಗೌರಿಶಂಕರ್ ಈಗ ಮಲೆನಾಡಿನ ಪ್ರಮುಖ ಭಾಗವಾದ ಕೆರೆಬೇಟೆ ಎನ್ನುವ ಸಂಸ್ಕೃತಿಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಜನಮನ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಜೈಶಂಕರ್ ಪಟೇಲ್ ಅವರು ನಿರ್ಮಿಸುತ್ತಿರುವ ಆ ಚಿತ್ರದ ಹೆಸರು ಕೂಡ ಕೆರೆಬೇಟೆ. ಹಳ್ಳಿ ಸೊಗಡಿನಲ್ಲಿ ನಡೆಯುವ ನೈಜ ಪ್ರೇಮಕಥೆಯೊಂದನ್ನು ಹೇಳುವ ಪ್ರಯತ್ನ ಇರುವ ಕೆರೆಬೇಟೆ ಚಿತ್ರಕ್ಕೆ ಗುರುಶಿವ ಹಿತೈ಼ಷಿ ಅವರು ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ೧೦ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪವನ್ ಒಡೆಯರ್ ಹಾಗೂ ಇತರೆ ನಿರ್ದೇಶಕರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಗುರುಶಿವ ಹಿತೈಶಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಇದೊಂದು ಲವ್ ಸ್ಟೋರಿಯಾದರೂ, ಕೆರೆಬೇಟೆ ಚಿತ್ರಕಥೆಯ ಒಂದು ಮುಖ್ಯ ಭಾಗವಾಗಿ ಮೂಡಿಬರಲಿದೆ. ಇತ್ತೀಚೆಗೆ ಸಾಗರದಲ್ಲಿ ಮುಹೂರ್ತ ನಡೆಸಲಾಗಿದ್ದು, ಮೊದಲ ಹಂತದ ಚಿತ್ರೀಕರಣವನ್ನು ಇದೇ 10 ರಿಂದ ಆರಂಭಿಸಲಾಗಿದೆ, ಸಿಗಂದೂರು, ಕೋಗಾರ್ ಘಾಟ್ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಪ್ರಮುಖ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಜೋಕಾಲಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ಎಸ್‌ಆರ್‌ಜಿ. ಗೌರಿಶಂಕರ್ ರಾಜಹಂಸ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು, ಇನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಬಿಂದು ಶಿವರಾಮ್ ಅವರೂ ಹೊಸದಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕಥೆಯನ್ನು ಗುರುಶಿವ ಹಿತೈಷಿ ಹಾಗೂ ಗೌರಿಶಂಕರ್ ಸೇರಿ ಬರೆದಿದ್ದಾರೆ. ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ ಹಾಗೂ ಗಗನ್ ಬಡೇರಿಯಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಜ್ಞಾನೇಶ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ, ಕಂಬಿರಾಜು ಅವರ ನೃತ್ಯನಿರ್ದೇಶನ ಈ ಚಿತ್ರಕ್ಕಿದೆ.
ಹೊರಗಡೆ ಗಲಾಟೆಯಾದಂತಾಗಿ ಬಾಗಿಲು ತೆಗೆದು ಬಗ್ಗಿ ನೋಡಿದರೆ ಬರೀ ಲಂಗ ರವಿಕೆಯಲ್ಲಿದ್ದ ಒಬ್ಬ ಮಹಿಳೆ ನಮ್ಮ ಪಕ್ಕದ ಮನೆವೊಳಗೆ ಓಡಿ ಸೇರಿಕೊಂಡಳು. ’ಅಯ್ಯೋ! ನೀರಿನ ಟ್ಯಾಂಕಿಗೆ ಬಿದ್ದವರಂತೆ! ಯಾರಂತೆ! ಏನಂತೆ!’ ಜನರ ಗಲಾಟೆ. ನೀರಲ್ಲಿ ತೊಯ್ದು ಹೋಗಿ ಉಸಿರು ಬಿಡುತ್ತಿದ್ದವ ನನ್ನ ಭಾವ ಮೈದುನನೇ ಆಗಿದ್ದ! ಕಾಲೆಳೆಯುತ್ತಾ ಅವನು ಬಂದಾಗ ಅವನಕ್ಕನ ದಿಗಿಲು ನೋಡಬೇಕಿತ್ತು. ನಾವು ಆ ಸಮಯದಲ್ಲಿ ಬೇಲೂರಿನ ಮುಸ್ಲಿಂ ಒಬ್ಬರ ಮನೆಯಲ್ಲಿ, ಅವರದೇ ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದವು. ತುಸು ದೂರದಲ್ಲಿ ಟ್ಯಾಂಕು ಇತ್ತು. ಈ ಅಕ್ಕನ ತಮ್ಮ ವೆಂಕಟೇಶ ಹೆಗ್ಗಡೆ, ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದುತ್ತಾ ಇದ್ದವನು, ರಜೆಗೆ ಬಂದು, ಸಂಜೆ ಪ್ಯಾಂಟು ಷರಟು ಬೂಟು ಹಾಕಿ ವಾಕಿಂಗ್ ಹೋಗಿದ್ದವನು ಹೀಗೇಕೆ ಟ್ಯಾಂಕಿಗೆ ಬಿದ್ದ?! ಇವನೇ ಬಿದ್ದಿದ್ದಲ್ಲ. ನೆಲದ ಮೇಲೆ ಎರಡಾಳುದ್ದ ಮಾಡಿದ್ದ ಅಗಲ ಮುನಿಸಿಪಾಲಿಟಿ ನೀರಿನ ಸಿಮೆಂಟ್ ಟ್ಯಾಂಕು ಅದು. ಅದರ ಸುತ್ತಲೂ ಅಲ್ಲಲ್ಲಿ ಹರಿದ ತಂತಿಬೇಲಿ. ಶಾಲೆಯ ಇಬ್ಬರು ಮಕ್ಕಳು ನೀರು ಕುಡಿಯಲೋ, ತುಂಟಾಟಕ್ಕೋ ಅದರ ಹತ್ತಿರ ಹೋಗಿದ್ದಾಗ ಒಬ್ಬ ಅದರಲ್ಲಿ ಜಾರಿಬಿದ್ದಿದ್ದ. ಮತ್ತೊಬ್ಬ ಅಯ್ಯಯ್ಯೋ ಎಂದು ಕೂಗಿದ. ವಾಕಿಂಗ್ ಹೋಗುತ್ತಿದ್ದ ಹೆಗ್ಗಡೆ ಪಟಾರನೆ ನೀರಿಗೆ ಹಾರಿದ. ಹೀಗೆ ಹಾರಿದವನ ಕುತ್ತಿಗೆ ಮೇಲೆ ಮುಳುಗುತ್ತಿದ್ದ ಬಾಲಕ ಹತ್ತಿ ಕುಳಿತುಬಿಟ್ಟ. ತುಂಬಿದ ನೀರಿನ ಟ್ಯಾಂಕಿನ ಗೋಡೆ ಹತ್ತಲು ಸುಲಭವಾಗಿಲ್ಲ. ಇಬ್ಬರೂ ಮುಳುಗಿ ಹೋಗಲು ಕೆಲವು ಸೆಕೆಂಡುಗಳು ಬಾಕಿ. ಇದನ್ನು ನೋಡಿದ, ಅದೇ ದಾರೀಲಿ ನಡೆದು ನಮ್ಮ ಪಕ್ಕದ ಮನೆಗೆ ಬರುತ್ತಿದ್ದ ಅಲ್ಲಿನ ಒಬ್ಬ ಗ್ರಾಮೀಣ ಮುಸ್ಲಿಂ ಮಹಿಳೆಯ ಸಮಯಪ್ರಜ್ನೆ ಕೆಲಸ ಮಾಡಿತು. ಉಟ್ಟ ಸೀರೆ ಬಿಚ್ಚಿ ಕೂಗಿದಳು. ಸೀರೆಯನ್ನು ಟ್ಯಾಂಕಿಗೆ ಒಗೆದಳು. ಹೆಗಡೆ ಎಸೆದ ಸೀರೆಯ ತುದಿ ಹಿಡಿದ. ಅಷ್ಟರಲ್ಲಿ ಯಾರೋ ಓಡಿ ಬಂದರು. ಈಚೆ ಸೆರಗು ತುದಿ ಹಿಡಿದು ಎಳೆದರು. ಎರಡು ಜೀವ ಉಳಿದವು. ಹಾಗೆ ಎರಡು ಜೀವ ಉಳಿಸಿದ ಈ ಮುಸ್ಲಿಂ ಮಹಿಳೆ ಒಂದು ಪಕ್ಷ ಒಳಲಂಗ ಇಲ್ಲದಿದ್ದರೂ ಸೀರೆ ಬಿಚ್ಚಿ ಎಸೆದು ಬಿಡುತ್ತಿದ್ದಳೋ ಏನೋ! ಅನಂತರ ಮಾತ್ರ ನಾಚಿ ಓಡಿದ್ದಳು. ಇಂಥಾ ಹೆಗಡೆಯನ್ನು ಅಭಿನಂದಿಸಲು, ಮಗನ ಬದುಕಿಸಿದ ಸಾಹಸಕ್ಕೆ ಋಣಿ ಹೇಳಲು, ಹುಡುಗನ ತಂದೆ ತಾಯಿ ಸಂಜೆ ಬಂದು ಕಣ್ಣೀರ ಹನಿಗಳಲ್ಲಿ ಅಭಿನಂದಿಸಿದರು. ಇಷ್ಟರಲ್ಲಾಗಲೇ ಸನ್ನಿವೇಶದ ದಿಗಿಲಿಗೆ ಗಾಬರಿಯಾಗಿ ಚೇತರಿಸಿಕೊಳ್ಳುತ್ತಿದ್ದ 'ಧೀಮಂತ ಹೆಗಡೆ' ಮನೆ ಮಹಡಿ ಮೇಲೆ ಅವರು ಹೋದ ಮೇಲೆ ಹೇಳಿದ ’ಅಯ್ಯೋ ಥ್ಯಾಂಕ್ಸ್ ಇರಲಿ..ಆ ಹುಡುಗ ಇನ್ನೇನು ನನ್ನೇ ತೆಗೆದಿದ್ದ’ ಅಂತ. ಆ ಮುಸ್ಲಿಂ ಮಹಿಳೆಯ ಸಮಯ ಪ್ರಜ್ಞೆಯನ್ನು ಈಗ ನೆನೆಸಿಕೊಂಡರೆ ಆಕೆ ರಾಷ್ಟ್ರಪತಿಯಿಂದ ಸನ್ಮಾನ ಪಡೆಯಲು ಯೋಗ್ಯವಾಗಿದ್ದಳಲ್ಲವೆ! ಜೀವಪರ ಪ್ರಜ್ಞೆಗೆ ಹಿಂದೂವಾದರೇನು! ಮುಸ್ಲಿಂ ಆದರೇನು! ೨) ಇಂಗ್ಲಿಷ್ ಮೀಡಿಯಂಗೆ ಸೇರಿದೆ ನಾನು ಹಳ್ಳಿ ಹುಡುಗ. ನನ್ನೂರಿನ ಬೇಸಿಕ್ ಪ್ರೈಮರಿ ಶಾಲೆ ಪಾಸಾಗಿ ಆಲೂರು ಪೇಟೆ ಮಿಡಲ್ ಸ್ಕೂಲಿಗೆ ಸೇರಲು ಹೊರಟಾಗ ನನ್ನಜ್ಜನಿಗೆ ನಾನು ಲಂಡನ್ನಿಗೆ ಹೋದಷ್ಟು ಖುಷಿ ತಂದಿತು. ಆಗ ಎಂಟನೆ ಕ್ಲಾಸ್ವರೆಗೆ ಮಿಡಲ್ ಸ್ಕೂಲು. ನನಗೆ ೬೦ ಮಾರ್ಕು ಇಂಗ್ಲಿಷಿನಲ್ಲೇ ಬರಬೇಕೆ! ’ಏನ್ರಿ ರಂಗಪ್ಪನವರೆ, ನಿಮ್ಮ ಮಗ ಫಸ್ಟ್ ಕ್ಲಾಸ್ ತೆಗೆದವನೆ...ಹಾಸನಕ್ಕೆ ಇಂಗ್ಲಿಷ್ ಮೀಡಿಯಂಗೆ ಸೇರಿಸಿಬಿಡಿ, ಆಲೂರಿನಲ್ಲಿ ಇಂಗ್ಲಿಷ್ ಮೀಡಿಯಂ ಇಲ್ಲ’ ಎಂದು ಹೆಡ್ ಮಾಸ್ಟರೇ ಹೇಳಿದ ಮೇಲೆ ನನ್ನ ಮಕ್ಕಳು ಹೆಚ್ಚೆಚ್ಚು ಓದಬೇಕು ಎಂಬ ಕನಸಿನ ಅಪ್ಪನ ಮುಖ ಊರಗಲವಾಯಿತು. ಇನ್ನು ಹಾಗೆ ಮಾಡದಿರುವುದುಂಟೆ! ಇಂಗ್ಲಿಷ್ ಮೀಡಿಯಂಗೆ ಸೇರಿದೆ. ಹಾಸನ ನೋಡಿದ್ದು ಅದೇ ಮೊದಲು. ಆಗ ತಾನೇ ಹಾಸನ ಜಿಲ್ಲೆಗೆ ಬಂದಿದ್ದ ಸರ್ಕಾರಿ ಕೆಂಪು ಬಸ್ಸಿನಲ್ಲಿ ದಿನಾ ಪಯಣ. ಸರ್ಕಾರಿ ಹೈಸ್ಕೂಲಿನ ನೆಲದ ಮೇಲೆ ಕುಳಿತು ಕೇಳುವ ಮೇಷ್ಟರ ಇಂಗ್ಲಿಷ್ ಮೀಡಿಯಂನ ಸೈನ್ಸ್, ಮ್ಯಾಥ್ಸು, ಆಲ್ಜೀಬ್ರಗಳೆಲ್ಲಾ ಜೀಬ್ರಾ ಜೀಬ್ರಾ ಆಗಿ ಎಸ್ ಎಸ್ ಎಲ್ ಸಿ ಫೇಲು. ಸಪ್ಲಿಮೆಂಟರಿ ಫೇಲು. ಹಳ್ಳಿ ಸ್ಕೂಲಿನಲ್ಲಿ ಇಂಗ್ಲಿಷು ಉರುಹೊಡೆದ ತಪ್ಪಿಗೆ ಇಂಗ್ಲಿಷು ಮೀಡಿಯಂ ಸೇರಿ ಇಲ್ಲಿ ಇಂಗ್ಲಿಷೇ ಫೇಲು. ಅಂತೂ ಇಂತೂ ಪಾಸಾದ ಮೇಲೆ ನಮ್ಮಪ್ಪ ಬಿಡೋದುಂಟೆ! ಅದರಲ್ಲೂ ಹಾಸನದಲ್ಲೆ ಇಂಜಿನಿಯರಿಂಗ್ ಕಾಲೇಜು ಬೇರೆ ಪ್ರಾರಂಭವಾಗಿತ್ತು. ಘಸ್ನಿ ಮಹಮದನ ದಂಡೆಯಾತ್ರೆಯಂತೆ ಪುನಃ ಸೈನ್ಸ್, ಮ್ಯಾಥ್ಸು ಫೇಲು ಆಗಿ, ಲೆಕ್ಕ ಅರ್ಥವಾಗದೆ ಜಾಮಿಟ್ರಿಯನ್ನು ಉರು ಹೊಡೆದು ಪಾಸಾಗಿ ನನ್ನಪ್ಪನ ಕೈಗೆ ಸಿಕ್ಕದೆ ಓಡಿ ಹೋಗಿ ಕನ್ನಡ ಬಿ.ಎ. ಸೇರಿ, ವಿಶಾಲ ಕರ್ನಾಟಕದ ಕನ್ನಡಮ್ಮನ ಭಾಷೆಯನ್ನು ಶಿರಸಾವಹಿಸಿ ಅರಗಿಸಿಕೊಳ್ಳುತ್ತಾ ಪಂಪನಿಂದ ಕುವೆಂಪುವರೆಗೆ ಅರೆದು ಕುಡಿಯೋದು ಹೇಗೆ? ಎಂದು ಕಲಿತು ಬಿಟ್ಟೆ ಅನ್ನಿ. ೩) ನೀನು ಎಂಎ ಓದದೆ ಹೋದರೆ ನಾನೂ ಬಿಟ್ಟುಬಿಡ್ತೀನಪ್ಪ ಮಡಿಮಡಿಯಾದ ಬಿಳಿ ಜುಬ್ಬ ಪೈಜಾಮ ಹಾಕುತ್ತ, ಹಣೆ ಮೇಲೆ ಗಂಧ ಇಡುತ್ತಾ, ನೀಟಾಗಿ 'ಇವನೂ ಹಾರುವನೋ' ಎಂಬಂತೆ ಅನುಮಾನ ಬರಿಸುವ, ಹಳಗನ್ನಡ ನಡುಗನ್ನಡ ಪಾಠಗಳನ್ನೆಲ್ಲಾ ತದೇಕಚಿತ್ತದಲ್ಲಿ ಆಲಿಸುವ ಈ ಗೌಡನ ಹೆಸರು ರಾಮನಾಥ. ಯಗಟಿ ಗ್ರಾಮದ ಹಾರುವಯ್ಯ-ಗೌಡ ರಾಮನಾಥನಿಗೆ ಬರಿಯ ಬಾಡು ಬಗ್ರಿ ತಿನ್ನುವ ಗೌಡನಾಗಿ ಮಾತ್ರ ಕಾಣದೆ ತುಸು ಮೇಲಾಗಿರುವ ಆಸೆ. ಅವರವರ ಪದ್ಧತಿ ಅವರವರ ಮನೆಯಲ್ಲಿ ಅಲ್ಲವೆ ಎಂಬಂತೆ ಕಂಡಿರಬೇಕು. ಎಷ್ಟಾದರೂ ಅರಕಲಗೂಡು ಕಡೆಯ ಸಂಕೇತಿ ಬ್ರಾಹ್ಮಣರ ಅಡಿಕೆ ತೋಟದ ಕೃಷಿಕರ ಮಕ್ಕಳಲ್ಲವೆ! ಅವನು ಇಡೀ ಶಬ್ದಮಣಿದರ್ಪಣವನ್ನೂ ಬಾಯಿಪಾಠದಂತೆ ಹೇಳುವ ವೇದಮೂಲದ ಶೂರನಾದರೆ, ನಾನು ವಿಚಾರ ವಿಮರ್ಶೆ, ಪಂಪ-ರನ್ನರನ್ನು ಹೊಗಳುವ ಧೀರನಾಗಿ ಬಿಟ್ಟೆ. ನಾವಿಬ್ಬರೂ ಇಡೀ ಬಿ.ಎ. ಕ್ಲಾಸಿನಲ್ಲಿ ಎಲ್ಲಾ ಸಬ್ಜೆಕ್ಟುಗಳನ್ನೂ ಒಂದೇ ಸಾರಿ ಪಾಸು ಮಾಡುತ್ತಿದ್ದ ಮಾದರಿಗಳಾಗಿ ಎಲ್ಲರ ಕಣ್ಣಿಗೆ ಬಿದ್ದೆವು. ಮಳೆಗಾಲ ಪ್ರಾರಂಭವಾಗಿ ನಾಟಿ ಗದ್ದೆ ಉಳುತ್ತಾ ನನ್ನೂರ ಗದ್ದೆ ಹಳದಲ್ಲಿ ಉಳುವ ಎತ್ತುಗಳನ್ನು ಗದ್ದಲಿಸುತ್ತಿದ್ದಾಗ ಗದ್ದೆ ಬದುವಿನ ಮೇಲೆ ರಾಮನಾಥ ನಿಂತಿದ್ದಾನೆ! ’ಏನೋ ಗೌಡ, ಯಾಕೋ? ಎಂ.ಎ. ಸೇರಲ್ಲವೇನೋ’ ಎಂದು ನಾನುಳುತ್ತಿದ್ದ ಕೆಸರು ಗದ್ದೆ ಕುರಿತು, ತಾನು ಸಹಾ ಹೀಗೆ ಉತ್ತು ಬಂದಿದಿನಿ ಕಣೋ ಎಂದು ಹೇಳುತ್ತಲೇ, ನೋಡಪ್ಪ ನನಗೆ ಮೈಸೂರು ಮಾನಸ ಗಂಗೋತ್ರಿಲಿ ಸೀಟು ಸಿಕ್ಕಿದೆ. ನಿನಗೆ ಮಂಗಳೂರಿನಲ್ಲಂತೂ ಸಿಕ್ಕೇ ಸಿಗುತ್ತೆ ಕಣೋ, ಇನ್ನೊಂದು ಪರ್ಸೆಂಟ್ ನಿನಗೂ ಜಾಸ್ತಿ ಬಂದಿದ್ದರೆ ಮೈಸೂರಲ್ಲೆ ಸಿಕ್ತಾ ಇತ್ತಪ್ಪ...ಇರಲಿ. ನೀನು ಎಂ.ಎ. ಓದದೇ ಹೋದರೆ ನಾನೂ ಬಿಟ್ಟುಬಿಡ್ತೀನಪ್ಪ. ಅದೂ ಅಲ್ಲದೆ ನೀನು ಓದೋದಾದರೆ ನಾನು ಕೂಡಾ ಮಂಗಳೂರಿಗೇ ಬರ್ತೀನಪ್ಪ, ಅಂದವನು ಹಾಗೇ ಮಾಡಿಬಿಟ್ಟ! ಮುಂದೆ ಓದಲು ಇಲ್ಲದ ಹಣವನ್ನು ಅಪ್ಪ ಹೊಂದಿಸಿದ್ದು ಆಯ್ತು. ಎಷ್ಟಾದರೂ ಓದಿಸೋ ಚಟ ಅಲ್ಲವೆ! ಗೌಡ-ಬ್ರಾಹ್ಮಣನು ಮಂಗಳೂರು ಪಟ್ಟಣದಲ್ಲಿ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರೊಫೆಸರುಗಳ (ಎಸ್.ವಿ. ಪರಮೇಶ್ವರಭಟ್ಟ, ವಿವೇಕ ರೈ, ಲಕ್ಕಪ್ಪಗೌಡರು) ಪಾಠ ಕೇಳುತ್ತ ಹತ್ತಿರದ ಕಂಬಳ ಗದ್ದೆ ಬಯಲಿನ ಬದಿಯ ಬಾಡಿಗೆ ರೂಮಿನಲ್ಲಿ ಅಡಿಗೆ ಮಾಡುಣ್ಣುತ್ತ, ಘಟ್ಟದ ಕೆಳಗಿನ ಬೆಡಗು ಬಿನ್ನಾಣಗಳನ್ನೆಲ್ಲಾ ಬದಿಗೆ ಸರಿಸಿಕೊಂಡು ಇರಬೇಕಾದರೆ ನಮ್ಮ ಕಾಲೇಜು ಕೊಣಾಜೆ ಎಂಬ ಬೋರೆ ಮೇಲಕ್ಕೆ ಸ್ಥಳಾಂತರವಾಗಬೇಕೆ!? ಆಯ್ತು. ನಾನೊಮ್ಮೆ ಊರಿಗೆ ಬಂದಿದ್ದ ಸಮಯ. ಕ್ಲಾಸಿನಲ್ಲಿ ರಾಮನಾಥನು ಪ್ರಶ್ನೆಯೊಂದಕ್ಕೆ ಹೇಳಿದ ಉತ್ತರಕ್ಕೆ ಸರಿಯಾದ ಮರ್ಯಾದೆ ಸಿಗದೆ ಸಮವಯಸ್ಸಿನ ಹುಡುಗೀರ ಎದುರು ಅವಮಾನವಾದಂತಾಗಿ ಈ ನನ್ನ ಸ್ನೇಹಿತನಿಗೆ ತಲೆ ಲೂಜಾದಂತಾಗಿ ನಿದ್ದೆ ಬಿಟ್ಟೇ ಬಿಟ್ಟು, ನಾನು ಊರಿಂದ ಬಂದು ನೋಡಿದಾಗಲೂ ’ಲೇ ಗೌಡ ನೀನ್ಯಾಕೋ ಊರಿಗೆ ಹೋದೆ? ನಾನೇನಪ್ಪಾ ತಪ್ಪು ಹೇಳಿದೆ?! ಆ ಮಾಸ್ತರು ಯಾಕಪ್ಪಾ ಹೀಗೆ ಅವಮಾನ ಮಾಡಿದ್ರು!’ ಎರಡು ದಿನ ಕಳೆದರೂ ಬಡಬಡಿಸುತ್ತಲೇ ಇದ್ದ. ’ಆಯ್ತು ಸುಮ್ಮನಿರೋ’ ಅಂದು ಸಮಾಧಾನ ಮಾಡಿದೆ. ಆಗ ಸುಮ್ಮನೇನೋ ಆದ. ಅವನಪ್ಪನೊಡನೆ ಒಂದು ತಿಂಗಳು ಊರಿಗೂ ಹೋಗಿ ವಿಶ್ರಾಂತಿ ತೆಗೆದುಕೊಂಡು ಬಂದ. ಎಂ ಎ ಪಾಸಾದ. ಕೆಲಸಕ್ಕೆ ಕೊಣನೂರಿನಲ್ಲಿ ಕಾಲೇಜು ಅಧ್ಯಾಪಕನಾಗಿ ಸೇರಿಯೂ ಬಿಟ್ಟ. ಬದುಕಿನ ದಾರಿಯಲ್ಲಿ ನಾನೆತ್ತಲೋ ಅವನೆತ್ತಲೋ ಹಂಚಿ ಹೋದಾಗ ಸುದ್ದಿ ತಿಳಿದೆ! ಅವನು ಮತ್ತೆ ಏನೋ ಮನಸ್ವಾಸ್ಥ ಕೆಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಂತ. ನಾವಿಬ್ಬರೂ ಕಂಬೈಂಡ್ ಸ್ಟಡಿ ಮಾಡುವಾಗಿನ ಸಮಯದ ನೆನಪಿನ ಫೋಟೋದಲ್ಲಿ ಈ ಗೌಡನ ಪಕ್ಕ ಹಾರುವಯ್ಯ ನಗುತ್ತಲೇ ಇದಾನೆ. ಈ ದೇಶದಲ್ಲಿ ಆಗಿದ್ದು ಆಗಿಹೋಯ್ತು. ಶೂದ್ರ ಬ್ರಾಹ್ಮಣರೆಂಬ ಮತ್ಸರ ಬೇಕೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ?! ೪) ಊರು ಅದೆಂತಾ ಕ್ರೂರಿ ಕಲ್ಲು ನೀರು ಕರಗೋ ಹೊತ್ತಿನ ನಡುರಾತ್ರಿಯಲ್ಲಿ ದೊಡ್ಡಯ್ಯನಿಗೆ ಮಲಗಿದಾಗ ನರಿ ಬೊಳ್ಳಿಕ್ಕುವುದು, ಗೂಬೆ ಕೂಗುವುದು, ಮೊದಲ ಕೋಳಿ ಕೂಗುವುದು ಎಲ್ಲವೂ ಕೇಳುತ್ತಿದೆ. ತನ್ನ ಏನೂ ಅರಿಯದ ಮಗು ಮಾತ್ರ ನಿದ್ದೆ ಮಾಡುತ್ತಲೇ ಇದೆ. ಕತ್ತಲೆಯಲ್ಲೆ ದೊಡ್ಡಯ್ಯನ ಕಣ್ಣಲ್ಲಿ ನೀರು ಇಳಿಯುತ್ತಲೇ ಇದೆ. ತನ್ನೋಳು ಸಣ್ಣಿ, ಮಗ್ಗುಲ ಮಗುಬಿಟ್ಟು ಪೇಟೆಯ ಸಾಬರ ಕೇರಿ ಸೇರಿ ಮೂರು ದಿನವಾಗಿದೆ. ಅಂದು ತನ್ನೋಳು ಅಂಥಾದೇನು ಮಾಡಿದ್ದಳು! ಅವಳು ಹಾದರ ಮಾಡಿದ್ದನ್ನು ನಾನೇ ಕೇಳದೆ ಇರುವಾಗ ಊರಿಗೇಕೆ ಉಸಾಬರಿ. ಬೇರೆ ಕೇರಿಲಿ ಇಂಥಾದ್ದೇನು ನಾನು ಕಾಣೆನೆ! ಊರ ಮುಂದಿನ ಕೋಡುಗಲ್ಲಿಗೆ ಅವಳನ್ನು ಕಟ್ಟಿ, ಸೀರೆ ಬಿಚ್ಚಿ ಹೋಗುವರೆಗೂ ಹೋದ ಬಂದವರೆಲ್ಲಾ ಏಟು ಹಾಕುವಾಗ ನಾನು ಹೊಲೆಗೇರಿ ಒಳಗಿಂದ ಹೊರಡದಂತಾ ಸ್ಥಿತಿ. ಊರು ಅದೆಂತಾ ಕ್ರೂರಿ. ಹೊಲೆಗೇರಿ ಅಂದರೆ ಅದೆಷ್ಟು ಸಸಾರ. ಹೀಗೆಲ್ಲಾ ನೊಂದು ಬೆಂದಿರುವ ಈ ದೊಡ್ಡಯ್ಯನಂತವರೊಡನೆ ಓದೋ ಹುಡುಗರಾದ ನನ್ನಂತೋರು ದಸರಾ-ಬೇಸಿಗೆ ರಜೆಯಲ್ಲಿ ಹಂಗಾಮಿ ಬೇಸಾಯ ಮಾಡಲು ಹೋಗುತ್ತಿದ್ದದಕ್ಕೆ ಬಲವಾದ ಕಾರಣ-ದೊಡ್ಡಯ್ಯನಂತ ಜೀತದವರ ಹಸಿಹಸಿ ಅನುಭವಗಳನ್ನು ಸವಿದುಣ್ಣುವುದಕ್ಕೆ! ಇಂಥಾ ದೊಡ್ಡಯ್ಯ ಒಮ್ಮೊಮ್ಮೆ ಏನೆಲ್ಲಾ ನೆನಪುಗಳನ್ನು ಬಿಚ್ಚುತ್ತಿದ್ದ! ಅವನದು ಹರೆಯ. ಕಲ್ಲು ಗುದ್ದಿ ನೀರು ತೆಗೆಯೋ ವಯಸ್ಸು. ಜವರಿ ಎಂಬೋಳು ಗಂಡುಳ್ಳೋ ಗರತಿ. ಇವನ ಹರೆಯದ ಹಳೇ ಗೆಳೆತನ ಮರೆತಿರಲಿಲ್ಲವಂತೆ. ಏನಲೋ ದೊಡ್ಡ ಈಗಲೂ ಏನಾರ ವ್ಯವಹಾರ ಇಟ್ಟುಕೊಂಡಿಯೋಗಲಾ? ಎಂದು ಇವನ ಜೊತೆಗಾರರು ಕೆಣಕಿದ್ದುಂಟಂತೆ. ಸುಮ್ಮನೆ ನಡಿರಲೋ ಹಳತೆಲ್ಲಾ ಮರೆಯಲಾದೀತೇನೋ ಅಂದ ದೊಡ್ಡಯ್ಯನಿಗೆ; ಅದು ಹೆಂಗಲಾ ನಂಬೋದು; ನೋಡಪ್ಪಾ ಅವಳ ತುರುಬ ಕತ್ತರಿಸಿಕೊಂಡು ತಂದು ತೋರಿಸಿದರೆ ನಂಬಬಹುದಪ್ಪಾ ಎಂದು ಸವಾಲು ಹಾಕಿದರಂತೆ. ಅವಳ ಗಂಡ ಇಲ್ಲದ ದಿನ ನೋಡಿ, ಅವಳ ಜೊತೆಗಿದ್ದ ದೊಡ್ಡಯ್ಯ, ಹಾಗೇ ಮಾಡೋದೆ! ಬೆಳಗಾದರೆ ಜವರಿ ಏನು ಹೇಳಿಯಾಳು! ಅಯ್ಯಯ್ಯೋ ಇಲಿ ತಲೆ ಕುರುಕಿ ಬಿಟ್ಟಿದೆಯಲ್ಲಪ್ಪೊ ಅಂತ ಸುದ್ದಿ ಹಬ್ಬಿಸಿದಳಂತೆ! ಇಂಥಾ ದೊಡ್ಡಯ್ಯ ತಾಯಿ ಇದ್ದೂ ತಬ್ಬಲಿಯಾಗಿದ್ದ ಮಗುವನ್ನು ದೇಹವೆರಡು ಜೀವವೊಂದು ಎಂಬಂತೆ ಜೋಪಾನ ಮಾಡುತ್ತಿದ್ದುದೇ ಈಗಲೂ ನೆನಪು. ಅವನಾಕೆ ಆಲೂರು ಸಂತೇಲಿ ಸಾಬುವಿನ ಪಕ್ಕದಲ್ಲಿ ಕುಳಿತು ಬಳೆ ಯಾಪಾರವನ್ನು ಮಾಡುತ್ತಾ, ಅವಳ ಮಗ ಮಾಜಿ ಗಂಡನೊಡನಿರುವಾಗ ಗಮನಿಸಿ ಅದೆಷ್ಟು ಕೊರಗಿರಬೇಕು! ಅದೂ ಒಂದು ನೆನಪು.
ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ‌ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕಾರ್ಮಿಕರಿಗೆ ಸಿಹಿ ಹಂಚುವ ಮೂಲಕ ಕೆಎಂಎಫ್ ಅರ್ಥಪೂರ್ಣವಾಗಿ ವಿಶ್ವ ಹಾಲು ದಿನಾಚರಣೆ ಆಚರಿಸಲಾಯಿತು. Govindaraj S Bangalore, First Published Jun 2, 2022, 2:22 AM IST ಬೆಂಗಳೂರು (ಜೂ.02): ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ‌ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕಾರ್ಮಿಕರಿಗೆ ಸಿಹಿ ಹಂಚುವ ಮೂಲಕ ಕೆಎಂಎಫ್ ಅರ್ಥಪೂರ್ಣವಾಗಿ ವಿಶ್ವ ಹಾಲು ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ‌ ರೈಲುಗಳ ಮೂಲಕ ನಂದಿನಿ ಉತ್ಪನ್ನಗಳ ಜಾಹೀರಾತಿಗೆ ವ್ಯವಸ್ಥಾಪಕ ನಿರ್ದೇಶಕರಾದ ಬಿಸಿ ಸತೀಶ್ ಚಾಲನೆ‌ ನೀಡಿದರು. ಈ‌ವೇಳೆ ಮಾತನಾಡಿದ ಅವರು ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಇದೇ ಮೊದಲ ಭಾರಿಗೆ ರೈಲುಗಳ ‌ಮೂಲಕ ನಂದಿನಿ ಉತ್ಪನ್ನಗಳ ಜಾಹೀರಾತು ನೀಡುತ್ತಿದ್ದೇವೆ. ಈ ಮೂಲಕ ಉತ್ಪನ್ನಗಳ ಪ್ರಚಾರ ಇನ್ನಷ್ಟು ಹೆಚ್ಚಾಗಲಿದೆ ಎಂದರು. ಇನ್ನೂ ಕೆಎಂಎಫ್ ಜೊತೆಯಲ್ಲಿ ದಶಕಗಳಿಂದ ಸುಮಾರು 26 ಲಕ್ಷ ರೈತರು ಹಾಗೂ 2 ಲಕ್ಷ ಶ್ರಮಿಕ ವರ್ಗದವರು ಇದ್ದು, ಯಾವಾಗಲೂ ಕೆಎಂಎಫ್ ಶ್ರಮಿಕರ ಜೊತೆ ಇದೆ ಅನ್ನೋದನ್ನ ಶ್ರಮಿಕರಿಗೆ ಸಿಹಿ ಹಂಚುವ ‌ಮೂಲಕ ಕೆಎಂಎಫ್ ತೋರಿಸಿದೆ. ಅಲ್ಲದೆ ವಿಶ್ವ ಹಾಲು ದಿನಾಚರಣೆಯನ್ನ 2021 ರಲ್ಲೂ ಆಚರಣೆ ‌ಮಾಡಲಾಗಿತ್ತು. ರಾಜ್ಯದ ಎಂ.ಕೃಷ್ಣಪ್ಪನವರು ಹೈನುಗಾರಿಕೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ ಅಂತ ಕೆಎಂಎಫ್ ವ್ಯವಸ್ಥಾಪಕ ‌ನಿರ್ದೇಶಕ ಸತೀಶ್ ಹೇಳಿದರು. Milk Price Hike ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ, ಲೀಟರ್‌ ಹಾಲು 3 ರು. ದುಬಾರಿ? ಹಾಲಿನ ದರ ಏರಿಕೆ ಆಗುತ್ತಾ?: ಪ್ರತಿ ಲೀಟರ್ ಹಾಲಿನ ಮೇಲೆ 5 ರೂ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಸಿಎಂ ಅವರನ್ನ ಭೇಟಿ ಮಾಡಿ ದರ ಹೆಚ್ಚಳ‌ ಮಾಡುವಂತೆ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಕೂಡ ಮನವಿ‌ ಮಾಡಿದ್ದಾರೆ. ಅಲ್ಲದೆ ಸೂಕ್ತ ಸಮಯದಲ್ಲಿ ದರ ಏರಿಕೆ ‌ಪ್ರಸ್ತಾಪವನ್ನ ನಾವು ಕೂಡ ಮಾಡುತ್ತೇವೆ. ಇತರೆ ಹಾಲಿನ ಮಹಾ ಮಂಡಳಿಗಳ ಬೆಲೆ 10 ರಿಂದ 12 ರಷ್ಟು ದರ ಹೆಚ್ಚಿಸಿದೆ. ಹೀಗಾಗಿ ದರ ಹೆಚ್ಚಳದಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಅಂತ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿಸಿ ಸತೀಶ್ ತಿಳಿಸಿದರು. NCDFY: ಕೆಎಂಎಫ್‌ಗೆ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಗರಿ ಪವರ್ ಸ್ಟಾರ್ ಅಪ್ಪು ಅನಘ್ರ್ಯ ರತ್ನ: ಕೆಎಂಎಫ್‌ ನಂದಿನಿ ರಾಯಭಾರಿಯಾಗಿದ್ದ ನಟ ದಿವಂತ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿದ್ದರೂ ಅವರ ನೆನಪು ಜನರ ಹೃದಯದಲ್ಲಿ ಶಾಶ್ವತವಾಗಿರುತ್ತದೆ. ಅವರು ಕರ್ನಾಟಕದ ಅನಘ್ರ್ಯ ರತ್ನ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಕೆಎಂಎಫ್‌ ಬೆಳವಣಿಗೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪಾತ್ರ ಹಿರಿದಾಗಿತ್ತು. ಕೆಎಂಎಫ್‌ ರಾಜ್ಯದ ಎಲ್ಲ ವರ್ಗಗಳ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ರುಚಿ, ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಒದಗಿಸುತ್ತಿದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ನಮ್ಮ ನಂದಿನಿ ಬ್ರ್ಯಾಂಡ್‌ ಗ್ರಾಹಕರ ಆಯ್ಕೆಯಾಗಿದೆ ಎಂದು ಹೇಳಿದರು.
[ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಸ್ವಚ್ಚ ಭಾರತ ಎಂದು ಬ್ಯಾನರ್ ಹಾಕಿ ನಮ್ಮ ರಾಜಕಾರಣಿಗಳು ವರ್ಷಕ್ಕೊಮ್ಮೆ ಅಕ್ಟೋಬರ್ 2 ರಂದು ಕ್ಲೀನ್ ಇದ್ದ ಜಾಗದಲ್ಲಿಯೇ ನಾಲ್ಕು ಪೊರಕೆ ಹಿಡಿದುಕೊಂಡು ಬಗ್ಗಿದಾಗೆ ಮಾಡಿ ಕ್ಯಾಮೆರಾಗಳಿಗೆ ಫೋಸ್ ಕೊಡುತ್ತಾರಲ್ಲ. ನಾಲ್ಕು ಎಲೆ, ಎರಡು ಗುಟ್ಕಾ ಪ್ಯಾಕೇಟ್ ಬಿದ್ದ ಕಡೆ ಹದಿನೈದು ಜನ ಪೊರಕೆ ಹಿಡಿದು ಮೀಡಿಯಾದವರು ವಿಡಿಯೋ, ಫೋಟೋ ತೆಗೆದು ಆಚೆ ಹೋದ ಕೂಡಲೇ ಹಿಡಿಸೂಡಿಯನ್ನು ಅಲ್ಲಿಯೇ ಬಿಸಾಡಿ ಕಾರು ಹತ್ತಿ ಹತ್ತಿರದ ಹೋಟೇಲಿಗೆ ಹೋಗಿ ಕಾಲ ಮೇಲೆ ಕಾಲು ಹಾಕಿ ಕಾಫಿ ಕುಡಿಯುತ್ತಾರಲ್ಲ. ಅಂತಹ ಮಂಗಳೂರಿನ ಎಲ್ಲಾ ರಾಜಕಾರಣಿಗಳಿಗೆ ನಿಜಕ್ಕೂ ಸ್ವಚ್ಚ ಭಾರತ ಆಗಲೇಬೇಕು ಎನ್ನುವ ಮನಸ್ಸಿದ್ದರೆ ಮಂಗಳೂರು ತಾಲೂಕು ಕಚೇರಿಗೆ ಬನ್ನಿ. ತಾವೆಲ್ಲ ಮಿನಿ ವಿಧಾನಸೌಧ ಎಂದು ಕರೆಸಿಕೊಳ್ಳುತ್ತಿರುವ ಕಟ್ಟಡದ ಆವರಣಕ್ಕೆ ಬರಬೇಕು. ಮಂಗಳೂರಿನ ಯಾವುದೇ ರಾಜಕಾರಣಿ ಬಂದರೂ ಆಗುತ್ತದೆ. ಕಾರ್ಪೋರೇಟರ್ ಗಳು ಬಂದರೂ ಆಗುತ್ತದೆ. ಮುಂದಿನ ಮಹಾನಗರ ಪಾಲಿಕೆಯ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಬಂದರೂ ಆಗುತ್ತದೆ. ಮಾಧ್ಯಮದವರ ಫೋಟೋ, ವಿಡಿಯೋ ಇದ್ದರೂ ಆಗುತ್ತದೆ, ಇಲ್ಲದಿದ್ದರೂ ಆಗುತ್ತದೆ. ನಾನಿವತ್ತು ಹಾಕಿರುವ ಫೋಟೋದಲ್ಲಿಯೇ ತಾವು ನೋಡುವಂತೆ ಇಲ್ಲಿ ಎಷ್ಟು ಗುಡಿಸಿದರೂ ಅಷ್ಟು ಕಸ ಇದೆ. ಮಂಗಳೂರಿನ ಎಲ್ಲ ಹಿರಿಕಿರಿಯ ಜನಪ್ರತಿನಿಧಿಗಳು ಬಂದು ಎರಡು ಗಂಟೆ ಗುಡಿಸಿದರೂ ಇಲ್ಲಿ ಸ್ವಚ್ಚ ಭಾರತ ಆಗುವುದು ಡೌಟು. ಅಷ್ಟಿದೆ ಕಸ. ಬೇಕಾದರೆ ಸ್ವಚ್ಚ ಭಾರತದ ಉದ್ಘಾಟನೆಯನ್ನು ತಾಲೂಕು ಕಚೇರಿಯಲ್ಲಿ ವಿರಾಜಮಾನರಾಗಿರುವ ಮಾನ್ಯ ತಹಶೀಲ್ದಾರ್ ಸಾಹೇಬ್ರಿಂದ ಮಾಡಿಸಿ. ಅವರ ಕೈಯಲ್ಲಿ ಪೊರಕೆ ಕೊಟ್ಟು ಫೋಟೋ ತೆಗೆಸಿ. ಅವರಿಂದ ಸ್ವಚ್ಚತೆಯ ಬಗ್ಗೆ ಭಾಷಣ ಮಾಡಿಸಿ. ಅದನ್ನು ಕೇಳುವ ಭಾಗ್ಯ ನಮ್ಮ ನಾಗರಿಕರಿಗೆ ಕೊಡಿ. ಎಲ್ಲವೂ ಕ್ಲೀನ್ ಆದ ನಂತರ ತಾಲೂಕು ಕಚೇರಿಯ ಒಳಗೆ ತಹಶೀಲ್ದಾರ್ ಅವರ ಛೇಂಬರಿನಲ್ಲಿ ರಾಜಕಾರಣಿಗಳು ಕುಳಿತು ಕಾಫಿ ಕುಡಿಯುತ್ತಾ ಎಂಜಾಯ್ ಮಾಡಿ. ನಾಚಿಕೆ ಎನ್ನುವ ಶಬ್ದ ಇವರ ಡಿಕ್ಷಂನರಿಯಲ್ಲಿ ಇಲ್ಲ… ನಾನಿವತ್ತು ಹಾಕಿರುವ ಫೋಟೋಗಳನ್ನು ನೋಡಿದರೆ ನಿಜಕ್ಕೂ ಸ್ವಚ್ಚತೆಯ ಬಗ್ಗೆ ಪರಿಕಲ್ಪನೆ ಇದ್ದವರಿಗೆ ಬೇಸರ ಮೂಡುತ್ತದೆ. ಮಂಗಳೂರಿನಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಅಭಿಯಾನದ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಸಂಘಟನೆಯವರಿಗೆ ಇದನ್ನು ನೋಡಿ ಕೋಪವೂ ಬರಬಹುದು. ಫೇಸ್ ಬುಕ್ ನಲ್ಲಿ ಲೈವ್ ಮಾಡಿ ಜನರಿಗೆ ಜಾಗೃತಿ ಮೂಡಿಸುತ್ತಿರುವ ಯುವಮಿತ್ರರಿಗೆ ಅಸಹ್ಯವೂ ಬರಬಹುದು. ಆದರೆ ನಿತ್ಯ ಈ ತಾಲೂಕು ಪಂಚಾಯತ್ ಕಚೇರಿ, ಮಿನಿ ವಿಧಾನಸೌಧದ ಕಟ್ಟಡಕ್ಕೆ ಬಂದು ತಮ್ಮ ಉದ್ಯೋಗ ಮಾಡುತ್ತಿರುವ ತಹಶೀಲ್ದಾರ್ ಅಥವಾ ಅವರ ಸಿಬ್ಬಂದಿಗಳಿಗೆ ಒಂದು ಚೂರು ನಾಚಿಕೆ, ಮಾನ, ಮರ್ಯಾದೆ ಏನೂ ಆಗುವುದಿಲ್ಲವೇ? ಅವರು ಕೆಲಸ ಮಾಡುವ ಸ್ಥಳದ ಸುತ್ತಮುತ್ತಲೂ ಸ್ವಚ್ಚವಾಗಿರಬೇಕೆಂಬ ಯಾವ ಉದ್ದೇಶವೂ ಅವರಿಗೆ ಇಲ್ಲವೇ? ಮೋದಿಯವರು ಸ್ವಚ್ಚತೆಯ ಬಗ್ಗೆ ಪಾಠ ಹೇಳಿಕೊಟ್ಟ ಮೇಲೆಯಾದರೂ ನಾವು ಅದನ್ನು ಅನುಸರಿಸಬೇಕು ಎನ್ನುವ ಚಿಂತನೆ ಇದೆಯಾ? ಅಥವಾ ಮೋದಿಯವರು ಹೇಳಿದ್ರು ಎನ್ನುವ ಕಾರಣಕ್ಕೆ ವಿರೋಧ ಮಾಡುತ್ತಾ ಇದ್ದೀರಾ? ಒಂದು ವೇಳೆ ನಿಮಗೆ ಸ್ವಚ್ಚತೆಯ ಬಗ್ಗೆ ಆಸಕ್ತಿ ಇಲ್ಲದಿದ್ದರೆ ಬೇಡಾ. ಬೇರೆಯವರಿಗೋಸ್ಕರವಾಗಿ ಆದರೂ ಒಂದಿಷ್ಟು ಸ್ಚಚ್ಚತೆಯನ್ನು ಕಾಪಾಡುವುದು ನಿಮ್ಮ ಕನಿಷ್ಟ ಹೊಣೆಯಲ್ಲವೇ. ಮಕ್ಕಳಲ್ಲಿ ಬಂದಿರುವ ಜಾಗೃತಿ ಇವರಿಗೆ ಯಾಕಿಲ್ಲ… ಇನ್ನು ಮಿನಿವಿಧಾನಸೌಧದಲ್ಲಿ ಕ್ಲೀನ್ ಮಾಡುವವರ ಸಂಖ್ಯೆ ಕಡಿಮೆ ಇದೆ ಅಥವಾ ಇಲ್ಲ ಎನ್ನುವುದು ನಿಮ್ಮ ಸಮಜಾಯಿಷಿಕೆ ಎಂದಾದರೆ ಅದಕ್ಕಿಂತ ದೊಡ್ಡ ಪ್ರಹಸನ ಬೇರೆ ಇಲ್ಲ. ಒಂದೋ ತಹಶೀಲ್ದಾರರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಥವಾ ವಾರದಲ್ಲಿ ಒಂದು ದಿನ ತಮ್ಮ ಕಚೇರಿಯ ಸಿಬ್ಬಂದಿಗಳಿಗೆ ಶ್ರಮದಾನ ಮಾಡುವ ಆದರ್ಶವನ್ನು ಮೆರೆಯಲು ಹೇಳಿ. ಹೇಗೂ ತಾಲೂಕು ಕಚೇರಿಯ ಸಿಬ್ಬಂದಿಗಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ನಾಗರಿಕರ ಜೇಬು ಕ್ಲೀನ್ ಮಾಡಲು ಗೊತ್ತಿದೆ, ಕ್ಲೀನ್ ಮಾಡುವವರು ಬರುವ ತನಕ ಇದನ್ನು ಶ್ರಮದಾನದ ಮೂಲಕ ಸ್ವಚ್ಚತೆಯ ಕೆಲಸ ಮಾಡಲಿ. ಹೇಗೂ ಕುಳಿತುಕೊಂಡು “ತಿಂದು” ಹೊಟ್ಟೆ ಬಂದಿರುತ್ತದೆ. ಜನರ ಕೆಲಸಗಳು ಸುಲಭದಲ್ಲಿ ಆಗುವುದಿಲ್ಲ. ಅದರ ಬದಲು ನಡು ಬಗ್ಗಿಸಿದರೆ “ತಿಂದದ್ದು” ಕೂಡ ಒಂದಿಷ್ಟು ಜೀರ್ಣವಾಗಬಹುದು. ಫೋಟೋದಲ್ಲಿ ತಾವು ನೋಡಬಹುದು. ಆವರಣದಲ್ಲಿಯೇ ಪೇಪರ್ ಪೀಸ್ ಗಳು, ಕವರ್ ಗಳನ್ನು ಬಿಸಾಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆ ಇದೆಯಾ? ಇವತ್ತಿನ ದಿನಗಳಲ್ಲಿ ಒಂದು ಮಗು ಸಹ ತಾನು ಚೋಕೋಲೇಟ್ ತಿಂದು ಅದರ ರ್ಯಾಪರ್ ಅನ್ನು ಕಿಸೆಯಲ್ಲಿಯೇ ಹಾಕಿ ಮನೆಯ ಒಳಗೆ ಡಸ್ಟ್ ಬಿನ್ ನಲ್ಲಿ ಹಾಕುತ್ತದೆ. ಕಳೆದ ಮೂರ್ನಾಕು ವರ್ಷಗಳಿಂದ ಎಷ್ಟು ಜನಜಾಗೃತಿ ಆಗಿದೆ ಎಂದರೆ ಮಕ್ಕಳು ಕಾರಿನಲ್ಲಿ ಬಿಸ್ಕಿಟ್ ಅಥವಾ ಏನಾದರೂ ತಿಂದರೆ ಅದರ ಪ್ಯಾಕೇಟುಗಳನ್ನು ಕಿಟಕಿಯಿಂದ ಹೊರಗೆ ಬಿಸಾಡುವುದಿಲ್ಲ. ಅದರ ಬದಲು ಕಾರಿನ ಒಳಗೆ ಇಡುತ್ತವೆ. ಅಂದರೆ ಮಕ್ಕಳಲ್ಲಿಯೂ ಅಷ್ಟು ಜ್ಞಾನ ಮೂಡುತ್ತಿರುವಾಗ ನಮ್ಮ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಬುದ್ಧಿ ಬೆಳೆದಿಲ್ವಾ? ಇನ್ನು ಎಷ್ಟೇ ಕ್ಲೀನ್ ನೆಸ್ ಬಗ್ಗೆ ಗೊತ್ತಿಲ್ಲ ಎಂದು ಇಟ್ಟುಕೊಂಡರೂ ಮನೆಯ ಒಳಗೆ ಈ ಪರಿ ಗಲೀಜು ಇಟ್ಟುಕೊಳ್ಳುತ್ತಾರೆಯೇ? ಇಲ್ವಲ್ಲ, ಹಾಗಿರುವಾಗ ಇಲ್ಲಿ ಅದೇಗೆ ಮನಸ್ಸು ಬರುತ್ತೋ!!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಳೆಹಾನಿ ಪರಿಹಾರ ಕಾರ್ಯಗಳಿಗೆ ₹350 ಕೋಟಿ ನೀಡಲು ಸರ್ಕಾರ ಅನುಮೋದನೆ ನೀಡಿದೆ. ಸೆಪ್ಟೆಂಬರ್‍‌ನಲ್ಲಿ ಬೆಂಗಳೂರಿನ ಹಲವೆಡೆ ಅಧಿಕ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಮಹದೇವಪುರ, ಸನ್ನಿ ಬ್ರೂಕ್ಸ್, ರೈನ್‌ ಬೋ ಲೇಔಟ್‌, ಯಮಲೂರು ವಿಲ್ಲಾ, ಮಾರತಹಳ್ಳಿ, ಸೇರಿದಂತೆ ಹಲವೆಡೆ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಮಳೆ ಹಾನಿ ಪರಿಹಾರಕ್ಕಾಗಿ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿದ 10 ದಿನದ ನಂತರ ನಗರಾಭಿವೃದ್ಧಿ ಇಲಾಖೆ ಸೆ.28ರಂದು ಪರಿಹಾರ ಮೊತ್ತಕ್ಕೆ ಅನುಮೋದನೆ ನೀಡಿದೆ. ಬಿಬಿಎಂಪಿಯೂ ಕೆರೆಗಳ(ರಾಜಕಾಲುವೆ) ನಡುವಿನ ಸಂಪರ್ಕ ಜಾಲವನ್ನು ಸರಿಪಡಿಸಲು ₹317 ಕೋಟಿ ವೆಚ್ಚ ಮಾಡಬೇಕು ಎಂದು ಹೇಳಿದೆ. ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಸ್ತೆಗುಂಡಿ ಮುಚ್ಚುವ ಕಾರ್ಯ ಚುರುಕುಗೊಳಿಸಲು ಕಾರ್ಯಪಡೆ ರಚನೆ ಮಳೆಯಿಂದ ತೀವ್ರಹಾನಿಯಾಗಿರುವ ಮಹದೇವಪುರ ವಿಧಾನಸಭೆ ಕ್ಷೇತ್ರಕ್ಕೆ ₹160, ಕೆ ಆರ್ ಪುರ–₹40 ಕೋಟಿ, ಬೊಮ್ಮನಹಳ್ಳಿ– ₹65 ಕೋಟಿ, ಬೆಂಗಳೂರು ದಕ್ಷಿಣ– ₹27.25 ಕೋಟಿ, ಯಲಹಂಕ ಮತ್ತು ಬ್ಯಾಟರಾಯನಪುರ ತಲಾ ₹10 ಕೋಟಿ ನೀಡಲಾಗಿದೆ. ಇನ್ನುಳಿದ ₹33 ಕೋಟಿಯನ್ನು ಬೆಂಗಳೂರಿನ 148 ಕೆರೆಗಳಿಗೆ ತೂಬು ಗೇಟ್‌ಗಳನ್ನು ಅಳವಡಿಸಲು ಬಳಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.
ಬರೋಡಾ (ಆರ್‍ಬಿಐ), ಅ.05: ಗುಜರಾತ್ ರಾಜ್ಯದ ಬರೋಡಾ ಇಲ್ಲಿ ಸೇವಾನಿರತ ತುಳು ಸಂಘ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‍ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ಇಂದಿಲ್ಲಿ ಬುಧವಾರ ವಿಜೃಂಭನೆಯಿಂದ ದಸರಾ ಹಬ್ಬ ಆಚರಿಸಿತು. ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ಮತ್ತು ಗೌರವಾಧ್ಯಕ್ಷ ದಯಾನಂದ ಬೋಂಟ್ರ ಅವರ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದಲ್ಲಿ ತುಳುನಾಡ ಹಬ್ಬದ ವಾತಾವರಣ ಸೃಷ್ಟಿಸಿದ ಸದಸ್ಯರು ಹೊಸಬೆಳೆಯನ್ನು ಬರಮಾಡಿಕೊಂಡು ಕದಿರೆ ಕಟ್ಟಿ ಸಾಂಪ್ರದಾಯಿಕವಾಗಿ ತೆನೆಹಬ್ಬ ಆಚರಿಸಿದರು. ಡಿಲೈಟ್ ಇಂಜಿನೀಯರ್ಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ, ಸಂಘದ ಹಿರಿಯ ಸದಸ್ಯ ದಿನೇಶ್ ಶೆಟ್ಟಿ ನ್ಯಾಯಂಪಾಡಿ (ಉಡುಪಿ) ಮತ್ತು ಡಾ| ಅನಿತಾ ಡಿ.ಶೆಟ್ಟಿ ದಂಪತಿ ಕಾರ್ಯಕ್ರಮದ ಯಜಮಾನತ್ವ ವಹಿಸಿದ್ದು ತೆನೆಯನ್ನು (ಕದಿರು) ಹೊತ್ತು ತುಳಸೀ ಕಟ್ಟೆ ಸುತ್ತು ಬಂದು ಕೈಮುಗಿದು ಚಾವಡಿಯಲ್ಲಿನ ಶೃಂಗರಿತ ದೇವರ ಮಂಟದ ಮುಂದಿರಿಸಿ ಸೀಯಾಳ, ಹಸುವಿನ ಹಾಲಿನ ಅಭಿಷೇಕಗೈದು ಪ್ರಾರ್ಥನೆ ನೆರವೆರಿಸಿದರು. ಬಳಿಕ ಹೊಸ ಭತ್ತವನ್ನು ಸುಲಿದ ಅಕ್ಕಿಯೊಂದಿಗೆ ಹೊಸ ಅಕ್ಕಿ ಊಟ, ಪಾಯಸ, ಬಗೆಬಗೆಯ ಪಲ್ಯಗಳೊಂದಿಗೆ ರುಚಿಕರ ಶುದ್ಧ ಶಾಖಾಹಾರಿ ಭೋಜನ ಸವಿದು ತೆನೆಹಬ್ಬ, ದಸರಾ ಸಂಭ್ರಮಿಸಿದರು. ಸುಮಾರು ಮೂರು ದಶಕಗಳಿಂದ ಅನನ್ಯ ಸೇವೆಸಲ್ಲಿಸಿದ್ದ ಸಂಘದ ಗೌರವ ಪ್ರಧಾನ ಕೋಶಾಧಿಕಾರಿ ವಾಸು ಪಿ.ಪೂಜಾರಿ ಅವರು ಕೋಶಾಧಿಕಾರಿ ಸ್ಥಾನವನ್ನು ಪಿ.ಬಾಲಚಂದ್ರ ಗೌಡ ಇವರಿಗೆ ವಹಿಸಿ ಹುದ್ದೆಯ ಅಧಿಕಾರ ವಹಿಸಿಕೊಟ್ಟರು. ಸಂಸ್ಥೆಯ ಸದಸ್ಯರ ಮಕ್ಕಳಾಗಿದ್ದು ಕಳೆದ ಎಸ್‍ಎಸ್‍ಸಿ ಮತ್ತು ಹೆಚ್‍ಎಸ್‍ಸಿ ಪರೀಕ್ಷೆಗಳಲ್ಲಿ ಉತ್ಕೃಷ್ಟ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾಥಿರ್üಗಳಿಗೆ ಉಪಸ್ಥಿತ ಪದಾಧಿಕಾರಿಗಳು ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು. ಕೆ.ಮಾಧವ ಶೆಟ್ಟಿ, ಸತೀಶ್ ಶೆಟ್ಟಿ, ಎಸ್.ಕೃಷ್ಣ ಶೆಟ್ಟಿ, ಶಕುಂತಳಾ ಬಿ.ಶೆಟ್ಟಿ, ಮಹಾವೀರ್ ಬಿ.ಜೈನ್, ರವಿ ಶೆಟ್ಟಿ, ವಿಶಾಲ್ ಶಾಂತಾ, ಸ್ವಾತಿ ವಿ.ಶಾಂತಾ, ಮದನ್‍ಕುಮಾರ್ ಮೂಡುಗೆರೆ, ಗಾನ್ವಿ ಎಂ.ಗೌಡ, ವಾಸು ವಿ.ಸುವರ್ಣ, ದಯಾನಂದ್ ಸಾಲ್ಯಾನ್, ಹೆಜ್ಮಾಡಿ,ನಳಿನಿ ವಿ.ಪೂಜಾರಿ ಸೇರಿದಂತೆ ಅಪಾರ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದು ಪೂಜೆಗಳಲ್ಲಿ ಉಪಯೋಗಿಸಲ್ಪಟ್ಟ ಹಣ್ಣುಹಂಪಲು, ತರಕಾರಿ, ಕಾಯಿಪಲ್ಯಗಳು ಹಾರಾಜು ನಡೆಸಲಾಗಿದ್ದು ಸದಸ್ಯರು ಭಾರೀ ಮೊತ್ತದಲ್ಲಿ ಕೂಗುಬೆಲೆಯಲ್ಲಿ ತನ್ನದಾಗಿಸಿಕೊಂಡರು. ಮಹಿಳೆಯರು ಪ್ರಾರ್ಥನೆಯನ್ನಾಡಿದರು. ಸಂಘದ ಮಹಿಳಾ ಮುಖ್ಯಸ್ಥೆ ಡಾ| ಶರ್ಮಿಳಾ ಎಂ.ಜೈನ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕೋಶಾಧಿಕಾರಿ ಪಿ.ಬಾಲಚಂದ್ರ ಗೌಡ ವಂದನಾರ್ಪಣೆಗೈದರು.
October 9, 2021 October 9, 2021 ram pargeLeave a Comment on 150 ವರ್ಷಗಳ ನಂತರ ಐದು ವರ್ಷಗಳ ಕಾಲ 9 ರಾಶಿಯವರಿಗೆ ರಾಜಯೋಗ ಗುರುಬಲ 150 ವರ್ಷಗಳ ನಂತರ ಐದು ವರ್ಷಗಳ ಕಾಲ 9 ರಾಶಿಯವರಿಗೆ ರಾಜಯೋಗ ಗುರುಬಲ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯು ತನ್ನನ್ನು ಕೊಡುತ್ತಿರುತ್ತದೆ ಕಷ್ಟಕ್ಕೆ ಒಳಗಾಗಿರುತ್ತಾರೆ ಮತ್ತು ಬೇರೆಯವರ ನಿಂದ ನಿಗೆ ಒಳಗಾಗಿರುತ್ತಾರೆ ಅಂತಹವರಿಗೆ ಈ ಗಣೇಶ ದೇವರು ಪರಿಹಾರವನ್ನು ಒದಗಿಸಿಕೊಡುತ್ತಾರೆ ನೀವು ಮುಂದಿನ ಇಪ್ಪತ್ತನಾಲ್ಕು ಗಂಟೆಯ ಬಳಿಕ ಗಣೇಶ ಪೂಜೆಯಲ್ಲಿ ಮಾಡಬೇಕು ನೀವು ಗಣೇಶನನ್ನು ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಹಲವಾರು ಅಡೆತಡೆಗಳು ನಿಮ್ಮ ಕೆಲಸ ಕಾರ್ಯದಲ್ಲಿ ಮುಕ್ತಿಯನ್ನು ಪಡೆದು ಕೊಳ್ಳುತ್ತದೆ ಅದೃಷ್ಟದ ಪದಗಳನ್ನು ಗಣೇಶ ದೇವರು ನಿಮಗೆ ನೀಡುತ್ತಾರೆ ಈ ಒಂಬತ್ತು ರಾಶಿಯವರು ಸಂಪೂರ್ಣವಾಗಿ ಗಣೇಶ ದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಇದರಿಂದ ಇವರು ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳುತ್ತಾರೆ ಇವತ್ತು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಎಲ್ಲಿಲ್ಲದ ಸಂತೋಷವು ಈ ರಾಶಿಯವರಿಗೆ ಸಿಗಲಿದೆ ಅಂದಿನ 24ಗಂಟೆಯಲ್ಲಿ ಈ ರಾಶಿಯಲ್ಲಿ ಜನಿಸಿದವರಿಗೆ ವಾಹನ ಖರೀದಿಸುವ ಯೋಗವು ಸಹಾಯ ಇದೆ ಇದು ನಿಮಗೆ ತುಂಬಾ ಶುಭವನ್ನು ತಂದುಕೊಡುತ್ತದೆ ಚಿನ್ನಾಭರಣವನ್ನು ಸಹ ನೀವು ಈ ಸಂದರ್ಭದಲ್ಲಿ ಖರೀದಿಸಬಹುದು ಇದರಿಂದ ನಿಮ್ಮ ಮನೆಯಲ್ಲಿ ಶ್ರೀ ಲಕ್ಷ್ಮೀ ದೇವಿಯ ನೆಲೆಸಲಿದ್ದಾರೆ ಇಂದಿನಿಂದ ನೀವು ಮಾಡುವ ಯಾವುದೇ ಕೆಲಸವನ್ನು ಸರಳವಾಗಿ ಮಾಡುತ್ತೀರಾ ನೀವು ಯಾವುದೇ ಕೆಲಸವನ್ನು ಕೈಗೊಂಡರು ಆ ಕೆಲಸದಲ್ಲಿ ಉತ್ತಮವಾಗಿ ಇರುತ್ತೀರಾ ನಿಮ್ಮ ಎಲ್ಲಾ ಸಮಸ್ಯೆಗಳು ಮತ್ತು ಸಮಸ್ಯೆಗಳಿಗೆ ಗಣೇಶನ ಆಶೀರ್ವಾದದಿಂದ ನಿಮಗೆ ಸಂಪೂರ್ಣ ಪರಿಹಾರ ದೊರಕುತ್ತದೆ ಮತ್ತು ರಾಜಯೋಗ ಗಜಕೇಸರಿ ಯೋಗ ಗುರು ಬಲವು ಸಹ ಶುರುವಾಗುತ್ತದೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ವೃಶ್ಚಿಕ ರಾಶಿ ತುಲಾ ರಾಶಿ ಕನ್ಯಾ ರಾಶಿ ಕರ್ಕಟಕ ರಾಶಿ ಮೀನ ರಾಶಿ ಕುಂಭ ರಾಶಿ ಮಕರ ರಾಶಿ ಮೇಷ ರಾಶಿ ಮತ್ತು ತುಲಾ ರಾಶಿ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ರಾಜ್ಯದ ಮಲೆನಾಡು ಭಾಗದಲ್ಲಿ ಮಳೆಯ ಅರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಕೃಷಿ ಚಟುವಟಿಕೆ ನಡೆಯಬೇಕಿದ್ದ ಹೊಲಗದ್ದೆಗಳು ಜಲಾವೃತಗೊಂಡು ಸಾಕಷ್ಟು ಅನಾಹುತ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಭತ್ತದ ಗದ್ದೆಯಲ್ಲಿ ಭೂ ಕುಸಿತವಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಮನೋಜ್ ಎಂಬವರಿಗೆ ಸೇರಿದ ಗದ್ದೆಯಲ್ಲಿ ಭೂ ಕುಸಿತವಾಗಿದ್ದು, ಸುಮಾರು 60 ರಿಂದ 70 ಅಡಿ ಆಳದ ಕಂದಕ ನಿರ್ಮಾಣವಾಗಿದೆ. ಈ ಸುದ್ದಿ ಓದಿದ್ದೀರಾ?; ಕೊಡಗು | 'ಸಿಬಿಎಸ್ಇ'ಯಲ್ಲಿ ನವೋದಯ ವಿದ್ಯಾಲಯದ ಅತ್ಯುತ್ತಮ ಸಾಧನೆ ಈ ಕುರಿತು ಮಾತನಾಡಿರುವ ರೈತ ಮನೋಜ್, "ನಾಟಿ ಮಾಡಲು ಗದ್ದೆಯನ್ನು ಹದಗೊಳಿಸಲಾಗಿತ್ತು. ಆದರೆ ಗುರುವಾರ ಸುರಿದ ಮಳೆಯಿಂದ ಸಂಜೆ 6 ಗಂಟೆಗೆ ಭಾರೀ ಶಬ್ದವೊಂದು ಕೇಳಿ ಬಂತು. ಗದ್ದೆಯಲ್ಲಿ ಹೋಗಿ ನೋಡಿದಾಗ ಭೂ ಕುಸಿತವಾಗಿ ಕಂದಕ ನಿರ್ಮಾಣವಾಗಿತ್ತು" ಎಂದಿದ್ದಾರೆ. "ಇದರಿಂದ ನನಗೆ ಆತಂಕವಾಗಿದ್ದು, ಕಳೆದ ವಾರವೇ ಎತ್ತುಗಳಿಂದ ಉಳುಮೆ ಮಾಡಿ ಗದ್ದೆಯನ್ನು ಹದ ಮಾಡಿದ್ದೆ. ನಮ್ಮ ಪಕ್ಕದ ಹೊಲದ ಕೃಷಿಕರಿಗೆ ಕೂಡ ಭಯ ಶುರುವಾಗಿದೆ" ಎಂದು ತಿಳಿಸಿದರು. ಭೂ ಕುಸಿತವಾಗಿರುವ ಸ್ಥಳಕ್ಕೆ ಕೃಷಿ ಇಲಾಖೆಯವರು ಭೇಟಿ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಮತ್ತೊಬ್ಬ ಕೃಷಿಕ ಪ್ರಶಾಂತ್ "ವಿಜ್ಞಾನಿಗಳು ಬಾರದೆ ಕೃಷಿಕರ ಆತಂಕ ಕಡಿಮೆ ಆಗುವುದಿಲ್ಲ" ಎಂದು ತಿಳಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಕಾಕಮುಟ್ಟೈ’ ಸಿನಿಮಾ ಖ್ಯಾತಿಯ ಮಣಿಕಂಠನ್‌ ನಿರ್ದೇಶನದ ‘ಕಡೈಸಿ ವಿವಸಾಯಿ’ ತಮಿಳು ಸಿನಿಮಾ ಫೆಬ್ರವರಿ 11ಕ್ಕೆ ತೆರೆಕಾಣಲಿದೆ. ಈ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿರುವ ವಿಜಯ್‌ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಭಾವಂತ ತಮಿಳು ಚಿತ್ರನಿರ್ದೇಶಕ ಎಂ.ಮಣಿಕಂಠನ್‌ ಅವರ ‘ಕಡೈಸಿ ವಿವಸಾಯಿ’ ತಮಿಳು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಮತ್ತು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ವಿಜಯ್‌ ಸೇತುಪತಿ ಫೆಬ್ರವರಿ 11ರಂದು ಸಿನಿಮಾ ರಿಲೀಸ್‌ ಎಂದು ಟ್ವೀಟ್‌ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಕಾಕಮುಟ್ಟೈ’ ಸಿನಿಮಾದ ನಿರ್ದೇಶಕ ಮಣಿಕಂಠನ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದು, ಅವರು ಚಿತ್ರದ ನಿರ್ಮಾಪಕರಲ್ಲೊಬ್ಬರು. ಚಿತ್ರಕ್ಕೆ ಸಂತೋಷ್‌ ನಾರಾಯಣನ್‌ ಸಂಗೀತ ಸಂಯೋಜನೆ ಮತ್ತು ತೋಟಾ ಥರಣಿ ಕಲಾ ನಿರ್ದೇಶನವಿದೆ. 85 ವರ್ಷದ ರೈತ ನಲ್ಲಂದಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಯೋಗಿಬಾಬು ಮಾವುತನಾಗಿ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. #KadaisiVivasayi will hit the screens on Feb 11th.#KadaisiVivasayiFromFeb11 @dirmmanikandan @vsp_productions #TribalArtsProduction #ArtistsCoupe #RichardHarvey @Music_Santhosh @7CsPvtPte @iYogiBabu @proyuvraaj @Raichalrabecca @Aravindh_dir @r_kumarshivaji @cineinnovations pic.twitter.com/uHomxBbno0 — VijaySethupathi (@VijaySethuOffl) January 30, 2022 ‘ಆಂದವನ್‌ ಕಟ್ಟಲೈ’ (2016) ಚಿತ್ರದ ನಂತರ ನಿರ್ದೇಶಕ ಮಣಿಕಂಠನ್‌ ಮತ್ತು ನಟ ವಿಜಯ್‌ ಸೇತುಪತಿ ಇಲ್ಲಿ ಮತ್ತೊಮ್ಮೆ ಜೊತೆಯಾಗಿದ್ಧಾರೆ. ನಿರ್ದೇಶಕರು ಹೇಳುವಂತೆ ಈ ಸಿನಿಮಾ ತೆರೆಗೆ ಸಿದ್ಧವಾಗಿ ಎರಡು ವರ್ಷಗಳೇ ಆಗಿವೆ. ಕೋವಿಡ್‌ನಿಂದಾಗಿ ಸಿನಿಮಾ ತೀರಾ ವಿಳಂಬವಾಗಿ ತೆರೆಗೆ ಬರುತ್ತಿದೆ. ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಈ ಚಿತ್ರಕ್ಕೆ ಮೊದಲು ಸಂಗೀತ ಸಂಯೋಜಿಸಿದ್ದರು. ನಿರ್ದೇಶಕ ಮಣಿಕಂಠನ್‌ ಅವರಿಗೆ ಹಿನ್ನೆಲೆ ಸಂಗೀತ ಇಷ್ಟವಾಗಿರಲಿಲ್ಲ. ಮತ್ತೊಮ್ಮೆ ಹಿನ್ನೆಲೆ ಸಂಗೀತ ಕೊಡಲು ಇಳಯರಾಜ ಅವರಿಗೆ ಮನವಿ ಮಾಡಿದ್ದರು. ಇಳಯರಾಜ ಒಪ್ಪದ ಕಾರಣ ನಿರ್ದೇಶಕರು ಸಂತೋಷ್‌ ನಾರಾಯಣನ್‌ ಅವರಿಂದ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾಡಿಸಿಕೊಂಡಿದ್ದರು. ಬದಲಾದ ಹಿನ್ನೆಲೆ ಸಂಗೀತದೊಂದಿಗೆ ಟ್ರೈಲರ್‌ ಕೂಡ ಬಿಡುಗಡೆಯಾಯ್ತು. ತಮ್ಮ ಅನುಮತಿ ಇಲ್ಲದೆ ಚಿತ್ರದ ಹಿನ್ನೆಲೆ ಸಂಗೀತವನ್ನು ಬದಲಿಸಿದ್ದಾರೆ ಎಂದು ಇಳಯರಾಜ 2021ರ ಡಿಸೆಂಬರ್‌ನಲ್ಲಿ ಸಂಗೀತ ಸಂಯೋಜಕರ ಸಂಘಟನೆಗೆ ದೂರು ನೀಡಿದ್ದರು. ಈಗ ವಿವಾದ ಇತ್ಯರ್ಥವಾದಂತಿದೆ.
ಆಡಿಲೇಡ್‌: ಟಿ20 ವಿಶ್ವಕಪ್‌(T20 World Cup) ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌(England) ವಿರುದ್ಧ ಹೀನಾಯ ಸೋತ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ(Rohit Sharma) ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಪಂದ್ಯ ಮುಗಿದ ಬಳಿಕ ರೋಹಿತ್‌ ಶರ್ಮಾ ಡಗೌಟ್‌ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ತಲೆಯನ್ನು ಕೆಳಗೆ ಹಾಕಿ ಬೇಸರ ವ್ಯಕ್ತಪಡಿಸುತ್ತಿದ್ದಾಗ ಕೋಚ್‌ ದ್ರಾವಿಡ್‌ ಸಮಾಧಾನ ಮಾಡಿದ್ದಾರೆ. Related Articles ವೆಬ್‌ಸೈಟ್‌ಗೆ ಅರೆಬೆತ್ತಲೆ ಫೋಟೋ ಅಪ್‌ಲೋಡ್ ಮಾಡಿ ಸಿಕ್ಕಿಬಿದ್ದ ಶಿಕ್ಷಕಿ – ಶಾಲೆಗೆಲ್ಲಾ ಡಂಗೂರ ಸಾರಿದ ವಿದ್ಯಾರ್ಥಿ 12/04/2022 ನನ್ನ ಸ್ನೇಹಿತ ಮೋದಿಯನ್ನು ನಂಬುತ್ತೇನೆ: ಫ್ರೆಂಚ್ ಅಧ್ಯಕ್ಷ 12/04/2022 Please god, I'm begging, give me all the pain of my @ImRo45, but pls don't do this to him. 🙏💔😭pic.twitter.com/zHeoTOB6kW — Vishal. (@SportyVishal) November 10, 2022 ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಭಾರತ ಆರಂಭದಲ್ಲೇ ರಾಹುಲ್‌ ವಿಕೆಟ್‌ ಕಳೆದುಕೊಂಡರೂ ನಂತರ ರೋಹಿತ್‌ ಮತ್ತು ಕೊಹ್ಲಿ ನಿಧಾನವಾಗಿ ಆಡಿ ಇನ್ನಿಂಗ್ಸ್‌ ಕಟ್ಟಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ(Hardik Pandya) ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ 160ರ ಗಡಿ ದಾಟಿತ್ತು. ಅಂತಿಮವಾಗಿ ಭಾರತ 6 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿತ್ತು. ಸವಾಲಿನ ಮೊತ್ತವೇ ಆಗಿದ್ದರೂ ಭಾರತದ ಬೌಲರ್‌ಗಳಿಂದ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಜೋಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಬೌಂಡರಿ, ಸಿಕ್ಸರ್‌ ಸಿಡಿಸಿ ತಂಡವನ್ನು ಫೈನಲಿಗೆ ಕೊಂಡೊಯ್ದರು. ಬಟ್ಲರ್‌ 80 ರನ್‌(49 ಎಸೆತ, 9 ಬೌಂಡರಿ, 3 ಸಿಕ್ಸರ್‌) ಅಲೆಕ್ಸ್‌ ಹೇಲ್ಸ್‌ 86 ರನ್‌(47 ಎಸೆತ, 4 ಬೌಂಡರಿ, 7 ಸಿಕ್ಸರ್‌) ಚಚ್ಚಿ ಇಂಗ್ಲೆಂಡ್‌ಗೆ 10 ವಿಕೆಟ್‌ಗಳ ಜಯವನ್ನು ತಂದುಕೊಟ್ಟರು. ಇದನ್ನೂ ಓದಿ: ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ Rohit Sharma crying in the dugout just broke my heart into a million pieces. He knows his innings was one of the deciding factors. pic.twitter.com/9QMLt5dlw3 — Aritra Mukherjee (@aritram029) November 10, 2022 ಭಾರತದ ಮೊದಲ 10 ಓವರ್‌ಗಳಲ್ಲಿ ಜಾಸ್ತಿ ರನ್‌ ಬಂದಿರಲಿಲ್ಲ. ಮೊದಲ ಪವರ್‌ ಪ್ಲೇ 6 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಿತ್ತು. 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 62 ರನ್‌ ಗಳಿಸಿತ್ತು. 15 ಓವರ್‌ಗಳಲ್ಲಿ 100 ರನ್‌ ಬಂದಿದ್ದರೆ ಕೊನೆಯ 30 ಎಸೆತಗಳಲ್ಲಿ 68 ರನ್‌ ಬಂದಿತ್ತು. ಇತ್ತ ಇಂಗ್ಲೆಂಡ್‌ ಮೊದಲ ಓವರಿನಿಂದಲೇ ದಂಡಿಸಲು ಆರಂಭಿಸಿತ್ತು ಮತ್ತು ಓವರ್‌ ಒಂದಕ್ಕೆ ಸರಾಸರಿ 10 ರನ್‌ಗಳು ಬರುತ್ತಿದ್ದವು. ಮೊದಲ ಪವರ್‌ ಪ್ಲೇನಲ್ಲಿ 63 ರನ್‌ ಬಂದರೆ 10.1 ಓವರ್‌ನಲ್ಲಿ 100 ರನ್‌ ಬಂದಿತ್ತು. ಕೇವಲ 83 ಎಸೆತಗಳಲ್ಲಿ 150 ರನ್‌ ದಾಖಲಾಗಿತ್ತು. ಅಂತಿಮವಾಗಿ 16 ಓವರ್‌ಗಳಲ್ಲಿ 170 ರನ್‌ ಹೊಡೆಯುವ ಮೂಲಕ ಇಂಗ್ಲೆಂಡ್‌ ಫೈನಲ್‌ ಪ್ರವೇಶಿಸಿತು.
ಬಡತನದಿಂದ ತತ್ತರಿಸಿರುವ ಕೇರಳದ ಮಹಿಳೆಯೊಬ್ಬರು ತನ್ನ ಮಕ್ಕಳ ಚಿಕಿತ್ಸೆಗಾಗಿ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಕೇರಳದ ಕೊಚ್ಚಿ ನಿವಾಸಿಯಾಗಿರುವ 44 ವರ್ಷದ ಶಾಂತಿ ಎಂಬುವರು, ತಮ್ಮ ಐವರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ ಶಾಂತಿ ಅವರು, ತಮ್ಮ ಹೃದಯ ಸೇರಿದಂತೆ ದೇಹದ ಅಂಗಾಂಗಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಫಲಕವನ್ನು ಬರೆದು ರಸ್ತೆ ಬದಿಯಲ್ಲಿರಿಸುವ ಮೂಲಕ ಗಮನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಶಾಂತಿ ಅವರ ಹಿರಿಯ ಪುತ್ರ 2019ರಲ್ಲಿ ಅಪಘಾತಕ್ಕೀಡಾಗಿದ್ದು, ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಈಕೆಯ ದ್ವಿತೀಯ ಮಗ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು, ಇವರ 11 ವರ್ಚದ ಮಗಳು ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ನಡುವೆ ಶಾಂತಿ ಅವರ ತೃತೀಯ ಪುತ್ರ ಕೋವಿಡ್‍-19 ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದು, ಮತ್ತೊಬ್ಬ ಮಗ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎನ್ನಲಾಗಿದೆ. ಬಾಡಿಗೆ ಮನೆವೊಂದರಲ್ಲಿ ವಾಸವಾಗಿರುವ ಶಾಂತಿ ಅವರು, ಸದ್ಯ ಆರ್ಥಿಕ ಸಮಸ್ಯೆಯಿಂದಾಗಿ ಬಾಡಿಗೆ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಮೂವರು ಮಕ್ಕಳು ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇವರುಗಳ ಚಿಕಿತ್ಸೆಗೆ ಕನಿಷ್ಠ 20 ಲಕ್ಷ ರೂ.ಗಳ ಅಗತ್ಯವಿದೆ. ಆದರೆ ಯಾರೊಬ್ಬರು ಇವರ ನೆರವಿಗೆ ಬರುತ್ತಿಲ್ಲ ಎಂಬುದು ಶಾಂತಿ ಅವರ ಅಳಲು. ಈ ನಡುವೆ ಮಾಧ್ಯಮಗಳ ಮೂಲಕ ಶಾಂತಿ ಅವರು ಸಮಸ್ಯೆ ಅರಿತ ಕೇರಳ ಸರ್ಕಾರ, ಶಾಂತಿ ಅವರ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ, ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ. Latest News ರಾಜ್ಯ POCSO ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ದಂಡ ವಿಧಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ! ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ. ರಾಜ್ಯ ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ದೇಶ-ವಿದೇಶ ಹೃದಯಾಘಾತದಿಂದ ಬಸ್ ಚಾಲಕ ಸಾವು ; ಅನ್ಯ ವಾಹನಗಳಿಗೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು! ಬಸ್ ಚಾಲಕ ಹಠಾತ್ ಸಾವನ್ನಪ್ಪಿದ ಬೆನ್ನಲ್ಲೇ ಬಸ್ ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ದೃಶ್ಯದಲ್ಲಿ ಕಾಣಬಹುದು. ಮನರಂಜನೆ ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು? ತೆಲುಗು ಸಿನಿಮಾದ ಖ್ಯಾತ ಸಿನಿಮಾ ಪತ್ರಕರ್ತ,ಬರಹಗಾರ,ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ (Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.
ಸೋಮನಾಥಪುರದ ಚೆನ್ನಕೇಶವ ದೇವಾಲಯದ ಇತಿಹಾಸದ ಬಗ್ಗೆ ಕೇಳಿದರೆ ಪುಸ್ತಕದಲ್ಲಿ ಓದಿಕೊಂಡವರು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಇತಿಹಾಸ ಓದಿದವರು ಒಂದಷ್ಟು ಮಾಹಿತಿ ಹೇಳಬಹುದು. ಅಥವಾ ಅಂತರ್ಜಾಲದಲ್ಲಿ ಹುಡುಕಿದರೆ ಸಿಕ್ಕೇ ಬಿಡುತ್ತದೆ. ಆದರೆ ಅಲ್ಲಿನ ಪ್ರವಾಸದ ಅನುಭವವನ್ನು ಎಳೆ ಎಳೆಯಾಗಿ ಯಾರು ಅಷ್ಟು ಸುಲಭವದಲ್ಲಿ ಬಿಚ್ಚಿಡುವುದಿಲ್ಲ. ಅದರ ಬಗ್ಗೆ ನಾವು ಸ್ವಲ್ಪ ಹೇಳುತ್ತೇವೆ. ಜೊತೆಗೆ ವಿಡಿಯೋ ಸಹ ನೋಡಿರಿ. ಚೆನ್ನಕೇಶವ ದೇವಾಲಯವನ್ನು ಅದರ ಇತಿಹಾಸವನ್ನು ಬದಿಗಿಟ್ಟು ನೋಡುವುದಾದರೆ ಅದೊಂದು ಶಾಂತ ಸ್ವಭಾವದ ಸ್ಥಳ. ಟಿಕೆಟ್ ತೆಗೆದುಕೊಂಡು ದೇವಾಲಯ ಪ್ರದೇಶಕ್ಕೆ ಕಾಲಿಡುತ್ತಿದ್ದಂತೆ ನಮ್ಮಲ್ಲಿನ ಒತ್ತಡದ ಮನೋಭಾವ ಹಾಗೆ ಅದೆಲ್ಲಿಗೋ ಜಾರಿ ಬಿಡುತ್ತದೆ. ಕಣ್ಣು ಹಾಯಿಸಿದಷ್ಟು ಸುತ್ತಲು ಹಸಿರ ಹೊದಿಕೆ ನೋಟಕ್ಕೆ ಸಿಗುತ್ತದೆ. ದೇವಾಲಯದ ಮುಂಭಾಗವೇ ಇರುವ ಕಾಡು ಭಾಗೆ ಮರ ಹಾಗೆ ಒಂದಷ್ಟು ತಾಸು ಎಲ್ಲವನ್ನು ಮರೆತು ಕುಳಿತುಕೊಳ್ಳಿ ಎಂದೇಳುತ್ತದೆ. ಅದಕ್ಕೆ ಕಾರಣ ಅಲ್ಲಿನ ಭೌತಿಕ ಸೌಂದರ್ಯ ಮಾತ್ರವಲ್ಲದೇ, ನಿಶ್ಯಬ್ಧತೆ ಬ್ಯೂಟಿಯೂ ಹೌದು. ದೇವಾಲಯದ ಓಳಾಂಗಣಕ್ಕೆ ಹೋದರೆ ವಿಶಾಲವಾದ ಅಂಗಳ. ಸ್ವಚ್ಛತೆ ನಿರ್ವಹಣೆಗೆ ಶೇಕಡ.100 ಅಂಕ ನೀಡಬಹುದು. ಹೊಯ್ಸಳರ ಶೈಲಿಯ ಆ ದೇವಾಲಯದ ನಿರ್ಮಾಣ, ಕೆತ್ತನೆ, ಕಲೆ ಮೆದುಳಿಗೆ ಮಾತ್ರವಲ್ಲದೇ ಮನಸ್ಸಿಗೂ ಮುದ ನೀಡುವಷ್ಟು ಅದ್ಭುತವೆನಿಸುತ್ತದೆ. ಕ್ಯಾಮೆರಾ ಹಿಡಿದು ಫೋಟೋ ತೆಗೆದುಕೊಳ್ಳುತ್ತಾ, ಮೊಬೈಲ್‌ ಹಿಡಿದು ಸೆಲ್ಫಿ ತೆಗೆಯುತ್ತಾ ಬ್ಯುಸಿ ಆಗುವ ಬದಲು, ಜೊತೆಗಾರರೊಂದಿಗೆ ಅಲ್ಲೇ ಒಂದಷ್ಟು ತಾಸು ಕುಳಿತು ಹರಟೆ ಹೊಡೆಯುತ್ತಾ ಕುಳಿತರೆ ಆ ಖುಷಿಗೆ ಎಲ್ಲೇಯೇ ಇರುವುದಿಲ್ಲ. ಅಷ್ಟ ದಿಕ್ಕುಳಗಳಿಂದಲೂ ದೇವಾಲಯದ ಕಲೆಯ ಸೊಬಗನ್ನು ನಿಧಾನವಾಗಿ ಕಣ್ತುಂಬಿಕೊಳ್ಳುತ್ತಾ, ಆ ಜಗಲಿಯ ಮೇಲೆ ಓಡಾಡಿದಾಗ ಸಿಗುವ ಮಜಾ, ವರ್ಷಪೂರ್ತಿ ನಗರಗಳ ಮಾಲ್‌ಗಳಲ್ಲಿ, ಸಿನಿಮಾ ಥಿಯೇಟರ್‌ಗಳಿಗೆ ಓಡಾಡಿದರೂ ಸಿಗುವುದಿಲ್ಲ. ದೇವಾಲಯದ ಮುಂಭಾಗದಲ್ಲಿ ವಿಶಾಲವಾದ ಹಸಿರು ಹುಲ್ಲಿನ ಹೊದಿಕೆ ಮೇಲೆ ಕುಳಿತು ಬೆಳಿಗ್ಗೆಯಿಂದ ಸಂಜೆ ವರೆಗೆ ಕುಳಿತುಕೊಳ್ಳಲು ಯಾರು ಅಡ್ಡಿ ಮಾಡುವುದಿಲ್ಲ. ಒತ್ತಡವನ್ನು ಮರೆಯಲು, ಪ್ರಕೃತಿಯೊಳಗೆ ಹೊಕ್ಕಿ ಅದರೊಂದಿಗೆ ಬೆರೆಯುವುದಕ್ಕಿಂತ ಔಷಧ ಮತ್ತೊಂದಿಲ್ಲ. ಅಂತಹ ಪ್ರಕೃತಿಯ ಮಡಿಲುಗಳ ಸಾಲಿನಲ್ಲಿ, ಹಳ್ಳಿ ಸೊಬಗಿನ ಪಕ್ಕದಲ್ಲೇ ಸೋಮನಾಥಪುರ ದೇವಾಲಯ ಇರುವುದು. ಮೇಲಿನ ಈ ವೈಭವೀಕರಣಕ್ಕೆ ಕನ್ನಡಿಯಾಗಿರುವ ವಿಡಿಯೋ ಇದು. ಒಮ್ಮೆ ನೋಡಿ… ಭೇಟಿ ನೀಡಿ. ನಿಮ್ಮ ಅನಿಸಿಕೆಯನ್ನು ಲೇಖನದ ಕೆಳಗೆ ಇರುವ ಕಮೆಂಟ್‌ ಬಾಕ್ಸ್‌ ನಲ್ಲಿ ಟೈಪಿಸಿ.
ಉಡುಪಿ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಉಡುಪಿ ಜಿಲ್ಲೆಯ ಸವಿತಾ ಸಮಾಜದ 2000 ಮಂದಿಗೆ ಡಾ.ಜಿ.ಶಂಕರ್ ಶ್ಯಾಮಿಲಿ ಟ್ರಸ್ಟ್ ವತಿಯಿಂದ ನೀಡಲಾದ ಉಚಿತ ಆಹಾರದ ಕಿಟ್‌ಗಳನ್ನು ಜಿಲ್ಲಾಡಳಿತ ಮೂಲಕ ಉಡುಪಿ ತಾಲೂಕು ಕಚೇರಿಯಲ್ಲಿ ವಿತರಿಸಲಾಯಿತು. ಆಹಾರದ ಕಿಟ್ ವಿತರಿಸಿದ ಡಾ.ಜಿ.ಶಂಕರ್ ಮಾತನಾಡಿ, ಲಾಕ್‌ಡೌನ್ ಆರಂಭವಾದ ಕೂಡಲೇ ಜಿಲ್ಲಾಡಳಿತ ಮನವಿ ಮೇರೆಗೆ ಅಗತ್ಯವಿರುವ ಮಾಸ್ಕ್ ಮತ್ತು ಪಿಪಿಟಿ ಕಿಟ್ ಸೇರಿದಂತೆ ಆರೋಗ್ಯ ಇಲಾಖೆಗೆ ಅಗತ್ಯವಿದ್ದ ಸಾಮಾಗ್ರಿ ಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗಿದೆ. ಈವರೆಗೆ 1.5 ಲಕ್ಷ ಮಾಸ್ಕ್‌ಗಳು ಮತ್ತು 25,000ಕ್ಕೂ ಅಧಿಕ ಆಹಾರದ ಕಿಟ್‌ಗಳನ್ನು 125000ಕ್ಕೂ ಅಧಿಕ ಫಲಾನುಭವಿಗಳಿಗೆ ಜಿಲ್ಲಾಡಳಿತದ ಮೂಲಕ ವಿತರಿಸಲಾಗಿದೆ ಎಂದರು. ಪ್ರಸ್ತುತ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್‌ನಲ್ಲಿರುವ ಅತ್ಯಂತ ಕಡು ಬಡವರನ್ನು ಗುರುತಿಸಿ ಆಹಾರದ ಕಿಟ್ ವಿತರಣೆ ಮಾಡಲು ಕ್ರಮ ಕೈಗೊಳ್ಳ ಲಾಗಿದೆ. ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಅಗತ್ಯ ನೆರವು ನೀಡಲು ತಮ್ಮ ಟ್ರಸ್ಟ್ ಯಾವಾಗಲೂ ಸಿದ್ದ ಇದೆ. ಕೊರೋನಾ ವಿರುದ್ದದ ಹೋರಾಟದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯ ದಾನಿಗಳು ನೀಡಿದ ನೆರವಿನಿಂದ ಜಿಲ್ಲೆಯಲ್ಲಿನ ನಿರಾಶ್ರಿತರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ಅಗತ್ಯವಿದ್ದ ಸೌಲಭ್ಯ ಒದಗಿಸಲು ಸಾದ್ಯವಾಗಿದೆ. ದಾನಿಗಳು ಉದಾರವಾಗಿ ನೆರವು ನೀಡಿ ದ್ದರಿಂದ ಜಿಲ್ಲಾಡಳಿತದ ಹಣ ಬಳಸುವ ಅಗತ್ಯವೇ ಕಂಡು ಬಂದಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ದಲ್ಲಿ ಸವಿತಾ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮೇಷ ರಾಶಿ: ಸೃಜನಶೀಲ ಆರ್ಥಿಕತೆಯಿಂದ ಲಾಭ ಹೊಂದುವಿರಿ. ನಿಮಗೆ ಕಮಿಷನ್ ವ್ಯವಹಾರದಿಂದ ಹಣಕಾಸು ಹೆಚ್ಚಳವಾಗುತ್ತದೆ. ತಲೆ ನೋವು ಉಂಟಾಗುತ್ತದೆ. ದಾನ ಮಾಡುವುದರಿಂದ ಜೀವನದಲ್ಲಿ ಪ್ರಗತಿ. ವೃಷಭ ರಾಶಿ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಸಂಬಂಧಿಕರು ನಿಮ್ಮ ವೈವಾಹಿಕ ಜೀವನಕ್ಕೆ ಬಂಗ ತರಬಹುದು. ಹಣ ನಿಮ್ಮನ್ನು ಅರಸುತ್ತ ಬರುತ್ತದೆ. ಅನಗತ್ಯ ಖರ್ಚುಗಳಿಗೆ ನಿಯಂತ್ರಣ ಹೇರುವುದು ಒಳಿತು. ಮಿಥುನ ರಾಶಿ: ನೀವು ಆತಂಕವನ್ನು ಎದುರಿಸುತ್ತಿರಿ. ಈ ದಿನ ನೀವು ಧೈರ್ಯದಿಂದ ಇರುವುದು ಅವಶ್ಯಕವಾಗಿದೆ. ಧೈರ್ಯ ಕಳೆದುಕೊಳ್ಳಬೇಡಿ. ಕಿರಿಯ ವ್ಯಕ್ತಿ ಸಲಹೆಯನ್ನು ನೀಡಿದರೆ ದಿಕ್ಕರಿಸಬೇಡಿ. ಕಟಕ ರಾಶಿ: ಈ ದಿನ ನೀವು ಮಾನಸಿಕವಾಗಿ ಅತ್ಯಂತ ದುರ್ಭಲರಾಗುವಿರಿ. ನಿಮ್ಮ ಭವಿಷ್ಯಕ್ಕೆ ಆರ್ಥಿಕ ಯೋಜನೆ ಮಾಡಲು ಉತ್ತಮ ದಿನವಾಗಿದೆ. ಇದು ನಿಮ್ಮನ್ನು ಯಶಸ್ಸಿನೆಡೆಗೆ ಕರೆದೊಯ್ಯುತ್ತದೆ. ಸಿಂಹ ರಾಶಿ: ಸಹೋದರ, ಸಹೋದರಿಯಿಂದ ಆರ್ಥಿಕ ನೆರವು ಪಡೆಯಬಹುದು. ನಿಮ್ಮ ಸಂಗಾತಿಯ ಆರೋಗ್ಯವು ನಿಮ್ಮನ್ನು ಚಿಂತೆಗೆ ದೂಡಬಹುದು. ನೀವು ಸಂತೋಷ ನೀಡುವ ಮೂಲಕ ದಿನವನ್ನು ಕಳೆಯುವಿರಿ. ಕನ್ಯಾ ರಾಶಿ: ನೀವು ಈ ದಿನ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಆಸಕ್ತಿ ಹೊಂದಿರುವ ವಿಷಯದಲ್ಲಿ ತೊಡಗಿಕೊಳ್ಳಿ. ಇಲ್ಲಸಲ್ಲದ ಚಾಡಿ ಹೇಳುವವರ ಮಾತಿಗೆ ಕಿವಿಕೊಡಬೇಡಿ. ಶತ್ರುಗಳಿಂದ ಅಪಜಯ. ಪ್ರಯಾಣಕ್ಕೆ ಅಡೆತಡೆ ಉಂಟಾಗುತ್ತದೆ. ತುಲಾ ರಾಶಿ: ನಿಮ್ಮ ಹವ್ಯಾಸಗಳನ್ನು ಮುಂದುವರೆಸುವುದು ಉತ್ತಮ. ಲಾಭ ಪ್ರಮಾಣ ಕುಂಟಿತ. ನಿಮ್ಮ ತಂದೆ, ಹಿರಿಯರ ಆಶೀರ್ವಾದ ಪಡೆಯಿರಿ. ಕುಟುಂಬದ ನಡುವೆ ಸಮಯ ಕಳೆಯುವುದು ಉತ್ತಮ. ನಿಮ್ಮ ದುಃಖ ಮಂಜುಗಡ್ಡೆ ಕರಗಿದ ಹಾಗೆ ಕರಗುತ್ತದೆ. ವೃಶ್ಚಿಕ ರಾಶಿ: ಸಂತೋಷದ ಸುದ್ದಿ ನಿಮ್ಮನ್ನು ಹುಡುಕಿಕೊಂಡು ಬರುವುದು. ವಿದೇಶದ ವ್ಯಾಮೋಹ ಹೊಂದಿದವರಿಗೆ ಹಣಕಾಸಿನಲ್ಲಿ ತೊಂದರೆಯಾಗಬಹುದು. ನಿಮ್ಮ ಕುಟುಂಬದೊಂದಿಗೆ ಇಡೀ ದಿನವನ್ನು ಕಳೆಯುವುದು ಉತ್ತಮ. ಬೇಜವಾಬ್ದಾರಿಯಿಂದ ನೋವನ್ನು ಅನುಭವಿಸುವಿರಿ. ಧನು ರಾಶಿ: ನಿಮ್ಮ ಮನಸ್ಸು ಪ್ರಶಂತವಾಗಿರುತ್ತದೆ. ಆಲಸ್ಯ ಪತನವನ್ನು ತಂದೊಡ್ಡಬಹುದು ಎಚ್ಚರವಿರಲಿ. ಕಫ, ಶೀತ, ಅಜೀರ್ಣ ಸಮಸ್ಯೆ ಉಂಟಾಗಬಹುದು. ಧ್ಯಾನ, ಜಪ ಮಾಡುವುದರಿಂದ ಎಲ್ಲ ಪರಿಹಾರ ದೊರೆಯುತ್ತದೆ. ಮಕರ ರಾಶಿ: ನಿಮ್ಮ ದಿನದಲ್ಲಿ ತುಂಬಾ ಆತಂಕಗಳು ಬರಬಹುದು. ವ್ಯಾಪಾರ ನಷ್ಟವಾಗಿರಲಿದೆ. ಹಣದ ಪ್ರಾಮುಖ್ಯತೆ ತಿಳಿದುಕೊಳ್ಳಲು ಮುಖ್ಯವಾದ ದಿನ. ಹಣಕಾಸಿನ ಅಗತ್ಯ ಉಂಟಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಗಮನಹರಿಸಬೇಕು. ಕುಂಭ ರಾಶಿ: ನಿಮ್ಮ ಪ್ರಗತಿ ನಿಶ್ಚಿತವಾಗಿದೆ. ಹಣಕಾಸಿನ ಸ್ಥಿತಿಯು ಸುಧಾರಿಸುತ್ತದೆ. ಹಲವು ದಿನಗಳಿಂದ ಸ್ಥಗಿತಗೊಂಡ ಕಾರ್ಯಗಳು ಪುನಃ ಆರಂಭವಾಗುವವು. ಈ ದಿನವು ನಿಮಗೆ ಶುಭ ತರುವುದು. ಮೀನ ರಾಶಿ: ಇಡೀ ಕುಟುಂಬ ಸಂತೋಷದಿಂದ ಇರುವಿರಿ. ಮಾನಸಿಕ ವೇದನೆ ನಿಮ್ಮನ್ನು ಕಾಡಬಹುದು. ಅನಾರೋಗ್ಯಕ್ಕೆ ತುತ್ತಾಗುವ ಸಂಬವ ಕಾಣುತ್ತಿದೆ. ಮಾಟ-ಮಂತ್ರ, ತಂತ್ರ ಭೀತಿ ನಿಮ್ಮನ್ನು ಕಾಡಬಹುದು. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
“ಆಕೃತಿ” ಉದಯಟಿವಿಯಲ್ಲಿ ಆಗಸ್ಟ್ ೨೪ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೯:೩೦ಕ್ಕೆ ಹೊಸದಾಗಿ ಪ್ರಾರಂಭವಾಗುತ್ತಿರವ ಹೊಚ್ಚ ಹೊಸ ಧಾರವಾಹಿ. ಕನ್ನಡದ ಮೊದಲ ಸ್ಯಾಟಿಲೇಟ್ ವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉದಯ ಟಿವಿ ಕಾಲಕ್ಕೆ ತಕ್ಕಂತೆ ಕ್ರಿಯೇಟಿವಿಟಿ ಮತ್ತು ಟೆಕ್ನಾಲಜಿಯಲ್ಲಿ ಹೆಸರುವಾಸಿಯಾಗಿ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಕೌಟಂಬಿಕದ ಜೊತೆಗೆ ಹಾರಾರ್‌ಗೆ ಸಂಬಂಧ ಪಟ್ಟ ಕಥೆಯನ್ನು ಹೆಣೆದು ಮತ್ತಷ್ಟು ಮನರಂಜಿಸಲು ಬರುತ್ತಿರುವ ಕಥೆಯೇ ಆಕೃತಿ. ದಿವ್ಯ ಮಹಾತ್ವಾಕಾಂಕ್ಷಿ ಹೆಣ್ಣು. ಅವಳ ತಂದೆ ಪ್ರಜ್ವಲ್, ತಾಯಿ ಚೈತ್ರ ಮತ್ತು ತಮ್ಮ ಸುಜಯ್. ಇವರ ಕುಟುಂಬ ಚಿಕ್ಕದಾಗಿದ್ದು, ಇವರ ಮನೆಯಲ್ಲಿ ಸಂತೋμ ಮನೆಮಾಡಿದೆ. ದಿವ್ಯಾಳ ಕುಟುಂಬ ಸಕಲೇಶಪುರದಲ್ಲಿ ಒಂದು ಹಳೆ ಫಾರ್ಮ್ ಹೌಸ್ ಕೊಂಡುಕೊಳ್ಳುತ್ತಾರೆ. ಆ ಮನೆಯ ಅಂಗಳದಲ್ಲಿ ಒಂದು ಮರ, ಆ ಮರದಲ್ಲಿ ಒಂದು ಆಕೃತಿ, ಅದಕ್ಕೆ ಒಂದು ಹಿನ್ನಲೆ ಇದೆ. ಆ ಆಕೃತಿಯಿಂದ ಸಂತೋμತುಂಬಿದ್ದ ಕುಟುಂಬ ನಾನಾ ವಿಚಿತ್ರ ಘಟನೆಗಳನ್ನು ಎದುರಿಸುತ್ತಾ ಹಲವಾರು ಅನಿರೀಕ್ಷಿತ ತಿರುವುಗಳಿಗೆ ಗುರಿಯಾಗುತ್ತದೆ. ಇದು ಕಾಕತಾಳಿಯ ಅಲ್ಲ. ಇದಕ್ಕೆ ಕಾರಣ ಇದೆ. ಆ ಕಾರಣ ಏನು? ಆ ಆಕೃತಿಯ ಹಿನ್ನಲೆ ಏನು? ಇವರ ಕುಟುಂಬಕ್ಕೂ ಮನೆಗೂ ಏನೂ ಸಂಬಂಧ? ದಿವ್ಯಾ ಅಪಾಯಗಳಿಂದ ತನ್ನ ಕುಟುಂಬವನ್ನು ಹೇಗೆ ಕಾಪಾಡುತ್ತಾಳೆ ಎಂಬುದೇ “ಆಕೃತಿ” ಕಥೆಯ ಹಂದರ. ಇದೊಂದು ವಿಭಿನ್ನ ಕಥೆಯಾಗಿದ್ದು, ಇದುವರೆಗೂ ಕಿರುತೆರೆಯಲ್ಲಿ ನೋಡಿರದಂತಹ ಚಿತ್ರಕಥೆಯ ಶೈಲಿ ಕಿರುತೆರೆ ಲೋಕಕ್ಕೆ ಹೊಸದಾಗಿದೆ ಅμ ಅಲ್ಲದೆ ಸಕಲೇಶಪುರ ಸುತ್ತಮುತ್ತ ಪ್ರದೇಶಗಳಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಈ ಧಾರಾವಾಹಿಗೆ ಹೊಸಪರಿಚಯವಾಗಿ ತನ್ವಿರಾವ್, ನೇತ್ರಾವತಿ ಜಾದವ್, ಬಾಬಿ, ನಟಿಸುತ್ತಿದ್ದಾರೆ. ಕಿರುತೆರೆ ನಟ ಪವನ್, ಪ್ರಖ್ಯಾತ್, ತನುಜ, ಇವರುಗಳು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು ಇವರ ಜೊತೆ ಪ್ರಮುಖ ಪಾತ್ರದಲ್ಲಿ ಶ್ರೀಧರ್, ಉμ ಭಂಡಾರಿ ಹೀಗೆ ಹಲವಾರು ಜನಪ್ರಿಯ ತಾರೆಗಳ ಸಮಾಗಮ ಮಾಡಲಾಗಿದೆ. ಈ ಧಾರವಾಹಿಯನ್ನು ಪ್ರಖ್ಯಾತ ಸಿನಿಮಾ ನಿರ್ದೇಶಕರಾದ ಕೆ.ಎಂ. ಚೈತನ್ಯ ನಿರ್ಮಾಣ ಮಾಡುತ್ತಿದ್ದಾರೆ ಅವರಜೊತೆಯಾಗಿ ಹರಿದಾಸ್.ಪಿ ಕೆ.ಜಿ.ಎಫ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ಮತ್ತು ನಿರ್ದೇಶನ – ಎಂ. ಕುಮಾರ್, ಕಥೆ ಮತ್ತು ಚಿತ್ರಕಥೆ - ಸಿಧ್ಧಾರ್ಥ, ಸಂಭಾμಣೆ - ಮೃಗಶಿರ ಶ್ರೀಕಾಂತ್, ಶೀರ್ಷಿಕೆಗೀತೆ–ಗುರುಕಿರಣ್. ಸಾಹಿತ್ಯ–ಕವಿರಾಜ್. ಗಾಯಕರು–ಅನುರಾಧಾಭಟ್, ಸಂಕಲನ–ಗುರುರಾಜ್ ಬಿ ಕೆ ಹೀಗೆ ಹಲವಾರು ನಿಪುಣರ ತಂಡ ಈ ಧಾರಾವಾಹಿಯಲ್ಲಿದೆ. “ಆಕೃತಿ” ಧಾರಾವಾಹಿಯು ಇದೇ ಅಗಷ್ಟ್ ೨೪ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೯.೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ನಿರುದ್ಯೋಗಿಗಳು ಸುಮ್ಮನೆ ಕುಳಿತಿದ್ದರೂ ಸಹ ಒಂದು ಕೆಲಸದಲ್ಲಿ ಬ್ಯೂಸಿ ಆಗಿರುತ್ತಾರೆ. ಅದು ಬೇರಾವುದು ಅಲ್ಲಾ.. ಲೇಟೆಸ್ಟ್ ಸ್ಮಾರ್ಟ್‌ಫೋನ್ ಹಿಡಿದು ಇಂಟರ್ನೆಟ್ ಬಳಸುತ್ತಾ ಬ್ರೌಸಿಂಗ್ ನಲ್ಲಿ ತೊಡಗುವುದು. ಹಾಗೆ ಬ್ರೌಸ್ ಮಾಡುತ್ತಾ ಕನ್ನಡ ಅಡ್ವೈಜರ್(www.kannadaadvisor.com) ವೆಬ್‌ಸೈಟ್ ಗೆ ಭೇಟಿ ನೀಡಿ. ಯಾಕೇ? ಅನ್ನೋ ಪ್ರಶ್ನೆಗೆ ಉತ್ತರ ಕೆಳಗಿನಂತಿದೆ. ಯಾಕಂದ್ರೆ ನಿರುದ್ಯೋಗಿಗಳು ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಲು, ಉದ್ಯಮಿಗಳಾಗಲು ಸರ್ಕಾರ ನೀಡುವ ಸಹಾಯಕ ಯೋಜನೆಗಳನ್ನು ನಿಮಗೆ ಅಪ್‌ಡೇಟ್ ಮಾಡುತ್ತಿರುತ್ತೀವೆ. ಹಾಗೂ ಆ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವುದು ಹೇಗೆ? ಎಂಬುದನ್ನು ಸರಳವಾಗಿ ತಿಳಿಸುತ್ತೇವೆ. ಅಂದಹಾಗೆ ಕನ್ನಡ ಅಡ್ವೈಜರ್ ಇಂದಿನ ಲೇಖನದಲ್ಲಿ ಸರ್ಕಾರದ ‘ಐರಾವತ’ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ‘ಐರಾವತ’ – ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಜಾರಿಗೊಳಿಸಿರುವ ಒಂದು ಟ್ಯಾಕ್ಸಿ ಯೋಜನೆ. ‘ಐರಾವತ’ ಯೋಜನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಆದಿ ಜಾಂಭವ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಮೂಲಕ ಊಬರ್ ಸಂಸ್ಥೆಯ ಸಹಯೋಗದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಟ್ಯಾಕ್ಸಿ ಸೌಲಭ್ಯ ನೀಡಲು ಉದ್ಧೇಶಿಸಿರುವ ಯೋಜನೆ. ಈ ಯೋಜನೆಯ ಸೌಲಭ್ಯ ಪಡೆಯಲು ಆಯ್ಕೆಯಾದ ಫಲಾನುಭವಿಗಳು ಊಬರ್ ಪ್ಲಾಟ್‌ಫಾರ್ಮ್‌ನಲ್ಲಿ ತರಬೇತಿ ಪಡೆದು ವಾಹನ ಚಾಲನ ವಹಿವಾಟನ್ನು ನಡೆಸಬೇಕು. ಪ್ರತಿ ಫಲಾನುಭವಿಗೆ ಸ್ವಂತ ಹಣಕಾಸು ವ್ಯವಸ್ಥೆ ಮಾಡಿಕೊಂಡಲ್ಲಿ ಸಹಾಯಧನವನ್ನು ವಾಹನ ಖರೀದಿಗೆ ಬಿಡುಗಡೆ ಮಾಡಲು ಅವಕಾಶ ಇರುತ್ತದೆ. ‘ಐರಾವತ’ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ಪ್ರಸ್ತುತ ಮುಗಿದಿದ್ದು, ಮುಂದಿನ ಅವಧಿಯಲ್ಲಿ ಅರ್ಜಿ ಆಹ್ವಾನಿಸಿದಾಗ ಕನ್ನಡ ಅಡ್ವೈಜರ್ ಮಾಹಿತಿ ನೀಡಲಾಗಿದೆ. ಆಗ ಈ ಯೋಜನೆಯ ಸದುಪಯೋಗ ಪಡೆಯಲು ಏನೆಲ್ಲಾ ಅರ್ಹತೆಗಳು ಬೇಕು, ಪಡೆಯುವುದು ಹೇಗೆ ಎಂದು ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ Karnataka Social Welfare Department launched ‘Airavata’ scheme to provide jobs for unemploye youths from the SC, ST. Read more here..
ಸಾಮಾಜಿಕ ಜಾಲತಾಣದಲ್ಲಿ(Social Media) ನಕಲಿ(Fake) ಖಾತೆ ಸೃಷ್ಟಿಸಿ ಮುಸ್ಲಿಂ(Muslim) ವ್ಯಕ್ತಿಯಂತೆ ಬಿಂಬಿಸುತ್ತಾ ಆಕ್ರೋಶ ಭರಿತ ಪೋಸ್ಟ್ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾತಾಳಾಕ್ಕಿಳಿದ ಜ಼ುಕರ್ ಬರ್ಗ್, ಗಗನಕ್ಕೇರಿದ ಬಿಜೋಸ್! ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನ ಸ್ಟಾಕ್ ದಾಖಲೆಯೂ ಒಂದೇ ದಿನದಲ್ಲಿ ಕುಸಿತವನ್ನು ಗುರುತಿಸಿದ ಕಾರಣದಿಂದ ಫೇಸ್ಬುಕ್ ಇಂದಿನ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಗುರುವಾರ $ 29 ಶತಕೋಟಿ ನಿವ್ವಳ ಮೌಲ್ಯವನ್ನು ಕಳೆದುಕೊಂಡಿದ್ದಾರೆ ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್‌ ಕಳೆದುಕೊಂಡ ಮಾರ್ಕ್‌ ಜುಕರ್‌ಬರ್ಗ್‌ ವಾಷಿಂಗ್‌ಟನ್ ಅ 5 : ಸೋಮವಾರ ಸಂಜೆ ಕೆಲವು ಗಂಟೆಗಳ ಕಾಲ ಫೇಸ್‌ಬುಕ್, ವಾಟ್ಸಾಪ್, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಂಗಳು ಕೆಲಸ ನಿರ್ವಹಿಸದ ಕಾರಣ ಫೇಸ್‌ಬುಕ್‌ ಸಂಸ್ಥಾಪಕರಾದ ಮಾರ್ಕ್ ಜುಕರ್‌ಬರ್ಗ್ ಬರೋಬ್ಬರಿ 6 ಬಿಲಿಯನ್ ಡಾಲರ್‌ ಕಳೆದುಕೊಂಡಿದ್ದಾರೆ. ಫೇಸ್‌ಬುಕ್‌ ಒಡೆತನದ ಸೋಷಿಯಲ್‌ ಮೀಡಿಯಾ ವೇದಿಕೆಗಳ ಸೇವೆಯಲ್ಲಿ ಸೋಮವಾರ ವ್ಯತ್ಯಯವಾಗಿದ್ದರಿಂದ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೆ ಸುಮಾರು 6 ಬಿಲಿಯನ್‌ ಡಾಲರ್‌ (44,728 ಕೋಟಿ ರೂ.) ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ. ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸ್ಥಗಿತ ಹಿನ್ನಲೆ ಬರೋಬ್ಬರಿ 160 ಮಿಲಿಯನ್ ಡಾಲರ್‌ ನಷ್ಟ ಈ ನಡುವೆ ನೆಟ್​ಬ್ಲಾಕ್ಸ್​ನ ದ ಕಾಸ್ಟ್​ ಆಫ್​ ಶಟ್​ಡೌನ್​ ಟೂಲ್​ (COST) ಫೇಸ್​ಬುಕ್​, ವಾಟ್ಸಾಪ್ ​ ​,ಇನ್ಟ್ಸಾಗ್ರಾಮ್ ​ನಿಂದ ಜಗತ್ತಿನ ಆರ್ಥಿಕತೆಗೆ ಗಂಟೆಯೊಂದರಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿದೆ. ಕಾಸ್ಟ್​ನ ಒಂದು ಅಂದಾಜಿನ ಪ್ರಕಾರ ಜಾಗತಿಕ ಆರ್ಥಿಕತೆಗೆ ಗಂಟೆಗೆ ಸುಮಾರು 160 ಮಿಲಿಯನ್​ ಡಾಲರ್ ನಷ್ಟ ಆಗಿದೆ. ಇದು ಇನ್ನೂ ಮುಂದುರಿಯುತ್ತಿದೆ. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್​​ಬುಕ್​ನ ಷೇರು ಕೂಡ ಶೇ. 6 ಕುಸಿದಿದೆ.
ಚಿತ್ರರಂಗ ಅನ್ನೋದು ತೆರೆಯ ಮೇಲಷ್ಟೇ ಬಣ್ಣದ ಬದುಕಲ್ಲ.. ಸ್ವಲ್ಪ ಎಡವಟ್ಟಾದರೂ ನಿಜ ಜೀವನವೂ ಬಣ್ಣದಂತೆ ಕರಗಿ ಹೋಗುತ್ತದೆ.. ಹೌದು ಕಲಾವಿದರೆಲ್ಲಾ ಶ್ರೀಮಂತರು ಎನ್ನುವ ಒಂದು ತಪ್ಪು ಅಭಿಪ್ರಾಯ ಬಹುತೇಕರಲ್ಲಿದೆ.. ಆದರೆ ಅವರಿಗೂ ಕಷ್ಟಗಳಿರುತ್ತವೆ ಅನ್ನೋದಕ್ಕೆ ದೊಡ್ಡ ದೊಡ್ಡ ಸ್ಟಾರ್ ನಟರುಗಳೇ ಕಷ್ಟದ ಸನ್ನಿವೇಶಗಳನ್ನು ಅದರಲ್ಲೂ ಆರ್ಥಿಕ ತೊಂದರೆಯನ್ನು ಅನುಭವಿಸಿರುವುದೇ ಸಾಕ್ಷಿ.. ಅದೇ ರೀತಿ ನವರಸ ನಾಯಕ ಜಗ್ಗೇಶ್ ಅವರೂ ಸಹ ತಮ್ಮ ಸಾಲ ತೀರಿಸುವ ಸಲುವಾಗಿ ಮನೆಯನ್ನೇ ಮಾರಿದ್ದರು.. ಅದರಲ್ಲೂ ಆ ಮನೆ ಇಂದು 16 ಲಕ್ಷ ಬಾಡಿಗೆ ಪಡೆಯುತ್ತಿರುವ ಮನೆಯಾಗಿದೆ.. ಹೌದು ಬಹಳ ಹಿಂದೆ ಮೇಕಪ್ ಎಂಬ ಸಿನಿಮಾ ಬಂದಿತ್ತು.. ಆ ಸಿನಿಮಾದಲ್ಲಿ ಜಗ್ಗೇಶ್ ಅವರು ನಾಯಕನ ಪಾತ್ರದ ಜೊತೆಗೆ ದೊಡ್ಡಮ್ಮನ ಪಾತ್ರವನ್ನೂ ಮಾಡಿದ್ದರು.. ಆ ಸಿನಿಮಾಗೆ ಸ್ವತಃ ಜಗ್ಗೇಶ್ ಅವರೇ ನಿರ್ಮಾಪಕರಾಗಿದ್ದರು.. ಲಾಭವಿರಲಿ ಹಾಕಿದ್ದ ಬಂಡವಾಳವೂ ಬರಲಿಲ್ಲ.. ಸಿನಿಮಾ ವಿಭಿನ್ನವಾಗಿತ್ತು ಎಂದು ಹೆಸರು ತಂದುಕೊಟ್ಟಿತಾದರೂ ಹಣ ಸಂಪಾದನೆಯಾಗಲಿಲ್ಲ.. ಸಿನಿಮಾಗೆ ಒಟ್ಟು ಒಂದೂ ವರೆ ಕೋಟಿ ಬಂಡವಾಳ ಹಾಕಿದ್ದರು.. ಅದರಲ್ಲಿ 70 ಲಕ್ಷ ಹಣ ಕಲೆಕ್ಷನ್ ಆಯಿತು.. ಆದರೆ ಸಿನಿಮಾಗಾಗಿ 75 ಲಕ್ಷ ಸಾಲ ಮಾಡಿಕೊಂಡಿದ್ದು ಹಾಗೆ ಉಳಿದಿತ್ತು.. ಕೊನೆಗೆ ಆ ಸಾಲವನ್ನು ತೀರಿಸಲು ಬೇರೆ ದಾರಿ‌ ಕಾಣದೆ ಕೊನೆಗೆ ತಮ್ಮ ಮನೆಯನ್ನೇ ಮಾರಿದರು.. ಆ ಮನೆ ಇದೀಗ 35 ಕೋಟಿ ಬೆಲೆ ಬಾಳುತ್ತಿದೆ.. ಅಷ್ಟೇ ಅಲ್ಲ ಆ ಮನೆಯನ್ನು ಜಗ್ಗೇಶ್ ಅವರ ಸ್ನೇಹಿತರೇ ಕೊಂಡುಕೊಂಡಿದ್ದರು.. ಇದೀಗ ಆ ಮನೆಯನ್ನು ಬಾಡಿಗೆಗೆ ಬಿಟ್ಟಿದ್ದು 16 ಲಕ್ಷ ಬಾಡಿಗೆ ದುಡಿಯುತ್ತಿದೆಯಂತೆ.. ಈ ಬಗ್ಗೆ ಸ್ವತಃ ಜಗ್ಗೇಶ್ ಅವರೇ ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಮೇಕಪ್ ಸಿನಿಮಾದ ಪೋಸ್ಟರ್ ಜೊತೆಗೆ “ವಿಭಿನ್ನ ಚಿತ್ರ ಕನ್ನಡಿಗರಿಗೆ ನೀಡಬೇಕು. ಹಾಗೂ ಹೊರ ರಾಜ್ಯದವರಿಗೆ ನನ್ನ ಪ್ರತಿಭೆ ನಿರೂಪಿಸಬೇಕು ಎಂದು ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ಮಾಡಿದ ಚಿತ್ರ.. ಆದರೆ ದೌರ್ಭಾಗ್ಯ.. 2002 ರಲ್ಲೇ 75 ಲಕ್ಷ ಕಳೆದುಕೊಂಡೆ.. ಸಾಲ ತೀರಿಸಲು ಅಂದು ಮಾರಿದ ಮನೆ.. ಇಂದು 35 ಕೋಟಿ ಆಸ್ತಿ.. ಅದ ಕೊಂಡ ನನ್ನ ಮಿತ್ರನಿಗೆ ಇಂದು 16 ಲಕ್ಷ ಬಾಡಿಗೆ ಬರುತ್ತಿದೆ.. ಕಥೆವ್ಯಥೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಜೊತೆಗೆ ಅದು ನನ್ನ ಬ್ಯಾಡ್ ಲಕ್ ಅಲ್ಲ.. ಅದು ನನಗೆ ದೇವರು ಕಲಿಸಿದ ಪಾಠ.. ಅದೇ ವರ್ಷ ನನಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೂಡ ಸಿಕ್ಕಿತು.. ನಾನು ಕಳೆದದ್ದನ್ನೆಲ್ಲಾ ಅದೇ ವರ್ಷ ಸಂಪಾದಿಸಿದೆ.. ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ.. ಹಾಗೂ ಕಾಸಿದ್ದವನೇ ಬಾಸು ಸಿನಿಮಾ ಎಲ್ಲವನ್ನು ಮರಳಿ‌ ತಂದುಕೊಟ್ಟಿತು.. ಪ್ರತಿಯೊಂದು ಅನುಭವವೂ ಜೀವನದ ಪಾಠ ಕಲಿಸುತ್ತದೆ.. ಆಗದು ಎಂದು ಕೈಕಟ್ಟಿ ಕೂರುವ ಜಯಮಾನ ನನ್ನದಲ್ಲ.. ಎಂದಿದ್ದಾರೆ..
ಬೆಂಗಳೂರು,ಜೂ.29: ಕೆಲ‌ವು ಗುಂಪುಗಳು ಕರ್ನಾಟಕ ಹಾಗೂ ಕೇರಳ ನಡುವಿನ ಸಂಬಂಧವನ್ನು ಕಲಕಲು ಪ್ರಯತ್ನಿಸುತ್ತಿರುವುದು ಖೇದಕರ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಕೆಲವು ಊರುಗಳ ಹೆಸರನ್ನು ಮಲಯಾಳಂಗೆ ಬದಲಿಸಲಾಗಿದೆ ಎಂಬ ಕುರಿತು ಉಂಟಾಗಿರುವ ಗೊಂದಲಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂಗೆ ಪತ್ರಬರೆದಿರುವ ಅವರು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಭೌಗೋಳಿಕವಾದ ಗಡಿರೇಖೆ ಇದ್ದರೂ ಎರಡೂ ರಾಜ್ಯಗಳ ನಡುವೆ ಸಾಂಸ್ಕೃತಿಕವಾದ ಅವಿನಾಭಾವ ಸಂಬಂಧ ಇದೆ. ಗಡಿ ಪ್ರದೇಶದಲ್ಲಿ ಕನ್ನಡಿಗರು ಮತ್ತು ಕೇರಳಿಗರು ಸೋದರ-ಸೋದರಿಯರಂತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಕಾಸರಗೋಡಿನ ಸ್ಥಳೀಯ ಸಂಸ್ಥೆಗಳು ಅಲ್ಲಿನ ಕೆಲವು ಹಳ್ಳಿಗಳ ಹೆಸರುಗಳನ್ನು ಕನ್ನಡ ಮತ್ತು ತುಳು ಭಾಷೆಯಿಂದ ಮಲೆಯಾಳಿ ಭಾಷೆಗೆ ಬದಲಾಯಿಸುವ ನಿರ್ಣಯ ಕೈಗೊಂಡಿರುವುದು ವಿಷಾದನೀಯ ಬೆಳವಣಿಗೆ. ಸಾಮಾನ್ಯವಾಗಿ ಗ್ರಾಮಗಳ ಹೆಸರಿನ ಜೊತೆ ಅಲ್ಲಿನ ಸ್ಥಳೀಯರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೆಸರಿನ ಬದಲಾವಣೆಯಿಂದ ತಾಯ್ನಾಡಿನ ಜೊತೆಗಿನ ಅವರ ಕರುಳಬಳ್ಳಿಯ ಸಂಬಂಧವನ್ನು ಕಿತ್ತುಕೊಂಡ ಹಾಗಾಗುತ್ತದೆ. ಹೀಗಿದ್ದರೂ ಕೆಲ ಗುಂಪುಗಳು ಈ ಸಂಬಂಧವನ್ನು ಕಲಕಲು ಪ್ರಯತ್ನಿಸುತ್ತಿರುವುದು ಖೇದಕರ ಸಂಗತಿ. ಮಂಜೇಶ್ವರದ ಕನ್ನಡಪ್ರೇಮಿ ಶಾಸಕ ಎ.ಕೆ.ಎಂ.ಆಶ್ರಫ್ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಹೆಸರು ಬದಲಾವಣೆಯ ಪ್ರಸ್ತಾಪ ಇಲ್ಲವೆಂದು ತಿಳಿಸಿರುವುದು ಸ್ವಾಗತಾರ್ಹ ಎಂದಿರುವ ಅವರು, ಕೇರಳದ ಸನ್ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಿ ಉಭಯ ರಾಜ್ಯಗಳ ನಡುವಿನ ಸಂಬಂಧವನ್ನು ಹಾಳುಗೆಡಹುವ ಪ್ರಯತ್ನವನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕೆಂದು ನಾನು ಒತ್ತಾಯಿಸಿದ್ದಾರೆ. ಕೇರಳದ ಸನ್ಮಾನ್ಯ ಮುಖ್ಯಮಂತ್ರಿಗಳಾದ @vijayanpinarayi ಅವರು ಈ ಬಗ್ಗೆ ತಕ್ಷಣ ಗಮನ ಹರಿಸಿ ಉಭಯ ರಾಜ್ಯಗಳ ನಡುವಿನ ಸಂಬಂಧವನ್ನು ಹಾಳುಗೆಡಹುವ ಪ್ರಯತ್ನವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕೆಂದು ನಾನು ಒತ್ತಾಯಿಸುತ್ತೇನೆ. 5/5#ಕರ್ನಾಟಕ pic.twitter.com/10OSgUUuhL — Siddaramaiah (@siddaramaiah) June 29, 2021 Latest News ರಾಜ್ಯ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು! ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ. ರಾಜಕೀಯ ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು, ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ರಾಜಕೀಯ ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್ ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ರಾಜ್ಯ ಊಟ ಕೊಡಿಸಲು ಹಣವಿಲ್ಲವೆಂದು ತನ್ನ 2 ವರ್ಷದ ಮಗಳನ್ನು ಕೊಂದ ಬೆಂಗಳೂರಿನ ಟೆಕ್ಕಿ! ಆರೋಪಿ ಮತ್ತು ಆತನ ಮಗಳು ನವೆಂಬರ್ 15 ರಂದು ನಾಪತ್ತೆಯಾಗಿದ್ದು, ನಂತರ ಮಗುವಿನ ತಾಯಿ ಭವ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೃಷಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದ ರೈತ ರವಿಲೋಚನ ಇವರು ಬರಡು ಭೂಮಿಯಲ್ಲೂ ಫಸಲು ತೆಗೆಯುವ ಕೃಷಿ ಡಾಕ್ಟರ್ ಇದ್ದಂತೆ. ಎಷ್ಟೋ ರೈತರ ಸೊರಗಿದ ಹೊಲ, ತೋಟಗಳನ್ನು ತಮ್ಮದೇ ತಂತ್ರದಿಂದ ನಳ ನಳಿಸುವಂತೆ ಮಾಡಿದ್ದಾರೆ. ಇವರ ತೋಟವನ್ನು ವೀಕ್ಷಿಸಲು ದಿನಾಂಕ 01-03-2021ರಂದು ಸಿದ್ದಾಪುರ ತಾಲೂಕಿನ ಹುಲ್ಕುತ್ರಿ ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ, ‘ಸಮಗ್ರ ಕೃಷಿ ಪದ್ಧತಿ’ ಅಳವಡಿಕೆಯಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಹಾಗೂ ಉತ್ಪಾದನಾ ಮಟ್ಟ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ನಾವಿನ್ಯಯುತ ತಾಂತ್ರಿಕತೆಗಳನ್ನು ಶ್ರೀ ರವಿಲೋಚನ ಮಡಗಾವಂಕರರಿಂದ ಪಡೆದುಕೊಂಡರು. ಶಾಲಾ ಮಕ್ಕಳು ಇವರ 5 ಎಕರೆ ಕೃಷಿ ಭೂಮಿಯಲ್ಲಿ ಬೆಳೆದ ವಿವಿಧ ಬಗೆಯ ಗಿಡಗಳನ್ನು ವೀಕ್ಷಿಸಿದರು. ಪ್ರಮುಖ ಬೆಳೆಯಾಗಿ ಅಡಿಕೆ ಬೆಳೆಯುವುದರೊಂದಿಗೆ ಸಮಗ್ರ ಕೃಷಿ ಪದ್ಧತಿ ಹಾಗೂ ಸಾವಯವ ಕೃಷಿಗೆ ಯಾವ ರೀತಿಯಲ್ಲಿ ಒತ್ತು ನೀಡಿದ್ದಾರೆ ಎಂಬುದನ್ನು ತಿಳಿದುಕೊಂಡರು. ಅವರ ತೋಟದಲ್ಲಿರುವ ವಿವಿಧ ಜಾತಿಯ ಕಾಳು ಮೆಣಸಿನ ಕಾಳುಗಳು, ಮಾವು, ಗೇರು, ತೆಂಗಿನ ತಳಿಗಳನ್ನು ಪರಿಚಯಿಸಿಕೊಂಡರು. ಅಲ್ಲದೇ ಬುಶ್ ಪೆಪ್ಪರ್, ಕೊಕೊ, ಹಲಸು, ಅಗಾರವುಡ್, ಸಿಲ್ವರ್ ಓಕ್, ಮಹಾಗನಿ, ಏಲಕ್ಕಿ, ಜಂಬೆ, ಅರಶಿಣ ಗಿಡಗಳು, ಜಾಯಿಕಾಯಿ, ಲವಂಗ, ದಾಲ್ಚಿನಿ, ಬಾಳೆಗಿಡ, ವಿವಿಧ ಜಾತಿಯ ಮೇವಿನ ಹುಲ್ಲುಗಳು, ತಿನ್ನುವ ಎಲೆ, ಪಪ್ಪಾಯಿ ಇನ್ನಿತರ ಬೆಳೆಗಳ ಕುರಿತು ಮಾಹಿತಿ ಪಡೆದರು. ವಿಶೇಷವಾಗಿ ಮಣ್ಣಿನ ಸಾರ ಸಂರಕ್ಷಿಸುವ ಸಲುವಾಗಿ ಜಮೀನಿನ ಬೆಳೆಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಅಳವಡಿಕೆಯ ವಿಧಾನ. ಅಡಿಕೆ ತೋಟದ ಮಧ್ಯೆ ಇರುವ ಕಾಲುವೆಗಳಲ್ಲಿ ಜೌಗು ತಡೆಗಟ್ಟಲು ಒಳಚರಂಡಿ ಮಾದರಿಯಲ್ಲಿ ಪೈಪ್‍ಗಳನ್ನು ಅಳವಡಿಸಿ ಮೇಲೆ ಬಿದ್ದ ನೀರು ಸಂಸ್ಕರಿಸಿ ಮುಖ್ಯ ಕಾಲುವೆ ಮುಖಾಂತರ ಹರಿದು ಹೋಗಲು ಇರುವ ವ್ಯವಸ್ಥೆ ಕುರಿತು. ಸಾವಯವ ಕೃಷಿಗಾಗಿ ಬಯೋಡೈಜಸ್ಟರ್ ಮೂಲಕ ಗೊಬ್ಬರ ಉತ್ಪಾದನೆ ಹಾಗೂ ಅಲ್ಲಿನ ದ್ರವ ಪದಾರ್ಥವನ್ನು ಸಂಸ್ಕರಿಸಿ ಹನಿ ನೀರಾವರಿ ಪದ್ಧತಿಯಿಂದ ಗಿಡಗಳ ಬುಡಕ್ಕೆ ಸಾಗಣೆ. ಕೃಷಿ ಯಂತ್ರೋಪಕರಣಗಳಾದ ಪವರ್ ಟಿಲ್ಲರ್, ಸೀಡ್ ಡ್ರಮ್, ವೀಡ್ ಕಟರ್, ಸೋಲಾರ್ ಡ್ರೆಯರ್, ಮೋಟೋಕಾರ್ಡ್, ಎಲೆಕ್ಟ್ರಿಕ್ ಸ್ಪ್ರೆಯರ್ ಬಗ್ಗೆ ಮಾಹಿತಿ ಪಡೆದರು. ಈ ಎಲ್ಲಾ ಸಂಗತಿಗಳನ್ನು ರವಿಲೋಚನ ಮಡಗಾವಂಕರರಿಂದ ಮಾಹಿತಿ ಪಡೆದರೆ ಈ ದಿನ ತೋಟಕ್ಕೆ ಭೇಟಿ ನೀಡಿದ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ತಜ್ಞರಾದ ಶ್ರೀ ಶಿವಶಂಕರ ಮೂರ್ತಿಯವರು ಮಣ್ಣಿನಿಂದ ಬರುವ ರೋಗಗಳು, ಹೊಸ ಮಾದರಿಯ ಟ್ರೈಕೊಡರ್ಮ್ ಕ್ಯಾಪ್ಸೂಲ್ ಹಾಗೂ ಮಣ್ಣಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಕ್ಯಾಪ್ಸೂಲ್ ಬಳಕೆಯ ಕುರಿತು ಪ್ರಾತ್ಯಕ್ಷತೆ ನೀಡಿದರು. ವಿವಿಧ ಬಗೆಯ ಜೀವಾಣು ಗೊಬ್ಬರಗಳ ಕುರಿತು ಮಾಹಿತಿ ನೀಡಿದರು. ಮಣ್ಣು ಪರೀಕ್ಷೆಗೆ ಮಾದರಿ ಮಣ್ಣನ್ನು ಹೇಗೆ ಸಂಗ್ರಹಿಸುವುದರ ಕುರಿತು ಪ್ರಾತ್ಯಕ್ಷತೆ ನೀಡಿದರು. ಕೊನೆಯಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರೈತರಾದ ರವಿಲೋಚನ ಮಡಗಾವಂಕರ ಅವರಿಗೆ ಸನ್ಮಾನಿಸುವುದರ ಮೂಲಕ ಗೌರವಿಸಿದರು. ಸ್ಥಳದಲ್ಲಿ ಬಿಳಗಿ ಗ್ರಾಮದ ರೈತರು ಹಾಗೂ ಮಾಜಿ ತಾಲೂಕ ಪಂಚಾಯತ ಉಪಾಧ್ಯಕ್ಷರಾದ ಶ್ರೀ ಪ್ರಸನ್ನ ಹೆಗಡೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮೇಷ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ ಆಗಬಹುದಾಗಿದೆ, ಮಾನಸಿಕ ವೇದನೆ, ಮನೋರೋಗ, ವಿಪರೀತ ಕೋಪ, ತಾಯಿ ಆರೋಗ್ಯದಲ್ಲಿ ಏರುಪೇರು, ತಾಯಿಯಿಂದ ನಿಂದನೆಗೆ ಒಳಗಾಗುವ ಸಾಧ್ಯತೆ ಇದೆ ಎಚ್ಚರವಿರಲಿ.. ವೃಷಭ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ದೇವತಾಕಾರ್ಯ ಮತ್ತು ಧರ್ಮಕಾರ್ಯಗಳಿಗೆ ಅಡೆತಡೆ, ಮನೋ ನಿಯಂತ್ರಣ ಇಲ್ಲದಿರುವುದು ಭಾಸವಾಗಲಿದೆ.. ಮಿಥುನ ರಾಶಿ: ಈ ರಾಶಿಯವರಿಗೆ ಇಂದಿನ ದಿನ ಆರ್ಥಿಕವಾಗಿ ಕುಂಠಿತ, ಅನಗತ್ಯ ಮಾತಿನಿಂದ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆಯಾಗಬಹುದು ಗಮನವಿರಲಿ.. ಕಟಕ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರ ಸಹೋದರಿಯರಿಗೆ ವಾಗ್ವಾದ, ಕಾರ್ಯ ಕರ್ತವ್ಯಗಳಲ್ಲಿ, ಉದ್ಯೋಗ ವ್ಯಾಪಾರದಲ್ಲಿ ಅಡೆತಡೆ, ಅಧಿಕ ಒತ್ತಡವಾಗಬಹುದು.. ಕನ್ಯಾ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಸ್ನೇಹಿತರಿಂದ ಸಹಕಾರ, ಒತ್ತಡದ ಜೀವನ ಮತ್ತು ನಿದ್ರಾಭಂಗ, ಮೇಲಾಧಿಕಾರಿಗಳಿಂದ, ರಾಜಕೀಯ ವ್ಯಕ್ತಿಗಳಿಂದ, ಸರ್ಕಾರಿ ವ್ಯಕ್ತಿಗಳಿಂದ ಅದೃಷ್ಟ ಕೈತಪ್ಪುವುದು ಎಚ್ಚರಿಕೆಯಿಂದಿರಿ.. ಸಿಂಹ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಅಧಿಕ ಖರ್ಚು, ಕುಲದೇವರ ಅಥವಾ ಶಕ್ತಿದೇವತೆಯ ದರ್ಶನ, ಉದ್ಯೋಗ ದೊರಕುವ ಸಂದರ್ಭ ಎದುರಾಗಲಿದೆ.. ತುಲಾ ರಾಶಿ: ಇಂದಿನ ದಿನ ಈ ರಾಶಿಯವರಿಗೆ ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಗೌರವಕ್ಕೆ ಚ್ಯುತಿ, ಸ್ವಂತ ಉದ್ಯಮ ಮತ್ತು ಉದ್ಯೋಗಸ್ಥರಿಗೆ ಅನುಕೂಲವಾಗಲಿದೆ.. ಧನಸ್ಸು ರಾಶಿ: ಇಂದಿನ ದಿನ ಈ ರಾಶಿಯವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಅಥವಾ ಒತ್ತಡ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ.. ವೃಶ್ಚಿಕ ರಾಶಿ: ಇಂದಿನ ದಿನ ಈ ರಾಶಿಯವರಿಗೆ ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಸಂಕಷ್ಟ ಎದುರಾಗಬಹುದು.. ಮಕರ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಸಂಗಾತಿಯಿಂದ ಅನುಕೂಲ, ಸೋದರಮಾವ ಅಥವಾ ತಂದೆಯೊಡನೆ ಕಲಹ, ಮಗ ಅಥವಾ ಮಗಳ ವೈವಾಹಿಕ ಜೀವನದಲ್ಲಿ ಏರುಪೇರಾಗಲಿದೆ.. ಕುಂಭ ರಾಶಿ.. ಇಂದಿನ ದಿನ ಈ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಸಂಗಾತಿಯಿಂದ ನೋವು ಮತ್ತು ಆತ್ಮ ಸಂಕಟ, ಸರ್ಕಾರಿ ಕೆಲಸ ಮತ್ತು ಕೋರ್ಟ್ ಕೇಸುಗಳಲ್ಲಿ ಮುನ್ನಡೆಯಾಗಲಿದೆ.. ಮೀನ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಪ್ರೀತಿ ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ, ಆತ್ಮ ಸಂಕಟ ಮತ್ತು ಭಾವನೆ ಮತ್ತು ಆಸೆಗಳಿಗೆ ಪೆಟ್ಟು, ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ, ಶತ್ರು ಬಾಧೆ ಕಾಡಲಿದೆ..
The woods are lovely, dark & deep, But I have promises to keep, Miles to go before I sleep... ROBERT FROST ಗುರುವಾರ, ನವೆಂಬರ್ 22, 2012 ಮಾಧ್ಯಮರಂಗದಲ್ಲಿ ವಿದೇಶಿ ಬಂಡವಾಳ: ಪರರ ಕೈಯಲ್ಲಿ ಕಾವಲುನಾಯಿಯ ಕುತ್ತಿಗೆಪಟ್ಟಿ ಮಾಧ್ಯಮಶೋಧ-30, ಹೊಸದಿಗಂತ 23-11-2012 ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ವಿಚಾರವಾಗಿ ನಡೆದ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಚರ್ಚೆಗಳ ಅಡಾವುಡಿಯಲ್ಲಿ ಟಿವಿ ಪ್ರಸಾರ ಸೇವಾ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ. 49ರಿಂದ ಶೇ. 74ಕ್ಕೆ ಏರಿಸಿದ್ದು ಒಂದು 'ಚಿಲ್ಲರೆ’ ವಿಷಯವಾಗಿ ಗೌಣವಾಯಿತೇ ಎಂಬುದು ಸದ್ಯದ ಅನುಮಾನ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಕುರಿತಾಗಿ ಇಷ್ಟೆಲ್ಲ ವಾದವಿವಾದಗಳು ನಡೆಯುತ್ತಿರುವ ವೇಳೆಯಲ್ಲೇ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಹದೇ ಬೆಳವಣಿಗೆ ಸಂಭವಿಸಿದರೂ ಆ ಕುರಿತು ವಿಶೇಷ ಚರ್ಚೆಗಳೇನೂ ನಡೆಯದಿರುವುದೇ ಈ ಅನುಮಾನಕ್ಕೆ ಕಾರಣ. ಚಿಲ್ಲರೆ ವಹಿವಾಟು ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಎಫ್‌ಡಿಐ ಪ್ರವೇಶ ಅಥವಾ ಅದರ ಮಿತಿ ಹೆಚ್ಚಳದಿಂದ ಆಗುವ ಪರಿಣಾಮಗಳು ವಿಭಿನ್ನವಾಗಿರಬಹುದು, ಆದರೆ ಯಾವುದೇ ರಂಗದಲ್ಲಿ ಏನೇ ಸಂಭವಿಸಲಿ, ಅಂತಿಮವಾಗಿ ಎಲ್ಲ ಬಗೆಯ ಭಾರಗಳಿಗೆ ಹೆಗಲು ಕೊಡಬೇಕಾದವನು ಭಾರತವೆಂಬ ಶ್ರೀಮಂತ ಪ್ರಜಾಪ್ರಭುತ್ವದ ಬಡ ಶ್ರೀಸಾಮಾನ್ಯ ಎಂಬುದು ನಿಸ್ಸಂಶಯ. ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿ ಹೆಚ್ಚಳವಾದುದರ ನಡುವೆಯೇ, ಡಿಟಿಎಚ್, ಕೇಬಲ್ ಜಾಲ, ಹೆಡ್‌ಎಂಡ್-ಇನ್-ದ-ಸ್ಕೈ (HITS) ಸೇವೆ, ಮಲ್ಟಿಸರ್ವಿಸ್ ಆಪರೇಶನ್‌ಗಳಲ್ಲಿನ ಎಫ್‌ಡಿಐನ್ನು ಕೇಂದ್ರ ಸರ್ಕಾರ ಸದ್ದಿಲ್ಲದೆಯೇ ಶೇ. 49ರಿಂದ ಶೇ. 74ಕ್ಕೆ ಏರಿಸಿಬಿಟ್ಟಿದೆ. ಮೇಲ್ನೋಟಕ್ಕೆ ಉದ್ಯಮಿಗಳಿಗೆ ಇದೊಂದು ವರದಾನದಂತೆ ಕಂಡುಬಂದರೂ, ಈ ಬಗೆಯ ಬೆಳವಣಿಗೆಗಳೆಲ್ಲ ದೀರ್ಘಾವಧಿಯಲ್ಲಿ ಮಾಧ್ಯಮ ಕ್ಷೇತ್ರದ ಒಟ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಕೇಬಲ್ ಸೇವೆ, ಡಿಟಿಎಚ್‌ಗಳಲ್ಲಿನ ವಿದೇಶಿ ನೇರಬಂಡವಾಳ ಹೂಡಿಕೆ ಮಿತಿ ಏರಿಕೆಯಿಂದ ಮಾಧ್ಯಮರಂಗಕ್ಕೆ ಅಂತಹ ಆಘಾತವಾಗುವುದೇನಿದೆ ಎಂಬ ಪ್ರಶ್ನೆ ಸಹಜವೇ; ಆದರೆ ಇದೆಲ್ಲ ಹಂತಹಂತವಾಗಿ ಪ್ರಜಾಸತ್ತೆಯ ನಾಲ್ಕನೆಯ ಸ್ತಂಭವೆನಿಸಿರುವ ನಮ್ಮ ಮಾಧ್ಯಮರಂಗವನ್ನು ವಿದೇಶಿ ಶಕ್ತಿಗಳ ಕೈಗೆ ಒಪ್ಪಿಸುವ ಪ್ರಕ್ರಿಯೆಯ ಒಂದು ಭಾಗವೇ ಆಗಿದೆ. 1954ರಷ್ಟು ಹಿಂದೆಯೇ ಭಾರತದ ಪ್ರಥಮ ಪತ್ರಿಕಾ ಆಯೋಗ ಮುದ್ರಣ ಮಾಧ್ಯಮದಲ್ಲಿ ವಿದೇಶೀ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ಶಿಫಾರಸು ಮಾಡಿತ್ತು. ಅದರ ಮುಂದಿನ ವರ್ಷವೇ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಯಾವುದೇ ಕಾರಣಕ್ಕೂ ಭಾರತೀಯ ಆವೃತ್ತಿಗಳನ್ನು ತರಕೂಡದೆಂದು ಕೇಂದ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿತು. ಇದಾಗಿ ಸುಮಾರು ಮೂರು ದಶಕಗಳ ನಂತರ ಬಂದ ಎರಡನೇ ಪತ್ರಿಕಾ ಆಯೋಗವೂ ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಿತು. ಶೇರು ರೂಪದಲ್ಲಾಗಲೀ ಸಾಲ ರೂಪದಲ್ಲಾಗಲೀ ಯಾವುದೇ ಪತ್ರಿಕೆ ವಿದೇಶಿ ಮಾಲೀಕತ್ವವನ್ನು ಹೊಂದದಂತೆ ಸ್ಪಷ್ಟ ಕಾನೂನು ನಿಯಮಗಳಿರಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿತ್ತು. ಆದರೆ ಮತ್ತೆ ಹತ್ತು ವರ್ಷ ಉರುಳುವಲ್ಲಿ ಇಡೀ ಜಗತ್ತೇ ಬದಲಾಗಿ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ದೇಶದೇಶಗಳ ನಡುವಿನ ಗೋಡೆಗಳೆಲ್ಲ ಕಳಚಿ ಬೀಳಲಾರಂಭಿಸಿದವು. ಬೇಲಿಗಳೆಲ್ಲ ಬಿದ್ದು ಬಾಗಿಲುಗಳೆಲ್ಲ ಉರುಳಿ ಪ್ರಪಂಚದ ಗಾತ್ರ ಕುಗ್ಗತೊಡಗಿತು. ಉದಾರೀಕರಣ ಹಾಗೂ ಖಾಸಗೀಕರಣಗಳ ಚಂಡಮಾರುತದ ನಡುವೆ ಭಾರತವೊಂದು ಒಂಟಿ ನಾವೆಯಾಗಿ ಬದುಕುಳಿಯುವ ಯಾವುದೇ ಲಕ್ಷಣ ಇರಲಿಲ್ಲ. 1990ರ ಆರಂಭದಲ್ಲಿ ಪಿ. ವಿ. ನರಸಿಂಹರಾವ್ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಆರ್ಥಿಕ ಉದಾರೀಕರಣದ ಬುಲ್ಡೋಜರ್ ಮಾಧ್ಯಮ ಕ್ಷೇತ್ರದ ಕಡೆಗೂ ದೃಷ್ಟಿ ಹರಿಸದೆ ಇರಲಿಲ್ಲ. ಆದರೆ ತತ್‌ಕ್ಷಣಕ್ಕೆ ಮಾಧ್ಯಮರಂಗಕ್ಕೆ ಬಲೆಬೀಸುವುದು ಸುಲಭದ ಮಾತಾಗಿರಲಿಲ್ಲ. ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. 40-50 ವರ್ಷಗಳಿಂದ ವಿರೋಧಿಸುತ್ತ ಬಂದಿದ್ದ ಸಂಗತಿಯೊಂದನ್ನು ಇದ್ದಕ್ಕಿದ್ದಂತೆ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ? ಆದರೆ ಈ ಜಾಗತೀಕರಣವೆಂಬುದು ಅತಿಂಥ ಬುಲ್ಡೋಜರ್ ಏನಲ್ಲ. ಅದಕ್ಕೆ ಕಣಿವೆ-ಪರ್ವತಗಳೆಲ್ಲ ಲೆಕ್ಕವೇ ಅಲ್ಲ. ಮತ್ತೆ ಹತ್ತು ವರ್ಷ ಉರುಳಬೇಕಾದರೆ ಮಾಧ್ಯಮರಂಗದ ಕೋಟೆಯನ್ನು ಒಡೆಯುವುದರಲ್ಲೂ ಅದು ಯಶಸ್ವಿಯಾಯಿತು. 2002ರಲ್ಲಿ ಸುಷ್ಮಾ ಸ್ವರಾಜ್ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪತ್ರಿಕಾ ಕ್ಷೇತ್ರದಲ್ಲಿ ಶೇ. 29 ಎಫ್‌ಡಿಐ ಅನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಹೊರತಾದ ಕ್ಷೇತ್ರದಲ್ಲಿ ಶೇ. 74 ಎಫ್‌ಡಿಐ ಅನ್ನೂ ಹೂಡುವುದಕ್ಕೆ ಅನುಮತಿ ನೀಡಿತು. 53 ವರ್ಷಗಳಲ್ಲಿ ಎಲ್ಲರೂ ವಿರೋಧಿಸುತ್ತ ಬಂದ ಸಂಗತಿಯೊಂದನ್ನು ನೀವೇಕೆ ಮಾಡಿದಿರಿ? ಎಂದು ಪತ್ರಕರ್ತರು ಸುಷ್ಮಾ ಸ್ವರಾಜ್ ಅವರನ್ನು ಕೇಳಿದರು. ಇದು 53 ವರ್ಷಗಳ ಪ್ರಶ್ನೆ ಅಲ್ಲ. ಸದ್ಯದ ಅನಿವಾರ್ಯತೆಯ ಪ್ರಶ್ನೆ. ಉದಾರೀಕರಣ ಆರಂಭವಾಗಿ 12 ವರ್ಷಗಳೇ ಕಳೆದುಹೋಗಿವೆ. ನಮಗೀಗ ಗತ್ಯಂತರವಿಲ್ಲ. ಇಷ್ಟು ವರ್ಷ ತಡೆದುಕೊಂಡು ಬಂದಮೇಲೆ ಈಗಷ್ಟೇ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ, ಎಂದು ಆಕೆ ಉತ್ತರಿಸಿದರು. ಅವರ ಬಳಿ ಬೇರೆ ಉತ್ತರವಿರಲಿಲ್ಲ. ಭಾರತ ಹತ್ತೇ ವರ್ಷಗಳಲ್ಲಿ ಜಾಗತೀಕರಣದ ದೈತ್ಯ ಪ್ರವಾಹದಲ್ಲಿ ಸಾಕಷ್ಟು ದೂರ ಸಾಗಿ ಬಂದಾಗಿತ್ತು. 2005ರಲ್ಲಿ ಸುದ್ದಿಯೇತರ ಹಾಗೂ ಪ್ರಚಲಿತ ವಿದ್ಯಮಾನೇತರ ಪತ್ರಿಕೆಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ. 74ರಿಂದ ಶೇ. 100ಕ್ಕೆ ಕೇಂದ್ರ ಸರ್ಕಾರ ಏರಿಸಿಬಿಟ್ಟಿತು. 2008ರಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ನಿಯತಕಾಲಿಕಗಳ ಭಾರತೀಯ ಆವೃತ್ತಿಗಳಲ್ಲಿ ಶೇ. 26 ಎಫ್‌ಡಿಐ ಹೂಡಲು ಸರ್ಕಾರ ಅನುಮತಿಸಿತು. 2009ರಲ್ಲಿ ಸರ್ಕಾರದ ಪೂರ್ವಾನುಮತಿಯೊಂದಿಗೆ ವಿದೇಶಿ ಪತ್ರಿಕೆಗಳ ತದ್ರೂಪಿ ಮುದ್ರಣದಲ್ಲಿ ಶೇ. 100 ವಿದೇಶಿ ಬಂಡವಾಳ ಹೂಡಬಹುದೆಂದು ಸರ್ಕಾರ ಘೋಷಿಸಿತು. ಪ್ರಸಾರ ಕ್ಷೇತ್ರದ ಸದ್ಯದ ಚಿತ್ರಣ ತೆಗೆದುಕೊಂಡರೆ, ಎಫ್. ಎಂ. ರೇಡಿಯೋ ಕ್ಷೇತ್ರದಲ್ಲಿ ಶೇ. 20 ವಿದೇಶಿ ನೇರ ಬಂಡವಾಳ ಹೂಡಿಕೆಯನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 26 ಎಫ್‌ಡಿಐ ಅನ್ನೂ, ಸುದ್ದಿಯೇತರ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 100 ಎಫ್‌ಡಿಐ ಅನ್ನೂ ಸರ್ಕಾರ ಅನುಮತಿಸಿದೆ. ಆರಂಭದಲ್ಲಿಯೇ ಪ್ರಸ್ತಾಪಿಸಿರುವಂತೆ ಕೇಬಲ್ ಪ್ರಸಾರ ಜಾಲ ಹಾಗೂ ಡಿಟಿಎಚ್ ಸೇವೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಿಂದೆ ಇದ್ದ ಶೇ. 49ರ ಮಿತಿಯನ್ನು ಈಗ ಶೇ. 74ಕ್ಕೆ ಏರಿಸಲಾಗಿದೆ. ಅಂದರೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಎರಡು ವರ್ಷಗಳ ಹಿಂದೆ ಮಾಡಿದ್ದ ಶಿಫಾರಸು ಈಗ ನಿಜವಾಗಿದೆ. ಇಷ್ಟೆಲ್ಲ ಆದರೂ ಎಫ್‌ಡಿಐ ಮಾಯೆಯಿಂದ ದೂರವೇ ಉಳಿದಿರುವುದು ನಮ್ಮ ಸುದ್ದಿ ಸಂಸ್ಥೆಗಳು ಮಾತ್ರ! ಸಾರಾಸಗಟಾಗಿ ಯಾರೇ ವಿದೇಶಿ ವ್ಯಕ್ತಿ ನಮ್ಮ ದೇಶಕ್ಕೆ ಬಂದು ಹೇಗೆಂದಹಾಗೆ ಪತ್ರಿಕೆ, ಚಾನೆಲ್ ಆರಂಭಿಸಬಹುದೆಂದೇನೂ ಇದರ ಅರ್ಥ ಅಲ್ಲ. ಸರ್ಕಾರ ಇದಕ್ಕೆಲ್ಲ ಹಲವಾರು ನಿಬಂಧನೆಗಳನ್ನು ಸೂಚಿಸಿದೆ. ಯಾವುದೇ ಬಗೆಯ ಹೂಡಿಕೆಗೂ ಸರ್ಕಾರದ ಪೂರ್ವಾನುಮತಿ ಬೇಕು; ವಿದೇಶಿ ಪತ್ರಿಕೆಯೊಂದರ ತದ್ರೂಪವನ್ನಾಗಲೀ, ಭಾರತೀಯ ಆವೃತ್ತಿಯನ್ನಾಗಲೀ ಆರಂಭಿಸುವ ಮುನ್ನ ಆ ಕಂಪೆನಿ 1956ರ ಭಾರತದ ಕಂಪೆನಿ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು; ಪತ್ರಿಕೆಯ ಸಂಪಾದಕೀಯ ಹಾಗೂ ಆಡಳಿತ ವಿಭಾಗಗಳ ಉನ್ನತ ಹುದ್ದೆಯಲ್ಲಿರುವವರು ಭಾರತೀಯರಾಗಿರಬೇಕು; ಸಂಸ್ಥೆಯ ನಿರ್ದೇಶಕರುಗಳ ಮಂಡಳಿಯಲ್ಲಿ ನಾಲ್ಕನೇ ಮೂರು ಭಾಗ ಭಾರತೀಯರು ಇರಬೇಕು ಇತ್ಯಾದಿ ಹಲವಾರು ನಿಯಮಗಳಿವೆ. ಆದರೆ ಈಗಾಗಲೇ ಮಾಯೆ ಎಂದಿರುವ ಈ ಎಫ್‌ಡಿಐ, ಮತ್ತದರ ಹಿರಿಯಣ್ಣ ಉದಾರೀಕರಣ, ಜಾಗತೀಕರಣಗಳಿಗೆ ಯಾವ ನಿಯಮವೂ ಅಂತಹ ಅಡಚಣೆಯಾಗಲಾರದು. ಜಗತ್ತು ಪೂರ್ತಿ ಒಂದೇ ಮಾರುತ ಬೀಸುತ್ತಿರಬೇಕಾದರೆ ಎಲ್ಲೋ ನುಸುಳಿಕೊಂಡ ವಿಷಗಾಳಿಯನ್ನು ಹಿಡಿದಿಡುವುದು ಹೇಗೆ? ನೇರವಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಇತಿಮಿತಿಗಳಿದ್ದರೆ, ಒಳಬರಬೇಕಾದವರು ಜಾಹೀರಾತು ಕ್ಷೇತ್ರದ ಮೂಲಕವಾದರೂ ಪ್ರವೇಶಿಸಬಹುದು. ಅದಕ್ಕೆ ಇತಿಮಿತಿ ಸೂಚಿಸಿಲ್ಲ. ಮುಂಬಾಗಿಲಿಗೆ ಭದ್ರ ಬೀಗ ಜಡಿದಿದ್ದರೂ ಹಿಂಬಾಗಿಲ ಅಗುಳಿ ಹಾಕಿರದಿದ್ದರೇನು ಬಂತು! ಮಾಧ್ಯಮ ರಂಗದಲ್ಲಿ ವಿದೇಶಿ ಬಂಡವಾಳದ ಪ್ರವೇಶ ಅನಿವಾರ್ಯವಾಗಿತ್ತೋ ಅಥವಾ ಅದಕ್ಕಿಂತಲೂ ಮುಂಚಿನ ಉದಾರೀಕರಣದ ಪ್ರಕ್ರಿಯೆ ಅನಿವಾರ್ಯವಾಗಿತ್ತೋ ಗೊತ್ತಿಲ್ಲ, ಆದರೆ ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವದ ಕಾವಲುನಾಯಿಯೇ ಮೆಲ್ಲಮೆಲ್ಲಗೆ ವಿದೇಶಿ ಶಕ್ತಿಗಳ ಕೈಗೆ ಕುತ್ತಿಗೆ ಪಟ್ಟಿ ಒಪ್ಪಿಸುತ್ತಿರುವುದು ಮಾತ್ರ ಸುಳ್ಳಲ್ಲ. ನೇರವಾಗಿ ಸುದ್ದಿ ಮತ್ತು ಅಭಿಪ್ರಾಯಗಳ ಪ್ರಕಟಣೆಯಲ್ಲಿ ಮತ್ತು ಆ ಮೂಲಕ ದೇಶದ ರಾಜಕೀಯ, ಆಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮೂಲಕ ಮಾತ್ರ ಅಲ್ಲ, ಅಪ್‌ಲಿಂಕಿಂಗ್, ಕೇಬಲ್, ಡಿಟಿಎಚ್‌ನಂತಹ ಮೇಲ್ನೋಟಕ್ಕೆ ಅಷ್ಟೊಂದು ಸಮಸ್ಯಾತ್ಮಕವಾಗಿ ಕಾಣದ ವಿಷಯಗಳಲ್ಲೂ ವಿದೇಶಿ ಶಕ್ತಿಗಳು ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ. ಭಾರತದಲ್ಲಿ ಪತ್ರಿಕೋದ್ಯಮವೇನೋ ಆರಂಭವಾದುದು ವಿದೇಶೀಯರಿಂದಲೇ. ಆದರೆ ಇಷ್ಟು ಬಲಿಷ್ಟವಾಗಿ ಬೆಳೆದ ಮೇಲೆ, ನಮ್ಮ ಸ್ವತಂತ್ರ ಪ್ರಜಾಪ್ರಭುತ್ವವನ್ನಾಗಲೀ ಅದರ ಕಾವಲುನಾಯಿಯಾಗಿರುವ ಮಾಧ್ಯಮವನ್ನಾಗಲೀ ವಿದೇಶೀಯರ ಕೈಗೆ ಒಪ್ಪಿಸುವುದು ಮಾತ್ರ ಒಂದು ದೊಡ್ಡ ದುರಂತವಲ್ಲದೆ ಬೇರೇನಲ್ಲ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 6:44 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಶುಕ್ರವಾರ, ನವೆಂಬರ್ 9, 2012 ಕೇಬಲ್ ಟಿವಿ ಡಿಜಿಟಲೀಕರಣ: ಮುಂದೇನು? ಮಾಧ್ಯಮಶೋಧ-29, ಹೊಸದಿಗಂತ, 07 ನವೆಂಬರ್ 2012 ಜನರಿಗೆ ಉತ್ತಮ ಗುಣಮಟ್ಟದ ಟಿವಿ ವೀಕ್ಷಣಾ ಅನುಭವವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಕೇಬಲ್ ಟಿವಿ ಡಿಜಿಟಲೀಕರಣ ಪ್ರಕ್ರಿಯೆಯ ಮೊದಲ ಹಂತದ ಗಡುವು ಮುಗಿದಿದ್ದರೂ ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸರ್ಕಾರ ನೀಡುವ ಅಂಕಿಅಂಶಗಳು ಯಶಸ್ಸಿನ ಕಥೆ ಹೇಳುತ್ತಾವಾದರೂ, ಅವುಗಳು ಎಷ್ಟು ನಂಬಿಕೆಗೆ ಅರ್ಹವೆಂಬುದನ್ನು ತಕ್ಷಣಕ್ಕೆ ಊಹಿಸಲಾಗದು. ದೇಶದ ಕೇಬಲ್ ಪ್ರಸಾರ ಜಾಲವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಬೇಕೆಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದ ಒಂದು ವರ್ಷದ ಬಳಿಕ ಸರ್ಕಾರ ಆ ಪ್ರಕ್ರಿಯೆಗೆ ಚಾಲನೆ ನೀಡಿತು. ಕೇಬಲ್ ಟಿವಿ ಜಾಲಗಳ (ನಿಯಂತ್ರಣ) ತಿದ್ದುಪಡಿ ಕಾಯ್ದೆ 2011ನ್ನು ಜಾರಿಗೊಳಿಸುವ ಮೂಲಕ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಡಿಜಿಟಲ್ ಆಕ್ಸೆಸ್ ಸಿಸ್ಟಮ್ (ಡಿಎಎಸ್)ನ್ನು ಅನುಷ್ಠಾನಕ್ಕೆ ತರುವುದನ್ನು ಸರ್ಕಾರ ಕಡ್ಡಾಯಗೊಳಿಸಿತು. ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರುವ ಉದ್ದೇಶವನ್ನೇನೋ ಸರ್ಕಾರ ಇಟ್ಟುಕೊಂಡಿದೆಯಾದರೂ, ಮೊದಲ ಹಂತ ಮುಗಿದಿರುವ ಈಗಿನ ಪರಿಸ್ಥಿತಿಯಲ್ಲಿ ಅದರ ಸಂಭವನೀಯ ಅಂತಿಮ ಯಶಸ್ಸನ್ನು ಅಂದಾಜುಮಾಡುವುದು ಕಷ್ಟ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸೂಚನೆಯಂತೆ, ಈ ಡಿಜಿಟಲೀಕರಣ ನಾಲ್ಕು ಹಂತಗಳಲ್ಲಿ ನಡೆಯಬೇಕಾಗಿದೆ. ಮೊದಲ ಹಂತದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕತ ಹಾಗೂ ಚೆನ್ನೈಗಳಲ್ಲಿ ಅಕ್ಟೋಬರ್ 31, 2012ರ ಒಳಗಡೆ ಡಿಜಿಟಲೀಕರಣವನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನವಿತ್ತಾದರೂ, ಅದಿನ್ನೂ ಸಂಪೂರ್ಣ ಸಾಧ್ಯವಾಗಿಲ್ಲ. ಸದ್ಯಕ್ಕೆ ತಮಿಳುನಾಡು ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಚೆನ್ನೈನಲ್ಲಿ ಡಿಜಿಟಲೀಕರಣ ಪೂರ್ಣಗೊಳಿಸುವುದಕ್ಕೆ ನವೆಂಬರ್ 9ರವರೆಗೆ ಅವಕಾಶ ದೊರೆತಿದೆ. ಆದರೆ ಚೆನ್ನೈನಲ್ಲಿ ಈಗ ಪೂರ್ಣಗೊಂಡಿರುವುದು ಶೇ. 60ರಷ್ಟು ಡಿಜಿಟಲೀಕರಣ ಮಾತ್ರ. ಮುಂದಿನ ಎರಡು-ಮೂರು ದಿನಗಳಲ್ಲಿ ಇದನ್ನು ಶೇ. 100ಕ್ಕೆ ತಂದು ನಿಲ್ಲಿಸುವುದು ಕಷ್ಟಕರವೇ. ಕಳೆದ ಒಂದು ವರ್ಷದಲ್ಲಿ ಸಾಧ್ಯವಾಗದ್ದನ್ನು ಒಂದು ವಾರದಲ್ಲಿ ಸಾಧ್ಯವಾಗಿಸುವುದು ಹೇಗೆ? ಈ ನಡುವೆ ಮುಂಬೈ ಹಾಗೂ ದೆಹಲಿ ಮಹಾನಗರಗಳಲ್ಲಿ ನೂರು ಪ್ರತಿಶತ ಡಿಜಿಟಲೀಕರಣ ನಡೆದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ಅದು ಕೇವಲ ತೋರಿಕೆಯ ಅಂಕಿಅಂಶಗಳೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಕೆಂದರೆ ಸರ್ಕಾರದ ಗಡುವಿನ ಪ್ರಕಾರ, ಅಕ್ಟೋಬರ್ 31ರಂದು ಎಲ್ಲಾ ಮಹಾನಗರಗಳಲ್ಲೂ ಅನಲಾಗ್ ಮಾದರಿಯ ಕೇಬಲ್ ಪ್ರಸಾರ ವ್ಯವಸ್ಥೆ ನಿಂತುಹೋಗಿ ಡಿಜಿಟಲ್ ಪ್ರಸಾರ ಆರಂಭವಾಗಬೇಕಿತ್ತು. ಆದರೆ ದೆಹಲಿ ಮತ್ತು ಮುಂಬೈನ ಅನೇಕ ಭಾಗಗಳಲ್ಲಿ ಒಂದು ವಾರದ ಬಳಿಕವೂ ಅನಲಾಗ್ ಕೇಬಲ್ ಸೇವೆಗಳು ಲಭ್ಯವಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋಲ್ಕತಾದಲ್ಲಂತೂ ಡಿಜಿಟಲೀಕರಣದ ಪ್ರಕ್ರಿಯೆ ಇನ್ನೂ ಶೇ. 85ರಲ್ಲೇ ಇದೆ. ಇದೇ ಹೊತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ಡಿಜಿಟಲೀಕರಣದ ಪ್ರಕ್ರಿಯೆಯೇ ಜನವಿರೋಧಿ ಎಂದು ಹರಿಹಾಯ್ದಿದ್ದಾರೆ ಕೂಡ. ಡಿಜಿಟಲ್ ಪ್ರಸಾರ ಕಡ್ಡಾಯ ಮಾಡಿ ಅಧ್ಯಾದೇಶ ಹೊರಡಿಸಿದ ನಂತರದ ಕಳೆದೊಂದು ವರ್ಷದಲ್ಲಿ ಡಿಜಿಟಲ್ ಪ್ರಸಾರಕ್ಕೆ ಅವಶ್ಯಕವಿರುವ ಸುಮಾರು 64.31 ಲಕ್ಷ ಸೆಟ್ ಟಾಪ್ ಬಾಕ್ಸ್ (ಎಸ್‌ಟಿಬಿ)ಗಳನ್ನು ಮೇಲೆ ಹೇಳಿರುವ ನಾಲ್ಕು ಮಹಾನಗರಗಳಲ್ಲಿ ಸ್ಥಾಪಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಈ ನಾಲ್ಕು ಮಹಾನಗರಗಳಲ್ಲಿ ಒಟ್ಟು 103.76 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ 82.59 ಲಕ್ಷ ಕುಟುಂಬಗಳು ಟಿವಿ ಸೆಟ್ ಹೊಂದಿವೆ. ಒಟ್ಟಾರೆ 28.14 ಲಕ್ಷ ಡಿಟಿಎಚ್ ಸಂಪರ್ಕ ಹೊಂದಿರುವ ಮನೆಗಳನ್ನು ಹೊರತುಪಡಿಸಿದರೆ, ಉಳಿದ 65.34 ಲಕ್ಷ ಕುಟುಂಬಗಳೂ ಕೇಬಲ್ ಸಂಪರ್ಕದಿಂದಲೇ ಟಿವಿ ವೀಕ್ಷಿಸುತ್ತಿವೆ. ಅಂದರೆ ಮೊದಲ ಹಂತದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಕುಟುಂಬಗಳು ಸಾಮಾನ್ಯ ಕೇಬಲ್ ಪ್ರಸಾರ ತಂತ್ರಜ್ಞಾನದಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾಗುವ ಅವಶ್ಯಕತೆ ಇತ್ತು. ಡಿಜಿಟಲೀಕರಣದ ನಾಲ್ಕು ಹಂತಗಳಲ್ಲಿ ಇನ್ನೂ ಮೂರು ಹಂತಗಳು ಬಾಕಿಯಿವೆ. ಪುಣೆ, ಬೆಂಗಳೂರು, ಅಹಮದಾಬಾದ್‌ನಂತಹ ಒಂದು ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳಲ್ಲಿ ಮಾರ್ಚ್ 31, 2012ರ ಒಳಗೆ ಸಂಪೂರ್ಣ ಡಿಜಿಟಲೀಕರಣ ನಡೆಯಬೇಕೆಂಬ ನಿರ್ದೇಶನವಿದೆ. ದೇಶದ ಎಲ್ಲಾ ನಗರ ಪ್ರದೇಶಗಳಲ್ಲೂ ಸೆಪ್ಟೆಂಬರ್ 30, 2014ರ ಒಳಗಾಗಿ ಡಿಜಿಟಲೀಕರಣ ಪೂರ್ಣಗೊಳಿಸಲು ಗಡುವು ಇದೆ. ಅಂತೂ ಡಿಸೆಂಬರ್ 31, 2014ರ ಒಳಗೆ ಇಡೀ ದೇಶದಲ್ಲಿ ಟಿವಿ ಪ್ರಸಾರ ಜಾಲ ಡಿಜಿಟಲೀಕರಣಗೊಳ್ಳಬೇಕು ಎಂಬುದು ಸರ್ಕಾರದ ಯೋಜನೆ. ಟಿವಿ ಪ್ರಸಾರದಲ್ಲಿ ಅನಲಾಗ್ ಕೇಬಲ್ ಸೇವೆ, ಡಿಜಿಟಲ್ ಕೇಬಲ್ ಸೇವೆ ಹಾಗೂ ಡಿಟಿಎಚ್ ಸೇವೆಗಳೆಂಬ ಮೂರು ಪ್ರಮುಖ ವಿಧಾನಗಳು. ಅನಲಾಗ್ ವಿಧಾನದಲ್ಲಿ ಟಿವಿ ಪ್ರಸಾರ ಮಾಡುವುದು ಕಳೆದ ಎರಡು-ಮೂರು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ ವ್ಯವಸ್ಥೆ. ಕೆಲವು ವರ್ಷಗಳಿಂದೀಚೆಗೆ ಡಿಟಿಎಚ್ ಸೇವೆಯೂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಡಿಟಿಎಚ್ ಸೇವೆಯನ್ನು ಗಮನಿಸಿದವರಿಗೆ ಡಿಜಿಟಲ್ ಪ್ರಸಾರದ ಪ್ರಾಮುಖ್ಯತೆ ಅರ್ಥವಾಗುತ್ತದೆ. ಅನಲಾಗ್ ತಂತ್ರಜ್ಞಾನದ ಕೇಬಲ್ ಆಪರೇಟರ್‌ಗಳು ಕೆಲವು ನಿರ್ದಿಷ್ಟ ಸಂಖ್ಯೆಯ ಚಾನೆಲ್‌ಗಳನ್ನು ಮಾತ್ರ ಒದಗಿಸಬಹುದು. ಅಂದರೆ ಕೇಬಲ್ ಸಂಪರ್ಕ ಹೊಂದಿರುವ ಮನೆಗಳಲ್ಲಿ ಅರುವತ್ತೋ ಎಪ್ಪತ್ತೋ ಎಂಭತ್ತೋ ವಾಹಿನಿಗಳನ್ನು ಮಾತ್ರ ವೀಕ್ಷಿಸಬಹುದು. ಅವೂ ಸಂಪೂರ್ಣ ಸ್ಪಷ್ಟತೆಯಿಂದ ಕಾಣಿಸಿಕೊಳ್ಳಲಾರವು. ಮೊದಲ ಒಂದಿಷ್ಟು ಚಾನೆಲ್‌ಗಳು ಚೆನ್ನಾಗಿ ಕಾಣಿಸುತ್ತಿದ್ದರೆ ಅಮೇಲಾಮೇಲೆ ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಹೆಚ್ಚು ಹಣ ಸುರಿದು ಉತ್ತಮ ಗುಣಮಟ್ಟದ ಟಿವಿ ಸೆಟ್ ತಂದರೂ ಪ್ರಯೋಜನವೇನೂ ಇಲ್ಲ. ಆದರೆ ಡಿಜಿಟಲ್ ಸೇವೆ ನೋಡುಗನಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಅಲ್ಲಿ ನೂರಾರು ಚಾನೆಲ್‌ಗಳನ್ನು ನೋಡಬಹುದು. ಚಿತ್ರ-ಧ್ವನಿ ಎರಡರಲ್ಲೂ ಉನ್ನತ ಗುಣಮಟ್ಟ. ಧ್ವನಿ ಹಾಗೂ ದೃಶ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆಯೂ ಬರುವುದಿಲ್ಲ. ಹೀಗಾಗಿ ಡಿಜಿಟಲ್ ತಂತ್ರಜ್ಞಾನ ದಿನೇದಿನೇ ಜನಪ್ರಿಯವಾಗುತ್ತಾ ಹೋಯಿತು. ಆದರೂ ಇಡೀ ದೇಶದ ಕೇಬಲ್ ಪ್ರಸಾರ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನಕ್ಕೆ ಮಾರ್ಪಡಿಸುವುದು ಒಂದು ಹಿಮಾಲಯದಂಥ ಕೆಲಸವೇ. ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶಾದ್ಯಂತ 148 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿವೆ. ಅವುಗಳಲ್ಲಿ 126 ಮಿಲಿಯನ್ ಕುಟುಂಬಗಳು ಕೇಬಲ್ ಹಾಗೂ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದರೆ, 42 ಮಿಲಿಯನ್ ಕುಟುಂಬಗಳು ಡಿಜಿಟಲ್ ವ್ಯವಸ್ಥೆಯನ್ನು ಹೊಂದಿವೆ. ಕಳೆದ ವರ್ಷ ದೇಶದಲ್ಲಿದ್ದ ಟಿವಿ ಹೊಂದಿರುವ ಕುಟುಂಬಗಳ ಸಂಖ್ಯೆ 142 ಮಿಲಿಯನ್ ಆಗಿದ್ದು, ಇದರಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿದ್ದವರು 26 ಮಿಲಿಯನ್ ಕುಟುಂಬಗಳು. ಡಿಜಿಟಲ್ ತಂತ್ರಜ್ಞಾನ ಒಂದೇ ವರ್ಷದಲ್ಲಿ ಎಷ್ಟು ಜನಪ್ರಿಯವಾಗಿದೆಯೆಂಬುದನ್ನು ಇದು ತೋರಿಸುತ್ತದೆ. ಆದರೆ ಈಗಾಗಲೇ ಪ್ರಸ್ತಾಪಿಸಿರುವಂತೆ, ಡಿಜಿಟಲೀಕರಣ ಸುಲಭದ ಕೆಲಸವೇನೂ ಅಲ್ಲ. ಅದಕ್ಕೆ ಕೇಬಲ್ ಆಪರೇಟರ್‌ಗಳು ಹಾಗೂ ಗ್ರಾಹಕರ ಕಡೆಯಿಂದ ಸಮಾನ ಸಹಕಾರ ಇರಬೇಕು. ಏಕೆಂದರೆ, ಇದಕ್ಕಾಗಿ ಇಬ್ಬರೂ ಹಣ ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಒಟ್ಟು 6,000 ಮಲ್ಟಿ-ಸಿಸ್ಟಮ್ ಆಪರೇಟರ್ (ಎಂಎಸ್‌ಒ)ಗಳೂ 60,000 ಸ್ಥಳೀಯ ಕೇಬಲ್ ಆಪರೇಟರ್‌ಗಳೂ ಇದ್ದು, ಇವರು ಏನಿಲ್ಲವೆಂದರೂ ರೂ. 10,000 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಡಿಜಿಟಲ್ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಮಿಟರ್, ಎನ್‌ಕೋಡರ್. ಡಿಕೋಡರ್, ಮಾಡ್ಯುಲೇಟರ್, ಸರ್ವರ್ ಹಾಗೂ ಸ್ಟೋರೇಜ್‌ಗಳನ್ನು ಅವರು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಇನ್ನೊಂದೆಡೆ ಟಿವಿ ಸೆಟ್ ಹೊಂದಿರುವವರು ಕನಿಷ್ಟ ರೂ. 1000-ರೂ. 2,000 ಖರ್ಚು ಮಾಡಿ ಸೆಟ್ ಟಾಪ್ ಬಾಕ್ಸ್‌ಗಳನ್ನು ಖರೀದಿ ಮಾಡಬೇಕಾಗುತ್ತದೆ. ಸೆಟ್ ಟಾಪ್ ಬಾಕ್ಸ್‌ಗಳ ಮಾರುಕಟ್ಟೆಯೇ ಒಂದು ದೊಡ್ಡ ದಂಧೆಯಾಗಿ ಮಾರ್ಪಡುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ. ಟಿವಿ ಹೊಂದಿರುವ ಭಾರತದ ಕುಟುಂಬಗಳ ಅನುಪಾತವನ್ನು ನೋಡಿದರೂ ಗ್ರಾಮೀಣರ ಸಂಖ್ಯೆಯೇ ಹೆಚ್ಚು. ದೇಶದ ನಗರ ಪ್ರದೇಶಗಳಲ್ಲಿ ಒಟ್ಟು 69 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿರುವ ಟಿವಿ ಕುಟುಂಬಗಳು 79 ಮಿಲಿಯನ್. ಹೀಗಾಗಿ, ಈ ಕುಟುಂಬಗಳೆಲ್ಲ ಡಿಜಿಟಲೀಕರಣಕ್ಕಾಗಿ ಹಣ ವಿನಿಯೋಗಿಸುವ ಸ್ಥಿತಿಯಲ್ಲಿದ್ದಾರೆಯೇ ಎಂಬುದು ಒಂದು ಪ್ರಶ್ನೆಯಾದರೆ, ಈಗ ಇರುವ ಡಿಜಿಟಲೀಕರಣದ ಹುರುಪು ಮುಂದೆಯೂ ಉಳಿಯುತ್ತದೆಯೇ ಎಂಬುದು ಇನ್ನೊಂದು ಪ್ರಶ್ನೆ. ಆದರೂ ಕುತೂಹಲದ ಸಂಗತಿಯೆಂದರೆ, ದೇಶದಾದ್ಯಂತ ಇರುವ ಡಿಟಿಎಚ್ ಸಂಪರ್ಕ ಗಮನಿಸಿದರೆ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಡಿಟಿಎಚ್ ಸಂಪರ್ಕ ಪಡೆದುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ 16 ಮಿಲಿಯನ್ ಡಿಟಿಎಚ್ ಸಂಪರ್ಕಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 26 ಮಿಲಿಯನ್ ಡಿಟಿಎಚ್ ಸಂಪರ್ಕ ಪಡೆದಿರುವ ಕುಟುಂಬಗಳಿವೆ. ಬಹುಶಃ ಗ್ರಾಮಾಂತರದಲ್ಲಿ ಕೇಬಲ್ ಸಂಪರ್ಕಕ್ಕಿಂತ ಡಿಟಿಎಚ್ ಸೇವೆಯೇ ಹೆಚ್ಚು ಅನುಕೂಲಕರವಾಗಿರುವುದು ಇದಕ್ಕೆ ಕಾರಣವಿರಬಹುದು. ಒಟ್ಟಿನಲ್ಲಿ, 2014ರ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಯಾವ ಹಂತ ತಲುಪೀತು ಎಂಬುದನ್ನು ಕಾದುನೋಡಬೇಕು. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 8:41 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಮಂಗಳವಾರ, ನವೆಂಬರ್ 6, 2012 ನಾಲ್ಕನೆಯ ಸ್ತಂಭದ ಮುಂದೆ ನಾಲ್ಕು ಪ್ರಶ್ನೆಗಳು ಮಾಧ್ಯಮಶೋಧ-28, ಹೊಸದಿಗಂತ, 25 ಅಕ್ಟೋಬರ್ 2012 ಕೃಷ್ಣಪ್ರಸಾದ್ "ಭಾರತದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆ ಇಂದು ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ. Credibility of Indian media is at the lowest." ಹೀಗೆಂದು ಯಾರೋ ಒಬ್ಬ ಅನಾಮಧೇಯ ಹೇಳಿರುತ್ತಿದ್ದರೆ ಇದು ಇನ್ನೊಂದು ಕ್ಲೀಷೆ ಎಂದು ಭಾವಿಸಿ ಸುಮ್ಮನಿರಬಹುದಿತ್ತು. ಈ ಅರ್ಥದ ಹೇಳಿಕೆಗಳನ್ನು ನಾವು ಆಗಿಂದಾಗ್ಗೆ ಕೇಳುತ್ತಲೇ ಇದ್ದೇವೆ. ಮಾಧ್ಯಮ ವಿಶ್ಲೇಷಕರಿಂದ ತೊಡಗಿ ಸಾಮಾನ್ಯ ಓದುಗರು/ನೋಡುಗರವರೆಗೆ ಎಲ್ಲರಿಗೂ ನಮ್ಮ ಅನೇಕ ಮಾಧ್ಯಮಗಳ ವಿಶ್ವಾಸಾರ್ಹತೆಯ ಕಥೆ ಗೊತ್ತಿದೆ. ಆದರೆ ಮೇಲಿನ ಹೇಳಿಕೆ ಬಂದಿರುವುದು ಒಬ್ಬ ಸಾಮಾನ್ಯ ಓದುಗನಿಂದ ಅಲ್ಲ; ಒಬ್ಬ ಪ್ರತಿಭಾವಂತ ಪತ್ರಕರ್ತನಿಂದ. ಅವರು ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಒಂದು ಎಂದು ಗುರುತಿಸಲಾಗಿರುವ 'ಔಟ್‌ಲುಕ್’ನ ಸಂಪಾದಕ ಕೃಷ್ಣಪ್ರಸಾದ್ ಅಥವಾ ಕೆ.ಪಿ. ಕೃಷ್ಣಪ್ರಸಾದ್ ಈ ಮಾತನ್ನಾಡಿದ್ದು ಮೊನ್ನೆ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ೬೫ನೇ ಮಹಾಧಿವೇಶನದಲ್ಲಿ - ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 2000 ಪತ್ರಕರ್ತರ ಸಮ್ಮುಖದಲ್ಲಿ. ಬಹುಶಃ ಈ ಮಾತನ್ನು ಕೇಳಿದ ಯಾರಿಗೂ ಅಂತಹ ಆಶ್ಚರ್ಯವೇನೂ ಆಗಿರಲಿಕ್ಕಿಲ್ಲ. ಏಕೆಂದರೆ ಈಗಾಗಲೇ ಹೇಳಿರುವಂತೆ ಇದೊಂದು ಹೊಸ ಉದ್ಗಾರವೇನೂ ಅಲ್ಲ. ಆದರೆ ಒಂದು ಮಾತನ್ನು ಯಾರು ಎಲ್ಲಿ ಹೇಳಿದರೆಂಬುದು ತುಂಬ ಮುಖ್ಯವಾಗುತ್ತದೆ ಮತ್ತು ಅದು ಗಂಭೀರ ಚಿಂತನೆಯೊಂದಕ್ಕೆ ಪ್ರೇರಣೆಯಾಗುತ್ತದೆ. ಮ್ಯಾಚ್ ಫಿಕ್ಸಿಂಗ್, ನೀರಾ ರಾಡಿಯಾ ಟೇಪ್ ಹಗರಣ, ಬಹುಕೋಟಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣ ಮುಂತಾದ ಕುಪ್ರಸಿದ್ಧ ಹಗರಣಗಳನ್ನು ಪ್ರಜಾಪ್ರಭುಗಳೆದುರು ಬಯಲುಮಾಡಿದ್ದ 'ಔಟ್‌ಲುಕ್’ನ ಕೆ.ಪಿ. ಪತ್ರಕರ್ತರ ಸಮ್ಮೇಳನದ ವೇದಿಕೆಯ ಮೂಲಕ ಹೇಳಿದ ನಾಲ್ಕು ವಿಚಾರಗಳು ಇಡೀ ಭಾರತೀಯ ಮಾಧ್ಯಮರಂಗದ ಆತ್ಮಾವಲೋಕನದ ದಿಕ್ಕುಗಳಾಗಬೇಕಿರುವುದು ಸುಸ್ಪಷ್ಟ. ಕೃಷ್ಣಪ್ರಸಾದ್ ಬೊಟ್ಟುಮಾಡಿರುವ ನಾಲ್ಕು ಅಂಶಗಳಲ್ಲಿ ಮೊದಲನೆಯದು ಮಾಧ್ಯಮಗಳ ಮಾಲೀಕತ್ವದ ವಿಚಾರ. ನಮ್ಮ ಮಾಧ್ಯಮರಂಗದ ಮಾಲೀಕರುಗಳ ಕೈಯಲ್ಲಿ ಮಾಧ್ಯಮಗಳಾಗಲೀ, ಅವುಗಳ ಉದ್ಯೋಗಿಗಳಾಗಲೀ, ಸಾಮಾನ್ಯ ಓದುಗರು/ನೋಡುಗರಾಗಲೀ ಸುರಕ್ಷಿತವಾಗಿದ್ದಾರೆಯೇ? Cross-media ownership ಹಾಗೂ ಹೆಚ್ಚುತ್ತಿರುವ ಏಕಸ್ವಾಮ್ಯತೆಯ ಪ್ರವೃತ್ತಿಗಳು ಪ್ರಜಾಪ್ರಭುತ್ವದ ಮೂಲನಂಬಿಕೆಗಳನ್ನು ಛಿದ್ರಗೊಳಿಸದೆ ಬಿಟ್ಟಾವೆಯೇ? ಎಂಬುದು. ಎರಡನೆಯದು, ಮಾಧ್ಯಮ ಶಿಕ್ಷಣ. ಟಿವಿ ಚಾನೆಲ್‌ಗಳವರು ಇಂದು ತಮ್ಮ ಯುವಪತ್ರಕರ್ತರಲ್ಲಿ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಬಿತ್ತುವುದಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಯೇ? ತಮ್ಮ ಸಂಸ್ಥೆಗೆ ಉತ್ತಮ ಗುಣಮಟ್ಟದ ಪತ್ರಕರ್ತರನ್ನು ಪಡೆಯುವುದಕ್ಕೆ ಅವರು ಸಾಕಷ್ಟು ಬಂಡವಾಳ ಹೂಡುತ್ತಿದ್ದಾರೆಯೇ? ಟಿವಿ ಚಾನೆಲ್‌ಗಳವರು ಮಾಧ್ಯಮಗಳಿಗಾಗಿ ಒಳ್ಳೆಯ ಮಾನವ ಸಂಪನ್ಮೂಲವನ್ನು ರೂಪಿಸುವುದಕ್ಕಾಗಿ ತಮ್ಮ ಸುತ್ತಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿದ್ದಾರೆಯೇ? ಇದು ಕೆ.ಪಿ. ಪ್ರಶ್ನೆ. ಮೂರನೆಯದು, ವಿಶ್ವಾಸಾರ್ಹತೆ. ಇದನ್ನೇ ಈ ಬರೆಹದ ಆರಂಭದಲ್ಲಿ ಪ್ರಸ್ತಾಪಿಸಿದ್ದು. ಭಾರತೀಯ ಮಾಧ್ಯಮರಂಗದಲ್ಲಿ ವಿಶ್ವಾಸಾರ್ಹತೆಯೆಂಬುದು ಕನಿಷ್ಠ ಮಟ್ಟವನ್ನು ತಲುಪಿದೆ. ವಿಶ್ವಾಸಾರ್ಹತೆಯ ವಿಷಯಕ್ಕೆ ಬಂದಾಗ ಎರಡು ಹಂತದಲ್ಲಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ: ಒಂದು ವೈಯುಕ್ತಿಕ ಮಟ್ಟದಲ್ಲಿ ಅಂದರೆ ಪತ್ರಕರ್ತರ ಮಟ್ಟದಲ್ಲಿ; ಎರಡು ಮಾಧ್ಯಮ ಸಂಸ್ಥೆಗಳ ಮಟ್ಟದಲ್ಲಿ. ಪತ್ರಕರ್ತ ಹಾಗೂ ಆತ ಕೆಲಸ ಮಾಡುವ ಸಂಸ್ಥೆ ಎರಡನ್ನೂ ನಂಬದ ಸ್ಥಿತಿಗೆ ಜನ ಬಂದಿದ್ದಾರೆ ಎಂಬುದು ಕೆ.ಪಿ. ಕಳವಳ. ನಾಲ್ಕನೆಯದು, ಕಂಟೆಂಟ್ ಅಥವಾ ಮಾಧ್ಯಮಗಳ ಹೂರಣ. ಮಾಧ್ಯಮಗಳು ಸುದ್ದಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅನುಸರಿಸುವ ಮಾನದಂಡ ಯಾವುದು? ವಸ್ತುನಿಷ್ಠವಾಗಿ ಸುದ್ದಿಮೌಲ್ಯಗಳ ಆಧಾರದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆಯೇ ಅಥವಾ ವೈಯುಕ್ತಿಕ ಪೂರ್ವಾಗ್ರಹಗಳು ಕೆಲಸ ಮಾಡುತ್ತಿವೆಯೇ? ಪತ್ರಿಕೆಗಳು ಹಾಗೂ ಚಾನೆಲ್‌ಗಳ ಹೂರಣವನ್ನು ಜನರು ನಿರ್ಧರಿಸಬೇಕೋ ಅಥವಾ ಜನರಿಗೆ ಏನು ಬೇಕೆಂಬುದನ್ನು ಮಾಧ್ಯಮಗಳು ನಿರ್ಧರಿಸಬೇಕೋ? ಒಟ್ಟಿನಲ್ಲಿ ಇಡಿಯ ಮಾಧ್ಯಮರಂಗ ಇಂದು ಎದುರಿಸುತ್ತಿರುವ ಅಷ್ಟೂ ಸವಾಲುಗಳನ್ನು ಕೃಷ್ಣಪ್ರಸಾದ್ ನಾಲ್ಕೇ ಅಂಶಗಳಲ್ಲಿ ಸಾಂಧ್ರೀಕರಿಸಿದ್ದಾರೆ. ಅವರು ಎತ್ತಿರುವ ಒಂದೊಂದು ಪ್ರಶ್ನೆಯೂ ಒಂದೊಂದು ದೊಡ್ಡ ಸಮ್ಮೇಳನಗಳ ವಿಷಯವಾಗಬಹುದು. ಭಾರತದಲ್ಲಿರುವ ಒಟ್ಟು ಪತ್ರಿಕೆ, ಚಾನೆಲ್, ರೇಡಿಯೋ ಇತ್ಯಾದಿಗಳ ಸಂಖ್ಯೆ ಈ ದೇಶದ ಮಾಧ್ಯಮರಂಗದ ಬಹುತ್ವ ಹಾಗೂ ವೈವಿಧ್ಯತೆಯನ್ನು ತೋರಿಸುತ್ತಾದರೂ ಈ ಕ್ಷೇತ್ರವನ್ನು ಬರೀ ನೂರರಷ್ಟು ಸಂಖ್ಯೆಯ ದೊಡ್ಡ ಮಾಧ್ಯಮ ಕುಳಗಳು ಆಳುತ್ತಿವೆ ಎಂಬುದು ವಿಚಿತ್ರವಾದರೂ ಸತ್ಯ: ’ಹಳ್ಳಿಗಳ ಮತ್ತು ಬಡವರ ದೇಶ’ವಾದ ಭಾರತದಲ್ಲಿ ವಿಶ್ವದ ಟಾಪ್-10 ಬಿಲಿಯನೇರ್‌ಗಳಿದ್ದ ಹಾಗೆ! ನಮ್ಮಲ್ಲಿ ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ಅದಕ್ಕಿಂತಲೂ ಹೆಚ್ಚು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು ಇವೆಲ್ಲ ಇದ್ದರೂ ನಾವು ಏನನ್ನು ಓದಬೇಕು, ಏನನ್ನು ನೋಡಬೇಕು, ಏನನ್ನು ಕೇಳಬೇಕು ಮತ್ತು ಯಾವುದರಿಂದ ಪ್ರಭಾವಿತವಾಗಬೇಕು ಎಂದು ನಿರ್ಧರಿಸುವವರು ಬೆರಳೆಣಿಕೆಯ ಮಂದಿ. ನಾವೆಲ್ಲ cross-media ownerಗಳ ಹಾಗೂ monopolyಗಳ ಮನದಿಚ್ಛೆಯಂತೆ ಬದುಕಬೇಕಾದ ಕಾಲದಲ್ಲಿದ್ದೇವೆ. ನಮಗೆ ಗೊತ್ತಿಲ್ಲದಂತೆಯೇ ನಾವೊಂದು ಹೊಸಬಗೆಯ ಗುಲಾಮಗಿರಿಯತ್ತ ಸಾಗುತ್ತಿದ್ದೇವೆಯೇ? ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಒಂದು ಉದಾಹರಣೆ ಕೊಡುತ್ತಾರೆ: ದೆಹಲಿ ಮಹಾನಗರದಲ್ಲಿ ೧೬ ಇಂಗ್ಲಿಷ್ ದಿನಪತ್ರಿಕೆಗಳು ಕಾರ್ಯಾಚರಿಸುತ್ತಿವೆ. ಇವುಗಳ ಪೈಕಿ ಮೊದಲ ಮೂರು ಪತ್ರಿಕೆಗಳಾದ 'ಟೈಮ್ಸ್ ಆಫ್ ಇಂಡಿಯಾ’, 'ಹಿಂದೂಸ್ತಾನ್ ಟೈಮ್ಸ್’ ಹಾಗೂ 'ಇಕನಾಮಿಕ್ ಟೈಮ್ಸ್’ ಪತ್ರಿಕೆಗಳು ಎಲ್ಲ ಪತ್ರಿಕೆಗಳ ಒಟ್ಟು ಮಾರುಕಟ್ಟೆಯ ನಾಲ್ಕನೇ ಮೂರು ಪಾಲನ್ನು ಹೊಂದಿವೆಯಂತೆ. ಅಂದರೆ, ಇಡೀ ದೆಹಲಿಯ ಜನತೆ ಏನು ಓದಬೇಕೆಂಬುದನ್ನು ಬಹುತೇಕ ಈ ಮೂರು ಪತ್ರಿಕೆಗಳೇ ನಿರ್ಧರಿಸುವ ಸ್ಥಾನದಲ್ಲಿವೆಂದಂತಾಯ್ತು. ಅದರಲ್ಲೂ ಮೊದಲ ಮತ್ತು ಮೂರನೇ ಪತ್ರಿಕೆಗೆ ಒಬ್ಬನೇ ಮಾಲೀಕ. ದೆಹಲಿ ಒಂದು ನಿದರ್ಶನ ಅಷ್ಟೆ. ಭಾರತದ ಬಹುತೇಕ ರಾಜ್ಯಗಳ ಕಥೆಯೂ ಇದೇ. ಕೆಲವೇ ಜನ ಮಾಲೀಕರು, ಶ್ರೀಮಂತ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳು ನಮ್ಮ ಮಾಧ್ಯಮಗಳ ಕಂಟೆಂಟ್, ದೃಷ್ಟಿಕೋನ ಹಾಗೂ ಸಂಪಾದಕೀಯ ನೀತಿಯನ್ನು ನಿರ್ಧರಿಸುವ ಪರಿಸ್ಥಿತಿ ಇದೆ. ಸರ್ಕಾರವೇನಾದರೂ ಈ ಪ್ರವೃತ್ತಿಯನ್ನು ನಿಯಂತ್ರಿಸುವ ಪ್ರಸ್ತಾಪ ಮುಂದಿಟ್ಟರೆ ಅದನ್ನು ಒಕ್ಕೊರಲಿನಿಂದ ವಿರೋಧಿಸುವುದಕ್ಕೆ ಈ ಎಲ್ಲ ಕುಳಗಳೂ ತಯಾರಾಗಿಯೇ ಇರುತ್ತವೆ. ಬರೀ ಮಾಧ್ಯಮ ಮಾಲೀಕರುಗಳಷ್ಟೇ ಅಲ್ಲ, ರಾಜಕಾರಣಿಗಳೂ ಇದನ್ನು ವಿರೋಧಿಸುತ್ತಾರೆ. ಏಕೆಂದರೆ ರಾಜಕೀಯ ಪಕ್ಷಗಳಿಗೂ ದೊಡ್ಡದೊಡ್ಡ ಮಾಧ್ಯಮ ಮಹಾಶಯರುಗಳ ಕೃಪಾಕಟಾಕ್ಷದ ಅನಿವಾರ್ಯತೆ ಇದ್ದೇ ಇದೆ. ತಾವು ಬೆಳೆಯಬೇಕಾದರೆ ಅವುಗಳಿಗೆ ಮಾಧ್ಯಮಗಳ ಬೆಂಬಲ ಬೇಕೇಬೇಕಲ್ಲ? ಅದರಲ್ಲೂ ಎರಡು ಮೂರು ಪತ್ರಿಕೆಗಳು, ಚಾನೆಲ್‌ಗಳು 'ಒಪೀನಿಯನ್ ಲೀಡರ್’ಗಳಾಗಿಬಿಟ್ಟರೆ ರಾಜಕೀಯದವರ ಕೆಲಸ ಇನ್ನೂ ಸುಲಭವಾಯಿತು. ಇದನ್ನು ವಿರೋಧಿಸುವುದಕ್ಕೆ ಯಾವ ಮಾಧ್ಯಮಗಳಿಗೂ ನೈತಿಕ ಶಕ್ತಿಯಿಲ್ಲದಂತಹ ಒಂದು ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಡೆ ಪೇಯ್ಡ್ ನ್ಯೂಸ್, ನ್ಯೂಸ್ ಪ್ಯಾಕೇಜ್, ಮೀಡಿಯಾನೆಟ್‌ನಂತಹ ಮಾಧ್ಯಮ ಹಾದರ ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ, ಇನ್ನೊಂದೆಡೆ ರಾಜಕಾರಣಿಗಳು ಮತ್ತು ಉದ್ಯಮಿಗಳು ಮಾಧ್ಯಮಗಳ ಆಡಳಿತದಲ್ಲಿ ಪಾಲುಪಡೆದುಕೊಳ್ಳುವುದೂ ನಿರಂತರವಾಗಿ ಸಾಗಿದೆ. ಮಾಧ್ಯಮಗಳಲ್ಲಿ ಉದ್ಯಮಿಗಳು-ರಾಜಕಾರಣಿಗಳು ಯಾರು, ಉದ್ಯಮಿ-ರಾಜಕಾರಣಿಗಳಲ್ಲಿ ಮಾಧ್ಯಮವರ್ಗಕ್ಕೆ ಸೇರಿದವರ್ಯಾರು ಎಂದು ತಿಳಿದುಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಈ ಸಖ್ಯ ಒಂದಕ್ಕೊಂದು ಬೆಸೆದುಬಿಟ್ಟಿದೆ. ಬಿರ್ಲಾ ಕುಟುಂಬದ ಶೋಭನಾ ಭಾರ್ತಿಯಾ ಈಗ ’ಹಿಂದೂಸ್ತಾನ್ ಟೈಮ್ಸ್’ ಸಮೂಹದ ಅಧ್ಯಕ್ಷೆ. ’ಲೋಕಮತ್’ ಸಮೂಹವನ್ನು ನಡೆಸುತ್ತಿರುವುದು ರಾಜಕಾರಣ ಹಾಗೂ ಉದ್ಯಮದಲ್ಲಿರುವ ದರ್ದಾ ಕುಟುಂಬ. ’ಸನ್ ನೆಟ್‌ವರ್ಕ್’ ಮಾರನ್ ಕುಟುಂಬದ ಒಡೆತನದ್ದು. ಜಾಗರಣ್ ಪಬ್ಲಿಕೇಶನ್ಸ್, ಎಚ್‌ಟಿ ಮೀಡಿಯಾ, ದೈನಿಕ್ ಭಾಸ್ಕರ್ ಸಮೂಹ, ಎನ್‌ಡಿಟಿವಿಯಂತಹ ದೊಡ್ಡ ಸಂಸ್ಥೆಗಳ ನಿರ್ದೇಶಕರುಗಳ ಮಂಡಳಿಯಲ್ಲಿ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದೇ ಸಿಂಹಪಾಲು. ಜಗನ್ ಮೋಹನ್ ರೆಡ್ಡಿಯ ’ಸಾಕ್ಷಿ’, ರಾಜೀವ್ ಶುಕ್ಲಾ ಒಡೆತನದ ’ನ್ಯೂಸ್24’, ಜಯಲಲಿತಾ ಒಡೆತನದ ’ಜಯಾ ಟಿವಿ’ ಮತ್ತಿತರ ಚಾನೆಲ್‌ಗಳು, ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಬೇರೆಬೇರೆ ಹೆಸರುಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ನಡೆಸುವ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು... ದೇಶದಾದ್ಯಂತ ಇಂತಹ ಹತ್ತಾರು ನಿದರ್ಶನಗಳಿವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಂತೂ ರಾಜಕಾರಣಿಗಳು ಚಾನೆಲ್ ಹಾಗೂ ಪತ್ರಿಕೆ ನಡೆಸುವುದು ಒಂದು ಫ್ಯಾಶನ್ನೇ ಆಗಿಬಿಟ್ಟಿದೆ. ಈ ಎಲ್ಲ ಉದ್ಯಮ ಹಾಗೂ ರಾಜಕೀಯಾಸಕ್ತಿಗಳ ನಡುವೆ ಮಾಧ್ಯಮಗಳು ಗುಣಮಟ್ಟದ ಉದ್ಯೋಗಿಗಳನ್ನು ಪಡೆಯುವುದಕ್ಕೆ ಸೂಕ್ತ ಬಂಡವಾಳ ಹೂಡುತ್ತಿಲ್ಲ ಎಂಬ ಸಂಗತಿ ವಿಷಾದನೀಯವೇ. ಸಂಪತ್ತು ಸಂಗ್ರಹಣೆಯತ್ತಲೇ ಮನಸ್ಸು ಲೆಕ್ಕಾಚಾರ ಹಾಕತೊಡಗಿದಾಗ ಗುಣಮಟ್ಟ ಕಡೆಗಣಿಸಲ್ಪಡುತ್ತದೆ. ಉತ್ತಮ ವೇತನ ನೀಡಿ ಒಳ್ಳೆಯ ಪತ್ರಕರ್ತರನ್ನು ನೇಮಿಸಿಕೊಳ್ಳುವುದು ಅವರ ಆದ್ಯತೆಯಾಗಿರುವ ಬದಲು ಮೀಡಿಯೋಕರ್‌ಗಳನ್ನು ಬಳಸಿಕೊಂಡು ಅದೇ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೇ ಅವರ ಮಾಧ್ಯಮ ಸೇವೆ ಸೀಮಿತವಾಗುತ್ತದೆ. ಒಳ್ಳೆಯ ಟಿಆರ್‌ಪಿ ಗಳಿಸಿಕೊಳ್ಳುವುದಕ್ಕೆ ಅವರ ಬಳಿ ಅವರದ್ದೇ ಆದ ತಂತ್ರಗಾರಿಕೆಗಳು ಇದ್ದೇಇವೆ. ಇಷ್ಟೆಲ್ಲ ಆದ ಮೇಲೆ ಇಂತಹ ಮಾಧ್ಯಮಗಳ ವಿಶ್ವಾಸಾರ್ಹತೆ ಅಥವಾ ಹೂರಣದ ಪ್ರಾಮಾಣಿಕತೆ ಬಗ್ಗೆ ಮಾತನಾಡುವುದು ನಿಷ್ಪ್ರಯೋಜಕ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲವನ್ನು ಜನಸಾಮಾನ್ಯರಲ್ಲಿ ಸೃಷ್ಟಿಸುವುದೇ ಬಹುತೇಕ ಮಾಧ್ಯಮಗಳ ಹೆಚ್ಚುಗಾರಿಕೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೋ ಸ್ತಂಭವೆಂದೋ ಕರೆಸಿಕೊಂಡಿರುವ ನಮ್ಮ ಮಾಧ್ಯಮಗಳು ಆ ಅಭಿದಾನವನ್ನು ಉಳಿಸಿಕೊಳ್ಳುವ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದಾವೆಯೇ ಎಂಬುದು ಸದ್ಯದ ಪ್ರಶ್ನೆ. ಆದರೆ ಅದಕ್ಕೆ ಉತ್ತರಿಸುವ ಮೊದಲು ಕೆ.ಪಿ. ಎತ್ತಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 9:21 ಪೂರ್ವಾಹ್ನ 5 ಕಾಮೆಂಟ್‌ಗಳು: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ವಿಳಾಸ ಬರಕೊಳ್ಳಿ... ಸಿಬಂತಿ ಪದ್ಮನಾಭ Sibanthi Padmanabha ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.
by athreebook | Feb 10, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್‌, ಸುಬ್ಬಯ್ಯ ಎ.ಪಿ | 0 comments ಅಧ್ಯಾಯ ನಲ್ವತ್ತೆರಡು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ನಾಲ್ಕನೇ ಕಂತು ಡೋರಾಳನ್ನು ನಾನು ಮದುವೆಯಾಗುವುದರಲ್ಲೂ ಸ್ಪೆನ್ಲೋ ಸಹೋದರಿಯವರು ನಮ್ಮ ಮದುವೆಗೆ ಸಮ್ಮತಿ ಕೊಡುವುದರಲ್ಲೂ ಉಭಯ ಪಕ್ಷದವರಿಗೂ ತುಂಬಾ ಜವಾಬ್ದಾರಿಕೆಯಿದೆಯೆಂಬುದನ್ನು ನಾನು ಸಂಪೂರ್ಣ ಅರಿತಿದ್ದೆನು. ಅಂದರೆ, ನಾನು ಹಣ ಸಂಪಾದಿಸಬೇಕೆಂಬುದನ್ನು ತಿಳಿದಿದ್ದೆ. ಇದಕ್ಕಾಗಿಯೇ ನಾನು ಶೀಘ್ರಲಿಪಿಯನ್ನು ಬಹು ಶ್ರಮಪಟ್ಟು ಅಭ್ಯಾಸಮಾಡುತ್ತಿದ್ದೆನು. ಬಹು ಕಷ್ಟವಾದ ಈ ಶೀಘ್ರ ಲಿಪಿಗಾಗಿ ನಾನು ಎಷ್ಟೊಂದು ಶ್ರಮಪಟ್ಟಿರುತ್ತೇನೆಂಬುದನ್ನು ಬರೆದರೆ ಅದೊಂದು ಹೆಗ್ಗಳಿಕೆಯಾಗಿ ತೋರಬಹುದು. ನಾನು ನನ್ನ ಇತರ ಎಲ್ಲ ವ್ಯಾಸಂಗಗಳಲ್ಲೂ ಹಿಡಿದಿರುವ ಕಾರ್ಯಗಳಲ್ಲೂ ಇದೇ ರೀತಿಯಾಗಿ ಪರಿಶ್ರಮಿಸುತ್ತಾ ಯಶಸ್ವಿಯಾಗಿಯೇ ಮುಂದುವರಿಯುತ್ತಿದ್ದೆನು. ನನ್ನ ಜನ್ಮದತ್ತವಾದ ಗುಣಗಳೂ ಶಕ್ತಿಗಳೂ ವಿಶೇಷವೇನಿರದಿದ್ದರೂ ಹಿಡಿದ ಕೆಲಸವನ್ನು ಎಡೆಬಿಡದೆಯೂ ಮನಃಪೂರ್ವಕವಾಗಿಯೂ ಪರಿಷ್ಕಾರವಾಗಿಯೂ ಮಾಡುವ ಹಟ ನನಗೆ ಸದಾ ಇತ್ತು. ನಾನು ನನ್ನ ಕಾರ್ಯಗಳಲ್ಲಿ ಎಷ್ಟು ಕೃತಕಾರ್ಯನೋ, ಸಾರ್ಥಕ್ಯ ಪಡೆದವನೋ ಆಗಿರುವುದೆಲ್ಲ ಈ ಶಕ್ತಿಯಿಂದ ಎಂದು ನನ್ನ ನಂಬಿಕೆ. ಅಭಿವೃದ್ಧಿ ಶಿಖರವನ್ನು ಏರಲಿರುವ ಏಣಿಗೆ, ಬುದ್ಧಿ ಶಕ್ತಿ ಮತ್ತು ಉತ್ತಮ ಸಂದರ್ಭ ಎಂಬೆರಡು ಸರಳ ತೋಳುಗಳಾದರೆ, ಅವಿಶ್ರಾಂತ ದುಡಿಮೆಯೇ ಆ ಏಣಿಯ ಮೆಟ್ಟಲುಗಳು ಎಂದು ನನ್ನ ಅಭಿಪ್ರಾಯ. ಯಾವ ಕೆಲಸ ಮಾಡುವುದಾದರೂ ಅರೆಮನಸ್ಸಿನಿಂದ ಮಾಡದೆ ನಮ್ಮ ಸಂಪೂರ್ಣ ಶಕ್ತಿ ಮನಸ್ಸುಗಳನ್ನು ಉಪಯೋಗಿಸಿ ಮಾಡಿದರೇನೇ ಮಾಡಿದ ಕೆಲಸ ಪರಿಪೂರ್ಣವಾಗುವುದು. ಈ ಅಭಿಪ್ರಾಯಾನುಸಾರವಾಗಿಯೇ ನಾನು ಡೋರಾಳನ್ನು ಪಡೆಯಲು ಬೇಕಾದ ಅರ್ಹತೆ ಸಂಪಾದನೆಗಾಗಿ ನನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ ದುಡಿಯುತ್ತಿದ್ದೆನು. ಆದರೆ ನನ್ನಲ್ಲಿ ಇಂಥ ಗುಣಗಳನ್ನು ಪ್ರಚೋದಿಸಿ, ಸಂದರ್ಭಾನುಸಾರ ಪ್ರಶಂಸಿಸಿ, ಅಗತ್ಯಬಿದ್ದಲ್ಲಿ ತಿದ್ದಿ ಸರಿಪಡಿಸಿ, ಅಭಿವೃದ್ಧಿಗೆ ತಂದವಳು ಏಗ್ನೆಸ್ಸಳು ಎಂದು ನನ್ನ ಅಂತರಾತ್ಮ ಸದಾ ತಿಳಿಯುತ್ತಿತ್ತು. ಡಾಕ್ಟರ್ ಸ್ಟ್ರಾಂಗರ ಮನೆಗೆ ಮಿ. ವಿಕ್ಫೀಲ್ಡರೂ ಏಗ್ನೆಸ್ಸಳೂ ಬಂದು ಎರಡು ವಾರಗಳ ಕಾಲ ಸುಖವಾಗಿ ಇದ್ದು ಹೋಗಬೇಕೆಂಬ ಏರ್ಪಾಡು ಏಗ್ನೆಸ್ಸಳೂ ನಾನೂ ಕೂಡಿ ಮಾಡಿದ್ದೆವು. ಮಿ. ವಿಕ್ಫೀಲ್ಡರ ಮಾನಸಿಕ ಸ್ಥಿತಿಗೂ ಅವರ ದೇಹಾರೋಗ್ಯಕ್ಕೂ ಈ ತೆರನಾದ ಸ್ಥಳ ಬದಲಾವಣೆ ಅಗತ್ಯವೆಂದು ನಮಗೆ ತೋರಿದ್ದರಿಂದಲೇ ಆ ಏರ್ಪಾಡನ್ನು ಮಾಡಿದ್ದು. ಈ ಪ್ರಕಾರ ಅವರಿಬ್ಬರೂ ಡಾ| ಸ್ಟ್ರಾಂಗರ ಮನೆಗೆ ಬಂದಿದ್ದರು. ಆದರೆ ಇದೇ ಸಂದರ್ಭದಲ್ಲಿ ತನಗೆ ಒಬ್ಬಂಟಿಯಾಗಿರಲು ತುಂಬಾ ಬೇಸರವಾಗುತ್ತದೆಂದು, ಉರೆಯನ ತಾಯಿಯೂ ಕೇಂಟರ್ಬರಿಯನ್ನು ಬಿಟ್ಟು, ಲಂಡನ್ನಿಗೆ ಬಂದು, ಡಾ| ಸ್ಟ್ರಾಂಗರ ಮನೆ ಸಮೀಪವೇ ಒಂದು ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ ನಿಂತಳು. ತಾಯಿಯನ್ನು ನೋಡಲೋಸ್ಕರ ಉರೆಯನೂ ಆಗಿಂದಾಗ್ಗೆ ಲಂಡನ್ನಿಗೆ ಬಂದು ಹೋಗುತ್ತಿದ್ದನು. ನಾನು ಡಾ| ಸ್ಟ್ರಾಂಗರ ಮನೆಯಲ್ಲಿ ಇಂಥ ಒಂದು ದಿನವಿದ್ದಾಗ ಉರೆಯ ಡಾ| ಸ್ಟ್ರಾಂಗರ ಮನೆಗೆ ನನ್ನೊಡನೆ ಮಾತಾಡಲೆಂದೇ ಬಂದನು. ಅವನ ಸಂಪರ್ಕವನ್ನು ದೂರ ಮಾಡಬೇಕೆಂದು ನಾನು ಎಷ್ಟೆಷ್ಟು ಪ್ರಯತ್ನಿಸಿದರೂ ಉರೆಯ ಅಷ್ಟಷ್ಟೇ ತಗ್ಗಿ ಬಗ್ಗಿ, ಹಟದಿಂದ ನನ್ನ ಹತ್ತಿರ ಮಾತಾಡತೊಡಗಿದನು. ಹಾಗಾಗಿ, ಸಭ್ಯತೆಗಾಗಿ, ನಿರ್ವಾಹವಿಲ್ಲದೆ, ಅವನೊಡನೆ ಸ್ವಲ್ಪ ಮಾತಾಡಬೇಕಾಯಿತು. ಅವನ ಮುಖ್ಯ ಉದ್ದೇಶ ಸಾಧನೆಗೆ ಸಂಬಂಧಿಸಿದ ಮಾತುಗಳನ್ನಷ್ಟೇ ಹೇಳಬಯಸುತ್ತೇನೆ. ಅವನು ನನ್ನನ್ನು ನೋಡಿ – “ಮಿ. ಕಾಪರ್ಫೀಲ್ಡ್, ನಾವೂ ಇತ್ತ ಕಡೆ, ಬಂದಿದ್ದೇವೆ. ನಮ್ಮ ಮನೆ ಸಮೀಪದಲ್ಲಿದೆ” ಅಂದನು. “ನಿನಗೆ ಕುಷಿ ಕಂಡಲ್ಲಿರಲು ನಿನಗೆ ಹಕ್ಕಿದೆಯಷ್ಟೆ. ನನಗೇನು ಸಂಬಂಧ, ಅದರಲ್ಲಿ “ ಎಂದು ನಾನಂದೆನು. “ನಾವು ಕುಷಿ ಕಂಡು ಬಂದದ್ದು ಮಾತ್ರವಲ್ಲ, ಉದ್ದೇಶಪೂರ್ವಕವಾಗಿಯೇ ಬಂದಿದ್ದೇವೆ.” “ಉದ್ದೇಶವೇನಿದ್ದರೂ ನನಗೇನು ಸಂಬಂಧ?” “ನೀವು ನನ್ನ ಬಾಲ್ಯದ ಸ್ನೇಹಿತರು. ನಿಮ್ಮಲ್ಲಿ ಅಂಥ ಉದ್ದೇಶ ತಿಳಿಸುವ ಮನಸ್ಸಿದ್ದರೆ ತಪ್ಪಾಗಲಾರದಷ್ಟೆ! ನೋಡಿ, ನಾವು ಯಾರನ್ನು ಪ್ರೀತಿಸುತ್ತೇವೋ ಅವರನ್ನು ಕುರಿತಾಗಿ ಕಾವಲು ಇರಿಸುವುದು ಸರಿಯಲ್ಲವೇ?” ಈ ಕಾವಲು ಏಗ್ನೆಸ್ಸಳನ್ನು ಕುರಿತಾಗಿ ಎಂದು ನನಗೆ ಗೊತ್ತಿತ್ತಾದರೂ ಅರಿಯದವನಂತೆಯೇ – ನನಗೆ ಬಂದಿದ್ದ ಸಿಟ್ಟನ್ನು ತಡೆಹಿಡಿದುಕೊಂಡು ಕೇಳಿದೆ – “ಯಾರಿಗೋಸ್ಕರ ಕಾವಲು? ನನಗಾಗಿ ಅಲ್ಲವಷ್ಟೆ!” “ಅಲ್ಲ, ಅಲ್ಲ, ನಿಮಗಾಗಿ ಖಂಡಿತವಾಗಿಯೂ ಅಲ್ಲ. ಒಬ್ಬ ಹೆಂಗುಸಿಗಾಗಿ” “ಯಾವ ಹೆಂಗುಸಿಗಾಗಿ? ಹೆಸರು?” ಎಂದು ನನಗೆ ಆಶ್ಚರ್ಯ ತೋರಿಯೇ ಕೇಳಿದೆ. “ಹೇಳುವುದೇ ಬೇಡವೋ ಎಂದು ಹೆದರುತ್ತಿದ್ದೇನೆ, ಮಿ. ಕಾಪರ್ಫೀಲ್ಡ್. ಆದರೆ ನಮ್ಮ ಬಾಲ್ಯದ ಸ್ನೇಹಕ್ಕಾಗಿ, ನಿಮ್ಮಲ್ಲಿ ಮಾತ್ರ ಹೇಳುತ್ತೇನೆ” ಎಂದು ಹೇಳಿ, ಅತ್ತಿತ್ತ ನೋಡಿ, ಸಮೀಪದಲ್ಲಿ ಯಾರೂ ಇಲ್ಲವೆಂದು ಗೊತ್ತಾದಮೇಲೆ, ಮೆಲ್ಲಗೆ – “ಗಂಡಸಿಗೆ ಹೆದರಿ ನಾನು ಕಾವಲಿರುವುದಲ್ಲ, ಹೆಂಗುಸಿಗೆ ಹೆದರಿ, ಮಿಸೆಸ್ ಸ್ಟ್ರಾಂಗಳಿಗೆ ಹೆದರಿ, ಅವಳು ನನ್ನ ವಿರೋಧಿಯೆಂದು ಗ್ರಹಿಸಬೇಕಾಗಿದೆ” ಅಂದನು ಉರೆಯನು. “ಡಾಕ್ಟರರ ಪತ್ನಿ ನಿನ್ನ ವಿರೋಧಿಯಾಗುವುದು ತಾನೆ ಹೇಗೆ? ಎಂದು ಹೇಗೂ ಮಾತು ಪ್ರಾರಂಭಿಸಿದ ಮೇಲೆ ನಾನು ಕೇಳಬೇಕಾಯಿತು. “ಆ ಸಂಗತಿ ಹೇಳುತ್ತೇನೆ ಕೇಳಿ. ಡಾ| ಸ್ಟ್ರಾಂಗರ ಪತ್ನಿಯು ನನ್ನನ್ನು ಎಂದೂ ತಕ್ಕಷ್ಟು ಗೌರವದಿಂದ ಕಂಡವಳಲ್ಲ. ನನ್ನಂಥ ಬಡನೌಕರನು ಹೆಂಗಸರನ್ನು ಮೆಚ್ಚಿಸಲಾರ. ನಾನು ಬಡವನಾದರೂ ನನಗೆ ಕಣ್ಣಿದೆ, ಬುದ್ಧಿ ಇದೆ, ಮರ್ಯಾದೆ ಇದೆ. ಅಡಗಿ ನಡೆಯಬಹುದಾದ್ದನ್ನು ಪರೀಕ್ಷಿಸಿ ತಿಳಿಯುವ ಶಕ್ತಿಯಿದೆ. ಡಾಕ್ಟರರ ಪತ್ನಿಯು ಮಿ. ವಿಕ್ಫೀಲ್ಡರ ಮನೆಗೆ ಬಂದಿರುವುದೂ ಏಗ್ನೆಸ್ಸಳು ಡಾಕ್ಟರರ ಮನೆಗೆ ಹೀಗೆ ಇದ್ದು ಬರುವುದೂ ಸರಿಯಲ್ಲವೆಂದೇ ನನ್ನ ಅಭಿಪ್ರಾಯ. ಹಿಂದೆ ನಾನು ಮಿ. ವಿಕ್ಫೀಲ್ಡರ ಗುಮಾಸ್ತನಾಗಿದ್ದಾಗ ನಡೆದು ಹೋಗುತ್ತಿದ್ದ ಈ ವಿಧದ ಒಬ್ಬರು ಇನ್ನೊಬ್ಬರ ಮನೆಗೆ ಹೋಗಿ ಇದ್ದು ಬರುವ ಕ್ರಮವನ್ನು ಈಗ ನಾನು ಒಪ್ಪಲಾರೆನು. ನಾನು ಈಗ ಮಿ. ವಿಕ್ಫೀಲ್ಡರಂತೆಯೇ ವಕೀಲನಾಗಿದ್ದೇನೆ. ನನಗೂ ಮರ್ಯಾದೆಯಿದೆ, ಹೃದಯವಿದೆ. ನನಗೆ ಎಲ್ಲಾ ಗೊತ್ತಿದೆ, ಕಣ್ಣಿದೆ!” ಎಂದಷ್ಟೇ ಹೇಳಿ, ಅವನ ಮುಖವನ್ನು ಕೆಂಪು ಮಾಡಿಕೊಂಡು, ಅವನು ಏನನ್ನೋ ಕಂಡು ಕೋಪಿಸಿಕೊಂಡಿದ್ದ ಕಣ್ಣುಗಳನ್ನೇ ನನಗೆ ತೋರಿಸುತ್ತಿರುವವನಂತೆ ಆ ಕೆಂಪಾದ ಕಣ್ಣುಗಳಿಂದ ನನ್ನನ್ನೇ ನೋಡಿದನು. “ಇದರಿಂದೆಲ್ಲ ಏನು ಹೇಳಿದ ಹಾಗಯ್ತು? ಮತ್ತು ನನ್ನ ಹತ್ತಿರ ಹೇಳುವುದೇಕೆ?” ಎಂದು ನಾನು ಕೇಳಿದೆನು. “ನಿಮಗೆ ಸಂಬಂಧವಿಲ್ಲವೆಂದು ತೋರಬಹುದು ನಿಜ. ಆದರೆ ಕೇಳು, ಇನ್ನು ಮರೆಮಾಚದೆ ತಿಳಿಸುವೆನು. ಮಿಸೆಸ್ ಸ್ಟ್ರಾಂಗಳು ನಮಗೆಲ್ಲ ತೋರುವಂಥ ಶುದ್ಧ ಹೆಂಗುಸಲ್ಲ. ಅವಳು ಮಿ. ಜೇಕ್ ಮಾಲ್ಡನ್ನನ ಅತಿ ದೊಡ್ಡ ಏನನ್ನಲಿ? – ಸ್ನೇಹಿತಳೇ? ಹಿತಳೇ? ಯಾವುದೇ ಇರಲಿ, ಅವಳೊಬ್ಬ ಅವನ ಪ್ರೀತಿಯ ವಸ್ತು. ಹೀಗೆ ಕುಲೀನರೆಂಬವರ ಮನೆಯ ವಾತಾವರಣ ಕೆಟ್ಟಿರುವಾಗ ನನ್ನ ಏಗ್ನೆಸ್ಸಳು ಅಂಥ ಮನೆಯಲ್ಲಿ, ಮಿಸೆಸ್ ಸ್ಟ್ರಾಂಗಳ ಸಂಪರ್ಕದಲ್ಲಿ ಇರುವುದಾದರೆ ಸಂಬಂಧಪಟ್ಟ ನನ್ನ ಕಡೆಯ ಕಾವಲು ಅಗತ್ಯವಲ್ಲವೇನು? ಏಗ್ನೆಸ್ಸಳು ಅಲ್ಲಿರುವುದು ಒಳ್ಳೆಯದಲ್ಲ – ನಾನು ಆಕ್ಷೇಪಿಸುವೆನು, ಅಡ್ಡ ಬರುವೆನು, ಖಂಡಿತವಾಗಿಯೂ ತಡೆದು ನಿಲ್ಲಿಸುವೆನು” ಎಂದು ಬಹು ಉದ್ವೇಗದಿಂದ ಉರೆಯ ಹೇಳಿದನು. ನಾವು ಇಷ್ಟು ಮಾತಾಡುತ್ತಿದ್ದಾಗ ಜೇಕ್ ಮಾಲ್ಡನ್ನನು ಗೇಟನ್ನು ದಾಟಿ ನಮ್ಮ ಮನೆ ಕಡೆಗೆ ಬರುತ್ತಿದ್ದನು. ಉರೆಯ ಓಡಿ ಹೋಗಿ ಅಡಗಿಕೊಂಡನು. ನಾನು ನನ್ನಷ್ಟಕ್ಕೆ ಬೇರೆ ಕಡೆ ಹೋದೆನು. ಈ ಸಂಗತಿ ನಡೆದ ಮೂರನೆ ದಿನ ನಾನು ಡೋರಾಳ ಮನೆಗೆ ಹೋದೆನು. ಹೋಗುವಾಗ ನನ್ನ ಜತೆಯಲ್ಲಿ ಏಗ್ನೆಸ್ಸಳನ್ನು ಕರೆದುಕೊಂಡು ಹೋದೆನು. ಡೋರಾಳ ಮನೆಯಲ್ಲಿ ನಮಗೆ ಚಹದ ಏರ್ಪಾಡು ಇತ್ತು. ಏಗ್ನೆಸಳೂ ಡೋರಾ ನಾನೂ ಜತೆಯಲ್ಲಿ ಕುಳಿತು ಚಹ ಸೇವಿಸುವಾಗ ಡೋರಾಳಿಗೂ ಏಗ್ನೆಸ್ಸಳಿಗೂ ಪರಿಚಯ ಬೆಳೆಯಿತು. ಇದಕ್ಕೆ ಹಿಂದೆ ನಾನು ಡೋರಾಳೊಡನೆ ಏಗ್ನೆಸ್ಸಳನ್ನು ಹೊಗಳಿ ಮಾತಾಡಿದಾಗಲೆಲ್ಲ ಏಗ್ನೆಸ್ಸಳನ್ನು ಕುರಿತು ಡೊರಾ ಹೆದರಿಕೊಂಡೇ ಇರುತ್ತಿದ್ದಳು. ಆದರೆ ಇಂದಿನ ಅವರಿಬ್ಬರ ಭೇಟಿಯಲ್ಲಿ ಏಗ್ನೆಸ್ಸಳು ಡೋರಾಳ ಸ್ನೇಹಿತಳೇ ಆಗಿಬಿಟ್ಟಳು. ಚಹ ಸೇವನೆಗೆ ಮೊದಲು ಸಾಂಪ್ರದಾಯಕವಾದ ಉಪಚಾರದ ಮಾತುಗಳನ್ನು ಮಾತ್ರ ಮಾತಾಡಿ, ಸ್ವಲ್ಪ ಹೆದರಿಕೊಂಡೇ ಇರುತ್ತಿದ್ದ ಡೋರಾ ಚಹ ಸೇವನೆಯಾದನಂತರ ಸಂಪೂರ್ಣ ಬದಲಾಗಿದ್ದಳು. ಏಗ್ನೆಸ್ಸಳ ಎದುರೇ ಡೋರಾ ನನ್ನನ್ನು ನೋಡಿ – “ನೀನು ಹೇಳುತ್ತಿದ್ದ ಹಾಗಿಲ್ಲ ಏಗ್ನೆಸ್ಸಳು” ಅಂದಳು. “ಹಾಗಾದರೆ ಟ್ರಾಟೂಡ್ ನನ್ನನ್ನು ಹಾಗೊಂದು ದೂರಿರಬೇಕಲ್ಲವೆ” ಎಂದು ನಗಾಡುತ್ತಾ ಏಗ್ನೆಸ್ಸಳು ಕೇಳಿದಳು. ಅದಕ್ಕೆ ಡೊರಾಳು ಏಗ್ನೆಸ್ಸಳಿಗೆ ಉತ್ತರವಾಗಿ – “ಇಲ್ಲ, ಇಲ್ಲ – ಅವನಿಗೆ ನಿನ್ನನ್ನು ಹೊಗಳಿದಷ್ಟು ಸಾಲದು. ನಿನ್ನ ಬುದ್ಧಿ ಎಷ್ಟೊಂದು ಎಂಬುದನ್ನು ಆಗಾಗ ನನ್ನಲ್ಲಿ ಹೊಗಳುತ್ತಾ ಕೊನೆಗೆ ನಾನು ನಿನ್ನಂಥವಳೆದುರು ಬಂದು ಮಾತಾಡುವುದು ಹೇಗೆಂದೇ ನಾನು ಹೆದರುತ್ತಿದ್ದೆ” ಅಂದಳು ಡೋರಾ. “ಏಗ್ನೆಸ್ಸಳು ಯಾರನ್ನೂ ಸಮಾಧಾನಗೊಳಿಸಬಲ್ಲಳು. ಅವಳು ಇದ್ದಲ್ಲಿ ಶಾಂತಿ, ಸಮಾಧಾನ, ಧೈರ್ಯ ಉಂಟಾಗುವುದು. ಅವಳು ಇದ್ದಲ್ಲಿ ಜಯವಿದೆ. ಅವಳು ನನ್ನ ಶುಭ ದೇವತೆ, ರಕ್ಷಣಾ ದೇವತೆ. ನಿನಗೂ ಅವಳು ಹಾಗೆಯೇ ಆಗಲೆಂದೇ ನಾನು ಅವಳ ಪರಿಚಯವನ್ನು ಮಾಡಿಸುತ್ತಿದ್ದೇನೆ. ನೀನು ಅವಳೊಡನೆ ಇಷ್ಟು ಸಂತೋಷದಿಂದಿರುವುದನ್ನು ಕಂಡು ನನಗೆ ಪರಮಾನಂದವಾಗಿದೆ” ಎಂದು ನಾನು ಹೇಳಿದೆ. ಹೀಗೆಲ್ಲಾ ಮಾತಾಡಿಕೊಂಡು ನಾವು ಬಹು ಸಂತೋಷದಿಂದ ಅಂದಿನ ಭೇಟಿ ಪರಿಚಯಗಳ ಕಾಲವನ್ನು ಕಳೆದೆವು. ಆ ದಿನ ನಾವು ಡೋರಾಳ ಮನೆಯನ್ನು ಬಿಟ್ಟು ಹೊರಡುವಾಗ, ಡೋರಾಳು ಬಂದು ನನ್ನನ್ನು ಅಪ್ಪಿ ಹಿಡಿದುಕೊಂಡು – “ಏಗ್ನೆಸ್ಸಳಂಥವಳು ನನ್ನ ಜತೆಯಲ್ಲಿದ್ದಿದ್ದರೆ ನಾನು ಇನ್ನೂ ಬುದ್ಧಿವಂತಳಾಗುತ್ತಿದ್ದೆನಲ್ಲವೇ?” ಎಂದು ಕೇಳಿದಳು. “ಈಗ ನಿನಗೆ ಏನು ಬುದ್ಧಿವಂತಿಕೆಗೆ ಕೊರತೆ ಬಂದಿದೆ ಡೋರಾ? ದಿನ ಹೋದಂತೆ, ಅನುಭವದಿಂದ, ಇನ್ನೂ ಬುದ್ಧಿವಂತಳಾಗುವೆ” ಎಂದು ನಾನು ಸಮಾಧಾನ ಹೇಳಿದೆ. “ಆದರೂ ಜೂಲಿಯಾ ಮಿಲ್ಸಳ ಬದಲು ಏಗ್ನೆಸ್ಸಳು ನನ್ನ ಜತೆಯಲ್ಲಿದ್ದಿದ್ದರೆ?” ಎಂದು ಹೇಳಿ, ಸ್ವಲ್ಪ ಆಲೋಚನೆ ಮಾಡುತ್ತಾ ನಾನು ಮಾತಾಡುವ ಮೊದಲೇ ಕೇಳಿದಳು – “ಏಗ್ನೆಸ್ಸಳು ನಿನಗೇನಾಗಬೇಕು?” ಎಂದು ಕೇಳಿದಳು. “ನಮಗೆ ರಕ್ತ ಸಂಬಂಧವಿಲ್ಲ. ಆದರೆ ಅಣ್ಣ ತಂಗಿಯರಂತೆ ಬಾಲ್ಯದಲ್ಲಿ ಜತೆಯಲ್ಲೇ ಬೆಳೆದವರು” ಎಂದೆ. “ಹಾಗಾದರೆ ಅಂಥವಳ ಜತೆಯಲ್ಲಿದ್ದೂ ನನ್ನನ್ನೇಕೆ ಪ್ರೀತಿಸಿದೆಯೋ ಆಶ್ಚರ್ಯ!” ಎಂದು ಸ್ವಲ್ಪ ಅಸಮಾಧಾನವೋ ಆಶ್ಚರ್ಯವೋ ಆದವಳಂತೆ ಹೇಳಿಕೊಂಡಳು. ಆಗ ನಾನು ಹೇಳಿದೆ – “ನಿನ್ನನ್ನು ಕಂಡು ಪ್ರೀತಿಸದಿರುವುದು ಸಾಧ್ಯವೇ ಮುದ್ದೂ?” “ನನ್ನನ್ನು ಕಾಣದೇ ಇದ್ದಿದ್ದರೆ ಏನು ಮಾಡುತ್ತಿದ್ದೆ?” “ನಾವು ಜನಿಸದೇ ಇದ್ದಿದ್ದರೆ? – ಎಂಬುದೇ ಅದಕ್ಕೆ ಉತ್ತರ ಡೋರಾ” ಎಂದು ನಾನು ಉತ್ತರ ಕೊಡಬೇಕಾಯಿತು. ಅವಳ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಮೂಡಿರಬೇಕು. ಆ ಆಲೋಚನೆಗಳನ್ನು ಮಾತುಗಳಲ್ಲಿ ಹೇಳಲು ತಿಳಿಯದೆ, ಮಾತಿಗಿಂತ ಮುತ್ತೇ ಉತ್ತಮವೆಂದು, ಲೆಕ್ಕ ಮಾಡಿ `ಒಂದು, ಎರಡು, ಮೂರು’ ಎಂದನ್ನುತ್ತಾ ನನ್ನನ್ನು ಚುಂಬಿಸಿದಳು. ಇಷ್ಟೆಲ್ಲಾ ಆದಮೇಲೆ ನಾವು ಡಾಕ್ಟರ್ ಸ್ಟ್ರಾಂಗರ ಮನೆಗೆ ಹೊರಟೆವು. ನಾವು ಡಾಕ್ಟರರ ಮನೆಗೆ ಸಮೀಪಿಸಿ ಬಂಡಿಯಿಳಿದು ಒಳರಸ್ತೆಯಲ್ಲಿ ನಡೆಯತೊಡಗಿದಾಗ ನಾನಂದೆ – “ಏಗ್ನೆಸ್, ನೀನು ಡೋರಾಳ ಹತ್ತಿರ ಕುಳಿತು ಮಾತಾಡಿದ್ದರಿಂದ ಉಂಟಾಗಿರುವ ಪರಿಣಾಮವನ್ನು ನೋಡುವಾಗ ನೀನು ನನ್ನ ರಕ್ಷಣಾ ದೇವತೆ ಮಾತ್ರವಲ್ಲ, ಅವಳ ರಕ್ಷಣಾ ದೇವತೆಯೂ ಆಗಿರುವೆಯೆಂದು ತಿಳಿಯುವೆನು.” “ನಾನೊಬ್ಬ ನಿಶ್ಶಕ್ತ ದೇವತೆ ಮಾತ್ರ! ಆದರೆ ನಿಮ್ಮ ಶುಭವನ್ನೂ ಹಿತವನ್ನೂ ಸದಾ ಬಯಸುತ್ತಿರುವ ದೇವತೆಯೇನೋ ಹೌದು!” ಎಂದು ನಮ್ರವಾಗಿ, ಗಂಭೀರ ಸ್ವರದಿಂದ, ಹೇಳಿದಳು. ಅವಳ ಈ ಮಾತು, ಆಗಿನ ಆ ಸ್ವರ ನನ್ನ ಅಂತರಂಗವನ್ನೇ ಸ್ಪರ್ಷಿಸಿದುವು. ನಾನು ನನ್ನ ಅಂತರಂಗದಲ್ಲೇ ಏಗ್ನೆಸ್ಸಳಿಗೆ ಏನೋ ಒಂದು ವೇದನೆಯಿರಬೇಕೆಂದು ತಿಳಿಯತೊಡಗಿದೆನು. ಅಂಥ ದುಃಖ ಅವಳಿಗೆ ಏನಿರಬಹುದೆಂದು ತಿಳಿಯಲಿಚ್ಛಿಸಿ – “ಏಗ್ನೆಸ್, ನೀನು ಇಂದು ಡೋರಾಳ ಜತೆಯಲ್ಲಿ ಕುಳಿತು ಮಾತಾಡುತ್ತಿದ್ದಾಗ ನಿನ್ನಲ್ಲಿ ತೋರಿ ಬರುತ್ತಿದ್ದಷ್ಟು ಉತ್ಸಾಹವನ್ನು ನಾನು ನಿನ್ನಲ್ಲಿ ಹಿಂದೆಂದೂ ಕಂಡಿರುವುದಿಲ್ಲ. ನಿನ್ನ ಉತ್ಸಾಹವನ್ನು ಕಂಡು ನನಗೆ ತುಂಬಾ ಸಂತೋಷವಾಯಿತು. ನೀನು ಈಗೀಚೆಗೆ ನಿಮ್ಮ ಮನೆಯಲ್ಲೂ ಸಹ ಮೊದಲಿಗಿಂತಲೂ ಹೆಚ್ಚು ಸುಖಿಯಾಗಿರುವಿಯೇನು?” ಎಂದು ಕೇಳಿದೆ. “ನಾನು ನನ್ನ ಮಟ್ಟಿಗೆ ಸುಖವಾಗಿದ್ದೇನೆ, ಸಂತೋಷದಿಂದಲೂ ಇದ್ದೇನೆ, ಅದು ನನ್ನ ಸ್ವಭಾವ” ಎಂದು ಅವಳು ಉತ್ತರವಿತ್ತಳು. ಅವಳ ಸ್ವಭಾವ ದೈವಿಕ ಸ್ವಭಾವವೆಂದೇ ನಾನವಳ ಮುಖ ನೋಡುವಾಗ ತಿಳಿದೆನು. ರಾತ್ರಿಯ ನಕ್ಷತ್ರಗಳ ಬೆಳಕಿನಲ್ಲೇ ಆಗ ನಾನವಳನ್ನು ನೋಡುತ್ತಿದ್ದೆನಾದರೂ ಆ ದೈವಿಕ ಪ್ರಭೆಯನ್ನು ಆಗ ಕಂಡೆನು. ಅವಳ ಉತ್ತರ ಬಹು ಚುಟುಕಾಗಿದ್ದರೂ ಆ ಉತ್ತರದ ಹಿಂದೆ ಅಡಗಿದ್ದ ಭಾವನೆಗಳು ತುಂಬಾ ಇರಬೇಕೆಂದು ನಾನು ಊಹಿಸುತ್ತಿದ್ದೆನು. ಹೀಗೆ ಸ್ವಲ್ಪ ದೂರ ಮೌನವಾಗಿಯೇ ನಾವು ನಡೆಯುತ್ತ ಸಾಗುತ್ತಿದ್ದಾಗ ಅವಳಾಗಿಯೇ ಅಂದಳು – “ಮನೆಯಲ್ಲಿ ಹೊಸ ಬದಲಾವಣೆಯೇನೂ ಆಗಿರುವುದಿಲ್ಲ” ಅವಳ ಮಾತಿನ ಮರ್ಮವನ್ನು ನಾನು ಅರ್ಥಮಾಡಿದೆ, ಹಾಗಾಗಿ ಅವಳನ್ನು ಪ್ರಶ್ನಿಸಿದೆ – “ಆ ರಾತ್ರಿ ಅವನು ಎತ್ತಿದ ಪ್ರಸ್ತಾಪ ಪುನಃ ಬಂತೇ? ನಿನಗೆ ಬೇಸರವಾಗುವುದಿದ್ದರೆ ಹೇಳಬೇಡ. ನಾನು ಕೇಳುತ್ತಿರಲಿಲ್ಲ – ಆದರೆ, ನೀನು ನಿನ್ನ ತಂದೆಯ ಹಿತಕ್ಕಾಗಿ ಎಂಥ ತ್ಯಾಗವನ್ನಾದರೂ ಮಾಡುವೆಯೆಂದೇ ನನ್ನ ಅಂಜಿಕೆ.” “ಟ್ರಾಟೂಡ್, ನೀನು ಹೆದರಬೇಡ. ಸತ್ಯವೂ ನ್ಯಾಯವೂ ಎಂದಾದರೂ ಗೆದ್ದೇ ಗೆಲ್ಲುವವು. ಎಂಥ ಪ್ರಸಂಗ ಬಂದಾಗ್ಯೂ ನೀನು ಅಂಜುತ್ತಿರುವ ಕಾರ್ಯವನ್ನು ನಾನು ಮಾಡುವುದಿಲ್ಲವೆಂದು ಭರವಸೆ ಕೊಡುವೆನು. ಆ ವಿಷಯಕ್ಕೆ ನಾನೆಂದೂ ಬಗ್ಗುವವಳಲ್ಲ. ನಿನ್ನ ಸಹಾಯ ಅಗತ್ಯಬಿದ್ದಾಗ ದಾಕ್ಷಿಣ್ಯ ಬಿಟ್ಟು ಸಹಾಯ ಕೇಳುವೆನು” ಅಂದಳು ಏಗ್ನೆಸ್. ಹೀಗೆ ಮಾತಾಡುತ್ತಾ ನಾವು ಡಾ| ಸ್ಟ್ರಾಂಗರ ಮನೆಗೆ ತಲುಪಿದೆವು. ಏಗ್ನೆಸ್ಸಳು ಮಿಸೆಸ್ ಸ್ಟ್ರಾಂಗರ ಕೋಣೆ ಕಡೆಗೆ ಹೋದಳು. ನಾನೊಬ್ಬನೇ ನನ್ನ ಮಲಗುವ ಕೋಣೆ ಕಡೆಗೆ ಹೊರಟೆನು. ಹೀಗೆ ಹೋಗುವಾಗ ನಾನು ಡಾ| ಸ್ಟ್ರಾಂಗರ ಆಫೀಸಿನ ಬಾಗಿಲನ್ನು ದಾಟಿಕೊಂಡು ಹೋಗಬೇಕಾಗಿತ್ತು. ಆಗ ಅವರ ಆಫೀಸಿನಿಂದ ಬೆಳಕು ಬರುತ್ತಿದ್ದುದನ್ನು ಕಂಡು, ಆ ದಿನ ನಾನು ನನ್ನ ಕೆಲಸದ ಬಗ್ಗೆ ಹೋಗದೆ ಗೈರುಹಾಜರಾಗಿದ್ದುದಕ್ಕಾಗಿ ಕ್ಷಮೆ ಕೇಳೋಣವೆಂದು ಅವರ ಆಫೀಸಿಗೆ ಹೋದೆನು. ಅವರ ಆಫೀಸಿನಲ್ಲಿ ಡಾಕ್ಟರ್ ಸ್ಟ್ರಾಂಗರು ತನ್ನ ಮುಖಕ್ಕೆ ಎರಡು ಕೈಗಳನ್ನು ಮುಚ್ಚಿಕೊಂಡು ಆರಾಮ ಕುರ್ಚಿಯಲ್ಲಿ ಕುಳಿತಿದ್ದರು. ಮಿ. ವಿಕ್ಫೀಲ್ಡರು ಪಕ್ಕದ ಮತ್ತೊಂದು ಕುರ್ಚಿಯಲ್ಲಿ ಕುಳಿತು ಜೋಲು ಮುಖದಿಂದ ಡಾ| ಸ್ಟ್ರಾಂಗರನ್ನು ನೋಡುತ್ತಿದ್ದರು. ಉರೆಯ ಒಂದು ಖಾಲಿ ಕುರ್ಚಿಯ ಬೆನ್ನನ್ನು ಹಿಡಿದು ನಿಂತು ಡಾಕ್ಟರ್ ಸ್ಟ್ರಾಂಗರನ್ನೇ ನೋಡುತ್ತಿದ್ದನು. ಅವರೊಳಗೆ ಗುಪ್ತವಾದುದೋ ಗಹನವಾದುದೋ ಏನೋ ಕೆಲವು ಮಾತುಗಳು ನಡೆಯುತ್ತಿದ್ದು, ಆಗ ತಾನೇ ಮಾತನ್ನು ನಿಲ್ಲಿಸಿದ್ದಂತೆ ತೋರಿತು. ಇದನ್ನು ಕಂಡು ನಾನು ಅಲ್ಲಿ ನಿಲ್ಲುವುದು ಮರ್ಯಾದೆಯಲ್ಲವೆಂದು ಹೊರಟೆನು. ಆದರೆ ಡಾ| ಸ್ಟ್ರಾಂಗರು ನನ್ನನ್ನು ನಿಲ್ಲಲು ಒತ್ತಾಯಿಸಿದರು. ಅವರ ದಾಕ್ಷಿಣ್ಯಕ್ಕಾಗಿ ನಾನು ಅಲ್ಲಿ ನಿಂತೆನು. ಉರೆಯ ನಮ್ಮೆಲ್ಲರನ್ನೂ ಒಂದಾವೃತ್ತಿ ನೋಡಿ – “ಈ ವಿಷಯವು ಎಲ್ಲರಿಗೂ ದುಃಖಕರವಾದುದು. ಆದರೆ ನಾವು ಇಷ್ಟು ಮಾತಾಡಿರುವಾಗ ಉಳಿದ ಅಂಶವನ್ನು ಮರೆಮಾಚಿಡುವುದು ಧರ್ಮವಲ್ಲ. ಅಡಗಿಸಿಡುವುದರಿಂದ ಯಾರಿಗೂ ಸುಖವಿಲ್ಲ. ಈ ಸಂಗತಿಯು ಮಿ. ಕಾಪರ್ಫೀಲ್ಡರಿಗೂ ಗೊತ್ತಿದೆ” ಎಂದು ಅಂದನು. “ಯಾವ ವಿಷಯ?” ಎಂದು ನಾನು ಈ ಸಂದರ್ಭದಲ್ಲಿ ಕೇಳಬೇಕಾಯಿತು. “ಮೊನ್ನೆ ನಿಮ್ಮೊಡನೆ ಮಾತಾಡಿದ್ದು – ವಿವರಿಸುವುದು ಬೇಸರದ ಕೆಲಸವಾದರೂ ಹೇಳಬೇಕೆಂದು ಅಪೇಕ್ಷೆ ಪಟ್ಟರೆ ಹೇಳುವೆನು. ಮಿಸೆಸ್ ಸ್ಟ್ರಾಂಗರ ಮತ್ತು ಮಿ. ಜೇಕ್ ಮಾಲ್ಡನ್ನರವರನ್ನು ಕುರಿತು ಊರಿಗೂರೇ ಮಾತಾಡುತ್ತಿರುವ ವಿಷಯ ಎಂದು ವಿವರಿಸಿದ ಉರೆಯ. “ಮೊನ್ನೆ ನೀನಾಗಿಯೇ ನನ್ನ ಹತ್ತಿರ ಏನೇನೋ ಹೇಳಿದೆ. ನಿನ್ನ ಬಾಯಿಯಿಂದ ಮೊನ್ನೆ ಕೇಳಿದ್ದೇ ಮೊದಲು ಕೇಳಿದ ವರ್ತಮಾನ, ನನಗೆ ಗೊತ್ತೂ ಅಷ್ಟೇ!” ಇದು ನನ್ನ ಉತ್ತರವಾಗಿತ್ತು. “ನಿಜ, ನಿಮಗೆ ನಾನು ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ತಿಳಿವಳಿಕೆಯುಳ್ಳ ನೀವು ಅರ್ಥಮಾಡಿರಬೇಕೆಂದು ನಂಬಿದ್ದೇನೆ. ಈ ವಿಷಯವು ನಿಮಗೆ ಗೊತ್ತಿಲ್ಲದಿದ್ದರೂ ಚಿಂತೆಯಿಲ್ಲ. ಮಿ. ವಿಕ್ಫೀಲ್ಡರಿಗೆ ಈ ವಿಷಯ ಗೊತ್ತಿದೆಯಷ್ಟೇ – ಅಲ್ಲವೇ ಪಾರ್ಟ್ನರ್?” ಎಂದು ಉರೆಯನು ಬಹು ಸಲಿಗೆಯ ಮಾತುಗಳಿಂದ, ಅಡಗಿ ಗೋಚರಿಸುತ್ತಿದ್ದ ಅಧಿಕಾರವಾಣಿಯಿಂದ, ಮಿ. ವಿಕ್ಫೀಲ್ಡರನ್ನೇ ವಿಚಾರಿಸಿದನು. “ಈ ಪ್ರಶ್ನೆಗೆ ಉತ್ತರಕೊಡುವು ಬಹು ಕಷ್ಟದ ಸಂಗತಿ. ಆದರೆ, ಉರೆಯ ಹೇಳುವ ಮಾತುಗಳು ಸ್ವಲ್ಪ ಮಟ್ಟಿಗೆ ಸತ್ಯವೇ ಹೌದು” ಎಂದು ಮಿ. ವಿಕ್ಫೀಲ್ಡರು ಹೇಳಿದರು. “ಪಾರ್ಟ್ನರ್, ದಯಮಾಡಿ ಹೇಳಿ: ಜೇಕ್ ಮಾಲ್ಡನನ್ನನ್ನು ಇಂಡಿಯಕ್ಕೆ ಕಳುಹಿಸಲು ನಿಮಗೊಂದು ಗುಪ್ತ ಉದ್ದೇಶವಿರಲಿಲ್ಲವೇ? ಡಾಕ್ಟರರ ಮನೆಗೆ ನಿಮ್ಮ ಮಗಳು ಏಗ್ನೆಸ್ಸಳನ್ನು ಕಳುಹಿಸಲು ನೀವು ಹಿಂಜರಿಯುತ್ತಿರಲಿಲ್ಲವೇ? ತಿಳಿಸಿರಿ” ಅಂದನು ಉರೆಯ. ಈ ಮಾತುಗಳನ್ನು ಕೇಳಿದಾಗ ಮಿ. ವಿಕ್ಫೀಲ್ಡರ ಸ್ಥಿತಿ ಬಹು ಕರುಣಾಜನಕವಾಗಿತ್ತು. ಪ್ರಾಯ ಹೋಗಿ, ಅನೇಕ ವಿಧದ ದುಃಖಗಳಿಗೊಳಗಾಗಿದ್ದ ಅವರು ಈಗ ತನ್ನ ಗುಮಾಸ್ತ ಉರೆಯನ ಪರಿಪೂರ್ಣ ಅಧಿಕಾರ ಬೆದರಿಕೆಯೊಳಗಿರುವಂತೆ ತೋರಿದರು. ಈ ವರೆಗೆ ಅವರನ್ನು ಇಂಥ ಸಲಿಗೆಯ ಮಾತುಗಳಿಂದ ಅಥವಾ ಅಧಿಕಾರವಾಣಿಯಿಂದ, ಮಾತಾಡಿಸಿದವರಿರಲಿಲ್ಲ. ಡಾ| ಸ್ಟ್ರಾಂಗರು ಅವರ ಬಾಲ್ಯದ ಸ್ನೇಹಿತರೇ ಆಗಿದ್ದರು. ಅಂಥ ಗೌರವಯುತ ಸ್ನೇಹಿತರಿಗೇ ಅಪಮಾನಕರವಾದ ಮಾತುಗಳನ್ನು ಇಂದು ಅವರು ಆಡಬೇಕಾದ ಪ್ರಸಂಗ ಉರೆಯನ ಬೆದರಿಕೆಯ ಕಾರಣವಾಗಿ ಅವರಿಗೆ ಬಂದೊದಗಿದೆ. ಅವರು ಈ ದುಃಖ, ಹಿಂಸೆಗಳನ್ನು ಸಹಿಸಲಾರದೆ, ಕಣ್ಣೀರು ಸುರಿಸದಿದ್ದರೂ, ಅಳುತ್ತಾ ಹೇಳಿದರು – “ಡಾಕ್ಟರ್ ಸ್ಟ್ರಾಂಗರೇ ನಾವು ಬಾಲ್ಯದಿಂದಲೂ ಸ್ನೇಹಿತರು, ನಿಮ್ಮನ್ನು ಕುರಿತಾದ ನನ್ನ ಎಲ್ಲಾ ಕಾರ್ಯಗಳಲ್ಲೂ ಎಲ್ಲಾ ಊಹನೆಗಳಲ್ಲೂ ಮಾತಿನಲ್ಲೂ ನಿಮ್ಮ ಸುಖ, ನಿಮ್ಮ ಮಾನಮರ್ಯಾದೆ, ಕೀರ್ತಿಗಳ ರಕ್ಷಣೆಯೇ ನನ್ನ ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡಿದ್ದೆನು. ಈ ಉದ್ದೇಶದ ಸಾಧನೆಗಾಗಿ ಇತರರಿಗೆ ತೋರುವಾಗ ನಿಮಗೆ ಅಪಮಾನಕರವೆಂದು ತೋರುವಂಥ ಕೆಲವು ಕಾರ್ಯಗಳನ್ನು ನಾನು ಮಾಡಿರಬಹುದು. ನಿಮ್ಮ ಪತ್ನಿಯ ಸಮೀಪದ ಬಂಧುವೂ ಬಾಲ್ಯದ ಸ್ನೇಹಿತನೂ ಆಗಿರುವ್ ಜೇಕ್ ಮಾಲ್ಡನ್ನನು ನಿಮ್ಮ ಪತ್ನಿಯ ಸಮೀಪ ಇರುವುದನ್ನು ನಾನು ಅಂತರಂಗದಲ್ಲೇ ವಿರೋಧಿಸುತ್ತಿದ್ದೆನು. ಅವನಿಗೆ ದೂರ ದೇಶದಲ್ಲಿ ವೃತ್ತಿಯನ್ನು ಕಲ್ಪಿಸಿಕೊಡುವುದರಲ್ಲೂ ನನ್ನ ಉದ್ದೇಶವು ಅವರಿಬ್ಬರು ದೂರದೂರ ಇರಬೇಕೆಂಬುದೇ ಆಗಿತ್ತು. ನನ್ನ ಅಭಿಪ್ರಾಯದಂತೆಯೇ ನಿಮ್ಮದೂ ಇರಬೇಕೆಂದೂ ನೀವು ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ನನಗೆ ತಿಳಿಸಲು ಅಳುಕುತ್ತಿದ್ದೀರೆಂದೂ ನಾನು ಗ್ರಹಿಸಿಕೊಂಡಿದ್ದೆನು. ಅದಕ್ಕಿಂತ ಹೆಚ್ಚು ನಾನು ಏನೂ ಹೇಳಲಾರೆ.” ಉರೆಯ ಇದೇ ವಿಷಯವನ್ನೆತ್ತಿಕೊಂಡು ತುಂಬಾ ಅಬದ್ಧವಾಗಿ ಮಾತಾಡಿದನು. ಮಿಸೆಸ್ ಸ್ಟ್ರಾಂಗಳು ಜೇಕ್ ಮಾಲ್ಡನ್ನನಲ್ಲಿ ಅನುರಕ್ತಳಾಗಿರುವಳೆಂಬುದೇ ಅವನ ಒಂದನೆ ಆರೋಪ. ಆದರೆ, ಈ ವಿಷಯದಲ್ಲಿ ಉರೆಯನಿಗೆ ಪ್ರವೇಶಕ್ಕೆ ಎಷ್ಟು ಎಡೆಯಿತ್ತೆಂಬುದು ಸಂಶಯದ ವಿಷಯ. ಮಿಸೆಸ್ ಸ್ಟ್ರಾಂಗಳ ಸಮೀಪದಲ್ಲಿ – ತಾನು ಪ್ರೀತಿಸುತ್ತಿದ್ದ, ಏಗ್ನೆಸ್ಸಳು ಒಬ್ಬಂಟಿಗಳಾಗಿ ಇರಬಾರದು ಎಂಬ ಒಂದು ಬಹು ಚಿಕ್ಕ ವಿಷಯವನ್ನು, ತಾನು ಮಿ. ವಿಕ್ಫೀಲ್ಡರ ಸರಿಸಮಾನ, ಸಹಭಾಗಿಯಾದ ವಕೀಲ, ಎಂಬ ದುರಹಂಕಾರದಿಂದ ದೊಡ್ಡದು ಮಾಡಿಕೊಂಡು, ಅವನಿಗೆ ನಮ್ಮೆಲ್ಲರ ಮೇಲಿದ್ದ ದ್ವೇಷದ ಸೇಡು ತೀರಿಸಿಕೊಳ್ಳಲೋಸ್ಕರ ಮಾತ್ರ ಅವನು ಹಾಗೆ ಮಾತಾಡಿದನೆಂದು ನಾನು ಊಹಿಸಿದೆನು. ಶ್ರೀಮಂತ-ಬಡವ, ಕುಲೀನ-ಹೀನ, ಎಂಬ ಸಾಮಾಜಿಕ ಪಕ್ಷದ್ವೇಷವೇ ಅವನ ಈ ತೆರನಾದ ಮಾತುಗಳಿಗೆ ಮೂಲವಾಗಿತ್ತು. ಪ್ರತಿಷ್ಟಿತಾ ಸಂಸಾರದ ಮಧ್ಯೆ ತಾನು – ಒಂದು ಕಾಲದಲ್ಲಿ ದೀನನೂ ದರಿದ್ರನೂ ಆಗಿದ್ದವನು, ಸ್ವಸಾಮರ್ಥ್ಯದಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದಾಗಿ ಗ್ರಹಿಸುತ್ತಿದ್ದ ಅವನ ದುರಹಂಕಾರವೇ ಈ ಮಾತಿಗೆ ಕಾರಣವಾಗಿತ್ತು. ಡಾಕ್ಟರ್ ಸ್ಟ್ರಾಂಗರು ಉರೆಯನ ಮಾತುಗಳಿಂದ ತುಂಬಾ ದುಃಖಿತರಾದರು, ಉದ್ವಿಗ್ನರೂ ಆದರು. ಅವರ ಮೈ ನಡುಗುತ್ತಿತ್ತು. ಅವರ ಕಣ್ಣುಗಳಿಂದ ಒಂದೊಂದು ತೊಟ್ಟು ಕಣ್ಣೀರು ಬರುತ್ತಿತ್ತು. ಒಂದು ಕುರ್ಚಿಯನ್ನು ಹಿಡಿದುಕೊಂಡು ಬಹುವಾದ ಬಳಲಿಕೆಯಲ್ಲೂ ಇದ್ದವರಂತೆ ಮಾತಾಡಿದರು. ಡಾಕ್ಟರ್ ಸ್ಟ್ರಾಂಗರು ಹೇಳಿದರು – “ನಾನೊಬ್ಬ ಹಗಲುಕನಸು ಕಾಣುವ ವೃದ್ದ. ನನ್ನ ಜೀವಮಾನವನ್ನೆಲ್ಲ ಈ ವಿಧದ ಜೀವನಕ್ರಮದಿಂದ ವಿದ್ಯಾರ್ಜನೆಯಲ್ಲಿ ಕಳೆಯುತ್ತಾ ಬಂದಿರುತ್ತೇನೆ. ನನಗಿಂತ ಎಷ್ಟೆಷ್ಟೋ ಚಿಕ್ಕ ಪ್ರಾಯದವಳನ್ನು ನಾನು ಮದುವೆಯಾಗುವಾಗ ಗೃಹಸ್ಥರೇ ನನ್ನಾಣೆಯಿಟ್ಟು ಹೇಳುತ್ತೇನೆ, ಕೇಳಿ – ಬಡವಿಯೂ ಎಳೆಪ್ರಾಯದವಳು ಸುಂದರಿಯೂ ಆಗಿರುವ ನನ್ನ ಪತ್ನಿಯು ಇತರ ಯಾರಾದರೊಬ್ಬರ ಕೈ ಹಿಡಿದು ಜೀವನದಲ್ಲಿ ಕಷ್ಟ ಅನುಭವಿಸುವ ಬದಲು, ದ್ರವ್ಯಾನುಕೂಲವೂ ಸ್ಥಾನಮಾನಗಳ ಅನುಕೂಲವೂ ಉಳ್ಳ ನನ್ನನ್ನು ಸೇರಿ ಸುಖವನ್ನೂ ನೆಮ್ಮದಿಯನ್ನೂ ಪಡೆಯಲಿ ಎಂಬುದೇ ನನ್ನ ಮುಖ್ಯ ಉದ್ದೇಶವಾಗಿತ್ತು. ಈ ಉದ್ದೇಶವೇ ನಾನು ಅವಳನ್ನು ಮದುವೆಯಾಗಲು ನನ್ನನ್ನು ಪ್ರೇರೇಪಿಸಿತು. ನನ್ನ ಅಂತರಂಗದಲ್ಲೇ ಆಗಿಂದಾಗ್ಗೆ ಕಂಡು ಬರುತ್ತಿದ್ದ ಮತ್ತೊಂದು ವಿಷಯವನ್ನು ಇದೇ ಮದುವೆಗೆ ಸಂಬಂಧಿಸಿರುವುದನ್ನು ತಿಳಿಸುವೆನು, ಕೇಳಿ. ನಾನು ಆಯುಸ್ಸು ತೀರಿಯೇ ಮೃತನಾದಾಗ್ಯೂ ಆ ಕಾಲದಲ್ಲೂ ನನ್ನ ಪತ್ನಿಗೆ ಪ್ರಾಯವೂ ಸೌಂದರ್ಯವೂ ಉಳಿದಿರುವುದು ನಿಜವಾಗಿರುವುದರಿಂದ, ಅವಳು ಆವರೆಗೆ ನನ್ನ ಜತೆಯಲ್ಲಿದ್ದು ಪಡೆಯುವ ಜೀವನ ಮಾರ್ಗದ ಅನುಭವಗಳಿಂದ ತನ್ನ ಮುಂದಿನ ಜೀವನದ ಸುಖಗಳು ಏನು, ಹೇಗೆ ಇರಬೇಕೆಂಬುದನ್ನು ಅವಳೇ ಸಾಧಿಸಿಕೊಳ್ಳಬಲ್ಲಳೆಂದೂ ನಂಬಿಕೊಂಡಿದ್ದೇನೆ. ಈ ಅಭಿಪ್ರಾಯಗಳೆಲ್ಲ ಏನೇ ಇದ್ದರೂ ನಾನಿಂದು ನನ್ನ ಕನಸುಗಳಿಂದ ಎಚ್ಚತ್ತಿರುತ್ತೇನೆ. ನನ್ನ ಪತ್ನಿಯನ್ನು ಯಾವ ಸಂದರ್ಭದಲ್ಲೂ ದೂರಲು ಕಿಂಚಿತ್ತಾದರೂ ಎಡೆಯಿಲ್ಲ. ಪ್ರಾಯ, ಬುದ್ಧಿ, ಅನುಭವವಿದ್ದ ನಾನು ಅಷ್ಟೊಂದು ಚಿಕ್ಕ ಪ್ರಾಯದವಳನ್ನು ಮದುವೆಯಾಗಿ, ಅವಳ ಸ್ವಾಭಾವಿಕವಾದ ಅಭಿರುಚಿಗಳನ್ನು ಕುಂಠಿತ ಮಾಡುತ್ತಿದ್ದುದು ನನ್ನ ತಪ್ಪಲ್ಲವೇ? ಅವಳ ಬಾಲ್ಯದ ಸ್ನೇಹಿತ ಜೇಕ್ ಮಾಲ್ಡನ್ನನ ಸಂಬಂಧ ಹೇಗಿರಬಹುದಾಗಿತ್ತೆಂದು ಊಹಿಸಿ ಚಿಂತೆಪಡುವುದೂ ಕೇವಲ ಸ್ವಾಭಾವಿಕ. ಆದ್ದರಿಂದ ಅವಳನ್ನು ಕುರಿತು ಯಾವ ಹೇಯ ಹೀನ ಭಾವನೆಗಳನ್ನಾಗಲೀ ಪ್ರಚಾರವನ್ನಾಗಲೀ ಯಾರೂ ಮಾಡಬಾರದೆಂದು ಕೇಳಿಕೊಳ್ಳುತ್ತೇನೆ. ಅವಳಲ್ಲಿ ನಾನು ಕೋಪಿಸಿಕೊಳ್ಳುವುದರ ಬದಲು ನಾನವಳ ಕ್ಷಮೆಯನ್ನು ಯಾಚಿಸುವುದೇ ನ್ಯಾಯ. ನನ್ನ ಈಗಿನ ಆರೋಗ್ಯ ಪರಿಸ್ಥಿತಿ ಮೊದಲಿದ್ದಷ್ಟು ಉತ್ತಮವಾಗಿಲ್ಲ. ಅವಳ ಹೆಸರು ಹಾಳಾಗದಂತೆ ಅವಳನ್ನು ಕಾಪಾಡುವುದಕ್ಕಾಗಿಯೂ ಉಳಿದಿರುವ ನನ್ನ ಆಯುಸ್ಸನ್ನು ಶಾಂತವಾಗಿ ಕಳೆಯುವುದಕ್ಕಾಗಿಯೂ ನಾವು ಜನ ಸಂದಣಿಯಿಂದ ದೂರದಲ್ಲಿರುವ ಪ್ರದೇಶದಲ್ಲಿ ವಾಸಮಾಡುವ ಆಲೋಚನೆಯಲ್ಲಿದ್ದೇವೆ. ದೇವರು ಇಷ್ಟಪಟ್ಟಿದ್ದಾದರೆ ಅವಳ ನವಜೀವನ ಸುಖಕ್ಕೆ ಅನುಕೂಲವಾಗುವಂತೆಯೇ ನಾನು ದೈವಾಧೀನನಾಗಲೂಬಹುದು. ನಿಮ್ಮ ಯಾರ ಮೇಲೂ ನನಗೆ ಕೋಪವಿಲ್ಲ. ಮಿ. ವಿಕ್ಫೀಲ್ಡರು ನನ್ನ ದುಃಖದಲ್ಲಿ ಭಾಗಿಯಾದುದರಿಂದ ನಮ್ಮ ಸ್ನೇಹದ ಕಟ್ಟನ್ನು ಮತ್ತಷ್ಟು ಬಿಗಿದಿರುವರು. ಈ ದುಃಖ ಪ್ರಸಂಗದಲ್ಲೂ ಇದೊಂದು ಸಂತೋಷವೇ ಸರಿ.” ಡಾಕ್ಟರ್ ಸ್ಟ್ರಾಂಗರ ಈ ಅಂತಃಕರಣಪೂರ್ವಕವಾದ, ದುಃಖಪೂರಿತ ಮಾತುಗಳನ್ನು ಕೇಳಿ ನಾವು ಮಾತಾಡದಂತೆ ಮೂಕರೇ ಆಗಿಹೋಗಿದ್ದೆವು. ಉರೆಯ ನಿರೀಕ್ಷಿಸುತ್ತಿದ್ದಂಥ ಪರಿಣಾಮ ಇಂದಿನ ನಮ್ಮ ಮಾತುಗಳಿಂದ ಅಲ್ಲಿ ಆಗಲಿಲ್ಲವೆಂಬ ಅವನ ಅಸಮಾಧಾನ ಅವನ ಮುಖದಲ್ಲಿ ತೋರುತ್ತಿತ್ತು. ಈ ಮಾತುಗಳನಂತರ ಯಾರೂ ಏನೂ ಮಾತಾಡದೆ ಅವರವರು ಅವರವರ ಮನೆಕಡೆಗೆ ಹೊರಟೆವು. ನಾನೂ ಉರೆಯನೂ ಜತೆಯಲ್ಲೇ ಹೊರಟು ದಾರಿ ನಡೆಯುತಿದ್ದಾಗ ಉರೆಯ ನನ್ನ ಹತ್ತಿರ ಮಾತಾಡತೊಡಗಿದನು. “ನಾನು ಗ್ರಹಿಸಿದಂತೆ ಸಂಗತಿಗಳು ಮುಂದುವರಿಯಲಿಲ್ಲ, ಮಿ. ಕಾಪರ್ಫೀಲ್ದ್. ಡಾ| ಸ್ಟ್ರಾಂಗರು ಅವರ ಪತ್ನಿಯು ದೋಷಗಳನ್ನು ಕಾಣುವ ಮಟ್ಟಿಗೆ ಸಂಪೂರ್ಣ ಅಂಧರೇ ಆಗಿಬಿಟ್ಟಿದ್ದಾರೆ. ಹೇಗಿದ್ದರೂ ಅವರ ಹೆಂಡತಿಯ ಗುಟ್ಟು ಬಯಲಿಗೆ ಬಿತ್ತಷ್ಟೆ!” ಅಂದನು ಉರೆಯ. ತನ್ನ ದುಷ್ಟ ಪ್ರವೃತ್ತಿಗಳಲ್ಲಿ ಅವನು ನನ್ನನ್ನು ಅನಾವಶ್ಯಕವಾಗಿ ಎಳೆದುಕೊಳ್ಳುತ್ತಿದ್ದನೆಂದು ನನಗೆ ಮೊದಲೇ ಗೊತ್ತಾಗಿತ್ತು. ಡಾಕ್ಟರ್ ಸ್ಟ್ರಾಂಗರನ್ನು ಕುರಿತು ಅಪಮಾನಾಸ್ಪದವಾಗಿ ಅವನು ಆಡಿದ್ದ ಮಾತುಗಳು ನನಗೆ ತುಂಬಾ ವೇದನೆಯನ್ನುಂಟುಮಾಡಿದ್ದುವು. ನನಗೆ ಕೋಪ ಮೆಲ್ಲಗೆ ಏರತೊಡಗಿತ್ತು. ಉರೆಯನ ಈ ಮಾತುಗಳನ್ನು ಕೇಳಿದಾಗಲಂತೂ ನನ್ನ ಕೋಪ ಬಹುವಾಗಿ ಏರಿತ್ತು. ನಾನು ಅವನನ್ನು ಕುರಿತಾಗಿ – “ಮೂರ್ಖಾ, ನೀನಂತೂ ನಿನ್ನ ದುಷ್ಟ ಕಾರ್ಯಗಳನ್ನು ಕೈಕೊಳುತ್ತಿದ್ದೀಯಾ. ನನ್ನನ್ನೂ ಅವುಗಳಲ್ಲಿ ಸೇರಿಸಿಕೊಳ್ಳಲು ಹವಣಿಸುತ್ತಿದ್ದೀಯಾ ಅಲ್ಲವೇ?” ಎಂದನ್ನುತ್ತ ಅವನ ಉದ್ದವಾದ ಕೆನ್ನೆಗಳು ನನ್ನ ಕೈಯ್ಯನ್ನು ಆಕರ್ಷಿಸುತ್ತಿದ್ದುದನ್ನು ತಡೆಯಲಾರದೆ, ಅವನ ಕೆನ್ನೆಗೆ ಒಂದು ಬಲವಾದ ಪೆಟ್ಟನ್ನು ಕೊಟ್ಟುಬಿಟ್ಟೆನು. ನನ್ನ ನಾಲ್ಕೂ ಬೆರಳುಗಳ ಗುರುತು ಅವನ ಕೆನ್ನೆಯಲ್ಲಿ ಕಾಣಿಸಿತು. ಉರೆಯನು ಮಾತ್ರ ಏನೂ ಸಿಟ್ಟುಗೊಳ್ಳಲಿಲ್ಲ. ಅವನು ತನ್ನ ಕೈಯಿಂದ ಕೆನ್ನೆಯನ್ನು ಉಜ್ಜಿಕೊಳ್ಳುತ್ತಾ ಮಾತಾಡತೊಡಗಿದನು. “ನಾನು ಏನೂ ಮಾಡದೆ ನೀನು ನನಗೆ ಹೊಡೆದುಬಿಟ್ಟೆ. ನೀನು ನನ್ನನ್ನು ಎಂದೂ ಪ್ರೀತಿಸಿದ್ದಿಲ್ಲ. ಅದರ ಬದಲು ಸದಾ ದ್ವೇಷಿಸುತ್ತಲೇ ಇದ್ದೆ. ಆದರೂ ನಿನ್ನ ತಪ್ಪಿಗಾಗಿ ನಾನು ನಿನ್ನನ್ನು ಕ್ಷಮಿಸುವೆನು. ಅಷ್ಟು ಮಾತ್ರವಲ್ಲ, ನಿನಗೆ ಎದುರು ನಿಲ್ಲದೆ ನಿನ್ನ ಅನುವ್ರತನಾಗಿ ನಡೆಯುವೆನು. ನಾನು ಹೀಗೇಕೆ ನಡೆಯುವೆನೆಂದು ನೀನು ಆಶ್ಚರ್ಯಪಡಬಹುದು. ಅದಕ್ಕೆ ಕಾರಣವಿದೆ, ನನ್ನ ಸ್ವಭಾವವೇ ಹಾಗೆ. ನಾನು ದೀನತೆಯಿಂದ ಮೇಲೆ ಬಂದವನು, ನಾನಾಗಿಯೇ ಉದ್ಧರಿಸಿಕೊಂಡವನು. ತಾಳ್ಮೆಯೇ ನನ್ನಂಥವರಿಗಿರುವ ಬದುಕಿನ ಮಾರ್ಗ. ಆದರೆ ಕಾಪರ್ಫೀಲ್ಡ್, ತಿಳಿದಿರು – ನಿನ್ನ ಇಂದಿನ ವರ್ತನೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇದೆ” ಎಂದು ಉರೆಯ ಹೇಳಿದನು. “ನಿನ್ನ ದುಷ್ಟ ಕಾರ್ಯಗಳ ಪ್ರತಿಕ್ರಿಯೆಯೇ ನಿನ್ನನ್ನು ನಾಶಮಾಡಲಿ” ಎಂದಷ್ಟು ಮಾತ್ರ ನಾನು ಹೇಳಿ, ನಾನು ನನ್ನ ಮಾರ್ಗದಲ್ಲಿ ಮುಂದುವರಿಸಿದೆ. ಉರೆಯನನ್ನು ನಾನು ಹೊಡೆದ ವರ್ತನೆ, ನನ್ನ ದೃಷ್ಟಿಯಲ್ಲೇ ನನ್ನನ್ನು ಹಗುರಮಾಡಿತು. ಅಲ್ಲದೆ ನ್ಯಾಯಾನ್ಯಾಯಗಳ ಪ್ರತಿಕ್ರಿಯೆಯನ್ನು ಕುರಿತಾಗಿ ನಾನು ಚಿಂತಿಸದಿದ್ದರೂ ಉರೆಯನ ದುಷ್ಟಚಟಗಳನ್ನೆಲ್ಲ ಗ್ರಹಿಸುತ್ತಾ ಹೋದ ಹಾಗೆ ನನಗೆ ಸ್ವಲ್ಪ ಹೆದರಿಕೆಯೂ ಆಯಿತು. ಅವನು ಕಾರ್ಯಜಾಣನಾಗಿದ್ದುದರಿಂದ ಮುಂದೆ ಯಾವುದೋ ಒಂದು ಭಯಂಕರವಾದ ದುಷ್ಕೃತ್ಯವನ್ನೆಸಗಲೋಸ್ಕರವೇ ಇಂದು ಈ ವಿಧದ ಕಠೋರ-ಶಾಂತತೆಯನ್ನು ತಾಳಿದ್ದಾನೆಂದೂ ನಾನು ನಿಶ್ಚೈಸಿಕೊಂಡೆನು. ಹಿಂದೆ ಉರೆಯನ ಮೇಲೆ ಅನೇಕ ಸಾರಿ ಸಿಟ್ಟು ಬಂದಿದ್ದರೂ ಆಗೆಲ್ಲ ತಾಳ್ಮೆಯಿಂದಿದ್ದ ನಾನು ಇಂದೇಕೆ ಈ ರೀತಿ ವರ್ತಿಸಿದೆ – ಕೈ ಮುಂದೆ ಮಾಡಿದೆ, ಎಂದು ನನ್ನನ್ನೇ ನಾನು ವಿಚಾರಿಸತೊಡಗಿದೆನು. ವಿಚಾರಿಸಿದ್ದಕ್ಕೆ ಕಾರಣವೂ ತಿಳಿಯಿತು. ಹಿಂದೆ ನಾನು ದುಡುಕಿ ನಡೆದರೆ ಏಗ್ನೆಸ್ಸಳಿಗೆ ತೊಂದರೆಯಾಗಬಹುದೆಂದು ಹೆದರುತ್ತಿದ್ದುದರಿಂದ ತಾಳ್ಮೆ ತಾನಾಗಿಯೇ ಸಿದ್ಧವಾಗುತ್ತಿತ್ತು. ಇಂದಾದರೆ – ತನ್ನ ತಂದೆಗಾಗಿ ತಾನು ಎಂಥ ತ್ಯಾಗವನ್ನಾದರೂ ಮಾಡಲು ಸಿದ್ಧವಿದ್ದರೂ ಆ ಒಂದು ವಿಷಯದಲ್ಲಿ ಅಂಥ ತ್ಯಾಗ ಅಸಾಧ್ಯವೆಂದು ಏಗ್ನೆಸ್ಸಳು ನನಗೆ ಇತ್ತಿದ್ದ ಭರವಸೆಯೇ ನನಗೆ – ಈ ರೀತಿ ಉರೆಯನನ್ನು ಹೊಡೆಯಲು ಧೈರ್ಯಕೊಟ್ಟಿತ್ತೆಂದು ತಿಳಿದೆನು. ಆ ರಾತ್ರಿ ಸುಖವಾದ ನಿದ್ರೆ ಬರಲಿಲ್ಲ. ಮಿಸೆಸ್ ಸ್ಟ್ರಾಂಗಳು ಡಾಕ್ಟರರ ಹತ್ತಿರ ಕ್ಷಮಾಯಾಚನೆ ಮಾಡುತ್ತಿದ್ದಂತೆಯೂ ಉರೆಯನ ದುಷ್ಟ ಕಾರ್ಯಗಳಲ್ಲಿ ನಾನು ಬೆರೆತುಹೋಗಿದ್ದಂತೆಯೂ ಸ್ವಪ್ನಗಳನ್ನು ಕಂಡೆನು. ಈ ಎಲ್ಲಾ ವಿಷಯಗಳನ್ನೂ ನಾನು ಅತ್ತೆಗೆ ತಿಳಿಸಿದೆನು. ಅತ್ತೆಗೆ ಸಿಟ್ಟೂ ದುಃಖವೂ ಬಂತು. ಆದರೂ ಈ ವಿಷಯ ಬಹು ಗೋಪ್ಯವಾಗಿರತಕ್ಕದ್ದೆಂದು ನಿಶ್ಚಯ ಮಾಡಿಕೊಂಡೆವು. ಮಿ. ಡಿಕ್ಕರು ಎಂದಿನಂತೆಯೇ ತಮ್ಮ ಚಿಕ್ಕ ಮಿದುಳಿನಿಂದಾದಷ್ಟು ಸಹಾಯವನ್ನು ಡಾಕ್ಟರರ ಡಿಕ್ಷನರಿ ಕೆಲಸದಲ್ಲಿ ಒದಗಿಸುತ್ತಿದ್ದರು. ಡಾಕ್ಟರ್ ಈಗೀಗಲಂತೂ ಮಿ. ಡಿಕ್ಕರ ಹತ್ತಿರ ಮೊದಲಿಗಿಂತಲೂ ಹೆಚ್ಚಾಗಿಯೇ ಮಾತಾಡುತ್ತಿದ್ದರು. ಇದನ್ನು ಕಂಡು ಅತ್ತೆಗೆ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ. ಮಿ. ಡಿಕ್ಕರ ಯೋಗ್ಯತೆ ಈ ಮೊದಲು ಅತ್ತೆಗೆ ಮಾತ್ರ ಗೊತ್ತಿದ್ದುದು ದಿನ ಹೋದಂತೆ ಡಾಕ್ಟರ್ ಸ್ಟ್ರಾಂಗರಂಥ ವಿದ್ಯಾಸಂಪನ್ನರಿಗೂ ಗೊತ್ತಾದುದೇ ಆವಳ ಸಂತೋಷಕ್ಕೆ ಕಾರಣ. ಮಿ. ಡಿಕ್ಕರು ಇಷ್ಟು ಮಾತ್ರವಲ್ಲ, ಈಗ ಜನರಿಗೆ ಗೊತ್ತಾಗಿರುವುದಕ್ಕಿಂತಲೂ ಹೆಚ್ಚು ಗೊತ್ತಾಗಬಲ್ಲ ಅದ್ಭುತ ಕಾರ್ಯವನ್ನೇ ಮಾಡಲಿರುವರೆಂದು ಹೇಳುತ್ತಾ ಅಂಥಾ ಕಾರ್ಯವನ್ನೂ ಮಿ. ಡಿಕ್ಕರಿಂದ ನಿರೀಕ್ಷಿಸುತ್ತಿದ್ದಳು. ನಾನು ಡಾ| ಸ್ಟ್ರಾಂಗರ ಮನೆಯಲ್ಲಿ ಎಂದಿನಂತೆ ನನ್ನ ಕೆಲಸವನ್ನು ಮಾದುತ್ತಿದ್ದಾಗ ಟಪಾಲಿನವನು ಒಂದು ಪತ್ರವನ್ನು ತಂದು ಕೊಟ್ಟನು. ಅದು ಮಿ. ಮೈಕಾಬರರ ಪತ್ನಿಯದಾಗಿತ್ತು. ಪತ್ರವು ಹೀಗಿತ್ತು: ಕೇಂಟರ್ಬರಿ, ಸೋಮವಾರ ಸಂಜೆ. ಈ ಪತ್ರ ನನ್ನಿಂದ ಬರುವ ಸಂದರ್ಭವೂ ಪತ್ರದೊಳಗಣ ವಿಷಯವೂ ನಮ್ಮಿಬ್ಬರೊಳಗೆ ಮಾತ್ರ ಗುಟ್ಟಾಗಿರಬೇಕೇ ಹೊರತು ಇತರ ಯಾರಿಗೂ ತಿಳಿಯಬಾರದೆಂದು ನಾನು ಮೊದಲಾಗಿ ತಿಳಿಸುವಾಗಲಂತೂ ನಿಮಗೆ ಮತ್ತಷ್ಟು ಆಶ್ಚರ್ಯವಾಗಬಹುದು. ಮಿ. ಮೈಕಾಬರರಿಗೂ ನನಗೂ ಇರುವ ಪ್ರೇಮ ಎಷ್ಟೆಂಬುದು ನಿಮಗೆ ಗೊತ್ತಿದೆಯಷ್ಟೆ (ನಾನೆಂದಿಗೂ ಅವರಿಂದ ಅಗಲಿ ಇರಲಾರೆ!) ಆದರೆ ಇತ್ತೀಚೆಗೆ ಸ್ವಲ್ಪ ಸಮಯದಿಂದ ಅವರು ನನ್ನಲ್ಲೇ ವಿಶ್ವಾಸವಿಲ್ಲದವರಂತೆ ವರ್ತಿಸುತ್ತಿದ್ದಾರೆಂದು ಬರೆಯುವುದೇ ಬಹು ದುಃಖದ ಸಂಗತಿ. ಅವರು ಮೌನವಾಗಿರುತ್ತಾರೆ. ಅವರ ಕಾರ್ಯಗಳೆಲ್ಲ ಬಹು ರಹಸ್ಯತರದ್ದಾಗಿರಬೇಕೆಂದು ನಾನು ಊಹಿಸಬೇಕಾಗಿದೆ. ಹಗಲೆಲ್ಲ ಅವರು ಆಫೀಸು ಕೆಲಸದಲ್ಲೇ ಅಲ್ಲೇ ಇರುತ್ತಾರೆ. ರಾತ್ರಿ ಮನೆಗೆ ಬರುತ್ತಾರಾದರೂ ರಾತ್ರಿ ಊಟ ಮಾಡಿ ಮೂಕರಂತೆಯೇ ಕುಳಿತಿರುತ್ತಾರೆ. ಈಗ ಅವರು ಪೂರ್ವದ ಮಿ. ಮೈಕಾಬರರ ಛಾಯೆ ಮಾತ್ರ ಆಗಿರುತ್ತಾರೆ. ಅವರ ಸಂತೃಪ್ತಿ, ಹರ್ಷಯುತ ಸ್ವಭಾವವು ಇಂದು ದುಃಖನಿರಾಶಾಪೂರಿತವಾಗಿ ಉಳಿದಿದೆ. ಅವರ ಮಕ್ಕಳಿನ ಮೇಲಿನ ಪ್ರೇಮವೇ ಅವರಿಗೆ ಕಡಿಮೆಯಾಗಿದೆ. ಹಣದ ಸಂಕಟಗಳ ಅತ್ಯುಗ್ರ ಸ್ಥಿತಿಯಲ್ಲಿ ಅವರಿದ್ದಾಗ ಸಹ ಈಗ ಅವರಿದ್ದಂತೆ ಇರಲಿಲ್ಲ. ಕೇವಲ ಇಂದು ಪೆನ್ನಿ ಬೇಕೆಂದು ಕೇಳಿದರೂ ಅದನ್ನು ಕೊಡುವಾಗಲೂ ಅತ್ಯಂತ ಕ್ರೋಧಾವಿಷ್ಟರಾಗುತ್ತಾ ತನ್ನನ್ನು ತಾನೇ ನಾಶಪಡಿಸಿಕೊಂಡುಬಿಡುವರಾಗಿ ಹೇಳಿ ಹೆದರಿಸುತ್ತಾರೆ. ಈ ದುಃಖ ನಿವಾರಣೆಗೆ ತಕ್ಕಂಥ ಸಹಾಯವನ್ನು ನೀವು ದಯಮಾಡಿ ನಮಗೊದಗಿಸಿ, ಈ ವರೆಗೆ ನೀವು ನಮಗೆ ಮಾಡುತ್ತ ಬಂದಿರುವ ಉಪಕಾರಗಳ ಸಂಖ್ಯೆಗೆ ಮತ್ತೊಂದನ್ನು ಸೇರಿಸುವ ಪುಣ್ಯ ನಿಮಗಿರಲಿ. ದುಃಖಿತೆಯೂ ಆರ್ತಳೂ ಆದ ಎಮ್ಮ ಮೈಕಾಬರ್ ಸಂಸಾರದ ಅನುಭವ ತುಂಬಾ ಇದ್ದ ಮಿಸೆಸ್ ಮೈಕಾಬರಳಿಗೆ ಬುದ್ಧಿ ಹೇಳಲು ಅಥವಾ ಅವರಿಬ್ಬರ ಮಧ್ಯೆ ಪ್ರವೇಶಿಸಿ ವ್ಯವಸ್ಥೆಗಳನ್ನು ಸರಿಪಡಿಸಲು ನನಗೆ ಶಕ್ತಿ ಸಾಲದೆಂದು ಗೊತ್ತಿತ್ತು. ಹಾಗಾಗಿ, ಅವರು ಅವರ ಪತಿಯನ್ನು ಅನುಸರಿಸಿ, ಪ್ರೇಮಪುರಸ್ಸರವಾಗಿ ಮಾತಾಡಿ, ಬಂದಿರುವ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕೆಂದು ಮಾತ್ರ ಸಲಹೆಯಿತ್ತು ಅವರ ಪತ್ರಕ್ಕೆ ಉತ್ತರವನ್ನು ಕಳುಹಿಸಿದೆನು. ಅಂತೂ ನಾನು ಈ ಹೊಸ ವಿಷಯವನ್ನು ತಿಳಿದು ತುಂಬಾ ಯೋಚನಾಪರನಾದೆನು.
ಬೆಂಗಳೂರು: ಮೀ ಟೂ ಅಭಿಯಾನ ಹೆಚ್ಚು ಸದ್ದು ಮಾಡಿದ್ದು ಸಿನಿಮಾ ಇಂಡಸ್ಟ್ರಿ ಯಲ್ಲಿ. ಬಾಲಿವುಡ್​ನಿಂದ ಹಿಡಿದು ಸ್ಯಾಂಡಲ್​​ವುಡ್ ತನಕ ಪ್ರಾದೇಶಿಕ ಸಿನಿಮಾ ಕ್ಷೇತ್ರದಲ್ಲಿಯೂ ಮೀ ಟೂ ಸದ್ದು ಮಾಡಿದೆ. ನಟಿ ಶ್ರುತಿ ಹರಿ ಹರನ್ ನಂತರ ಈಗ ಮತ್ತೊಬ್ಬ ನಟಿ ಇದೇ ರೀತಿ ಆರೋಪ ಮಾಡಿದ್ದು ಸುದ್ದಿಯಾಗಿದೆ. ರೋಡ್ ರೋಮಿಯೋ ಸಿನಿಮಾದ ನಟಿ,ಬಾ ಬಾರೋ ರಸಿಕ ಖ್ಯಾತಿಯ ಆಶಿತಾ ಮೀ ಟೂ ಆರೋಪ ಮಾಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟಿ ಆಶಿತಾ ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ. ಕೆಲವು ವರ್ಷಗಳ ಹಿಂದೆ ಸದ್ದು ಮಾಡಿದ್ದ ನಟಿ ಬಳಿಕ ಮತ್ತೆ ಕ್ಯಾಮರಾ ಮುಂದೆ ಬಂದಿ ದ್ದಾರೆ. ಆಶಿತಾ ಕನ್ನಡ ಚಿತ್ರರಂಗದ ಕರಾಳಮುಖ ಬಹಿರಂಗ ಪಡಿಸಿದ್ದಾರೆ. ರಘುರಾಮ್ ಅವರ ಯೂಬ್ಯೂಬ್ ವಾಹಿನಿ ಜೊತೆ ಮಾತನಾಡಿದ ನಟಿ ಆಶಿತಾ ಮೀ ಟೂ ಕಾಟದ ಕುರಿತು ಸಾಕಷ್ಟು ವಿಚಾರಗಳನ್ನ ರಿವೀಲ್ ಮಾಡಿದ್ದಾರೆ. ಕೆಟ್ಟ ಅನುಭವವಾಗಿರುವುದು ಸಿನಿಮಾರಂಗದಿಂದ ದೂರ ಉಳಿಯಲು ಪ್ರಮುಖ ಕಾರಣ ಎಂದು ನೇರವಾಗಿ ಆರೋಪ ಮಾಡಿ ದ್ದಾರೆ. ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೆ ಬೇಸರವಿಲ್ಲ. ನಟಿಯಾಗಿ ಗುರುತಿಸಿ ಕೊಂಡ ಮೇಲೂ ತಮಗೆ ಕೆಟ್ಟ ಅನುಭವಗಳು ಆದವು ಎಂದಿದ್ದಾರೆ. ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಬಳಿಕ ತನಗೆ ಕೆಟ್ಟ ಅನುಭವವಾಯಿತು ನಟಿ ಹೇಳಿದರು. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತನ್ನೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸು ತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ’ ಎಂದು ಆಶಿತಾ ಹೇಳಿದ್ದಾರೆ. ‘ಸರ್, ಸರ್, ಸರ್ ಅನ್ನಬೇಕು, ಮೆಸೇಜ್ ಮಾಡಬೇಕು, ಹಾಯ್ ಅಂತ ಹೇಳ್ತಾ ಇರಬೇಕು ಇದನ್ನೆಲ್ಲ ನಾನು ಮಾಡ್ತಾ ಇರ್ಲಿಲ್ಲ ಅಂತ ಎಷ್ಟು ಕಷ್ಟ ಕೊಟ್ಟಿದ್ದಾರೆ ಎಂದರೆ ಅಷ್ಟು ಕೊಟ್ಟಿದ್ದಾರೆ. ಇದು ನನ್ನ ಜೀವನದಲ್ಲಿ ಪೀಕ್ ನಲ್ಲಿ ಇದ್ದಾಗ ಆಗಿದ್ದು. ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದಾಗ ನನಗೆ ಏನು ಆಗಿರ್ಲಿಲ್ಲ. ಹೊಸಬರು ಜೊತೆ ಕೆಲಸ ಮಾಡುವಾಗ ಇಂಥ ಕೆಟ್ಟ ಅನುಭವವಾಗಿದೆ’ ಎಂದು ಹೇಳಿದ್ದಾರೆ. ಈಗಲೂ ನಟಿಸುವ ಆಸಕ್ತಿ ಇದೆ ಎಂದಿರುವ ನಟಿ ಆಶಿತಾ ಉತ್ತಮ ಪಾತ್ರ ಸಿಕ್ಕರೆ ಬರುವುದಾಗಿ ಹೇಳಿದ್ದಾರೆ. ಆದರೆ, ನನಗೆ ಟೀಮ್ ಇಷ್ಟವಾಗಬೇಕು ಮತ್ತು ನನಗೊಪ್ಪುವ ಪಾತ್ರ ಸಿಗಬೇಕು’ ಎಂದು ಹೇಳಿದರು. ರೋಡ್ ರೊಮಿಯೋ ಸಿನಿಮಾ ಬಳಿಕ ಆಶಿತಾ ಮತ್ತೆ ಸಿನಿಮಾ ಮಾಡಿಲ್ಲ. ಉತ್ತಮ ಪಾತ್ರ ಸಿಕ್ಕಿದರೂ ಸಹ ಆಶಿತಾ ಸಿನಿಮಾಗಳಲ್ಲಿ ನಟಸಿಲ್ಲ.
ಆನಂದ ಸಿಂಗ್ ಗೆ ಖಾತೆ ಯಾವುದು ಎಂಬ ಕೂತುಹಲ ಎಲ್ಲರಲ್ಲಿತ್ತು. ಆದರೆ ಅವರಿಗೆ ಅರಣ್ಯ ಖಾತೆ ನೀಡಿದ ಮೇಲೆ ರಾಜ್ಯಾದ್ಯಂತ ಪರಿಸರ ಪ್ರಿಯರು, ರಾಜಕೀಯ ನಾಯಕರು, ವನ್ಯಜೀವಿ ಸಂಶೋಧಕರೆಲ್ಲ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಯೋಜನೆ ಶೀಘ್ರ ಪ್ರಾರಂಭ : ಸಿಎಂ ಬೊಮ್ಮಾಯಿ ಮೈಸೂರು; ನಾಗರಹೊಳೆ ಅಭಯಾರಣ್ಯದಲ್ಲಿ ಗಂಡು ಹುಲಿ ಶವ ಪತ್ತೆ ನಮ್ಮ ಶಾಸಕರು ಮರಾಠರ ಏಜೆಂಟರಂತೆ ವರ್ತಿಸ್ತಿದ್ದಾರೆ : ವಾಟಾಳ್‌ ನಾಗರಾಜ್‌ ಮೊದಲೇ ಗಣಿ ಧಣಿ ಯಾದ ಆನಂದ ಸಿಂಗ್ ಅವರಿಗೆ ಈ ಖಾತೆ ಕೊಟ್ಟರೆ ಹಲವರದು ಅರಣ್ಯರೋದನ ಪರಿಸ್ಥಿತಿಯಾಗುತ್ತದೆ ಎಂಬುದು ಸುಳ್ಳಲ್ಲ. ಗಣಿ ಧಣಿಗಳಿಗೆ ಅರಣ್ಯ ಖಾತೆ ಸಚಿವರ ಒಪ್ಪಿಗೆಯೇ ಮುಖ್ಯ, ಯಾವುದೇ ಜಾಗದಲ್ಲಿ ಗಣಿ ಕೆಲಸ ಆರಂಭಿಸ ಬೇಕೆಂದರೆ, ಮೊದಲು ಖನಿಜವನ್ನು ತೆಗೆಯಲು ಅವರು ಅರಣ್ಯ ಇಲಾಖೆಗೆ ಕ್ಲಿಯರನ್ಸ್ ಸರ್ಟಿಫಿಕೇಟ್ ಗೆ ಅಪ್ಲೈ ಮಾಡಬೇಕು. ಇದು ಸಿಗುವುದು ಸುಲಭವಲ್ಲ. ಆದರೆ ಇಂತಹ ಖಾತೆಯನ್ನು ಆನಂದ ಸಿಂಗ್ ಅವರಿಗೆ ಕೊಟ್ಟರೆ ತಾವಲ್ಲದೇ ತಮಗೆ ಗೊತ್ತಿರುವ ಗಣಿ ಉದ್ಯಮಿಗಳಿಗೂ ಅವಕಾಶ ಮಾಡಿಕೊಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ನಿನ್ನೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆ ಹೀಗಿದೆ “ಆನಂದ ಸಿಂಗ್ ಗೆ ಕೊಟ್ಟಿರುವುದು ಅರಣ್ಯ ಖಾತೆ. ಇದರರ್ಥ ಕುರಿ ಕಾಯಲು ತೋಳವನ್ನು ಬಿಟ್ಟಂತೆ. ಇದನ್ನು ನಾವೆಲ್ಲ ಒಪ್ಪೊಕೆ ಸಾಧ್ಯನಾ, ಅವರ ಮೇಲೆ 15 ಕೇಸುಗಳಿವೆ, ಅದೂ ಅರಣ್ಯ ಕಾಯ್ದೆಯಡಿ ಗಂಭೀರ ಆರೋಪ ಎದುರಿಸುತ್ತಿರುವವರನ್ನು ಅದೇ ಖಾತೆ ಸಚಿವರನ್ನಾಗಿ ಹೇಗೆ ನೇಮಕ ಮಾಡಲಾಗುತ್ತದೆ. ರಾಜ್ಯ ಸರ್ಕಾರಕ್ಕೆ ಮುಜುಗರ ಈ ಮಾತಂತೂ ಸತ್ಯ. ಅರಣ್ಯ ಖಾತೆಯನ್ನು ಆನಂದ ಸಿಂಗ್ ಅವರಿಗೆ ನೀಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳಾದವು. ಪಿ. ಮಹ್ಮಮದ ಅವರ ಕೊಡಲಿ ತಲೆಯ ಚಿತ್ರ ಬಹುತೇಕರ ಡಿಪಿಗಳಲ್ಲಿ ಕಾಣಿಸತೊಡಗಿತು. ಕೆಲವು ಜನ ನಗುವ, ಸಿಟ್ಟಿಗೇಳುವ, ಬಿದ್ದು ಬಿದ್ದು ನಗುವ ಎಮೋಜಿಗಳನ್ನು ಹಾಕಿದರು. ಇದೆಲ್ಲ ಗಮನಿಸುತ್ತಿದ್ದ ಬಿಜೆಪಿ ಐಟಿ ಸೆಲ್ ಸರ್ಕಾರಕ್ಕೆ ಈ ಮಾತು ತಲುಪಿಸಿರಬಹುದು. ಶನಿವಾರ ಮುಂಜಾನೆ ಹೈಕಮಾಂಡ್ ಕೂಡ ರಾಜ್ಯ ಸರ್ಕಾರದ ಕ್ರಮದ ಮೇಲೆ ಗರಂ ಆಗಿದ್ದು ಆನಂದ ಸಿಂಗ್ ರಿಗೆ ಅರಣ್ಯ ಖಾತೆ ಕೊಟ್ಟಿದ್ದು ಸರಿಯಾದ ಕ್ರಮವಲ್ಲ ಕೂಡಲೇ ಸರಿಪಡಿಸಿಕೊಳ್ಳಿ ಎಂಬ ಆದೇಶವನನ್ನು ಕಳುಹಿಸಿದ್ದಾರಂತೆ. ಭೂಮಿ ಅತಿಕ್ರಮಣ ಆನಂದ್‌ ಸಿಂಗ್‌ಗೆ ಸಾಮಾನ್ಯ ವಿಚಾರ! ಈ ಬಗ್ಗೆ ಆನಂದ ಸಿಂಗ್ ಅವರು ಮಾಧ್ಯಮಗಳಿಗೆ ಹೇಳಿದ್ದು ಎಲ್ಲರ ಹುಬ್ಬೇರಿಸುವಂತಾಗಿದೆ. ಅವರು ಹೇಳಿದ್ದು ಹೀಗೆ, “ವಾಹನ ಇದ್ದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಸಾಮಾನ್ಯ. ಅದರಂತೆ ನಮ್ಮ ಗಣಿ ಕಂಪೆನಿಯೂ ಸಹ ಉಲ್ಲಂಘನೆ ಮಾಡಿದೆ. ಗಣಿ ಕೆಲಸದಲ್ಲಿ ಅರಣ್ಯ ನಿಯಮ ಉಲ್ಲಂಘನೆ ಸಹಜ” ಎಂದು ಪರೋಕ್ಷವಾಗಿ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಒಂದಿಷ್ಟು ಸಮಜಾಯಿಷಿ ನೀಡಿದ್ದಾರೆ, “ಪೂರ್ವಜರಿಂದಲೂ ನಮ್ಮ ಕುಟುಂಬ ಗಣಿಗಾರಿಕೆ ಮಾಡುತ್ತಲೇ ಬಂದಿದೆ. ಆದ್ದರಿಂದ ಸಣ್ಣ ಪುಟ್ಟ ಪ್ರಕರಣಗಳು ಇರುತ್ತವೆ. ಈ ಪ್ರಕರಣಗಳಿಂದ ಯಾವುದೇ ತೊಂದರೆಯಾಗುವುದಿಲ್ಲ. ನನಗೆ ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ”. ಏನೇನಿವೆ ಇವರ ಮೇಲಿನ ಆರೋಪಗಳು? ಆನಂದ ಸಿಂಗ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿನ ಮಾಹಿತಿಯಂತೆ ಗಣಿ ಮತ್ತು ಖನಿಜ ಕಾಯ್ದೆಯ ವಿವಿಧ ಕಲಂಗಳ ಅಡಿ 15 ಪ್ರಕರಣಗಳೂ ಬಾಕಿ ಇವೆ. ಕರ್ನಾಟಕ ಅರಣ್ಯ ಕಾಯ್ದೆಯ ಅಡಿ 11 ಮೊಕದ್ದಮೆಗಳು ಆನಂದ್ ಅವರ ಮೇಲಿವೆ. ಬಳ್ಳಾರಿಯ ಜಯಪ್ರಕಾಶ ಮೇಟಿ ಅವರ ಪ್ರಕಾರ, “ನಾವು ಮೊದಲಿನಿಂದಲೂ ಇವರ ಆಕ್ರಮ ಗಣಿಗಾರಿಕೆ ಬಗ್ಗೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕಾಡು ಉಳಿಸಿ ಎಂಬ ನಮ್ಮ ಮಾತೂ ಯಾರೂ ಕೇಳಲಿಲ್ಲ. ಹಸಿರು ಗುಡ್ಡಗಳನ್ನು ಬೆತ್ತಲೆಗೊಳಿಸಿ ಇಂದು ಬರಗಾಲ ತಾಂಡವವಾಡುವಂತೆ ಮಾಡಿದ್ದಾರೆ. ಧೂಳಿನಿಂದ ಕಂಗೆಟ್ಟ ಜನ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇನ್ನು ಇಂತವರಿಗೆ ಅರಣ್ಯ ಖಾತೆ ಕೊಟ್ಟರೆ ಏನಾಗಬಹುದು ಎಂಬುದು ಅನೂಹ್ಯವೇ ಸರಿ”. ಗದುಗಿನ ಮುತ್ತಣ್ಣ ಕರ್ಕಿಕಟ್ಟಿ, ಸಾಮಾಜಿಕ ಹೋರಾಟಗಾರರು ಹೇಳಿದ್ದು, “ಗುಡ್ಡವನ್ನು ಕರಗಿಸಿ, ಹಸಿರ ನುಂಗಿ, ಖನಿಜ ಮಾರುವ ಇಂತಹ ವ್ಯಾಪಾರಸ್ಥರಿಗೆ ಅರಣ್ಯ ಇಲಾಖೆ ಕೊಟ್ಟರೆ, ಬಿಟ್ಟಾರೆಯೇ, ರಾಜ್ಯದ ಉಳಿದ ಅರಣ್ಯಕ್ಕೂ ಕಣ್ಣು ಹಾಕುತ್ತಾರೆ. ಗುಡ್ಡಗಳನ್ನು ಕಡಿದು ಹಾಕುತ್ತಾರೆ. ತಮ್ಮ ವ್ಯಾಪಾರ ವಿಸ್ತರಿಸಿಕೊಳ್ಳುತ್ತಾರೆ. ಒಟ್ಟಾರೆ ಈ ಖಾತೆ ಮಾತ್ರ ಆನಂದ ಸಿಂಗ್ ರಿಗೆ ನೀಡಬಾರದು. ಇದು ಹೀಗೆ ಮುಂದು ವರೆದರೆ ನಾವೆಲ್ಲ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ”. ಕಪ್ಪತಗುಡ್ಡ ಆಂದೋಲನ ಹೋರಾಟಗಾರರಾದ ಹಾಗೂ ಗದುಗಿನ ಸಾಮಾಜಿಕ ಕಾರ್ಯಕರ್ತರಾದ ಮುತ್ತಣ್ಣ ಭರಡಿ ಪ್ರತಿಕ್ರಿಯಿಸಿದ್ದು ಹೀಗೆ, “ಆನಂದ ಸಿಂಗ್ ಅವರಿಗೆ ಈ ಖಾತೆ ಕೊಟ್ಟಿದ್ದು ಸರಿಯಲ್ಲ. ಅವರ ಮೇಲೆ ಹಲವಾಋಉ ಆಪಾದನೆಗಳಿವೆ. ಅದರಿಂದ ಿನ್ನೂ ಮುಕ್ತರಾಗಿಲ್ಲ. ಅದೇ ಖಾತೆ ಕೊಟ್ಟರೆ ದುರುಪಯೋಗವಾಗುತ್ತೆ. ತಾವುದೇ ರಾಜಕಾರಣಿಗಳಾಗಲಿ ಅಧಿಕಾರ ದುರುಪಯೋಗ ಸಾಮಾನ್ಯವಾಗಿದೆ. ಹಾಗಾಗಿ ಇದು ಅವರಿಗೆ ಕೊಟ್ಟಿದ್ದು ತಪ್ಪು”. ಇದಕ್ಕೆ ಮುಖ್ಯಮಂತ್ರಿಗಳು ಏನನ್ನುತ್ತಾರೆ? ಯಾವ ರೀತಿ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ? ಎಂಬುದು ಕುತೂಹಲಕಾರಿ ವಿಷಯ.
ಒಂದು ದಿನ ಒಬ್ಬ ಗುರು ಮುಂದಿನ ಜನ್ಮದಲ್ಲಿ ತಾನು ಏನಾಗಿ ಹುಟ್ಟುತ್ತೇನೆ ಎಂದು ಎಂಬುದನ್ನು ದಿವ್ಯದೃಷ್ಟಿಯಿಂದ ತಿಳಿದುಕೊಂಡ. ಹಾಗೂ ತಾನು ಸದ್ಯದಲ್ಲೇ ಸಾಯಲಿದ್ದೇನೆ ಎಂಬುದೂ ಅವನಿಗೆ ತಿಳಿಯಿತು. ಹಂದಿಯಾಗಿ ಬಾಳುವುದನ್ನು ನೆನೆದೇ ಅವನ ಮೈ ಜುಮ್ಮೆಂದಿತು. ತನ್ನ ಪ್ರಿಯ ಶಿಷ್ಯನನ್ನು ಕರೆದು, “ನನಗೆ ಗುರುದಕ್ಷಿಣೆಯಾಗಿ ನೀನು ಏನು ಕೊಡುತ್ತೀ?” ಎಂದು ಕೇಳಿದ. “ನೀವು ಏನು ಕೇಳಿದರೂ ಕೊಡುತ್ತೇನೆ ಗುರುಗಳೇ” ಅಂದ ಶಿಷ್ಯ ನಮ್ರತೆಯಿಂದ. “ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೊ. ಯಾವುದೇ ಭಾವುಕತೆಗೆ ಒಳಗಾಗಬೇಡ. ನಾನು ಸದ್ಯದಲ್ಲೇ ಸಾಯಲಿದ್ದೇನೆ ಮತ್ತು ಹಂದಿಯಾಗಿ ಹುಟ್ಟಲಿದ್ದೇನೆ. ನಮ್ಮ ಆಶ್ರಮದ ಹಿತ್ತಲಲ್ಲಿ ಹೊಲಸು ತಿನ್ನುತ್ತದಲ್ಲ, ಆ ಹಂದಿ ಮತ್ತೊಮ್ಮೆ ಮರಿ ಹಾಕುತ್ತದಲ್ಲ, ಆಗ ಅದರ ನಾಲ್ಕನೆ ಮರಿಯಾಗಿ ನಾನು ಹುಟ್ಟಲಿದ್ದೇನೆ. ಅದರ ಹುಬ್ಬಿನ ಮೇಲೆ ಒಂದು ಮಚ್ಚೆ ಇರುತ್ತದೆ. ಹಾಗೆ ನೀನು ನನ್ನನ್ನು ಗುರುತಿಸಬಹುದು.” ಎಂದು ಹೇಳಿ ಅಲ್ಪವಿರಾಮ ಹಾಕಿದ. ಶಿಷ್ಯನಿಗೆ ಗುರು ಅದೇನು ಹೇಳಲಿದ್ದಾರೆಂದು ತಿಳಿಯದೆ ಗಲಿಬಿಲಿಗೊಂಡ. “ನೋಡು! ಆ ಮರಿ ಇರುತ್ತದಲ್ಲ, ಅದನ್ನು ನೀನು ಒಂದೇ ಏಟಿಗೆ ಕತ್ತಿಯಿಂದ ಕುತ್ತಿಗೆ ಕತ್ತರಿಸಿ ಕೊಂದುಹಾಕಬೇಕು. ಅದರಿಂದ ನನಗೆ ಮೋಕ್ಷ ಸಿಗುತ್ತದೆ” ಅಂದ. ಶಿಷ್ಯನಿಗೆ ಇದನ್ನು ಕೇಳಿ ದುಃಖವಾಯಿತು. ಮೊದಲನೆಯದಾಗಿ, ತನ್ನ ಗುರು ಹಂದಿ ಮರಿಯಾಗಿ ಹುಟ್ಟುವುದನ್ನು ನೋಡಬೇಕು. ಎರಡನೆಯದಾಗಿ, ತಾನು ತನ್ನ ಕೈಯಾರ ಅದನ್ನು ಕೊಲ್ಲಬೇಕು! ಆದರೆ ಗುರುವಿನ ಮಾತನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ. ಅವರಿಗೆ ಹಾಗೆಯೇ ಮಾಡುವೆನೆಂದು ಮಾತುಕೊಟ್ಟ. ಅದಾಗಿ ಮೂರನೇ ದಿನಕ್ಕೆ ಗುರು ತೀರಿಕೊಂಡ. ಅದೇ ದಿನ ಸಂಜೆ ಹಿತ್ತಲ ಹಂದಿಯು ನಾಲ್ಕು ಮರಿಗಳನ್ನು ಹಾಕಿತ್ತು. ಗುರುವಿನ ಮಾತನ್ನು ನೆರವೇರಿಸಲಿಕ್ಕಾಗಿ ಕತ್ತಿಯನ್ನು ಹರಿತವಾಗಿ ಇಟ್ಟುಕೊಂಡಿದ್ದ ಶಿಷ್ಯ, ಹಂದಿಮರಿಗಳನ್ನು ನೋಡಲು ಹೋದ. ಅವುಗಳಲ್ಲಿ ನಾಲ್ಕನೇ ಮರಿಯ ಹುಬ್ಬಿನ ಮೇಲೆ ಮಚ್ಚೆ ಇರುವುದನ್ನು ಗುರುತಿಸಿದ. ಅದನ್ನು ಕೈಯಲ್ಲಿ ಎತ್ತಿಕೊಂಡು, ತನ್ನ ಗುರುಗಳನ್ನು ನೆನೆಯುತ್ತಾ ಕುತ್ತಿಗೆಯನ್ನು ಕತ್ತರಿಸಲು ಕತ್ತಿಯನ್ನು ತೆಗೆದ. ಇನ್ನೇನು ಪಟ್ಟು ಹಾಕಬೇಕು, ಆಗ “ನಿಲ್ಲು!” ಅನ್ನುವ ದನಿಯೊಂದು ತಡೆಯಿತು. ಶಿಷ್ಯ ಗಾಬರಿಯಾಗಿ ಸುತ್ತ ನೋಡಿದ. ಅವನಿದ್ದಲ್ಲೇ ದನಿ ಹೊರಟಿತ್ತು. ಆ ಹಂದಿ ಮರಿ ಮಾತಾಡುತ್ತಿತ್ತು! “ನಿಲ್ಲು… ನನ್ನನ್ನು ಕೊಲ್ಲಬೇಡ! ನಾನು ಹಂದಿಯ ಹಾಗೆ ಬದುಕಬೇಕು ಅಂದುಕೊಂಡಿರುವೆ. ನನ್ನನ್ನು ಕೊಲ್ಲು ಅಂದಿದ್ದು ನಿಜ; ಆಗ ನನಗೆ ಹಂದಿಯ ಬದುಕು ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ. ಈಗ ಅದನ್ನು ಅನುಭವಿಸಿ ತಿಳಿಯಬೇಕೆಂದಿರುವೆ. ನನ್ನನ್ನು ಬಿಟ್ಟುಬಿಡು” ಎಂದು ಹಂದಿಮರಿ ಶಿಷ್ಯನ ಬಳಿ ಗೋಗರೆಯತೊಡಗಿತು.
ಚಾಮರಾಜನಗರ: ಪ್ರತಿ ಯೊಬ್ಬ ವಾಹನ ಸವಾರರು ಹೆಲ್ಮೇಟ್ ಅನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಪಿ.ಕೆ.ವೆಂಕಟೇಶ್ ಸಲಹೆ ನೀಡಿದರು. ನಗರದಲ್ಲಿ ಶನಿವಾರ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯ, ಜೆಎಸ್‍ಎಸ್ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪಟ್ಟಣ ಸಂಚಾರಿ ಪೊಲೀಸ್ ಠಾಣೆಯಿಂದ ಹಮ್ಮಿ ಕೊಂಡಿದ್ದ 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮರಾಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ್ವಿಚಕ್ರ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕಡ್ಡಾಯ ವಾಗಿ ಚಾಲನಾ ಪರವಾನಗಿ ಪಡೆದು, ರಸ್ತೆಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚಾಲನೆ ಮಾಡಬೇಕು ಎಂದು ತಿಳಿಸಿದರು. ಸಂಚಾರಿ ಪೊಲೀಸ್ ಕಾನ್‍ಸ್ಟೇಬಲ್ ಎಸ್. ಮಂಜು ಮಾತನಾಡಿ, ರಸ್ತೆಯಲ್ಲಿ ಸಂಚ ರಿಸುವಾಗ ಮೊಬೈಲ್ ಬಳಸಬಾರದು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಸ್ತೆಯಲ್ಲಿ ಆಕಸ್ಮಿಕವಾಗಿ ಅಪಘಾತವಾದರೇ ಕೂಡಲೇ 108 ಅಂಬ್ಯೂ ಲೆನ್ಸ್ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಸಾಕ್ಷ್ಯ ಚಿತ್ರಗಳ ಮೂಲಕ ಮಾಹಿತಿ ನೀಡಲಾ ಯಿತು. ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಎಸ್.ಎನ್.ರಾಜು, ಜೆಎಸ್‍ಎಸ್ ಸ್ಕೂಲ್ ಆಫ್ ನರ್ಸಿಂಗ್‍ನ ಪ್ರಾಂಶುಪಾಲ ಜಿ.ವಿನಯ್ ಕುಮಾರ್, ಕಾನ್‍ಸ್ಟೇಬಲ್‍ಗಳಾದ ಎಂ. ಕುಮಾರ, ಪ್ರದೀಪ್, ಉಪನ್ಯಾಸಕರಾದ ಯೋಗೇಶ್, ಮಧು ಹಾಜರಿದ್ದರು.
ಪ್ರೀಯ ಓದುಗರೇ ರೈತ ನಮ್ಮ ದೇಶದ ಬೆನ್ನೆಲುಬು ಎಂದು ಹೇಳುತ್ತೇವೆ. ಆದ್ರೆ ಆತನಿಗೆ ಹೆಣ್ಣು ಕೊಡಲು ನಾವು ಹಿಂದೇಟು ಹಾಕುತ್ತಿದ್ದೇವೆ. ಅಷ್ಟೇ ಅಲ್ಲ ನೀನು ಏನು ಮಾಡುತ್ತಿದ್ದೀಯಾ ಎಂದಾಗ ನಾನೊಬ್ಬ ರೈತ ಎಂದಾಗ ಹೆಮ್ಮೆ ಪಡಬೇಕಿತ್ತು. ಅದರ ಬದಲು ಆತನನ್ನು ನಾವು ನೋಡುವ ದೃಷ್ಟಿ ಕೂಡ ಬದಲಾಗುತ್ತಿದೆ. ಇದರಿಂದ ರೈತರು ತಮ್ಮ ಉದ್ಯೋಗದ ಕುರಿತು ಹೇಳಲು ಹಿಂಜೇರಿಯುತ್ತಿದ್ದಾರೆ. ಅಷ್ಟೇ ಅಲ್ಲ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಯುವಕರ ಸಿಟಿ ಸೇರುತ್ತಿದ್ದಾರೆ. ಅದು ಯಾಕೆ? ಹಳ್ಳಿ ತೊರೆದು ಬದುಕೋದಿಕ್ಕೆ ಕಾರಣವಾದ್ರೂ ಏನೂ ಗೊತ್ತಾ ? ಇದಕ್ಕೆ ಮಂಡ್ಯ ಜಿಲ್ಲೆಯಲ್ಲಿ ಆದ ಘಟನೆಯು ಪುಷ್ಟಿ ನೀಡಿದೆ. ಏನದು ಘಟನೆ ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಈ ಮೊದಲು ಜೈ ಜವಾನ ಜೈ ಕಿಸಾನ್ ಎನ್ನುವ ಎನ್ನುವ ಘೋಷಣೆ ಇತ್ತು. ಆದ್ರೆ ಅದು ಈಗ ಬರಿ ಘೋಷಣೆಯಾಗಿಯೇ ಉಳಿದಿದೆ. ಯಾಕಂದ್ರೆ ಅಕಾಲಿಕ ಮಳೆಯಿಂದಾಗಿ ರೈತನ ಬೆಳೆ ಕಾಲ ಕಾಲಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ರೈತ ಪದೇಪದೇ ಸಂಕಷ್ಟಕ್ಕೆ ಇಡಾಗುತ್ತಿದ್ದಾನೆ. ಜೊತೆಗೆ ಪ್ರಕೃತಿ ವಿಕೋಪದಿಂದ ಮತ್ತಷ್ಟು ರೈತರು ಕಣ್ಣೀರಲ್ಲಿ ಕೈತೋಳಿಯುವಂತೆ ಆಗಿದೆ. ಅಷ್ಟೇ ಅಲ್ಲ ಇದೀಗ ರೈತನ ಮಕ್ಕಳಿಗೆ ಹೆಣ್ಣು ಕೂಡ ಸಿಗುತ್ತಿಲ್ಲ. ಇದು ಆಶ್ಚರ್ಯವಾದರೂ ಸತ್ಯವಾದ ಸಂಗತಿ. ಹೌದು ಓದುಗರೇ ಇದಕ್ಕೆ ಮಂಡ್ಯದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಅದೇನಂದ್ರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಒಕ್ಕಲಿಗ ವಧು-ವರ ಸಮಾವೇಶ ನಡೆಯಿತು. 250 ಮಂದಿ ಹುಡುಗಿಯರು ಮಾತ್ರ ವರನಿಗಾಗಿ ರಿಜಿಸ್ಟರ್ ಮಾಡಿಕೊಂಡಿದ್ದರೇ, ಇದರಲ್ಲಿ ಹನ್ನೆರಡು ಸಾವಿರ ಮದುವೆಯಾಗದ ಹುಡುಗ ಹುಡುಗಿಯರು ರಿಜಿಸ್ಟರ್ ಮಾಡಿಕೊಂಡಿದ್ದರು. ಉಳಿದ 11,750 ಮಂದಿ ಯುವಕರು ಮದುವೆಯಾಗಲು ಹುಡುಗಿಯನ್ನು ಅರಸಿ ಬಂದು ರಿಜಿಸ್ಟರ್ ಮಾಡಿಕೊಂಡಿದ್ದರು. ಮಂಡ್ಯ ದಲ್ಲಿ ಇಷ್ಟು ಅಗಾಧ ಸಂಖ್ಯ್ರೆಯಲ್ಲಿ ಯುವಕರು ಮದುವೆಯಾಗದೇ ಉಳಿದಿದ್ದಾರೆ ಅಂದ್ರೆ ನಿಜಕ್ಕೂ ಆಶ್ಚರ್ಯದ ಸಂಗತಿಯಾಗಿದೆ. ಇದಕ್ಕೆ ಕಾರಣ ಅವರು ರೈತ ಕೃಷಿ ಕ್ಷೇತ್ರದಲ್ಲಿಯೇ ಇರುತ್ತಾನೆ. ಇವರನ್ನು ನಾವು ವಿವಾಹವಾದ್ರೆ ನಾವು ಕೃಷಿ ಭೂಮಿಯಲ್ಲಿಯೇ ಜೀವನ ಪೂರ್ತಿ ಇರಬೇಕು ಎನ್ನುವ ಹುಡುಗಿಯರ ಭಾವನೆಯಾಗಿದ್ದು, ರೈತರ ಮಕ್ಕಳನ್ನು ವಿವಾಹವಾಗಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ರೈತರಿಗೆ ಸರ್ಕಾರ ಸರಿಯಾದ ಮನ್ನಣೆ ನೀಡಬೇಕು. ಕೃಷಿಯನ್ನೂ ಒಂದು ಪ್ರಮುಖ ಉದ್ಯೋಗ ಎಂದು ಗುರುತಿಸಬೇಕು. ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡಿದ್ರೆ ಇಂಥ ಪರಿಸ್ಥಿತಿ ಎದುರಾಗುವುದಿಲ್ಲ. ಒಂದು ವೇಳೆ ನಾವೇನಾದ್ರು ರೈತನನ್ನು ಕಡೆಗಣಿಸಿದ್ದೆ ಆದ್ರೆ ಮುಂದೊಂದು ದಿನಾ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಆಶ್ಚರ್ಯವೆ ಇಲ್ಲ. ರೈತರ ಮಕ್ಕಳಿಗೆ ಮದುವೆಯಾಗುವ ವಿಷಯದಲ್ಲಿಯೂ ಎಷ್ಟು ಸಮಸ್ಯೆ ಇದೆ ಅನ್ನೋದನ್ನ ನೀವು ಮಂಡ್ಯದಲ್ಲಿ ನಡೆದ ವಧು ವರರ ಸಮಾವೇಶ ನೋಡಿದ್ರೆ ಅರಿವಿಗೆ ಬರುತ್ತೆ. ಇದನ್ನು ತಪ್ಪಿಸಲು ಹುಡುಗಿಯರಿಗೆ ರೈತರ ಬಗ್ಗೆ ಇರುವ ಭಾವನೆಯನ್ನು ಬದಲಾಯಿಸಬೇಕು. ಇದಕ್ಕೆ ಸರ್ಕಾರವು ರೈತರಿಗೆ ಕೆಲವು ಘೋಷಣೆಯನ್ನು, ಸೌಲಭ್ಯಗನ್ನು ನೀಡಬೇಕಿದೆ. Post navigation ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. Related Posts ಐ ಲವ್ ಯು ಚಿತ್ರಕ್ಕೆ ಅಂದು ರಚಿತಾರಾಮ್ ಪಡೆದ ಸಂಭಾವನೆ ಎಷ್ಟು ಗೊತ್ತಾ … July 23, 2022 July 23, 2022 Info Master ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಗೆದ್ದ ಹಣದಲ್ಲಿ ವಂಶಿಕಾ & ಯಶಸ್ವಿನಿ ಖರೀದಿಸಿದ ದುಬಾರಿ ಬೆಲೆಯ ಕಾರ್ ನೋಡಿ? May 22, 2022 May 22, 2022 Info Master ಹೆರಿಗೆ ನೋವಿನಲ್ಲಿ ಒದ್ದಾಡುತ್ತಿದ್ದ ಪತ್ನಿಯ ಜೊತೆ ಯೂಟ್ಯೂಬ್ ವೀಡಿಯೋ ನೋಡಿಕೊಂಡು ಎಂತಹ ಕೆಲಸ ಮಾಡಿದ್ದಾನೆ ನೋಡಿ.. ಇವನ ಜನ್ಮಕ್ಕಿಷ್ಟು.. August 15, 2022 August 15, 2022 Info Master Search for: Recent Posts ಐಷರಾಮಿ ಹೋಟೆಲ್ ನಲ್ಲಿ ಮಗಳ ಹುಟ್ಟು ಹಬ್ಬ ಮಾಡಿದ ಯಶ್ ದಂಪತಿ! ನೋಡಿ.. ಮೊದಲ ಹಾಡಿನಲ್ಲೇ ಇಡೀ ಕರ್ನಾಟಕ ಮೀಡಿಯಾಗಳನ್ನೇ ಶೇಕ್ ಆಗುವಂತೆ ಮಾಡಿದ ಈ ಪುಟಾಣಿ ಯಾರು ಗೊತ್ತಾ? ಸರಿಗಮಪ ಹುಡುಗಿ ಮಾಡಿರುವ ಹವಾ ನೋಡಿ ಹೇಗಿದೆ… ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. Recent Posts ಐಷರಾಮಿ ಹೋಟೆಲ್ ನಲ್ಲಿ ಮಗಳ ಹುಟ್ಟು ಹಬ್ಬ ಮಾಡಿದ ಯಶ್ ದಂಪತಿ! ನೋಡಿ.. ಮೊದಲ ಹಾಡಿನಲ್ಲೇ ಇಡೀ ಕರ್ನಾಟಕ ಮೀಡಿಯಾಗಳನ್ನೇ ಶೇಕ್ ಆಗುವಂತೆ ಮಾಡಿದ ಈ ಪುಟಾಣಿ ಯಾರು ಗೊತ್ತಾ? ಸರಿಗಮಪ ಹುಡುಗಿ ಮಾಡಿರುವ ಹವಾ ನೋಡಿ ಹೇಗಿದೆ… ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ..
ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿತ ದುರಂತ ಸಂಭವಿಸಿ 134 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಭಾರತೀಯರಿಗೆ ಆಘಾತ ತಂದಿದೆ. ಇತ್ತ ದಕ್ಷಿಣ ಕೊರಿಯಾ ಮಂದಿಗೆ ಕಾಲ್ತುಳಿತ ಶಾಕ್ ಎದುರಾಗಿದೆ. Suvarna News First Published Oct 31, 2022, 6:35 PM IST ಸೌತ್ ಕೊರಿಯಾ(ಅ.31): ಗುಜರಾತ್ ಸೇತುವೆ ಕುಸಿತ ಘಟನೆ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ 134 ಮಂದಿ ಮೃತಪಟ್ಟಿದ್ದಾರೆ. ಅತ್ತ ಸೌತ್ ಕೊರಿಯಾದಲ್ಲಿ ಹ್ಯಾಲೋವೀನ್ ಆಚರಣೆ ವೇಳೆ ಕಾಲ್ತುಳಿತ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಈ ಶಾಕ್‌ನಲ್ಲಿರುವ ಸೌತ್ ಕೊರಿಯಾ ಜನತೆಗೆ ಮತ್ತೊಂದು ಸುದ್ಧಿ ಬರಸಿಡಿಲಿನಂತೆ ಎರಗಿದೆ. ಇದೇ ಘಟನೆಯಲ್ಲಿ ಸೌತ್ ಕೊರಿಯಾದ ಖ್ಯಾತ ನಟ ಹಾಗೂ ಗಾಯಕ ಲಿ ಜಿಹಾನ್ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿದ ಜನ ಆಘಾತಕ್ಕೊಳಗಾಗಿದ್ದಾರೆ. 24ರ ಹರೆಯದ ಲೀ ಜಿಹಾನ್ ನಿಧನವನ್ನು 935 ಎಂಟರ್ಟೈನ್ಮೆಂಟ್ ಎಜೆನ್ಸಿ ಖಚಿತಪಡಿಸಿದೆ. ಲಿ ಜಿಹಾನ್ ಕುಟುಂಬ, ಆಪ್ತರು ಹಾಗೂ ಅಪಾರ ಅಭಿಮಾನಿ ಬಳಗ್ಗೆ ಸಂತಾಪ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಸೌತ್ ಕೊರಿಯಾ ಕಾಲ್ತುಳಿತ ಘಟನೆಯಿಂದ ತೀವ್ರ ದುಃಖಿತರಾಗಿದ್ದೇವೆ. ಇದೇ ಘಟನೆಯಲ್ಲಿ ನಟ ಲಿ ಜಿಹಾನ್ ನಿಧನರಾಗಿದ್ದಾರೆ ಅನ್ನೋ ಸುದ್ಧಿಯಿಂದ ತೀವ್ರ ಆಘಾತಕ್ಕೊಳಾಗಿದ್ದೇವೆ ಎಂದು 935 ಎಂಟರ್ಟೈನ್ಮೆಂಟ್ ಎಜೆನ್ಸಿ ಹೇಳಿದೆ. ಯಾರೆ ಸಿಕ್ಕರು ಪ್ರೀತಿಯಿಂದ ಮಾತನಾಡಿಸುವ, ಗೌರವಿಸುವ ವ್ಯಕ್ತಿತ್ವ ಇನ್ನಿಲ್ಲ ಅನ್ನೋದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದೆ. ಕೊರಿಯಾದಲ್ಲಿ ಹ್ಯಾಲೊವಿನ್‌ ಆಚರಣೆ ವೇಳೆ ಭೀಕರ ನೂಕುನುಗ್ಗಲು: 150 ಬಲಿ ದಕ್ಷಿಣ ಕೋರಿ​ಯಾ ರಾಜಧಾನಿ ಸಿಯೋಲ್‌ನಲ್ಲಿ ಶನಿವಾರ ಹ್ಯಾಲೋ​ವೀನ್‌ ಆಚ​ರ​ಣೆಯ ವೇಳೆ ಈ ಘಟನೆ ನಡೆದಿದೆ. ಕಾಲ್ತುಳಿತಿಂದ ಆಸ್ಪತ್ರೆ ದಾಖಲಾಗಿದ್ದ ಇನ್ನೂ 31 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಘಟನೆಗೆ ಬಲಿಯಾದವರ ಸಂಖ್ಯೆ 151ಕ್ಕೆ ತಲುಪಿದೆ. ಈ ನಡುವೆ ಕಾಲ್ತುಳಿತದಲ್ಲಿ ಗಾಯಗೊಂಡವರ ಪೈಕಿ 104 ಜನರು ಚಿಕಿತ್ಸೆ ಪಡೆ​ಯು​ತ್ತಿದ್ದು ಅವರಲ್ಲಿ 24 ಜನರ ಸ್ಥಿತಿ ಗಂಭೀ​ರ​ವಾ​ಗಿದೆ. ಹಾಗಾಗಿ ಸಾವಿನ ಸಂಖ್ಯೆ ಇನ್ನ​ಷ್ಟುಹೆಚ್ಚಾ​ಗುವ ಆತಂಕ ಇದೆ. ಸಾವನ್ನಪ್ಪಿದವರಲ್ಲಿ ಬಹುತೇಕರು 25 ವರ್ಷಕ್ಕಿಂತ ಕೆಳಗಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿರಿದಾದ ಪ್ರದೇಶದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾರೀ ಪ್ರಮಾಣದ ಜನರು ಆಗಮಿಸಿದ ಕಾರಣ ಈ ದುರ್ಘಟನೆ ಸಂಭವಿಸಿತ್ತು. View this post on Instagram A post shared by 935엔터테인먼트 (@935entertainment) ಹ್ಯಾಲೊವಿನ್‌ ಹಬ್ಬದಾಚರಣೆಯ ವೇಳೆಗೆ ಕಿರಿದಾದ ಬೀದಿಗಳಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ನಡೆದ ತಳ್ಳಾಟದಿಂದಾಗಿ ಈ ಘಟನೆ ನಡೆದಿದೆ. ಹ್ಯಾಲೋವಿನ್‌ ಪಾರ್ಟಿ ಸ್ಥಳ ಕಿರಿದಾಗಿದ್ದು, ವೇಳೆ ಹಚ್ಚು ಜನಸಂದಣಿ ಸೇರಿತ್ತು. ಈ ವೇಳೆ ಮುನ್ನುಗ್ಗಲು ಒಬ್ಬರ ಮೇಲೊಬ್ಬರು ಮುಗಿಬಿದ್ದಾಗ ಭೀಕರ ನೂಕುನುಗ್ಗಾಟ ಉಂಟಾಯಿತು. ಈ ವೇಳೆ ಅನೇಕರು ಉಸಿರುಗಟ್ಟಿಹೃದಯ ಸ್ತಂಭನದಿಂದ ಮೃತಪಟ್ಟರು. 74 ಜನರ ಶವಗಳನ್ನು ಆಸ್ಪತ್ರೆಗೆ ಕಳಿಸಲಾಗಿದೆ. ಇನ್ನೂ 46 ಮಂದಿಯ ಶವ ಶನಿವಾರ ಮಧ್ಯರಾತ್ರಿಯಾದರೂ ರಸ್ತೆಯಲ್ಲೇ ಬಿದ್ದಿದ್ದವು. ಭೀಕರ ತಳ್ಳಾಟ, ಹೃದಯಸ್ತಂಭನಕ್ಕೆ ಒಳಗಾದವರ ಎದೆ ಒತ್ತಿ ಬದುಕಿಸುವ ಯತ್ನದ ದೃಶ್ಯಗಳು ಮನಕಲಕುವಂತಿದ್ದವು. ಈ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಯುನ್‌ ಸುಕ್‌ ಯಿಯೋಲ್‌ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಸಿ, ಹಬ್ಬದಾಚರಣೆ ಸ್ಥಳಗಳಲ್ಲಿ ಸುರಕ್ಷತಾ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 3 ದಿನಗಳ ಕಾಲ ಶೋಕೋಚಾರಣೆ ಘೋಷಿಸಿದ್ದಾರೆ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಪ್ರವಲ್ಲಿಕ ಮತ್ತಿತರರು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ರಾಜೀವನ ಪೋನ್ ಬಂತು `ಧಾರಿಣಿಯ ವಿಶಯ ಏನಾದ್ರೂ ಗೊತ್ತಾಯಿತಾ ಅಂತ ಕೇಳಿದಾಗ ಅವರು ಧಾರಿಣಿಯಿಂದ ಹೀಗೊಂದು ವಿಚಿತ್ರ ಕರೆ ಬಂದಿತ್ತು ಎಂದು ವಿಶಯ ತಿಳಿಸಿದರು ರಾಜೀವನಿಗೂ ಧಾರಿಣಿಯ ಕರೆಯ ಮರ್ಮ ತಿಳಿಯಲಿಲ್ಲ…ಅದಕ್ಕೆ ರಾಜೀವ `ಹೌದಾ…ಸರಿ ಧಾರಿಣಿ ಗೆ ಒಲೀವಿಯಾ ಅನ್ನುವವಳು ಈಗ ಕಾಲ್ ಮಾಡಿದ್ದಳು ಅವಳಿಗೆ ಧಾರಿಣಿ ಕೆಲವು ಮುಖ್ಯಪತ್ರಗಳನ್ನು ಪೋಸ್ಟ್ ಮಾಡುವುದಾಗಿ ಹೇಳಿದ್ದಳಂತೆ ನಿಮಗೇನಾದರೂ ಆ ವಿಶಯ ಗೊತ್ತಾ? ಅಂತ ಕೇಳಿದ ಅದಕ್ಕೆ ಕಾಂತಿ `ಹೌದು ಪ್ರವಲ್ಲಿಕಾ ಗೆ ಧಾರಿಣಿ ಪೋಸ್ಟ್ ಮಾಡಲು ಕೊಟ್ಟಿದ್ದಳು ಅದೇನೆಂದು ತೆಗೆದು ನೋಡಿದೆವು ವರ್ಜೀನಿಯಾದ ಅಲೆಕ್ಸಾಂಡ್ರಿಯಾ ದಲ್ಲಿರುವ United States Patent and Trademark Office (USPTO) ಗೆ ತಲುಪಿಸುವಂತೆ ಪೇಟೆಂಟ್ ಲೈಸನ್ಸ್ ಕಂಪನಿಯೊಂದಕ್ಕೆ ಧಾರಿಣಿ ಕಳಿಸಿದ ಅವಳು ಸಹಿ ಮಾಡಿದ Oath Declaration ಅದು ಆದರೆ ನನಗ್ಯಾಕೋ ಅದು ಇನ್ಕಂಪ್ಲೀಟ್ ಅನ್ನಿಸಿತು ಹೇಗಾದರೂ ಆಗ್ಲೀ ಅಂತ…ಇವತ್ತು ಪೋಸ್ಟ್ ಮಾಡಲು ಇನ್ನೂ ಕೆಲವು ಪತ್ರಗಳಿತ್ತು ಅವುಗಳೊಂದಿಗೆ ಪೋಸ್ಟ್ ಮಾಡಿಬಿಟ್ಟೆವು ಅದಾದರೂ ಇದ್ದಿದ್ದರೆ ಈಗ ಪ್ರವಲ್ಲಿಕಾ ಅದನ್ನೇ ಅಶೋಕಾ ಗೆ ತಗೊಂದು ಹೋಗಬಹುದಿತ್ತು ಅಂದಳು ಅವನು ಚಿಂತೆಯಿಂದಲೇ ಪೋನಿಟ್ಟದ್ದು ಇಲ್ಲಿವರಿಗೆ ವೇದ್ಯವಾಯಿತು. ಮುಂದಿನ ಹೆಜ್ಜೆ ಯೋಚಿಸಲು ನೆಲೆಸಿದ್ದ ಗಂಭೀರ ವಾತಾವರಣವನ್ನು ತಿಳಿ ಮಾಡುವುದು ಅವಶ್ಯವೆಂದರಿತ ಪ್ರವಲ್ಲಿಕಾ ಕಾಂತಿಯನ್ನು ತಮಾಶೆ ಮಾಡಿದಳು`ಇವತ್ತು ಪೋಸ್ಟ್ ಮಾಡಕ್ಕೆ ಇನ್ನೂ ಕೆಲವು ಪತ್ರಗಳಿತ್ತಾ ಕಾಂತಿ…ಯಾಕಮ್ಮಾ ನಾಚ್ಕೋತೀಯಾ ನಿಮ್ಮಪ್ಪ ಮೈಲ್ ಮಾಡಿದ್ದ ನಿನ್ ಜಾತಕನ ಪ್ರಿಂಟ್ ಔಟ್ ತೆಗೆದು ಶಾಸ್ತ್ರಿ ಅಂಕಲ್ ಗೆ ಕಳಿಸಿದೆವು ಅಂತ ಹೇಳ ಬಾರದೇ….’ಎಂದಳು ಕಾಂತಿ ಅರೆ ಗಳಿಗೆ ಕೆಂಪಾದವಳು ಸುಧಾರಿಸಿಕೊಂಡು `ಈಗ ಮುಂದಿನ ದಾರಿ ಏನು…?’ಅಂದಳು ಅದಕ್ಕೆ ಆಕಾಶ್ `ಧಾರಿಣಿಯ ಆವಿಶ್ಕಾರದ ಬಗ್ಗೆ ಅಲ್ಪ ಸ್ವಲ್ಪ ನನಗೆ ಗೊತ್ತು ನಾನೊಂದು ನಕಲಿ ಪತ್ರ ತಯಾರು ಮಾಡುತ್ತೇನೆ ಪ್ರವಲ್ಲಿಕಾ ಅದನ್ನು ತೊಗೊಂಡು ಅಶೋಕ ಹೋಟೆಲ್ ಗೆ ಹೋಗಲಿ ಅಟ್ ಲೀಸ್ಟ್ ವಿ ಕ್ಯಾನ್ ಬೈ ಸಂ ಟೈಂ …’ಅಂದ. ಟಿಮ್ ಅಶೋಕ ದಿಂದ ಧುಮುಗುಟ್ಟುತ್ತಾ ವಾಪಸ್ಸು ಬಂದ ಅಶೋಕಾದಲ್ಲಿ Indian Industries Association (IIA)ದವರು ಅಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಪಾಲ್ಗೊಂಡಿದ್ದರಿಂದ ಅವನಿಗೆ ಅಶೋಕಾದೊಳಗೆ ಹೋಗಲು ಸೆಕ್ಯೂರಿಟಿ ಸಿಬ್ಬಂದಿ ಬಿಡಲಿಲ್ಲ ಜೊತೆಗೆ ಬೆಂಗಳೂರಿನ ತಲೆ ಚಿಟ್ಟು ಹಿಡಿಸುವ ಟ್ರ್ಯಾಫಿಕ್ ಬೇರೆ …ತಲೆ ಓಡದೇ ಒಂದು ಚಿಲ್ಲ್ಡ್ ಬಿಯರ್ ಕುಡಿಯುವಾ ಅಂತ ಸೀದಾ ತನ್ನ ರೂಮಿಗೆ ಹೋರಟವನಿಗೆ ಶಶ್ ಯಾನೇ ಶಶಾಂಕ ಎದುರಾದ ಶಶ್ ನ ಕೈಲಿ ಪ್ಲ್ಯಾಸ್ಟಿಕ್ ಬ್ಯಾಗ್ ಒಂದಿತ್ತು.`ಹೌ ಈಸ್ ಶೀ…?’ ಧಾರಿಣಿ ಬಗ್ಗೆ ವಿಚಾರಿಸಿದ ಟಿಮ್ `ನಾಟ್ ಗುಡ್ ಟಿಮ್ ಅವಳು ಮಧ್ಯಾನ ಲಂಚ್ ಮುಟ್ಟಲಿಲ್ಲ…’ಅಂದ ಶಶ್ ` ಏಕೆ?’ಟಿಮ್ ಪ್ರಶ್ಣಿಸಿದ ಹಿಂದೂ ಗಳ ಆಚಾರ ವಿಚಾರಗಳು ನಿನಗೆ ಅಲ್ಪ ಸಲ್ಪ ಗೊತ್ತಿರಬೇಕು ಟಿಮ್ ನಾವೆಶ್ಟೇ ಮುಂದುವರೆದರೂ ಕೆಲವು ವಿಶಯಗಳಲ್ಲಿ ಸಂಪ್ರದಾಯ ಬಿಟ್ಟುಕೊಡುವವರಲ್ಲ ಇವತ್ತು ಶುಕ್ರವಾರವಲ್ಲವೇ…ಅವಳು ಲಲಿತಾ ಸಹಸ್ರ ನಾಮ ಹೇಳಿಕೊಳ್ಳದೇ ಏನೂ ತಿನ್ನುವುದಿಲ್ಲವಂತೆ ನಿಮ್ಮಗಳಿಗೆ ಭಾನುವಾರ ಚರ್ಚಿಗೆ ಹೋಗದಿದ್ದರೆ ಹೇಗೆ ಮನಸ್ಸು ತಡೆಯುವುದಿಲ್ಲವೋ ಹಾಗೆ… ಅದಕ್ಕೆ ಅವಳು ಸ್ವಲ್ಪ ಏನಾದರೂ ತಿನ್ನಲೀ ಅಂತ ಇವನ್ನು ಒಯ್ಯುತ್ತಿದ್ದೇನೆ ಅಂದು ತನ್ನ ಕೈಲಿದ್ದ ಸಾಮಾನು ತೋರಿಸಿದ ಟಿಮ್ ಯಾರನ್ನೂ ನಂಬುವವನಲ್ಲ ಶಶ್ ನ ಕೈನಿಂದ ಬ್ಯಾಗ್ ತೆರೆದು ಅದರಲ್ಲಿದ್ದ ಸಾಮಾನು ಪರೀಕ್ಷಿಸಿದ ಅದರಲ್ಲಿದ್ದದು ಒಂದು ಆರಿಂಚು ಉದ್ದದ ದೇವಿಯ ಶ್ರೀಗಂದದ ಪ್ರತಿಮೆ ಒಂದಿಷ್ಟು ಕುಂಕುಮದ ಪೊಟ್ಟಣ ಮತ್ತು ಶಶ್ ತನ್ನ ಪ್ರಿಂಟರ್ ನಲ್ಲಿ ತೆಗೆದಿದ್ದ ಇಂಗ್ಲಿಶ್ ಲಿಪಿಯಲ್ಲಿದ್ದ ಲಲಿತಾ ಸಹಸ್ರನಾಮದ ಪ್ರಿಂಟ್ ಔಟ್ ಟಿ ಮ್ ಅದರಲ್ಲಿದುದು ಓದಲು ಯತ್ನಿಸಿದ. Om shrimata shrimaharagyi shrimatsimha saneshvari Chidagni kundasambhuta devakarya samudyata ….. Shrimata: Salutations to the Divine Mother, who is the Mother of all. Shri-mahararagni: Great Empress of the whole Universe. Shrimat-simhasaneshvari: Great Sovereign, enthroned on the lion’s back. Chidagni kundasambhuta: Who came out of the fire of Pure Consciousness. Devakarya samudyata: Who promotes the cause of Divine forces…. ಟಿಮ್ ನಿಗೆ ಮೊದಲಿಗೆ ನಾಲಿಗೆ ತಿರುಗಲಿಲ್ಲ ನಂತರ ಇಂಗ್ಲಿಶ್ ನಲ್ಲಿದ್ದ ಅರ್ಥ ಓದಿದಾಗ ಅದರಲ್ಲೇನೂ ವಿಶೇಶ ಕಾಣಲಿಲ್ಲವಾದ್ದರಿಂದ ಏನೋ ಹೇಳಿಕೊಳ್ಳಲಿ ಬಿಡು ಅಂದು ಕೊಂಡು ಶಶ್ ನಿಗೆ ಸಹಸ್ರನಾಮವಿದ್ದ ಕಾಗದಗಳನ್ನು ವಾಪಸು ಮಾಡಿದ ದೇವಿಯ ವಿಗ್ರಹ ವನ್ನು ಮೂಗಿನ ಬಳಿ ಇಟ್ಟುಕೊಂಡು ವಾಸನೆ ನೋಡಿ ತುಂಬಾ ಚೆನ್ನಾ ಗಿದೆ ವಾಸನೆ…ನಾನು ಅಮೇರಿಕಾ ಗೆ ವಾಪಸು ಹೋಗುವಾಗ ನನಗೂ ಏನಾದರೂ ಸ್ಯಾಂಡಲ್ ವುಡ್ ನ ಸಾಮಾನು ಕೊಡಿಸು ಅಂದ. ಶಶ್ ಧಾರಿಣಿ ರೂಮಿಗೆ ಬಂದು ತನ್ನ ಕೈಲಿದ್ದ ಸಾಮಾನು ಕೊಡುತ್ತಾ ` ಟೇಕ್ ದೀಸ್…ಫಿನಿಶ್ ಯುವರ್ ಚಾಂಟಿಂಗ್ ಅಂಡ್ ಹ್ಯಾವ್ ಸಂ ಪುಡ್…’ ಅಂದ ಧಾರಿಣಿ ಸ್ವಲ್ಪ ಅಚ್ಚರಿ ಪಡುತ್ತಾ ಅವನ ಕೈಲಿದ್ದ ಸಾಮಾನು ತೆಗೆದು ಕೊಂಡಳು. ಏಕೆಂದರೆ ಮೊದಲಿಗೆ ಅವಳು ದೇವರನ್ನು ನಂಬುವುದು ಬಿಟ್ತು ಹಲವು ವರ್ಷಗಳಾಗಿತ್ತು ನಿಖರವಾಗಿ ಹೇಳ ಬೇಕೆಂದರೆ ಆರು ವರ್ಶ ಒಂದು ಇರುವೆಯನ್ನೂ ನೋಯಿಸದ ತನ್ನಣ್ಣ ಪ್ರತಾಪ ಎಂದು ಬೂದಿಯಾದನೋ ಅಂದಿಗೆ ಅವಳಿಗೆ ದೇವರ ಮೇಲಿದ್ದ ಭಕ್ತಿ ಕೊನೆಯಾಗಿತ್ತು ಎರಡನೆಯದಾಗಿ ಅವಳು ಆ ಸಾಮಾನುಗಳಿಗಾಗಿ ಅವನನ್ನು ಕೇಳಿರಲೇ ಇಲ್ಲ! ಟಿಮ್ ತನ್ನ ಸಹಾಯಕ ಗಿರಿಯ ಮೂಲಕ ಪ್ರವಲ್ಲಿಕಾ ಳ ಹಾಸ್ಟೆಲ್ ನಲ್ಲಿ ವಿಚಾರಿಸಿ ಧಾರಿಣಿ ಹೇಳಿದ್ದು ನಿಜವೆಂದು ಖಾತ್ರಿ ಮಾಡಿಕೊಂಡ ಧಾರಿಣಿಗೆ ಪ್ರವಲ್ಲಿಕಾ ಎಂಬ ತಂಗಿ ಇದ್ದಾಳೆಂಬುದು ನಿಜ …ಹಾಗಾದರೇನು ಮಾಡುವುದು ಈಗ ಎಂದು ಕೊಳ್ಳುತ್ತಾ ಪ್ರವಲ್ಲಿಕಾ ಹಾಸ್ಟೆಲ್ ನಲ್ಲಿ ಲೋಕಲ್ ಗಾರ್ಡಿಯನ್ ಎಂದು ಕೊಟ್ಟಿದ್ದ ಕೇಶವನ ಮನೆ ಅಡ್ರೆಸ್ ತೆಗೆಸಿಕೊಂಡ ಕೇಶವನ ಮನೆಗೆ ನುಗ್ಗಿ ಧಾರಿಣಿಯನ್ನು ಎಳೆತರುವುದೇನು ದೊಡ್ಡ ಕೆಲಸವಲ್ಲ ಈಗಾಗಲೇ ಬಿಳಿಯನಾದ ನನ್ನ ಮೇಲೆ ಒಬ್ಬಳನ್ನು ಕರೆತಂದಾಗಲೇ ಯಾರಿಗಾದರೂ ಸಂದೇಹ ಬಂದಿರಬಹುದು ತನ್ನನ್ನು ಯಾರಾದರೂ ಗುರುತು ಹಿಡಿದರೆ ಕಷ್ಟ ಎಂದು ಕೊಳ್ಳುತ್ತಾ ಗಿರಿಯನ್ನು ಕಳಿಸೋಣವೇ ಅಂದುಕೊಂಡ ನಂತರ ಬೇಡವೆಂದು ಗಿರಿಗೆ ಈವಿಳಾಸದ ಮನೆಯ ಮೇಲೆ ಒಂದು ಕಣ್ಣಿಡು ಅಂತ ಸೂಚನೆ ಕೊಟ್ಟ. ಧಾರಿಣಿ ಮುಂದೇನು ಮಾಡುವುದೆಂದು ಯೋಚಿಸುತ್ತಿದ್ದಾಳೆ ಮಧ್ಯಾನ್ಹ ಟಿಮ್ ಇಲ್ಲದ ಸಮಯ ಸಾಧಿಸಿ ತನ್ನ ರೂಮಿಗೆ ಚೈನೀಸ್ ನೂದಲ್ಸ್ ತುಂಬಿದ ತಟ್ಟೇ ತಂದಿತ್ತ ಶಶ್ ಅವಳಿಗೆ ಒಂದಿಷ್ಟು ಭರವಸೆ ತೋರಿದಂತೆ ಅನ್ನಿಸಿತ್ತು ಇವ್ನೇನೋ ಭಾರೀ ಬುದ್ದಿವಂತ ಅಂದುಕೊಂಡರೆ ನಿನ್ನ ಬಿಡುಗಡೆಗಾಗಿ ದೇವರನ್ನು ಪ್ರಾರ್ಥಿಸು ಅಂತ ಕುಂಕುಮದ ಪೊಟ್ಟಣ ತಂದು ಕೊಟ್ಟಿದ್ದಾನೆ ಅಂತ ಬೈದುಕೊಂಡಳು ಮಧ್ಯಾನ ನಡೆದ ಸಂಗತಿಯನ್ನು ಮತ್ತೆ ಮೆಲಕು ಹಾಕಿಕೊಂಡಳು ನೂಡಲ್ಸ್ ಮೇಲೆ ಟೊಮೇಟೋ ಸಾಸ್ ನಿಂದ I help U’ಅಂತ ಬರೆದು ಸಿ.ಸಿ ಕ್ಯಾಮೆರಾ ಅತ್ತಿಂದಿತ್ತ ಹರಿಯುವುದರೊಳಗಾಗಿ ಅದನ್ನು ನೂಡಲ್ಸ್ ನೊಂದಿಗೆ ಕಲೆಸಿ ಬಿಟ್ಟಿದ್ದ ಶಶ್.ಇವಳು ವಾವ್ ಅಂದುಕೊಂಡು ಆ ಸಾಸ್ ಮಯ ನೂಡಲ್ಸ್ ಅನ್ನು ಕಷ್ಟ ಪಟ್ಟು ತಿಂದು ಏನೋ ಸಹಾಯ ನಿರೀಕ್ಷಿಸುತ್ತಿದ್ದರೆ ದೇವಿ ವಿಗ್ರಹವನ್ನೂ ಕುಂಕುಮ ಪೊಟ್ಟಣವನ್ನೂ ತಂದು ಕೊಟ್ಟಿದ್ದನ್ನು ನೋಡಿ ಅವಳಿಗೆ ನಿರಾಸೆಯಾಗಿಬಿಟ್ಟಿತ್ತು ಮತ್ತೆ ಯೋಚಿಸಿದಳು ಶಶ್ ಇವುಗಳ ಮೂಲಕ ಏನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಅನ್ನಿಸಿತು ವಿಗ್ರಹವನ್ನೂ ಪೊಟ್ಟಣಗಳನ್ನೂ ಪರೀಕ್ಷಿಸಿದಳು. ಏನೂ ಹೊಳೆಯಲಿಲ್ಲ. ಲಲಿತಾ ಸಹಸ್ರ ನಾಮದ ಕಾಗದಗಳನ್ನು ತೆಗೆದುಕೊಂಡು ಓದಲಾರಂಭಿಸಿದಳು ಅದು ಅವಳು ಚಿಕ್ಕಂದಿನಲ್ಲಿ ಕಲಿತದ್ದೇ ಸ್ಕೂಲು ಹುಡುಗಿಯರಾಗಿದ್ದಾಗ ಶಾರದಮ್ಮನವರೊಂದಿಗೆ ಮನೆ ಕೆಲಸ ಮಾಡುತ್ತಾ ಅವಳೂ ಪ್ರವಲ್ಲಿಕಾಳೂ ಲಲಿತಾ ಸಹಸ್ರನಾಮ ಹೇಳಿಕೊಳ್ಳುತ್ತಿದ್ದರು ಮೊದಲ ಹತ್ತು ಶ್ಕ್ಲೋಕಗಳಾದ ಮೇಲೆ ಏನೋ ಬದಲಾವಣೆ ಅನ್ನಿಸಿತು ಹನ್ನೊಡನೇ ಶ್ಲ್ಕೋಕದಿಂದ ಪ್ರತಿಶ್ಲ್ಕೋಕದ ಪ್ರತಿ ಎರಡನೇ ಸಾಲಿನಲ್ಲಿ ಅವಳಿಗೆ ಬೇಕಾದ್ದು ಸಿಕ್ಕಿತು!ಅದು ಶಶ್ ಅವಳಿಗೆ ಕೊಟ್ಟಿದ್ದ ಸೂಚನೆ!! *** ಧಾರಿಣಿ ನಿಧಾನವಾಗಿ ಯೋಚಿಸುತ್ತಾ ಸಿಸಿ ಕ್ಯಾಮೆರಾ ಅವಳತ್ತ ತಿರುಗಿದಾಗ ಕುಂಕುಮಾರ್ಚನೆ ಮಾಡುತ್ತಾ ಅತ್ತ ತಿರುಗಿದಾಗ ಸಹಸ್ರ ನಾಮದ ಜೊತೆಗಿದ್ದ ಖಾಲಿ ಹಾಳೆಯಲ್ಲಿ ಪೇಟೇಂಟ್ ಬಗೆಗಿನ data sheet ನಲ್ಲಿ ಬರೆಯ ಬೇಕಾದ ವಿವರಗಳನ್ನು ಬರೆದಳು ಕೊನೆಯಲ್ಲಿ ಒಲೀವಿಯಾಳಿಗೆ ತಾನು ಖುದ್ದಾಗಿ ಸಹಿ ಮಾಡಬೇಕಾದ ದಾಖಲೆ ಗಳಿಗೆ ಈಗಾಗಲೇ ಸಹಿ ಮಾಡಿ ಕಳಿಸಿರುವೆಂದೂ ಅದು ಒಲೀವಿಯಾಳಿಗೆ ಬೇಗನೇ ತಲುಪುವುದೆಂಬ ಸೂಚನೆಯನ್ನೂ ಬರೆದಳು. ಇನ್ನೊಂದು ತುಂಡು ಕಾಗದದಲ್ಲಿ ಒಲೀವಿಯಾಳ ಮೈಲ್ ಐಡಿಯನ್ನು ಬರೆದು ಈಯೆಲ್ಲ ವಿವರಗಳನ್ನೂ ಆದಷ್ಟೂ ಬೇಗ ಮೇಲ್ ಮಾಡಬೇಕೆಂದು ಶಶ್ ನಿ ಗೆ ಸೂಚಿಸಿದಳು.ಎಲ್ಲವನ್ನೂ ಕುಂಕುಮವಿದ್ದ ಸಣ್ಣ ಪ್ಲ್ಯಾಸ್ಟಿಕ್ ಪೊಟ್ಟಣದಲ್ಲಿ ಸಣ್ಣಗೆ ಮಡಿಸಿ ದೇವಿ ವಿಗ್ರಹದ ತಳದ ಮರದ ಪಟ್ಟಿ ಸರಿಸಿ ಅದರ ಟೊಳ್ಳಿನಲ್ಲಿ ಅದನ್ನು ಸೇರಿಸಿ ಬಿಟ್ಟಳು. *** ಜವಾನನೊಬ್ಬ ಬಂದು ಟಿಮ್ ನಿಗೆ ಆ ಹುಡುಗಿ ಪೂಜೆ ಮಾಡಿದ ನಂತರ ನೀರಿನಲ್ಲಿ ವಿಸರ್ಜನೆ ಮಾಡಬೇಕಂತೆ ಅಂದಾಗ `ದಿಸ್ ಈಸ್ ಟೂ ಮಚ್’ಅಂತ ಟಿಮ್ ಕೂಗಾಡಿದ ಆಗ ಅಲ್ಲೇ ಇದ್ದ ಶಶ್ ಅವಳ ಅಕ್ಕ ಅಶೋಕಾಕ್ಕೆ ಬಂದಿದ್ದಳೋ ಏನೋ ಅಥವಾ ನಿನ್ನನ್ನು ಹೇಗೆ ಸೆಕ್ಯೂರಿಟಿಯವರು ಬಿಡಲಿಲ್ಲವೋ ಹಾಗೇ ಅವಳನ್ನೂ ಬಿಡಲಿಲ್ಲವೋ ಏನೋ ಅದಕ್ಕೆ ಅವಳ ಮೇಲಿನ ಕೋಪ ಇವಳ ಮೇಲ್ಯಾಕೆ ತೀರಿಸುತ್ತೀ…ವಿಸರ್ಜನೆ ಹಿಂದೂ ಗಳ ಪೂಜಾ ವಿಧಾನ ನೀನು ನಮ್ಮಗಣಪತಿ ಅದೇ ಎಲಿಫೆಂಟ್ ಗಾಡ್ ಅನ್ನು ಅಮೇರಿಕಾ ದಲ್ಲೂ ನಾವುಗಳು ಸಮುದ್ರದಲ್ಲಿ ಕೊಂಡು ಹೋಗಿ ವಿಸರ್ಜಿಸುವುದು ನೋಡಿಲ್ಲವೇ…? ಈ ರೆಸಾರ್ಟ್ ನ ಮೂಲಕ ವಾಗಿ ಹರಿವ ಸ್ಟ್ರೀಮ್ ಇದೆಯಲ್ಲಾ…ಅಲ್ಲಿ ಹೋಗಿ ಹಾಕುತ್ತಾಳೆ ಬಿಡು… ಬೇಕಾದ್ರೆ ಗಿರಿ ಅವಳೊಂದಿಗೆ ಹೋಗಿಬರಲಿ…ಅಂತ ಟಿಮ್ ನನ್ನು ಸಮಾಧಾನ ಮಾಡಿದ. ಗಿರಿ ಎಲ್ಲೋ ಹೊರಗೆ ಹೋಗಿದ್ದರಿಂದ ಆ ಜವಾನನೊಂದಿಗೆ ಧಾರಿಣಿ ಅಲ್ಲಿಂದ ಕಣ್ಣಳತೆ ದೂರದಲ್ಲಿದ್ದ ತೊರೆಯಲ್ಲಿ ವಿಗ್ರಹವನ್ನು ಬೊಗಸೆ ಕುಂಕುಮದೊಂದಿಗೆ ಶಶ್ ನ ಸೂಚನೆಯಂತೆ ಒಂದು ಕೆಂಪು ಪ್ಲ್ಯಾಸ್ಟಿಕ್ ಕವರಿನಲ್ಲಿ ಹಾಕಿ ನೀರಿನಲ್ಲಿ ಬಿಟ್ಟಳು ರೆಸಾರ್ಟ್ ನಿಂದ ಹತ್ತು ಮಾರುಗಳಷ್ಟು ದೂರದಲ್ಲಿ ಅವಳು ನಿಂತಿರುವುದೂ ಅವಳ ಮೇಲೆ ಟೀಮ್ ಕಣ್ಣಿಟ್ಟಿರುವುದೂ ಅವಳಿಗೆ ಗೊತ್ತಾದ್ದರಿಂದ ಮನಸ್ಸಿನಲ್ಲೇ ನಗುತ್ತಾ ಎರಡು ನಿಮಿಶ ಕೈಮುಗಿದುಕೊಂಡು ನಿಂತಿದ್ದು ವಾಪಸು ಬಂದು ಬಿಟ್ಟಳು. ಅಲ್ಲಿಂದ ತೊರೆ ಹರಿಯುತ್ತಾ ಆಚೆ ಹೋದ ಮೇಲೆ ದಾರಿಯಲ್ಲಿ ಶಶ್ ನೇಮಿಸಿದ ವ್ಯಕ್ತಿ ತನ್ನ ತರಬೇತಿ ಹೊಂದಿದ ನಾಯಿಯೊಂದಿಗೆ ಈ ಕೆಂಪು ಪ್ಯಾಕೆಟ್ ಹಿಡಿಯಲು ಕಾಯುತ್ತಿರುತ್ತಾನೆ ಮತ್ತು ಅವನು ಧಾರಿಣಿ ಸೂಚನೆಗಳನ್ನು ಅನುಸರಿಸಿ ಅವಶ್ಯವಾದ್ದನ್ನು ಮಾಡುತ್ತಾನೆ ಎಂದು ಅವಳಿಗೆ ಗೊತ್ತು ಶಶ್ ನನ್ನು ತಾನು ಹೇಗೆ ನಂಬಿದೆ ಅಂತ ಅವಳಿಗೇ ಆಶ್ಚರ್ಯವಾಗುತ್ತಿದೆ. ದೇವಿ ವಿಗ್ರಹವನ್ನು ನಾಯಿ ಹಿಡಿಯುವುದು ದೇವರಲ್ಲಿ ನಂಬಿಕೆ ಕಳೆದುಕೊಂಡ ಧಾರಿಣಿಗೆ ಕೂಡಾ ಕಸಿವಿಸಿಯ ವಿಶಯವೇ…ನಮ್ಮಪ್ಪನಿಗೆ ಈವಿಶ್ಯ ತಿಳಿದರೆ ಎಷ್ಟು ನೊಂದು ಕೊಳ್ಳುತ್ತಾರೋ…ಎಂದು ಕೊಂಡಳು ಮತ್ತೆ ರೆಸಾರ್ಟ್ ಪ್ರವೇಶಿಸಿದಾಗ ಎಂಥದೋ ಒಂದು ಸಮಾಧಾನದ ಸಣ್ಣ ನಗೆ ಅವಳ ಮುಖದ ಮೇಲೆ ಕಾಣುತ್ತಿತ್ತು ಆದರೆ ಆನಗೆ ತುಂಬಾಹೊತ್ತು ಇರಲು ಸಾದ್ಯವಿಲ್ಲ ಅದಕ್ಕೆ ಕಾರಣ ಗಿರಿ! *** ಗಿರಿ ವಿಜಯದ ನಗು ಬೀರುತ್ತಾ ಟಿಮ್ ನಪಕ್ಕ ನಿಂತಿದ್ದ ಶಶ್ ಗಂಭಿರವಾಗಿದ್ದ ಓ…ಮಿಸ್ ಶ್ಯಾಸ್ತ್ರೀ…ಪ್ಲೀಸ್ ಕಮ್…ಎಂದು ವ್ಯಂಗ್ಯ ನಗು ಬೀರುತ್ತಾ ಹೇಳಿದ ಟಿಮ್ ಅವನ ಕೈಲಿದ್ದ ಲಕ್ಕೋಟೆ ನೋಡಿ ಧಾರಿಣಿಯ ಮನ ಧಸಕ್ಕೆಂದಿತು!ಅದು ಅವಳು ಪ್ರವಲ್ಲಿಕಾ ಗೆ ಒಲೀವಿಯಾಳ ವಿಳಾಸಕ್ಕೆ ಪೋಸ್ಟ್ ಮಾಡಲು ಕೊಟ್ಟಿದ್ದು.ಧಾರಿಣಿ ಯಾವತ್ತೂ ಹುಷಾರಿ ಹುಡುಗಿ ಎಲ್ಲಾ ವಿವರಗಳನ್ನೂ ಪೋಸ್ಟ್ ನಲ್ಲಿ ಅಥವಾ ಮೈಲ್ ಒಂದರಲ್ಲೇ ಕಳಿಸಿದರೆ ಅದು ಹೇಗಾದರೂ ಲೀಕ್ ಆಗುವ ಸಂಭವ ಇದೆಯೆಂದು ಕೆಲವು ವಿವರಗಳನ್ನು ಸಹಿ ಮಾಡಬೇಕಾದ್ದನ್ನೂ ಮೊದಲು ಪೋಸ್ಟ್ ನಲ್ಲಿ ಕಳಿಸಿ ಇನ್ನುಳಿದದ್ದನ್ನು ಮೇಲ್ ಮಾಡೋಣವೆಂದು ಕೊಂಡಿದ್ದಳು ಈಗ ಶಶ್ ನೇಮಿಸಿದ ವ್ಯಕ್ತಿ ಒಲೀವಿಯಾಗೆ ಮೇಲ್ ಮಾಡುತ್ತಾನೆಂದು ನಿರಾಳವಾಗಿದ್ದರೆ ಹೊಸ ಆಪತ್ತು ಬಂದಿತಲ್ಲಾ ಎಂದು ಕಂಗೆಟ್ಟಳು ಗಿರಿ ತಾನು ಹೇಗೆ ಕೇಶವನ ಏರಿಯಾದ ಪೋಸ್ಟ್ ಆಫೀಸಿನಲ್ಲಿ ಜನ ಹಿಡಿದು ಈಮನೆಯವರ ಎಲ್ಲಾ ಪತ್ರಗಳನ್ನೂ ನನಗೇ ತಂದು ಕೊಡಿ ಅಂತ ಈ ಕಾಗದ ಸಂಪಾದಿಸಿದೆ ಅಂತ ಟಿಮ್ ನ ಬಳಿ ಜಂಭ ಕೊಚ್ಚುತ್ತಿದ್ದ ಟಿಮ್ ನೋದು ನಿಮ್ಮಕ್ಕ
ರಾಮನಗರ: ನಾನು ಬ್ಲ್ಯಾಕ್‌ ಇದ್ದೇನೆ, ಆದರೆ ಬ್ಲ್ಯಾಕ್‌ ಮೇಲರ್ (Blackmail) ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD KumaraSwamy) ತಿಳಿಸಿದ್ದಾರೆ. ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಕಾರಿಗೆ ಜೆಡಿಎಸ್ (JDS) ಕಾರ್ಯಕರ್ತರಿಂದು ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದರು. ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದನ್ನೂ ಓದಿ: 68ನೇ ರಾಷ್ಟ್ರ ಪ್ರಶಸ್ತಿ ಪಡೆದ ಸ್ಯಾಂಡಲ್‌ವುಡ್ ತಾರೆಯರು Related Articles ದಿನ ಭವಿಷ್ಯ: 06-12-2022 12/06/2022 ರಾಜ್ಯದ ಹವಾಮಾನ ವರದಿ: 06-12-2022 12/06/2022 ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ನಾನು ಬ್ಲ್ಯಾಕ್‌ ಇದ್ದೇನೆ, ಆದರೆ ಬ್ಲ್ಯಾಕ್‌ ಮೇಲರ್ ಅಲ್ಲ. ನಿಮಗೆ ಹಾಗೆ ಅನಿಸಿದ್ರೆ ನನಗೆ ಗೊತ್ತಿಲ್ಲ. ನೀವೇನೋ ಮಾಡಿಕೊಂಡಿರಬೇಕು. ನಾವು ಬೇರೆ ಜಿಲ್ಲೆಯ ಗುಂಡಾಗಳನ್ನು ಕರೆಯಿಸಿ ಪ್ರತಿಭಟನೆ (Protest) ಮಾಡಿಲ್ಲ. ನನ್ನ ಪಕ್ಷದಲ್ಲಿ ಇರೋರು ಗುಂಡಾಗಳಲ್ಲ, ರಾಮನಗರ ಜಿಲ್ಲೆ ಅಷ್ಟು ಅನಾಥ ಆಗಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಬೆನ್ನಿಗೆ ನಿಂತ ಉಪೇಂದ್ರ : ಸ್ನೇಹಿತ್ ಒಳ್ಳೆಯ ಹುಡುಗ ರಾಮನಗರದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತಾರದೇ ಸಿಪಿ ಯೋಗೇಶ್ವರ್ ಕಾರ್ಯಕ್ರಮ ಉದ್ಘಾಟನೆ ಹೇಗೆ ಮಾಡಿದ್ರು? ಈ ಸಲ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ. ಸುಮ್ಮನೆ ಬಿಡಲ್ಲ, ಏಕೆಂದರೆ ಇದು ಸಾಮಾನ್ಯ ಹಕ್ಕುಚ್ಯುತಿ ಆಗಲ್ಲ. ಯಾವೆಲ್ಲ ಅಧಿಕಾರಿಗಳು ಇದ್ದಾರೋ ಅವರು ಸಸ್ಪೆಂಡ್ ಆಗಬೇಕು. 2023ರ ಚುನಾವಣೆ ದೂರ ಉಳಿದಿಲ್ಲ, ಅಧಿಕಾರಿಗಳು ಇದನ್ನು ತಿಳ್ಕೋಬೇಕು. ಒಂದು ಕಾರ್ಯಕ್ರಮ ಉದ್ಘಾಟನೆ ಮಾಡಲು ಸಾವಿರಾರು ಪೊಲೀಸ್ ಬೆಟಾಲಿಯನ್ ಹಾಕಿದ್ದೀರಿ, ಈ ರೀತಿಯಲ್ಲಿ ಉದ್ಘಾಟನೆ ಮಾಡಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ, ಅದನ್ನ ಮರೆತುಬಿಡಲಿ. ಮಂಡ್ಯದಲ್ಲಿ, ತುಮಕೂರಲ್ಲಿ ಲೋಕಸಭಾ ಚುನಾವಣೆಯಲ್ಲಿ ನನ್ನ ಮತ್ತು ನಮ್ಮ ಕುಟುಂಬವನ್ನ ಮುಗಿಸಬೇಕು, ಅಂತಾ ಕಾಂಗ್ರೆಸ್, ಬಿಜೆಪಿ ಒಂದಾಗಿತ್ತು. ಈಗ ರಾಮನಗರದಲ್ಲಿ ಮತ್ತೊಬ್ಬನನ್ನ ತಯಾರಿ ಮಾಡಿಬಿಟ್ಟಿದ್ದಾರೆ. ಈಗ ಚನ್ನಪಟ್ಟಣ, ರಾಮನಗರದಲ್ಲಿ ನನ್ನನ್ನು ಕಟ್ಟಿಹಾಕಲು ಬಿಜೆಪಿ, ಕಾಂಗ್ರೆಸ್ ಒಂದಾಗಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಆದ್ರೆ ನಾನು ಅಲ್ಲಿ ಜನರ ಮನೆಯ ಮಗನಾಗಿದ್ದೇನೆ, ಅವರು ಏನು ಮಾಡೋಕೆ ಆಗೋದಿಲ್ಲ. ನಾನು 2004 ನಂತರ ನನ್ನ ಕ್ಷೇತ್ರದ ಚುನಾವಣೆಯನ್ನ ನನ್ನ ಜನರು ಮಾಡಿದ್ದಾರೆ, ಕ್ಷೇತ್ರಗಳಲ್ಲಿ ನಾನು ಇರಲೇ ಇಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಶಕ್ತಿ ಕುಂದಿಸಲು ಆಗಲ್ಲ. ಇನ್ನು 6 ತಿಂಗಳು ಚುನಾವಣೆ ಇದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಹಿಡಿದಿಟ್ಟುಕೊಳ್ಳಲು ಆಗಲ್ಲ. ನಾನು ಅಧಿಕಾರ ಇರಲಿ ಇರದಿದ್ದರೂ ಒಂದೇ. ಇದು ನನ್ನ ವೀಕ್ನೆಸ್ ಅಂತಾ ತಿಳಿದುಕೊಂಡ್ರೆ ಗೊತ್ತಾಗುತ್ತೆ. ಅದೇನೊ ಇಡಿ, ಐಟಿ, ಬಿಟ್ಟು ಏನೇನೋ ಮಾಡ್ತಿದ್ದೀರಲ್ಲ. ಬಿಎಂಎಸ್ ಪ್ರಕರಣ ಸೆಶನ್ ನಲ್ಲಿ ದಾಖಲೆ ಇಟ್ಟಿದ್ದೇನೆ. ತನಿಖೆ ಆಗಲಿ ಯಾರೆಲ್ಲಾ ತಲೆ ಉರುಳುತ್ತೆ ಗೊತ್ತಾಗುತ್ತೆ. ಇನ್ನೂ 6 ತಿಂಗಳಲ್ಲಿ ಚುನಾವಣೆ ಇದೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡುವುದನ್ನು ನಾನು ಖಂಡಿಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗಿನ 289 ಸ್ವಾತಂತ್ರ್ಯ ಸೇನಾನಿಗಳಲ್ಲಿ ಶನಿವಾರಸಂತೆಯ ಕಟ್ಟೆಮನೆ ಪುಟ್ಟಸ್ವಾಮಿಯವರು ಒಬ್ಬರಾಗಿದ್ದರು. ಎತ್ತಿನ ಗಾಡಿಯಲ್ಲಿ ಮಡಿಕೇರಿಗೆ ಹೋಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಹಿರಿಯರ ಸ್ಮರಣೆಗಾಗಿ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಹೇಳಿದರು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಕಟ್ಟೆಮನೆ ಪುಟ್ಟಸ್ವಾಮಿ ದತ್ತಿ ನಿಧಿ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿ.ಪಿ ರಮೇಶ್ ಮಾತನಾಡಿದರು., “ಪುಟ್ಟಸ್ವಾಮಿ ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟಿದ್ದರು. ಗಾಂಧೀಜಿಯವರ ಕರೆ ಮೇರೆಗೆ ಶನಿವಾರಸಂತೆಯಲ್ಲಿ ಪಾದಯಾತ್ರೆ ಮಾಡಿ ಹಣ ಸಂಗ್ರಹ ಮಾಡಿದ್ದರು” ಸ್ಮರಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿ.ಕೆ ದಿನೇಶ್ ಮಾತನಾಡಿ, “ಮನುಷ್ಯನ ಮರಣದ ನಂತರ ಸ್ಮರಣೆಗಾಗಿ ದತ್ತಿನಿಧಿ ಕಾರ್ಯಕ್ರಮ ಪೂರಕವಾಗಿದೆ. ಕಸಾಪ ಸದಸ್ಯತ್ವ ಶಿಕ್ಷಕರಿಗೆ ಕಡ್ಡಾಯವಾಗಬೇಕು. ಮುಂದಿನ ಕಾರ್ಯಕ್ರಮಗಳಲ್ಲಿ 10 ದತ್ತಿನಿಧಿ ಸ್ಥಾಪನೆ ಮಾಡವ ಪ್ರಯತ್ನ ಮಾಡಲಾಗುವುದು” ಎಂದರು. ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, “ಕಸಾಪ ಸದಸ್ಯತ್ವ ಆಂದೋಲನ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷ ಮಹೇಶ್ ಜೋಶಿಯವರ ಸೂಚನೆಯಂತೆ ಸೈನಿಕರಿಗೆ, ಅಂಗವಿಕಲರಿಗೆ ಉಚಿತ ಸದಸ್ಯತ್ವ ನೀಡಲಾಗುವುದು. ಜಿಲ್ಲೆಯಲ್ಲಿ ಸೈನಿಕ ಸಮ್ಮೇಳನ ನಡೆಸುವ ಚಿಂತನೆ ನಡೆಯುತ್ತಿದೆ” ಎಂದರು. ಈ ಸುದ್ದಿ ಓದಿದ್ದೀರಾ?: ಕಲಬುರಗಿ-ಕೊಲ್ಹಾಪುರ ರೈಲು ಸಂಚಾರ: ಕೇಂದ್ರ ಸಚಿವರಿಂದ ಹಸಿರು ನಿಶಾನೆ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ ವಿಜೇತ್ ಮಾತನಾಡಿ, ”ಕಸಾಪ ದತ್ತಿನಿಧಿ ಕಾರ್ಯಕ್ರಮ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಕನ್ನಡದ ಶಾಲೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಕಂಪು ಹರಡುತ್ತಿರುವುದು ಪ್ರೇರಣದಾಯಕವಾಗಿದೆ” ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಪ್ರೇಮಕುಮಾರ್ ‘ಬಾಳೊಂದು ನಂದಾದೀಪ’ ಸ್ವರಚಿತ ಕವನ ಸಂಕಲನ ವಿತರಿಸಿದರು. ಕಸಾಪ ತಾಲೂಕು ಘಟಕದ ಪದಾಧಿಕಾರಿ ಎಚ್.ಬಿ ಜಯಮ್ಮ 50 ಸಾವಿರ ರೂಪಾಯಿ ದತ್ತಿನಿಧಿ ಸ್ಥಾಪಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕ ಬಿ.ಟಿ ವಿಶ್ವನಾಥ್, ಎಸ್ಡಿಎಂಸಿ ಅಧ್ಯಕ್ಷೆ ಶಾಲಿನಿ, ಕಸಾಪ ಜಿಲ್ಲಾ ಘಟಕದ ಸದಸ್ಯ ಮಂಜುನಾಥ್, ತಾಲೂಕು ಪದಾಧಿಕಾರಿಗಳಾದ ವೀರರಾಜು, ಕೆ.ಪಿ.ಜಯಕುಮಾರ್, ಶ.ಗ ನಯನತಾರಾ, ಶಾಂತಳ್ಳಿ ಘಟಕದ ಅಧ್ಯಕ್ಷ ಸಿ.ಎಸ್ ನಾಗರಾಜ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ ನಾಗರಾಜ್, ಪದಾಧಿಕಾರಿಗಳಾದ ಎ.ಬಿ ನಂಜಪ್ಪ, ಶಿವಪ್ಪ, ಶಶಿಕಲಾ, ಸಿ.ಎಂ ಪುಟ್ಟಸ್ವಾಮಿ, ಎಸ್.ಎಂ ಮಹೇಶ್, ಪ್ರಕಾಶ್ಚಂದ್ರ, ನರೇಶ್ಚಂದ್ರ, ಮುಖ್ಯಶಿಕ್ಷಕ ಪುಟ್ಟಸ್ವಾಮಿ, ಮಂಜುನಾಥ್ ಮತ್ತಿತ್ತರು ಉಪಸ್ಥಿತರಿದ್ದರು.
59 ಎಕರೆ 31 ಗುಂಟೆ ಕೃಷಿ ಭೂಮಿಯ ಒಡೆಯ, ಕನ​ಕ​ಪುರ, ಬಿ.ಎಂ.ಕಾವಲ್‌ನಲ್ಲಿ ಹೆಚ್ಚಿನ ಭೂಮಿ, ಪುತ್ರಿ ಐಶ್ವ​ರ್ಯ ಹೆಸ​ರಲ್ಲೂ 10 ಗುಂಟೆ ಕೃಷಿ ಭೂಮಿ Kannadaprabha News First Published Sep 30, 2022, 3:00 AM IST ಎಂ.ಅಫ್ರೋಜ್‌ ಖಾನ್‌ ರಾಮ​ನ​ಗರ(ಸೆ.30): ಕನ್ಯಾ​ಕು​ಮಾ​ರಿ​ಯಿಂದ ಆರಂಭ​ಗೊಂಡು ಕರ್ನಾ​ಟ​ಕದ ಮೂಲಕ ಹಾದು ಹೋಗು​ತ್ತಿ​ರುವ ಭಾರತ್‌ ಜೋಡೋ ಯಾತ್ರೆಯನ್ನು ಯಶ​ಸ್ವಿ​ಗೊ​ಳಿ​ಸಲು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸಿದ್ಧ​ತೆ​ಯಲ್ಲಿ ತೊಡ​ಗಿ​ರು​ವಾ​ಗಲೇ ಸಿಬಿಐ ಶಾಕ್‌ ನೀಡಿ​ದ್ದಾ​ಗಿದೆ. ಆದರೆ, ಈ ದಾಳಿಗೆ ಡಿ.ಕೆ.​ಶಿ​ವ​ಕು​ಮಾರ್‌ ಅವರೇ ಘೋಷಿ​ಸಿ​ಕೊಂಡಿ​ರು​ವಂತೆ ಕೃಷಿ ಆದಾಯ ಕಾರಣ ಎನ್ನ​ಲಾ​ಗಿದೆ. ಯಾತ್ರೆ ಕರ್ನಾ​ಟಕ ಪ್ರವೇ​ಶಿ​ವರು ಹೊತ್ತಿ​ನ​ಲ್ಲಿಯೇ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಸೇರಿದ ಮನೆ, ಫಾಮ್‌ರ್‍ ಹೌಸ್‌ಗಳ ಮೇಲೆ ಸಿಬಿಐ ತಂಡ ದಾಳಿ ನಡೆ​ಸಿ​ದ್ದ​ಲ್ಲದೆ, ಅವರ ಹೆಸ​ರಿ​ನಲ್ಲಿರುವ ಜಮೀ​ನು​ಗ​ಳನ್ನು ವೀಕ್ಷಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇ.ಡಿ., ಆದಾಯ ತೆರಿಗೆ ಇಲಾಖೆ ದಾಳಿ​ಗಳ ಬೆನ್ನಲ್ಲೆ ಸಿಬಿಐ ದಾಳಿಗೆ ಡಿ.ಕೆ.​ಶಿ​ವ​ಕು​ಮಾರ್‌ ತಮ್ಮ ಆದಾಯ ಕುರಿತು ನೀಡಿದ್ದ ಹೇಳಿ​ಕೆ​ಗಳೇ ಕಾರಣ. ಅದ​ರಲ್ಲಿ ಪ್ರಮು​ಖ​ವಾಗಿ ನಾನು ಮೂಲತಃ ರೈತ​ನಾ​ಗಿದ್ದು ಕೃಷಿ ಆದಾ​ಯದಿಂದ ಹೆಚ್ಚು ಸಂಪಾ​ದನೆ ಮಾಡಿರುವು​ದಾಗಿ ಅವರು ಹೇಳಿ​ಕೊ​ಳ್ಳು​ತ್ತಿ​ದ್ದರು. ಹೀಗಾಗಿ ಕೃಷಿ ಆದಾ​ಯದ ಮೂಲವೇ ಡಿಕೆ​ಶಿಗೆ ಸಂಕ​ಷ್ಟತಂದೊ​ಡ್ಡುವ ಆತಂಕ ಎದು​ರಾ​ಗಿ​ದೆ. ಮೂರ್ನಾಲ್ಕು ವರ್ಷಗಳ ಹಿಂದೆ ದೆಹಲಿ, ಬೆಂಗಳೂರು ಹಾಗೂ ಕನಕಪುರ ಸೇರಿದಂತೆ ಏಕಕಾಲದಲ್ಲಿ ಡಿಕೆಶಿ ನಿವಾಸ, ಆಸ್ತಿಗಳ ಮೇಲೆ ದಾಳಿ ನಡೆ​ದಿತ್ತು. ಆದಾಯದ ಮೂಲ ಹೇಳಿಕೊಳ್ಳುವ ವೇಳೆ ಡಿಕೆಶಿ, ಕೃಷಿಯಿಂದಲೇ ಅತಿ ಹೆಚ್ಚು ಆದಾಯ ಬಂದಿರುವುದಾಗಿ ಹೇಳಿದ್ದರು. ಬಳಿಕ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್‌ ನೇತೃತ್ವದಲ್ಲಿ ಡಿಕೆಶಿ ಹೊಂದಿರುವ ಕೃಷಿಭೂಮಿಯ ಸರ್ವೆ ನಡೆಸಿ, ಒಂದು ಎಕರೆ ಜಮೀನಿಗೆ ಗಳಿಸಬಹುದಾದ ಲಾಭದ ಕುರಿತು ಅಧಿಕಾರಿಗಳಿಂದಲೇ ಮಾಹಿತಿ ಪಡೆದುಕೊಂಡಿದ್ದರು. ಅದರ ಮುಂದು​ವ​ರೆದ ಭಾಗ​ವಾಗಿ ಸಿಬಿಐ ತಂಡ ಬುಧ​ವಾರ ಕನಕಪುರದಲ್ಲಿನ ನಿವಾಸದ ಮೇಲೆ ದಾಳಿ ನಡೆಸಿ, ತಹಸೀಲ್ದಾರ್‌ ಮೂಲಕ ಡಿಕೆಶಿ ಹಾಗೂ ಸಂಬಂಧಿಕರ ಹೆಸರಿನಲ್ಲಿನ ಕೃಷಿ ಭೂಮಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಭಾರತ್‌ ಜೋಡೋ ಯಾತ್ರೆ ವೇಳೆ ಡಿಕೆಶಿಗೆ ಸಿಬಿಐ ಶಾಕ್‌..! ಕನ​ಕ​ಪುರ ನಗರದ ಮೈಸೂರು ರಸ್ತೆ​ಯ​ಲ್ಲಿ​ ಹೆಂಚಿನ ಫ್ಯಾಕ್ಟರಿ ಬಳಿ​ಯಿರುವ ಮನೆ, ದೊಡ್ಡಾ​ಲ​ಹಳ್ಳಿಯ ಹಳೇ ಮನೆ ಹಾಗೂ ಸಂತೆ ಕೋಡಿ​ಹಳ್ಳಿಯಲ್ಲಿ​ ಫಾಮ್‌ರ್‍ ಹೌಸ್‌ ಹಾಗೂ ಜಮೀನು ಮತ್ತಿ​ತರ ಸ್ಥಳ​ಗ​ಳಿಗೂ ಸಿಬಿಐ ಅಧಿ​ಕಾ​ರಿ​ಗಳು ಭೇಟಿ ನೀಡಿ ಸಂಪೂರ್ಣ ಮಾಹಿತಿ ಕಲೆ ಹಾಕಿ​ದ್ದಾ​ರೆ. ಡಿಕೆಶಿ ಹೇಳಿಕೊಂಡಿದ್ದ ಆದಾಯದ ಲೆಕ್ಕಕ್ಕೂ, ಅವರು ಬೆಳೆಯುತ್ತಿರುವ ಬೆಳೆಗೂ ತಾಳೆ ಹಾಕಿದ್ದಾರೆ ಎನ್ನಲಾಗಿದೆ. ಒಂದೆಡೆ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ, ಮತ್ತೊಂದೆಡೆ ವಿಧಾ​ನ​ಸಭೆ ಚುನಾ​ವಣೆ ಸನಿ​ಹ​ದ​ಲ್ಲಿ​ರುವ ಕಾರಣ ಡಿಕೆ​ಶಿ​ಯನ್ನು ಕಟ್ಟಿಹಾಕುವ ಪ್ರಯ​ತ್ನ ನಡೆ​ಯು​ತ್ತಿದೆ ಎಂಬ ಮಾತು​ಗಳು ಬಲ​ವಾಗಿ ಕೇಳಿ ಬರು​ತ್ತಿದೆ. ಕೃಷಿ ಆದಾಯಕ್ಕೆ ಆದಾಯ ತೆರಿಗೆ ಕಟ್ಟಬೇಕಿಲ್ಲ. ಹೀಗಾಗಿ ಡಿಕೆಶಿ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಸಂಪ​ತ್ತಿ​ನ ವೃದ್ಧಿ​ಯಲ್ಲಿ ಕೃಷಿಯಿಂದ ಹೆಚ್ಚು ಆದಾಯ ಬಂದಿ​ರು​ವು​ದಾಗಿ ತೋರಿಸಿದ್ದರು. ಹೀಗಾಗಿ ಕೃಷಿ ಮೂಲವೇ ಡಿಕೆಶಿಗೆ ಮತ್ತೊಮ್ಮೆ ಹುರುಳಾಗಿ ಪರಿಣಮಿಸಿದೆ. ಡಿಕೆಶಿ ಬಳಿ 59 ಎಕರೆ 31 ಗುಂಟೆ ಕೃಷಿ ಭೂಮಿ ಡಿ.ಕೆ.​ಶಿ​ವ​ಕು​ಮಾರ್‌ ಅವರ 2018ರ ಅಫಿ​ಡೆ​ವಿಟ್‌ ಪ್ರಕಾರ ಒಟ್ಟು 59 ಎಕರೆ 31 ಗುಂಟೆ ಕೃಷಿ ಭೂಮಿ ಹೊಂದಿ​ದ್ದಾರೆ. ಈ ಪೈಕಿ ಹೆಚ್ಚಿನ ಪ್ರಮಾ​ಣದ ಭೂಮಿ ಪಿತ್ರಾ​ರ್ಜಿ​ತ​ವಾ​ಗಿದ್ದು, ಶೇ.50ರಷ್ಟುಭೂಮಿ ಮಾತ್ರ ತಮ್ಮ​ದೆಂದು ಹೇಳಿ​ಕೊಂಡಿ​ದ್ದಾ​ರೆ. ಆಗ ಇದರ ಮಾರು​ಕಟ್ಟೆಅಂದಾಜು ಮೌಲ್ಯ 12.09 ಕೋಟಿ ರು.ಗ​ಳಾ​ಗಿ​ದೆ. ಸಿದ್ದ​ರಾ​ಮಯ್ಯ ಕಣ್ಣು ಮಂಕಾ​ಗಿ​ದ್ಯಾ: ಸಿದ್ದ​ರಾ​ಮ​ಯ್ಯ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಸ್ವಯಾ​ರ್ಜಿ​ತ 4 ಎಕರೆ, ಪಿತ್ರಾ​ರ್ಜಿತ 6 ಎಕ​ರೆ, ಗರಳಾಪುರ - 12 ಎಕ​ರೆ, ದೆಶುವಳ್ಳಿ - 4 ಎಕ​ರೆ, ಆಲಹಳ್ಳಿ - 5 ಎಕ​ರೆ, ಚೀಲಂದ​ವಾಡಿ - 2 ಎಕ​ರೆ, ಮಹಿಮನಹಳ್ಳಿ - 1 ಎಕ​ರೆ,​ಅ​ರ​ಳಾಳು ಗ್ರಾಮ - ​ಪಿ​ತ್ರಾ​ರ್ಜಿತ 31 ಗುಂಟೆ, ಸಾತನೂರು - 5 ಎಕ​ರೆ, ಮಕಲಂದ ಗ್ರಾಮ - ಪಿತ್ರಾ​ರ್ಜಿ​ತ 13 ಎಕರೆ, ಆನೇಕಲ… ತಾಲೂಕು ಗಟ್ಟಿ​ಹಳ್ಳಿ 3 ಎಕರೆ , ಮತ್ತು ಕೆಂಗೇರಿ ಬಳಿಯ ಬಿ.ಎಂ.ಕಾವಲ್‌ನಲ್ಲಿ ಸ್ವಯಾ​ರ್ಜಿತ 4 ಎಕರೆ ಕೃಷಿ ಭೂಮಿ ಹೊಂದಿ​ದ್ದಾರೆ. ಇನ್ನು ಪುತ್ರಿ ಐಶ್ವ​ರ್ಯ ಹೆಸ​ರಿ​ನಲ್ಲಿ ಬಿ.ಎಂ.​ಕಾ​ವಲ್‌ನಲ್ಲಿ 10 ಗುಂಟೆ ಕೃಷಿ ಭೂಮಿ ಇದೆ. ಉತ್ತರಹಳ್ಳಿ ಹೋಬಳಿಯ ವಿಶ್ವೇಶ್ವರಯ್ಯ ಕೈಗಾರಿಕಾ ಲೇಔಚ್‌, ಭೂಪಸಂದ್ರ, ಮೈಸೂರು ನಜರಾಬಾದ್‌ ಮೊಹಲ್ಲಾ , ಕನಕಪುರ ಪಟ್ಟಣಗಳಲ್ಲಿ ಕೃಷಿಯೇತರ ಭೂಮಿ ಇದೆ. ಕನಕಪುರ ತಾಲೂಕು ಮರಳೇಬೇಕುಪ್ಪೆ ಗ್ರಾಮದಲ್ಲಿ ಗ್ರಾನೈಚ್‌ ಉಳ್ಳ ಭೂಮಿ, ಬೆಂಗಳೂರು ಉತ್ತರ ಹಳ್ಳಿಯಲ್ಲಿ ವಸತಿಗಾಗಿ ಪರಿವರ್ತನೆಯಾದ ಭೂಮಿ, ದೊಡ್ಡಾಲಹಳ್ಳಿಯಲ್ಲಿ ವಸತಿ ನಿವೇಶನ, ಹುನಸಣಹಳ್ಳಿಯಲ್ಲಿ ವಾಣಿಜ್ಯ ಬಳಕೆಗೆ ಭೂಮಿ ಇರುವುದಾಗಿ ಘೋಷಿಸಿಕೊಂಡಿದ್ದರು.
ದೇವರ್ಷಿ ನಾರದರೊಮ್ಮೆ ಶ್ರೀಮನ್ನಾರಾಯಣನ ಬಳಿ ಪ್ರಶ್ನಿಸಿದರಂತೆ. ‘ನಿನ್ನ ಭಕ್ತರ ಪೈಕಿ ಯಾರನ್ನು ಶ್ರೇಷ್ಠನೆಂದು ಭಾವಿಸುವೆ ?’. ತನ್ನ ಸ್ತುತಿಯನ್ನು ನಾರಾಯಣನ ಮುಖದಿಂದ ಕೇಳಬೇಕೆಂಬ ಕಿಂಚಿತ್ ಅಹಂಕಾರ ಸೋಂಕಿದ ಬಯಕೆಯದು. ಹರಿ ಮಂದಸ್ಮಿತನಾಗಿ ‘ಅತ್ತ ನೋಡು. ಆ ಹಳ್ಳಿಯಲ್ಲಿ ನೇಗಿಲು ಹಿಡಿದ ರೈತನೇ ನನ್ನ ಸರ್ವಶ್ರೇಷ್ಠ ಭಕ್ತ’ ಎಂದನು. ನಾರದರು ಪೆಚ್ಚಾದರು, ಆದರೆ ಸೋಲೊಪ್ಪಿಕೊಳ್ಳಲಿಲ್ಲ. ಆ ರೈತನನ್ನು ವಿಚಾರಿಸಿ ಬರೋಣವೆಂದು ಇಬ್ಬರೂ ಸಾಮಾನ್ಯ ಪ್ರಯಾಣಿಕರಂತೆ ವೇಶ ಧರಿಸಿ ಹಳ್ಳಿಗೆ ಬಂದರು. ರೈತನು ಸಕುಟುಂಬನಾಗಿ ಆದರ ಹಾಗೂ ಪ್ರೀತಿಯಿಂದ ಹರಿ-ನಾರದರನ್ನು ಸತ್ಕರಿಸಿದನು. ಹಲವು ದಿನಗಳು ಅವರಿಬ್ಬರೂ ರೈತನೊಡನೆ ಕಳೆದು, ಅವನ ದಿನಚರಿಯನ್ನು ಗಮನಿಸಿಕೊಂಡರು. ಪ್ರಾತಃ ಹರಿಸ್ಮರಣೆಯೊಂದಿಗೆ ಎದ್ದು, ಸ್ನಾನಾದಿಗಳ ಮುಗಿಸಿ, ಗದ್ದೆಗೆ ತೆರಳುತ್ತಿದ್ದ. ನೇಗಿಲು ಹಿಡಿಯುವ ಮುನ್ನ, ಊಟಕ್ಕೆ ಪೂರ್ವಭಾವಿಯಾಗಿ, ಸಂಜೆ ಮನೆಗೆ ತೆರಳಿದ ನಂತರ, ಪುನಃ ರಾತ್ರೆ ಮಲಗುವ ಮುನ್ನ ನಿಯಮಿತವಾಗಿ ಹರಿಸ್ಮರಣೆಮಾಡುತ್ತಿದ್ದ. ಮೂರು ದಿನಗಳ ನಂತರ ಹರಿ-ನಾರದರು ರೈತನಿಗೆ ಕೃತಜ್ಞತೆಯನ್ನು ತಿಳಿಸಿ ಹೊರಟು ಬಂದರು. ನಾರದರು ಹರಿಯನ್ನು ಕೆಣಕುತ್ತ ‘ ಇದೇನೋ ನಿನ್ನ ಶ್ರೇಷ್ಠ ಭಕ್ತಲಕ್ಷಣ ?’ ಎಂದರು. ಹರಿ ನಕ್ಕು ‘ಹೌದು ನಾರದ ನೀನು ಗೆದ್ದೇ ಎಂದು ಒಪ್ಪಿಕೊಳ್ಳುವೆ. ಆದರೆ ಒಂದು ಕೆಲಸ ನೀನೂ ಮಾಡಬೇಕು. ಈ ಎಣ್ಣೆಯಿಂದ ತುಂಬಿದ ಮಡಕೆಯನ್ನು ತಲೆಯ ಮೇಲೆ ಹೊತ್ತು ಒಂದು ಪ್ರದಕ್ಷಿಣೆ ಮಾಡು. ಎಣ್ಣೆ ಒಂದು ತೊಟ್ಟೂ ಕೆಳಕ್ಕೆ ಚೆಲ್ಲಕೂಡದು’ ಎಂದರು. ನಾರದರು ತುಂಬಾ ಜಾಗರೂಕರಾಗಿ, ನಿಧಾನಕ್ಕೆ ಚಲಿಸುತ್ತ ಚಾಚೂ ತುಳುಕದೆ ಹರಿಯ ಪ್ರದಕ್ಷಿಣೆಯನ್ನು ಮುಗಿಸಿದರು. ಸೊಕ್ಕಿನಿಂದ ‘ ನೋಡಿದ್ದೀಯಾ? ಈಗ ಒಪ್ಪಿಕೊಳ್ಳುವೆಯಾ ?’ ಎಂದರು. ‘ಅದು ಸರಿ, ಆದರೆ ಈ ಪ್ರದಕ್ಷಿಣೆ ಮಾಡುವಾಗ ನೀನು ಎಷ್ಟು ಬಾರಿ ನನ್ನ ಸ್ಮರಣೆ ಮಾಡಿದೆ ಕಂದಾ ?’ ಎಂದ ಹರಿ. ನಾರದರ ಮುಖ ಬಣ್ಣ ಬದಲಾಯಿತು. ಮಡಕೆ-ಎಣ್ಣೆಯ ಪರದಾಟದಲ್ಲಿ ಅವರು ಹರಿಯನ್ನು ಪೂರ್ಣವಾಗಿ ಮರೆತೇ ಬಿಟ್ಟಿದ್ದರು. ಇದು ನಮ್ಮದೇ ಕಥೆಯಾಗಿದೆ. ದಿನವಿಡೀ ಕೆಲಸದ ಪರದಾಟ. ಮುಗಿಯದು ಕೆಲಸ. ಸಿಗದು ನೆಮ್ಮದಿ. ಈ ಬಯಲಾಟದ ನಡುವೆ ನಮ್ಮ ಮನಸ್ಸನ್ನು ಉಲ್ಲಾಸದಿಂದಲೂ ಶಾಂತಿಯಿಂದಲೂ ಇರಿಸುವುದು ಹೇಗೆ ಎನ್ನುವುದು ನಮ್ಮ ಸಮಸ್ಯೆ. ನಾವು ಇಂದ್ರಿಯಗಳ ಬಯಕೆಯನ್ನುಮಡಕೆಯಂತೆ ತಲೆಯ ಮೇಲೆ ಹೊತ್ತಿದ್ದೇವೆ. ಕ್ಷಣದಲ್ಲಿ ಚೂರಾಗುವ ಮಾಯಾಮೃಗವೆಂಬ ಮಡಕೆಯನ್ನು ಅಮೃತವೆಂದು ಭಾವಿಸಿ ನಾವು ಪೂಜಿಸುತ್ತೇವೆ. ಆದರೆ ಆನಂದ ಉಲ್ಲಾಸದ ಬುಗ್ಗೆಯೊಂದು ನಮ್ಮ ಶಿರವೆಂಬ ಕುಂಭದಲ್ಲಿ ಅಡಗಿದೆ ಎಂಬುದನ್ನು ಮರೆತಿದ್ದೇವೆ. ಹೃದಯ ಗುಹೆಯಲ್ಲಿ ರಮಿಸಿ, ಶಿರದ ಕುಂಭದಲ್ಲಿರುವ ಅಮೃತಪಾನ ಮಾಡುವುದಕ್ಕಾಗಿ ಶಿವ ಧ್ಯಾನ, ಹರಿ ಸ್ಮರಣೆಗಳು ಸಾಧನಗಳು ಎಂಬುದು ಶ್ರೀರಂಗ ಮಹಾಗುರುಗಳ ಮಹದನುಭವ. ನಮ್ಮ ದೈನಂದಿನ ಜೀವನದ ನಡುವೆ ಆಗಾಗ್ಯೆ ಆದರೂ ನಮ್ಮೊಳಗಿರುವ ಆ ಆನಂದದ ಮೂರುತಿಯನ್ನು ಸ್ಮರಿಸಿ, ‘ನಾವಿರುವುದು ನಿನಗಾಗಿ’ ಎಂದರೆ ಅದೇ ಕರ್ಮಯೋಗ. ಸೂಚನೆ: 2/07/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ. at July 03, 2019 Email ThisBlogThis!Share to TwitterShare to FacebookShare to Pinterest Labels: 118_ayvmarticle, author_mohanraghavan, lang_kannada, paper_vijayavani, youtube_available, youtube_link_https://youtu.be/SCbiSn9NsSw
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ: ಪತಿ ಪತ್ನಿಯರಲ್ಲಿ ಪ್ರೀತಿ-ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಮನ ಶಾಂತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ: ಸ್ತ್ರೀ ಸಂಬಂಧಗಳಿಂದ ಮನಸ್ಸಿಗೆ ಚಿಂತೆ, ಶತ್ರು ಭಾದೆ, ಅಧಿಕಾರಿಗಳನ್ನು ತೊಂದರೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ: ಶೀತ ಸಂಬಂಧ ರೋಗಗಳು, ಅನಾರೋಗ್ಯ, ಪಾಪಬುದ್ಧಿ, ಧನ ನಷ್ಟ, ಕೋಪ ಜಾಸ್ತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ: ಮಾನಸಿಕ ಒತ್ತಡ, ಯತ್ನ ಕಾರ್ಯಗಳಲ್ಲಿ ಜಯ, ದೂರ ಪ್ರಯಾಣ, ಅನ್ಯರಲ್ಲಿ ದ್ವೇಷ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ: ಕುಲದೇವರ ಆರಾಧನೆಯಿಂದ ನೆಮ್ಮದಿ, ಸಾಲಭಾದೆ, ಕೆಲಸಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ: ನೆಮ್ಮದಿ ಇಲ್ಲದ ಜೀವನ, ಹಣ ವ್ಯಯ, ಆಲಸ್ಯ ಮನೋಭಾವ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ವಾದ ವಿವಾದಗಳಿಂದ ದೂರವಿರಿ, ಅಮೂಲ್ಯ ವಸ್ತುಗಳ ಖರೀದಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ: ಮನ ಶಾಂತಿ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿಗೆ ಮರುಳಾಗಬೇಡಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನ: ಕುಟುಂಬ ಮುಖ್ಯಸ್ಥರಿಂದ ಬೋಧನೆ, ಮಾತಿನ ಚಕಮಕಿ, ಮಹಿಳೆಯರಿಗೆ ಶುಭದಿನ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವಾಹನದಿಂದ ಅಪಘಾತ ಎಚ್ಚರ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ: ಭೂಮಿ ಖರೀದಿಸುವಿರಿ, ಮನಶಾಂತಿ, ವ್ಯಾಸಂಗದಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು: ಆಪ್ತರಿಂದ ಸಹಾಯ, ತೀರ್ಥಕ್ಷೇತ್ರ ದರ್ಶನ, ಸ್ಥಳ ಬದಲಾವಣೆ, ಆಕಸ್ಮಿಕ ಧನಲಾಭ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 71 Post navigation ಬನಶಂಕರಿ ತಾಯಿ ನೆನೆದು ಇಂದಿನ ನಿಮ್ಮ ದಿನಭವಿಷ್ಯ ನೋಡಿ.. ಮಹಾಲಯ ಅಮಾವಾಸ್ಯೆಯ ಇಂದಿನಿಂದ ರಾಘವೇಂದ್ರ ಸ್ವಾಮಿಗಳ ಕೃಪೆ ಈ ರಾಶಿಗಳ ಮೇಲೆ.. ನಿಮ್ಮ ರಾಶಿಫಲ ನೋಡಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
‘ರಾಜಕೀಯ ಪಕ್ಷದ ವೇದಿಕೆಯಲ್ಲಿ ನಿಂತು ಮಾತನಾಡಲು ನನಗೆ ಇಷ್ಟವಿಲ್ಲ, ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ’ ಎಂದು ಹೇಳಿರುವ ಪ್ರಕಾಶ್ ರೈ ರವರು, ‘ಜಸ್ಟ್ ಆಸ್ಕಿಂಗ್’ ಒಂದು ರಾಜಕೀಯ ವೇದಿಕೆ ಅಲ್ಲ ಎಂದಿದ್ದಾರೆ. ಆದರೆ ಅವರು ಮಾಡುವುದು ಮತ್ತು ಮಾತನಾಡುವುದೆಲ್ಲಾ ಅಪ್ಪಟ ರಾಜಕೀಯವೇ. ಅದಕ್ಕೆ ಅಭಿಯಾನದ ಹೆಸರು ಏಕೆ ? ಕರ್ನಾಟಕದಲ್ಲಿ ಚುನಾವಣಾ ಸಮಯದಲ್ಲಿಯೇ ಈ ‘ಜಸ್ಟ್ ಆಸ್ಕಿಂಗ್’ವೇದಿಕೆ ಹುಟ್ಟಿಕೊಂಡದ್ದು ಏಕೆ ?. ‘ಜಸ್ಟ್ ಆಸ್ಕಿಂಗ್’ ಒಂದು ರಾಜಕೀಯ ವೇದಿಕೆ ಅಲ್ಲ ಎನ್ನುತ್ತಲೇ ಅವರು ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವನ್ನು ಟಾರ್ಗೆಟ್ ಮಾಡುತ್ತಾರೆ ಮತ್ತು ನಾನು ಆ ಪಕ್ಷದ ವಿರೋಧಿ ಎನ್ನುತ್ತಾರೆ. ಪರೋಕ್ಷವಾಗಿ ಒಂದು ಪಕ್ಷವನ್ನು ಬೆಂಬಲಿಸುತ್ತಾರೆ. ಅದು ‘ಕಾಂಗ್ರೆಸ್’ ಪಕ್ಷ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲವಷ್ಟೆ. ಅವರು ವಿನಾಕಾರಣ ದ್ವೇಷಿಸುವ ಪಕ್ಷವನ್ನು ಕೋಮುವಾದಿ ಎನ್ನುತ್ತಾರೆ, ಕರ್ನಾಟಕ ವನ್ನು ಕೋಮುವಾದಿಗಳ ಕೈಗೆ ನೀಡಬೇಡಿ ಎಂದು ಕರೆ ಕೊಡುತ್ತಾರೆ. ಹೀಗೆ ಮಾತನಾಡುವುದು ರಾಜಕೀಯವಲ್ಲವೇ ? ಅವರು ಟಾರ್ಗೆಟ್ ಮಾಡಿರುವುದು ಭಾರತೀಯತೆಯನ್ನು ಎತ್ತಿ ಹಿಡಿಯುತ್ತಿರುವ, ಒಂದು ದೇಶ ಪ್ರೇಮಿ ಪಕ್ಷವನ್ನು. ಇದು ಯಾರಿಗಾದರೂ ಅರ್ಥವಾಗುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿರುವ ಈ ದೇಶದಲ್ಲಿ ಅವರ ಪರ ಮಾತನಾಡುವವರು, ಹಿಂದೆಯಿದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವವರು ಇವರಿಗೆ `ಕೋಮುವಾದಿ’ಗಳಾಗಿ ಕಾಣುತ್ತಾರೆ. ಆಶ್ಚರ್ಯವೆಂದರೆ, ನಮ್ಮದು ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷಗಳೇ ಒಂದು ಸಮುದಾಯವನ್ನು ಹೆಚ್ಚಾಗಿ ಓಲೈಸುವುದೂ ಅಲ್ಲದೆ ಅವರಿಗೆ ಎಲ್ಲಾ ಸವಲತ್ತುಗಳನ್ನೂ ನೀಡಿ, ಅವರ ಕಾನೂನು ವಿರೋಧಿ ಕೃತ್ಯಗಳನ್ನೂ ಸಹ ಒಪ್ಪಿಕೊಂಡು ಕ್ಷಮಿಸಿಬಿಡುತ್ತಾರೆ. ಹೆಸರಿನಲ್ಲೇ ಜಾತ್ಯಾತೀತತೆ ಇರುವ ಪಕ್ಷವೂ ಸಹ ಓವೈಸಿಯವರ ಪಕ್ಷದ ಜೊತೆ ಕೈಜೋಡಿಸುತ್ತಾರೆ. ಇದೆಲ್ಲಾ `ಜಸ್ಟ್ ಆಸ್ಕಿಂಗ್’ ನವರಿಗೆ ಗೊತ್ತಿರುವ ವಿಷಯವೇ ! ನಿಜವಾದ ಕೋಮುವಾದಿಗಳು ಯಾರು ? ಈ ಕೋಮುವಾದಿಗಳಿಗೆ ಬೆಂಬಲ ದೊರೆಯುತ್ತಿರುವುದಾದರೂ ಎಲ್ಲಿಂದ ಎಂಬುದನ್ನು ‘ಜಸ್ಟ್ ಆಸ್ಕಿಂಗ್ ‘ ವೇದಿಕೆ ಹೊರಗೆಡವುವುದೇ ? ‘ಟಿಪ್ಪು ಜಯಂತಿ’ಯ ಬಗ್ಗೆ ಜನತೆಯೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳುವ ರೈ, ಜನತೆಯ ವಿರೋಧವನ್ನೂ ಲೆಕ್ಕಿಸದೆ ಸರ್ಕಾರವೇ ಟಿಪ್ಪು ಜಯಂತಿಯನ್ನು ಆಚರಿಸುವ ಸಮಯದಲ್ಲಿ ತುಟಿಬಿಚ್ಚದೆ, ಟಿಪ್ಪು ಜಯಂತಿಗೆ ಪರೋಕ್ಷ ಬೆಂಬಲ ನೀಡಿ ಈಗ ಹಾರಿಕೆಯ ಸಮಜಾಯಿಷಿ ನೀಡುತ್ತಾರೆ. ಮೈಸೂರಿನ ಉದಯಗಿರಿ ಉದ್ವಿಗ್ನವಾಗಿದೆ. ಪ್ರತಿಭಟನಾಕಾರರು ಪೆÇಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಅವರನ್ನು ಗಾಯಗೊಳಿಸುತ್ತಾರೆ. ಬಲವಂತವಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸುತ್ತಾರೆ, ಪೆÇಲೀಸರ ಅನುಮತಿಯಿಲ್ಲದೆ ಮೆರವಣಿಗೆ ಮಾಡುತ್ತಾರೆ. ಅಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಪ್ರತಿಭಟನಾಕಾರರಿಗೆ ರಾಜಕಾರಣಿಗಳ ಕುಮ್ಮಕ್ಕಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಯ ನಾಗರಿಕರು ಭಯದಿಂದ ದಿನ ದೂಡುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂದು ವರದಿಯಾಗಿದೆ. ಈ ಬಗ್ಗೆ `ಜಸ್ಟ್ ಆಸ್ಕಿಂಗ್’ ವೇದಿಕೆ ಅದೇಕೆ ಪ್ರತಿಕ್ರಿಯೆ ನೀಡಿಲ್ಲ ? 25ಕ್ಕಿಂತ ಹೆಚ್ಚು ಮಂದಿ ಹಿಂದೂಗಳ ಕೊಲೆಯಾಗಿದೆ. ಸರ್ಕಾರ ಈ ಬಗ್ಗೆ ನಿಷ್ಕ್ರೀಯವಾಗಿದೆ. ಇದರ ಬಗ್ಗೆ ರೈ ರವರ ನಿಲುವೇನು ? ಅಂದರೆ ‘ಜಸ್ಟ್ ಆಸ್ಕಿಂಗ್’ ಒಂದು ಪಕ್ಷದ ಪರ, ಹಿಂದೂ ಸಮುದಾಯದ ವಿರುದ್ಧ ಇರುವ ವೇದಿಕೆ ಎಂದು ಹೇಳಲಾಗುತ್ತಿದ್ದು, ಇದರ ಮರ್ಮವನ್ನು ತಿಳಿಯದೆ ಇರುವಷ್ಟು ಮೂರ್ಖರೇನಲ್ಲ ಮೈಸೂರಿನ ಜನತೆ. ‘ಜಸ್ಟ್ ಅಸ್ಕಿಂಗ್’ ವೇದಿಕೆಯು ಒಮ್ಮುಖವಾಗದೆ, ನಿಜ ಪರಿಸ್ಥಿತಿಯನ್ನು ಬಿಂಬಿಸುವ, ಒಂದು ಪಕ್ಷದ ಪರ ಲಾಬಿ ಮಾಡದೆ, ಸಂದರ್ಭಗಳನ್ನು ಅರ್ಥೈಸಿಕೊಂಡು ಮುನ್ನಡೆಯುವ ವೇದಿಕೆಯಾಗಲಿ ಎಂಬುದೇ ಜನಸಾಮಾನ್ಯರ ಒತ್ತಾಸೆಯಾಗಿದೆ.
Kannada News » Karnataka » Shivamogga » Arrest of two suspected terrorists in Shimoga: Hill Nadu will not be a crossroad for terrorists: Home Minister Araga Jnanendra ಶಿವಮೊಗ್ಗದಲ್ಲಿ ಶಂಕಿತ ಇಬ್ಬರು ಉಗ್ರರ ಬಂಧನ ಪ್ರಕರಣ: ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ ರಾಷ್ಟ್ರದ ಏಕತೆಗೆ ಭಂಗ ತರುವವರ ವಿರುದ್ಧ ಕ್ರಮ ಆಗಲಿದೆ. ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಗೃಹ ಸಚಿವ ಆರಗ ಜ್ಞಾನೇಂದ್ರ TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Sep 24, 2022 | 3:43 PM ಶಿವಮೊಗ್ಗ: ಶಂಕಿತ ಇಬ್ಬರು ಉಗ್ರರರು ಮೂಲತಃಹ ತೀರ್ಥಹಳ್ಳಿಯವರಾಗಿದ್ದು, ಮಂಗಳೂರಿನಲ್ಲಿ ವಾಸವಾಗಿದ್ದರು. ಮತಾಂಧಶಕ್ತಿಗಳ ಸಂಪರ್ಕ ಪಡೆದು ಈ ರೀತಿ ಮಾಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಈ ಬಗ್ಗೆ NIA ಅಧಿಕಾರಿಗಳು ಸಹ ತನಿಖೆ ಮಾಡುತ್ತಿದ್ದಾರೆ. ರಾಷ್ಟ್ರದ ಏಕತೆಗೆ ಭಂಗ ತರುವವರ ವಿರುದ್ಧ ಕ್ರಮ ಆಗಲಿದೆ. ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ರಿವಾರ್ಡ್ ಘೋಷಣೆ ಮಾಡ್ತೇನೆ. ಕಾಂಗ್ರೆಸ್​ ಪಕ್ಷದ ಅವಧಿಯಲ್ಲಿ ಈ ರೀತಿ ಕ್ರಮ ಆಗಿರಲಿಲ್ಲ. ಅಲ್ಪಸಂಖ್ಯಾತರು ಕಾಂಗ್ರೆಸ್​ನ ವೋಟ್ ಬ್ಯಾಂಕ್​ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ತುಂಬಾ ಡೀಪ್ ಆಗಿ,‌ ತನಿಖೆ ಮಾಡಿದ್ದರಿಂದ ಪ್ರಕರಣ ಹೊರಬಂದಿದೆ. ತನಿಖೆ ಮುಂದುವರಿದಿದ್ದು, ಎನ್​ಎನ್ಐಎ ಟೀಂ ಕೂಡ ತನಿಖೆ ಮಾಡುತ್ತಿದೆ. ಕರಾವಳಿ, ಕೇರಳ ಸಂಪರ್ಕ ಹೊಂದಿ, ಮತೀಯವಾದಕ್ಕೆ ಒಳಗಾಗುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ಹೇಳಿದರು. ಯಾರು ಯಾರಿಗೆ ಯಾವ ಯಾವ ಆಯುಧ ಬಳಸಬೇಕೋ, ಯಾರು ಯಾರಿಗೆ ಯಾವ ಭಾಷೆ ಬಳಸಬೇಕೋ ಅದನ್ನ ಬಳಸಬೇಕಾಗುತ್ತದೆ. ಈ ಹಿಂದೆ ಯುಎಪಿಎ ಕೇಸ್ ಹಾಕಿದಾಗ ಅನವಶ್ಯಕವಾಗಿ ಹಾಕ್ತಿದ್ದಾರೆ ಅಂದ್ರು. ಈಗ ಏನಾಯ್ತು, ಇಂತಹ ಪ್ರಕರಣ ಬೆಳಕಿಗೆ ಬಂತು. ಇವರ ಮುಖ ನೋಡಿದರೆ, ಹಿನ್ನೆಲೆ ನೋಡಿದರೆ ಏನು ಅಲ್ಲ ಅನ್ಸುತ್ತೆ. ಆದರೆ ಮತಾಂಧತೆಗೆ ಒಳಗಾದಾಗ ಇಂತಹ ಕೃತ್ಯ ನಡೆಯುತ್ತದೆ. ಅಮೂಲಾಗ್ರವಾದ ಪರಿಶೀಲನೆ ನಡೆಯುತ್ತಿದೆ ಪೊಲೀಸರಿಗೆ ಎಲ್ಲಾ ರೀತಿಯ ಜಾಡು ಸಿಗುತ್ತಿದೆ ಎಂದು ಹೇಳಿದರು. ಇನ್ಸ್​ಪೆಕ್ಟರ್​ ಮೇಲೆ 30 ಜನರು ದಾಳಿ: ಸಾವು ಬದುಕಿನ ನಡುವೆ ಹೋರಾಟ ಕಲಬುರಗಿ ಗ್ರಾ. ಠಾಣೆ ಸಿಪಿಐ ಶ್ರೀಮಂತ್ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿದ್ದು, ಒಬ್ಬ ಇನ್ಸ್​ಪೆಕ್ಟರ್​ ಮೇಲೆ 30 ಜನರು ದಾಳಿ ಮಾಡಿದ್ದಾರೆ. ಸಿಪಿಐ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಒಳ್ಳೆಯ ಕಡೆ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಲು ವಿಳಂಬವಾಗುತ್ತದೆ. ಹೀಗಾಗಿ ಹೈದರಾಬಾದ್​​ ಆಸ್ಪತ್ರೆಗೆ ಕರೆದೊಯ್ಯಲು ಸಿದ್ದತೆ ನಡೆಯುತ್ತಿದೆ. ವೈದ್ಯರ ಅನುಮತಿ ಸಿಕ್ಕಿದ ತಕ್ಷಣ ಹೈದರಾಬಾದ್​ಗೆ ಶಿಫ್ಟ್ ಮಾಡಲಾಗುವುದು ಎಂದರು.​​ ನೇರಾನೇರ ರಾಜಕಾರಣ ಮಾಡುವ ಯೋಗ್ಯತೆ ಇಲ್ಲ ಪೇಸಿಎಂ ಕ್ಯಾಂಪೇನ್ ಕಾಂಗ್ರೆಸ್​ನ ವಿಕೃತ ಮನಸ್ಥಿತಿಗೆ ಸಾಕ್ಷಿ. ನೇರಾನೇರ ರಾಜಕಾರಣ ಮಾಡುವ ಯೋಗ್ಯತೆ ಅವರಿಗಿಲ್ಲ. ಶಾಸಕ ರಮೇಶ್ ಕುಮಾರ್ ಮೂರು ತರೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂದ ಅವರದ್ದು ಯಾವ ಪೇಸಿಎಂ? ಕಾಂಗ್ರೆಸ್​ ನಾಯಕರನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನರಿಲ್ಲ. ಚುನಾವಣೆ ಸಮೀಪ ಹಿನ್ನೆಲೆ ಇಂತಹ ಗಿಮಿಕ್​​​ ಮಾಡುತ್ತಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ಮಾಡಿದರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರಾದ ಸಿದ್ದರಾಮ ಹಿರೇಮಠ ಅವರು ಪ್ರಾಧ್ಯಾಪಕರು. ಕನ್ನಡದ ವಿಶಿಷ್ಟ ಬರಹಗಾರರು. ಕನ್ನಡದ ವಿವಿಧ ಸಾಹಿತ್ಯದ ಪ್ರಕಾರದಲ್ಲಿ ವಿಭಿನ್ನ ಕೊಡುಗೆ ನೀಡಿದ್ದಾರೆ. ಗಜಲ್ ನ ಮೂಲ ಫಾರಸಿ ಭಾಷೆಯ ಜಾನಪದ ಕಾವ್ಯ ಪ್ರಕಾರದಲ್ಲಿದೆ ಎನ್ನಲಾಗುತ್ತದೆ. ಫಾರಸಿಯಲ್ಲಿ ಗಜಲ್ ಎಂದರೆ ಜಿಂಕೆ ಎಂದರ್ಥ. ಓಡಾಡುವ ಜಿಂಕೆಗೆ ಬಾಣ ಬಿಟ್ಟಾಗ ಹೊರಡಿಸುವ ರ‍್ತನಾದವೇ ಕರುಣಾರಸದ ಗಜಲ್ ಎನ್ನಲಾಗುತ್ತದೆ. ಗಜಲ್ ಗಳಿಗೆ ಅರಸರ ಆಸ್ಥಾನದ ಹೊಗಳುಭಟ್ಟರ ಪ್ರಶಂಸೆಯ ಖಾಸಿದಾ ಎಂಬ ಆರನೇ ಶತಮಾನದ ಅರಬ್ಬಿ ಪದ್ಯಗಳ ಮೂಲವೆಂದೂ ಹೇಳಲಾಗುತ್ತದೆ. ಮತ್ತೊಂದು ಮೂಲದ ಪ್ರಕಾರ, ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ರ‍್ದು ಭಾಷೆಯಲ್ಲಿ ಬಂದ ಗಜಲ್ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ, ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು. ಗಜಲ್ ಷೇರ್ ಎಂಬ ದ್ವಿಪದಿಯಲ್ಲಿದ್ದು ಒಂದು ದ್ವಿಪದಿಗೂ ಮತ್ತೊಂದು ದ್ವಿಪದಿಗೂ ಸಂಬಂಧವಿರಬೇಕೆಂಬುದಿಲ್ಲ. ಒಂದು ಗಜಲ್ ಸಾಧಾರಣವಾಗಿ ಐದರಿಂದ ಇಪ್ಪತ್ತೈದು ದ್ವಿಪದಿಗಳನ್ನು ಹೊಂದಿರಬಹುದು. ಪ್ರತಿ ದ್ವಿಪದಿಯೂ ಸ್ವತಂತ್ರ ಭಾವವನ್ನು ಹೊಂದಿರಬಹುದಾದರೂ ಇಡೀ ಗಜಲ್ ಒಂದು ಮುಖ್ಯ ವಿಷಯವನ್ನು ಹೇಳುತ್ತಿರುತ್ತದೆ. ಮುತ್ತುಗಳು ಪ್ರತ್ಯೇಕವಾದರೂ ಅದನ್ನು ಬಂಧಿಸಿದ ದಾರ ಒಂದೇ ಎಂಬಂತೆ ಪ್ರತ್ಯೇಕವಾದ ದ್ವಿಪದಿಗಳಿದ್ದರೂ ಅದನ್ನು ಒಂದು ವಿಚಾರ ಬಂಧಿಸಿರುತ್ತದೆ. ಅಲ್ಲದೆ ಗಜಲ್‌ನ ಆರಂಭದ ದ್ವಿಪದಿಯ ಸಾಲುಗಳು ಅಂತ್ಯಪ್ರಾಸವನ್ನು ಹೊಂದಿರಬೇಕು ಹಾಗೂ ಉಳಿದ ಪ್ರತಿ ದ್ವಿಪದಿಗಳ ಎರಡನೆಯ ಸಾಲು ಅಂತ್ಯ ಪ್ರಾಸವನ್ನು ಹೊಂದಿರಬೇಕೆಂಬುದು ಸರಳವಾದ ನಿಯಮ. ಇದಲ್ಲದೆ ಪ್ರತಿಯೊಂದು ಸಾಲುಗಳೂ ಅಂತ್ಯಪ್ರಾಸವನ್ನು ಹೊಂದಿರುವ ಸಾಧ್ಯತೆಗಳೂ ಇವೆ. ಭಾರತೀಯ, ಫಾರ‍್ಸಿ, ಅರೇಬಿಕ್ ಈ ಮೂರೂ ಮಿಶ್ರಣಗಳನ್ನೊಳಗೊಂಡ ಉರ್ದು ಗಜಲ್ ಕಾವ್ಯ ಪ್ರಕಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿತು. ಗಜಲ್ ಗೇಯತೆಯನ್ನು ಹೊಂದಿರುವುದರಿಂದಲೂ ಲಯ ಬೇಕೆಂಬ ಉದ್ದೇಶಕ್ಕಾಗಿಯೂ ಪ್ರತಿ ಸಾಲನ್ನು ಮಾತ್ರಾಗಣದಲ್ಲಿ ರಚಿಸುವ ಅಗತ್ಯತೆಯಿದೆ. ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೂ ಸಮಾನವಾದ ಮಾತ್ರೆಗಳನ್ನು ಅನುಸರಿಸಬೇಕಾಗುವುದು. ಇದರ ಉದ್ದೇಶ ಲಯ ಹಾಗೂ ಗೇಯತೆ. ಇದನ್ನು ಹೊರತುಪಡಿಸಿಯೂ ಗಜಲ್‌ಗಳು ರಚನೆಯಾಗಿವೆ ಆ ಮಾತು ಬೇರೆ. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ ಗಜಲ್ ಮತ್ತು ಬಿಡಿ ದ್ವಿಪದಿ ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ. ಗಜಲಿನ ಮಹತ್ವ ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗಜಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ. ಗಜಲ್ ಎಂಬ ಹೆಸರೇ ನವಿರಾದ ಭಾವವನ್ನು ಹೊಮ್ಮಿಸುವಂತಹದು. ನವಿಲುಗರಿಯ ಸ್ಪರ್ಶದಂತಹದ್ದು. ಪ್ರೀತಿ, ಪ್ರೇಮ, ಅದರೊಂದಿಗೆ ಆಧ್ಯಾತ್ಮ ಗಜಲ್‌ನ ಸ್ಥಾಯಿ ಭಾವ. ಯಾವುದೇ ಕಾವ್ಯ ಪ್ರಕಾರವೂ ಸಾಹಿತ್ಯದಲ್ಲಿ ಒಂದು ಪ್ರಮುಖ ಪ್ರಕಾರವಾಗಿ ಹೊರಹೊಮ್ಮಲು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಕಾವ್ಯ ಪ್ರಕಾರಗಳು ಬೆಳವಣಿಗೆಯ ಹಂತದಲ್ಲಿಯೇ ಮುರುಟಿಹೋದರೆ, ಕೆಲವು ಬೃಹದಾಕಾರವಾಗಿ ಬೆಳೆದುಬಿಡುವದನ್ನು ಕನ್ನಡ ಕಾವ್ಯ ಪರಂಪರೆಯಲ್ಲಿ ಕಾಣಬಹುದು. ಬೆಳೆಯಲು, ಮುರುಟಲು ಇದಕ್ಕೆ ಹಲವಾರು ಕಾರಣಗಳೂ ಇರುತ್ತವೆ. ಗಜಲ್ ಎಂದರೆ ಮಧುರವಾದ ನೋವು, ಮನಸಿಗೆ ನಾಟುವ ಬಾಣ, ಹೃದಯಕ್ಕೆ ತಾಕುವಂತಹದ್ದು, ಅಲ್ಲಿ ಹಿತವಾದ ನೋವು ಅಡಗಿರುತ್ತದೆ, ಹಂಬಲ ಇರುತ್ತದೆ, ಕೋರಿಕೆ ಇರುತ್ತದೆ, ಎಲ್ಲವೂ ಮೃದು, ಮಧುರತೆಯಿಂದ ಕೂಡಿರಬೇಕಾಗುತ್ತದೆ. ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ದ್ವಿಪದಿಗಳನ್ನು ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ದ್ವಿಪದಿಗಳನ್ನು ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ-ಹೂವಿನ ಹಾರದ ದಾರದಂತೆ. ಸ್ವಾರ್ಥ ಕವಿಯಾದವನು ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ. ಗಜಲ್ ಗೇಯ ಪ್ರಕಾರವಾಗಿರುವುದರಿಂದ ಇದನ್ನು ಮಧುರವಾಗಿ ಹಾಡಬಹುದು. ಉರ್ದು ಅಥವಾ ಹಿಂದಿಯಲ್ಲಿನಂತೆ ಕನ್ನಡದಲ್ಲಿ ಗಜಲ್‌ನ ಜಾಯಮಾನಕ್ಕೆ ಒಗ್ಗುವ ರೀತಿಯಲ್ಲಿ ಹಾಡುವವರು ಇರುವರಾದರೂ ಬೆರಳೆಣಿಕೆಯಷ್ಟು ಎನ್ನಬಹುದು. ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ, ಮೃದು, ಮಧುರ ಭಾವ ಹಾಗೂ ಶಬ್ದಗಳು. ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಉರ್ದು ಕಾವ್ಯದಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ಅಲ್ಲಿ ಚರ್ಚೆ ನಡೆಯುತ್ತಿತ್ತು. ಗಜಲ್ ಗಳಲ್ಲಿ ಬಳಸಲಾಗುವ ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂಬರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆಲವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು. ಈಗ ಎಲ್ಲರಿಗೂ ಗಜಲ್ ಬರೆಯುವ ಹುಮ್ಮಸ್ಸು. ಆದರೆ ಹೃದಯದ ಭಾಷೆಯನ್ನರಿಯದೇ ಬರೆಯುವ ಗಜಲ್ ಗಳು ನನ್ನ ದೃಷ್ಟಿಯಲ್ಲಿ ಆತ್ಮವಿಲ್ಲದ ದೇಹಗಳಿದ್ದಂತೆ. ಗಜಲ್ ನ ಮೂಲ ಉದ್ದೇಶವೇ ಹೃದಯವನ್ನು ತಲುಪುವುದು. ಅಲ್ಲೊಂದು ಮಧುರ ನೋವನ್ನು ಮೀಟುವುದು. ಆದರೆ ಇತ್ತೀಚೆಗೆ ಬರೆಯುವ ಗಜಲ್ ಗಳಲ್ಲಿ ಇದಾದುವುದೂ ಕಾಣುತ್ತಿಲ್ಲ. ಯುವ ಗಜಲ್ ಕಾರರು ಅಥವಾ ಹೊಸಬರು ಗಜಲ್ ಬರೆಯುವಾಗ ಹಿರಿಯರ ಗಜಲ್ ಗಳನ್ನು ಓದಬೇಕು, ಛಂದಸ್ಸನ್ನು ಅರಿಯಬೇಕು, ಗಜಲ್ ನಲ್ಲಿ ಲಯ ತರಲು ಯತ್ನಿಸಬೇಕು, ಅದಕ್ಕಿಂತ ಮುಖ್ಯವಾಗಿ ಹೃದಯಗಳನ್ನು ತಲುಪುವ, ಹೃದಯದಾಳವನ್ನು ಅರಿಯುವ ಯತ್ನ ಮಾಡಬೇಕು. ಬರೆದದ್ದೆಲ್ಲ ಗಜಲ್ ಆಗುವುದಿಲ್ಲ, ಪ್ರಾಸ ಇರುವವೆಲ್ಲ ಗಜಲ್ ಗಳಲ್ಲ ಎಂಬುದನ್ನು ಅರಿಯಬೇಕಾಗಿದೆ. ಹೊಸ ಪ್ರಯೋಗಗಳು ನಡೆದಿವೆಯಾದರೂ ಅವೆಲ್ಲ ಆತ್ಮವನ್ನೇ ಬಿಟ್ಟು ದೇಹದ ಬಗ್ಗೆ ಸಂಶೋಧನೆ ನಡೆಸಿದಂತೆ. ಕನ್ನಡದ ಗಜಲ್ ಎಂದರೆ ಕನ್ನಡದ ಗಜಲ್ಲೇ ಆಗಿರಲಿ. ಬಲವಂತವಾಗಿ ಗಜಲ್ ನಲ್ಲಿ ಉರ್ದು, ಹಿಂದಿ, ಇಂಗ್ಲೀಷ್ ಪದಗಳನ್ನು ಸೇರಿಸುವುದನ್ನು ಬಿಡಬೇಕು. ಕನ್ನಡದಲ್ಲಿಯೂ ಮೃದು, ಮಧುರ ಭಾವದ ಪದಗಳಿವೆ ಎಂಬುದನ್ನು ತೋರಿಸಬೇಕು. ಕೆಲವರು ದಾಖಲೆಗಾಗಿ ಬರೆಯುತ್ತಿದ್ದಾರೆ. ಇದೂ ಸಹ ಸರಿಯಲ್ಲ. ಬರವಣಿಗೆ ದಾಖಲೆಗಾಗಿ ಆದರೆ ಹೇಗೆ ? ಸಾಹಿತ್ಯದಲ್ಲಿ ದಾಖಲೆಗೆ ಹೊರಡುತ್ತೇನೆನ್ನುವುದು ಪ್ರಚಾರಪ್ರಿಯತೆಯ ಗೀಳಲ್ಲದೆ ಮತ್ತೆನಲ್ಲ. ದಾಖಲೆಗಾಗಿ ಬರೆಯೋದು ಸಾಹಿತ್ಯವಾಗಲಾರದು, ಹಿರಿಯ ಕವಿಗಳಾರೂ ದಾಖಲೆಗಾಗಿ ಬರೆದಿಲ್ಲ ಎಂಬುದು ನೆನಪಿಸಿಕೊಳ್ಳಬೇಕಾಗಿದೆ. ಇಂಥ ಕಸರತ್ತುಗಳೆಲ್ಲ ಅಗ್ಗದ ಪ್ರಚಾರಪ್ರಿಯತೆಯೆಂದೇ ಅನಿಸಿಕೊಳ್ಳುತ್ತವೇ ಹೊರತು ಸತ್ವಯುತವಾದುದ್ದಲ್ಲ. ಅದೇನೇ ಇರಲಿ ಗಜಲ್ ಎಂದರೇ ಪ್ರೀತಿ. ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಭಾರತೀಯ ಕಾವ್ಯ ಪರಂಪರೆಯಲ್ಲಿ ಉರ್ದು ಭಾಷೆಯಲ್ಲಿನ ಗಜಲ್ ಕಾವ್ಯ ಪ್ರಕಾರಕ್ಕೆ ಎಷ್ಟೊಂದು ಪ್ರಾಮುಖ್ಯತೆಯಿದೆಯೋ ಅದೇ ರೀತಿಯಲ್ಲಿಯೇ ಕನ್ನಡ ಕಾವ್ಯ ಪರಂಪರೆಯಲ್ಲಿಯೂ ಗಜಲ್ ತನ್ನದೇ ಆದ ದೃಢವಾದ ಹೆಜ್ಜೆಗಳನ್ನೂರುತ್ತಿದೆ. ಅದು ಗಟ್ಟಿ ಹೆಜ್ಜೆಗಳನ್ನೂರುತ್ತ ನಡೆಯಲಿ ಎಂದೇ ಬಯಸುವೆ. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ. ಜೊಳ್ಳು ತೂರಿಹೋಗಿ, ಗಟ್ಟಿಕಾಳು ಉಳಿಯುತ್ತವೆ. ಕಾಲದ ಮುಂದೆ ಯಾರೂ ದೊಡ್ಡವರಲ್ಲ. ನಾವೆಲ್ಲರೂ ಚಿಕ್ಕವರೇ ಎಂದು ವಿನೀತವಾಗಿ ಹೇಳಬಯಸುತ್ತೇನೆ.
ಭಾರತ ಇಬ್ಬಾಗ ಮಾಡಿದ, ಕಾಶ್ಮೀರವನ್ನೇ ಭಾರತದಿಂದ 75 ವರ್ಷ ಬೇರ್ಪಡಿಸಿದ ಕಾಂಗ್ರೆಸ್ ಇದೀಗ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವುದು ಹಾಸ್ಸಾಸ್ಪದವಾಗಿದೆ. ಕರ್ನಾಟಕ ಪ್ರವೇಶಿಸಿರುವ ಯಾತ್ರೆ ಬಿಜೆಪಿ ಮಾಡಿದ ಉತ್ತಮ ರಸ್ತೆಯಲ್ಲಿ ಸಾಗಲಿ ಎಂದು ಬಿಜೆಪಿ ತಿರುಗೇಟು ನೀಡಿದೆ. Suvarna News First Published Sep 30, 2022, 1:32 PM IST ಬೆಂಗಳೂರು(ಸೆ.30): ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದೆ. ಇದರ ಬೆನ್ನಲ್ಲೇ ವಿವಾದ, ಆರೋಪ ಪ್ರತ್ಯಾರೋಪ ಜೋರಾಗಿದೆ. ಭಾರತ್ ಜೋಡೋ ಯಾತ್ರೆ ಫ್ಲೆಕ್ಸ್ ಬಿಜೆಪಿ ಕಾರ್ಯಕರ್ತರು ಹರಿದು ಹಾಕಿದ್ದಾರೆ ಅನ್ನೋ ಆರೋಪಕ್ಕೆ ಬಿಜೆಪಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ. ಯಾತ್ರೆ ಕರ್ನಾಟಕ ಪ್ರವೇಶ ಮಾಡುವ ಮೊದಲೇ ಫ್ಲೆಕ್ಸ್ ಕಿತ್ತು ಹಾಕಿದ್ದಾರೆ ಅನ್ನೋ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೇ ಇದನ್ನು ಮಾಡಿ ಭಾರತ್ ಜೋಡೋ ಯಾತ್ರೆಯ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಈ ರೀತಿ ಮಾಡಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದೆ. ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ಉತ್ತಮ ರಸ್ತೆಗಳನ್ನು ಮಾಡಿದ್ದಾರೆ. ಈ ರಸ್ತೆ ಮೂಲಕ ಜೋಡೋ ಯಾತ್ರೆ ಮುಂದುವರಿಯಲಿ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಭಾರತವನ್ನೇ ಇಬ್ಬಾಗ ಮಾಡಿದ ಕಾಂಗ್ರೆಸ್ ಇದೀಗ ಭಾರತವನ್ನು ಒಗ್ಗೂಡಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಚರ್ಚ್, ಮಸೀದಿಗೆ ಭೇಟಿ ನೀಡಿದ್ದೀರಿ. ಆದರೆ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿಲ್ಲ. ಹಲವು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದೀರಿ. ಆದರೆ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. Bharat Jodo Yatra: ರಾಹುಲ್‌ ಯಾತ್ರೆ ಬ್ಯಾನರ್‌ ಹರಿದ ಕಿಡಿಗೇಡಿಗಳು: ಪೊಲೀಸರಿಗೆ ದೂರು ಪಾಕಿಸ್ತಾನ ಜಿಂದಾಬಾದ್, ಭಾರತವನ್ನೇ ಬೈದ ಕ್ರಿಶ್ಚಿಯನ್ ಮಿಶಿನರಿಯನ್ನು ವಿರೋಧಿಸುವ ಬದಲು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಇದೀಗ ಕರ್ನಾಟಕ ಪ್ರವೇಶಿಸಿರುವ ಜೋಡೋ ಯಾತ್ರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡಿಸು ಕೆಲಸ ಮಾಡುತ್ತೀರಾ ಎಂದು ಛಲವಾದಿ ಪ್ರಶ್ನಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ಕುರಿತು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದರು. ಆದರೆ ಹೆಸರಿಗೆ ಮಾತ್ರ ಅಂಬೇಡ್ಕರ್ ಎಂದು ಹೇಳುವ ಕಾಂಗ್ರೆಸ್ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಕೆಲಸ ಮಾಡಿತು. ಆದರೆ ನರೇಂದ್ರ ಮೋದಿ ಆರ್ಟಿಕಲ್ 370 ರದ್ದು ಮಾಡಿ ದೇಶವನ್ನು ಒಂದೂಗಿಡಿಸಿದ್ದಾರೆ. ಇದೀಗ ಅಧಿಕಾರಕ್ಕೆ ಬಂದರೆ ಅರ್ಟಿಕಲ್ 370 ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಈ ಮೂಲಕ ಮತ್ತೆ ಭಾರತವನ್ನು ವಿಭಜಿಸುವ ಕೆಲಸಕ್ಕೆ ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. India Gate: ಕೈ ಬಿಟ್ಟು ಹೋಗದಂತೆ ಗಾಂಧಿಗಳ ಕಸರತ್ತು ಪಾಕಿಸ್ತಾನ, ಬಾಂಗ್ಲಾದೇಶ ಮಾಡಿದವರು ಯಾರು? ನಿಮ್ಮ ಕುಟುಂಬವೇ ಭಾರತವನ್ನು ಇಬ್ಬಾಗ ಮಾಡಿ ಇದೀಗ ಇರುವ ಭಾರತವನ್ನು ಜೋಡಿಸಲು ಹೊರಟ್ಟಿದ್ದೀರಿ. ಇದು ಯಾವ ರಾಜಕೀಯ? ಈ ಹಿಂದೆ ಕಾಂಗ್ರೆಸ್ ಸರ್ಕಾರ ಏನು ಪ್ಲಾನ್ ಮಾಡುತ್ತಿದೆ? ಅನ್ನೋದು ಭಯೋತ್ಪಾದಕರಿಗೆ ತಿಳಿಯುತ್ತಿತ್ತು. ಭಯೋತ್ಪಾದಕರನ್ನು ಕರೆಸಿ ಕಾಂಗ್ರೆಸ್ ಪ್ರಧಾನ ಮಂತ್ರಿಗಳೇ ಕೈಕುಲುಕಿದ್ದರು. ಆದರೆ ಈಗ ಎನ್‌ಡಿಎ ಸರ್ಕಾರ ಭಯೋತ್ಪಾದಕರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಭಾರತ ವಿರೋಧಿ ಚಟುವಟಿಕೆ ಮಾಡುವವರಿಗೂ ತಕ್ಕ ಶಾಸ್ತಿ ಮಾಡುತ್ತಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಸಂಖ್ಯಾಶಾಸ್ತ್ರದ ಸಂಖ್ಯೆ 3 ಅಡಿಯಲ್ಲಿ ಜನಿಸಿದ ಜನರನ್ನು ಸಮಸ್ಯೆ ಪರಿಹಾರಕಾರರು ಎಂದು ಕರೆಯಲಾಗುತ್ತದೆ. ಅವರು ತಮ್ಮ ಆಲೋಚನಾ ಪ್ರಕ್ರಿಯೆಯಲ್ಲಿ ಬಹಳ ಸೃಜನಶೀಲರಾಗಿದ್ದಾರೆ ಮತ್ತು ತ್ವರಿತವಾಗಿ ಪರಿಹಾರಗಳೊಂದಿಗೆ ಬರುತ್ತಾರೆ. ಅವರು ಪೆಟ್ಟಿಗೆಯ ಹೊರಗಿನ ಚಿಂತಕರು ಮತ್ತು ದಿನನಿತ್ಯದ ಜೀವನದ ಸಮಸ್ಯೆಗಳಿಗೆ ವಿಶಿಷ್ಟವಾದ ವಿಧಾನವನ್ನು ಹೊಂದಿದ್ದಾರೆ. ಅವರು ಪ್ರಕಾಶಮಾನವಾಗಿರುತ್ತಾರೆ ಮತ್ತು ಅವರಿಗೆ ಒಂದು ಬಾಲಿಶ ಭಾಗವನ್ನು ಹೊಂದಿದ್ದು ಅದು ಅವರಿಗೆ ಪ್ರಿಯವಾಗಿಸುತ್ತದೆ ಆದರೆ ಅದೇ ಸಮಯದಲ್ಲಿ ಕೆರಳಿಸುತ್ತದೆ. ಸಂಖ್ಯಾಶಾಸ್ತ್ರದ ಸಂಖ್ಯೆ 3 ರೊಂದಿಗಿನ ಜನರನ್ನು ಅವರ ಉತ್ಸಾಹ, ಪ್ರಯತ್ನ ಮತ್ತು ಉತ್ತಮ ಸಾಮಾಜಿಕ ಮನೋಭಾವದಿಂದ ಗುರುತಿಸಬಹುದು. ಈ ಸಂಖ್ಯೆಗೆ ಸಂಬಂಧಿಸಿದ ಜನರು ತಾವು ಕೈಗೊಳ್ಳುವ ಎಲ್ಲದರಲ್ಲೂ ಯಶಸ್ವಿಯಾಗಲು ಇಷ್ಟಪಡುತ್ತಾರೆ ಮತ್ತು ಅಲ್ಲಿಗೆ ಹೋಗಲು ಶ್ರಮಿಸಲು ಸಿದ್ಧರಾಗಿದ್ದಾರೆ. ಅವರು ಕೈಗೊಳ್ಳುವ ಎಲ್ಲದರ ಬಗ್ಗೆ ಉತ್ಸಾಹಭರಿತರಾಗಿದ್ದಾರೆ ಮತ್ತು ಉತ್ಸಾಹ ಮತ್ತು ಕುತೂಹಲದಿಂದ ಹೊಸ ಕಾರ್ಯಗಳಲ್ಲಿ ತೊಡಗುತ್ತಾರೆ. ಟಿನ್‌ಗಳನ್ನು ನಿರ್ದಿಷ್ಟ ರೀತಿಯಲ್ಲಿ ಅಥವಾ ಪರಿಪೂರ್ಣತಾವಾದಿಗಳಿಗೆ ಆದ್ಯತೆ ನೀಡುವ ಜನರಿಗೆ ಅವರು ಸಾಮಾನ್ಯವಾಗಿ ಬೇಜವಾಬ್ದಾರಿ ತೋರುತ್ತಾರೆ. ಒಟ್ಟಾರೆಯಾಗಿ ಅವರು ತುಂಬಾ ಆರಾಧಿಸಲ್ಪಡುತ್ತಾರೆ ಮತ್ತು ಅವರನ್ನು ನೋಡಲು ಅನೇಕ ಸ್ನೇಹಿತರು ಮತ್ತು ಹಿತೈಷಿಗಳನ್ನು ಹೊಂದಿದ್ದಾರೆಂದು ತೋರುತ್ತದೆ. ಅವರು ಸಂಪರ್ಕಗಳನ್ನು ಮಾಡುತ್ತಿರುವಾಗ ಅವರು ಹೇಡಿಗಳಂತೆ ತೋರಬಹುದು ಆದರೆ ಸರಳವಾದ ಕ್ಷಣಿಕವಾದವುಗಳು ಮತ್ತು ಇನ್ನೇನೂ ಇಲ್ಲ. ಅವರು ತಮ್ಮ ಹಾಸ್ಯ ಪ್ರಜ್ಞೆಯನ್ನು ಅವರಿಗೆ ನೌಕಾಯಾನ ಮಾಡಲು ಸಹಾಯ ಮಾಡುತ್ತಾರೆ. ಅವರು ತಮ್ಮನ್ನು ತಾವು ಮುಖ್ಯವಾಗಿಸಿಕೊಳ್ಳಲು ಮತ್ತು ಪ್ರೀತಿಪಾತ್ರರನ್ನು ಅನುಭವಿಸಲು ಹಾಸ್ಯವನ್ನು ಅವಲಂಬಿಸಿರುತ್ತಾರೆ. ಈ ಗಂಭೀರತೆಗಾಗಿ, ಅವರು ಅಪಕ್ವವಾಗಿ ಹೊರಬರಬಹುದು ಮತ್ತು ಗಂಭೀರವಾಗಿ ಕೆಲಸ ಮಾಡಲು ಇಷ್ಟವಿಲ್ಲದವರು. ಆದರೆ, ಆಶ್ಚರ್ಯಕರವಾಗಿ, ಅವರು ಸವಾಲುಗಳನ್ನು ಎದುರಿಸಬೇಕಾದಾಗ, ಗಂಭೀರವಾಗಿ ಅವರು ತಮ್ಮ ಸುತ್ತಲಿರುವವರೆಲ್ಲರನ್ನು ಆಶ್ಚರ್ಯಗೊಳಿಸುತ್ತಾರೆ. ಸಂಖ್ಯಾಶಾಸ್ತ್ರ ಸಂಖ್ಯೆ 3 ವ್ಯಕ್ತಿತ್ವದ ಲಕ್ಷಣಗಳು ಅವರು ಪ್ರತಿಭಾವಂತರು ಮತ್ತು ತಮ್ಮ ಅಡೆತಡೆಗಳನ್ನು ಜಯಿಸಲು ಈ ಪ್ರತಿಭೆಯನ್ನು ಮಾಧ್ಯಮವಾಗಿ ಬಳಸುತ್ತಾರೆ. ಅವರು ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ, ಇತರರೊಂದಿಗೆ ಜನಪ್ರಿಯರಾಗಿ ಮತ್ತು ಈ ಬಹಿರ್ಮುಖತೆಯ ಮೇಲೆ ಜಗಳವಾಡುತ್ತಾರೆ. ಅವರು ಸಾಮಾಜಿಕವಾಗಿ ಹೊರಹೋಗುವ ಕಾರಣದಿಂದಾಗಿ ಅವರು ಇತರರಿಗೆ ಸಹಾಯ ಮಾಡಲು ಬಯಸುತ್ತಾರೆ. ಅವರು ಕೆಲವೊಮ್ಮೆ ಅಹಂಕಾರ ಮತ್ತು ಹೆಮ್ಮೆಯಿರಬಹುದು ಆದರೆ ಉದ್ದೇಶಪೂರ್ವಕವಾಗಿರುವುದಿಲ್ಲ. ಅವರು ಕೆಲಸ ಮಾಡುವ ಮತ್ತು ಅವರೊಂದಿಗೆ ಸಂವಹನ ನಡೆಸುವ ಜನರನ್ನು ಭೇಟಿ ಮಾಡಿದರೆ ಅವರು ಉತ್ತಮವಾಗಲು ಬಯಸುತ್ತಾರೆ. ಅವರು ಎಂದಿಗೂ ಅಧೀನ ಸ್ಥಾನದಲ್ಲಿ ತೃಪ್ತರಾಗುವುದಿಲ್ಲ; ಅವರು ಜಗತ್ತಿನಲ್ಲಿ ಏರಲು ಮತ್ತು ಇತರರ ಮೇಲೆ ನಿಯಂತ್ರಣ ಮತ್ತು ಅಧಿಕಾರವನ್ನು ಹೊಂದುವ ಗುರಿಯನ್ನು ಹೊಂದಿರುತ್ತಾರೆ. ಅವರು ಜೀವನದ ವಿಜ್ಞಾನಿಗಳು ಮತ್ತು ಅದನ್ನು ಲೆಕ್ಕಾಚಾರ ಮಾಡಬೇಕಾದ ಸಂಗತಿಯಂತೆ ಪರಿಗಣಿಸುತ್ತಾರೆ. ಜೀವನವನ್ನು ಹೆಚ್ಚು ಆನಂದದಾಯಕ ಮತ್ತು ವರ್ಣಮಯವಾಗಿಸಲು ಪ್ರಾಯೋಗಿಕ ಪರಿಹಾರಗಳನ್ನು ಹುಡುಕಲು ಅವರು ಇಷ್ಟಪಡುತ್ತಾರೆ. ಅವರು ಸಂವಹನದಲ್ಲಿ ಅದ್ಭುತವಾಗಿ ಉತ್ತಮರು. ಅವರ ಹುರುಪು ಒಂದೇ ಸಮಯದಲ್ಲಿ ವಿವಿಧ ಯೋಜನೆಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಅವರು ಕೆಲಸ ಮಾಡಬೇಕಾದಾಗಲೂ ಉತ್ಸಾಹ ಮತ್ತು ಜೀವನದಿಂದ ತುಂಬಿರುತ್ತಾರೆ. ಈ ಶಕ್ತಿಯುತ ವ್ಯಕ್ತಿಗಳು ಜನರಿಂದ ತುಂಬಿರುವ ಜಾಗದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಮತ್ತು ಅವರ ಸಾಧನೆಗಳನ್ನು ಹೆಚ್ಚಿಸುತ್ತಾರೆ. ಅವರು ಸಾಮಾನ್ಯವಾಗಿ ಸಂಬಂಧಗಳು ಮತ್ತು ವೃತ್ತಿಪರ ಸಂದರ್ಭಗಳಲ್ಲಿ ಎರಡೂ ಸರ್ವಾಧಿಕಾರಿಗಳಾಗಿರುತ್ತಾರೆ. ಅವರು ತಮ್ಮ ವೆಚ್ಚಗಳೊಂದಿಗೆ ತುಂಬಾ ದ್ರವವಾಗಿರುತ್ತಾರೆ. ಅವರು ಕಡಿಮೆ ಉಳಿಸುತ್ತಾರೆ ಮತ್ತು ಹೆಚ್ಚು ಖರ್ಚು ಮಾಡುತ್ತಾರೆ. ಅವರು ಐಷಾರಾಮಿ ಮತ್ತು ಕ್ಷುಲ್ಲಕ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡುವುದರಿಂದ ಅವರು ತಮ್ಮ ಅನುಪಯುಕ್ತ ವೆಚ್ಚಗಳ ಬಗ್ಗೆ ಜಾಗರೂಕರಾಗಿರಬೇಕು. ಅವರು ತಮ್ಮ ಉತ್ಸಾಹ ಮತ್ತು ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಕೆಲವು ಜನರು ತಮ್ಮ ಹಾಸ್ಯ ಮತ್ತು ಟೀಕೆಗಳನ್ನು ಮೆಚ್ಚದಿರಬಹುದು. ಸಂಖ್ಯಾಶಾಸ್ತ್ರದ ಸಂಖ್ಯೆ 3 ವೃತ್ತಿಜೀವನ ಅವರ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯದಿಂದಾಗಿ ವ್ಯವಹಾರದಲ್ಲಿ ಸಾಮಾನ್ಯವಾಗಿ ಯಶಸ್ವಿಯಾಗುತ್ತಾರೆ. ಅವರು ತಮ್ಮ ಸಾಮರ್ಥ್ಯಗಳು ಮತ್ತು ನಿರ್ಧಾರಗಳನ್ನು ನಂಬಬೇಕು ಮತ್ತು ಸವಾಲುಗಳು ಮತ್ತು ಟೀಕೆಗಳನ್ನು ಆರೋಗ್ಯಕರವಾಗಿ ತೆಗೆದುಕೊಳ್ಳಲು ಮರೆಯದಿರಿ. ಅವರು ಅತ್ಯುತ್ತಮ ಭಾಷಣಕಾರರು ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾತ್ಮಕ ಉದ್ಯೋಗಗಳಲ್ಲಿ ಉತ್ತಮರು. ಅವರು ಬೋಧನಾ ಉದ್ಯೋಗಗಳು ಅಥವಾ ಇತರ ಸಂಶೋಧನೆ-ಸಂಬಂಧಿತ ಉದ್ಯೋಗಗಳನ್ನು ಆಯ್ಕೆ ಮಾಡಬಹುದು. ನಿರ್ವಹಣೆಯು ಈ ಸ್ಥಳೀಯರಿಗೆ ಸ್ವಾಭಾವಿಕವಾಗಿ ಬರುತ್ತದೆ, ಆದ್ದರಿಂದ ಅವರು ಎಲ್ಲಾ ಸಮಯದಲ್ಲೂ ಸರಿಯಾದ ಕೆಲಸವನ್ನು ಮಾಡುವಲ್ಲಿ ದೃಢವಾಗಿರುವ ಅದ್ಭುತ ವ್ಯವಸ್ಥಾಪಕರನ್ನು ಮಾಡುತ್ತಾರೆ. ಅವರ ಅಧಿಕೃತ ಸ್ವಭಾವವು ನಿರ್ವಹಣಾ-ಶೈಲಿಯ ಕೆಲಸದಲ್ಲಿ ಅವರಿಗೆ ಸಹಾಯ ಮಾಡುತ್ತದೆ, ಅಲ್ಲಿ ಅವರು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಾರೆ. ಈ ಸ್ಥಳೀಯರು ಪ್ರಾಮಾಣಿಕರು ಮತ್ತು ಸಮಾಜದ ಒಳಿತಿಗಾಗಿ ಕೆಲಸಗಳನ್ನು ಮಾಡಲು ಬಯಸುತ್ತಾರೆ. ಈ ಅರ್ಥದಲ್ಲಿ, ಅವರು ಸಾರ್ವಜನಿಕ ವಲಯ ಮತ್ತು ನಾಗರಿಕ ಸೇವಾ ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ಶ್ರೇಷ್ಠ ವಕೀಲರು, ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು, ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರೂ ಆಗಬಹುದು. ಅವರು ಅದರೊಂದಿಗೆ ಬರುವ ಸಾಮಾಜಿಕ ಮೌಲ್ಯೀಕರಣ ಮತ್ತು ದೊಡ್ಡ ಕೆಲಸಗಳನ್ನು ಮಾಡುವ ಅವಕಾಶ ಎರಡನ್ನೂ ಆನಂದಿಸುತ್ತಾರೆ. ಅವರು ಬರವಣಿಗೆ, ಸ್ಟ್ಯಾಂಡ್-ಅಪ್ ಕಾಮಿಡಿ, ಪೇಂಟಿಂಗ್, ಡಿಸೈನಿಂಗ್ ಇತ್ಯಾದಿಗಳಂತಹ ಸೃಜನಶೀಲ ಉದ್ಯೋಗಗಳಿಗೆ ಹೋಗಬಹುದು ಏಕೆಂದರೆ ಈ ಉದ್ಯೋಗಗಳು ಅವರಲ್ಲಿ ಉತ್ತಮವಾದದ್ದನ್ನು ಹೊರತರುತ್ತವೆ.. ಈ ಸ್ಥಳೀಯರು ಅತ್ಯಂತ ಸೃಜನಾತ್ಮಕ ಮತ್ತು ಕಲಾತ್ಮಕ ಆತ್ಮಗಳಾಗಿರುವುದರಿಂದ ಅವರು ತಮ್ಮ ಸೃಜನಾತ್ಮಕ ಅಂಶಗಳನ್ನು ಅನ್ವೇಷಿಸಲು ಅನುಮತಿಸುವ ಉದ್ಯೋಗಗಳಿಗಿಂತ ಅವರಿಗೆ ಯಾವುದೂ ಸೂಕ್ತವಲ್ಲ. ದಿನನಿತ್ಯದ ದೈನಂದಿನ ಕೆಲಸದಲ್ಲಿ ಅವರನ್ನು ಇರಿಸುವ ಬಗ್ಗೆ ಒಬ್ಬರು ಯೋಚಿಸಲು ಸಾಧ್ಯವಿಲ್ಲ. ಈ ಸ್ಥಳೀಯರ ವಿಷಯಕ್ಕೆ ಬಂದಾಗ, ಅವರ ಯಶಸ್ಸಿನ ಉತ್ತಮ ಅವಕಾಶವೆಂದರೆ ಅವರ ಬದಲಾವಣೆಯ ಉತ್ಸಾಹವನ್ನು ತೃಪ್ತಿಪಡಿಸುವ ಕ್ರಿಯಾತ್ಮಕ ಉದ್ಯೋಗಗಳ ಮೂಲಕ ಮಾತ್ರ ಅದು ಸಾಧ್ಯ. ಪ್ರೀತಿಯಲ್ಲಿ ಸಂಖ್ಯಾಶಾಸ್ತ್ರ ಸಂಖ್ಯೆ 3 ಸಂಖ್ಯಾಶಾಸ್ತ್ರದ ಸಂಖ್ಯೆ 3 ಸ್ಥಳೀಯರು ಬಹಿರ್ಮುಖಿಗಳು ಮತ್ತು ವಿನೋದ-ಪ್ರೀತಿಯವರಾಗಿದ್ದಾರೆ, ಆದ್ದರಿಂದ ಅವರು ಜೊತೆಯಲ್ಲಿರಲು ತುಂಬಾ ವಿನೋದಮಯವಾಗಿರುತ್ತಾರೆ. ಅವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ ಮತ್ತು ನಿರ್ಬಂಧಿತ ಸಂಬಂಧಗಳಲ್ಲಿ ಇರಲು ಸಾಧ್ಯವಿಲ್ಲ, ಏನೇ ಇರಲಿ. ಅವರು ಸ್ಥಳಾವಕಾಶದ ಅಗತ್ಯವನ್ನು ಅರ್ಥಮಾಡಿಕೊಳ್ಳುವ ಯಾರೊಂದಿಗಾದರೂ ಇರಲು ಬಯಸುತ್ತಾರೆ ಮತ್ತು ಪ್ರತಿಯಾಗಿ ತಮ್ಮ ಪಾಲುದಾರರಿಗೆ ಅದನ್ನು ನೀಡುತ್ತಾರೆ. ಅವರಿಗೆ ಅಡ್ಡಿಯಾಗುವ ಸಂಕುಚಿತ ಸಂಬಂಧಗಳಲ್ಲಿರಲು ಅವರು ಇಷ್ಟಪಡುವುದಿಲ್ಲ. ಸಂಖ್ಯೆ 3 ಜನರು ಸದ್ಗುಣಗಳು, ಸ್ವಯಂ ಅಭಿವ್ಯಕ್ತಿ, ಆಳವಾದ ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುವ ಜನರು. ಈ ವ್ಯಕ್ತಿಗಳು 1, 5 ಮತ್ತು 7 ಸಂಖ್ಯೆಗಳೊಂದಿಗೆ ಹೆಚ್ಚು ಹೊಂದಿಕೆಯಾಗುತ್ತಾರೆ ಎಂದು ಹೇಳಬಹುದು. ಯಾವುದೇ ಕ್ರಮದಲ್ಲಿ ಅವರ ಹೊಂದಾಣಿಕೆಯನ್ನು ಸುಲಭವಾಗಿ ಕಾಣಬಹುದು. ಅವರು ಅದನ್ನು ತಕ್ಷಣವೇ ಅಭಿವೃದ್ಧಿಪಡಿಸುವುದಿಲ್ಲ, ಆದರೆ ಇದು ಸಾಕಷ್ಟು ಸಮಯ ಮತ್ತು ತಾಳ್ಮೆ ತೆಗೆದುಕೊಳ್ಳುತ್ತದೆ. ಸಂಖ್ಯೆ 3 ತುಂಬಾ ಸರಿಹೊಂದಿಸುತ್ತಿರುವುದರಿಂದ, ಯಾವುದೇ ಸಮಸ್ಯೆಗಳಿಲ್ಲದೆ ವಿಷಯಗಳು ಕೈಯಲ್ಲಿ ಹೋಗುತ್ತವೆ. ಪ್ರೇಮಿಗಳಾಗಿ, ಸೂರ್ಯ ಸಂಖ್ಯೆ 3 ಜನರು ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಾರೆ ಮತ್ತು ಬದ್ಧತೆಗಳಿಗೆ ಬೇರೂರುವ ಬದಲು ಮುಕ್ತವಾಗಿರಲು ಬಯಸುತ್ತಾರೆ. ಹೇಗಾದರೂ, ಒಮ್ಮೆ ಆಳವಾದ ಪ್ರೀತಿಯಲ್ಲಿ, ಅವರು ದೃಢವಾಗಿ ಮತ್ತು ಅವರು ಬಯಸಿದ ಮೇಲೆ ಸ್ಥಿರವಾಗುತ್ತಾರೆ. ಅವರು ನಿರಾಶಾವಾದಿ ಜನರನ್ನು ದ್ವೇಷಿಸುತ್ತಾರೆ ಮತ್ತು ಅವರ ಮೆರವಣಿಗೆಗಳಲ್ಲಿ ಮಳೆ ಬೀಳುವವರ ಬದಲಿಗೆ ಧನಾತ್ಮಕ ಪ್ರೇಮಿಗಳನ್ನು ಹುಡುಕಲು ಇಷ್ಟಪಡುತ್ತಾರೆ. ಅವರು ಪ್ರಣಯವನ್ನು ಕಳೆದುಕೊಳ್ಳುವ ಭಯವನ್ನು ಹೊಂದಿರುವುದರಿಂದ ಅದನ್ನು ಪ್ರಾರಂಭಿಸಲು ತೊಂದರೆಯನ್ನು ಎದುರಿಸುತ್ತಾರೆ. ಅವರು ಅಶ್ಲೀಲತೆ ಮತ್ತು ನಂಬಿಕೆಯಿಲ್ಲದ ಕಡೆಗೆ ತಿರುಗಬಹುದು. ತಾಳ್ಮೆ ಮತ್ತು ಹೆಚ್ಚು ನಿಷ್ಠಾವಂತ ಪಾಲುದಾರರು ಮಾತ್ರ ಅವರೊಂದಿಗೆ ದೀರ್ಘಾವಧಿಯ ಸಂಬಂಧಗಳಲ್ಲಿರಬಹುದು. ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆ 3 ರ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳು ಸಾಮರ್ಥ್ಯ ಸಂವಹನಕ್ಕೆ ಬಂದಾಗ ಅವರು ತಡೆಹಿಡಿಯುವುದಿಲ್ಲ. ಸಂಖ್ಯೆ 3 ಒಂದು ಸಂವಹನಕಾರರ ಮೂಲಕ ಮತ್ತು ಎಲ್ಲಾ ರೀತಿಯ ಅಭಿವ್ಯಕ್ತಿಗಳಲ್ಲಿ ಹೊಳೆಯುತ್ತದೆ. ಇದು ಆಲೋಚನೆಗಳು, ಕಲ್ಪನೆಗಳು ಮತ್ತು ಕನಸುಗಳೊಂದಿಗೆ ಸಿಡಿಯುತ್ತದೆ. ಕಲೆಗೆ ಬಂದಾಗ ಈ ವ್ಯಕ್ತಿಗಳು ನೈಸರ್ಗಿಕ ಪರಿಣತಿಯನ್ನು ಹೊಂದಿರುತ್ತಾರೆ. ಬಣ್ಣ, ಸಂಗೀತ, ಸೃಷ್ಟಿ, ಅಥವಾ ಇಂದ್ರಿಯಗಳನ್ನು ತೊಡಗಿಸಿಕೊಳ್ಳುವ ಯಾವುದಾದರೂ ಅದರ ಮೇಲೆ 3 ಸಂಖ್ಯೆಯನ್ನು ಬರೆಯಲಾಗಿದೆ. ಲಿಖಿತ ಮತ್ತು ಮಾತನಾಡುವ ಪದವು ನಮ್ಮನ್ನು ಇಲ್ಲಿಯವರೆಗೆ ಮಾತ್ರ ಕೊಂಡೊಯ್ಯುತ್ತದೆ ಮತ್ತು ಯಶಸ್ವಿ ಸಂವಹನಕ್ಕಾಗಿ ಇತರ ಹಲವು ಮಾಧ್ಯಮಗಳನ್ನು ಅವಲಂಬಿಸುತ್ತದೆ ಎಂದು ಅದು ಅರಿತುಕೊಳ್ಳುತ್ತದೆ. 3 ನೇ ಸಂಖ್ಯೆಯ ಜನರು ತಮ್ಮ ಕಾಂತೀಯ ವ್ಯಕ್ತಿತ್ವಗಳೊಂದಿಗೆ ಇತರ ಜನರನ್ನು ಆಕರ್ಷಿಸಲು ಸುಲಭ ಸಮಯವನ್ನು ಹೊಂದಿರುತ್ತಾರೆ ಏಕೆಂದರೆ ಅವರು ಯಾವಾಗಲೂ ಬಹಿರ್ಮುಖಿ ಮತ್ತು ಪ್ರಾಯೋಗಿಕವಾಗಿರುತ್ತಾರೆ. ಅದರ ಲಘುವಾದ ವರ್ತನೆ ಮತ್ತು ಸಂವಹನ ಮಾಡುವ ಸಾಮರ್ಥ್ಯವು ನೈಸರ್ಗಿಕ ವರ್ಚಸ್ಸನ್ನು ಸೃಷ್ಟಿಸಲು ಸಂಯೋಜಿಸುತ್ತದೆ, ಅದು ಜನರನ್ನು ಅವರ ಉಪಸ್ಥಿತಿಯಲ್ಲಿ ಆರಾಮದಾಯಕ ಮತ್ತು ಸಂತೋಷಪಡಿಸುತ್ತದೆ. ಸಂಖ್ಯೆ 3 ವ್ಯಕ್ತಿತ್ವದ ಆಶಾವಾದವನ್ನು ಬದಲಾಯಿಸುವುದು ನಂಬಲಾಗದಷ್ಟು ಕಷ್ಟ. ಈ ಸ್ಥಳೀಯರು ಸ್ವಯಂ ಚಾಲಿತರಾಗಿದ್ದಾರೆ ಮತ್ತು ಅವರಿಂದಲೇ ಪ್ರೇರೇಪಿಸಲ್ಪಡುತ್ತಾರೆ ಮತ್ತು ಕೊನೆಯವರೆಗೂ ಏನಾದರೂ ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ. ಅವರು ಪ್ರಪಂಚದ ಪ್ರಕಾಶಮಾನವಾದ ಹರ್ಷಚಿತ್ತದಿಂದ ದೃಷ್ಟಿಕೋನವನ್ನು ಹೊಂದಿದ್ದಾರೆ. ದೌರ್ಬಲ್ಯ ಸಂಖ್ಯಾಶಾಸ್ತ್ರದಲ್ಲಿ 3 ನೇ ಸಂಖ್ಯೆಯ ಯುವ ಮತ್ತು ಮೇಲಿನ ಅನುಮಾನದ ಸ್ವಭಾವವು ಪ್ರಪಂಚದ ವಾಸ್ತವತೆಯ ಬಗ್ಗೆ ಬಹಳ ಅರಿವಿಲ್ಲದಂತೆ ಮಾಡುತ್ತದೆ. ಅವರು ಎಂದಿಗೂ ಯಾವುದನ್ನೂ ಅನುಮಾನಿಸುವುದಿಲ್ಲ ಮತ್ತು ಇತರರಿಂದ ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳುವ ಅತ್ಯಂತ ಮೃದುವಾದ ನಂಬಿಕೆಯ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಶೈನಿ-ಆಬ್ಜೆಕ್ಟ್ ಸಿಂಡ್ರೋಮ್ ಎಂದು ಕರೆಯುವ ರೋಗದಿಂದ ಬಳಲುತ್ತಿರುತ್ತಾರೆ, ಸುಂದರವಾದ ಯಾವುದಾದರೂ ಅವರ ಗಮನವನ್ನು ತೆಗೆದುಕೊಳ್ಳುತ್ತದೆ. ಅವರು ನೋಡುವ ಎಲ್ಲದರಿಂದ ಉತ್ಸುಕರಾಗಿರುತ್ತಾರೆರೆ ಮತ್ತು ಬೇರೆಡೆಗೆ ಗಮನವನ್ನು ಬದಲಾಯಿಸುವ ಮೊದಲು ಒಂದು ಕೇಂದ್ರೀಕೃತ ದಿಕ್ಕಿನಲ್ಲಿ ನೋಡಲು ಹೆಚ್ಚು ಸಮಯ ಕಳೆಯುವುದಿಲ್ಲ. ಸಂಖ್ಯೆ 3 ವ್ಯಕ್ತಿತ್ವವು ಸಾಮಾನ್ಯವಾಗಿ ಬಹಳ ಭೌತಿಕವಾಗಿರಬಹುದು. ಈ ಸಂಖ್ಯೆಯು ಬೆಳವಣಿಗೆಯ ಮೊದಲು ಸಂತೋಷವನ್ನು ನೀಡುತ್ತದೆ. ಆದ್ದರಿಂದ, ಅವರು ಆಂತರಿಕ ಪ್ರಾಮುಖ್ಯತೆಯ ವಿಷಯಗಳಿಗಿಂತ ಸ್ಪಷ್ಟವಾದ ವಿಷಯಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಆಳವಾಗಿ ಹೋಗುವುದು ಎಂದರೆ ಸಂಭಾವ್ಯ ನಕಾರಾತ್ಮಕತೆಗೆ ತೆರೆದುಕೊಳ್ಳುವುದು ಮತ್ತು ಅವರು ಹೆಚ್ಚಿನ ಅನುಭವವನ್ನು ಹೊಂದಿರದ ಭಾವನೆಗಳು ಮತ್ತು ಸನ್ನಿವೇಶಗಳಿಗೆ ಸಂಬಂಧಿಸಬೇಕಾಗುತ್ತದೆ. ಸಂಖ್ಯಾಶಾಸ್ತ್ರ ಸಂಖ್ಯೆ 3 ಕ್ಕೆ ಅದೃಷ್ಟದ ಬಣ್ಣ ಮತ್ತು ರತ್ನ ಸಂಖ್ಯಾಶಾಸ್ತ್ರದ ಸಂಖ್ಯೆ 3 ರ ಅಡಿಯಲ್ಲಿ ಜನಿಸಿದವರು ಸಮಸ್ಯೆಗಳನ್ನು ಪರಿಹರಿಸುವವರು ಎಂದು ಕರೆಯಲಾಗುತ್ತದೆ, ಆದ್ದರಿಂದ ಅವರ ಜೀವನವು ಅಡೆತಡೆಗಳಿಂದ ಕೂಡಿದ್ದರೂ ಸಹ, ಅವರು ತಮ್ಮ ಯುದ್ಧಗಳನ್ನು ಎದುರಿಸಬಹುದು. ಅವರು ತಮ್ಮ ಆಲೋಚನಾ ಪ್ರಕ್ರಿಯೆಯಲ್ಲಿ ನವೀಣರಾಗಿರುತ್ತಾರೆ ಮತ್ತು ತಮ್ಮ ಶಾಂತತೆಯನ್ನು ಕಳೆದುಕೊಳ್ಳದೆ ತ್ವರಿತವಾಗಿ ಪರಿಹಾರಗಳೊಂದಿಗೆ ಬರುತ್ತಾರೆ. ಅವರು ಪೆಟ್ಟಿಗೆಯ ಹೊರಗೆ ಯೋಚಿಸುತ್ತಾರೆ ಮತ್ತು ದೈನಂದಿನ ಸಮಸ್ಯೆಗಳಿಗೆ ವಿಶಿಷ್ಟವಾದ ವಿಧಾನವನ್ನು ಹೊಂದಿರುತ್ತಾರೆ. ಅವರ ಅದೃಷ್ಟದ ರತ್ನವೆಂದರೆ ಹಳದಿ ನೀಲಮಣಿ. ಅದೃಷ್ಟದ ಬಣ್ಣಗಳಿಗೆ ಸಂಬಂಧಿಸಿದಂತೆ, ಅವರು ಹಳದಿ ಮತ್ತು ಕಿತ್ತಳೆ ಬಣ್ಣದ ಹಸಿರು ಮತ್ತು ತಿಳಿ ಛಾಯೆಗಳಿಗೆ ಹೋಗಬೇಕು. ಸಂಖ್ಯಾಶಾಸ್ತ್ರ ಸಂಖ್ಯೆ 1 ಸಂಖ್ಯಾಶಾಸ್ತ್ರ ಸಂಖ್ಯೆ 2 ಸಂಖ್ಯಾಶಾಸ್ತ್ರ ಸಂಖ್ಯೆ 4 ಸಂಖ್ಯಾಶಾಸ್ತ್ರ ಸಂಖ್ಯೆ 5 ಸಂಖ್ಯಾಶಾಸ್ತ್ರ ಸಂಖ್ಯೆ 6 ಸಂಖ್ಯಾಶಾಸ್ತ್ರ ಸಂಖ್ಯೆ 7 ಸಂಖ್ಯಾಶಾಸ್ತ್ರ ಸಂಖ್ಯೆ 8 ಸಂಖ್ಯಾಶಾಸ್ತ್ರ ಸಂಖ್ಯೆ 9 ಆಸ್ಟ್ರೋಟಾಕ್ ಬಗ್ಗೆ ಆನ್‌ಲೈನ್ ಜ್ಯೋತಿಷ್ಯ ಭವಿಷ್ಯಕ್ಕಾಗಿ ಆಸ್ಟ್ರೋಟಾಕ್ ಅತ್ಯುತ್ತಮ ಜ್ಯೋತಿಷ್ಯ ವೆಬ್‌ಸೈಟ್ ಆಗಿದೆ. ಜ್ಯೋತಿಷಿಯೊಂದಿಗೆ ಕರೆಯಲ್ಲಿ ಮಾತನಾಡಿ ಮತ್ತು ಭಾರತದ ಅತ್ಯುತ್ತಮ ಜ್ಯೋತಿಷಿಗಳಿಂದ ಜ್ಯೋತಿಷ್ಯ ಜಾತಕ ಮುನ್ಸೂಚನೆಗಳ ಮೂಲಕ, ಭವಿಷ್ಯದ ಜೀವನವನ್ನು ನೋಡುವ ಮೂಲಕ, ನಿಮ್ಮ ಎಲ್ಲಾ ಚಿಂತೆಗಳಿಗೆ ಉತ್ತರಗಳನ್ನು ಪಡೆಯಿರಿ. ಕರೆ, ಚಾಟ್, ಪ್ರಶ್ನೆ ಅಥವಾ ವರದಿಯ ಮೂಲಕ ಮದುವೆ, ಪ್ರೇಮ ಜೀವನ, ವೃತ್ತಿ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಭವಿಷ್ಯದ ಮುನ್ನೋಟಗಳನ್ನು ಪಡೆಯಿರಿ. ರಾಶಿ ಭವಿಷ್ಯ 2022 ಉತ್ಸವ 2022 ಗ್ರಹಗಳ ಸಂಚಾರ 2022 ರಾಶಿ ಭವಿಷ್ಯ ಇಂದಿನ ರಾಶಿ ಭವಿಷ್ಯ ಇಂದು ಪ್ರೀತಿ ರಾಶಿ ಭವಿಷ್ಯ ನಿನ್ನೆ ರಾಶಿ ಭವಿಷ್ಯ ನಾಳೆ ರಾಶಿ ಭವಿಷ್ಯ ವಾರ ರಾಶಿ ಭವಿಷ್ಯ ಮಾಸಿಕ ರಾಶಿ ಭವಿಷ್ಯ ವಾರ್ಷಿಕ ರಾಶಿ ಭವಿಷ್ಯ ಶುಭ ಮುಹೂರ್ತ 2022 ವಿವಾಹ ಮುಹೂರ್ತ 2022 ಅನ್ನಪ್ರಾಶನ ಮುಹೂರ್ತ 2022 ಗೃಹ ಪ್ರವೇಶ ಮುಹೂರ್ತ 2022 ನಾಮಕರಣ ಮುಹೂರ್ತ 2022 ಮುಡಿ ಮುಹೂರ್ತ 2022 ಶುಭ ಮುಹೂರ್ತ 2023 ಅನ್ನಪ್ರಾಶನ ಮುಹೂರ್ತ 2023 ನಾಮಕರಣ ಮುಹೂರ್ತ 2023 ಕಾರು/ಬೈಕು ಮುಹೂರ್ತ 2023 ಮದುವೆ ಮುಹೂರ್ತ 2023 Gold Buying ಮುಹೂರ್ತ 2023 Bhoomi Pujan ಮುಹೂರ್ತ 2023 ಗೃಹ ಪ್ರವೇಶ ಮುಹೂರ್ತ 2023 ಮುಡಿ ಮುಹೂರ್ತ 2023 ಕಾರ್ಪೊರೇಟ್ ಮಾಹಿತಿ ಮರುಪಾವತಿ ಮತ್ತು ರದ್ದತಿ ನೀತಿ ನಿಯಮ ಮತ್ತು ಶರತ್ತುಗಳುಗೌಪ್ಯತಾ ನೀತಿಹಕ್ಕು ನಿರಾಕರಣೆನಮ್ಮ ಬಗ್ಗೆಬೆಲೆ ನೀತಿ ಕಾರ್ಪೊರೇಟ್ ಮಾಹಿತಿ ಜ್ಯೋತಿಷಿ ಲಾಗಿನ್ ಜ್ಯೋತಿಷಿ ನೋಂದಣಿ ಪ್ರಮುಖ ಲಿಂಕ್‌ಗಳು ಜ್ಯೋತಿಷ್ಯ 2022ಕುಂಡಲಿ ಓದುವುದು ಹೇಗೆಉಚಿತ ಜಾತಕಜಾತಕ ಹೊಂದಾಣಿಕೆ ಜೊತೆ ಚಾಟ್ ಜ್ಯೋತಿಷಿಗಳು ಜ್ಯೋತಿಷಿಗಳೊಂದಿಗೆ ಮಾತನಾಡಿ ಆಸ್ಟ್ರೋಟಾಕ್ ವಿಮರ್ಶೆಗಳು ಇಂದಿನ ಪಂಚಾಂಗ ಜ್ಯೋತಿಷ್ಯ ಯೋಗ ಕಾಳಸರ್ಪ ದೋಷಮಕ್ಕಳ ಜ್ಯೋತಿಷ್ಯಆರೋಹಣ ಚಿಹ್ನೆ ರತ್ನದಕಲ್ಲು ನಕ್ಷತ್ರ ನಕ್ಷತ್ರಪುಂಜಗಳುಸಂಖ್ಯಾಶಾಸ್ತ್ರಮಂತ್ರಗಳನ್ನು ಉದ್ಯೋಗ ಪ್ರಚಾರಕ್ಕಾಗಿ ಜ್ಯೋತಿಷ್ಯ ಪರಿಹಾರಗಳುಆಸ್ಟ್ರೋಮಾಲ್ ಪ್ರಮುಖ ಲಿಂಕ್‌ಗಳು ಬ್ಲಾಗ್ಟ್ಯಾರೋಸಹಯೋಗಗಳುವಾಸ್ತು ಶಾಸ್ತ್ರ ಸೂರ್ಯ ಗ್ರಹಣ 2023 ಚಂದ್ರ ಗ್ರಹಣ 2023 ಹಬ್ಬದ ಕ್ಯಾಲೆಂಡರ್ 2023ನಮ್ಮನ್ನು ಸಂಪರ್ಕಿಸಿ ಚಾಟ್ ಬೆಂಬಲದಲ್ಲಿ ನಾವು 24x7 ಲಭ್ಯವಿದ್ದೇವೆ, ಚಾಟ್ ಆರಂಭಿಸಲು ಕ್ಲಿಕ್ ಮಾಡಿ ಇಮೇಲ್ ಐಡಿ: contact@astrotalk.com
ನೀ ನಡೆವ ದಾರಿಯಲ್ಲಿ- ಡಾ. ಎಂ. ವೆಂಕಟಸ್ವಾಮಿ ಅವರ ಕಾದಂಬರಿ. ಕೃತಿಗೆ ಬೆನ್ನುಡಿ ಬರೆದ ಕವಿ ಹಾಗೂ ಸಾಹಿತಿ ಜರಗನಹಳ್ಳಿ ಶಿವಶಂಕರ್ `ಈಗಾಗಲೇ `ಮೂಡಲ ಮರೆಯಲ್ಲಿ', `ಚಂದ್ರನಿಲ್ಲದ ಆಕಾಶ' ಮತ್ತು `ರೂಪರಾಶಿಯರು' ಕಾದಂಬರಿಗಳನ್ನು ವಾಸ್ತವ ಸಂಗತಿಗಳಿಗೆ ತೀರಾ ಹತ್ತಿರವಾದ ಪಾತ್ರಗಳಲ್ಲಿ ಸಾಮಾಜಿಕ ಮೌಲ್ಯಗಳೊಂದಿಗೆ ನೈಜವಾಗಿ ಚಿತ್ರಿಸಿದ್ದಾರೆ. ಪ್ರಸ್ತುತ 'ನೀ ನಡೆವ ದಾರಿಯಲ್ಲಿ' ಕಾದಂಬರಿ ಒಂದು ಸುಂದರ ಸಾಮಾಜಿಕ ಕಾದಂಬರಿ. ಇಲ್ಲಿನ ಪಾತ್ರಗಳು ನಮ್ಮ ನಡುವಿನ ಆದರ್ಶ ವಿದ್ಯಾರ್ಥಿಗಳ ಕತೆಯಾಗಿದೆ. ಮನ ಕಲುಕುವ ಘಟನೆಗಳೊಂದಿಗೆ ಕೂಡಿರುವ ಈ ಕಾದಂಬರಿ ಒಂದು ಸುಂದರ ಓಟವಾಗಿದೆ' ಎಂದು ಪ್ರಶಂಸಿಸಿದ್ದಾರೆ. `ನೀ ನಡೆವ ಹಾದಿಯಲ್ಲಿ' ಕಾದಂಬರಿ ಉದಯವಾಣಿ ದಿನ ಪತ್ರಿಕೆಯಲ್ಲಿ 2003ರಲ್ಲಿ 73 ಕಂತುಗಳಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಪ್ರಸ್ತುತ ಎಂಜಿನಿಯರಿಂಗ್, ವೈದ್ಯಕೀಯ, ಡಿಗ್ರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಿಂದೆಂದಿಗಿಂತ ಇಂದು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಅವರ ಭವಿಷ್ಯ ಡೋಲಾಯಮಾನವಾಗಿದೆ. ಜಾಗತೀಕರಣವೆಂಬ ಕತ್ತಿ ಅವರಿಗೆ ಯೋಚಿಸಲು ಸಹ ಸಮಯ ಕೊಡದೆ ಒಂದು ಕಡೆ ಪ್ರಿಯಾಶೀಲತೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಷ್ಕ್ರಿಯ ಗೊಳಿಸಿದ್ದರೆ ಇನ್ನೊಂದು ಕಡೆ ಸ್ಪರ್ಧಾತ್ಮಕ ಪ್ರಪಂಚ ನಿರಂತರವಾಗಿ ಅವರ ಯೋಚನೆಗಳನ್ನು ಕ್ಷಣಕ್ಷಣಕ್ಕೂ ಬದಲಿಸುತ್ತಾ ಹೋಗುತ್ತದೆ. ಒಬ್ಬ ವಿದ್ಯಾರ್ಥಿಯ ಬೌದ್ಧಿಕತೆ ಅಥವ ಜ್ಞಾನವೆನ್ನುವುದು ಈಗ ಒಂದು ಕಂಪನಿಯಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಳ್ಳುವುದು ಅಥವ ಹೆಚ್ಚು ಹಣವನ್ನು ಸಂಪಾದಿಸುವುದು ಮಾತ್ರ ಎನ್ನುವ ಮಟ್ಟಕ್ಕೆ ತಲುಪಿದೆ. ಇದೆಲ್ಲದರ ನಡುವೆ ಇಂದಿನ ವಿದ್ಯಾರ್ಥಿ ಜೀವನ ಹೇಗಿದೆ? ಅವರ ಆದರ್ಶ ಆಸೆ-ಅಕಾಂಕ್ಷೆಗಳು, ದುಗುಡ-ದುಮ್ಮಾನ, ಸುಖ-ದುಃಖ, ಪ್ರೀತಿ-ಪ್ರೇಮ, ಕುಡಿತ-ಜೂಜು, ಅವರ ಚೇಷ್ಟೆಗಳು ಹೀಗೆ... ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏನೆಲ್ಲ ಯೋಚಿಸುತ್ತಾರೆ? ಅವರ ನಡುವಿನ ಸಂಬಂಧಗಳು ಹೇಗಿರುತ್ತವೆ? ಎನ್ನುವುದರ ಬಗ್ಗೆ ಈ ಕಾದಂಬರಿಯ ಕತೆಯನ್ನು ಹೆಣೆಯಲಾಗಿದೆ. About the Author ಎಂ. ವೆಂಕಟಸ್ವಾಮಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿ’ವಾದ ಸದ್ಯಕ್ಕೆ ಈಗ ಒಂದು ಹಂತಕ್ಕೆ ಬಂದು ತಲುಪಿದೆ ಮೈಸೂರಿನ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೆಯರ್ ಮೇಲೆ ಹ’ಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಗಂ’ಭೀರ ಆ’ರೋಪ ಮಾಡಿದ ಬಳಿಕ ಈ ಪ್ರಕರಣ ಟ್ವಿಸ್ಟ್ ಮತ್ತು ಟ್ರಾನ್ ಗಳನ್ನ ಪಡೆದುಕೊಂಡು ದೊಡ್ಡ ಪ್ರಮಾಣದ ಚರ್ಚೆಗೆ ದಾರಿ ಮಾಡಿಕೊಟ್ಟಿತು..‌ ಇದೀಗ ನಟ ಜಗ್ಗೇಶ್ ಅವರಿಗೆ ಅಭಿಮಾನಿ ಒಬ್ಬರು ನೀವು ಡಿ ಬಾಸ್ ಅವರ ಜೊತೆ ಕೈಜೋಡಿಸಿ ಎಂದು ಕೇಳಿದ್ರು, ಜಗ್ಗೇಶ್ ಅವರು ಇದಕ್ಕೆ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ? ನೋಡೋಣ ಬನ್ನಿ.. ಏನೆ ಆದರೂ ದರ್ಶನ್ ನಟ ದರ್ಶನ್ ಅವರ ಪರ ನಾವಿದೇವೆ ಯಾರಿಂದಲೂ Advertisements Advertisements ಏನೂ ಮಾಡಿಕೊಳ್ಳಲು ಸಾದ್ಯವಿಲ್ಲ ಎಂದು ಅನೇಕ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.. ಈ ವಿಷಯದ ಬಗ್ಗೆ ನವರಸ ನಾಯಕ ನ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ದರ್ಶನ್ ವಿ’ವಾದದಲ್ಲಿ ಜಗ್ಗೇಶ್ ಅವರ ಹೆಸರು ಕೇಳಿ ಬಂದಿರುವ ಬಗ್ಗೆ ಅಸಮಾಧಾನವನ್ನ ಹೊರ ಹಾಕಿದರು ಇದೀಗ ದರ್ಶನ್ ಅವರ ಬಗ್ಗೆ ನವರಸ ಜಗ್ಗೇಶ್ ಮತ್ತೆ ಪ್ರತಿಕ್ರಿಯೆ ನೀಡಿದ್ದು ದರ್ಶನ್ ಅಭಿಮಾನಿ ಒಬ್ಬ ಜಗ್ಗೇಶ್ ಅವರಿಗ ದರ್ಶನ್ ಜೊತೆ ಕೈ ಜೋಡಿಸಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿರುವುದಕ್ಕೆ ಜಗ್ಗೇಶ್ ಅವರು ಪ್ರತಿಕ್ರಿಯೆಯನ್ನ ನೀಡಿದ್ದಾರೆ. ಹೌದು ಜಗ್ಗೇಶ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದಿದ್ದ ಜಗ್ಗೇಶ್ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಬಹಿರಂಗ ಪಡಿಸಿದರು.. ಈ ವೇಳೆ ದರ್ಶನ್ ಅಭಿಮಾನಿ ಜಗ್ಗೇಶ್ ಅವರ ಬಳಿ ಮನವಿ ಮಾಡಿದ್ದಾರೆ ಜಗ್ಗೇಶ್ ಅವರ ಲೈವ್ ವಿಡಿಯೋದಲ್ಲಿ ಕಾಮೆಂಟ್ ಮಾಡುವ ಮೂಲಕ ದರ್ಶನ್ ಅಭಿಮಾನಿ ಮನವಿ ಮಾಡಿ ದಯವಿಟ್ಟು ಡಿ ಬಾಸ್ ಪರ ಹೇಳಿಕೆ ಕೊಡಿ ನಿಮ್ಮ ನಡುವೆ ಮಾನಸ್ಥಾಪ ಎಷ್ಟೇ ಇದ್ದರೂ ಅಭಿಮಾನಿಗಳ ಸಲುವಾಗಿ ಡಿ ಬಾಸ್ ಜೊತೆಗೆ ಕೈಜೋಡಿಸಿ ಎಂದು ನಟ ಜಗ್ಗೇಶ್ ಅವರಲ್ಲಿ ಕೇಳಿಕೊಂಡಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್ ನನಗು ದರ್ಶನಗು ಯಾವುದೇ ಮನಸ್ಥಾಪ ಇಲ್ಲ ಅತನನ್ನ ಕಾಲ ಬಂದು ಎಂದು ಹೇಳಿ ಪ್ರತಿಕ್ರಿಯೆಯನ್ನ ನೀಡಿದ್ದಾರೆ.. Post navigation 5 ಬಾರಿ ಚುನಾವಣೆಯಲ್ಲಿ MLA ಆಗಿ ಗೆದ್ದಿದ್ದ ಈ ವ್ಯಕ್ತಿ ಈಗ ಏನು ಮಾಡ್ತಿದ್ದಾರೆ ಗೊತ್ತಾ? ನಿಜಕ್ಕೂ ಈ ವ್ಯಕ್ತಿಯನ್ನು ನೋಡಿ ರಾಜಕೀಯ ನಾಯಕರು ಬುದ್ದಿ ಕಲಿಬೇಕು.. ಕನ್ನಡದ ಖ್ಯಾತ ನಟ ಅನಂತ್ ನಾಗ್ ಅವರ ಮಗಳು ಅಳಿಯ ಈಗ ಹೇಗಿದ್ದಾರೆ ಗೊತ್ತಾ! Related Posts ಸಾ’ಯುವ ಕೊನೆಯ ಕ್ಷಣದಲ್ಲಿ ಈ‌ ಡಾಕ್ಟರ್ ಹೇಳಿದ ಮಾತುಗಳೇನ್ನು ಗೊತ್ತಾ? ನಿಜಕ್ಕೂ ಈ ಡಾಕ್ಟರ್ ಸಾವು ಒಂದು ದು’ರಂತ ಅಂತಾನೇ ಹೇಳಬಹುದು.. May 1, 2021 May 2, 2021 Bangalore TV ಅಜ್ಜನ ಹಳೆ ಬಟ್ಟೆ ನೋಡಿ ಹೋಟೆಲ್ ಒಳಗೆ ಬಿಡಲಿಲ್ಲ ಈ ವಾಚ್ ಮ್ಯಾನ್.! ಅಷ್ಟಕ್ಕೂ ಈ ಹೋಟೆಲ್ ಒಳಗಡೆ ನಡೆದಿದ್ದೇನು ಗೊತ್ತಾ .. November 14, 2020 January 22, 2022 Bangalore TV LPG ಗ್ಯಾಸ್ ಸಿಲಿಂಡರ್ ಇದ್ದವರಿಗೆ ಗುಡ್ ನ್ಯೂಸ್! ಯಾರ್ಯಾರು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ ಇದನ್ನ ಪುರ್ತಿಯಾಗಿ ನೋಡಿ..