text
stringlengths
468
101k
ಇಪ್ಪತ್ತೆರೆಡು ವರ್ಷದ ವೃತ್ತಿ ಬದುಕಿನಲ್ಲಿ ಮಧುಬಾಲ ನಟಿಸಿದ ಚಿತ್ರಗಳ ಸಂಖ್ಯೆ ಎಪ್ಪತ್ತೆರೆಡು. ಆಕೆ ಬದುಕಿದ್ದು ಕೇವಲ ಮೂವತ್ತಾರು ವರ್ಷ. ಎರಡು ದಶಕಗಳ ಕಾಲ ಆಕೆ ಹಿಂದಿ ಚಿತ್ರರಂಗವನ್ನು ಆಳಿದರು. ಹಲವು ಬಗೆಯ ವಿದ್ಯಮಾನ ತುಂಬಿದ ನಟಿಯ ಬದುಕು ಎಂದಿಗೂ ಸೆಳೆಯುವ ಕಥನ. ಲೇಖಕ ರಮೇಶ ಅರೋಲಿ ಅವರು ‘ಮಧುಬಾಲ’ ಜೀವನ ಕಥನ ರಚಿಸಿದ್ದಾರೆ. ಈ ಕೃತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕ ಡಾ.ಕೆ.ಪುಟ್ಟಸ್ವಾಮಿ ಅವರ ಮುನ್ನುಡಿಯಿದೆ. ಮತ್ತೊಬ್ಬ ಲೇಖಕ ಟಿ.ಎಸ್‌.ಗೊರವರ ಅವರು ತಮ್ಮ ‘ಸಂಗಾತ’ ಪ್ರಕಾಶನದಿಂದ ಪುಸ್ತಕ ಪ್ರಕಟಿಸಿದ್ದು, ನಾಳೆ ಲೋಕಾರ್ಪಣೆಗೊಳ್ಳುತ್ತಿದೆ. ಈ ಕೃತಿಯಲ್ಲಿನ ಆಯ್ದ ಭಾಗ ಇಲ್ಲಿದೆ. ಬೆಳ್ಳಿಪರದೆಯ ಮೇಲೆ ಅಮರ ಪ್ರೇಮಿಗಳಾಗಿ ಮಿಂಚಿದ ಅನೇಕ ಸಿನಿಮಾ ನಟ-ನಟಿಯರಲ್ಲಿ, ಕೆಲವರಾದರೂ ನಿಜ ಜೀವನದಲ್ಲೂ ಒಟ್ಟಿಗೆ ಬಾಳುವ ಅದೃಷ್ಟ ಪಡೆದಿದ್ದರು. ಸಂಬಂಧ ಮುರಿದು ಬಿದ್ದರೂ ಅದನ್ನು ಗೌರವದಿಂದ ಕಾಣುವ, ಆ ಆಪ್ತತೆಯನ್ನು ಕಾಯ್ದುಕೊಳ್ಳುವ ವಾತಾವರಣಯಿತ್ತು ಆಗ. ತಮ್ಮ ಆರಂಭದ ಸಿನಿಮಾ ಪಾತ್ರಗಳ ಮೂಲಕವೇ ರೋಮ್ಯಾಂಟಿಕ್ ಜೋಡಿಗಳು ಎಂದು ಕರೆಸಿಕೊಂಡ ಮೋತಿಲಾಲ್ ಮತ್ತು ಶೋಬನಾ ಸಮರ್ಥ, ಕಾಮಿನಿ ಕೌಶಾಲ್ ಮತ್ತು ದಿಲೀಪ್ ಕುಮಾರ್ (ನಂತರ ದೂರವಾಗುತ್ತಾರೆ), ರಾಜ್ ಕಪೂರ್ ಮತ್ತು ನರ್ಗಿಸ್, ದೇವ್ ಆನಂದ್-ಸುರೈಯಾ, ಗುರುದತ್-ವಹೀದಾ ರೆಹಮಾನ್, ಅಶೋಕ್ ಕುಮಾರ್-ನಳಿನಿ ಜಯವಂತ್ ಹಾಗೂ ಮಧುಬಾಲ ಮತ್ತು ದಿಲೀಪ್ ಕುಮಾರ್ ಅಭಿಮಾನಿಗಳ ಪಾಲಿಗೆ ಆದರ್ಶ ಪ್ರೇಮಿಗಳಂತೆ ಕಾಣುತ್ತಿದ್ದರು. ಬದುಕಲ್ಲಿ ಒಂದಾಗದ ಜೋಡಿಗಳು, ಅವರನ್ನು ಕಾಣಲು ನಾನಾ ನೆಪ ಹುಡುಕಿ ಹೊರಡುತಿದ್ದರು. ಒಬ್ಬ ದಿಲೀಪ್ ಕುಮಾರ್ ಮದ್ರಾಸಿನಲ್ಲಿ ಶೂಟಿಂಗ್ ಬಿಟ್ಟು ಈದ್ ಆಚರಿಸಲು ನೇರ ಬೊಂಬಾಯಿನ ಮಧುಬಾಲಳ ಹತ್ತಿರ ಬರುವಂತೆ. ತೆರೆಯ ಮೇಲಿನ ಆಳವಾದ ಆ ಪ್ರೀತಿ, ಭಾವತೀವ್ರತೆ, ನಟನೆಯ ಉತ್ತುಂಗವನ್ನ “ಆವಾರ”, ” ತರಾನ” “ಚೌದವಿನ್ ಕಾ ಚಾಂದ್”, “ಮುಘಲ್-ಎ-ಅಜಾಮ್” ಚಿತ್ರಗಳಲ್ಲಿ ಕಾಣಬಹುದು. ಮಧುಬಾಲ-ದಿಲೀಪ್ ಕುಮಾರ್ ಮತ್ತು ದೇವ್ ಆನಂದ್-ಸುರೈಯಾ ರ ಜೋಡಿ ಹೊರೆತು ಬೇರೆಲ್ಲ ನಟ-ನಟಿಯರಿಗೆ ಅದಾಗಲೇ ಮದುವೆ ಆಗಿದ್ದರೂ, ಮತ್ತವರ ಪ್ರೇಮ ಸಿನಿಜಗತ್ತಿನ ಬಹುತೇಕರಿಗೆ ಗೊತ್ತಿದ್ದರೂ, ಮನೆ ಒಡೆದ ಪ್ರಕರಣಗಳು ಕಡಿಮೆ. ಒಂದು ರಾಜ್ ಕಪೂರ್-ನರ್ಗಿಸ್ ಸಂಸಾರ ಬಿಟ್ಟರೆ. “ಮದರ್ ಇಂಡಿಯಾ” ಸಿನಿಮಾದಲ್ಲಿ ನಟಿಸುವಾಗಲೇ ನರ್ಗಿಸ್ ರಾಜ್‍ಕಪೂರ್ ಬದುಕಿನಿಂದ, ಆರ್,ಕೆ, ಸ್ಟುಡಿಯೋಸ್ ನಿಂದ ಹೊರ ಬಿದ್ದು, ಸುನೀಲ್ ದತ್ತರನ್ನು ಮದುವೆ ಆಗಿ, ಮತ್ತೆಂದೂ ರಾಜ್‍ಕಪೂರ್‍ರತ್ತ ತಿರುಗಿ ನೋಡಲಿಲ್ಲ. ಕಾಮಿನಿ ಕೌಶಾಲ್ ಮತ್ತು ದಿಲೀಪ್ ಕುಮಾರ್ ರ ನಡುವಿನ ಸಂಬಂಧ ತುಂಬಾ ಗಂಭಿರವಾಗಿತ್ತು ಆದರೆ, ತನ್ನ ಸಹೋದರಿ ತೀರಿಕೊಂಡ ಮೇಲೆ ಆಕೆಯ ಗಂಡನನ್ನು ವರಿಸುವ ಅನಿವಾರ್ಯ ಕಾರಣ ಅದು ಸಂಪೂರ್ಣ ಮುರಿದು ಬಿತ್ತು. ಇನ್ನು ಗುರುದತ್ ಬದುಕಲ್ಲಿ ಅದಾಗಲೇ ಗಾಯಕಿ ಗೀತಾರನ್ನು ಮದುವೆ ಆಗಿದ್ದರೂ, ವಹೀದಾ ರೆಹಮನ್ ರ ಮೇಲಿನ ಆತನ ಪ್ರೀತಿ ಕಡಿಮೆ ಆಗದೆ, ಸಂಬಂಧಗಳನ್ನು ನಿಭಾಯಿಸಲು ಆಗದೆ, ಒಬ್ಬ ಪ್ರತಿಭಾವಂತ, ಸೂಕ್ಷ್ಮ ಮನಸಿನ ದತ್ ಆತ್ಮಹತ್ಯೆಗೆ ಶರಣಾದರು. ಅಷ್ಟೇಕೆ ನಮ್ಮ ಕನ್ನಡ ಚಿತ್ರ ರಂಗದಲ್ಲಿಯೇ ಎಂತೆಂಥ ದುರಂತ ನಾಯಕಿಯರ ಕತೆ ಕಣ್ಣೆದುರಿದೆ ಕಲ್ಪನಾ, ಮಂಜುಳ, ಆರತಿ…ಹೀಗೆ ಪಟ್ಟಿ ಬೆಳೆಯುತ್ತದೆ. ಮತ್ತೆ ಮತ್ತೆ ಪತ್ರಕರ್ತರು ಕೇಳುತಿದ್ದ ಮಧುಬಾಲ ಮತ್ತು ದಿಲೀಪ್ ಕುಮಾರ್ ರ ಪ್ರೀತಿಯ ಕುರಿತಾದ ಪ್ರಶ್ನೆಗೆ ತಮ್ಮ ಆತ್ಮಕತೆಯಲ್ಲಿ ಸ್ವತಃ ಈ ಕುರಿತು ಸ್ಪಷ್ಟವಾಗಿ ಬರೆಯದಿದ್ದರೂ ಆ ಕುರಿತು ಒಲವು ಇದ್ದ ಬಗ್ಗೆ ಒಪ್ಪಿಕೊಳ್ಳುತ್ತಾರೆ. “ಅದೆಲ್ಲ (ಮಧುಬಾಲ ಜೊತೆಗಿನ ಪ್ರೀತಿ) ನನಗಾಯ್ತಾ? ದಿನ ಪತ್ರಿಕೆಗಳು, ವಾರಪತ್ರಿಕೆಗಳು ಬರೆದ ಹಾಗೇಯೆ ನನಗೆ ಮಧುಬಾಲ ಮೇಲೆ ಪ್ರೀತಿ ಆಗಿತ್ತಾ? ಆ ಕಾಲದ ಒಂದು ಹೊತ್ತಲ್ಲಿ ಒಬ್ಬ ಸಹ-ನಟನಾಗಿ, ವ್ಯಕ್ತಿಯಾಗಿ ಆಕೆಯ ಸೌಂದರ್ಯಕ್ಕೆ ಆಕರ್ಷಿತನಾಗಿದ್ದು, ಆಕೆಯ ಬಗ್ಗೆ ಮೆಚ್ಚುಗೆ ಇದ್ದದ್ದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ‘ತರಾನ’ ಸಿನಿಮಾ ಯಶಸ್ಸಿನ ಬಳಿಕ, ವೀಕ್ಷಕರು, ಅಭಿಮಾನಿಗಳು ನಮ್ಮಿಬ್ಬರ ಜೋಡಿಯನ್ನು ಬೆಳ್ಳೆಪರದೆಯ ಮೇಲೆ ನೋಡಿ “ಇವರದು ಸರಿಯಾದ ಜೋಡಿ” ಅಂದುಕೊಂಡ ಕಾರಣ ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಮತ್ತು ಆತ್ಮೀಯತೆಯಿತ್ತು. ಆಕೆಯ ಜೀವನೋತ್ಸಾಹ ಮತ್ತು ಉಲ್ಲಾಸಿತನ ನನ್ನನ್ನು ನಾಚಿಕೆ ಸ್ವಭಾವದಿಂದ ಆರಾಮಾಗಿ ಹೊರಗೆಳೆದು ಬಿಡಬಲ್ಲ ಹೆಣ್ಣಾಗಿದ್ದಳು. ಬೆಳೆಸಿಕೊಂಡ ಖಾಲಿತನವನ್ನು ತನ್ನ ಲವಲವಿಕೆಯಿಂದ ಅನಾಯಾಸವಾಗಿ ತುಂಬಿ, ಮಾಯ ಬೇಕಾದ ಗಾಯಕ್ಕೆ ಕಾಲದ ಮದ್ದಾಗಿ ನನಗೆ ಗೋಚರಿಸಿದ್ದಳು” (2014) ಯಾವಾಗ ತನ್ನ ಮತ್ತು ದಿಲೀಪ್ ಕುಮಾರ್ ರ ಮದುವೆ ಆಗುವುದೇ ಇಲ್ಲ ಅಂತ ಖಚಿತವಾಯಿತೊ, ಆಗ ಮಧುಬಾಲ ಕಿಶೋರ್ ಕುಮಾರ್ ರನ್ನು ಮದುವೆ ಆಗಲು ನಿರ್ಧರಿಸಿಬಿಟ್ಟಳು. ಆಗ ದಿಲೀಪ್ ಕುಮಾರ್ ಸಹ ಸೈರಾ ಬಾನು ಅವರನ್ನು ವರಿಸಿದರು. ಎರಡೂ ಅನಿರೀಕ್ಷಿತ ಬಂಧಗಳು. ಅವರಿಬ್ಬರ ಬದುಕಲ್ಲಿ ಅಗಾಧ ಪ್ರೇಮವಿತ್ತು, ಮುನಿಸಿತ್ತು, ಅಳುವಿತ್ತು, ವಿರಹಯಿತ್ತು, ಕೋರ್ಟ್ ಕೇಸುಗಳಾಗಿ ಇಬ್ಬರು ಕೋರ್ಟ್ ಮೆಟ್ಟಿಲು ಹತ್ತಿದರು, ಇಬ್ಬರೂ ಪಠಾಣರಾಗಿದ್ದರು, ಸಮಖ್ಯಾತಿ, ಸ್ಥಾನ ಹೊಂದಿದ್ದರು, ಒಂದು ಸಿನಿಮಾ ಕತೆಗೆ ಬೇಕಾದ ಎಲ್ಲಾ ಅನುಭವಗಳು ಅವರ ಬದುಕಲ್ಲಿ ಘಟಿಸಿಬಿಟ್ಟಿದ್ದವು. ಆದರೆ ಅವರೆಂದೂ ಕೂಡಿ ಬದುಕುವ ಘಳಿಗೆ ಬರಲೇ ಇಲ್ಲ…ಆ ಬಯಕೆಯ ಹೆಗ್ಗುರುತು ಅವರಿಬ್ಬರ ಬದುಕಿನ ಮೇಲೆ ಸ್ಪಷ್ಟವಾಗಿ ಅಚ್ಚೊತ್ತಿದ್ದವು. ಬಹುಶಃ ಮಧುಬಾಲಳ ಹೃದಯ ಇದೆಲ್ಲವನ್ನು ತನ್ನೊಳಗೆ ಇಳಿಸಿಕೊಂಡು, ಇನ್ನೆಷ್ಟೂ ಸಹಿಸದೆ ಆಕೆಯನ್ನು ಜೀವಂತ ಹಿಂಡಿಬಿಟ್ಟಿತು. ಒಂದು ವದಂತಿಗೂ ಸಾಮಾಜಿಕ ಹಿನ್ನೆಲೆ ಇರುತ್ತದೆ. ಕಾಲದ ಸನ್ನಿವೇಶಗಳು ವದಂತಿಗಳನ್ನು ಹುಟ್ಟು ಹಾಕುತ್ತವೆ. ಅವುಗಳ ಸೃಷ್ಠಿ ಹಿಂದೆ ಕೆಲವರಿಗಾದರೂ ಸಂತೋಷವೊ ಅಥವಾ ವಿಕೃತ-ಸಂತೋಷವೋ, ಲಾಭಗಳ ಲೆಕ್ಕಾಚಾರವೋ ಇದ್ದೇ ಇರುತ್ತದೆ. ಅದು ಖ್ಯಾತನಾಮರ ಬಗ್ಗೆ ಹಬ್ಬುವ ವದಂತಿಗಳಿಗೆ ಕಾಲು ತುಸು ಉದ್ಧವೆ ಇರುತ್ತವೆ. ಅವು ಸಂಚರಿಸುವ, ಹಬ್ಬುವ ವೇಗ ಸಹ ಹೆಚ್ಚಿರುತ್ತದೆ. ಇಂಥವೇ ವದಂತಿಗಳು ಮಧುಬಾಲಳ ಪ್ರೀತಿಯ ಬಗ್ಗೆ ಚಾಲ್ತಿಯಲ್ಲಿದ್ದವು. ಹೇಳಿ ಕೇಳಿ ಚಿತ್ರನಟಿ, ಅದೂ ಚೆಲುವೆ, ಇನ್ನು ಆಕೆಯ ಜೊತೆ ನಟಿಸಿದ ನಟರೊಂದಿಗೆ, ಆಕೆಯ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕರ ಜೊತೆ ನಂಟು ಬೆಸೆದ, ಅವರ ನಡುವೆ ಸಂಬಂಧ ಕಲ್ಪಿಸಿ ಕಿವಿಯಿಂದ ಕಿವಿಗೆ ವರ್ಗಾಯಿಸಿದ ಮಾತುಗಳಿಗೇನು ಕಡಿಮೆ ಇದ್ದಿಲ್ಲ. ಇದರಲ್ಲಿ ಕೆಲವು ಸತ್ಯವೂ ಆಗಿದ್ದವು, ಮತ್ತು ಕೆಲವು ಬರಿ ಕಿವಿಮಾತು ಆಗಿದ್ದವು. ಆಕೆ ತಾನು ಮನಸು ಕೊಟ್ಟವರಿಂದಲೂ ದೂರವಾಗಿ, ವರಿಸಿದಾತನಿಂದಲೂ ದೂರವಾಗಿ ಅನುಭವಿಸಿದ ನೋವು ಮಾತ್ರ ಕೊನೆಯವರೆಗೂ ಏಕಾಂಗಿಯಾಗಿ ಉಂಡು, ಇನ್ನೊಬ್ಬರ ಜೊತೆ ಹಂಚಿಕೊಳ್ಳದಾದಳು. ಸಿನಿಮಾ ರಂಗದಲ್ಲಿ ಮಧುಬಾಲ ‘ಪ್ರಿಯಕರರ’ ಹೆಸರು ತಳಕು ಹಾಕಲಾಗಿತ್ತು. ಅವುಗಳಲ್ಲಿ ಮೂರು ಹೆಸರಾದರು ಆಕೆಯ ಮನದಲ್ಲಿ ಇದ್ದವು ಎಂಬುದು ಸುಳ್ಳಲ್ಲ. ಆದರೆ, ದಿಲೀಪ್ ಕುಮಾರ್ ಮಧುಬಾಲ ಜೊಗೆ ನಟಿಸುವಾಗ, ರೊಮ್ಯಾಂಟಿಕ್ ಸೀನ್ ದೃಶ್ಯಗಳಲ್ಲಿ ಅದೆಷ್ಟು ತನ್ಮಯತೆಯಿಂದ ನಟಿಸುತ್ತಿದ್ದನೆಂದರೆ, ಆತ ನಟಿಸಿದಂತೆ ಇರದೆ, ನಿಜ ಜೀವನದಲ್ಲಿ ಮಧುಬಾಲಳೆದುರು ತನ್ನ ಒಲವನ್ನು ವ್ಯಕ್ತಪಡಿಸಿದಂತೆ ಇರುವುದನ್ನು ಚಿತ್ರತಂಡ, ನಿರ್ದೇಶಕ, ಸ್ವತಃ ಮಧುಬಾಲಳ ಅನುಭವಕ್ಕೆ ಬಂದಿದೆ. ಆ ಕಣ್ಣುಗಳಲ್ಲಿ ವಿವರಣೆಗೆ ಸಿಗದ ಮಿಂಚೊಂದು ಹಾದು ಹೋಗುತಿತ್ತು. ಆತನ ಎದೆ ಬಡಿತದ ಸದ್ದು ಮಧುಬಾಲಗೆ ಆತ ಕೇವಲ ಸಿನಿಮಾದಲ್ಲಿ ಆಕೆಯನ್ನು ಬಯಸುತ್ತಿಲ್ಲ, ಬದಲಾಗಿ ಬದುಕಲ್ಲಿ ತನ್ನನ್ನು ಕೋರುತ್ತಿದ್ದಾನೆ ಎಂಬುದು ಆಕೆಗೆ ಖಾತರಿ ಆಗಿತ್ತು.ಕಿಶೋರ್ ಕುಮಾರ್ ರನ್ನು ವರಿಸುವ ಮೊದಲು ಮಧುಬಾಲಳ ಹೆಸರಿನೊಂದಿಗೆ ಪ್ರೇಮ ದ ನೆಪದಲ್ಲಿ ಥಳಕು ಹಾಕಿಕೊಂಡಿದ್ದ ಹೆಸರುಗಳಲ್ಲಿ ಖ್ಯಾತನಾಮರು ಇದ್ದರು. ಆಕೆ ಅನಾರ್ಕಲಿಯಾಗಿ ನಟಿಸಿದ ಮುಘಲ್-ಎ-ಅಜಾಮ್ ಚಿತ್ರದ “ಪ್ಯಾರ್ ಕಿಯಾ ತೊ ಡರ್ನಾ ಕ್ಯಾ…ಜಬ್ ಪ್ಯಾರ್ ಕಿಯಾ ತೋ ಢರ್ನಾ ಕ್ಯಾ…ಪ್ಯಾರ ಕಿಯಾ ಕೊಯಿ ಚೋರಿ ನಹೀ ಕಿ, ಛುಪ್-ಛುಪ್ ಆಹೇಂ ಭರ್ನಾ ಕ್ಯಾ…” ಅಂತ ಹಾಡುವಾಗ ಎಂಥವರ ಎದೆಯಲ್ಲೂ ಪ್ರೀತಿ ಮಾಡಿದರೆ ಧೈರ್ಯದಿಂದ ಎದುರಿಸಬೇಕು, ಪ್ರೀತಿಸುವುದು ಅಂತಹ ಅಪರಾಧವೇನಲ್ಲ ಎಂದು ಹುಮ್ಮಸ್ಸಿನಿಂದ ಭಾವುಕರಾಗಿ ಯೋಚಿಸುವುದು ಸಹಜ. ಆದರೆ ನಿಜ ಜೀವನದಲ್ಲಿ ಪ್ರೀತಿಯಾಗಿ, ಅದನ್ನು ಉಳಿಸಿಕೊಳ್ಳುವಲ್ಲಿ ಮನುಷ್ಯರು ಮಾಡುವ ಅನೇಕ ಪ್ರಯತ್ನಗಳು ಸಫಲ ಆಗಿಯೇ ತೀರುತ್ತವೆ ಅನ್ನುವುದು ಸಿನಿಮೀಯ ನಡೆ ಆಗುತ್ತದೆ. ಮಧುಬಾಲ ತಾನು ದಿಲೀಪ್ ಕುಮಾರ್ ಜೊತೆ ನಟಿಸಿದ “ಅಮರ್” ಮತ್ತು “ಮುಘಲ್-ಎ-ಅಜಾಮ್” ಚಿತ್ರಗಳಲ್ಲಿ ತನ್ನ ಉತ್ಕಟ ಪ್ರೇಮವನ್ನು ವ್ಯಕ್ತ ಪಡಿಸುವ ಪ್ರೇಯಸಿಯಾಗಿ ನಟಿಸಿ, “ಅಮರ್” ಚಿತ್ರದಲ್ಲಿ ಆದರ್ಶಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡಿದರೆ, ಮುಘಲ್-ಎ-ಅಜಾಮ್ ನಲ್ಲಿ ರಾಜ್ಯಾಧಿಕಾರದೆದುರು ತನ್ನ ಇನಿಯನನ್ನು ಉಳಿಸಿಕೊಳ್ಳಲು ಆತನನ್ನು ತ್ಯಜಿಸಬೇಕಾಗುವ ಪ್ರಸಂಗ ಎದುರಾಗುವುದು ಬಿಟ್ಟರೆ, ಆಕೆಯ ಇನ್ನಿತರೆ ಯಶಸ್ವಿ ಚತ್ರಗಳಾದ “ತರಾನ”, “ಕಾಲಾ ಪಾನಿ”, “ಹೌರಾ ಬ್ರಿಡ್ಜ್” “ಬಾಯ್ ಫ್ರೆಂಡ್” “ಹಾಫ್ ಟಿಕೆಟ್”, “ಮಹಲ್” “ಮಿಸ್ಟರ್ ಅಂಡ್ ಮಿಸೆಸ್ 55″, ‘”ಏಕ್ ಸಾಲ್”, “ರೇಲ್ ಕಿ ಡಿಬ್ಬಾ” ದಂತಹ ಅನೇಕ ಚಿತ್ರಗಳಲ್ಲಿ ಪ್ರೇಮ ಪ್ರಕರಣಗಳು ಕ್ಲೈಮಾಕ್ಸ್ ನಲ್ಲಿ ಸುಖಾಂತ್ಯ ಕಾಣುವುದಲ್ಲದೆ, ತನ್ನ ಪ್ರೇಮಿಯನ್ನು ಪಡೆದು ಕೊಳ್ಳುವ ಭಾಗ್ಯವಂತೆಯಾಗಿ ಕಾಣುತ್ತಾಳೆ. ಆದರೆ ನಿಜ ಜೀವನದಲ್ಲಿ ಆಕೆಗೆ ಅಂತಹ ಪ್ರೇಮ ಮತ್ತು ಪ್ರಿಯತಮ ಸಿಗದೆ ಅಂತ್ಯದವರೆಗೂ ಹಿಡಿ ಪ್ರೀತಿಗಾಗಿ ಹಾತೊರೆದಳು. ಇದೇ ಆಕೆಯನ್ನು ಇನ್‍ಸೆಕ್ಯೂರ್ ಅನ್ನಾಗಿಸಿತು, ಖಿನ್ನತೆಗೆ ದೂಡಿತು. ಇನ್ನು ಆಕೆಯ ವಾರಿಗೆ ನಟಿಯರಲ್ಲಿ ಕೆಲವರಾದರು ತಮ್ಮ ಪ್ರೇಮವನ್ನು ಮದುವೆಯವರೆಗೂ ನಡೆಸಿಕೊಂಡು ಬದುಕು ನಡೆಸಿದವರು ಹೆಸರಿಸಲು ಸಿಕ್ಕರೆ; ಇನ್ನುಳಿದಂತೆ ಆ ಜಮಾನದ ಅನೇಕ ನಟಿಯರ ಕತೆ, ಸಂಬಂಧಗಳ ವಿಷಯದಲ್ಲಿ ಒಂದು ಅದಾಗಲೇ ಮೊದಲ ಮದುವೆ ಆದ ನಟ, ನಿರ್ದೇಶಕರ, ನಿರ್ಮಾಪಕರಿಗೆ ಎರಡನೆಯ ಸಂಬಂಧವಾಗಿ ಮುಂದುವರೆದು, ವರಿಯದೆಯೋ ತುಂಬಾ ಕಹಿಯಾದ ಅನುಭವದಂತೆ ಉಳಿದಿದ್ದು ಚಿತ್ರರಂಗದ ಮತ್ತೊಂದು ದುರಂತವನ್ನು ಎತ್ತಿ ತೋರಿಸುತ್ತದೆ. ಕೆಲವರಂತು ಹಳಸಿದ ತಮ್ಮ ಸಂಬಂಧಗಳಿಂದ ಹೊರ ಬಾರದೆ, ಆ ಕತ್ತಲ ಜಗತ್ತಿನಿಂದ ತಪ್ಪಿಸಿಕೊಳ್ಳದೆ, ನಿತ್ಯ ಮದ್ಯಪಾನಿಗಳಾಗಿ ಬದುಕು ಮುಗಿಸಿದವರ ದೊಡ್ಡ ಸಂಖ್ಯೆಯೇ ಇದೆ. ಗಂಡು ಪ್ರಧಾನ್ಯದ ಸಿನಿರಂಗದಲ್ಲಿ ಸೆಳೆಯುವ ಬಟ್ಟಲು ಕಂಗಳ, ಬೆಣ್ಣೆಯಂತಹ ಚೆಲುವೆ ಮಧುಬಾಲಳ ಹಿಂದೆ ಬಿದ್ದವರ ಸಂಖ್ಯೆ ಹೆಚ್ಚೇ ಇದ್ದರೂ ಗಾಸಿಪ್ ರೂಪದಲ್ಲಿ ಆಕೆಯ ಹೆಸರಿನೊಂದಿಗೆ ಸೇರಿಕೊಂಡಿದ್ದು ಲತೀಫ್, ಮೋಹನ್ ಸಿನ್ಹಾ, ಕಮಲ್ ಅಮ್ರೋಹಿ, ಪ್ರೇಮ್ ನಾಥ್, ಝುಲ್ಫಿಕರ್ ಅಲಿ ಭುಟ್ಟೊ, ದಿಲಿಪ್ ಕುಮಾರ್, ಪ್ರದೀಪ್ ಕುಮಾರ್, ಭರತ್ ಭೂಷಣ್ ಮತ್ತು ಆಕೆಯನ್ನು ಮದುವೆಯಾದ ಕಿಶೋರ್ ಕುಮಾರ್ ರ ಹೆಸರುಗಳು. ದೆಹಲಿಯಲ್ಲಿ ಹುಟ್ಟಿ ಬೆಳೆದ ಮಧುಬಾಲಳಿಗೆ ಅಲ್ಲಿ ಬಾಲ್ಯದ ಗೆಳೆಯನೊಬ್ಬನ ಪರಿಚಯವಾಗಿತ್ತು. ಆತನ ಹೆಸರು ಲತೀಫ್. ಸಿನಿಮಾ ಅವಕಾಶಗಳು ಗಿಟ್ಟದೆ ಬೊಂಬಾಯಿಯಿಂದ ದೆಹಲಿಗೆ ವಾಪಾಸ್ ಆಗುವ ಮಧುಬಾಲಳಿಗೆ ಈತನ ಗೆಳೆತನ ಖುಷಿ ಕೊಟ್ಟಿರುತ್ತದೆ. ಸೆಳೆತದ ಆ ಪ್ರಾಯದಲ್ಲಿ ಮಧುಬಾಲ ಮತ್ತು ಲತೀಫ್ ರ ನಡುವೆ ಲೋಕ ಎಣಿಸುವ ಆ ಒಲವಿನ ನಂಟು ಬೆಸೆದಿತ್ತೇ? ತಿಳಿಯದು. ಆದರೆ ಆತ ಮಧುಬಾಲಳನ್ನು ಬಯಸುತ್ತಿದ್ದ. ನಟನೆಯ ಅವಕಾಶಗಳು ಮತ್ತೆ ಹುಡುಕಿ ಬಂದಾಗ ಮಧುಬಾಲ ದೆಹಲಿ ತೊರೆದು ಹೋಗುವಾಗ ಲತೀಫ್ ನಿಗೆ ತನ್ನ ನೆನಪಿಗಾಗಿ ಗುಲಾಬಿಯೊಂದು ನೀಡಿದ, ಆತ ಆ ಗುಲಾಬಿಯನ್ನು ಕೊನೆಯವರೆಗೂ ತನ್ನೊಂದಿಗೆ ಇಟ್ಟುಕೊಂಡಿದ್ದ ಮತ್ತು ಮಧುಬಾಲಳ ಅಂತ್ಯವಾದಾಗ ಆ ಗುಲಾಬಿಯನ್ನು ಆಕೆಯ ಸಮಾಧಿಯ ಮೇಲೆ ಇಟ್ಟು ಬಂದಿದ್ದ ಎಂದೆಲ್ಲ ಮಾತಿದೆ. ಆದಾದ ಮೇಲೂ ಪ್ರತಿ ವರ್ಷ ಫೆಬ್ರವರಿ 23ರಂದು ಆತ ಬೊಂಬಾಯಿಗೆ ಬಂದು ಆಕೆಯ ಸಮಾಧಿಯ ಮೇಲೆ ಆಕೆಯ ನೆನಪಿನಾರ್ಥ ಗುಲಾಬಿಯೊಂದು ಅರ್ಪಿಸಿ ಹೋಗುತ್ತಿರುವುದಾಗಿ ಹೇಳಲಾಗುತ್ತದೆ. ಇನ್ನು ಎರಡನೆಯ ಹೆಸರು ನಿರ್ದೇಶಕ ಶರ್ಮಾ ಅವರದು. ಆರಂಭದಲ್ಲಿ ಸಿನಿಮಾಗಳಲ್ಲಿ ನಟಿಸಲು ಮಧುಬಾಲಳಿಗೆ ಅವಕಾಶ ಕೊಟ್ಟಿದ್ದಲ್ಲದೆ, ಆಕೆಯನ್ನು ತಿದ್ದಿದ ವ್ಯಕ್ತಿ ಶರ್ಮಾ. ಇಬ್ಬರ ನಡುವೆ ನಟನೆಗೆ ಸಂಬಂಧ ಪಟ್ಟಂತೆ, ಬದುಕಿನ ಕುರಿತು ಮಾತನಾಡುವ ಸಲುಗೆ ಇತ್ತು. ಆದರೆ ವಯಸ್ಸಿನಲ್ಲಿ ಶರ್ಮ ಹಿರಿಯ. ಮೊದಲು ಮಧುಬಾಲಳನ್ನು ನೋಡಿದಾಗ ಆತನಿಗೆ ಆಕೆಯ ಮೇಲೆ ಮನಸಾಗಿದ್ದು, ಒಳಗೊಳಗೆ ಆಕೆಯನ್ನು ವರಿಸುವ ಇರಾದೆ ಇದ್ದದ್ದನ್ನು ಚಿತ್ರರಂಗ ಗಮನಿಸಿದ್ದು ಇದೆ. ಅದೊಂಥರ ಒನ್‍ಸೈಡ್ ಲವ್ ನಂತಿತ್ತು. ಇನ್ನು ‘ಮಹಲ್’ ನಂತಹ ಸೂಪರ್ ಹಿಟ್ ಹಾರರ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ ಕಮಲ್ ಅಮ್ರೋಹಿ ಮತ್ತು ಮಧುಬಾಲರ ಸಂಬಂಧದ ಬಗ್ಗೆ ಕೆಲವು ನಿಜಾಂಶಗಳಿರುವುದು ಒಪ್ಪಬೇಕಾದ ಮಾತು. ‘ಮಹಲ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ಪರಸ್ಪರ ಹೆಚ್ಚು ಸಮಯ ಕಳೆಯುತ್ತಿದ್ದ ಕಮಲ್ ಅಮ್ರೋಹಿ ಮತ್ತು ಮಧುಬಾಲ ರ ನಡುವೆ ಅವ್ಯಕ್ತ ಬಂಧವೊಂದು ಬೆಸೆದಿದ್ದು, ಹಾಗೊಮ್ಮೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸ್ವತಃ ಮಧುಬಾಲ ರ ಅಪ್ಪ ಅತೌವುಲ್ಲಹ್ ಖಾನರು ಅವರ ಮದುವೆಗೆ ಒಪ್ಪಿಗೆ ಸೂಚಿಸಿದ್ದ ನಿದರ್ಶನಗಳಿವೆ. ಮಧುಬಾಲಳಿಗೂ ಆತನೆಂದರೆ ಇಷ್ಟ ಆಗುತಿದ್ದ ಕಾರಣ ಅದೊಂದು ರಹಸ್ಯದಂತೆ ಉಳಿದಿದ್ದಿಲ್ಲ. ಆದರೆ ಅವರ ಆ ಪ್ರೀತಿ ಮದುವೆಯಲ್ಲಿ ಕೊನೆಯಾಗಲು ಅಮ್ರೋಹಿಗೆ ಆ ಮೊದಲೇ ಮದುವೆಯಾಗಿದ್ದು ಅಡ್ಡಿ ಆಯಿತು. ಖ್ಯಾತ ನಟಿ ಮೀನಾ ಕುಮಾರಿಯೊಂದಿಗೆ ಮೊದಲ ಮದುವೆ ಆಗಿದ್ದ ಅಮ್ರೋಹಿ ಮಧುಬಾಲರನ್ನು ಎರಡನೆಯ ಹೆಂಡತಿಯಾಗಿ ಸ್ವೀಕರಿಸಲು ಯೋಚಿಸಿದ್ದ. ಆದರೆ ಎರಡನೆಯ ಹೆಂಡತಿಯಾಗಿ ಅಮ್ರೋಹಿ ಜೊತೆ ಬಾಳಲು ಮಧುಬಾಲಗೆ ಸುತಾರಂ ಇಷ್ಟಯಿರಲಿಲ್ಲ. ಅದಕ್ಕೆ ಮೊದಲ ಹೆಂಡತಿ ಮೀನಾ ಕುಮಾರಿಗೆ ವಿಚ್ಛೇದನ ನೀಡಿ, ತನ್ನನ್ನು ಮದುವೆ ಆಗಲು ಒಪ್ಪಿಗೆ ನೀಡುತ್ತಾಳೆ. ಈ ಷರತ್ತನ್ನು ನಿರಾಕರಿಸುವ ಅಮ್ರೋಹಿ, ಮೀನಾ ಕುಮಾರಿ ಜೊತೆ ಹೊಂದಿಕೊಂಡಿರಲು ಆದರಷ್ಟೇ ಮದುವೆ ಆಗುವುದಾಗಿ ಹೇಳಿ ಹಿಂದೆ ಸರಿದ. ಅಲ್ಲಿಗೆ ಅವರ ಪ್ರೇಮ ಪ್ರಕರಣ ಕೊನೆಗೊಂಡಿತು. ಇನ್ನು ತನ್ನ ಜೊತೆ “ಬಾದಲ್” ಚಿತ್ರದಲ್ಲಿ ನಟಿಸಿದ ಪ್ರೇಮ್‍ನಾಥ್ ರೊಂದಿಗೆ ಆಕೆಗೆ ಒಲವಾದ ಬಗ್ಗೆ ಸುದ್ದಿ ಹಬ್ಬಿತ್ತು. ಮತ್ತು ಅದರಲ್ಲಿ ಕಿಂಚಿತ್ತು ಸತ್ಯಾಂಶ ಇತ್ತು. ಮಧುಬಾಲ ತಾನೆ ಇಷ್ಟಪಟ್ಟಿರುವುದಾಗಿ, ಮತ್ತು ಒಪ್ಪಿಗೆ ಇದ್ದರೆ ಮದುವೆ ಆಗುವುದಾಗಿ ಹೇಳಿಯಾಗಿತ್ತು. ಆದರೆ ಮಧುಬಾಲಳ ತಂಗಿ ಮಧುರ್ ಭೂಷಣ್ ಹೇಳುವಂತೆ, ಪ್ರೇಮ್ ನಾಥ್ ಮಧುಬಾಲ ತಮ್ಮ ಧರ್ಮಕ್ಕೆ ಮತಾಂತರ ಆದರೆ ಮಾತ್ರ ಮದುವೆ ಆಗುವುದಾಗಿ ಹೇಳಿದ್ದಕ್ಕೆ ಮಧುಬಾಲ ಒಪ್ಪಲಿಲ್ಲವಂತೆ. ಇದರಿಂದ ಅವರ ಆ ಆರು ತಿಂಗಳ ಪ್ರೇಮ ಪ್ರಕರಣ ಸಹ ಮುಕ್ತಾಯಗೊಂಡಿತ್ತು. *** ಒಮ್ಮೆ ಸಿನಿ ಪತ್ರಕರ್ತ ಬನ್ನಿ ರೂಬೇನ್ ‘ಫಿಲ್ಮ್ ಫೇರ್’ ಪತ್ರಿಕೆಗಾಗಿ ಮಧುಬಾಲ ಕುರಿತು ವಿಶೇಷ ಲೇಖನಕ್ಕಾಗಿ ಆಕೆಯನ್ನು ‘ಅರೇಬಿನ್ ವಿಲ್ಲಾ’ದಲ್ಲಿ ಸಂದರ್ಶನ ಕೋರಿ ಭೇಟಿ ಮಾಡಲು ಹೋದರು. ಮನೆಗೆ ಕಾವಲುಗಾರರು ಅಲ್ಲದೆ ದುರುಗುಟ್ಟುವ ಅಲ್ಸಟೈನ್ ನಾಯಿಗಳ ದಂಡೇ ಅಲ್ಲಿತ್ತು. ಯಾರೇ ಹೊಸಬರು ಮಧುಬಾಲ ಮನೆಗೆ ಭೇಟಿ ನೀಡಬೇಕೆಂದರೆ ಮೊದಲು ಪರವಾನಿಗಿ ತೆಗೆದುಕೊಂಡಿರಬೇಕಾಗಿತ್ತು. ಇಲ್ಲವಾದಲ್ಲಿ ಪ್ರವೇಶಯಿದ್ದಿಲ್ಲ. ಹೀಗೆ ಅನುಮತಿ ಮೇರೆಗೆ ಅರೇಬಿಯನ್ ವಿಲ್ಲಾಗೆ ಬಂದ ರೂಬೆನ್ ರನ್ನು ಬರಮಾಡಿಕೊಂಡು ಕೆಳಮಹಡಿ ಕೋಣೆಯಲ್ಲಿ ಕೂಡಿಸಲಾಯಿತು. ನಂತರ ಮಧುಬಾಲ ವಾಸವಿದ್ದ ಮೇಲ್ಮಹಡಿಗೆ ಕಳುಹಿಸಲಾಯಿತು. ತುಸು ಹೊತ್ತಿನ ನಂತರ ಮಧುಬಾಲ ಅಲ್ಲಿಗೆ ಬಂದಳು. ‘ಹಾಯ್’ ‘ಹಲೋ’ ನಂತರ ಆಕೆ ತನ್ನ ಕೋಣೆ ಪ್ರವೇಶಿಸಿ, ಒಳಗಿನಿಂದ ಬಾಗಿಲ ಬೋಲ್ಟ್ ಹಾಕಿದಳು. ಇದು ರೂಬೆನ್ ರಿಗೆ ಸ್ವಲ್ಪ ಅಜೀಬ್ ಅನಿಸಿತಾದರೂ ಏನೋ ಮುಖ್ಯವಾದ ವಿಷಯ ಇರಬೇಕು ಅಥವಾ ಗದ್ದಲವಾಗಬಹುದು ಅಂತ ಹಾಗೆ ಮಾಡಿರಬೇಕು ಅನಿಸಿ ಸುಮ್ಮನಾದರು. ಒಂದೆರಡು ಗಂಟೆ ಫಿಲ್ಮ್ ಫೇರ್ ಗಾಗಿ ಬರೆಯಲಿರುವ ಲೇಖನದ ಪ್ರಶ್ನೆಗಳಿಗೆ ಉತ್ತರ ಪಡೆದ ನಂತರ, ರೂಬೆನ್ ರಿಗೆ ಮಧುಬಾಲ ‘ಫಿಲ್ಮ್ ಫೇರ್’ ಪತ್ರಿಕೆಯ ಇನ್ನೊಬ್ಬ ಪತ್ರಕರ್ತ ಗುಲ್ಷನ್ ಇವಿಂಗ್ ರನ್ನು ಸಂದರ್ಶನಕ್ಕೆ ಕರೆಯದೆ ತಮ್ಮನ್ನೇ ಕರೆದಿರುವ ಸುಳಿವು ಹತ್ತಿತು. ಅದು ತಾವು ದಿಲೀಪ್ ಕುಮಾರ್ ಗೆ ಆತ್ಮೀಯರಾದ ಕಾರಣ ಎಂದು. ಮತ್ತು ಆ ವಿಷಯ ಸಿನಿಮಾ ಉದ್ಯಮದಲ್ಲಿ ಎಲ್ಲರಿಗೂ ತಿಳಿದದ್ದಾಗಿತ್ತು. ಫಿಲ್ಮ್ ಫೇರ್ ಲೇಖನ ದ ವಿಷಯ ಹಾಗಿರಲಿ, ಮುಖ್ಯವಾಗಿ ತಾನು ತನ್ನ ಯೂಸುಫ್ ಖಾನ್ (ದಿಲೀಪ್ ಕುಮಾರ್) ರ ಬಗ್ಗೆ ಮಾತಾಡಬೇಕು ಎಂದು ಭಾವುಕವಾಗಿ, ತಮ್ಮ ಸಂಬಂಧದ ಆರಂಭ, ಕೋರ್ಟ್ ಕೇಸ್ ಮತ್ತು ಆ ನಂತರದ ಬೆಳವಣಿಗೆಗಗಳ ಬಗ್ಗೆ ಸುದೀರ್ಘವಾಗಿ ಹಂಚಿಕೊಳ್ಳುತ್ತಾಳೆ. ಮಾತಿನಿಂದ ಪರಸ್ಪರ ತಮಗೆ ಆದ ನೋವು, ಖೇದ, ಮನಸ್ತಾಪದ ಕುರಿತು ಮಾತಾಡಿ, ಅದನ್ನು ಹೇಗಾದರು ಮಾಡಿ ದಿಲೀಪ್ ಕುಮಾರ್ ರಿಗೆ ತಲುಪುವಂತೆ, ಮತ್ತು ತಾನು ಇನ್ನೂ ದಿಲೀಪ್ ರನ್ನು ಅದೆಷ್ಟು ಪ್ರೀತಿಸುತ್ತಿದ್ದೇನೆ ಎಂಬುದನ್ನು ತಿಳಿಯಪಡಿಸಲು ಬಯಸಿದ್ದಳು. ಕಣ್ಣೀರಾಗಿ, ಕರಗಿದ ದನಿಯಲ್ಲಿ ಆಕೆ ಆ ಮಾತೆಲ್ಲ ಹೇಳಿದ್ದಳು. *** ಮೊರಾರ್ಜಿ ದೇಸಾಯಿ ಅವರಿಗೆ ಬಂಗಾಲದ ನಿರಾಶ್ರಿತರ ನಿಧಿಗೆ ಹಣ ಕೊಡುತ್ತಿರುವ ಸಂದರ್ಭ. ಸುಶೀಲಾ ರಾಣಿ ಪಟೇಲ್ ರೊಂದಿಗೆ ಮಧುಬಾಲ. ನಿರಾಶ್ರಿತರಿಗೆ ತನ್ನ ದುಡಿಮೆಯ 50000 ಸಾವಿರ ರುಪಾಯಿ ಚೆಕ್ ದೇಣಿಗೆ ಕೊಡುವಾಗ, ಮಧುಬಾಲಗೆ 17 ವರ್ಷ ವಯಸ್ಸು. ಹಾಗೆ ದೇಣಿಗೆ ಕೊಡುತ್ತ ಆಕೆ ನುಡಿದ ಮಾತು ಆಕೆ ಅದೆಷ್ಟು ಮಾನವೀಯಳಾಗಿದ್ದಳು ಎಂಬುದನ್ನು ಎತ್ತಿ ತೋರುತ್ತವೆ. “ದೇವರ ದಯದಿಂದ ಅನುಕೂಲಕರ ಸ್ಥಿತಿಯಲ್ಲಿರುವವರೆಲ್ಲ ಇನ್ನೊಬ್ಬರ ದುಃಖದ, ದಯಾಮಯ ಸ್ಥಿತಿಯನ್ನು ಸುಮ್ಮನೆ ಕೂತು ನೋಡಬಾರದು” ಎಂದಾಗ, ಅದಕ್ಕೆ ಮೊರಾರ್ಜಿ ದೇಸಾಯಿಯವರು, ಅಷ್ಟು ಮೊತ್ತ ಕೊಟ್ಟು ನೀನೇನು ಮಾಡುವೆ ಅಂದಾಗ ಆಕೆ “ಸರ್, ನಾನು ಇನ್ನು ಮುದುಕಿ ಆಗಿಲ್ಲ. ನನಗೀಗ ಬರಿ 17 ವರ್ಷ. ದೇವರ ಕೃಪೆಯಿಂದ ನಾನು ಇನ್ನು ಹೆಚ್ಚು ದುಡಿತೀನಿ, ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡ್ತೀನಿ” ಅಂದಿದ್ದಳು. ಇದಕ್ಕೆ ಅಂದಿನ ಚಲನಚಿತ್ರ ದ ಕೆಲವರು ಕುಹಕವಾಡಿ, ಅದೊಂದು ಅತೌವುಲ್ಲಹ್ ಖಾನ್ ರ ಪ್ರಚಾರದ ಗಿಮಿಕ್ ಎಂಬಂತೆ ಮಾತಾಡಿಕೊಂಡಿದ್ದರು. ಆದರೆ, 1950, ಅಕ್ಟೋಬರ್ 17ರ ಆ ದಿನಗಳಲ್ಲಿ ಐವತ್ತು ಸಾವಿರ ರುಪಾಯಿ ದೇಣಿಗೆ ಕೊಡೋದು ಅಂದ್ರೆ ಸಣ್ಣ ಮಾತೇನಲ್ಲ. ಹೃದಯವಂತರಿಗೆ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ರೀತಿ ಗೊತ್ತಿರುತ್ತದೆ. ಅದು ಮಧುಬಾಲಳಿಗೆ ಇತ್ತು ಎಂದಷ್ಟೇ ಹೇಳಬಹುದು.
ನಿಗದಿತ ಕಾರ್ಯ ವಿಧಾನ ಉಲ್ಲಂಘಿಸಿ ಮಗುವನ್ನು ನೇರವಾಗಿ ದತ್ತು ಪಡೆಯುವುದು 2015ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್ 80ರಡಿ ಅಪರಾಧವಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. Bar & Bench Published on : 14 May, 2021, 5:42 am ಕೋವಿಡ್‌ ಬಿಕ್ಕಟ್ಟಿನಿಂದಾಗಿ ಮಗು ಅನಾಥವಾದರೆ ಹಾಗೂ ಆ ಮಗುವಿನ ಪೋಷಣೆಗೆ ಸಂಬಂಧಿಕರು ಸಿದ್ದರಿಲ್ಲದಿದ್ದರೆ ಅಂತಹ ಮಗುವನ್ನು 24 ಗಂಟೆಗಳ ಒಳಗೆ ತನ್ನ ಮುಂದೆ ಹಾಜರುಪಡಿಸಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಕೋರಿದೆ. ಪ್ರಯಾಣಕ್ಕೆ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ ಇಪ್ಪತ್ನಾಲ್ಕು ಗಂಟೆಗಳ ಒಳಗಾಗಿ ಮಗುವನ್ನು ಹಾಜರುಪಡಿಸಲು ಅದು ತಿಳಿಸಿದೆ. ನಿಗದಿತ ಕಾರ್ಯ ವಿಧಾನ ಉಲ್ಲಂಘಿಸಿ ಮಗುವನ್ನು ನೇರವಾಗಿ ದತ್ತು ಪಡೆಯುವುದು 2015ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್ 80ರಡಿ ಅಪರಾಧವಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. ಕೃತ್ಯ ಎಸಗಿದಲ್ಲಿ ಮೂರು ವರ್ಷಗಳವರೆಗಿನ ಕಾರಗೃಹ ಶಿಕ್ಷೆ ಅಥವಾ 1 ಲಕ್ಷ ರೂಪಾಯಿ ದಂಡ ಅಥವಾ ಈ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ. ಅಂತಹ ಅಪರಾಧ ಕಂಡುಬಂದರೆ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸರಿಗೆ ಕರೆ ನೀಡುವಂತೆ ಸಮಿತಿಯ ಪ್ರಕಟಣೆ ತಿಳಿಸಿದೆ. ಇದೇ ವೇಳೆ ಮಕ್ಕಳನ್ನು ದತ್ತುಪಡೆಯಬಹುದು ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ಸಂದೇಶಗಳ ಬಗ್ಗೆ ಜಾಗರೂಕರಾಗಿರುವಂತೆ ಸಮಿತಿ ಹೇಳಿದೆ. ಇಂತಹ ಮಾಹಿತಿ ಕಂಡುಬಂದಲ್ಲಿ ತಕ್ಷಣವೇ ಪೊಲೀಸರು ಅಥವಾ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಕೋರಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ದತ್ತು ಸ್ವೀಕಾರ ಕುರಿತು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಅಕ್ರಮ ದತ್ತು ಮತ್ತು ಮಾನವ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದ ಕಾನೂನುಗಳಡಿ ಶಿಕ್ಷೆ ವಿಧಿಸಲಾಗುವುದು ಎಂದು ಅದು ಎಚ್ಚರಿಸಿದೆ. ರಾಜ್ಯದ ಮಾಧ್ಯಮಗಳಲ್ಲಿ ಕೋವಿಡ್ ಸಮಸ್ಯೆಯಿಂದಾಗಿ ಮಕ್ಕಳು ಅನಾಥರಾಗುತ್ತಿರುವ ವರದಿಗಳು ಪ್ರಸಾರವಾಗುತ್ತಿವೆ ಎಂದಿರುವ ಸಮಿತಿ ಮಕ್ಕಳ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂಬುದಾಗಿ ಬಾಲ ನ್ಯಾಯ ಕಾಯಿದೆಯನ್ನು ಉಲ್ಲೇಖಿಸಿ ವಿವರಿಸಿದೆ. 2015ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ ಮತ್ತು2016ರ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು ಹಾಗೂ 2017ರ ದತ್ತು ಸ್ವೀಕಾರ ಅಧಿಸೂಚನೆ ಅಡಿಯಲ್ಲಿ ಮಾತ್ರ ಅನಾಥ, ಪರಿತ್ಯಕ್ತ ಅಥವಾ ಒಪ್ಪಿಸಲಾದ ಮಕ್ಕಳನ್ನು ದತ್ತು ನೀಡಲಾಗುವುದು. ಮಗುವನ್ನು ದತ್ತು ಪಡೆಯಲು ಆಸಕ್ತಿ ಇರುವವರು ಜಾಲತಾಣ www.cara.nic.in ನಲ್ಲಿ ನೊಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.
ವಿಜಯ್​ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ `ವಿಡುದಲೈ` ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.ಈ ಚಿತ್ರವನ್ನು ರೆಡ್​ ಜಯಂಟ್​ ಮೂವಿಸ್​ನಡಿ ಉದಯನಿಧಿ ಸ್ಟಾಲಿನ್​ ಅರ್ಪಿಸಿದರೆ, ಆರ್​.ಎಸ್​. ಇನ್ಫೋಟೈನ್​ಮೆಂಟ್​ನಡಿ ಎಲ್ರೆಡ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಕಾಲಿವುಡ್​ನ ಜನಪ್ರಿಯ ನಿರ್ದೇಶಕರಲ್ಲಿ ವೆಟ್ರಿಮಾರನ್​ ಪ್ರಮುಖರು. ಕೆಲವು ತಿಂಗಳುಗಳ ಹಿಂದೆ ಅವರು `ವಿಡುದಲೈ`ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಘೋಷಿಸಿದಾಗಲೇ, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ನರು ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ, ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಸದ್ಯ, `ವಿಡುದಲೈ` ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್​ಪ್ರೊಡಕ್ಷನ್​ ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್​ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಎರಡು ಚಿತ್ರಗಳು ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳಿನ ಕಾಸ್ಟ್ಲಿ ಚಿತ್ರಗಳ ಪೈಕಿ `ವಿಡುದಲೈ`ಸಹ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್​ ನಿರ್ಮಾಣ ಮಾಡಲಾಗಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್​ ನಿರ್ಮಾಣಕ್ಕೂ ಬಳಸಲಾಗಿರುವುದು ವಿಶೇಷ. ಇದಲ್ಲದೆ, ಸಿರುಮಲೈ ಬಳಿ ಜಾಕಿ ಅವರ ಕಲಾ ನಿರ್ದೇಶನದಲ್ಲಿ ಒಂದು ಹಳ್ಳಿಯನ್ನು ನಿರ್ಮಿಸಲಾಗಿದೆ. ಸದ್ಯ ಕೊಡೈಕೆನಾಲ್​ನಲ್ಲಿ ಪೀಟರ್​ ಹೇನ್ಸ್​ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆಸಲಾಗಿದ್ದು, ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ. ಈ ಆಕ್ಷನ್​ ದೃಶ್ಯಗಳಲ್ಲಿ ಬಲ್ಗೇರಿಯಾದ ಸಾಹಸ ಕಲಾವಿದರು ಸಹ ಭಾಗವಹಿಸುತ್ತಿರುವುದು ವಿಶೇಷ. `ವಿಡುದಲೈ` ಚಿತ್ರದಲ್ಲಿ ವಿಜಯ್​ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್​ ರಾಜ್​, ಗೌತಮ್​ ವಾಸುದೇವ ಮೆನನ್, ರಾಜೀವ್​ ಮೆನನ್​ ಮುಂತಾದವರು ನಟಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ `ಇಸೈಜ್ನಾನಿ` ಇಳಯರಾಜ ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದು, ವೇಲ್​ರಾಜ್​ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್​ ಜೈಂಟ್​ ಮೂವೀಸ್​ ವಹಿಸಿಕೊಂಡಿದ್ದು, ಸದ್ಯದಲ್ಲೇ `ವಿಡುದಲೈ` ಮೊದಲ ಭಾಗದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
ಅರಸೀಕೆರೆ: ಶಿವಮೊಗ್ಗ-ಯಶವಂತಪುರ ನಡುವೆ ನಿತ್ಯ ಸಂಚರಿಸು ತ್ತಿರುವ ಜನಶತಾಬ್ದಿ ರೈಲುಗಾಡಿಗೆ ನಗರದಲ್ಲಿ ನಿಲುಗಡೆ ನೀಡಬೇಕು ಮತ್ತು ರೈಲು ನಿಲ್ದಾಣದಲ್ಲಿನ ಅಭಿವೃದ್ಧಿ ಕಾಮ ಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಅರಸೀ ಕೆರೆ ರೈಲು ನಿಲ್ದಾಣ ವ್ಯವಸ್ಥಾಪಕರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ರೈಲ್ವೆ ಇಲಾಖೆ ಕೆಲ ವಿಚಾರಗಳಲ್ಲಿ ಮಲ ತಾಯಿ ಧೋರಣೆ ಅನುಸರಿಸುತ್ತಿದೆ. ಶಿವಮೊಗ್ಗ-ಯಶವಂತಪುರ ನಡುವೆ ಸಂಚರಿಸುವ ಜನಶತಾಬ್ದಿ ರೈಲಿಗೆ ಅರಸೀ ಕೆರೆ ಜಂಕ್ಷನ್‍ನಲ್ಲಿ ನಿಲುಗಡೆ ಕೊಡಲು ಮೀನಾ-ಮೇಷ ಎಣಿಸುತ್ತಿದೆ. ನಿಲುಗಡೆಗೆ ಆಗ್ರಹಿಸಿ ಫೆ.9ರಂದು ಧರಣಿ ನಡೆಸÀಲಾಗಿತ್ತು. ಮನವಿಪತ್ರ ಸ್ವೀಕರಿಸಿದ ದಿನದಿಂದ ಈವರೆಗೂ ರೈಲ್ವೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅರಸೀಕೆರೆ ನಗರ ಪ್ರಮುಖ ವಾಣಿಜ್ಯ ಕೇಂದ್ರ. ಈ ರೈಲು ನಿಲ್ದಾಣ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ವಿವಿ ಧೆಡೆಗೆ ಸಾವಿರಾರು ಪ್ರಯಾಣಿಕರು ಸಂಚ ರಿಸುತ್ತಾರೆ. ಕಡಿಮೆ ಸಂಖ್ಯೆಯಲ್ಲಿ ಸಂಚ ರಿಸುವ ರೈಲುಗಳ ಜತೆಗೇ ಶಿವಮೊಗ್ಗ-ಯಶವಂತಪುರ ಜನಶತಾಬ್ದಿ ರೈಲಿಗೆ ನಿಲುಗಡೆ ನೀಡಿ ಪ್ರಯಾಣಿಕರಿಗೆ ಅನು ಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ರೈಲ್ವೆ ಇಲಾಖೆಯ ಮಲತಾಯಿ ಧೋರಣೆ ಖಂಡಿಸಿ ರೈತ ಸಂಘ ಸೇರಿ ದಂತೆ ವಿವಿಧ ಸಂಘ ಸಂಸ್ಥೆಗಳ ಸಂಯು ಕ್ತಾಶ್ರಯದಲ್ಲಿ ಏ.26ರಂದು ನಗರದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ಹಮ್ಮಿ ಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸಮಾಜ ಸೇವಕ ವಿಶ್ವನಾಥ್ ಹುಲ್ಲೇನಹಳ್ಳಿ ಅವರು ಉಪಸ್ಥಿತರಿದ್ದರು. ಮನವಿಪತ್ರ ಸ್ವೀಕರಿಸಿ ಮಾತನಾಡಿದ ರೈಲು ನಿಲ್ದಾಣದ ವ್ಯವಸ್ಥಾಪಕ ಆರ್.ರಘು ನಾಥನ್, ರೈತ ಸಂಘ, ವಿವಿಧ ಸಾವ ್ಜನಿಕ ಸಂಘ-ಸಂಸ್ಥೆಗಳು ಜನಶತಾಬ್ದಿ ರೈಲನ್ನು ಅರಸೀಕೆರೆ ನಗರದಲ್ಲಿ ನಿಲ್ಲಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಮನವಿಪತ್ರ ಸಲ್ಲಿಸಿರುವ ವಿಚಾರವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಮತ್ತು ನಿಲುಗಡೆ ಅವಶ್ಯಕತೆ ಇದೆ ಎಂದು ನಾವು ಕೂಡ ವರದಿಯನ್ನು ನೀಡಿದ್ದೇವೆ. ಈ ಎಲ್ಲ ಆಧಾರಗಳ ಮೇಲೆ ಅರಸೀಕೆರೆ ರೈಲ್ವೇ ಜಂಕ್ಷನ್ ಮೂಲಕ ಈಗಾಗಲೇ ಸಂಚರಿಸು ತ್ತಿರುವ ಶಿವಮೊಗ್ಗ ಮತ್ತು ಯಶವಂತ ಪುರ ಜನಶತಾಬ್ದಿ ರೈಲುಗಾಡಿ ನಿಲುಗಡೆಗೆ ಅತೀ ಶೀಘ್ರದಲ್ಲಿಯೇ ಅದೇಶ ಹೊರ ಬೀಳಲಿದೆ. ಈ ಅದೇಶವನ್ನು ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಯ ಪಡಿಸಲಾಗುವುದು ಎಂದರು.
Kannada News » Karnataka » Bengaluru » Banjara Sammelan in Maharashtra 2 lakh from Karnataka will Participate Says Sardar Sevalal Swamiji ಮಹಾರಾಷ್ಟ್ರ ಬಂಜಾರ ಸಮ್ಮೇಳನಕ್ಕೆ ಕರ್ನಾಟಕದಿಂದ 2 ಲಕ್ಷ ಮಂದಿ: ಸರ್ದಾರ್ ಸೇವಾಲಾಲ್ ಸ್ವಾಮೀಜಿ ಭಾರತದಲ್ಲಿ ಬಂಜಾರ ಸಮುದಾಯಕ್ಕೆ ಸೇರಿದವರ ಸಂಖ್ಯೆ ಸುಮಾರು 9 ಕೋಟಿ ಇರಬಹುದು ಎಂದು ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು. ಬಿಜೆಪಿ ಶಾಸಕ ಪಿ.ರಾಜೀವ್ TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Nov 21, 2022 | 3:26 PM ಬೆಂಗಳೂರು: ಮಹಾರಾಷ್ಟ್ರದಲ್ಲಿ ಜ 25ರಿಂದ 30ರವರೆಗೂ ಅಖಿಲ ಭಾರತ ಬಂಜಾರ ಸಮ್ಮೇಳನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಸಮ್ಮೇಳನದಲ್ಲಿ ಕರ್ನಾಟಕದ ಸುಮಾರು 2 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ. ಭಾರತದಲ್ಲಿ ಬಂಜಾರ ಸಮುದಾಯಕ್ಕೆ ಸೇರಿದವರ ಸಂಖ್ಯೆ ಸುಮಾರು 9 ಕೋಟಿ ಇರಬಹುದು ಎಂದು ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು. ಸ್ವಾಮೀಜಿ ನಂತರ ಮಾತನಾಡಿದ ಬಿಜೆಪಿ ಶಾಸಕ ಪಿ.ರಾಜೀವ್, ಹಿಂದೂ ಸಂಸ್ಕೃತಿಗೆ ಎರಡು ದೊಡ್ಡ ಗಂಡಾತರಗಳಿವೆ. ಜಿಹಾದಿಗಳನ್ನು ಹುಟ್ಟುಹಾಕುವವರು ಹಾಗೂ ಕ್ರೈಸ್ತ ಮಿಷನರಿಗಳಿಂದ ಮತಾಂತರದ ಕೆಲಸ ನಿರಂತರ ನಡೆಯುತ್ತಿದೆ. ಇದು ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ದೊಡ್ಡ ಗಂಡಾಂತರ. ಬಂಜಾರ ಸಮುದಾಯದವರನ್ನು ಮತಾಂತರ ಮಾಡಲು ಕ್ರೈಸ್ತ ಮಿಷನರಿಗಳು ಸಾಕಷ್ಟು ಪ್ರಯತ್ನ ಮಾಡಿದರು ಎಂದು ಹೇಳಿದರು. ಮತಾಂತರವಾಗಿದ್ದ 1700ಕ್ಕೂ ಹೆಚ್ಚು ಕುಟುಂಬಗಳು ಈಗ ಘರ್ ವಾಪ್ಸಿ ಆಗಿವೆ. ಹಿಂದೂ ಎನ್ನುವ ಪದಕ್ಕೆ ಅಶ್ಲೀಲ ಎಂಬ ಅರ್ಥವಿದೆ ಎನ್ನುವುದು ಸರಿಯಲ್ಲ. ಹಿಂದೂ ಮತಗಳನ್ನು ತೆಗೆದುಕೊಂಡು ಹಿಂದೂಗಳನ್ನೇ ಅಶ್ಲೀಲ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ? ಇದು ವಿಕೃತ ಮನಸ್ಸಿನ ಸ್ಥಿತಿ ಎಂದು ಟೀಕಿಸಿದರು. ಭಾರತವನ್ನು ಹಿಂದು ಭೂಮಿ ಎಂದು ಕರೆಯುತ್ತೇವೆ. ಭಾರತಕ್ಕೆ ಇರುವ ಎರಡು ದೊಡ್ಡ ಸಮಸ್ಯೆ ಎಂದರೆ ಜಿಹಾದಿ ಮನಸ್ಥಿತಿ ಮತ್ತು ಕ್ರೈಸ್ತ ಮಷಿನರಿಗಳ ಮತಾಂತರ. ವಿಕೃತ ಮನಸ್ಸಿನ ಮನಸ್ಥಿತಿಯವರು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಯಾಗಿ ಹಿಂದೂ ಶಬ್ದಕ್ಕೆ ಅಶ್ಲೀಲ ಅರ್ಥವಿದೆ ಎಂದು ಹೇಳುವುದು ಹೇಗೆ ಸಾದ್ಯ? ಹಿಂದೂವನ್ನು ಅಶ್ಲೀಲ ಎಂದು ಕರೆಯುವವರಿಗೆ ವಿಕೃತ ಮನಃಸ್ಥಿತಿ ಎಂದು ಹೇಳಬೇಕಾಗುತ್ತೆ ಎಂದರು. ಲಂಬಾಣಿ ತಾಂಡಾಗಳನ್ನು ಕಾಂಗ್ರೆಸ್ ಎಂದಿಗೂ ಕಂದಾಯ ಗ್ರಾಮ ಮಾಡಿರಲಿಲ್ಲ. ಆದರೆ ಬೊಮ್ಮಾಯಿ‌ ಅವರು ಕಂದಾಯ ಗ್ರಾಮ ಮಾಡಿದ್ದಾರೆ. 75 ಕುಟುಂಬಕ್ಕೆ ಕಂದಾಯ ಗ್ರಾಮದಡಿ ಹಕ್ಕು ಪತ್ರ ನೀಡುತ್ತಿದ್ದೇವೆ. ಡಿಸೆಂಬರ್ ಮೊದಲ ವಾರ ಒಂದೇ ವೇದಿಕೆಯಲ್ಲಿ 60 ಸಾವಿರ ಕುಟುಂಬಕ್ಕೆ ಹಕ್ಕು ಪತ್ರ ನೀಡಲಿದ್ದೇವೆ. ಬಳಿಕ ಶಿವಮೊಗ್ಗದಲ್ಲಿ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಮಾಡುತ್ತೇವೆ. ಈಗ ಕಲಬುರಗಿ, ಕೊಪ್ಪಳ, ರಾಯಚೂರು ಬೀದರ್ ಭಾಗದ ತಾಂಡಾದವರಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ ಎಂದು ವಿವರಿಸಿದರು. ಎಸ್​ಟಿಪಿಟಿಎಸ್​ಪಿ ಯೋಜನೆಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗೆ ಸರ್ಕಾರ ಬಳಸಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್​ಟಿಪಿ-ಟಿಎಸ್​ಪಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಆರಂಭಿಸಿದ್ದೇ ಸಿದ್ದರಾಮಯ್ಯ. ಬಿಜೆಪಿ ಸರ್ಕಾರವು 28 ಸಾವಿರ ಕೋಟಿ ಹಣವನ್ನು ಎಸ್​ಟಿಪಿ-ಟಿಎಸ್​ಪಿ ಅನುದಾನವಾಗಿ ನೀಡಿದೆ ಎಂದರು.
ಭಾರತೀಯ ನೋಟಿನಲ್ಲಿ ಯಾರ ಫೋಟೋ ಇರಬೇಕು? ಇದೀಗ ಭಾರಿ ಚರ್ಚೆ ವಿವಾದಕ್ಕೆ ಕಾರಣಾಗಿದೆ. ಚುನಾವಣೆ ದೃಷ್ಟಿಯಿಂದ ಗಣೇಶ ಹಾಗೂ ಲಕ್ಷ್ಮೀ ಫೋಟೋಗಳನ್ನುಹಾಕಿ ಎಂದು ಕೇಜ್ರಿವಾಲ್ ಹೇಳಿದ ಬೆನ್ನಲ್ಲೇ ಇದೀಗ ಹೊಸ ಹೊಸ ವಾದಗಳು ಹುಟ್ಟಿಕೊಂಡಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಇರಲಿ ಎಂದು ನಾಯಕರು ಆಗ್ರಹಿಸಿದ್ದಾರೆ. Suvarna News First Published Oct 27, 2022, 1:32 PM IST ನವದೆಹಲಿ(ಅ.27): ಭಾರತದಲ್ಲಿ ರೂಪಾಯಿ ನೋಟಿನಲ್ಲಿನ ಫೋಟೋ ವಿವಾದ ಜೋರಾಗುತ್ತಿದೆ. ಹಿಂದೂ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾರತೀಯ ರೂಪಾಯಿಗಳಲ್ಲಿ ಲಕ್ಷ್ಮಿ ಹಾಗೂ ಗಣೇಶನ ಫೋಟೋ ಹಾಕಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ವಿವಾದದ ಬೆನ್ನಲ್ಲೇ ಅಂಬೇಡ್ಕರ್ ಫೋಟೋ ಯಾಕಾಗಬಾರದು ಎಂದು ಕಾಂಗ್ರೆಸ್ ಪ್ರಶ್ನಿಸಿದರೆ, ಶಿವಾಜಿ ಫೋಟೋ ಇರಲಿ ಎಂದು ಬಿಜೆಪಿ ನಾಯಕರು ಕೇಜ್ರಿವಾಲ್ ಕುಟುಕಿದ್ದಾರೆ. ಈ ವಿವಾದ ವಿವಾದಗಳ ನಡುವೆ ಇದೀಗ ಭಾರತೀಯ ಕರೆನ್ಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಇರಲಿ ಅನ್ನೋ ವಾದ ಹುಟ್ಟಿಕೊಂಡಿದೆ. ಬಿಜೆಪಿ ಶಾಸಕ ಹಾಗೂ ವಕ್ತಾರ ರಾಮ್ ಕದಮ್ ಹೊಸ ವಾದ ಮುಂದಿಟ್ಟಿದ್ದಾರೆ. ಉಳಿದೆಲ್ಲರ ಫೋಟೋಗಿಂತ ಪ್ರಧಾನಿ ನರೇಂದ್ರ ಮೋದಿ ಪೋಟೋ ಹೆಚ್ಚು ಸೂಕ್ತ ಎಂದು ರಾಮ್ ಕದಮ್ ಅಭಿಪ್ರಾಯಪಟ್ಟಿದ್ದಾರೆ. ರಾಮ್ ಕದಮ್ ಕೇವಲ ಪ್ರಧಾನಿ ಮೋದಿ ಫೋಟೋ ಕರೆನ್ಸಿಯಲ್ಲಿ ಇರಬೇಕು ಎಂದಿಲ್ಲ. ಇದರ ಜೊತೆಗೆ ಮತ್ತೂ ಕೆಲ ನಾಯಕರ ಫೋಟೋ ಇರಲಿ ಎಂದಿದ್ದಾರೆ. ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜ್, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪೋಟೋಗಳಿರುವ ಕೆರೆನ್ಸಿ ನೋಟುಗಳು ಇರಲಿ ಎಂದಿದ್ದಾರೆ. ಈ ಕುರಿಟು ರಾಮ್ ಕದನ್ ಟ್ವೀಟ್ ಮಾಡಿದ್ದಾರೆ. ಕರೆನ್ಸಿ ನೋಟುಗಳಲ್ಲಿ ಲಕ್ಷ್ಮೀ, ಗಣೇಶನ ಚಿತ್ರಗಳನ್ನು ಸೇರಿಸಿ: ಪ್ರಧಾನಿಗೆ Arvind Kejriwal ಮನವಿ ಇದರ ಜೊತೆಗೆ ಅರವಿಂದ್ ಕೇಜ್ರಿವಾಲ್ ನೋಟಿನಲ್ಲಿ ಫೋಟೋ ವಿವಾದಕ್ಕೆ ರಾಮ್ ಕದಮ್ ತಿರುಗೇಟು ನೀಡಿದ್ದಾರೆ. ಮುಂಬರುವ ಚುನಾವಣೆಯನ್ನು ನೋಡಿ ಕೆಲ ರಾಜಕೀಯ ನಾಯಕರು ಕರೆನ್ಸಿ ನೋಟಿನಲ್ಲಿ ಹಿಂದೂ ದೇವರ ಫೋಟೋಗಳನ್ನು ಹಾಕಲು ಒತ್ತಾಯಿಸಿದ್ದಾರೆ. ಆದರೆ ಆ ನಾಯಕರು ಹೃದಯದಿಂದ ಈ ಮಾತು ಹೇಳಿದ್ದರೆ ದೇಶ ಒಪ್ಪಿಕೊಳ್ಳುತ್ತಿತ್ತು. ಆದರೆ ಹೇಳಿಕೆ ನೀಡಿದ ನಾಯಕ ಇತಿಹಾಸ ತಿಳಿದಿದೆ. ಇವರು ನಮ್ಮ ದೇವರನ್ನು ಕೇವಲ ಚುನಾವಣೆ ಬಂದಾಗ ಮಾತ್ರ ನೆನಪಿಸಿಕೊಳ್ಳುತ್ತಾರೆ ಎಂದು ರಾಮ್ ಕದಮ್ ಅರವಿಂದ್ ಕೇಜ್ರಿವಾಲ್ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ. ಆಮ್ ಆದ್ಮಿಯಿಂದ ಮತ್ತೆ ಹಿಂದೂ ವಿರೋಧಿ ಹೇಳಿಕೆ, ದೇವಸ್ಥಾನ ಶೋಷಣೆ ಕೇಂದ್ರ ಎಂದ ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಹೇಳಿಕೆಯಿಂದ ವಿವಾದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್ ಆದ್ಮಿ ಪಾರ್ಟಿ ಇದೀಗ ಹಿಂದೂ ಮತಗಳನ್ನು ಸೆಳೆಯುವ ಯತ್ನದಲ್ಲಿದೆ. ಆಮ್ ಆದ್ಮಿ ಪಾರ್ಟಿ ಹಾಗೂ ಅರವಿಂದ್ ಕೇಜ್ರಿವಾಲ್ ಹಿಂದೂಗಳಿಂದ ಅಂತರ ಕಾಯ್ದುಕೊಂಡಿದ್ದಾರೆ, ಹಿಂದೂ ವಿರೋಧಿ ಎಂಬ ಹಣೆಪಟ್ಟಿಗಳಿವೆ. ಇದನ್ನು ತೊಡೆದು ಹಾಕಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಹಿಂದೂ ಮತಗಳನ್ನು ಸಳೆಯಲು ಹಲವು ಕಸರತ್ತು ನಡೆಸುತ್ತಿದ್ದಾರೆ. ಇದಕ್ಕಾಗಿ ಭಾರತೀಯ ರೂಪಾಯಿ ನೋಟಿನಲ್ಲಿ ಗಣೇಶ ಹಾಗೂ ಲಕ್ಷ್ಮೀ ಫೋಟೋಗಳನ್ನು ಹಾಕಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಂಸನ ವಂಶಸ್ಥರ ನಾಶಕ್ಕೆ ದೇವರು ನನ್ನ ಕಳಿಸಿದ್ದಾರೆ ಗುಜರಾತ್ ಚುನಾವಣಾ ಪ್ರಚಾರದ ವೇಳೆ ಹಿಂದೂ ವಿರೋಧಿ’ ಎಂಬ ಪೋಸ್ಟರ್‌ಗಳು ಗುಜರಾತಿನಲ್ಲಿ ಪ್ರತ್ಯಕ್ಷವಾದ ಬೆನ್ನಲ್ಲೇ ಕೇಜ್ರಿವಾಲ್‌, ತಿರುಗೇಟು ನೀಡಿದ್ದರು. ‘ನಾನು ಕೃಷ್ಣ ಜನ್ಮಾಷ್ಟಮಿಯಂದು ಜನಿಸಿದ್ದೇನೆ. ದೇವರು ಕಂಸನ ವಂಶಸ್ಥರನ್ನು ಕೊನೆಗಾಣಿಸಿ ಜನರನ್ನು ಭ್ರಷ್ಟಾಚಾರ ಹಾಗೂ ಗೂಂಡಾಗಿರಿಯಿಂದ ಮುಕ್ತಿ ನೀಡುವ ವಿಶೇಷ ಕಾರ‍್ಯಕ್ಕೆ ನನ್ನನ್ನು ಭೂಮಿಗೆ ಕಳುಹಿಸಿದ್ದಾರೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ‘ನಾವೆಲ್ಲ ದೇವರ ಆಸೆಯನ್ನು ನೆರವೇರಿಸಲು ಜೊತೆಯಾಗಿ ಕೆಲಸ ಮಾಡೋಣ. ದೇವರು ಹಾಗೂ ಜನತೆ ನನ್ನೊಂದಿಗಿದ್ದಾರೆ. ಜನರಿಗೆ ಬದಲಾವಣೆ ಬೇಕಾಗಿದೆ, ಅದು ಸಿಗದೇ ಜನರು ನಿರಾಶರಾಗಿದ್ದಾರೆ’ ಎಂದು ಕೇಜ್ರಿವಾಲ್‌ ತಮ್ಮ ಗುಜರಾತ್‌ ಭೇಟಿಯ ಮೊದಲ ದಿನ ಹೇಳಿದ್ದಾರೆ.
ಪಿ-ಟೆಕ್ ಶಾಲೆಯನ್ನು ಯೋಜಿಸುವುದು, ಪ್ರಾರಂಭಿಸುವುದು ಮತ್ತು ಬೆಳೆಸುವುದು ಸಣ್ಣ ಸಾಧನೆಯಲ್ಲ. ಐಬಿಎಂ ಉದ್ಯಮ ಪಾಲುದಾರ ಸಂದರ್ಭದ ಹೊರಗೆ ಪಿ-ಟೆಕ್ ಮಾದರಿಯ ಉದಾಹರಣೆಗಳನ್ನು ವಿವರಿಸುವ ಪ್ರಕರಣ ಅಧ್ಯಯನಗಳು ಈ ಕೆಳಗಿನಂತಿವೆ. ಸಿರಕ್ಯೂಸ್ ಸೆಂಟ್ರಲ್ ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಿನ್ನೆಲೆ ಸಿರಕ್ಯೂಸ್ ಸೆಂಟ್ರಲ್ (ಐಟಿಸಿ) ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯು ಎನ್ ವೈನ ಸಿರಕ್ಯೂಸ್ ನ ಹೃದಯಭಾಗದಲ್ಲಿಒಂದು ಸಾರ್ವಜನಿಕ ಶಾಲೆಯಾಗಿದೆ. ಐಟಿಸಿ ಪ್ರೌಢ ಶಾಲಾ ಮತ್ತು ಕಾಲೇಜು ಗಾಗಿ ಎರಡು ಕ್ಯಾಂಪಸ್ ಗಳಲ್ಲಿದೆ ಮತ್ತು... ಹೆಚ್ಚು ತಿಳಿಯಲು → ಹೆಚ್ಚಿನ ದಕ್ಷಿಣ ಶ್ರೇಣಿ ಕಾಂಡ ಅಕಾಡೆಮಿ ಬ್ಯಾಕ್ ಗ್ರೌಂಡ್ ಗ್ರೇಟರ್ ಸದರ್ನ್ ಟೈರ್ ಸ್ಟೆಮ್ ಅಕಾಡೆಮಿ (ಜಿಎಸ್ಟಿಎಸ್ಎ) ಎನ್ ವೈನ ಕಾರ್ನಿಂಗ್ ನಲ್ಲಿರುವ ಸಹಕಾರಿ ಶೈಕ್ಷಣಿಕ ಸೇವೆಗಳ ಮಂಡಳಿ (ಬಿಒಸಿಇಎಸ್) ಪ್ರೌಢ ಶಾಲೆಯಾಗಿದ್ದು, ಇದು 12 ಶಾಲಾ ಜಿಲ್ಲೆಗಳ ಹಂಚಿಕೆಯ ಶೈಕ್ಷಣಿಕ ಪ್ರೋಗ್ರಾಮಿಂಗ್ ನೊಂದಿಗೆ ವಿದ್ಯಾರ್ಥಿಗಳಿಗೆ ಸೇವೆ ಒದಗಿಸುತ್ತದೆ. ಜಿಎಸ್ ಟಿಎಸ್ ಎ...
ನವದೆಹಲಿ: ನವೆಂಬರ್ 12ರಂದು ಹಿಮಾಚಲ ಪ್ರದೇಶ (Himachal Pradesh) ವಿಧಾನಸಭೆ ಚುನಾವಣೆ (Election) ನಡೆಯಲಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ‘ ಹಿಮಾಚಲ, ಹಿಮಾಚಲಿಯತ್ ಔರ್ ಹಮ್ ‘ ಶೀರ್ಷಿಕೆಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಹತ್ತಾರು ಭರವಸೆಗಳನ್ನು ಕಾಂಗ್ರೆಸ್ (Congress) ನೀಡಿದೆ. ವಾಗ್ದಾನದಲ್ಲಿ ಪ್ರಮುಖವಾಗಿ ಉಲ್ಲೇಖಿಸಿರುವಂತೆ, ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಂದು ಲಕ್ಷ ಸರ್ಕಾರಿ ಉದ್ಯೋಗ ಮಂಜೂರು ಮಾಡುವ ಭರವಸೆ ನೀಡಲಾಗಿದೆ. 300 ಯೂನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ಮನೆಗೆ 4 ಹಸುಗಳ ಖರೀದಿಗೆ ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. Related Articles ಇಟಲಿಯ ಇಶಿಯಾ ದ್ವೀಪದಲ್ಲಿ ಭೂಕುಸಿತ – 3 ವಾರದ ಶಿಶು ಸೇರಿ 7 ಸಾವು 11/28/2022 ಪವಿತ್ರಾ ಲೋಕೇಶ್-ನರೇಶ್ ತಂಟೆಗೆ ಹೋದ್ರೆ ಹುಷಾರ್ 11/28/2022 ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 10 ಕೋಟಿ ರೂ.ಗಳ ‘ಸ್ಟಾರ್ಟ್ಅಪ್ ನಿಧಿ’ ತೆರೆಯುವ, ಹೈನುಗಾರಿಕೆಯಲ್ಲಿ ತೊಡಗಿರುವವರಿಂದ ನಿತ್ಯ 10 ಲೀಟರ್‌ ಹಾಲನ್ನು ಖರೀದಿಸುವುದಾಗಿ ಕಾಂಗ್ರೆಸ್ ಹೇಳಿದೆ. ಸೇಬು ರೈತರಿಗಾಗಿ ಸಮಿತಿಯನ್ನು ಸ್ಥಾಪಿಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸಲು ಸ್ಮಾರ್ಟ್ ವಿಲೇಜ್ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದೆ. ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಧನಿ ರಾಮ್ ಶಾಂಡಿಲ್, ಬಿಜೆಪಿ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಮತ್ತು 5 ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ, ನಮ್ಮದು ಚುನಾವಣಾ ಪ್ರಣಾಳಿಕೆ ಅಲ್ಲ ಆದರೆ ಹಿಮಾಚಲ ಪ್ರದೇಶದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಸಿದ್ಧಪಡಿಸಲಾದ ದಾಖಲೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ, ಮಾಜಿ ಪಿಸಿಸಿ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು ಮತ್ತು ಎಐಸಿಸಿ ಕಾರ್ಯದರ್ಶಿಗಳಾದ ತೇಜಿಂದರ್ ಪಾಲ್ ಬಿಟ್ಟು ಮತ್ತು ಮನೀಶ್ ಚತ್ರತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಗೂಗ್ಲಿ, ನಟಸಾರ್ವಭೌಮ, ರಣವಿಕ್ರಮ, ನಟರಾಜ ಸರ್ವಿಸ್, ಗೋವಿಂದಾಯ ನಮಃದಂತಾ ಕಮರ್ಷಿಯಲ್ ಹಿಟ್ ಕೊಟ್ಟು ಗೆದ್ದಿರುವ ನಿರ್ದೇಶಕ ಪವನ್ ಒಡೆಯರ್ ನಿರ್ಮಾಪಕರಾಗಿರುವ ಮೊದಲ ಚಿತ್ರ ಡೊಳ್ಳು. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ, ಪ್ರಶಸ್ತಿಯನ್ನೂ ಗೆದ್ದಿರುವ ಡೊಳ್ಳುಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಈಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದೆ. ಡೊಳ್ಳು ಚಿತ್ರಕ್ಕೆ ಡಾಲಿ ಧನಂಜಯ ಸಾಥ್ ಕೊಟ್ಟಿದ್ದಾರೆ. ಚಿತ್ರದ ಮಾಯಾನಗರಿ ಹಾಡನ್ನು ಡಾಲಿ ಬಿಡುಗಡೆ ಮಾಡಿರುವುದು ವಿಶೇಷ. ಹಳ್ಳಿಯ ಯುವಕ ನಗರಕ್ಕೆ ಕೆಲಸ ಅರಸಿ ಬಂದಾಗ ಹಿನ್ನೆಲೆಯಲ್ಲಿ ಬರುವ ಹಾಡಿದು. ಪ್ರದ್ಯುಮ್ನ ನರಹಳ್ಳಿ ಸಾಹಿತ್ಯಕ್ಕೆ ಅನಂತ್ ಕಾಮತ್ ಸಂಗೀತ ನೀಡಿದ್ದಾರೆ. ನಿರ್ದೇಶಕ ಸಾಗರ್ ಪುರಾಣಿಕ್ ಅವರೇ ಈ ಹಾಡಿಗೆ ಗಾಯಕರಾಗಿದ್ದಾರೆ. ನ್ಯಾಷನಲ್ ಫಿಲ್ಮ್ ಅವಾರ್ಡ್ ಘೋಷಣೆ : ಕನ್ನಡದ ಡೊಳ್ಳುಗೆ ಪ್ರಶಸ್ತಿ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಹಿಂದಿ ನಟ ಅಜಯ್ ದೇವಗನ್ ಮತ್ತು ತಮಿಳು ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೂರರೈ ಪೊಟ್ರು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿದೆ. ಕನ್ನಡಿಗ ಕ್ಯಾ.ಗೋಪಿನಾಥ್ ಅವರ ಜೀವನ ಚರಿತ್ರೆ ಆಧರಿಸಿದ್ದ ಬಯೋಪಿಕ್ ಸೂರರೈಪೊಟ್ರು ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕನ್ನಡದ ಡೊಳ್ಳು ಎರಡು ಪ್ರಶಸ್ತಿ ಸ್ವೀಕರಿಸಿದೆ. ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಮತ್ತು ಪುರಸ್ಕಾರ ಎರಡನ್ನೂ ಗಳಿಸಿದ್ದ ಡೊಳ್ಳು ಚಿತ್ರವನ್ನು ಖ್ಯಾತ ನಿರ್ದೇಶಕ ಪವನ್ ಒಡೆಯರ್ ನಿರ್ಮಾಣ ಮಾಡಿದ್ದರು. ಸರ್ಕಾರದ ಪರವಾಗಿ ನಿರ್ದೇಶಿಸಿದ್ದ ಡಾಕ್ಯುಮೆಂಟರಿಗೆ ಗಿರೀಶ್ ಕಾಸರವಳ್ಳಿ ಪುರಸ್ಕಾರ ಪಡೆದುಕೊಂಡಿದ್ದಾರೆ. ನಟ ದಿ. ಸಂಚಾರಿ ವಿಜಯ್ ನಟಿಸಿದ್ದ ತಲೆದಂಡ ಕೂಡಾ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಲಯಾಳಂ ಚಿತ್ರವೊಂದಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕನ್ನಡದ ಅತ್ಯುತ್ತಮ ಚಿತ್ರ : ಡೊಳ್ಳು (ನಿರ್ಮಾಪಕ : ಪವನ್ ಒಡೆಯರ್. ನಿರ್ದೇಶಕ : ಸಾಗರ್ ಪುರಾಣಿಕ್) ಅತ್ಯುತ್ತಮ ಪರಿಸರ ಸಂದೇಶ ಇರುವ ಚಿತ್ರ : ತಲೆದಂಡ (ನಿರ್ಮಾಣ : ಕೃಪಾನಿಧಿ ಕ್ರಿಯೇಷನ್ಸ್. ನಿರ್ದೇಶಕ : ಪ್ರವೀಣ್ ಕೃಪಾಕರ್) ಬೆಸ್ಟ್ ಆಡಿಯೋಗ್ರಫಿ : ಡೊಳ್ಳು (ಸೌಂಡ್ ಎಂಜಿನಿಯರ್ : ಜಾಬಿನ್ ಜಯಮ್) ಬೆಸ್ಟ್ ಆರ್ಟ್ & ಕಲ್ಚರ್ ಸಿನಿಮಾ : ನಾದದ ನವನೀತ ಡಾ.ಪಿಟಿ ವೆಂಕಟೇಶ್ ಕುಮಾರ್ (ನಿರ್ದೇಶನ : ಗಿರೀಶ್ ಕಾಸರವಳ್ಳಿ) ಉತ್ತಮ ನಟ : ಅಜಯ್ ದೇವಗನ್ (ತಾನಾಜಿ), ಸೂರ್ಯ (ಸೂರರೈಪೊಟ್ರು) ಅತ್ಯುತ್ತಮ ಚಿತ್ರ : ಸೂರರೈಪೊಟ್ರು ಉತ್ತಮ ನಟಿ : ಅಪರ್ಣ ಬಾಲಮುರುಳಿ(ಸೂರರೈಪೊಟ್ರು) ಅತ್ಯುತ್ತಮ ಮಲಯಾಳಂ ಚಿತ್ರ : ತಿಂಕಲಾಜ ನಿಚ್ಚಯಂ (ಅರ್ಥ :ಎಂಗೇಜ್ಮೆಂಟ್ ಈಸ್ ಆನ್ ಮಂಡೇ) ಈ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ನಿರ್ದೇಶಕ ಪ್ರಸನ್ನ ಸತ್ಯನಾಥ್ ಹೆಗ್ಡೆ ಇಬ್ಬರೂ ಕನ್ನಡಿಗರು ಸಂಪ್ರದಾಯ ಮುರಿದು ಗೆದ್ದ ಪವನ್ ಒಡೆಯರ್ ಡೊಳ್ಳು ಡೊಳ್ಳು. ಇದು ಕಮರ್ಷಿಯಲ್ ಸಿನಿಮಾ ಅಲ್ಲ. ರಾಷ್ಟ್ರಪ್ರಶಸ್ತಿ ಗೆದ್ದ ಚಿತ್ರ. ದೇಶ ವಿದೇಶಗಳ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಮತ್ತು ಪ್ರಶಸ್ತಿ ಎರಡನ್ನೂ ಬಾಚಿಕೊಂಡ ಸಿನಿಮಾ. ಇಂಥಾದ್ದೊಂದು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ಇದ್ಯಾವುದೋ ಕತ್ತಲು ಬೆಳಕಿನ.. ಅರ್ಥವಾಗದ ಭಾರವಾದ ಸಂಭಾಷಣೆಗಳಿರೋ.. ಸ್ಲೋ ಮೋಷನ್ ಸಿನಿಮಾ ಎಂದು ಕೊಂಡಿದ್ದವರೇ ಜಾಸ್ತಿ. ಏಕೆಂದರೆ ಕನ್ನಡದ ಅವಾರ್ಡ್ ಸಿನಿಮಾಗಳ ಹಿಸ್ಟರಿಯೇ ಅಂಥದ್ದು. ಆದರೆ ಅದೆಲ್ಲವನ್ನೂ ಬ್ರೇಕ್ ಮಾಡಿ ಆರ್ಟ್ ಸಿನಿಮಾವನ್ನೂ ಅಚ್ಚುಕಟ್ಟಾಗಿ ಕಮರ್ಷಿಯಲ್ ಚಿತ್ರದಂತೆಯೇ ರೂಪಿಸಿ ತೆರೆಗೆ ತಂದಿರುವುದು ಪವನ್ ಒಡೆಯರ್. ಡೊಳ್ಳು ಅನ್ನೋ ಕಲೆ. ಆ ಕಲೆಯನ್ನು ದುಡ್ಡಿಗೆ ಮಾರಿಕೊಳ್ಳಬಾರದು ಹಾಗೂ ಪ್ರತಿ ವರ್ಷದ ಊರಿನ ಜಾತ್ರೆಯಲ್ಲಿ ಡೊಳ್ಳು ಕುಣಿತ ಮಾಡಲೇಬೇಕು ಎನ್ನುವ ಅಪ್ಪ. ಅಪ್ಪನ ಆಸೆಯಂತೆ ಡೊಳ್ಳು ಕುಣಿತ ಕಲಿತು ತಂಡ ಕಟ್ಟುವ ನಾಯಕ. ಆದರೆ ನಗರದತ್ತ ಆಕರ್ಷಿತರಾಗುವ ತಂಡದ ಹುಡುಗರು ಜಾತ್ರೆಗೆ ಬಂದು ಕಲೆಗಾಗಿ.. ದೇವರಂತ ಕಲೆಗಾಗಿ ಡೊಳ್ಳು ಕುಣಿತ ಕುಣಿಯುತ್ತಾರಾ.. ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿರುವ ರೀತಿ ಹಾಗೂ ಇಂತಹ ಚಿತ್ರವನ್ನು ಪವನ್ ಒಡೆಯರ್ ಶ್ರೀಮಂತವಾಗಿಯೇ ನಿರ್ಮಾಣ ಮಾಡಿರುವ ರೀತಿ ಗಮನ ಸೆಳೆಯುತ್ತದೆ. ಕಾರ್ತಿಕ್ ನರೇಶ್, ನಿಧಿ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಚಂದ್ರ ಸುರೇಶ್ ನಟನೆ ಗಮನ ಸೆಳೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನರ ಗಮನಕ್ಕೆ ಬಾರದೆ ಎಲ್ಲಿಯೋ ಕಳೆದು ಹೋಗುತ್ತಿದ್ದ ಅವಾರ್ಡ್ ಚಿತ್ರಗಳ ಮಧ್ಯೆ ಈ ಚಿತ್ರವನ್ನು ಥಿಯೇಟರಿಗೂ ತಂದು ಪ್ರೇಕ್ಷಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವ ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಗೆದ್ದಿದ್ದಾರೆ. ಹೊಸ ಸಂಪ್ರದಾಯಕ್ಕೆ ಗೆಲುವಾಗಲಿ.
ಗುಬ್ಬಿ: ಮನೆ ಮತ್ತು ಆಸ್ತಿ ಯನ್ನು ಕಬಳಿಸುವ ಹುನ್ನಾರದಿಂದ ಗಂಡನೇ ತನ್ನ ಹೆಂಡತಿ ಮತ್ತು ಅತ್ತೆಯನ್ನು ಹತ್ಯೆ ಮಾಡಲು ಮುಂದಾದ ಘಟನೆ ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಕಡಬ ಹೋಬಳಿ ಜನ್ನೇನಹಳ್ಳಿ ಗ್ರಾಮದ ಮಮತಾ ಪತಿ ಯಿಂದ ದೈಹಿಕ ಹಲ್ಲೆ ಗೆ ಒಳಗಾಗಿ ಅಪಾಯದಿಂದ ಪಾರಾದ ಮಹಿಳೆ ಎಂದು ತಿಳಿದುಬಂದಿದೆ. ಮೂಲತಃ ಕೆ.ಕಲ್ಲಹಳ್ಳಿ ಗ್ರಾಮದ ವಾಸಿಯಾಗಿದ್ದ ಮಮತಾ ಎಂಬುವ ಮಹಿಳೆ ಯನ್ನು ಸ್ಥಳೀಯ ಜನ್ನೇನಹಳ್ಳಿ ಗ್ರಾಮದ ವೈರಮುಡಿ ಎಂಬುವ ನೊಂದಿಗೆ 15 ವರ್ಷಗಳ ಹಿಂದೆ ವಿವಾಹ ಮಾಡಿಕೊಟ್ಟಿದ್ದರು. ಇವರ ಕುಟುಂಬ ಬೆಂಗಳೂರಿನ ಕಡಬಗೆರೆಯಲ್ಲಿ ವಾಸವಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಆಸ್ತಿ ವಿಚಾರವಾಗಿ ಹಲ್ಲೆ ಒಳಗಾಗಿರುವ ಮಮತಾ ಮತ್ತು ಈಕೆಯ ಪತಿ ವೈರಮುಡಿ ಗೆ ಹಲವು ಬಾರಿ ಸಂಘರ್ಷ ಗಳು ನೆಡೆದಿದೆ ಎನ್ನಲಾಗಿದೆ. ಇನ್ನು ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಮಮತಾ ತಾಯಿ ಮಹದೇವಮ್ಮ ನನ್ನ ಅಳಿಯ ಕಡಬಗೆರೆ ಮನೆ ಮಾರಾಟ ಮಾಡುವಂತೆ ಕಳೆದ ಆರು ತಿಂಗಳಿಂದ ನನ್ನ ಮಗಳೊಂದಿಗೆ ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಈ ವಿಚಾರವಾಗಿ ಹಲವು ಬಾರಿ ನಾವುಗಳು ಬುದ್ಧಿ ಹೇಳಿದರು ಯಾರು ಮಾತು ಕೇಳುತ್ತಿರಲಿಲ್ಲ ಕಳೆದ ಎರಡು ದಿವಸಗಳ ಹಿಂದೆ ಗ್ರಾಮದಲ್ಲಿ ನ್ಯಾಯ ಮಾಡುವುದಾಗಿ ಕರೆಸಿಕೊಂಡು ಸೋಮವಾರ ಮದ್ಯಾಹ್ನದ ವೇಳೆಯಲ್ಲಿ ಜನ್ನೇನಹಳ್ಳಿ ಗ್ರಾಮದ ಸಮೀಪದ ನಿರ್ಜನ ತೋಪಿನಲ್ಲಿ ನನ್ನ ಮಗಳಿಗೆ ಮನಸೋ ಇಚ್ಚೆಥಳಿಸಿ ಮಾರಾಣಾಂತಿಕವಾಗಿ ದೈಹಿಕ ಹಲ್ಲೆ ನೆಡೆಸಿ ಇದು ಸಾಲವೆಂಬತೆ ನನ್ನ ಅಳಿಯ ವೈರಮುಡಿ ಹಾಗೂ ಈತನ ಜೊತೆಯಲ್ಲಿ ನನ್ನ ಸಂಬಂಧಿಗಳಾದ ಸುರೇಶ್, ಚಲುವರಾಜು,ನಾರಾಯಣಿ ಎಂಬುವರು ಗುಂಪಾಗಿ ಸೇರಿ ದ್ವಿ ಚಕ್ರ ವಾಹನವನ್ನು ಕಾಲಿನ ಮೇಲೆ ಹತ್ತಿಸುವ ಜೊತೆಗೆ ದೇಹದ ಎಲ್ಲಾ ಭಾಗಗಳಿಗೂ ಕೈಗೆ ಸಿಕ್ಕ ಆಯುಧಗಳಿಂದ ದೈಹಿಕ ಹಲ್ಲೆ ಮಾಡಿದ್ದಾರೆ ಇದರ ಜೊತೆಗೆ ನನಗೂ ಸಹ ಸಾಕಷ್ಟು ಹಲ್ಲೆ ನೆಡೆಸಿ ನಮ್ಮ ಕೊಲೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ. ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿದ ಗಾಯಾಳು ಮಮತಾ ನನಗೆ ನನ್ನ ಪತಿ ಮನೆಮಾರಾಟ ಮಾಡಿ ಹಣ ಕೊಡುವಂತೆ ಕಿರುಕುಳ ನೀಡುತ್ತಿದ್ದ. ಕುಟುಂಬದ ಕಲಹದ ಹಿನ್ನಲೆಯಲ್ಲಿ ನನ್ನ ಮಕ್ಕಳು ನನ್ನ ಗಂಡನಮನೆಯಲ್ಲಿ ವಾಸವಿದ್ದರಿಂದ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸೋಣ ಎಂದು ಹೇಳಿ ಯಾವುದೇ ನ್ಯಾಯ ಮಾಡದೇ ನನ್ನ ನಡು ರಸ್ತೆಯಲ್ಲಿ ಮಾನವೀಯತೆ ಇಲ್ಲದಂತೆ ಹಾಕಿರುವ ಬಟ್ಟೆ ಹರಿಯುಂತೆ ಮನಬಂದಂತೆ ಹೊಡೆದು ಎದ್ದು ಹೋಗದಂತೆ ಕಾಲುಗಳ ಮೇಲೆ ಬೈಕ್ ಗಳನ್ನೂ ಹತ್ತಿಸಿದ್ದಾರೆ‌. ಈ ವಿಚಾರದಲ್ಲಿ ನನ್ನ ಸಂಬಂಧಿಗಳು ‌ಸಹ ನನ್ನ ಗಂಡನೊಂದಿಗೆ ಸೇರಿ ನನ್ನ ಮತ್ತು ನನ್ನ ತಾಯಿಯ ಕೊಲೆಗೆ ಸಂಚುರೂಪಿಸಿದ್ದಾರೆ .ನನ್ನ ಮತ್ತು ನನ್ನ ತಾಯಿ ಇಬ್ಬರನ್ನು ಕೊಲೆ ಮಾಡಿದರೆ ಇರುವ ಎಲ್ಲಾ ಆಸ್ತಿ ನಮಗೆ ಸಿಗುತ್ತದೆ ಎಂಬ ದುರಾಸೆ ಇಂದ ಈ ಹಲ್ಲೆ ಮಾಡಿದ್ದು ಇವರಿಗೆ ಕಾನೂನು ರೀತ್ಯಾ ಶಿಕ್ಷೆ ಆಗಬೇಕು ನನಗಾಗಿರುವ ಅನ್ಯಾಯ ಬೇರೆ ಯಾವುದೇ ಹೆಣ್ಣಿಗೆ ಆಗಬಾರದು ಸಂಬಂಧ ಪಟ್ಟ ಪೊಲೀಸ್ ಇಲಾಖೆ ಇಂತಹ ವ್ಯಕ್ತಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಮನವಿಮಾಡಿದರು.
ಇಡೀ ದೇಶವೇ ಮೆಚ್ಚಿ ಹೆಮ್ಮೆಪಟ್ಟಂತಹ `ಕೆಜಿಎಫ್`1 ಮತ್ತು `ಕೆಜಿಎಫ್2` ಚಿತ್ರಗಳ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೊದಲ ಬಾರತೀಯ ಚಿತ್ರವಾದ ಪ್ರಭಾಸ್ ಅಭಿನಯದ ‘ಸಲಾರ್’ನ ಪೋಸ್ಟರ್, ಸೋಮವಾರ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಚಿತ್ರವು 2023ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. 400 ಕೋಟಿ ರೂ.ಗಳಿಗೂ ಮೀರಿದ ಅತೀ ದುಬಾರಿ ವೆಚ್ಚದ ಮತ್ತು ಅತೀ ನಿರೀಕ್ಷೆಯ ಈ ಚಿತ್ರವು ಈಗಾಗಲೇ ತನ್ನ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಹಿಂದೆ ಬಿಡುಗಡೆಯಾದ ಚಿತ್ರದ ಕೆಲವು ಪೋಸ್ಟರ್ಗಳು ಈಗಾಗಲೇ ಜನರ ಮನ ಗೆದ್ದಿದೆ. ಇದೀಗ ಚಿತ್ರತಂಡವು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. `ಸಲಾರ್` ಒಂದು ಪಕ್ಕಾ ಆಕ್ಷನ್ ಮತ್ತು ಸಾಹಸಮಯ ಚಿತ್ರವಾಗಿದ್ದು ಭಾರತವಲ್ಲದೆ, ಯೂರೋಪ್, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣವಾಗಲಿದೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಚಿತ್ರತಂಡವು ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಈ ಚಿತ್ರದ ಗ್ರಾಫಿಕ್ಸ್ ಕೆಲಸದ ಜವಾಬ್ದಾರಿಯನ್ನು ವಿದೇಶದ ಪ್ರತಿಷ್ಠಿತ ಸ್ಟುಡಿಯೋಗೆ ನೀಡಲಾಗಿದ್ದು. ಭಾರತದಲ್ಲಿ ಇದುವರೆಗೂ ಯಾವ ಚಿತ್ರದಲ್ಲೂ ನೋಡದಂತಹ ಅತ್ಯುನ್ನತ ವಿಎಫ್ಎಕ್ಸ್ ಕೆಲಸವನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ಹೇಳಲಾಗಿದೆ. `ಕೆಜಿಎಫ್ 2`ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಶಾಂತ್ ನೀಲ್, ಈಗ ಭಾರತದಲ್ಲೇ ಅತ್ಯಂತ ಬೇಡಿಕೆಯ ನಿರ್ದೇಶಕ ಎಂದರೆ ತಪ್ಪಾಗಲಾರದು. ಇಂಥ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಐದು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಭಾರತೀಯ ಚಿತ್ರವಾಗಿದೆ. ಪ್ರಭಾಸ್ಗೆ ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದ ಪ್ರತಿಭಾವಂತ ಕಲಾವಿದರ ದಂಡಿದೆ. `ಸಲಾರ್`ಚಿತ್ರವು ಈ ದೇಶ ಕಂಡು ಎರಡು ದೊಡ್ಡ ಚಿತ್ರಸರಣಿಗಳಾದ ಬಾಹುಬಲಿ ಮತ್ತು ಕೆಜಿಎಫ್ನ ಅತೀ ದೊಡ್ಡ ಸಂಗಮ ಎಂದರೆ ತಪ್ಪಿಲ್ಲ.`ಕೆಜಿಎಫ್`ಚಿತ್ರತಂಡ ಒಂದು ಕಡೆಯಾದರೆ, ‘ಬಾಹುಬಲಿ’ ಚಿತ್ರದ ನಾಯಕ ಪ್ರಭಾಸ್, ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರಕ್ಕೆ ಕೈಜೋಡಿಸಿರುವುದು ವಿಶೇಷ. ಈ ಸಂಗಮದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿದ್ದು, ಆಕ್ಷನ್ ಪ್ರಿಯರಿಗೆ ಇದೊಂದು ರಸದೌತಣವಾಗಲಿದೆ.
ಸ್ನೇಹಿತರೇ, ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಶುರುವಾಗಿ ಈಗಾಗಲೇ ೫ ವಾರಗಳು ಮುಗಿದಿವೆ. ಇನ್ನು ಈ ಸಲದ ಬಿಗ್ ಬಾಸ್ ಮನೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಸ್ಪರ್ಧಿಗಳ ಸಂಗಮವಾಗಿದೆ. ಅದರಲ್ಲಿ ಒಬ್ಬರು ಬೈಕ್ ರೇಸರ್ ಆಗಿರುವ ಕೆಪಿ. ಅರವಿಂದ್ ಅವರು. ಬಿಗ್ ಮನೆಯಲ್ಲಿ ಚೆನ್ನಾಗಿಯೇ ಆಟ ಆಡುತ್ತಿರುವ ಅರವಿಂದ್ KP ಅವರು ಕರ್ನಾಟಕದ ಜನತೆಗೆ ಅಷ್ಟೇನೂ ಚಿರಪರಿಚಿತರಲ್ಲ. ಈಗ ಬಿಗ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರಿಗೂ ಕೂಡ ದೊಡ್ಡದಾದ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇನ್ನು ಕೆಲ ದಿನಗಳಿಂದೀಚೆಗೆ ಸಹ ಸ್ಪರ್ಧಿ ದಿವ್ಯ ಉರುಡುಗ ಅವರೊಂದಿಗೆ ಹೆಚ್ಚು ಆತ್ಮೀಯರಾಗಿರುವ ಕಾರಣ ಇವರಿಬ್ಬರ ನಡುವೆ ಏನೋ ಇದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. [widget id=”custom_html-4″] Advertisements ಇನ್ನು ಇದಲ್ಲದರ ಜೊತೆಗೆ ಬಿಗ್ ಬಾಸ್ ವೀಕ್ಷಕರಿಗೆ ಸ್ಪರ್ಧಿಗಳ ರಿಯಲ್ ಲೈಫ್ ಹೇಗಿದೆ ಅನ್ನೋದ್ರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹಾಗಾದ್ರೆ ವೃತ್ತಿಯಲ್ಲಿ ಬೈಕ್ ರೇಸರ್ ಆಗಿರುವ ಅರವಿಂದ್ ಅವರ ರಿಯಲ್ ಲೈಫ್ ಹೇಗಿದೆ ಅನ್ನೋದ್ರ ಬಗ್ಗೆ ತಿಳಿಯೋಣ ಬನ್ನಿ..33 ವರ್ಷದ ಅರವಿಂದ್ ಅವರು ಉಡುಪಿ ಜಿಲ್ಲೆಯ ಮಣಿಪಾಲ್ ನಿವಾಸಿಯಾಗಿದ್ದು, ಈಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನು ಇವರ ತಂದೆ ಹೆಸರು ಪ್ರಭಾಕರ್ ಉಪಾಧ್ಯ, ತಾಯಿಯ ಹೆಸರು ಉಷಾ ಉಪಾಧ್ಯ ಎಂದು. ಇನ್ನು ಅರವಿಂದ್ ಅವರಿಗೆ ಪ್ರಶಾಂತ್ ಎನ್ನುವ ಒಬ್ಬ ಸಹೋದರ ಕೂಡ ಇದ್ದಾರೆ. ೨೦೦೪ರಿಂದಲೂ ಬೈಕ್ ರೇಸರ್ ಆಗಿರುವ ಅರವಿಂದ್ ಅವರು ಇಂಟರ್ನ್ಯಾಷನಲ್ ಸೇರಿದಂತೆ ಹಲವಾರು ಬೈಕ್ ರೇಸ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಪದಕಗಳನ್ನ ಪಡೆದುಕೊಂಡಿದ್ದಾರೆ. [widget id=”custom_html-4″] ಬೈಕ್ ರೇಸರ್ ಮಾತ್ರವಲ್ಲದೆ ಈಜು ಹಾಗೂ ಪೋಲ್ ನಂತಹ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನ ಮುಡುಗೇರಿಸಿಕೊಂಡಿದ್ದಾರೆ. ಇನ್ನು ೧೯ನೇ ವರ್ಷದಿಂದಲೇ ಅರವಿಂದ್ ಅವರು ಬೈಕ್ ರೇಸರ್ ಆಗಿದ್ದಾರೆ. ೨೦೦೬ರಿಂದ ಟಿವಿಎಸ್ ರೇಸಿಂಗ್ ತಂಡದ ಭಾಗವಾಗಿರುವ ಅರವಿಂದ್ ಅವರು ಎಲ್ಲೇ ರೇಸಿಂಗ್ ನಡೆದರೂ TVS ತಂಡದ ಪರವಾಗಿ ಪ್ರತಿನಿಧಿಸುತ್ತಾರೆ. ಅತ್ಯಂತ ಕಠಿಣವಾಗಿರುವ ಡಾಕರ್ ರೇಸಿಂಗ್ ನಲ್ಲಿ ಪ್ರತಿನಿಧಿಸಿ ೩೭ನೇ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಇವರ ಹೆಸರಲ್ಲಿದೆ. ಇನ್ನು ೨೦೧೨ರಲ್ಲಿ ತೀವ್ರವಾಗಿ ಗಾ’ಯಗೊಂಡಿದ್ದು ಅರವಿಂದ್ ಅವರು ಹಾಸಿಗೆ ಹಿಡಿದಿದ್ದರು ಎಂದು ಹೇಳಲಾಗಿದೆ. ಮತ್ತೆ ಸುಧಾರಿಸಿಕೊಂಡಿದ್ದ ಅರವಿಂದ್ ಅವರು ೨೦೧೩ರ ಬೈಕ್ ರೇಸಿಂಗ್ ನಲ್ಲಿ ವಿನ್ ಆಗಿದ್ದರು. ಇನ್ನು ೨೦೧೫ರಲ್ಲಿ ನಡೆದ ರೇಡ್ ದೇ ಹಿಮಾಲಯನ್ ಬೈಕ್ ರೇಸಿಂಗ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ಅರವಿಂದ್ ಅವರು ಜಗತ್ತಿನಲ್ಲಿರುವ ಕೆಲವೇ ಕೆಲವು ಅತ್ತ್ಯತ್ತಮ ಬೈಕ್ ರೇಸರ್ ಗಳ ಬಳಿ ತರಭೇತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಬೆಂಗಳೂರ್ ಡೇಸ್ ಎಂಬ ಮಲಯಾಳಂ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದಾರೆ ಕೆಪಿ.ಅರವಿಂದ್. ಇನ್ನು ಬಿಗ್ ಮನೆಯ ಮೂರನೇ ವಾರದಲ್ಲಿ ಟಾಸ್ಕ್ ಗಳಲ್ಲಿ ಅತ್ತ್ಯತ್ತಮವಾಗಿ ಆಡಿದ್ದು ಅರವಿಂದ್ ಅವರು ಕಿಚ್ಚನ ಚಪ್ಪಾಳೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯ ನಾಲ್ಕನೇ ವಾರದ ಕ್ಯಾಪ್ಟನ್ ಆಗಿಯೂ ಕಾರ್ಯ ನಿರ್ವಹಿಸಿರುವ ಅರವಿಂದ್ ಅವರು ಬಿಗ್ ಮನೆಯ ಟಪ್ ಕಾಂಪಿಟೇಟರ್ ಗಳಲ್ಲಿ ಒಬ್ಬರು ಎಂದರೆ ತಪ್ಪಾಗೊದಿಲ್ಲ. ಸ್ನೇಹಿತರೇ, ಇನ್ನೆಷ್ಟು ವಾರಗಳ ಕಾಲ ಅರವಿಂದ್ ಅವರು ಬಿಗ್ ಬಾಸ್ ಮನೆಯಲ್ಲಿ ಇರಬಹುದು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹಿಡಿದ ಹಳೇ ಪುಸ್ತಕಗಳನ್ನೆಲ್ಲಾ ಇನ್ನೊಮ್ಮೆ ತಿರುವಿಹಾಕಿ, ಹಳೆದ್ಯಾವುದೋ ಮಾರ್ಕ್ಸ್ ಕಾರ್ಡುಗಳನ್ನೊಮ್ಮೆ ನೋಡಿ ಕಣ್ತುಂಬಾ ಸಂತೋಷಪಟ್ಟರೆ ಆ ದಿನ ಸಾರ್ಥಕ. ಬೆಳಿಗ್ಗೆ ಬೆಳಿಗ್ಗೆನೇ ಮೆತ್ತಿ ಹತ್ತಿ ಕೂತು ಬಿಟ್ಟರೆ ಮಧ್ಯಾಹ್ನ ಅಮ್ಮ ಊಟಕ್ಕೆ ಕರೆಯುವ ತನಕಾನೂ ನಾನು ಅಲ್ಲೇ ಸ್ಥಾಪಿತನಾಗಿರುತ್ತೇನೆ. ಅಪರೂಪಕ್ಕೊಮ್ಮೆ ಮನೆಗೆ ಬಂದರೂ ಮಾತಾಡದೇ ಪುಸ್ತಕ ಹಿಡಿದುಕೊಂಡು ಕೂಡ್ತಾನೆ ಅನ್ನೋದು ಅಮ್ಮನ ದೊಡ್ಡ ಕಂಪ್ಲೇಂಟು. ಆದರೆ ನನಗ್ಯಾಕೋ ಹಾಗೇ ಮನೆಗೆ ಹೋದಾಗಲೆಲ್ಲಾ ಮೆತ್ತಿ ಹತ್ತಿ ಒಂದೊಪ್ಪತ್ತು ಕಳೆಯದೇ ಇದ್ದರೆ ಏನೋ ಕಳೆದುಕೊಂಡ ಹಾಗೆ. ಹಾಗೆ ನೋಡಿದರೆ ಹಳ್ಳಿಮನೆಗಳಲ್ಲಿ ಮೆತ್ತಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ಮನೆಯ ಸಾಂಸ್ಕೃತಿಕ ಕೇಂದ್ರವೆಂದು ಯಾವುದನ್ನಾದರೂ ಕರೆಯಬಹುದಾದರೆ ನಿಸ್ಸಂದೇಹವಾಗಿ ಅದು ಮೆತ್ತಿಗೇ ಸೇರಬೇಕು.ಮಕ್ಕಳಿಗೆ ಹತ್ತಿ ಇಳಿದು ಆಟವಾಡಲಿಕ್ಕೆ, ಕಣ್ಣುಮುಚ್ಚಾಲೆ ಆಡುವುದಕ್ಕೆ, ಮನೆಗಳಲ್ಲಿ ಪೂಜೆ ಸಮಾರಂಭಗಳಾದರೆ "ಇಸ್ಪೀಟ್" ಆಡಲಿಕ್ಕೆ ಅತ್ಯಂತ ಪ್ರಶಸ್ತ ಜಾಗ ಅದು. ಅದರ ಉಪಯೋಗಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಚಿಕ್ಕು, ಮಾವು ಮುಂತಾದ ಹಣ್ಣುಗಳನ್ನು ಮಕ್ಕಳ ಕಣ್ಣಿಗೆ ಕಾಣದಂತೆ ಮುಚ್ಚಿಡಲು, ದಿನಬಳಕೆ ಉಪಯೋಗಿಸದ ಆದರೆ ದೊಡ್ಡ ಸಮಾರಂಭಗಳಿಗೆ ಬೇಕಾಗುವಂತಹ ದೊಡ್ಡ ದೊಡ್ಡ ಪಾತ್ರೆಗಳನ್ನು ಶೇಖರಿಸಿಡಲು, ಕಂಬಳಿ, ಚಾದರ ಇನ್ನೂ ಹಲವಾರು ಹಾಸಿಗೆ ಸಾಮಗ್ರಿಗಳನ್ನು ಶೇಖರಿಸಿಡಲು, ಇನ್ನೂ ಎಷ್ಟೋ. ನಾವು ಮಕ್ಕಳಿದ್ದಾಗ ಇಷ್ಟೆಲ್ಲಾ ವಸ್ತುಗಳಿದ್ದ ಮೆತ್ತಿ ಸಹಜವಾಗಿ ಒಂತರಾ ನಿಧಿ ಇದ್ದ ಹಾಗೇ ಅನ್ನಿಸುತ್ತಿತ್ತು. ಪ್ರತೀ ಸಲ ಮೆತ್ತಿ ಹತ್ತಿದಾಗಲೂ ಹೊಸಾ ಹೊಸ ವಸ್ತುಗಳು ಕಾಣ್ತಾ ಇದ್ದರೆ ಯಾವ ಮಕ್ಕಳಿಗೆ ತಾನೆ ಸಂತೋಷವಾಗಲಿಕ್ಕಿಲ್ಲ? ಅದೊಂದು ಸದಾ "ಟ್ರೆಶರ್ ಹಂಟ್" ಇದ್ದ ಹಾಗೆಯೇ. ಹಾಗೆಯೇ ಮನೆಯ ಗಜಿಬಿಜಿಯಿಂದ ಸ್ವಲ್ಪ ವಿರಾಮ ಬೇಕೆಂದರೂ, ಮೆತ್ತಿ ಹತ್ತಿ ಕುಳಿತು ಬಿಟ್ಟರೆ ಅದೊಂದು ಹೊಸ ಲೋಕವೇ ಸರಿ. ಹಾಗಾಗಿ ಏಕಾಗ್ರತೆಯಿಂದ ಪುಸ್ತಕ ಓದಲಿಕ್ಕೆ(ಅಕಾಡೆಮಿಕ್ ಪುಸ್ತಕಗಳಲ್ಲ, ಕಥೆ ಪುಸ್ತಕಗಳು!) ಮತ್ತು ಕವನ ಗಿವನ ಗೀಜಲಿಕ್ಕೆ ಮೆತ್ತಿಗಿಂತ ಪ್ರಶಸ್ತವಾದ ಜಾಗ ನಮಗಂತೂ ಸಿಕ್ಕುತ್ತಿರಲಿಲ್ಲ. ಧೋ ಎಂದು ಮಳೆ ಸುರಿಯುವಾಗ ಮೆತ್ತಿ ಹತ್ತಿ, ಜಗತ್ತಿನ ಅರಿವೇ ಇಲ್ಲದಂತೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕಥೆ ಕಾದಂಬರಿ ಓದುವ ಅನುಭೂತಿಯನ್ನು ಯಾವುದಕ್ಕೂ ಹೋಲಿಸಲು ಬರುವುದಿಲ್ಲ ಎಂದರೆ ಹಲವಾರು ಜನರಾದರೂ ನನ್ನನ್ನು ಅನುಮೋದಿಸುತ್ತಾರೆಂಬ ಭರವಸೆ ನನಗಿದೆ. ಈ ಸಾರ್ತಿ ಮೆತ್ತಿ ಹತ್ತಿ ಹಳೆದ್ಯಾವುದೋ ಟ್ರಂಕನ್ನು ಶೋಧಿಸುತ್ತಿರುವಾಗ ಹಳೆಯ ಒಂದಷ್ಟು ಪತ್ರಗಳ ಗಂಟು ನನ್ನ ಕೈಸೇರಿತು. ಬಹಳ ಹಳೆಯದೇನಲ್ಲ, ಸುಮಾರು ೬-೭ ವರ್ಷದ ಹಿಂದಿನವು ಅಷ್ಟೇ. ನಾನು ಬೆಳಗಾವಿಯಲ್ಲಿ ಓದುತ್ತಿರುವಾಗ ಅಕ್ಕ ಕುಮಟಾದಲ್ಲಿ ಬಿಯೆಡ್ ಓದುತ್ತಿದ್ದಳು. ಆಗ ಸುಮಾರು ಒಂದು ವರ್ಷಗಳ ಕಾಲ ನಾವು ವಾರವಾರವೂ ಬರೆದುಕೊಂಡ ಪತ್ರಗಳ ಗಂಟು ಅದು. ಅದನ್ನು ಓದಿಕೊಂಡಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಇಡೀ ದಿನವೂ ಅದರ ಗುಂಗಿನಲ್ಲೇ ಇದ್ದೆ. ತುಂಬಾ ವೈಯಕ್ತಿಕ ಎನಿಸಿದರೂ ಬರೆದು ಎಲ್ಲರಲ್ಲೂ ಹಂಚಿಕೊಳ್ಳಬೇಕೆಂದು ಬಲವಾಗಿ ಅನ್ನಿಸಿ ಬಿಟ್ಟಿತು. ಆವಾಗಿನ್ನೂ ಮೊಬೈಲುಗಳು ಬಂದಿರಲಿಲ್ಲ. ನಾನು ಅಕ್ಕನಿಗೆ ಫೋನ್ ಮಾಡುವುದು ಬಹಳಾನೇ ಕಡಿಮೆ ಇತ್ತು. ಎಲ್ಲೋ ತಿಂಗಳಿಗೊಮ್ಮೆ ಮಾಡುತ್ತಿದ್ದೆ ಅಷ್ಟೇ. ಆದರೆ ಪತ್ರವನ್ನು ಮಾತ್ರ ತಪ್ಪದೇ ವಾರ ವಾರ ಬರೆದುಕೊಳ್ಳುತ್ತಿದ್ದವು. ನಾನು ಗೆಳೆಯರ ಜೊತೆ ರೂಮ್ ಮಾಡಿದ್ದರೆ ಅಕ್ಕ ಒಬ್ಬನೇ ರೂಮ್ ಮಾಡಿಕೊಂಡಿದ್ದಳು. ತಿಳಿನೀಲಿ ಇನ್ ಲ್ಯಾಂಡ್ ಪತ್ರಗಳಲ್ಲಿ ಸಾಧ್ಯವಾದಷ್ಟು ವಿಷಯಗಳನ್ನು ತುಂಬಿ (ಪತ್ರ ಅರ್ಧ ಬರೆದುಬಿಟ್ಟಾಗ ಇನ್ನೂ ಬಹಳಷ್ಟಿದೆ ಬರೆಯುವುದು ಅನ್ನಿಸಿಬಿಡುತ್ತಿತ್ತು, ಹಾಗಾಗಿ ಬರೆಯುತ್ತಾ ಹೋದ ಹಾಗೆ ಅಕ್ಷರಗಳ ಗಾತ್ರ ಸಣ್ಣದಾಗುತ್ತಾ ಹೋಗುತ್ತಿತ್ತು!) ಕಳಿಸುತ್ತಿದ್ದೆವು. ಈಗ ಆ ಪತ್ರಗಳನ್ನು ಓದಿದಾಗ ಅದರಲ್ಲಿದ್ದ ಪ್ರೀತಿ, ಕಾಳಜಿ, ನಮ್ಮ ಆವಾಗಿನ ಮನಸ್ಥಿತಿ ಎಲ್ಲಾ ನೋಡಿ ಒಂತರಾ ವಿಚಿತ್ರವಾದ ಖುಷಿಯಾಯ್ತು. ಮೊದ ಮೊದಲು ಪತ್ರ ಬರೆಯಲು ಶುರು ಮಾಡಿದಾಗ ನಾನು ಉಮೇದಿಯಿಂದ ಒಂದೆರಡು ಸಾರ್ತಿ ಇಂಗ್ಲೀಶಲ್ಲೇ ಪತ್ರ ಬರೆದಿದ್ದೆ. ಆದರೆ ಹಾಗೆ ಬರೆದ ಪತ್ರವೊಂದು ಅಪ್ಪನ ಕೈಗೆ ಸಿಕ್ಕಿ, ಅಪ್ಪ ಅದರಲ್ಲಿ ಹಲವಾರು ವ್ಯಾಕರಣ ದೋಷಗಳನ್ನೆಲ್ಲಾ ಗುರುತಿಸಿ ಇಟ್ಟಿದ್ದರು(ಎಷ್ಟೆಂದ್ರೂ ಮೇಷ್ಟ್ರಲ್ವೇ?). ಅದನ್ನು ನೋಡಿದ ಮೇಲೆ ನನ್ನ ಇಂಗ್ಲೀಷ್ ಜ್ನಾನದ ಮೇಲೆ ನನಗೇ ವಿಪರೀತ ಅಭಿಮಾನ ಹುಟ್ಟಿ ಇಂಗ್ಲೀಷಲ್ಲಿ ಪತ್ರ ಬರೆಯುವ ಸಾಹಸವನ್ನು ಬಿಟ್ಟುಬಿಟ್ಟಿದ್ದೆ. ಮೊನ್ನೆ ಅಪ್ಪ ಗುರುತಿಸಿದ್ದ ತಪ್ಪುಗಳನ್ನೆಲ್ಲ ಮತ್ತೆ ನೋಡಿದಾಗ ನನಗೆ ನಗು ತಡೆದುಕೊಳ್ಳುವುದಕ್ಕೇ ಆಗಲಿಲ್ಲ. ಎಷ್ಟು ಕೆಟ್ಟದಾಗಿ ಬರೆದಿದ್ದೆನೆಂದರೆ, ಈಗ ನನ್ನ ಇಂಗ್ಲೀಷು ಸಿಕ್ಕಾಪಟ್ಟೆ ಸುಧಾರಿಸಿದೆ ಎಂದೆನಿಸುವಷ್ಟು!. ಆಮೇಲಿನ ಪತ್ರಗಳನ್ನೆಲ್ಲಾ ತೆಪ್ಪಗೆ ಹವ್ಯಕ ಭಾಷೆಯಲ್ಲೇ ಬರೆದಿದ್ದೆ!. ನಾನು ಆಗಿನ್ನೂ ನನ್ನ ವಿದ್ಯಾಭ್ಯಾಸ ಮುಗಿಸುತ್ತಾ ಬಂದಿದ್ದೆ. ಅಕ್ಕ ಆಗ ತಾನೇ ಎಮ್ಮೆಸ್ಸಿಯನ್ನು ಅರ್ಧದಲ್ಲೇ ಬಿಟ್ಟು ಬಿಯೆಡ್ ಮಾಡಲು ಬಂದಿದ್ದಳು. ಹಾಗಾಗಿ ನಮ್ಮ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಸಹಜವಾಗಿ ನಮಗೆ ಆತಂಕ ಮತ್ತು ನಿರೀಕ್ಷೆಗಳಿದ್ದವು. ಅವು ಪ್ರತೀ ಪತ್ರಗಳಲ್ಲೂ ಎದ್ದು ತೋರುತ್ತಿದ್ದವು. ಪ್ರಾರಂಭದ ಲೋಕಾಭಿರಾಮದ ಮಾತುಗಳೆಲ್ಲಾ ಮುಗಿದ ಮೇಲೆ ನಮ್ಮ ಅಭ್ಯಾಸಕ್ಕೆ ಆಗುತ್ತಿದ ತೊಂದರೆಗಳು(?), ಅಥವಾ ಪರೀಕ್ಷೆಯಲ್ಲಿ ಕಮ್ಮಿ ಮಾರ್ಕ್ಸ್ ಬಿದ್ದಿದ್ದಕ್ಕೆ ಕಾರಣಗಳು, ಇಂಥದ್ದೇ ಪತ್ರದ ಕೇಂದ್ರ ವಿಷಯಗಳಾಗಿ ಮೂಡುತ್ತಿದ್ದವು. "ಈ ವಾರ ಲೆಸೆನ್ ಪ್ಲಾನ್ ಮಾಡಿದೆ. ನನಗಂತೂ ಬಯೋಲಜಿಯಲ್ಲಿ ಸೆಲ್ ಡಿವಿಷನ್ ಟಾಪಿಕ್ ಇದೆ. ಇದು ಮಕ್ಕಳಿಗೆ ಅರ್ಥವಾಗುವುದು ಕಷ್ಟ. ಮಿಟೋಸಿಸ್ ಅರ್ಥವಾದರೂ ಮಿಯಾಸಿಸ್ ಅರ್ಥವಾಗುವುದೇ ಇಲ್ಲ. ಹೇಗೆ ಅರ್ಥ ಮಾಡಿಸಬೇಕೋ ತಿಳಿಯುತ್ತಿಲ್ಲ. ಸಂಪೂರ್ಣ ಪಾಠ ಮುಗಿದ ಮೇಲೆ ಅವರಿಗೆ ೨೫ ಮಾರ್ಕ್ಸ್ ಟೆಸ್ಟ್ ಬೇರೆ ಮಾಡಬೇಕು. ಇದರ ಜೊತೆ "ಟೀಚಿಂಗ್ ಏಡ್" ಬೇರೆ ಮಾಡಬೇಕು. ಅದೂ ಥರ್ಮೋಕೋಲಲ್ಲೇ ಮಾಡಬೇಕಂತೆ" ಅನ್ನೋ ಸಾಧಾರಣವಾದ ಕಷ್ಟದಿಂದ ಹಿಡಿದು "ಇಲ್ಲಿ ನನ್ನ ಪಾಠ ಎಲ್ಲಾ ಚೆನ್ನಾಗಿ ನಡೆಯುತ್ತಿದೆ, ಆದರೆ ಎಷ್ಟು ಚೆನ್ನಾಗಿ ಪಾಠ ಮಾಡಿದರೂ ಅಷ್ಟೇ, "ಉತ್ತಮ ಪಾಠ" ಎಂದು ಬರೆಯುವುದಿಲ್ಲ. ಪಾಠ ತುಂಬಾ ಚೆನ್ನಾಗಿದೆ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ "ಡಿಮೆರಿಟ್ಸ್" ಕಾಲಮ್ಮಿನಲ್ಲಿ ಏನಾದರೂ ಸಿಲ್ಲಿ ಮಿಸ್ಟೇಕನ್ನು ಬರೆದಿರುತ್ತಾರೆ (ಉದಾ: ಬ್ಲಾಕ್ ಬೋರ್ಡ್ ವರ್ಕ್ ಸುಧಾರಿಸಬೇಕು, ಸಾಲುಗಳು ನೇರವಾಗಿರಬೇಕು ಇಂಥದ್ದು) ಹೀಗೆ ಮಾಡಿದರೆ ಇಂಟರ್ನಲ್ ಮಾರ್ಕ್ಸ್ ಬೀಳುವುದೇ ಕಷ್ಟ" ಅನ್ನೋ ಗಂಭೀರ ಕಷ್ಟದ ಬಗ್ಗೆ ಅಕ್ಕ ಸಾಮಾನ್ಯವಾಗಿ ಬರೆಯುತ್ತಿದ್ದಳು. ನನ್ನ ಕಷ್ಟಗಳಂತೂ ಸದಾ ಪರೀಕ್ಷೆಯ ಸುತ್ತಮುತ್ತಲೇ ತಿರುಗುತ್ತಿದ್ದವು. "ನನ್ನ ಐಸಿ-೨ ಲ್ಯಾಬ್ ಸರಿನೇ ಆಜಿಲ್ಲೆ. ಎಲ್ಲಾ ಸರಿ ಮಾಡಿದಿದ್ದಿ, ಆದ್ರೂ "ಪಾರ್ಶಿಯಲ್ ಔಟ್ ಪುಟ್" ಬಂಜು. ನಮ್ಮ ಬ್ಯಾಚಲ್ಲಿ ಇನ್ನೂ ೫-೬ ಜನಕ್ಕೆ ಹಾಂಗೇ ಆಜು. ಈ ಇಲೆಕ್ಟ್ರಾನಿಕ್ಸ್ ಲ್ಯಾಬಿನ ಹಣೆಬರಹಾನೇ ಇಷ್ಟು. ಒಂದೂ ಸರಿಯಾಗಿ ವರ್ಕ್ ಆಗ್ತಿಲ್ಲೆ. ನಿನ್ನೆ ಸಿಕ್ಕಾಪಟ್ಟೆ ಟೆನ್ಶನ್ ಆಗೋಗಿತ್ತು. ಈಗ ಅಡ್ಡಿಲ್ಲೆ" ಅನ್ನೋ ದೌರ್ಭಾಗ್ಯದಿಂದ ಹಿಡಿದು "ನಂಗಳ ಕ್ಲಾಸ್ ಟೈಮ್ ಹ್ಯಾಂಗೆ ಗೊತ್ತಿದ್ದ? ಮಧ್ಯಾಹ್ನ ೧ ರಿಂದಾ ೫ ರ ತನಕ. ಊಟ ಮಾಡ್ಕ್ಯಂಡು ಹೋದ್ರಂತೂ ಪೂರ್ತಿ ನಿದ್ದೆ ಬಂದು ಬಿಡ್ತು. ಮೇಲಿಂದ ಸಿಕ್ಕಾಪಟ್ಟೆ ಸೆಖೆ ಬೇರೆ" ಅನ್ನೋ ಸರ್ವೇಸಾಧಾರಣವಾದ ಕಷ್ಟಗಳನ್ನೂ ಬರೆದುಕೊಳ್ಳುತ್ತಿದ್ದೆ. ಮುಕ್ಕಾಲು ಭಾಗ ನಮ್ಮ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರಲ್ಲೇ ಮುಗಿದುಹೋಗುತ್ತಿತ್ತು. ಅಕ್ಕಂದಿರಿಗೆ ಯಾವತ್ತಿದ್ರೂ ಜಾಸ್ತಿ ಕಾಳಜಿ ಅಲ್ವೇ? ಹಾಗಾಗಿ ಸುಮಾರಷ್ಟು ಸಲಹೆ ಸೂಚನೆಗಳನ್ನು ಅಕ್ಕ ಪ್ರತೀ ಪತ್ರದಲ್ಲೂ ತಪ್ಪದೇ ನೀಡುತ್ತಿದ್ದಳು. "ನೀನು ಸರಿಯಾಗಿ ಓದು. ಎಷ್ಟೇ ಹೆವೀ ವರ್ಕ್ ಮಾಡು, ಆದರೆ ಆರೋಗ್ಯವನ್ನು ಹಾಳುಮಾಡಿಕೊಂಡು ಬಿಡಬೇಡ.ನಿದ್ದೆ ಸರಿಯಾಗಿ ಮಾಡು(ಇದನ್ನು ಹೇಳುವುದು ನಿಜಕ್ಕೂ ಅನವಶ್ಯಕವಾಗಿತ್ತು), ಇಲ್ಲದೇ ಇದ್ದರೆ ನಿನಗೆ ಆರಾಂ ಇರುವುದಿಲ್ಲ" ಅನ್ನೋ ಟಿಪಿಕಲ್ ಕಾಳಜಿ ಸಾಲುಗಳ ಜೊತೆಗೆ "ಪರೀಕ್ಷೆ ಚೆನ್ನಾಗಿ ಮಾಡು. ಸಿಲ್ಲಿ ಮಿಸ್ಟೇಕ್ ಮಾಡಬೇಡಾ. ಪ್ರಾಕ್ಟಿಕಲ್ ಎಕ್ಸಾಂನ ಬಹಳ ಕೇರ್ ನಿಂದ ಮಾಡು. ಗಡಬಡೆ ಮಾಡಿಕೊಳ್ಳಬೇಡಾ(ನನ್ನ ವೀಕ್ ನೆಸ್ ಅವಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು)" ಅನ್ನೋ ಗಂಭೀರ ಸಲಹೆಗಳನ್ನೂ ನೀಡುತ್ತಿದ್ದಳು. ಅವಳು ಅಷ್ಟೆಲ್ಲಾ ಹೇಳಿದ ಮೇಲೆ ನಾನು ಯಾಕೆ ಸುಮ್ಮನಿರಬೇಕೆಂದು ನಾನೂ ಒಂದೆರಡು ಸಾಲು ಬರೆದು ಹಾಕುತ್ತಿದ್ದೆ." ನೀನೂ ರಾಶಿ ನಿದ್ದೆಗೆಟ್ಟು ಓದಡಾ. ಸರಿಯಾಗಿ ಓದು.ಗಡಿಬಿಡಿ ಮಾಡ್ಕ್ಯಂಡು ತಪ್ಪು ಮಾಡಡಾ(ಅವಳ ಬಾಣ ತಿರುಗಿ ಅವಳಿಗೇ!) ಅಂತಾನೂ, ಆರೋಗ್ಯ ಸರಿ ನೋಡ್ಕ್ಯ. ಲೆಸ್ಸೆನ್ಸು ಹೇಳಿ ಆಡುಗೆ ಸರೀ ಮಾಡ್ಕ್ಯಳದ್ದೇ ಕಡಿಗೆ ಬಿಯೆಡ್ ಮುಗಸತನಕಾ ನನ್ನಂಗೆ ಆಗಿ(ತೆಳ್ಳಗಾಗಿ) ಬಂದು ಬಿಡಡಾ ಎಂದೆಲ್ಲಾ ಸಣ್ಣ ಜೋಕ್ ಕಟ್ ಮಾಡಿಬಿಟ್ಟಿದ್ದೂ ಇದೆ. ಇನ್ನೊಂದು ಸಲವಂತೂ ಯಾವುದೋ ದೊಡ್ಡ ಫಿಲೋಸಫರ್ ತರಾ "ಇಂಟೆಲಿಜೆನ್ಸ್ ಎಂಡ್ ಎಬಿಲಿಟಿ ಆರ್ ನಥಿಂಗ್ ಟು ಡು ವಿಥ್ ಯುವರ್ ಮಾರ್ಕ್ಸ್" ಅಂತೆಲ್ಲಾ ಡೈಲಾಗ್ ಹೊಡೆದಿದ್ದೂ ಇದೆ. ಈಗ ಅದನ್ನೆಲ್ಲ ಓದಿ ನಗುವೋ ನಗು. ಒಟ್ಟಿನಲ್ಲಿ ನನಗೆ ಬೇಜಾರಾದ್ರೆ ಅವಳು ಸಮಾಧಾನ ಹೇಳೋದು, ಅವಳಿಗೆ ಬೇಜಾರಾದ್ರೆ ನಾನು ಸಮಾಧಾನ ಹೇಳೋದು.ಸಮಾಧಾನ ಹೇಳ್ಲಿ ಅಂತಾನೇ ಅಷ್ಟೆಲ್ಲಾ ಕಷ್ಟಗಳನ್ನು ಹೇಳಿಕೊಳ್ತಿದ್ವಾ ಅಂತ ಈಗ ಗುಮಾನಿ ಬರ್ತಿದೆ. ಅಕ್ಕ ಕುಮಟಾದಲ್ಲಿ ಇರೋದ್ರಿಂದ ಮನೆಗೆ ಸಾಧಾರಣವಾಗಿ ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಹೋಗಿ ಬರುತ್ತಿದ್ದಳು.ಆದರೆ ನಾನು ಹೋಗುವುದು ಎರಡು ತಿಂಗಳಿಗೋ ಅಥವಾ ೩ ತಿಂಗಳಿಗೋ ಒಮ್ಮೆಯಾಗಿತ್ತು. ಹಾಗಾಗಿ ಮನೆ ಸುದ್ದಿಯನ್ನೆಲ್ಲ ಪತ್ರದಲ್ಲಿ ಸಂಕ್ಷಿಪ್ತವಾಗಿ ಅಕ್ಕ ಹಂಚಿಕೊಳ್ಳುತ್ತಿದ್ದಳು. "ಮೊನ್ನೆ ಬಾಳೂರಲ್ಲಿ ಪಲ್ಲಕ್ಕಿ ಉತ್ಸವ ಇತ್ತು,ವಿನುತಾನ ಅಣ್ಣನ ಕ್ಲಿನಿಕ್ಕು ಇವತ್ತು ಹೊಸಪೇಟೆ ರೋಡಲ್ಲಿ ಓಪನ್ ಆತು, ಮುಂದಿನ ವಾರ ಆಯಿ ಬಟ್ಟೆ ತರಲೆ ತಾಳಗುಪ್ಪಕ್ಕೆ ಹೋಗ್ತಿ ಹೇಳಿದ್ದು,ಇಂಥದ್ದೇ. ಕೆಲವೊಂದು ಸಲ ನಮ್ಮನೆ ಸದಸ್ಯರಂತೇ ಇರುವ ನಾಯಿ,ಆಕಳುಗಳ ಬಗ್ಗೆಯೂ ಮಾತು ಬರುತ್ತಿತ್ತು. "ನಮ್ಮನೆ ಹಂಡಿ(ದನ) ಕರ ಒಂಚೂರು ಚಂದ ಇಲ್ಲೆ. ಮುಸುಡಿ ಮೇಲೆಲ್ಲಾ ಚುಕ್ಕಿ ಚುಕ್ಕಿ ಇದ್ದು. ಹಂಡಿ ಭಾಳಾನೇ ಬಡಿ ಬಿದ್ದೋಜು. ಕೆಚ್ಚಲ ಬಾವು ಆಗಿತ್ತು. ಕರಿಯಲೇ ಕೊಡ್ತಿತ್ತಿಲ್ಲೆ, ಸಿಕ್ಕಾಪಟ್ಟೆ ಓದೀತಿತ್ತು. ಗ್ರೇಸಿಯಂತೂ ಪಕ್ಕಾ ಹಡಬೆ ನಾಯಿ ಆದಾಂಗೆ ಆಜು. ಕಂಡಕಂಡಿದ್ದೆಲ್ಲಾ ಮುಕ್ತು. ಪಾತ್ರೆ ತೊಳೆಯುವ ಸುಗುಡನ್ನೂ ತಿಂಬಲೆ ಹಣಕಿದ್ದು" ಅನ್ನೋ ಸಾಲುಗಳನ್ನು ಈಗ ಓದಿದರೆ ಯಾಕೋ ಅವುಗಳ ನೆನಪುಗಳೆಲ್ಲಾ ಮತ್ತೆ ಮರುಕಳಿಸಿ ಒಂತರಾ ಖುಷಿ, ಒಂತರಾ ದುಃಖನೂ ಆಗುತ್ತದೆ. ಹೇಳ್ತಾ ಹೋದರೆ ಮುಗಿಯುವುದೇ ಇಲ್ಲ.ಅಷ್ಟು ಸಣ್ಣ ಪತ್ರದೊಳಗೆ ಎಷ್ಟೆಲ್ಲಾ ವಿಷಯಗಳನ್ನೆಲ್ಲಾ ತುಂಬಿಸುತ್ತಿದ್ದೆವು ಎಂದು ವಿಸ್ಮಯವಾಗುತ್ತದೆ. ನಮಗೆ ಆ ಪತ್ರಗಳು ಕೇವಲ ಯೋಗಕ್ಷೇಮ ತಿಳಿಸುವ ಸಾಧನಗಳಾಗಿರಲಿಲ್ಲ. ನಮ್ಮ ಎಲ್ಲಾ ಆತಂಕಗಳು, ಸಣ್ಣಪುಟ್ಟ ಖುಷಿಗಳು, ಬೇಜಾರು, ವೇದನೆ, ಛಲ, ಪ್ರೀತಿ, ಕಾಳಜಿ, ಇನ್ನು ಎಷ್ಟೋ ಭಾವಗಳು ಮಿಳಿತಗೊಂಡು ಅಕ್ಷರ ರೂಪ ಪಡೆಯುತ್ತಿದ್ದವು.ನಮ್ಮ ಆ ಕಾಲದ ಮನೋಸ್ಥಿತಿಯ ಪ್ರತಿಬಿಂಬವೇ ಆಗಿದ್ದ ಆ ಪತ್ರಗಳ ಗಂಟನ್ನೆಲ್ಲ ಜೋಪಾನವಾಗಿ ತಂದಿಟ್ಟುಕೊಂಡಿದ್ದೇನೆ. ನನ್ನ ಹತ್ತಿರವಿರುವ ಪುಸ್ತಕಗಳ ತೂಕವೇ ಒಂದಾದರೆ, ಈ ಪತ್ರಗಳ ತೂಕವೇ ಒಂದು. ಇನ್ನೂ ಹಲವು ವರ್ಷಗಳ ನಂತರ ಅವನ್ನು ಓದಿದರೂ ಮಾಂತ್ರಿಕ ಪೆಟ್ಟಿಗೆ ತೆಗೆದಂತೆ ನೆನಪುಗಳ ಭಂಡಾರ ಮನಸ್ಸಿನ ಪರದೆ ಮೇಲೆ ಹರಡಿಕೊಳ್ಳುವುದರಲ್ಲಿ ನನಗೆ ಸಂಶಯವೇ ಇಲ್ಲ. ಈಗಿನ ಮೊಬೈಲು ಯುಗದಲ್ಲಿ ಪತ್ರ ಬರೆಯುವ ವ್ಯವಧಾನ, ಪುರುಸೊತ್ತು, ತಾಳ್ಮೆಯಂತೂ ಯಾರಿಗೂ ಇಲ್ಲ. ಆದರೆ ಪತ್ರ ಬರೆಯುವ ಖುಷಿ ಮತ್ತು ಪತ್ರಕ್ಕಾಗಿ ಕಾಯುವ ತವಕವನ್ನು ಎಂಥ ಪ್ರೀತಿಯ ಎಸ್ಸೆಮ್ಮೆಸ್ಸುಗಳೂ, ಕಾಲ್ ಗಳೂ ತಂದುಕೊಡುವುದಿಲ್ಲವೆಂಬುದು ಮಾತ್ರ ಉರಿಯುವ ಸೂರ್ಯನಷ್ಟೇ ಸತ್ಯ. Posted by Unknown at 9:30 AM 19 comments Sunday, September 7, 2008 ಕಚ್ಚೋ ಚಪ್ಪಲ್ಲು "ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ ಶೂ ಒದ್ದೆಯಾಗದೇ ಇನ್ನೇನು ಸುಡುಬೇಸಿಗೇಲಿ ಒದ್ದೆ ಆಗುತ್ತಾ?" ಅಂತ ಪ್ರಶ್ನೆ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದ್ರೆ ಅವನಿದ್ದ ಮೂಡಲ್ಲಿ ಆ ಪ್ರಶ್ನೆ ಕೇಳಿದ್ರೆ ನನ್ನ ಆರೋಗ್ಯಕ್ಕೆ ಒಳ್ಳೆದಲ್ಲವೆಂದು ಮನಸ್ಸು ತಿಳಿ ಹೇಳಿದ್ದರಿಂದ, ಬಾಯಿ ತೆಪ್ಪಗಾಯ್ತು. "ಹಂ, ಯಾಕೋ ಸಿಕ್ಕಾಪಟ್ಟೆ ಮಳೆ ಇವತ್ತು. ಬೆಂಗಳೂರಲ್ಲಿ ಒಂದು ಜೋರು ಮಳೆ ಬಿದ್ರೆ, ಎಲ್ಲಾ ಅಧ್ವಾನ" ಅಂತ ಅವನ ಪಾಡಿಗೆ ಸಹಾನುಭೂತಿ ವ್ಯಕ್ತಪಡಿಸಿ, ಅವನನ್ನ ಸ್ವಲ್ಪ ಸಮಾಧಾನ ಪಡಿಸಲು ಪ್ರಯತ್ನಿಸಿದೆ. ಅವನಿಗೆ ಸಮಾಧಾನವಾದ ಲಕ್ಷಣ ಕಾಣಲಿಲ್ಲ. ಅದಿನ್ನು ಒಣಗಲಿಕ್ಕೆ ೩ ದಿನವಾದ್ರೂ ಬೇಕು ಅನ್ನುವುದು ಅವನ ದೊಡ್ಡ ತಲೆನೋವಾಗಿತ್ತು. ಅವನು ಗೊಣಗುತ್ತಾ ಬಚ್ಚಲಮನೆಗೆ ಕಾಲು ತೊಳೆಯಲು ಹೋಗುತ್ತಿದಂತೆಯೇ ನನ್ನ ನೆನಪುಗಳ ಹಾಸಿಗೆ ನಿಧಾನವಾಗಿ ಬಿಚ್ಚಲಾರಂಭಿಸಿತು. ಚಿಕ್ಕಂದಿನಲ್ಲಿ ಮಳೆಗಾಲ ನನಗೆ ಹೇಳಿಕೊಳ್ಳುವಷ್ಟು ಇಷ್ಟವೇನೂ ಆಗಿರಲಿಲ್ಲ. ಮಳೆನೀರಿನಲ್ಲಿ ಆಡಬಹುದು ಎಂಬ ಸಂತೋಷ ಒಂದನ್ನು ಬಿಟ್ಟರೆ ಮಳೆಗಾಲದಲ್ಲಿ ಎಲ್ಲವೂ ರಗಳೆಯೇ. ಈಗ ಬೆಂಗಳೂರಿಗೆ ಬಂದು ಊರ ಮಳೆಯನ್ನು ಮಿಸ್ ಮಾಡಿಕೊಂಡ ಮೇಲೆಯೇ ಮಳೆಗಾಲದ ನೆನಪುಗಳು ಬಹಳ ಅಪ್ಯಾಯಮಾನವೆನ್ನಿಸುತ್ತಿವೆ. ಮಳೆಗಾಲ ಎಂದರೆ ಮಲೆನಾಡಿನವರಿಗೆ ಒಣಗದ ಬಟ್ಟೆ, ಹಸಿಹಸಿ ಕಟ್ಟಿಗೆ ಒಲೆಯಲ್ಲಿ ಉಂಟು ಮಾಡುವ ಅಸಾಧ್ಯ ಹೊಗೆ, ಸಂಕದ ಮೇಲೆ ಹರಿಯುತ್ತಿರುವ ನೀರು, ರಸ್ತೆ ಸರಿ ಇರದೆ ಕ್ಯಾನ್ಸಲ್ ಆಗುವ ಬಸ್ಸು ಇಂಥ ಹಲವಾರು ತೊಂದರೆಗಳೇ ನೆನಪಾಗೋದು. ಕೆಲಸಗಳು ಯಾವುದೂ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಮೊನ್ನೆ ಜೋರು ಮಳೆ ಬಂದಾಗ, "ಆಹಾ, ಎಂಥಾ ಮಳೆ, ಈ ಮಳೆಲ್ಲಿ ಆರಾಮಾಗಿ ಕುತ್ಕಂಡು, ಬಿಸಿಬಿಸಿ ಚಾ ಕುಡ್ಯವು ನೋಡು" ಅಂತ ಅಮ್ಮನ ಹತ್ರ ಹೇಳಿದ್ರೆ, "ಎಂತಾ ಮಳೆನೆನಪಾ, ಒಂದೂ ಕೆಲ್ಸ ಮಾಡಲೇ ಬಿಡ್ತಿಲ್ಲೆ.ಎಷ್ಟೆಲ್ಲಾ ಕೆಲ್ಸ ಹಾಂಗೇ ಉಳ್ಕಂಜು ನೋಡು,ನಿಂಗೆ ಚಾ ಮಾಡ್ಕ್ಯೋತಾ ಕುಂತ್ರೆ ಅಷ್ಟೇಯಾ" ಎಂದು ನನ್ನ ಸೋಮಾರಿ ಮೂಡಿಗೆ ಛೀಮಾರಿ ಹಾಕಿದಳು. ಅವಳ ಪ್ರಕಾರ ಮಳೆಗಾಲ ನನ್ನಂಥ ಸೋಮಾರಿಗಳಿಗೆ ಹೇಳಿ ಮಾಡಿಸಿದ ಕಾಲ, ಅವಳ ಹಾಗೆ ಸದಾ ಚಟಿಪಿಟಿಯಿಂದ ಓಡಾಡ್ತಾ ಕೆಲಸ ಮಾಡಿಕೊಂಡು ಇರುವಂತವರಿಗೆ ಕೈಕಾಲು ಕಟ್ಟಿ ಹಾಕಿದ ಹಾಗೆಯೇ. ಆದರೆ ಮಜ ಇರುವುದು ಮನೆಯಿಂದ ಹೊರ ಬಿದ್ದಾಗಲೇ. ನಾವು( ನಾನು ಮತ್ತು ನನ್ನಕ್ಕ) ಸಣ್ಣಕ್ಕಿದ್ದಾಗ ಮಳೆಗಾಲದಲ್ಲಿ ಶಾಲೆಗೆ ಹೋಗುವುದು ಒಂತರಾ ಸಾಹಸವೇ ಆಗಿತ್ತು. ನಮಗಿಂತಾ ದೊಡ್ಡದಾದ ಕೊಡೆ ಹಿಡಿದುಕೊಂಡು,ಜೋರಾಗಿ ಗಾಳಿ ಬೀಸಿದಾಗಲೆಲ್ಲಾ ಅದು ಹಾರಿಹೋಗದಂತೆ ಅಥವಾ ಕೊಡೆಯೇ ಉಲ್ಟಾ ಆಗದಂತೆ ಹರಸಾಹಸ ಮಾಡುತ್ತಾ, ಅಚಾನಕ್ ಆಗಿ ರಸ್ತೆಯಿಂದ ಕೆಳಕ್ಕಿಳಿದು ಕೆಸರು ನೀರನ್ನು ನಮ್ಮ ಮೈಗೆ ಎರಚಲು ಹವಣಿಸುವ ಬಸ್ಸು, ಲಾರಿಗಳಿಂದ ತಪ್ಪಿಸಿಕೊಳ್ಳುತ್ತಾ, ರಸ್ತೆ ಮೇಲೆ ನೀರೆಲ್ಲಾ ಹರಿಯುತ್ತಿದ್ದರೆ ಆ ಪವಿತ್ರ ಕುಂಕುಮ ನೀರಲ್ಲೇ ನಮ್ಮ ಪಾದಗಳನ್ನು ನೆನೆಸಿಕೊಳ್ಳುತ್ತಾ ಹೋಗುತ್ತಿದ್ದೆವು. ನಮ್ಮ ಕೈಯಲ್ಲಿದ್ದ ಕೊಡೆ ಮಾತ್ರ ಅದ್ಭುತ ಸಲಕರಣೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದಾಗಲಂತೂ ಇದ್ದೇ ಇದೆಯಲ್ಲ, ಮಳೆ ಬೀಳದೇ ಇದ್ದಾಗಲೂ ಒಮ್ಮೊಮ್ಮೆ ಹೆಗಲ ಮೇಲೆ ಗದೆಯಾಗಿ, ಇನ್ನೊಮ್ಮೆ ಗಿರಿಗಿಟ್ಲಿಯಾಗಿ, ಇನ್ನೊಮ್ಮೆ ದಾರಿಬದಿಯಲ್ಲಿದ್ದ ಪಿಳ್ಳೆ ಹಣ್ಣಿನ(ನೇರಳೆ ಹಣ್ಣಿನಂತದ್ದೇ)ಟೊಂಗೆಯನ್ನು ಬಗ್ಗಿಸಲು, ಇನ್ನೊಮ್ಮೆ ಕ್ರಿಕೆಟ್ ಬ್ಯಾಟ್ ಆಗಿಯೂ ಉಪಯೋಗಕ್ಕೆ ಬರುತ್ತಿತ್ತು. ಇಷ್ಟೆಲ್ಲಾ ಸಂಭಾಳಿಸಿಕೊಂಡೂ ಹಾಕಿಕೊಂಡಿದ್ದ ಬಟ್ಟೆಗೆ ಒಂಚೂರು ಕೊಳೆಯಾಗದೇ ಮನೆಗೆ ಬಂದರೆ ನಮ್ಮ ವಯಸ್ಸಿಗೇ ಅವಮಾನ ಮಾಡಿದಂತಲ್ಲವೇ? ನಾವು ನೆಟ್ಟಗೆ ಮನೆಗೆ ಬರುತ್ತಿದ್ದ ಟಾರು ರಸ್ತೆಯನ್ನು ಬಿಟ್ಟು, ಪಕ್ಕದಲ್ಲಿದ್ದ ಕಾಲುವೆ ಹಾರಿ, ಧರೆಯನ್ನೆಲ್ಲ ಗುದಕಿ,ಬೆಟ್ಟ ಬೇಣವನ್ನೆಲ್ಲ ಹುಡುಕಿ, ಅಪರೂಪಕ್ಕೊಮ್ಮೆ ಜಾರಿಬಿದ್ದು ಮನೆಗೆ ತಲುಪಿದಾಗ ಅಮ್ಮನ ತಲೆನೋವು ಶುರುವಾಗುತ್ತಿತ್ತು. ಮೊದಲೇ ಬಟ್ಟೆಗಳು ಒಣಗುವುದಿಲ್ಲ.ತೊಳೆದುಹಾಕುವಂತಿಲ್ಲ.ಕೊಳೆಯಾದ ಬಟ್ಟೆಗಳನ್ನೇ ಹಾಕಿಕೊಂಡು ಹೋದರೆ ನಮಗೆ ಅವಮಾನ ಬೇರೆ. ಅಮ್ಮನ ಕಷ್ಟ ಹೇಳತೀರದು. ನಮ್ಮ ಮಂಗಾಟಗಳ ಚೆನ್ನಾಗಿ ಪರಿಚಯವಿದ್ದ ಅಮ್ಮ ಯೋಚಿಸಿ ಯೋಚಿಸಿ, ಸರಿಯಾದ ಚಪ್ಪಲ್ಲಿಗಳನ್ನು ನಾವು ಹಾಕಿಕೊಂಡರೆ ಬಟ್ಟೆ ಕೊಳೆಮಾಡಿಕೊಳ್ಳುವುದನ್ನು ಕಮ್ಮಿ ಮಾಡುತ್ತೇವೆ ಎಂದ ನಿರ್ಧಾರ ಮಾಡಿರಬೇಕು. ಹಾಗಾಗಿ ಮಳೆಗಾಲದಲ್ಲಿ ಹಾಕುವ ಬಟ್ಟೆಗಳಿಗೆ ಮನೆಯಲ್ಲಿ ಎಷ್ಟು ಮಹತ್ವ ಕೊಡುತ್ತಿದ್ದರೋ, ಅಷ್ಟೇ ಮಹತ್ವವನ್ನು ನಾವು ಹಾಕುವ ಚಪ್ಪಲ್ಲಿಗಳಿಗೂ ಕೊಡುತ್ತಿದ್ದರು. ಬೆಂಗಳೂರಿನಲ್ಲಿ ಒಂದೇ ಚಪ್ಪಲ್ಲಿ ಅಥವಾ ಶೂನಲ್ಲಿ ಇಡೀ ವರ್ಷ ಕಳೆದುಬಿಡಬಹುದೇನೋ, ಆದರೆ ನಮಗೆ ಮಾತ್ರ ವರ್ಷಕ್ಕೆ ಕಡ್ಡಾಯವಾಗಿ ಬೇಸಿಗೆಕಾಲಕ್ಕೆ ಒಂದು ಜೊತೆ, ಮಳೆಗಾಲಕ್ಕೆಂದೇ ಜಾಸ್ತಿ ಜಾರದ, ಪ್ಲಾಸ್ಟಿಕ್ ಚಪ್ಪಲ್ಲು ಬೇಕೇ ಬೇಕಾಗುತ್ತಿತ್ತು. ಛಳಿಗಾಲದಲ್ಲಿ ಸಾಮಾನ್ಯ ಹವಾಯಿ ಚಪ್ಪಲ್ಲು ಸಾಕಾಗುತ್ತಿತ್ತು. ಮಳೆಗಾಲ ಇನ್ನೇನು ಶುರುವಾಗುತ್ತಿದೆ ಎನ್ನುವಾಗಲೇ ನಾವು ಅಪ್ಪನಿಗೆ ದಿನಾಲೂ ಚಪ್ಪಲ್ಲಿನ ನೆನಪು ಮಾಡಿಕೊಡಲು ಶುರುಮಾಡುತ್ತಿದ್ದೆವು. ನಮ್ಮ ಕಾಟ ಅತಿಯಾದಾಗ ಅಪ್ಪ ಒಂದು ಶುಭಸಂಜೆಯಲ್ಲಿ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದು ಐದಾರು ಅಂಗಡಿಗಳಿಗೆ ತಿರುಗಿ ಸಾಕಾದಷ್ಟು ಚೌಕಾಶಿ ಮಾಡಿ, ಸಾಧ್ಯವಾದಷ್ಟು ಬಾಳಿಕೆ ಬರುವಂತಹ ಜೋಡಿಯೊಂದನ್ನು ತೆಗೆಸಿಕೊಡುತ್ತಿದ್ದರು(ಆದರೆ ಆ ಜೋಡಿಗಳಿಗೆ ಒಂದೇ ಮಳೆಗಾಲಕ್ಕಿಂತ ಹೆಚ್ಚು ಆಯಸ್ಸನ್ನು ನಾವು ದಯಪಾಲಿಸುತ್ತಲೇ ಇರಲಿಲ್ಲ!). ಅಲ್ಲಿ ನಮ್ಮ ಆಯ್ಕೆಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪನಿಗೆ ಚೆನ್ನಾಗಿದೆ ಅನ್ನಿಸಿದ್ದು ನಮ್ಮ ಪಾಲಿಗೆ ಬಂದ ಹಾಗೇ. ಅಪರೂಪಕ್ಕೊಮ್ಮೆ "ನಂಗೆ ಆ ಚಪ್ಪಲ್ಲಿನೇ ಬೇಕು" ಎಂಬ ಕ್ಷೀಣ ಸದ್ದು ಬಾಯಿ ತುದಿಯಂಚಲ್ಲಿ ಬಂದು ಇನ್ನೇನು ಬಿದ್ದೇ ಹೋಗುತ್ತದೆ ಎಂಬ ಭಯ ಹುಟ್ಟಿಸಿದರೂ, ಅಪ್ಪ "ಈ ಚಪ್ಪಲ್ಲು ಅಡ್ಡಿಲ್ಯನಾ?" ಎಂದು ಕೇಳಿದ ತಕ್ಷಣವೇ ನಾವು ಗೋಣನ್ನು ಅಡ್ಡಡ್ಡವಾಗಿ ಆಡಿಸಿ, ಮಾತು ಗಂಟಲಲ್ಲೇ ಉಳಿದುಹೋಗುವಂತೆ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದೆವು. ಚಪ್ಪಲ್ಲಿ ಎಷ್ಟು ಚೆನ್ನಾಗಿದ್ದರೂ, "ಅದರ ಬಾರ್ ಸರಿಯಿಲ್ಲೆ", "ಇನ್ನೊಂಚೂರು ದೊಡ್ಡಕೆ ಇರಕಾಯಿತ್ತು", "ಹಿಮ್ಮಡಿ ಇನ್ನೂ ಎತ್ತರಕೆ ಇರಕಾಗಿತ್ತು" ಅಂತೆಲ್ಲಾ ಕಂಪ್ಲೇಂಟುಗಳನ್ನು ಅಪ್ಪ ಇಲ್ಲದಿದ್ದಾಗ ಅಮ್ಮನ ಹತ್ತಿರ ಹೇಳಿಕೊಳ್ಳುತ್ತಿದ್ದೆವು. ಅಮ್ಮ ಏನು ಮಾಡಿಯಾಳು? "ಮುಂದಿನ ಮಳೆಗಾಲದಲ್ಲಿ ಛೊಲೋದು ತಗಳಕ್ಕಡಾ ಬಿಡು" ಅಂತ ಸಮಾಧಾನ ಮಾಡುತ್ತಿದ್ದರು. ಅಸಲಿ ತೊಂದರೆಗಳು ನಾವು ಆ ಚಪ್ಪಲ್ಲನ್ನು ಶಾಲೆಗೆ ಹಾಕಿಕೊಂಡು ಹೋಗಲು ಶುರುಮಾಡಿದ ಮೇಲೆ ಶುರುವಾಗುತ್ತಿದ್ದವು. ಸ್ವಲ್ಪ ಗಟ್ಟಿ ಗಟ್ಟಿಯಾಗಿದ್ದ ಚಪ್ಪಲ್ಲಿಗಳು ನಮ್ಮ ಮೆದುವಾದ ಪಾದವನ್ನು ತಾಗಿ ತಾಗಿ ಹೆಬ್ಬೆರಳ ಸಂದಿಯಲ್ಲೋ(ಚಪ್ಪಲ್ಲಿಯ ಬಾರ್ ಬರುವಲ್ಲಿ) ಅಥವ ಹಿಮ್ಮಡಿಯಲ್ಲೋ, ಅಥವೋ ಪಾದದ ಎರಡೂ ಬದಿಯಲ್ಲೋ ಸಣ್ಣ ಗಾಯವನ್ನು ಮಾಡಿ ಬಿಡುತ್ತಿದ್ದವು. ಅದರ ಪರಿಣಾಮ ಮಾರನೆಯ ದಿನದಿಂದ ನಮಗೆ ಆ ಚಪ್ಪಲ್ಲಿಯನ್ನು ಹಾಕಿಕೊಳ್ಳಲು ಬಹಳ ತೊಂದರೆ ಆಗುತ್ತಿತ್ತು. ನಾವು ನಡೆದಂತೆಲ್ಲ ಅದೇ ಗಾಯ ಮತ್ತೆ ಚಪ್ಪಲ್ಲಿನ ಗಟ್ಟಿ ಭಾಗಕ್ಕೆ ತಾಗಿ ಇನ್ನೂ ಉರಿಯಾಗುತ್ತಿತ್ತು. ಸುಮಾರು ಒಂದು ವಾರಗಳ ತನಕ ಆ ಗಾಯ ತೊಂದರೆ ಕೊಡುತ್ತಲೇ ಇರುತ್ತಿತ್ತು. ಅದಕ್ಕೆ ನಾವು "ಚಪ್ಪಲ್ಲಿ ಕಚ್ಚುವುದು" ಎನ್ನುತ್ತಿದ್ದೆವು. ಆಗೆಲ್ಲ ಗಾಯಕ್ಕೆ ಎಣ್ಣೆ ಹಚ್ಚೋ,ಚಪ್ಪಲ್ಲಿನ ಆ ಭಾಗಕ್ಕೆ ಹತ್ತಿ ಸುತ್ತೋ ಉರಿಯ ಪರಿಣಾಮವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಸ್ವಲ್ಪ ದಿನಗಳಾದ ಮೇಲೆ ಚಪ್ಪಲ್ಲು ಸ್ವಲ್ಪ ಮೆದುವಾಗಿಯೋ, ಅಥವ ನಮಗೆ ರೂಢಿಯಾಗಿಯೋ ಚಪ್ಪಲ್ಲು ಕಚ್ಚುವುದು ನಿಂತು ಹೋಗುತ್ತಿತ್ತು. ಆದರೆ ಆ ಸ್ವಲ್ಪ ದಿನಗಳಲ್ಲೇ ನಾವು ಅನುಭವಿಸುತ್ತಿದ್ದ ಯಮಯಾತನೆ,ಹೊಸ ಚಪ್ಪಲ್ಲಿನ ಉತ್ಸಾಹವನ್ನು ಬಹಳ ಪಾಲು ಕಮ್ಮಿಮಾಡಿಬಿಡುತ್ತಿದ್ದವು. ಹಾಗಾಗಿ ಮಳೆಗಾಲ ಎಂದ ಕೂಡಲೇ ನನಗೆ ನೆನಪಿಗೆ ಬರುವುದು, ನಾವು ಕುಂಟುತ್ತಾ ಕಾಲನೆಳೆಯುತ್ತಾ ಹೋಗುತ್ತಿರುವ ದೃಶ್ಯ. ಅಪರೂಪಕ್ಕೊಮ್ಮೆ ಅಪ್ಪ ಶೂ ಕೊಡಿಸಿಬಿಟ್ಟಾಗ(ಅದು ನಾನು ಹಿಂದಿನ ದಿನ ಅಮ್ಮನ ಹತ್ತಿರ ಹಠ ಮಾಡಿ ಅಪ್ಪನಿಗೆ ಹೇಳಿಸಿದ್ದರ ಪರಿಣಾಮ), ಪರಿಸ್ಥಿತಿ ಇನ್ನೂ ಗಂಭೀರವಾಗಿಬಿಟ್ಟಿತ್ತು. ಆ ಶೂ ಅಂತೂ ನನ್ನ ಪಾದದ ಎಲ್ಲಾ ಭಾಗಗಳಲ್ಲಿ ಕಚ್ಚಿ ಕಚ್ಚಿ. ಮಾರನೇಯ ದಿನ ನಾನು ಹವಾಯಿ ಚಪ್ಪಲನ್ನೇ ಹಾಕಿಕೊಂಡು ಹೋಗುವಂತೆ ಮಾಡಿಬಿಟ್ಟಿತ್ತು. ಆ ಮೇಲಿಂದ ನಾನಂತೂ ಯಾವತ್ತೂ ಶೂ ತೆಗೆಸಿಕೊಡಿರೆಂದು ಅಪ್ಪಿತಪ್ಪಿಯೂ ಕೇಳಲಿಲ್ಲ. ಈಗೆಲ್ಲಾ ಮೆತ್ತ ಮೆತ್ತನೆಯ, ಸಾವಿರಾರು ರೂಪಾಯಿ ಬೆಲೆಯುಳ್ಳ ಶೂಗಳನ್ನು ಹಾಕಿಕೊಂಡು, ಅನಿರೀಕ್ಷಿತ ಮಳೆ ಬಿದ್ದಾಗ ಒದ್ದೆಯಾದರೆ ಒದ್ದಾಡುತ್ತಾ, ಅದನ್ನು ಒಣಗಿಸಲು ಹರಸಾಹಸ ಪಡುತ್ತಾ ಇರುವಾಗ ನಾವು ಎಷ್ಟೆಲ್ಲಾ ಮುಂದೆ ಬಂದುಬಿಟ್ಟಿದ್ದೇವಲ್ಲಾ ಎಂದು ಸೋಜಿಗವಾಗುತ್ತದೆ. ಚಪ್ಪಲ್ಲಿಗಳು ಕಚ್ಚುತ್ತವೆ ಎಂದು ಗೊತ್ತಿದ್ದೂ ಅವನ್ನು ಹಾಕಿಕೊಂಡು ಓಡಾಡಲು ಎಷ್ಟೆಲ್ಲಾ ಸಂಭ್ರಮ ಪಡುತ್ತಿದ್ದೆವು, ಈಗ ಎಂಥಾ ಚೆನ್ನಾಗಿರೋ ಶೂಗಳು ಮತ್ತು ಚಪ್ಪಲ್ಲಿಗಳೂ ಅಂಥಹ ರೋಮಾಂಚನವನ್ನು ತರುವುದಿಲ್ಲವೆಂದು ಬೇಜಾರೂ ಆಗುತ್ತದೆ. Posted by Unknown at 8:07 AM 19 comments Tuesday, July 1, 2008 ಹೀಗೇ ಸುಮ್ಮನೇ... ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತರಾನೇ. ಕುಂಭಕರ್ಣನ ಸಂತತಿ. ಮಲಗಿದ್ರೆ ಜಗತ್ತಿನ ಖಬರೇ ಇಲ್ಲ. ಶನಿವಾರ, ರವಿವಾರ ಊಟ ಆಗಿದ್ದ ಮೇಲೆ ಮಲಗಿದ್ರೆ ಮಾತ್ರ ಇವಳಿಗೆ "ಮಧ್ಯಾಹ್ನದ ಮೇಲೆ" ಅನ್ನೋ ಹೊತ್ತೇ ಇಲ್ಲ. ಮಧ್ಯಾಹ್ನ ಆದ ಮೇಲೆ ಸೀದಾ ಸಂಜೆನೇ. ಎಲ್ಲಾದ್ರೂ ಜಾಸ್ತಿ ಹೇಳಿದ್ರೆ "ಅಮ್ಮಾ, ನಾನೇನು ದಿನಾ ಮಧ್ಯಾಹ್ನ ಮಲಗ್ತಿನಾ? ಬರೀ ವೀಕೆಂಡಲ್ಲಿ ಮಾತ್ರ ಅಲ್ವಾ?" ಅಂತಾ ನನ್ನೇ ಕೇಳ್ತಾಳೆ. ನಂಗೂ ಒಂದೊಂದು ಸಲ ಹಾಗೇ ಅನ್ನಿಸಿಬಿಡತ್ತೆ. ವಾರವಿಡೀ, ಬೆಳಗ್ಗೆ ಬೇಗ ಏಳು, ಕಂಪನಿ ಬಸ್ ಹಿಡಿ, ಇಡಿ ದಿನಾ ಕೆಲಸಾ ಮಾಡು, ಸಂಜೆ ಮತ್ತೆ ಅದೇ ಟ್ರಾಫಿಕಲ್ಲಿ ಸಿಕ್ಕಾಕೊಂಡು ಮನೆಗೆ ಬಾ, ಇಷ್ಟರಲ್ಲೇ ಮುಗಿದೋಗತ್ತೆ. ಅದ್ಕೆ ಪಾಪ, ವೀಕೆಂಡಗಳಲ್ಲಾದ್ರೂ ಸರೀ ರೆಸ್ಟ್ ತಗೊಳ್ಲಿ ಅಂತ ಸುಮ್ಮನಾಗ್ತಿನಿ. ಆದ್ರೂ ಎಷ್ಟೋ ಸಲ ಇವಳ ಸೋಮಾರಿತನ ನೋಡಿ ಸಿಟ್ಟು ಬಂದು ಹೋಗುತ್ತೆ, ಗೊತ್ತಿಲ್ದೇನೆ ಬೈಯ್ದೂ ಹೋಗಿರುತ್ತೆ. ಅಲ್ಲಾ ಈ ವಯಸ್ಸಿಗೆ ಎಷ್ಟು ಚಟಪಿಟಿ ಇರ್ಬೇಕು ಹೆಣ್ಣು ಮಕ್ಕಳು? ನಾವೆಲ್ಲಾ ಈ ವಯಸ್ಸಲ್ಲಿ ಹೀಗಿರ್ಲಿಲ್ಲ, ಎಷ್ಟೆಲ್ಲಾ ಕೆಲ್ಸ ಮಾಡ್ತಿದ್ವಿ ಅಂದ್ರೆ ನಮ್ಮನೆಯವ್ರು ನನಗೇ ಬೈಯ್ತಾರೆ." ನಿನ್ನ ಕಾಲಕ್ಕೂ ಈ ಕಾಲಕ್ಕೂ ಯಾಕೆ ಹೋಲಿಸ್ತೀಯಾ? ಅವಳು ಹೊರಗೆ ಕೆಲ್ಸ ಮಾಡ್ತಾ ಇಲ್ವಾ? ನಿಧಾನಕ್ಕೆ ಎಲ್ಲದನ್ನೂ ಕಲೀತಾಳೆ ಬಿಡು" ಅಂತ. ಎಲ್ಲಾದಕ್ಕೂ ಇವ್ರದ್ದು ಅವ್ಳಿಗೇ ಸಪೋರ್ಟು. ಎಷ್ಟಂದ್ರೂ ಒಂದೇ ಮಗಳಲ್ವಾ? ತಲೆ ಮೇಲೆ ಹತ್ತಿಸಿಕೊಂಡು ಕುಣಿತಾರೆ. ಕುಣೀಲಿ, ಕುಣೀಲಿ, ನಾನೂ ನೋಡ್ತಿನಿ ಏಷ್ಟು ದಿನ ಅಂತಾ. ನಾನೇನಾದ್ರೂ ಬೈದ್ರೆ ಅಪ್ಪ ಮಗಳು ಒಂದೇ ಪಾರ್ಟಿ ಮಾಡ್ಕೊಂಡು ನನ್ನೇ ಅಂತಾರೆ. ನನಗೋ ಇವಳು ಮಾಡೋ ವೇಷಾನೆಲ್ಲ ಸಹಿಸಿಕೊಂಡು ಸುಮ್ಮನೆ ಇರಕಂತೂ ಆಗಲ್ಲ. ಏನೋ ಅಂದು ಹೋಗುತ್ತೆ. ಈಗಲ್ದೇ ಇನ್ಯಾವಾಗ ಮನೆ ಕೆಲ್ಸಾನೆಲ್ಲ ಕಲ್ಯೋದು ಇವ್ಳು? ನಾಳೆ ಇವಳದ್ದೂ ಒಂದು ಮದುವೆ ಅಂತ ಆಗಲ್ಲ್ವಾ? ಆಗ ಸಂಸಾರ ಸಂಭಾಳಿಸ್ಕೊಂಡು ಹೋಗಷ್ಟಾದ್ರೂ ಮನೆ ಕೆಲಸಗಳು ಗೊತ್ತಿರ್ಬೇಕು ಅಂತ ನಾನು. ನಾಳೆ ಇವಳಿಗೆ ಎಲ್ಲಾ ಕೆಲ್ಸ ಬರಲ್ಲ ಅಂದ್ರೆ ಅತ್ತೆ ಮನೆಯವರು ಏನಂತಾರೆ? "ಇವಳಮ್ಮ ಏನೂ ಕಲಿಸೇ ಇಲ್ಲ" ಅಂತ ನನ್ನ ಆಡಿಕೊಳ್ಳಲ್ವಾ? ಮೊನ್ನೆ ಇದೇ ವಿಷ್ಯದ ಮೇಲೆ ಜೋರು ವಾದ ಆಯ್ತು. ಅಪ್ಪ ಮಗಳು ಇಬ್ರೂ ಸೇರಿ ಜೋರು ಗಲಾಟೆ ಮಾಡಿ ಒಟ್ನಲ್ಲಿ ನನ್ನ ಬಾಯಿ ಮುಚ್ಚಿಸಿದ್ರು. ನಮ್ಮ ಮನೆಯವರಂತೂ ಮೊದ್ಲೇ ಹೇಳಿದ್ನಲ್ಲಾ ಯಾವಾಗ್ಲೂ ಅವಳದ್ದೇ ಪಾರ್ಟಿ. "ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ರೂ ಹೊರಗೆ ಕೆಲಸ ಮಾಡ್ತಾರೆ, ಹೇಗೋ ಮ್ಯಾನೇಜ್ ಮಾಡ್ತಾರೆ ಬಿಡೆ. ಕೆಲಸದವಳನ್ನ ಇಟ್ಕೋತಾರೆ. ಗಂಡನೂ ಬಹಳಷ್ಟು ಸಹಾಯ ಮಾಡ್ತಾನೆ. ಎಲ್ಲಾ ಕಲ್ತುಕೊಂಡು ಏನು ಮಾಡೋದಿದೆ? ಅಂತ ಉಲ್ಟಾ ನನ್ನೇ ಕೇಳ್ತಾರೆ. ಇವಳಂತೂ ಬಿಡು. ಅಪ್ಪ ಬೇರೆ ಸಪೋರ್ಟಿಗಿದ್ದಾರೆ ಅಂತಾ ಗೊತ್ತಾಯ್ತಲ್ಲಾ, ಕೂಗಿದ್ದೇ ಕೂಗಿದ್ದು. ನಾನೇನೋ ಮಹಾ ದೂರಿದ ಹಾಗೆ. "ಅಮ್ಮಾ ನಾನಂತೂ ಮೊದ್ಲೇ ಹೇಳ್ಬಿಡ್ತೀನಿ, ನನ್ನ ಮದ್ವೆಯಾಗೋವ್ನಿಗೆ. ನಂಗೆ ಅಷ್ಟೆಲ್ಲಾ ಚೆನ್ನಾಗಿ ಅಡುಗೆ-ಗಿಡಗೆ ಎಲ್ಲಾ ಮಾಡಕ್ಕೆ ಬರಲ್ಲಾ. ಅಡ್ಜಸ್ಟ್ ಮಾಡ್ಕೊಂಡು ಹೋಗ್ಬೇಕು. ಮನೆ-ಕೆಲಸ ಎಲ್ಲ ಒಟ್ಟೊಟ್ಟಿಗೆ ನಾನೊಬ್ನೇ ಮಾಡ್ಕೊಂಡು ಹೋಗಕ್ಕಾಗಲ್ಲಾ. ಜಾಸ್ತಿ ಕಿರಿಕಿರಿ ಮಾಡಿದ್ರೆ ಕೆಲಸ ಬಿಟ್ಟು ಮನೆಲ್ಲೇ ಇರ್ತಿನಿ ಅಂತ. ಇನ್ನೇನು ಹೊರಗೂ ದುಡಿದು ಸಂಬಳಾನೂ ತರ್ಬೇಕು, ಮನೆಲ್ಲಿ ಚಾಕರಿ ಮಾಡಕ್ಕೂ ನಾನೇ ಬೇಕು ಅಂದ್ರೆ ನಾನೇನು ಅವನ ಆಳಾ? ಅಂತ. ಅದೆಲ್ಲಾ ಸರಿನೇ. ನಾನೂ ಒಪ್ಕೋತಿನಿ. ಕಾಲ ಬದಲಾಗಿದೆ ಅಂತ. ಆದ್ರೆ ಇವಳು ಇಷ್ಟು ನೇರ ನೇರವಾಗಿ ಹೇಳಿದ್ರೆ ಯಾರು ಇವಳನ್ನ ಮದ್ವೆ ಆಗ್ತಾರೆ ಅಂತ ಭಯ ನಂಗೆ. ಇವ್ರಿಗೆ ಹೇಳಿದ್ರೆ ಕಿವಿ ಮೇಲೇ ಹಾಕ್ಕೊಳಲ್ಲ. "ಅವಳಿಗೆ ಇನ್ನೂ ಸಣ್ಣ ವಯಸ್ಸು, ನೀನು ಸುಮ್ನೆ ಟೆನ್ಶನ್ ಮಾಡ್ಕೋಂತೀಯಾ" ಅಂತಾರೆ. ಟೆನ್ಶನ್ ಆಗಲ್ವಾ? ಈ ಅಗಸ್ಟಿಗೆ ಅವ್ಳಿಗೆ ೨೪ ಮುಗಿಯುತ್ತೆ. ಎಂತಾ ಸಣ್ಣ ವಯಸ್ಸು? ಯಾವ ಯಾವ ವಯಸ್ಸಿಗೆ ಯಾವ್ಯಾವ್ದು ಆಗ್ಬೇಕೋ ಅದಾದ್ರೇ ಚಂದ ಅಲ್ವಾ? ಇವ್ರಿಗಂತೂ ಅದೆಲ್ಲಾ ಅರ್ಥ ಆಗಲ್ಲ. ಅವಳಂತೂ ಬಿಡು. "ಅಮ್ಮಾ ನಾನು ೨೬ ವರ್ಷದ ವರೆಗೂ ಮದುವೆ ಆಗಲ್ಲ" ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳ್ಬಿಟ್ಟಿದ್ದಾಳೆ. ಹೆಚ್ಚಿಗೆ ಒತ್ತಾಯ ಮಾಡಿದ್ರೆ "ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ" ಅಂತ ಅಳಕ್ಕೇ ಶುರು ಮಾಡಿ ಬಿಡ್ತಾಳೆ. ನಾನೇನು ಇವಳನ್ನು ಆದಷ್ಟು ಬೇಗ ಮನೆಯಿಂದ ಹೊರಗೆ ಹಾಕ್ಬೇಕು ಅಂತಾ ಇಷ್ಟೆಲ್ಲಾ ಮಾಡ್ತಿದ್ದೀನಾ? ನನಗೂ ಮಗಳನ್ನು ಒಳ್ಳೆ ಮನೆಗೇ ಕೊಡ್ಬೇಕು ಅಂತ ಇಲ್ವಾ? ನಮ್ಗಿರೋದು ಒಂದೇ ಮಗಳು. ಅವಳು ಚೆನ್ನಾಗಿರ್ಲಿ ಅಂತಾನೇ ನಾವು ಇಷ್ಟೆಲ್ಲಾ ಮಾಡ್ತಾ ಇರೋದು? ಯಾರನ್ನಾರೂ ಲವ್ವು-ಗಿವ್ವು ಅಂತಾ ಮಾಡಿದಿಯೇನೇ, ಅಂತಾನೂ ನಂಬಿಸಿ ಕೇಳಿದಿನಿ. ಹಾಗೆಲ್ಲಾ ಇದ್ರೆ ಮೊದ್ಲೇ ಹೇಳ್ಬಿಡು. ಆಮೇಲೆ ಮೂರನೆಯವರಿಂದ ಗೊತ್ತಾಗೋದು ಬೇಡ ಅಂತಾನೂ ಹೇಳಿದೀನಿ. ಹಾಗೇನೂ ಇಲ್ಲಾ ಅಂತಾಳೆ. ನನಗಂತೂ ಸಾಕಾಗಿ ಹೋಗಿದೆ. ಅಪ್ಪ ಮಗಳು ಏನು ಬೇಕಾದ್ರೂ ಮಾಡ್ಕೊಳ್ಲಿ ಅಂತ ಬಿಟ್ಟು ಬಿಟ್ಟಿದ್ದೀನಿ. ಆದ್ರೂ ಕೆಲವೊಂದು ಸಲ ತಾಯಿ ಹೃದಯ, ಕೇಳಲ್ಲ. ಮೊನ್ನೆ ಏನಾಯ್ತು ಅಂದ್ರೆ, ನಮ್ಮ ಯಜಮಾನರ ಕೊಲೀಗು ಇದ್ದಾರಲ್ಲ ಶ್ರೀನಿವಾಸಯ್ಯ, ಅವರ ತಂಗಿ ಮಗನ ಪ್ರಪೋಸಲ್ಲು ಬಂದಿತ್ತು. ಹುಡುಗಾ ನೋಡೋಕೆ ಸುಮಾರಾಗಿದಾನೆ. ಒಳ್ಳೆ ಮನೆತನ, ಒಳ್ಳೆ ಸಂಬಂಧ. ಚೆನ್ನಾಗಿ ಓದಿದಾನೆ ಬೇರೆ. ಸ್ವಂತ ಮನೆಯಿದೆ, ಕಾರೂ ಇದೆ. ನನಗಂತೂ ಯಾವ ತೊಂದರೆನೂ ಕಾಣ್ಲಿಲ್ಲ. ಅವರ ಮನೆಯವರಿಗೂ ಬಹಳ ಇಷ್ಟವಾದ ಹಾಗೇ ಇತ್ತು. ಆದರೆ ಇವ್ಳು ಮಾತ್ರ ಸುತಾರಾಂ ಒಪ್ಪಲೇ ಇಲ್ಲ. ನಮ್ಮನೆಯವರಿಗೂ ಬಹಳ ಮನಸ್ಸಿದ್ದ ಹಾಗೆ ಕಾಣ್ತು ನನಗೆ. ಇವರೂ ಏನೇನೋ ಉಪದೇಶ ಮಾಡಿದ್ರು. ಕೊನೆಗೆ ಇವಳು ಹೇಳಿದ್ದು ಏನು ಗೊತ್ತಾ? "ಆ ಹುಡುಗಾ ಸ್ವಲ್ಪ ಕಪ್ಪಗಿದಾನೆ. ನನಗೆ ಬೇಡ" ಅಂತ. ಏನು ಹೇಳೋಣ ಇಂಥವರಿಗೆ? ರೂಪ, ಬಣ್ಣ ಎಲ್ಲಾ ನೋಡಿ ಯಾರಾದ್ರೂ ಮದ್ವೆ ಆಗ್ತಾರಾ? ಗುಣ ಅಲ್ವಾ ನೋಡ್ಬೇಕಾಗಿದ್ದು? ಅವಳು ತಪ್ಪಿಸಿಕೊಳ್ಳಕೆ ಹಾಗೆ ಹೇಳಿದ್ಳೋ, ಅಥವಾ ನಿಜವಾಗ್ಲೂ ಅವಳ ಮನಸ್ಸಲ್ಲಿ ಇದೇ ಇದೆಯಾ ಅಂತ ಹೇಗೆ ಹೇಳೋದು? ಆದ್ರೆ ಒಂದು ಮಾತ್ರ ನಿಜ, ಅವನು ಕಪ್ಪಗಿದಾನೆ ಅಂತ ರಿಜೆಕ್ಟ್ ಮಾಡಿದ್ರೆ ಮಾತ್ರ ಇವಳಿಗೆ ಸೊಕ್ಕು ಅಂತಾನೇ ಅರ್ಥ! ನಾನೇನೂ ಜಾಸ್ತಿ ಹೇಳಕ್ಕೆ ಹೋಗ್ಲಿಲ್ಲ. ಆಶ್ಚರ್ಯ ಅಂದ್ರೆ ಈಗ ಎರಡು ಮೂರು ದಿನದಿಂದ ಇವರೂ ಭಾಳ ಅಪ್ ಸೆಟ್ ಆಗಿದಾರೆ. ಈಗ ಅರ್ಥ ಆಗಿರ್ಬೇಕು ಅವರಿಗೆ ಮದ್ವೆ ಮಾಡೋದು ಎಷ್ಟು ಕಷ್ಟ ಅನ್ನೋದು. ಅದೆಲ್ಲ ಬಿಟ್ಟಾಕಿ. ಅದೇನೋ ಅಂತಾರಲ್ಲಾ, ಹಣೇಲಿ ಬರ್ದಿರ್ಬೇಕು ಅಂತಾ. ಯಾವಾಗ ಕಾಲ ಕೂಡಿ ಬರುತ್ತೋ ಗೊತ್ತಿಲ್ಲ. ಕಾಯ್ಬೇಕು ಅಷ್ಟೇ. ಆದ್ರೆ ಒಂದಂತೂ ನಿಜ. ಈ ಕಂಪ್ಯೂಟರ್ರು, ಇಂಟರನೆಟ್ಟು, ಅನ್ನೋ ವಸ್ತು ಮನೆಗೆ ಬಂದಾಗಿಂದ ಈಗಿನ ಕಾಲದ ಮಕ್ಕಳ ವರ್ತನೆನೇ ಚೇಂಜ್ ಆಗಿ ಹೋಗಿದೆ. ಇವಳೂ ಏನೂ ಕಮ್ಮಿಯಿಲ್ಲ. ಆಫೀಸ್ನಲ್ಲಿ ಕಂಪ್ಯೂಟರ್ ಮುಂದೆ ಕುಳ್ತಿದ್ದು ಸಾಲ್ದು ಅಂತ ರಾತ್ರೆ ೧೧, ೧೨ ಗಂಟೆ ತನಕಾನೂ ಆ ಕೀಬೋರ್ಡು ಕುಟ್ಟತಾ ಇರ್ತಾಳೆ. ಸಾಕು ಮಲಗಮ್ಮಾ ಅಂದ್ರೆ, ಅದ್ಯಾವುದೋ ಫ್ರೆಂಡ್ ಅಂತೆ, ಅಮೆರಿಕಾದಲ್ಲಿದಾರಂತೆ, ಅವನೋ, ಅವಳೋ ಯಾರದೋ ಜೊತೆ ಅದೇನೋ ಚಾಟಿಂಗ್ ಅಂತ ಮಾಡ್ತಾ ಇರ್ತಾಳೆ. ಹೊತ್ತು ಗೊತ್ತು ಒಂದೂ ಪರಿವೆನೇ ಇಲ್ಲ. ಅದರಲ್ಲಿ ಏನು ಬ್ರಹ್ಮಾಂಡ ತೋರಿಸ್ತಾರೋ ದೇವ್ರಿಗೇ ಗೊತ್ತು. ಒಂದಂತೂ ನಿಜ, ಇವೆಲ್ಲ ಬಂದ ಮೇಲೆ ಮಕ್ಕಳು ಇನ್ನೂ ಜಾಸ್ತಿ ಆಲಸಿಗಳಾಗ್ತಿದಾರೆ ಅಷ್ಟೇ. ಇಂಟರನೆಟ್ಟಲ್ಲೇ ಫ್ರೆಂಡ್ಸ್ ಮಾಡ್ಕೋಂತಾರೆ, ಹರಟೆ ಹೊಡೀತಾರೆ, ಇನ್ನೂ ಏನೇನೋ, ನಂಗದು ಸರಿಯಾಗಿ ಗೊತ್ತಾಗೋದೂ ಇಲ್ಲ. ಮೊನ್ನೆ ಅದ್ಯಾವುದೋ ಫ್ರೆಂಡೊಬ್ಬಳು ಮನೆಗೆ ಬಂದಿದ್ಲಲ್ಲಾ, ಇವ್ಳದ್ದೇ ವಯಸ್ಸು. ನಿನ್ನ ಕ್ಲಾಸ್ ಮೇಟೇನಮ್ಮಾ ಅಂತ ಕೇಳಿದ್ರೆ, ಇಲ್ಲಾ ಇವಳು ನನ್ನ ಆರ್ಕುಟ್ ಫ್ರೆಂಡ್ ಅಂತಾ ಅಂದಳು. ಇದ್ಯಾವ ತರ ಫ್ರೆಂಡ್ ಅಂತಾನೇ ನಂಗೆ ಗೊತ್ತಾಗ್ಲಿಲ್ಲ ನೋಡಿ. ಹಾಗಂದ್ರೆ ಏನೇ? ಅಂದ್ರೆ "ಅದೇ ಅಮ್ಮಾ. ಇಂಟರನೆಟ್ಟಲ್ಲಿ ಆರ್ಕುಟ್ ಅಂತ ಕಮ್ಯುನಿಟಿ ಇದೆಯಮ್ಮಾ, ಅದರಲ್ಲಿ ಫ್ರೆಂಡ್ ಆದವಳು, ನಿಂಗೆ ಗೊತ್ತಾಗಲ್ಲ ಬಿಡು" ಅಂದಳು. ಅದವಳ ಖಾಯಂ ಡೈಲಾಗು, "ಅಮ್ಮಾ ನಿಂಗೆ ಇವೆಲ್ಲಾ ಗೊತ್ತಾಗಲ್ಲ ಬಿಡಮ್ಮ" ಅಂತ. ಅವಳು ಹೇಳಿದ್ದು ನಿಜಾನೇ. ಈ ಕಾಲದವರ ಇಂಟರ್ ನೆಟ್ಟು, ಮೊಬೈಲು, ಐಪಾಡು ಇವೆಲ್ಲಾ ನಂಗಂತೂ ಒಂದೂ ಗೊತ್ತಾಗಲ್ಲ. ಅದರಲ್ಲೂ ಆ ಮೊಬೈಲನ್ನಂತೂ ಇನ್ನೂ ಸರಿಯಾಗಿ ಬಳಸಕ್ಕೆ ನಂಗಿನ್ನೂ ಬರಲ್ಲ. ಅದೇನೋ ಹಸಿರು ಬಟನಂತೆ, ರೆಡ್ ಬಟನಂತೆ, ಮೆಸೇಜು, ಎಸ್ಸೆಮೆಸ್ಸು, ಮಿಸ್ಸಡ್ ಕಾಲ್ಸು ಅಯ್ಯೋ ನಂಗಂತೂ ಬರೀ ಕನ್ಫೂಶನ್ನು. ಇನ್ನೂ ಮೊಬೈಲ್ ಬಳಸಕ್ಕೆ ಬರಲ್ಲ ಅಂತ ಅಪ್ಪ ಮಗಳು ಸೇರಿ ಯಾವಾಗಲೂ ರೇಗಿಸ್ತಾನೇ ಇರ್ತಾರೆ. ಇವರಂತೂ ಬಿಡಿ, ಸಂದರ್ಭ ಸಿಕ್ಕಿದಾಗಲೆಲ್ಲಾ ದಡ್ಡಿ, ದಡ್ಡಿ ಅಂತಾ ಹಂಗಿಸ್ತಾನೇ ಇರ್ತಾರೆ. ನನ್ನ ಮೈಯೆಲ್ಲಾ ಉರಿದುಹೋಗತ್ತೆ. ಅದೇನು ಜಾಸ್ತಿ ಓದಿದವ್ರು ಮಾತ್ರಾ ಬುದ್ಧಿವಂತರಾ? ಅಥವಾ ಈಗಿನ ಕಾಲದ ವಸ್ತುಗಳನ್ನೆಲ್ಲಾ ಉಪಯೋಗ್ಸಕ್ಕೆ ಬರದೋವ್ರು ಎಲ್ಲಾ ದಡ್ಡರಾ? ಅಷ್ಟೆಲ್ಲ ದಡ್ಡರಾದ್ರೆ ನಾವು ಸಂಸಾರ ಹೇಗೆ ನಡೆಸ್ಕೊಂಡು ಬಂದ್ವಿ? ಜಾಸ್ತಿ ಓದಿದ ಮಾತ್ರಕ್ಕೆ ಬುದ್ಧಿವಂತರು ಅಂತೇನೂ ರೂಲ್ಸ್ ಇಲ್ಲ. ಈಗ ಇವ್ರನ್ನೇ ತಗೊಳ್ಳಿ. ಎಷ್ಟು ಮಹಾ ಬುದ್ಧಿವಂತರು ಇವ್ರು? ನಂಗೊತ್ತಿಲ್ವಾ ಇವ್ರ ಭೋಳೇ ಸ್ವಭಾವ? ಯಾರೇ ಒಂದು ಸ್ವಲ್ಪ ದುಡ್ಡು ಬೇಕು ಅಂತ ಹಲ್ಲುಗಿಂಜಿದ್ರೂ ಹಿಂದೆ ಮುಂದೆ ನೋಡ್ದೇ ಕೊಟ್ಟುಬಿಡೋರು. ಕೈಯಲ್ಲಂತೂ ಒಂಚೂರೂ ದುಡ್ಡು ನಿಲ್ತಾ ಇರ್ಲಿಲ್ಲ. ನಾನು ಸ್ವಲ್ಪ ತಲೆ ಓಡಿಸಿ, ಸಾಧ್ಯವಾದಾಗ್ಲೆಲ್ಲಾ ಇವರ ಕೈ ಹಿಡಿದು, ಅಲ್ಲಲ್ಲಿ ಉಳ್ಸಿ, ಇವರ ದುಂದು ವೆಚ್ಚಕ್ಕೆಲ್ಲಾ ಕಡಿವಾಣ ಹಾಕಿ, ಕಾಡಿ ಬೇಡಿ ಈಗೊಂದು ೧೦ ವರ್ಷದ ಹಿಂದೆನೇ ಎರಡು ೩೦-೪೦ ಸೈಟ್ ತಗೊಳ್ಳೊ ಹಾಗೆ ಮಾಡದೇ ಇದ್ದಿದ್ರೆ, ಬೆಂಗಳೂರಲ್ಲಿ ಸ್ವಂತ ಮನೆ ಅಂತ ಮಾಡಿ, ಮಗಳನ್ನು ಇಂಜಿನಿಯರ್ ಓದ್ಸಕ್ಕೆ ಆಗ್ತಿತ್ತಾ? ಅದೂ ಇವ್ರಿಗೆ ಬರೋ ಸಂಬಳದಲ್ಲಿ? ಈಗ ನೀವೇ ಹೇಳಿ ಯಾರು ದಡ್ಡರು, ಯಾರು ಬುದ್ಧಿವಂತರು ಅಂತಾ? ಇನ್ನೊಂದು ಸಲ ಹಂಗಿಸ್ಲಿ, ಸರಿಯಾಗಿ ಹೇಳ್ತಿನಿ, ಬಿಡಲ್ಲ. ಅಯ್ಯೋ, ಮಾತಾಡ್ತಾ ಮಾತಾಡ್ತಾ ಟೈಮೇ ನೋಡಿಲ್ಲ ನೋಡಿ. ಆಗ್ಲೇ ೪.೩೦ ಆಗೋಯ್ತು. ಇವ್ಳನ್ನು ಬಡಿದಾದ್ರೂ ಎಬ್ಬಿಸ್ಬೇಕು ಈಗ. ಅದೇನೋ ಡ್ಯಾನ್ಸ್ ಕ್ಲಾಸ್ ಅಂತೆ. ಅದೆಂಥದೋ "ಸಾಲ್ಸಾ" ನೋ "ಸಲ್ಸಾ"ನೋ, ನಂಗೆ ಬಾಯಿ ಅಷ್ಟು ಸುಲಭವಾಗಿ ಹೊರಳಲ್ಲಬಿಡಿ, ಅದಕ್ಕೆ ಹೋಗ್ತಾಳೆ. ಅದೂ ಇಲ್ಲಿ ಹತ್ತಿರದಲ್ಲಿ ಎಲ್ಲೂ ಇಲ್ಲ. ಇಂದಿರಾನಗರಕ್ಕೇ ಹೋಗ್ಬೇಕು. ಆ ಸ್ಕೂಟಿ ಹಾಕ್ಕೊಂಡು ಅಷ್ಟೆಲ್ಲ ದೂರ ಹೋಗ್ಬೇಡಾ ಅಂದ್ರೂ ಕೇಳಲ್ಲಾ. ಅಷ್ಟೆಲ್ಲ ದೂರ ಹೋಗಿ ಕಲಿಯೋಂತದ್ದು ಏನಿದ್ಯೋ ನಂಗಂತೂ ಅರ್ಥವಾಗ್ಲಿಲ್ಲ. ಇಲ್ಲೇ ಗಣೇಶನ ಗುಡಿ ಹಿಂದೆ ಭರತನಾಟ್ಯ ಕಲಿಸಿಕೊಡ್ತಾರೆ, ಅದಕ್ಕೆ ಹೋಗಮ್ಮಾ ಅಂದ್ರೆ "ಅಮ್ಮಾ ಅವೆಲ್ಲ ಹಳೆ ಕಾಲದವು, ನಾನು ಕಲಿಯಲ್ಲ" ಅಂಥಾಳೆ. ಇನ್ನೇನು ಹೇಳೋದು? ಒಟ್ನಲ್ಲಿ ಹೇಳಿ ಪ್ರಯೋಜ್ನ ಇಲ್ಲ. ಹಳೆದ್ದು ಅಂತ ಎಲ್ಲಾದನ್ನೂ ಬಿಟ್ಕೊಂತಾ ಹೋಗ್ತಾನೇ ಇದ್ರೆ ನಮ್ಮದು ಅಂತಾ ಸಂಸ್ಕಾರಗಳು ಉಳಿಯೋದಾದ್ರೂ ಹೇಗೆ? ಮುಂದೆ ನಮ್ಮನ್ನೂ ಹಳೇಯವ್ರು ಅಂತ ಬಿಡದೇ ಇದ್ರೆ ಸಾಕು! ಒಂದೊಂದು ಸಲ ಹೆಣ್ಣು ಮಗಳನ್ನು ಯಾಕಾದ್ರೂ ಹೆತ್ತನಪ್ಪಾ ಅಂಥಾನೂ ಅನ್ನಸತ್ತೆ. ಆದ್ರೆ ಗಂಡು ಮಕ್ಕಳಿದ್ರೆ ಸುಖ ಅನ್ನೋದಂತೂ ಸುಳ್ಳು ಬಿಡಿ. ಈಗ ಪಕ್ಕದ ಮನೆ ಸುಮಿತ್ರಮ್ಮನ್ನೇ ನೋಡಿ. ಒಬ್ಬನೇ ಮಗ, ಚೆನ್ನಾಗಿ ಓದದಾ, ಅಮೇರಿಕಕ್ಕೆ ಹೋದ. ಅಲ್ಲೇ ಯಾವ್ದೋ ನಾರ್ತ್ ಇಂಡಿಯನ್ ಹುಡ್ಗಿನಾ ಮದ್ವೆ ಆದ. ಇನ್ನೇನು ಅಪ್ಪ ಅಮ್ಮನ್ನ ಮರೆತ ಹಾಗೇನೇ. ವರ್ಷಕ್ಕೋ ಎರಡು ವರ್ಷಕ್ಕೋ ಬರ್ತಾನೆ ಅಷ್ಟೇ. ಇವ್ರಿಗೋ ಆರೋಗ್ಯನೇ ಸರಿಯಿರಲ್ಲ. ಈ ವಯಸ್ಸಲ್ಲಿ ಎಷ್ಟೂಂತಾ ಓಡಾಡ್ಕೊಂಡು ಇರಕ್ಕಾಗತ್ತೆ ಹೇಳಿ? ನಮ್ಮ ಕೊನೆಗಾಲಕ್ಕೆ ಆಗ್ದೇ ಇರೋ ಮಕ್ಕಳು ಇದ್ರೆಷ್ಟು,ಬಿಟ್ರೆಷ್ಟು? ನಂಗಂತೂ ಅವ್ರನ್ನ ನೋಡಿ ಪಾಪ ಅನ್ನಸತ್ತೆ. ಗಂಡು ಮಕ್ಕಳಿರೋವ್ರದ್ದು ಒಂಥರಾ ಕಷ್ಟ, ಹೆಣ್ಣು ಮಕ್ಕಳಿರೋವ್ರದ್ದು ಇನ್ನೊಂಥರಾ ಕಷ್ಟ ಅಷ್ಟೇ. ಸಾಕು ಮಾಡಮ್ಮಾ ನಿನ್ನ ಪ್ರಲಾಪ, ನಮಗೇ ಹೊದೆಯಷ್ಟು ಕಷ್ಟ ಇದೆ ಅಂತೀರಾ? ಅಯ್ಯೋ, ನಿಮಗೂ ನನ್ನ ತರ ಬೆಳೆದು ನಿಂತ ಮಗಳಿದ್ರೆ ಗೊತ್ತಾಗಿರೋದು ನನ್ನ ಸಂಕಟ ಏನು ಅಂತಾ. ಹೋಗ್ಲಿ ಬಿಡಿ, ಅವರವರು ಪಡ್ಕೊಂಡು ಬಂದಿದ್ದು, ಅನುಭವಿಸ್ಬೇಕು. ಅನುಭವಿಸ್ತೀನಿ ಬಿಡಿ. ಇನ್ನೇನು ಇವರು ಬರೋ ಹೊತ್ತಾಯ್ತು. ಕಾಫಿ ಮಾಡ್ಬೇಕು. ಬಂದ ಕೂಡ್ಲೇ ಕೈಗೆ ಕಾಫಿ ಸಿಗದೇ ಹೋದ್ರೆ ಆಮೇಲೆ ಇಡೀ ದಿನ ಕೂಗ್ತಾ ಇರ್ತಾರೆ. ಇನ್ನೊಮ್ಮೆ ಯಾವಾಗಲಾದ್ರೂ ಸಿಕ್ತೀನಿ, ಸುದ್ದಿ ಹೇಳೋಕೆ ಬಹಳಷ್ಟಿದೆ. ಬರ್ಲಾ? ಅಯ್ಯೋ, ಹೇಳೊಕೇ ಮರ್ತೋಗಿತ್ತು ನೋಡಿ. ನಿಮಗೆ ಯಾರಾದ್ರೂ ಒಳ್ಳೆ ಹುಡುಗ ಗೊತ್ತಿದ್ರೆ ಪ್ಲೀಸ್ ಹೇಳ್ರೀ. ಯಾರಿಗೆ ಗೊತ್ತು, ಇವಳಿಗೆ ಇಷ್ಟ ಆದ್ರೂ ಆಗ್ಬಹುದು. ನಮ್ಮ ಪ್ರಯತ್ನ ಅಂತೂ ನಾವು ಮಾಡೋದು. ಮುಂದೆಲ್ಲಾ ಹಣೇಲಿ ಬರದಾಂಗೆ ಆಗತ್ತೆ. ಅಲ್ವಾ? Posted by Unknown at 1:19 AM 15 comments Monday, June 23, 2008 ಈ ಸಂಭಾಷಣೆ... ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು ಅರೆಪಾವು ತುಂಟತನ, ಆಗಾಗ ಥೇಟ್ ಮಗು ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು ಪ್ರಶ್ನೆ ಕೇಳುವಾಗಲೆಲ್ಲ ತುಸು ತಗ್ಗಿದಂತೆ ದನಿ ಕಾತರತೆ, ಕಾದಂತೆ ಎಲೆತುದಿಗೆ ಪುಟ್ಟ ಮಳೆಹನಿ ಉತ್ತರಕ್ಕೊಮ್ಮೆ ಬುದ್ಧ, ಇನ್ನೊಮ್ಮೆ ಶುದ್ಧ ವಜ್ರಮುನಿ ಅಪರೂಪಕ್ಕೊಮ್ಮೊಮ್ಮೆ ಬರೀ ಹಠಮಾರಿ ಪುಟಾಣಿ! ಹೇಳಿದಷ್ಟೂ ಸಾಲದು, ಮಾತಾಡಿದಷ್ಟೂ ಸಾಕಾಗದು "ಮತ್ತೆ?" ಪ್ರಶ್ನೆ ತುಟಿಯಂಚಲ್ಲಿ ಎಂದೂ ಸಾಯದು ನಿಶ್ಯಬ್ಧ, ನಿಟ್ಟುಸಿರು, ನಗು ದಿನದಿನವೂ ಹೊಸಹೊಸದು ಕಿವಿಯಂಚಲ್ಲೇ ಗಾಂಧರ್ವಲೋಕ ಮೂಡಿಹದು ನಿಜದು ಅನುರಾಗದಾಲಾಪದ ಮೋಹಕ ಅಲೆಗಳಲ್ಲಿ ತೇಲಾಡಿ ಕಳೆದುಹೋಗುತ್ತಿರುವ ಕಾಲಪುರುಷನನೂ ಪರಿಪರಿ ಕಾಡಿ, ಮೌನದಾಗಸದಲ್ಲಿ ಮೆಲುದನಿಯ ಕಾಮನಬಿಲ್ಲು ಹೂಡಿ ಹಾಡುತ್ತಲೇ ಇದೆ ಈ ನಿತ್ಯ ನೂತನೆ, ಸಲ್ಲಾಪದ ಮೋಡಿ Posted by Unknown at 1:01 AM 12 comments Thursday, April 24, 2008 ಈರನ ತರ್ಕವೂ... ಎಲೆಕ್ಸನ್ನೂ..... ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ ಕಡೆ ಪುಟುಪುಟನೇ ಬರುತ್ತಿದೆ ಅಂದ್ರೆ ಅದು ಈರನೇ ಅಂತ ನಿಸ್ಸಂಶಯವಾಗಿ ಹೇಳಿ ಬಿಡಬಹುದು. ಅವನು ಹಲವಾರು ವರ್ಷಗಳಿಂದ ರಾಂಭಟ್ಟರ ಮನೆಯ ಸದಸ್ಯನಂತೇ ಖಾಯಂ ಕೆಲಸಕ್ಕೆ ಇದ್ದವನು. ಹಣ್ಣು ಹಣ್ಣು ಮುದುಕನಾಗಿ, ಬಡಕಲಾಗಿದ್ದ ಅವನನ್ನು ನೋಡಿದರೆ ಯಾರಿಗೂ ಇವನು ಕೆಲಸ ಮಾಡಬಹುದು ಎಂದೇ ಅನ್ನಿಸುತ್ತಿರಲಿಲ್ಲ. ಆದರೂ ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು, ಸಿಕ್ಕ ದುಡ್ಡಲ್ಲೇ ಹೇಗೋ ಅವನಿಗೆ ಬೇಕಾದಷ್ಟು ಖರ್ಚು ಮಾಡಿಕೊಂಡು ಹಾಯಾಗಿದ್ದ. ಅಪ್ಪ ಆಗಾಗ ಅವನನ್ನು ತೋಟದಲ್ಲಿದ್ದ ತೆಂಗಿನಕಾಯಿಗಳನ್ನು ಕೆಡವಲು ಕರೆಯುತ್ತಿದ್ದರು. ಸಪೂರ ಕಾಲುಗಳ ಈರ, ತೆಂಗಿನ ಮರ ಹತ್ತಿ ಕಾಯಿ ಕಿತ್ತು ಕೆಳಗೆ ಹಾಕುವುದನ್ನು ನೋಡುವುದೇ ಒಂದು ಮಜ. ಎರಡೂ ಕಾಲುಗಳಿಗೆ ಹಗ್ಗದ ತಳೆಯೊಂದನ್ನು ಸಿಕ್ಕಿಸಿ, ವೇಗವಾಗಿ ಮರ ಹತ್ತಿ, ನೋಡು ನೋಡುತ್ತಿದಂತೆಯೇ ಕಾಯಿಗಳನ್ನು ಕಿತ್ತು ಕೆಳಕ್ಕೆ ಎಸೆದು, ಸರ್ರನೇ ಮರದಿಂದ ಜಾರಿ ನೆಲಕ್ಕಿಳಿಯುತಿದ್ದ ಪರಿಯೇ ನನಗೊಂದು ಬೆರಗು. ಎಷ್ಟು ವರ್ಷಗಳಿಂದ ಇದೇ ಕೆಲಸವನ್ನು ಮಾಡುತ್ತಿದ್ದನೋ ಅವನು? ಎಂತಾ ಎತ್ತರದ ಮರವಾದರೂ ಲೀಲಾಜಾಲವಾಗಿ ಹತ್ತಬಲ್ಲ ಚಾಕಚಕ್ಯತೆ ಅವನಲ್ಲಿತ್ತು. ಅವನ ಮತ್ತೊಂದು ವಿಶೇಷತೆ ಅಂದರೆ ಅವನ ಬಾಯಿ. ಬಹುಷಃ ಮಲಗಿದ್ದಾಗ ಮಾತ್ರ ಅದಕ್ಕೆ ವಿಶ್ರಾಂತಿ ಕೊಡುತ್ತಿದ್ದ ಅವನು. ಯಾವುದೇ ಕೆಲಸ ಮಾಡುವಾಗಲೂ ಮಾತಾಡುತ್ತಲೇ ಇರಬೇಕು. ಅಪ್ಪ ಆಗಾಗ "ಈರಾ, ನಿಂದು ಮರದ್ದ ಬಾಯಾಗಿದ್ರೆ ಇಷ್ಟೊತ್ತಿಗೆ ವಡೆದು ಹೋಗ್ತಿತ್ತು ನೋಡು" ಅಂತ ಛೇಡಿಸುತ್ತಿದ್ದರು. ಅದಕ್ಕೆಲ್ಲಾ ಅವನು ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. "ಇರಬೋದ್ರಾ" ಎಂದಂದು ಮತ್ತೆ ಅವನ ಕಾಯಕವನ್ನು ಮುಂದುವರೆಸುತ್ತಿದ್ದ. ನಮಗೆಲ್ಲ ಅವನ ವಾಚಾಳಿತನ ತಮಾಷೆಯ ವಿಷಯವಾಗಿತ್ತು. ಆಗಾಗ ಯಾವ್ಯಾವ್ದೋ ವಿಷಯಗಳನ್ನು ಎತ್ತಿ, ಅವನ ಬಾಯಿಂದ ಉದುರುವ ಅಣಿಮುತ್ತುಗಳನ್ನು ಕೇಳಿ ನಗಾಡಿಕೊಳ್ಳುತ್ತಿದ್ದೆವು. ಹಬ್ಬದ ದಿನ ಬೆಳಿಗ್ಗೆ ಜಗಲಿಯಲ್ಲಿ ಖುರ್ಚಿ ಹಾಕಿಕೊಂಡು ಕುಳಿತು ಪೇಪರ ಓದುತ್ತಿದ್ದವನಿಗೆ ಈರ ಮನೆ ಕಡೆ ಬರುತ್ತಿರುವುದು ಕಂಡಿತು. ಸಮಯ ನೋಡಿದರೆ ಇನ್ನೂ ಎಂಟು ಗಂಟೆ. ಅವನು ಇನ್ನೂ ಸ್ವಲ್ಪ ದೂರದ್ದಲ್ಲಿದ್ದಂತೆಯೇ ನಾನು "ಎನೋ ಈರಾ, ಇಷ್ಟು ಬೇಗಾ ಬಂದು ಬಿಟ್ಟಿದ್ದೀಯಾ" ಎಂದು ಕೇಳಿದೆ. ಹತ್ತಿರಾ ಬಂದವನೇ "ಓ, ಮರಿ ಹೆಗಡೇರು....ಹಬ್ಬಕ್ಕೆ ಮನೆಗೆ ಬಂದವ್ರೆ. ಬೆಂಗ್ಳೂರಿಂದಾ ಯಾವಾಗಾ ಬಂದ್ರಾ?" ಎಂದು ಕೇಳಿದ. ನಾನು "ನಿನ್ನೆ" ಎಂದು ಹೇಳಿ ಸುಮ್ಮನಾದೆ. "ಹೆಗ್ಡೇರು ಕಾಯಿ ಕೊಯ್ಯಕ್ಕೆ ಬಾ ಅಂದಿದ್ರು. ಮುಗಸಕಂಡೇ ಭಟ್ಟರ ಮನೆಗೆ ಹೋಗವಾ ಅಂತಾ ಬೆಗ್ಗನೇ ಬಂದೆ. ಹೆಗಡ್ರಿಲ್ಲ್ರಾ? ಎಂದು ಪ್ರಶ್ನೆ ಹಾಕಿದ. ನಾನು ಒಳಗೆ ಹೋಗಿ, ಯಾವ್ಯಾವ ಮರದ್ದು ಕಾಯಿ ಕೀಳಿಸುವುದು ಎಂದು ತಿಳಿದುಕೊಂಡು, ಈರನ ಹತ್ತಿರ "ನಡ್ಯಾ, ನಾನೇ ಬರ್ತೆ ಇವತ್ತು. ನಿನ್ನ ಹತ್ರಾ ಮಾತಾಡದ್ದೇ ಬಾಳ ದಿನಾ ಆಯ್ತು" ಎಂದು ಕತ್ತಿ, ತಳೆ, ಗೋಣಿಚೀಲ ಹಿಡಿದುಕೊಂಡು ಹೊರಟೆ. "ಈ ಮುದಕನ ಹತ್ರ ಎಂತಾ ಇರ್ತದ್ರಾ ಮಾತಾಡದು? ನೀವೇ ಹೇಳ್ಬೇಕು ಬೆಂಗ್ಳೂರಲ್ಲಿದ್ದವ್ರು" ಎಂದವನೇ ಬಾಯಲ್ಲಿದ್ದ ಎಲೆಯಡಿಕೆಯನ್ನು ಉಗಿದು ನನ್ನ ಜೊತೆಗೆ ಮಾತಾಡಲು ಅನುವಾದ. ಬೆಳಿಗ್ಗೆ ಬೆಳಿಗ್ಗೆನೇ ಒಳ್ಳೆ ಟೈಮ್ ಪಾಸ್ ಆಯ್ತು ಅಂತ ನನಗೆ ಒಳಗೊಳಗೇ ಸಂತೋಷವಾಯ್ತು. ಆದರೆ ನನ್ನ ನಿರೀಕ್ಷೆಗೆ ವಿರುದ್ಧವಾಗಿ ಈರ ಜಾಸ್ತಿ ಮಾತಾಡುವ ಇರಾದೆಯನ್ನೇನೂ ತೋರಿಸಲಿಲ್ಲ. ನಾನೇ ಯಾವ್ಯಾವ್ದೋ ವಿಷಯಗಳನ್ನು ಎತ್ತಿ ಹಲವಾರು ಪ್ರಶ್ನೆಗಳನ್ನು ಕೇಳಿದೆ. ಎಲ್ಲದಕ್ಕೂ ಅವನದು ಚುಟುಕಾದ ಉತ್ತರ.ಇವತ್ಯಾಕೋ ಅವನ ಮೂಡ್ ಸರಿಯಿಲ್ಲದಿರಬಹುದು ಎಂದು ನಾನೂ ಜಾಸ್ತಿ ಮಾತಾಡದೇ ಅವನ ಕೆಲಸ ಮುಗಿಯುವವರೆಗೂ ಸುಮ್ಮನಿದ್ದೆ. ಕೆಡವಿದ ಕಾಯಿಗಳೆಲ್ಲವನ್ನೂ ಚೀಲಕ್ಕೆ ತುಂಬಿ ಈರನ ಬೆನ್ನಿಗೆ ಹೊರಿಸಿ ನಾನು, ಅವನು ಮನೆ ಕಡೆ ಪಾದ ಬೆಳೆಸಿದೆವು. ಕೊಟ್ಟಿಗೆ ಹತ್ತಿರ ಚೀಲವನ್ನು ಧೊಪ್ಪನೆ ಇಳಿಸಿ, ಪಕ್ಕದಲ್ಲೇ ಇದ್ದ ಕಟ್ಟೆಯ ಮೇಲೆ ಕುಳಿತವನೇ ಈರ, "ಹೆಗ್ಡೇರೇ, ಎಲೆಕ್ಸನ್ನು ಬಂತಲ್ರಾ, ಈ ಸಲ ಮುಖ್ಯಮಂತ್ರಿ ಯಾರಾಗ್ತಾರ್ರಾ?" ಎಂದು ಕೇಳಿಯೇ ಬಿಟ್ಟ. ನಾನು ನಿಂತಲ್ಲಿಯೇ ಎಡವಿ ಬೀಳೋದಂದೇ ಬಾಕಿ. ಬೆಳಿಗ್ಗೆ ಬೆಳಿಗ್ಗೇನೇ ಇಂಥ ಗಹನ ಗಂಭೀರ, ಮಿಲಿಯನ್ ಡಾಲರ್ ಪ್ರಶ್ನೆಯನ್ನು ನಾನು ಈರನ ಬಾಯಿಂದಂತೂ ನಿರೀಕ್ಷಿಸಿರಲಿಲ್ಲ. ಏನು ಉತ್ತರ ಕೊಡಬೇಕೆಂದೇ ನನಗೆ ತೋಚಲಿಲ್ಲ. ನಾನು ನೇರವಾಗಿ ಉತ್ತರಿಸಿದರೆ, ಈ ಮುದುಕನ ತಲೆಯೊಳಗಿರಬಹುದಾದ ಅನೇಕ ಸ್ವಾರಸ್ಯಕರ ವಿಚಾರಗಳು ತಪ್ಪಿಹೋಗಬಹುದು ಎಂದೆಣಿಸಿ, ಸ್ವಲ್ಪ ನಿಧಾನಕ್ಕೆ "ನಾನೆಂತಾ ಜ್ಯೋತಿಷಿನೆನಾss ಯಾರು ಮುಖ್ಯಮಂತ್ರಿ ಆಗ್ತಾರೆ ಹೇಳಕ್ಕೆ? ನಂಗೆಂತಾ ಗೊತ್ತು? ನಿಂಗೆ ಯಾರು ಆಗ್ಬೇಕು ಅಂತದೇ?" ಎಂದು ಅವನಿಗೇ ಮರುಪ್ರಶ್ನೆ ಹಾಕಿದೆ. ಸಟ್ಟನೇ ಬಂತು ಉತ್ತರ. "ನೀವು ನನ್ನಾ ಕೇಳಿದ್ರೆ ನಮ್ಮ ಬಂಗಾರಪ್ಪನೋರು ಆಗ್ಬೇಕು ನೋಡಿ ಮತ್ತೆ ಇನ್ನೊಂದು ಸರ್ತಿ.ಚೊಲೋ ಇರ್ತದೆ" ಎಂದ. ಅದೇನೂ ನನಗೆ ಆಶ್ಚರ್ಯ ತರಲಿಲ್ಲ. ಯಾಕೆಂದರೆ ಈರನ ಮನೆಯವರೆಲ್ಲರೂ ಬಂಗಾರಪ್ಪನ ಪರಮ ಭಕ್ತರು. ಬಂಗಾರಪ್ಪನೋರು ಮುಖ್ಯಮಂತ್ರಿ ಆದಾಗ ಈರನ ಮಗನಿಗೊಂದು ಅಗಸೇಬಾಗಿಲಲ್ಲಿ ಸಣ್ಣ ಪಾನ್ ಅಂಗಡಿ ಹಾಕಿಕೊಳ್ಳಲು ಆರ್ಥಿಕ ಸಹಾಯ ಮಾಡಿದ್ದರು. ಅವನ ಮನೆ ನಡೆಯಲು ಆ ಪಾನ್ ಅಂಗಡಿ ಎಷ್ಟೋ ರೀತಿಯಲ್ಲಿ ಸಹಾಯ ಮಾಡಿದೆ. ಹಾಗಾಗಿ ಈರನಿಗೆ ಮತ್ತೆ ಬಂಗಾರಪ್ಪನವರೇ ಮುಖ್ಯಮಂತ್ರಿ ಆಗಲಿ ಎಂದನ್ನಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಾನು ಯಾವಾಗ ಕೇಳಿದ್ದರೂ ಬಹುಷಃ ಅವನಿಂದ ಅದೇ ಉತ್ತರ ಸಿಗುತ್ತಿತ್ತು. "ಅಲ್ದಾ, ಬಂಗಾರಪ್ಪನವರಿಗೆ ವಯಸ್ಸಾಗ್ಲಿಲ್ಲೇನಾ ಈಗಾ? ಈ ವಯಸ್ಸಲ್ಲಿ ಮುಖ್ಯಮಂತ್ರಿ ಆದರೇ ಅವರ ಹತ್ರಾ ಎಂತಾ ಮಾಡಕ್ಕೇ ಆಗತ್ತಾ?" ನಾನು ಇನ್ನೂ ಕೆದಕಿದೆ. "ಹ್ವಾಯ್, ವಯಸ್ಸಾದ್ರೆ ಎಂಥಾ ಆಯ್ತು? ಎಷ್ಟು ಗಟ್ಟಿ ಅದಾರೆ ಅವ್ರು. ಈ ವಯಸ್ಸಲ್ಲು ಬೇಕಾದ್ರೆ ಡೊಳ್ಳು ಕಟ್ಕೊಂಡು ಕುಣಿತಾರೆ ಗೊತ್ತಾ? ಅಲ್ಲಾ ನನ್ನ ನೋಡಿ ಬೇಕಾರೆ. ನಾನೂ ಬೇಕಾರೆ ಡೊಳ್ಳು ಕುಣಿತೆ ಗೊತ್ತಾ ನಿಮಗೆ? ಕಾಲು ಸ್ವಲ್ಪ ತೊಂದ್ರೆ ಕೊಡ್ತದೆ ಹೇಳದು ಬಿಟ್ರೆ ಆರಾಮಾಗೇ ಇದ್ದೆ ನಾನೂವಾ. ಮನೆ ನಡ್ಸಕಂಡು ಹೋಗ್ತಾ ಇಲ್ವಾ ಈಗ? ಮನೆ ನಡೆಸ್ದಾಂಗೆಯಾ ರಾಜ್ಯ ಆಳೋದು.ವಯಸ್ಸಾಯ್ತು ಹೇಳಿ ಮನ್ಸ್ರನ್ನ ಅಸಲಗ್ಯ ಮಾಡ್ಬೇಡಿ ನೀವು ಹಾಂಗೆಲ್ಲಾ" ಎಂದು ಅವನದೇ ವಿಶಿಷ್ಟ ಶೈಲಿಯಲ್ಲಿ ನನ್ನನ್ನು ಅಣಕಿಸುವಂತೆ ಹೇಳಿದ. ನಾನು ಈಗ ಧಾಟಿ ಬದಲಾಯಿಸಿ "ಹೋಗ್ಲಿ ಬಂಗಾರಪ್ಪನವ್ರು ಈಗ ಯಾವ ಪಕ್ಷದಲ್ಲಿದಾರೆ ಹೇಳಾದ್ರೂ ಗೊತ್ತನಾ ನಿಂಗೆ?" ಎಂದು ಕೇಳಿದೆ. "ಅದ್ನೆಲ್ಲಾ ಕಟ್ಕಂಡು ನಮಗೆಂತಾ ಆಗ್ಬೇಕಾಗದೆ? ಅವ್ರು ಯಾವ ಪಕ್ಷದಲ್ಲಿದ್ರೆಂತಾ? ನಮ್ಮ ಮಗ ಹೇಳ್ತಾ ಯಾವ ಚಿತ್ರಕ್ಕೆ ವೋಟ್ ಹಾಕ್ಬೇಕು ಹೇಳಿ. ಅದಕ್ಕೆ ಹಾಕಿ ಬಂದ್ರಾಯ್ತು ಅಷ್ಟೇಯಾ" ಅಂದ. ಇನ್ನು ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ ಅನ್ನಿಸಿತು. ಆದರೂ ಇಷ್ಟಕ್ಕೆ ಬಿಟ್ಟ್ರೆ ಎಂತಾ ಚಂದ ಎನ್ನಿಸಿ "ವಯಸ್ಸಾದವ್ರೆಲ್ಲಾ ರಾಜ್ಯ ಚೊಲೋ ಆಳ್ತಾರೆ ಅಂದ್ರೆ ದೇವೇಗೌಡ್ರೇ ಮುಖ್ಯಮಂತ್ರಿ ಆಗ್ಬಹುದಲ್ಲಾ?" ಎಂಬ ಹೊಸಾ ತರ್ಕ ಮುಂದಿಟ್ಟೆ. ಈರನಿಗೆ ಯಾಕೋ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣ್ತು. "ನೀವು ಅವ್ರ ಸುದ್ದಿ ಮಾತ್ರ ಎತ್ಬೇಡಿ ನನ್ನತ್ರಾ" ಎಂದ. ಅಷ್ಟರಲ್ಲಿ ಅಮ್ಮ ಒಳಗಿಂದ ಬಾಳೆ ಎಲೆಯಲ್ಲಿ ಅವಲಕ್ಕಿ, ಒಂದು ಲೋಟ ಚಾ ಹಿಡಿದುಕೊಂಡು ಬಂದು ಕಟ್ಟೆ ಮೇಲಿಟ್ಟರು. ಈರ ಬಂದ ಸಿಟ್ಟನೆಲ್ಲ ಹಾಕಿಕೊಂಡಿದ್ದ ಎಲೆಯಡಿಕೆಯ ಮೇಲೆ ತೀರಿಸುವಂತೆ, ಅದನ್ನು ಪಕ್ಕಕ್ಕೇ ಜೋರಾಗಿ ಉಗುಳಿ, "ಈಗ ಆಸ್ರಿಗೆ ಎಲ್ಲಾ ಬ್ಯಾಡ್ರಾ ಅಮಾ, ಮನ್ಲೇ ಮಾಡ್ಕಂಡು ಬಂದೆ. ನೀವು ಒಂದೆರಡು ಅಡಿಕೆ ಇದ್ರೆ ಕೊಡಿ, ಕವಳ ಸಂಚಿ ಖಾಲಿಯಾಗೋಗದೆ" ಎಂದ. ಅಮ್ಮ ಗೊಣಗುತ್ತಾ "ನಿಂಗೆ ಅಡಿಕೆ ಕೊಟ್ಟು ಪೂರೈಸೈಕಾಗಲ್ಲಾ ನೋಡು. ದಿನಕ್ಕೆ ಸಾವ್ರ ಸಲ ಕವಳ ಹಾಕ್ತೆ. ನಂಗೆ ಬೇಕಾದಷ್ಟು ಕೆಲ್ಸ ಅದೆ. ಈಗ ಅಟ್ಟ ಹತ್ತಿ ಮತ್ತೆ ಅಡಕೆ ತರ್ಲಿಕ್ಕೆ ನನ್ನ ಕೈಯಲ್ಲಂತೂ ಆಗಲ್ಲ" ಎಂದು ಹೇಳಿ ವಾಪಸ್ ಹೋದರು. ಅಮ್ಮ ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇರಲಿಲ್ಲ. ಅವನು ಹೊಸದಾಗಿ ಯಾವಾಗ ಎಲೆಯಡಿಕೆ ಹಾಕಿಕೊಂಡಿದ್ದನೋ, ನನಗಂತೂ ಗೊತ್ತೇ ಆಗಿರಲಿಲ್ಲ. ಈರನಿಗ್ಯಾಕೋ ಕೊಟ್ಟ ಅವಲಕ್ಕಿ, ಚಾ ಗಿಂತಲೂ ಅಡಿಕೆಯೇ ಮೇಲೆಯೇ ಜಾಸ್ತಿ ಒಲವಿದ್ದ ಹಾಗೇ ಕಂಡಿತು. ಅವನು ನನ್ನನ್ನು ಮತ್ತೆ ಅದರ ಅವಶ್ಯಕತೆಯ ಬಗ್ಗೆ ಕೊರೆಯುವುದಕ್ಕಿಂತ ಮುಂಚೆ ನಾನೇ ಎದ್ದು ಹೋಗಿ ಡಬ್ಬದಿಂದ ೪ ಅಡಿಕೆ ತಂದು ಅವನ ಕೈಗೆ ಹಾಕಿದೆ. ಈರ ಅವಲಕ್ಕಿ ಖಾಲಿ ಮಾಡುತ್ತಿರುವಂತೆಯೇ ನಾನು ಮತ್ತೆ ಕೇಳಿದೆ. "ಅಲ್ವಾ, ದೇವೇಗೌಡ್ರು ಮುಖ್ಯಮಂತ್ರಿ ಆಗೋದು ಬ್ಯಾಡ ಹೇಳಿ ಎಂತಕ್ಕೆ ಹೇಳಿ ಹೇಳಿಲ್ವಲ್ಲಾ ನೀನು?". "ಅದು... ಈ ಸರಾಯಿ ಮಾರೋದು ನಿಲ್ಲಿಸ್ದವ್ರು ದೇವೇಗೌಡ್ರೇ ಅಲ್ವ್ರಾ. ಅದಕ್ಕೆ ಬೇಡ ಅಂದೆ" ಅಂದ. ಅವನ ಯೋಚನೆಗಳಿಗೆ ಇಂಥ ಆಯಾಮಗಳೂ ಇರುತ್ತವೆ ಎನ್ನುವುದು ನನಗೆ ಗೊತ್ತಿರಲಿಲ್ಲ. "ಥೋ, ಮಾರಾಯ..ಸಾರಾಯಿ ಮಾರೋದ್ನಾ ನಿಲ್ಲಿಸ್ದವ್ರು ದೇವೇಗೌಡ್ರು ಅಲ್ಲ ಮಾರಾಯ. ಬಿಜೆಪಿಯವ್ರು" ಎಂದೆ. "ಯಾರಾದ್ರೆ ಎಂತದು? ಒಟ್ನಲ್ಲಿ ದೇವೇಗೌಡ್ರ ಮಗ ಮುಖ್ಯಮಂತ್ರಿ ಆಗಿದ್ದಾಗ ಅಲ್ದಾ ನಿಲ್ಸಿದ್ದು.ಒಟ್ನಲ್ಲಿ ನಮ್ಮ ಟೈಮ್ ಸರಿಯಿರ್ಲಿಲ್ಲ.ಅದಕ್ಕೆಯಾ ಬಂಗಾರಪ್ನೋರಿಗೆ ವೋಟ್ ಹಾಕದು ನಾನು" ಎಂದ. ಪ್ಯಾಕೆಟ್ ಸರಾಯಿ ಮಾರೋದು ನಿಲ್ಲಿಸಿದಕ್ಕೂ, ಈರನ ಟೈಮ್ ಸರಿಯಿಲ್ಲದಿರದಕ್ಕೂ ರಿಲೇಟ್ ಮಾಡಲು ನನಗಂತೂ ಬಹಳ ಕಷ್ಟವಾಗಲಿಲ್ಲ. ದಿನವೂ ಸಂಜೆ ೭ ಗಂಟೆ ಆಗುತ್ತಿದಂತೆಯೇ ಈರ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಉತ್ತರಾಭಿಮುಖವಾಗಿ ನೀಲೆಕಣಿ ಕಡೆಗೆ ಹೋಗುವುದು ಯಾವ ಗನಗಂಭೀರ ಉದ್ದೇಶಕ್ಕೆ ಎನ್ನುವುದು ಇಡೀ ಊರಿಗೆ ಗೊತ್ತು.ಇಂತಿಪ್ಪ ಈರನಿಗೆ ಧಿಡೀರ್ ಎಂದು ಪ್ಯಾಕೆಟ್ ಸಾರಾಯಿ ನಿಷೇಧ ಮಾಡಿಬಿಟ್ಟರೆ ಎಷ್ಟು ಕಷ್ಟವಾಗಿರಲಿಕ್ಕಿಲ್ಲ?. ಆ ಕಾರ್ಯಕ್ಕೆ ಮುಂದಾದ ಜನರನ್ನು ಅವನು ಜೀವಮಾನದಲ್ಲಿ ಕ್ಷಮಿಸುವುದು ಸುಳ್ಳು. ಈ ವಿಷಯ ಮತ್ತೆ ಮುಂದುವರಿಸಿದರೆ ಈರನ ಮೂಡ್ ಮತ್ತೆ ಯಾವ ಕಡೆ ತಿರುಗುತ್ತದೆಯೋ ಎಂದು ಹೆದರಿ ನಾನು ಮಾತುಕತೆಯನ್ನು ಅಲ್ಲಿಯೇ ನಿಲ್ಲಿಸಿಬಿಟ್ಟೆ. ಆದರೆ ಈರ ನಿಲ್ಲಿಸುವ ಲಕ್ಷಣವಿರಲಿಲ್ಲ." ನೀವು ಬರೀ ನನ್ನ ಕೇಳಿದ್ದೇ ಆಯ್ತು. ನೀವು ಯಾರಿಗೆ ವೋಟ್ ಹಾಕ್ತ್ರಿ? ಬಂಗಾರಪ್ಪನವ್ರಿಗೇ ಹಾಕಿ" ಎಂದ. ನಾನು ತಲೆ ಆಡಿಸಿದೆ. ಇನ್ನೇನೂ ಹೇಳಲು ಬಾಯಿತೆರೆದರೆ ನನ್ನ ಮಾತುಗಳೆಲ್ಲವೂ ನನಗೇ ತಿರುಗುಬಾಣವಾಗುವ ಸಾಧ್ಯತೆಯಿತ್ತು. "ಎಲೆಕ್ಷನ್ ದಿನಾ ನಿಮ್ಗೆ ರಜೆ ಅದ್ಯಾ? ವೋಟ್ ಹಾಕಕ್ಕೆ ಬೆಂಗ್ಳೂರಿಂದ ಬರದು ಹೌದಾ?" ಎಂದು ಕೇಳಿದ. "ಹ್ಮ್...ನೋಡಣಾ. ಬರ್ಬೇಕು ಅಂತದೆ. ಎಂತಾ ಆಗ್ತದೆ ಗೊತ್ತಿಲ್ಲ. ಈ ಎಲೆಕ್ಷನ್ ನಾಟಕಾ ಎಲ್ಲ ನೋಡಿದ್ರೆ ಯಾರಿಗೂ ವೋಟ್ ಹಾಕದೇ ಬ್ಯಾಡ ಅನ್ನಸ್ತದೆ ಮಾರಾಯಾ" ಎಂದು ತುಸು ಬೇಸರದ ಧ್ವನಿಯಲ್ಲೇ ಹೇಳಿದೆ. "ಹ್ವಾಯ್, ನೀವು ಹಿಂಗೆ ಹೇಳಿದ್ರೆ ಹೆಂಗ್ರಾ? ನಿಮ್ಮಂಥ ಹುಡುಗ್ರು, ಓದ್ದವ್ರು ವೋಟ್ ಹಾಕ್ಲೇ ಬೇಕ್ರಾ. ನಾವಾರೇ ಓದದವ್ರು, ಜಾಸ್ತಿ ತೆಳಿಯದಿಲ್ಲಾ. ನೀವು ಪ್ರಪಂಚ ಕಂಡವ್ರು. ನಿಮಗೆ ಗೊತ್ತಿರ್ತದೆ ಅಲ್ರಾ, ಯಾರಿಗೆ ವೋಟ್ ಹಾಕ್ಬೇಕು, ಯಾರಿಗೆ ಹಾಕ್ಬಾರ್ದು ಅಂತೆಲ್ಲಾ? ನೀವು ವಿದ್ಯಾವಂತರು ವೋಟ್ ಹಾಕ್ದೇ ಇದ್ದ್ರೆ ಎಂಥೆಂತದೋ ಜನ ಆರ್ಸಿ ಬರ್ತಾರೆ. ವೋಟ್ ಹಾಳು ಮಾಡ್ಬೇಡ್ರಿ ಮಾರಾಯ್ರಾ. ರಜೆ ಹಾಕಾದ್ರೂ ಬಂದು ವೋಟ್ ಮಾಡಿ ಹೋಗಿ" ಎಂದು ಕಳಕಳಿಯ ಧ್ವನಿಯಲ್ಲಿ ಹೇಳಿದ. ಈರನಿಗಿದ್ದ ಕಳಕಳಿ ಎಲ್ಲ ವಿದ್ಯಾವಂತರಲ್ಲೂ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ನನಗೆ ಅನ್ನಿಸಿತು. ಈರ ಮುಂದುವರಿಸಿ " ನಾನು ಭಟ್ಟರಿಗೂ ಹೇಳ್ದೆ. ಭಟ್ಟ್ರ ಮಗಳು ಕಾಲೇಜಿಗೆ ಹೋಗ್ಲಿಕ್ಕೆ ಹಣಕಿ ೩ ವರ್ಷ ಆಗ್ತಾ ಬಂತು. ಅವ್ರೂ ವೋಟ್ ಹಾಕ್ಬಹುದೇನಪಾ. ಎರಡು ತಿಂಗ್ಳ ಹಿಂದೆ ಹೀಪನಳ್ಳಿ ಶಾಲೆಲೇ ಅದೆಂತೋ ಹೆಸರು ಬರೆಸ್ಕಂಡು ಹೋದ್ರು. ನಮ್ಮ ಗೋವಿಂದಂಗೆ ಈ ವರ್ಷ ೧೮ ತುಂಬ್ತು. ಅವ್ನ ಕಳ್ಸಿಕೊಟ್ಟಿದ್ದೆ. ಈಗ ಮೊನ್ನೆ ಮೊನ್ನೆ ಅದೆಂತೋ ಮಶಿನ್ನಾಗೆ ಫೋಟೋ ತೆಗಸಿ ಒಂದು ಕಾರ್ಡ್ ಕೊಟ್ರಪ್ಪಾ. ಅವ್ನುವಾ ಈ ಸಲ ವೋಟ್ ಮಾಡ್ಬಹುದಂತೆ. ಆದ್ರೆ ಭಟ್ಟ್ರ ಮಗಳು ಹೋದಂಗೆ ಇಲ್ಲ. ಅಲ್ಲಾ ಆ ಹುಡಗಿಗಂತೂ ಬುದ್ಧಿ ಇಲ್ಲ.ಭಟ್ಟ್ರಾದ್ರೂ ಕಳ್ಸಿಕೊಡ್ಬೇಕಾ ಇಲ್ಲ್ವಾ? ನಾ ಹೇಳ್ದೆ. ಭಟ್ಟರೆಲ್ಲಿ ಕೇಳ್ತಾರೆ ನನ್ನ ಮಾತಾ? ಮುದಕಾ ವಟವಟಗುಡ್ತಾನೆ ಅಂತಾರೆ . ಹೋಗ್ಲಿ ಬಿಡಿ.ಎಂತಾ ಮಾಡಕ್ಕೆ ಆಗ್ತದೇ ಅಲ್ರಾ? ಎಂದು ತನ್ನ ಬೇಸರ ತೋಡಿಕೊಂಡ. ನಾನು ಸುಮ್ಮನೆ ಅವನನ್ನು ಸಮ್ಮತಿಸಿದೆ. ಇನ್ನೂ ಒಂದಷ್ಟು ಹೊತ್ತು ಮಾತಾಡುತ್ತಿದ್ದನೇನೋ. ಆದರೆ ನಾನು ಸುಮ್ಮನಿದ್ದದನ್ನು ನೋಡಿ "ನಿಮ್ಮ ಹತ್ರ ಮಾತಾಡ್ತಾ ಇದ್ರೆ ಹೀಂಗೆ ಮಧ್ಯಾಹ್ನ ಆಗೋಗ್ತದೆ. ಭಟ್ಟ್ರು ಆಮೇಲೆ ಕೋಲು ಹಿಡ್ಕಂಡು ಕಾಯ್ತಿರ್ತಾರೆ" ಅಂದವನೇ "ಹೆಗಡೇರಿಗೆ, ನೀವೇ ಹೇಳ್ಬಿಡಿ. ಸಂಜೆ ಬಂದು ದುಡ್ಡು ಇಸ್ಕಂಡು ಹೋಗ್ತೆ. ಬರ್ಲಾ? ಬರ್ತೆ ಅಮಾ.."ಎಂದವನೇ ಎದ್ದು ಹೋಗೇ ಬಿಟ್ಟ. ನಾನು ಸ್ವಲ್ಪ ಹೊತ್ತು ಅವನ ಹೋದ ದಾರಿಯನ್ನೇ ನೋಡ್ತಾ ಇದ್ದೆ. ಮನಸ್ಸಿನಲ್ಲಿ ಮಾತ್ರ, ಯಾವುದೇ ಕಾರಣಕ್ಕೆ ತಪ್ಪಿಸದೇ ವೋಟ್ ಮಾತ್ರ ಹಾಕಲೇ ಬೇಕೆಂದು ಧೃಢವಾಗಿ ನಿರ್ಧರಿಸಿಕೊಂಡೆ. ನೀವೂ ಅಷ್ಟೇ. ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಆಯ್ತಾ? ಗೊತ್ತಾದ್ರೆ ಈರ ಬಹಳ ಬೇಜಾರು ಮಾಡ್ಕೋತಾನೆ! Posted by Unknown at 1:23 PM 9 comments Thursday, March 20, 2008 ಯಾವ ಮೋಹನ ಮುರಳಿ ಕರೆಯಿತೋ ಕೆಲವೊಮ್ಮೆ ನನಗೆ ಹಾಗಾಗುತ್ತೆ. ಯಾವುದೋ ಹಾಡು ತುಂಬಾ ಹಿಡಿಸಿ, ಬಹಳಷ್ಟು ದಿನಗಳ ಕಾಲ ಕಾಡುತ್ತಾ ಇರತ್ತೆ. ಇಡೀ ದಿನ ಅದರದ್ದೇ ಗುಂಗು. ಈಗೊಂದು ೧೫ ದಿನಗಳಿಂದ ಈ ಹಾಡು ಕಾಡುತ್ತಾ ಇದೆ. ಇದು ತೆಲುಗಿನ "ಸಿರಿವೆನ್ನೆಲ" ಚಿತ್ರದ್ದು. ಈ ಹಾಡಿನ ಸಂಪೂರ್ಣ ಸಾಹಿತ್ಯ ಓಂಕಾರದ ಮೇಲೆ ರಚಿತವಾಗಿದೆ. ನನ್ನ ತೆಲುಗು ರೂಂಮೇಟನ್ನು ಕಾಡಿ ಬೇಡಿ, ಸಾಹಿತ್ಯದ ಅರ್ಥ ತಿಳಿದುಕೊಂಡೆ. ಓಂಕಾರವನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾನೆ ಸಾಹಿತಿ!. "ಸರಸ ಸ್ವರ ಸುರ ಝರೀ ಗಮನಂ ಸಾಮವೇದ ಸಾರಮಿದಿ" ಎಂಬಂತ ಸುಂದರ ಸಾಲುಗಳನ್ನು ಪೋಣಿಸಿ ರಚಿಸಿದ್ದಾರೆ ಸಾಹಿತಿ ಶ್ರೀ ಸೀತಾರಾಮ ಶಾಸ್ತ್ರಿ ಅವರು. ಅದಕ್ಕೆ ಒಳ್ಳೆಯ ಸಂಗೀತ ಬೇರೆ.ಈ ಹಾಡಿನಲ್ಲಿ ಕೊಳಲಿನ ಬಳಕೆ, ಹಾಡಿನ ಸೌಂದರ್ಯಕ್ಕೆ ಮೆರಗು ತಂದಿದೆ ಅಂದು ನನಗೆ ಅನ್ನಿಸುತ್ತೆ. ಈ ಹಾಡಿಗೆ ಪ್ರಸಿದ್ಧ ಕಲಾವಿದ ಹರಿಪ್ರಸಾದ್ ಚೌರಾಸಿಯಾ ಅವರು ಕೊಳಲಿನ ಹಿನ್ನೆಲೆ ಒದಗಿಸಿದ್ದಾರೆ. ಸಂಗೀತ ನಿರ್ದೇಶನ ಕೆ.ವಿ.ಮಹಾದೇವನ್, ಹಾಡಿದವರು ಎಸ್.ಪಿ.ಬಿ ಮತ್ತು ಪಿ.ಸುಶೀಲಾ. ಹ್ಮಾ.. ಮರೆತಿದ್ದೆ. ಈ ಚಿತ್ರದಲ್ಲಿ ನಾಯಕ ಕುರುಡ, ಆದರೆ ಚೆನ್ನಾಗಿ ಕೊಳಲು ಬಾರಿಸುತ್ತಾನೆ. ನಾಯಕಿ ಮೂಕಿ. ಮೂಕಿಯ ಪಾತ್ರದಲ್ಲಿ ಸುಹಾಸಿನಿಯವರು ಮನೋಹಕ ಅಭಿನಯ ನೀಡಿದ್ದಾರೆ. ಒಳ್ಳೆಯ ಸಾಹಿತ್ಯ, ಸಂಗೀತ, ಹಿನ್ನೆಲೆ ಗಾಯನ, ಹಿನ್ನೆಲೆಯಲ್ಲಿ ತೇಲಿ ಬರುತ್ತಿರುವ ಕೊಳಲಿನ ಸದ್ದು, ಇವೆಲ್ಲಾ ಒಟ್ಟಿಗೆ ಸೇರಿದರೆ ಗಂಧರ್ವಲೋಕ ಸೃಷ್ಟಿಯಾಗದೇ ಇನ್ನೇನಾದೀತು? Posted by Unknown at 8:44 AM 5 comments Monday, March 17, 2008 ಮೂಕ ಹಕ್ಕಿಯು ಹಾಡುತಿದೆ.. ವಾರಂತ್ಯದಲ್ಲೂ ನಗರದ ಜಂಜಡದಿಂದ ಅಷ್ಟು ದೂರ ಬಂದು, ಈ ಹಸಿರು ಹಿನ್ನೆಲೆಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನದಿಯ ಹರವನ್ನು ದಿಟ್ಟಿಸುತ್ತಾ ಕಾಲ ಕಳೆಯುವುದು ಕೇವಲ ಅವಳ ನೆನಪನ್ನು ಮರೆಯಲೋಸ್ಕರವಾ?ಅಥವಾ ನನ್ನನ್ನೇ ನಾನು ಮರೆಯಲಾ? ಗೊತ್ತಾಗುತ್ತಿಲ್ಲ! . ಆದರೆ ಒಂದಂತೂ ನಿಜ. ಹಸಿರು ಸೆರಗು ಹೊದ್ದಿರುವ ವನದೇವತೆಯ ಮಡಿಲಲ್ಲಿ ಮೈಚಾಚಿ,ದಿವ್ಯ ಏಕಾಂತದಲ್ಲಿ ಎಲ್ಲವನ್ನೂ ಮರೆತು ಹೋಗುವುದು ಎಷ್ಟು ಆಪ್ಯಾಯಮಾನ ಗೊತ್ತಾ? ಅವಳೂ ನನ್ನ ಪಕ್ಕದಲ್ಲೇ ಕುಳಿತು ಮೌನದೊಳಕ್ಕೇ ಪಿಸುಗುಟ್ಟಿದ್ದರೆ ಇನ್ನೂ ಹಿತವಾಗಿರುತ್ತಿತ್ತೆಂದು ಒಮ್ಮೊಮ್ಮೆ ಅನಿಸುವುದಿದೆ.ಆದರೆ ಆಗ ಏಕಾಂತದ ರಸಘಳಿಗೆಯನ್ನು ಸವಿಯುವ ಭಾಗ್ಯ ತಪ್ಪಿಹೋಗುತ್ತಿತ್ತೇನೋ. ಏಕಾಂತದ ರಂಗಸ್ಥಳದಲ್ಲಿ ಕೇವಲ ನನ್ನೆದೆಯ ಪಿಸುಮಾತುಗಳ ಧ್ವನಿಗಳಿಗೆ ಜಾಗವಿದೆ.ಮಾತು ಮೂಕವಾಗಿ, ಮೌನ ಧ್ವನಿಯಾಗಿ, ಒಂಟಿ ಹಕ್ಕಿ ಗರಿಗೆದರಿ ಅಲ್ಲಿ ಕುಣಿಯಬೇಕು. ನನ್ನ ದುಃಖ ದುಮ್ಮಾನಗಳು ಸದ್ದಿಲ್ಲದೇ ಬಂದು ರಂಗಸ್ಥಳದಲ್ಲಿ ಗಿರಿಗಿಟ್ಲಿಯಾಗಿ ಕುಣಿದು ಸುಸ್ತಾಗಿ, ನೇಪಥ್ಯಕ್ಕೆ ಸರಿದು ಅನಿರ್ವಚನೀಯವಾದ ಭಾವವೊಂದಕ್ಕೆ ಎಡೆ ಮಾಡಿಕೊಡಬೇಕು. ಆ ಸುಖಕ್ಕಾಗಿಯೇ ಅಲ್ಲವೇ ನಾನು, ಕುಣಿಕೆ ಬಿಚ್ಚಿದೊಡನೆಯೇ ಅಮ್ಮನ ಬಳಿ ಓಡಿ ಬರುವ ಪುಟ್ಟ ಕರುವಿನ ತರ ಪದೇ ಪದೇ ಇಲ್ಲಿಗೆ ಓಡಿ ಬರುತ್ತಿರುವುದು? ಅವಳು ಬಿಟ್ಟು ಹೋದಾಗ ನನ್ನನಾವರಿಸಿಕೊಂಡ ಭಾವ ಎಂತಹುದೆಂಬುದು ಹೇಳುವುದು ಕಷ್ಟ. ಅನಾಥ ಭಾವ ರಪ್ಪನೇ ಮುಖಕ್ಕೆ ರಾಚಿತ್ತು. ದುಃಖವೇ ಹಾಗಲ್ಲವೇ ? ಸದಾ ಸುಖದ ನೆರಳಿನಲ್ಲೇ ಇದ್ದು, ಸಮಯಸಾಧಕನಂತೆ ಹೊಂಚು ಹಾಕಿ ಇದ್ದಕ್ಕಿದ್ದ ಹಾಗೆ ತನ್ನ ಕಬಂಧ ಬಾಹುಗಳನ್ನು ಚಾಚಿ ಆಪೋಶನ ತೆಗೆದುಕೊಂಡುಬಿಡುತ್ತದೆ.ಅದಕ್ಕೆ ನಿಧಾನವೆಂಬುದೇ ಗೊತ್ತಿಲ್ಲ. ಅಮಾವಾಸ್ಯೆಯ ಕತ್ತಲಿನಂತೆ ಗಾಢವಾಗಿ ಕವಿದು ಒಂದೇ ಕ್ಷಣದಲ್ಲಿ ಎಲ್ಲಾವನ್ನೂ ಆವರಿಸಿಕೊಂಡು ಬಿಡುತ್ತದೆ. ನನಗೂ ಹಾಗೇ ಆಗಿತ್ತು. ದೀಪದ ದಾರಿಯಲ್ಲಿ ನಡೆಯುತ್ತಿದ್ದವನಿಗೆ ಇದ್ದಕಿದ್ದ ಹಾಗೆ ಕಣ್ಣುಗಳು ಕುರುಡಾದ ಹಾಗೆ. ಹಲವು ದಿನಗಳಲ್ಲೇ ನಾನು ಒಂಟಿತನದ ದಾಸನಾಗಿಬಿಟ್ಟಿದ್ದೆ. ಆದರೆ ಒಂಟಿತನ ದುಃಖದಂತಲ್ಲ. ಅದು ನಿಧಾನವಾಗಿ ನನ್ನನ್ನು ತನ್ನ ಪರಿಧಿಯೊಳಕ್ಕೆ ಸೆಳೆದುಕೊಂಡಿತು. ಮೊದ ಮೊದಲು ಒಂಟಿತನದ ಮೌನ, ಕತ್ತಲು ಎಲ್ಲವೂ ಆಪ್ಯಾಯಮಾನವೆನ್ನಿಸುತ್ತಿತ್ತು. ಆದರೆ ದಿನ ಕಳೆದಂತೆ ಗೊತ್ತಾಗುತ್ತಾ ಹೋಯಿತು. ಬೆಳಕು ಬೇಕೆಂದರೆ ಒಂಟಿತನದ ಕತ್ತಲ ಮನೆಗೆ ಕಿಟಕಿಗಳೇ ಇಲ್ಲ!. ಒಂಟಿತನದ ಲೋಕದಲ್ಲಿ ಬಾಳು ಬಹಳ ದುರ್ಭರವಾಗಿತ್ತು. ಕತ್ತಲು ದಿಗಿಲುಕ್ಕಿಸುತ್ತಿತ್ತು. ಅವ್ಯಕ್ತ ಮೌನ ಮೂಗಿಗೆ ಅಡರಿ ಉಸಿರುಗಟ್ಟಿಸುವ ವಾತಾವರಣ. ಎಲ್ಲೋ ಗೋಚರಿಸಿಬಹುದಾದ ಪುಟ್ಟ ಬೆಳಕಿನ ಕಿರಣವನ್ನು ಹುಡುಕಿ,ದುಃಖದ ವ್ಯಾಪ್ತಿಯಿಂದ ಹೊರಬರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಲವು ದಿನ ಆ ಕತ್ತಲಲ್ಲೇ ಅಂಬೆಗಾಲಿಟ್ಟು ತೆವಳಿ ಹುಡುಕಿದ ಮೇಲೆಯೇ ಕಂಡಿದ್ದು ನನಗೆ ಈ ಏಕಾಂತದ ಪುಟ್ಟ ಬೆಳಕಿಂಡಿ. ಅವತ್ತು ಎಷ್ಟು ಸಂತೋಷವಾಗಿತ್ತು ಗೊತ್ತಾ?ಮೊದಲ ಬಾರಿ ನನ್ನೆದೆಯ ಹಕ್ಕಿ ರೆಕ್ಕೆ ಬಿಚ್ಚಿ ಗರಿಗೆದರಿ ಹಾಡಿತ್ತು. ಒಂಟಿತನಕ್ಕೂ ಏಕಾಂತಕ್ಕೂ ಇರುವ ವ್ಯತ್ಯಾಸ ದಿನಕಳೆದಂತೆ ಅನುಭವಕ್ಕೆ ಬರತೊಡಗಿತು. ಏಕಾಂತದಲ್ಲಿ ಮನಸ್ಸು ಮತ್ತೆ ಹಗುರ. ಏಕಾಂತದಲ್ಲಿ ನಾನು ಕೇವಲ ನಾನಾಗುತ್ತೇನೆ. ನನ್ನೊಳಗಿನ ಮೌನ ನನ್ನೊಡನೇ ಮಾತನಾಡಲು ಶುರು ಮಾಡಿಬಿಡುತ್ತದೆ!. ನೆನಪುಗಳು ಅಲ್ಲಿ ಕಾಡುವುದಿಲ್ಲ, ಬದಲು ದುಃಖಗಳಿಗೆ ಸಾಂತ್ವನ ಕೊಡುವ ಸಂಜೀವಿನಿಗಳಾಗುತ್ತವೆ. ನಮ್ಮ ತಪ್ಪನ್ನು ಎತ್ತಿ ತೋರಿಸಿ ತಿಳಿ ಹೇಳುವ ವೇದಾಂತಿಗಳಾಗುತ್ತವೆ. ಎಂಥ ಸೋಜಿಗವಲ್ಲವೇ? ಹಸಿರು ಮುಂಚಿನಿಂದಲೂ ನನ್ನ ಇಷ್ಟವಾದ ಬಣ್ಣ. ಏಕಾಂತವನ್ನು ಅನುಭವಿಸಲು ಹಸಿರು ಹಿನ್ನೆಲೆ ಇದ್ದರೆಷ್ಟು ಚೆನ್ನ ಎಂದು ಯೋಚನೆ ಮನಸ್ಸಿನಲ್ಲಿ ಸುಳಿದ ತಕ್ಷಣವೇ ಇಲ್ಲಿಗೆ ಹೊರಟು ಬಂದಿದ್ದೆ. ಕಾಡಿನ ದುರ್ಗಮ ದಾರಿಗಳಲ್ಲಿ ಕಳೆದುಹೋಗಿ, ದಾರಿ ಮಧ್ಯೆ ಝುಳು ಝುಳು ಹರಿಯುವ ನೀರಿಗೆ ತಲೆಯೊಡ್ಡಿ, ಅಲ್ಲಲ್ಲಿ ಮರಗಳಲ್ಲಿ ಅಡಗಿ ಕುಳಿತು ಚೀರುತ್ತಿರುವ ಜೀರುಂಡೆಗಳ ಹಾಡಿಗೆ ತಲೆದೂಗುತ್ತಾ, ನಮ್ಮನ್ನು ನಾವೇ ಮರೆಯುವುದಿದೆಯಲ್ಲಾ ಅದರ ರೋಮಾಂಚನವನ್ನು ಶಬ್ಧಗಳಲ್ಲಿ ಹಿಡಿಯಲು ಆಗದು. ಏನಿದ್ದರೂ ಅನುಭವಿಸಿಯೇ ತೀರಬೇಕು. "ಸದ್ದಿರದ ಪಸರುಡೆಯ ಮಲೆನಾಡ ಬನಗಳಲ್ಲಿ, ಹರಿವ ತೊರೆಯಂಚಿನಲಿ ಗುಡಿಸಲೊಂದಿರಲಿ"ಎಂದು ಕುವೆಂಪು ಆಸೆಪಟ್ಟಿದ್ದು ಇದಕ್ಕಾಗಿಯೇ ಅಲ್ಲವೇ? ಸೂರ್ಯನನ್ನೇ ಚುಂಬಿಸಲು ನಿಂತಿರುವಂತೆ ಮುಗಿಲೆತ್ತರಕ್ಕೆ ನಿಂತಿರುವ ಗಿರಿಶಿಖರಗಳನ್ನು ನೋಡುತ್ತಾ ನನ್ನೆಲ್ಲಾ ಅಹಂಕಾರ ಬೆಳಗ್ಗಿನ ಇಬ್ಬನಿಯಂತೆ ಕ್ಷಣಾರ್ಧದಲ್ಲಿ ಮರೆಮಾಯ. ಎದುರಾದ ಅಡೆ ತಡೆಗಳನ್ನೆಲ್ಲಾ ಲೆಕ್ಕಿಸದೇ ಮುನ್ನುಗಿ ಹರಿಯುವ ನದಿ ನನಗೆ ಸ್ಪೂರ್ತಿ. ಪ್ರಕೃತಿಯೆದುರು ಮಾನವ ಎಷ್ಟೊಂದು ಕುಬ್ಜ ಅಲ್ಲವೇ? ಮತ್ತೆ ಹಿಂದಿರುಗಿ ಹೋಗಲು ಇಷ್ಟವಿಲ್ಲ.ಆದರೇನು ಮಾಡಲಿ ?ಹೋಗುವುದು ಅನಿವಾರ್ಯ. ಹಿಂದೆ ಋಷಿಮುನಿಗಳು ಇಂಥ ಕಾಡುಗಳ ಮಧ್ಯೆ ಆಶ್ರಮ ಮಾಡಿಕೊಂಡು ದೇವರನ್ನು ಹುಡುಕುತ್ತಿದ್ದರಂತೆ. ಎಂಥಾ ಪುಣ್ಯವಂತರಲ್ಲವೇ ಅವರು? ಲೌಕಿಕದ ಅನುಭೂತಿಯಿಂದ ವಿಮುಕ್ತನಾಗಿ ಸರ್ವನಿಯಾಮಕನನ್ನು ಹುಡುಕಲು ಇದಕ್ಕಿಂತ ಒಳ್ಳೆಯ ಜಾಗ ಬೇರೇನಿದ್ದೀತು? ದೇವರನ್ನೇ ಹುಡುಕಬೇಕೆಂಬ ಹಠ ನನಗಿಲ್ಲ. ಆದರೆ ಇಲ್ಲಿ ಕಳೆದ ಹಲವು ಘಳಿಗೆಗಳನ್ನು ಮನತೃಪ್ತಿಯಾಗಿ ಸವಿದ ಸಾರ್ಥಕ್ಯಭಾವ ನನ್ನಲ್ಲಿದೆ.ಮತ್ತೆ ಬರುತ್ತೇನೆ. ದಣಿದ ಮನಕ್ಕೆ ಉತ್ಸಾಹದ ತಪಃಶಕ್ತಿಯನ್ನು ತುಂಬಲು!. ಒಂಟಿತನದ ಮನೆಯಲ್ಲಿ ಬಂದಿಯಾಗಿರುವ ಎಲ್ಲರಿಗೂ ಯಾರಾದರೂ ಬಂದು ದಿವ್ಯ ಏಕಾಂತದ ಸನ್ನಿಧಿಯನ್ನು ತೋರಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆದರೆ ಅದೂ ಕಷ್ಟವಲ್ಲವೇ ? ಒಳಗಿದ್ದವರನ್ನು ಕೂಗೋಣವೆಂದರೆ ಒಂಟಿತನದ ಮನೆಗೆ ಕಿಟಕಿಗಳೇ ಇಲ್ಲವಲ್ಲ? ಏಕಾಂತದ ಸನ್ನಿಧಿಯನ್ನು ಒಳಗಿದ್ದವರೇ ಹೇಗೋ ಹುಡುಕಿಕೊಳ್ಳಬೇಕು! Posted by Unknown at 5:59 PM 3 comments Sunday, March 9, 2008 ಕಾರ್ ಕಾರ್ ಎಲ್ನೋಡಿ ಕಾರ್ ಗ್ಯಾಸ್ ಸ್ಟೇಶನ್ನಿನ ಎದುರುಗಿದ್ದ ಸಿಗ್ನಲ್ಲಿನ ಮುಂದೆ ಕಾರು ನಿಲ್ಲಿಸಿಕೊಂಡಾಗ, ಮಾಧವನಿಗೆ ತಾನು ತಪ್ಪು ಲೇನಿನಲ್ಲಿ ನಿಂತಿರುವುದು ಅರಿವಾಯಿತು. ಹಿಂದೆ ಮುಂದೆ ಸಾಕಷ್ಟು ವಾಹನಗಳು ಇದ್ದುದರಿಂದ, ಸಿಗ್ನಲ್ಲು ಬಿಟ್ಟ ತಕ್ಷಣ, ಎಡಕ್ಕೆ ತಿರುಗುವುದು ಕಷ್ಟವಿತ್ತು. ಕಾರು ತಪ್ಪು ಲೇನಿನಲ್ಲಿ ನಿಂತಿದ್ದು ಅರಿವಾದ ತಕ್ಷಣ, ಅವನ ಪಕ್ಕ ಕುಳಿತಿದ್ದ "ಟೆನ್ಶನ್ ಪಾರ್ಟಿ" ಉಮಾಪತಿ ಯಾವುದೋ ದೊಡ್ಡ ತಪ್ಪು ಮಾಡಿದವರಂತೆ ಕೂಗಿಕೊಳ್ಳಲು ಶುರು ಮಾಡಿದ. ಅವನನ್ನು ಸಮಾಧಾನ ಪಡಿಸಿ, ಸಿಗ್ನಲ್ಲು ಬಿಟ್ಟ ಕೂಡಲೇ ಮಧ್ಯದ ಲೇನಿನಲ್ಲೇ ಇನ್ನೂ ಮುಂದೆ ಹೋಗಿ, ಒಂದು ಯು ಟರ್ನ ಹೊಡೆದು, ಬಲಕ್ಕೆ ತಿರುಗಿ ವಾಲ್ ಮಾರ್ಟಿನಲ್ಲಿ ಮಾಧವ ಕಾರು ಪಾರ್ಕ್ ಮಾಡಿದಾಗ, ಸೂರ್ಯ ದಿಗಂತದಲ್ಲಿ ಮರೆಯಾಗಲು ಹವಣಿಸುತ್ತಿದ್ದ. ಅಲ್ಲಲ್ಲಿ ವಿರಳ ಸಂಖ್ಯೆಯಲ್ಲಿ ನಿಂತಿದ್ದ ಕಾರುಗಳು, ತಮ್ಮನ್ನು ಅನಾಥವಾಗಿ ಬಿಟ್ಟು ಹೋದ ಮಾಲೀಕರಿಗಾಗಿ ಬರಕಾಯುತ್ತಿದ್ದವು. ಆಫೀಸು ಮುಗಿಸಿ ಮನೆಗೆ ಬಂದವರಿಗೆ,ಮನೆಯಲ್ಲಿ ಮೊಸರು ಇಲ್ಲದಿರುವುದು ಅನುಭವಕ್ಕೆ ಬಂದ ಇಬ್ಬರೂ ಕೂಡಲೇ ಕಾರು ಹತ್ತಿ ಮನೆಗೆ ಹತ್ತಿರವೇ ಇರುವ ವಾಲ್ ಮಾರ್ಟಿಗೆ ಹೊರಟು ಬಂದಿದ್ದರು. ಮಾಧವ ತಾನು ಒಬ್ಬನೇ ಹೋಗಿ ಬರುತ್ತೇನೆಂದು ಹೇಳಿದರೂ, ಮನೆಯಲ್ಲಿ ಕುಳಿತು ಸಮಯ ಕಳೆಯುವುದು ಹೇಗೆ ಎಂದು ಅರ್ಥವಾಗದೇ, ಅವನ ರೂಮ್ ಮೇಟ್ ಉಮಾಪತಿಯೂ ಹೊರಟು ಬಂದಿದ್ದ. ಈಗೊಂದು ೪ ತಿಂಗಳ ಹಿಂದೆ ಇಬ್ಬರು ಕಂಪನಿ ಕೆಲಸದ ಮೇಲೆ ಅಮೇರಿಕಕ್ಕೆ ಬಂದವರು ಸಿಂಗಲ್ ಬೆಡ್ ರೂಮಿನ ಅಪಾರ್ಟಮೆಂಟೊಂದರಲ್ಲಿ ಉಳಿದುಕೊಂಡಿದ್ದರು. ಮಾಧವ ಸ್ವಭಾವದಲ್ಲಿ ಒರಟು. ಹೆವೀ ಬಿಲ್ಟ್ ಪರ್ಸನಾಲಿಟಿ, ಹುಂಬ ಧೈರ್ಯ ಜಾಸ್ತಿ. ಎಂಥಾ ತೊಂದರೆಯಲ್ಲು ಸಿಕ್ಕಿಕೊಂಡರೂ, ಸಲೀಸಾಗಿ ಹೊರಬರಬಲ್ಲ ಚಾಕಚಕ್ಯತೆ ಅವನಲ್ಲಿತ್ತು. ಉಮಾಪತಿಯದು ಅವನ ತದ್ವಿರುದ್ಧ ಸ್ವಭಾವ. ಸ್ವಲ್ಪ ಪುಕ್ಕಲ ಸ್ವಭಾವ, ತೆಳ್ಳನೆಯ ಶರೀರ. ಸಣ್ಣ ಸಣ್ಣ ವಿಷಯಕ್ಕೂ ಗಾಬರಿ ಮಾಡಿಕೊಂಡು ಸ್ನೇಹಿತರ ಗ್ಯಾಂಗಿನೆಲ್ಲೆಲ್ಲಾ "ಟೆನ್ಶನ್ ಪಾರ್ಟಿ ಉಮಾಪತಿ" ಎಂದೇ ಕರೆಸಿಕೊಳ್ಳುತ್ತಿದ್ದ. ಆದರೂ ಅವರಿಬ್ಬರಾ ಜೋಡಿ ಮಾತ್ರ ಅಪೂರ್ವವಾಗಿತ್ತು. ಮಾಧವನ ಹುಂಬ ಧೈರ್ಯಕ್ಕೆ ಕಡಿವಾಣ ಹಾಕಲು ಮತ್ತು ಉಮಾಪತಿಯ ಪುಕ್ಕಲು ಸ್ವಭಾವಕ್ಕೆ ಧೈರ್ಯ ನೀಡಲು ಒಬ್ಬರಿಗೊಬ್ಬರು ಅನಿವಾರ್ಯವೆಂದು ಅವರನ್ನು ನೋಡಿದವರೆಲ್ಲರೂ ಮಾತಾಡಿಕೊಳ್ಳುತ್ತಿದ್ದರು. ವಾಲ್ ಮಾರ್ಟಿನಲ್ಲಿ ತಮ್ಮ ಕೆಲಸ ಮುಗಿಸಿ ಹೊರಗೆ ಬಂದಾಗ, ಹೇಗೂ ಇಲ್ಲಿತನಕ ಬಂದಾಗಿದೆ, ಹಾಗೇ ಇಂಡಿಯನ್ ಸ್ಟೋರ್ಸಿಗೂ ಹೋಗಿ ಬಂದರಾಯಿತು ಎಂದು ಉಮಾಪತಿ ಸೂಚಿಸಿದಾಗ, ಮಾಧವ ಮರುಮಾತಿಲ್ಲದೇ ಒಪ್ಪಿಕೊಂಡುಬಿಟ್ಟ. ೪ ತಿಂಗಳಿಂದ ಬರೀ ಬ್ರೆಡ್, ಜ್ಯಾಮ್, ಸೀರಿಯಲ್ಸ್ ಇವನ್ನೇ ತಿಂದು ಇಬ್ಬರಿಗೂ ನಾಲಿಗೆ ಎಕ್ಕುಟ್ಟಿ ಹೋಗಿತ್ತು. ಇಂಡಿಯನ್ ಸ್ಟೋರ್ಸಿನಲ್ಲಿ ಅಪರೂಪಕ್ಕೆ ಸಿಗುತ್ತಿದ್ದ ದೋಸೆ ಹಿಟ್ಟಿನ ಆಸೆಗೆ ಅವರು ವಾರಕ್ಕೆರಡು ಸಲ ಭೇಟಿ ನೀಡುವುದನ್ನು ಮರೆಯುತ್ತಿರಲಿಲ್ಲ. ವಾಲ್ ಮಾರ್ಟಿನಿಂದ ಹೊರಗೆ ಬರುತ್ತಿದ್ದಂತೆಯೇ, ಎಡಕ್ಕೆ ತಿರುಗಿ, ಸರ್ವೀಸ್ ರೋಡನ್ನು ಬಳಸಿಕೊಂಡು , ನಿಧಾನವಾಗಿ ಕಾರು ಐ-೩೫ ಹೈವೇಯಲ್ಲಿ ಮುನ್ನುಗತೊಡಗಿತು. ಅಮೇರಿಕನ್ ಹೈವೇಗಳಲ್ಲಿ ಡ್ರೈವ್ ಮಾಡುವುದೆಂದರೆ ಮಾಧವನಿಗೆ ಎಲ್ಲಿಲ್ಲದ ಸಂತೋಷ. ಸಿನೆಮಾ ಹಿರೋಯಿನ್ನುಗಳ ಕೆನ್ನೆಯಂತೆ ನುಣುಪಾಗಿದ್ದ ರೋಡುಗಳಲ್ಲಿ ೭೦ ಮೈಲಿ ವೇಗದಲ್ಲಿ ಕಾರನ್ನು ನುಗ್ಗಿಸಿ, ಆಗಾಗ ಲೇನ್ ಬದಲಿಸುತ್ತಾ ಝೂಮಿನಲ್ಲಿ ಒಡಾಡುವಂತಿದ್ದರೆ ಯಾರಿಗೇ ತಾನೇ ಖುಶಿಯಾಗದಿದ್ದೀತು? ಮಾಧವನಿಗೆ ಹಿಂದೆ ಕಾರ್ ಒಡಿಸಿ ಬೇರೆ ಚೆನ್ನಾಗಿ ಅನುಭವವಿತ್ತು. ಇಲ್ಲಿಗೆ ಬಂದು ಹಳೆಯ ಟೊಯೋಟಾ ಕ್ಯಾಮ್ರಿಯೊಂದನ್ನು ಖರೀದಿಸಿ, ಅದಕ್ಕೊಂದು ಅಲ್ಪ ಸ್ವಲ್ಪ ರಿಪೇರಿ ಮಾಡಿಸಿ, ಒಳ್ಳೆಯ ಕಂಡಿಶನ್ನಿನಲ್ಲಿ ಇಟ್ಟುಕೊಂಡಿದ್ದ. ಮಾಧವನ ಬಳಿ ಬಂದ ನಂತರ ಕಾರು ಬಹಳವೇನೂ ಓಡಿರಲಿಲ್ಲ. ಹತ್ತಿರವೇ ಇದ್ದ ಆಫೀಸಿಗೆ ದಿನಕ್ಕೆರಡು ಸಲ, ವಾರಕ್ಕೊಮ್ಮೆ ಅಥವಾ ಎರಡು ಸಾರ್ತಿ ವಾಲ್ ಮಾರ್ಟ್ ಮತ್ತು ಇಂಡಿಯನ್ ಸ್ಟೋರ್‍ಸಿಗೆ ಓಡಾಡುವುದಕ್ಕೇ ಕಾರಿನ ಭಾಗ್ಯ ಸೀಮಿತವಾಗಿತ್ತು. ಹೀಗೆ ಅಪರೂಪಕ್ಕೆ ಹೈವೇ ಮೇಲೆ ಒಡಿಸುವ ಸುಖಕ್ಕಾಗಿಯೇ ಮಾಧವ, ಹತ್ತಿರವೇ ಸೆಡಾರ್ ಪಾರ್ಕಿನಲ್ಲೇ ಇದ್ದ ಇಂಡಿಯನ್ ಸ್ಟೋರ್ಸಿಗೆ ಹೋಗದೇ ಸುತ್ತು ಬಳಸಿ, ದೂರದಲಿದ್ದ ಮಿನರ್ವಾ ಸ್ಟೋರ್ಸಿಗೆ ಹೋಗುತ್ತಿದ್ದುದು. ಮೈಲುಗಟ್ಟಲೇ ಉದ್ದವಿದ್ದ ಟ್ರಕ್ ಗಳನ್ನು ಹಿಂದೆ ಹಾಕಿ, ಕೇವಲ ೫ ನಿಮಿಷಗಳಲ್ಲಿ ೨೫೬ನೇಯ ಎಕ್ಸಿಟ್ಟಿನಲಿ ಮಾಧವನ ಕೆಂಪು ಕಾರು ಬಲಕ್ಕೇ ಹೊರಳುತ್ತಿರುವಾಗ ಕತ್ತಲು ಎಲ್ಲವನ್ನೂ ಆಹುತಿ ತೆಗೆದುಕೊಳ್ಳಲು ರೆಡಿಯಾಗುತ್ತಾ ಇತ್ತು. ಎಕ್ಸಿಟ್ ತೆಗೆದುಕೊಳ್ಳುತ್ತಿದ್ದಂತೆಯೇ, ಕಾರುಗಳನ್ನು ಸಾವಧಾನವಾಗಿ ಚಲಿಸಿ ಎಂದು ಎಚ್ಚರಿಸಲೇ ಇದೆ ಎಂಬಂತೆ, ಧುತ್ತನೇ ಸಿಗ್ನಲ್ಲೊಂದು ಎದಿರಾಗುತ್ತಿತ್ತು. ಸಿಗ್ನಲ್ಲಿನಲ್ಲಿ ಕೆಂಪು ದೀಪ ಹೊತ್ತಿದ್ದನ್ನು ಗಮನಿಸಿದ ಮಾಧವ ವೇಗವನ್ನು ಸಾಧ್ಯವಾದಷ್ಟು ತಗ್ಗಿಸಿ,ಬಿಳಿ ಬಿ.ಎಂ.ಡಬ್ಲೂ ಕಾರೊಂದರ ಹಿಂದಕ್ಕೆ ಮಾರು ಜಾಗ ಬಿಟ್ಟು ನಿಲ್ಲಿಸಿದ. ನಮ್ಮೂರಿನಲ್ಲಿ ಕಾರಿಂದ ಕಾರಿಗೆ ಮಧ್ಯ ಇಷ್ಟೊಂದು ಜಾಗ ಬಿಟ್ಟು ಬಿಟ್ಟರೆ, ೭-೮ ದ್ವಿಚಕ್ರ ವಾಹನಗಳು ಆ ಸಂದಿಯಲ್ಲೇ ನುಗ್ಗಿಬಿಡುತ್ತವೆ ಎಂದನಿಸಿ ಮಾಧವನಿಗೆ ಸ್ವಲ್ಪ ನಗು ಬಂತು. ಪಕ್ಕದಲ್ಲಿ ಕುಳಿತ ಉಮಾಪತಿ, ಮಾಧವ ನಿಲ್ಲಿಸಿದ್ದು ಬಹಳವೇ ಹಿಂದಾಯಿತೆಂದೂ, ಅಷ್ಟೆಲ್ಲಾ ಜಾಗವನ್ನು ಕಾರಿಂದ ಕಾರಿನ ಮಧ್ಯೆ ಕೊಡುವ ಅವಶ್ಯಕತೆ ಇಲ್ಲವೆಂದು ಹೇಳಿದಾಗ ಮಾಧವನಿಗೂ ಹೌದೆನ್ನಿಸಿತು. ಮೆಲ್ಲಗೆ ಬ್ರೇಕ್ ಮೇಲೆ ಇಟ್ಟಿದ್ದ ಕಾಲನ್ನು ಸಡಿಲಿಸಿ ಕಾರನ್ನು ಮುಂದೆ ಚಲಿಸಲು ಅನುವುಮಾಡಿಕೊಟ್ಟ. ಇನ್ನೇನು ಬಿಳಿ ಕಾರಿನ ಹತ್ತಿರ ಬರುವಷ್ಟರಲ್ಲಿ, ಸುರೇಶನ ಕಾಲು ಸ್ವಲ್ಪ ಜಾರಿತು. ಸಟ್ಟನೇ, ಬ್ರೇಕ್ ಒತ್ತಬೇಕೆಂದು ಅಂದುಕೊಂಡವನು, ಬ್ರೇಕಿನ ಬದಲು ಎಕ್ಸಲರೇಟರನ್ನೇ ಬಲವಾಗಿ ಒತ್ತಿಬಿಟ್ಟ. ಮರುಕ್ಷಣದಲ್ಲೇ, ಮಾಧವನ ಕಾರು "ಧಡಾರ್" ಎಂಬ ಶಬ್ದದೊಂದಿಗೆ ಮುಂದಿದ್ದ ಬಿಳಿ ಕಾರಿನ ಹಿಂಭಾಗವನ್ನು ಗುದ್ದಿ, ತಾನೇನೂ ಮಾಡಿಯೇ ಇಲ್ಲವೆಂಬಂತೆ ಅಮಾಯಕ ಮುಖ ಹೊತ್ತು ನಿಂತಿತು. ಹಿಂಭಾಗಕ್ಕೆ ಗುದ್ದಿಸಿಕೊಂದ ಬಿಳಿ ಕಾರು,ಸಿಗ್ನಲ್ಲನ್ನು ದಾಟಿ ಸ್ವಲ್ಪ ದೂರದಲ್ಲಿ ರಸ್ತೆಗಡ್ಡವಾಗಿ ನಿಂತಿತು. ಮಾಧವನಿಗೆ ಇಲ್ಲೇ ಭೂಮಿ ಬಾಯ್ಬಿಟ್ಟು ತನ್ನನ್ನು ನುಂಗಬಾರದೇ ಎನ್ನುವಷ್ಟು ಭಯವಾಯಿತು. ಭಯಕ್ಕೆ ಅವನ ಕೈಕಾಲುಗಳು ಒಂದೇ ಸಮ ನಡುಗುತ್ತಿದ್ದವು. ನಾಲಿಗೆ ಒಣಗಿ ಮಾತಾಡಲೂ ಆಗದೇ, ಸುಮ್ಮನೇ ಸ್ಟೇರಿಂಗ್ ಮೇಲೆ ಕೈಯಿಟ್ಟು ಕುಳಿತುಕೊಂಡ. ಪಕ್ಕದಲ್ಲಿದ್ದ ಉಮಾಪತಿಯನ್ನಂತೂ ಕೇಳುವದೇ ಬೇಡ. ಮೊದಲೇ ಟೆನ್ಶನ್ ಪಾರ್ಟಿ. ಬಿಳಿಚಿಕೊಂಡು, ಸಿಂಹದ ಬಾಯಲ್ಲಿ ಸಿಕ್ಕಿಕೊಂಡ ಚಿಗರೆ ಮರಿಯ ಹಾಗೆ ಬೆವೆತುಹೋಗಿದ್ದ. ಇಬ್ಬರಿಗೂ ಇನ್ನೂ ಆಘಾತದ ದಿಗ್ಭ್ರಮೆಯಿಂದ ಹೊರಗೆ ಬರಲೇ ಆಗಿರಲಿಲ್ಲ. ಸೀಟ್ ಬೆಲ್ಟ್ ಕಟ್ಟಿಕೊಂಡದ್ದರಿಂದ ಇಬ್ಬರಿಗೂ ಪೆಟ್ಟೇನೂ ಆಗಿರಲಿಲ್ಲ. ಹಿಂದೆ, ಅಕ್ಕ ಪಕ್ಕದಲ್ಲಿದ್ದ ಎಲ್ಲಾ ಕಾರುಗಳಲ್ಲಿದ್ದ ಜನರೆಲ್ಲರೂ, ಇವರನ್ನೇ ನೋಡತೊಡಗಿದ್ದರು. ನಮ್ಮೂರಿನಲ್ಲಾಗಿದ್ದರೆ ಇಷ್ಟೊತ್ತಿಗೆ ಗುಂಪು ಕೂಡಿ, ತನಗೆ ಒಂದೆರಡು ಏಟುಗಳು ಖಂಡಿತ ಬೀಳುತ್ತಿತ್ತು ಎಂದು ಮಾಧವನ ಮನಸ್ಸು ಹೇಳತೊಡಗಿತು. ಇವರು ಇನ್ನೂ ಕಾರಿನಿಂದ ಹೊರಬಂದಿರಲಿಲ್ಲ, ಅಷ್ಟರಲ್ಲೇ ಗುದ್ದಿಸಿಕೊಂಡ ಕಾರಿನಲ್ಲಿದ್ದ ವಯಸ್ಸಾದ ಅಜ್ಜ ಮತ್ತು ಅಜ್ಜಿಯಿಬ್ಬರೂ ಇವರ ಬಳಿ ಓಡಿ ಬಂದರು. ಅವರು ಏನು ಬೈಯ್ಯಬಹುದು ಎಂಬ ನಿರೀಕ್ಷೇಯಲ್ಲೇ ಇದ್ದವರಿಗೆ, ಅವರು "ಆರ್ ಯೂ ಗಯ್ಸ್ ಫೈನ್? ಡೋಂಟ್ ವರಿ, ಎವೆರಿಥಿಂಗ್ ವಿಲ್ ಬಿ ಆಲ್ ರೈಟ್.." ಎಂದು ಹೇಳಿದಾಗ ಬಹಳ ಆಶ್ಚರ್ಯವಾಯಿತು. ಇಂಥ ಆಘಾತದ ಮಧ್ಯೆಯೂ ಅವರಿಗಿದ್ದ ಕಾಳಜಿ ಮತ್ತು ಸಮಯಪ್ರಜ್ನೆ ಮಾಧವನಿಗೆ ಬಹಳ ಇಷ್ಟವಾಯಿತು. ಅವನ ಮನಸ್ಸು ಈಗ ಸ್ವಲ್ಪ ತಹಬಂದಿಗೆ ಬಂತು. ಎರಡು ನಿಮಿಷಗಳಲ್ಲೇ,ದೈತ್ಯ ದೇಹದ ಪೋಲೀಸನೊಬ್ಬ,ತಲೆಯ ಮೇಲೆ ಹೊಳೆಯುತ್ತಿದ್ದ ದೀಪಗಳುಳ್ಳ ಕಾರಿನಲ್ಲಿ ಬಂದಿಳಿದ.ಬಂದವನೇ ಇವರಿಗಿಬ್ಬರಿಗೂ ಏನಾದರೂ ಪೆಟ್ಟಾಗಿದೆಯೇ,ಅವರಿಗೆ ಎನಾದರೂ ವೈದ್ಯಕೀಯ ಸಹಾಯ ಬೇಕೇ ಎಂದು ಕೇಳಿ, ಮಾಧವನ ಲೈಸೆನ್ಸ್ ಇಸಿದುಕೊಂಡು, ಅವನ ಕಾರಿನಲ್ಲಿದ್ದ ಲಾಪ್ ಟ್ಯಾಪಿನಲ್ಲಿ ಏನೇನೋ ಫೀಡ್ ಮಾಡತೊಡಗಿದ.ಮಾಧವನ ಕಾಲುಗಳು ಇನ್ನೂ ನಡುಗುತ್ತಲೇ ಇತ್ತು. ಅಜಾನುಬಾಹು ಪೋಲೀಸಿನವನ್ನು ನೋಡಿದರೇ ಭಯ ತರಿಸುವಂತೆ ಇದ್ದ. ಉಮಾಪತಿಯ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಇನ್ನು ಮುಂದೆ ಅವನು ಯಾರ ಕಾರನ್ನೇ ಹತ್ತುವುದು ಸಂಶಯವಿತ್ತು. ನೋಡು ನೋಡುತ್ತಿರುವಂತೆಯೇ ಅಗ್ನಿ ಶಾಮಕ ವಾಹನದಂತೆ ಕಾಣುವ ದೊಡ್ಡ ಟ್ರಕ್ಕೊಂದು ಮಾಧವನ ಕಾರನ್ನೂ, ಬಿಳಿ ಬಿ.ಎಂ.ಡಬ್ಲೂ ಕಾರನ್ನೂ ಟೋ ಮಾಡಿ, ಪಕ್ಕ ಸರಿಸಿ ಮತ್ತೆ ವಾಹನಗಳ ಸುಗಮ ಸಂಚಾರಕ್ಕೆ ಎಡೆ ಮಾಡಿಕೊಟ್ಟಿತು. ಅವರ ಕೆಲಸದ ವೇಗ, ಕ್ರಿಯಾಶೀಲತೆ ಮತ್ತು ವೃತ್ತಿಪರತೆ ಮಾಧವನಿಗೆ ಅಚ್ಚರಿ ತರಿಸಿತು. ಆಕ್ಸಿಡೆಂಟ್ ಆದ ಹಲವೇ ನಿಮಿಷಗಳಲ್ಲಿ ಅದರ ಕುರುಹೂ ಸಿಗದಂತೆ ಎಲ್ಲವೂ ನಡೆದುಹೋಗಿತ್ತು. ಸಿಗ್ನಲ್ಲಿನ ಪಕ್ಕದಲ್ಲಿ ಕುರಿಮರಿಗಳ ಹಾಗೆ ನಿಂತುಕೊಂಡಿದ್ದ ಇವರ ಬಳಿ, ಬಿಳಿ ಕಾರಿನ ಅಜ್ಜ ಬಂದು "ಇನ್ಶುರೆನ್ಸ್ ಗೆ ಫೋನ್ ಮಾಡಿದ್ರಾ? ಎಂದು ಕೇಳಿದಾಗ ಮಾಧವನಿಗೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವನಿಗೆ ಹುಲ್ಲು ಕಡ್ಡಿ ಸಿಕ್ಕಿದ ಹಾಗೆ ಸಂತೋಷವಾಯಿತು. ಪೋಲಿಸನದೇ ಸಹಾಯ ತೆಗೆದುಕೊಂಡು ಇನ್ಶುರೆನ್ಸ್ ಕಂಪನಿಗೆ ಫೋನ್ ಮಾಡಿ, ಆದದ್ದೆಲ್ಲವನ್ನೂ ವಿವರಿಸಿದ. ಕಂಪನಿ ರೆಪ್ರೆಸೆಂಟಿವ್ ಒಬ್ಬನನ್ನು ಕಳಿಸಿಕೊಡುತ್ತೇನೆಂದೂ, ಜಾಸ್ತಿ ಗಾಭರಿ ಬೀಳಬೇಡಿ ಎಂದು ಆ ಕಡೆ ಇದ್ದ ಕೋಕಿಲವಾಣಿ ಉಲಿಯಿತು. ಮಾಧವನಿಗೆ ಸ್ವಲ್ಪ ಸಮಾಧಾನವಾಯಿತು. ಪಕ್ಕದಲ್ಲೇ ಇದ್ದ ಅಜ್ಜ ಅಜ್ಜಿಯ ಹತ್ತಿರ ಮಾಧವ ಪರಿಪರಿಯಾಗಿ ಕ್ಷಮೆ ಬೇಡಿದ. ಅವರಿಬ್ಬರೂ ಅತ್ಯಂತ ಸಮಾಧಾನ ಚಿತ್ತರೂ, ಕರುಣಾಮಯಿಗಳಂತೆ ತೋರುತ್ತಿದ್ದರು. ಹೀಗೆ ಆಗುವುದು ಸಹಜ ಮತ್ತು ಇದೊಂದು ಆಕ್ಸಿಡೆಂಟ್ ಅಷ್ಟೇ ಎಂದು ಅವರು ಮಾಧವನಿಗೆ ಧೈರ್ಯ ಹೇಳಿದರು. ೧೫ ನಿಮಿಷಗಳಲ್ಲಿ ಇನ್ಶುರೆನ್ಸಿನವನು ಹಾಜರಾದ. ಬಂದವನೇ ಪೋಲಿಸಿನವನ ಹತ್ತಿರವೂ, ಅಜ್ಜ ಅಜ್ಜಿಯರ ಹತ್ತಿರವೂ ಏನೇನೊ ಮಾತನಾಡಿ, ಕೊನೆಯಲ್ಲಿ ಮಾಧವನ ಹತ್ತಿರ ಬಂದು "ಡೋಂಟ್ ವರಿ ಸರ್, ಐ ವಿಲ್ ಟೇಕ್ ಕೇರ್ ಆಫ್ ಎವೆರಿಥಿಂಗ್" ಎಂದು ಹೇಳಿ, ಯಾರ್ಯಾರಿಗೋ ಹತ್ತಾರು ಕರೆ ಮಾಡಿದ.ಅದಾದ ಮೇಲೆ ಪೋಲಿಸಿನವನು ಹೋಗಿಬಿಟ್ಟ. ಇನ್ನೊಂದು ೨೦ ನಿಮಿಷ ಕಳೆಯುವುಷ್ಟರಲ್ಲಿ ಎಲ್ಲಾ ಸರಾಗವಾಗಿ ಮುಗಿದು ಹೋಯಿತು. ಎರಡು ಕಾರುಗಳನ್ನೂ, ಯಾವುದೋ ವಾಹನ ಬಂದು ಎತ್ತಾಕಿಕೊಂಡು ಹೋಯಿತು. ತನ್ನ ಕಾರಿನಲ್ಲೆಯೇ ಅಜ್ಜ ಅಜ್ಜಿಯರನ್ನೂ, ಮಾಧವ ಮತ್ತು ಉಮಾಪತಿಯರನ್ನೂ ಮನೆಗೆ ಬಿಡುವುದಾಗಿ ಇನ್ಶುರೆನ್ಸಿನವನು ಹತ್ತಿಸಿಕೊಂಡ. ಅಜ್ಜ ಅಜ್ಜಿಯರನ್ನು ಡೌನ್ ಟೌನಿನಲ್ಲಿ ಬಿಟ್ಟು ಕಾರು ಮತ್ತೆ ಉತ್ತರದ ಹೈವೇ ಹಿಡಿಯಿತು. ಇಳಿಯುವ ಮುನ್ನ ಅಜ್ಜ ಅಜ್ಜಿಯರಲ್ಲಿ ಮತ್ತೊಮ್ಮೆ ಮಾಧವ, ಆಗಿದ್ದೆಲ್ಲದ್ದಕ್ಕೂ ಕ್ಷಮೆ ಕೇಳಿದ. ಆ ವೃದ್ಧ ದಂಪತಿಗಳಿಗೆ ತನ್ನಿಂದಾದ ತೊಂದರೆಗಳನ್ನೆಲ್ಲ ನೆನೆಸಿಕೊಂಡು ಮಾಧವನಿಗೆ ತುಂಬಾ ಕೆಟ್ಟದನಿಸಿತು. ಆದರೆ ಪರಿ ಪರಿಯಾಗಿ ಕ್ಷಮೆ ಕೇಳುವುದನ್ನು ಬಿಟ್ಟರೆ ಇನ್ನೇನೂ ಅವನು ಮಾಡಲು ಸಾಧ್ಯವಿರಲಿಲ್ಲ. ದಾರಿಯಲ್ಲಿ ಇನ್ಶುರೆನ್ಸಿನವನು ಸುಮ್ಮನೆ ಮಾಧವನನ್ನು ಹಲವಾರು ಪ್ರಶ್ನೆ ಕೇಳಲು ಶುರು ಮಾಡಿದ.ಮಾಧವನಿಗೆ ಏನನ್ನೂ ಹೇಳಲು ಮೂಡಿರಲಿಲ್ಲ.ಆದರೂ ಅವನು ಕೇಳಿದ್ದಕ್ಕೆಲ್ಲದ್ದಕ್ಕೂ ಚುಟುಕಾಗಿ ಉತ್ತರಿಸಿದ.ಹಿಂದೆ ಕುಳಿತಿದ್ದ ಉಮಾಪತಿ ಇನ್ನೂ ದಿಗ್ಭ್ರಮೆಯಲ್ಲೇ ಇದ್ದ ಹಾಗಿತ್ತು. ಮಾತಾಡುತ್ತಾ ಮಾಧವನಿಗೆ ಅವನು ಚೈನಾದಿಂದಾ ಬಹಳ ಹಿಂದೆಯೇ ಬಂದು ಇಲ್ಲಿ ಸೆಟಲ್ ಆಗಿರುವುದಾಗಿಯೂ, ಈ ಕಂಪನಿಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿಯೂ ತಿಳಿದುಬಂತು. ಕಾರನ್ನು ೨೪೯ ನೆಯ ಎಕ್ಸಿಟ್ಟಿನಲ್ಲಿ ಬಲಕ್ಕೆ ಹೊರಳಿಸಲು ಹೇಳಿ, ಮಾಧವ ಅವನಿಗೆ ತನ್ನ ಅಪಾರ್ಟಮೆಂಟಿನ ದಾರಿಯನ್ನು ನಿರ್ದೇಶಿಸಲು ತೊಡಗಿದ.ಇನ್ನೇನು ಕಾರು ಬಲಕ್ಕೆ ತಿರುಗಿ ಅಪಾರ್ಟಮೆಂಟಿನೊಳಕ್ಕೆ ತಿರುಗಬೇಕು ಅನ್ನುವುಷ್ಟರಲ್ಲಿ, ಅಪಾರ್ಟಮೆಂಟಿನಿಂದ ಹೊರಕ್ಕೆ ಬರುತ್ತಿದ್ದ ಕಾರೊಂದು ಅತೀ ವೇಗದಲ್ಲಿ ಮುನ್ನುಗ್ಗಿ ಬರುತ್ತಿದ್ದುದ್ದು ಡ್ರೈವರಿನ ಸೀಟಿನಲ್ಲಿದ್ದ ಚೀನಿಯವನಿಗೂ, ಪಕ್ಕ ಕುಳಿತಿದ್ದ ಮಾಧವನಿಗೂ ಕಂಡಿತು. ಅದನ್ನು ನೋಡಿದ ತಕ್ಷಣವೇ ಮಾಧವನ ಬಾಯಿಂದ "ಸ್ಟಾಪ್" ಎಂಬ ಸಣ್ಣ ಚೀತ್ಕಾರ ಅವನಿಗರಿವಿಲ್ಲದಂತೆಯೇ ಹೊರಬಿದ್ದಿತು. ಏನಾಗುತ್ತಿದೆ ಎಂದು ಅರಿವಾಗುವುದರಲ್ಲೇ, ಮಾಧವನ ನಿರೀಕ್ಷೆಗೆ ತದ್ವಿರುದ್ಧವಾಗಿ, ಅವನ ಕಾರು ಭಯಂಕರ ವೇಗದಲ್ಲಿ ಮುನ್ನುಗ್ಗಿ, ಎದುರಿಗೆ ಬರುತ್ತಿದ್ದ ಕಾರನ್ನು ಸವರಿಕೊಂಡಂತೆಯೇ ಚಲಿಸಿ, ಬಲ ರಸ್ತೆಯಲ್ಲಿ ಹೋಗುವುದರ ಬದಲು ಎಡ ಬದಿಯ ರಸ್ತೆಯಲ್ಲೇ ಇನ್ನೂ ಸುಮಾರು ಮುಂದೆ ಹೋಯಿತು. ಈ ಕಾರು ಮುನ್ನುಗ್ಗಿದ ವೇಗಕ್ಕೆ ಹೆದರಿದ ಎದುರು ಬದಿ ಕಾರಿನವನು ತಕ್ಷಣವೇ ಬ್ರೇಕ್ ಹಾಕಿ ದೊಡ್ಡದಾಗಿ ಹಾರ್ನ್ ಮಾಡಿದ್ದು ಮಾಡಿದ್ದು ಮಾತ್ರ ಮೂರೂ ಜನರ ಅನುಭವಕ್ಕೆ ಬಂತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಉಮಾಪತಿ, ಕಾರು ನುಗ್ಗಿದ ವೇಗಕ್ಕೆ ಅಪ್ರತಿಭನಾಗಿ ಕಿಟಾರನೆ ಕಿರಿಚಿಕೊಂಡ. ಆ ಕ್ಷಣದ ಒತ್ತಡದಲ್ಲಿ ಚೀನಿಯವನೂ ಕೂಡ ಮಾಧವನ ತರಾನೇ ಬ್ರೇಕ್ ಒತ್ತುವುದರ ಬದಲು ಬಲವಾಗಿ ಎಕ್ಸಲರೇಟರನ್ನು ಒತ್ತಿಬಿಟ್ಟಿದ್ದ. ಆದರೆ ಮಾಧವನಿಗೆ ತಕ್ಷಣವೇ ಚೀನೀ ಮಾಡಿದ ತಪ್ಪಿನ ಅಂದಾಜಾಗಿ ಹೋಗಿತ್ತು. ಅಸಾಧ್ಯ ಟೆನ್ಶನಿನಲ್ಲಿದ್ದ ಅವನನ್ನು ಉದ್ದೇಶಿಸಿ, ಮಾಧವ ತಣ್ಣನೆಯ ದನಿಯಲ್ಲಿ ಬ್ರೇಕ್, ಬ್ರೇಕ್ ಎಂದು ಎರಡು ಸಲ ಕೂಗಿದ. ಪುಣ್ಯಕ್ಕೆ ಎದುರಿನಿಂದ ಯಾವುದೇ ವಾಹನ ಬರುತ್ತಿರಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋದ ಮೇಲೆ ಚೀನಿಯವನಿಗೂ ಅಂತೂ ಕಾರು ಹಿಡಿತಕ್ಕೆ ಸಿಕ್ಕಿತು. ವೇಗ ತಗ್ಗಿಸಿ, ಮೆಲ್ಲಗೆ ಬ್ರೇಕ್ ಹಾಕಿ, ಪಕ್ಕಕ್ಕೆ ತಿರುಗಿಸಿ ಖಾಲಿ ಇದ್ದ ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ ನಿಟ್ಟುಸಿರು ಬಿಟ್ಟ, ಅವನ ಕೈಕಾಲುಗಳೂ ನಡುಗುತ್ತಿದ್ದವು. ಅವನ ಪರಿಸ್ಥಿತಿಯನ್ನು ನೋಡಿ ಮಾಧವನಿಗೆ ಜೋರಾಗಿ ನಗು ಬಂತು. ಹ್ಯಾಪು ಮೋರೆ ಹಾಕಿಕೊಂಡಿದ್ದ ಚೀನಿಯವನನ್ನೂ, ಹೆದರಿ ಗುಬ್ಬಚ್ಚಿಯಂತಾದ ಉಮಾಪತಿಯನ್ನೂ ಒಮ್ಮೆ ನೋಡಿ, ಕುಳಿತಲ್ಲೆಯೇ ಹೊಟ್ಟೆ ಹಿಡಿದುಕೊಂಡು ಜೋರಾಗಿ ನಗಲು ಶುರುಮಾಡಿಬಿಟ್ಟ. ಉಮಾಪತಿಗೆ ಮಾತ್ರಾ, ಇಂಥ ಪರಿಸ್ಥಿತಿಯಲ್ಲೂ ನಗುತ್ತಿರುವ ಮಾಧವನನ್ನು ಕಂಡು ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ಎದುರಿಗೇ ಚೀನಿಯವನು ಕುಳಿತಿದ್ದರಿಂದ ಸಿಟ್ಟನ್ನು ಅದುಮಿಕೊಂಡು, ಏನು ಮಾಡಬೇಕೆಂದು ಗೊತ್ತಾಗದೇ ತಾನೂ ಮಾಧವನ ನಗುವಿಗೆ ದನಿಗೂಡಿಸಿದ. Posted by Unknown at 7:17 PM 5 comments Wednesday, March 5, 2008 ಎಲ್ಲೆಲ್ಲೂ ಸಂಗೀತವೇ... ಸಿನೆಮಾ ಗೀತೆಗಳಲ್ಲಿ ಶುದ್ಧ ಶಾಸ್ತ್ರೀಯ ಸಂಗೀತದ ಛಾಯೆಯಿರುವ ಗೀತೆಗಳು ಬಹಳೇ ಬಹಳ ಕಮ್ಮಿಯಿವೆ ಎಂಬುದು, ನನ್ನಂತೆ ಇನ್ನೂ ಹಲವರ ಕೊರಗು. ಆದರೂ ಅಲ್ಲಲ್ಲಿ ಒಂದೆರಡು ಅತ್ಯುತ್ತಮ ರಚನೆಗಳು ಮನಸೂರೆಗೊಳ್ಳುತ್ತವೆ. ನನಗೆ ಅತ್ಯಂತ ಇಷ್ಟವಾದ ಮೂರು ಉತ್ತಮ ಹಾಡುಗಳನ್ನು ದಕ್ಷಿಣ ಭಾರತ ಸಿನೆಮಾಗಳಿಂದ ಆಯ್ದು ಇಲ್ಲಿ ಹಾಕಿದ್ದೇನೆ. ಬಿಡುವಿನ ಸಮಯದಲ್ಲಿ ನೀವೂ ಕೇಳಿ ಆನಂದಿಸಿ. ಮೊದಲನೆಯದು, ಡಾ.ರಾಜ್ ಕುಮಾರ್ ನಟಿಸಿದ ಜೀವನ ಚೈತ್ರ ಚಿತ್ರದ "ನಾದ ಮಯ ಈ ಲೋಕವೆಲ್ಲಾ’ ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಆಗಲೇ ಕೇಳಿರುತ್ತೀರಿ. ಈ ಹಾಡಿಗೆ ೧೯೯೩ ರಲ್ಲಿ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇನ್ನೂ ಗಾಯನ ಮತ್ತು ಅಣ್ಣಾವ್ರ ನಟನೆ ಬಗ್ಗೆ ನನಗೇನೂ ಹೇಳಲು ಉಳಿದಿಲ್ಲ. ಹಾಡು ಕೇಳಿ ಮುಗಿಯುತ್ತಿದ್ದಂತೆಯೇ ಮಂತ್ರಮುಗ್ಧವಾಗಿ ಸರಸ್ವತಿಯ ಪರವಶವಾಗುವುದರಲ್ಲಿ ಸಂಶಯವೇ ಇಲ್ಲ. ವಿಶೇಷವೆಂದರೆ ಈ ಹಾಡು ಅತ್ಯಂತ ಕ್ಲಿಷ್ಟವಾದ ರಾಗದಲ್ಲಿ (ತೋಡಿ) ರಚನೆಯಾಗಿದ್ದುದರಿಂದ ಹಾಡುವುದು ಅತ್ಯಂತ ಕಠಿಣವೆಂದು ಬಲ್ಲಿದರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಅಣ್ಣಾವ್ರ ನಾಲಿಗೆಯಲ್ಲಿ ಸಾಕ್ಷಾತ್ ಸರಸ್ವತಿಯೇ ನಲಿಯುತ್ತಿದೆ ಎಂಬಷ್ಟು ಸೊಗಸಾಗಿದೆ ಮೂಡಿ ಬಂದಿದೆ. ಎರಡನೆಯದು ವಾಣಿ ಜಯರಾಮ್ ಹಾಡಿದ "ಆನತಿ ನೀಯರಾ" ಎಂಬ ಹಾಡು. ತೆಲುಗಿನ "ಸ್ವಾತಿ ಕಿರಣಮ್" ಚಿತ್ರದ ಈ ಗೀತೆಗೆ ೧೯೯೨ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. "ಕಲಾ ತಪಸ್ವಿ" ಎಂದೇ ಖ್ಯಾತರಾದ ಕೆ.ವಿಶ್ವನಾಥ್ ಅವರು ಇಂಥ ಹಲವಾರು ಸದಭಿರುಚಿಯ ಚಿತ್ರಗಳನ್ನು (ಶಂಕರಾಭರಣಂ, ಸಾಗರ ಸಮ್ಮುಖಂ..) ತೆಲುಗಿನಲ್ಲಿ ನೀಡುತ್ತಲೇ ಬಂದಿದ್ದಾರೆ. ವಾಣಿ ಜಯರಾಂ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಹಲವಾರು ಶಾಸ್ತ್ರೀಯ ಹಿನ್ನೆಲೆಯ ಹಾಡುಗಳಿಗೆ ಅವರು ಧ್ವನಿ ಒದಗಿಸಿದ್ದಾರೆ. ಈ ಹಾಡಲ್ಲಿ ನಟಿಸಿದವರು,ಕನ್ನಡದವರೇ ಆದ ಮಾ.ಮಂಜುನಾಥ್ ಅವರು. ಹಾಡುತ್ತಿರುವಾಗ ಅವರ ತುಟಿ ಚಲನೆ, ಹಾವಭಾವ, ಗತ್ತು ಎಲ್ಲವನ್ನೂ ಒಮ್ಮೆ ಗಮನಿಸಿ. ವಾಣಿ ಜಯರಾಂ ಅವರ ಕಂಠಕ್ಕೆ ಅತ್ಯುತ್ತಮವಾದ ನ್ಯಾಯವನ್ನು ಅವರು ಹಾಡಿನಲ್ಲಿ ಸಲ್ಲಿಸಿದ್ದಾರೆ.ಈ ಚಿತ್ರವೆಲ್ಲಾದರೂ ಸಿಕ್ಕರೆ ತಪ್ಪದೇ ನೋಡಿ. ಚಿತ್ರದ ಎಲ್ಲಾ ಹಾಡುಗಳು ಅದ್ಭುತವಾಗಿವೆ. ಚಿತ್ರದ ಸಂಗೀತ ನಿರ್ದೇಶಕರು ಕೆ.ವಿ.ಮಹಾದೇವನ್. ಮೂರನೆಯದು, ಮಲಯಾಳಮ್ಮಿನ "ಹಿಸ್ ಹೈನೆಸ್ ಅಬ್ದುಲ್ಲಾ" ಚಿತ್ರದ "ನಾದರೂಪಿಣೀ’ ಎಂಬ ಹಾಡು. ಹಾಡಿದವರು ಎಂ.ಜಿ.ಶ್ರೀಕುಮಾರ್. ಈ ಹಾಡಿಗೆ ೧೯೯೧ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ವೀಡಿಯೋದ ಗುಣಮಟ್ಟ ಅಷ್ಟೊಂದೇನೂ ಚೆನ್ನಾಗಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ. ಆದರೆ ಹಾಡು ಮಾತ್ರ ಸೂಪರ್.ಸಂಗೀತ ನೀಡಿದವರು ರವೀಂದ್ರನ್ ಮಾಸ್ಟರ್. ಈ ಚಿತ್ರದ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ. ಈ ಮೂರು ಹಾಡುಗಳು ೧೯೯೦-೧೯೯೩ ರ ಮಧ್ಯೆ ಬಿಡುಗಡೆಯಾಗಿದ್ದು ಒಂದು ವಿಶೇಷ. ಮೂರೂ ಹಾಡುಗಳ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಸಾಹಿತ್ಯ ಅರ್ಥವಾಗದಿದ್ದರೂ ರಸಾಸ್ವಾದನೆಗೆ ಕಷ್ಟವಾಗಲಾಗದು. ಹಾಡುಗಳು ನಿಮಗೂ ಇಷ್ಟವಾದರೆ ನನಗೆ ಸಂತೋಷ! Posted by Unknown at 8:40 AM 2 comments Saturday, March 1, 2008 ನೀನಿಲ್ಲದೇ ಬಾಳೊಂದು ಬಾಳೇ.. ಹಿಂದೊಮ್ಮೆ ಇದೇ ಲೇಖನವನ್ನು ಹಾಕಿದ್ದೆ. ಎರಡು ಮೂರು ವರುಷಗಳ ಹಿಂದೆ ಯಾರೋ ಕಳಿಸಿದ್ದ ಇ-ಮೈಲ್(ಆಂಗ್ಲ ಭಾಷೆಯಲ್ಲಿದ್ದ) ಅನ್ನು ಸ್ವಲ್ಪ ನೇಟಿವಿಟಿ ಬದಲಿಸಿ, ಕನ್ನಡಕ್ಕೆ ತರ್ಜುಮೆ ಮಾಡಿ ಬರೆದಿದ್ದೆ. ಆಂಗ್ಲ ಭಾಷೆಯಲ್ಲಿದ್ದ ಕಥೆಯ ಮೂಲ ಲೇಖಕರು ಯಾರು ಎಂಬುದು ನನಗೆ ಗೊತ್ತಿಲ್ಲ. ಬಹುಷ: ಮೇಲ್ ಬಾಕ್ಸಿಂದ ಮೇಲ್ ಬಾಕ್ಸಿಗೆ ಹರಿದಾಡುವ ಈ ಮೇಲ್ ಗಳನ್ನು ಟ್ರಾಕ್ ಮಾಡುವುದು ಸಾಧ್ಯವಿಲ್ಲವೇನೋ. ಇದರ ಆಂಗ್ಲ ಮೂಲ ಲೇಖಕರು ಯಾರೆಂದು ನಿಮಗೆ ತಿಳಿದಿದ್ದರೆ, ದಯವಿಟ್ಟು ತಿಳಿಸಿ. -ಮಧು ನನ್ನ ಮದುವೆ ಅಷ್ಟೊಂದೇನೂ ವಿಜೃಂಭಣೆಯಿಂದ ನಡೆದಿರಲಿಲ್ಲ. ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ನಾನು ಮದುವೆಯಾಗಿದ್ದು. ಅವಳು ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಕೆಮೆಷ್ಟ್ರಿ ಲೆಕ್ಚರರ್ ಆಗಿದ್ದಳು. ಜಾತಕ ಚೆನ್ನಾಗಿ ಹೊಂದುತ್ತೆ ಅಂತ ಅಪ್ಪ ಖುಶಿಯಾಗಿದ್ದರು. ಅಪ್ಪ ಅಮ್ಮ ಅವಳ ಮನೆಗೆ ಹೋಗಿ ನೋಡಿ ಬಂದ ಮೇಲೆ ನಾನು ವೀಡಿಯೋ ಕಾನ್ಫ಼ರೆನ್ಸ್ ಮೂಲಕ ಅವಳ ಜೊತೆ ಮಾತಾಡಿದ್ದೆ. ಅತ್ಯಂತ ವಿನಯದಿಂದ, ಹೆಸರಿಗೆ ತಕ್ಕಂತೆ ಸೌಜನ್ಯದಿಂದ ಮಾತಾಡಿದ ಅವಳು ನನಗೆ ತುಂಬಾ ಹಿಡಿಸಿದ್ದಳು. ಎಂಗೇಜಮೆಂಟ್ ಏನೂ ನಡೆದಿರಲಿಲ್ಲ. ಮದುವೆ ೧೫ ದಿನಗಳ ಒಳಗೇ ಎಂದು ನಿರ್ಧಾರವಾಗಿತ್ತು. ನನಗೆ ರಜೆ ಸಿಗುವುದು ಬಹಳ ಕಷ್ಟವಾಗಿತ್ತು. ಹೇಗೋ ಒಂದು ೧೦ ದಿನಾ ರಜೆ ಹೊಂದಿಸಿ ಮದುವೆಗೆ ಹೋಗಿ ಬಂದಿದ್ದೆ. ಮದುವೆಯಾದ ನಾಲ್ಕನೆಯ ದಿನವೇ ನಾನು ಅವಳನ್ನು ಕರೆದುಕೊಂಡು ವಾಪಸ್ ಬಂದೂ ಇದ್ದೆ. ಪ್ಲೇನಿನಲ್ಲಿ ಇವಳು ನನ್ನ ಜೊತೆ ಜಾಸ್ತಿ ಮಾತಾಡಿರಲಿಲ್ಲ. ಮದುವೆಯಾದ ಇಷ್ಟು ಬೇಗನೇ ಅಪ್ಪ,ಅಮ್ಮ ಎಲ್ಲರನ್ನೂ ಬಿಟ್ಟು ಬಂದು ಬೇಸರವಾಗಿರಬಹುದೆಂದೆಣಿಸಿ ನಾನೂ ಅವಳನ್ನು ಜಾಸ್ತಿ ಮಾತಾಡಿಸಲು ಹೋಗಿರಲಿಲ್ಲ. ಆದರೇ ಇಲ್ಲಿಗೆ ಬಂದ ಎರಡು ದಿನವಾದರೂ ಅವಳ ಮೂಡ್ ಇನ್ನೂ ಹಾಗೇ ಇತ್ತು. ಆ ಎರಡು ದಿನ ನನಗೆ ಆಫ಼ೀಸ್ ನಲ್ಲಿ ತುಂಬಾ ಕೆಲಸವಿದ್ದುದರಿಂದ ಅವಳ ಬಗ್ಗೆ ಜಾಸ್ತಿ ಗಮನವಹಿಸಲೂ ಆಗಿರಲಿಲ್ಲ. ಹೋಮ್ ಸಿಕ್ ನಿಂದ ಹೊರಬರಲು ಯಾರಿಗಾದರೂ ಸ್ವಲ್ಪ ದಿನ ಬೇಕಾಗುತ್ತೆ ಎಂದನಿಸಿ ಸುಮ್ಮನಿದ್ದೆ. ಮಾರನೇ ದಿನ ಅವಳ ಪಕ್ಕ ಕುಳಿತುಕೊಂಡು ಕೇಳಿದೆ "ಏನಾಯ್ತು ? ಅಮ್ಮಾವ್ರು ತುಂಬಾ ಬೇಜಾರಲ್ಲಿದೀರಾ ?" "ನನ್ನನ್ಯಾಕೆ ಇಲ್ಲಿಗೆ ಕರೆದುಕೊಂಡು ಬಂದ್ರಿ ?". ಇದೊಳ್ಳೇ ತಮಾಷೆಯಾಯಿತಲ್ಲಪ್ಪಾ ಎಂದನಿಸಿ ಕೇಳಿದೆ "ಅಂದ್ರೆ ? ಏನಾಯ್ತು ಈಗ ?" "ನಾನು ಮನೆಗೆ ಹೋಗಬೇಕು " "ಇದೇ ನಿನ್ನ ಮನೆ""ಇಲ್ಲಾ, ಇದು ನನ್ನ ಮನೆಯಲ್ಲಾ. ನನ್ನ ಮನೆ ಬೆಂಗಳೂರಿನಲ್ಲಿದೆ. ಪ್ಲೀಸ್, ನನ್ನ ಕಳಿಸಿಕೊಡಿ" "ನೋಡು, ನೀನು ಹೋಮ್ ಸಿಕ್ ಆಗಿದೀಯಾ. ಒಂದು ಎರಡು ದಿನ ಅಷ್ಟೇ, ಆಮೇಲೆ ಎಲ್ಲಾ ಸರಿಹೋಗುತ್ತೆ. ನಾನು ಮೊದಲು ಇಲ್ಲಿಗೆ ಬಂದಾಗ ನನಗೂ ಹೀಗೆ ಆಗಿತ್ತು. ನನಗೆ ಈ ವಾರ ಸ್ವಲ್ಪ ಕೆಲಸ ಜಾಸ್ತಿ ಇತ್ತು. ಅದಕ್ಕೆ ನಿನ್ನ ಜೊತೆ ಕಾಲ ಕಳೆಯಕ್ಕೆ ಆಗ್ಲಿಲ್ಲ. ಈ ವೀಕೇಂಡ್ ನನ್ನ ಫ್ರೆಂಡ್ಸ್ ಮನೆಗೆ ಕರ್ಕೊಂಡು ಹೋಗ್ತಿನಿ. ಅವರ ಜೊತೆ ಇದ್ದರೆ ನಿಂಗೆ ಸ್ವಲ್ಪ ಬೋರ್ ಕಮ್ಮಿ ಆಗುತ್ತೆ" "ಇಲ್ಲಾ, ನಂಗೆ ಈ ಜಾಗ ಇಷ್ಟನೇ ಆಗ್ಲಿಲ್ಲ. ಅಪ್ಪ, ಅಮ್ಮ, ಕಾಲೇಜು ಎಲ್ಲಾದನ್ನೂ ತುಂಬಾ ಮಿಸ್ ಮಾಡ್ಕೊಂತಾ ಇದೀನಿ ನಾನು. ನಾನು ವಾಪಸ್ ಹೋಗ್ತಿನಿ" "ನೋಡು, ಸ್ವಲ್ಪ ತಣ್ಣಗೆ ಕುಳಿತುಕೊಂಡು ಯೋಚನೆ ಮಾಡು. ಏನನ್ಕೊಂಡಿದೀಯಾ ನೀನು ? ಏನು ನಿನ್ನ ಪ್ಲಾನು ? ಈಗ ಹೋಗ್ತಿನಿ ಅಂತಿದೀಯಾ,ಮತ್ತೆ ವಾಪಸ್ ಯಾವಾಗ ಬರ್ತಿದೀಯಾ ?" "ನಾನು ವಾಪಸ್ ಬರಲ್ಲ" ನನಗೆ ರೇಗಿ ಹೋಯಿತು. ನನಗೆ ಗೊತ್ತಿಲ್ಲದಂತೆಯೇ, ನನ್ನ ಧ್ವನಿ ದೊಡ್ಡದಾಯಿತು. "ನಿಂಗೆ ತಲೆ ಕೆಟ್ಟಿದೆಯಾ?" "ನೀವು ಹಾಗನ್ಕೊಂಡ್ರೆ ನಾನೇನೂ ಮಾಡಕ್ಕಾಗಲ್ಲ". ನನಗೆ ಈಗ ತಲೆ ಸಂಪೂರ್ಣವಾಗಿ ಕೆಟ್ಟು ಹೋಯಿತು. ನಿಧಾನಕ್ಕೆ ಕೇಳಿದೆ. "ಹೋಗ್ಲಿ, ನಿನ್ನ ಮನಸ್ಸಿನಲ್ಲಿ ಬೇರೆ ಯಾರಾದರೂ ಇದ್ದಾರಾ?" "ಇಲ್ಲ. ನಂಗೆ ವಾಪಸ್ ಹೋಗಬೇಕು. ನೀವು ಕಳಿಸ್ಲಿಲ್ಲಾ ಅಂದ್ರೆ ನಾನು ೯೧೧ ಗೆ ಕಾಲ್ ಮಾಡ್ತಿನಿ" ನಂಗ್ಯಾಕೋ ಇದು ಹುಚ್ಚರ ಸಹವಾಸ ಎಂದೆನಿಸಿತು. ಹಾಗೆ ಸ್ವಲ್ಪ ಸಿಟ್ಟೂ ಬಂತು. " ಮದುವೆ ಅಂದ್ರೆ ಮಕ್ಕಳಾಟ ಅಂದ್ಕೊಂಡಿದೀಯಾ ನೀನು? ನಿನ್ನ ಅಪ್ಪ ಅಮ್ಮ, ನನ್ನ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡು. ಮದುವೆಯಾಗಿ ಇನ್ನು ೧೦ ದಿನ ಆಗಿಲ್ಲಾ. ಆವಾಗ್ಲೇ ವಾಪಸ್ ಹೋಗ್ತಿನಿ ಅಂತಿದಿಯಲ್ಲಾ, ಮದುವೆಯಾಗಬೇಕಾದ್ರೆ ಇಲ್ಲಿಗೆ ಬರಬೇಕು ಅಂತ ಗೊತ್ತಿರಲಿಲ್ವಾ ನಿನಗೆ ? ವಾಪಸ್ ಬರಲ್ಲಾ ಅಂತಿದೀಯ. ನಮ್ಮ ಮದುವೆ ಕತೆ ಎನಾಗುತ್ತೆ ?" ಎಂದೆಲ್ಲಾ ರೇಗಿದೆ. "ನಾನು ನಿಮ್ಮ ಮೇಲೆ ತಪ್ಪು ಹೊರಿಸ್ತಾ ಇಲ್ಲ. ತಪ್ಪೆಲ್ಲಾ ನಂದೇ. ನಾನು ಅಪ್ಪ ಅಮ್ಮನ್ನ ಬಿಟ್ಟು ಇಷ್ಟು ದೂರದ ಊರಲ್ಲಿ ಒಬ್ಬನೇ ಇರಲಾರೆ. ನಿಮಗೆ ಮದುವೆ ಉಳಿಸಿಕೋಬೇಕಿದ್ರೆ, ನೀವೇ ಬೆಂಗಳೂರಿಗೆ ಬನ್ನಿ" ಅಂತೆಂದು ದೊಡ್ಡದಾಗಿ ಅಳುತ್ತಾ ಎದ್ದು ಹೋಗಿಬಿಟ್ಟಳು. ನನಗೀಗ ಏನು ಮಾಡಬೇಕೆಂದೇ ತೋಚಲಿಲ್ಲ. ಅವಳು ತಮಾಷೆ ಮಾಡುತ್ತಿದ್ದಾಳೆಂದು ನನಗೆ ಅನ್ನಿಸಲಿಲ್ಲ. ಇಷ್ಟು ಸಾಲದೆಂಬಂತೆ ಇಡೀ ದಿನ ಮಕ್ಕಳ ತರಹ ಅಳುತ್ತಾನೇ ಇದ್ದಳು. ನನಗ್ಯಾಕೋ, ನಾನು ಬಹಳ ತಪ್ಪು ಮಾಡಿಬಿಟ್ಟೆ ಅನ್ನಿಸತೊಡಗಿತು. ಮನೆಗೆ ಫೋನ್ ಮಾಡಿದೆ. ಅಪ್ಪ ಅಮ್ಮ ಏನು ಹೇಳಿಯಾರು ? ಅವರಿಗೂ ತುಂಬಾ ಶಾಕ್ ಆಗಿತ್ತು. ನೀನೇನೂ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಸಹಮತವಿದೆ ಎಂದರು ಅಷ್ಟೇ. ಅವಳ ಮನೆಗೂ ಫೋನ್ ಮಾಡಿದೆ. ಅತ್ತೆ, ಮಾವನೂ ಅವಳಿಗೆ ತಿಳಿಹೇಳಲು ಪ್ರಯತ್ನಿಸಿದರು. ಇವಳದ್ದು ಒಂದೇ ಹಠ. ತಾನು ವಾಪಸ್ ಬರ್ತೀನಿ ಅಂತ. ಅಳುವುದನ್ನು ಮಾತ್ರ ನಿಲ್ಲಿಸಲಿಲ್ಲ. ಎಲ್ಲರೂ ಸಂಪೂರ್ಣವಾಗಿ ನಿಸ್ಸಹಾಯಕರಾಗಿದ್ದರು. ಅವಳು ಮನಸ್ಸು ಬದಲಾಯಿಸಬಹುದೆನೋ ಅಂತ ನಾನು ಇನ್ನೆರಡು ದಿನ ಕಾಯ್ದೆ. ಅಳುವುದನ್ನು ಬಿಟ್ಟು ಇನ್ನೇನೂ ಮಾಡಿರಲಿಲ್ಲ ಅವಳು, ಈ ಎರಡು ದಿನಗಳಲ್ಲಿ. ನನಗೆ ರ್‍ಓಸಿ ಹೋಗಿ, ೨೦೦೦ ಡಾಲರ್ ತೆತ್ತು ಮಾರನೆಯ ದಿನವೇ ಅವಳ ಟಿಕೆಟ್ ಬುಕ್ ಮಾಡಿ ತಂದು ಅವಳಿಗೆ ತೋರಿಸಿದೆ. ಅವಳಿಗೆ ಅಷ್ಟೊಂದೇನೂ ಸಂತಸವಾದ ಹಾಗೆ ಕಾಣಲಿಲ್ಲ. ಆದರೆ ಅಳುವುದನ್ನು ನಿಲ್ಲಿಸಿದ್ದಳು. ಭಾರದ ಮನಸ್ಸಿನಿಂದ ಅವಳನ್ನು ಏರ್ ಪೋರ್ಟಲ್ಲಿ ಬಿಟ್ಟು, ಕೈಯಲ್ಲಿ ಟಿಕೆಟ್ ತುರುಕಿ ವಾಪಸ್ ಬಂದೆ. ತೀರ ಹೋಗುವಾಗ ಒಮ್ಮೆ ಹಿಂದಿರುಗಿ ಕೈ ಬೀಸುತ್ತಾಳೇನೋ ಅಂದುಕೊಂಡವನಿಗೆ ಅಲ್ಲೂ ನಿರಾಶೆ ಕಾದಿತ್ತು. ಅವಳು ಹೋದ ಮೇಲೆ ನನಗೆ ಮನಸ್ಸೆಲ್ಲಾ ಖಾಲಿ ಖಾಲಿ ಅಂದೆನಿಸಲು ಶುರುವಾಯಿತು. ಅವಳು ನನ್ನ ಜೊತೆ ಹೆಚ್ಚೆಂದರೇ ೧೦ ದಿನ ಇದ್ದಳಷ್ಟೇ, ಆದರೂ ಏನೋ ಕಳೆದುಕೊಂಡ ಭಾವ ಇಡೀ ದಿನ ಕಾಡುತ್ತಲೇ ಇತ್ತು. ಎರಡು ದಿನದ ಬಳಿಕ ಅವಳ ಮನೆಗೆ ಫೋನ್ ಮಾಡಿದೆ. ಅವಳ ಅಪ್ಪ ಅಮ್ಮ ಒಂದೆ ಸಮನೇ ನನ್ನ ಹತ್ತಿರ ಕ್ಷಮೆ ಕೇಳುತ್ತಿದ್ದರು. ಇವಳು ನನ್ನ ಹತ್ತಿರ ಮಾತಾಡಲೂ ಇಲ್ಲ. ಈ ಹಠಮಾರಿಯನ್ನು ಕಟ್ಟಿಕೊಂಡು ಬಾಳು ಬಹಳ ಕಷ್ಟವೆನಿಸಿತು ನನಗೆ. ಅರೇಂಜ್ಡ್ ಮ್ಯಾರೇಜ್ ಗಳ ಬಗ್ಗೆ ನನಗೆ ಸಂಪೂರ್ಣವಾಗಿ ನಂಬಿಕೆ ಹಾರಿಹೋಯಿತು. ಹಿಂದೆ ನನ್ನ ಕ್ಲಾಸ್ ಮೇಟ್ ಆಗಿದ್ದ ಒಂದಿಬ್ಬರು ಹುಡುಗಿಯರು ನನಗೆ ಇಷ್ಟವಾಗಿದ್ದರು. ಆದರೆ ಯಾರನ್ನೂ ಮದುವೆಯಾಗಬೇಕೆಂದು ಅನ್ನಿಸಿರಲಿಲ್ಲ. ಇವಳನ್ನು ನೋಡಿದ ತಕ್ಷಣ ನಾನು ಮದುವೆಯಾಗಲು ಒಪ್ಪಿಕೊಂಡು ಬಿಟ್ಟಿದ್ದೆ. ನನ್ನ ಆಯ್ಕೆಯೇ ಸರಿಯಿಲ್ಲವೆಂದು ತೀವ್ರವಾಗಿ ಅನ್ನಿಸಲು ಶುರುವಾಯಿತು. ಇನ್ನೊಂದು ವಾರವಾಗುತ್ತಿದಂತೆಯೇ, ನನಗೆ ಒಬ್ಬನೇ ಇರಲು ಬಹಳ ಕಷ್ಟವಾಯಿತು.ಪದೇ ಪದೇ ಅವಳ ನೆನಪು ಕಾಡುತ್ತಿತ್ತು. ನಾನೇ ಎಲ್ಲೋ ತಪ್ಪು ಮಾಡಿದೆನೆಂಬ ಗಿಲ್ಟ್ ಪದೇ ಪದೇ ಕಾಡಲು ಶುರುವಾಗಿ, ಮನಸ್ಸಿನ ನೆಮ್ಮದಿಯೇ ಹಾರಿ ಹೋಯಿತು. ಅವಳನ್ನು ಯಾವುದೇ ಕಾರಣಕ್ಕೆ ಬಿಡಬಾರದೆಂದು ನಿರ್ಧರಿಸಿ, ಕೆಲಸಕ್ಕೆ ರಾಜೀನಾಮೆ ನೀಡಿ ನಾನು ವಾಪಸ್ ಭಾರತಕ್ಕೆ ಹೋದೆ. ನಾನು ಹಿಂದಿರುಗುತ್ತಿದ್ದರ ಬಗ್ಗೆ ಯಾರಿಗೂ ಸೂಚನೆ ನೀಡಿರಲಿಲ್ಲ. ಬೆಳಿಗ್ಗೆ ಅಕ್ಕನ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಸಾಯಂಕಾಲ ೪ ಗಂಟೆಯ ಹಾಗೆ ಅವಳ ಕಾಲೇಜಿನ ಹತ್ರ ಹೋದೆ. ಕಾಲೇಜಿನೊಳಕ್ಕೇ ಹೋಗಿ ಅವಳ ಬರ ಕಾಯಬೇಕೆನಿಸಿದರೂ, ಯಾಕೋ ಮನಸ್ಸಾಗಲಿಲ್ಲ. ಕಾಲೇಜ್ ಗೇಟ್ ನ ಬಳಿಯೆ ಸುಮ್ಮನೇ ನಿಂತುಕೊಂಡೆ. ಸುಮಾರು ಅರ್ಧ ಗಂಟೆಗಳ ಬಳಿಕ ಇವಳು ಕೈಯಲ್ಲಿ ದೊಡ್ಡದೊಂದು ಪೇಪರ್ ಬಂಡಲ್ ಹಿಡಿದುಕೊಂಡು ಸುಸ್ತಾದಂತೆ ನಡೆದು ಬಂದಳು. ನನ್ನನ್ನು ಅವಳು ಗಮನಿಸಿದ್ದಂತೆ ಕಾಣಿಸಲಿಲ್ಲ. ನಾನು ಸುಮ್ಮನೇ ಅವಳನ್ನು ಬಸ್ ಸ್ಟಾಂಡಿನ ತನಕ ಹಿಂಬಾಲಿಸಿದೆ. ಬಸ್ ಸ್ಟಾಂಡಿನಲ್ಲಿ ಅವಳು ನಿಂತ ತಕ್ಷಣವೇ "ಪೇಪರ್ ಬಂಡಲನ್ನು ನಾನು ಹಿಡಿದುಕೊಳ್ಲಾ?" ಅಂತ ಮೃದುವಾಗಿ ಕೇಳಿದೆ. ಹಿಂದುರುಗಿದ ಅವಳ ಕಣ್ಣುಗಳಲ್ಲಿದ್ದಿದ್ದು ಆಶ್ಚರ್ಯವೋ ಅಥವಾ ಸಂತಸವೋ, ನನಗೆ ಸರಿಯಾಗಿ ಗುರುತಿಸಲಾಗಲಿಲ್ಲ.ನಾನು ಸುಮ್ಮನೆ ನಕ್ಕೆ. ಅವಳ ಮುಖದ ತುಂಬೆಲ್ಲಾ ಸಾವಿರ ಪ್ರಶ್ನೆಗಳು. "ಒಂದು ವಾರ ನಿನ್ನ ಜತೆಯಲ್ಲೇ ಇರ್ತಿನಿ. ಬೆಂಗಳೂರು ನಂಗೆ ಹೊಸತೇನಲ್ಲ. ಆದರೂ ನನಗೆ ಈ ವಾರದಲ್ಲಿ, ನಿಂಗೆ ಇಷ್ಟವಾದ ಎಲ್ಲಾ ಜಾಗಗಳನ್ನು ತೋರಿಸ್ತೀಯಾ?" ಎಂದೆ. ಅವಳಿಗೆ ತುಂಬಾ ಸಂತೋಷವಾದಂತೆ ತೋರಿತು. ಆ ಇಡೀ ವಾರ ಕಳೆದಿದ್ದೇ ಗೊತ್ತಾಗಲಿಲ್ಲ. ಅತ್ತೆ ಮಾವ ತುಂಬಾ ಒತ್ತಾಯ ಮಾಡಿದ್ದರಿಂದ ಆ ವಾರ ನಾನು ಅಲ್ಲೇ ಉಳಿದಿದ್ದೆ. ದಿನಾ ಸಂಜೆ ನಾನೇ ಅವಳನ್ನು ಒಂದೆರಡು ಒಳ್ಳೆಯ ಜಾಗಗಳಿಗೆ ಕರೆದುಕೊಂಡು ಹೋದೆ. ಬಹಳ ಲವಲವಿಕೆಯಿಂದ ನನ್ನ ಜೊತೆ ಮಾತನಾಡುತ್ತಿದ್ದಳು. ಮಕ್ಕಳ ತರ ರಚ್ಚೆ ಹಿಡಿದು, ಅತ್ತು ರಂಪ ಮಾಡಿದವಳು ಇವಳೇನಾ ಅಂತ ನನಗೆ ಆಶ್ಚರ್ಯವಾಗುವಷ್ಟು. ಅವಳನ್ನು ಮನೆಯಲ್ಲಿ ಮಕ್ಕಳ ತರವೇ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ ಏಳುತ್ತಿದ್ದಂತೆಯೆ ಕಾಫಿ ಬೆಡ್ ಬಳಿಯೇ ಸರಬರಾಜಾಗುತ್ತಿತ್ತು. ಅವಳು ಇವತ್ತು ಯಾವ ಡ್ರೆಸ್ ಹಾಕಿಕೊಳ್ಳುತ್ತಾಳೆ ಅನ್ನುವುದನ್ನೂ ಅವಳ ಅಮ್ಮನೇ ನಿರ್ಧರಿಸುತ್ತಿದ್ದಳು. ಅದಕ್ಕೆ ಇಸ್ತ್ರಿಯನ್ನೂ ಅವರೇ ಮಾಡಿ, ಇವಳು ಸ್ನಾನ ಮುಗಿಸಿ ಬರುವುದರೊಳಗೇ ರೆಡಿ ಮಾಡಿಟ್ಟಿರುತ್ತಿದ್ದರು. ಅಮ್ಮ ತಿಂಡಿ ಮಾಡಿಟ್ಟ ತಿಂಡಿಯನ್ನು ತಿಂದು, ಮನೆಯ ಬಳಿಯೇ ಬರುತ್ತಿದ್ದ ಕಾಲೇಜ್ ಬಸ್ ಏರಿ ಕಾಲೇಜಿಗೆ ಹೋಗುತ್ತಿದ್ದಳು. ಕಾಲೇಜಿನಲ್ಲಿ ದಿನಕ್ಕೆ ಮೂರೋ, ನಾಲ್ಕೋ ೪೫ ನಿಮಿಷದ ಪೀರಿಯಡ್ ಗಳನ್ನು ಮುಗಿಸಿ ಮತ್ತೆ ೪.೩೦ ರ ಹಾಗೆ ಮನೆಗೆ ವಾಪಸ್ ಬರುತ್ತಿದ್ದಳು. ಇಷ್ಟು ಮಾಡಿದ್ದಕ್ಕೇ, ಸಂಜೆ ಬರುವಷ್ಟರಲ್ಲೇ ಸುಸ್ತಾಗಿ ಬಿಡುತ್ತಿದ್ದಳು ಅವಳು. ಸಂಜೆ ಮನೆಗೆ ಬಂದ ಮೇಲೆ, ಅಮ್ಮ ಕೊಟ್ಟ ಕಾಫಿ ಕುಡಿದು, ಹರಟೆ ಹೊಡೆದು, ಟೀವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನೋ, ಧಾರಾವಾಹಿಗಳನ್ನೋ ನೋಡುತ್ತಾನೋ, ಹಾಡು ಕೇಳುತ್ತಾನೋ ಅವಳ ದಿನ ಮುಗಿದು ಹೋಗುತ್ತಿತ್ತು. ರಾತ್ರಿ, ಅವಳ ಹಾಸಿಗೆಯನ್ನೂ ಅವಳ ಅಮ್ಮನೇ ತಯಾರು ಮಾಡಬೇಕಾಗಿತ್ತು.ಅಪರೂಪಕ್ಕೊಮ್ಮೆ, ಮೂಡ್ ಚೆನ್ನಾಗಿದ್ದಾಗ ಅವಳ ಎರಡು ಕ್ಲೋಸ್ ಫ್ರೆಂಡ್ಸಗಳ ಮನೆಗೆ ಭೇಟಿ ನೀಡಿ ಅಲ್ಲಿ ಹರಟೆ ಹೊಡಿಯುವುದನ್ನು ಬಿಟ್ಟರೇ ಮನೆಯಿಂದ ಅವಳು ಹೊರಗೆ ಹೋಗುತ್ತಿದ್ದಿದ್ದೇ ಕಮ್ಮಿ. ವೀಕೆಂಡಗಳಂದು ಅವಳ ದಿನಚರಿ ಇದಕ್ಕಿಂತ ಬಹಳ ಭಿನ್ನವಾಗೇನೂ ಇರಲಿಲ್ಲ. ಆ ದಿನಗಳಂದು ಅವಳು ಸ್ವಲ್ಪ ಜಾಸ್ತಿನೇ ನಿದ್ದೆ ಮಾಡುತ್ತಿದ್ದಳು. ಫೋನಿನಲ್ಲಿ ಸ್ವಲ್ಪ ಜಾಸ್ತಿನೇ ಸಮಯ ಕಳೆಯುತ್ತಿದ್ದಳು. ಸಂಜೆ ಅಮ್ಮನ ಜೊತೆ ದೇವಸ್ಥಾನಕ್ಕೆ ಒಮ್ಮೊಮ್ಮೆ ಹೋಗುತ್ತಿದ್ದಿದ್ದೂ ಇತ್ತು. ರವಿವಾರ ಬೆಳಿಗ್ಗೆ ತಪ್ಪದೇ ಸಂಗೀತ ಕ್ಲಾಸಿಗೆ ಮಾತ್ರ ಹೋಗುತ್ತಿದ್ದಳು. ಹುಟ್ಟಿದಾಗಿನಿಂದ ಒಮ್ಮೆಯೂ ಅವಳು ಅಪ್ಪ ಅಮ್ಮನ್ನ ಬಿಟ್ಟು ಹೋಗಿರಲೇ ಇಲ್ಲ. ಅವಳ ಹಿಂದಿನ ವರ್ತನೆಗೆ, ನನಗೆ ಕಾರಣ ಸಂಪೂರ್ಣವಾಗಿ ಗೊತ್ತಾಗಿ ಹೋಯಿತು. ಅವಳ ಅಪ್ಪ ಅಮ್ಮನಿಂದ ದೂರ ಮಾಡಿ, ಅವಳ ಕಂಫರ್ಟ್ ಝೋನಿನಿಂದ ಹೊರಗೆ ಕರೆದುಕೊಂಡು ಹೋದ ನಾನು ಅವಳ ಕಣ್ಣಿಗೆ ವಿಲನ್ ತರ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಅವಳ ಜೊತೆ ಕುಳಿತಿಕೊಂಡು ನಾನು ನಿಧಾನವಾಗಿ ಮಾತನಾಡಿದೆ. ನಾನು ನಿನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆಂದು ಭರವಸೆ ಮೂಡಿಸಿದೆ. ನಾನು ಇಲ್ಲೇ ಮನೆ ಮಾಡಿದರೆ ನನ್ನ ಜೊತೆ ಇರಲು ಅವಳು ಸಹಮತಿಸಿದಳು. ವಾರಕ್ಕೊಮ್ಮೆ ಅಮ್ಮನ ಮನೆಗೆ ಮಾತ್ರ ತಪ್ಪದೇ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಳು. ನಾನು ಒಪ್ಪಿದೆ. ಅಲ್ಲಿಗೆ ಅರ್ಧ ಸಮಸ್ಯೆ ಕಮ್ಮಿಯಾದಂತಾಯಿತು. ಮನೆ ಮಾಡಿ, ಹೊಸ ಕೆಲಸ ಹಿಡಿದ ಮೇಲೆ ನಿಜವಾದ ಸಮಸ್ಯೆಗಳು ಶುರುವಾದವು. ಅವಳಿಗೆ ನಿಜಕ್ಕೂ ಪ್ರಪಂಚ ಜ್ನಾನವೇ ಇರಲಿಲ್ಲ. ಅವಳಿಗೆ ಮದುವೆಯಾಗಿದೆ, ಅಲ್ಲಿಗೆ ಕೆಲವೊಂದು ಜವಾಬ್ದಾರಿಗಳಿರುತ್ತವೆ ಅನ್ನುವುದನ್ನು ನಾನು ಪದೇ ಪದೇ ನೆನಪಿಸಿಬೇಕಾಯಿತು. ಬಟ್ಟೆಗಳನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಲ್ಲಿ ಬೇಕೆಂದರಲ್ಲಿ ಬೀಸಾಡುತ್ತಿದ್ದಳು. ಅಪ್ಪಿ ತಪ್ಪಿ ನಾನೊಮ್ಮೆ ಆಕ್ಷೇಪಿಸಿದರೇ, ನನ್ನ ಮೇಲೇ ರೇಗುತ್ತಿದ್ದಳು ಇಲ್ಲವೇ ಅಳಲು ಶುರು ಮಾಡಿ ಬಿಡುತ್ತಿದ್ದಳು. ಒಂದು ಕಾಫಿ ಮಾಡಲೂ ಬರುತ್ತಿರಲಿಲ್ಲ. ಬೆಳಿಗ್ಗೆ ನಾನೇ ಕಾಫಿ ಮಾಡಿ ಅವಳನ್ನು ಎಬ್ಬಿಸಬೇಕಾಗಿತ್ತು. ನನಗೆ ಗೊತ್ತಿದ್ದ ಅಲ್ಪ ಸ್ವಲ್ಪ ಅಡುಗೆಯನ್ನೇ ಕಲಿಸಬೇಕಾಯಿತು. ಅವಳೇ ನಿಯಮಗಳನ್ನು ಮಾಡುತ್ತಿದ್ದಳು, ಅವಳೇ ಅದನ್ನು ಮುರಿಯುತ್ತಿದ್ದಳು. ನನ್ನ ಬಗ್ಗೆ ಅಷ್ಟೊಂದೇನೂ ಕಾಳಜಿ ತೋರುತ್ತಿರಲಿಲ್ಲ. ಹೇಳದೇ ಕೇಳದೇ ಒಮ್ಮೊಮ್ಮೆ ಅಮ್ಮನ ಮನೆಗೆ ಹೋಗಿಬಿಡುತ್ತಿದ್ದಳು, ನನಗೊಂದು ಫೋನ್ ಕೂಡ ಮಾಡದೇ. ಮರುದಿನ ನಾನೇ ಅವಳನ್ನು ಕರೆದುಕೊಂಡು ಬರಬೇಕಾಗಿತ್ತು. ಆದರೆ ತಿಂಗಳುಗಳು ಉರುಳುತ್ತಿದ್ದಂತೆಯೇ, ನಿಧಾನವಾಗಿ ಅವಳ ಜವಾಬ್ದಾರಿಗಳು ಅವಳಿಗೆ ಮನದಟ್ಟಾಗತೊಡಗಿದವು. ಹಿಂದಿಗಿಂತಲೂ ಜಾಸ್ತಿ ಸಹನೆ ತೋರಿಸಲು ಶುರು ಮಾಡಿದಳು. ಅಪರೂಪಕ್ಕೆ ನನಗಿಂತ ಮುಂಚೆ ಎದ್ದು ಕಾಫಿ ಮಾಡುತ್ತಿದ್ದಳು. ನಾನೇ ಅಚ್ಚರಿಪಡುವಷ್ಟು ಶಿಸ್ತನ್ನು ಮೈಗೂಡಿಸಿಕೊಂಡಳು. ರವಿವಾರದಂದು ಅಮ್ಮನ ಮನೆಗೆ ಹೋಗಿ ಹೊಸ ಅಡುಗೆಗಳನ್ನು ಕಲಿತು, ನನ್ನ ಮೇಲೆ ಪ್ರಯತ್ನಿಸುವ ಧೈರ್ಯ ತೋರಿಸುತ್ತಿದ್ದಳು. ನಾನು ಒತ್ತಾಯ ಮಾಡಿದ ಮೇಲೆ ನನ್ನ ಜೊತೆ ಸಿನೆಮಾಕ್ಕೋ, ಫ್ರೆಂಡ್ಸಗಳ ಮನೆಗೋ ಬರುತ್ತಿದ್ದಳು. ಎಫ಼್-೧ ರೇಸನ್ನು ನನ್ನ ಜೊತೆ ಕುಳಿತುಕೊಂಡು ನೋಡಿ, ಶೂಮಾಕರ್ ಗೆದ್ದಾಗ ನನ್ನಷ್ಟೇ ಸಂಭ್ರಮ ಪಡುತ್ತಿದ್ದಳು. ನನ್ನ ಸಹಚರ್ಯದಲ್ಲಿ ಅವಳು ಸಂತೋಷವಾಗಿರುವುದನ್ನು ನಾನು ಗಮನಿಸಿದೆ. ಆಗಾಗ ನನಗೆ ಅಲ್ಪ ಸ್ವಲ್ಪ ಗೊತ್ತಿದ್ದ ಕೆಮೆಷ್ಟ್ರಿಯನ್ನು ಹೇಳಿ, ರೇಗಿಸಿ, ಜಗಳವಾಡಿ ಬೈಸಿಕೊಳ್ಳುತ್ತಿದ್ದೆ. ಹಂಸಧ್ವನಿ ರಾಗದಲ್ಲಿ "ವಾತಾಪಿ ಗಣಪತೆಂಭಜೇಹಂ" ಎಂದು ಅವಳು ಭಕ್ತಿಯಿಂದ ಹಾಡುವಾಗ ಅವಳ ಪಕ್ಕ ಕುಳಿತು ಕಾಡುತ್ತಿದ್ದೆ. ನಾವಿಬ್ಬರೂ ಈಗ ಅತ್ಯಂತ ಸುಖಿಗಳು. ಮೊನ್ನೆ ನಮ್ಮ ಪ್ರಥಮ ಆನಿವರ್ಸರಿಗೆ ಅವಳಿಗೆ ಒಂದು ಸುಂದರ ಕೆಂಪು ಗುಲಾಬಿಯನ್ನೂ, ಮೆತ್ತನೆಯ ಟೆಡ್ಡಿ ಬೇರನ್ನೂ ತಂದು ಕೊಟ್ಟೆ. ಆವತ್ತು ಅವಳು ತುಂಬಾ ಖುಶಿಯಾಗಿದ್ದಳು. ಹಿಂದೆ ನಡೆದಿದ್ದೆಲ್ಲದ್ದಕ್ಕೂ, ನನಗಾದ ತೊಂದರೆಗೂ ಅವಳು ಕ್ಷಮೆ ಕೇಳಿದಳು. ನಾನು ನಕ್ಕು ಬಿಟ್ಟೆ. ಹಿಂದಾಗಿದ್ದೆಲ್ಲವನ್ನೂ ನಾನು ಈಗ ಮರೆತು ಬಿಟ್ಟಿದ್ದೇನೆ, ನಿನ್ನನ್ನು ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೆ ಎಂದೆನ್ನುವಷ್ಟರಲ್ಲಿ, ಅವಳ ಕಣ್ಣಂಚಿನಲ್ಲಿ ಸಣ್ಣ ಹನಿ ತುಳುಕಿದ್ದನ್ನು ನಾನು ಗಮನಿಸಿದೆ. ಈಗಲೂ ಒಮ್ಮೊಮ್ಮೆ ಅವಳು ಯಾವುದೋ ಸಣ್ಣ ಕಾರಣಕ್ಕೆಲ್ಲಾ ಹಠ ಮಾಡುತ್ತಿರುತ್ತಾಳೆ. ಆಗೆಲ್ಲಾ ನಾನು, ಹಿಂದೆ ಅವಳು ಹೇಗೆ ೯೧೧ ಗೆ ಕಾಲ್ ಮಾಡ್ತಿನಿ ಅಂತ ಹೇಳಿ ಹೆದರಿಸಿದ್ದನ್ನು ನೆನಪಿಸಿ, ರೇಗಿಸುತ್ತಿರುತ್ತೇನೆ. ನಾನು ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬರದಿದ್ದರೆ ಏನಾಗುತ್ತಿತ್ತೋ ಅಂತ ಒಮ್ಮೊಮ್ಮೆ ಅನ್ನಿಸುವುದಿದೆ. ಆದರೆ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಮಾತ್ರಾ ಸಮಂಜಸವಾಗಿತ್ತು ಅನ್ನುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ. Posted by Unknown at 10:09 AM 6 comments Thursday, February 28, 2008 ಅವಳು ಹೇಳಿದ್ದು.. ಕಣ್ದಾವರೆ ಕುಡಿನೋಟ, ಪಿಸು ಮಾತ ತುಂಟಾಟ ಮುಂಗುರುಳ ಮೃದುಲಾಸ್ಯ,ತುಟಿಯಂಚು ಮಂದಹಾಸ ಗಾಢಾಂಧಕಾರ ಸೀಳಿದ ಬೆಳ್ಳಿಕೋಲ ಹೊಳಹು ಸಾರಿವೆಯಾ ನನಸಾಗುವ ಕನಸ ಸಂಭ್ರಮವನ್ನು? ಹೆಪ್ಪುಗಟ್ಟಿದ ಮಾತು, ಮಡುಗಟ್ಟಿದ ಮೌನ ಕಾಲದ ಬಿಂಬ ಕಣ್ರೆಪ್ಪೆಯಲೇ ಪ್ರತಿಮೆ ಭಾವದೊರತೆ ಮೊಗದಿ ಉಕ್ಕಿದಾ ಸಾಗರ ಹುಸಿಯೇ ನಲ್ಲನ ಬರುವಿಕೆಯ ನಿರೀಕ್ಷೆ? ಮೈತಬ್ಬಿದಾ ವೇಲು,ಇಳಿಬಿದ್ದ ಹೆರಳು ಹಿನ್ನೆಲೆಯ ಅವ್ಯಕ್ತಭಾವ, ಮರೆಮಾಚಿದ ಸತ್ಯ ಕಾಲನಾಳದಿ ಸಮಾಧಿಯಾದ ಚಿದಂಬರ ರಹಸ್ಯ ಅರಿಯದ ನಿರಾಭರಣ ನೀರೆಯ ತುಮುಲಾಟದ ಕಥೆ, ವ್ಯಥೆ (ನನ್ನ ಪ್ರಥಮ ಪ್ರಯತ್ನ. ಅಲ್ಲಲ್ಲಿ ತಿದ್ದಿ,ಸೂಚನೆ ನೀಡಿದ ಅಕ್ಕನಿಗೆ ಧನ್ಯವಾದಗಳು) Posted by Unknown at 2:39 PM 5 comments Friday, February 22, 2008 ನಾದಮಯ..ಈ ಲೋಕವೆಲ್ಲ ಸುರೇಶ ತನ್ನ ಹಳೆಯ ಟಿ.ವಿ.ಎಸ್ ಎಕ್ಸೆಲ್ ಅನ್ನು ಗಾಂಧಿ ಬಜಾರಿನ ಸಂದಿಗೊಂದಿಯಲ್ಲಿ ತಿರುಗಿಸಿ, ಎಚ್.ಬಿ.ಸೇವಾಸಮಾಜ ರೋಡಿನ ತುದಿಯಲ್ಲಿದ್ದ ನೀಲಿ ಮನೆಯ ಬಾಗಿಲ ಮುಂದೆ ನಿಂತಾಗ ಗಡಿಯಾರ ೭.೧೫ ತೋರುತ್ತಿತ್ತು. ಗಡಿಬಿಡಿಯಿಂದ ಹೆಲ್ಮೆಟ್ ತೆಗೆದು, ಹ್ಯಾಂಡ್ ಲಾಕ್ ಮಾಡಿ, ಪುಸ್ತಕ ತೆಗೆದುಕೊಂಡು ನಿಧಾನವಾಗಿ ಮಾಳಿಗೆ ಮೆಟ್ಟಿಲು ಹತ್ತುತ್ತಿದ್ದಂತೆಯೇ ಭಾಗ್ವತರ ಸಣ್ಣ ರೂಮಿನಿಂದ ಹಾರ್ಮೋನಿಯಮ್ ಸದ್ದೂ, ತಾಳಮಾಲಿಕೆಯ ಸದ್ದೂ, ಅಲೆ ಅಲೆಯಾಗಿ ತೇಲಿ ಬಂದು ಅವನ ಕಿವಿಗೆ ಅಪ್ಪಳಿಸತೊಡಗಿತು. ಶೂ ಬಿಚ್ಚಿ, ನಿಧಾನಕ್ಕೆ ಬಾಗಿಲು ತೆರೆದು ರೂಮಿನೊಳಕ್ಕೆ ಅಡಿಯಿಟ್ಟವನಿಗೆ ಸಂಗೀತ ಲೋಕ ನಿಧಾನವಾಗಿ ಅನಾವರಣಗೊಳ್ಳತೊಡಗಿತು. ೬.೩೦ ರ ಕ್ಲಾಸಿನ ಪುಷ್ಪಮಾಲಾ ಅಕ್ಕ ಆಗಲೇ ಒಂದು ರೌಂಡ್ ತಾಲೀಮು ನಡೆಸಿ, ಎರಡನೆಯದಕ್ಕೆ ರೆಡಿಯಾಗುತ್ತಿದ್ದರು. ಭಾಗ್ವತರು ಹಾರ್ಮೋನಿಯಮ್ ಹಿಡಿದು, ತಾಳಮಾಲಿಕೆಯ ವೇಗವನ್ನು ಅಡ್ಜಸ್ಟ್ ಮಾಡುತ್ತಿದ್ದರು. ಸುರೇಶ, ಕಣ್ಣಿನಲ್ಲೇ ಒಂದು ನಮಸ್ಕಾರ ಮಾಡಿ, ನೆಲದ ಮೇಲೆ ಹಾಸಿದ್ದ ಜಮಖಾನೆಯ ಮೇಲೆಯೇ ಪುಷ್ಪಮಾಲಳ ಪಕ್ಕ ಕುಳಿತುಕೊಂಡ. ಹಾರ್ಮೋನಿಯಮ್ಮಿನ ಹಮ್ಮಿಂಗ್ ಶಬ್ದ ಒಂದು ವಿಲಕ್ಷಣವಾದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಭಾಗ್ವತರು ನಿಧಾನಕ್ಕೆ "ಕಲ್ಯಾಣ ಕೃಷ್ಣಾ, ಕಮನೀಯ ಕೃಷ್ಣಾ, ಕಾಳಿಂಗ ಮರ್ಧನ ಶ್ರೀಕೃಷ್ಣಾ" ಎಂದು ಜಿಂಝೋಟಿ ರಾಗದಲ್ಲಿ ಭಜನೆ ಹೇಳಿಕೊಡಲು ಶುರುಮಾಡಿದರು. ಅದನ್ನು ಪುನರಾವರ್ತಿಸುತ್ತಿದ್ದಿದ್ದು ಪುಷ್ಪಲತಾ ಆಗಿದ್ದರೂ, ಸುರೇಶನ ಮನಸ್ಸು ಅಪ್ರಯತ್ನಪೂರ್ವಕವಾಗಿ ಅವಳಿಗೆ ಸಾಥ್ ನೀಡುತ್ತಿತ್ತು. ಭಜನೆ ಮುಗಿದು ಪುಷ್ಪಮಾಲಾ ಅಕ್ಕ ಎದ್ದು ಹೋದರೂ, ಸುರೇಶನಿಗೆ ಇನ್ನೂ ಜಿಂಝೋಟಿ ರಾಗದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ. ಹಿಂದೊಮ್ಮೆ ಆ ರಾಗವನ್ನು ಕಲಿಸಿಕೊಡಿ ಎಂದು ಅವನು ಭಾಗ್ವತರನ್ನು ಕೇಳಿಕೊಂಡಿದ್ದ. ಆದರೆ ಜಿಂಝೋಟಿ ರಾಗ ಸ್ವಲ್ಪ ಕ್ಲಿಷ್ಟವಾಗಿದ್ದುದರಿಂದ ಭಾಗ್ವತರು ಅದನ್ನು ನಿರಾಕರಿಸಿದ್ದರು. ಅಂಥ ಕ್ಲಿಷ್ಟ ರಾಗಗಳನ್ನು ಕಲಿಯಲು ಸುರೇಶ ಇನ್ನೂ ಹೆಚ್ಚಿನ ಸಮಯ ಕಾಯಬೇಕಾಗಿತ್ತು. ಸುರೇಶನಿಗೆ ಶಾಸ್ತ್ರೀಯ ಸಂಗೀತದ ಹುಚ್ಚು ಯಾವಾಗ ಹಿಡಿಯಿತೆಂದು ತಿಳಿದುಕೊಳ್ಳಲು ನೀವು ಈಗೊಂದು ಆರು ವರ್ಷದ ಹಿಂದೆ ಹೋಗಬೇಕು. ಸುರೇಶನಿಗೆ ಸಂಗೀತದ ಹಿನ್ನೆಲೆಯೇನೂ ಇರಲಿಲ್ಲ. ಅರ್ಧಮರ್ಧ ಬರುತ್ತಿದ್ದ ಹಿಂದಿ ಹಾಡುಗಳನ್ನು ಕೆಟ್ಟ ಸ್ವರದಲ್ಲಿ ಕಿರುಚಿ ಹಾಡುವುದಕ್ಕೇ ಅವನ ಸಂಗೀತ ಜ್ನಾನ ಸೀಮಿತವಾಗಿತ್ತು. ಆದರೆ ಕಾಲೇಜಿನಲ್ಲಿರುವಾಗ "ಸ್ಪಿಕ್ ಮೆಕೆ" ಯವರು ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಭಾ ಅತ್ರೆಯವರ ಗಾಯನ ಸುರೇಶನ ಮೇಲೆ ಎಷ್ಟು ಅಚ್ಚಳಿಯದಂತ ಪ್ರಭಾವವನ್ನು ಉಂಟುಮಾಡಿತ್ತೆಂದರೆ, ಆವತ್ತಿನಿಂದ ಸುರೇಶನಿಗೆ ಶಾಸ್ತ್ರೀಯ ಸಂಗೀತದ ಮುಂದೆ ಉಳಿದಿದೆಲ್ಲಾ ಗೌಣ ಎಂದನ್ನಿಸಲು ಶುರುವಾಯಿತು. ಆವಾಗಲಿಂದ, ಅಪ್ಪ ಕೊಡುತ್ತಿದ್ದ ತಿಂಗಳ ಖರ್ಚಿನಲ್ಲೇ ಆದಷ್ಟು ಉಳಿಸಿ ಸಾಧ್ಯವಾದಷ್ಟು ಕ್ಯಾಸೆಟ್ ಗಳನ್ನು ಕೊಂಡು ತಂದು ಪದೇ ಪದೇ ಕೇಳಲು ಶುರುಮಾಡಿದ್ದ. ಶಾಸ್ತ್ರೀಯ ಸಂಗೀತದ ಮೇಲೆ ಇವನು ಬೆಳೆಸಿಕೊಂಡಿದ್ದ ಗೀಳು, ಅವನ ಅಪ್ಪ ಅಮ್ಮನಿಗೂ ಆಶ್ಚರ್ಯ ತಂದಿತ್ತು. ಬೆಂಗಳೂರಿಗೆ ಬಂದು ಕೆಲಸ ಮಾಡಿ, ಕೈಯಲ್ಲಿ ಒಂದೆರಡು ಕಾಸು ಆಡತೊಡಗಿದ ಮೇಲೆ, ಅವರಿವರನ್ನು ಕೇಳಿ ಭಾಗ್ವತರ ಅಡ್ರೆಸ್ ಪಡೆದುಕೊಂಡು, ಅವರ ಹತ್ತಿರ ಸಂಗೀತ ಕಲಿಯಲು ಶುರುಮಾಡಿದ್ದ. ಸಂಗೀತದ ಹಿನ್ನೆಲೆಯೇ ಇಲ್ಲದ, ಅಷ್ಟೊಂದೇನೂ ಒಳ್ಳೆ ಕಂಠವೂ ಇಲ್ಲದ ಸುರೇಶನಿಗೆ ಸಂಗೀತ ಹೇಳಿಕೊಡಲು ಭಾಗ್ವತರು ಮೊದಲು ಸ್ವಲ್ಪ ಹಿಂಜರಿದರೂ, ಸುರೇಶ ಒತ್ತಾಯ ಮಾಡಿದ ನಂತರ, ಅವನ ಉತ್ಸುಕತೆಯನ್ನು ನೋಡಿ ಪ್ರತೀ ಶನಿವಾರ ೭.೩೦ ಗಂಟೆಗೆ ಅವನ ಕ್ಲಾಸನ್ನು ನಿಗದಿ ಮಾಡಿದ್ದರು. ಭಾಗ್ವತರು ಈಗ ಕರೆ ಎರಡರ ಶೃತಿ ಹಿಡಿದು ರೆಡಿ ಆಗಿದ್ದರು. ಸುರೇಶ ಪುಸ್ತಕ ತೆಗೆದು, ದುರ್ಗಾ ರಾಗವನ್ನು ಹಾಡಲು ಶುರು ಮಾಡಿದ. ಆರೋಹಣ, ಅವರೋಹಣ, ಸ್ವರ ಗೀತೆ ಆದಮೇಲೆ ಹಿಂದಿನ ವಾರ ಕಲಿಸಿಕೊಟ್ಟ ಆಲಾಪವನ್ನು ತಾಳಮಾಲಿಕೆಯ ಜೊತೆ ಶುರುಮಾಡಿದ. ಒಂದೆರಡು ಆವರ್ತನೆಯಾಗುವುದರಲ್ಲಿ ಸುರೇಶನ ಕಂಠ ಒಂದು ಹದಕ್ಕೆ ಬಂದಿತ್ತು. ಆದರೂ ಮಧ್ಯದಲ್ಲಿ ಎರಡು ಸಲ ತಾಳ ತಪ್ಪಿದ. ಭಾಗ್ವತರು ಮತ್ತೆ ಸರಿಯಾಗಿ ಹೇಳಿಕೊಟ್ಟರು. ಹಾಗೇ ಮುಂದುವರೆಸಿಕೊಂಡು ಹೋದವನು, "ಸಾ" ದಿಂದ "ಹಿಮ ನಗ ನಂದಿನಿ, ಭವ ಭಯ ಕೌಂದಿನಿ" ಎಂದು ಅಂತರಾವನ್ನು ಶುರು ಮಾಡುವುದರ ಬದಲು ನಿಷಾದಕ್ಕೇ ಎಳೆದು ಹಾಡಲು ಶುರುಮಾಡಿಬಿಟ್ಟ. ಭಾಗ್ವತರು ಈಗ ಹಾರ್ಮೋನಿಯಮ್ ನಿಲ್ಲಿಸಿಬಿಟ್ಟರು. ಮತ್ತೆ ಹಿಂದಿನಿಂದ ಆಲಾಪ ಶುರು ಮಾಡಬೇಕಾಯಿತು. ಎರಡು ಮೂರು ಪ್ರಯತ್ನದ ನಂತರವೂ ಭಾಗ್ವತರಿಗೆ ತೃಪ್ತಿಯಾಗುವಂತೆ ಸುರೇಶನಿಗೆ ಹಾಡಲು ಸಾಧ್ಯವಾಗಲೇ ಇಲ್ಲ. ಈಗ ನಿಷಾದಕ್ಕಿಂತ ಸ್ವಲ್ಪ ಈಚೆ ಅಂತರಾವನ್ನು ಶುರುಮಾಡುತ್ತಿದ್ದರೂ, ಸರಿಯಾಗಿ "ಸಾ" ಹಚ್ಚಲು ಅವನು ವಿಫಲನಾಗುತ್ತಿದ್ದ. ಹಾರ್ಮೋನಿಯಮ್ ಅಲ್ಲಿ "ಸಾ" ಮತ್ತು "ನಿ" ಯನ್ನು ಬಿಡಿ ಬಿಡಿಯಾಗಿ ಹಿಡಿದು ತೋರಿಸಿದಾಗ ಸರಿಯಾಗಿಯೇ ಹಾಡುತ್ತಿದ್ದವನು, ಅವುಗಳ ಜೊತೆ ಇನ್ಯಾವುದೋ ಸ್ವರ ಸೇರಿಕೊಂಡಾಗ, ಅಥವಾ ಎರಡೂ ಸ್ವರಗಳನ್ನು ಒಟ್ಟಿಗೆ ಹಾಡುವಾಗ ಮಾತ್ರಾ ಗಲಿಬಿಲಿಯಾಗಿ ತಪ್ಪು ತಪ್ಪಾಗಿ ಯಾವುದೋ ಸ್ವರ ಹಾಡಿ ಬಿಡುತ್ತಿದ್ದ. ಇನ್ನೂ ಮೂರು ನಾಲ್ಕು ವಿಫಲ ಪ್ರಯತ್ನಗಳ ಬಳಿಕ, ಭಾಗ್ವತರಿಗೆ ಇದು ಬರೀ ಗಾಳಿಯಲ್ಲಿ ಗುದ್ದಾಟ ಮಾಡಿದ ಹಾಗೇ ಅನ್ನಿಸಿರಬೇಕು. "ಇವತ್ತಿಗೆ ಕ್ಲಾಸ್ ಸಾಕು. "ನಿ" ಮತ್ತು "ಸಾ" ಗಳನ್ನು ನೀನು ಸರಿಯಾಗಿ ಗುರುತಿಸದ ಹೊರತು ಮುಂದಕ್ಕೆ ಕಲಿಯುವ ಪ್ರಮೇಯವೇ ಇಲ್ಲ. ಒಂದು ಕೆಲಸ ಮಾಡು. ಹಿಂದೆ ಹೇಳಿಕೊಟ್ಟಿದ್ದ ಅಲಂಕಾರಗಳನ್ನು ಮತ್ತೆ ಪ್ರಾಕ್ಟೀಸ್ ಮಾಡಿಕೊಂಡು ಬಾ. ಮುಂದಿನ ವಾರ ನೋಡೋಣ" ಎಂದವರೇ, ಹಾರ್ಮೋನಿಯಮ್ಮಿನ ಬಾತೆಗಳನ್ನು ಮುಚ್ಚಿ, ಬದಿಗಿಟ್ಟರು. ಸುರೇಶನಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಅವನಿಗೆ ಅಪಾರವಾದ ನಿರಾಸೆಯಾಗಿತ್ತು. ಸಪ್ಪೆ ಮುಖ ಹೊತ್ತು ಹಿಂದಿರುಗಿದ. ಸೌತ್ ಎಂಡ್ ಸರ್ಕಲ್ಲಿನ ಕಡೆ ವೇಗವಾಗಿ ಹೋಗುತ್ತಿದ್ದವನ ಮನಸ್ಸೆಲ್ಲ ತುಂಬಾ ಆ ನಿರಾಶೆಯೇ ತುಂಬಿಕೊಂಡಿತ್ತು. ಹಿಂದೆಲ್ಲಾ ಅವನು ಎಲ್ಲವನ್ನೂ ಸರಿಯಾಗೇ ಹಾಡುತ್ತಿದ್ದ. ಈಗೊಂದು ತಿಂಗಳಿಂದ ಆಫೀಸಿನಲ್ಲಿ ಕೆಲಸ ಹೆಚ್ಚಾದುದರಿಂದ ಪ್ರಾಕ್ಟೀಸ್ ಮಾಡಲು ಜಾಸ್ತಿ ಸಮಯ ಸಿಕ್ಕಿರಲಿಲ್ಲ. ಈ ವಾರ ಸರಿಯಾಗಿ ಪ್ರಾಕ್ಟೀಸ್ ಮಾಡಿ ಮುಂದಿನ ವಾರದ ಕ್ಲಾಸಲ್ಲಿ ಸರಿಯಾಗಿ ಹಾಡೇ ಹಾಡುತ್ತೇನೆಂಬ ದೃಢ ನಿರ್ಧಾರ ಮಾಡಿ ಗಾಡಿಯ ಎಕ್ಸಲರೇಟರನ್ನು ಇನ್ನೂ ಜಾಸ್ತಿ ಮಾಡಿದ. ಸೌತ್ ಎಂಡ್ ಸರ್ಕಲ್, ಫೋರ್ತ್ ಬ್ಲಾಕು, ಬನ್ನೇರುಘಟ್ಟ ರಸ್ತೆ ದಾಟಿ, ಬಿ.ಟಿ.ಎಂ ನ ಮುಖ್ಯ ಸಿಗ್ನಲ್ಲಿಗೆ ಬಂದಾಗ ಸಮಯ ೮.೩೦ ದಾಟಿತ್ತು. ಸಿಗ್ನಲ್ಲಿನಲ್ಲಿ ೧೦ ನಿಮಿಷ ಕಾಯ್ದು, ರೂಮ್ ಸೇರಿದಾಗ ಸುರೇಶನಿಗೆ ಇವತ್ತು ತನ್ನದೇ ಅಡುಗೆ ಪಾಳಿ ಎಂಬುದು ನೆನಪಾಯಿತು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಗೆಳೆಯರ ಜೊತೆ ಸುರೇಶ ಒಂದು ಡಬಲ್ ಬೆಡ್ ರೂಮಿನ ಮನೆಯೊಂದರಲ್ಲಿ ಇರುತ್ತಿದ್ದ. ದಿನಕ್ಕೊಬ್ಬರಂತೆ ಅಡುಗೆ ಪಾಳಿ ವಹಿಸಿಕೊಂಡಿದ್ದರು. ಇವತ್ಯಾಕೋ ಸುರೇಶನಿಗೆ ಅಡುಗೆ ಮಾಡುವ ಮೂಡೇ ಇರಲಿಲ್ಲ. ಆದರೂ ಮನಸ್ಸಿಲ್ಲದ ಮನಸ್ಸಿನಿಂದಲೇ ಒಂದಷ್ಟು ಬೀನ್ಸ್, ಕಾರೆಟ್ ಹೆಚ್ಚಿ ಹಾಕಿ, ಬೇಳೆಯ ಜೊತೆ ಒಂದು ಕುಕ್ಕರಿನಲ್ಲೂ, ಅಕ್ಕಿ ತೊಳೆದು ಇನ್ನೊಂದು ಕುಕ್ಕರಿನಲ್ಲೂ ಇಟ್ಟ. ಊಟವಾದ ಮೇಲೆ ಹಾರ್ಮೋನಿಯಮ್ ಹಿಡಿದು ಒಂದಷ್ಟು ಅಭ್ಯಾಸ ಮಾಡಬೇಕೆಂದು ಅಂದುಕೊಂಡವನು, ರೂಮ್ ಮೇಟ್ ಗಳೆಲ್ಲಾ ಆಗಲೇ ಮಲಗಲು ತಯಾರಾಗುತ್ತಿರುವುದನ್ನು ಕಂಡು ಹಿಂಜರಿದ. ಗುರುಗಳಿಗೆ ಗುರುತಿದ್ದ ಯಾವುದೋ ಅಂಗಡಿಯಿಂದ ಹಳೆಯ ಒಂದು ಸೆಕೆಂಡ್ ಹಾಂಡ್ ಹಾರ್ಮೋನಿಯಮನ್ನು ಸುರೇಶ, ಕಮ್ಮಿ ಬೆಲೆಗೆ ಖರೀದಿಸಿದ್ದ. ಹಳೆಯ ಆ ಹಾರ್ಮೋನಿಯಮ್ಮಿನ ಮನೆಗಳೆಲ್ಲಾ ಸವೆದು ಸವೆದು ಇನ್ನೇನು ಜೀರ್ಣಾವಸ್ಥೆಯಲ್ಲಿದ್ದವು. ಹಳೆಯದಾಗಿದ್ದಕ್ಕೋ ಏನೋ, ಅದರಿಂದ ಹೊರಡುತ್ತಿದ್ದ ಸದ್ದು ಸ್ವಲ್ಪ ಕರ್ಕಶವಾಗಿಯೇ ಕೇಳುತ್ತಿತ್ತು. ರವಿವಾರದಂದು ಅಭ್ಯಾಸ ಮಾಡುವಾಗ ಒಂದೆರಡು ಸಲ, ಪಕ್ಕದ ಮನೆಯ ದಪ್ಪ ದೇಹದ ಮುಸ್ಲಿಮ್ ಆಂಟಿ ಇವರ ಮನೆಗೆ ಬಂದು ಕಂಪ್ಲೇಂಟ್ ಬೇರೆ ಮಾಡಿದ್ದಳು. ಆವತ್ತಿನಿಂದ ಸುರೇಶ ಸ್ವಲ್ಪ ಜಾಸ್ತಿನೇ ಜಾಗರೂಕನಾಗಿದ್ದ. ಹಾರ್ಮೋನಿಯಮ್ ಶುರು ಮಾಡಿ ಒಂದಷ್ಟು ಅಭ್ಯಾಸಮಾಡಬೇಕೆಂದು ಅವನ ಮನಸ್ಸು ತೀವ್ರವಾಗಿ ತುಡಿಯುತ್ತಿದ್ದರೂ, ಅನಿವಾರ್ಯವಾಗಿ ಅದನ್ನು ಹತ್ತಿಕ್ಕಬೇಕಾಯಿತು. ರಾತ್ರಿಯಿಡೀ ಸುರೇಶನಿಗೆ ನಿದ್ದೆಯೇ ಹತ್ತಲಿಲ್ಲ. ದುರ್ಗಾ ರಾಗದ ಸ್ವರಗಳು ಇನ್ನೂ ಕಿವಿಯಲ್ಲೇ ಗುಂಯ್ ಗುಡುತ್ತಲೇ ಇತ್ತು. ಸುಮಾರು ೧೨ ಗಂಟೆಯ ತನಕ ಹಾಸಿಗೆಯಲ್ಲೇ ಹೊರಳಾಡಿದವನು, ತಡೆಯಲು ಆಗದೇ, ಮೆಲ್ಲಗೆ ಎದ್ದು ಹಾಲ್ ಗೆ ಬಂದು,ಮುದ್ರಿಸಿಕೊಂಡು ಬಂದಿದ್ದ ಕ್ಯಾಸೆಟ್ಟನ್ನು,ಟೇಪ್ ರೆಕಾರ್ಡರಿನಲ್ಲಿ ತುರುಕಿದ. ವಾಲ್ಯೂಮನ್ನು ಸಾಧ್ಯವಾದಷ್ಟು ಕಮ್ಮಿಯಲ್ಲಿಟ್ಟು, ಮನಸ್ಸಿನಲ್ಲೇ ಕ್ಯಾಸೆಟ್ಟಿನಲ್ಲಿದ್ದಂತೆಯೇ ಪುನರಾವರ್ತಿಸಲು ಶುರುಮಾಡಿದ. ಈ ಸಲ "ನಿ" ಮತ್ತು "ಸಾ" ಸರಿಯಾಗಿ ಬಂದಹಾಗೆ ಅನಿಸಿತು. ಸಂತೃಪ್ತಿಯೆನಿಸಿ, ಟೇಪ್ ರೇಕಾರ್ಡರ್ ಆರಿಸಿ ಮುಸುಕೆಳೆದು ಮಲಗಿಬಿಟ್ಟ. ಮಾರನೆಯ ದಿನ ರವಿವಾರ, ರೂಮ್ ಮೇಟ್ ಗಳೆಲ್ಲಾ ಎಷ್ಟೋ ಒತ್ತಾಯ ಮಾಡಿದರೂ, ಅವರ ಜೊತೆ ಸಿನೆಮಾಕ್ಕೆ ಹೋಗದೇ, ಮನೆಯಲ್ಲೇ ಉಳಿದುಕೊಂಡ. ಈಗ ಸುರೇಶನಿಗೆ ಸಂಗೀತ ಅಭ್ಯಾಸ ಮಾಡಲು ಒಳ್ಳೆಯ ವಾತಾವರಣ ಸಿಕ್ಕಿತ್ತು. ಮನೆಯ ಕಿಟಕಿ, ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ ಹಾರ್ಮೋನಿಯಮ್ ಹಿಡಿದುಕುಳಿತ. ಮೊದಲನೆಯ ಕ್ಲಾಸಿನಲ್ಲಿ ಹೇಳಿಕೊಟ್ಟ ಅಲಂಕಾರಗಳಿಂದ ಹಿಡಿದು, ಇಲ್ಲಿಯ ತನಕ ಆದ ಎಲ್ಲಾ ರಾಗಗಳನ್ನು ಒಂದೊಂದಾಗಿ ಮತ್ತೆ ಹಾರ್ಮೋನಿಯಮ್ಮಿನ ಸಹಕಾರದೊಂದಿಗೆ ಹಾಡಲು ಶುರು ಮಾಡಿದ. ಇನ್ನೇನು ದುರ್ಗಾ ರಾಗ ಶುರುಮಾಡುವ ಹೊತ್ತಿಗೆ ಯಾರೋ ಬಾಗಿಲು ತಟ್ಟಿದ ಹಾಗಾಯಿತು. ರಸಭಂಗವಾದಂತನಿಸಿ, ತುಸು ಸಿಟ್ಟಿನಿಂದಲೇ ಬಾಗಿಲು ತೆಗೆದು ನೋಡಿದ. ನೋಡಿದರೆ, ಇಡೀ ರಾತ್ರಿ ಕಾಲನಿಯನ್ನು ಕಾವಲು ಕಾಯುತ್ತಿದ್ದ ಗೂರ್ಖಾ ಎದುರು ನಿಂತಿದ್ದ. ಸುರೇಶನನ್ನು ನೋಡಿದವನೇ "ಪೇಟಿ ಬಜಾರಹೆತೇ ಸಾಬ್? " ಎಂದು ಹುಳ್ಳಗೆ ನಕ್ಕ. ಸುರೇಶನಿಗೆ ಅವನ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂತಾದರೂ, ಹೇಗೋ ಸಾವರಿಸಿಕೊಂಡು "ಕ್ಯಾ ಚಾಹಿಯೆ?" ಎಂದು ಸಿಟ್ಟಿನಲ್ಲೇ ಕೇಳಿದ. ಸುರೇಶನ ಸಿಟ್ಟನ್ನು ಗಮನಿಸಿದಂತೆ ಗೂರ್ಖಾ, "ಪಾಂಚ್ ರುಪಯ್ಯಾ ಸಾಬ್" ಎಂದು ದೀನ ಮುಖ ಮಾಡಿ ಕೈಚಾಚಿದ. ಪ್ರತೀ ತಿಂಗಳೂ ಎಲ್ಲಾ ಮನೆಯಿಂದಲೂ ಹೀಗೆ ೫ ರುಪಾಯಿ ತೆಗೆದುಕೊಂಡು ಹೋಗುವುದು ಅವನಿಗೆ ಅಭ್ಯಾಸವಾಗಿ ಹೋಗಿತ್ತು. ಸಧ್ಯ ಇವನು ತೊಲಗಿದರೆ ಸಾಕೆಂದು ಅನಿಸಿ, ಪ್ಯಾಂಟ್ ಜೇಬಿನಿಂದ ೫ ರುಪಾಯಿಯ ನಾಣ್ಯ ತೆಗೆದು ಅವನ ಕೈಗಿತ್ತ. ಗೂರ್ಖಾ ಅವನಿಗೊಂದು ಸಲಾಮ್ ಹೊಡೆದು ಹಾಗೇ ತಿರುಗಿ ಹೋಗಿಬಿಟ್ಟ. ಅವನು ಸಲಾಮ್ ಹೊಡೆದಿದ್ದು ತನಗೋ ಅಥವಾ ತಾನು ಕೊಟ್ಟ ೫ ರುಪಾಯಿಗೋ ಅನ್ನುವ ಗೊಂದಲದಲ್ಲೇ ಇದ್ದವನಿಗೆ ಗಾಳಿಗೆ ಧೊಪ್ಪನೆ ಬಾಗಿಲು ಮುಚ್ಚಿಕೊಂಡಾಗಲೇ ಎಚ್ಚರವಾಗಿದ್ದು. ಮತ್ತೆ ಹಾಡಲು ಕುಳಿತವನಿಗೆ ಸಲೀಸಾಗಿ ಸ್ವರಗಳು ಒಲಿದುಬರಲು ಶುರುಮಾಡಿದವು. ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಸುರೇಶನ ದೊಡ್ಡ ಗಂಟಲಿಗೆ ವಿಚಿತ್ರವಾದ ಹಿನ್ನೆಲೆ ಒದಗಿಸಿತ್ತು. ಯಾವುದೋ ಲಹರಿಯಲ್ಲಿದ್ದವನಂತೆ, ಅತ್ಸುತ್ಸಾಹದಲ್ಲಿ ನೋಡು ನೋಡುತ್ತಿದ್ದಂತೆಯೇ ಆಲಾಪವನ್ನು ಮುಗಿಸಿ, ಲಯ ಸರಗಮ್ ಗಳನ್ನೂ ಹಾಡಿಬಿಟ್ಟ. ಎಲ್ಲಾ ಸರಿಯಾಗಿ ಬಂದ ಹಾಗೆ ತೋರಿತು. ಆದರೂ ಮನಸ್ಸಿನಲ್ಲಿ ಏನೋ ಸಂಶಯ, ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂದು. ಸರಿ, ಟೇಪ್ ರೆಕಾರ್ಡರಿನಲ್ಲಿ ಹೊಸದೊಂದು ಕೆಸೆಟ್ ತುರುಕಿ, ರೆಕಾರ್ಡ್ ಬಟನ್ ಒತ್ತಿ ಮತ್ತೊಮ್ಮೆ ಹಾಡಲು ಶುರು ಮಾಡಿದ. ಈ ಸಲ ಹಾಡುವಾಗ ಅವನ ಕಂಠ ಸ್ವಲ್ಪ ನಡುಗುತ್ತಿತ್ತು. ಹಾರ್ಮೋನಿಯಮ್ಮಿನ ಮೇಲೆ ಓಡಾಡುತ್ತಿದ್ದ ಬೆರಳುಗಳು ಬೆವೆಯುತ್ತಿದ್ದವು. ಹೇಗೋ ಹೇಗೋ ಹಾಡಿ ಮುಗಿಸಿದವನು, ಭಯದಿಂದಲೇ ಕೆಸೆಟ್ ರಿವೈಂಡ್ ಮಾಡಿ ಕೇಳತೊಡಗಿದ. ಕೆಸೆಟ್ಟಿನಲ್ಲಿ ಹಾರ್ಮೋನಿಯಮ್ಮಿನ ಸದ್ದೇ ಪ್ರಬಲವಾಗಿ, ಸುರೇಶನ ಧ್ವನಿ ಅಸ್ಪಷ್ಟವಾಗಿ ಗೊಣಗಿದಂತೆ ಕೇಳುತ್ತಿತ್ತು. ತಾನು ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂಬುದು ಸುರೇಶನಿಗೆ ಗೊತ್ತೇ ಆಗುತ್ತಿರಲಿಲ್ಲ. "ದರಿದ್ರ ಹಾರ್ಮೋನಿಯಮ್ಮು" ಎಂದು ಮನಸ್ಸಿನಲ್ಲೇ ಶಪಿಸಿ ಅದನ್ನು ಗೋಡೆಯ ಬದಿ ನೂಕಿದ. ಅವನು ನೂಕಿದ ರಭಸಕ್ಕೆ ಹಾರ್ಮೋನಿಯಮ್ಮಿನ ಬಾತೆ ತೆಗೆದುಕೊಂಡುಬಿಟ್ಟಿತು. ಬಾತೆ ತೆರೆದುಕೊಂಡ ಹಾರ್ಮೋನಿಯಮ್ಮು, ತನ್ನ ದುಸ್ತಿತಿಯನ್ನೇ ನೋಡಿ ಹಲ್ಲು ಬಿಟ್ಟುಕೊಂಡು ನಗುತ್ತಾ, ಅಣಕಿಸುತ್ತಿದಂತೆ ಭಾಸವಾಯಿತು ಸುರೇಶನಿಗೆ. ಅವತ್ತು ಇಡೀ ದಿನ, ಮತ್ತೆ ಹಾಡಲು ಮನಸ್ಸಾಗಲಿಲ್ಲ ಸುರೇಶನಿಗೆ. ಮನಸ್ಸಿನಲ್ಲಿ, ತನ್ನ ಸಾಮರ್ಥ್ಯದ ಬಗ್ಗೆಯೇ ಒಂದು ಅವ್ಯಕ್ತ ಭಯ ಕಾಡುತ್ತಿತ್ತು. ಸಂಗೀತವೆಂದರೇ ಒಂದು ರೀತಿಯ ದಿಗಿಲೆನಿಸಲು ಶುರುವಾಗಿತ್ತು. ಒಂದು ಕ್ಷಣ, ಈ ಸಂಗೀತದ ಗೀಳಿಗೆ ಬಿದ್ದು ತಪ್ಪು ಮಾಡಿದೆನೇನೋ ಅನ್ನಿಸಿತು. ಆದರೂ, ಒಳ್ಳೆ ಹಾಡುಗಾರನಾಗಬೇಕೆಂಬ ಅವನ ಕನಸನ್ನು ಅವನು ಅಷ್ಟು ಬೇಗ ಮರೆಯಲು ಸಿದ್ಧವಿರಲಿಲ್ಲ.ಮುಂದಿನ ವಾರ ಕ್ಲಾಸಿಗೆ ಹೋಗುವದಕ್ಕಿಂತ ಮುಂಚೆ ಒಂದು ತಾಸು ಇನ್ನೊಮ್ಮೆ ಮನೆಯಲ್ಲೇ ಅಭ್ಯಾಸ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿದ. ಆದರೆ, ಆ ಶನಿವಾರ ಭಾಗ್ವತರು ೫ ಗಂಟೆಗೇ ಫೋನ್ ಮಾಡಿ, ೬.೩೦ ರ ಪುಷ್ಪಮಾಲಾ ಕ್ಲಾಸಿಗೆ ಬರುತ್ತಿಲ್ಲವಾದುದರಿಂದ, ಸುರೇಶನಿಗೇ ಆ ಸಮಯಕ್ಕೆ ಕ್ಲಾಸಿಗೆ ಬರಲು ಹೇಳಿಬಿಟ್ಟರು. ಸುರೇಶ ಈಗ ನಿಜವಾಗಲೂ ದಿಗಿಲುಬಿದ್ದ. ಅವನಿಗೆ ಇನ್ನೂ ಆಫೀಸಿನ ಕೆಲಸ ಮುಗಿಸಿ ಹೊರಬೀಳಲು ಮುಕ್ಕಾಲು ಗಂಟೆಯಂತೂ ಬೇಕಾಗಿತ್ತು. ಇನ್ನು ಅಭ್ಯಾಸ ಮಾಡುವ ಪ್ರಮೇಯವೇ ಇಲ್ಲ. ಹೇಗೋ ಹೇಗೋ ಬೇಗ ಕೆಲಸ ಮುಗಿಸಿ ಹೊರಟವನಿಗೆ ಬಿ.ಟಿ.ಎಂ ಸಿಗ್ನಲ್ಲಿನಲ್ಲೇ ಆರು ಗಂಟೆ ಆಗಿಬಿಟ್ಟಿತ್ತು. ಸಣ್ಣಗೆ ಝುಮುರು ಮಳೆ ಹನಿ ಬೇರೆ ಬೀಳುತ್ತಿತ್ತು. ಲೇಟ್ ಆಗಿ ಹೋದರೆ, ತನಗಾಗಿ ಭಾಗ್ವತರು ಕಾಯುತ್ತಿರುತ್ತಾರೆ ಎಂಬ ಭಾವನೆಯೇ ಸುರೇಶನಿಗೆ ಇನ್ನೂ ದಿಗಿಲುಕ್ಕಿಸಿತು. ಯಾವು ಯಾವುದೋ ಬೀದಿಗಳಲ್ಲಿ ನುಗ್ಗಿ, ಶಾರ್ಟ್ ಕಟ್ ಹಿಡಿದು ಅಂತೂ ೬.೩೦ ಕ್ಕೆ ಗಾಂಧಿ ಬಜಾರ್ ತಲುಪಿ ನಿಟ್ಟುಸಿರು ಬಿಟ್ಟ. ಭಾಗ್ವತರು ಇವತ್ತು ಒಳ್ಳೆಯ ಮೂಡಲ್ಲಿ ಇದ್ದ ಹಾಗೆ ಕಂಡಿತು. ಮಳೆಯಲ್ಲಿ ತೊಯ್ದುಕೊಂಡು ಬಂದಿದ್ದ ಸುರೇಶನಿಗೆ ಭಾಗ್ವತರ ಹೆಂಡತಿ ಬಿಸಿ ಬಿಸಿ ಚಹ ಬೇರೆ ಮಾಡಿಕೊಟ್ಟರು. ಟ್ರಾಫಿಕ್ಕಿನಲ್ಲಿ ಸಿಕ್ಕಿ ನಲುಗಿ, ಮಳೆಯಲ್ಲಿ ತೊಯ್ದು ಹಿಂಡಿಯಾಗಿದ್ದ ಸುರೇಶ, ಚಹ ಕುಡಿದು ಸುಧಾರಿಸಿಕೊಂಡ. ಭಾಗ್ವತರಿಗೆ ಹಿಂದಿನ ವಾರ ನಡೆದಿದ್ದೆಲ್ಲವೂ ಮರೆತು ಹೋಗಿತ್ತು. ಹೆದರುತ್ತಲೇ, ಸುರೇಶ ಹಿಂದಿನದೆಲ್ಲದನ್ನೂ ನೆನಪಿಸಿದ. "ಸರಿ ಮತ್ತೆ, ಅಲಂಕಾರ ಶುರು ಮಾಡು" ಎಂದು ಹೇಳಿದಾಗ "ಇಲ್ಲ. ಇನ್ನೊಂದು ಅವಕಾಶ ಕೊಡಿ. ಈ ಸಲ ಖಂಡಿತ ಸರಿಯಾಗಿ ಹಾಡುತ್ತೇನೆ" ಎಂದು ಗೋಗರೆದ. ತನ್ನಲ್ಲಿ ಇಂಥ ಆತ್ಮವಿಶ್ವಾಸ ಎಲ್ಲಿಂದ ಬಂದಿತೆಂಬುದೇ ಗೊತ್ತಾಗದೇ ಸುರೇಶನಿಗೆ ಒಂದು ಕ್ಷಣ ಸೋಜಿಗವಾಯಿತು. ಭಾಗ್ವತರು ಒಮ್ಮೆ ನಕ್ಕು "ಸರಿ" ಎಂದು ಬಿಟ್ಟರು. ಅಳುಕುತ್ತಲೇ ಹಾಡಲು ಶುರು ಮಾಡಿದ. ಒಂದೊಂದಾಗಿ ಸ್ವರಗಳನ್ನು ಹಾಡುತ್ತಿದ್ದಂತೆಯೇ, ಭಾಗ್ವತರು ತಲೆ ಆಡಿಸಿ ಸಮ್ಮತಿ ಸೂಚಿಸತೊಡಗಿದರು. ಸುರೇಶನಿಗೆ ಈಗ ಇನ್ನೂ ಧೈರ್ಯ ಬಂತು. ಹಾವಿನಂತೆ ಬಳುಕುತ್ತಾ ಹಾರ್ಮೋನಿಯಮ್ಮಿನ ಮನೆಗಳ ಮೇಲೆ ಹರಿದಾಡುತ್ತಿದ್ದ ಭಾಗ್ವತರ ಬೆರಳುಗಳನ್ನೇ ನೋಡುತ್ತಿದ್ದವನಿಗೆ ಯಾವುದೋ ಬೇರೆಯೇ ಲೋಕಕ್ಕೆ ಪ್ರವೇಶವಾದ ಅನುಭವವಾಗಿ, ತನ್ನನ್ನು ತಾನೇ ಮರೆತು ಮೈದುಂಬಿ ಹಾಡತೊಡಗಿದ. ಈಗ ಅವನ ಕಣ್ಣಿಗೆ ಎದುರು ಕುಳಿತಿದ್ದ ಭಾಗ್ವತರು ಕಾಣುತ್ತಿರಲಿಲ್ಲ. ಅವರ ಹಾರ್ಮೋನಿಯಮ್ಮಿನ ಸದ್ದು ಮಾತ್ರಾ ಅಸ್ಪಷ್ಟವಾಗಿ ಕ್ಷೀಣವಾಗಿ ಕೇಳಿಸುತ್ತಿತ್ತು. ಸುರೇಶ ಪ್ರವೇಶಿಸಿದ್ದ ಹೊಸ ಲೋಕದಲ್ಲಿ ಹಲವಾರು ಜನರು ನಿಂತುಕೊಂಡು, ಬೇರೆ ಬೇರೆ ಶೃತಿಗಳಲ್ಲಿ ಹಾಡುತ್ತಿದ್ದರು. ಹಿಂದೆಲ್ಲೋ ಅವರೆಲ್ಲರನ್ನೂ ಎಲ್ಲೋ ನೋಡಿದ ಅನುಭವವಾಯಿತಾದರೂ, ಯಾರನ್ನೂ ಬಿಡಿ ಬಿಡಿಯಾಗಿ ಗುರುತಿಸಲಾಗಲಿಲ್ಲ. ನೋಡು ನೋಡುತ್ತಿದ್ದಂತೆಯೇ, ಅವರ ಬಿಂಬಗಳು ಸುರೇಶನ ಕಣ್ಣ ಮುಂದೇ ಎದ್ದೆದ್ದು ಕುಣಿಯತೊಡಗಿದವು. ಸುರೇಶನ ಕಣ್ಣಿಗೆ ಕತ್ತಲು ಕವಿದಂತಾಗಿ, ತಲೆ ತಿರುಗತೊಡಗಿತು .ದುರ್ಗಾ ರಾಗದ ಸ್ವರಗಳು, ಸೌತ್ ಎಂಡ್ ಸರ್ಕಲ್ಲಿನಲ್ಲಿ ಸದಾ ಹೂವು ಮಾರುತ್ತಾ ನಿಂತಿರುತ್ತಿದ್ದ ಪುಟ್ಟ ಬಾಲೆಯ ಧ್ವನಿ, ಕುಕ್ಕರಿನ ಶಿಳ್ಳೆಯ ಸದ್ದು, ಪಕ್ಕದಮನೆಯ ಮುಸ್ಲಿಮ್ ಆಂಟಿಯ ಕೀರಲು ಧ್ವನಿ, ಗೂರ್ಖಾನ "ಸಲಾಂ ಸಾಬ್" ಎಂಬ ಗಡಸು ಧ್ವನಿ, ಹಳೆಯ ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಬಿ.ಎಂ.ಟಿ.ಸಿ ಬಸ್ಸಿನ ಕರ್ಕಶ ಹಾರ್ನ್, ಎಲ್ಲವೂ ಸೇರಿ ಕಲಸುಮೇಲೋಗರವಾಗಿ, ಅವನ ಕಿವಿಯಲ್ಲಿ ಅನುರಣಿಸತೊಡಗಿದವು. ಆ ಯಾತನೆಯನ್ನು ತಾಳಲಾಗದೇ ಸುರೇಶ ಕಿವಿಮುಚ್ಚಿಕೊಂಡ. ಸುರೇಶ ಅನುಭವಿಸುತ್ತಿದ್ದ ಯಾತನೆಗಳಿಗೆಲ್ಲಾ ಸಾಕ್ಷಿಯೆಂಬಂತೆ ಅವನ ಕೆಂಪು ಹೊದಿಕೆಯ ಸಂಗೀತ ಪುಸ್ತಕ ಅನಾಥವಾಗಿ ಬಿದ್ದುಕೊಂಡು ಮನೆಯ ಸೂರನ್ನೇ ದಿಟ್ಟಿಸುತ್ತಿತ್ತು. ಭಾಗ್ವತರ ಹಾರ್ಮೋನಿಯಮ್ಮು ಈಗ ಮೌನದ ಮೊರೆ ಹೊಕ್ಕಿತ್ತು. ಇವ್ಯಾವುದರ ಪರಿವೆಯೇ ಇಲ್ಲದಂತೆ ತಾಳಮಾತ್ರಿಕೆ ಮಾತ್ರಾ ಒಂದೇ ತಾಳದಲ್ಲಿ ಮಿಡಿಯುತ್ತಾ, ಸುರೇಶನ ಶೋಕಗೀತೆಗೆ ಸಾಥ್ ನೀಡುತಿತ್ತು. Posted by Unknown at 12:46 PM 14 comments Saturday, February 16, 2008 ಗಣೇಶನ ಮದುವೆ ಮಂಗಳವಾರ ಬೆಳಿಗ್ಗೆ ಬೇಗ ಎದ್ದು, ಇನ್ನೂ ಮುಖ ತೊಳೆಯುತ್ತಿರುವಂತೆಯೇ, ನನ್ನವಳು "ರೀ, ಇವತ್ತಿನ ಪೇಪರ್ ನೋಡಿದ್ರಾ, ಗಣೇಶನ ಮದುವೆ ಆಯಿತಂತೆ ಕಣ್ರೀ" ಎಂದು ಹಾಲ್ ನಿಂದಲೇ ಕೂಗಿಕೊಂಡಳು. ಇನ್ನೂ ನಿದ್ದೆಕಣ್ಣಲ್ಲಿದ್ದ ನಾನು ಅವಳ ಕೂಗಿಗೆ ಬೆಚ್ಚಿಬಿದ್ದೆ. ಸುಮಾರಾಗಿ ಯಾವ ವಿಷಯಕ್ಕೂ ಎಕ್ಸೈಟ್ ಆಗದವಳು ಇವತ್ತು ಇಷ್ಟು ದೊಡ್ಡ ದನಿಯಲ್ಲಿ ಕೂಗಿಕೊಂಡಿದ್ದನ್ನು ಕೇಳಿ ಏನೋ ವಿಶೇಷವಿರಬೇಕೆಂದು ಅನ್ನಿಸಿತು. "ಯಾವ ಗಣೇಶನೇ ? ಅದೇ ಪಾರ್ವತಿ-ಈಶ್ವರನ ಮಗನಿಗಾ? ಕಲಿಗಾಲ ಕಣೇ.. ಏನು ಬೇಕಾದರೂ ಆಗಬಹುದು" ಎಂದು ಇದ್ದಲಿಂದಲೇ ಕೂಗಿದೆ. "ನಿಮ್ಮ ತಲೆ.... ನಮ್ಮ ಗೋಲ್ಡನ್ ಸ್ಟಾರ್ ಗಣೇಶನಿಗೆ ಮದುವೆಯಾಯ್ತಂತೆ ಕಣ್ರೀ. ಪೇಪರ್ನಲ್ಲಿ ಫೋಟೋ ಹಾಕಿದ್ದಾರೆ ನೋಡಿ" ಮಾರುತ್ತರ ಬಂತು. "ಓ ಅವನಿಗಾ?" ನಾನು ಸಮಾಧಾನ ಪಟ್ಟೆ. ನನ್ನವಳು ಗೋಲ್ಡನ್ ಸ್ಟಾರ್ ಗಣೇಶನ ಕಟ್ಟಾ ಅಭಿಮಾನಿ. ಕಾಮೆಡಿ ಟೈಮ್ ಕಾಲದಿಂದಲೂ ಅವನನ್ನು ಮೆಚ್ಚಿದವಳು. ನನಗೆ ಇಷ್ಟವಿಲ್ಲದಿದ್ದರೂ,ದುಂಬಾಲು ಬಿದ್ದು, ಮುಂಗಾರು ಮಳೆ, ಹುಡುಗಾಟ, ಚೆಲ್ಲಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಎಲ್ಲಾ ಚಿತ್ರಗಳಿಗೂ ನನ್ನನ್ನು ಕರೆದುಕೊಂಡು ಹೋಗಿ ನನಗೆ ಚಿತ್ರಹಿಂಸೆ ಕೊಟ್ಟಿದ್ದಳು . ಸಿನೆಮಾ ನೋಡುವಾಗ ಮಾತ್ರ ಚಕಾರವೆತ್ತಲೂ ಬಿಡದವಳು, ಸಿನೆಮಾ ಮುಗಿದ ನಂತರ ಎರಡು ದಿನಗಳಗಟ್ಟಲೇ ಗಣೇಶನ ಗುಣಗಾನ ಮಾಡಿ ನನ್ನ ಹೊಟ್ಟೆ ಉರಿಸಿದ್ದಳು. ಈಗ ನೋಡಿದರೆ ಅವನ ಮದುವೆ ವಿಷಯ ಗೊತ್ತಾಗಿದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ಮೂಡ್ ಹಾಳುಮಾಡುವುದರಲ್ಲಿ ಸಂಶಯವೇ ಇಲ್ಲ ಅನ್ನಿಸಿ ಹಾಲ್ ಕಡೆ ನಡೆದೆ. ದಿನಾ ಬೆಳಿಗ್ಗೆ ನನಗಿಂತಲೂ ಬೇಗ ಎದ್ದು, ಒಬ್ಬಳಿಗೇ ಸ್ಟ್ರಾಂಗ್ ಕಾಫಿ ಮಾಡಿಕೊಂಡು, ಹಾಲ್ ನಲ್ಲಿದ್ದ ಸೋಫಾದ ಮೇಲೆ ಪವಡಿಸಿಕೊಂಡು ಪೇಪರ್ ಓದುವುದು ಅವಳ ದಿನಚರಿ. ಪೇಪರು ನನ್ನ ಕೈಗೆ ಬಂದರೆ ಅದು ಅರ್ಧ ತಾಸು ಕದಲುವುದಿಲ್ಲವೆನ್ನುವುದು ಅವಳ ಕಂಪ್ಲೇಂಟು. ಅದಕ್ಕೇ ನನಗಿಂತಲೂ ಮುಂಚೆ ಅವಳು ಪೇಪರ್ ಓದಿ ಬಿಡಬೇಕು. ಇವತ್ತೂ ಅಷ್ಟೇ.. ಕಾಲು ಮೇಲೆ ಕಾಲು ಹಾಕಿಕೊಂಡು, ಮುಖಪುಟದಲ್ಲಿ ಹಾಕಿದ್ದ ಗಣೇಶನ ಮದುವೆ ಫೋಟೋವನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳನ್ನು ನೋಡಿ ನಗು ಬಂತು. ಆದರೂ ಸಾವರಿಸಿಕೊಂಡು "ಅಲ್ವೇ, ನಾನು ಈಗ ತಾನೆ ಎದ್ದಿದೀನಿ. ಆಫೀಸಿಗೆ ಬೇಗ ಹೋಗ್ಬೇಕು. ಕಾಫಿ ಮಾಡಿ ತಂದುಕೊಡೋದು ಬಿಟ್ಟು, ಅದ್ಯಾವುದೋ ಸುಟ್ಟ ಬದನೇಕಾಯಿ ಮುಖದ ಹೀರೋನ ಮದುವೆಯಾಯ್ತು ಅಂತ ಬಾಯಿಬಿಟ್ಟುಕೊಂಡು ಫೋಟೋ ನೋಡ್ತಾ ಇದ್ದೀಯಲ್ಲೇ ? ಗಂಡನ ಮೇಲೆ ಸ್ವಲ್ಪಾನೂ ಕಾಳಜಿಯಿಲ್ವಾ ನಿನಗೆ?" ಎಂದು ರೇಗಿಸಿದೆ. "ನಿಮಗೆ ಕಾಫಿ ತಾನೇ ಬೇಕು ? ತಂದು ಕೊಡ್ತಿನಿ ಇರಿ. ನನ್ನ ಗಣೇಶಂಗೆ ಮಾತ್ರಾ ಏನೂ ಹೇಳ್ಬೇಡಿ ನೀವು" ಎಂದವಳೇ, ಪೇಪರನ್ನು ನನ್ನ ಕೈಯಲ್ಲಿ ತುರುಕಿ, ದಡಕ್ಕನೇ ಎದ್ದು ಅಡುಗೆ ಮನೆಗೆ ಕಡೆಗೆ ನಡೆದಳು. ನಿಧಾನವಾಗಿ ಸೋಫಾದ ಮೇಲೆ ಕುಳಿತು ಪೇಪರ್ ತೆಗೆದವನಿಗೆ ರಾಚಿದ್ದು ದಂಪತಿಗಳ ನಗುಮುಖದ ಚಿತ್ರ. ಜೋಡಿ ಚೆನ್ನಾಗಿದೆ ಅನ್ನಿಸಿತು. "ಜೋಡಿ ಸಕ್ಕತ್ತಾಗಿ ಇದೆಯಲ್ಲೇ ?" ಇವಳಿಗೆ ಕೇಳಿಸುವಂತೆ ದೊಡ್ಡದಾಗಿ ಹೇಳಿದೆ. "ಕರ್ಮ, ಕರ್ಮ.. ಅಲ್ರೀ, ಹೋಗಿ ಹೋಗಿ, ಅದ್ಯಾವುದೋ ಡೈವೋರ್ಸ್ ಆದ ಹುಡುಗಿಯನ್ನು ಮದುವೆ ಆಗಿದ್ದಾನಲ್ರೀ ಅವನು ? ಇಡೀ ಕರ್ನಾಟಕದಲ್ಲಿ ಮತ್ಯಾರೂ ಹುಡುಗಿಯರು ಸಿಕ್ಕಲಿಲ್ವಾ ಅವನಿಗೆ? ಕರ್ಮಕಾಂಡ.." ಅಂತ ಉರಿದುಕೊಂಡಳು. ನಂಗ್ಯಾಕೋ ಅವಳನ್ನು ಇನ್ನೂ ಸ್ವಲ್ಪ ರೇಗಿಸೋಣ ಅನ್ನಿಸಿತು. ಮೆಲ್ಲಗೆ ಅಡುಗೆ ಮನೆಯ ಕಡೆ ಪಾದ ಬೆಳೆಸಿದೆ. "ಅಲ್ವೇ, ಅವನು ಪ್ರೀತಿ ಮಾಡಿ ಮದುವೆಯಾಗಿದ್ದಂತೆ ಕಣೇ, ಅದರಲ್ಲೇನು ತಪ್ಪು? ಪ್ರೀತಿ ಮಾಡೋವ್ರು ಚಂದನೆಲ್ಲಾ ನೋಡ್ತಾರಾ? ಅದಲ್ದೇ ಇವಳು ನೋಡೋಕ್ಕೆ ಚೆನ್ನಾಗೇ ಇದ್ದಾಳಲ್ಲೇ." ನಾನು ಮೆಲ್ಲಗೆ ಉಸುರಿದೆ. ಫಿಲ್ಟರನಲ್ಲಿದ್ದ ಡಿಕಾಕ್ಷನ್ ಗೆ ಸ್ವಲ್ಪ ಜಾಸ್ತಿನೇ ಹಾಲು,ಸಕ್ಕರೆ ಬೆರೆಸಿ ನನ್ನ ಕೈಗಿತ್ತವಳೇ "ಅವಳೆಂತಾ ಚೆನ್ನಾಗಿದಾಳೆ ? ನಮ್ಮ ಗಣೇಶಂಗೆ ಒಂದು ಚೂರೂ ಸರಿಯಾದ ಜೋಡಿಯಲ್ಲ. ಸ್ವಲ್ಪ ವಯಸ್ಸಾದ ಹಾಗೆ ಬೇರೆ ಕಾಣ್ಸ್ತಾಳೆ." ಎಂದು ಮೂಗು ಮುರಿದಳು. "ನನಗಂತೂ ಅವಳು ಫೋಟೋದಲ್ಲಿ ನಿನಗಿಂತಾ ಚೆನ್ನಾಗಿ ಕಾಣ್ತಾಳೆ ಕಣೇ" ನಾನು ಬ್ರಹ್ಮಾಸ್ತ್ರ ಪ್ರಯೋಗಿಸಿದೆ. "ಹ್ಮ್.. ಕಾಣ್ತಾರೆ ಕಾಣ್ತಾರೆ.. ನನ್ನ ಬಿಟ್ಟು ಉಳಿದವರೆಲ್ಲರೂ ನಿಮಗೆ ಚೆನ್ನಾಗೇ ಕಾಣ್ತಾರೆ. ನಾನು ಇಲ್ಲಿ ಇಡೀ ದಿನ ಮನೆಲ್ಲಿದ್ದು ಕತ್ತೆ ತರ ಚಾಕರಿ ಮಾಡ್ತಿನಿ. ನೀವು ಕಂಡ ಕಂಡ ಸುಂದರಿಯರ ಹಿಂದೆ ಜೊಲ್ಲು ಸುರಿಸಿಕೊಂಡು ಹೋಗಿ. ಈ ಕರ್ಮಕ್ಕೆ ಮದುವೆ ಬೇರೆ ಕೇಡು ನಿಮಗೆ" ಅವಳ ಕಂದು ಕಂಗಳಲ್ಲಿ ಕಿಡಿ ಹಾರಿತು. "ಅಲ್ವೇ, ಅವಳ ಜಡೆ ತುಂಬಾ ಉದ್ದ ಇದೆ ಕಣೇ. ನೋಡು.." ನಾನು ಪೇಪರ್ ಅವಳ ಮುಂದೆ ಹಿಡಿದೆ. ಜಡೆ ನನ್ನವಳ ವೀಕ್ ಪಾಯಿಂಟು. ಮದುವೆಯಾದಾಗಲೇ ಸ್ವಲ್ಪ ಗಿಡ್ಡ ಇದ್ದ ಕೂದಲು, ಬರ್ತಾ ಬರ್ತಾ ಉದುರಿ, ಈಗ ಮೋಟುಜಡೆಯಾಗಿತ್ತು. ಅದಕ್ಕೆ ಇವಳು ಮಾಡಿದ ಆರೈಕೆ ಒಂದೆರಡಲ್ಲ. ೧೫ ದಿನಕ್ಕೊಮ್ಮೆ ಶಾಂಪೂ ಬದಲಿಸುತ್ತಿದ್ದಳು. ಹಾಗೆಲ್ಲಾ ಪದೇ ಪದೇ ಶಾಂಪೂ ಬದಲಿಸಬಾರದೆಂದು ಸಲಹೆ ಕೊಟ್ಟ ನನಗೆ "ನೀವು ಸುಮ್ಮನಿರಿ, ನಿಮಗೇನೂ ಗೊತ್ತಾಗಲ್ಲ" ಎಂದು ಗದರಿ ಬಾಯಿಮುಚ್ಚಿಸಿದ್ದಳು. "ಅವಳು ಹಾಕ್ಕೊಂಡಿದ್ದು ಚೌರಿ ಕಣ್ರೀ, ನೀವು ಅದನೆಲ್ಲಾ ಎಲ್ಲಿ ಸರಿಯಾಗಿ ನೋಡ್ತೀರಾ? ಈಗ ಇಲ್ಲಿಗೆ ಬಂದಿದ್ದು ಯಾಕೆ? ನನ್ನ ರೇಗಿಸೋಕಾ? ನನಗೆ ಬೇಕಾದಷ್ಟು ಕೆಲಸವಿದೆ. ನೀವು ಹಾಲ್ ಗೆ ಹೋಗಿ ಕುಕ್ಕರುಬಡೀರಿ, ಹೋಗಿ" ಎಂದು ನನ್ನನ್ನು ಹೊರದಬ್ಬಲು ಪ್ರಯತ್ನಿಸಿದಳು. ನಾನು ಕದಲಲಿಲ್ಲ. ಹಾಗೆ ನೋಡಿದರೆ, ಸಿಟ್ಟು ಬಂದಾಗ ನನ್ನವಳು ತುಂಬಾನೇ ಮೋಹಕವಾಗಿ ಕಾಣುತ್ತಾಳೆ. ಅದಕ್ಕೆಂದೇ ನಾನು ಆಗಾಗ ಅವಳನ್ನು ರೇಗಿಸುವುದುಂಟು. ಮೆಲ್ಲಗೆ ಕಾಫಿ ಕುಡಿಯುತ್ತಾ ಅವಳ ಮುಖವನ್ನೇ ದಿಟ್ಟಿಸಿದೆ. ನನ್ನ ಅತ್ತೆಯ ಮೂರು ಹೆಣ್ಣು ಮಕ್ಕಳಲ್ಲಿ, ನನ್ನವಳೇ ಸ್ವಲ್ಪ ಕಪ್ಪು. ಆದರೂ ಮುಖದಲ್ಲೇನೋ ಅಪೂರ್ವ ಕಳೆ. ಸ್ವಲ್ಪ ಅಗಲವಾದ ಹಣೆ, ಆಳವಾದ ಸಣ್ಣ ಕಣ್ಣುಗಳು, ತಿದ್ದಿ ತೀಡಿದಂತಿದ್ದ ಹುಬ್ಬುಗಳು, ನೀಳವಾದ ಮೂಗು, ತುಂಬುಗೆನ್ನೆ. ನಕ್ಕಾಗ ಎರಡೂ ಕೆನ್ನೆಗಳಲ್ಲಿ ಗುಳಿ ಬಿದ್ದು ಅಪೂರ್ವವಾದ ಸೌಂದರ್ಯವನ್ನು ಹೊರಸೂಸುತ್ತಿದ್ದವು. ಅವಳ ಕಂದು ಕಣ್ಣುಗಳಲ್ಲಿ ಅದೇನೋ ಕಾಂತಿ ಅಯಸ್ಕಾಂತದಂತೆ ಸೆಳೆಯುತ್ತಿತ್ತು. ಇವತ್ತು ಹಣೆಗೆ ಒವಲ್ ಶೇಪಿನ ಪುಟ್ಟ ಸ್ಟಿಕರ್ರೊಂದನ್ನು ಅಂಟಿಸಿಕೊಂಡಿದ್ದಳು. ಉಪ್ಪಿಟ್ಟಿಗೆಂದು ಮೆಣಸಿನಕಾಯಿ ಹೆಚ್ಚುತ್ತಿದ್ದವಳು, ಆಗಾಗ ಹಣೆಯ ಮೇಲೆ ಮೂಡಿದ್ದ ಬೆವರು ಹನಿಗಳನ್ನು ಕೈಯಿಂದ ಒರೆಸಿಕೊಳ್ಳುತ್ತಿದ್ದಳು. ಅವಳ ಪುಟ್ಟ ಚಲನವಲನಗಳಲ್ಲೂ ಅದೇನೋ ಮೋಹಕತೆ. ನಾನಿನ್ನೂ ಅಲ್ಲೇ ನಿಂತು ಅವಳನ್ನೇ ನೋಡುತ್ತಿರುವುದು ಅವಳಿಗೆ ಸ್ವಲ್ಪ ಮುಜುಗರ ತಂದಿರಬೇಕು. ಅವಳಿಗೆ ಸ್ವಲ್ಪ ಜಾಸ್ತಿಯೇ ನಾಚಿಕೆ ಸ್ವಭಾವ. ಮದುವೆಯಾಗಿ ವರ್ಷವಾದರೂ, ಪಬ್ಲಿಕ್ ಜಾಗಗಳಲ್ಲಿ ನಾನು ಕೈ ಹಿಡಿದುಕೊಂಡರೆ ನಾಚಿ ತಟ್ಟನೇ ಕೈ ಹಿಂದೆ ತೆಗೆದುಕೊಳ್ಳುತ್ತಿದ್ದಳು. "ನನ್ನ ಮುಖದ ಮೇಲೆ ಕೋತಿ ಕುಣಿತಾ ಇದೆಯೇನ್ರೀ? ಹಾಲ್ ಗೆ ಹೋಗಿ ಆ ದರಿದ್ರ ಪೇಪರನ್ನೇ ಓದಿ ಹೋಗಿ" ಎಂದು ಬೆನ್ನಿನ ಮೇಲೊಂದು ಗುದ್ದಿ ನನ್ನನ್ನು ಬಲವಂತವಾಗಿ ಹೊರದಬ್ಬಿದಳು. ಹೈಸ್ಕೂಲಿನಲ್ಲಿ ನನ್ನವಳು ಖೋಖೋ ಚೆನ್ನಾಗಿ ಆಡುತ್ತಿದ್ದಳಂತೆ. ಈಗಲೂ ನನ್ನನ್ನು ಅಟ್ಟಿಸಿಕೊಂಡು ಬಂದು ಬೆನ್ನಿಗೆ ಗುದ್ದುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ ಅವಳು. ೧೦ ನಿಮಿಷದಲ್ಲಿ ಉಪ್ಪಿಟ್ಟು ರೆಡಿ. ನನಗೆ ಉಪ್ಪಿಟ್ಟೆಂದರೆ ಸ್ವಲ್ಪ ಅಲರ್ಜಿ. ಆದರೆ ಇವಳಿಗೆ ಮಾತ್ರ ಉಪ್ಪಿಟ್ಟೆಂದರೆ ಪಂಚಪ್ರಾಣ. ನಿಧಾನವಾಗಿ ಉಪ್ಪಿಟ್ಟು ತಿನ್ನುತ್ತಿದ್ದವಳನ್ನು ಮತ್ತೆ ಕೆಣಕಿದೆ. "ಅಲ್ವೇ ? ಗಣೇಶ ನಿನ್ನ ಮದುವೆ ಆಗಲಿಲ್ಲ ಅಂತಾ ಬೇಜಾರಾ ನಿಂಗೆ?". ಈ ಸಲ ಅವಳು ರೆಡಿಯಾಗಿದ್ದಳು. "ಏನು ಮಾಡೋದು? ನಿಮ್ಮನಾಗಲೇ ಮದುವೆಯಾಗಿ ಬಿಟ್ಟಿದ್ದೀನಲ್ಲಾ? ಅದಲ್ದೇ ಗಣೇಶನ ಮದುವೆ ಬೇರೆ ಆಗಿ ಹೋಯ್ತು. ಇಲ್ಲದೇ ಹೋದರೆ ಟ್ರೈ ಮಾಡಬಹುದಿತ್ತು. ಛೇ.." ಎಂದು ಮುಖ ಊದಿಸಿದಳು. "ದುನಿಯಾ ಪಿಚ್ಚರಲ್ಲಿ ಲೂಸ್ ಮಾದನ ಪಾರ್ಟ್ ಮಾಡಿದ್ನಲ್ಲಾ. ಅವನೂ ಈಗ ಹೀರೋ ಅಂತೆ ಕಣೇ. ಅವನಿಗಿನ್ನೂ ಮದ್ವೆ ಆಗಿಲ್ಲ ನೋಡು. ಟ್ರೈ ಮಾಡ್ತೀಯಾ?" ನಾನು ಬಿಡಲು ತಯಾರಿರಲಿಲ್ಲ. "ಥೂ, ಅವನೂ ಒಂದು ಹೀರೋನೇನ್ರಿ ? ಮಂಗನ ತರ ಇದಾನೆ ನೋಡೋಕೆ. ಎಂತೆಂಥವ್ರೆಲ್ಲಾ ಹೀರೋ ಆಗ್ತಾರಪ್ಪಾ ಈ ಕಾಲದಲ್ಲಿ" ಎಂದು ನಿಡುಸುಯ್ದಳು. "ನಿನ್ನ ಗಣೇಶ ಇನ್ನೇನು ಸುರಸುಂದರಾಂಗನಾ? ಕುರುಚಲು ಗಡ್ಡ, ಕೆದರಿದ ಕೂದಲು, ದೇವ್ರಿಗೇ ಪ್ರೀತಿ ಅವನ ಅವತಾರ. ಒಂದು ನಾಲ್ಕು ಹಾಡು ಹಾಡಿ, ಎರಡು ಹೀರೋಯಿನ್ ಜತೆ ಕುಣಿದುಬಿಟ್ಟು, ನಾಲ್ಕು ವಿಲ್ಲನ್ನುಗಳಿಗೆ ಹೊಡೆದುಬಿಟ್ರೆ ಸಾಕು, ತಲೆ ಮೇಲೆ ಕುಳಿಸ್ಕೊತೀರಾ ನೀವುಗಳು. ಬುದ್ಧಿನೇ ಇಲ್ಲ ಹೆಣ್ಣಮಕ್ಕಳಿಗೆ" ನಾನಂದೆ. ನಾನು ಹೆಣ್ಣು ಜಾತಿಗೇ ಬೈಯ್ದಿದ್ದು ನನ್ನವಳಿಗೆ ಬಹಳ ಕೋಪ ತರಿಸಿತು ಅನ್ನಿಸುತ್ತೆ. ಮುಖ ಕೆಂಪಗೆ ಮಾಡಿಕೊಂಡು "ರೀ, ನೀವು ನನ್ನ ಗಣೇಶಂಗೆ ಮಾತ್ರಾ ಏನೂ ಹೇಳಬೇಡಿ. ಅವನು ಎಷ್ಟು ಒಳ್ಳೆಯವನು ಗೊತ್ತಾ? ಮುಂಗಾರು ಮಳೆ ಹಂಡ್ರೆಡ್ ಡೇಸ್ ಸಮಾರಂಭದಲ್ಲಿ ನನ್ನ ಹತ್ತಿರ ಎಷ್ಟು ಚೆನ್ನಾಗಿ ಮಾತಾಡ್ದಾ ಗೊತ್ತಾ? ಎಷ್ಟು ಪ್ರೀತಿ, ಎಷ್ಟು ವಿನಯ. ನೋಡೋಕ್ಕೂ ಸ್ಮಾರ್ಟ್ ಆಗಿ ಇದಾನೆ. ನಿಮಗಿಂತಾ ಸಾವಿರ ಪಾಲು ಬೆಟರ್ರು" ಅಂದವಳೇ ಉಪ್ಪಿಟ್ಟಿನ ಬಟ್ಟಲನ್ನು ಅಲ್ಲಿಯೇ ಬಿಟ್ಟು ಸಿಟ್ಟು ಮಾಡಿಕೊಂಡು ಒಳಗೆ ನಡೆದಳು. ನನಗೆ ಉಪ್ಪಿಟ್ಟು ಗಂಟಲಲ್ಲೇ ಸಿಕ್ಕಿಕೊಂಡ ಹಾಗಾಯಿತು. "ನಿನ್ನಂತಾ ಮದುವೆಯಾದ ಹುಡುಗಿಯರಿಗೇ ಈ ತರ ಹುಚ್ಚುತನ ಇದ್ರೆ, ಇನ್ನು ಮದುವೆಯಾಗದೇ ಇರೋ ಹೆಣ್ಣುಮಕ್ಕಳಿಗೆ ಇನ್ನೆಷ್ಟು ಕ್ರೇಜ್ ಇರಬೇಡಾ ? ನಿಮ್ಮಂತೋರ ಕಾಟ ತಡೆಲಿಕ್ಕಾಗದೇ, ಅವ್ನು ರಾತ್ರೋ ರಾತ್ರಿ ಮದ್ವೆಯಾಗಿದ್ದು" ಎಂದು ಕೂಗಿ ನಾನು ಬಟ್ಟಲನ್ನು ಕುಕ್ಕಿದೆ. ನನ್ನ ಅಹಂಗೂ ಸ್ವಲ್ಪ ಪೆಟ್ಟು ಬಿದ್ದಿತ್ತು. ಸ್ನಾನ ಮುಗಿಸಿಕೊಂಡು ಬಂದರೂ, ಇವಳು ತಣ್ಣಗಾದ ಲಕ್ಷಣ ಕಾಣಲಿಲ್ಲ. ಮುಗುಮ್ಮಾಗಿ ಸೋಫ಼ಾದ ಮೇಲೆ ಕುಳಿತುಕೊಂಡೇ ಇದ್ದಳು. ಮತ್ತೆ ಮಾತಾಡಿಸಿದರೇ ಸಿಟ್ಟು ಉಲ್ಬಣಿಸಬಹುದೆಂಬ ಕಾರಣಕ್ಕೆ ನಾನು ಸುಮ್ಮನಿದ್ದೆ. ನನ್ನವಳಿಗೆ ಸಿಟ್ಟು ಬರುವುದು ತುಂಬಾನೇ ಕಮ್ಮಿ. ಬಂದರೂ ಬಹಳ ಬೇಗ ಇಳಿದುಹೋಗುತ್ತಿತ್ತು. ನಾನು ನೋಡಿದವರೆಲ್ಲರಲ್ಲೂ ಅತ್ಯಂತ ಸಹನಾಮೂರ್ತಿ ಅಂದರೆ ಇವಳೇ. ಇವತ್ಯಾಕೋ ನಾನೇ ಅವಳನ್ನು ಕೆಣಕಿ ಸಿಟ್ಟು ಬರಿಸಿದ್ದೆ. ಆಫೀಸಿಗೆ ಹೊರಟು ನಿಂತರೂ ಅವಳ ಮೂಡ್ ಸರಿಯಾದ ಹಾಗೆ ಕಾಣಲಿಲ್ಲ. ದಿನವೂ ಬಾಗಿಲಿನ ತನಕ ಬಂದು ಬೈ ಹೇಳಿ ಹೋಗುತ್ತಿದ್ದವಳು, ಇವತ್ತು ಪತ್ತೆಯೇ ಇಲ್ಲ. ಲಂಚ್ ಬ್ರೇಕಿನಲ್ಲಿ ಮನೆಗೆ ಎರಡು ಸಲ ಕಾಲ್ ಮಾಡಿದೆ. ಅರ್ಧಕ್ಕೇ ಕಟ್ ಮಾಡಿದಳು. ಇದ್ಯಾಕೋ ಸ್ವಲ್ಪ ಸೀರಿಯಸ್ ಆದ ಲಕ್ಷಣ ಕಾಣಿಸಿ, ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯಿತು. ಸಂಜೆ, ಸ್ವಲ್ಪ ಮುಂಚೆಯೇ ಮನೆಗೆ ಹೋದೆ. ಬಾಗಿಲು ತೆಗೆದವಳೇ, ಮುಖ ಕೂಡ ನೋಡದೇ ವಾಪಸ್ ಹೋದಳು. ನಾನು ಕೈಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಬಿಸಿ ಕಾಫಿ ರೆಡಿಯಾಗಿತ್ತು. ಅವಳಿಗಾಗಿ ಹುಡುಕಿದೆ. ಬೆಡ್ ರೂಮಿನಲ್ಲಿ ಯಾವುದೋ ಕಾದಂಬರಿ ಹಿಡಿದು ಕುಳಿತಿದ್ದಳು. ಮೆಲ್ಲಗೆ ಅವಳ ಬಳಿ ಹೋಗಿ ಕುಳಿತು ಅವಳ ಮುಖವನ್ನೇ ನೋಡತೊಡಗಿದೆ. ತಿರುಗಿ, ಕಣ್ಣು ಹುಬ್ಬಿನಲ್ಲೇ ಒಮ್ಮೆ "ಏನು?" ಎಂದು ಪ್ರಶ್ನಿಸಿದವಳು, ಮತ್ತೆ ಕಾದಂಬರಿಯಲ್ಲಿ ಮುಖ ಹುದುಗಿಸಿದಳು. ಕಾದಂಬರಿಯನ್ನು ಅವಳ ಕೈಯಿಂದ ಕಸಿದು, ಮುಖವನ್ನು ನನ್ನ ಬಳಿ ತಿರುಗಿಸಿಕೊಂಡು "ನಿನ್ನ ಕಾಫಿ ಆಯ್ತಾ?" ಎಂದು ಕೇಳಿದೆ. ತಲೆ ಅಲ್ಲಾಡಿಸಿದಳು. "ನಿನ್ನ ಹತ್ತಿರ ಮಾತಾಡಬೇಕು. ಬಾ" ಎಂದು ಅವಳನ್ನು ಹಾಲಿಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕುಳಿಸಿದೆ. "ನಿನಗೊಂದು ವಿಷಯ ಹೇಳಬೇಕು. ನೀನು ತಮಾಷೆ ಮಾಡಬಾರದು" ಎಂದೆ. ಅವಳೇನೂ ಮಾತಾಡಲಿಲ್ಲ. ಆದರೇ ಅವಳ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು. "ನಾನು ಎಂಜಿನೀಯರಿಂಗ್ ಮಾಡುವಾಗ, ನನಗೆ ಅನು ಪ್ರಭಾಕರ್ ಮೇಲೆ ಸಿಕ್ಕಾಪಟ್ಟೆ ಕ್ರಷ್ ಇತ್ತು, ಗೊತ್ತಾ? ಅವಳ ಎಲ್ಲಾ ಪಿಕ್ಚರ್ ಗಳನ್ನೆಲ್ಲಾ ತಪ್ಪದೇ ನೋಡುತ್ತಿದ್ದೆ. ನನ್ನ ರೂಮಿನಲ್ಲೂ ಅವಳ ಫೋಟೊಗಳನ್ನು ಅಂಟಿಸಿಕೊಂಡಿದ್ದೆ. ನಿಂಗೆ ಸಮೀರ್ ಗೊತ್ತಲ್ಲಾ, ಅವನು ಬಂದು ಅನುಪ್ರಭಾಕರಳ ಮದುವೆಯಾದ ಸುದ್ದಿ ಹೇಳಿದಾಗ ನನಗೆ ಎಷ್ಟು ಬೇಜಾರಾಗಿತ್ತು ಗೊತ್ತಾ? ತಿಂಗಳುಗಟ್ಟಲೇ ಶೇವ್ ಮಾಡದೇ ಗಡ್ಡ ಬಿಟ್ಟುಕೊಂಡು ದೇವದಾಸ್ ತರಹ ಅಲೆದುಕೊಂಡಿದ್ದೆ" ಎಂದು ಹೇಳಿ ಬೆಡ್ ರೂಮಿನಲ್ಲಿಟ್ಟಿದ್ದ ನನ್ನ ಹಳೇ ಡೈರಿಯೊಂದನ್ನು ತೆಗೆದುಕೊಂಡು ಬಂದೆ. ಅದರಲ್ಲಿ ಅನು ಪ್ರಭಾಕರ್, ಅವಳ ಗಂಡನ ಜೊತೆಯಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋ ಒಂದನ್ನು ನಾನು ಪತ್ರಿಕೆಯೊಂದರಿಂದ ಕಟ್ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ನನ್ನವಳಿಗೆ ತೋರಿಸಿ, ಮುಗ್ಧನಂತೆ ಮುಖ ಮಾಡಿ "ಈಗ ಹೇಳು, ಈ ಫೋಟೋದಲ್ಲಿರುವವನಿಗಿಂತಾ ನಾನು ಚೆನ್ನಾಗಿಲ್ವಾ? ಎಂದು ಕೇಳಿದೆ. ನನ್ನವಳ ಮುಖದಲ್ಲೆಲ್ಲಾ ಈಗ ನಗುವಿನ ಹೊನಲು. "ನಿಮ್ಮ ತಲೆ" ಎಂದವಳೇ ತಲೆಯ ಮೇಲೊಂದು ಮೊಟಕಿ, ಫೋಟೋವನ್ನು ಕಸಿದುಕೊಂಡು ಮತ್ತೆ ಡೈರಿಯೊಳಕ್ಕೆ ತುರುಕಿ, " ನೀವು ಅನು ಪ್ರಭಾಕರನನ್ನು ಮದುವೆಯಾಗ್ದೇ ಇದ್ದಿದ್ದು ಒಳ್ಳೆದೇ ಆಯಿತು ಬಿಡಿ. ಇಲ್ಲಾಂದ್ರೇ ನಿಮಗೆ ನನ್ನಷ್ಟು ಒಳ್ಳೆ ಹೆಂಡತಿ ಸಿಗುತ್ತಿರಲಿಲ್ಲ ಅಲ್ವಾ?" ಎಂದಂದು ಕಣ್ಣು ಮಿಟುಕಿಸಿದಳು. ನಾನು ಗೋಣು ಆಡಿಸಿದೆ. "ರೀ... ಒಗ್ಗರಣೆ ಹಾಕಿದ ಅವಲಕ್ಕಿ ಮಾಡಿದರೆ ತಿಂತೀರಾ ?" ಎಂದು ಸಂಧಾನ ಬೆಳೆಸಿದಳು. ಅವಳಿಗೆ ಗೊತ್ತು, ನನಗೆ ಒಗ್ಗರಣೆ ಹಾಕಿದ ಅವಲಕ್ಕಿ ಅಂದರೆ ಬಹಳ ಪ್ರೀತಿಯೆಂದು. ಅವಳು ಯಾವಾಗ ಮಾಡ್ತೀನೇಂದ್ರೂ ನಾನು ಅದನ್ನು ನಿರಾಕರಿಸುತ್ತಿರಲಿಲ್ಲ. ರಾತ್ರಿ ಊಟ ಮಾಡುತ್ತಿರುವಾಗ ಏನೋ ನೆನಪಾದಂತೆ "ಅಲ್ಲಾರೀ, ಅದು ಹೇಗೆ ನಿಮಗೆ ಅನು ಪ್ರಭಾಕರ ಹಿಡಿಸಿದ್ಳು ?ಈಗ ಅದ್ಯಾವುದೋ ಝೀ ಟೀವಿ ಸೀರಿಯಲ್ಲಲ್ಲಿ ಬರ್ತಾಳಲ್ಲಾ. ನನಗಂತೂ ಅವಳು ಸಿಕ್ಕಾಪಟ್ಟೆ ಓವರ್ ಆಕ್ಟಿಂಗ್ ಮಾಡ್ತಾಳೆ ಅನ್ನಿಸುತಪ್ಪಾ. ನೋಡೋಕೆ ಬೇರೆ ಗಂಡುಬೀರಿ ತರ ಕಾಣ್ತಾಳೆ" ಎಂದಳು. ನಾನು ತಣ್ಣಗೆ "ನಿನ್ನ ಗಣೇಶ್ ಮತ್ತಿನ್ಯೇನು? ಅವಂದೂ ಓವರ್ ಆಕ್ಟಿಂಗ್ ಅಲ್ವಾ ?ಎಂದೆ. ನನ್ನನ್ನೊಮ್ಮೆ ದುರುಗುಟ್ಟಿದವಳು ಮರುಕ್ಷಣದಲ್ಲೇ ನಾನು ನಗುತ್ತಿದ್ದದ್ದನ್ನು ನೋಡಿ, ತಾನೂ ನಕ್ಕಳು. ಪುಣ್ಕಕ್ಕೆ ನಾನು ಅವಳ ಎದುರು ಕುಳಿತಿದ್ದೆ. ಅವಳ ಪಕ್ಕದಲ್ಲೇನಾದ್ರೂ ಕುಳಿತಿದ್ದರೆ ಬೆನ್ನ ಮೇಲೆ ಒಂದು ಗುದ್ದು ಖಂಡಿತ ಬೀಳುತ್ತಿತ್ತು. "ರೀ..,ಕೇಳೋಕೆ ಮರೆತೋಯ್ತು. ಮುಂದಿನ ತಿಂಗಳು ಗಣೇಶ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಕೊತಾನಂತೆ.ನಾವೂ ಹೋಗೋಣ್ವಾ ?" ಎಂದು ಮುಖ ನೋಡಿದಳು. ನಾನು ನಿರುತ್ತರನಾದೆ. Posted by Unknown at 9:53 AM 15 comments Thursday, February 14, 2008 ಮೆಜೆಸ್ಟಿಕ್ ಮಾಲಕಂಸ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಮಾಲಕಂಸ್ ರಾಗ ಬಹಳ ಪ್ರಚಲಿತ ರಾಗ. ಭಕ್ತಿ ಮತ್ತು ಗಂಭೀರ ರಸ ಪ್ರಧಾನವಾದ ಈ ರಾಗ, ರಾತ್ರಿ ರಾಗಗಳಲ್ಲಿ ಅತ್ಯಂತ ಜನಪ್ರಿಯ ರಾಗ ಕೂಡ. ಇದೇ ಸ್ವರ ಪ್ರಸ್ಥಾನ ಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ ಹಿಂದೋಳ ಎಂದೂ ಕರೆಯುತ್ತಾರೆ. ಇದೂ ಕೂಡ ಆ ಪದ್ಧತಿಯಲ್ಲಿ ಅತ್ಯಂತ ಜನಪ್ರಿಯ ರಾಗ. ಯೂಟ್ಯೂಬಲ್ಲಿ ಹುಡುಕುತ್ತಿರುವಾಗ ಮಾಲಕಂಸ್ ರಾಗದ ಮೇಲೆ ಆಧಾರವಾದ ಎರಡು ಒಳ್ಳೆಯ ಚಿತ್ರಗೀತೆಗಳ ಕ್ಲಿಪ್ ಗಳು ಸಿಕ್ಕವು. ನನಗೆ ಇವು ತುಂಬಾ ಹಿಡಿಸಿದವು. ಬಹುಷ ಎಲ್ಲರಿಗೂ ಇಷ್ಟವಾಗಬಹುದು. ಮೊದಲನೆಯದು ತೆಲುಗಿನ ಪ್ರಸಿದ್ಧ ಚಿತ್ರ "ಶಂಕರಾಭರಣಂ" ಚಿತ್ರದ ಹಾಡು. ತ್ಯಾಗರಾಜರ ಪ್ರಸಿದ್ಧ ಕೀರ್ತನೆಯಾದ "ಸಾಮಜ ವರಗಮನಾ", ಎಸ್. ಜಾನಕಿ ಮತ್ತು ಎಸ್.ಪಿ.ಬಿ ಯವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹಿಂದೋಳ ರಾಗದ ಅತ್ಯುತ್ತಮ ನಿದರ್ಶನ ಈ ಹಾಡಿನಲ್ಲಿ ಇದೆ ಅಂದರೆ ತಪ್ಪಾಗಲಾರದು. ಎಷ್ಟು ಸಲ ಕೇಳಿದರೂ, ಮತ್ತೆ ಮತ್ತೆ ಕೇಳುವಂತೆ ಮಾಡುವ ಮೋಡಿ ಈ ಹಾಡಿನಲ್ಲಿದೆ. ಎರಡನೆಯದು, ಹಿಂದಿ ಚಿತ್ರವೊಂದರ ಹಾಡು. ಹಾಡಿನಲ್ಲಿ ಇಬ್ಬರು ಕಥಕ ನೃತ್ಯಗಾತಿಯವರ ನಡುವೆ ಸ್ಪರ್ಧೆ ನಡೆಯುತ್ತಿದೆ. ಇದು ಯಾವ ಚಿತ್ರ, ಮತ್ತು ಹಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೇ ಹಾಡಿನ ಸಾಹಿತ್ಯ ಮಾತ್ರ ಮನಸೆಳೆಯುತ್ತದೆ. ಮಾಲಕಂಸ್ ರಾಗದ ಪಕಡ್ ಮತ್ತು ರಾಗದ ಸೂಕ್ತ ಪರಿಚಯವನ್ನು ಈ ಹಾಡು ಅತ್ಯಂತ ಸಮರ್ಪಕವಾಗಿ ಮಾಡಿಕೊಡುತ್ತದೆ.ಹಾಡು ಕೇಳುತ್ತಿದಂತೆಯೇ, ಮಾಲಕಂಸ್ ರಾಗದ ಮಾಧುರ್ಯ ನಿಮ್ಮನ್ನು ಮಾಯಾಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ. ನಿಮಗೆ ಹಾಡುಗಳು ಇಷ್ಟವಾದರೆ ನಾನು ಧನ್ಯ. Posted by Unknown at 8:55 AM 7 comments Saturday, February 9, 2008 ಉಡುಪಿ ಬಸ್ಸೂ....ನಿಂಬೂ ಪೆಪ್ಪರ್ಮಿಂಟೂ ಸುಶ್ಮಾ ಮತ್ತು ಸುಶಾಂತರಿಗೆ ಟಾಟಾ ಮಾಡಿ, ಚಿಕ್ಕಪ್ಪನ ಸ್ಕೂಟರನ್ನೇರಿ ಪುಟ್ಟ, ಬೆಳಗಾವಿ ಬಸ್ ಸ್ಟಾಂಡ್ ಗೆ ಬಂದಾಗ ಇನ್ನೂ ಬೆಳಿಗ್ಗೆ ೫.೪೫. ಬೆಳಗ್ಗಿನ ಇಬ್ಬನಿಗೆ, ಕೆಂಪು ಸ್ವೆಟರ್ ಮೇಲೆಲ್ಲಾ ಆದ ಸಣ್ಣನೆಯ ನೀರಿನ ಪದರವನ್ನು ಒರೆಸಿಕೊಂಡಾಗ ಪುಟ್ಟನಿಗೆ ಚಡ್ಡಿ ಜೇಬಿನಲ್ಲಿ ಕರ್ಚೀಫ಼್ ಇಲ್ಲದಿರುವುದು ಗಮನಕ್ಕೆ ಬಂತು. ಅಲ್ಲಲ್ಲೇ ಹಾಕಿದ್ದ ಕುರ್ಚಿ ಸಾಲುಗಳ ಮೇಲೂ, ಪಕ್ಕದಲ್ಲೂ, ಮೂಟೆಗಳಂತೆ ಉರುಳಿಕೊಂಡು ಗಟ್ಟಿಯಾಗಿ ಹೊದ್ದು ಮಲಗಿದ್ದ ಜನಗಳ ನಡುವೆಯೇ ಹೇಗೋ ದಾರಿಮಾಡಿಕೊಂಡು ಬಸ್ ಸ್ಟಾಂಡ್ ನ ಮುಂಭಾಗಕ್ಕೆ ಪುಟ್ಟ ಚಿಕ್ಕಪ್ಪನ ಕೈ ಹಿಡಿದು ಬಂದಾಗ ೬ ಗಂಟೆಯ ಬೆಳಗಾಂ-ಉಡುಪಿ ಬಸ್ಸು ತಯಾರಾಗಿತ್ತು. ಅಚ್ಚ ಕೆಂಪು ಮೈಯುದ್ದಕ್ಕೂ ಕ.ರಾ.ಸಾ.ಸಂ ಎಂದು ಕಪ್ಪು ಬಣ್ಣದಲ್ಲಿ ಬಳಿದಿದ್ದ ಬಸ್ಸು, ಒಂಟಿ ಸಲಗದ ತರಹ ಮೂಲೆಯಲ್ಲಿ ರಾಜನ ತರಹ ನಿಂತಿತ್ತು. ಪುಟ್ಟನನ್ನು ಬಸ್ ಹತ್ತಿಸಿ, ಬಾಗಿಲಲ್ಲೇ ನಿಂತಿದ್ದ ಕಂಡಕ್ಟರನ ಹತ್ತಿರ ಟಿಕೆಟ್ ಮಾಡಿಸಿ, ಪುಟ್ಟನ ಮೇಲೆ ಸ್ವಲ್ಪ ನಿಗಾ ಇಡುವಂತೆಯೂ, ಅವನನ್ನು ಮುಂಡಗೋಡಲ್ಲಿ ಸರಿಯಾಗಿ ಇಳಿಸಿ ಅಂತಲೂ ಹೇಳಿ, ಚಿಕ್ಕಪ್ಪ ತನ್ನ ಕೈಯಲ್ಲಿದ್ದ ಡೆಕ್ಕನ್ ಹೆರ್‍ಆಲ್ಡ್ ಪತ್ರಿಕೆಯನ್ನೂ, ದಾರಿಖರ್ಚಿಗೆಂದು ೫ ರುಪಾಯಿ ನೋಟೊಂದನ್ನು ಪುಟ್ಟನ ಕೈಯಲ್ಲಿ ತುರುಕಿ,ಯಾವುದೋ ಗಡಿಬಿಡಿಯಲ್ಲಿ ಇರುವಂತೆ ಹೋಗಿಬಿಟ್ಟರು. ಪುಟ್ಟ ಅದರಿಂದೇನು ವಿಚಲಿತನಾದಂತೆ ಕಾಣಲಿಲ್ಲ. ಅವನ ಮನಸ್ಸು ಆಗಲೇ ಚಿಕ್ಕಪ್ಪ ಕೊಟ್ಟ ೫ ರುಪಾಯಿಯನ್ನು ಹೇಗೆ ಖರ್ಚು ಮಾಡಬೇಕೆಂದು ಗಿರಕಿ ಹೊಡೆಯುತ್ತಲೇ ಇತ್ತು. ನೋಟನ್ನು ಕಿಸೆಗೆ ತುರುಕಿ,ಸಾಧ್ಯವಾದಷ್ಟು ಮುಂದೆ ಹೋಗಿ, ಒಳ್ಳೆ ಸೀಟೊಂದನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಟಾನಗೊಂಡುಬಿಟ್ಟ. ಈಗೊಂದು ವಾರದ ಹಿಂದೆ, ಚಿಕ್ಕಪ್ಪ ಸಂಸಾರ ಸಮೇತ ಊರಿಗೆ ಬಂದವರು ವಾಪಸ್ ಹೋಗುವಾಗ ಪುಟ್ಟನನ್ನೂ ತಮ್ಮ ಜೊತೆ ಕರೆದುಕೊಂಡು ಬಂದಿದ್ದರು. ಚಿಕ್ಕಪ್ಪನ ಮಕ್ಕಳಾದ ಸುಶ್ಮಾ ಮತ್ತು ಸುಶಾಂತರ ಜೊತೆ ಆಡಲು ಸಿಗುತ್ತದೆ ಎಂಬ ಕಾರಣಕ್ಕೆ ಪುಟ್ಟನೂ ಕೂಡ ಅಮ್ಮನ ನಿರಾಕರಣೆಯ ಮಧ್ಯೆಯೂ, ಹಠ ಮಾಡಿ ಅವರ ಜೊತೆ ಹೊರಟು ಬಂದಿದ್ದ.ಇಡೀ ವಾರ ಹೇಗೆ ಕಳೆಯಿತೆಂದೇ ಪುಟ್ಟನಿಗೆ ಗೊತ್ತಾಗಿರಲಿಲ್ಲ. ಟೀವಿಯಲ್ಲಿ ಬರುತ್ತಿದ್ದ ನಾನಾ ಚಾನೆಲ್ಲಗಳು, ಚಿಕ್ಕಪ್ಪ ಕರೆದುಕೊಂಡು ಹೋಗಿದ್ದ ಥೀಮ್ ಪಾರ್ಕ್, ಸುಶಾಂತ್ ಮತ್ತು ಸುಶ್ಮಾರ ಜೊತೆ ಚಪ್ಪರಿಸಿಕೊಂಡು ತಿಂದಿದ್ದ ಪಿಸ್ತಾ ಐಸ್ ಕ್ರೀಮ್, ಪಕ್ಕದ ಮನೆಯ ಪುಟ್ಟ ಪಮೆರಿಯನ್ ನಾಯಿ, ಇವೆಲ್ಲಗಳ ಮಧ್ಯೆ ಪುಟ್ಟನಿಗೆ ಮನೆ, ಅಮ್ಮ ಮತ್ತು ಅಪ್ಪ ಮರೆತೇ ಹೋಗಿದ್ದರು. ನಿನ್ನೆ ಅಮ್ಮನ ಹತ್ತಿರ ಫೋನಿನಲ್ಲಿ ಮಾತಾಡಿದ ಬಳಿಕ ಚಿಕ್ಕಪ್ಪ, ಚಿಕ್ಕಮ್ಮನ ಹತ್ತಿರ ಪುಟ್ಟನನ್ನು ನಾಳೆ ಬೆಳಿಗ್ಗೆಯ ಬಸ್ಸಿಗೆ ಕಳುಹಿಸಿಕೊಡುವುದಾಗಿ ಹೇಳುತ್ತಿದ್ದಾಗ, ಪುಟ್ಟನಿಗೆ ಒಂಥರಾ ಬೇಸರವಾಗಿತ್ತು. ಇನ್ನೊಂದು ನಾಲ್ಕು ದಿನ ಅಲ್ಲೇ ಉಳಿಯಬೇಕೆಂದು ಮನಸ್ಸಿದ್ದರೂ, ವಿಧಿ ಇಲ್ಲದೆ ಪುಟ್ಟ ಭಾರದ ಹೆಜ್ಜೆಗಳನಿಟ್ಟು ಚಿಕ್ಕಪ್ಪನ ಜೊತೆ ಹೊರಟು ಬಂದಿದ್ದ. ನಿಧಾನಕ್ಕೆ ಬಸ್ಸಿನಲ್ಲಿ ಜನ ತುಂಬಲಾರಂಬಿಸಿದರು. ಪುಟ್ಟ ಕುಳಿತ ಸೀಟ್ ನಿಂದ ಡ್ರೈವರ್ ಸೀಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಪುಟ್ಟನಿಗೆ ಮುಂಚಿನಿಂದಲೂ ಬಸ್ ಡ್ರೈವರ್ ಅಂದರೆ ಅದೇನೋ ಖುಶಿ. ಇಡಿ ಬಸ್ಸು ತನ್ನದೆಂಬಂತೆ ಗತ್ತಿನಲ್ಲಿ ಕುಳಿತು, ಆಗಾಗ ಹಾರ್ನ್ ಮಾಡುತ್ತಾ, ದೊಡ್ಡನೆಯ ಸ್ಟೀರಿಂಗ್ ವೀಲ್ ತಿರುಗಿಸುತ್ತಾ ಬಸ್ಸು ಚಲಿಸುತ್ತಿದ್ದ ಡ್ರೈವರಂದಿರು ಪುಟ್ಟನಿಗೆ ಸಿನೆಮಾದಲ್ಲಿ ತೋರಿಸುವ ಹೀರೊಗಳಿಗಿಂತ ಗ್ರೇಟ್ ಅನ್ನಿಸಿಬಿಡುತ್ತಿತ್ತು. ಹಿಂದೊಮ್ಮೆ ಮನೆಗೆ ಬಂದಿದ್ದ ಯಾರೋ ನೆಂಟರು, ಪುಟ್ಟನ ಚುರುಕುತನವನ್ನು ನೋಡಿದ ಬಳಿಕ, ಅಪ್ಪನ ಹತ್ತಿರ ನಿಮ್ಮ ಮಗ ಮುಂದೆ ಡಾಕ್ಟರ್ರೋ, ಎಂಜಿನೀಯರ್ರೋ ಆಗುತ್ತಾನೆ ಎಂದಾಗ ಪುಟ್ಟ ತಟ್ಟನೆ "ಇಲ್ಲಾ, ನಾನು ದೊಡ್ಡವನಾದ ಮೇಲೆ ಬಸ್ ಡ್ರೈವರ್ ಆಗುತ್ತೇನೆ" ಎಂದು ಹೇಳಿ ಅಪ್ಪನ ಕೋಪಕ್ಕೆ ತುತ್ತಾಗಿದ್ದ. ನೆಂಟರು ಹೋದ ಮೇಲೆ ಅಪ್ಪ, ಪುಟ್ಟನಿಗೆ ಚೆನ್ನಾಗಿ ಬೈದ ಮೇಲೆ, ಬಹಿರಂಗವಾಗಿ ಡ್ರೈವರ್ ಆಗುತ್ತೇನೆ ಎಂದು ಹೇಳುವುದನ್ನು ಪುಟ್ಟ ನಿಲ್ಲಿಸಿದ್ದ. ಆದರೂ ಅವನ ಸುಪ್ತಮನಸ್ಸಿನಲ್ಲಿ, ದೊಡ್ಡವನಾದ ಮೇಲೆ ಆದರೆ ಬಸ್ಸಿನ ಅಥವ ಲಾರಿಯ ಡ್ರೈವರ್ರೇ ಆಗಬೇಕು ಎಂದಿತ್ತು. ಬಸ್ಸಿನಲ್ಲಿ ಯಾವುದೇ ಖಾಲಿ ಸೀಟ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಂಡಕ್ಟರ್ ಸೀಟಿ ಊದಿದ ತಕ್ಷಣವೇ, ಮಿಲಿಟರಿ ಮೀಸೆ ಹೊತ್ತಿದ್ದ ಡ್ರೈವರು ಬಸ್ಸನ್ನು ಚಾಲೂ ಮಾಡಿ ಪುಟ್ಟ ಬೆರಗುಗಣ್ಣಿಂದ ಗಮನಿಸುತ್ತಿದ್ದಂತೆಯೇ ಗೇರ್ ಬದಲಿಸಿ, ನಿಮಿಷಾರ್ಧದಲ್ಲಿ ಬಸ್ ಸ್ಟಾಂಡ್ ನ ಹೊರಬಿದ್ದಿದ್ದ. "ಹೊಟೇಲ್ ವಂದನಾ ಪ್ಯಾಲೇಸ್" ನ್ನು ದಾಟಿ ಬಸ್ಸು ಪಿ.ಬಿ ರೋಡಿಗೆ ಬಂದು ಸೇರಿದ್ದರೂ, ಪುಟ್ಟನ ಕಣ್ಣುಗಳು ಡ್ರೈವರನನ್ನು ಬಿಟ್ಟು ಕದಲಿರಲಿಲ್ಲ. ಕಾಲಿಗೆ ತೊಟ್ಟಿದ್ದ ಚಪ್ಪಲಿಯನ್ನು ಪಕ್ಕದಲ್ಲಿ ಬಿಚ್ಚಿಟ್ಟು, ಸೀಟಿನ ಮೇಲೆ ಸಣ್ಣ ಮೆತ್ತೆಯೊಂದನ್ನು ಹಾಸಿಕೊಂಡು,ಆಗಾಗ ಕಿಡಕಿಯಿಂದ ಆಚೀಚೆ ನೋಡುತ್ತಾ ನಿರಾಳವಾಗಿ ಬಸ್ಸು ಚಲಿಸುತ್ತಿದ್ದ ಡ್ರೈವರನ ಠೀವಿಯನ್ನು ನೋಡುತ್ತಿದ್ದ ಪುಟ್ಟನಿಗೆ ಅವನೊಬ್ಬ "ಎಕ್ಸ್ ಪರ್ಟ್ ಡ್ರೈವರ್" ಅನ್ನಿಸಿದ ಮೇಲೇ ಅವನ ಕಣ್ಣುಗಳು ಡ್ರೈವರ್ ಸೀಟ್ ನಿಂದ ಕದಲಿದ್ದು. ಬಸ್ಸು ಒಂದೇ ವೇಗದಲ್ಲಿ ಹೆದ್ದಾರಿಯನ್ನು ನುಂಗುವಂತೆ ಓಡುತ್ತಿತ್ತು. ಮುಂದಿನ ಸೀಟಿನವರ್ಯಾರೋ ಕಿಡಕಿ ಬಾಗಿಲನ್ನು ಸ್ವಲ್ಪ ಸರಿಸಿದ್ದರಿಂದ,ತಣ್ಣನೆಯ ಗಾಳಿ ಪುಟ್ಟನೆಯ ಮುಖಕ್ಕೆ ರಾಚುತ್ತಿತ್ತು. ಚಿಕ್ಕಪ್ಪ ಕೊಟ್ಟು ಹೋಗಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯನ್ನು ತಿರುವಿ ಹಾಕಲು ಪುಟ್ಟ ಪ್ರಯತ್ನಿಸಿದ. ಈ ವರ್ಷ ತಾನೇ ಇಂಗ್ಲೀಷ್ ಕಲಿಯಲು ಶುರು ಮಾಡಿದ್ದ ಪುಟ್ಟನಿಗೆ ಅಷ್ಟೊಂದೇನೂ ಇಂಗ್ಲೀಷ್ ಶಬ್ದಗಳು ಗೊತ್ತಿರಲಿಲ್ಲ. ಆದರೂ ಮುಖ್ಯ ಪತ್ರಿಕೆಯ ಜೊತೆಯಿದ್ದ ಬಣ್ಣ ಬಣ್ಣದ ಸಾಪ್ತಾಹಿಕದಲ್ಲಿ, ಮಕ್ಕಳು ಬಿಡಿಸಿದ್ದ ಚಿತ್ರಗಳನ್ನು ನೋಡುತ್ತಾ ಕುಳಿತವನಿಗೆ, ಅದರ ಎರಡನೇ ಪುಟದಲ್ಲಿ, ಅಂಕೆಗಳಿಂದ ಗೆರೆ ಎಳೆದು ಪೂರ್ತಿಮಾಡಬೇಕಾದ ಚಿತ್ರವೊಂದು ಕಂಡಿತು. ಆದರೆ ಗೆರೆ ಎಳೆಯಲು ತನ್ನ ಹತ್ತಿರ ಪೆನ್ಸಿಲ್ ಅಥವ ಪೆನ್ ಇಲ್ಲದಿರುವುದು ಅನುಭವಕ್ಕೆ ಬಂದ ಕೂಡಲೇ, ಸುಮ್ಮನೇ ಮನಸ್ಸಿನಲ್ಲಿ ಆ ಚಿತ್ರದಲ್ಲಿ ಯಾವ ಪ್ರಾಣಿಯಿರಬಹುದೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕುಳಿತ. ಇಂಗ್ಲೀಷ್ ಪತ್ರಿಕೆಯನ್ನು ಹಿಡಿದುಕೊಂಡು ಯೋಚಿಸುತ್ತಿದ್ದನ್ನು ಪುಟ್ಟನನ್ನು ನೋಡಿ, ಅವನ ಪಕ್ಕದಲ್ಲಿ ಕುಳಿತ ಮಧ್ಯವಯಸ್ಸಿನ ಹಿರಿಯರು ಕುತೂಹಲದಿಂದ ಪ್ರಶ್ನಿಸಲು ಶುರು ಮಾಡಿದರು. "ಊರು ಯಾವುದು ? ಇಲ್ಲಿ ಯಾಕೆ ಬಂದಿದ್ದೆ ? ಎಷ್ಟನೇಯ ತರಗತಿ ? ಇಂಗ್ಲೀಷ್ ಮೀಡಿಯಮ್ಮಾ ಅಥವಾ ಕನ್ನಡ ಮೀಡಿಯಮ್ಮಾ ? " ಅಂತೆಲ್ಲಾ ಕೇಳಲು ಶುರು ಮಾಡುತ್ತಿದ್ದಂತೆಯೇ ಪುಟ್ಟನಿಗೆ ಯಾಕೋ ಸ್ವಲ್ಪ ಕಿರಿಕಿರಿಯಾದಂತನಿಸಿ ಅವರ ಪ್ರಶ್ನೆಗಳಿಗೆಲ್ಲಾ ಸರಿಯಾಗಿ ಉತ್ತರಿಸಲಿಲ್ಲ. ಪುಟ್ಟನ ಅನ್ಯಮಸ್ಕತೆಯನ್ನು ಗಮನಿಸಿದ ಹಿರಿಯರು ಮುಂದೆ ಪ್ರಶ್ನೆ ಕೇಳಲು ಹೋಗಲಿಲ್ಲ. ಪುಟ್ಟನಿಗೆ ಮಾತ್ರ ಪತ್ರಿಕೆಯಲ್ಲಿದ್ದ ಚಿತ್ರ ಬಾತುಕೋಳಿಯದ್ದೋ ಅಥವ ನಾಯಿಮರಿಯದ್ದೋ ಎಂದು ಕೊನೆಗೂ ನಿರ್ಧರಿಸಲಾಗದೇ, ರೇಗಿ ಹೋಗಿ ಪತ್ರಿಕೆಯನ್ನು ಮುಚ್ಚಿಬಿಟ್ಟ. ಬಸ್ಸು ಈಗ ಹಿರೇಬಾಗೇವಾಡಿಯ ದೊಡ್ಡ ಏರನ್ನು ಹತ್ತಿಳಿದು, ಸುಸ್ತಾದಂತೆ ನಿಧಾನವಾಗಿ ಮತ್ತೆ ಸಮತಟ್ಟಾದ ನೆಲದಲ್ಲಿ ಓಡಲು ಶುರು ಮಾಡಿತ್ತು. ಹೆದ್ದಾರಿಯನ್ನು ವರ್ಷಾನುಗಟ್ಟನೇ ಕಾಲದಿಂದ ಕಾಯುತ್ತಿವೆಯೆನೋ ಅನ್ನಿಸುವಂತೆ ದೈತ್ಯಾಕಾರದ ಹುಣಿಸೇಮರಗಳು ದಾರಿಯ ಎರಡು ಪಕ್ಕದಲ್ಲೂ ಸಾಲಾಗಿ ನಿಂತಿದ್ದವು. ನಿಧಾನಕ್ಕೆ ಮೇಲೇರುತ್ತಿದ್ದ ಸೂರ್ಯ, ಪುಟ್ಟನನ್ನು ನೋಡಲು ನಾಚಿಕೆಯಾಗುತ್ತಿದೆಯೋ ಎಂಬಂತೆ ಆಗಾಗ ಈ ಮರಗಳ ಮಧ್ಯದಿಂದ ಇಣುಕಿ, ಪುಟ್ಟನ ಮುಖದ ಮೇಲೆ ಲಾಸ್ಯವಾಡುತ್ತಿದ್ದ. ಬಸ್ ಡ್ರೈವರ್, ನಿಮಿಷಕೊಮ್ಮೆ ವೇಗ ನಿಯಂತ್ರಕರಂತೆ ಅಡ್ಡಡ್ಡವಾಗುತ್ತಿದ್ದ ಲಾರಿಗಳನ್ನು ಅತ್ಯುತ್ಸಾಹದಿಂದ ಹಿಂದಿಕ್ಕುವುದರಲ್ಲಿ ಮಗ್ನನಾಗಿದ್ದ. ಪ್ರತಿಯೊಂದು ಲಾರಿಯನ್ನು ಹಿಂದೆ ಹಾಕುತ್ತಿದಂತೆಯೂ, ಪುಟ್ಟನಿಗೆ ತಾನೇ ಆ ಲಾರಿಯನ್ನು ಹಿಂದೆ ಹಾಕಿದಂತೆ ಸಂಭ್ರಮವಾಗುತ್ತಿತ್ತು. ಪಕ್ಕದಲ್ಲಿ ಕುಳಿತಿದ್ದ ಹಿರಿಯರು, ಆಗಲೇ ಬಾಯಿ ಕಳೆದುಕೊಂಡು ನಿದ್ದೆ ಮಾಡಲು ಶುರು ಮಾಡಿಬಿಟ್ಟಿದ್ದರು. ಪುಟ್ಟ ಒಮ್ಮೆ ಬಸ್ಸಿನ ಸುತ್ತೆಲ್ಲಾ ಕಣ್ಣಾಡಿಸಿದ. ಎಲ್ಲರೂ ಕಣ್ಣುಮುಚ್ಚಿಕೊಂಡು ಸಣ್ಣ ಗೊರಕೆ ಹೊಡೆಯುತ್ತಲೋ, ಅಥವಾ ಅರೆನಿದ್ರೆಯಲ್ಲಿಯೋ ಇದ್ದಂತೆ ಕಂಡಿತು. ಒಂದು ಕ್ಷಣ, ಪುಟ್ಟನಿಗೆ ಇಡೀ ಬಸ್ಸಿನಲ್ಲಿ ತಾನೊಬ್ಬನೇ ಎಚ್ಚರವಾಗಿ ಇದ್ದಿರುವಂತೆ ಅನುಭವವಾಗಿ ವಿಲಕ್ಷಣ ಭಯವಾಯಿತು. ತಕ್ಷಣವೇ ಸಾವರಿಸಿಕೊಂಡು, ಡ್ರೈವರ್ ನನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತ. ಸ್ವಲ್ಪ ಸಮಯದಲ್ಲೇ ಬಸ್ಸು ಕಿತ್ತೂರಿನ ಬಸ್ ಸ್ಟಾಂಡ್ ನಲ್ಲಿ "ಯು" ಟರ್ನ್ ಹೊಡೆದು, "ಉಪಹಾರ ದರ್ಶಿನಿ"ಯ ಮುಂದೆ ನಿಂತಿತು. ಕಂಡಕ್ಟರು "೨೦ ನಿಮಿಷ ಟೈಮ್ ಇದೆ ನೋಡ್ರಿ, ತಿಂಡಿ ಮಾಡೋರು ಮಾಡಿಬನ್ನಿ" ಎಂದು ದೊಡ್ಡ ದನಿಯಲ್ಲಿ ಕೂಗಿ ಡ್ರೈವರ್ ನ ಜೊತೆ ಇಳಿದುಹೋದ. ನಿದ್ರೆಯಲ್ಲಿದ್ದ ಪ್ರಯಾಣಿಕರೆಲ್ಲರೂ, ಆಕಳಿಸುತ್ತಾ, ಒಬ್ಬೊಬ್ಬರಾಗಿ ಇಳಿದುಹೋದರು. ಪುಟ್ಟನಿಗೆ ಯಾಕೋ ಕೆಳಕ್ಕಿಳಿವ ಧೈರ್ಯವಾಗಲಿಲ್ಲ. ಚಿಕ್ಕಮ್ಮ ಬೆಳಿಗ್ಗೆ ಬೆಳಿಗ್ಗೆ ಮಾಡಿಕೊಟ್ಟಿದ್ದ ೩ ಇಡ್ಲಿಗಳು ಅವನ ಹೊಟ್ಟೆಯಲ್ಲಿನ್ನೂ ಭದ್ರವಾಗಿ ಕುಳಿತಿದ್ದವು. ಹಾಗೇ ಬಸ್ ಸ್ಟಾಂಡ್ ಗೋಡೆಗಳ ಮೇಲೆಲ್ಲಾ ಕಲ್ಲಿನಲ್ಲಿ ಕೆತ್ತಿದ್ದ "ದ.ಸಂ.ಸ" ನ ಘೋಷಣೆಗಳನ್ನೂ, ಸವದತ್ತಿ ಎಲ್ಲಮ್ಮನ ಜಾತ್ರೆಯ ಪೋಸ್ಟರಗಳನ್ನೇ ನೋಡುತ್ತಾ ಕುಳಿತ. ನಿಧಾನವಾಗಿ ಪ್ರಯಾಣಿಕರೆಲ್ಲರೂ ಉಪಹಾರ ಮುಗಿಸಿಕೊಂಡು ಸ್ವಸ್ಥಾನ ಸೇರುತ್ತಿದಂತೆಯೇ, ಬಸ್ಸು ಕಿತ್ತೂರನ್ನು ಹಿಂದೆ ಹಾಕಿ ಓಡಲಾರಂಭಿಸಿತು. ಪುಟ್ಟ ಮತ್ತೊಮ್ಮೆ ಬಸ್ಸಿನ ತುಂಬೆಲ್ಲಾ ಕಣ್ಣಾಡಿಸಿದ. ಬಹಳಷ್ಟು ಪ್ರಯಾಣಿಕರು ಎಚ್ಚರದಿಂದಿದ್ದು, ಮೊದಲಿಗಿಂತ ಉತ್ಸಾಹದಲ್ಲಿದ್ದ ಹಾಗೆ ಕಂಡರು. ವಿಶಾಲವಾದ ಬಯಲನ್ನು ಸೀಳಿಕೊಂಡು ನಿಂತಿದ್ದ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಪುಟ್ಟನಿಗೆ ಆಕರ್ಷಣೀಯವಾಗಿದ್ದೇನೂ ಕಾಣದೇ ಸ್ವಲ್ಪ ಬೇಜಾರಗತೊಡಗಿತು. ಹಾಗೆ ಕಿಟಕಿಯನ್ನು ಸ್ವಲ್ಪ ತೆರೆದು, ತಣ್ಣಗೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಕಣ್ಣು ಮುಚ್ಚಿದವನಿಗೆ, ಸಣ್ಣ ಜೊಂಪು ಆವರಿಸಿಕೊಂಡಿದ್ದು ಗೊತ್ತಾಗಲೇ ಇಲ್ಲ. ಜನರ ಗಲಾಟೆ ಕೇಳಿ ತಟ್ಟನೇ ಎಚ್ಚರವಾದವನಿಗೆ ಮೊದಲು ಕಂಡಿದ್ದು, "ಧಾರವಾಡ ಬಸ್ ನಿಲ್ದಾಣ" ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಬೋರ್ಡು. ಬಸ್ಸಿನಲ್ಲಿ ಇದ್ದ ಬಹಳಷ್ಟು ಪ್ರಯಾಣಿಕರು ಆಗಲೇ ಇಳಿದುಹೋಗಿ, ಅವರ ಜಾಗಕ್ಕೆ ಬೇರೆಯವರು ಬಂದಿದ್ದರು. ಪುಟ್ಟನ ಪಕ್ಕಕ್ಕೆ ಈಗ ಯಾವುದೋ ಹೆಂಗಸು ತನ್ನ ಪುಟ್ಟ ಮಗುವಿನ ಜೊತೆ ಬಂದು ಕುಳಿತಿದ್ದಳು. ಅವಳ ಗಂಡ ಕಿಟಕಿ ಪಕ್ಕದಲ್ಲಿ ನಿಂತು ಅವಳಿಗೆ ಏನೇನೋ ಸೂಚನೆಗಳನ್ನು ನೀಡುತ್ತಿದ್ದ. ಪುಟ್ಟನಿಗೆ ಸ್ವಲ್ಪ ಬಾಯಾರಿಕೆ ಆದಂತೆ ಅನಿಸಿತು. ನಿಲ್ದಾಣದ ತುಂಬೆಲ್ಲಾ, ಅವನದೇ ವಯಸ್ಸಿನ ಹುಡುಗರು ಸಣ್ಣ ಬುಟ್ಟಿಗಳಲ್ಲಿ ಶೇಂಗಾ, ಕಡಲೇಕಾಳು,ಹೆಚ್ಚಿದ್ದ ಸವತೇಕಾಯಿ ಮುಂತಾದವುಗಳನ್ನು ಇಟ್ಟುಕೊಂಡು ಓಂದು ಬಸ್ಸಿನಿಂದ ಇನ್ನೊಂದು ಬಸ್ಸಿಗೆ ಅಲೆಯುತ್ತಿದ್ದರು. ಅವರನ್ನು ನೋಡಿ, ಪುಟ್ಟನಿಗೆ ಒಂದು ಸಲ ಅಯ್ಯೋ ಅನಿಸಿತು. ಹಾಗೇ, ಸರಿಯಾಗಿ ಓದದಿದ್ದಾಗ ಅಮ್ಮ "ಓದದೇ ಹೋದರೆ, ಮುಂದೆ ಕೆಲಸ ಸಿಗದೇ, ನೀನೂ ಅವರ ತರಾನೇ ಬಸ್ಸಿಂದ ಬಸ್ಸಿಗೆ ಅಲೆಯಬೇಕಾಗುತ್ತೆ ನೋಡು" ಎಂದು ಹೆದರಿಸಿದ್ದು ನೆನಪಾಯ್ತು. ಇಷ್ಟರಲ್ಲಿ ಪುಟ್ಟನಿಗೆ ಜೇಬಿನಲ್ಲಿದ್ದ ೫ ರುಪಾಯಿಯ ನೋಟು ಜ್ನಾಪಕಕ್ಕೆ ಬಂತು.ಅದನ್ನು ಹೇಗೆ ಬಳಸಬೇಕೆಂದು ಅವನಿನ್ನೂ ನಿರ್ಧರಿಸಿರಲಿಲ್ಲ. ಬಸ್ಸಿನ ಪಕ್ಕದಲ್ಲೇ ಇದ್ದ ಅಂಗಡಿಯೊಂದರಲ್ಲಿ, ಉದ್ದ ಬಾಟಲಿಗಳಲ್ಲಿ ಶೇಖರಿಸಿಟ್ಟಿದ್ದ ಬಣ್ಣ ಬಣ್ಣದ ಶರಬತ್ತನ್ನು ಕುಡಿಯಬೇಕೆಂದು ಅವನಿಗೆ ತೀವ್ರವಾಗಿ ಅನಿಸಿದರೂ, ಯಾಕೋ ಕೆಳಗಿಳಿದು ಹೋಗಿ ಬರಲು ಹಿಂಜರಿಕೆಯಾಯಿತು.ಬಸ್ಸಿನೊಳಗೇ ಹತ್ತಿ ಮಾರುತ್ತಿದ್ದ ಹುಡುಗನ ಬಳಿಯಲ್ಲಿ, ೮-೧೦ ನಿಂಬೂ ಪೆಪ್ಪರ್ಮಿಂಟ್ ಗಳ ಪ್ಯಾಕೆಟೊಂದನ್ನು ಕೊಂಡು, ಅವನು ವಾಪಸ್ ಮಾಡಿದ ೨ ರುಪಾಯಿ ನೋಟು ಮತ್ತೆ ೧ ರುಪಾಯಿಯ ನಾಣ್ಯವನ್ನು ಭದ್ರವಾಗಿ ಜೇಬಿಗೆ ಸೇರಿಸಿದ. ತಿಳಿ ಕೆಂಪು ಬಣ್ಣದ ಪೆಪ್ಪರ್ ಮಿಂಟ್ ಗಳು ನಿಧಾನವಾಗಿ ಪುಟ್ಟನ ಬಾಯಲ್ಲಿ ಒಂದೊಂದಾಗಿ ಕರಗಿ, ಅವನ ನಾಲಿಗೆಯನ್ನೆಲ್ಲಾ ರಂಗೇರಿಸುತ್ತಿದ್ದಂತೆಯೇ ಬಸ್ಸು ನಿಧಾನವಾಗಿ ಮುಂದೆ ಚಲಿಸಿತು. ಸ್ವಲ್ಪ ಸಮಯದಲ್ಲೇ, ಬಸ್ಸು ಮುಖ್ಯ ರಸ್ತೆಯನ್ನು ಬಿಟ್ಟು ಬಲಕ್ಕೆ ತಿರುಗಿ, ಹೆಚ್ಚು ಜನವಸತಿಯಿಲ್ಲದಿದ್ದ ಜಾಗದಲ್ಲಿ ಮುಂದುವರಿಯತೊಡಗಿತು. ಗುಡ್ಡಗಳನೆಲ್ಲಾ ಕಡಿದು ಮಾಡಿದ್ದ ಅಗಲವಾದ ರಸ್ತೆಯಲ್ಲಿ ಬಸ್ಸು ಈಗ ಇನ್ನೂ ವೇಗವಾಗಿ ಸಾಗುತ್ತಿತ್ತು. ಡ್ರೈವರ್ ಈಗ ಬರೀ ಒಂದೇ ಕೈಯನ್ನು ಸ್ಟೀರಿಂಗ್ ಮೇಲೆ ಇಟ್ಟು, ಪಕ್ಕದಲ್ಲಿ ಕುಳಿತ ಪ್ರಯಾಣಿಕರ ಜೊತೆ ಮಾತಾಡಲು ಶುರು ಮಾಡಿದ್ದ. ಪಕ್ಕದಲ್ಲಿ ಕುಳಿತಿದ್ದ ಮಗು, ಪುಟ್ಟನನ್ನು ನೋಡಿ ಸಣ್ಣಗೆ ನಗುತ್ತಿತ್ತು.ಅದರ ಜೊತೆ ಆಟವಾಡುತ್ತಾ ಪುಟ್ಟನಿಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಬಸ್ಸು ಈಗ ಮತ್ತೆ ಪಟ್ಟಣದ ಒಳಗೆ ನುಗ್ಗಿ, ವಿಶಾಲವಾದ ಬಸ್ ಸ್ಟಾಂಡ್ ಒಳಕ್ಕೆ ಪ್ರವೇಶಿಸಿತು. ಬೆಳಗಾವಿಗೆ ಹೋಗುವಾಗ ಪುಟ್ಟ, ಹುಬ್ಬಳ್ಳಿಯ ಈ ಹೊಸ ಬಸ್ ಸ್ಟಾಂಡನ್ನು ಚಿಕ್ಕಪ್ಪನ ಜೊತೆ ಒಂದು ರೌಂಡ್ ಹಾಕಿದ್ದ. ಧೂಳೆಬ್ಬಿಸುತ್ತಾ ಬಸ್ಸು ಒಳನುಗ್ಗುತ್ತಿದ್ದಂತೆಯೇ, ನೂರಾರು ಜನರು ಬಸ್ಸಿನ ಹಿಂದೆಯೇ ಓಡಿಬಂದರು. ನಾ ಮುಂದೆ, ತಾ ಮುಂದೆ ಎಂದು ನುಗ್ಗಿ, ಸೀಟ್ ಹಿಡಿಯಲು ಜನರು ಹರಸಾಹಸ ಪಡುತ್ತಿದ್ದರು. ಕೆಳಕ್ಕಿಳಿಯುತ್ತಿದ್ದ ಪ್ರಯಾಣಿಕರಿಗೂ, ಮೇಲೇರಿ ಬರಲು ಹವಣಿಸುತ್ತಿದ್ದ ಪ್ರಯಾಣಿಕರಿಗೂ ಮಧ್ಯ ಸಣ್ಣ ಘರ್ಷಣೆ ಉಂಟಾಗಿದ್ದು, ಅವರು ಮಾಡುತ್ತಿದ್ದ ಗಲಾಟೆಯಿಂದಲೇ ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಬಸ್ಸು ಸಂಪೂರ್ಣವಾಗಿ ತುಂಬಿಹೋಯಿತು. ಮೇಲಿಂದ ಒಂದು ಸೂಜಿ ಬಿದ್ದರೂ, ಅದು ನೆಲಕ್ಕೆ ಬೀಳದಷ್ಟು ಒತ್ತೊತ್ತಾಗಿ ಜನರು ನಿಂತುಕೊಂಡಿದ್ದರು. ಪುಟ್ಟನಿಗೆ ಯಾಕೋ ಉಸಿರಾಡಲೂ ಕಷ್ಟವಾದಂತೆ ಅನಿಸಿ, ಬಸ್ಸು ಮುಂದೆ ಹೋದರೇ ಸಾಕು ಅನ್ನುವಂತ ಪರಿಸ್ಥಿತಿ ಬಂತು. ಒಂದು ರೌಂಡ್ ಟಿಕೆಟ್ ಮಾಡಿ ಹೋದ ಮೇಲೆ ಅರ್ಧ ತಾಸಾದರೂ, ಕಂಡಕ್ಟರ್ ಮತ್ತು ಡ್ರೈವರ್ ರ ಪತ್ತೆಯೇ ಇರಲಿಲ್ಲ. ಬಸ್ಸು ಈಗ ಕಿಕ್ಕಿರಿದು ತುಂಬಿತ್ತು. ಕಿಟಕಿ ತೆಗೆದಿದ್ದರೂ, ಅದರಿಂದ ಬರುತ್ತಿದ್ದ ತಂಗಾಳಿಯೆಲ್ಲವೂ, ಅರೆಕ್ಷಣದಲ್ಲಿ ಬಿಸಿಗಾಳಿಯಾಗಿ ಬಿಡುತ್ತಿತ್ತು. ಬಸ್ಸಿನೊಳಗಿದ್ದ ಪ್ರಯಾಣಿಕರ ಸಹನೆ ಮೀರುತ್ತಿದ್ದಿದ್ದು ಅವರ ಗೊಣಗಾಟಗಳಿಂದ ಪುಟ್ಟನಿಗೆ ಅನುಭವಕ್ಕೆ ಬಂತು. ತಾಳ್ಮೆಗೆಟ್ಟ ಒಂದಿಬ್ಬರು ಪ್ರಯಾಣಿಕರು ಕಂಟ್ರೋಲ್ ರೂಮ್ ಗೆ ಹೋಗಿ ಗಲಾಟೆ ಮಾಡಿ, ಅಂತೂ ಕಂಡಕ್ಟರ್ ಮತ್ತು ಡ್ರೈವರ್ ನನ್ನು ಕರೆದುಕೊಂಡು ಬಂದರು. ಬಸ್ಸು ನಿಧಾನಕ್ಕೆ ಮುಂದೆ ಹೊರಡುತ್ತಿದ್ದಂತೆಯೇ, ಎಲ್ಲಾ ಪ್ರಯಾಣಿಕರಂತೆ ಪುಟ್ಟನೂ ಸಮಾಧಾನದ ನಿಟ್ಟುಸಿರು ಬಿಟ್ಟ. ಚೆನ್ನಮ್ಮನ ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಇನ್ನೊಂದು ನಾಲ್ಕಾರು ಜನರು ಬಸ್ಸನ್ನು ನಿಲ್ಲಿಸಿ ಹತ್ತಿಕೊಂಡರು. ಪುಟ್ಟನಿಗೆ ತಾನು ಯಾವುದೋ ಸಂತೆಯಲ್ಲಿ ಸಿಕ್ಕಿಕೊಂಡ ಹಾಗೆ ಅನುಭವವಾಯಿತು. ಸ್ವಲ್ಪ ಸಮಯದಲ್ಲೇ, ಹಿಂದಿನ ಸೀಟಿನಲ್ಲಿ ಕುಳಿತವರಿಬ್ಬರಿಗೂ, ಕಂಡಕ್ಟರ್ ನಿಗೂ ಲಗೇಜ್ ವಿಷಯದಲ್ಲಿ ಜಗಳ ಶುರುವಾಯಿತು. ಎರಡು ಕಡೆಯವರೂ ಸುಮಾರು ಹೊತ್ತು ತಾರಕ ಸ್ವರದಲ್ಲಿ ಕೂಗಾಡಿ, ಪುಟ್ಟನ ನೆಮ್ಮದಿ ಕೆಡಿಸಿದರು. ಗಾಯದ ಮೇಲೆ ಬರೆಯಿಟ್ಟಂತೆ, ಚಿತ್ರ ವಿಚಿತ್ರ ವೇಷ ಧರಿಸಿ ಪಕ್ಕದಲ್ಲಿ ಕುಳಿತಿದ್ದ ಲಂಬಾಣಿ ಹೆಂಗಸು, ತನ್ನ ಜೊತೆ ತನ್ನಿಬ್ಬರು ಮಕ್ಕಳನ್ನೂ ಅದೇ ಸೀಟಿನಲ್ಲಿ ಕುಳಿಸಿಕೊಂಡಳು. ಪುಟ್ಟನಿಗೆ ಈಗ ಮಿಸುಕಾಡಲೂ ಆಗದಷ್ಟು ಜಾಗದ ಕೊರತೆಯಾಯಿತು.ಬಸ್ಸು ಆದಷ್ಟು ಬೇಗ ಮುಂಡಗೋಡು ಸೇರಲೆಂದು ಅವನು ಮನಸ್ಸು ತವಕಿಸಿತು. ನುಣುಪಾದ ಹೆದ್ದಾರಿಯನ್ನು ಬಿಟ್ಟು, ಬಸ್ಸು ತಡಸ ಕ್ರಾಸಲ್ಲಿ ಬಲಕ್ಕೆ ತಿರುಗಿ ಕಚ್ಚಾ ರಸ್ತೆಯನ್ನು ಪ್ರವೇಶಿಸಿದ್ದು ಬಸ್ಸು ಮಾಡುತ್ತಿದ್ದ ಕುಲುಕಾಟಗಳಿಂದಲೇ ಗೊತ್ತಾಗುತ್ತಿತ್ತು. ಬರಗಾಲದಿಂದ ಈಗ ಚೇತರಿಸಿಕೊಂಡಿದೆಯೆನೋ ಅನ್ನುವಂತೆ ನೆಲವೆಲ್ಲಾ ಬರೀ ಕುರುಚಲು ಗಿಡಗಳಿಂದಲೇ ತುಂಬಿ ಹೋಗಿತ್ತು. ಇನ್ನೇನು ನೆತ್ತಿಯ ಮೇಲೆ ಬಂದಿದ್ದ ಸೂರ್ಯ ಉತ್ಸಾಹದಿಂದ ಬೆಳಗುತ್ತಿದ್ದ. ಪ್ರಖರವಾದ ಬಿಸಿಲು ಪುಟ್ಟನ ಮುಖವನ್ನು ಸುಡುತ್ತಾ ಇತ್ತು. ಪುಟ್ಟನಿಗೆ ತಾನು ಬಸ್ಸಿನ ಆಚೆ ಬದಿಗೆ ಕುಳಿತಿಕೊಂಡಿರಬೇಕಿತ್ತು ಅಂತ ಬಲವಾಗಿ ಅನ್ನಿಸಲು ಶುರುವಾಯಿತು. ಕೈಕಾಲುಗಳನ್ನು ಅಲ್ಲಾಡಿಸಲೂ ಆಗದೇ, ಬಿಸಿಲಿಗೆ ಬಾಡುತ್ತಾ, ನಿರುತ್ಸಾಹದಲ್ಲಿ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತ. ಬೆಳಿಗ್ಗೆ ತಿಂದಿದ್ದ ಇಡ್ಲಿಗಳು ಈಗ ಕರಗಿ ಪುಟ್ಟನ ಹೊಟ್ಟೆ ಚುರುಗುಡಲು ಶುರುವಾಗಿತ್ತು. ಹಿಂದೆ ತೆಗೆದುಕೊಂಡಿದ್ದ ನಿಂಬೂ ಪೆಪ್ಪರ್ಮಿಂಟ್ ಗಳಲ್ಲಿ ಒಂದಷ್ಟಾದರನ್ನಾದರೂ ಉಳಿಸಿಕೊಳ್ಳಬೇಕಾಗಿತ್ತು ಅಂತ ಪುಟ್ಟನಿಗೆ ಅನಿಸಿತೊಡಗಿತು. ಬಸ್ಸು ಸಧ್ಯದಲ್ಲೇನಾದರೂ ನಿಲ್ಲುತ್ತದೆಯೋ ಅಂದರೆ ಹಲವಾರು ಮೈಲಿಗಳಿಂದ ಜನವಸತಿಯ ಕುರುಹನ್ನೇ ಕಂಡಿರಲಿಲ್ಲ ಅವನು. ಮುಂದೆ ಕುಳಿತಿದ್ದ ಹಲವರ ಬಳಿ ಪುಟ್ಟ, ಮುಂಡಗೋಡು ತಲುಪಲು ಇನ್ನೂ ಎಷ್ಟು ಹೊತ್ತು ಬೇಕಾಗಬಹುದೆಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ. ಯಾರಿಗೂ ಅದರ ಅಂದಾಜಿದ್ದಂತೆ ತೋರಲಿಲ್ಲ. ಒಬ್ಬರು ಇನ್ನೂ ಅರ್ಧ ತಾಸಿದೆ ಅಂದರೆ ಇನ್ನೊಬ್ಬರು ಒಂದೂವರೆ ತಾಸಿದೆ ಎಂದು ಹೇಳಿ ಪುಟ್ಟನ ನಿರುತ್ಸಾಹಕ್ಕೆ ತುಪ್ಪ ಸುರಿದರು. ಇನ್ನೊಮ್ಮೆ ಹೀಗೆ ಒಬ್ಬನೇ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಪುಟ್ಟ ನಿರ್ಧರಿಸಿದ. ಸುಮಾರು ಮುಕ್ಕಾಲು ಗಂಟೆಗಳ ನಂತರ ಬಸ್ಸು ಅಂತೂ ಮುಂಡಗೋಡು ತಲುಪಿತು. ಈ ನರಕದಿಂದ ಮುಕ್ತಿ ಸಿಕ್ಕಿದರೆ ಸಾಕು ಎಂದನ್ನಿಸಿದ್ದ ಪುಟ್ಟನಿಗೆ, ಬಸ್ಸು ಪಟ್ಟಣದ ಸರಹದ್ದನ್ನು ತಲುಪುತ್ತಿದ್ದಂತೆಯೇ ನಿರಾಳವಾಯಿತು. ಲವಲವಿಕೆಯಿಂದ ಕಿಟಕಿ ಆಚೆ ಕಣ್ಣಾಡಿಸಲು ಶುರು ಮಾಡಿದ. ಪುಟ್ಟನ ಮನೆ ಬಸ್ ಸ್ಟಾಂಡಿಂದ ಕಾಲ್ನಡಿಗೆ ದೂರದಲ್ಲೇ ಇತ್ತು. ದಾರಿಯಲ್ಲೇ ಇದ್ದ ಪೈ ಬೇಕರಿಯಿಂದ, ತನ್ನ ಬಳಿ ಇದ್ದ ಮೂರು ರುಪಾಯಿಯಲ್ಲಿ ಎನೇನು ತೆಗೆದುಕೊಳ್ಳಬಹುದು ಎಂಬ ಆಲೋಚನೆಯಲ್ಲೇ ಮುಳುಗಿದ್ದವನಿಗೆ, ಬಸ್ಸು ಸ್ಟಾಂಡ್ ಗೆ ಬಂದು ನಿಂತರೂ, ಕಂಡಕ್ಟರ್ ಎಚ್ಚರಿಸಿದ ಮೇಲೆಯೇ ಅದರ ಅನುಭವವಾಗಿದ್ದು. Posted by Unknown at 5:27 PM 9 comments Tuesday, February 5, 2008 ನಾಗರ ಹಾವೇ, ಹಾವೊಳು ಹೂವೇ... ಮಲೆನಾಡಿನಲ್ಲಿ ಹುಟ್ಟಿ ಬೆಳೆದವರೆಲ್ಲರಿಗೂ ಹಾವಿನ ಜೊತೆ ಒಡನಾಟ ಸರ್ವೇಸಾಮಾನ್ಯವಾದರೂ, ನನ್ನ ವಿಷಯದಲ್ಲಿ ಅದು ಯಾಕೋ ಸ್ವಲ್ಪ ಜಾಸ್ತಿಯೇ ಆಗಿದೆ ಅಂತ ನನಗೆ ಅನ್ನಿಸಲು ಬಹಳಷ್ಟು ಕಾರಣಗಳಿವೆ. ಮುಖ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿದರೂ, ನಮ್ಮ ಮನೆಯ ಸುತ್ತ ಮುತ್ತ ಬೇಕಾದಷ್ಟು ಗಿಡಮರಗಳಿದ್ದು, ಹಾವು,ಚೇಳು, ಗೆದ್ದಲು, ಇರುವೆ, ಓತಿಕ್ಯಾತ ಮುಂತಾದುವಗಳ ಹಾವಳಿ ಅವ್ಯಾಹತವಾಗಿ ನಡೆದೇ ಇತ್ತು. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ" ಎಂಬ ಅಕ್ಕನ ವಚನದಂತೆ ನಾವು ಅವುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೇ, ನೆಮ್ಮದಿಯಾಗಿದ್ದೆವು. ಆದರೆ ಅಮ್ಮನಿಗೆ ಹಾವು ಕಂಡರೆ ಮಾತ್ರಾ, ಎಲ್ಲಿಲ್ಲದ ದಿಗಿಲು. ಹಾವಿನ ಹೆಸರೆತ್ತಿದರೇ ಮೂರು ಮಾರು ದೂರ ಓಡುತ್ತಿದ್ದ ಅವಳು, ಟೀವಿಯಲ್ಲಿ ಹಾವನ್ನು ತೋರಿಸಿದರೂ ನೋಡಲು ಹೆದರುತ್ತಿದ್ದರು. ಆ ಕಾಲದಲ್ಲಿ ನಮ್ಮ ಮನೆ ಅಟ್ಟಕ್ಕೆ ಅಡಿಕೆಯ ದಬ್ಬೆಯೇ ಆಧಾರ. ಆಗೆಲ್ಲಾ ಮನೆಯೆ ಮಾಡಿಗೆ ಇನ್ನೇನು ತಾಗಿಕೊಂಡೇ ಇದ್ದ ಬಿದಿರು ಮೆಳೆಗಳ ಸಹಾಯದಿಂದ, ಹಾವುಗಳು ಅಟ್ಟದ ಮೇಲಿರಬಹುದಾದ ಇಲಿಗಳ ಬೇಟೆಗೆ ಮನೆಯೊಳಗೆ ಬರುತ್ತಿದ್ದವು. ಕೆಲವೊಮ್ಮೆ ದಾರಿತಪ್ಪಿ ಅಟ್ಟದಿಂದ ಕೆಳಗಿಳಿದು, ಮನೆಯ ಸಿಮೆಂಟ್ ನೆಲದಲ್ಲಿ ತೆವಳಲಾಗದೇ, ವಿಲಿ ವಿಲಿ ಒದ್ದಾಡುತ್ತಿದ್ದವು. ಅವುಗಳನ್ನು ಹಾಗೆ ಹಿಡಿದು ಹೊರಗೆ ಬಿಡೋಣ ಅಂದ್ರೆ, ಎಲ್ಲಾದ್ರು ಕಚ್ಚಿ ಬಿಟ್ರೆ ಅಂತ ಭಯ. ಅಮ್ಮ ಬೇರೆ, ಬೇಗ ಕೊಂದು ಹಾಕಲು ತಾಕೀತು ಮಾಡುತ್ತಿದ್ದಳು. ಸಿಮೆಂಟ್ ನೆಲ ನುಣುಪಾಗಿರುವುದರಿಂದ ಹಾವುಗಳಿಗೆ ಓಡಿ ತಪ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಉಪಾಯವಿಲ್ಲದೇ, ಅವುಗಳನ್ನು ಕೊಲ್ಲಬೇಕಾಗುತ್ತಿತ್ತು. ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ ಎಷ್ಟೋ ಮರಿಹಾವುಗಳನ್ನು ನಾನೂ ಹೊಡೆದಿದ್ದಿದೆ.ಅವುಗಳಲ್ಲಿ ಬಹುಪಾಲು ಹಾವುಗಳು, ನಿರುಪದ್ರವಿಯಾದ ಕೇರೆ ಹಾವುಗಳು. ಆದರೆ ಸರಾಸರಿಯಾಗಿ ವರ್ಷಕ್ಕೊಂದು ಸಲ, ನಾವು "ಕುದುರೆಬಳ್ಳ" ಅಂತ ಕರೆಯೋ ವಿಷದ ಹಾವುಗಳು ಮನೆಗೆ ಭೇಟಿಕೊಡುತ್ತಿದ್ದವು. ಕಪ್ಪಗೆ ಮೈತುಂಬ ಬಳೆಗಳಿದ್ದ ಈ ಹಾವುಗಳು ನೋಡಲು ಮಾತ್ರ ಭಯಂಕರವಾಗಿರುತ್ತಿದ್ದವು.ಆವಾಗೆಲ್ಲ ನಾವು ಬಾಗಿಲ ಹಿಂದೆ ನಿಂತುಕೊಂಡು ಅಪ್ಪ ಅದನ್ನು ಹೊಡಿಯೋದನ್ನು ನೋಡುತ್ತಿದ್ದವೇ ಹೊರತು ಹತ್ತಿರದೆಲ್ಲೆಲ್ಲೂ ಸುಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ, ಒಂದು ರವಿವಾರ ರಾತ್ರಿ ಸುಮಾರು ೯.೩೦ ರ ಹಾಗೆ, ನಾನು ದೂರದರ್ಶನ ದಲ್ಲಿ ಬರುತ್ತಿದ್ದ "ಸುರಭಿ" ನೋಡ್ತಾ ಇದ್ದೆ. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಮೇಲೆ ಅಟ್ಟದಲ್ಲಿ ಇಲಿಗಳು ಜೋರಾಗಿ ಸದ್ದು ಮಾಡುತ್ತಾ ಓಡಾಡುವುದು ಕೇಳಿಸಿತು. ಜೋರಾಗಿ ಒಂದು ಸಲ "ಶ್" ಅಂದು ಕೂಗಿ, ನಾನು ಟೀವಿ ನೋಡುವುದನ್ನು ಮುಂದುವರಿಸಿದೆ. ಮರುಕ್ಷಣದಲ್ಲೇ ಅಟ್ಟದಿಂದ ಎರಡು ಕಪ್ಪು ಹಾವುಗಳು, ಕುರ್ಚಿಯ ಮೇಲೆ ಕುಳಿತು ನೋಡುತ್ತಿದ್ದ ನನ್ನ ಕಾಲ ಮೇಲೆಯೆ ಬಿದ್ದವು. ನಾನು ಹೌಹಾರಿ, ಸಟ್ಟನೆ ಕಾಲನ್ನು ಮೇಲೆಳೆದುಕೊಂಡು, ಜೋರಾಗಿ ಕೂಗಿದೆ. ಮಲಗಿದ್ದ ಅಪ್ಪ ಎದ್ದು ಬಂದು, ಅವೆರಡೂ ಹಾವುಗಳಿಗೆ ಗತಿ ಕಾಣಿಸಿದರು. ಮಾರನೆಯ ದಿನ ಅಟ್ಟದ ಮೇಲೆ ಸರಿಯಾಗಿ ಹುಡುಕಿದಾಗ, ಒಂದೆಲ್ಲ, ಎರಡಲ್ಲ, ಅನಾಮತ್ತಾಗಿ ೫ ಮರಿ ಕುದುರೆಬಳ್ಳ ಹಾವುಗಳು, ಅವುಗಳ ತಾಯಿಯ ಜೊತೆ ಸಿಕ್ಕಿಬಿದ್ದವು. ಇದಾದ ಸ್ವಲ್ಪ ದಿನಕ್ಕೇ, ಅಪ್ಪ ಒಂದು ನಿರ್ಧಾರಕ್ಕೆ ಬಂದು, ಹೇಗೋ ಒಂದಷ್ಟು ಹಣ ಹೊಂದಿಸಿ ಅಟ್ಟಕ್ಕೆ ಆರ್.ಸಿ.ಸಿ ಜಂತಿಗಳನ್ನು ಕೂಡಿಸಿದರು. ಅಲ್ಲದೇ, ದೈತ್ಯಾಕಾರವಾಗಿ ಬೆಳೆದುಕೊಂಡಿದ್ದ ಬಿದಿರಿನ ಮೆಳೆಗಳನ್ನು ಕಡಿದು ಹಾಕಿದರು. ಅವತ್ತಿನಿಂದ ಮನೆಯೊಳಗೆ ಹಾವು ಬರುವುದು ನಿಂತುಹೋಯಿತು. ಆಗಾಗ ಅಮ್ಮನಿಗೆ ಮಾತ್ರ ಒರಳುಕಲ್ಲಿನ ಹತ್ತಿರವೋ, ಅಡುಗೆಮನೆಯ ಮಾಡಿನ ತುದಿಯಲ್ಲಿಯೋ ಕಾಣಿಸಿಕೊಳ್ಳುತ್ತಿದ್ದವು. ನಮಗೆ ಯಾರಿಗೂ ಅಷ್ಟು ಸಲೀಸಾಗಿ ಕಾಣಿಸಿಕೊಳ್ಳದೇ ಇದ್ದ ಹಾವುಗಳು, ಅಮ್ಮನ ಕಣ್ಣಿಗೆ ಮಾತ್ರ ಬೀಳುವುದು ನಮಗೆ ತುಂಬಾ ಸೋಜಿಗವನ್ನು ತರುತ್ತಿತ್ತು. ಅಮ್ಮ ತೋರಿಸಿದ ನಂತರ ನಾವು ಅವುಗಳನ್ನು ಹೆದರಿಸಿ ಓಡಿಸುತ್ತಿದ್ದೆವು. ಎಷ್ಟೋ ಸಲ ದೈತ್ಯಾಕಾರದ ಕೇರೆ ಹಾವುಗಳು, ಮಾಡಿನ ತುದಿಯಿಂದ ಧೊಪ್ಪನೇ ಹಾರಿ, ಓಡಿಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿತ್ತು. ಒಂದು ಮುದಿ ನಾಗರಹಾವೊಂದು ಮಾತ್ರ, ಮನೆಯ ಸುತ್ತ ಪ್ರದಕ್ಷಿಣೆ ಹಾಕುತ್ತಿತ್ತೇ ಹೊರತು ಇನ್ನೆಲ್ಲೂ ಸುಳಿಯುತ್ತಿರಲಿಲ್ಲ. ನಾನು, ಅಕ್ಕ ಅದ್ಯಾವುದೋ ನಿಧಿಯನ್ನು ಕಾಯುತ್ತಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದವು. ಮನೆಯ ಸುತ್ತಲೂ ಇದ್ದ ಚದರಂಗಿ ಗಿಡಗಳ ಹಣ್ಣನ್ನು ಕೊಯ್ಯಲು ಹೋಗುತ್ತಿದ್ದ ನಮ್ಮನ್ನು ಅಮ್ಮ ಆ ಹಾವಿನ ಬಗ್ಗೆ ಎಚ್ಚರಿಸುತ್ತನೇ ಇದ್ದಳು. ಎರಡನೇ ಬಾರಿ ಹಾವಿನೊಂದಿಗೆ ಮುಖಾಮುಖಿಯಾಗಿದ್ದು, ಈಗೊಂದು ೬-೭ ವರ್ಷದ ಹಿಂದೆ. ರಜೆಗೆ ಶಿರಸಿಗೆ ಬಂದಿದ್ದ ನಾನು ಅವತ್ತು ಅಮ್ಮನ ಜೊತೆ, ನಮ್ಮ ಮೂಲ ಊರಿಗೆ ಹೋಗಿದ್ದೆ. ಮಧ್ಯಾಹ್ನ ಊಟ ಆದ ಮೇಲೆ ಸಣ್ಣದೊಂದು ನಿದ್ದೆ ತೆಗೆದು, ಸುಮಾರು ೩ ಗಂಟೆಯ ಹೊತ್ತಿಗೆ ನಾನು, ತೋಟಗಳ ಬದಿಗೆ ಒಂದು ಸುತ್ತು ತಿರುಗಿ ಬರಲು ಹೋದೆ. ಹಾಗೆ ತೋಟದಲ್ಲಿ ತಿರುಗುತ್ತಿರುವಾಗ, ನಮ್ಮನೆ ಬಣ್ಣದ ತುದಿಯಲ್ಲಿ ಹರಿಯುತ್ತಿರುವ ಸಣ್ಣ ಝರಿಯಲ್ಲಿ ಒಂದು ತೆಂಗಿನಕಾಯಿ ಬಿದ್ದಿರುವುದು ಕಂಡಿತು. ಸರಿ, ಮನೆಗೆ ವಾಪಸ್ ಹೋಗುತ್ತಾ ತೆಗೆದುಕೊಂಡು ಹೋದರಾಯಿತು ಎಂದು ಕೆಳಗೆ ಇಳಿದು, ನೀರಿನಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಎರಡೂ ಕೈಯಲ್ಲಿ ಹಿಡಿದು ಎತ್ತಲು ಪ್ರಯತ್ನಿಸಿದೆ. ತಟ್ಟನೇ, ಬಲಗೈಯ ಹೆಬ್ಬಟ್ಟಿಗೆ ಎನೋ ಕುಟುಕಿದ ಅನುಭವವಾಯಿತು. ತಕ್ಷಣವೇ ನಾನು ಬಲಗೈಯನ್ನು ಮೇಲೆತ್ತಿ ಗಟ್ಟಿಯಾಗಿ ಕೊಡವಿದೆ. ಮುಂದಿನ ಕ್ಷಣದಲ್ಲಿ ನನಗೆ ಕಂಡಿದ್ದು ಸುಮಾರು ೧೦ ಅಡಿ ಉದ್ದ, ಅರ್ಧ ಒನಕೆಯಷ್ಟು ದಪ್ಪಗಿದ್ದ, ಕರಿ ಹಾವೊಂದು ಓಡಿಹೋಗುತ್ತಿರುವುದು. ನಾನು ಕಣ್ಣು ಮಿಟುಕಿಸುವುದರೊಳಗೆ ಇವೆಲ್ಲ ನಡೆದುಹೋಗಿತ್ತು. ನಾನು ಕೈ ಮೇಲೆತ್ತಿ ಕೊಡವಿದ ರಭಸಕ್ಕೂ, ಹಾವಿನ ಭಾರಕ್ಕೂ, ನನ್ನ ಬಲಗೈ ಹೆಬ್ಬಟ್ಟಿನ ಸುಮಾರು ಚರ್ಮ ಹಿಸಿದುಹೋಗಿತ್ತು. ಗಾಯದ ನೋವಿಗಿಂತಲೂ, ಆ ಹಾವಿನ ಗಾತ್ರವನ್ನು ನೋಡಿದ ನನ್ನ ಜಂಘಾಬಲವೇ ಉಡುಗಿಹೋಯಿತು. ನನ್ನ ಹೆಬ್ಬಟ್ಟನ್ನು ನೋಡಿ ಮೀನೆಂದು ತಿಳಿದುಕೊಂಡಿತೇನೋ ಆ ಹಾವು. ಹೇಗೋ ಆ ಆಘಾತದಿಂದ ಸಾವರಿಸಿಕೊಂಡು ಮನೆಯ ಕಡೆ ಓಡಿದೆ. ಅಲ್ಲೇ ಗೋಟಡಿಕೆ ಹೆಕ್ಕುತ್ತಿದ್ದ ಮಾಬ್ಲಣ್ಣ, ನನ್ನ ಗಾಬರಿ ನೋಡಿ ಏನಾಯ್ತೆಂದು ಕೇಳಿದ. ನಾನು ನಡೆದಿದ್ದನ್ನು ಹೇಳಿದೆ. ಅವನು ಅದು ನೀರುಕೇರೆ ಹಾವೆಂದು, ತಾನು ಅದನ್ನು ಬೇಕಾದಷ್ಟು ಸಲ ಅದೇ ಝರಿಯಲ್ಲಿ ನೋಡಿರುವುದಾಗಿಯೂ, ಅದು ವಿಷದ ಹಾವಲ್ಲ ಎಂದು ಹೇಳಿದ ಮೇಲೆಯೇ ನನ್ನ ಗಾಬರಿ ಸ್ವಲ್ಪ ಕಡಿಮೆಯಾಗಿದ್ದು. ಮನೆಗೆ ತಲುಪಿ, ಅಮ್ಮನಿಗೆ ಹೇಳಿದಾಗ ಅಮ್ಮ ತುಂಬಾ ಗಾಬರಿ ಬಿದ್ದಳು. ಆಗಿನ್ನೂ ೩.೩೦. ಮುಂದಿನ ಬಾಳೇಸರ ಬಸ್ಸು ಬರುವುದು ಇನ್ನು ೪.೩೦ ಕ್ಕೆ. ಸರಿ, ಕಾನಸೂರಿಗೆ ಫೋನ್ ಮಾಡಿ ಬಾಡಿಗೆ ಬೈಕ್ ಗೆ ಬರಲು ಹೇಳಿದ್ದಾಯಿತು. ಅದು ಬಂದು ಮುಟ್ಟುವುದರಲ್ಲಿ ೪.೧೫ ಆಗಿತ್ತು. ನನಗೇನಾದರೂ ವಿಷದ ಹಾವು ಕಚ್ಚಿರುತ್ತಿದ್ದರೆ ನನ್ನ ಪರಿಸ್ಥಿತಿ ಗಂಭೀರವಾಗುತ್ತಿದ್ದರಲ್ಲಿ ಸಂಶಯವಿಲ್ಲ. ಗಾಯದಿಂದ ಸ್ವಲ್ಪ ಜಾಸ್ತಿಯೇ ರಕ್ತ ಹರಿದಿದ್ದನ್ನು ಬಿಟ್ಟರೆ, ನಾನು ಚೆನ್ನಾಗಿಯೆ ಇದ್ದೆ. ಐದು ಗಂಟೆಯ ಹಾಗೆ ಶಿರಸಿ ತಲುಪಿದ್ದಾಯ್ತು. ಹಾವು ಕಚ್ಚಿದ್ದರಿಂದ ಯಾವುದೇ ಖಾಸಗಿ ಅಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳುವುದಿಲ್ಲ. ಸರಿ, ಸರ್ಕಾರಿ ಆಸ್ಪತ್ರೆಗೇ ಹೋದೆವು. ಒಂದೆರಡು ಪೇನ್ ಕಿಲ್ಲರ್ ಗಳನ್ನು ಮಾತ್ರ ಕೊಟ್ಟಿದ್ದರು ಅಂತ ನೆನಪು ನನಗೆ. ಗಾಯ ಸ್ವಲ್ಪ ಊದಿಕೊಂಡಿತ್ತು, ನಾನು ಎಲ್ಲರ ಜೊತೆ ಮಾತಾಡುತ್ತಾ ಆರಾಮಿದ್ದೆ. ಸಂಜೆ ಪೋಲೀಸ್ ಪೇದೆಯೊಬ್ಬ ಬಂದು, ನನ್ನನ್ನು ಒಂದಷ್ಟು ಪ್ರಶ್ನೆ ಕೇಳಿ, ನನ್ನ ಸಹಿ ತೆಗೆದುಕೊಂಡು ಹೋದ. ಹಾವು ಕಚ್ಚಿದಾಗ ಪೋಲಿಸ್ ಕೇಸ್ ದಾಖಲಾಗುವುದು ಕಡ್ಡಾಯ ಅಂತ ಗೊತ್ತಾಯಿತು. ನಾನು ಒಂದು ದಿನ ಸರ್ಕಾರೀ ಆಸ್ಪತ್ರೆಯಲ್ಲಿದ್ದು ಮರುದಿನ ಮನೆಗೆ ಬಂದೆ. ಗಾಯದ ಗುರುತುಗಳೇನೂ ಈಗ ಹೆಬ್ಬಟ್ಟಿನಲ್ಲಿ ಉಳಿದಿಲ್ಲ. ವರ್ಷದ ಹಿಂದೆ ಆಫ಼ೀಸ್ ನಲ್ಲಿ ಇ.ಅರ್.ಟಿ (Emergency Rescue Team. Emergency runaway team ಅಂತಲೂ ನಾವು ತಮಾಷೆ ಮಾಡುವುದಿದೆ) ಟ್ರೇನಿಂಗ್ ನಡೆಯುತ್ತಿದ್ದಾಗ, ಅದರ ನಿರ್ವಾಹಕರು, ಇಲ್ಲಿ ಯಾರಾದರೂ ಹಾವು ಕಚ್ಚಿಸಿಕೊಂಡವರು ಇದ್ದಾರೆಯೇ ? ಎಂದು ಕೇಳಿದಾಗ ನಾನೊಬ್ಬನೇ ಕೈ ಎತ್ತಿದ್ದೆ. ನನ್ನ ಕೊಲೀಗ್ಸ್ ಎಲ್ಲ, ನಾನು ಯಾವುದೋ ಬೇರೆ ಗ್ರಹದಿಂದ ಬಂದಿಳಿದವನ ತರ ನೋಡುತ್ತಿದ್ದರು. ನನಗ್ಯಾಕೋ ನಾನು ವಿಶೇಷ ವ್ಯಕ್ತಿ ಎಂದೆನಿಸಿ ಸ್ವಲ್ಪ ಹೆಮ್ಮೆಯಾಯಿತು. Posted by Unknown at 4:08 PM 2 comments Newer Posts Older Posts Home Subscribe to: Posts (Atom) About Me Unknown View my complete profile Popular Posts ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ...... ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹ... ಹಿತವಚನ ಸರಿಯಾಗಿ ಕಾಲೂರಿ ನಡೆಯಲು ಕಲಿಯೇ, ಎಂದೊಬ್ಬರು ಅದೆಷ್ಟು ನಿಧಾನ! ಹೀಗಿದ್ರೆ ಕಷ್ಟ, ಆಕ್ಷೇಪ ಕೆಲವರದು ಸ್ವಲ್ಪ ಸೊಟ್ಟನ ಹೆಜ್ಜೆ, ಈಗಲೇ ಸರಿ ಮಾಡಿ, ಹುಶಾರು! ಸೊಂ... ಕಚ್ಚೋ ಚಪ್ಪಲ್ಲು "ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ... ಹೀಗೇ ಸುಮ್ಮನೇ... ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತ... ಹಸಿರು ಹೀರೋ ಪೆನ್ನು. ಜೋಷಿ ಮಾಸ್ತರ್ ರ ಸಮಾಜದ ಕ್ಲಾಸು ಮುಗಿದ್ರೆ ಸೀದಾ ಮನೇಗೇ ಅನ್ನೋ ವಿಷಯ ನೆನಪಾದಾಗ ಪುಟ್ಟನಿಗೆ ಒಂತರಾ ಖುಶಿಯಾಯ್ತು. ಶನಿವಾರ ಅಂದ್ರೆ ಯಾಕೋ ಗೊತ್ತಿಲ್ಲ, ಬೆಳಿಗ್ಗೆಯಿಂದ್ಲ... ಈ ಸಂಭಾಷಣೆ... ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು ಅರೆಪಾವು ತುಂಟತನ, ಆಗಾಗ ಥೇಟ್ ಮಗು ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು ... ಕೌಳಿ ಹಣ್ಣು ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹ... ಈರನ ತರ್ಕವೂ... ಎಲೆಕ್ಸನ್ನೂ..... ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ... ನಿನ್ನೆ ನಾಳೆಗಳ ನಡುವೆ ಸರಿವ ಸಮಯದ ನೆರಳತುದಿಗೆ ಜೋತುಕೊಂಡೇ ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ! ನಡೆವ ನೆಲದ...
“ಅಪೋವಾ ಇದಗ್‍ಂ ಸರ್ವಂ ವಿಶ್ವಾಭೂತಾನ್ಯಾಪಃ ಪ್ರಾಣಾವಾ ಆಪಃ ಪಶವ ಆಪೋನ್ನಮಾಪೋsಮೃತಮಾಪ ಸ್ಸಂರಾಡಾಪೋ ವಿರಾಡಾಪಸ್ವರಾಡಾಪಶ್ಛಂದಾಗ್‍ಂ ಷ್ಯಾಪೋ ಜ್ಯೋತೀಗ್‍ಂ ಷ್ಯಾಪೋ ಯಜಾಗ್‍ಂ ಷ್ಯಾಪಸ್ಸತ್ಯಮಾಪಸ್ಸರ್ವಾದೇವತಾ ಆಪೋ ಭೂರ್ಭುವ ಸ್ಸುವರಾಪ ಓಂ”. ಈ ಪ್ರಸಿದ್ಧವಾದ ಮಂತ್ರವು ವಿಶ್ವವೆಲ್ಲಾ ನೀರು ಎಂಬ ಒಂದು ಸಿದ್ಧಾಂತವನ್ನು ಪ್ರತಿಪಾದಿಸುತ್ತಿದೆ. “ನಾರಾಯಣ” ಎಂಬ ದೇವರ ಹೆಸರಿಗೆ ಅರ್ಥ ಹೇಳುವಾಗ ಸಹ ಈ ವಿಶ್ವವೆಲ್ಲಾ ನೀರು. ಈ ನೀರು ಒಂದು ದೊಡ್ಡ ಸಮುದ್ರದ ರೂಪದಲ್ಲಿದೆ. ಒಳಗಡೆ ಇದು ಚಲನೆಯಿಲ್ಲದೆ ಒಂದೇ ಬೃಹದಾಕಾರವನ್ನು ತಾಳಿದೆ. ಆದರೆ ಹೊರಗಡೆ ಅಲೆಗಳ ರೂಪದಲ್ಲಿ ಹನಿಗಳ ರೂಪದಲ್ಲಿ ವೈವಿಧ್ಯವನ್ನು ತೋರಿಸುತ್ತಿದೆ. ಇಂತಹ ನೀರನ್ನು ಆಶ್ರಯಿಸಿಕೊಂಡು ಅದರಲ್ಲಿ ಯಾವ ಯೋಚನೆಯು ಇಲ್ಲದೆ ಆನಂದದಿಂದ ಮಲಗಿರುವವನೇ ನಾರಾಯಣ. ಎಂಬ ಭಾವನೆಯನ್ನು ವೇದಾಂತ ಗ್ರಂಥಗಳು ಕೊಡುತ್ತಿವೆ. ಸಮಸ್ತವೂ ನೀರಿನ ಸ್ವರೂಪವೇ ಎಂದು ಹೇಳಿದರೆ ಯಾರೂ ನಂಬಲಾರರು. ಈ ಮಾತಿಗೆ ವಾಚ್ಯಾರ್ಥವನ್ನು ಗ್ರಹಿಸುವುದು ಸರಿಯಲ್ಲ. ಆದರೆ ಸಾಂಕೇತಿಕವಾದ ಅರ್ಥವನ್ನು ಗ್ರಹಿಸಲು ಯಾವ ಅಡ್ಡಿಯು ಇಲ್ಲ. ಈ ವಿಶ್ವದ ಸ್ವರೂಪವನ್ನು ವರ್ಣಿಸಲು ಸಂಕೇತವಾಗಿ ಬಳಸಲು ಎಲ್ಲ ವಸ್ತುಗಳಿಗಿಂತಲೂ ನೀರೇ ಹೆಚ್ಚು ಅರ್ಹವಾದುದು ಎಂಬ ಸತ್ಯವನ್ನು ನಾವು ಅರಿತರೆ ಮೇಲಿನ ಮಂತ್ರದಲ್ಲಿನ ಅದ್ಭುತವಾದ ಪರಮಸತ್ಯವನ್ನು ನಾವು ಅರಿಯಬಹುದು. ಪಂಚಭೂತಗಳಲ್ಲಿ ಆಕಾಶಕ್ಕೆ ಯಾವ ಸ್ವರೂಪವೂ ಇಲ್ಲ. ವಾಯುವು ಕಣ್ಣಿಗೆ ಕಾಣಿಸುವುದಿಲ್ಲ. ತೇಜಸ್ಸು ಕಣ್ಣಿಗೆ ಕಾಣಿಸಿದರೂ ನಾನಾರೂಪಗಳನ್ನು ಪಡೆಯುವುದರಲ್ಲೂ ಪುನಃ ಪ್ರಶಾಂತವಾದ ಒಂದೇ ರೂಪವನ್ನು ಹೊಂದುವುದರಲ್ಲಿಯೂ ನೀರಿನಷ್ಟು ವಿವಿಧತೆಯನ್ನು ಪ್ರಕೃತಿಯಲ್ಲಿ ತೋರಿಸುತ್ತಿಲ್ಲ. ಭೂಮಿಯನ್ನು ಸಂಕೇತವನ್ನಾಗಿ ಗ್ರಹಿಸಲು ಅದರಲ್ಲಿನ ಪದಾರ್ಥಗಳು ಗಟ್ಟಿಯಾದ ಒಂದೊಂದು ರೂಪವನ್ನೂ ಪಡೆದಿದ್ದು ಕ್ಷಣಕ್ಷಣಕ್ಕೂ ಹೊಸ ಹೊಸ ರೂಪಗಳನ್ನು ಪಡೆಯುತ್ತಿರುವುದಿಲ್ಲ. ಆದುದರಿಂದ ಕ್ಷಣಕ್ಷಣದಲ್ಲೂ ಹೊಸ ರೂಪವನ್ನು ಪಡೆಯುತ್ತ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತ ಕೊನೆಗೆ ಒಂದೇ ರೂಪಕ್ಕೆ ಹಿಂತಿರುಗುತ್ತಿರುವ ಈ ವಿಶ್ವ ವ್ಯಾಪಾರವನ್ನು ಸಾಂಕೇತಿಕವಾಗಿ ತೋರಿಸಿಕೊಡಲು ನೀರೇ ಎಲ್ಲ ವಸ್ತುಗಳಿಗಿಂತಲೂ ಅತ್ಯಂತ ಅರ್ಹವಾಗಿರುವ ವಸ್ತು. ಭವಭೂತಿ ಮಹಾಕವಿಯು ಶೃಂಗಾರ, ವೀರ, ಕರುಣ, ಅಧ್ಭುತ, ಹಾಸ್ಯ, ಭಯಾನಕ ಮುಂತಾದ ಭಿನ್ನಭಿನ್ನ ಮತ್ತು ಪರಸ್ಪರ ವಿರುದ್ಧವಾದ ರಸಗಳಲ್ಲಿಯು ಒಂದೇ ಮೂಲ ಭೂತವಾದ ರಸಾನುಭವವನ್ನು ನಾವು ಪಡೆಯುತ್ತಿರುವುದನ್ನು ವರ್ಣಿಸುತ್ತ “ಆವರ್ತ, ಬುದ್ಬುದ ತರಂಗ ಮಯೈರ್ವಿಕಾರೈರಂಭೋಯಥಾ ಸಲಿಲಮೇವಹಿ ತತ್ಸಮಸ್ತಂ” ಎಂಬ ಒಂದು ಮಾತಿನಲ್ಲಿ ನೀರಿನ ಸಂಕೇತವನ್ನು ಬಳಸಿರುತ್ತಾನೆ. ಸುಳಿ, ಗುಳ್ಳೆಗಳು, ಅಲೆಗಳು ಮುಂತಾದ ಅನೇಕರೂಪಗಳು ಬೇರೆಬೇರೆಯಾಗಿ ಕಂಡು ಬಂದರೂ ಇವೆಲ್ಲವೂ ಒಂದೇ ನೀರಿನ ವಿವಿಧ ರೂಪಗಳು ಮಾತ್ರವಲ್ಲವೇ ಎಂದು ಹೇಳಿರುತ್ತಾನೆ. ವಸ್ತು ಹೊಸದಾಗಿ ಹುಟ್ಟುವುದಿಲ್ಲ. ಇದ್ದದ್ದು ನಾಶವಾಗುವುದಿಲ್ಲ. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯನ್ನು ಹೊಂದುತ್ತಿರುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಚೆನ್ನಾಗಿ ಗಮನದಲ್ಲಿಟ್ಟುಕೊಂಡು ನೀರಿನ ಸಾಂಕೇತಿಕ ಅರ್ಥವನ್ನು ತಿಳಿಯಲು ಪ್ರಯತ್ನಿಸಬೇಕು. ಆಗ ಜನನ, ಮರಣಗಳು ಕೇವಲ ಬಾಹ್ಯವಿಕಾರಗಳೇ ಹೊರತು ಆತ್ಮವು ಅವಿನಾಶಿ ಎಂಬ ಪರಮಸತ್ಯವು ಗೋಚರಿಸುತ್ತದೆ. ನಮ್ಮ ಜೀವನವನ್ನು ಕಾಲರೂಪದ ಒಂದು ನದಿಯ ಪ್ರವಾಹದಲ್ಲಿನ ಸಂಚಾರದಂತೆ ಭಾವಿಸಬಹುದಲ್ಲವೇ? ಆಗ ಆ ಪ್ರವಾಹದ ನೀರು ಯಾವುದು? ಅದು ಎಷ್ಟು ಶೀತಲವಾದುದು? ಎಷ್ಟು ತೃಪ್ತಿಯನ್ನು ಕೊಡುವುದು? ಎಷ್ಟು ರಮ್ಯವಾದುದು? ಇತ್ಯಾದಿ ವಿಷಯಗಳನ್ನು ಕುರಿತ ಗಮ್ಯವಾದ ಚಿಂತನೆಗೆ ಸಹ “ನೀರು”ಅವಕಾಶ ಕೊಡುತ್ತದೆ ಅಲ್ಲವೇ?
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 02/2019, PÀ®A. 279, 188, 304 L.¦.¹ eÉÆvÉ 187 LJA« PÁAiÉÄÝ :- ದಿನಾಂಕ 02-01-2019 ರಂದು ಫಿರ್ಯಾದಿ ಮಹ್ಮದ್ ವಾಜಿದ್ ಖುರೈಸಿ ತಂದೆ ಮಹ್ಮದ್ ಜಮಾಲ ಖುರೈಸಿ ವಯ 38 ವರ್ಷ, ಜಾತಿ: ಮುಸ್ಲಿಂ,ಸಾ: ಮುಸ್ತೈದಪೂರಾ, ಬೀದರ ರವರು ಬೀದರ ನಗರದ ಬಸವೇಶ್ವರ ವೃತ್ತದ ಹತ್ತಿರ ಇರುವ ಬಿಸ್ಮಿಲ್ಲಾ ಬಿರಿಯಾನಿ ಹೊಟೆಲದಲ್ಲಿದ್ದಾಗ ಪೊಲೀಸ ಚೌಕ ಕಡೆಯಿಂದ ಲಾರಿ ನಂ. ಕೆಎ-32/ಎ-5768 ನೇದ್ದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಸವೇಶ್ವರ ವೃತ್ತದ ಹತ್ತಿರ ಹೊಟೆಲ ಕಡೆಯಿಂದ ಡಿವೈಡರ್ ಆಚೆಗೆ ಇರುವ ಆಂದ್ರ ಬಸ ನಿಲ್ದಾಣ ಕಡೆಗೆ ರಸ್ತೆ ದಾಟುತ್ತಿದ್ದ ಒಬ್ಬ ಅಪರಿಚಿತ 40-45 ವರ್ಷದ ವ್ಯಕ್ತಿಗೆ ಡಿಕ್ಕಿ ಮಾಡಿ, ಲಾರಿಯ ಎಡಭಾಗದ ಮುಂದಿನ ಟೈರ ಅವನ ತಲೆ, ಮುಖದ ಮೇಲೆ ಹಾಯ್ದು ಹೋಗಿದ್ದರಿಂದ ಭಾರಿ ರಕ್ತಗಾಯವಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಆರೋಪಿಯು ತನ್ನ ಲಾರಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 01/2019, ಕಲಂ. 279, 338 ಐಪಿಸಿ ಜೋತೆ 187 ಐಎಂವಿ ಕಾಯ್ದೆ :- ದಿನಾಂಕ 02-01-2019 ರಂದು ಫಿರ್ಯಾದಿ ದೇವಿದಾಸ ತಂದೆ ವೈಜಿನಾಥ ಒಡ್ಡೆ ವಯ: 28 ವರ್ಷ, ಸಾ: ಕಲವಾಡಿ ತಮ್ಮೂರ ನರಸಿಂಗ ತಂದೆ ಈಶ್ವರರಾವ ಬಿರಾದಾರ ರವರ ಮದುವೆ ಕಾರ್ಯಕ್ರಮ ಭಾಲ್ಕಿಯಲ್ಲಿ ಇರುವುದರಿಂದ ಫಿರ್ಯಾದಿಯು ಮೋಟಾರ ಸೈಕಲ ನಂ. ಕೆಎ-39/ಹೆಚ-7743 ನೇದರ ಮೇಲೆ ಅರ್ಜುನರಾವ ಸಿದ್ದಾ ವಯ: 51 ವರ್ಷ ರವರಿಗೆ ಕೂಡಿಸಿಕೊಂಡು ಭಾಲ್ಕಿ ಹುಮನಾಬಾದ ರೋಡಿನ ಮುಖಾಂತರವಾಗಿ ಭಾಲ್ಕಿಗೆ ಬರುವಾಗ ಭಾಲ್ಕಿಯ ಕೃಷಿ ಬೀಜ ವಿತರಣಾ ಕೇಂದ್ರದ ಹತ್ತಿರ ಬಂದಾಗ ಹಿಂದಿನಿಂದ ಮೋಟಾರ ಸೈಕಲ ನಂ. ಕೆಎ-39/ಹೆಚ-2724 ನೇದರ ಸವಾರನಾದ ಆರೋಪಿಯು ತನ್ನ ಮೋಟಾರ ಸೈಕಲ ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾಧಿಯ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ನಿಲ್ಲಿಸದೆ ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ಮಾಣಿಕ ಸಿದ್ದ ರವರ ಬಲಗಡೆ ರೊಂಡಿಗೆ ಗುಪ್ತಗಾಯ, ಬಲಗಾಲ ಮೋಳಕಾಲ ಕೆಳಗೆ ಭಾರಿ ಗಾಯವಾಗಿ ಕಾಲು ಮುರಿದಿರುತ್ತದೆ, ನಂತರ ಹಿಂದೆ ಹಿಂದೆ ಒಂದು ಮೋಟಾರ ಸೈಕಲ ಮೇಲೆ ಬರುತ್ತಿದ್ದ ತಂದೆ ವೈಜಿನಾಥ ತಂದೆ ವಿಠಲರಾವ ಒಡ್ಡೆ ಹಾಗೂ ಉಮಾಕಾಂತ ತಂದೆ ಸಾಧುರಾವ ವಾಡೆಕರ ರವರು ಕೂಡಿ ಮಾಣಿಕ ರವರಿಗೆ ಕೂಡಲೆ ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ವೈಧ್ಯಾಧಿಕಾರಿಗಳು ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಕ್ಕೆ ಹೊಗಲು ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 04/2019, ಕಲಂ. 279, 337, 338 ಐಪಿಸಿ :- ದಿನಾಂಕ 02-01-2019 ರಂದು ಫಿರ್ಯಾದಿ ಧರ್ಮಣ್ಣಾ ತಂದೆ ಮಲ್ಲಪ್ಪಾ ನಾಗಗೊಂಡ ವಯ: 50 ವರ್ಷ, ಜಾತಿ: ಕುರುಬ, ಸಾ: ಹುಲಗುತ್ತಿ, ತಾ: ಬಸವಕಲ್ಯಾಣ, ಜಿಲ್ಲಾ: ಬೀದರ ರವರ ಮನೆಗೆ ತಮ್ಮೂರ ಅಂಕುಶ ತಂದೆ ಮಾದಪ್ಪಾ ವಗ್ಗೆನೋರ್ ಇವನು ತನ್ನ ಮೋಟಾರ್ ಸೈಕಲ್ ಸಂ. ಎಮ್.ಹೆಚ್-06/ಬಿ.ಎಸ್-1094 ನೇದನ್ನು ಚಲಾಯಿಸಿಕೊಂಡು ಬಂದು ತಿಳಿಸಿದೇನೆಂದರೆ ಸೇಡೋಳ ಗ್ರಾಮದಲ್ಲಿ ಖಾಸಗಿ ಕೆಲಸ ಇದೇ ಹೋಗಿ ಬರೋಣಾ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ಅಂಕುಶ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಮೇಲೆ ಕುಳಿತು ಇಬ್ಬರೂ ಹುಲಗುತ್ತಿ ಗ್ರಾಮದಿಂದ ರಾಜೋಳಾ ಮಾರ್ಗವಾಗಿ ಸೇಡೋಳ ಗ್ರಾಮಕ್ಕೆ ಹೋಗುತ್ತಿದ್ದಾಗ ಅಂಕುಶ ಇವನು ತನ್ನ ಮೋಟಾರ್ ಸೈಕಲ್ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್ ಸೈಕಲ್ ಹುಮನಾಬಾದ - ರಾಜೋಳಾ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕನಕಟ್ಟಾ ಶಿವಾರದ ಕಿಶನ ತಂದೆ ವಿಠಲರಾವ ಪಾಟೀಲ್ ರವರ ಹೊಲದ ಹತ್ತಿರ ರೋಡಿನ ಬದಿಯಲ್ಲಿ ನಿಂತ್ತಿದ್ದ ಎತ್ತಿನ ಬಂಡಿಯ ಹಿಂದಿನ ಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಮೂಗಿನ ಮೇಲೆ ಸಾದಾ ರಕ್ತಗಾಯ ಮತ್ತು ಎಡಗಾಲ ಮೊಣಗಾಲಗೆ ತರಚಿದ ಗಾಯಗಳು ಆಗಿರುತ್ತವೆ, ಅಂಕುಶ ಹಣೆಗೆ ತೀವ್ರ ರಕ್ತಗಾಯವಾಗಿರುತ್ತದೆ, ನಂತರ ದಾರಿ ಹೋಕರಾದ ಆನಂದರೆಡ್ಡಿ ತಂದೆ ಸಂಗಾರೆಡ್ಡಿ ಓಲಾಕೆ ಮತ್ತು ಬಲವಾನ ತಂದೆ ಪ್ರಕಾಶ ಪೂಜಾರಿ ಇಬ್ಬರೂ ಸಾ: ಕನಕಟ್ಟಾ ಇವರುಗಳು ಗಾಯಗೊಂಡ ಇಬ್ಬರಿಗೂ ತಮ್ಮ ಕಾರದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 02/2019, PÀ®A. 379 L¦¹ :- ¢£ÁAPÀ 30-12-2018 gÀAzÀÄ ¦üAiÀiÁð¢ JA.r £ÀfÃgÀ DºÀäzÀ vÀAzÉ JA.r eÁ¥sÀgÀ C° ªÀAiÀÄ: 48 ªÀµÀð, eÁw: ªÀÄĹèA, ¸Á: eÉÃgÀ¥Él ºÀĪÀÄ£Á¨ÁzÀ gÀªÀgÀÄ vÀªÀÄä ªÀÄ£ÉAiÀÄ ªÀÄÄAzÉ ¤°è¹zÀ §eÁeï ¥À®ìgÀ J£ï.J¸À 160 ªÉÆÃmÁgï ¸ÉÊPÀ¯ï £ÀA. PÉJ-39/PÀÆå-7981 £ÉÃzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ªÉÆÃmÁgÀ ¸ÉÊPÀ°£À C.Q 48,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 02-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 01/2019, PÀ®A. 379 L¦¹ :- ¢£ÁAPÀ 24-11-2018 gÀAzÀÄ 2200 UÀAmɬÄAzÀ ¢£ÁAPÀ 25-11-2018 gÀAzÀÄ 0600 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ¦üAiÀiÁð¢ gÀ«PÁAvï vÀAzÉ ZÀAzÀæPÁAvÀ ºÉÆ£Àß¼Éî, ªÀAiÀÄ: 23 ªÀµÀð, eÁw: °AUÁAiÀÄvÀ, ¸Á: PÁf PÁ¯ÉÆä, £ÀA¢ ¥ÉmÉÆæî »A¨sÁUÀ, ©ÃzÀgÀ gÀªÀgÀ §eÁeï ªÉÆÃmÁgÀ ¸ÉÊPÀ® £ÀA. PÉJ-38/«-3286 £ÉÃzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ¸ÀzÀj ªÉÆÃmÁgÀ ¸ÉÊPÀ®£ÀÄß J¯Áè PÀqÉ ºÀÄqÀÄPÁrzÀgÀÄ ¹QÌgÀĪÀÅ¢®è, ¸ÀzÀj ªÁºÀ£ÀzÀ «ªÀgÀ 1) ªÉÆÃmÁgÀ ¸ÉÊPÀ® £ÀA. PÉJ-38/«-3286, 2) ZÁ¹¸ï £ÀA. JA.r.2.J.11.¹.ªÁAiÀÄ.8.eÉ.qÀ§Äè.©.15580, 3) EAf£ï £ÀA. r.ºÉZï.ªÁAiÀÄ.qÀ§Äè.eÉ.©.63136, 4) §tÚ PÀ¥ÀÄà ºÁUÀÆ 5) C.Q 48,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 02-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 02/2019, PÀ®A. 379 L¦¹ :- ¢£ÁAPÀ 28-12-2018 gÀAzÀÄ ¦üAiÀiÁ𢠦üAiÀiÁ𢠪ÀĺÁzÉêÀ vÀAzÉ ²ªÁ£ÀAzÀ ªÀiÁ½, ªÀAiÀÄ: 22 ªÀµÀð, eÁw: ªÀiÁ®UÁgÀ, ¸Á: AiÀļÀ¸ÀAV, vÁ: D¼ÀAzÀ, ¸ÀzÀå: D¼ÀAzÀ ZÉPï¥ÉÆøÀÖ ºÀwÛgÀ, PÀ®§ÄgÀV gÀªÀgÀÄ PÉ®¸ÀzÀ ¤«ÄvÀå vÀ£Àß §eÁeï ¥À®ìgï ªÉÆÃmÁgÀ ¸ÉÊPÀ® £ÀA. PÉJ-32/E.J¥sï-4190 £ÉÃzÀÝgÀ ªÉÄÃ¯É ©ÃzÀgÀ £ÀUÀgÀPÉÌ §AzÀÄ ©ÃzÀgÀ £ÀUÀgÀzÀ°è PÉ®¸À ªÀÄÄV¹PÉÆAqÀÄ ©ÃzÀgÀ £ÀUÀgÀzÀ ©¯Á® PÁ¯ÉÆäAiÀÄ°ègÀĪÀ vÀ£Àß UɼÉAiÀÄ£ÁzÀ ¸ÉÊAiÀÄzÀ Cdgï vÀAzÉ ¸ÉÊAiÀÄzÀ CAiÀÄħ gÀªÀgÀ ªÀÄ£ÉUÉ ºÉÆÃV CªÀgÀ ªÀÄ£ÉAiÀÄ ªÀÄÄAzÉ ¸ÀzÀj ªÉÆÃmÁgÀ ¸ÉÊPÀ® ¤°è¹ ºÁåAqÀ¯ï ¯ÁPï ªÀiÁr UɼÉAiÀÄ£À ªÀÄ£ÉAiÀÄ°è Hl ªÀiÁr ªÀÄ®VPÉÆAqÀÄ ¢£ÁAPÀ 29-12-2018 gÀAzÀÄ 0530 UÀAmÉUÉ UɼÉAiÀÄ£À ªÀÄ£ÉAiÀÄ ºÉÆgÀUÀqÉ §AzÁUÀ ¸ÀzÀj ªÉÆÃmÁgÀ ¸ÉÊPÀ® EgÀ°®è, ªÀÄ£ÉAiÀÄ ¸ÀÄvÀÛªÀÄÄvÀÛ ºÁUÀÆ EvÀgÉ PÀqÉ ºÀÄqÀÄPÁrzÀgÀÄ ¸ÀzÀj ªÉÆÃmÁgÀ ¸ÉÊPÀ® ¹UÀ°®è, ¸ÀzÀj ªÁºÀ£ÀªÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÁºÀ£ÀzÀ «ªÀgÀ 1) ªÉÆÃmÁgÀ ¸ÉÊPÀ® £ÀA. PÉJ-32/E.J¥sï-4190, 2) ZÁ¹¸ï £ÀA. JªÀiï.r.2.J.12.r.gÀhÄqï.3.r.¹.f.40159, 3) EAf£ï £ÀA. r.eÉ.gÀhÄqï.¹.r.f.43719 ºÁUÀÆ 4) C.Q 25,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 02-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 2:26 PM No comments: KALABURAGI DISTRICT REPORTED CRIMES ಅಪಘಾತ ಪ್ರಕರಣಗಳು : ಅಫಜಲಪೂರ ಠಾಣೆ : ದಿನಾಂಕ 19-10-2018 ರಂದು ಬೆಳಿಗ್ಗೆ ಶ್ರೀ ಬಸವರಾಜ ತಂದೆ ಯಶವಂತ ಬಾಸ್ಲೆಗಾಂವಕರ್ ಸಾ|| ಬಾಸ್ಲೇಗಾಂವ ತಾ|| ಅಕ್ಕಲಕೋಟ ಜಿ|| ಸೋಲ್ಲಾಪೂರ ರವರು ಮತ್ತು ನನ್ನ ತಂದೆಯಾದ ಯಶವಂತ ತಂದೆ ಭೀಮಶಾ ಬಾಸ್ಲೇಗಾಂವಕರ್ ಹಾಗೂ ತಾಯಿಯಾದ ಅಂಬುಬಾಯಿ ಹಾಗೂ ನನ್ನ ತಂದೆಯ ಗೆಳೆಯನವರಾದ ದವಲಪ್ಪ ತಂದೆ ದತ್ತಪ್ಪ ಜಮಾದಾರ ರವರೆಲ್ಲರೂ ಕೂಡಿಕೊಂಡು ಮೋಟರ ಸೈಕಲಗಳ ಮೇಲೆ ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಹೋಗಿರುತ್ತೇವೆ. ಘತ್ತರಗಾಕ್ಕೆ ಹೋಗುವಾಗ ನಾನು ಮತ್ತು ದವಲಪ್ಪ ಜಮಾದಾರ ರವರು ನಮ್ಮ ಮೋಟರ ಸೈಕಲ ಮೇಲೆ ಹಾಗೂ ನನ್ನ ತಂದೆ ಹಾಗೂ ತಾಯಿಯವರು ನಮ್ಮ ತಂದೆಯ ಗೆಳೆಯರಾದ ಗೌರಿಶಂಕರ ಕೋಳಿ ರವರ ಮೋಟರ ಸೈಕಲ ನಂ ಎಮ್.ಹೆಚ್-13 ಡಿಸಿ-1358 ನೇದ್ದರ ಮೇಲೆ ಹೋಗಿರುತ್ತೇವೆ. ದರ್ಶನ ಮಾಡಿಕೊಂಡು ಮರಳಿ ನಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಸಾಯಂಕಾಲ 4:30 ಗಂಟೆಯ ಸುಮಾರಿಗೆ ಅಫಜಲಪೂರ ಘತ್ತರಗಾ ರೋಡಿಗೆ ಇರುವ ಹಿಂಚಗೇರಾ ಗ್ರಾಮದ ತಿರುವಿನಲ್ಲಿ ಹೋಗುತ್ತಿದ್ದಾಗ ಮುಂದೆ ಹೊಗುತ್ತಿದ್ದ ನಮ್ಮ ತಂದೆ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ತಾಯಿ ರೋಡಿಗೆ ಇರುವ ಸ್ಪೀಡ್ ಬ್ರೇಕ್ಕರ್ ಮೇಲೆ ಕೆಳಗೆ ಬಿದ್ದಿದ್ದರಿಂದ ತಲೆಗೆ ಭಾರಿ ಒಳಪೆಟ್ಟಾಗಿ ಪ್ರಜ್ಞೆ ತಪ್ಪಿರುತ್ತದೆ. ಆಗ ನಾವು 108 ಅಂಬ್ಯೂಲೆನ್ಸ ವಾಹನಕ್ಕೆ ಪೋನ್ ಮಾಡಿದ್ದು ಸ್ಥಳಕ್ಕೆ 108 ವಾಹನ ಬಂದ ನಂತರ ಅದರಲ್ಲೆ ಹಾಕಿಕೊಂಡು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಅಂಬ್ಯೂಲೆನ್ಸ ವಾಹನದಲ್ಲಿ ಕರೆದುಕೊಂಡು ಸೋಲ್ಲಾಪೂರದ ಶ್ರೀ ಮಾರ್ಕಂಡಯ್ಯ ಸಹಕಾರಿ ರುಗ್ಣಾಲಯ ದಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿ ಆಗದೆ ಸಾಯಂಕಾಲ 6:20 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ. ಸದರಿ ಘಟನೆಯು ನನ್ನ ತಂದೆಯವರು ಮೋಟರ ಸೈಕಲ ನಂ ಎಮ್.ಹೆಚ್-13 ಡಿಸಿ-1358 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ತಾಯಿ ರೋಡಿಗೆ ಇರುವ ಸ್ಪೀಡ್ ಬ್ರೇಕ್ಕರ್ ಮೇಲೆ ಕೆಳಗೆ ಬಿದ್ದಿದ್ದರಿಂದ ತಲೆಗೆ ಭಾರಿ ಒಳಪೆಟ್ಟಾಗಿ ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಳಂದ ಠಾಣೆ : ದಿನಾಂಕ 28/12/2018 ರಂದು ನನ್ನ ಮಗ & ವಿಶಾಲ ತಂದೆ ರಾಜಶೇಖರ ಸರಸಂಬಿ ರವರಿಬ್ಬರೂ ಮೋಟಾರ ಸೈಕಲ್ ನಂ, ಕೆಎ-32, ಇಕ್ಯೂ-8424 ನೇದ್ದರ ಮೇಲೆ ನನ್ನ ಹತ್ತೀರ ಬಂದು ನನಗೆ ಆಳಂದಕ್ಕೆ ಮದುವೆ ಸಂತೆಗೆ ಹೋಗಿ ಬರುತ್ತೇವೆ ಅಂತಾ ಹೇಳಿ ಸದರಿ ಮೋಟರ ಸೈಕಲನ್ನು ವಿಶಾಲ ಇತನು ಚಲಾಯಿಸಿಕೊಂಡು ನನ್ನ ಮಗನಿಗೆ ಹಿಂದೆ ಕುಡಿಸಿಕೊಂಡು ಆಳಂದ ಕ್ಕೆ ಹೋಗಿ ಬರುತ್ತೇವೆ ಅಂತಾ ಹೇಳಿ ಹೋಗಿದ್ದು ನಂತರ 05;40 ಪಿ.ಎಂ ಸುಮಾರಿಗೆ ನಮ್ಮೂರಿನ ಮಡಿವಾಳಯ್ಯ ತಂದೆ ಗುರುಲಿಂಗಯ್ಯ ಹಿರೇಮಠ & ಬಸವರಾಜ ತಂದೆ ರಾಮಚಂದ್ರ ನಂದಗೂರ ರವರು ಫೋನ ಮಾಡಿ ನನ್ನ ಮಗ & ವಿಶಾಲ ಸರಸಂಬಿ ರವರುಗಳು ಹಳ್ಳಿ ಸಲಗರ ತಾಂಡಕ್ಕೆ ಹೊಗು ರೋಡಿನ ಕ್ರಾಸ್ ಹತ್ತೀರ ಮೋಟಾರ ಸೈಕಲ್ ನ್ನು ಸ್ಕೀಡ್ಡಾಗಿ ಬೀದ್ದಿದ್ದು, ಚಂದ್ರಕಾಂತ ಇತನಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ಬಲಗಾಲಿನ ಮೋಳಕಾಲಿನ ಕೇಳಗೆ ಭಾರಿ ರಕ್ತಗಾಯ ವಾಗಿದ್ದು ಮತ್ತು ವಿಶಾಲ ಇತನಿಗೆ ತಲೆಗೆ ಭಾರಿ ರಕ್ತಗಾಯ ಕೈ ಕಾಲುಗಳಿಗೆ ಅಲ್ಲಲ್ಲಿ ಸಣಪುಟ್ಟ ತರಚೀದ ಗಾಯಗಳಾಗಿದ್ದು ಕಾರಣ ನೀವು ಬನ್ನೀರಿ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಘಟನಾ ಸ್ಥಳಕ್ಕೆ ಹೋಗಿ ನೊಡಲಾಗಿ ನನ್ನ ಮಗನು ರಸ್ತೆಯ ಅಪಘಾತದಲ್ಲಿ ಹಣೆಗೆ, ಎರಡು ಕಾಲುಗಳಿಗೆ ಗಂಭೀರ ಸ್ವರೂಪದ ರಕ್ತಗಾಯ ಹೊಂದಿ ನರುಳಾಡುತಿದ್ದು ಮಾತನಾಡುವ ಸ್ಥೀತಿಯಲ್ಲಿ ಇದ್ದಿರುವದಿಲ್ಲ ಅಲ್ಲೇ ನಿಂತಿದ ವಿಶಾಲ ಸರಸಂಬಿ ಇವರಿಗೆ ವಿಚಾರಿಸಿದಾಗ ತನ್ನ ಮೋಟಾರ ಸೈಕಲ್ ನಂ, ಕೆಎ-32, ಇಕ್ಯೂ-8424 ನೇದ್ದರ ಮೇಲೆ ನಾನು ಚಲಾಯಿಸಿಕೊಂಡು ಹಿಂದೆ ಚಂದ್ರಕಾಂತನಿಗೆ ಕೂಡಿಸಿಕೊಂಡು ಹಳ್ಳಿ ಸಲಗರದಿಂದ ಆಳಂದ ಕಡೆಗೆ ಹೋಗುತ್ತಿದ್ದಾಗ ಒಮ್ಮೇಲೇ ಮೋಟಾರ ಸೈಕಲ್ ಸ್ಕೀಡ್ಡಾಗಿ ಬಿದ್ದಿದ್ದು ಇರುತ್ತದೆ ಅಂತಾ ತಿಳಿಸಿದ್ದರಿಂದ ನಾವೆಲ್ಲರೂ ಕೂಡಿಕೊಂಡು ಎರಡು ಜನರಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ದಿನಾಂಕ 28/12/2018 ರಿಂದ ದಿನಾಂಕ 01/01/2019 ರಂದು ಗಾಯಾಳು ಚಂದ್ರಕಾಂತ ತಂದೆ ಕಾಶಪ್ಪ ಪುಜಾರಿ ಇತನು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಕಾಶಪ್ಪ ತಂದೆ ಶರಣಪ್ಪ ಪುಜಾರಿ ಸಾ; ಹಳ್ಳಿ ಸಲಗರ ತಾ; ಆಳಂದ ಜಿ; ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವು ಪ್ರಕರಣ : ಅಫಜಲಪೂರ ಠಾಣೆ : ದಿನಾಂಕ 01/01/2019 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಪ್ರತಿ ದಿವಸದಂತೆ ನಾವು ಮನೆಯವರೆಲ್ಲರು ಊಟ ಮಾಡಿ ಮಲಗಿಕೊಂಡಿರುತ್ತೇವೆ. ಇಂದು ದಿನಾಂಕ 02//01/2019 ರಂದು ಬೆಳಗ್ಗಿನ ಜಾವ 05.00 ಗಂಟೆ ಸುಮಾರಿಗೆ ಎದ್ದು ತಲಬಾಗಿಲು ತೆರೆಯಲು ಹೋದಾಗ ಅದಕ್ಕೆ ಹೊರಗಿನ ಕೊಂಡಿ ಹಾಕಿತ್ತು ಆಗ ನಾನು ಹಿಂದಿನ ಬಾಗಿಲಿನಿಂದ ತಲಬಾಗಿಲು ಕಡೆ ಹೋದಾಗ ತಲಬಾಗಿಲಗೆ ಹೊರಗಿನಿಂದ ಕೊಂಡಿ ಹಾಕಿದ್ದು ಮತ್ತು ನಮ್ಮ ಅಂಗಡಿಯ ಸೆಟರ ಕೀಲಿ ಮುರಿದು ಸೆಟರ ಬಾಗಿಲು ಅರ್ಧಕ್ಕೆ ತೆರೆದಿತ್ತು ಆಗ ನಾನು ಗಾಬರಿಯಾಗಿ ಮನೆಯವರೇಲ್ಲರಿಗೂ ಎಬ್ಬಿಸಿ ಈ ವಿಷಯ ತಿಳಿಸಿದೆನು ನಂತರ ಒಳಗಡೆ ಹೋಗಿ ನೋಡಲು ಅಂಗಡಿಯ ಒಳಗಡೆ ರೂಮಿನಲಿದ್ದ ಅಲಮಾರಿ ಕಿಲಿ ಮುರಿದು ಲಾಕರನ ಕಿಲಿ ಸಹ ಮುರಿದು ಅದರಲ್ಲಿನ ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಅಲಮಾರಿ ಲಾಕರದಲ್ಲಿ ಇಟ್ಟಿದ್ದ 1) 40 ಗ್ರಾಮ ಬಂಗಾರದ ಮಂಗಳ ಸೂತ್ರ 2) 10 ಗ್ರಾಂ ಬಂಗಾರದ ಲಾಕೇಟ್ 3) 05 ಗ್ರಾಂ ಬಂಗಾರದ ಉಂಗುರ ಇವುಗಳೆಲ್ಲವು ಇದ್ದಿರಲಿಲ್ಲ ದಿನಾಂಕ 01/01/2019 ರ ರಾತ್ರಿ 10.00 ಗಂಟೆಯಿಂದ ದಿನಾಂಕ 02/01/2019 ರ ಬೆಳಿಗ್ಗಿನ ಜಾವ 05.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಅಂಗಡಿಯ ಸೆಟರ ಬಾಗಿಲಿಗೆ ಹಾಕಿದ ಕಿಲಿ ಮುರಿದು ಒಳಗೆ ಪ್ರಮೇಶಿಸಿ ಒಳಗಡೆ ರೂಮಿನ ಅಲಮಾರಿಯ ಮತ್ತು ಅಲಮಾರಿ ಲಾಕರಿನ ಕಿಲಿ ಮುರಿದು ಅಂದಾಜು 55 ಗಾಂ ಬಂಗಾರದ ಆಭರಣಗಳು ಅ.ಕಿ 1,65,000/-ರೂಪಾಯಿ ಕಿಮ್ಮತ್ತಿನದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಯಾ ಶ್ರೀ ಸದಾಶಿವ ತಂದೆ ಲೇಸಪ್ಪ ತಳವಾರ ಸಾ: ಉಡಚಾಣ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮ್ಯಾನ್ಮಾರ್‌ನಿಂದ ಓಡಿಬರುತ್ತಿರುವ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಂದಾಗಿ, ಬಾಂಗ್ಲಾಕ್ಕೆ ವಲಸೆ ಬಂದಿರುವುದರಿಂದ ಇವರ ನಿರ್ವಹಣೆ ನಡೆಸಲು ಬಾಂಗ್ಲಾ ಒದ್ದಾಡುತ್ತಿತ್ತು. ಇದೇ ಸಂದರ್ಭದಲ್ಲಿ ನೆರೆಯ ರಾಷ್ಟ್ರದ ನೆರವಿಗೆ ಭಾರತ ಧಾವಿಸಿದೆ. ದೇಶದ ಭದ್ರತೆ ವಿಷಯದಲ್ಲಿ ರೋಹಿಂಗ್ಯಾ ಮುಸ್ಲಿಮರು ದೇಶಕ್ಕೆ ಕಂಟಕವಾಗಬಹುದು ಎಂಬ ಗುಪ್ತಚರ ಮಾಹಿತಿಗಳಿದ್ದರೂ ಅವರಿಗೆ ಭಾರತದಲ್ಲಿ ಆಶ್ರಯ ನೀಡಬೇಕಾ..? ರೋಹಿಂಗ್ಯಾಗಳಿಗೆ ನೆಲೆ ನೀಡಲು ಮುಸ್ಲಿಂ ರಾಷ್ಟ್ರಗಳೇ ಹಿಂಜರಿಯುತ್ತಿರುವಾಗ ಭಾರತ ದೇಶವೇಕೆ ಅವರಿಗೆ ಆಶ್ರಯ ನೀಡಬೇಕು..? ರೋಹಿಂಗ್ಯಾಗಳ ನೆಲೆ ರಖಿನೆ ಪ್ರಾಂತ್ಯದ ಹಳ್ಳಿಯೊಂದರಲ್ಲಿ 28 ಹಿಂದೂಗಳ ಮಾರಣ ಹೋಮ ನಡೆಸಿರುವ ರೋಹಿಂಗ್ಯಗಳು ಭಾರತದ ಭದ್ರತೆಯ ದೃಷ್ಟಿಯಲ್ಲಿ ಮಾರಕವಾಗುವುದಂತೂ ಖಚಿತ. ರೋಹಿಂಗ್ಯಾಗಳಿಗೆ ಆಶ್ರಯ ನೀಡಲು ಭಾರತ ನಿರಾಕರಿಸುತ್ತಿದೆ.. ಇಡೀ ಭಾರತವನ್ನ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಉದ್ದೇಶ ಉಗ್ರರು ರೋಹಿಂಗ್ಯಾ ನಿರಾಶ್ರಿತರೊಂದಿಗೆ ದೇಶದೊಳಕ್ಕೆ ಬರುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ರೋಹಿಂಗ್ಯಾ ಮುಸ್ಲಿಮರು ನೆಲೆ ನಿಂತಿದ್ದಾರೆ. ಇವರನ್ನು ಉಗ್ರ ಸಂಘಟನೆಗಳು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಕಳೆದ ಆಗಸ್ಟ್ ನಲ್ಲಿ ಹೇಳಿತ್ತು. ರೋಹಿಂಗ್ಯಾಗಳಿಗೆ ಯಾಕೆ ಆಶ್ರಯ ನೀಡಬಾರದು? – ಐಸಿಸ್‌, ಐಎಸ್‌ಐ ಮುಂತಾದ ಅನ್ಯ ದೇಶಗಳ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಭಯ. ಬಾಂಗ್ಲಾದೇಶದ ನಿರಾಶ್ರಿತರಿಂದ ಈಗಾಗಲೇ ಉಂಟಾಗಿರುವ ದೇಶದ ಆಂತರಿಕ ಭದ್ರತೆಯ ಆತಂಕ. ಮ್ಯಾನ್ಮಾರ್‌ನ ಜೊತೆ ಸಂಬಂಧ ಕೆಡುವ ಕಳವಳ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಬಹಳ ಹಿಂದಿನಿಂದಲೂ ಈ ಬಗ್ಗೆ ಚರ್ಚೆಗಳು ಆಗುತ್ತಲೇ ಇವೆ. ಚರ್ಚೆಗಳಿಗೂ ನಿಲುಕದ ಭವಿಷ್ಯದ ಫಲಿತಾಂಶಗಳ ಬಗ್ಗೆ ಖಚಿತವಾದ ನಿರ್ಧಾರ ಸಾಧ್ಯವಿಲ್ಲದ ಆದರೆ ಪ್ರಕೃತಿಯ ಮೇಲಿನ ಬಹುದೊಡ್ಡ ಹಲ್ಲೆಯೋ ಅಥವಾ ನಿಯಂತ್ರಣವೋ ಅಥವಾ ಸಾಧನೆಯೋ ತುಂಬಾ ಗಂಭೀರವಾಗಿ ಯೋಚಿಸಬೇಕಾದ ವಿಷಯ......... ಕೇವಲ ಪರಿಸರ ತಜ್ಞರ ವಿರೋಧ - ನೀರಾವರಿ ತಜ್ಞರ ತಾಂತ್ರಿಕ ಸಾಮರ್ಥ್ಯ - ದೇಶಭಕ್ತರ ಉತ್ಸಾಹ - ರೈತರ ಲಾಭ - ಸರ್ಕಾರದ ಸಾಧನೆ ಎಂಬ ಅಂಶಗಳ ಮೇಲೆ ಮಾತ್ರ ಇದನ್ನು ನಿರ್ಧರಿಸಲು ಸಾಧ್ಯವಿಲ್ಲ...... ಇಡೀ ಪ್ರಕೃತಿಯ ಸಮಗ್ರ ದೃಷ್ಟಿಯಿಂದ ಇದನ್ನು ವಿಶ್ಲೇಷಿಬೇಕಾಗುತ್ತದೆ....... ನೀರಾವರಿ ತಜ್ಞನೂ ಅಲ್ಲದ ಪರಿಸರ ತಜ್ಞನೂ ಅಲ್ಲದ ಇಂಜಿನಿಯರ್ ಕೂಡ ಅಲ್ಲದ ಸಾಮಾನ್ಯನಾದ ನಾನು ಈ ಬಗ್ಗೆ ಒಂದು ಸಣ್ಣ ಅಭಿಪ್ರಾಯ ವ್ಯಕ್ತಪಡಿಸಲು ಇಚ್ಚಿಸುತ್ತೇನೆ............ ಇಡೀ ಮನುಕುಲದ ನಾಗರಿಕತೆ ಪ್ರಾರಂಭವಾಗುವುದೇ ನದಿ ತೀರದ ಪ್ರಾಂತಗಳಲ್ಲಿ. ಕಾಡುಗಳ ಅಲೆದಾಟದ ನಂತರ ಒಂದು ನಿಶ್ಚಿತ ಜಾಗದಲ್ಲಿ ವಾಸಿಸಲು ಪ್ರಾರಂಭಿಸಿದಾಗ ಆತನಿಗೆ ವ್ಯವಸಾಯದಿಂದ ಹಿಡಿದು ಎಲ್ಲಾ ದೃಷ್ಟಿಯಿಂದಲೂ ಅನುಕೂಲಕರವಾಗಿದ್ದ ಸ್ಥಳ ನದಿಯ ತೀರ - ಮುಖಜ ಭೂಮಿ...... ಅನಂತರ ತನ್ನ ರಕ್ಷಣೆ - ಅನುಕೂಲಗಳಿಗೆ ತಕ್ಕಂತೆ ಮನೆ ಆಹಾರ ಸಂಪರ್ಕ ಅಡಳಿತ ಇತ್ಯಾದಿಗಳನ್ನು ರೂಪಿಸಿಕೊಂಡ...... ಜನಸಂಖ್ಯೆ ಬೆಳೆದಂತೆ ಹಳ್ಳಿ ಊರು ಪಟ್ಟಣ ನಗರಗಳನ್ನು ನಿರ್ಮಿಸಿದ..... ಈ ಎಲ್ಲಾ ಸಂದರ್ಭದಲ್ಲೂ ಪ್ರಕೃತಿಯ ಜೊತೆ ಅದಕ್ಕೆ ಪೂರಕವಾಗಿ ವರ್ತಿಸುತ್ತಿದ್ದ ಮತ್ತು ಅವನ ಅವಶ್ಯಕತೆಗಳು ಮಿತಿಯಲ್ಲಿ ಇದ್ದುದರಿಂದ ಪ್ರಕೃತಿಯ ವಿರುದ್ಧದ ಕೆಲವು ನಿಲುವುಗಳು ಅಷ್ಟೇನು ಹೆಚ್ಚು ಭಾದಿಸಲಿಲ್ಲ.......... ಆದರೆ ಅನಂತರ ಅತಿಯಾದ ಜನಸಂಖ್ಯೆ ಮತ್ತು ಆತನ ತೀರದ ದಾಹ ಹೆಚ್ಚಾಗಿ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಗೆ ವಿರುದ್ಧವಾದ ಯೋಜನೆಗಳನ್ನು ಕೈಗೆತ್ತಿಕೊಂಡ....... ಅಣೆಕಟ್ಟೆಗಳ ನಿರ್ಮಾಣ - ಜಲಾಶಯಗಳಲ್ಲಿ ನೀರು ಸಂಗ್ರಹ ಅದರ ಮೊದಲ ಪ್ರಯೋಗ, ಹಸಿರು ಕ್ರಾಂತಿಯ ಪರಿಣಾಮ ಕೃಷಿಯ ಅಧಿಕ ಫಸಲಿಗಾಗಿ ರಾಸಾಯನಿಕಗಳ ಸಿಂಪಡಣೆ ಭೂಮಿಯ ಫಲವತ್ತತೆಯ ನಾಶದ ಎರಡನೇ ಪ್ರಯೋಗ, ಪರಿಸರ, ಕಾಡು, ಅಲ್ಲಿನ ಜೀವ ಜಂತುಗಳು, ಬೆಟ್ಟು ಗುಡ್ಡಗಳ ಮೇಲೆ ಆಕ್ರಮಣ ಆತನ ಮೂರನೇ ಪ್ರಯೋಗ...... ಈ ಹಿನ್ನೆಲೆಯಲ್ಲಿ ನದಿ ಜೋಡಣೆಯನ್ನು ನೋಡಬೇಕಾಗಿದೆ........ ಬಹುಶಃ ಇಂದಿನ ಭಾರತದ ನಗರೀಕರಣದ ಪ್ರಭಾವದಿಂದಾಗಿ ಬಹುತೇಕ ಜನರಿಗೆ ನದಿಗಳ ಅಗಾಧತೆಯ ಕಲ್ಪನೆಯೂ ಇರುವುದಿಲ್ಲ. ಅಮೆಜಾನ್ - ನೈಲ್ ಮುಂತಾದ ನದಿಗಳ ಆಳ ಅಗಲ ವಿಸ್ತೀರ್ಣ ರಭಸ ಹರಿಯುವ ಭಯಾನಕತೆ ಅಡಗಿರುವ ವಿಸ್ಮಯಗಳು ಊಹೆಗೂ ನಿಲುಕದ್ದು....... ದಕ್ಷಿಣ ಭಾರತದಲ್ಲಿ ಹರಿಯುವ ಕೃಷ್ಣಾ ಕಾವೇರಿ ಭೀಮಾ ಗೋದಾವರಿ ನೇತ್ರಾವತಿ ವೃಷಭಾವತಿ ಮುಂತಾದವುಗಳು ಆ ಅಗಾಧತೆಗೆ ಹೋಲಿಸಿದರೆ ಸಣ್ಣ ನದಿಗಳು. ಅತಿಯಾದ ಮಳೆ ಸಂದರ್ಭದಲ್ಲಿ ಬಿಟ್ಟರೆ ಅಂತಹ ಅಪಾಯಕಾರಿ ನದಿಗಳಲ್ಲ. ಈ ಹೋಲಿಕೆಯೊಡನೆ ಉತ್ತರ ಭಾರತದ ಗಂಗಾ ಸಿಂಧೂ ಬ್ರಹ್ಮಪುತ್ರ ನರ್ಮದಾ ಇತ್ಯಾದಿ ನದಿಗಳನ್ನು ಹೆಚ್ಚು ಕಡಿಮೆ ಮಧ್ಯಮ ಗಾತ್ರದ ನದಿಗಳೆಂದು ಕರೆಯಬಹುದು........ ನದಿ ಸಣ್ಣ ನೀರಾವರಿ ಯೋಜನೆಯ ಉದಾಹರಣೆ ನೋಡೋಣ....... ಕರ್ನಾಟಕದ ನೇತ್ರಾವತಿ ನದಿಯ ಹೆಚ್ಚುವರಿ ನೀರನ್ನು ಚಿಕ್ಕಬಳ್ಳಾಪುರ ಕೋಲಾರದ ವರೆಗೆ ಹರಿಸುವ ಎತ್ತಿನಹೊಳೆ ಎಂಬ ಯೋಜನೆಯಿಂದಲೇ ( ಸರಿಯೋ - ತಪ್ಪೋ ನನಗೆ ಖಚಿತವಾಗಿ ತಿಳಿದಿಲ್ಲ ) ಕಾಡು ಭೂಮಿ ಜೀವಸಂಕುಲದ ಮೇಲಾಗುವ ಪರಿಣಾಮ ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಎಂದು ಹೇಳಲಾಗುತ್ತದೆ.( ಚಿಕ್ಕಬಳ್ಳಾಪುರ - ಕೋಲಾರದ ಜನರ ನೀರಿನ ಅವಶ್ಯಕತೆ ಅದಕ್ಕಿಂತ ಹೆಚ್ಚು ಎನ್ನುವುದು ನಿಜ. ಆದರೆ ಪರ್ಯಾಯ ಮಾರ್ಗಗಳು ಹುಡುಕಬೇಕಿದೆ.) ಈ ಎತ್ತಿನಹೊಳೆ ಯೋಜನೆಯ ಹಲವಾರು ಪಟ್ಟು ದೊಡ್ಡ ಯೋಜನೆ ನಿನ್ನೆ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ ನದಿಗಳ ಜೋಡಣೆ........ ಅಂದರೆ ಪ್ರಕೃತಿಯ ಮೇಲೆ ಭೂಮಿಯ ಮೇಲೆ ಬೀಳಬಹುದಾದ ಒತ್ತಡ ಗಮನಿಸಿ. ಜೊತೆಗೆ ಎಲ್ಲರೂ ಅಂದಾಜಿಸಿದಂತೆ ನದಿಗಳ ಪ್ರವಾಹವನ್ನು ನಿಯಂತ್ರಿಸುವುದು ಮನುಷ್ಯ ಮಾತ್ರನಿಗೆ ಇನ್ನೂ ಅಸಾಧ್ಯವೇ ಸರಿ............ ಇಡೀ ಕಾಡುಗಳು - ಊರುಗಳು - ಸಾಕಷ್ಟು ಜನರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾರೆ. ಪ್ರಕೃತಿಯ ಶ್ರೇಷ್ಠ ಸೃಷ್ಟಿ ಜೀವಸಂಕುಲ ನಾಶವಾಗುತ್ತದೆ........ ಈಗ ಯೋಚಿಸುವ ಸರದಿ ನಮ್ಮದು..... ಪ್ರಕೃತಿಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸುವುದು ಮತ್ತು ತಿರುಗಿಸುವುದನ್ನು ಬಿಟ್ಟು ಪ್ರಕೃತಿಯ ಮೂಲ ಆಶಯಕ್ಕೆ ಅನುಗುಣವಾಗಿ ನಾವು ಬದುಕು ರೂಪಿಸಿಕೊಳ್ಳುವುದು. ಅಂದರೆ ನೀರು ಹೇಗೆ ತನ್ನ ಗುಣಕ್ಕೆ ತಕ್ಕಂತೆ ಚಲಿಸುತ್ತದೋ ಆ ಪ್ರದೇಶದಲ್ಲಿ ನಾವು ವಾಸಿಸಬೇಕೆ ಹೊರತು ನಾವು ವಾಸಿಸುವ ಜಾಗಕ್ಕೆ ಅದನ್ನು ಕರೆದುಕೊಳ್ಳಬಾರದು. ಸಣ್ಣ ಅವಶ್ಯಕ ಮತ್ತು ಅನಿವಾರ್ಯ ಅನುಕೂಲ ಹೊರತುಪಡಿಸಿ...... ಇಲ್ಲದಿದ್ದರೆ ಆಗಲೇ ಇದರಿಂದ ನಿಜವಾದ ದುರಂತ ಪ್ರಾರಂಭವಾಗುತ್ತದೆ. ಅದಕ್ಕೆ ಬದಲಾಗಿ ಆ ಯೋಜನೆಗೆ ಖರ್ಚುಮಾಡಲಾಗುತ್ತದೆ ಎಂದು ಹೇಳಲಾದ ಬೃಹತ್ ಹಣಕ್ಕಿಂತ ಕಡಿಮೆ ಖರ್ಚಿನಲ್ಲಿ ಅತ್ಯಂತ ಆಧುನಿಕ ಮತ್ತು ಬೃಹತ್ ಕೆರೆಗಳನ್ನು ನಿರ್ಮಿಸಿ ರೈತರಿಗೆ ಅತ್ಯುತ್ತಮ ಮಟ್ಟದ ನೀರಾವರಿ ಸೌಕರ್ಯ ಒದಗಿಸಬಹುದಾಗಿದೆ..... ರೈತರಲ್ಲಿ ವೈಜ್ಞಾನಿಕ ಕೃಷಿ ಪದ್ದತಿಯನ್ನು ಪ್ರೋತ್ಸಾಹಿಸಿ ನದಿ ತೀರದ ಪ್ರದೇಶಗಳಲ್ಲಿ ಮತ್ತಷ್ಟು ಕೃಷಿಯೋಗ್ಯ ಭೂಮಿಯನ್ನು ಅಭಿವೃದ್ಧಿ ಪಡಿಸುವುದು ಮತ್ತೊಂದು ಉತ್ತಮ ಪ್ರಯೋಗ. ಕೊಳವೆ ಮಾರ್ಗದ ಮುಖಾಂತರ ಕಡಿಮೆ ಖರ್ಚು ಮತ್ತು ಕಡಿಮೆ ಪರಿಸರ ಹಾನಿಯ ಮೂಲಕ ನೀರನ್ನು ಪೂರೈಸುವ ಯೋಜನೆಯ ಬಗ್ಗೆ ಸಹ ಯೋಚಿಸಬಹುದು. ಇಷ್ಟೇ ಅಲ್ಲದೇ ಇನ್ನೂ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಪ್ರಕೃತಿಯ ಸಹಜತೆಯನ್ನು ಕಾಪಾಡುತ್ತಾ ನಾವು ಬದುಕಲು ಪ್ರಯತ್ನಿಸಬೇಕು...... ಅಭಿವೃದ್ಧಿ ಬೇಕು ಆದರೆ ಅದಕ್ಕಾಗಿ ಪರಿಸರ ಮೇಲೆ ಹಲ್ಲೆ ತುಂಬಾ ಕಡಿಮೆ ಪ್ರಮಾಣದಲ್ಲಿ ಇರಬೇಕು. ಶೋಕಿಗಾಗಿ, ಓಟಿಗಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ, ಹೆಸರಿಗಾಗಿ ಪರಿಸರ ನಾಶದ ಬೇಜವಾಬ್ದಾರಿ ಯೋಜನೆಗಳನ್ನು ಯಾವ ಸರ್ಕಾರಗಳು ಮಾಡಬಾರದು.
ಘಟನೆ ಒಂದು. ಆಸ್ತಿ ವೈಷಮ್ಯದಿಂದ ಉತ್ತರ ಪ್ರದೇಶದ ಗಾಜಿಯಾಬಾದಿನ ಮಹಿಳೆಯ ಮೇಲೆ ಅತ್ಯಾಚಾರ. ಗುಪ್ತಾಂಗವನ್ನು ಕಬ್ಬಿಣದ ಸಲಾಕೆಯಿಂದ ಘಾಸಿಗೊಳಿಸಿ ಅವಳ ಕೈ ಕಾಲು ಕಟ್ಟಿ, ಕೆಲಸಕ್ಕೆ ಬಾರದ ಕಸದ ಹಾಗೆ ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಮೇಲೆ ಎಸೆದು ಹೋದದ್ದು. ಘಟನೆ ಎರಡು, ಇರಾನಿನಲ್ಲಿ ಯುವತಿಯೊಬ್ಬಳು ಹಿಜಾಬ್‌ ಸರಿಯಾಗಿ ಧರಿಸಿಲ್ಲವೆಂಬ ಕಾರಣಕ್ಕೆ ಪೋಲೀಸರೇ ಅವಳನ್ನು ಕೊಂದದ್ದು. ಮೊದಲ ಕೃತ್ಯಕ್ಕೆ ಆಸ್ತಿಯ ವೈಷಮ್ಯ, ಎರಡನೆಯ ಕೃತ್ಯಕ್ಕೆ ಧರ್ಮದ ಗಡಿಯನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮೀರಿದ್ದು ಕಾರಣ. ಮೊದಲನೆಯದರಲ್ಲಿ ಮಹಿಳೆಯ ಆಸ್ತಿಯ ಒಡೆತನವನ್ನು ಸಹಿಸದ ಮನಃಸ್ಥಿತಿಗೆ ಅವಳನ್ನು ತುಳಿಯಲು ಹೊಳೆದದ್ದು ಅತ್ಯಾಚಾರವೆಂಬ ಪೈಶಾಚಿಕತೆ. ಯಾಕೆ ಹೆಣ್ಣೆಂದರೆ ಈ ದ್ವೇಷ? ಈ ದ್ವೇಷದ ಮೂಲ ಎಲ್ಲಿಯದು? ಇತ್ತೀಚಿಗೆ ಎರಡು ಪುಸ್ತಕ ಓದಿದೆ. ಒಂದು ಎಚ್.‌ ಎಸ್‌. ಶ್ರೀಮತಿಯವರು ಅನುವಾದಿಸಿದ ʼಅಧಿಕಾರ ಮತ್ತು ಅಧೀನತೆ, ಕೇಟ್‌ ಮಿಲೆಟ್‌ ವಿಚಾರಗಳು. ಇನ್ನೊಂದು ತೆಲುಗು ಪುಸ್ತಕ, ಫೂಲನ್‌ ದೇವಿಯ ಆತ್ಮ ಚರಿತ್ರೆ. ಎರಡೂ ಪುಸ್ತಕಗಳ ಸಾಮ್ಯತೆಯನ್ನು ಕಂಡು ಬೆರಗಾಯಿತು. ಒಂದರಲ್ಲಿ ಸೈದ್ಧಾಂತಿಕ ವಿಚಾರಗಳು, ಮತ್ತೊಂದರಲ್ಲಿ ಅದನ್ನು ಭಟ್ಟಿ ಇಳಿಸಿದಂತಿದ್ದ ಥೇಟು ನಿಜ ಜೀವನದ ಅನುಭವಗಳು. ಸ್ತ್ರೀ ದ್ವೇಷಕ್ಕೆ ಕಾರಣಗಳನ್ನು ಕೇಟ್‌ ಮಿಲೆಟ್‌, ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಧಾರ್ಮಿಕ ಪಠ್ಯ, ಮಿಥ್‌ಗಳಲ್ಲಿ ಹುಡುಕುತ್ತಾಳೆ. ಗಂಡು ಮತ್ತು ಹೆಣ್ಣಿನ ನಡುವೆ ಇರುವ ಅಧಿಕಾರ ಮತ್ತು ಅಧೀನತೆಯ ಸಂಬಂಧದ ಮೂಲ ಇರುವುದು ವ್ಯವಸ್ಥೆಯು ನಿರ್ಧರಿಸಿದ ಅವರಿಬ್ಬರ ಲೈಂಗಿಕ ಸಂಬಂಧದ ಸ್ವರೂಪದಲ್ಲಿ. ಸಹಜವಾಗಿರಬೇಕಾದ ಈ ಸಂಬಂಧವು ಹೆಣ್ಣನ್ನು ʼಪಳಗಿʼಸಲು ಇರುವ ದಾರಿ ಎಂಬ ಭ್ರಮೆಯನ್ನು ಬಿತ್ತಿರುವುದು ವ್ಯವಸ್ಥೆ. ಸಮಾಜವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ವ್ಯವಸ್ಥೆಯು ರೂಪಿಸಿದ ತಂತ್ರವೇ ಲಿಂಗ, ವರ್ಗ, ಜಾತಿ ಶ್ರೇಣೀಕರಣ. ಈ ಎಲ್ಲಾ ಶ್ರೇಣಿಗಳಲ್ಲೂ ಗಂಡು, ಹೆಣ್ಣು ಇದ್ದೇ ಇರುವುದರಿಂದ ಕುಟುಂಬದ ಹಂತದಲ್ಲಿ ಗಂಡು, ಹೆಣ್ಣಿನ ನಡುವೆ ಶ್ರೇಣೀಕರಣ ಬಿತ್ತುವುದು ಯಶಸ್ವಿಯಾದಲ್ಲಿ ವ್ಯವಸ್ಥೆಗೆ ಬೇಕಾದ ಶ್ರೇಣೀಕೃತ ಸಮಾಜ ಸೃಷ್ಟಿಸುವುದು ಬಲು ಸುಲಭ. ಗಂಡು ಹೆಣ್ಣಿನ ನಡುವಿನ ಜೈವಿಕ ವೈವಿಧ್ಯತೆಯನ್ನೇ ದಾಳವಾಗಿ ಬಳಸಿ ಹೆಣ್ಣನ್ನು ʼಅನ್ಯʼಳಾಗಿಸಿದಾಗ ಅಲ್ಲಿಗೆ ಇಬ್ಬರ ಒಗ್ಗಟ್ಟು ಒಡೆದ ಹಾಗಾಯಿತು. ಕೃಷಿಗೆ ಪೂರ್ವದಲ್ಲಿ ಸಹಜವಾಗಿದ್ದ ಲೈಂಗಿಕ ಸಂಬಂಧಗಳು ಕೃಷಿಯ ಹಂತದಲ್ಲಿ ಭೂಮಿಯ ಮೇಲಿನ ಒಡೆತನದ ಜತೆಗೆ ಮೂರ್ತವಾಗಿ ಕಾಣುತ್ತಿದ್ದ ಹೆಣ್ಣಿನ ಫಲವತ್ತತೆಯ ಮೇಲೆ ನಿಯಂತ್ರಣ ಹೇರಿ, ಅಧಿಕಾರ ಸಂಬಂಧವಾಗಿ ರೂಪುಗೊಂಡಿರುವುದನ್ನು ಮಿಲೆಟ್‌ ಗುರುತಿಸುತ್ತಾಳೆ. ಈ ಕಂದಕವನ್ನು ಪೋಷಿಸಲು ಧರ್ಮ, ಪುರಾಣ, ಮಿಥ್‌ಗಳೆಂಬ ಕಣ್ಕಟ್ಟನ್ನು ರೂಪಿಸಿದ ವ್ಯವಸ್ಥೆಯು ಹೆಣ್ಣಿನ ಅಧೀನತೆಯು ನಿರಂತರವಾಗಿರಲು ಪಿತೃ ಪ್ರಧಾನತೆಯ ಅಧಿಪತ್ಯವನ್ನು ದಾಳವಾಗಿ ಬಳಸುತ್ತದೆ. ಧಾರ್ಮಿಕವಾಗಿ ಹೆಣ್ಣಿಗೆ ವಿಧಿಸಿದ ಕಟ್ಟಳೆಗಳ ಮೂಲ ಇರುವುದು ಇಲ್ಲೇ. ಹೀಗೆ ವ್ಯಕ್ತಿ ಮಟ್ಟದಲ್ಲಿ ಸೃಷ್ಠಿಯಾದ ಅಸಮಾನತೆಯು ಸಂಪತ್ತಿನ ಒಡೆತನದ ಬಿಕ್ಕಟ್ಟನ್ನು ಸೃಷ್ಟಿಸಿ ಇಡೀ ಸಮಾಜವನ್ನೇ ಅಧಿಕಾರ ಮತ್ತು ಅಧೀನತೆಯ ಸಂಬಂಧವಾಗಿ ಮುಂದುವರೆಸುತ್ತದೆ. ಕೇಟ್‌ಳ ವಿಚಾರಗಳು ಮುಖ್ಯವಾಗುವುದು, ಅವಳ ಅಧ್ಯಯನವು ಕೇವಲ ಗಂಡು ಹೆಣ್ಣಿನ ನಡುವಿನ ಕಂದಕಕ್ಕೆ ಕಾರಣಗಳನ್ನು ಹುಡುಕುವುದಕ್ಕಷ್ಟೇ ಸೀಮಿತವಾಗದೆ, ಇವರಿಬ್ಬರ ನಡುವಿನ ಸಂಬಂಧವನ್ನು ಹತೋಟಿಗೆ ತೆಗೆದುಕೊಳ್ಳುವ ಮೂಲಕ ಇಡೀ ಮನುಕುಲವನ್ನೇ ತನಗೆ ಬೇಕಾದಂತೆ ವ್ಯವಸ್ಥೆ ಕುಣಿಸುತ್ತಿದೆ ಎನ್ನುವ ವಾಸ್ತವವನ್ನು ತೆರೆದಿಡುವಲ್ಲಿ. ಫೂಲನ್‌ ದೇವಿಯ ಆತ್ಮಚರಿತ್ರೆಯನ್ನು ಓದುವಾಗ ಕೇಟಳ ಈ ವಿಚಾರಗಳು ಮತ್ತಷ್ಟು ಸ್ಪಷ್ಟವಾಗದೊಡಗಿದವು. ಉತ್ತರ ಪ್ರದೇಶದ ಕಡುಬಡ ಕುಟುಂಬಕ್ಕೆ ಸೇರಿದ ಹತ್ತರ ವಯಸಿನ ಹುಡುಗಿ ನ್ಯಾಯವಾಗಿ ತನ್ನ ಅಪ್ಪನಿಗೆ ಬರಬೇಕಾದ ಭೂಮಿಯಲ್ಲಿ ಬೆಳೆದ ಕಾಳು ತೆಗೆದುಕೊಂಡು ತೋರಿದ ಪ್ರತಿರೋಧವನ್ನು ನ್ಯಾಯವೆಂದು ಊರಿನ ಹಿರಿಯರು ಕೊಟ್ಟ ತೀರ್ಪು ಅವಳ ಮೊದಲ ಗೆಲುವು. ಹುಡುಗಿಯ ಈ ವಿಜಯವನ್ನು ತನ್ನ ವಿನಾಶವೆಂದೇ ತಿಳಿದ ಅವಳ ಅಣ್ಣ, ಮದುವೆ ಒಂದೇ ಅವಳನ್ನು ನಿಯಂತ್ರಿಸುವ ತಂತ್ರವೆಂದು ತಿಳಿದು ಮೂವತ್ತರ ವಯಸಿನ ಗಂಡಿಗೆ ಗಂಟು ಹಾಕುತ್ತಾನೆ. ಗಂಡನ ಲೈಂಗಿಕ ದೌರ್ಜನ್ಯಕ್ಕೆ ತತ್ತರಿಸಿ ಹೋದ ಎಳೆಯ ಹುಡುಗಿ ತವರು ಸೇರಿ ಅಪ್ಪನ ಭೂಮಿ ದಕ್ಕಿಸಿಕೊಳ್ಳಲು ಮಾಡಿದ ಹೋರಾಟವನ್ನು ಹತ್ತಿಕ್ಕಲು ಗಂಡು ಮನಃಸ್ಥಿತಿಗೆ ಹೊಳೆದದ್ದು ಆಕೆಯ ಮೇಲೆ ನಿರಂತರ ಅತ್ಯಾಚಾರ. ಇಡೀ ಪಿತೃ ಪ್ರಧಾನ ಅಧಿಕಾರ ವ್ಯವಸ್ಥೆಯ ವಿರುದ್ಧವೇ ತಿರುಗಿಬಿದ್ದ ಅವಳ ಮೇಲೆ ಹೆಣ್ಣು, ಕೆಳ ಜಾತಿಯವಳು ಎನ್ನುವ ಕಾರಣಕ್ಕೆ ಆ ಸುತ್ತಲಿನ ಹಳ್ಳಿಯ ಎಲ್ಲ ಮೇಲ್ಜಾತಿಯ ಗಂಡಸರು ಎಸಗುವ ಅತ್ಯಾಚಾರವು ಹೆಣ್ಣಿಗೆ ಭೂಮಿಯ ಒಡೆತನವನ್ನು ನಿರಾಕರಿಸಿ ಅವಳ ಪ್ರತಿರೋಧವನ್ನು ಅಡಗಿಸಲು ಅವಳ ಲಿಂಗವನ್ನೇ ʼಅನ್ಯʼವಾಗಿಸಿ ಅಧಿಕಾರ ಚಲಾಯಿಸುವುದರ ತುಚ್ಛ ಮನಃಸ್ಥಿತಿಯ ಸಂಕೇತ. ಗಂಡನಿಂದ, ನ್ಯಾಯ ಒದಗಿಸಬೇಕಾದ ಪೋಲೀಸರಿಂದ, ಅವಳ ಅಣ್ಣನ ಸೂಚನೆಯಂತೆ ಅವಳನ್ನು ಅಪಹರಿಸಿದ ದರೋಡೆಕೋರಿಂದ, ಮುಂದೆ ದರೋಡೆಕೋರರ ಗುಂಪಿನ ನಾಯಕಿಯಾಗಿದ್ದರೂ ಅವಳ ನಾಯಕತ್ವವನ್ನು ಸಹಿಸದ ಒಳಪಂಗಡದವರ ನಿರಂತರ ಅತ್ಯಾಚಾರಗಳಿಂದ ಬಸವಳಿದು ಸಾವಿನ ಅಂಚಿಗೆ ಸೇರಿದಾಗಲೂ ಬದುಕುವ ಅವಳ ಛಲ ಓದುಗರನ್ನು ದಂಗು ಬಡಿಸುತ್ತದೆ. ದರೋಡೆಕೋರರ ರಾಣಿಯಾಗಿ ಜನರ ದೃಷ್ಟಿಯಲ್ಲಿ ಅವಳು ʼಫೂಲನ್‌ ದೇವಿʼ. ಸಮಾಜದ ಮುಖ್ಯ ವಾಹಿನಿಗೆ ಸೇರಿ ರಾಜಕೀಯ ಪ್ರವೇಶ ಮಾಡಿದ ಫೂಲನ್‌ ದೇವಿಯದು ಹೋರಾಟದ ಬದುಕು. ಈ ಹೋರಾಟದ ಹಾದಿಯಲ್ಲಿ ಬಹುತೇಕರ ವಿರೋಧವನ್ನು ಕಟ್ಟಿಕೊಂಡವಳು. ಕೊನೆಗೆ ಅಧಿಕಾರದಲ್ಲಿರುವಾಗಲೇ ತನ್ನ ಮನೆಯ ಎದುರೇ ಶತೃಗಳ ಗುಂಡಿನೇಟಿಗೆ ಬಲಿಯಾದಳು. ದರೋಡೆಕೋರರ ರಾಣಿ ಅನ್ನುವುದಕಿಂತ ಹೆಚ್ಚಾಗಿ ಸ್ತ್ರೀವಾದದ ಯಾವುದೇ ಸಿದ್ಧಾಂತದ ಸುಳಿವೂ ಇಲ್ಲದ ಒಬ್ಬ ಅನಕ್ಷರಸ್ಥ ಬಡ ಹೆಣ್ಣು ಮಗಳ ಹೋರಾಟದ ಬದುಕಿನ ಚಿತ್ರಣವಾಗಿ ಈ ಪುಸ್ತಕ ಮುಖ್ಯವೆನಿಸುತ್ತದೆ. ಸ್ತ್ರೀವಾದಿ ಹೋರಾಟಗಳ ಫಲವಾಗಿ ಹೆಣ್ಣಿನ ಸ್ಥಾನಮಾನ ತಕ್ಕಮಟ್ಟಿಗೆ ಬದಲಾಗುತ್ತದಾದರೂ ಹೇಗೆ ವ್ಯವಸ್ಥೆಯು ಹೆಣ್ಣಿನ ಅಧೀನತೆಯನ್ನು ಪೋಷಿಸಲು ಒಳ ತಂತ್ರಗಳನ್ನು ಹೆಣೆಯುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ವ್ಯವಸ್ಥೆಯ ರಾಜಕೀಯ ಮತ್ತು ನ್ಯಾಯದ ವಿರೋದಾಭಾಸವನ್ನು ಮಿಲೆಟ್ ಉದಾಹರಿಸುತ್ತಾಳೆ. ರಾಜಕೀಯವಾಗಿ ಹೆಣ್ಣಿಗೆ ಸವಲತ್ತುಗಳನ್ನು ಕೊಡುತ್ತಾ, ನ್ಯಾಯ ಒದಗಿಸಬೇಕಾದಾಗ ಪಿತೃ ಪ್ರಧಾನ ಮನಃಸ್ಥಿತಿಯೇ ಮುನ್ನೆಲೆಗೆ ಬಂದು ಅಸಮಾನತೆಯನ್ನು ಕಾಪಿಡುವ ಅಥವಾ ಹೆಚ್ಚಿಸುವ ವ್ಯವಸ್ಥೆಯ ನಡೆಯನ್ನು ಆಕೆಯ ಅಧ್ಯಯನ ತಿಳಿಸುತ್ತದೆ. ಹೆಣ್ಣಿನ ರಕ್ಷಣೆಯೇ ನಮ್ಮ ಪ್ರಮುಖ ಆದ್ಯತೆ ಎಂದು ಬೊಗಳೆ ಬಿಡುತ್ತಾ ಇನ್ನೊಂದೆಡೆ ಅದೇ ಹೆಣ್ಣಿನ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ ದುರುಳರನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸುವ ಬಿಲ್ಗಿಸ್‌ ಬಾನುವಿನ ಪ್ರಕರಣವೇ ಇದಕ್ಕೆ ಜ್ವಲಂತ ಸಾಕ್ಷಿ. ವ್ಯವಸ್ಥೆಯ ಇಂಥಾ ನಡೆಗಳು ಸ್ತ್ರೀ ದ್ವೇಷವನ್ನು ಸಜೀವವಾಗಿರಿಸುವ ತಂತ್ರ ಎಂಬುದು ಮಿಲೆಟಳ ಈ ಅಧ್ಯಯನವನ್ನು ಓದಿದವರಿಗೆ ಅರ್ಥವಾಗುತ್ತದೆ. ಮುಂಚೆ ಉಲ್ಲೇಖಿಸಿದ ಘಟನೆಗಳು ಇಂದು ಸ್ತ್ರೀ ದ್ವೇಷ ಪರಾಕಾಷ್ಠತೆಗೆ ತಲುಪಿದೆ ಎಂಬುದಕ್ಕೆ ಜೀವಂತ ಉದಾಹರಣೆಗಳು. ಅಂದರೆ ಈಗ ನಾವು ಬದುಕುತ್ತಿರುವ ವ್ಯವಸ್ಥೆಯು ಸ್ತ್ರೀ ದ್ವೇಷವನ್ನು ಹೆಚ್ಚಿಸಿ, ಸಮಾಜವನ್ನು ಮತ್ತಷ್ಟು ಶ್ರೇಣೀಕರಣಗೊಳಿಸುವ ಇರಾದೆಯಲ್ಲಿದೆಯೇ ಎಂಬ ಅನುಮಾನ ಬಾರದಿರದು. ಕೇಟ್‌ ಮಿಲೆಟಳ ಈ ವಿಸ್ಕೃತ ಅಧ್ಯಯನವನ್ನು ಕನ್ನಡ ಓದುಗರಿಗೆ ತಲುಪಿಸಿದ ಮಹದುಪಕಾರವನ್ನು ಎಚ್. ಎಸ್.‌ ಶ್ರೀಮತಿಯವರು ಮಾಡಿದ್ದಾರೆ. ಅದೊಂದು ಅನುವಾದವೆಂಬ ಭಾವ ಓದಿನ ಓಘದಲ್ಲಿ ಎಲ್ಲೂ ನನಗನಿಸಲಿಲ್ಲ. ಅವರು ಬಳಸಿದ ಒಂದೊಂದು ಪದ, ಆ ಪದದ ಜೋಡಣೆ, ಅದರಿಂದ ಹೊರಡುವ ಅರ್ಥ ಅವರು ಬಳಸಿದ ʼಕನ್ನಡ ನಿರೂಪಣೆʼ ಪದಕ್ಕೆ ಅತ್ಯಂತ ಹತ್ತಿರವೆನಿಸಿತು. ಬರಹಗಾರರು, ಅನುವಾದಕರಿಗೆ ಈ ಪುಸ್ತಕದ ಓದು ಒಂದು ತಾಲೀಮು ಎಂದು ನನಗನಿಸಿದೆ.
ಆಜಂಘರ್‌ (ನ.22): ದೆಹಲಿಯ ‘35 ಪೀಸ್‌ ಮರ್ಡರ್‌’ ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ, ಮಾಜಿ ಪ್ರೇಯಸಿಯನ್ನು 6 ತುಂಡುಗಳಾಗಿ ಕತ್ತರಿಸಿ ಬಾವಿಗೆಸೆದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಎನ್‌ಕೌಂಟರ್‌ ನಡೆಸಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಪ್ರಿನ್ಸ್‌ ಯಾದವ್‌ ಎಂದು ಗುರುತಿಸಲಾಗಿದೆ. ನ.15ರಂದು ಪಶ್ಚಿಮಿ ಗ್ರಾಮದ ಹೊರಭಾಗದಲ್ಲಿರುವ ಬಾವಿಯಲ್ಲಿ ಯುವತಿಯೊಬ್ಬಳ ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಮೃತ ಮಹಿಳೆಯನ್ನು ಆಜಂಗಢ ಜಿಲ್ಲೆಯ ಇಷಕ್‌ಪುರ್‌ ಗ್ರಾಮದ ಆರಾಧನಾ ಎಂದು ಗುರುತಿಸಲಾಗಿದ್ದು, ದೇಹ ಅರೆನಗ್ನ ಅವಸ್ಥೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಆರಾಧನಾಳನ್ನು ಪ್ರಿನ್ಸ್‌ ಪ್ರೀತಿಸಿದ್ದ. ಆದರೆ ಆಕೆ ಇನ್ನೋರ್ವನ ಜತೆ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ಎಂದು ತಿಳಿದು ಬಂದಿದೆ. ಆಫ್ತಾಬ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದ ಶ್ರದ್ಧಾ, ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗ! ಹೀಗಾಗಿ ಸೇಡಿಗಾಗಿ ಪ್ರಿನ್ಸ್‌ ತನ್ನ ಪಾಲಕರು, ಸಹೋದರ ಸರ್ವೇಶ್‌ ಜತೆ ಸೇರಿ ಆರಾಧನಾಳ ಹತ್ಯೆಗೆ ಸಂಚು ಹೂಡಿದ್ದ. ಕಬ್ಬಿನ ಗದ್ದೆಯಲ್ಲಿ ಸಹೋದರ ಸರ್ವೇಶ್‌ ಸಹಾಯದಿಂದ ಆರಾಧನಾಳ ಕತ್ತು ಹಿಸುಕಿ ಸಾಯಿಸಿದ್ದು, ಅವರ ದೇಹವನ್ನು 6 ಭಾಗಗಳಾಗಿ ಕತ್ತರಿಸಿ ಪಾಲಿಥೀನ್‌ ಬ್ಯಾಗ್‌ನಲ್ಲಿ ಸುತ್ತಿ ಸಮೀಪದ ಬಾವಿಗೆ ಎಸೆದಿದ್ದ. ಅಲ್ಲದೇ ಆಕೆಯ ತಲೆಯ ಭಾಗವನ್ನು ಸ್ವಲ್ಪ ದೂರದಲ್ಲಿರುವ ಕೆರೆಯಲ್ಲಿ ಎಸೆದಿದ್ದ. ಪೊಲೀಸರು ಪ್ರಿನ್ಸ್‌ನನ್ನು ಬಂಧಿಸಿ ಆರಾಧನಾಳ ತಲೆಯ ಭಾಗವನ್ನು ಹುಡುಕಲು ಕರೆದುಕೊಂಡು ಹೋದಾಗ ಈತ ಅಡಗಿಸಿಟ್ಟದೇಸಿ ಬಂದೂಕಿನಿಂದ ಪೊಲೀಸರ ಮೇಲೆ ಗುಯಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ. ಇದಕ್ಕೆ ಪ್ರತಿಯಾಗಿ ಪೊಲೀಸರು ಎನ್‌ಕೌಂಟರ್‌ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ದೇಸಿ ಬಂದೂಕು, ದೇಹ ತುಂಡಿಸಲು ಬಳಸಿದ ಹರಿತವಾದ ಆಯುಧವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರದ್ಧಾ ಹತ್ಯೆ ಪ್ರಕರಣ: ತಲೆಬುರಡೆ ಸಿಗದಿದ್ದರೆ ಅಫ್ತಾಬ್‌ಗೆ ಗಲ್ಲು ಶಿಕ್ಷೆ ಆಗಲ್ವಾ?
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ನಷ್ಟದಲ್ಲಿವೆಯೆಂದು ಹೇಳಲಾಗುತ್ತಿರುವ ಸುಮಾರು 74 ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಪಟ್ಟಿಯನ್ನು ಸರಕಾರಕ್ಕೆ ನೀಡಿರುವ ನೀತಿ ಆಯೋಗವು ಬಹುತೇಕ ಅವುಗಳನ್ನು ಮುಚ್ಚುವ ಅಥವಾ ಖಾಸಗಿಯವರಿಗೆ ವಹಿಸಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಿದೆ. ತೊಂಭತ್ತರ ದಶಕದಲ್ಲಿ ಆರಂಭಗೊಂಡ ಜಾಗತೀಕರಣದ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡವರ್ಯಾರಿಗೂ ನೀತಿ ಆಯೋಗದ ಇವತ್ತಿನ ಈ ನಡೆ ಅಚ್ಚರಿಯನ್ನೇನು ಉಂಟು ಮಾಡುವುದಿಲ್ಲ. ಯಾಕೆಂದರೆ ಮುಕ್ತ ಆರ್ಥಿಕ ನೀತಿಯ ಮೂಲ ಉದ್ದೇಶವೇ ಸರಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳನ್ನು ಖಾಸಗಿ ಬಂಡವಾಳಶಾಹಿಗಳ ಪಾದಗಳಿಗೆ ಸಮರ್ಪಿಸುವುದಾಗಿತ್ತು. ಸರಕಾರದ ಕೆಂಪು ಪಟ್ಟಿಗಳ, ಲೈಸೆನ್ಸ್ ರಾಜ್ ಬಗ್ಗೆ ಮಾತಾಡುವ ಮುಕ್ತ ಆರ್ಥಿಕ ನೀತಿಯ ಪರವಾದ ಬಂಡವಾಳಶಾಹಿಗಳ ಹುನ್ನಾರವೇ ಸಮಾಜವಾದಿ ವ್ಯವಸ್ತೆಯಲ್ಲಿರಬಹುದಾದ ದೋಷಗಳನ್ನು ಭೂತಗನ್ನಡಿಯಲ್ಲಿ ತೋರಿಸುತ್ತ, ಜನರ ದೃಷ್ಠಿಯಲ್ಲಿ ಸರಕಾರಿ ಸ್ವಾಮ್ಯದ ಉದ್ದಿಮೆಗಳೆಂದರೆ ಭ್ರಷ್ಟಾಚಾರದ ಕೂಪಗಳೆಂಬ ಅನುಮಾನ ಮೂಡಿಸಿ, ಖಾಸಗಿಯವರು ಮಾತ್ರ ಅವುಗಳನ್ನು ಉದ್ದಾರ ಮಾಡಬಲ್ಲರೆಂಬ ನಂಬಿಕೆಯೊಂದನ್ನು ಹುಟ್ಟು ಹಾಕುವುದಾಗಿದೆ.ಕಳೆದ 25 ವರ್ಷಗಳಲ್ಲಿ ಆಗಿ ಹೋದ ಎಲ್ಲ ಸರಕಾರಗಳ ನೀತಿಗಳೂ ಸಹ ಇಂತಹದೊಂದು ಕ್ರಿಯೆಗೆ ಉತ್ತೇಜನ ನೀಡುತ್ತಲೇ ಬಂದವು. ಸರಕಾರಿ ಸ್ವಾಮ್ಯದ ಹಲವಾರು ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಶಾಸನಗಳನ್ನು ರೂಪಿಸುತ್ತ, ಅದೇ ವೇಳೆಯಲ್ಲಿ ಈಗಿರುವ ಸಾರ್ವಜನಿಕ ಉದ್ದಿಮೆಗಳಿಗೆ ಬೇಕಾದ ಅನುದಾನಗಳನ್ನು ಬಿಡುಗಡೆ ಮಾಡದೆ ಆಟವಾಡುತ್ತಬಂದ ಸರಕಾರಗಳು ಸಾರ್ವಜನಿಕ ಉದ್ದಿಮೆಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶವೊಂದನ್ನು ನಿರ್ಮಿಸಿದವು. ಒಂದು ಕಾಲದಲ್ಲಿ ದೇಶದ ಲಕ್ಷಾಂತರ ಮಂದಿಗೆ ಉದ್ಯೋಗವಕಾಶ ದೊರಕಿಸಿಕೊಟ್ಟು ರಾಷ್ಟ್ರೀಯ ಆದಾಯಕ್ಕೆ ಗಣನೀಯ ಪಾಲು ಸಲ್ಲಿಸುತ್ತಿದ್ದ ಸಾರ್ವಜನಿಕ ಉದ್ದಿಮೆಗಳು ಜಾಗತೀಕರಣದ ನಂತರ ದಿಡೀರನೆ ಖಳನಾಯಕರಾಗಿ ಬಿಟ್ಟಿದ್ದು ಅಸಹಜವೇನಲ್ಲ. ಯಾಕೆಂದರೆ ಯಾವ ಬೆಲೆ ತೆತ್ತಾದರೂ ಖಾಸಗೀಕರಣ ಮತ್ತು ಮುಕ್ತ ಮಾರುಕಟ್ಟೆ ನೀತಿಯನ್ನು ಅನುಷ್ಠಾನಗೊಳಿಸಲು ಕಟಿಬದ್ದವಾಗಿದ್ದ ಸರಕಾರಗಳು ಸಾರ್ವಜನಿಕ ಉದ್ದಿಮೆಗಳನ್ನು ನಿರ್ಲಕ್ಷಿಸಿದ್ದರ ಪರಿಣಾಮವಾಗಿ ಇವತ್ತು ಸಾರ್ವಜನಿಕ ಉದ್ದಿಮೆಗಳ ಪರವಾದ ಸಾರ್ವಜನಿಕರ ಸಹಾನುಭೂತಿಯನ್ನೂ ಕಾಣದಂತಾಗಿದೆ. ತೊಂಭತ್ತರ ದಶಕದ ನಂತರ ದೇಶದೊಳಗೆ ಕಾಲಿಟ್ಟ ವಿದೇಶಿ ಮತ್ತು ಸ್ವದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸರಕಾರ ಕೊಡಮಾಡಿದ ರಿಯಾಯಿತಿಗಳಲ್ಲಿ ಶೇಕಡಾ ಹತ್ತರಷ್ಟನ್ನಾದರು ನಮ್ಮ ಸಾರ್ವಜನಿಕ ಉದ್ದಿಮೆಗಳಿಗೆ ನೀಡಿದ್ದೇ ಆಗಿದ್ದರೆ ಇವತ್ತು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುವ ಪರಿಸ್ಥಿತಿ ಸೃಷ್ಠಿಯಾಗುತ್ತಿರಲಿಲ್ಲ. ಸಾರ್ವಜನಿಕ ಉದ್ದಿಮೆಗಳು ಸ್ವತ: ಮುಚ್ಚಿಹೋಗುವಂತೆ ಮಾಡಲು ಸರಕಾರಗಳು ತೊಂಭತ್ತರ ದಶಕದ ಪ್ರಾರಂಭದಿಂದಲೇ ಕಾರ್ಯತಂತ್ರಗಳನ್ನು ಅನುಸರಿಸತೊಡಗಿದವು. ಯಾವಾಗ ನಮ್ಮ ಆರ್ಥಿಕತೆಯ ದಿಡ್ಡಿಬಾಗಿಲನ್ನು ತೆರೆಯಲಾಯಿತೊ ಆಗ ಒಳನುಸುಳಿದ ವಿದೇಶಿ ಕಂಪನಿಗಳ ಉತ್ಪಾದನೆ ಮತ್ತು ಸೇವೆಗಳ ಜೊತೆಗೆ ಸ್ಪರ್ದಿಸಲಾಗದೆ ಬಸವಳಿದ ನಮ್ಮ ಸಾರ್ವಜನಿಕ ಉದ್ದಿಮೆಗಳಿಗೆ ಸರಕಾರ ಯಾವುದೇ ಚಿಕಿತ್ಸೆ ನೀಡದೆ ಅವುಗಳು ಸ್ವಯಂನಾಶವಾಗಲೆಂದು ಕಾಯಲು ಶುರು ಮಾಡಿದವು. ಇವತ್ತು ದೇಶದಲ್ಲಿ ಕೇಂದ್ರ ಸರಕಾರವು ಸರಿಸುಮಾರು 260ಕ್ಕೂ ಅಧಿಕ ಸಾರ್ವಜನಿಕ ಉದ್ದಿಮೆಗಳನ್ನು ನಡೆಸುತ್ತಿದ್ದರೆ, ರಾಜ್ಯ ಸರಕಾರಗಳು ಕೂಡ ನೂರಾರು ಉದ್ದಿಮೆಗಳನ್ನು ನಡೆಸುತ್ತಿವೆ. ಇವತ್ತು ಬಹುತೇಕ ಉದ್ದಿಮೆಗಳು ನಷ್ಟದಲ್ಲಿ ನಡೆಯುತ್ತಿದ್ದು, ಇವುಗಳ ಪುನಶ್ಚೇತನದ ಬಗ್ಗೆ ಯಾವ ನಾಯಕರುಗಳಿಗೂ ಆಸಕ್ತಿಯಿಲ್ಲದಂತಾಗಿದೆ. ಕೇವಲ ಜಾಗತೀಕರಣದಿಂದ ಮಾತ್ರ ಈ ಉದ್ದಿಮೆಗಳು ನಷ್ಟವನ್ನನುಭವಿಸುತ್ತವೆಯೇ ಎಂದು ನೋಡಿದರೆ ಸಿಗುವ ಉತ್ತರ ಅಚ್ಚರಿದಾಯಕವಾಗಿವೆ. ಯಾಕೆಂದರೆ ದೇಶದ ಯಾವುದೇ ಆರ್ಥಿ ತಜ್ಞರುಗಳನ್ನು ಕೇಳಿದರೂ ಅವರು ನೀಡುವ ಉತ್ತರ ಸರಳ, ಸಾರ್ವಜನಿಕ ಉದ್ಯಮಗಳ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ, ಆಡಳಿತ ನಡೆಸುವ ಅಧಿಕಾರಿವೃಂದದ ಭ್ರಷ್ಟತೆ ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಯಾಕೆ ಹೀಗೆ ಎಂದು ನೋಡಿದರೆ ಸಾರ್ವಜನಿಕ ಉದ್ಯಮಗಳಿಗೆ ರಾಜಕೀಯ ವ್ಯಕ್ತಿಗಳನ್ನು ಅದ್ಯಕ್ಷರುಗಳನ್ನಾಗಿ ನೇಮಿಸುವುದು, ಸದರಿ ಕ್ಷೇತ್ರದ ಬಗ್ಗೆ ಕುಶಲತೆ ಇರದ ಭ್ರಷ್ಟ ಐ.ಎ.ಎಸ್. ಅಧಿಕಾರಿಗಳನ್ನು ಆಡಳಿತ ನೋಡಿಕೊಳ್ಳಲು ನೇಮಿಸುವ ಸರಕಾರದ ಪರಿಪಾಠ, ಆ ಸಂಸ್ಥೆಗಳನ್ನು ನಡೆಸುವವರ ಭ್ರಷ್ಟತೆಯನ್ನು ನಿಯಂತ್ರಣ ಮಾಡಲಾಗದ ಸರಕಾರಗಳ ಹೊಣೆಗೇಡಿತನ ಈ ಉದ್ದಿಮೆಗಳ ನಷ್ಟಕ್ಕೆ ಕಾರಣವಾಗಿದೆ.ಇನ್ನು ಬದಲಾದ ಕಾಲಮಾನಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದೆ ಇರುವುದು. ತನ್ನ ಕಾರ್ಮಿಕರ ಕುಶಲತೆ ಹೆಚ್ಚಿಸಲು ಬೇಕಾದ ನವನವೀನ ತಂತ್ರಜ್ಞಾನಗಳ ಪರಿಚಯವನ್ನಾಗಲಿ ತರಭೇತಿಯನ್ನಾಗಲಿ ಕೊಡಿಸುವ ಮನಸ್ಸು ಮಾಡದಿರುವುದು. ಜಾಗತೀಕರಣದ ನಂತರ ಪರಿಚಯಿಸಲ್ಪಟ್ಟ ಹೊಸ ಹೊಸ ಮಾಧ್ಯಮಗಳನ್ನು ಬಳಸಿಕೊಂಡು ಮಾರುಕಟ್ಟೆಯ ಆಳ-ಅಗಲಗಳನ್ನು ಪರಿಚಯಿಸಿಕೊಂಡು ಮಾರ್ಕೆಟಿಂಗ್ ಮಾಡುವಲ್ಲಿ ವಿಫಲವಾಗಿರುವುದು. ಜೊತೆಗೆ ತನ್ನ ಸಾಂಪ್ರದಾಯಿಕ ಉತ್ಪಾದನಾ ರೀತಿಯನ್ನು ಬದಲಾಯಿಸಿಕೊಳ್ಳದೆ ಇರುವುದು. ಆಡಳಿತಾತ್ಮಕವಾಗಿ ಅನಗತ್ಯ ವೆಚ್ಚಗಳನ್ನು ಮಾಡುವ ರಾಜಕೀಯದ ಮತ್ತು ಅಧಿಕಾರಿಗಳ ಮೇಲೆ ನಿಯಂತ್ರಣ ಸಾದಿಲಾಗದೇ ಇರುವುದು, ಇವೆಲ್ಲದರ ಜೊತೆಗೆ ನಮ್ಮ ಮಾರುಕಟ್ಟೆಯಲ್ಲಿನ ಎಲ್ಲ ನಿಯಂತ್ರಣಗಳನ್ನು ತೆಗೆದುಹಾಕಿ ವಿದೇಶಿ ಸರಕುಗಳಿಗೆ ಅವಕಾಶ ನೀಡಿದ್ದು, ಅವುಗಳೊಂದಿಗೆ ಸ್ಪರ್ದಿಸುವ ಶಕ್ತ್ನಿ ನಮ್ಮ ಉದ್ದಿಮೆಗಳಿಗೆ ಇಲ್ಲದಿರುವುದೂ ಒಂದು ಕಾರಣವಾಗಿದೆ. ಹೀಗೆ ಇಂತಹ ಹಲವಾರುಕೊರತೆಗಳ ನಡುವೆಯೂ ನಮ್ಮ ಸಾರ್ವಜನಿಕ ಉದ್ದಿಮೆಗಳು ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡಿಸಮಾಜವಾದದ ಆಶಯಗಳನ್ನು ಈಡೇರಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದ್ದವು. ಆದರೆ ಸರಕಾರಗಳನ್ನು ನಡೆಸುವವರ ಅನಾಸಕ್ತಿ ,ಭ್ರಷ್ಟಾಚಾರಗಳು ಸದರಿ ಉಧ್ಯಮಗಳನ್ನು ರೋಗಗ್ರಸ್ತವನ್ನಾಗಿ ಮಾಡಿವೆ. ಇದನ್ನೇ ಕಾಯುತ್ತಿದ್ದಂತಹ ಬಂಡವಾಳಶಾಹಿಪರ ನಿಲುವಿನ ಸರಕಾರಗಳು ಇದೀಗ ನಷ್ಟದಲ್ಲಿರುವ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಹಂತಹಂತವಾಗಿ ಖಾಸಗೀಕರಣ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಕೆಲವೇ ದಿನಗಳ ಹಿಂದೆ ನಮ್ಮ ಬಹುದೊಡ್ಡ ಉದ್ಯಮವಾಗಿದ್ದ ಹೆಚ್.ಎಂ.ಟಿ.ಯನ್ನು ಮುಚ್ಚಿದ್ದನ್ನು ನಾವು ನೆನಪಿಸಿಕೊಳ್ಳಬಹುದು. ಇದೀಗ ಆ ಸಾಲಿಗೆ. ದೇಶದ ಅತ್ಯಂತ ಹಳೆಯದಾದ ಬಿ.ಎಸ್.ಎನ್.ಎಲ್, ಓ.ಎನ್.ಜಿ.ಸಿ., ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಹಿಂದುಸ್ಥಾನ್ ಪೋಟೋಫಿಲ್ಮ್ಸ್, ಹಿಂದುಸ್ಥಾನ ಫರ್ಟಿಲೈಸರ್ ಕಾರ್ಪೋರೇಶನ್ ಮುಂತಾದವುಗಳನ್ನು ಮುಚ್ಚಲು ನೀತಿ ಆಯೋಗವು ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಉದ್ದಿಮೆಗಳ ಬಗ್ಗೆ ಒಂದಿಷ್ಟು ಮಾಹಿತಿ ನೋಡಿ. ಸರಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಇವತ್ತು ನಷ್ಟದಲ್ಲಿದ್ದರೆ ಅದಕ್ಕೆ ಕಾರಣ ಸ್ವತ: ಸರಕಾರದ ನೀತಿಗಳೇ: ಉದಾರೀಕರಣದ ನಂತರ ದೂರಸಂವಹನದ ತರಂಗಾಂತರಗಳನ್ನು ಖಾಸಗಿಯವರಿಗು ಲಭ್ಯವಾಗುವಂತೆ ಹರಾಜು ಹಾಕಿ ಅನೇಕ ಬಹುರಾಷ್ಟ್ರೀಯ ಕಂಪನಿಗಳೂ ಈ ಸೇವಾ ಕ್ಷೇತ್ರಕ್ಕೆ ಕಾಲಿಡಲು ಅನುವು ಮಾಡಿಕೊಡಲಾಯಿತು. ಇದನ್ನು ಬಳಸಿಕೊಂಡ ಖಾಸಗಿ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು, ಎಲ್ಲಿ ಬಿ.ಎಸ್.ಎನ್.ಎಲ್. ಕಾಲಿಟ್ಟಿರಲಿಲ್ಲವೊ ಅಂತಹ ಕಡೆಯಲ್ಲಿಯೂ ತನ್ನ ಸೇವೆ ದೊರೆಯುವಂತೆ ಮಾಡಿ ಹಲವಾರು ಉಚಿತ ಕೊಡುಗೆಗಳ ಆಕರ್ಷಣೆಯ ಮೂಲಕ ಗ್ರಾಹಕರನ್ನು ಸೆಳೆದವು. ಇಂತಹ ಸ್ಪರ್ದೆಯನ್ನು ನಿರೀಕ್ಷಿಸಿ ಸರಕಾರಿ ಸ್ವಾಮ್ಯದ ದೂರವಾಣಿ ಇಲಾಖೆಯ ಸುಧಾರಣೆಗೆ ಮುಂದಾಗ ಬೇಕಿದ್ದ ಕೇಂದ್ರ ಸರಕಾರ ಯಾವ ಕ್ರಮಗಳನ್ನೂ ಕೈಗೊಳ್ಳದೆ ತಟಸ್ಥವಾಗುಳಿಯಿತು. ಇದು ಎಷ್ಟರಮಟ್ಟಿಗಿನ ನಿರ್ಲಕ್ಷ್ಯವೆಂದರೆ ಬಹಳಷ್ಟು ವರ್ಷಗಳಿಂದ ಹೊಸ ಉದ್ಯೋಗಿಗಳನ್ನೇ ನೇಮಕ ಮಾಡಿಕೊಳ್ಳದಷ್ಟು ಉದಾಸೀನತೆ ತೋರಿತು. ಮೊಬೈಲ್ ಭರಾಟೆಯಲ್ಲಿ ಹಾಗು ನಗರಗಳಲ್ಲಿ ಖಾಸಗಿಯವರಿಗೆ ಆಪ್ಟಿಕ್ ಫೈಬರ್ ಅಳವಡಿಸಿಕೊಳ್ಳಲು ಅವಕಾಶ ಕೊಟ್ಟು ತನ್ನ ಸಂಸ್ಥೆಯನ್ನು ತಾನೇ ನಾಶ ಮಾಡುತ್ತಿದೆ. ಇದೀಗ ಈ ಸಂಸ್ಥೆ ಸಾವಿರಾರು ಕೋಟಿಗಳಷ್ಟು ನಷ್ಟ ಅನುಭವಿಸುತ್ತಿದ್ದು, ಇನ್ನೇನು ಕೆಲದಿನಗಳಲ್ಲಿ ಇದೂ ಸಹ ಮುಚ್ಚಲ್ಪಡುವ ಸಾಧ್ಯತೆ ಹೆಚ್ಚಾಗಿದೆ. ಹೀಗೆ ಸಾರ್ವಜನಿಕ ಉದ್ದಿಮೆಗಳನ್ನು ನಾಶ ಮಾಡುವ ಎರಡು ವಿಧಾನಗಳಿವೆ: ಒಂದು, ಉದ್ಯಮದ ಷೇರುಗಳನ್ನು ಖಾಸಗಿ ವ್ಯಕ್ತಿ ಮತ್ತು ಕಂಪನಿಗಳಿಗೆ ಮಾರುವುದು. ಹೆಚ್ಚು ಶೇರುಗಳನ್ನು ಮಾರಿದ ನಂತರ ಸರಕಾರಕ್ಕೆ ಅದರ ಮೇಲೆ ಯಾವುದೇ ಹಿಡಿತ ಇರುವುದಿಲ್ಲ. ಇನ್ನು ಎರಡನೆಯದು, ಯಾರೂ ಷೇರುಗಳನ್ನು ಖರೀಧಿ ಮಾಡದೆ ಹೋದಂತಹ ಕಂಪನಿಗಳನ್ನು ಮುಚ್ಚಿ, ಅದರ ಚರ ಮತ್ತು ಸ್ಥಿರ ಆಸ್ತಿಯನ್ನು ಮಾರುತ್ತಾ ಹೋಗುವುದು. ಈ ರೀತಿಯ ಪ್ರಕ್ರಿಯೆಗೆ ಕಾದುಕೂತಿರುವ ಖಾಸಗಿ ಬಂಡವಾಳಶಾಹಿಗಳು ಸರಕಾರದ ಮೇಲೆ ಒತ್ತಡ ಹೇರುತ್ತ ಬರುತ್ತಿರುವುದೇ ಇವತ್ತು ನೀತಿ ಆಯೋಗ ಇಂತಹದೊಂದು ಕ್ರಮಕ್ಕೆ ಮುಂದಾಗಿರುವುದು. ಈ ವಿಚಾರದಲ್ಲಿ ಮಾತ್ರ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ ಮತ್ತು ವಿರೋಧವನ್ನೂ ವ್ಯಕ್ತ ಪಡಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕ ಉದ್ದಿಮೆಗಳನ್ನು ಮಾರುವ-ಮುಚ್ಚುವ ಪ್ರಕ್ರಿಯೆ ಯಾವ ಅಡೆತಡೆಯೀ ಇಲ್ಲದೆ ನಡೆಯುವುದು ಖಚಿತ! ಇದೀಗ ನೀತಿ ಆಯೋಗವು ಸರಿಸುಮಾರು 74 ಇಂತಹ ಉದ್ದಿಮೆಗಳನ್ನು ಗುರುತಿಸಿದ್ದು, ಇವುಗಳಲ್ಲಿ 26 ಉದ್ದಿಮೆಗಳು ಸಂಪೂರ್ಣವಾಗಿ ಪುನಶ್ಚೇತನಗೊಳ್ಳಲು ಅಸಾದ್ಯವೆನಿಸಿವೆ ಎಂದು ಹೇಳಿದೆ. ಇವುಗಳನ್ನು ಮುಚ್ಚುವುದೇ ಆದರೆ ನೀತಿ ಆಯೋಗವು ಮುಂದೆ ಏನು ಮಾಡಬಹುದೆಂಬುದನ್ನು ಸಹ ಹೇಳಿದೆ. ಅದರ ಪ್ರಕಾರ ಉದ್ದಿಮೆಗಳ ಕಟ್ಟಡಗಳನ್ನು, ಅದರ ಯಂತ್ರೋಪಕರಣಗಳನ್ನು, ಹರಾಜು ಹಾಕಲಾಗುತ್ತದೆ. ಇಂತಹವನ್ನು ಸಾಮಾನ್ಯಾರ್ಯಾರು ಖರೀದಿಸಲು ಸಾದ್ಯವಿಲ್ಲ. ಹೀಗಾಗಿ ಅತಿ ಕಡಿಮೆ ಬೆಲೆಗೆ ಖಾಸಗಿ ಕಂಪನಿಗಳೇ ಖರೀದಿಸುವುದು ಗ್ಯಾರಂಟಿ. ಇನ್ನು ಸದರಿ ಉದ್ದಿಮೆಗೆ ಸೇರಿದ ಭೂಮಿಯನ್ನು ಆಯಾ ರಾಜ್ಯಸರಕಾರಗಳಿಗೆ ನೀಡುವುದಾಗಿ ಹೇಳಿದ್ದರೂ, ಸರಕಾರಗಳನ್ನು ನಿಯಂತ್ರಿಸುತ್ತಿರುವ ರಿಯಲ್ ಎಷ್ಟೇಟ್ ಮಾಫಿಯಾ ಹೇಗಾದರು ಮಾಡಿ ಈ ನೆಲವನ್ನು ಕಬಳಿಸುವುದುಸಹ ಖಚಿತ. ಹೀಗೆ ಸಾರ್ವಜನಿಕ ಉದ್ದಿಮೆಗಳನ್ನು ಪುನಶ್ಚೇತನಗೊಳಿಸುವ ಯಾವ ಉದ್ದೇಶಗಳನ್ನು ಹೊಂದಿರದ ಸರಕಾರ ಪರೋಕ್ಷವಾಗಿ ಖಾಸಗಿ ಬಂಡವಾಳಶಾಹಿಗಳಿಗೆ ನೆರವಾಗಲು ಹೊರಟಿದ್ದು, ಈ ಉದ್ದಿಮೆಗಳನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ಕಾರ್ಮಿಕರ ಬದುಕನ್ನೂ ಸಹ ಅತಂತ್ರಗೊಳಿಸಲು ಹೊರಟಿದೆ. ಮುಕ್ತ ಆರ್ಥಿಕ ನೀತಿಯ ಒಂದೊಂದೇ ದುಷ್ಪರಿಣಾಮಗಳು ಈ ರೀತಿಯಲ್ಲಿ ಅನಾವರಣಗೊಳ್ಳುತ್ತಿರುವ ಸಂದರ್ಭದಲ್ಲಿ ನಾವಿಂದು ನಿಂತಿದ್ದೇವೆ. ಮುಂದೊಂದು ದಿನ ಸಂವಿದಾನದಲ್ಲಿನ ಸಮಾಜವಾದಿ ಸಮಾಜದ ಆಶಯವನ್ನು ತೆಗೆದುಹಾಕುವ ಕಾಲ ದೂರವಿಲ್ಲವೆನಿಸುತ್ತದೆ
ಯಾವುದೋ ಅನಿರೀಕ್ಷಿತ ಬೆಳವಣಿಗೆ ಕೊನೆಗೆ ಫಲಪ್ರದವಾಗಿ ಪರಿಣಮಿಸಿದರೆ ಆ ಸಂದರ್ಭವನ್ನು Serendipity ಎನ್ನಬಹುದು. ಮಾನವನ ಇತಿಹಾಸದ ಉದ್ದಕ್ಕೂ ಈ Serendipity ಸಾಕಷ್ಟು ಚಮತ್ಕಾರಗಳನ್ನು ತೋರಿದೆ! ಡಾ. ವಿ. ಎಸ್. ಕಿರಣ್ Published on : 26 May, 2020, 5:00 am ಇಂಗ್ಲೀಷಿನಲ್ಲಿ Serendipity ಎಂಬ ಸುಂದರ ಪದವಿದೆ. ಇತರ ಭಾಷೆಗಳಿಗೆ ಅನುವಾದ ಮಾಡಲು ಆಗದ ಇಂಗ್ಲೀಷ್ ಪದಗಳಲ್ಲಿ ಇದೂ ಒಂದು ಎನ್ನಲಾಗಿದೆ. ಈ ಚಂದದ ಪದದ ಹಿಂದೆ ಒಂದು ಚಂದದ ಕತೆ ಇದೆ - ಪ್ರಾಚೀನ ಶ್ರೀಲಂಕಾ ದೇಶದ ಮೂವರು ರಾಜಕುಮಾರರ ಕತೆ. ಬಹಳ ಜಾಣರಾಗಿದ್ದ ಆ ಮೂವರು ರಾಜಕುಮಾರರು ಅಷ್ಟೇ ಅದೃಷ್ಟವಂತರೂ ಹೌದು. ಅವರಿಗೆ ಯಾವುದೇ ಆಕಸ್ಮಿಕ ಅವಘಡ ಸಂಭವಿಸಿದರೂ ಅದು ಒಟ್ಟಾರೆ ಸುಖಾಂತ್ಯವೇ ಆಗುತ್ತಿತ್ತು. ಹೀಗೆ ಯಾವುದೋ ಅನಿರೀಕ್ಷಿತ ಬೆಳವಣಿಗೆ ಕೊನೆಗೆ ಫಲಪ್ರದವಾಗಿ ಪರಿಣಮಿಸಿದರೆ ಆ ಸಂದರ್ಭವನ್ನು Serendipity ಎನ್ನಬಹುದು. ಪ್ರಾಚೀನ ಕಾಲದಲ್ಲಿ ಶ್ರೀಲಂಕಾವನ್ನು ಸಿಂಹಳದ್ವೀಪ ಎನುತ್ತಿದ್ದರು. ಅರಬ್ಬರ ಭಾಷೆಯಲ್ಲಿ ಅದು Serendip ಆಗಿತ್ತು. ಆ ಹೆಸರಿನಿಂದ ಬಂದ ಪದ Serendipity. ಮಾನವನ ಇತಿಹಾಸದ ಉದ್ದಕ್ಕೂ ಈ Serendipity ಸಾಕಷ್ಟು ಚಮತ್ಕಾರಗಳನ್ನು ತೋರಿದೆ! ಆದಿಮಾನವನನ್ನು ಆಲೋಚನೆಯ ಹಾದಿಗೆ ಒಯ್ದದ್ದೂ ಇಂತಹ ಫಲಪ್ರದ ಅವಘಡಗಳೇ ಇರಬೇಕು! ಹೊಸತನ್ನು ಒಪ್ಪಿಕೊಳ್ಳುವ, ಕಷ್ಟಗಳನ್ನು ಕೂಡ ಅವಕಾಶಗಳ ನಿಟ್ಟಿನಿಂದ ನೋಡುವ, ಪ್ರತಿಯೊಂದು ಕಾರ್ಮೋಡದಲ್ಲೂ ಬೆಳ್ಳಿಗೆರೆಯನ್ನು ಹುಡುಕುವ ಮನಸ್ಥಿತಿಯನ್ನು ಮನುಷ್ಯನಲ್ಲಿ ಹುಟ್ಟಿಸಿದ್ದೇ ಇಂತಹ ಪ್ರಸಂಗಗಳು. ಇಂತಹ ಒಂದೆರಡು ಉದಾಹರಣೆಗಳನ್ನು ನೋಡಿದರೆ ಇವುಗಳ ಮಹತ್ವ ತಿಳಿಯಬಹುದು. ಡಾ ಡೊನಾಲ್ಡ್ ರಾಸ್ ಎಂಬ ಪ್ರಖ್ಯಾತ ಹೃದಯ ಶಸ್ತ್ರಚಿಕಿತ್ಸಕರಿದ್ದರು. ಹೃದಯ ಶಸ್ತ್ರಚಿಕಿತ್ಸೆಯ ಈವರೆಗಿನ ಇತಿಹಾಸದಲ್ಲಿ ಹತ್ತು ಮಂದಿ ಮಹತ್ವಪೂರ್ಣ ಸರ್ಜನ್ ರನ್ನು ಪಟ್ಟಿ ಮಾಡಿದರೆ ಅದರಲ್ಲಿ ಡಾ ಡೊನಾಲ್ಡ್ ರಾಸ್ ಅವರ ಹೆಸರು ಖಾಯಂ! ಹೃದಯದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದಕ್ಕೆ ಅವರ ಹೆಸರಿದೆ. ಇಂತಹ ಡಾ ಡೊನಾಲ್ಡ್ ರಾಸ್ ಅವರ ಜೀವನದಲ್ಲಿ ಒಮ್ಮೆ ಬಹಳ ಕ್ಲಿಷ್ಟಕರವಾದ ಸಂದರ್ಭ ಎದುರಾಗಿತ್ತು. ಏನದು? ಮಾನವ ಹೃದಯದಲ್ಲಿ ನಾಲ್ಕು ಕವಾಟಗಳು (valves) ಇರುತ್ತವೆ. ವಯಸ್ಸಾಗುತ್ತಾ ಹೋದಂತೆ ಈ ಕವಾಟಗಳಲ್ಲಿ ಕ್ಯಾಲ್ಸಿಯಂ ಲವಣ ಶೇಖರವಾಗಿ ಕವಾಟಗಳು ಪೆಡಸಾಗುತ್ತವೆ. ಕೆಲವು ದಶಕಗಳ ಹಿಂದೆ ಈ ಪರಿಸ್ಥಿತಿಗೆ ಸುಲಭದ ಶಸ್ತ್ರಚಿಕಿತ್ಸೆ ಇರಲಿಲ್ಲ. ಆಗ ರೋಗಿಯನ್ನು ಅರಿವಳಿಕೆಯ ಮತ್ತಿನಲ್ಲಿ ಮಲಗಿಸಿ, ಕ್ಯಾಲ್ಸಿಯಂ ಲವಣವನ್ನು ಕರಗಿಸಬಲ್ಲ ದ್ರಾವಣವನ್ನು ಆ ಪೆಡಸು ಕವಾಟದ ಮೂಲಕ ಹರಿಸಿ ಆ ಕವಾಟವನ್ನು ಸಾಧ್ಯವಾದಷ್ಟೂ ಕ್ಯಾಲ್ಸಿಯಂ-ಮುಕ್ತಗೊಳಿಸಿ ರೋಗಿಯ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ಸುಧಾರಿಸಬಲ್ಲ ವಿಧಾನ ಚಾಲ್ತಿಯಲ್ಲಿತ್ತು. ಡಾ ಡೊನಾಲ್ಡ್ ರಾಸ್ ಅವರು ಕೂಡ ಒಮ್ಮೆ ಒಂದು ರೋಗಿಗೆ ಇದೆ ರೀತಿಯ ಚಿಕಿತ್ಸೆ ಮಾಡುತ್ತಿದ್ದರು. ಆದರೆ ಅಂದು ಒಂದು ಅನೂಹ್ಯವಾದ ಘಟನೆ ನಡೆಯಿತು. ಆ ರೋಗಿಯ ಕವಾಟ ಎಷ್ಟು ಶಿಥಿಲವಾಗಿತ್ತೆಂದರೆ, ಆ ದ್ರಾವಣದ ಜೊತೆ ಕ್ಯಾಲ್ಸಿಯಂ ಮಾತ್ರವಲ್ಲದೇ ಇಡೀ ಕವಾಟವೇ ಕೊಚ್ಚಿಹೋಯಿತು! ಡಾ ರಾಸ್ ಅವರ ವೈದ್ಯಜೀವನದಲ್ಲಿ ಹಿಂದೆಂದೂ ಆ ರೀತಿಯ ಅವಘಡ ಘಟಿಸಿಯೇ ಇರಲಿಲ್ಲ. ಹೃದಯದ ಕವಾಟವೇ ಇಲ್ಲದ ಮೇಲೆ ರೋಗಿ ಬದುಕುವುದಾದರೂ ಹೇಗೆ? ಆಗೆಲ್ಲಾ ಲೋಹದ ಕೃತಕ ಕವಾಟಗಳನ್ನು ತರಿಸಲು ಸಮಯ ಹಿಡಿಯುತ್ತಿತ್ತು. ಆ ಹೊತ್ತಿಗೆ ತತ್ಕ್ಷಣದ ಪರಿಹಾರವೇನು? ಕೆಲವು ಕ್ಷಣ ದಿಕ್ಕುಗಾಣದೆ ಹೋಯಿತು! ಆದರೆ ಡಾ ರಾಸ್ ಅವರ ತೀಕ್ಷ್ಣ ಬುದ್ಧಿಗೆ ಒಂದು ಪರಿಹಾರ ಹೊಳೆಯಿತು. ಕೆಲವು ಮೃತ ವ್ಯಕ್ತಿಗಳ ಹೃದಯವನ್ನು ಅಧ್ಯಯನ ಮಾಡಲು ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಇಡಲಾಗಿತ್ತು. ಆ ಹೃದಯಗಳ ಕವಾಟಗಳನ್ನು ಪ್ರತ್ಯೇಕಿಸಿ ಶೈತ್ಯಾಗಾರದಲ್ಲಿ ಇಡಲಾಗಿತ್ತು. ಅದರಲ್ಲಿ ಒಂದು ಕವಾಟವನ್ನು ಈ ರೋಗಿಗೆ ತಾತ್ಕಾಲಿಕವಾಗಿ ಜೋಡಿಸಿ, ಆನಂತರ ಲೋಹದ ಕೃತಕ ಕವಾಟವನ್ನು ತರಿಸಿ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಜೋಡಿಸುವ ಆಲೋಚನೆ ಮಾಡಿದರು. ಅದರಂತೆಯೇ ನಡೆಯಿತು ಕೂಡ. ಆದರೆ ಹೀಗೆ ಮೃತ ವ್ಯಕ್ತಿಯ ಕವಾಟವನ್ನು ಪಡೆದ ಆ ರೋಗಿ ಬಹಳ ಚೆನ್ನಾಗಿ ಚೇತರಿಸಿಕೊಂಡರು. ಲೋಹದ ಕವಾಟವನ್ನು ಪಡೆದ ರೋಗಿಗಳ ಚೇತರಿಕೆಗಿಂತ ಇವರ ಚೇತರಿಕೆ ಕ್ಷಿಪ್ರವಾಗಿಯೂ, ಸರಾಗವಾಗಿಯೂ ಇತ್ತು! ಮತ್ತೊಂದು ಶಸ್ತ್ರಚಿಕಿತ್ಸೆ ಮಾಡುವ ಪ್ರಮೇಯವೇ ಬರಲಿಲ್ಲ! ಮೂರು ವರ್ಷಗಳ ಕಾಲ ಅದೇ ಕವಾಟದ ಜೊತೆ ಚೆನ್ನಾಗಿ ಬದುಕಿದ ಆ ರೋಗಿ ಬೇರಾವುದೋ ಕಾರಣದಿಂದ ಮೃತರಾದರು! ಇದರೊಂದಿಗೇ ಹೃದಯ ಕವಾಟ ಬದಲೀ ಶಸ್ತ್ರಚಿಕಿತ್ಸೆಯಲ್ಲಿ ಹೊಸದೊಂದು ವಿಧಾನ ಅನಾವರಣಗೊಂಡಿತು! ಹೀಗೆಯೇ ಹಲವಾರು ಅವಘಡಗಳು ಊಹಿಸಲಾಗದ ಸುಖಾಂತ್ಯಗಳನ್ನು ಕಂಡಿವೆ. ಹೃದಯದ ಬಡಿತದಲ್ಲಿ ಏರುಪೇರುಗಳನ್ನು ಅನುಭವಿಸುತ್ತಿದ್ದ ಹಾಲೆಂಡ್ ದೇಶದ ವರ್ತಕರೊಬ್ಬರು ವ್ಯಾಪಾರ ಸಂಬಂಧದಿಂದ ೧೯೧೨ರಲ್ಲಿ ಭಾರತಕ್ಕೆ ಬಂದಿದ್ದಾಗ ಮಲೇರಿಯಾ ಬಾಧಿತರಾದರು. ಅದಕ್ಕೆ ಚಿಕಿತ್ಸೆ ಎಂದು ಕ್ವಿನೀನ್ ಮಾತ್ರೆಗಳನ್ನೂ ಸೇವಿಸಿದರು. ಅದರಿಂದ ಮಲೇರಿಯಾ ಮಾತ್ರವಲ್ಲ, ಅವರ ಹೃದಯ ಬಡಿತದ ಏರುಪೇರು ಕೂಡ ಕೆಲವು ಕಾಲದವರೆಗೆ ಸರಿಯಾಯಿತು! ಇದುವರೆಗೂ ಯಾವ ವೈದ್ಯರಿಂದಲೂ ಗುಣಪಡಿಸಲಾಗದ ಹೃದಯ ಬಡಿತದ ಸಮಸ್ಯೆ ಅದಕ್ಕೆ ಸಂಬಂಧವೇ ಇಲ್ಲದ ಬೇರಾವುದೋ ಔಷಧದಿಂದ ತಹಬಂದಿಗೆ ಬಂದಿತ್ತು! ಮುಂದೆ ಯಾವಾಗಲಾದರೂ ಹೃದಯ ಬಡಿತದ ಸಮಸ್ಯೆಯಾದಾಗ ಆ ವರ್ತಕರು ಮತ್ತೆ ಕ್ವಿನೀನ್ ಔಷಧ ಸೇವಿಸಿ ಸರಿಹೋಗುತ್ತಿದ್ದರು. ಈ ಹೊಸ ಬೆಳವಣಿಗೆಯಿಂದ ಉತ್ತೇಜಿತರಾದ ಆ ವರ್ತಕರು ಒಮ್ಮೆ ತಮ್ಮ ವೈದ್ಯರ ಬಳಿ ಈ ವಿಷಯ ತಿಳಿಸಿದರು. (ಆ ಕಾಲದಲ್ಲಿ ರೋಗಿಗಳ ಮಾತನ್ನು ಗಮನವಿಟ್ಟು ಕೇಳುತ್ತಿದ್ದ ವೈದ್ಯರೂ ಇದ್ದರೆನ್ನಿ!) ಈ ಸಂಗತಿಯನ್ನು ಕೂಲಂಕಶವಾಗಿ ದಾಖಲಿಸಿದ ಆ ವೈದ್ಯರ ಕಾರಣದಿಂದ ಈ ವಿಷಯವಾಗಿ ಸಂಶೋಧನೆ ನಡೆದು ಹೃದಯ ಬಡಿತದ ಏರುಪೇರುಗಳ ಚಿಕಿತ್ಸೆಗೆ ಕ್ವಿನಿಡೀನ್ ಎಂಬ ನೂತನ ಔಷಧ ಅಭಿವೃದ್ಧಿಗೊಂಡಿತು! ಆಕಸ್ಮಿಕಗಳನ್ನೂ, ಅವಘಡಗಳನ್ನೂ ಎದುರಿಸದ ಮನುಷ್ಯರೇ ಇಲ್ಲ! ಕಷ್ಟಗಳಿಗೆ ಅಂಜುವ, ದುಸ್ಥಿತಿಯ ಕಾಲದಲ್ಲಿ ಪಲಾಯನಗೈಯುವ, ತೊಂದರೆಗಳು ಬಂದಾಗ ದುಃಖಿಸುತ್ತಾ ಕೂಡುವವರಿಂದ ಇತಿಹಾಸ ನಿರ್ಮಾಣವಾಗುವುದಿಲ್ಲ. ಕಷ್ಟಕಾಲದಲ್ಲಿ ಅಧೀರರಾಗದೇ, ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳದೇ, ಪಕ್ವವಾಗಿ ಚಿಂತಿಸುವವರಿಗೆ ಮಾತ್ರ Serendipity ಸಂಭವಿಸುತ್ತದೆ.
ಆರ್ಯನ್‌ ಖಾನ್‌ ಪ್ರಕರಣವಲ್ಲದೇ ವಾಂಖೆಡೆ ತನಿಖೆ ನಡೆಸುತ್ತಿದ್ದ ಇತರೆ ಆರು ಪ್ರಕರಣಗಳನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವರ್ಗಾವಣೆ ಮಾಡಲಾಗಿದೆ. Sameer Wankhede Bar & Bench Published on : 6 Nov, 2021, 6:57 am ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಪ್ರಮುಖ ಆರೋಪಿಯಾಗಿರುವ ವಿಲಾಸಿ ಹಡಗಿನಲ್ಲಿ ಮಾದಕ ವಸ್ತುಗಳ ಪತ್ತೆ ಪ್ರಕರಣದಲ್ಲಿ ಮುಖ್ಯ ತನಿಖಾಧಿಖಾರಿಯಾಗಿದ್ದ ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಆರ್ಯನ್‌ ಖಾನ್‌ ಪ್ರಕರಣವಲ್ಲದೇ ವಾಂಖೆಡೆ ತನಿಖೆ ನಡೆಸುತ್ತಿದ್ದ ಇತರೆ ಆರು ಪ್ರಕರಣಗಳನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವರ್ಗಾವಣೆ ಮಾಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಉಂಟು ಮಾಡಬಹುದಾದ ಆರು ಪ್ರಕರಣಗಳ ವಿಚಾರಣೆ ನಡೆಸಲು ಎನ್‌ಸಿಬಿಯ ಕಾರ್ಯಾಚರಣಾ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲಾಗಿದೆ. ಆದರೆ, ಪ್ರಕರಣದಿಂದ ಯಾವುದೇ ಅಧಿಕಾರಿಯನ್ನು ತೆಗೆದುಹಾಕಲಾಗಿಲ್ಲ ಎಂದು ಎನ್‌ಸಿಬಿಯ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. “ಯಾವುದೇ ಅಧಿಕಾರಿ ಅಥವಾ ಅಧಿಕಾರಿಗಳನ್ನು ಅವರ ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸದಿಂದ ತೆಗೆದುಹಾಕಲಾಗಿಲ್ಲ. ನಿರ್ದಿಷ್ಟ ಆದೇಶಗಳನ್ನು ಹೊರಡಿಸುವವರೆಗೆ ಅವರು ಕಾರ್ಯಾಚರಣಾ ಘಟಕದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ” ಎಂದು ಎನ್‌ಸಿಬಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆರ್ಯನ್‌ ಖಾನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಖೆಡೆ ಸುತ್ತ ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪಗಳು ಸುತ್ತಿಕೊಂಡಿವೆ. ಆರ್ಯನ್‌ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯಾದ ಪ್ರಭಾಕರ್‌ ಸೈಲ್‌ ಅವರು ಅಫಿಡವಿಟ್‌ನಲ್ಲಿ ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಯು ಖಾಲಿ ಪಂಚನಾಮೆಯಲ್ಲಿ ಸಹಿ ಮಾಡುವಂತೆ ಹೇಳಿತ್ತು ಎಂದು ಆಪಾದಿಸಿದ್ದರು. ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿತ್ತು. ಆರ್ಯನ್‌ ಖಾನ್‌ ಪ್ರಕರಣಕ್ಕೆ ಇತಿಶ್ರೀ ಹಾಡಲು ₹25 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದೂ ಸೈಲ್‌ ಅಫಿಡವಿಟ್‌ನಲ್ಲಿ ಆರೋಪಿಸಿದ್ದರು. Also Read ನವಾಬ್‌ ಮಲಿಕ್‌ ಟೀಕೆಗಳು ಎನ್‌ಸಿಬಿ ಮತ್ತು ವಾಂಖೆಡೆ ಅವರ ಸ್ಥೈರ್ಯಗೆಡಿಸಬಹುದು: ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್ ಸಮೀರ್‌ ವಾಂಖೆಡೆ ಅವರು ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಸರ್ಕಾರಿ ಕೆಲಸ ಪಡೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ನವಾಬ್‌ ಮಲಿಕ್‌ ಆರೋಪಿಸಿದ್ದರು. ಮುಸ್ಲಿಮ್‌ ಸಮುದಾಯಕ್ಕೆ ಸೇರಿದ ವಾಂಖೆಡೆ ಅವರು ಪರಿಶಿಷ್ಟ ಜಾತಿ ವಿಭಾಗದಲ್ಲಿ ಭಾರತೀಯ ಕಂದಾಯ ಸೇವೆಯಲ್ಲಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಮಲಿಕ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ತಮ್ಮ ವಾದದ ಸಮರ್ಥನೆಗೆ ಮಲಿಕ್‌ ಅವರು ವಾಂಖೆಡೆಯ ಜನ್ಮ ಮತ್ತು ವಿವಾಹ ಪ್ರಮಾಣ ಪತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು. ಈ ಮಧ್ಯೆ, ವಾಂಖೆಡೆ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಭೀಮ್‌ ಆರ್ಮಿ ಮತ್ತು ಸ್ವಾಭಿಮಾನಿ ರಿಪಬ್ಲಿಕನ್‌ ಪಕ್ಷ ಎಂಬ ಎರಡು ದಲಿತ ಸಂಘಟನೆಗಳು ದೂರು ಸಲ್ಲಿಸಿವೆ.
ವಿಟ್ಲ : ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕಿ ಮೃತಪಟ್ಟ ದಾರುಣ ಘಟನೆ ವಿಟ್ಲದ ಅನಂತಾಡಿಯಲ್ಲಿ ನಡೆದಿದೆ. ( Vittal) ಸೋಮವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಬಾಲಕಿಯ ಸಾವಿಗೆ ಇಡೀ ಊರು ಕಣ್ಣೀರು ಹಾಕುತ್ತಿದೆ. ಅನಂತಾಡಿ ಗ್ರಾಮದ ಆರನೇ ತರಗತಿಯಲ್ಲಿ ಓದುತ್ತಿದ್ದ ಲಿಖಿತಾ (11) ಮೃತ ಬಾಲಕಿ ಇದನ್ನೂ ಓದಿ : Bengaluru ಶಾಲಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ : ಆನ್ ಲೈನ್ ತರಗತಿಗೆ ಮೊರೆ ಹೋದ ಆಡಳಿತ ಮಂಡಳಿ ಸೋಮವಾರ ಸಂಜೆ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಲಿಖಿತಾ ಕುತ್ತಿಗೆಗೆ ಜೋಕಾಲಿಯ ಹಗ್ಗ ಬಿಗಿದುಕೊಂಡಿದೆ. ಈ ವೇಳೆ ಉಸಿರು ಗಟ್ಟಿದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡ ಮಹಿಳೆ ಕೈ, ಕಾಲು, ಬೆನ್ನು ಹೀಗೆ ವಿವಿಧ ಭಾಗಗಳಿಗೆ ಟ್ಯಾಟೂ ( Becky holt tattoo) ಹಾಕಿಸಿಕೊಳ್ಳುವುದು ಗೊತ್ತು. ಅಲ್ಲಿಗೂ ಟ್ಯಾಟೂ ಹಾಕ್ತಾರ ಮೊನ್ನೆ ಮೊನ್ನೆ ಟ್ಯಾಟೂ ಹಾಕಿಸಿಕೊಂಡವರಿಗೆ HIV ಬಂದಿರುವ ಸುದ್ದಿ ಓದಿದ್ದೇವೆ. ಅದು ನಿರ್ಲಕ್ಷ್ಯದಿಂದ ನಡೆದ ಘಟನೆ. ಈ ನಡುವೆ ಬ್ರಿಟನ್ ಮಹಿಳೆಯೊಬ್ಬಳು ಹಾಕಬಾರದ ಜಾಗಕ್ಕೆ ಟ್ಯಾಟೂ (Becky holt tattoo) ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಬ್ರಿಟನ್ ಮಹಿಳೆ ಬೆಕ್ಕಿ ಹಾಲ್ಟ್ಸ್ ತಮ್ಮ ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ. ದೇಹದಲ್ಲಿ ಅತ್ಯಂತ ಸೂಕ್ಷ್ಮ ಅನ್ನಿಸಿಕೊಂಡಿರುವ ಈ ಭಾಗಕ್ಕೂ ವಿನ್ಯಾಸಗಾರ 5 ಸಲ ಟ್ಯಾಟೂ ಬರೆದಿದ್ದಾನೆ. 34 ವರ್ಷದ ಈಕೆ ಅಡಿಯಿಂದ ಮುಡಿಯವರೆಗೆ ಟ್ಯಾಟೂ ಹಾಕಿಸಿಕೊಂಡು ದಾಖಲೆ ಬರೆದಿದ್ದಾಳೆ. ಮಾಹಿತಿಯ ಪ್ರಕಾರ ಈಕೆ ಟ್ಯಾಟೂ ಸಲುವಾಗಿ 33 ಲಕ್ಷಕ್ಕೂ ರೂಪಾಯಿ ಅಧಿಕ ಹಣ ಖರ್ಚು ಮಾಡಿದ್ದಾಳಂತೆ.
ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಬಹಿರಂಗಸಿತ್ತು. ಆ ಬಳಿಕದ 10 ದಿನಗಳ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಉಪ ಆಯುಕ್ತರು ಭೇಟಿ ನೀಡಿ 2005 ರಿಂದ 2019 ರ ಆಡಿಟ್ ವರದಿಯ ಪ್ರಕಾರ ಆಕ್ಷೇಪಿಸಿದ ಕೆಲವು ಅಂಶಗಳನ್ನು ವಿಚಾರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಬಳಿಕ ಅವರು ಸಭೆ ನಡೆಸಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾರ್ವಜನಿಕ ಕುಂದುಕೊರತೆಗಳು, ದೇವಸ್ಥಾನದ ಸ್ಥಿರಾಸ್ತಿ ಮತ್ತು ಚರಾಸ್ತಿ ನಿರ್ವಹಣೆಯ ಬಗ್ಗೆ, ಯಾತ್ರಾರ್ಥಿಗಳ ಸೌಲಭ್ಯ, ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ವಿವರ ಪಡೆದರು. ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತ ಜಯಪ್ರಕಾಶ, ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಮಹೇಶ, ತಹಶೀಲ್ದಾರರು, ದೇವಸ್ಥಾನದ ಸಿಬ್ಬಂದಿ ವರ್ಗ, ಭೂಮಾಪನ ಇಲಾಖೆಯ ಅಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೊಲ್ಲೂರು ದೇವಸ್ಥಾನದ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಿರುವ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಕರ್ನಾಟಕಕ್ಕೂ ಮಾ.20ರಂದು ನಡೆದ ಸಭೆಯಲ್ಲಿ ಮೊದಲ ಬಾರಿ ಭಾಗವಹಿಸಲು ಅವಕಾಶ ನೀಡಲಾಯಿತು. ಈ ವೇಳೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರಾದ ಮಧುಸೂದನ ಅಯಾರ, ದಿನೇಶ ಎಂ.ಪಿ, ಚಂದ್ರ ಮೊಗೇರ, ಶ್ರೀನಿವಾಸ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ವಿಜಯಕುಮಾರ, ಹಿಂದೂ ಜನಜಾಗೃತಿ ಸಮಿತಿಯ ವಿಶ್ವನಾಥ ಹಾಗೂ ದಿನೇಶ ಉಪಸ್ಥಿತರಿದ್ದರು. ಅಲ್ಲದೇ ದೇವಸ್ಥಾನದ ಆಡಳಿತವನ್ನು ಪಾರದರ್ಶಕವಾಗಿರಿಸುವ ದೃಷ್ಟಿಯಿಂದ ಇಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಣಯದ ಬಗ್ಗೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ವಿವರವನ್ನು ನೀಡಬೇಕೆಂದು ಉಪ ಆಯುಕ್ತರು ತಿಳಿಸಿದರು. ಮಹಾಸಂಘವು ಆಕ್ಷೇಪಿಸಿದ ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ಕ್ರಮಗೊಳ್ಳುವಂತೆ ಇಲ್ಲದಿದ್ದರೆ ಹೋರಾಟವನ್ನು ಮುಂದುವರಿಸುವುದಾಗಿ ಎಂದು ಮಹಾಸಂಘದ ಕರ್ನಾಟಕ ರಾಜ್ಯ ವಕ್ತಾರ ಗುರುಪ್ರಸಾದ ಗೌಡ ತಿಳಿಸಿದರು. Posted in ಪ್ರಧಾನ ಸುದ್ದಿಗಳು, ಪ್ರಮುಖ ಸುದ್ದಿಗಳು, ಸುದ್ದಿಗಳು, ಸ್ಥಳೀಯ ಸುದ್ದಿಗಳು, ಹೊಸ ಸುದ್ದಿಗಳು Tags: ಉಪ ಆಯುಕ್ತ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಧಾರ್ಮಿಕ ಸಂಸ್ಥೆ, ಮಹಾಸಂಘ, ಹಿಂದೂ ಜನಜಾಗೃತಿ ಸಮಿತಿ
ಹೌದು ವೀಕ್ಷಕರೇ ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರ ಮನೆಯ ಪಕ್ಕದಲ್ಲಿ ಇರುವ ಸರಕಾರಿ ಶಾಲೆ ಒಂದರಲ್ಲಿ ಸ್ವಚ್ಛತೆ ಇಲ್ಲ ಎಲ್ಲಿ ನೋಡಿದರೂ ಗಲೀಜು ಕಸದ ರಾಶಿ... ಈ ಶಾಲೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು.. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಏನಾದರೂ ಅಪಾಯ ಆಗುವಷ್ಟರಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕಾಳಜಿ ವಹಿಸಬೇಕು... ಕ್ಷೇತ್ರದ ಶಾಸಕರ ಮನೆ ಪಕ್ಕದಲ್ಲಿಯೇ ಈ ರೀತಿ ಆದರೆ ಇನ್ನೂ ಎಲ್ಲೆಲ್ಲಿ ಯಾವ ಯಾವ ರೀತಿ ತೊಂದರೆ ಇದೆಯೋ ಅನ್ನುವ ಅನುಮಾನ ಮೂಡುತ್ತಿದೆ... ಅದು ಏನೇ ಆಗಿರಲಿ ಮಕ್ಕಳ ಜೀವದ ಜೊತೆ ಆಟವಾಡಬೇಡಿ ಆದಷ್ಟು ಬೇಗನೆ ಇತ್ತಕಡೆ ಸ್ವಚ್ಛತಾ ಕಾರ್ಯಕ್ರಮವನ್ನು ಪ್ರಾರಂಭಿಸಿ ಎಂದು ಜನಾಭಿಪ್ರಾಯ.
ನಿಮಗೆಲ್ಲ ಗೊತ್ತಿರುವಂತೆ ಕನ್ನಡ ಕಲಾ ಸಂಘ, ಟಿ.ಬಿ.ಡ್ಯಾಂ, ಕನ್ನಡದ ಅನನ್ಯ ಕತೆಗಾರ ಕುಂ.ವೀ ಅವರ ಬೇಲಿ ಮತ್ತು ಹೊಲ ಕಾದಂಬರಿಯನ್ನು ಪ್ರದರ್ಶಿಸುತ್ತಿದೆ. ಇದನ್ನ ರಂಗರೂಪಕ್ಕಿಳಿಸಿದವರು ಕನ್ನಡದ ಮತ್ತೊಬ್ಬ ಶ್ರೇಷ್ಠ ಪತ್ರಕರ್ತ, ನಾಟಕಕಾರ ಜಿ.ಎಚ್. ರಾಘವೇಂದ್ರ ಅವರು. ನಾವೆಲ್ಲ ಕನ್ನಡ ಕಲಾ ಸಂಘದ ಕಲಾವಿದರು ಇದಕ್ಕಿಂತಲೂ ಸ್ವಲ್ಪ ಮುಂದುವರಿದು ಬೇಲಿ ಮತ್ತು ಹೊಲ ಕಾದಂಬರಿ ಹಾಗೂ ನಾಟಕ ಎರಡನ್ನೂ ಒಂದೇ ಗುಟುಕಿನಲ್ಲಿ ನಮ್ಮೆಲ್ಲ ರಂಗಾಸಕ್ತರಿಗೆ ಮತ್ತು ಓದುಗರಿಗೆ ಕೊಡುವ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಕುಂ.ವೀ ಅವರು ಈ ಪ್ರಯತ್ನವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಸಾಗಿದಲ್ಲಿ, ಇನ್ನು ಕೆಲವೇ ದಿನಗಳಲ್ಲಿ "ಬೇಲಿ ಮತ್ತು ಹೊಲ" ಕಾದಂಬರಿ ಹಾಗೂ ನಾಟಕ ಎರಡೂ ನಿಮ್ಮ ಕೈಸೇರಲಿದೆ..... Posted by DK at 4:30 AM No comments: Saturday, January 1, 2011 ಯಾರಿಗೂ ಮುಖ ತೊರಿಸದೇ ಊರು ಬಿಟ್ಟಿದ್ದಾಯ್ತು... ನನ್ನ ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿ ಮಹಾರಾಷ್ಟ್ರದ ಗಡಿಂಗ್ಲಜ್ ಎಂಬ ಊರಿನಲ್ಲಿ ಕೆಲಸ ಮಾಡುತ್ತಿದ್ದಳು. ನಾನು ಬಳ್ಳಾರಿ ಜಿಲ್ಲೆಯ ತೋರಣಗಲ್ ನಲ್ಲಿದ್ದೆ. ನನ್ನ ಮಾವನವರು ಆರ್.ಎಮ್.ಎಸ್ (ರೈಲ್ವೆ ಮೇಲ್ ಸರ್ವಿಸ್) ನಲ್ಲಿ ಕೆಲಸ ಮಾಡುತ್ತಿದ್ದು, ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು. ತೀರ ಅವಸರ ಪ್ರವೃತ್ತಿಯ ಮನುಷ್ಯ ಅವರು. ನನ್ನ ಸ್ನೇಹಿತರೆಲ್ಲ ಸೇರಿ ನನ್ನ ಕೆಲಸದ ಸ್ಪೀಡ್ ನೋಡಿ ನನಗೆ ಅವಸರ ಎನ್ನುವ ಹೆಸರನ್ನಿಟ್ಟಿದ್ದರು. ಆದರೆ ಇವರು ನನಗಿಂತಲೂ ಅವಸರ... ನಾನು ಜಿಂದಲ್ ವಿಜಯನಗರ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೊದಲು ಅಲ್ಲಿನ ಗೆಸ್ಟ್ ಹೌಸ್ ನಲ್ಲಿರುತ್ತಿದ್ದೆ. ತದನಂತರ ನನ್ನ ರಂಗಚಟುವಟಿಕೆಗಳ ಕಾರಣದಿಂದ ಹೊಸಪೇಟೆಗೆ ನನ್ನ ವಾಸ್ತವ್ಯವನ್ನು ಸ್ಥಳಾಂತರಿಸಿದೆ. ಬೆಳಿಗ್ಗೆ ೬.೩೦ ಕ್ಕೆ ಮನೆ ಬಿಟ್ಟು ಕೆಲಸಕ್ಕೆ ಹೋದರೆ, ಬರುವುದು ಸಾಯಂಕಾಲ ೭ ಗಂಟೆಗೆ. ಬಂದವನೇ ನೇರವಾಗಿ ನಾಟಕದ ತಾಲೀಮು, ಚರ್ಚೆ ಹೀಗೆ ಹಲವು ಕಾರಣಗಳಿಂದ ನಮ್ಮ ತಂಡವನ್ನು ಸೇರಿಕೊಂಡು ಬಿಟ್ಟಿರುತ್ತಿದ್ದೆ. ಹೀಗಾಗಿ ನಾನಿರುವ ಮನೆಯ ಆಜೂ ಬಾಜೂ ಯಾರಿದ್ದಾರೆ, ಅವರೇನು ಮಾಡುತ್ತಿದ್ದಾರೆ...ಊಹುಂ..ನನಗೆ ಅದ್ಯಾವುದರ ಮಾಹಿತಿಯೇ ಇರಲಿಲ್ಲ..ನಾನೂ ಸಹ ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನನ್ನ ಮನೆಯ ಎಡಕ್ಕೆ ಹಾಗೂ ಬಲಕ್ಕೆ ಯಾರಿರುತ್ತಾರೆ ಎಂಬುದೂ ಸಹ ನನಗೆ ಗೊತ್ತಿರಲಿಲ್ಲ. ಹೀಗಿಂತಿರ್ಪ ನನ್ನ ಮಾವನವರು ಕೆಲವುದಿನಗಳ ಮಟ್ಟಿಗೆ ಹೊಸಪೇಟೆಗೆ ಬರುವುದಾಗಿ ತಿಳಿಸಿದರು. ಸರಿ ನನ್ನ ಹೆಂಡತಿ, ಅತ್ತೆ, ಮಾವ ಹಾಗೂ ನನ್ನ ಮಗ (ಆಗಿನ್ನೂ ಅದು ೫ ತಿಂಗಳ ಕೂಸು) ಹೊಸಪೇಟೆಗೆ ಬಂದೇ ಬಿಟ್ಟರು. ನಾನು ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದೆನಾದ್ದರಿಂದ, ಯಾವುದೇ ರೀತಿಯ ಕೊರತೆ ಇರಲಿಲ್ಲ. ಅವರಿಗೆ ಬೇಕಾಗುವ ಎಲ್ಲ ದಿನಸಿ ಪದಾರ್ಥ, ತರಕಾರಿ, ಹಾಲು-ಹಣ್ಣಿನ ವ್ಯವಸ್ಥೆಯನ್ನು ಸರಿಯಾಗಿಯೇ ಮಾಡಿಟ್ಟಿದ್ದೆ. ನಾನು ಎಂದಿನಂತೆ ಬೆಳಿಗ್ಗೆ ೬.೩೦ ಕ್ಕೆ ಕೆಲಸಕ್ಕೆ ಹೊರಟೆ. ಅಂದು ಸಂಜೆ ಸ್ವಲ್ಪ ಬೇಗನೇ ಮನೆಗೆ ಬಂದೆ. ಮನೆಯ ಹೊರಗಡೆ ೧೦ ರಿಂದ ೧೨ ಜೊತೆ ಚಪ್ಪಲಿಗಳು..ನನ್ನ ಮನೆಯಿಂದ ಜೋರಾಗಿ ಮಾತುಗಳು ಕೇಳಿಬರುತ್ತಿವೆ. ನನಗೆ ಆಶ್ಚರ್ಯವಾಯಿತು. ನಾನು ಹೊಸಪೇಟೆಗೆ ಬಂದು ೩ ವರ್ಷಗಳ ಅವಧಿಯಲ್ಲಿ ನನ್ನ ಮನೆಗೆ ಎಂದೂ ಇಷ್ಟು ಜನ ಒಂದೇ ಬಾರಿಗೆ ಬಂದವರಲ್ಲ. ಬಂದರೂ ಅವರು ನಾನಿದ್ದಾಗಲೇ ಬರಬೇಕು, ಅದೂ ನಮ್ಮ ತಂಡದ ಕಲಾವಿದರು. ಅವರನ್ನು ಬಿಟ್ಟರೆ ನಾನು ಇಲ್ಲಿ ಯಾರಿಗೂ ಪರಿಚಯವಿರಲಿಲ್ಲ. ಸಂಶಯಗೊಳ್ಳುತ್ತಲೇ ಮನೆಯಲ್ಲಿ ಕಾಲಿರಿಸಿದೆ. ನನ್ನ ಮಾವನವರು ಆ ಮನೆಗೆ ನಾನೇ ಅಪರಿಚಿತ ಎನ್ನುವಂತೆ ಬರಮಾಡಿಕೊಂಡರು. ಅಲ್ಲಿ ಸೇರಿದ್ದ ಎಲ್ಲರಿಗೂ ನನ್ನ ಪರಿಚಯವನ್ನೂ ಮಾಡಿಸಿದ್ದಾಯ್ತು. ನಂತರ ನನಗೆ ತಿಳಿದಿದ್ದು, ಅಲ್ಲಿ ಸೇರಿದ್ದವರೆಲ್ಲ ನನ್ನ ಮಾವನವರ ಗೆಳೆಯರು. ಎಲ್ಲರಿಗೂ ಅಲ್ಪೋಪಹಾರ, ಚಹ ಎಲ್ಲವೂ ನೀಡಿದ್ದಾಯಿತು...ಎಲ್ಲರೂ ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬನ್ನಿ ಎಂದು ಆಹ್ವಾನ ಕೊಡುವವರೆ..ನನಗೋ ಎನೋ ಒಂದು ಮುಜುಗರ.....ಎಲ್ಲರೂ ಹೊರಟು ಹೋದ ಮೇಲೆ ಎನೊ ಒಂದು ದೊಡ್ಡ ಬಿರುಗಾಳಿ ಬೀಸಿ ಹೋದ ಅನುಭವ. ನಂತರದ ದಿನಗಳಲ್ಲಿ ಇವರೆಲ್ಲರಿಂದ ತಪ್ಪಿಸಿ ಒಡಾಡುವುದೇ ನನಗೊಮ್ದು ಸವಾಲಾಯಿತು. ಎಲ್ಲಿ ಭೇಟಿಯಾದರೂ "ಯಾಕ ಮನೀಗೆ ಬಂದೇ ಇಲ್ಲ", "ನಿಮ್ಮ ಕೆಲಸ ಏನು", "ನೀವು ಖರೇವಂದ್ರೂ ಜಿಂದಲ್ ಕಂಪನಿಯೊಲಗ ಕೆಲಸ ಮಾಡ್ತೀರಾ" ಮುಂತಾದ ಅಸಂಬದ್ಧ ಪ್ರಶ್ನೆಗಳು ನನ್ನನ್ನು ಮುಜುಗರಕ್ಕೊಳಪಡಿಸಿದ್ದವು. ಮುಂದೆ ಕೆಲವು ದಿನಗಳ ನಂತರ ನಾನು ಜಿಂದಲ್ ಕೆಲಸ ಬಿಟ್ಟು ಬೆಂಗಳೂರಿಗೆ ಹೊರದಬೇಕಾಯ್ತು. ನಮ್ಮ ಮಾವನವರು ಅಷ್ಟೇ ಜತನದಿಂದ ನಾನು ಬೆಂಗಳೂರಿಗೆ ಹೊರಡುತ್ತಿರುವ ವಿಷಯವನ್ನು ತಮ್ಮ ಎಲ್ಲ ಗೆಳೆಯರ ಬಳಗಕ್ಕೆ ರವಾನಿಸಿಬಿಟ್ಟಿದ್ದರು. ಕೇವಲ ರಸ್ತೆ ಭೇಟಿಗೆ ಮಾತ್ರ ಸೀಮಿತವಾಗಿದ್ದ ನನ್ನ ಮತ್ತು ಅವರ ಮಾತು ಕತೆ ಮನೆಗೋ ಬಂತು. ಅವರನ್ನು ತಪ್ಪಿಸಲು ನಾನು ಮನೆಯನ್ನು ಖಾಯಂ ಆಗಿ ಬೀಗ ಹಾಕತೊಡಗಿದೆ. ಕೊನೆಗೆ ಬೆಂಗಳೂರಿಗೆ ಹೊರಡುವ ದಿನ ಯಾರಿಗೂ ಹೇಳದೇ ಕೇಳದೇ, ಯಾರಿಗೂ ಮುಖವನ್ನು ಸಹ ತೋರಿಸದೇ ಹೊಸಪೇಟೆಯನ್ನು ತೊರೆಯಬೇಕಾಯ್ತು.... ಥಾರ್ ಮರಭೂಮಿಯಲ್ಲಿ ಒಯ್ದು ನನ್ನ ಮಾವನವರನ್ನು ಬಿಟ್ಟರೂ ಸಹ ಅಲ್ಲಿಯೂ ಯಾರಾದರೂ ಪರಿಚಯದವರನ್ನು ಹೆಕ್ಕಿ ತರುವ ಜಾಯಮಾನದವರು ಇವರು...... Posted by DK at 7:07 PM No comments: .....ಮೈಮ್ಯಾಲೆಲ್ಲ ಕೂದ್ಲ ಅವ..... ಅದು ೧೯೯೭ ರ ಆಗಷ್ಟ್ ತಿಂಗಳು..ನನ್ನ ಗೆಳೆಯನ ಮದುವೆ ನಿಶ್ಚಿತಾರ್ಥಕ್ಕೆಂದು ಬೆಳಗಾವಿಗೆ ಹೋಗಿದ್ದೆ. ಆವ ನಾನಿನ್ನೂ ಬ್ಯಾಚುಲರ್. ಜಿಂದಲ್ ವಿಜಯನಗರ ಸ್ಟೀಲ್ ಕಂಪನಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಆ ನಿಶ್ಚಿತಾರ್ಥಕ್ಕೆ ನಮ್ಮ ತಂದೆ ತಾಯಿ ಸಹ ಬಂದಿದ್ದರು. ನನ್ನ ಅನೇಕ ಬಂಧು ಬಳಗದವರನ್ನು ತುಂಬಾ ದಿನಗಳ ನಂತರ ಭೇಟಿಯಾಗುವ ಅವಕಾಶ ದೊರೆತಿತ್ತು. ಎಲ್ಲ ಉಭಯ ಕುಶಲೋಪರಿ, ಸಾಂಪ್ರತಗಳ ನಂತರ ಸಹಜವಾಗಿ ಮನೆಯ ಹಿರಿಯರೆಲ್ಲ ಸೇರಿ (ಪೂರ್ವ ಯೋಜಿತ ಕೃತ್ಯದಂತೆ) ನನ್ನ ಮದುವೆಯ ವಿಚಾರವನ್ನು ತೆಗೆದರು. ನಾನು ಎಷ್ಟೇ ಅಲ್ಲಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರೂ ಅವರು ಮತ್ತೆ ಮತ್ತೆ ನನ್ನನ್ನು ಹಿಡಿದುತಂದು ತಮ್ಮ ಒಂದಂಶದ ಅಜೆಂಡಾಕ್ಕೆ ನನ್ನನ್ನು ಬಲಿಯಾಗಿರಿಸುತ್ತಿದ್ದರು. ಹಳ್ಳಕ್ಕೆ ಬಿದ್ರೆ ಆಳಿಗೊಂದ್ ಕಲ್ಲು ಎನ್ನುವಂತೆ ಆ ನಿಶ್ಚಿತಾರ್ಥ ಕಾರ್ಯದಲ್ಲಿ ಒಂದು ಹಣ್ಣು ಹಣ್ಣು ಮುದುಕ ತನ್ನದೇನೂ ಕಡಿಮೆ ಇಲ್ಲವೆಂಬಂತೆ ನನ್ನ ತಂದೆ ತಾಯಿಯವರ ಮುಂದೆ ತನ್ನ ವಾದವನ್ನು ಮಂಡಿಸಿದ.."ನೋಡ್ರಿ..ನಮ್ಮ ಗುರುತಿನ ಪೈಕಿ ಒಂದು ಹುಡುಗಿ ಅದ..ಬ್ಯಾಂಕ್‍ನ್ಯಾಗ ಕೆಲಸ ಮಾಡತಾಳ...ಒಬ್ಬಾಕಿ ಮಗಳು (ಅವಳಿಗೆ ಇಬ್ಬರು ಅಣ್ಣಂದಿರಿರುವುದನ್ನು ಆಮೆಲೆ ತಿಳಿಸಿದ)..ನೋಡೊದ್ರಾಗ ಏನು ತಪ್ಪಿಲ್ಲ..ಅಮ್ಯಾಲೆ ಬ್ಯಾಡಂದ್ರ ಬ್ಯಾರೆ ವಿಚಾರ ಮಾಡೋಣು" ಎಂದ....ಸಾಕು..ಇಷ್ಟು ಸಾಕಾಯ್ತು ಇವರಿಗೆ... ಹುಡುಗಿಯನ್ನು ನೊಡುವ ದಿನಾಂಕವನ್ನು ಸಹ ಗೊತ್ತು ಪಡಿಸಿಯೇ ಬಿಟ್ಟರು... ಹುಡುಗಿಯನ್ನು ನೋಡುವುದು ಬೆಳಗಾವಿಯ ನನ್ನ ಚಿಕ್ಕಮ್ಮನ ಮನೆಯಲ್ಲಿ ಎಂದು ನಿರ್ಧರಿಸಲಾಗಿತ್ತು. ಅಂದಿನ ದಿನ ಬೆಳಿಗ್ಗೆ ನಾನು ೯ ಗಂಟೆಯ ಹೊತ್ತಿಗೆ ಅಲ್ಲಿಗೆ ಬರುವುದು, ಅದರ ಪ್ರಕಾರ ೧೦ ಗಮ್ಟೆಯ ಹೊತ್ತಿಗೆ ಹುಡುಗಿಯನ್ನು ಅಲ್ಲಿಗೆ ತಂದು ತೊರಿಸುವುದು ಎಂದು ಮಾತಾಗಿತ್ತು. ಸರಿ ಬೆಳಿಗ್ಗೆ ಸುಮಾರು ೮.೩೦ ರ ಹೊತ್ತಿಗೆ ನಾನು ಬೆಳಗಾವಿಯ ನನ್ನ ಚಿಕ್ಕಮ್ಮನ ಮನೆಗೆ ಬಂದೆ...ನಾನು ಅಲ್ಲಿಗೆ ಬರುವ ಹೊತ್ತಿಗಾಗಲೇ ಒಬ್ಬ ಹಿರಿಯರು ಆಗಲೇ ಅಲ್ಲಿಗೆ ಬಂದು ಪ್ರತಿಷ್ಠಾಪಿತರಾಗಿದ್ದರು...ಅವರು ನಾನು ನೋಡಲಿರುವ ಹುಡುಗಿಯ ತಂದೆ ಅಂತ ತಾವೇ ಪರಿಚಯಿಸಿಕೊಂಡರು....ನಾನು ಹುಡುಗಿಯನ್ನು ನೋಡಲಿದ್ದೇನೆಯೊ ಅಥವಾ ಹುಡುಗಿಯೇ ನನ್ನನ್ನು ನೋಡಲು ಬರಲಿದ್ದಾಳೋ ಎಂಬ ಗೊಂದಲದಲ್ಲಿ ನಾನಿದ್ದೆ...ಅಂತೂ ಹುಡುಗಿಯ ದರ್ಶನದ ಮೊದಲೇ ಅವರ ಅಪ್ಪನ ದರ್ಶನ ನನಗಾಗಿತ್ತು. ನಾನು ಹುಡುಗಿಯನ್ನು ನೋಡಿದ್ದಾಯಿತು..ಅವಳೂ ನನ್ನನ್ನ ನೋಡಿದ್ದಾಯಿತು..ಮುಂದೆ ಅವಳೊಡನೆ ನನ್ನ ಮದುವೆಯೂ ಆಯಿತು...ಮದುವೆಯ ನಂತರ ನಾನು ಮತ್ತು ನನ್ನ ಹೆಂಡತಿ ಹೀಗೆಯೇ ಮಾತನಾಡುತ್ತ... ಅವಳ ಅಪ್ಪ ನನ್ನನ್ನ ನೋಡಲು ಮೊದಲು ಬಂದದ್ಯಾಕೆ ಎನ್ನುವುದರ ಹಿಂದೆ ಒಂದು ಕುತೂಹಲಕರ ಸಂಗತಿ ಅಡಗಿತ್ತು... ಹಿಂದೆ ಒಂದು ಸಲ ನನ್ನ ಹೆಂಡತಿಯನ್ನು ನೋಡಲು ಒಬ್ಬ ಗಂಡು ಬಂದಿದ್ದನಂತೆ..ಅವನಿಗೆ ತಲೆಯ ಮೇಲೆ ಹುಡುಕಿದರೂ ಒಂದು ಕೂದಲು ಇರಲಿಲ್ಲವಂತೆ..ಹೀಗಾಗಿ ಸಹಜವಾಗಿ ಅವನು ರಿಜೆಕ್ಟ್ ಆಗಿದ್ದ..ಅಂದಿನಿಂದ ಅವಳನ್ನು ಯಾವುದೇ ಹುಡುಗನ ಮುಂದೆ ತೋರಿಸುವ ಶಾಸ್ತ್ರ ಮಾಡಿಸುವ ಮೊದಲು ನನ್ನ ಮಾವನೇ ಮೊದಲು ಹುಡುಗನನ್ನು ನೋಡಿಕೊಂಡು ಬರುವುದಂತೆ...ನನ್ನನ್ನು ನೋಡಿಕೊಂಡು ಮನೆಗೆ ಹೋದ ನನ್ನ ಮಾವನವರನ್ನು ಎಲ್ಲರೂ ಕೇಳಿದ ಮೊದಲ ಪ್ರಶ್ನೆ.."ಹುಡುಗನ ತಲ್ಯಾಗ ಕೂದ್ಲ ಅವನೋ ಇಲ್ಲೋ" ಅದಕ್ಕೆ ನನ್ನ ಮಾವನವರು "ತಲಿಮ್ಯಾಲೇನು..ಇಡೀ ಮೈಮ್ಯಾಲೆಲ್ಲ ಕೂದ್ಲ ಅವ..ನಡೀರಿ ನೋಡಿ ಬರೋಣು"....ಇಲ್ಲಿಂದ ಆರಂಭವಾಗುತ್ತದೆ ನಮ್ಮ ಮಾವನವರ ಪುರಾಣ.....
ಕೆ.ಆರ್.ಪೇಟೆ: ಕರ್ನಾಟಕ ರಾಜ್ಯಕ್ಕೆ ಬರುವ ಪರಭಾಷಿಕರಿಗೆ ಕನ್ನಡ ಕಲಿಯದೇ ಇದ್ದರೆ, ಇಲ್ಲಿ ಉಳಿಗಾಲವಿಲ್ಲ ಎಂಬ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ರಾಜಧಾನಿ ಬೆಂಗಳೂರು ಕನ್ನಡಿಗರ ಕೈ ತಪ್ಪುವ ಅಪಾಯವಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು. ಪಟ್ಟಣದ ಸಾಹುಕಾರ್ ಚನ್ನೇಗೌಡ ಕಾಂಪ್ಲೆಕ್ಸ್ ಆವರಣದಲ್ಲಿ ತಾಲೂಕು ಕುವೆಂಪು ಕನ್ನಡ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಟ್ರಸ್ಟ್ ಉದ್ಘಾಟನೆಯ ಅಂಗವಾಗಿ ಬಡವರಿಗೆ ಉಚಿತ ಗ್ಯಾಸ್ ವಿತರಣೆ ಮಾಡಿ ಅವರು ಮಾತನಾಡಿದರು. ರಾಜಧಾನಿ ಬೆಂಗಳೂರಿನಲ್ಲಿ ವಿಶ್ವದ ನೂರಾರು ಭಾಷೆ ಮಾತ ನಾಡುವ ಜನರು ಬಂದು ಆಶ್ರಯ ಪಡೆದುಕೊಂಡಿದ್ದಾರೆ. ಇವರೆಲ್ಲರೂ ಅವರ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಅಸಡ್ಡೆಯಿಂದ ನೋಡುತ್ತಿದ್ದಾರೆ. ಇದರಿಂದ ಕನ್ನಡಿಗರು ಅಲ್ಪ ಸಂಖ್ಯಾತರಾಗಿ ಜೀವನ ನಡೆಸುವಂತಾಗಿದೆ. ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ಕನ್ನಡಿಗರು ಸ್ವಲ್ಪ ಉಸಿರಾಡು ವಂತಾಗಿದೆ. ಹಾಗಾಗಿ, ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಮಾತನಾಡುವಂತಾಗಬೇಕು. ಕನ್ನಡ ಕಲಿಯದೇ ಇದ್ದರೆ ಕರ್ನಾಟದಲ್ಲಿ ನಮಗೆ ಉಳಿಗಾಲವಿಲ್ಲ ಎಂಬ ವಾತಾವರಣವನ್ನು ಸರ್ಕಾರವು ಸೃಷ್ಟಿ ಮಾಡಬೇಕು ಎಂದು ತಿಳಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದುವರೆ ವಿಗೂ ರಾಜ್ಯದ ಯಾವುದೇ ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಆದರೂ ಸಹ ಹೋದಲ್ಲಿ ಬಂದಲ್ಲಿ 40ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಹಾಗೆ ಹೀಗೆ ಎಂದು ಸುಮಾರು 6 ತಿಂಗಳಿನಿಂದ ಸುಳ್ಳು ಹೇಳುತ್ತಿದ್ದಾರೆ. ಇನ್ನಾ ದರೂ ರೈತರ ಸಾಲವನ್ನು ಮಾಡಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಒತ್ತಾಯ ಮಾಡಿದರು. ಈ ವೇಳೆ 6 ಮಂದಿ ಬಡ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಅನ್ನು ಕೆ.ಬಿ. ಚಂದ್ರ ಶೇಖರ್ ವಿತರಣೆ ಮಾಡಿದರು. ಕೆ.ಸಿ.ರಾಮಚಂದ್ರೇಗೌಡ ಅವರಿಗೆ ಕುವೆಂಪು ಟ್ರಸ್ಟ್ ವತಿಯಿಂದ ದ್ವಿಚಕ್ರ ವಾಹನ ನೀಡಲಾಯಿತು. ಸಾಧಕರಿಗೆ ಸನ್ಮಾನ: ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಟ್ಟಣದ ಬಸವೇಶ್ವರ ದೇವಾಲಯದ ಶ್ರೀಗಳಾದ ಡಾ.ವಿರೂಪಾಕ್ಷಿ ರಾಜಯೋಗಿ ಸ್ವಾಮೀಜಿ, ರಾಜ್ಯ ನಾಟಕ ಅಕಾಡೆಮೆ ಪ್ರಶಸ್ತಿ ವಿಜೇತರಾದ ಕೆ.ಎನ್. ತಮ್ಮಯ್ಯ, ದಲಿತ ಹೋರಾಟಗಾರ ಡಾ.ಬಸ್ತಿ ರಂಗಪ್ಪ, ಶಿಕ್ಷಕ ಡಾ.ಕೆ.ಎಸ್. ಚಂದ್ರು, ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಊಟ ನೀಡುತ್ತಿರುವ ಕ್ಯಾಂಟೀನ್ ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಮಿನಾಯಕ್, ಕುವೆಂಪು ಗೆಳೆಯರ ಬಳಗದ ಅಧ್ಯಕ್ಷ ಮಿಲ್ ಮಂಜು, ಮನ್‍ಮುಲ್ ನಿರ್ದೇಶಕ ರವಿ, ಪುರಸಭೆಯ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ರೂಪಾ, ಪುರಸಭಾ ಸದಸ್ಯರಾದ ಹೆಚ್.ಕೆ.ಅಶೋಕ್, ಕೆ.ಗೌಸ್‍ಖಾನ್, ಡಿ.ಪ್ರೇಮ ಕುಮಾರ್, ಕೆ.ಟಿ.ಚಕ್ರಪಾಣಿ, ಕೆ.ಬಿ.ನಂದೀಶ್, ನಂಜುಂಡಯ್ಯ, ನವೀದ್, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ಉಪಾಧ್ಯಕ್ಷ ಬಿ.ಎ.ಸುರೇಶ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಎಸ್.ಕುಮಾರ್, ಉಪಾಧ್ಯಕ್ಷ ರಾದ ಎಸ್.ರವಿ, ನಟರಾಜ್, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನಾಮಹೇಶ್, ಕುವೆಂಪು ಸೇವಾ ಟ್ರಸ್ಟ್ ಉಪಾಧ್ಯಕ್ಷ ಬಾವಾಜಿ ಚಂದ್ರು, ಕಾರ್ಯದರ್ಶಿ ಸೈಯದ್ ರೋಷನ್, ಖಜಾಂಚಿ ನಾಗೇಶ್, ಮಾಧ್ಯಮ ಕಾರ್ಯದರ್ಶಿ ವಿ.ಲೋಕೇಶ್, ಮುಖಂಡರಾದ ಅಂಬರೀಶ್, ಕೆ.ಆರ್.ರವೀಂದ್ರಬಾಬು ಇತರರು ಇದ್ದರು.
ಶೆಲ್ಲಿ ಕೂಡ್ಲಿಗಿ ಅವರ ಕಥಾ ಸಂಗ್ರಹ ‘ಹಥೇಲಿ’. ಒಟ್ಟು 8 ಕಥೆಗಳೀರುವ ಈ ಸಂಕಲನದಲ್ಲಿ ಒಂದೊಂದು ಕಥೆಯೂ ವಾಸ್ತವಿಕ ಬದುಕಿನ ಸಣ್ಣ ಸಣ್ಣ ತಂತುಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಬಂದಿವೆ.ಸೂಕ್ಷ್ಮ ಸಂವೇದನೆಗಳ ಸಂಪೂರ್ಣ ಚಿತ್ರಣ ಈ ಕಥೆಗಳಲ್ಲಿವೆ.ಕೆಲವು ನಗು ತರಿಸಿದರೆ ಇನ್ನೂ ಕೆಲವು ಎದೆಯೊಳಗೆ ಭಾವುಕತೆಯ ಥ್ರಿಲ್ ಕೊಟ್ಟಿವೆ. ಹೆಣ್ಣು, ಸಂಸಾರ, ಸಮಾಜದ ರೀತಿ ನೀತಿ, ಪ್ರೇಮ, ದುಃಖಗಳ ಹಂದರದೊಳಗೆ ಇಣುಕಿ ಮಿಣುಕುವ ಕಥೆಗಳು ಓದುಗರನ್ನು‌ ಕುತೂಹಲದೊಂದಿಗೆ ಪಯಣಿಸಲು ಸ್ಪೂರ್ತಿ ತುಂಬುತ್ತವೆ.ಸಂವೇದನಾಯುಕ್ತ ಮಾಹಿತಿಯ ನಡುವೆ ಬಹಳ ಕಾಲ ನಮ್ಮನ್ನು ಹಿಡಿದಿಡುತ್ತವೆ. ಕೇವಲ ಆಧುನಿಕ ಯಾಂತ್ರಿಕ ಬದುಕಿನ ಗೊಂದಲ ಗೋಜಲುಗಳ ಬಂಧನದಲ್ಲಿ ಬದುಕುತ್ತಿರುವ ನಮ್ಮನ್ನು‌ ಕೆಲ ಸಮಯದವರೆಗೆ ಬಾಲ್ಯ ಯೌವ್ವನ ಹಾಗೂ ಮುಪ್ಪಿನ ಕಾಲದ ಸನ್ನಿವೇಶಗಳತ್ತ ಈ ಕಥೆಗಳು ಚಿಂತನೆಗೆ ಎಡೆ ಮಾಡಿ ಕೊಡುತ್ತವೆ. ಈ ಕೃತಿಗೆ ಶ್ರೀ ಗಣಪತಿ ಹೆಗಡೆ ದಾಂಡೇಲಿಯವರು ಮುನ್ನುಡಿ ಬರೆದಿದ್ದರೆ ಹಿರಿಯ ಬರಹಗಾರರಾದ ಶ್ರೀ ಮುದಲ್ ವಿಜಯ್ ಬೆಂಗಳೂರು ಅವರ ಬೆನ್ನುಡಿಯಿದೆ. About the Author ಶೆಲ್ಲಿ ಕೂಡ್ಲಿಗಿ. ಮಣೆಗಾರ್ ಶೆಕ್ಷಾವಲಿ ಎಂಬುದು ಇವರ ಪೂರ್ಣ ಹೆಸರು. ತಮ್ಮ ಹೆಸರಿನ (ಶೆ)ಕ್ಷಾವ(ಲಿ) ಮೊದಲ ಮತ್ತು ನಾಲ್ಕನೇ ಅಕ್ಷರ ಸೇರಿಸಿ ಜೊತೆಗೆ ಹುಟ್ಟೂರಿನ ಮೇಲಿನ ಅಭಿಮಾನದಿಂದ "ಶೆಲ್ಲಿ ಕೂಡ್ಲಿಗಿ" ಎಂಬ ಕಾವ್ಯನಾಮದ ಮೂಲಕ ನಾನು ಕೃತಿಗಳನ್ನು ರಚಿಸುತ್ತಿರುವೆ. ತಂದೆ ಅಬ್ದುಲ್ ರೋಫ್ ತಾಯಿ ಜಮಿಲಾ ಬೀ. ಪ್ರಾಥಮಿಕ ಶಿಕ್ಷಣ ಹುಟ್ಟೂರು ಕೂಡ್ಲಿಗಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 1992ನೇ ಸಾಲಿನಿಂದ ಆರಂಭವಾಯಿತು. 1999ರಿಂದ ಪ್ರೌಢ ಶಿಕ್ಷಣನ್ನು ಅದೇ ಊರಿನ ಐತಿಹಾಸಿಕ ಶಾಲೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಯಿತು. ಹೊಸಪೇಟೆ(ಪ್ರಸ್ತುತ ವಿಜಯನಗರ)ಯ ನೈಸೆಟ್ ...
ದಿನಾಂಕ 07-10-2018 ರಂದು ಫಿರ್ಯಾದಿ ಜಗನಾಥ ಮತ್ತು ವೈಜೀನಾಥ ತಂದೆ ಗುರನಾಥ ಶಾಹಾಪೂರೆ ಸಾ: ಖಟಕಚಿಂಚೊಳಿ ರವರ ತಂದೆಯವರಾದ ಗುರನಾಥ ತಂದೆ ಕಲ್ಲಪ್ಪಾ ಸಾಹಾಪೂರೆ ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಖಟಕ ಚಿಂಚೋಳಿ ರವರು ಪಿ.ಕೆ.ಪಿಎಸ್ ಬ್ಯಾಂಕಿನಲ್ಲಿ 20,000/- ರೂ. ಮತ್ತು ಖಟಕ ಚಿಂಚೋಳಿ ಬ್ಯಾಂಕನಲ್ಲಿ 80,000/- ರೂಪಾಯಿ ಮತ್ತು ಇತರರ ಹೋಲವನ್ನು ತಾತ್ಕಾಲಿಕವಾಗಿ ಸಾಗುವಳಿಗೆ ಪಡೆದಿರುತ್ತಾರೆ, ಸುಮಾರ 10 ಎಕರೆಯಲ್ಲಿ ಮೂರು ವರ್ಷದಿಂದ ಮಳೆ ಕೈಕೊಟ್ಟ ಕಾರಣ ಮತ್ತು ಬೆಲೆ ಕುಸಿತದಿಂದ ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡು ತಿರಿಸಲಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 95/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 08-10-2018 ರಂದು ಫಿರ್ಯಾದಿ ರಮೇಶ ತಂದೆ ಮನೋಹರ ಪವಾರ, ವಯ: 37 ವರ್ಷ, ಜಾತಿ: ಲಮಾಣಿ, ಸಾ: ಕೊಂಗೇವಾಡಿ ತಾಂಡಾ, ತಾ: ಬಸವಕಲ್ಯಾಣ ರವರಿಗೆ ತಮ್ಮ ಸಂಬಂಧಿಕರ ಊರಾದ ಯಲದಗುಂಡಿ ತಾಂಡಾ ಗ್ರಾಮಕ್ಕೆ ಹೋಗಬೇಕಾಗಿರುವುದರಿಂದ ತಮ್ಮ ದೊಡ್ಡಪ್ಪ ಬಾಬು ರವರ ಮೋಟರ ಸೈಕಲ್ ನಂ. ಕೆಎ-37/ಯು-1318 ನೇದ್ದರ ಮೇಲೆ ಹಾಗೂ ಫಿರ್ಯಾದಿಯ ತಮ್ಮ ಎಮನಾಥ ಹಾಗೂ ಅವನ ಮಗ ಅಜಯ ಅವರ ಮೋಟರ ಸೈಕಲ್ ನಂ. ಕೆಎ-32/ವಾಯ್-0874 ನೇದ್ದರ ಮೇಲೆ ಹೋಗುವಾಗ ಎಮನಾಥ ಈತನು ತನ್ನ ಮಗನಿಗೆ ಕೂಡಿಸಿಕೊಂಡು ಮುಂದೆ ಹೋಗುತ್ತಿದ್ದು, ಫಿರ್ಯಾದಿಯು ದೊಡ್ಡಪ್ಪ ಬಾಬುರವರಿಗೆ ಕೂಡಿಸಿಕೊಂಡು ಹಿಂದೆ ಹೋಗುತ್ತಿದ್ದು, ಆಗ ರಾ.ಹೆ ನಂ. 65 ರ ಮಂಠಾಳ ಕ್ರಾಸ್ ಹತ್ತಿರ ಮಂಠಾಳ ಕಡೆಗೆ ತಿರುಗುವಾಗ ಹುಮನಾಬಾದ ಕಡೆಯಿಂದ ಒಂದು ಕಂಟೆನರ್ ಲಾರಿ ನಂ. ಎಲ್-01/ಜಿ-9871 ನೇದರ ಚಾಲಕನಾಧ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಮ್ಮ ಚಲಾಯಿಸುತ್ತಿದ್ದ ಮೋಟರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ತಮ್ಮನ ತಲೆಗೆ ಭಾರಿ ರಕ್ತಗಾಯ, ಸೊಂಟದಲ್ಲಿ ಭಾರಿ ಗುಪ್ತಗಾಯ, ಎರಡು ಕೈಗಳಿಗೆ & ಕಾಲುಗಳಿಗೆ ತರಚಿದ ಗಾಯ, ಎಡಗಡೆ ಗಲ್ಲಕ್ಕೆ ರಕ್ತಗಾಯ, ಎಡಗಡೆ ತಲೆಯಲ್ಲಿ & ಕಿವಿಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ & ಮೂಗಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ತಮ್ಮನ ಮಗ ಅಜಯ ಈತನಿಗೆ ನೋಡಲಾಗಿ ಆತನ ಎರಡು ಕಾಲುಗಳ ತೊಡೆಯ ಭಾಗಗಳು ಮುರಿದು ಭಾರಿ ರಕ್ತಗಾಯವಾಗಿ, ತಲೆಯ ಮೇಲಿಂದ ಲಾರಿ ಟೈರ್ ಹೋಗಿ ತಲೆ ಹಾಗೂ ಮುಖ ಜಜ್ಜಿದಂತೆ ಆಗಿ ತಲೆಯಿಂದ ಮೆದಳು ಹೊರಗೆ ಬಂದು ಈತನು ಕೂಡ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ನಂತರ ಆರೋಪಿಯು ತನ್ನ ಲಾರಿ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. RlPÀ aAZÉÆý ¥Éưøï oÁuÉ C¥ÀgÁzsÀ ¸ÀA. 145/2018, PÀ®A. 143, 147, 148, 324, 326, 323, 307, 504, 506 L.¦.¹ ªÀÄvÀÄÛ 3(1) (Dgï) 3(1) (J¸ï) J¸ï.¹/J¸ï.n PÁ¬ÄzÉ :- ದಿನಾಂಕ 07-10-2018 ರಂದು ಲಕ್ಷ್ಮೀ ಮಂದಿರದ ಹತ್ತಿರ ರಸ್ತೆಯ ಮೇಲೆ ಆರೋಪಿತರಾದ 1) ವಿನಾಯಕ ತಂದೆ ಹಣಮಂತರಾವ, 2) ಮಾಧು ತಂದೆ ಹಣಮಂತ ಬಗದೂರ, 3) ಶ್ರೀಪತಿ ತಂದೆ ಚಂದರ, 4) ಚಂದರ ತಂದೆ ಮೊಹನರಾವ, 5) ಅಂಬಾದಾಸ ತಂದೆ ನಾರಾಯಣ, 6) ಉಮಾಕಾಂತ ತಂದೆ ವಿಠೋಬಾ, 7) ದತ್ತಾ ತಂದೆ ಉಮಾಕಾಂತ ಹಾಗೂ 8) ಹಣಮಂತ ಬಗದೂರೆ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಕಲ್ಲು ತಲವಾರ ಹಿಡಿದುಕೊಂಡು ದಲಿತ ಜನಾಂಗದವರಿಗೆ ಊರಲ್ಲಿ ನಿಮಗೆ ಹೆಚ್ಚಾಗಿದೆ ಅಂತ ವಿನಾಃ ಕಾರಣ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ ಕಲ್ಲು ಬಡಿಗೆ ಹಾಗೂ ತಲವಾರದಿಂದ ಫಿರ್ಯಾದಿ ಹಣಮಂತ ತಂದೆ ಲಾಲಪ್ಪಾ ಬಂಗಾರೆ ವಯ: 45 ವರ್ಷ, ಜಾತಿ: ಎಸ.ಸಿ ಹೊಲಿಯ, ಸಾ: ಕೋರೂರ ಹಾಗೂ ಗೌತಮ ತಂದೆ ಶ್ರೀಪತಿ ಕಾಂಬಾಳೆ, ಸಂಜೀವ ತಂದೆ ವೈಜಿನಾಥ ಬಂಗಾರೆ ರವರಿಗೆ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದ್ದು ಇರುತ್ತದೆ, ಅಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಕಲ್ಲು ಬಡಿಗೆ ಹಾಗೂ ತಲವಾರದಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆಂದು ನೀಡಿದ ದೂರು ಸಾರಾಂಶದ ಮೇರೆಗೆ ದಿನಾಂಕ 08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 91/2018, ಕಲಂ. 379 ಐಪಿಸಿ :- ದಿನಾಂಕ 02-10-2018 ರಂದು ಪ್ರತಿ ದಿವಸದಂತೆ ಫಿರ್ಯಾದಿ ಧೂಳಪ್ಪಾ ತಂದೆ ನರಸಪ್ಪಾ ರಾಚಪ್ಪನೋರ ಸಾ: ಅತಲಾಪೂರ, ತಾ: ಬಸವಕಲ್ಯಾಣ ರವರು ಮುಂಜಾನೆ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು 1930 ಗಂಟೆಯ ಸುಮಾರಿಗೆ ದನ ಕರುಗಳು ತಮ್ಮ ಧಡಿಯಲ್ಲಿ ಕಟ್ಟಿ ಬಂದಿದ್ದು, ಮರು ದಿವಸ ದಿನಾಂಕ 03-10-2018 ರಂದು 0600 ಗಂಟೆಗೆ ಫಿರ್ಯಾದಿಯು ಹೊಲಕ್ಕೆ ಹೋಗಿ ದನಕರುಗಳು ಬಿಡಲು ಹೋದಾಗ ಎಲ್ಲಾ ದನಕರುಗಳು ಇದ್ದು 1 ವರ್ಷದ ಒಂದು ಆಕಳ ಕರು ಇರಲಿಲ್ಲಾ, ಅದನ್ನು ಕಟ್ಟಿದ ಜಾಗದಲ್ಲಿ ನೋಡಲು ಅದಕ್ಕೆ ಕಟ್ಟಿದ ಹಗ್ಗವನ್ನು ಅರ್ಧ ಕಟ್ಟ ಮಾಡಿ ಆಕಳ ಮರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅದರ ಅ.ಕಿ. 5000/- ರೂಪಾಯಿದಷ್ಟು ಆಗುತ್ತದೆ, ಅದರ ಬಣ್ಣ ಕಪ್ಪ ಮತ್ತು ಬಿಳಪ್ಪು ಇರುತ್ತದೆ, ಸದರಿ ಕರುವನ್ನು ಮಂಠಾಳ. ಮಿರ್ಜಾಪೂರ, ಇಲ್ಯಾಳ, ಸಸ್ತಾಪೂರ, ಬಸವಕಲ್ಯಾಣದಲ್ಲಿ ಹುಡಕಾಡಿ ನೋಡಲು ಯಲ್ಲಿಯು ಸಿಗಲಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄ£Àß½î ¥Éưøï oÁuÉ C¥ÀgÁzsÀ ¸ÀA. 112/2018, PÀ®A. 3 & 7 E.¹ PÁAiÉÄÝ :- ¢£ÁAPÀ 08-10-2018 gÀAzÀÄ ¸ÀĤî fAzÉ, ©ÃzÀgÀ UÁæªÀiÁAvÀgÀ DºÁgÀ ¤ÃjPÀëPÀgÀÄ ©ÃzÀgÀ gÀªÀgÀÄ oÁuÉUÉ §AzÀÄ zÀÆgÀÄ Cfð ªÀÄvÀÄÛ d¦Û ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®Ä ºÁUÀÆ 3 d£À DgÉÆævÀgÉÆA¢UÉ oÁuÉUÉ §AzÀÄ zÀÆgÀÄ Cfð ¸ÁgÁA±ÀªÉ£ÉAzÀgÉ ¢£ÁAPÀ 07-10-2018 gÀAzÀÄ 1800 UÀAmÉUÉ £Á£ÀÄ PÀbÉÃjAiÀÄ°è PÀvÀðªÀåzÀ ªÉÄðzÁÝUÀ ªÀÄ£Àß½î UÁæªÀÄzÀ C§ÄÝ® ¸ÀªÀÄzÀ gÀªÀgÀ ºÉÆ®zÀ°è MAzÀÄ ¯ÁjAiÀÄ°è GavÀ ¥ÀrÃvÀgÀ DºÁgÀ CQÌ CPÀæªÀĪÁV PÁ¼À¸ÀAvÉAiÀÄ°è ªÀiÁgÁl ªÀiÁqÀ®Ä ¸ÁUÁl ªÀiÁqÀÄwÛzÀÝ §UÉÎ ¨Áwä §AzÀ ªÉÄÃgÉUÉ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, vÀªÀÄä eÉÆvÉAiÀÄ°è ©ÃzÀgÀ vÀºÀ¹® PÀbÉÃjAiÀÄ DºÁgÀ ²gÀ¸ÉÛzÁgÀgÀÄ ªÀÄvÀÄÛ E§âgÀÄ PÀÆ° PÁ«ÄðPÀgÀÄ MAzÀÄ SÁ¸ÀV ªÁºÀ£ÀzÀ°è PÀĽvÀÄ PÀbÉÃj¬ÄAzÀ ªÀÄ£Àß½î UÁæªÀÄzÀ ªÀÄÄgÁfð ±Á¯É PÁæ¸À¢AzÀ ±ÁzÀįÁè SÁ¢æ zÀUÁðzÀ PÀZÁÑ gÀ¸ÉÛ ªÀiÁUÀðªÁV ªÀÄÄAzÉ ºÉÆV C§ÄÝ® ¸ÀªÀÄzÀ EvÀ£À ºÉÆ® ¸ÀªÉÃð £ÀA. 215/1 gÀ°è ºÉÆV £ÉÆÃqÀ¯ÁV C°è MAzÀÄ ±ÉqÀØ EzÀÄÝ CzÀgÀ°è PÉ®ªÀÅ d£ÀgÀÄ ±ÉqÀØ£À°è CPÀæªÀĪÁV ¸ÀAUÀ滹zÀ ¥ÀrvÀgÀ CQÌAiÀÄ aîUÀ¼À£ÀÄß ¯Áj £ÀA. PÉ.J-56/2885 £ÉÃzÀÝgÀ°è vÀÄA§ÄwÛzÀÝ£ÀÄß £ÉÆÃr £ÁªÀÅ ±ÉqÀØ£À M¼ÀUÉ ºÉÆÃV £ÉÆÃqÀ¯ÁV CzÀgÀ°è 4 d£ÀgÀÄ EzÀÄÝ CªÀgÀ°è M§â¤UÉ «ZÁj¸À¯ÁV DvÀ£ÀÄ vÀ£Àß ºÉ¸ÀgÀÄ CfêÀÄSÁ£À ¸Á: d»ÃgÁ¨ÁzÀ CAvÁ w½¹gÀÄvÁÛ£É, ¸ÀzÀj CQÌ ¸ÁUÁlzÀ §UÉÎ ¥ÀgÀªÁ¤UÉ ªÀUÉÊgÉ EzÉAiÉÄà CAvÁ PÉýzÁUÀ ¸ÀzÀjAiÀĪÀ£ÀÄ AiÀiÁªÀÅzÉà ¥ÀgÀªÁ¤UÉ ªÀUÉÊgÉ EgÀĪÀÅ¢¯Áè CPÀæªÀĪÁV ªÀiÁgÁl ªÀiÁqÀ®Ä ¯ÁjAiÀÄ°è vÀÄA§ÄwÛzÉÝªÉ CAvÁ w½¹gÀÄvÁÛ£É, £ÀAvÀgÀ C¯Éè EzÀÝ E£ÉÆߧ⠪ÀåQÛAiÀÄ ºÉ¸ÀgÀÄ «ZÁj¸À¯ÁV DvÀ£À vÀ£Àß ºÉ¸ÀgÀÄ C§ÄÝ® ¸ÀªÀÄzÀ vÀAzÉ ¨Á§Ä«ÄAiÀiÁå ªÀiËd£À ªÀAiÀÄ: 49 ªÀµÀð, eÁw: ªÀÄĹèA, ¸Á: ªÀÄ£Àß½î CAvÁ w½¹ F ºÉÆ® ªÀÄvÀÄÛ eÁUÉAiÀÄ°è ºÁQgÀĪÀ ±ÉqÀÄØ £À£ÀßzÉ EgÀÄvÀÛzÉ, E°è ¥ÀrvÀgÀ CQÌAiÀÄ£ÀÄß ¸ÀAUÀ滹 ªÀiÁgÁl ªÀiÁqÀ®Ä ¸ÁUÁl ªÀiÁqÀÄvÉÛªÉ CAvÁ w½¹gÀÄvÁÛ£É, £ÀAvÀgÀ E£ÉÆߧ⠪ÀåQÛUÉ vÀ£Àß ºÉ¸ÀgÀÄ «ZÁj¸À¯ÁV DvÀ£À vÀ£Àß ºÉ¸ÀgÀÄ ªÉƺÀäzÀ ªÀÄÄPÁÛgÀ CºÀäzÀ vÀAzÉ ªÉƺÀäzÀ CPÀÛgÀ CºÀäzÀ ªÀAiÀÄ: 42 ªÀµÀð, eÁw: ªÀÄĹèA, ¸Á: ªÀÄĸÁ £ÀUÀgÀ C°¥ÀÆgÀ d»ÃgÁ¨ÁzÀ CAvÁ w½¹zÀÄÝ, £Á£ÀÄ F CQÌAiÀÄ£ÀÄß £ÀªÀÄä CqÀvÀ CAUÀrAiÀÄ°è ªÀiÁgÁl ªÀiÁqÀ®Ä ¸ÁV¸ÀÄvÉÛ£É CAvÁ w½¹gÀÄvÁÛ£É ªÀÄvÀÄÛ £Á®Ì£É ªÀåQÛAiÀÄ ºÉ¸ÀgÀÄ «ZÁj¸À¯ÁV vÀ£Àß ºÉ¸ÀgÀÄ ªÉƺÀäzÀ C°ÃAiÉƢݣÀ vÀAzÉ ªÉƺÀäzÀ ªÉÆ»£ÉƢݣÀ ªÀAiÀÄ: 22 ªÀµÀð, eÁw: ªÀÄĹèA, ¸Á: a¯ÁèUÀ°è §¸ÀªÀPÀ¯Áåt CAvÁ w½¹ £Á£ÀÄ ¯Áj ZÁ®PÀ E°è ¸ÀAUÀ滹zÀ CQÌAiÀÄ£ÀÄß ¯ÁjAiÀÄ°è vÀÄA©PÉÆAqÀÄ ¸ÁUÁl ªÀiÁqÀÄvÉÛ£É CAvÁ w½¸ÀĪÁUÀ CfêÀÄSÁ£À EvÀ£ÀÄ Nr ºÉÆVgÀÄvÁÛ£É, £ÀAvÀgÀ CQÌ vÀÄA©gÀĪÀ ¯ÁjAiÀÄ£ÀÄß ¥Àj²Ã°¹ £ÉÆÃqÀ¯ÁV CzÀgÀ £ÀA PÉ.J-56/2885 EzÀÄÝ PÉA¥ÀÄ ªÀÄvÀÄÛ ©½ §tÚzÀÄÝ EgÀÄvÀÛzÉ, ¯ÁjAiÀÄ°è£À aîUÀ¼À£ÀÄß £ÉÆÃqÀ¯ÁV MlÄÖ 50 PÉ.f vÀÆPÀzÀ 440 CQÌ vÀÄA©zÀ aîUÀ¼ÀÄ EªÀÅUÀ¼À£ÀÄß DºÁgÀ ¤ÃjPÀëPÀgÁzÀ ¸ÀĤî fAzÉ gÀªÀgÀÄ £ÉÆÃr EªÀÅ ¸ÁªÀðd¤PÀjUÉ «vÀj¸ÀĪÀ GavÀ ¥ÀrvÀgÀ DºÁgÀzÀ CQÌ EgÀÄvÀÛªÉ CAvÁ w½¹gÀÄvÁÛgÉ, ¸ÀzÀjAiÀĪÀgÀÄ PÁ¼À¸ÀAvÉAiÀÄ°è ªÀiÁgÁl ªÀiÁqÀ®Ä CPÀæªÀĪÁV ¸ÁUÁl ªÀiÁqÀÄwÛzÁÝgÉ CAvÁ zÀÈqsÀ¥ÀnÖzÀÄÝ ªÁºÀ£ÀzÀ°èzÀÝ CQÌ aîUÀ¼À£ÀÄß £ÀªÀÄä eÉÆvÉ §AzÀ PÀÆ° PÁ«ÄðPÀgÀ ¸ÀºÁAiÀÄ¢AzÀ rfl¯ï ªÉ¬ÄAUï ªÀĶ£À¢AzÀ vÀÆPÀ ªÀiÁr £ÉÆÃqÀ®Ä CQÌAiÀÄ ¥Àæw aî 50 PÉ.f G¼ÀîzÀÄÝ MlÄÖ 440 ¥Áè¹ÖPï aîUÀ¼ÀÄ EgÀÄvÀÛªÉ, MlÄÖ vÀÆPÀ 220 QéAmÁ® CQÌ EzÀÄÝ, EzÀgÀ C.Q MAzÀÄ QéAmÁ®UÉ gÀÆ. 1500/- gÀAvÉ »ÃUÉ MlÄÖ C.Q gÀÆ. 3,30,000/- ºÁUÀÆ mÁgÀ¸À ¯Áj C.Q 8,00,000/- gÀÆ. ªÀÄvÀÄÛ MAzÀÄ vÀÆPÀ ªÀiÁ¥À£À AiÀÄAvÀæ C.Q 4000/- gÀÆ EgÀÄvÀÛzÉ, £ÀAvÀgÀ 3 d£À DgÉÆæ ªÀÄvÀÄÛ ¯Áj ºÁUÀÆ ªÀiÁ°£À ¸ÀªÉÄÃvÀ DºÁgÀ ¤ÃjPÀëPÀgÁzÀ ¸ÀĤî fAzÉ gÀªÀgÀÄ vÀªÀÄä vÁ¨ÉUÉ vÉUÉzÀÄPÉƼÀî¯ÁVzÉ CAvÀ PÉÆlÖ ¸ÁgÁA±ÀzÀ ªÉÄÃgÉUÀ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 2:22 PM No comments: KALABURAGI DISTRICT REPORTED CRIMES ಅಪಘಾತ ಪ್ರಕರಣಗಳು : ದೇವಲಗಾಣಗಾಪೂರ ಠಾಣೆ : ಶ್ರೀ ಸಿದ್ದಪ್ಪ ಕಾಳಗೊಂಡ ಸಾ|| ಗೊಬ್ಬೂರ (ಬಿ) ರವರು ಮೇಲೆ ನಮೋದಿಸಿದ ವಿಳಾಸದಲ್ಲಿ ವಾಸವಾಗಿದ್ದು, ಕೂಲಿಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತನೆ ನನಗೆ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ಕಲಬುರಗಿಯಲ್ಲಿ ಕೆ.ಎಸ್.ಆರ್. ಟಿ. ಸಿ ಬಸ್ ಡಿಪೋದಲ್ಲಿ ಅಪ್ರಂಟಿಸ್ ತರಬೇತಿ ಮಾಡುತ್ತಿದ್ದನು, ದಿನಾಂಕ 06-10-2018 ರಂದು ಮುಂಜಾನೆ ನನ್ನ ಮಗನಾದ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ನಮ್ಮ ಸಂಬಂದಿಕನಾದ ಬಂಡೆಪ್ಪ ಮಾಯಗೊಂಡ ಎಂಬುವವರ ಸೈಕಲ ಮೋಟಾರ ನಂ ಕೆಎ-32 ಇಆರ್-0166 ನೇದ್ದನ್ನು ತೆಗೆದುಕೊಂಡು ಅಪ್ರಂಟಿಸ್ ತರಬೇತಿಗೆ ಅಂತ ಕಲಬುರಗಿಗೆ ಬಂದಿದ್ದನು. ದಿನಾಂಕ 06-10-2018 ರಂದು ರಾತ್ರಿ 8-50 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕನಾದ ಜೇಟ್ಟೆಪ್ಪ ಪೂಜಾರಿ ಎಂಬಾತನು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ಮಹಿಬೂಬಸಾಬ ಮಕನದಾರ ಇಬ್ಬರು ಕೂಡಿಕೊಂಡು ಮಹಿಬೂಬಸಾಬನ ಸ್ಕಾರ್ಪಿಯೋ ವಾಹನಕ್ಕೆ ಡಿಸೇಲ ಹಾಕಿಸಿಕೊಂಡು ಬರಲು ನಮ್ಮೂರ ಹತ್ತಿರ ಇರುವ ಪೆಟ್ರೊಲ ಪಂಪಿಗೆ ಹೋಗುತ್ತಿದ್ದಾಗ ರಾತ್ರಿ 8-45 ಗಂಟೆಯ ಸುಮಾರಿಗೆ ದೇಶಮುಖ ರವರ ಹೊಲದ ಹತ್ತಿರ ರೊಡಿನ ಮೇಲೆ ನಿಮ್ಮ ಮಗನಾದ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ಸೈಕಲ ಮೋಟಾರ ನಂ ಕೆಎ -32 ಇಆರ್-0166 ನೇದ್ದರ ಮೇಲೆ ಕಲಬುರಗಿಯಿಂದ ಊರಿಗೆ ಬರುತ್ತಿದ್ದಾಗ ಹಿಂದಿನಿಂದ ಸೈಕಲ ಮೊಟಾರ ನಂ ಕೆಎ-32 ಇಎಫ-7639 ನೇದ್ದರ ಚಾಲಕನು ತನ್ನ ಸೈಕಲ ಮೋಟಾರನ್ನು ಅತೀವೇಗವಾಗಿ ಮತ್ತು ನೀಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಯಲ್ಲಪ್ಪ @ ಯಲ್ಲಾಲಿಂಗನ ಸೈಕಲ ಮೋಟಾರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ಯಲ್ಲಪ್ಪ@ ಯಲ್ಲಾಲಿಂಗನಿಗೆ ತಲೆಗೆ ಭಾರಿ ರಕ್ತಗಾಯ ಎದೆಗೆ ಭಾರಿ ಗುಪ್ತಗಾಯ ಮೊಣಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿದ್ದರಿಂದ ಆಗ ನಾನು ಮತ್ತು ನನ್ನ ತಮ್ಮನಾದ ಬೀರಪ್ಪ ಕಾಳಗೊಂಡ ಮತ್ತು ನಮ್ಮ ಅಣ್ಣನ ಮಗನಾದ ಶರಣು ಕಾಳಗೊಂಡ ಮತ್ತಿತರರು ಕೂಡಿಕೊಂಡು ಘಟನಾ ಸ್ಥಳಕ್ಕೆ ಹೊಗಿ ನನ್ನ ಮಗನಿಗೆ ಆದ ಗಾಯಗಳನ್ನು ನೋಡಿರುತ್ತವೆ, ಸೈಕಲ ಮೋಟಾರ ಚಾಲಕನು ತನ್ನ ಸೈಕಲ ಮೋಟಾರನ್ನು ಅಲ್ಲೆ ಬಿಟ್ಟು ಓಡಿ ಹೊಗಿದ್ದನು. ನಂತರ ನನ್ನ ಮಗನಿಗೆ ಉಪಚಾರ ಕುರಿತು ನಮ್ಮೂರ ಸರಕಾರಿ ದವಾಖಾನೆಗೆ ತೆಗೆದುಕೊಂಡು ಬಂದು ನಂತರ ಹೆಚ್ಚಿನ ಉಪಚಾರಕ್ಕಾಗಿ ನಾನು ನಮ್ಮ ತಮ್ಮನಾದ ಬೀರಪ್ಪ ಕಾಳಗೊಂದ ನಮ್ಮ ಅಣ್ಣನ ಮಗನಾದ ಶರಣು ಕಾಳಗೊಂಡ ರವರೆಲ್ಲಾರು ಕೂಡಿಕೊಂಡು ನನ್ನ ಮಗನಿಗೆ 108 ಅಂಬ್ಯುಲೆನ್ಸನಲ್ಲಿ ಹಾಕಿಕೊಂಡು ಕಲಬುರಗಿಗೆ ಬರುತ್ತಿದ್ದಾಗ, ಮಾರ್ಗಮದ್ಯ ಶರಣ ಶಿರಸಗಿ ಹತ್ತಿರ ಮೃತಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಾಗಾಂವ ಠಾಣೆ : ದಿನಾಂಕ:07/10/18 ರಂದು ಶ್ರೀ ರಾಹುಲ ತಂದೆ ಚಂದ್ರಕಾಂತ ಜಾಲೇಕರ ಸಾ: ಕುರಿಕೊಟಾ ತಾ:ಜಿ: ಕಲಬುರಗಿ ರವರು ತನ್ನ ಮೋ.ಸೈಕಲ ನಂ. ಕೆ.ಎ-32 ಇಕ್ಯೂ-2513ನೇದ್ದರ ಮೇಲೆ ಗಾಯಾಳು ಮೋಹಿತ ಈತನಿಗೆ ಕೂಡಿಸಿಕೊಂಡು ಕುರಿಕೋಟಾ ಹೊಸ ಸೇತುವೆ ಕಟ್ಟಡ ಕಾಮಗಾರಿ ನೋಡಿಕೊಂಡು ಮರಳಿ ಕುರಿಕೋಟಾ ಕಡೆಗೆ ಬರುತ್ತಿರುವಾಗ ಶಿವಪ್ರಭು ಪೆಟ್ರೋಲ ಪಂಪ ಹತ್ತಿರ ಅಪಾದಿತನು ತನ್ನ ಕಾರ ನಂ ಕೆ.ಎ-32 ಎಂ-7494 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಸಾಧಾ ಗಾಯ ಮತ್ತು ಮೋಹಿತ ಇತನಿಗೆ ಭಾರಿ ಗಾಯ ಪಡಿಸಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಣೆ ಕಿರುಕಳ ಪ್ರಕರಣ : ಕಮಲಾಪೂರ ಠಾಣೆ : ಶ್ರೀಮತಿ ಪೂಜಾ ಗಂಡ ಸಚಿನ ಚವ್ಹಾಣ ಸಾ:ಚವ್ಹಾಣ ತಾಂಡಾ ಕಮಲಾಪೂರ ಹಾ:ವ:ಹನುಮಾನ ನಗರ ತಾಂಡಾ ಕಲಬುರಗಿ ರವರ ಮದುವೆಯು ಹಿಂದು ಸಂಪ್ರದಾಯದ 4 ವರ್ಷ ಕಳೆದಿರುತ್ತವೆ. ಮದುವೆಯಾದಾಗಿನಿಂದ 3 ವರ್ಷಗಳವರೆಗೆ ನನ್ನೊಂದಿಗೆ ಅನೂನ್ಯತೆಯಿಂದ ಇದ್ದ ನನ್ನ ಪತಿ ಇತ್ತಿತ್ತಲಾಗಿ ಸುಮಾರು 1 ವರ್ಷಗಳಿಂದ ಅಂದರೆ ದಿನಾಂಕ: 12.06.2017 ರಂದು ಬೆಳಗ್ಗೆ 11 ಗಂಟೆಗೆ ನನ್ನ ಪತಿಯವರು ನನ್ನ ಅತ್ತೆಯಾದ 1)ಶ್ರೀಮತಿ ಜಗುಬಾಯಿ ಗಂಡ ಸುಭಾಷ ಚವ್ಹಾಣ 2) ಮಾವನಾದ ಸುಭಾಷ 3) ಮೈದುನಾದ ಸುನೀಲ ತಂದೆ ಸುಭಾಷ ಚವ್ಹಾಣ ಇವರೆಲ್ಲರೂ ಕುಮ್ಮಕಿನಿಂದಲೇ ನನ್ನ ತವರು ಮನೆಯಿಂದ 4 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ತೆಎಗೆದುಕೊಂಡು ಬಾ ನನ್ನ ಪತಿ ಹಾಗೂ ಅತ್ತೆ ಮೈದುನ ಎಲ್ಲರೂ ಕಿರುಕುಳ ನೀಡುತ್ತಿರುವ ಪ್ರಯುಕ್ತ ನಾನು ನನ್ನ ತವರು ಮನೆಯಾದ ಹನುಮಾನ ನಗರ ತಾಂಡಾ ತವರು ಮನೆಯಲ್ಲಿ ಸುಮಾರು 1 ವರ್ಷದಿಂದ ವಾಸ ಮಾಡುತ್ತಿದ್ದೇನೆ ಈ ಹಿಂದೆ ನನ್ನ ಪತಿಯವರು ಹೊರಗಿನ ದೇಶಕ್ಕೆ ಹೋಗುವುದು ಇದೆ ಮೇಡಿಕಲ ಚೆಕ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ 1 ವರ್ಷ ಕಳೆದರು ಸಹ ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಸದರಿ ನನ್ನ ಪತಿಯವರ ಮೋಬೈಲ ನಂ 9945333507 ಗೆ ಕರೆ ಮಾಡಿ ನನ್ನ ತವರು ಮನಗೆ ಬಂದು ನನಗೆ ಕರೆದುಕೊಂಡು ಹೋಗು ಎಂದು ಎಷ್ಟೊಂದು ಸಹ ವಿನಂತಿ ಮಾಡಿಕೊಂಡಿದರು ಸಹ ಮನೆಗೆ ಬರುವುದಿಲ್ಲ ನೀ ಏನು ಮಾಡುತ್ತಿ ಮಾಡಿಕೊ ಎಂದು ಹೇಳುತ್ತಿದ್ದಾರೆ. ಮಾನ್ಯರೇ ನನ್ನ ತಂದೆ ತಾಯಿ ವಯೋವೃದ್ದರಾಗಿದ್ದು ಕೂಲಿ ಕೆಲಸ ಮಾಡಿ ತಮ್ಮ ಉಪಜೀವನ ನಿರ್ವಹಿಸುತ್ತಿದ್ದಾರೆ ಇಂತಹ ಸಂಕಷ್ಟ ಪರಿಸ್ಥಿಯಲ್ಲ 4 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ಕೊಡಲಾರದಂತಹ ಸಂಕಷ್ಟ ಪರಿಸ್ಥಿಯಲ್ಲಿ ನನ್ನ ತಂದ ತಾಯಿಯವರು ಇರುತ್ತಾರೆ.ಪ್ರಯುಕ್ತ ಮಾನ್ಯರು ಈ ನನ್ನ ಮನವಿಗೆ ಸ್ಪಂದಿಸಿ ಈ ಮೇಲೆ ಹೇಳಿರುವ ನನ್ನ ಅತ್ತೆ ಮಾವ ಹಾಗೂ ಮೈದುನನ್ನ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮಕೈಕೊಂಡು ಅನ್ಯಾಯಕ್ಕೆ ಒಳಗಾಗಿರುವ ನನಗೆ ಸೂಕ್ತ ನ್ಯಾಯ ಒದಗಿಸಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ : ನೆಲೋಗಿ ಠಾಣೆ : ಶ್ರೀ ಸೋಮರಾಯ ತಂದೆ ಹಣಮಂತ ಮಾಂಗ ಸಾ: ಕುರನಳ್ಳಿ ಇವರ ಹೊಲ ಇದ್ದು ಅದರ ಸರ್ವೆ ನಂ. 74 ವಿಸ್ತರ್ಣ 3 ಎಕರೆ 6 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ತೊಗರಿ ಬೆಳೆ ಇರುತ್ತದೆ. ದಿನಾಂಕ: 09-09-2018 ರಂದು ರಾತ್ರಿ ಸಮಯದಲ್ಲಿ ನಮ್ಮೂರ 1] ಗುರುನಾಥ ತಂದೆ ಶ್ರೀಮಂತರಾಯಗೌಡ ಮಾಲಿಪಾಟೀಲ, 2] ಯಮನೂರಗೌಡ ತಂದೆ ಭಗವಂತ್ರಾಯಗೌಡ ಮಾಲಿಪಾಟೀಲ, 3] ಶರಣಗೌಡ ತಂದೆ ಹಣಮಂತ್ರಾಯಗೌಡ ಮಾಲಿಪಾಟೀಲ 4] ಶ್ರೀಶೈಲ ತಂದೆ ಅಮೃತಗೌಡ ಮಾಲಿಪಾಟೀಲ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿಯ ತೊಗರಿ ಬೆಳೆಗೆ ಹುಲ್ಲಿನ ಎಣೆ ಹೊಡೆದಿರುತ್ತಾರೆ, ನಾನು ಮರುದಿನ ಅಂದರೆ ದಿನಾಂಕ: 10-09-2018 ರಂದು ಬೆಳೀಗ್ಗೆ 08-00 ಗಂಟೆಗೆ ಗುರುನಾಥಗೌಡ ಮತ್ತು ಶರಣಗೌಡ ಇವರ ಮನೆಗೆ ಹೋಗಿ ಅವರಿಗೆ ನಮ್ಮ ಹೊಲದಲ್ಲಿಯ ತೊಗರಿ ಬೆಳೆಗೆ ಹುಲ್ಲಿಗೆ ಹೊಡೆಯುವ ಎಣ್ಣೆ ಯಾಕೆ ಹೊಡೆದಿರಿ ಅಂತಾ ಕೆಳಿದ್ದಕ್ಕೆ ಗುರುನಾಥಗೌಡ ಮತ್ತು ಶರಣಗೌಡ ಇವರು ಹೋಗಲೆ ಮಾದಿಗ ಸೂಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ ಕಳುಹಿಸಿದ್ದು ಇರುತ್ತದೆ. ನಾನು ಈ ಬಗ್ಗೆ ನಮ್ಮ ಮನಯವರೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡುತಿದ್ದು ನಮ್ಮ ಹೊಲದಲ್ಲಿ ತೊಗರಿ ಬೆಳೆಗೆ ಹುಲ್ಲಿಗೆ ಹೊಡೆಯುವ ಎಣ್ಣೆ ಹೊಡೆದು ಅಂದಾಜು 1,60,000=00 ರೂ ಕಿಮ್ಮತ್ತಿನಷ್ಟು ಹಾನಿ ಮಾಡಿದ್ದು ಕೇಳಲು ಹೋಗಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 1980-1990 ರ ಆಸುಪಾಸಿನ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಈ ಎರಡು ಕೋರ್ಸುಗಳು ಉತ್ತುಂಗದಲ್ಲಿದ್ದವು ಎಂದರೆ ತಪ್ಪಾಗಲಾರದು.ಹಾಗಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದ ಪ್ರತಿ ವಿದ್ಯಾರ್ಥಿಯ ತಂದೆ-ತಾಯಿಯ ಮುಂದಿದ್ದ ಎರಡೇ ಆಯ್ಕೆಗಳೆಂದರೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಮನೆಗೊಂದು ಟಿವಿ, ಫ್ರಿಡ್ಜ್ ಹೇಗೆ ಕಂಪಲ್ಸರಿನೋ ಅದೇ ರೀತಿ ಮನೆಗೊಬ್ಬ ಮಕ್ಕಳು ಇಂಜಿನಿಯರ್ ಅಥವಾ ಡಾಕ್ಟರ್ ಓದುವುದು ಕಂಪಲ್ಸರಿ ಯಾಗಿತ್ತು. ತಪ್ಪು ಅವರದಲ್ಲ ಯಾಕಂದ್ರೆ ಕಾಲಕ್ಕೆ ತಕ್ಕಂತೆ ಟ್ರೆಂಡನ್ನು ಫಾಲೋ ಮಾಡೋದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು ಅಲ್ವಾ. ಬಹುಶಃ ಟ್ರೆಂಡ್ ಫಾಲೋ ಮಾಡೋದಕ್ಕಿಂತ ಡ್ರೀಮ್ ಫಾಲೋ ಮಾಡಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಅಂತೂ ಮಲ್ಲೇಶ್ವರಂನ ಸಿ ಇ ಟಿ ಸೆಲ್ನಲ್ಲಿ ಕೂತು ಮೊದಲು ಹೊಂಚು ಹಾಕಿದ್ದು ಮೆಡಿಕಲ್ ಸೀಟ್ ಗೆ ಆದ್ರೆ ಏನ್ ಮಾಡೋದು ಮೆಡಿಕಲ್ ಓದುವಷ್ಟು ಮಾರ್ಕ್ಸು ಅಥವಾ ಮನಿ ಎರಡು ನಮ್ಮತ್ರ ಇರಲಿಲ್ಲ ಕೌನ್ಸಿಲಿಂಗ್ನ ಎಲ್ಲ ರೌಂಡ್ ಮುಗಿಸಿ ಕೊನೆಗೆ ಸಮಾಧಾನಕರ ಬಹುಮಾನ ಅನ್ನೋ ಹಾಗೆ ಸಿಕ್ಕಿದ್ದು ಇಂಜಿನಿಯರಿಂಗ್ ಸೀಟ್. ಕಂಪ್ಯೂಟರ್ ಸೈನ್ಸ್ ಬ್ರಾಂಚ್ . ಆದರೆ ಅವತ್ತಿಗೆ ಅದೇ ತುಂಬಾ ಖುಷಿಯ ವಿಷಯ ತಂದೆತಾಯಿಗಳಿಗೆ ಅಂತೂ ಎಂಎಲ್ಎ ಸೀಟ್ ಸಿಕ್ಕಷ್ಟೇ ಖುಷಿಯಾಗಿತ್ತು ಎಲ್ಲಾ ಕಡೆ ನಮ್ಮ ಮಕ್ಕಳು ಎಂಜಿನಿಯರಿಂಗ್ ಓದುತ್ತಿದ್ದಾರೆ ಅನ್ನೋದೇ ಹೆಮ್ಮೆಯ ವಿಷಯವಾಗಿತ್ತು ಅವರಿಗೆ. ಇದೇ ರೀತಿ ಎಷ್ಟು ಜನ ಇಂಜಿನಿಯರಿಂಗ್ ಓದುದ್ವಿ ಅಂದ್ರೆ ಕೊನೆಗೊಂದು ದಿನ ಮಾರ್ಕೆಟ್ಟಲ್ಲಿ ಟಮೋಟೋ ರೇಟ್ ತುಂಬಾ ಚೆನ್ನಾಗಿದೆ ಅಂತ ಎಲ್ಲಾ ರೈತರು ಟಮೋಟೋ ನೆ ಬೆಳೆದು ಒಳ್ಳೆ ರೇಟ್ ಸಿಗದಿದ್ದಾಗ ಬೀದಿಗೆ ಬಿಸಾಕಿ ಹೋಗ್ತಿದ್ದರಂತೆ.ರಿಸೆಷನ್ ಬಂದಾಗ ನಮ್ಮ ಇಂಜಿನಿಯರ್ಸ್ ಕಥೆನೂ ಬೀದಿಗೆ ಬಿದ್ದ ಟೊಮೊಟೊ ತರ ಆಗಿತ್ತು.ಆದರೂ ನಾವು ಧೃತಿಗೆಡಲಿಲ್ಲ ನಾವು ಇಂಜಿನಿಯರ್ಸ ತುಂಬಾ ಫ್ಲೆಕ್ಸಿಬಲ್.ಟಮೊಟೋ‌ ಹೇಗೆ ಬರೀ ಟಮೊಟೋ ಸಾಂಬಾರು, ಟಮೊಟೋ ಬಾತ್ ,ಗೆ ಮೀಸಲಾಗದೆ ತನ್ನ ಅಸ್ತಿತ್ವ ವನ್ನ ಎಲ್ಲ ಅಡುಗೆಗಳಲ್ಲಿ ಕಂಡು ಕೊಂಡಿದ್ಯು ಅದೇ ತರ ನಾವು ಇಂಜಿನಿ ಯರ್ಸ್ ಕೂಡ ಎಲ್ಲ ಕ್ಷೇತ್ರದಲ್ಲಿ ನಮ್ಮ ಸ್ಥಾನ ಗಿಟ್ಟಿಸಿಕೊಂಡಿದಿವಿ. ನಾನು ಇಂಜಿನಿಯರಿಂಗ್ ಮಾಡಿದ್ದೀನಿ ಬರೀ ಕೋಡಿಂಗ್ ಮಾತ್ರ ಮಾಡೋದು ಅಂತಾ ನಾವು ಕೈಕಟ್ಟಿ ಕೂತಿಲ್ಲ. ಆ್ಯಟಿಂಗ್ ಮಾಡ್ತಿವಿ ,ಲೆಕ್ಟರಿಂಗೂ ಓಕೆ ,ಸ್ಕೂಲ್ ಟೀಚರ್ ಗೂ ಸೈ. ಅದೂ ಸಿಗಲಿಲ್ವ ಮನೆ ಪಾಠ ಹೇಳಿಕೊಡಿತಿವಿ ಮಕ್ಕಳಿಗೆ . ಚೇತನ್ ಭಗತ್ ತರಹ ಸಾಹಿತಿ ಕೂಡ ಆಗಬಹುದು ಉದಾಹರಣೆಗೆ ನಮ್ಮ ಕನ್ನಡ ಸಿನಿಮಾದ ಸುದೀಪ್, ರಮೇಶ ಅರವಿಂದ್, ರಕ್ಷಿತ್ ಶೆಟ್ಟಿ, ದನ೦ಜಯ್ . ಕ್ರಿಕೆಟಿನ ಹೆಸರಾಂತ ಕ್ರಿಡಾ ಪಟು ಅನಿಲ್ ಕುಂಬ್ಳೆ ,ಶ್ರೀನಾಥ್ ಜಾವಗಲ್, ಅಶ್ವಿನ್ ಫೇಮಸ್ ಕಾಮೆಡಿಯನ್ ವಿಸ್ಟರ್ ಬಿನ್, ಫೇಮಸ್ ವಿಲನ್ ಸೋನು ಸೂದ್, ಆದ್ಭುತ ಗಾಯಕ ಶಂಕರ್ ಮಾದವನ್, ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಹೀಗೆ ಹಲವು ಕ್ಷೇತ್ರಗಳಲ್ಲಿ ಇಂಜಿನಿಯರ್ಸ್ ಹೆಸರು ಮಾಡಿದ್ದಾರೆ. ಇನ್ನೂ ಈ ಬಿಲ್ ಗೆಟ್ಸ್ , ಇನ್ಪೋಸಿಸ್ ನಾರಾಯಣ ಮೂರ್ತಿ, ಅಜೀಜ್ ಪ್ರೇಮ್ಜಿ ಇವರೆಲ್ಲ ಬಹುಶ ನಮ್ಮ ಇಂಜಿನಿ ಯರ್ ವಂಶದ ಮನೆ ದೇವ್ರುಗಳು ಇದ್ದ ಹಾಗೆ, ಇನ್ನು ಕೆಲವು ಪ್ರತಿಬೆಗಳನ್ನ ಅಮೆರಿಕಾ, ಆಸ್ಟ್ರೇಲಿಯ, ಜಪಾನ್ ,ಲಂಡನ್ ಹೀಗೆ ನೆರೆಹೊರೆ ರಾಷ್ಟ್ರಗಳ ಉದ್ದಾರಕ್ಕಾಗಿ ಅಲ್ಲಿಗೆ ಎಕ್ಸ್ ಪೋರ್ಟ ಮಾಡಿದ್ದೇವಿ. ಆಡು ಮುಟ್ಟದ ಸೊಪ್ಪಿಲ್ಲ ಇಂಜಿನಿಯರ್ಸ್ ಟ್ರೈ ಮಾಡದ ಕ್ಷೇತ್ರಗಳು ಇಲ್ಲ. ಯಾಕಂದ್ರೆ ಈ ಡಿಗ್ರಿ ಸರ್ಟಿಫಿಕೇಟ್ ಸಂಪಾದನೆ ಮಾಡೋಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸರ್ಟಿಫಿಕೇಟ್ ನ ಲ್ಯಾಮಿನೇಷನ್ ಮಾಡಿ ಕಪಾಟಿನಲ್ಲಿ ಸುಮ್ನೆ ಇಟ್ಟು ಬಿಡೋಕಾಗುತ್ತಾ,ಅದೂ ಯಾವುದೇ ಬ್ಯಾಕ್ಲೋಗ್ಸ್ ಇಲ್ದೆ. ಅಂತೂ ಅಪ್ಪನ ಆಸೆಗೂ ಅಥವಾ ನಮಗೆ ಬೇರೆ ಆಯ್ಕೆಗಳಿಲ್ಲದೆ ಇಂಜಿನಿಯರಿಂಗ್ ಸೇರಿದ್ದಾಯ್ತು ಮೊದಲನೇ ವರ್ಷ ಹೇಗೆ ಕಳಿತು ಅನ್ನೋದೇ ಗೊತ್ತಾಗಲ್ಲ ಮುಂದಿನ ಮೂರು ವರ್ಷ ಏನು ಆಗ್ತಿದೆ ಅಂತ ಗೊತ್ತಾಗಲ್ಲ ಅಸಲಿಗೆ ಇಂಜಿನಿಯರಿಂಗ್ ತನ್ನ ವರ್ಸೆ ತೋರ್ಸೋದೆ ಎರಡನೇ ವರ್ಷದಲ್ಲಿ ಕಂಪ್ಯೂಟರ್ ಸೈನ್ಸ್ ಅಲ್ಲಿ ಕೆಲವು ಸಬ್ಜೆಕ್ಟ್ ಗಳು ಹೀಗಿವೆ ಸಿ ,ಸಿ ಪ್ಲಸ್ ಪ್ಲಸ್, ಅಡಾ. ಊಪ್ಸ್ ,ಡಿಬಿಎಂಎಸ್ , ಮ್ಯೂಪಿ,ಜಾವ ,ಡಾಟ್ ನೆಟ್, ಯುನಿಕ್ಸ್, ಓಎಸ್, ವೆಬ್ ಇತ್ಯಾದಿ ಮೊದಲ ಬಾರಿಗೆ ಸಬ್ಜೆಕ್ಟ್ ಗಳ ಹೆಸರು ಕೇಳಿದಾಗ ಯಾವುದೋ ಪರಭಾಷೆಯ ಬಯ್ಗುಳಗಳನ್ನು ಕೇಳಿದ ಹಾಗೆ ಅನಿಸಿತು. ಈ ಎಲ್ಲಾ ಪುಸ್ತಕದ ಒಳಹೊಕ್ಕು ಅವುಗಳ ಆಳ-ಅಗಲವನ್ನು ಅರಿತು, ಪುಸ್ತಕಗಳನ್ನು ಬಿಟ್ಟು ಬರಲೊಲ್ಲದ ಕಾನ್ಸೆಪ್ಟ್ ಗಳನ್ನು ಎಳೆದು ತಲೆಯಲ್ಲಿ ತುಂಬಿಸಿ ಎಕ್ಸಾಮ್ ಹಾಲ್ ವರೆಗೂ ತೆಗೆದುಕೊಂಡು ಹೋಗಿ ಆನ್ಸರ್ ಸೀಟಲ್ಲಿ ಬಟ್ಟಿ ಇಳಿಸುವುದರ ಕಷ್ಟ ಅನುಭವಿಸಿದವರ ಮಾತಲ್ಲೆ ಕೇಳಬೇಕು. ತಿಯರಿ ಎಕ್ಸಾಮ್ ಹೇಗೋ ಬರೆದುಬಿಡಬಹುದು ತಲೆಯಲ್ಲಿ ಉಳಿದಿದ್ದು, ನೆನಪಾಗಿದ್ದು , ನೆನಪಾಗದ್ದು, ಪಕ್ಕದವರ ಆನ್ಸರ್ ಸೀಟಲ್ಲಿ ಕಂಡ ಅಲ್ಪಸ್ವಲ್ಪ ಆನ್ಸರ್ ಗಳು . ಏನು ತೋಚದಿದ್ದಾಗ ಕೊನೆಗುಳಿಯುವುದು ಒಂದೇ ನಮ್ಮೆಲ್ಲ ಸಂಕಷ್ಟಗಳನ್ನು ಸಂಕ್ಷಿಪ್ತವಾಗಿ ಮೌಲ್ಯಮಾಪಕರ ಮನಮುಟ್ಟುವಂತೆ ಮನವಿ ಪತ್ರ ಬರೆದು 35 ಅಂಕಗಳ ಬೇಡಿಕೆಯಿಟ್ಟು ಶರಣಾಗುವುದು, ಉಳಿದದ್ದೆಲ್ಲವೂ ಶಿವನಿಚ್ಚೆ. ಆದರೆ ಯೂನಿವರ್ಸಿಟಿಯ ಷಡ್ಯಂತರಗಳು ಇಲ್ಲಿಗೆ ಮುಗಿಯುವುದಿಲ್ಲ ಮತ್ತೊಂದಿದೆ ಚಕ್ರವ್ಯೂಹ ಭೇದಿಸಬೇಕಾದದ್ದು ಪ್ರಾಕ್ಟಿಕಲ್ ಎಕ್ಸಾಮ್.ನಾವು 10 ಲ್ಯಾಬ್ ಪ್ರೋಗ್ರಾಮ್ಸ್ ನಾ ಹೇಗೋ ಕಷ್ಟಪಟ್ಟು ಕಲಿತು ಹೋಗಿದ್ದರೆ ದೇವರು ನಮ್ಮ ಪಾಲಿಗೆ ತೆಗೆದಿಡುವುದು ಹನ್ನೊಂದನೆಯದು ನಾವು ಬರೆಯೋ ಪ್ರೋಗ್ರಾಮನ್ನು ಮನುಷ್ಯರಿಗೆ ಒಪ್ಪಿಸೋದು ಕಷ್ಟ ಇನ್ನ ಕಂಪ್ಯೂಟರ್ಗೆ ಒಪ್ಪಿಸಿ ಔಟ್ಪುಟ್ ತೆಗೆಯೋದು ಅಸಾಧ್ಯ. ಬಹುಶಃ ಈ ವಿಷಯ ಎಲ್ಲರಿಗೂ ಗೊತ್ತಿದ್ಯೋ ಇಲ್ವೋ ನನಗ್ ಗೊತ್ತಿಲ್ಲ ಸಿ ಪ್ರೋಗ್ರಾಮ್ ನಲ್ಲಿ ಒಂದು,ಕಾಮ .ಪುಲಿ ಸ್ಟಾಪ್ ;ಸೇಮಿಕಾಲೋನ್ ಮಿಸ್ ಮಾಡಿದ್ರು ನಮಗೆ ರಿಸಲ್ಟ್ ಸಿಗೋದಿಲ್ಲ ಅಂದ್ರೆ ಲೆಕ್ಕಹಾಕಿ ನಾವು ಪ್ರೋಗ್ರಾಮ್ ನ ಯಾವ ರೇಂಜಿಗೆ ಕಲಿತಿರಬೇಕು ಅಂತ.ಅವೆಲ್ಲ ನಮ್ಮ ನೆನಪಿನ ಶಕ್ತಿಗೆ ಒಂದು ಸವಾಲ್.ಅಂತಹ ಟೈಮ್ನಲ್ಲಿ ನಮಗೆ ಆಪದ್ಬಾಂಧವ ರಂತೆಕಾಣುವವರು ಲ್ಯಾಬ್ ಇನ್ಸ್ಟ್ರಕ್ಟರ್ ಮಾತ್ರ.ನಮ್ಮ ಈ ನೋವು ಸಂಕಟ ಅವರಿಗೆ ಸುಲಭವಾಗಿ ಅರ್ಥವಾಗುತ್ತೆ ಯಾಕಂದ್ರೆ ಅವರು ಇದೇ ರೀತಿ ಒದ್ದಾಡಿ ಎಕ್ಸಾಮ್ನಲ್ಲಿ ಪಾಸಾಗಿ ನಂತರ ಕ್ಯಾಂಪಸ್ ಸೆಲೆಕ್ಷನ್ ಆಗಿ ಈ ವೃತ್ತಿಗೆ ಬಂದು ಸೇರಿರುತ್ತಾರೆ. ಅಂತೂ ನಮ್ಮ ತಂದೆ-ತಾಯಿಗಳ ಎಷ್ಟೋ ದೇವರ ಅರಕೆಗಳ ಫಲವಾಗಿ ಲ್ಯಾಬ್ ಇನ್ಸ್ಟ್ರಕ್ಟರ್ ಗೆ ನಮ್ಮ ಅಂದಿನ ಕರುಣಾಜನಕ ಸ್ಥಿತಿಯ ಬಗ್ಗೆ ಸ್ವಲ್ಪವಾದರೂ ಕರುಣೆ ಬಂದರೆ ಮುಂದಿನದೆಲ್ಲ ಮ್ಯಾಜಿಕಲ್ ನಾವು ಎಕ್ಸಾಮ್ ಹೇಗೆ ಪಾಸಾದ್ವಿ ಅನ್ನೋ ಸುಳಿವು ನಮಗೂ ಸಿಗೋದಿಲ್ಲ . ಇಷ್ಟೆಲ್ಲಾ ಕಷ್ಟಪಟ್ಟು ಇಂಜಿನಿಯರಿಂಗ್ ಡಿಗ್ರಿ ಸಂಪಾದನೆ ಮಾಡಿ ಕೆಲಸದ ಇಂಟರ್ವ್ಯೂಗೆ ಅಂತ ಹೋದಾಗ ಮೊದಲನೆಯ ಸುತ್ತು ಆಪ್ಟಿಟ್ಯೂಡ್ ಅದರಲ್ಲಿ ಪ್ರಶ್ನೆ ಹೀಗಿರುತ್ತೆ. ರೋಹನ್ ಮತ್ತು ಅವನ ಮಗನ ವಯಸ್ಸಿನ ಅಂತರ 12 ಹಾಗಿದ್ದಲ್ಲಿ ನಾಲ್ಕು ವರ್ಷದ ಹಿಂದೆ ರೋಹನ್ ಮಗನ ವಯಸ್ಸು ಎಷ್ಟು? ಇಷ್ಟು ದಿನ ಟಮೋಟ ಬೆಳೆಯೋದು ಹೇಗೆ ಎಂದು ಹೇಳಿ ಕೊಟ್ಟು ಇವತ್ತು ಭಗವದ್ಗೀತೆಯ ಎರಡನೇ ಅಧ್ಯಾಯದ ಮೂರನೇ ಸಾಲಿನ ತಾತ್ಪರ್ಯವೇನು ಎಂದು ಕೇಳಿದಂತೆ ಇರುತ್ತದೆ ಒಂದಕ್ಕೊಂದು ಸಂಬಂಧವೇ ಇಲ್ಲ. ಅಂತೂ ಹೇಗೋ ಒಂದು ಕೆಲಸ ಸಂಪಾದನೆ ಮಾಡಿದ ಮೇಲೆ ಮೊದಲನೆಯ ದಿನ ಟೀಮ್ ಲೀಡರ್ ಬಂದು ಕೇಳ್ತಾರೆ ಡು ಯು ನೋ ಎಂ ಎಸ್ ವರ್ಡ್, ಎಂಎಸ್ ಎಕ್ಸ್ ಎಲ್? ಇಷ್ಟು ದಿನ ಬಿರಿಯಾನಿ ಕಬಾಬ್ ಮಾಡೋದನ್ನ ಹೇಳಿಕೊಟ್ಟು ಬೆಳ್ಳುಳ್ಳಿ ಸಿಪ್ಪೆ ಬಿಡಿಸೋಕೆ ಬರುತ್ತಾ ಅಂತ ಕೇಳಿದ ಹಾಗೆ ಇರುತ್ತೆ ಅವರ ಕ್ವೆಶ್ಚನ್? ಅದಕ್ಕೆ ಇಂಜಿನಿಯರ್ಸ ಸ್ವಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರಗಳಿಗೆ ಮೊರೆಹೋಗುವುದು ಎಷ್ಟು ಅಂತ ತಡ್ಕೊಬೇಕು ಹೇಳಿ ಜೀವ? ಬಹುಶಃ ಹೆಣ್ಣು ಮಕ್ಕಳನ್ನು ಬಿಟ್ಟರೆ ಸಾಫ್ಟ್ ವೇರ್ ಇಂಜಿನಿಯರ್ ಅತಿ ಹೆಚ್ಚು ಶೋಷಣೆಗೆ ಒಳಗಾಗಿದ್ದು ಅನ್ಸುತ್ತೆ. ಹಾಗಾಗಿ ಇಂಜಿನಿಯರ್ಸ ನೀವು ಎಲ್ಲಿಗೆ ಕಳ್ಸಿ ಬೇಗ ಅಡಾಪ್ಟ್ ಆಗ್ಬಿಡ್ತೀವಿ ಚೆನ್ನೈ, ಹೈದರಾಬಾದ್, ಯುಕೆ ,ಯುಎಸ್ ,ಲಂಡನ್ ಎಲ್ಲಿಯಾದರೂ ಸರಿ ಯಾಕಂದ್ರೆ ಭಾಷೆ ನಮಗೆ ಯಾವತ್ತು ಆಗಿಲ್ಲ ಬ್ಯಾರಿಯರ್ ಆಗೋದಿಲ್ಲ ನಮ್ ಡಿಗ್ರಿಯಲ್ಲಿ ಭಾಷೆ ಕಲಿಯೋದು ಇಂಪಾರ್ಟೆಂಟ್ ಸಿ, ಸಿ ಪ್ಲಸ್ ಪ್ಲಸ್ ಜಾವಾ .ನೆಟ್ ಈ ರೀತಿಯ ಮಿಶಿನ್ ಭಾಷೆಗಳನ್ನೇ ಕಲಿತ ನಮಗೆ ಮನುಷ್ಯರ ಭಾಷೆ ಅಷ್ಟು ಕಷ್ಟ ಅನಿಸುವುದಿಲ್ಲ. ಕೊರೋನಾ ಬಂದ ಮೇಲಂತೂ ಜಾಗಗಳು ಕೂಡ ನಮಗೆ ಬ್ಯಾರಿಯರ್ ಆಗಿ ಉಳಿದಿಲ್ಲ ಮನೆಯ ಮೂಲೆ ಮೂಲೆಗಳಲ್ಲಿ ಕುಳಿತು ಕೆಲಸ ಮಾಡಿದ್ದೇವೆ. ಆಫೀಸ್ ಹಾಸ್ಪಿಟಲ್ ಫಂಕ್ಷನ್ ಹಾಲ್ ಎಲ್ಲಾದರೂ ಸರಿ ಕೈಯಲ್ಲಿ ಮೊಬೈಲ್ ಅಥವಾ ಲ್ಯಾಪ್ಟಾಪ್ ಇದ್ರೆ ಸಾಕು ಅಲ್ಲೇ ಶುರು. ಸಾಕು ಇನ್ನಾದರೂ ಸ್ವಲ್ಪ ಬ್ರೇಕ್ ತಗೋಳಿ ಕಂಪನಿ ನಾ ಉದ್ದಾರ ಮಾಡೋ ವಂಶೋದ್ಧಾರವೇ ಕಷ್ಟವಾಗ್ತಿದೆ.ಯೋಚನೆ ಮಾಡಿ ನೋಡಿ.
[ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಗಾಂಧಿ ಜಯಂತಿ ಆಚರಣೆ ಪ್ರಯುಕ್ತ 'ಕರ್ನಾಟಕ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ'ದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ವತಿಯಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಸಸಿಹಿತ್ಲು ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. Ravi Janekal First Published Oct 3, 2022, 11:31 AM IST ಮಂಗಳೂರು (ಅ.3) : ಗಾಂಧಿ ಜಯಂತಿ ಆಚರಣೆ ಪ್ರಯುಕ್ತ 'ಕರ್ನಾಟಕ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ'ದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ವತಿಯಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಸಸಿಹಿತ್ಲು ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಸಿಹಿತ್ಲು ಸಮುದ್ರ ಕಿನಾರೆಯಿಂದ ಸುಮಾರು 50 ಮೂಟೆಯಷ್ಟು ಪ್ಲಾಸ್ಟಿಕ್ ಬಾಟಲ್, ಗಾಜಿನ ಬಾಟಲ್, ಪ್ಲಾಸ್ಟಿಕ್ ಕಸವನ್ನು ಹೆಕ್ಕಿ ಹಳೆಯಂಗಡಿ ಸ್ವಚ್ಛ ಸಂಕೀರ್ಣಕ್ಕೆ ಸಾಗಿಸಲಾಯಿತು. Gandhi Jayanti 2022: ಜಗತ್ತಿಗೇ ಶಕ್ತಿ ತುಂಬಿದ ಗಾಂಧಿ ಆದರ್ಶಗಳು: ಸಚಿವ ಅಶ್ವತ್ಥ್‌ ಕಾರ್ಯಕ್ರಮದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೂರ್ಣಿಮಾ ಮಾತನಾಡಿ, 'ಗಾಂಧಿ ಕಂಡ ಕನಸಿನಂತೆ ಇದೊಂದು ಮಾದರಿ ಕಾರ್ಯವಾಗಿದ್ದು, ಇನ್ನಷ್ಟು ಸಾಮಾಜಿಕ ಕಳಕಳಿಯ ಕೆಲಸಗಳು ನಿರಂತರವಾಗಿ ಸಾಗಲಿ‌ ಎಂದು ಶುಭಹಾರೈಸಿದರು. ಮೂಲ್ಕಿ, ಮೂಡುಬಿದಿರೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯಾದ ದಯಾವತಿ ಮಾತನಾಡಿ, ನಿಗದಿತ ಗುರಿ ಹಾಗೂ ಛಲ ಇದ್ದಾಗ ಯಶಸ್ಸು ಸಾಧ್ಯ. ನರೇಗಾ ಯಶಸ್ಸಿಗೆ ತಾವೆಲ್ಲರೂ ಕಾರಣೀಭೂತರು. ಯೋಜನೆಯನ್ನು ಜನರಿಗೆ ಮುಟ್ಟಿಸುವ ಮೂಲಕ ಅವರ ಆರ್ಥಿಕ ಸದೃಢತೆಗೆ ಪರೋಕ್ಷವಾಗಿ ನರೇಗಾ ಸಿಬ್ಬಂದಿ ವರ್ಗದವರು ಕಾರಣರಾಗುತ್ತಾರೆ. ಗಾಂಧಿ ಜಯಂತಿಯಂದು ಎಲ್ಲೆಡೆ ಸ್ಚಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಅದೇ ರೀತಿ ವಿಶೇಷವಾಗಿ ನರೇಗಾ ನೌಕರರ ಸಂಘದಿಂದ ಈ ಸ್ವಚ್ಛತೆ ಕಾರ್ಯಕ್ರಮ ನಡೆಸಿ ಸ್ವಚ್ಛಗೊಳಿಸುವ ಕಾರ್ಯ ಮಾಡಿರುತ್ತೀರಿ ತಮ್ಮೆಲ್ಲರಿಗೂ ಶುಭವಾಗಲಿ ಹಾರೈಸಿದರು. ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಕಿಶನ್ ರಾವ್ ಬಿ.ಎಸ್. ಮಾತನಾಡಿ, ಈ ಹಿಂದೆ ಕುಕ್ಕೆಸುಬ್ರಹ್ಮಣ್ಯದ ಸ್ನಾನಘಟ್ಟವನ್ನು ಸ್ವಚ್ಛತೆ ಮಾಡಲಾಗಿದೆ. ಈಗ ಸಂಘದ ಎರಡನೇ ಹಂತದ ಸ್ವಚ್ಛತಾ ಕಾರ್ಯದಲ್ಲಿ ಸಸಿಹಿತ್ಲು ಕಡಲ‌ಕಿನಾರೆ ಸ್ವಚ್ಛತೆಯನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಸಂಘ ಬಲವಿರುವುದು ಎಲ್ಲರ ಭಾಗವಹಿಸುವಿಕೆ ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆಯಿಂದ ಇಂದು ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು. ಬೀಳ್ಕೊಡುಗೆ: ಸರಕಾರಿ ನೌಕರಿ ಪಡೆದುಕೊಂಡ ಇಬ್ಬರು ಸಂಘದ ಸದಸ್ಯರಾದ ನಳಿನ್ ಕುಮಾರ್, ನೇಹಾ ಮತ್ತು ವರ್ಗಾವಣೆಗೊಂಡ ನಳಿನಾ ಕುಮಾರಿ ಅವರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು‌. ಆಟೋಟ ಸ್ಪರ್ಧೆ: ಸಭಾ ಕಾರ್ಯಕ್ರಮದ ಬಳಿಕ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೆ ವಿವಿಧ ಆಟೋಟ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು 'ಗೋಡ್ಸೆ ಜಿಂದಾಬಾದ್': ವರುಣ್ ಗಾಂಧಿ ಕಿಡಿ! ವೇದಿಕೆಯಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ದೀಪ್ತಿ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ರೋಷನ್ ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಪ್ರತಿನಿಧಿ ನಿತಿನ್ ಸ್ವಾಗತಿಸಿ, ಖಜಾಂಜಿ ವಿನೋದ್ ವಂದಿಸಿದರು. ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsAppಅನ್ನು ಸಂಪರ್ಕಿಸಿ WhatsApp Messenger Support To better assist you, contact us from your phone by opening WhatsApp > Settings > Help > Contact Us. You can also visit our ಸಹಾಯ ಕೇಂದ್ರ for additional information. Let us know how you use WhatsApp by providing the necessary information below. Then, tap or click "Send Question" to contact us. ಫೋನ್ ನಂಬರ್ ನೀವು ನಿಮ್ಮ WhatsApp ಖಾತೆಗಾಗಿ ಬಳಸುವ ಫೋನ್ ನಂಬರ್ ಅನ್ನು ದಯವಿಟ್ಟು ಒದಗಿಸಿ. ಅಂಗೋಲಾ (+244)ಅಜರ್ಬೈಜಾನ್ (+994)ಅಫ್ಘಾನಿಸ್ತಾನ್ (+93)ಅಮೇರಿಕನ್ ಸಮೋವ (+1)ಅರುಬಾ (+297)ಅರ್ಜೆಂಟಿನಾ (+54)ಅರ್ಮೇನಿಯಾ (+374)ಅಲ್ಜೀರಿಯಾ (+213)ಅಲ್ಬೇನಿಯಾ (+355)ಆಂಗ್ವಿಲಾ (+1)ಆಂಟಿಗುವಾ (+1)ಆಂಡೋರಾ (+376)ಆಸ್ಟ್ರೀಯ (+43)ಆಸ್ಟ್ರೇಲಿಯ (+61)ಇಂಡೋನೇಶಿಯಾ (+62)ಇಟಲಿ (+39)ಇಥಿಯೋಪಿಯ (+251)ಇರಾಕ್ (+964)ಇರಾನ್ (+98)ಇಸ್ರೇಲ್ (+972)ಈಕ್ವಟೋರಿಯಲ್ ಗಿನಿ (+240)ಈಕ್ವಡಾರ್ (+593)ಈಜಿಪ್ಟ್ (+20)ಉಕ್ರೇನ್ (+380)ಉಗಾಂಡಾ (+256)ಉಜ್ಬೇಕಿಸ್ತಾನ್ (+998)ಉತ್ತರ ಕೊರಿಯ (+850)ಉತ್ತರ ಮಾರಿಯಾನಾ ದ್ವೀಪಗಳು (+1)ಉರುಗ್ವೆ (+598)ಎರಿಟ್ರಿಯ (+291)ಎಲ್ ಸಾಲ್ವಡಾರ್ (+503)ಎಸ್ಟೊನಿಯ (+372)ಐರ್ಲ್ಯಾಂಡ್ (+353)ಐಲ್ ಆಫ್ ಮ್ಯಾನ್ (+44)ಐಸ್‍ಲ್ಯಾಂಡ್ (+354)ಓಮನ್ (+968)ಕಝಾಕಿಸ್ತಾನ್ (+7)ಕತಾರ್ (+974)ಕಾಂಗೋ ಪ್ರಜಾತಂತ್ರ ಗಣರಾಜ್ಯ (+243)ಕಾಂಬೋಡಿಯಾ (+855)ಕಿರಿಬಾತಿ (+686)ಕಿರ್ಗಿಸ್ಥಾನ್ (+996)ಕೀನ್ಯಾ (+254)ಕುರಾಚಾವೋ (+599)ಕುವೈತ್ (+965)ಕೂಕ್ ದ್ವೀಪಗಳು (+682)ಕೆನಡಾ (+1)ಕೇಪ್ ವೆರ್ದ್ (+238)ಕೇಮನ್ ದ್ವೀಪಗಳು (+1)ಕೊಮೊರೊಸ್ (+269)ಕೊಲಂಬಿಯ (+57)ಕೊಸೊವೊ (+383)ಕೋತ್ ದ್'ಇವಾರ್ (+225)ಕೋಸ್ಟ ರಿಕ (+506)ಕ್ಯಾಮರೂನ್ (+237)ಕ್ಯೂಬಾ (+53)ಕ್ರೊವೇಶಿಯಾ (+385)ಗಯಾನ (+592)ಗಿನಿ (+224)ಗಿನಿಯಾ-ಬಿಸ್ಸೌ (+245)ಗಿಬ್ರಾಲ್ಟರ್ (+350)ಗುರ್ನಸಿ (+44)ಗುವಾಮ್ (+1)ಗೆಬೊನ್ (+241)ಗ್ಯಾಂಬಿಯಾ (+220)ಗ್ರೀನ್‍ಲ್ಯಾಂಡ್ (+299)ಗ್ರೀಸ್ (+30)ಗ್ರೆನಾಡ (+1)ಗ್ವಾಟೆಮಾಲಾ (+502)ಗ್ವಾಡೆಲೋಪ್ (+590)ಘಾನಾ (+233)ಚಾಡ್ (+235)ಚಿಲಿ (+56)ಚೀನಾ (+86)ಜಪಾನ್ (+81)ಜಮೈಕಾ (+1)ಜರ್ಮನಿ (+49)ಜರ್ಸಿ (+44)ಜಾಂಬಿಯ (+260)ಜಾರ್ಜಿಯಾ (+995)ಜಿಂಬಾಬ್ವೆ (+263)ಜಿಬೂಟಿ (+253)ಜೆಕ್ ಗಣರಾಜ್ಯ (+420)ಜೋರ್ಡನ್ (+962)ಟರ್ಕಿ (+90)ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು (+1)ಟುನೀಶಿಯ (+216)ಟೊಂಗಾ (+676)ಟೋಗೋ (+228)ಟೌಕೆಲೌ (+690)ಟ್ರಿನಿಡಾಡ್ ಮತ್ತು ಟೊಬಾಗೊ (+1)ಡೆನ್ಮಾರ್ಕ್ (+45)ಡೊಮಿನಿಕನ್ ರಿಪಬ್ಲಿಕ್ (+1)ಡೊಮಿನಿಕಾ (+1)ತಜಿಕಿಸ್ತಾನ (+992)ತಾಂಜೇನಿಯ (+255)ತುರ್ಕ್ ಮೇನಿಸ್ಥಾನ (+993)ತುವಾಲು (+688)ತೈಮೂರ್-ಲೆಸ್ಟೆ (+670)ತೈವಾನ್ (+886)ಥಾಯ್‍ಲ್ಯಾಂಡ್ (+66)ದಕ್ಷಿಣ ಆಫ್ರಿಕಾ (+27)ದಕ್ಷಿಣ ಕೊರಿಯಾ (+82)ದಕ್ಷಿಣ ಸುಡಾನ್ (+211)ನಮೀಬಿಯಾ (+264)ನಾರ‍್ಫೋಲ್ಕ್ ದ್ವೀಪ (+672)ನಾರ್ವೆ (+47)ನಿಕರಾಗುವಾ (+505)ನಿಯು (+683)ನೆದರ್ಲ್ಯಾಂಡ್ಸ್ (+31)ನೇಪಾಳ (+977)ನೈಜರ್ (+227)ನೈಜೀರಿಯಾ (+234)ನೌರು (+674)ನ್ಯೂ ಕೆಲಡೋನಿಯ (+687)ನ್ಯೂಜಿಲೆಂಡ್ (+64)ಪನಾಮ (+507)ಪಪುವಾ ನ್ಯೂ ಗಿನಿಯಾ (+675)ಪರಾಗ್ವೆ (+595)ಪಲಾವ್ (+680)ಪಶ್ಚಿಮ ಸಹಾರಾ (+212)ಪಾಕಿಸ್ತಾನ (+92)ಪೆರು (+51)ಪೋರ್ಚುಗಲ್ (+351)ಪೋರ್ಟೊ ರಿಕೊ (+1)ಪೋಲೆಂಡ್ (+48)ಪ್ಯಾಲೆಸ್ಟೈನ್ (+970)ಫಾಕ್‍ಲ್ಯಾಂಡ್ ದ್ವೀಪಗಳು (+500)ಫಾರೋ ದ್ವೀಪಗಳು (+298)ಫಿಜಿ (+679)ಫಿನ್‍ಲ್ಯಾಂಡ್ (+358)ಫಿಲಿಫೈನ್ಸ್ (+63)ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಶಿಯಾ (+691)ಫ್ರಾನ್ಸ್ (+33)ಫ್ರೆಂಚ್ ಗಯಾನ (+594)ಫ್ರೆಂಚ್ ಪಾಲಿನೇಶಿಯ (+689)ಬರ್ಮುಡಾ (+1)ಬಲ್ಗೇರಿಯಾ (+359)ಬಹರೇನ್ (+973)ಬಹಾಮಾಸ್ (+1)ಬಾಂಗ್ಲಾದೇಶ (+880)ಬಾರ್ಬಡೋಸ್ (+1)ಬುರುಂಡಿ (+257)ಬುರ್ಕೀನ ಫಾಸೊ (+226)ಬೆನಿನ್ (+229)ಬೆಲಾರೂಸ್ (+375)ಬೆಲೀಜ್ (+501)ಬೆಲ್ಜಿಯಂ (+32)ಬೊಲಿವಿಯಾ (+591)ಬೊಸ್ನಿಯ ಮತ್ತು ಹರ್ಜೆಗೊವಿನಾ (+387)ಬೋಟ್ಸ್ವಾನಾ (+267)ಬೋನೇರ್, ಸಿಂಟ್ ಯೂಸ್ಟೇಶಿಯಸ್ ಆಂಡ್ ಸಾಬಾ (+599)ಬ್ರಿಟಿಷ್ ವರ್ಜಿನ್ ದ್ವೀಪಗಳು (+1)ಬ್ರಿಟಿಷ್ ಹಿಂದೂ ಮಹಾಸಾಗರದ ಭೂಭಾಗ (+246)ಬ್ರೂನಿ (+673)ಬ್ರೆಜಿಲ್ (+55)ಭಾರತ (+91)ಭೂತಾನ್ (+975)ಮಂಗೋಲಿಯ (+976)ಮಕಾವು (+853)ಮಡಗಾಸ್ಕರ್ (+261)ಮಧ್ಯ ಆಫ್ರಿಕಾ ಗಣರಾಜ್ಯ (+236)ಮಯನ್ಮಾರ್ (+95)ಮರುಒಟ್ಟುಗೂಡುವಿಕೆ (+262)ಮಲಾವಿ (+265)ಮಲೇಷ್ಯಾ (+60)ಮಾಂಟೆನೆಗ್ರೊ (+382)ಮಾಯೋಟ್ (+262)ಮಾರಿಷಸ್ (+230)ಮಾರ್ಟಿನಿಕ್ (+596)ಮಾರ್ಷಲ್ ದ್ವೀಪಗಳು (+692)ಮಾಲಿ (+223)ಮಾಲ್ಟ (+356)ಮಾಲ್ಡೀವ್ಸ್ (+960)ಮೆಕ್ಸಿಕೊ (+52)ಮೊಜಾಂಬಿಕ್ (+258)ಮೊನಾಕೊ (+377)ಮೊರಾಕೊ (+212)ಮೊಲ್ಡೋವಾ (+373)ಮೋಂಟ್‍ಸೆರ್ರಟ್ (+1)ಮೌರಿಟೇನಿಯ (+222)ಮ್ಯಾಸೆಡೊನಿಯ (+389)ಯುಎಸ್ ವರ್ಜಿನ್ ದ್ವೀಪಗಳು (+1)ಯುನೈಟೆಡ್ ಅರಬ್ ಎಮಿರೆಟ್ಸ್ (+971)ಯುನೈಟೆಡ್ ಕಿಂಗ್‌ಡಮ್ (+44)ಯುನೈಟೆಡ್ ಸ್ಟೇಟ್ಸ್ (+1)ಯೆಮೆನ್ (+967)ರಷ್ಯಾ (+7)ರಿಪಿಬ್ಲಕ್ ಆಫ್ ದಿ ಕಾಂಗೊ (+242)ರುವಾಂಡಾ (+250)ರೊಮೆನಿಯ (+40)ಲಕ್ಸೆಂಬರ್ಗ್ (+352)ಲಾಟ್ವಿಯ (+371)ಲಾವೋಸ್ (+856)ಲಿಚೆಸ್ಟೇನಿಸ್ಟಿನ್ (+423)ಲಿಥುವೇನಿಯ (+370)ಲಿಬಿಯಾ (+218)ಲೆಬನಾನ್ (+961)ಲೆಸೊಥೊ (+266)ಲೈಬೀರಿಯ (+231)ವನುಆಟು (+678)ವಾಲಿಸ್ ಆಂಡ್ ಫುಟುನ (+681)ವಿಯೆಟ್ನಾಂ (+84)ವೆನೆಜುವೆಲ (+58)ವ್ಯಾಟಿಕನ್ ಸಿಟಿ (+39)ಶ್ರೀಲಂಕಾ (+94)ಸಮೋವಾ (+685)ಸರ್ಬಿಯ (+381)ಸಾನ್ ಮರಿನೊ (+378)ಸಾಲೊಮನ್ ದ್ವೀಪಗಳು (+677)ಸಾವೊ ಟೋಮ್ ಮತ್ತು ಪ್ರಿನ್ಸಿಪಿ (+239)ಸಿಂಗಪುರ್ (+65)ಸಿಂಟ್ ಮಾರ್ಟೆನ್ (+1)ಸಿಯೆರಾ ಲೆಯೋನ್ (+232)ಸಿರಿಯ (+963)ಸುಡಾನ್ (+249)ಸುರಿನಾಮ್ (+597)ಸೆನೆಗಲ್ (+221)ಸೆಶೆಲ್ಸ್ (+248)ಸೇಂಟ್ ಪಿಯೆರ್ ಮತ್ತು ಮಿಕ್ವೆಲಾನ್ (+508)ಸೇಂಟ್ ಬಾರ್ತೆಲೆಮಿ (+590)ಸೇಂಟ್ ಮಾರ್ಟಿನ್ (+590)ಸೇಂಟ್ ಲೂಸಿಯಾ (+1)ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ (+1)ಸೇಂಟ್ ಹೆಲೆನಾ (+290)ಸೈಂಟ್ ಕಿಟ್ಸ್ ಮತ್ತು ನೆವಿಸ್ (+1)ಸೈಪ್ರಸ್ (+357)ಸೊಮಾಲಿಯ (+252)ಸೌದಿ ಅರೇಬಿಯಾ (+966)ಸ್ಪೇನ್ (+34)ಸ್ಲೊವೇನಿಯಾ (+386)ಸ್ಲೋವಾಕಿಯ (+421)ಸ್ವಾಜಿಲ್ಯಾಂಡ್ (+268)ಸ್ವಿಟ್ಜರ್‍ಲ್ಯಾಂಡ್ (+41)ಸ್ವೀಡನ್ (+46)ಹಂಗೇರಿ (+36)ಹಾಂಗ್ ಕಾಂಗ್ (+852)ಹೈತಿ (+509)ಹೊಂಡುರಾಸ್ (+504)
ಊರು ಕೊಳ್ಳೆ ಹೊಡೆದು ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಗಾದೆ ಮಾತು ಇದೆ. ಅದು ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸರಿಯಾಗಿ ಹೊಂದುತ್ತದೆ. ನೀವೆನೆ ಸರ್ಕಸ್ ಮಾಡಿ. ಅವರನ್ನು ಸುಧಾರಿಸಲು ಸಾಧ್ಯವಿಲ್ಲ. ಏಕೆಂದರೆ ಅವರದ್ದು ಬಹುಕೃತ ವೇಷ. ಸದ್ಯ ಪಾಲಿಕೆಯ ಅಧಿಕಾರಿಗಳು ಅಚಾನಕ್ ಆಗಿ ನೀರನ್ನು ಉಳಿಸುವ ಆಪತ್ ಬಾಂದವರ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನೀರನ್ನು ರೇಶನಿಂಗ್ ಮೂಲಕ ಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಷ್ಟಕ್ಕೂ ಇದು ಅಗತ್ಯವೇ ಎಂದು ಹೇಳುವ ಮೊದಲು ನಾನು ಸಣ್ಣ ಫ್ಲಾಶ್ ಬ್ಯಾಕ್ ಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ಎರಡು ಎಂಜಿಡಿ ಕುಡಿಯುವ ಕಳ್ಳಬೇಕು ಯಾವುದು.. ಮಂಗಳೂರಿಗೆ ನಿತ್ಯ ತುಂಬೆಯಿಂದ 21 ಎಂಜಿಡಿ ನೀರು ಪಂಪ್ ಆಗುತ್ತಾ ಇರುತ್ತದೆ. ಮಂಗಳೂರು, ಮೂಲ್ಕಿ, ಉಳ್ಳಾಲ ಏನೇ ಹಿಡಿದರೂ ನಾಗರಿಕರ ಪೂರೈಕೆಗೆ ನಿಜವಾಗಿಯೂ ಬೇಕಾಗಿರುವುದು 19 ಎಂಜಿಡಿ ನೀರು ಮಾತ್ರ. ಹಾಗಾದರೆ ಉಳಿದ 2 ಮಿಲಿಯನ್ ಗ್ಯಾಲನ್ ಹೆಚ್ಚು ನೀರು ಏನು ಪಂಪ್ ಆಗ್ತಾ ಕೊಳವೆಗಳ ಮೂಲಕ ಹೊರಗೆ ಹೋಗುತ್ತಿದೆಯಲ್ಲ, ಅದು ಎಲ್ಲಿ ಮಾಯವಾಗುತ್ತಿದೆ ಎನ್ನುವುದನ್ನು ಯಾರಾದರೂ ಪತ್ತೆ ಮಾಡಿದ್ದಾರಾ? ಮೊದಲು ಅದನ್ನು ಜಿಲ್ಲಾಧಿಕಾರಿಗಳು ಪತ್ತೆ ಹಚ್ಚಬೇಕು. ಅಧಿಕಾರಿಗಳ ಸಭೆ ಕರೆದು ನಿಜಕ್ಕೂ ಪಂಪ್ ಆಗುತ್ತಿರುವ ನೀರು ಎಷ್ಟು ಮತ್ತು ಎಷ್ಟು ನೀರು ಜನರಿಗೆ ಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಆ ಬಗ್ಗೆ ಶಾಸಕರು, ಜನಪ್ರತಿನಿಧಿಗಳು ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ಹಾಕಿ ಸತ್ಯ ಬಹಿರಂಗ ಆಗಲು ಪ್ರಯತ್ನಿಸಬೇಕು. ನೀರು ಸರಬರಾಜು ಏಜೆನ್ಸಿಯ ಲೆಕ್ಕಾಚಾರದ ಪ್ರಕಾರ ಒಬ್ಬ ಮನುಷ್ಯ ಎಷ್ಟೇ ಸಲ ಸ್ನಾನ, ತಂಡಾಸು ಎಂದು ಮಾಡಿದರೂ ಸರಾಸರಿ 135 ಲೀಟರ್ ಗಿಂತ ಹೆಚ್ಚು ನೀರು ಒಬ್ಬನಿಗೆ ಬೇಡಾ. ಹಾಗಿರುವುದರಿಂದ ನೀರು ಪೂರೈಕೆ ಜಾಸ್ತಿ ಇರುವಾಗ ಯಾಕೆ ನೀರಿನ ಕೊರತೆ ಮಂಗಳೂರಿಗೆ ಬರುತ್ತದೆ ಎನ್ನುವುದರ ಗಮನವನ್ನು ಯಾರೂ ಕೂಡ ನೀಡುವುದಿಲ್ಲ. ಏಳು ಮೀಟರ್ ಎತ್ತರ ವೇಸ್ಟಾ… ಮಂಗಳೂರು ಮಹಾನಗರದಲ್ಲಿ ಎರಡು ಟೈಪಿನ ಜಾಗಗಳನ್ನು ಗುರುತಿಸಬಹುದು. ಒಂದು ತಗ್ಗು ಪ್ರದೇಶ ಮತ್ತೊಂದು ಎತ್ತರದ ಪ್ರದೇಶ. ತಗ್ಗು ಪ್ರದೇಶಗಳೆಂದರೆ ಉದಾಹರಣೆಗೆ ಮಣ್ಣಗುಡ್ಡೆ, ಉರ್ವಾ, ಲೇಡಿಹಿಲ್, ಅಶೋಕನಗರ ಹೀಗೆ ಇದ್ದರೆ ಎತ್ತರದ ಪ್ರದೇಶ ಎಂದರೆ ಕೋಡಿಕಲ್, ಶಕ್ತಿನಗರ, ಬಂಗ್ರಕೂಳೂರು ಹೀಗೆ ಹಲವು ಪ್ರದೇಶಗಳಿವೆ. ಹೈ ಲೆವೆಲ್ ಏರಿಯಾಗಳಲ್ಲಿ ಹಲವು ಕಡೆ ಎರಡು ದಿನಗಳಿಗೊಮ್ಮೆ ನಾಲ್ಕು ಗಂಟೆ ಮಾತ್ರ ನೀರು ಬರುವುದು. ಹಾಗಿದ್ದರೆ ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕಿನವರು ಹಿಂದಿನ ಬಾರಿ ನಮ್ಮ ಮಂಗಳೂರಿಗೆ 180 ಕೋಟಿ ರೂಪಾಯಿ ಸಾಲ ನೀಡಿ 2024 ರ ತನಕ ಎಲ್ಲರಿಗೂ 24*7 ನೀರು ಕೊಡಿ ಎಂದು ಹೇಳಿದ್ದರಲ್ಲ, ಹಾಗಾದರೆ ಯಾಕೆ ನಮಗೆ ಇವತ್ತಿಗೂ ಸರಿಯಾಗಿ ಮಂಗಳೂರಿನ ಒಂದೇ ಒಂದು ಬೀದಿಯಲ್ಲಿ ಇಡೀ ದಿನ ನೀರು ಸಿಗುತ್ತಾ ಇಲ್ಲ. ಹಾಗಾದರೆ ಆ ಹಣ 180 ಕೋಟಿ ಎಲ್ಲಿ ನೀರಿನೊಂದಿಗೆ ಕೊಚ್ಚಿ ಹೋಯಿತು. ಯಾಕೆ ಆ ಬಗ್ಗೆ ಯಾರೂ ಕೂಡ ಕೇಳುವುದಿಲ್ಲ. ಮೇಯರ್ ಆಗಿದ್ದ ಭಾಸ್ಕರ್ ಕೆ ಮೊಯಿಲಿ ಹಾಗೂ ಆಗ ಕಮೀಷನರ್ ಆಗಿದ್ದ ಮೊಹಮ್ಮದ್ ನಝೀರ್ ಅವರು ಇದೇ ಜನವರಿಯಲ್ಲಿ ಒಂದು ಸುದ್ದಿಗೋಷ್ಟಿ ಮಾಡಿ ನಮ್ಮ ತುಂಬೆಯಲ್ಲಿ ಆರು ಮೀಟರ್ ನೀರು ಇದೆ. ಎಎಂಆರ್ ಡ್ಯಾಂನಲ್ಲಿಯೂ ನೀರಿನ ಸಂಗ್ರಹ ಸಾಕಷ್ಟಿದೆ. ಮೇ ಕೊನೆಯ ತನಕ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಘಂಟಾಘೋಷವಾಗಿ ಹೇಳಿರುವಾಗ ಈಗ ಸಮಸ್ಯೆ ಎಲ್ಲಿಂದ ಬಂತು? ಅವರು ಯಾವ ಆಧಾರದ ಮೇಲೆ ಆ ಹೇಳಿಕೆಯನ್ನು ಕೊಟ್ಟಿದ್ದರು ಎಂದು ಈಗ ಪರಿಶೀಲಿಸಬೇಕು. ಜಿಲ್ಲಾಧಿಕಾರಿಯವರು ಅದನ್ನು ಕೂಡ ಚರ್ಚೆ ಮಾಡಬೇಕು. ಇನ್ನೊಂದು ಬಹಳ ಮುಖ್ಯ ವಿಷಯ ಏನೆಂದರೆ ತುಂಬೆಯ ಹೊಸ ವೆಂಟೆಂಡ್ ಡ್ಯಾಂ ಏಳು ಮೀಟರ್ ಎತ್ತರ ಕಟ್ಟಲಾಗಿದೆ. ಆದರೆ ಅಷ್ಟು ಎತ್ತರ ಬಳಕೆಯಾಗುತ್ತಿಲ್ಲ. ಯಾಕೆಂದರೆ ಏಳು ಮೀಟರ್ ಎತ್ತರ ನೀರು ನಿಲ್ಲಿಸುವ ಯೋಗ್ಯತೆಯನ್ನು ನಮ್ಮ ಮಂಗಳೂರು ಮಹಾನಗರ ಪಾಲಿಕೆ ಹೊಂದಿಲ್ಲ. ಏಳು ಮೀಟರ್ ಎತ್ತರ ನೀರು ನಿಲ್ಲಿಸುವುದೇ ಇಲ್ಲ ಎಂದಾದರೆ ಕಟ್ಟುವುದು ಯಾಕೆ? ಸಿನೆಮಾದ ಪೋಸ್ಟರ್ ಅಂಟಿಸುವುದಕ್ಕಾ ಅಥವಾ ರಾಜಕೀಯ ಬ್ಯಾನರ್ ಕಟ್ಟುವುದಕ್ಕಾ? ಅದನ್ನು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಬೇಕು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೂಡ ನಮ್ಮ ಮಂಗಳೂರಿನವರು. ಅವರು ಹೇಳಬೇಕು. ಈ ವಿಷಯಗಳು ಕೂಡ ಹಾಗೇ ಮುಚ್ಚಿಹೋಗುತ್ತಿವೆ. ಇನ್ನೂ ಸಾಕಷ್ಟು ಸಂಗತಿಗಳು ಈ ನೀರಿನ ರಾಜಕೀಯದ ಹಿಂದೆ ಇದೆ. ನಾಳೆ ಸಿಗೋಣ!
ಜೀನ್ ಡ್ರೀಜ಼್ ನಮ್ಮ ನಡುವಿನ ಅಪರೂಪದ ಆರ್ಥಿಕ ಚಿಂತಕರು. ಮನರೆಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ರೂಪಿಸುವಲ್ಲಿ ಭಾಗವಹಿಸಿದ್ದರು. ಈಗ ನಗರ ಪ್ರದೇಶಗಳಿಗಾಗಿ ಅವರು ಡ್ಯುಯೆಟ್ (ಡಿಸೆಂಟ್ರಲೈಸ್ಡ್ ಅರ್ಬನ್ ಎಂಪ್ಲಾಯ್‌ಮೆಂಟ್ ಅಂಡ್ ಟ್ರೈನಿಂಗ್) ಯೋಜನೆಯನ್ನು ಸೂಚಿಸಿದ್ದಾರೆ. ಈ ವಿಕೇಂದ್ರಿಕೃತ ನಗರ ಉದ್ಯೋಗ ಹಾಗೂ ತರಬೇತಿ ಯೋಜನೆಯನ್ನು ಕುರಿತು ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. ಕೇರಳದಲ್ಲಿ ಇದು ಆಳುವ ಪಕ್ಷದ ಪ್ರಣಾಳಿಕೆಯಲ್ಲೂ ಸೇರಿದೆ. ತೀರಾ ಗಂಭೀರ ಚರ್ಚೆಗೆ ವೇದಿಕೆಯಾಗಿರುವ ಐಡಿಯಾಸ್ ಫಾರ್ ಇಂಡಿಯಾದಲ್ಲಿ ಇದನ್ನು ಕುರಿತಂತೆ ಸಾರ್ವಜನಿಕ ಚರ್ಚೆಯನ್ನು ನಡೆಸಿದೆ. ಅದರಲ್ಲಿ ಹಲವು ತಜ್ಞರು ಪಾಲ್ಗೊಂಡಿದ್ದಾರೆ. ಕನ್ನಡದಲ್ಲೂ ಈ ಬಗ್ಗೆ ಚರ್ಚೆಯಾಗುವುದು ಒಳ್ಳೆಯದು ಅನ್ನುವ ಕಾರಣಕ್ಕೆ ಕೆಲವು ಮುಖ್ಯ ಚರ್ಚೆಗಳನ್ನು ಅನುವಾದಿಸಿ ಪ್ರಕಟಿಸುತ್ತಾ ಹೋಗುತ್ತೇವೆ . ಗೆಳೆಯರೊಂದಿಗೆ ಹಂಚಿಕೊಳ್ಳಿ. ನಿರುದ್ಯೋಗ, ಬಡತನ, ಅಸಮಾನತೆ, ಹಸಿವು ಈ ಕುರಿತು ಕನಿಷ್ಟ ಮಾತನಾಡೋಣ. ಮತ್ತೆ ಇದು ಮುಖ್ಯವಾಹಿನಿಗೆ ಬರಲಿ. ಮೊದಲಿಗೆ ಜೀನ್ ಡ್ರೇಜ್ ಅವರ ಲೇಖನ ಇಲ್ಲಿದೆ . ನಿಮ್ಮ ಸಲಹೆಗೆ ಸ್ವಾಗತ. ಭಾರತದ ಒಟ್ಟು ದೇಶೀಯ ಉತ್ಪನ್ನದ ೨೦೨೦-೨೧ರ ಮೊದಲ ತ್ರೈಮಾಸಿಕ ಆವಧಿಯ ಅಂದಾಜು ಬಿಡುಗಡೆಯಾಗುತ್ತಿದ್ದಂತೆ ಆತಂಕ ವ್ಯಕ್ತವಾಗಿದೆ. ಈ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರವಾಗಿ ಕುಸಿದಿದ್ದವು. ಇದನ್ನು ಹಲವು ಕೌಟಂಬಿಕ ಸಮೀಕ್ಷೆಗಳು ಸ್ಪಷ್ಟವಾಗಿ ತಿಳಿಸಿವೆ. ನಿರುದ್ಯೋಗ, ಬಡತನ, ಮತ್ತು ಹಸಿವು ಇವೆಲ್ಲಾ ವ್ಯಾಪಕವಾಗಿದ್ದಾಗ ಆರ್ಥಿಕತೆ ಒಳ್ಳೆಯ ಸ್ಥಿತಿಯಲ್ಲಿರುವ ಸಾಧ್ಯತೆಗಳು ಕಡಿಮೆ. ಇತ್ತೀಚೆಗೆ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನ ಆರ್ಥಿಕ ಪರಿಸ್ಥಿತಿಯ ಅಧ್ಯಯನ ಕೇಂದ್ರವು ೮೫೦೦ ನಗರ ಕಾರ್ಮಿಕರನ್ನು ವಿಶೇಷವಾಗಿ ಸಂದರ್ಶಿಸಿ ಸಮೀಕ್ಷೆ ನಡೆಸಿದೆ. ಅದು ಒಟ್ಟಾರೆ ಪರಿಸ್ಥಿತಿಯ ಕುರಿತಂತೆ ಸ್ಪಷ್ಟವಾದ ಚಿತ್ರವನ್ನು ಕೊಡುತ್ತದೆ. ಸಮೀಕ್ಷೆಗೆ ಒಳಗಾದವರಲ್ಲಿ ಸುಮಾರು ಅರ್ಧದಷ್ಟು ಜನರ ಸರಾಸರಿ ವರಮಾನ ಕಮ್ಮಿಯಾಗಿತ್ತು. ವಲಸೆ ಕಾರ್ಮಿಕರ ವಿಷಯದಲ್ಲಿ ವರಮಾನದ ಇಳಿತ ಇನ್ನೂ ಹೆಚ್ಚೇ ಆಗಿತ್ತು. ಅವರ ವರಮಾನ ಶೇಕಡ ೮೨ರಷ್ಟು ಕಡಿಮೆಯಾಗಿತ್ತು. ಈ ಮೊದಲೇ ಬಡತನದಲ್ಲಿ ಇದ್ದವರಲ್ಲಿ ಈ ವರಮಾನದ ಕುಸಿತ ಇನ್ನೂ ತೀವ್ರವಾಗಿತ್ತು. ಇದರಿಂದ ಪಟ್ಟಣದ ಕಾರ್ಮಿಕರಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಾಯಿತು. ಮೇಲಸ್ತರದ ಶೇಕಡ ೨೫ರಷ್ಟು ಕಾರ್ಮಿಕರ ವರಮಾನ ಲಾಕ್‌ಡೌನ್ ಮೊದಲು ಶೇಕಡ ೬೪ರಷ್ಟು ಇದ್ದುದು, ಲಾಕ್ ಡೌನ್ ನಂತರ ಶೇಕಡ ೮೪ರಷ್ಟಾಯಿತು. ಅಂದರೆ ಕೆಳಸ್ತರದಲ್ಲಿದ್ದ ಶೇಕಡ ೭೫ರಷ್ಟು ಜನ ಕೇವಲ ಶೇಕಡ ೧೬ರಷ್ಟು ವರಮಾನವನ್ನು ಹಂಚಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಕೆಲವು ವಾರಗಳಲ್ಲಿ ನಗರದ ಕಾರ್ಮಿಕರ ಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಅನ್ನಿಸುತ್ತದೆ. ವಲಸೆ ಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ಹೋಗಿದ್ದರಿಂದ, ಅವರು ಕೆಲಸ ಮಾಡುತ್ತಿದ್ದ ಪ್ರದೇಶಗಳಲ್ಲಿ ಕೆಲಸಗಾರರ ಕೊರತೆಯಿಂದಾಗಿ ಸ್ಥಳೀಯ ಕೆಲಸಗಾರರಿಗೆ ಒಂದಿಷ್ಟು ಅನುಕೂಲವಾಗಿರಬಹುದು. ಆದರೂ ವಿಶೇಷವಾಗಿ ಲಾಕ್‌ಡೌನ್ ಮುಂದುವರಿದಿರುವ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಸಾಮಾನ್ಯ ಮಟ್ಟಕ್ಕಿಂತ ತುಂಬಾ ಕಡಿಮೆಯೇ ಇದೆ. ಕೆಲವು ವೃತ್ತಿಗಳಲ್ಲಂತೂ ಜನರಿಗೆ ಹಲವು ತಿಂಗಳುಗಳಿಂದ ಕೆಲಸವೇ ಇಲ್ಲ. ಸಧ್ಯದಲ್ಲಿ ಕೆಲಸ ಸಿಗುವ ಸಾಧ್ಯತೆಯೂ ಇಲ್ಲ. ತಿಂಡಿ ಮಾರುವವರು, ಬಸ್ ಕಂಡಕ್ಟರುಗಳು, ಸಿನಿಮಾ ಹಾಲಿನಲ್ಲಿ ಕೆಲಸ ಮಾಡುತ್ತಿರುವವರು, ಲೈಂಗಿಕ ಕಾರ್ಯಕರ್ತೆರು, ಬ್ಯಾಂಡ್ ಕಲಾವಿದರು, ವಲಸೆ ಕಾರ್ಮಿಕರು ಇವರ ಬಗ್ಗೆ ಯೋಚಿಸಿ. ಅವರಲ್ಲಿ ಬಹುಪಾಲು ಜನ ಆಸರೆಗೆ ಹತಾಶೆಯಿಂದ ಪರ್ಯಾಯ ಕೆಲಸಗಳನ್ನು ಹುಡುಕುತ್ತಿದ್ದಾರೆ. ಈ ಪರಿಸ್ಥಿತಿಯಿಂದಾಗಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಮಾದರಿಯಲ್ಲೇ ನಗರದಲ್ಲೂ ಒಂದು ಉದ್ಯೋಗ ಖಾತ್ರಿ ಕಾನೂನನ್ನು ಕುರಿತು ಚಿಂತಿಸುವ ಸಮಯ ಬಂದಿದೆ. ಕೆಲಸ ಕಳೆದುಕೊಂಡವರಿಗೆ ಅವಶ್ಯಕವಾದ ಪರ್ಯಾಯ ಉದ್ಯೋಗ ನರೇಗಾ ಮಾದರಿಯ ನಗರ ಉದ್ಯೋಗ ಯೋಜನೆಯಿಂದ ದೊರೆಯಬಹುದು. ಕೇವಲ ತಾತ್ಕಲಿಕವಾಗಿ ಕೆಲಸ ಕಳೆದುಕೊಂಡವರಿಗೆ ಮಾತ್ರವಲ್ಲ, ಕೆಲಸವೇ ಇಲ್ಲದವರಿಗೂ ಇದರಿಂದ ಉದ್ಯೋಗ ಸಿಗುತ್ತದೆ. ಆದರೆ ನಗರದಲ್ಲಿ ಅಂತಹ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸುವುದಕ್ಕೆ ಹೆಚ್ಚಿನ ಅನುಭವಬೇಕು. ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಸಂಬಂಧಿಸಿದಂತೆ ಈಗ ಇರುವ ಅನುಭವ ಸಾಲುವುದಿಲ್ಲ. ನರೇಗಾ ಯೋಜನೆಯನ್ನು ರೂಪಿಸುವುದರ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕ್ಷಾಮದ ಪರಿಹಾರಕ್ಕೆ ಸಂಬಂಧಿಸಿದಂತೆ ಹಲವು ದಶಕಗಳ ಅನುಭವ ಇತ್ತು ಅನ್ನುವುದನ್ನು ಮರೆಯಬಾರದು. ಆ ಅನುಭವ ನರೇಗಾ ಯೋಜನೆಯನ್ನು ರೂಪಿಸುವಲ್ಲಿ ನೆರವಾಯಿತು. ಸಿದ್ಧ ಚೌಕಟ್ಟನ್ನು ಮೀರಿ ಯೋಚಿಸೋಣ ಸಿದ್ಧ ಚೌಕಟ್ಟನ್ನು ಮೀರಿ ಯೋಚಿಸಿದರೆ ನಗರ ಕಾರ್ಮಿಕರಿಗೆ ತಕ್ಷಣದ ಪರಿಹಾರ ಕೊಡುವಂತಹ ನಗರ ಉದ್ಯೋಗ ಯೋಜನೆಯನ್ನು ರೂಪಿಸುವುದಕ್ಕೆ ಸಾಧ್ಯ. ಅದು ನಮಗೆ ಬೇಕಾದ ಅನುಭವವನ್ನು ಕೊಡುತ್ತದೆ. ಕೆಲವು ರಾಜ್ಯಗಳು ಈ ರೀತಿಯ ಯೋಜನೆಗಳನ್ನು ರೂಪಿಸಲು ಈಗಾಗಲೇ ಪ್ರಯತ್ನಿಸಿವೆ. ಕೇರಳ ೧೦ ವರ್ಷದ ಹಿಂದೆಯೇ ಅಯ್ಯನಕಲಿ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸಿತ್ತು. ೨೦೧೯-೨೦ರಲ್ಲಿ ಅದರಿಂದ ೨೭ ಲಕ್ಷ ವ್ಯಕ್ತಿ-ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು. ಈ ವರ್ಷ ಹಿಮಾಚಲ ಪ್ರದೇಶ, ಜಾರ್ಖಂಡ್, ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಕೂಡ ನಗರ ಉದ್ಯೋಗ ಖಾತ್ರಿ ನೀಡುವ ಯೋಜನೆಗಳನ್ನು ಪ್ರಾರಂಭಿಸಿವೆ. ಆದರೆ ಬಜೆಟ್ ಕೊರತೆಯಿಂದ, ಈ ಯೋಜನೆಗಳು ಬಹುಪಾಲು ಸಾಂಕೇತಿಕ ಯೋಜನೆಗಳಾಗಿಬಿಟ್ಟಿವೆ. ಇದಕ್ಕಾಗಿ ವಿನಿಯೋಗಿಸಿರುವ ಹಣ ಅತ್ಯಲ್ಪ. ಇನ್ನೊಂದು ಪರ್ಯಾಯ ಯೋಜನೆಯನ್ನು ನೋಡೋಣ. ಇದನ್ನು ವಿಕೇಂದ್ರಿಕೃತ ನಗರ ಉದ್ಯೋಗ ಹಾಗೂ ತರಬೇತಿ ಅಥವಾ ಡ್ಯುಯೆಟ್ (ಡಿಸೆಂಟ್ರಲೈಸ್ಡ್ ಅರ್ಬನ್ ಎಂಪ್ಲಾಯ್‌ಮೆಂಟ್ ಅಂಡ್ ಟ್ರೈನಿಂಗ್) ಯೋಜನೆ ಎಂದು ಕರೆಯೋಣ. ಅದರ ಮೂಲಭೂತ ಯೋಚನೆ ಹೀಗಿದೆ. ಸರ್ಕಾರ ಉದ್ಯೋಗದ ಸ್ಟಾಂಪುಗಳನ್ನು ಬಿಡುಗಡೆ ಮಾಡುತ್ತದೆ. ಅವನ್ನು ಅಂಗೀಕೃತ ಸಾರ್ವಜನಿಕ ಸಂಸ್ಥೆಗಳಿಗೆ ವಿತರಿಸಲಾಗುತ್ತದೆ. ಉದಾಹರಣೆಗೆ ಶಾಲೆಗಳು, ಕಾಲೇಜುಗಳು, ಹಾಸ್ಟೆಲ್ಲುಗಳು, ವಸತಿ ಗೃಹಗಳು, ಬಂದಿಖಾನೆಗಳು, ಮ್ಯೂಸಿಯಂಗಳು, ಮುನಿಸಿಪಾಲಿಟಿಗಳು, ಸರ್ಕಾರಿ ಇಲಾಖೆಗಳು, ಆರೋಗ್ಯ ಕೇಂದ್ರಗಳು, ಸಾರಿಗೆ ಕಾರ್ಪೋರೇಷನ್ನುಗಳು, ನೆರೆಹೊರೆಯ ಅಸೋಸಿಯೇಷನ್ನುಗಳು, ನಗರದ ಸ್ಥಳೀಯ ಸಂಸ್ಥೆಗಳು ಮುಂತಾದವುಗಳಿಗೆ ಅವುಗಳನ್ನು ವಿತರಿಸಲಾಗುತ್ತದೆ. ಒಂದು ಉದ್ಯೋಗ ಸ್ಟಾಂಪು ಅಂದರೆ ಒಬ್ಬ ವ್ಯಕ್ತಿಯ ಒಂದು ದಿನದ ಕೆಲಸ. ಪ್ರತಿಯೊಂದು ಸಂಸ್ಥೆಯು ತಮ್ಮಲ್ಲಿ ಇರುವ ಸ್ಟಾಂಪುಗಳನ್ನು ಈ ಕ್ರಮದಲ್ಲಿ ಬಳಸಿಕೊಳ್ಳಬಹುದು. ಆದರೆ ಅದನ್ನು ನಿಗದಿತ ಆವಧಿಯಲ್ಲಿ ಬಳಸಿಕೊಳ್ಳಬೇಕು. ಜೊತೆಗೆ ನೇಮಕಗೊಂಡ ಕೆಲಸಗಾರರಿಗೆ ಕೆಲಸ ಕೊಡುವುದಕ್ಕೆ ಆ ಸಂಸ್ಥೆಗಳಿಗೆ ಸಾಧ್ಯವಾಗಬೇಕು. ಕೆಲಸದ ನಂತರ ಆ ಸಂಸ್ಥೆಗಳು ತಮ್ಮ ದೃಢೀಕರಣದೊಂದಿಗೆ ಸ್ಟಾಂಪುಗಳನ್ನು ಕೆಲಸಗಾರರಿಗೆ ನೀಡಬೇಕು. ಆ ದೃಢೀಕೃತ ಉದ್ಯೋಗದ ಸ್ಟಾಂಪುಗಳನ್ನು ಕೆಲಸಗಾರರು ಪಾವತಿಸಿದ ಕೂಡಲೇ ಅವರ ಕೂಲಿಯನ್ನು ಸರ್ಕಾರ ನೇರವಾಗಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಬೇಕು. ಸಂಸ್ಥೆಗಳು ಹಾಗೂ ಕಾರ್ಮಿಕರು ಶಾಮೀಲಾಗುವುದನ್ನು ತಪ್ಪಿಸಲು ಕೆಲಸಗಾರರನ್ನು ನೇಮಿಸುವುದಕ್ಕೆ ಒಂದು ಸ್ವತಂತ್ರ ನೇಮಕಾತಿ ಏಜೆನ್ಸಿ ಇರಬೇಕು. ಕೆಲವು ಉದ್ಯೋಗವನ್ನು ಅರೆಕಾಲಿಕ ಉದ್ಯೋಗವನ್ನಾಗಿಯೂ ಯೋಚಿಸಬಹುದು. ಉದಾಹರಣೆಗೆ ದಿನಕ್ಕೆ ನಾಲ್ಕು ಗಂಟೆಯಂತೆ. ಆಗ ಮಹಿಳೆಯರಿಗೆ ಅದರಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ. ಈ ಕ್ರಮದಿಂದ ಹಲವು ಅನುಕೂಲಗಳಿವೆ: ಮೊದಲನೆಯದಾಗಿ ವಿಭಿನ್ನ ಅನುಮೋದಿತ ಉದ್ಯೋಗದಾತರನ್ನು ಸಕ್ರಿಯಗೊಳಿಸುವುದರಿಂದ, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಬಹುದು ಎರಡನೆಯದಾಗಿ, ಅನುಮೋದಿತ ಉದ್ಯೋಗದಾತರು ಕೆಲಸ ಹೆಚ್ಚು ಉತ್ಪಾದಕವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮೂರನೆಯದಾಗಿ, ಈ ಯೋಜನೆಯಲ್ಲಿ ಕೆಲಸವನ್ನು ನೀಡುತ್ತಿರುವ ಸಂಸ್ಥೆಗಳು ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ ಅದಕ್ಕೆ ವಿಶೇಷವಾಗಿ ಕೆಲಸಗಾರರನ್ನು ನೇಮಿಸಿಕೊಳ್ಳಬೇಕಾಗಿಲ್ಲ. ನಾಲ್ಕನೆಯದಾಗಿ ಕೆಲಸಗಾರರಿಗೆ ಕನಿಷ್ಠ ಕೂಲಿ ಜೊತೆಗೆ ಬಹುಶಃ ಇತರ ಅನುಕೂಲಗಳ ಖಾತರಿ ಇರುತ್ತದೆ. ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ? ಡ್ಯುಯೆಟ್ ಯೋಜನೆಯಲ್ಲ್ಲಿ ಯಾವೆಲ್ಲಾ ಕೆಲಸಗಳು ಸೇರಿಕೊಳ್ಳುತ್ತವೆ? ಮಾಡುವುದಕ್ಕೆ ತುಂಬಾ ಕೆಲಸಗಳಿವೆ. ಮೊದಲಿಗೆ ಬಾರತದ ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳು (ಪಾರ್ಕುಗಳು, ಕೆರೆಗಳು, ಬಾವಿಗಳು, ಆಟದ ಮೈದಾನಗಳು, ಬಸ್‌ಸ್ಟಾಂಡುಗಳು, ರೈಲ್ವೆ ಸ್ಟೇಷನ್ನುಗಳು ಇವೆಲ್ಲಾ) ಸರಿಯಾದ ಉಸ್ತುವಾರಿ ಇಲ್ಲದೆ ತುಂಬಾ ಹಾಳಾಗುತ್ತಿವೆ. ಲಾಕ್ ಡೌನ್ ನಂತರ ಕೆಲವು ತಿಂಗಳಲ್ಲಿ ಅವು ಮತ್ತೆ ಪ್ರಾರಂಭವಾದಾಗ ಅವುಗಳನ್ನು ದುರಸ್ತಿಗೊಳಿಸುವುದಕ್ಕೆ ತುಂಬಾ ಕೆಲಸ ಹಿಡಿಯುತ್ತದೆ. ಶುಚಿಮಾಡುವುದು, ಬಣ್ಣ ಹೊಡೆಯುವುದು, ಕಳೆ ಕೀಳುವುದು, ರಿಪೇರಿಮಾಡುವುದು, ಪೈಪುಗಳ ರಿಪೇರಿ ಹೀಗೆ ಹಲವು ಕೆಲಸಗಳು ಇರುತ್ತವೆ. ನಗರದಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಅಂದೋಲನಕ್ಕೆ ಇದೊಂದು ಒಳ್ಳೆಯ ಸಮಯ. ಸಾರ್ವಜನಕ ಸ್ಥಳಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮಾತ್ರವಲ್ಲದೆ, ಸಾರ್ವಜನಿಕ ಆರೋಗ್ಯ, ಪರಿಸರ ಸುಧಾರಣೆ, ಬಹುಶಃ ಗೃಹಕೃತ್ಯದ ಕೆಲಸಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ಪಾದಕ ಕೆಲಸಗಳಿಗೆ ತುಂಬಾ ಅವಕಾಶಗಳಿವೆ. ನಗರ ಪ್ರದೇಶಗಳಲ್ಲಿ ಮಾಡಬಹುದಾದ ಸಾರ್ವಜನಿಕ ಕೆಲಸಗಳ ಒಂದು ಪಟ್ಟಿಯನ್ನೇ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ತಾಳಿಕೆಯ ಉದ್ಯೋಗ ಕೇಂದ್ರವು ಯೋಚಿಸಿ ಸಿದ್ಧಪಡಿಸಿದೆ. ನಗರ ಉದ್ಯೋಗ ಖಾತ್ರಿಗಾಗಿ ಅದು ಇತ್ತೀಚೆಗೆ ಸಲ್ಲಿಸಿರುವ ಸಲಹೆಯಲ್ಲಿ ನೀಡಿದೆ. ಇನ್ನು ಡ್ಯುಯೆಟ್‌ನಲ್ಲಿ ಬರುವ ಟಿ, ಅಂದರೆ ಟ್ರೈನಿಂಗ್- ತರಬೇತಿಯು ಮುಖ್ಯವಾಗಿ ಕೆಲಸ ಮಾಡುತ್ತಲೇ ಪಡೆಯುವ ತರಬೇತಿಯ ರೂಪದಲ್ಲಿರುತ್ತದೆ. ಕೌಶಲವಿಲ್ಲದ ಕಾರ್ಮಿಕರು ಕೌಶಲವಿರುವ ಕಾರ್ಮಿಕರ ಜೊತೆ ಕೆಲಸ ಮಾಡುವ ಪ್ರಕ್ರಿಯೆಯಲ್ಲಿ ಕೆಲಸ ಕಲಿಯುತ್ತಾರೆ. ನೇಮಕಾತಿ ಏಜೆನ್ಸಿಗಳು ಕೇವಲ ಕೆಲಸಗಾರರನ್ನು ನಿಗದಿ ಮಾಡುವುದರ ಜೊತೆಗೆ ಕುಶಲತೆಯನ್ನು ನೀಡುವ ಹಾಗೂ ಅದನ್ನು ಪ್ರಮಾಣೀಕರಿಸುವ ಕೆಲಸವನ್ನು ಮಾಡಬಹುದು. ತಾತ್ತ್ವಿಕವಾಗಿ ಮುನಿಸಿಪಾಲಿಟಿಗಳು ವಿಭಿನ್ನ ನೇಮಕಾತಿ ಏಜೆನ್ಸಿಗಳನ್ನು ಇಟ್ಟುಕೊಂಡಿರಬಹುದು. ಕೆಲವು ಕಾರ್ಮಿಕರ ಸಹಕಾರ ಸಂಸ್ಥೆಗಳಾಗಿ ಕೆಲಸ ಮಾಡಬಹುದು. ಡ್ಯುಯೆಟ್ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಂತಹ ಸಂಸ್ಥೆಗಳು ಹಾಗೂ ಯೋಜನೆಗಳಿಂದ ಬೆಂಬಲ ಪಡೆದುಕೊಳ್ಳಬಹುದು. ಕೆಲವು ದೇಶಗಳಲ್ಲಿ ಡ್ಯುಯೆಟ್ ರೀತಿಯ ಉದ್ಯೋಗ ಸಬ್ಸಿಡಿ ಯೋಜನೆಯಂತಹ ಯೋಜನೆಗಳನ್ನು ಆಚರಣೆಗೆ ತಂದಿವೆ. ಉದಾಹರಣೆಗೆ ಹಲವು ಐರೋಪ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ’ಸೇವಾ ವೋಚರ್ ಯೋಜನೆ’. ಆದರೆ ಇಲ್ಲಿ ಇರುವ ಮುಖ್ಯ ವ್ಯತ್ಯಾಸ ಅಂದರೆ ಎಸ್‌ವಿಎಸ್ ವೋಚರುಗಳನ್ನು ಸಾಮಾನ್ಯವಾಗಿ ಮನೆ ಶುಚಿಗೊಳಿಸುವುದು, ಅಡಿಗೆ ಮಾಡುವುದು, ಇಸ್ತ್ರಿಮಾಡುವುದು ಮೊದಲಾದ ಗೃಹಕೃತ್ಯದ ಕೆಲಸಗಳಿಗೆ ಬಳಸಲಾಗುತ್ತದೆ. ಆದರೂ ಇದು ಉತ್ತೇಜನಕಾರಿಯಾದ ಪೂರ್ವನಿದರ್ಶನ – ಒಳ್ಳೆಯ ಎಸ್‌ವಿಎಸ್ ಯೋಜನೆಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಹಾಗೂ ಅವು ತುಂಬಾ ಜನಪ್ರಿಯವಾಗಿವೆ. ಈಗ ಹೆಚ್ಚು ಮಹದಾಸೆಯ ಯೋಜನೆಗಳಿಗೆ ರಾಜ್ಯ ಬಜೆಟ್ಟುಗಳಲ್ಲಿ ಅಷ್ಟಾಗಿ ಅವಕಾಶವಿಲ್ಲ. ಆದರೆ ಡ್ಯಯೆಟ್ಟನ್ನು ಒಂದು ತುರ್ತು, ಕೇಂದ್ರ ಆಯೋಜಿತ ಯೋಜನೆಯಾಗಿ ಪ್ರಾರಂಭಿಸಬಹುದು. ಪರಿಸ್ಥಿತಿ ಅನುಕೂಲಕರವಾಗಿದ್ದಾಗ ಇವನ್ನು ರಾಜ್ಯ ಸರ್ಕಾರಗಳು ನೋಡಿಕೊಳ್ಳುತ್ತವೆ. ಇದು ನಿರುದ್ಯೋಗಿಗಳಿಗೆ ನೆರವಾಗುವುದರ ಜೊತೆಗೆ ಲಾಕ್ ಡೌನ್ ನಂತರದ ಆವಧಿಯಲ್ಲಿ ಆರ್ಥಿಕ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಸಾರ್ವಜನಿಕ ಸೇವೆಗಳು ಪುನಚ್ಛೇತನಗೊಳ್ಳಲು ಸಹ ನೆರವಾಗುತ್ತವೆ. ಅನುವಾದ: ಟಿ ಎಸ್ ವೇಣುಗೋಪಾಲ್ ಹಾಗೂ ಶೈಲಜ ಜೀನ್ ಡ್ರೀಜ಼್ ಜೀನ್ ಡ್ರೀಜ಼್ ನಮ್ಮ ನಡುವಿನ ಅಪರೂಪದ ಆರ್ಥಿಕ ಚಿಂತಕರು. ಮನರೆಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ರೂಪಿಸುವಲ್ಲಿ ಭಾಗವಹಿಸಿದ್ದರು.
ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಬಂದ ಕೆಳಗಿನ ಎರಡು ವರದಿಗಳು ಮೇಲ್ನೋಟಕ್ಕೆ ಸಂಬಂಧಪಟ್ಟಿಲ್ಲದವು ಎಂದು ತೋರಿದರೂ ಎರಡಕ್ಕೂ ನೇರಾ ನೇರ ಸಂಬಂಧವಿದೆ. ಒಂದು ಕಡೆ ಬಡವರನ್ನು ‘ಬಡವನಲ್ಲ ಶ್ರೀಮಂತ’ನೆಂದು ಗುರುತಿಸಲು ಸಾಧ್ಯವಾಗುವಂಥ ಸರಕಾರದ ವರದಿ. ಮತ್ತೊಂದೆಡೆ ಆಹಾರದ ಕೊರತೆಯಿಂದ ನರಳುತ್ತಿರುವ ಮಕ್ಕಳ ಕರುಣಾಜನಕ ಕಥನ. “Shining India”ದ ಮತ್ತೊಂದು ರೂಪ. ಟಿ.ವಿ9 ಕನ್ನಡ ವಾಹಿನಿ ‘ಅನ್ನ ಅನ್ನ ಅನ್ನ ‘ ಎಂಬ ತನ್ನ ಕಾರ್ಯಕ್ರಮವೊದರಲ್ಲಿ ರಾಯಚೂರು ಜಿಲ್ಲೆಯಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಮಕ್ಕಳ ಕುರಿತು ವರದಿಯೊಂದನ್ನು ಪ್ರಸಾರ ಮಾಡಿದೆ. 2009, 2010, 2011(ಆಗಸ್ಷಿನವರೆಗೆ) ಸರಕಾರದ ವರದಿಗಳೇ ಸಾರುವಂತೆ ಹತ್ತಿರತ್ತಿರ 2500 ಮಕ್ಕಳು ಸಾವೀಗೀಡಾಗಿದ್ದಾರೆ. ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಚಿಕ್ಕ ಮಕ್ಕಳ, ಹದಿನಾರು ವರುಷದ ಹುಡುಗನ ಚಿತ್ರ ‘ಕರ್ನಾಟಕದಲ್ಲಿ ಸೊಮಾಲಿಯ’ ಎಂಬ ಟಿ.ವಿ9ನ ಬೈಲೈನನ್ನು ಸಮರ್ಥಿಸುವಂತೆ ಮನಕಲಕುವಂತಿತ್ತು. ಪೌಷ್ಟಿಕ ಆಹಾರ ವಿತರಿಸುವ ದೃಷ್ಟಿಯಿಂದ ಅಂಗನವಾಡಿಗಳ ಮೂಲಕ ಪೂರೈಸುತ್ತಿರುವ ಆಹಾರ ಎಲ್ಲಿಗೆ ಹೋಗುತ್ತಿದೆ? ಪೂರೈಕೆಯಾಗುತ್ತಿರುವ ಆಹಾರವೇ ಅಪೌಷ್ಟಿಕವಾದದ್ದು ಎಂಬುದು ಲೋಕಾಯುಕ್ತ ವರದಿಯೊಂದರ ಸಾರ. ಪೌಷ್ಟಿಕಾಂಶದ ಕೊರತೆಯ ಜೊತೆಗೆ ಆ ಭಾಗದಲ್ಲಿ ದೊರೆಯುವ ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಫ್ಲೋರೈಡ್ ಕೂಡ ಮಕ್ಕಳ ಈ ನರಳುವಿಕೆಗೆ ಕಾರಣವಾಗಿದೆಯಾ? ಬಡತನ ರೇಖೆಗೆ ಸಂಬಂಧಪಟ್ಟಂತೆ ಕೇಂದ್ರ ಯೋಜನಾ ಆಯೋಗ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ದೆಹಲಿ ಮುಂಬಯಿಯಂಥ ಶಹರುಗಳಲ್ಲಿ ಐದು ಜನರ ಕುಟುಂಬ ದಿನವೊಂದಕ್ಕೆ ಮೂವತ್ತೈದು ರುಪಾಯಿ ಸಂಪಾದಿಸಿದರೆ ಅಂಥವರನ್ನು ಬಡತನ ರೇಖೆಯಿಂದ ಹೊರಗಿಡಬಹುದು ಎಂದು ತಿಳಿಸಿದೆ. ತೆಂಡೂಲ್ಕರ್ ಸಮಿತಿಯ ಶಿಫಾರಸ್ಸನ್ನು ತನ್ನ ಪ್ರಮಾಣ ಪತ್ರಕ್ಕೆ ಪೂರಕವಾಗಿ ಬಳಸಿದೆ. ನೆನಪಿಡಿ 31 ರುಪಾಯಿ ಪ್ರತಿದಿನ!! ನಗರಗಳ ಅಂಗಡಿಗಳಲ್ಲಿ ಒಂದು ಕೆ.ಜಿ ಅಕ್ಕಿಯೂ ತರಲೂ ಕಷ್ಟವಾಗುವಷ್ಟು ಹಣವದು. ಇದು ವಾಸ್ತವಕ್ಕೆ ದೂರವಾದ ಪ್ರಮಾಣ ಪತ್ರವಲ್ಲವಾ? ಅಂಕಿ ಸಂಖ್ಯೆಗಳಿಗೆ ಹೆಚ್ಚು ಒತ್ತು ಕೊಡುವ ಸರಕಾರದ ನಾಟಕದ ಭಾಗವಾ? ಈ ಪ್ರಮಾಣ ಪತ್ರದ ಪ್ರಕಾರ ಬಹಳಷ್ಟು ಜನರನ್ನು ಬಡತನ ರೇಖೆಗಿಂತ ಹೊರಗಿಟ್ಟು ‘ಬಡವರ ಸಂಖ್ಯೆಯನ್ನು ಕಡಿತಗೊಳಿಸಿ, ಬಡವರಿಗೆ ನೀಡಬೇಕಾದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುವ ಹುನ್ನಾರವಾ? Email ThisBlogThis!Share to TwitterShare to FacebookShare to Pinterest Labels: mainstream media, media, tv 9 kannada, ಪ್ರಸ್ತುತ 1 comment: Anonymous 23/9/11 1:50 PM ಚಿಂತನೆಗೆ ಹಚ್ಚುವಂತಿದೆ. ನಮ್ಮಲ್ಲಿ ಇಂಥ ವಿಷಯಗಳು ಇನ್ನೂ ತಲ್ಲಣ ಉಂಟುಮಾಡದಂಥ ಸಾಮಾಜಿಕ ವಿದ್ಯಮಾನಗಳಾಗಿ ಏಕೆ ಚರ್ಚೆಯಾಗುತ್ತಿಲ್ಲ? ನಮ್ಮ ಸಂವೇದನೆಗಳ ಆದ್ಯತೆಗಳು ಬದಲಾಗುತ್ತಿವೆಯೇ?
ಕುಡಿಯುವ ನೀರು ಪೂರೈಸುವ ಅತ್ಯಂತ ಹಳೆಯ ಕಳಸಾ – ಬಂಡೂರಿ ಯೋಜನೆಗೆ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಪರಿಸರ ಒಪ್ಪಿಗೆ ನೀಡಿದೆ. ಕಳಸಾ, ಬಂಡೂರಿ, ಹಳತಾರಾ ಹಳ್ಳಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಮೂಲಕ ಧಾರವಾಡ ನಗರ ಮತ್ತು ಬೆಳಗಾವಿಯ ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಯೋಜನೆಗೆ ಕೊನೆಗೂ ಷರತ್ತುಬದ್ಧ ಒಪ್ಪಿಗೆ ದೊರೆತಿದೆ. ಹೆಚ್ಚು ಓದಿದ ಸ್ಟೋರಿಗಳು KGF ಖ್ಯಾತಿಯ ಹಿರಿಯ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ರಾಜ್ಯ ರಾಜಕಾರಣದಲ್ಲಿ ಶುರುವಾಯ್ತಾ ಕುಮಾರಸ್ವಾಮಿ ಪರ್ವ..! ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ‘ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ–2006’ ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಾಗಿ ಎತ್ತಿನಹೊಳೆ ಏತ ನೀರಾವರಿ ಯೋಜನೆ ಮಾದರಿಯಲ್ಲಿ ಕಳಸಾ ಬಂಡೂರಿ ಯೋಜನೆಗೂ ಪರಿಸರ ಅನುಮತಿ ದೊರೆತಿದೆ. “On the follow up of my cabinet colleague @JoshiPrahlad, Kalasa-Banduri drinking water project in #Karnataka has been granted Environment Approval ” ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಜಾವ್ಡೇಕರ್ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರ ಗೋವಾ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದು, ಗೋವಾ ಮುಖ್ಯಮಂತ್ರಿ ಬಿಜೆಪಿ ಮುಖಂಡ ಪ್ರಮೋದ್ ಸಾವಂತ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಗೋವಾ ಫಾರ್ವಡ್ ಪಾರ್ಟಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ವಿಜಯ್ ದೇಸಾಯಿ ಅವರು ಸಿಎಂ ಸಾವಂತ್ ಅವರು ಗೋವಾ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಕುಡಿಯುವ ನೀರಿಗೆ ಪರದಾಡುತ್ತಿರುವ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಯ ಜನರ ನೀರಿನ ದಾಹ ನೀಗಿಸಲು ಕೈಗೊಂಡ ಯೋಜನೆಯೇ ಕಳಸಾ ಬಂಡೂರಿ ನಾಲಾ ಯೋಜನೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ನಡುವೆ ಸಾಗುವ ಮಹಾದಾಯಿ ಅಥವ ಮಾಂಡೋವಿ ನದಿಯ ಮೂಲ ಹೊಳೆಗಳೇ ಕಳಸಾ, ಬಂಡೂರಿ, ಹಳತಾರ ಆಗಿವೆ. ಕಳಸಾ ಬಂಡೂರಿ ಎಂಬ ನೀರಾವರಿ ಯೋಜನೆಯ ರಾಜಕೀಯ ನಾಟಕ ಶುರುವಾಗಿದ್ದು 2000ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ. ಮಹದಾಯಿ ನದಿಯ ಗೊಡವೆಗೆ ಹೋಗದೆ, ನಮ್ಮ ರಾಜ್ಯದಲ್ಲಿಯೇ ಹರಿಯುವ ಮಾಂಡೋವಿಯ ಉಪನದಿಗಳಾದ ಕಳಸಾ, ಬಂಡೂರಿ ನಾಲಾಗಳನ್ನು ಮಲಪ್ರಭಾ ನದಿಗೆ ತಿರುಗಿಸುವ ಚಿಂತನೆ ನಡೆಯಿತು. ಈ ನಿಟ್ಟಿನಲ್ಲಿ ಮೊದಲು ಹೆಜ್ಜೆ ಇಟ್ಟವರು ಅಂದಿನ ಜಲಸಂಪನ್ಮೂಲ ಮಂತ್ರಿಯಾಗಿದ್ದ ಎಚ್. ಕೆ. ಪಾಟೀಲ್. ಕಳಸಾ – ಬಂಡೂರಿ ಯೋಜನೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ಕೇಂದ್ರ ಜಲಸಂಪನ್ಮೂಲ ಇಲಾಖೆಯಿಂದ ‘ತಾತ್ವಿಕ ಅನುಮತಿ’ ಪಡೆಯಲಾಗಿತ್ತು. ನೀರಾವರಿಗಾಗಿ ಬವಣೆ ಪಡುತ್ತಿರುವ ರೈತರಿಗೆ ನೀರಿನ ಅವಶ್ಯಕತೆ ಇರುವಾಗ, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಹೆಸರಿನಲ್ಲಿ ಕೇಂದ್ರ ಸರಕಾರದ ಅನುಮತಿಯನ್ನು ರಾಜ್ಯ ಸರಕಾರ ಕೇಳಿತ್ತು. ಏಕೆಂದರೆ, ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಕುಡಿಯುವ ನೀರಿನ ಯೋಜನೆಗಳಿಗೆ ಯಾರ ಅನುಮತಿಯೂ ಅಗತ್ಯವಿಲ್ಲ. ಮುಖ್ಯಮಂತ್ರಿಯಾಗಿದ್ದ ಕೃಷ್ಣರವರು ಯಾವುದೋ ರಾಜಕೀಯ ಕಾರಣಕ್ಕಾಗಿ ಜಲಸಂಪನ್ಮೂಲ ಖಾತೆಯನ್ನು ಪಾಟೀಲರಿಂದ ಹಿಂತೆಗೆದುಕೊಂಡು, ಹಿರಿಯ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ನಂತರ ಈ ಯೋಜನೆ ಹಳ್ಳ ಹಿಡಿಯಿತು. ಸರಕಾರಗಳು ಬದಲಾದರೂ ಪರಿಸ್ಥಿತಿ ಸುಧಾರಿಸಲೇ ಇಲ್ಲ. ಹಿಂದಿನ ಬಿಜೆಪಿ ಸರಕಾರ ಇದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಕೆ. ಎಸ್. ಈಶ್ವರಪ್ಪ ಅವರು ಶಂಕುಸ್ಥಾಪನೆ ನಡೆಸುವ ಮೂಲಕ ವಿವಾದ ಸೃಷ್ಟಿಸಿದರು. ಈ ಯೋಜನೆಯನ್ನು ಕೈಗೊಂಡಿದ್ದು ರೈತರಿಗಾಗಿ ಅಲ್ಲ. ಆದರೆ, ರೈತ ಸಂಘಟನೆಗಳು ಹಲವಾರು ವರ್ಷಗಳಿಂದ ಈ ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆಸುತ್ತಲೇ ಇದ್ದಾರೆ. ಪರಿಸರ ಅನುಮತಿ ನೀಡಿರುವ ಟ್ವೀಟ್ ಮಾಡಿದಾಗಲು ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಕಳಾ ಬಂಡೂರಿ ಯೋಜನೆ ಹುಬ್ಬಳ್ಳಿ-ಧಾರವಾಡ ಮತ್ತು ಸುತ್ತಮುತ್ತಲ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಕಾರ್ಯಕ್ರಮ ಎಂದು ಯಾವ ಸರಕಾರವೂ ರೈತರಿಗೆ ತಿಳಿಸಿಲ್ಲ. ಮಹಾದಾಯಿ ಜಲ ನ್ಯಾಯಾಧಿಕರಣದ ಮುಂದೆಯೂ ರೈತರಿಗೆ ನೀರಾವರಿಗಾಗಿ ನೀರಿನ ಅವಶ್ಯಕತೆ ಇದೆಯೆಂದು ಹೇಳಲಿಲ್ಲ. ನಾಲಾಗಳಿಂದ ತಿರುಗಿಸಲಾಗುವ ನೀರನ್ನು ಕಾಲುವೆ ಅಥವ ಪೈಪ್ ಲೈನ್ ಮೂಲಕ ಸಾಗಿಸದೆ ಮಲಪ್ರಭಾ ನದಿ ಮೂಲಕವೇ ಹರಿಯಬಿಡುವ ವಿಚಾರದಲ್ಲಿ ಯಾರೂ ಕೂಡ ಆಕ್ಷೇಪ ಮಾಡಿಲ್ಲ ಎಂಬುದು ಕೂಡ ಗಮನಾರ್ಹ. ಕಳಸಾ – ಬಂಡೂರಿ ಯೋಜನೆಯು ಹೆಚ್ಚು ಕಡಿಮೆ ಎತ್ತಿನಹೊಳೆ ಮತ್ತು ವಾರಾಹಿ ನೀರಾವರಿ ಯೋಜನೆಗಳಂತೆ ನದಿ ಮೂಲದಲ್ಲೇ ನೀರನ್ನು ಸಂಗ್ರಹಿಸಿ ಬೇರೆಡೆಗೆ ಸಾಗಿಸುವುದಾಗಿದೆ. ವಾರಾಹಿ ಯೋಜನೆಯಲ್ಲಿ ಸಂಗ್ರಹವಾದ ನೀರನ್ನು ವಿದ್ಯುತ್ ಉತ್ಪಾದನೆ ಬಳಕೆ ಮಾಡಿ ಪಶ್ಚಿಮ ದಿಕ್ಕಿಗೆ ಹರಿಯಬಿಡಲಾಗುತ್ತದೆ. ಮಾಂಡೋವಿ ಮತ್ತು ಎತ್ತಿನಹೊಳೆ ಯೋಜನೆಯಲ್ಲಿ ಯಾವುದೇ ರೀತಿಯ ವಿದ್ಯುತ್ ಉತ್ಪಾದನೆ ಅಥವ ಕೃಷಿ ನೀರಾವರಿ ಯೋಜನೆಗಳಿಲ್ಲ. ಪಶ್ಚಿಮಕ್ಕೆ ಹರಿಯುವ ನದಿ ಮೂಲದ ನೀರನ್ನು ಸಂಗ್ರಹಿಸಿ ಪೂರ್ವಕ್ಕೆ ತಿರುಗಿಸಲಾಗುತ್ತದೆ. ಎತ್ತಿನಹೊಳೆ ಏತ ನೀರಾವರಿ ಯೋಜನೆಯಲ್ಲಿ ಮೊದಲಿಗೆ ನೀರನ್ನು ಪೈಪ್ ಮೂಲಕ ಪಂಪ್ ಮಾಡಿ ನೆಲಮಂಗಲ ಸಮೀಪದಿಂದ ಕಾಲುವೆ ಮೂಲಕ ಕೋಲಾರದತ್ತ ಹರಿಸಲಾಗುತ್ತದೆ. ವಾರಾಹಿ ಯೋಜನೆ ನೀರು ಕಾಲುವೆ ಮೂಲಕ ಹರಿಯುತ್ತದೆ. ಎತ್ತಿನಹೊಳೆ ನೀರಿಗೆ ಇನ್ನೆರಡು ಮುಂಗಾರು ಕಾಯಬೇಕು ಬೆಳಗಾವಿ ಖಾನಾಪುರದ ಬಳಿ ಹುಟ್ಟಿ, ಪಶ್ಚಿಮ ಘಟ್ಟದಿಂದ ಕೆಳಗೆ ಪಶ್ಚಿಮಕ್ಕೆ ಹರಿದು, ಗೋವಾ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುವ ಮಹಾದಾಯಿ ಒಂದು ಅಂತಾರಾಜ್ಯ ನದಿ. ಒಂದು ಅಂದಾಜಿನಂತೆ ಹರಿದು ಹೋಗುವ ಸುಮಾರು 200 ಟಿಎಂಸಿಎಫ್‌ಟಿ (ಸಾವಿರ ದಶಲಕ್ಷ ಘನ ಅಡಿ) ನೀರನ್ನು ಎರಡೂ ರಾಜ್ಯಗಳು ನೀರಾವರಿಗಾಗಲೀ, ಜಲವಿದ್ಯುತ್ ಉತ್ಪಾದನೆಯಾಗಲೀ ಬಳಸದೆ, ಎಲ್ಲ ನೀರೂ ಸಮುದ್ರಕ್ಕೆ ಹರಿದುಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಉಪನದಿಗಳಾದ ಕಳಸಾ ಮತ್ತು ಬಂಡೂರಿ ನೀರನ್ನಾದರೂ ನಮ್ಮ ಕಡೆಗೆ ತಿರುಗಿಸಿ, ಮಲಪ್ರಭಾ ನದಿಯ ಮೂಲಕ ಅಣೆಕಟ್ಟೆಗೆ ಹರಿಸುವ ಮೂಲಕ ಕನಿಷ್ಟ ನೀರಾವರಿ ಸಮಸ್ಯೆಯನ್ನು ಬಗೆಹರಿಸುವ ಯೋಜನೆ ಹುಟ್ಟಿಕೊಂಡಿದ್ದು. ಯೋಜನೆಗೆ ಗೋವಾ ಸರಕಾರ ವಿರೋಧ ಮಾಡಿರುವುದನ್ನು ಪರೋಕ್ಷವಾಗಿ ಬೆಂಬಲಿಸಿದ್ದು ಅಂದು ಕೇಂದ್ರದಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ. ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ನೀತಿಯೂ ಹಿಂದಿನ ಸರ್ಕಾರಕ್ಕಿಂತ ಭಿನ್ನವಾಗಿರಲಿಲ್ಲ. ಅಂತಾರಾಜ್ಯ ನದಿ ನೀರಿನ ಹಂಚಿಕೆಗೆ ರಚಿತವಾದ ನ್ಯಾಯಾಧಿಕರಣದ ತೀರ್ಪು ಬಂದದ್ದು 2018ರಲ್ಲಿ. ಕರ್ನಾಟಕ 7.5 ಟಿಎಂಸಿಎಫ್‌ಟಿ ನೀರು ಕೇಳಿದ್ದರೆ, ನ್ಯಾಯಾಧೀಕರಣ ಕೊಟ್ಟದ್ದು ಬರಿ ನಾಲ್ಕು ಟಿಎಂಸಿಎಫ್‍ಟಿ ಮಾತ್ರ. ವಾರಾಹಿ ಯೋಜನೆಗೆ 40 ವರ್ಷ, ಹೊಲಗಳಿಗೆ ಮಾತ್ರ ನೀರಿಲ್ಲ ಕರ್ನಾಟಕದಲ್ಲಿ ಕಾಲಕಾಲಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲ ಪಕ್ಷಗಳ ಸರಕಾರಗಳೂ ಮಹಾದಾಯಿ ನೀರಿನ ಹಂಚಿಕೆ ವಿಷಯದಲ್ಲಿ ರಾಜಕೀಯ ಮಾಡಿವೆ. ಉದ್ದೇಶಪೂರ್ವಕವಾಗಿಯೋ ಎಂಬಂತೆ ಕೆಲವು ತಪ್ಪು ದಾರಿಗಳನ್ನು ಹಿಡಿಯಲಾಗಿದೆ. ಎತ್ತಿನಹೊಳೆ ಮಾದರಿಯಲ್ಲೇ ಈ ಮೂರು ಹಳ್ಳಗಳಿಗೆ ಎಲ್ಲ ಸ್ಥಳಗಳಲ್ಲಿ ಆಣೆಕಟ್ಟು ಕಟ್ಟಬೇಕು ಮತ್ತು ಅವುಗಳನ್ನು ಒಂದಕ್ಕೊಂದು ಜೋಡಿಸುವ ಕಾಲುವೆ ಕಟ್ಟಬೇಕು. ಮೂರನೆಯದಾಗಿ, ಇವೆಲ್ಲವುಗಳಿಗೆ ಸುಮಾರು 500 ಹೆಕ್ಟೇರ್ ಅರಣ್ಯ ಪ್ರದೇಶ (ಅದರಲ್ಲಿ 400 ಹೆಕ್ಟೇರ್ ಮುಳುಗುತ್ತದೆ) ಒಳಗೊಂಡ 730 ಹೆಕ್ಟೇರ್ ಭೂಮಿ ಬೇಕು. ಆದರೆ, ಇದುವರೆಗೆ ಆದ ವಿಳಂಬದ ಪರಿಣಾಮವಾಗಿ, 2013ರಲ್ಲಿ ವೆಚ್ಚವನ್ನು ಸುಮಾರು ಎಂಟು ನೂರು ಕೋಟಿ ಎಂದು ಅಂದಾಜು ಮಾಡಿದ್ದರೆ, ಈಗ 2,000 ಕೋಟಿ ರೂಪಾಯಿಗಿಂತ ಹೆಚ್ಚಾಗುವ ಸಂಭವವಿದೆ. ಇದೀಗ ಕೇಂದ್ರ ಪರಿಸರ ಇಲಾಖೆಯ ಅನುಮತಿ ದೊರೆತಿದೆ. ಅದಷ್ಟೇ ಸಾಕಾಗುವುದಿಲ್ಲ. ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನ ಆಗಬೇಕು ಮತ್ತು ಅತ್ಯವಶ್ಯ. ಮಾತ್ರವಲ್ಲದೆ,ಯೋಜನಾ ಪ್ರದೇಶವು ಭೀಮಘಡ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದ ಅಂಚಿನಲ್ಲಿ ಇರುವುದರಿಂದ ವನ್ಯಜೀವಿ ಮಂಡಳಿಯ ಅನುಮತಿ ಕೂಡ ಅಗತ್ಯವಿದೆ. ಕಳಸಾ ಮತ್ತು ಬಂಡೂರಿ ನಾಲೆ ನಿರ್ಮಿಸಿ ನದಿ ಮೂಲಕ ನೀರು ಹರಿಯಿಸಿ ಉತ್ತರ ಕರ್ನಾಟಕದ ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದು ಕೂಡ ಎಷ್ಟು ವೈಜ್ಞಾನಿಕವಾಗಿದೆ ಎಂಬ ಬಗ್ಗೆ ಖಾತರಿ ಇಲ್ಲ. ಆದರೂ, ಈಗ ಕರ್ನಾಟಕ ಮತ್ತು ಗೋವಾ ರಾಜ್ಯ ಹಾಗೂ ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರ ನಡೆಸುತ್ತಿರುವುದರಿಂದ ತಕ್ಷಣ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದತ್ತ ಸರಕಾರಗಳು ಗಮನ ಹರಿಸಲಿ.
ಅಕ್ಟೋಬರ್ 24ರಂದು ಹೊರಬಿದ್ದಿದ್ದ ವಿಧಾನಸಭಾ ಚುನಾವಣೆ ಫಲಿತಾಂಶಗಳಲ್ಲಿ ಮಹಾರಾಷ್ಟ್ರದ ಮತದಾರರು ಬಿಜೆಪಿ-ಶಿವಸೇನೆಯ ಚುನಾವಣಾ ಪೂರ್ವ ಮೈತ್ರಿಗೆ ನಿಚ್ಚಳ ಬಹುಮತ ನೀಡಿದ್ದರು. ಹೆಚ್ಚು ಓದಿದ ಸ್ಟೋರಿಗಳು KGF ಖ್ಯಾತಿಯ ಹಿರಿಯ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ ಆಪ್‌ ಆದರೆ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಚುನಾವಣೆಗೆ ಮುನ್ನವೇ ಬಿರುಕುಗಳಿದ್ದವು. 130-140 ಸ್ಥಾನಗಳನ್ನು ನಿರೀಕ್ಷಿಸಿದ್ದ ಬಿಜೆಪಿ 105ರ ಹೊಸ್ತಿಲಲ್ಲೇ ದಣಿದು ನಿಂತಿತು. ಬಿಜೆಪಿಯಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಶಿವಸೇನೆ ಇದೇ ತಕ್ಕ ಸಮಯವೆಂದು ಭಾವಿಸಿ ಎರಗಿತು. ಪ್ರತೀಕಾರಕ್ಕೆ ಮುಂದಾಯಿತು. ಬಾಲ ನಾಯಿಯನ್ನು ಅಲ್ಲಾಡಿಸಲು ಹೊರಟಿತು. 56 ಸೀಟು ಗೆದ್ದ ತಾನು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ 105 ಸೀಟು ಗೆದ್ದ ಬಿಜೆಪಿಯನ್ನು ಜಬರಿಸಿತು. ಬಿಜೆಪಿ ಸೊಪ್ಪು ಹಾಕಲಿಲ್ಲ. ಪ್ರತಿಷ್ಠೆ- ಪ್ರತೀಕಾರದಲ್ಲಿ ಕುರುಡಾದ ಎರಡೂ ಪಕ್ಷಗಳು ತಮಗೆ ಸಿಕ್ಕಿದ್ದ ನಿಚ್ಚಳ ಜನಾದೇಶವನ್ನು ಸದ್ಯಕ್ಕಾದರೂ ವ್ಯರ್ಥಗೊಳಿಸಿವೆ. ಇಬ್ಬರ ಜಗಳದ ಲಾಭವನ್ನು ಪ್ರತಿಪಕ್ಷಗಳು ಪಡೆಯುವ ವಾಸನೆ ಹೊಡೆಯುತ್ತಿದ್ದಂತೆ ಮೋದಿ-ಅಮಿತ್ ಶಾ ಜೋಡಿ ತಡವಿಲ್ಲದೆ ರಾಷ್ಟ್ರಪತಿ ಆಡಳಿತ ಹೇರಿದೆ. ರಾಜಕೀಯ ನಾಟಕಗಳಿಗೆ ಇತ್ತೀಚಿನ ವರ್ಷಗಳಲ್ಲಿ ಹೆಸರಾಗಿ ಹೋಗಿರುವ ಕರ್ನಾಟಕದ ನೆರೆಯ ರಾಜ್ಯದಲ್ಲಿ ಕೂಡ ಮಹಾನಾಟಕವೊಂದು ಅನಾವರಣಗೊಂಡಿದೆ. ಈ ನಾಟಕ ಇನ್ನಷ್ಟು ಅಂಕಗಳನ್ನು ಕಂಡು ಕುಸಿಯುವುದೋ ಅಥವಾ ಅದಕ್ಕೆ ಮುನ್ನವೇ ಹೊಸದಾಗಿ ಪುನಃ ಚುನಾವಣೆಗಳಿಗೆ ದಾರಿ ಮಾಡಿಕೊಡುವುದೋ ಎಂಬುದನ್ನು ಮುಂಬರುವ ದಿನಗಳು ತಿಳಿಸಲಿವೆ. ಕಾಂಗ್ರೆಸ್- ಎನ್.ಸಿ.ಪಿ. ಕೂಡ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಬಹುಮತದಿಂದ ಭಾರೀ ದೂರವಿರುವ ಕಾಂಗ್ರೆಸ್-ಎನ್.ಸಿ.ಪಿ. ಪ್ರತಿಪಕ್ಷಗಳ ಕೆಲಸ ಮಾಡುವಂತೆ ಜನರು ಆದೇಶಿಸಿರುವುದಾಗಿ ಎನ್.ಸಿ.ಪಿ. ತಲೆಯಾಳು ಶರದ್ ಪವಾರ್ ಹೇಳಿದ್ದುಂಟು. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಸರಕಾರ ರಚಿಸುವ ಕುರಿತು ಸೇನೆ-ಎನ್.ಸಿ.ಪಿ. ಹಾಗೂ ಕಾಂಗ್ರೆಸ್ ನಡುವೆ ಮಾತುಕತೆಗಳು ಜರುಗಿವೆ. ಸೇನೆ-ಎನ್.ಸಿ.ಪಿ.-ಕಾಂಗ್ರೆಸ್ ಸರ್ಕಾರ ರಚಿಸುವುದು ಜನಾದೇಶದ ಸ್ಪಷ್ಟ ಉಲ್ಲಂಘನೆ. ಕಟ್ಟರ್ ವಾದದಲ್ಲಿ ಬಿಜೆಪಿಯೊಂದಿಗೆ ಪೈಪೋಟಿ ನಡೆಸುವಂತಹ ಶಿವಸೇನೆಯೊಂದಿಗೆ ಕಾಂಗ್ರೆಸ್ ಕೈ ಕಲೆಸುವುದು ಸೈದ್ಧಾಂತಿಕವಾಗಿ ಅಸಮರ್ಥನೀಯ. ಪರಮ ಅವಕಾಶವಾದವೇ ಸರಿ. ಜನಾದೇಶದ ಈ ನಿರ್ಲಜ್ಜ ಉಲ್ಲಂಘನೆಯನ್ನು ಮತದಾರರನ್ನು ಕೆರಳಿಸಿದರೆ ಆಶ್ಚರ್ಯವಿಲ್ಲ. ಹೊಸದಾಗಿ ಚುನಾವಣೆಗಳು ನಡೆದಾಗ ಇದರ ಲಾಭವನ್ನು ಬಿಜೆಪಿ ಬಡ್ಡಿ ಸಹಿತ ಪಡೆಯಬಹುದಾದ ಎಲ್ಲ ಸಾಧ್ಯತೆಗಳೂ ಇವೆ. ಸದಾ ದೂರುವ ಪತ್ನಿಯ ಕುರಿತು ರೋಸಿ ಹೋಗುವ ಪತಿ ಕಡೆಗೊಮ್ಮೆ ಸಹನೆ ಕಳೆದುಕೊಂಡು ಆಕೆಗೆ ಹೇಳುತ್ತಾನೆ- ‘ನನ್ನನ್ನು ನಾನೇ ಕೊಂದುಕೊಂಡರೂ ಪರವಾಗಿಲ್ಲ, ನಿನ್ನನ್ನು ವಿಧವೆಯಾಗಿಸದೆ ಬಿಡುವುದಿಲ್ಲ’. ಸುಲಭಕ್ಕೆ ಒಪ್ಪದೆ ವಾದಿಸುತ್ತಲೇ ಇರುವ ವಾದಪ್ರಿಯ ಮರಾಠೀ ಮಾಣೂಸರ ಒಂದು ವರ್ಗ ಮತ್ತು ಶಿವಸೇನೆಯ ಹಾಲಿ ಪರಿಸ್ಥಿತಿಯಿದು ಎನ್ನುತ್ತಾರೆ ಬಹುಮುಖ್ಯ ಮರಾಠೀ ದೈನಿಕಗಳಲ್ಲಿ ಒಂದೆನಿಸಿದ ‘ಲೋಕಸತ್ತಾ’ದ ಸಂಪಾದಕ ಗಿರೀಶ್ ಕುಬೇರ್. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ತನ್ನ ಹಿರಿಯ ಪಾಲುದಾರ ಬಿಜೆಪಿಯ ಅವಕಾಶವನ್ನು ಶಿವಸೇನೆ ಸದ್ಯಕ್ಕೆ ಕಸಿದುಕೊಂಡಿರಬಹುದು. ಆದರೆ ಪ್ರತಿಯಾಗಿ ತನ್ನ ಅಸ್ತಿತ್ವವನ್ನು ತಾನಾಗಿಯೇ ಸವಾಲಿಗೆ ಒಡ್ಡಿದೆ. 1980 ಮತ್ತು 1990ರ ದಶಕಗಳಲ್ಲಿ ಕಾಂಗ್ರೆಸ್ ವಿರೋಧಿ ಭಾವನೆಯು ಇತರೆ ಥರಾವರಿ ಪಕ್ಷಗಳನ್ನು ಒಟ್ಟುಗೂಡಿಸಿತ್ತು. ಇದೀಗ ಬಿಜೆಪಿ ವಿರೋಧಿ ಭಾವನೆ ಇದೇ ಕೆಲಸ ಮಾಡತೊಡಗಿದೆ. ಇತಿಹಾಸ ಮರುಕಳಿಸತೊಡಗಿದೆ ಎಂದು ಅವರು ಗುರುತಿಸಿದ್ದಾರೆ. ಶಿವಸೇನೆ ಮತ್ತು ಬಿಜೆಪಿ ಮೂರು ದಶಕಗಳ ಕಾಲ ಪರಸ್ಪರ ನಿಷ್ಠೆ ತೋರಿದವು. ದಣಿದ ಈ ಸಂಬಂಧದ ಬಿರುಕುಗಳು ಕಾಣಿಸಿಕೊಂಡದ್ದು ಇತ್ತೀಚೆಗೆ. ಈ ದಣಿವು ಮತ್ತು ಬಿರುಕಿನ ವಾಸ್ತವವನ್ನು ಗುರುತಿಸಲು ನಿರಾಕರಿಸಿದ ಬಿಜೆಪಿ ಎಲ್ಲವೂ ಸರಿ ಇದೆ ಎಂದು ತಿಪ್ಪೆ ಸಾರಿಸಿತು. ಅಧಿಕಾರದಲ್ಲಿ ಹೆಚ್ಚು ಪಾಲುದಾರಿಕೆಯ ಸೇನೆಯ ಬೇಡಿಕೆಯನ್ನು ನಿರ್ಲಕ್ಷಿಸುತ್ತಲೇ ಬಂದಿತು. ಚುನಾವಣಾ ಫಲಿತಾಂಶಗಳು ಶಕ್ತಿಗುಂದಿದ ಬಿಜೆಪಿಯನ್ನು ಪ್ರತಿಫಲಿಸಿದ್ದವು. ಅಲ್ಲಿಯವರೆಗೆ ಹತಾಶ ಸ್ಥಿತಿ ತಲುಪಿದ್ದ ಸೇನೆ ತನ್ನನ್ನು ಮೂಲೆಗೊತ್ತಿದ್ದ ಬಿಜೆಪಿಯ ವಿರುದ್ಧ ತಿರುಗಿಬಿದ್ದಿತು. ತನಗಿಂತ ಬಹುತೇಕ ದುಪ್ಪಟ್ಟು ಸದಸ್ಯಬಲ ಹೊಂದಿದ್ದ ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ತನಗೆ ಬಿಟ್ಟುಕೊಡುವಂತೆ ಸೇನೆ ಹಠ ಹಿಡಿಯಿತು. ಒಪ್ಪದ ಬಿಜೆಪಿ ತಾನು ಸರ್ಕಾರ ರಚಿಸುವುದಿಲ್ಲವೆಂದು ಹಿಂದೆ ಸರಿಯಿತು. ತನ್ನ ಸೈದ್ಧಾಂತಿಕ ವಿರೋಧಿ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಬೆಂಬಲವನ್ನು ನೆಚ್ಚಿರುವ ಸೇನೆ ಇದೀಗ ಕತ್ತಿಯಂಚಿನ ಮೇಲೆ ಹೆಜ್ಜೆ ಇರಿಸಬೇಕಾಗಿ ಬಂದಿದೆ. ಮಾತುಕತೆಗಳು ಜರುಗಿದ್ದರೂ, ಈ ಎರಡು ಪಕ್ಷಗಳು ಸೇನೆಯನ್ನು ಬೆಂಬಲಿಸುವುದು ಇನ್ನೂ ನಿಶ್ಚಿತವಿಲ್ಲ. ಈ ನಡುವೆ ಸೈದ್ಧಾಂತಿಕವಾಗಿ ಅನುಗಾಲದ ಮಿತ್ರಪಕ್ಷ ಶಿವಸೇನೆಯನ್ನು ಪರೋಕ್ಷ ಅವಹೇಳನಗಳಿಗೆ ಗುರಿ ಮಾಡಿ, ಅವಗಣಿಸಿ, ಕೆರಳಿಸಿ ಶತ್ರುವನ್ನಾಗಿ ಮಾಡಿಕೊಂಡ ತನ್ನ ತಪ್ಪನ್ನು ಬಿಜೆಪಿ ಇಂದಲ್ಲ ನಾಳೆ ಅರಿತುಕೊಳ್ಳಲೇ ಬೇಕಿದೆ. ಶತ್ರುಗಳು ಮತ್ತು ಮಿತ್ರರು ಏಕಕಾಲಕ್ಕೆ ತನ್ನನ್ನು ವಿರೋಧಿಸತೊಡಗಿರುವುದು ಯಾಕಾಗಿ ಎಂಬ ಕುರಿತು ಎಷ್ಟು ಶೀಘ್ರವಾಗಿ ಆತ್ಮಾವಲೋಕನ ಮಾಡಿಕೊಂಡರೆ ಅಷ್ಟು ತನಗೇ ಒಳ್ಳೆಯದು. ಲೋಕಸಭಾ ಚುನಾವಣೆಗಳಲ್ಲಿ ಘನ ಗೆಲುವಿನ ಪ್ರಭಾವಳಿಯ ಹೊಳಪು ಆರೇ ತಿಂಗಳಲ್ಲಿ ಮಾಸುವಂತಾಗಿದೆ. ತಾನು ಅಜೇಯ ಎಂಬುದಾಗಿ ಬೀಗುತ್ತಿದ್ದ ಬಿಜೆಪಿಯ ತಲೆ ಮೇಲೆ ಮೊಟಕಿದಂತಾಗಿದೆ. ಕಟ್ಟರ್ ವಾದಿ ಹಿಂದುತ್ವದ ಕಾರ್ಯಸೂಚಿಯ ಶಿವಸೇನೆಯ ಜೊತೆಗೆ ಕೈ ಕಲೆಸುವ ಕುರಿತು ಆರಂಭಿಕ ಹಿಂಜರಿಕೆಯಿಂದ ಕಾಂಗ್ರೆಸ್ ಹೊರಬಂದಂತೆ ತೋರುತ್ತಿದೆ. ದೇಶದ ಎರಡನೆಯ ಅತಿದೊಡ್ಡ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸುವ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂಬ ಶರದ್ ಪವಾರ್ ಒತ್ತಾಸೆ ಮತ್ತು ಮಹಾರಾಷ್ಟ್ರದಲ್ಲಿ ಚುನಾಯಿತರಾಗಿ ಬಂದಿರುವ ತನ್ನ ಶಾಸಕರು ಹೊಸ ಮೈತ್ರಿ ಸರ್ಕಾರ ಕುರಿತು ಒಲವು ಹೊಂದಿರುವುದೂ ಹಿಂಜರಿಕೆ ತೊರೆಯಲು ಕಾರಣವಾಗಿದ್ದೀತು. ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ತನ್ನ ಅತ್ಯಂತ ಹಳೆಯ ಮಿತ್ರಪಕ್ಷವಾದ ಶಿವಸೇನೆ ದೂರ ಸರಿದಿರುವ ಬೆಳವಣಿಗೆ ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ಒದಗಿರುವ ಧಕ್ಕೆಯೇ ಸರಿ. ಮೊದಲ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಪದವಿಯನ್ನು ತನಗೆ ಬಿಟ್ಟುಕೊಡಬೇಕು ಮತ್ತು ಖಾತೆಗಳನ್ನು ಸಮ ಸಮವಾಗಿ ಹಂಚಿಕೊಳ್ಳಬೇಕು ಎಂಬ ಶಿವಸೇನೆಯ ಬೇಡಿಕೆಯನ್ನು ಬಿಜೆಪಿ ಒಪ್ಪದಿದ್ದುದೇ ಉಭಯ ಪಕ್ಷಗಳ ವಿಚ್ಛೇದನಕ್ಕೆ ದಾರಿ ಮಾಡಿದೆ. ಮೇಲ್ನೋಟಕ್ಕೆ ಅಧಿಕಾರ ಹಂಚಿಕೆಯ ತಕರಾರಿನಂತೆ ತೋರಿ ಬಂದರೂ, ಆಳದಲ್ಲಿ ಬಿಜೆಪಿ ತನ್ನನ್ನು ಅವಹೇಳನ ಮಾಡಿ ನಡೆಸಿಕೊಂಡಿರುವ ವೈಖರಿ ಕುರಿತು ಶಿವಸೇನೆಯ ಅಸಮಾಧಾನವಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚಿನವರೆಗೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಫಡಣವೀಸ್ ಅವರ ‘ದುರಹಂಕಾರ’ ಮುರಿಯಲೇಬೇಕೆಂಬ ಶಿವಸೇನೆಯ ಸಂಕಲ್ಪವಿದೆ. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳ ಪೈಕಿ 105, ಬಿಜೆಪಿಯ ಪಾಲಾಗಿವೆ. ಶಿವಸೇನೆಗೆ 56, ಎನ್.ಸಿ.ಪಿ.ಗೆ 54, ಕಾಂಗ್ರೆಸ್ ಗೆ 44 ದಕ್ಕಿವೆ. ಸರ್ಕಾರ ರಚಿಸಲು ಸರಳಬಹುಮತಕ್ಕೆ ಬೇಕಿರುವ ಸದಸ್ಯಬಲ 145. ಸೇನೆ-ಎನ್.ಸಿ.ಪಿ.-ಕಾಂಗ್ರೆಸ್ ಒಟ್ಟಾದರೆ ಅವುಗಳ ಸದಸ್ಯ ಬಲ 154. ಸೇನೆ ಸರ್ಕಾರ ರಚಿಸಿದರೂ ಅದು ಬಹಳ ದಿನ ಬದುಕುವುದಿಲ್ಲ. ಮತ್ತೆ ಚುನಾವಣೆ ನಡೆದರೆ ತನಗೆ ನಿಚ್ಚಳ ಬಹುಮತ ಖಚಿತ ಎಂಬುದಾಗಿ ಬಿಜೆಪಿ ಹೊರಗೆ ಬಡಾಯಿ ಕೊಚ್ಚಿಕೊಂಡರೂ ಒಳಗೊಳಗೆ ನಿರಾಶೆ ಕಾಡಿ ಎದೆಗುಂದಿರುವುದು ಹೌದು. ಶಿವಸೇನೆಯ ಜೊತೆ ಚುನಾವಣಾ ಪೂರ್ವಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಗೆದ್ದಿದ್ದ ರಾಜ್ಯ ಕೈ ಬಿಟ್ಟಿರುವುದು ನಂಬಲಾಗದ ಆಘಾತವಾಗಿ ಪರಿಣಮಿಸಿದೆ. ಝಾರ್ಖಂಡ್ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದೆ. ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲೇ ದೆಹಲಿ ಮತ್ತು ಕಡೆಯ ತಿಂಗಳುಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಹರಿಯಾಣವನ್ನು ಸುಲಭವಾಗಿ ಗೆಲ್ಲುತ್ತೇನೆನ್ನುವ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿತು. ಜನನಾಯಕ ಜನತಾ ಪಾರ್ಟಿಯ ಊರುಗೋಲಿನಿಂದ ಸರ್ಕಾರ ರಚಿಸಬೇಕಾಯಿತು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಅದರ ಹಂಗಿಲ್ಲದೆ ತನಗೇ ಬಹುಮತ ಲಭಿಸುವುದು ಖಚಿತ ಎಂಬುದಾಗಿ ಹೊಂದಿದ್ದ ಅತಿಯಾದ ಆತ್ಮವಿಶ್ವಾಸಕ್ಕೆ ಹೊಡೆತ ಬಿತ್ತು. ಈ ಗಾಯದೆ ಮೇಲೆ ಎಳೆದ ಬರೆ ಎಂಬಂತೆ ಶಿವಸೇನೆ ದೂರ ಸರಿಯಿತು. ಈ ಅನಿರೀಕ್ಷಿತ ಹಿನ್ನಡೆಯು ಝಾರ್ಖಂಡ್, ದೆಹಲಿ ಹಾಗೂ ಬಿಹಾರ ಚುನಾವಣೆಗಳಲ್ಲಿ ತನ್ನ ಅವಕಾಶಗಳ ಮೇಲೆ ಅಡ್ಡ ಪರಿಣಾಮ ಬೀರುವ ಅಳುಕು ಬಿಜೆಪಿಯಲ್ಲಿ ಮೊಳಕೆಯೊಡೆದಿದೆ. ತಗ್ಗಿಬಗ್ಗಿ ನಡೆದುಕೊಳ್ಳುತ್ತಿದ್ದ ಮಿತ್ರಪಕ್ಷಗಳು ಎದೆ ಸೆಟೆಸಬಹುದು, ಪ್ರತಿಪಕ್ಷಗಳ ನೈತಿಕ ಸ್ಥೈರ್ಯ ಪುನಃ ಹೆಚ್ಚಬಹುದು ಎಂದು ಶಂಕಿಸಿದೆ.
ಚಂದ್ರನ ಹೊಸ ವರ್ಷವು ಸಾಂಪ್ರದಾಯಿಕ ವಿಯೆಟ್ನಾಂ ರಜಾದಿನವಾಗಿದೆ, ಕುಟುಂಬ ಸದಸ್ಯರು ಒಂದು ಸ್ನೇಹಶೀಲ ಟ್ರೇ ಅಕ್ಕಿಯ ಮೇಲೆ ಚಾಟ್ ಮಾಡಲು ಮತ್ತು ಒಟ್ಟಿಗೆ ಉತ್ತಮ ಹೊಸ ವರ್ಷವನ್ನು ಸ್ವಾಗತಿಸುವ ಸಮಯ. ಟೆಟ್ ಬಳಿಯ ದಿನಗಳಲ್ಲಿ, ಪ್ರತಿಯೊಬ್ಬರೂ ಶಾಪಿಂಗ್ ಮಾಡಲು ತಯಾರಿ ನಡೆಸುತ್ತಿದ್ದಾರೆ ಮತ್ತು ಟೆಟ್‌ಗಾಗಿ ಏನು ತಿನ್ನಬೇಕೆಂದು ಯೋಚಿಸುತ್ತಾರೆ, ಅದು ಸರಳ, ಮಾಡಲು ಸುಲಭ ಮತ್ತು ಆಕರ್ಷಕ ಮತ್ತು ವಿಚಿತ್ರವಾಗಿದೆ. ಸಾಂಪ್ರದಾಯಿಕ ಭಕ್ಷ್ಯಗಳಾದ ಬಾನ್ ಚುಂಗ್, ಸ್ಪ್ರಿಂಗ್ ರೋಲ್‌ಗಳು, ಉಪ್ಪುಸಹಿತ ಈರುಳ್ಳಿ ಇತ್ಯಾದಿಗಳ ಜೊತೆಗೆ, ಇಂದು ನೀವು ರುಚಿಕರವಾದ, ವಿಶಿಷ್ಟವಾದ ಮತ್ತು ಪ್ರಭಾವಶಾಲಿ ಭಕ್ಷ್ಯಗಳನ್ನು ತಯಾರಿಸಲು ಪರಿಚಿತ ಪದಾರ್ಥಗಳಿಂದ ಬದಲಾವಣೆಗಳನ್ನು ಮಾಡಬಹುದು. ಇಂದು, ಟೆಟ್‌ನ ಅಕ್ಕಿ ಟ್ರೇಗಾಗಿ ನಾವು 15 ರುಚಿಕರವಾದ ಭಕ್ಷ್ಯಗಳ ಮೆನುವನ್ನು ಸೂಚಿಸುತ್ತೇವೆ! 1. ಚಿಕನ್ ಪ್ಯಾಟೀಸ್ ಟೆಟ್ ರಜಾದಿನಗಳಲ್ಲಿ ಚಿಕನ್ ಫ್ರೈಡ್ ರೈಸ್ ಅನಿವಾರ್ಯ ಭಕ್ಷ್ಯವಾಗಿದೆ ನಾನು ಪರಿಚಯಿಸಲು ಬಯಸುವ ಮೊದಲ ಭಕ್ಷ್ಯವೆಂದರೆ ಚಿಕನ್ ಪ್ಯಾಟೀಸ್. ಸಾಮಾನ್ಯವಾಗಿ, ಜನರು ಹಂದಿಮಾಂಸ, ಗೋಮಾಂಸ, ಎಮ್ಮೆಗಳಿಂದ ಮಾಡಿದ ಸಾಸೇಜ್‌ಗಳನ್ನು ಮಾತ್ರ ತಿನ್ನುತ್ತಾರೆ, ಆದರೆ ಚಿಕನ್‌ನಿಂದ ಮಾಡಿದ ಹಂದಿ ರೋಲ್‌ಗಳು ಖಂಡಿತವಾಗಿಯೂ ಹೊಸದು. ಅಕ್ಕಿಯ ಟ್ರೇ ಕೋಳಿ ಮಾಂಸದ ಪರಿಮಳಯುಕ್ತ ತುಂಡುಗಳು ಮತ್ತು ಶಿಟೇಕ್ ಅಣಬೆಗಳ ವಿಶಿಷ್ಟ ಪರಿಮಳದೊಂದಿಗೆ ಅತ್ಯಂತ ಆಕರ್ಷಕವಾಗಿರುತ್ತದೆ. ಆನಂದಿಸುವಾಗ, ನೀವು ಸಿಹಿ, ಶ್ರೀಮಂತ ಪರಿಮಳವನ್ನು ಮತ್ತು ಸ್ವಲ್ಪ ಮಶ್ರೂಮ್ ಅನ್ನು ಅನುಭವಿಸುವಿರಿ. ಅಷ್ಟೇ ಅಲ್ಲ, ವೇಷ ಎಲೆಗಳಿಂದ ಚಿಕನ್ ಪ್ಯಾಟೀಸ್ ಮಾಡಿ ಎಲ್ಲರಿಗೂ ಮನರಂಜನೆ ನೀಡಬಹುದು. ಇದು ಬಾಯಲ್ಲಿ ನೀರೂರಿಸುವ ಖಾದ್ಯವಾಗಿದ್ದು, ಕೋಳಿಮಾಂಸ, ಈರುಳ್ಳಿಯೊಂದಿಗೆ ಮರದ ಕಿವಿ ಮತ್ತು ಶುದ್ಧವಾದ ಬೇ ಎಲೆಗಳ ಪರಿಪೂರ್ಣ ಮಿಶ್ರಣದಿಂದ ಆಕರ್ಷಕವಾಗಿದೆ. 2. ಡೀಪ್ ಫ್ರೈಡ್ ಕಾರ್ನ್ ಕೇಕ್ ಗರಿಗರಿಯಾದ ಕರಿದ ಕಾರ್ನ್ ಕೇಕ್ ಸುಲಭ ಮತ್ತು ಆಕರ್ಷಕವಾಗಿದೆ ಅದೇ ಖಾದ್ಯ, ಆದರೆ ಇದು ಹೆಚ್ಚು ವಿಶೇಷವಾಗಿದೆ, ಇದು ಹುರಿದ ಕಾರ್ನ್ ಕೇಕ್ ಆಗಿದೆ. ಗೋಲ್ಡನ್, ನಯವಾದ ಸ್ಪ್ರಿಂಗ್ ರೋಲ್‌ಗಳನ್ನು ನಿಮ್ಮ ಬಾಯಿಗೆ ಹಾಕಿಕೊಂಡ ತಕ್ಷಣ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುವಿರಿ. ಅವು ವಿಶಿಷ್ಟವಾದ ಹುಣಸೆಹಣ್ಣು ಅಥವಾ ಟೊಮೆಟೊ ಸಾಸ್‌ನೊಂದಿಗೆ ಸಂಯೋಜಿಸಲ್ಪಟ್ಟ ಅಂಟು ಕಾರ್ನ್ ಕರ್ನಲ್‌ಗಳ ಸಿಹಿ, ಜಿಡ್ಡಿನ ರುಚಿಯನ್ನು ಹೊಂದಿರುತ್ತವೆ. ಈ ಖಾದ್ಯವನ್ನು ಮಾಡುವ ವಿಧಾನವು ಇತರ ಸಾಮಾನ್ಯ ರೋಲ್‌ಗಳಂತೆ ತುಂಬಾ ಸರಳವಾಗಿದೆ, ಎಲ್ಲಾ ಪದಾರ್ಥಗಳನ್ನು ಶುದ್ಧೀಕರಿಸಲಾಗುತ್ತದೆ, ಕತ್ತರಿಸಿದ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಸೇರಿಸಲಾಗುತ್ತದೆ, ನಂತರ ಗೋಲ್ಡನ್ ಆಗುವವರೆಗೆ ಹುರಿಯಲಾಗುತ್ತದೆ. 3. ಮೀನು ಸಾಸ್ನೊಂದಿಗೆ ಫ್ರೈಡ್ ಚಿಕನ್ ಮೀನು ಸಾಸ್ನೊಂದಿಗೆ ರುಚಿಕರವಾದ ಹುರಿದ ಚಿಕನ್ ರೆಕ್ಕೆಗಳು ಹಿಂದಿನಿಂದ ಇಲ್ಲಿಯವರೆಗೆ ಟೆಟ್ ರಜೆಯಲ್ಲಿ ಅಕ್ಕಿ ತಟ್ಟೆಯಲ್ಲಿ ಕೋಳಿ ಭಕ್ಷ್ಯಗಳ ಕೊರತೆಯಿಲ್ಲ. ಆದರೆ ಬೇಯಿಸಿದ ಚಿಕನ್, ಫ್ರೈಡ್ ಚಿಕನ್ ಮುಂತಾದ ಪರಿಚಿತ ಭಕ್ಷ್ಯಗಳ ಜೊತೆಗೆ, ನೀವು ಮೀನು ಸಾಸ್ನೊಂದಿಗೆ ಹುರಿದ ಚಿಕನ್ನೊಂದಿಗೆ ನಿಮ್ಮ ರುಚಿಯನ್ನು ರಿಫ್ರೆಶ್ ಮಾಡಬಹುದು. ಗೋಲ್ಡನ್, ಪರಿಮಳಯುಕ್ತ ಫ್ರೈಡ್ ಚಿಕನ್ ಪ್ಲೇಟ್ ಅನ್ನದ ಟ್ರೇ ಅನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ. ತಯಾರಿ ತುಂಬಾ ಸುಲಭ ಮತ್ತು ತ್ವರಿತವಾಗಿದೆ. ನೀವು ಮುಖ್ಯ ಘಟಕಾಂಶವೆಂದರೆ ಕೋಳಿ ರೆಕ್ಕೆಗಳು ಅಥವಾ ಚಿಕನ್ ತೊಡೆಗಳನ್ನು ಸಕ್ಕರೆ, ಮೀನು ಸಾಸ್, ಬೆಳ್ಳುಳ್ಳಿಯಲ್ಲಿ ಮ್ಯಾರಿನೇಡ್ ಮಾಡಿ ಮತ್ತು ನಂತರ ಸೋಯಾ ಸಾಸ್ನೊಂದಿಗೆ ಹುರಿಯಲಾಗುತ್ತದೆ. ಹುರಿಯುವಾಗ, ಸುಡುವಿಕೆಯನ್ನು ತಪ್ಪಿಸಲು ನೀವು ಚೆನ್ನಾಗಿ ಬೆರೆಸಲು ಗಮನ ಕೊಡಬೇಕು. 4. ಎಳ್ಳಿನೊಂದಿಗೆ ಹುರಿದ ಹಂದಿ ಕಣ್ಸೆಳೆಯುವ ಮತ್ತು ರುಚಿಕರವಾದ ಎಳ್ಳು ಹುರಿದ ಹಂದಿಮಾಂಸ ಹಂದಿಮಾಂಸವು ಅಂತರ್ಗತವಾಗಿ ಪರಿಚಿತವಾಗಿದೆ, ಆದ್ದರಿಂದ ಆ ಸಾಂಪ್ರದಾಯಿಕ ಭಕ್ಷ್ಯಗಳನ್ನು ಹೆಚ್ಚು ಆಕರ್ಷಕವಾಗಿಸಲು ನಾವು ಸೃಜನಶೀಲರಾಗಿರಬೇಕು. ಸಾಂಪ್ರದಾಯಿಕ ಎಣ್ಣೆ ಹುರಿಯುವ ಬದಲು, ನೀವು ಎಳ್ಳು ಹುರಿಯಲು ಬದಲಾಯಿಸಬೇಕು. ಖಂಡಿತವಾಗಿಯೂ, ಗರಿಗರಿಯಾದ, ಗೋಲ್ಡನ್ ಹಂದಿಮಾಂಸದ ತುಂಡುಗಳನ್ನು ಆನಂದಿಸುವಾಗ ನೀವು ರುಚಿಕರವಾದ ರುಚಿಯನ್ನು ಹೊಗಳುವುದನ್ನು ನಿಲ್ಲಿಸುವುದಿಲ್ಲ. ಈ ಖಾದ್ಯವನ್ನು ಆನಂದಿಸುವಾಗ, ನೀವು ಅದನ್ನು ಹಸಿ ತರಕಾರಿಗಳೊಂದಿಗೆ ತಿನ್ನಲು ಮರೆಯದಿರಿ, ಇದರಿಂದ ಬೇಸರವಾಗುವುದಿಲ್ಲ ಮತ್ತು ಬೇಗನೆ ಬೇಸರಗೊಳ್ಳುವುದಿಲ್ಲ. 5. ಉಪ್ಪಿನೊಂದಿಗೆ ಹುರಿದ ಹಂದಿ ಹೊಟ್ಟೆ ಬೇಕನ್ ಅನ್ನು ಸರಳವಾಗಿ ಉಪ್ಪಿನೊಂದಿಗೆ ಹುರಿಯಲಾಗುತ್ತದೆ, ಸುವಾಸನೆಯಲ್ಲಿ ಸಮೃದ್ಧವಾಗಿದೆ ಬಾ ಕೇವಲ ರುಚಿಕರವಾದ ಮಾಂಸವಾಗಿದೆ, ಆದ್ದರಿಂದ ಇದನ್ನು ಹೆಚ್ಚಾಗಿ ಜನರು ಖರೀದಿಸಲು ಆಯ್ಕೆ ಮಾಡುತ್ತಾರೆ. ಮೇಲೆ ತಿಳಿಸಿದಂತೆ ಬ್ರೈಸ್ಡ್ ಹಂದಿ ಹೊಟ್ಟೆ, ಗರಿಗರಿಯಾದ ಹುರಿದ ಅಥವಾ ಎಳ್ಳಿನೊಂದಿಗೆ ಹುರಿದ ಜೊತೆಗೆ, ನೀವು ಉಪ್ಪು ಹುರಿದ ಕಲ್ಪನೆಯನ್ನು ಪ್ರಯತ್ನಿಸಬಹುದು. ಉಪ್ಪಿನೊಂದಿಗೆ ಸುಟ್ಟ ಹಂದಿ ಹೊಟ್ಟೆಯು ಲೆಮೊನ್ಗ್ರಾಸ್ ಮತ್ತು ಮೆಣಸಿನಕಾಯಿಗೆ ಬಲವಾದ ಪರಿಮಳವನ್ನು ಮತ್ತು ಆಕರ್ಷಕ ಪರಿಮಳವನ್ನು ಹೊಂದಿರುತ್ತದೆ. ಮಾಂಸವು ತುಂಬಾ ಉಪ್ಪಾಗದಂತೆ ಎಚ್ಚರಿಕೆಯಿಂದ ಉಪ್ಪಿನೊಂದಿಗೆ ಮಸಾಲೆ ಹಾಕಲು ಮರೆಯದಿರಿ. ಈ ಖಾದ್ಯದ ವಿಚಿತ್ರ ರುಚಿ ನಿಮ್ಮನ್ನು ಅಥವಾ ನಿಮ್ಮ ಅತಿಥಿಗಳನ್ನು ನಿರಾಶೆಗೊಳಿಸುವುದಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ. 6. ಹುರಿದ ಸ್ಪ್ರಿಂಗ್ ರೋಲ್ಗಳು ಫ್ರೈಡ್ ಸ್ಪ್ರಿಂಗ್ ರೋಲ್‌ಗಳು ಸಾಂಪ್ರದಾಯಿಕ ಖಾದ್ಯವಾಗಿದ್ದು, ಹೊಸ ವರ್ಷದ ದಿನದಂದು ಅತಿಥಿಗಳಿಗೆ ಊಟಕ್ಕೆ ಇರುವುದಿಲ್ಲ. ವಿವಿಧ ಪದಾರ್ಥಗಳನ್ನು ಬಳಸುವುದರ ಮೂಲಕ, ನೀವು ಸರಳವಾದ ಸ್ಪ್ರಿಂಗ್ ರೋಲ್ಗಳನ್ನು ಉತ್ಕೃಷ್ಟ ಮತ್ತು ಹೆಚ್ಚು ರುಚಿಕರವಾಗಿ ಮಾಡಬಹುದು. ಉದಾಹರಣೆಗೆ, ಕಡಲಕಳೆ ಸ್ಪ್ರಿಂಗ್ ರೋಲ್ಗಳು ಹಂದಿಮಾಂಸವನ್ನು ಹೊಂದಿಲ್ಲ ಆದರೆ ಪ್ರಭಾವಶಾಲಿ ರುಚಿಯನ್ನು ಹೊಂದಿರುತ್ತವೆ. ನಿಮ್ಮ ಬಾಯಿಯಲ್ಲಿ ನೀವು ಸ್ಪ್ರಿಂಗ್ ರೋಲ್ಗಳನ್ನು ಹಾಕಿದಾಗ, ನೀವು ತಕ್ಷಣವೇ ಹೊರಗಿನ ಶೆಲ್ನ ಕುರುಕುತನವನ್ನು ಅನುಭವಿಸುವಿರಿ ಮತ್ತು ನಂತರ ಕ್ರಮೇಣ ತುಂಬುವಿಕೆಗೆ ಮೃದುವಾಗುತ್ತದೆ. ಖಾದ್ಯವನ್ನು ಸೋಯಾ ಸಾಸ್, ಕಿಮ್ಚಿ ಮತ್ತು ಶುಂಠಿಯಿಂದ ತಯಾರಿಸಿದ ವಿಶೇಷವಾದ ಸಾಸ್‌ನೊಂದಿಗೆ ಬಡಿಸಲಾಗುತ್ತದೆ. ಖಂಡಿತವಾಗಿ, ಸಾಸ್‌ನ ಹುಳಿ ರುಚಿಯೊಂದಿಗೆ ಸಂಯೋಜಿಸಲ್ಪಟ್ಟ ಕಡಲಕಳೆಗಳ ತಂಪಾದ ರುಚಿಯನ್ನು ನೀವು ಮರೆಯುವುದಿಲ್ಲ. ಗರಿಗರಿಯಾದ ಹುರಿದ ಸಮುದ್ರಾಹಾರ ಸ್ಪ್ರಿಂಗ್ ರೋಲ್ಗಳು, ರುಚಿಕರವಾದ ರುಚಿಯನ್ನು ವಿರೋಧಿಸುವುದು ಕಷ್ಟ ಹುರಿದ ಸಮುದ್ರಾಹಾರ ಸ್ಪ್ರಿಂಗ್ ರೋಲ್ಗಳು ಹೆಚ್ಚು ವಿಭಿನ್ನವಾಗಿವೆ, ಅವುಗಳು ನೋಟದಲ್ಲಿ ಸುಂದರವಾಗಿರುವುದಿಲ್ಲ ಆದರೆ ರುಚಿಯಲ್ಲಿ ಅತ್ಯಂತ ಆಕರ್ಷಕವಾಗಿವೆ. ಮೃದುವಾದ ಮತ್ತು ಗರಿಗರಿಯಾದ ಹಿಟ್ಟಿನಲ್ಲಿ ಮಿಶ್ರಿತ ವಿಶಿಷ್ಟವಾದ ಸಮುದ್ರಾಹಾರದ ತುಂಬುವಿಕೆಯೊಂದಿಗೆ ಗೋಲ್ಡನ್, ಗರಿಗರಿಯಾದ ಸ್ಪ್ರಿಂಗ್ ರೋಲ್ಗಳನ್ನು ವಿರೋಧಿಸಲು ನೀವು ಕಷ್ಟಪಡುತ್ತೀರಿ. ಸಂಸ್ಕರಣಾ ವಿಧಾನ ಮತ್ತು ಪದಾರ್ಥಗಳು ಸಾಮಾನ್ಯ ಸ್ಪ್ರಿಂಗ್ ರೋಲ್‌ಗಳಂತೆಯೇ ಇರುವುದಿಲ್ಲ. ಭಕ್ಷ್ಯವನ್ನು ರುಚಿಕರವಾಗಿ ಮಾಡಲು, ನೀವು ಹೆಚ್ಚು ಹಿಟ್ಟು ಮತ್ತು ಬ್ರೆಡ್ ತುಂಡುಗಳನ್ನು ತಯಾರಿಸಬೇಕು. ರೋಲ್ಡ್ ಕ್ರಸ್ಟ್ನೊಂದಿಗೆ ಡೀಪ್-ಫ್ರೈಡ್ ಸೀಫುಡ್ ಸ್ಪ್ರಿಂಗ್ ರೋಲ್ಗಳನ್ನು ಗೋಮಾಂಸ ಮತ್ತು ಹಸಿರು ಹುರುಳಿ ಅಕ್ಕಿ ಕಾಗದದಿಂದ ತಯಾರಿಸಲಾಗುತ್ತದೆ. ಹೆಚ್ಚುವರಿಯಾಗಿ, ನಿಮ್ಮ ಟೆಟ್ ಟ್ರೇ ಮಾಂಸದಿಂದ ತಯಾರಿಸಿದ ಅನೇಕ ಸ್ಟಿರ್-ಫ್ರೈಡ್ ಭಕ್ಷ್ಯಗಳನ್ನು ಹೊಂದಿದ್ದರೆ, ಊಟವನ್ನು ಹೆಚ್ಚು ಮಿತವ್ಯಯ ಮತ್ತು ಕಡಿಮೆ ನೀರಸ ಮಾಡಲು ನೀವು ಸಸ್ಯಾಹಾರಿ ಸ್ಪ್ರಿಂಗ್ ರೋಲ್ಗಳನ್ನು ಸೇರಿಸಬಹುದು. ಸಸ್ಯಾಹಾರಿ ಸ್ಪ್ರಿಂಗ್ ರೋಲ್ ಸಂಸ್ಕರಣೆಯ ಹಲವು ವಿಧಾನಗಳನ್ನು ಹೊಂದಿರುವ ಮತ್ತು ವಿವಿಧ ಪದಾರ್ಥಗಳನ್ನು ಹೊಂದಿರುವ ಭಕ್ಷ್ಯವಾಗಿದೆ. ಆದರೆ ಮುಖ್ಯ ಪದಾರ್ಥಗಳು ತರಕಾರಿಗಳು, ನೈಸರ್ಗಿಕ ತಂಪಾದ ರುಚಿಯನ್ನು ಹೊಂದಿರುವ ಅಣಬೆಗಳು ಅಕ್ಕಿ ಕಾಗದದ ಹೊರಪದರದಲ್ಲಿ ಅಥವಾ ಮಧ್ಯಮ ಅಗಿಯೊಂದಿಗೆ ಅಕ್ಕಿ ಕಾಗದದಲ್ಲಿ ಸುತ್ತುತ್ತವೆ. 7. ಹಸಿರು ಮೆಣಸಿನೊಂದಿಗೆ ಗೋಮಾಂಸ ಹಸಿರು ಮೆಣಸಿನಕಾಯಿಯೊಂದಿಗೆ ಸುಟ್ಟ ಗೋಮಾಂಸವು ಸರಳವಾದ ಸ್ಟಿರ್-ಫ್ರೈ ಭಕ್ಷ್ಯವಾಗಿದೆ, ಆದರೆ ಪದಾರ್ಥಗಳು ಮತ್ತು ಮಸಾಲೆಗಳ ಕೌಶಲ್ಯಪೂರ್ಣ ಸಂಯೋಜನೆಯೊಂದಿಗೆ, ಇದು ಟೆಟ್ ಊಟದಲ್ಲಿ ವಿಚಿತ್ರವಾಗಿ ರುಚಿಕರವಾಗಿದೆ. ಭಕ್ಷ್ಯವು ಹಸಿರು ಮೆಣಸಿನಕಾಯಿಯ ಪ್ಯಾಂಗೊಲಿನ್ ಮಸಾಲೆಯೊಂದಿಗೆ ಬೆರೆಸಿದ ಗೋಮಾಂಸದ ಶ್ರೀಮಂತ ಮಾಧುರ್ಯವನ್ನು ತರುತ್ತದೆ. ಇದರ ಜೊತೆಗೆ ಬೇಬಿ ಕಾರ್ನ್, ಮಶ್ರೂಮ್, ಬ್ರೊಕೋಲಿ, ಆವಕಾಡೊ, ಬೆಳ್ಳುಳ್ಳಿ ಮತ್ತು ಸ್ವಲ್ಪ ರೆಡ್ ವೈನ್‌ನೊಂದಿಗೆ ಸಾಟ್ ಮಾಡುವ ಮೂಲಕ ನೀವು ಭಕ್ಷ್ಯದ ರುಚಿಯನ್ನು ಹೆಚ್ಚಿಸಬಹುದು. 8. ಸಿಹಿ ಮತ್ತು ಹುಳಿ ಗೋಮಾಂಸ ಸ್ನಾಯುರಜ್ಜು ಸಿಹಿ ಮತ್ತು ಹುಳಿ ಗೋಮಾಂಸ ಸ್ನಾಯುರಜ್ಜು – ಕುರುಕುಲಾದ, ಸಿಹಿ ಮತ್ತು ಹುಳಿ ಗೋಮಾಂಸದಿಂದ ತಯಾರಿಸಿದ ಭಕ್ಷ್ಯಗಳು ಇನ್ನು ಮುಂದೆ ವಿಚಿತ್ರವಾಗಿಲ್ಲ, ಆದರೆ ಸಿಹಿ ಮತ್ತು ಹುಳಿ ಗೋಮಾಂಸ ಸ್ನಾಯುರಜ್ಜು ಭಕ್ಷ್ಯವು ಟೆಟ್ ಮೆನುಗೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಜಿಗುಟಾದ, ಹುರಿದ ಮತ್ತು ಜಿಡ್ಡಿನ ಭಕ್ಷ್ಯಗಳೊಂದಿಗೆ ಸಮತೋಲನ ಮಾಡಲು ಭಕ್ಷ್ಯವು ನಿಮಗೆ ಸಹಾಯ ಮಾಡುತ್ತದೆ. ನಾಲಿಗೆಯ ತುದಿಯಲ್ಲಿ ಸ್ವಲ್ಪ ಹುಳಿ, ಸಿಹಿ ಮತ್ತು ಮಸಾಲೆಯುಕ್ತವಾಗಿರುವ ಈ ಖಾದ್ಯದ ವಿಶಿಷ್ಟವಾದ ಸುವಾಸನೆಯೊಂದಿಗೆ ನೀವು ಖಂಡಿತವಾಗಿಯೂ ಪ್ರಭಾವಿತರಾಗುತ್ತೀರಿ, ಏಕೆಂದರೆ ಗೋಮಾಂಸ ಸ್ನಾಯುರಜ್ಜು ಮಸಾಲೆ ಮತ್ತು ಗರಿಗರಿಯಾದ ಕುರುಕುಲಾದ ವಿನ್ಯಾಸಕ್ಕೆ ಧನ್ಯವಾದಗಳು. ಎಲ್ಲವನ್ನೂ ಸಂಯೋಜಿಸಲಾಗಿದೆ, ಎದುರಿಸಲಾಗದ ರುಚಿಕರತೆಯನ್ನು ರಚಿಸಲು ಸಂಪೂರ್ಣವಾಗಿ ಮಿಶ್ರಣವಾಗಿದೆ. 9. ಗೋಡಂಬಿಯೊಂದಿಗೆ ಹುರಿದ ಸೀಗಡಿ ಗೋಡಂಬಿಯೊಂದಿಗೆ ಬೆರೆಸಿ ಹುರಿದ ಸೀಗಡಿ ಟೆಟ್ ರಜಾದಿನಗಳಲ್ಲಿ ರುಚಿಕರವಾದ ಭಕ್ಷ್ಯವಾಗಿದೆ ನೀವು ಆವಿಯಲ್ಲಿ ಬೇಯಿಸಿದ ಸೀಗಡಿ, ಡೀಪ್-ಫ್ರೈಡ್ ಸೀಗಡಿ ಇತ್ಯಾದಿಗಳೊಂದಿಗೆ ತುಂಬಾ ಪರಿಚಿತರಾಗಿದ್ದರೆ, ಅಕ್ಕಿಯ ಟೆಟ್ ಟ್ರೇಗಾಗಿ ಗೋಡಂಬಿಯೊಂದಿಗೆ ಹುರಿದ ಸೀಗಡಿಯನ್ನು ಪ್ರಯತ್ನಿಸಿ. ಪದಾರ್ಥಗಳನ್ನು ಹುಡುಕುವುದು ಸುಲಭ ಏಕೆಂದರೆ ಅವೆಲ್ಲವೂ ಪರಸ್ಪರ ಹತ್ತಿರದಲ್ಲಿದೆ, ಅಂದರೆ ಸೀಗಡಿ, ಗೋಡಂಬಿ, ಹೂಕೋಸು, ಈರುಳ್ಳಿ, ಕ್ಯಾರೆಟ್, ಬ್ರೌನ್ ರೈಸ್, ಬೆಳ್ಳುಳ್ಳಿ, ಮಸಾಲೆಗಳು ಇತ್ಯಾದಿ. ಇತರ ಹುರಿಯುವ ಭಕ್ಷ್ಯಗಳಲ್ಲಿ, ಪದಾರ್ಥಗಳನ್ನು ತಯಾರಿಸಿದ ನಂತರ, ನೀವು ಸೀಗಡಿಯನ್ನು ಮ್ಯಾರಿನೇಟ್ ಮಾಡಿ ನಂತರ ಗೋಡಂಬಿಯೊಂದಿಗೆ ಹುರಿಯಬೇಕು. ನಂತರ ತರಕಾರಿಗಳನ್ನು ಸೇರಿಸಿ ಮತ್ತು ಎಲ್ಲವನ್ನೂ ಬೇಯಿಸಿ ಮತ್ತು ಬಡಿಸಲು ಸಿದ್ಧವಾಗುವವರೆಗೆ ಹುರಿಯಿರಿ. ಆಸ್ವಾದಿಸುವಾಗ, ಸೀಗಡಿಯ ತಾಜಾ ರುಚಿ ಮತ್ತು ಇತರ ವಸ್ತುಗಳ ಜೊತೆ ಮಿಶ್ರಿತ ಗೋಡಂಬಿಯ ಶ್ರೀಮಂತಿಕೆಯನ್ನು ನೀವು ಅನುಭವಿಸುವಿರಿ. ಇದು ಪ್ರಯತ್ನಿಸಲು ಯೋಗ್ಯವಾದ ರುಚಿಕರವಾದ ಭಕ್ಷ್ಯವಾಗಿದೆ. 10. ಗರಿಗರಿಯಾದ ಹುರಿದ ಮೊಟ್ಟೆಗಳು ಗರಿಗರಿಯಾದ ಹುರಿದ ಮೊಟ್ಟೆಗಳು ಸುಂದರ ಮತ್ತು ರುಚಿಕರವಾಗಿರುತ್ತವೆ ಮೊಟ್ಟೆಗಳು ಮತ್ತು ಮಾಂಸವು ಮೂಲ ಪದಾರ್ಥಗಳಾಗಿವೆ, ನೀವು ಅವುಗಳನ್ನು ಒಟ್ಟಿಗೆ ಸೇರಿಸಿದರೆ, ನೀವು ಸಾಕಷ್ಟು ವಿಶೇಷ ಭಕ್ಷ್ಯವನ್ನು ಪಡೆಯುತ್ತೀರಿ – ಗರಿಗರಿಯಾದ ಹುರಿದ ಮೊಟ್ಟೆ. ಹೆಸರು ವಿಚಿತ್ರವಾಗಿ ತೋರುತ್ತದೆ ಆದರೆ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಮೊಟ್ಟೆಗಳನ್ನು ಗಟ್ಟಿಯಾಗಿ ಬೇಯಿಸಲಾಗುತ್ತದೆ ಮತ್ತು ಬಿಳಿಗಳನ್ನು ಬೇರ್ಪಡಿಸಲಾಗುತ್ತದೆ, ಹಳದಿ ಲೋಳೆಯನ್ನು ಮಾತ್ರ ಬಿಡಲಾಗುತ್ತದೆ. ಕೊಚ್ಚಿದ ಹಂದಿಯನ್ನು ಮೊಟ್ಟೆಯ ಹಳದಿ ಸುತ್ತಲೂ ಸುತ್ತಿ ನಂತರ ಬ್ರೆಡ್ ತುಂಡುಗಳಲ್ಲಿ ಸುತ್ತಿಕೊಳ್ಳಿ. ನಂತರ ಕೇವಲ ಗೋಲ್ಡನ್ ರವರೆಗೆ ಫ್ರೈ ಮಾಡಿ. 11. ಹುಣಿಸೆಹಣ್ಣಿನೊಂದಿಗೆ ಬೇಯಿಸಿದ ಯಂಗ್ ರಿಬ್ ಸೂಪ್ ಸಿಹಿ ಮತ್ತು ಹುಳಿ ಸಿಹಿ ಮತ್ತು ಹುಳಿ ಹುಣಸೆ ಪಕ್ಕೆಲುಬಿನ ಸೂಪ್ ಟೆಟ್ ರಜಾದಿನಗಳಲ್ಲಿ ಅಕ್ಕಿ ಟ್ರೇಗೆ ಹೈಲೈಟ್ ಅನ್ನು ರಚಿಸುತ್ತದೆ ಒಣ ಭಕ್ಷ್ಯಗಳ ಜೊತೆಗೆ, ಟೆಟ್ ರಜಾದಿನಗಳಲ್ಲಿ ಅಕ್ಕಿ ತಟ್ಟೆಯು ಸೂಪ್ಗೆ ಅನಿವಾರ್ಯವಾಗಿದೆ. ವಸಂತಕಾಲದ ಮೊದಲ ದಿನಗಳು ತಂಪಾಗಿರುತ್ತದೆ, ಮಾಂಸದ ಮಾಧುರ್ಯದೊಂದಿಗೆ ಹುಣಸೆಹಣ್ಣಿನೊಂದಿಗೆ ಬೇಯಿಸಿದ ಹಂದಿ ಪಕ್ಕೆಲುಬಿನ ಸೂಪ್ ಅನ್ನು ನೀವು ಆನಂದಿಸಬಹುದಾದರೆ, ಹುಣಸೆಹಣ್ಣಿನ ಹುಳಿ ರುಚಿ ನಿಜವಾಗಿಯೂ ಅದ್ಭುತವಾಗಿದೆ. ಸೂಪ್ ಬೇಯಿಸುವಾಗ, ಬಣ್ಣ ಮತ್ತು ರುಚಿ ಹೆಚ್ಚು ಆಕರ್ಷಕವಾಗಲು ಸ್ವಲ್ಪ ಟೊಮೆಟೊ, ನೇರಳೆ ಈರುಳ್ಳಿ ಸೇರಿಸಿ. 12. ಮಾಂಸದೊಂದಿಗೆ ಬೀಟ್ರೂಟ್ ಸೂಪ್ ಮೂಲಂಗಿ ಸೂಪ್ ಶುದ್ಧ, ಸಿಹಿ ಮಾಂಸದೊಂದಿಗೆ ಬೇಯಿಸಲಾಗುತ್ತದೆ ಅಕ್ಕಿಯ ಟ್ರೇ ಈಗಾಗಲೇ ಸಾಕಷ್ಟು ಜಿಡ್ಡಿನ ಭಕ್ಷ್ಯಗಳನ್ನು ಹೊಂದಿದ್ದರೆ, ಸೌಮ್ಯವಾದ ಪರಿಮಳವನ್ನು ಹೊಂದಿರುವ ಸೂಪ್ನ ಬೌಲ್ ಅನ್ನು ಸೇರಿಸುವುದು ಉತ್ತಮ. ಮೂಲಂಗಿ ಮತ್ತು ಮಾಂಸದಂತಹ ಕೆಲವು ಸರಳ ಪದಾರ್ಥಗಳೊಂದಿಗೆ, ನೀವು ಮೃದುವಾಗಿ ಗೋಮಾಂಸ ಸ್ತನ, ಹಂದಿ ಪಕ್ಕೆಲುಬುಗಳು ಅಥವಾ ಮೊಳಕೆ ಬಳಸಬಹುದು. ತುಂಬಾ ಗಡಿಬಿಡಿಯಿಲ್ಲ, ನೀವು ಬೇಗನೆ ಸಿಹಿ ಮತ್ತು ರುಚಿಕರವಾದ ಸೂಪ್‌ನ ಬೌಲ್ ಅನ್ನು ಹೊಂದುವಿರಿ, ಇದು ಟೆಟ್‌ನ ರುಚಿಯನ್ನು ಹೆಚ್ಚು ಉತ್ತಮಗೊಳಿಸುತ್ತದೆ. 13. ಹುರಿದ ಬ್ರೆಡ್ ಮೀನು ಗರಿಗರಿಯಾದ ಗೋಲ್ಡನ್ ಫ್ರೈಡ್ ಬ್ರೆಡ್ಡ್ ಮೀನು, ಟೆಟ್ ರೈಸ್ ಟ್ರೇಗೆ ಆಕರ್ಷಕವಾಗಿದೆ ಹೊಸ ವರ್ಷದ ಊಟವು ಮೀನುಗಳಿಂದ ತಯಾರಿಸಿದ ಭಕ್ಷ್ಯಗಳೊಂದಿಗೆ ಅನಿವಾರ್ಯವಾಗಿದೆ, ವಿಶೇಷವಾಗಿ ಡೀಪ್-ಫ್ರೈಡ್ ಬ್ರೆಡ್ಡ್ ಮೀನುಗಳು. ಈ ಖಾದ್ಯವನ್ನು ತಯಾರಿಸಲು, ಹೆಚ್ಚು ಸಮಯ ತೆಗೆದುಕೊಳ್ಳುವ ಹಂತವು ಮೀನುಗಳನ್ನು ಫಿಲ್ಟರ್ ಮಾಡುವುದು, ಉಳಿದವು ತುಂಬಾ ಸರಳವಾಗಿದೆ. ಮೀನು, ಕಚ್ಚುವಿಕೆಯ ಗಾತ್ರದ ಹೋಳುಗಳಾಗಿ ಫಿಲ್ಟರ್ ಮಾಡಿದ ನಂತರ, ಮಸಾಲೆಗಳೊಂದಿಗೆ ಮಸಾಲೆ ಹಾಕಲಾಗುತ್ತದೆ (ಸಮುದ್ರ ಪುಡಿ, ಮೆಣಸು, ಉಪ್ಪು, ಅರಿಶಿನ, ಸಾಸ್, ಬಿಳಿ ವೈನ್, …) ಮತ್ತು ನಂತರ ಹಿಟ್ಟಿನಲ್ಲಿ ಸುತ್ತಿಕೊಳ್ಳಲಾಗುತ್ತದೆ, ಮೊಟ್ಟೆಯ ಹಳದಿ ಮತ್ತು ಹುರಿದ ಹಿಟ್ಟಿನಿಂದ ಹೊಡೆಯಲಾಗುತ್ತದೆ. . ನಂತರ ಎಣ್ಣೆಯಲ್ಲಿ ಗೋಲ್ಡನ್ ಕ್ರಿಸ್ಪಿ ರವರೆಗೆ ಫ್ರೈ ಮಾಡಿ. ಖಾದ್ಯವನ್ನು ತನ್ನದೇ ಆದ ಸಾಸ್‌ನೊಂದಿಗೆ ಬಡಿಸಲಾಗುತ್ತದೆ, ಬಿಳಿ ಸಾಸ್‌ನೊಂದಿಗೆ ಕೆಂಪು ಪಲ್ಲೆಹೂವು ಸಾಸ್‌ನೊಂದಿಗೆ ಸಂಯೋಜಿಸಲಾಗಿದೆ, ಸಾಕಷ್ಟು ಮಸಾಲೆ. ಆನಂದಿಸುವಾಗ, ಎಲ್ಲವನ್ನೂ ಮಾಂತ್ರಿಕವಾಗಿ ಬೆರೆಸಿ ರುಚಿಕರವಾದ ರುಚಿಯನ್ನು ಸೃಷ್ಟಿಸುತ್ತದೆ, ಅದನ್ನು ತಿನ್ನುವ ಯಾರಾದರೂ ಮೆಚ್ಚುತ್ತಾರೆ. 14. ಹೆಪ್ಪುಗಟ್ಟಿದ ಮಾಂಸ ಹೆಪ್ಪುಗಟ್ಟಿದ ಬೇಯಿಸಿದ ಮಾಂಸವು ಟೆಟ್ ರಜಾದಿನಗಳಲ್ಲಿ ಸಾಂಪ್ರದಾಯಿಕ ಭಕ್ಷ್ಯವಾಗಿದೆ ಸಾಂಪ್ರದಾಯಿಕ ಟೆಟ್ ಅಕ್ಕಿ ತಟ್ಟೆಯಲ್ಲಿ, ಹೆಪ್ಪುಗಟ್ಟಿದ ಮಾಂಸವು ಅನಿವಾರ್ಯ ಭಕ್ಷ್ಯವಾಗಿದೆ. ಹಂದಿಮಾಂಸದಿಂದ ಹೆಪ್ಪುಗಟ್ಟಿದ ಮಾಂಸವನ್ನು ಹೊರತುಪಡಿಸಿ, ನೀವು ಸೃಜನಾತ್ಮಕವಾಗಿ ಹೆಪ್ಪುಗಟ್ಟಿದ ಕೋಳಿಗೆ ಬದಲಾಯಿಸಬಹುದು. ಮೃದುವಾದ, ತಂಪಾದ ಮಾಂಸದ ತುಂಡುಗಳೊಂದಿಗೆ ಉತ್ತರದ ಮೆಣಸಿನಕಾಯಿಯ ಪರಿಮಳವನ್ನು ಯಾರೂ ವಿರೋಧಿಸಲು ಸಾಧ್ಯವಾಗುವುದಿಲ್ಲ. ಉಪ್ಪುಸಹಿತ ಈರುಳ್ಳಿಯೊಂದಿಗೆ ಸೇವಿಸಿದರೆ ಭಕ್ಷ್ಯವು ಹೆಚ್ಚು ಪರಿಪೂರ್ಣವಾಗಿರುತ್ತದೆ. ಮಾಂಸದ ರುಚಿಕರವಾದ ರುಚಿ, ಉಪ್ಪುಸಹಿತ ಈರುಳ್ಳಿಯ ಸಿಹಿ ಮತ್ತು ಹುಳಿ ರುಚಿ ಮತ್ತು ಅದ್ದುವ ಸಾಸ್‌ನ ಶ್ರೀಮಂತ ಮತ್ತು ಮಸಾಲೆಯುಕ್ತ ರುಚಿಯನ್ನು ನೀವು ಹೇಗೆ ಮರೆಯಬಹುದು. 15. ಮನುಷ್ಯಾಕೃತಿಗಳು ಹೊಸ ವರ್ಷದ ದಿನದಂದು, ನೀವು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಮತ್ತು ಜಿಡ್ಡಿನ ಮಾಂಸದ ಭಕ್ಷ್ಯಗಳನ್ನು ತಿನ್ನುತ್ತೀರಿ, ಆದ್ದರಿಂದ ನೀವು ತರಕಾರಿಗಳಿಗೆ ತುಂಬಾ ಉತ್ಸುಕರಾಗಿರುತ್ತೀರಿ. ಆದ್ದರಿಂದ, ಮನುಷ್ಯಾಕೃತಿಗಳು ಪ್ರತಿಯೊಬ್ಬರಿಗೂ ಸಂರಕ್ಷಕನಾಗಿರುತ್ತವೆ, ಅವುಗಳು ತಂಪಾಗಿರುವುದಲ್ಲದೆ, ಸಂಸ್ಕರಣೆಯ ಹಲವು ವಿಧಾನಗಳನ್ನು ಅವಲಂಬಿಸಿ ಆಕರ್ಷಕ ಮತ್ತು ವಿಶಿಷ್ಟವಾದ ರುಚಿಯನ್ನು ಹೊಂದಿರುತ್ತವೆ. ನಾನು ಕೆಲವು ಜನಪ್ರಿಯ ಮನುಷ್ಯಾಕೃತಿಗಳನ್ನು ಸೂಚಿಸುತ್ತೇನೆ. ಮೊದಲನೆಯದು ಸೀಗಡಿ ಮತ್ತು ಮಾಂಸದೊಂದಿಗೆ ಲೋಟಸ್ ರೂಟ್ ಸಲಾಡ್. ಕಮಲದ ಬೇರಿಗೆ ಧನ್ಯವಾದಗಳು ಇದು ತುಂಬಾ ಆರೋಗ್ಯಕರ ಭಕ್ಷ್ಯವಾಗಿದೆ. ಕಮಲದ ಬೇರು, ಬೇಯಿಸಿದ ಸೀಗಡಿ, ಬೇಯಿಸಿದ ಹಂದಿಮಾಂಸ, ಕ್ಯಾರೆಟ್, ಗಿಡಮೂಲಿಕೆಗಳು (ನೇರಳೆ ಈರುಳ್ಳಿ, ಲಕ್ಸಾ ಎಲೆಗಳು, ಮೆಣಸಿನಕಾಯಿ), ಕಡಲೆಕಾಯಿಗಳು ಈ ಖಾದ್ಯವನ್ನು ತಯಾರಿಸಲು ಬೇಕಾದ ಪದಾರ್ಥಗಳಾಗಿವೆ. ಭಕ್ಷ್ಯವು ಸಿಹಿ, ತಂಪಾದ ಮತ್ತು ಗರಿಗರಿಯಾದ ರುಚಿಯನ್ನು ತರುತ್ತದೆ. ತಾಜಾ ಮಾಂಸ ಮತ್ತು ಲೋಟಸ್ ರೂಟ್ ಸಲಾಡ್ ಟೆಟ್ ರಜಾದಿನಗಳಲ್ಲಿ ಊಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮುಂದಿನದು ಬಾಳೆಹಣ್ಣಿನ ಸಲಾಡ್ – ಸರಳ ಮತ್ತು ಹೆಚ್ಚು ಹಳ್ಳಿಗಾಡಿನ ಭಕ್ಷ್ಯವಾಗಿದೆ. ಬಾಳೆಹಣ್ಣಿನ ಸಲಾಡ್ ನಿಂಬೆ, ಮೆಣಸಿನಕಾಯಿಯ ಹುಳಿ ರುಚಿ ಮತ್ತು ತರಕಾರಿಗಳ ತಾಜಾತನದೊಂದಿಗೆ ಗರಿಗರಿಯಾದ ಹಂದಿಮಾಂಸದ ಚರ್ಮವನ್ನು ಸಂಯೋಜಿಸುತ್ತದೆ. ಇದು ಹೆಚ್ಚು ಕೊಬ್ಬು ಇಲ್ಲದ ಮನುಷ್ಯಾಕೃತಿ, ಜಿಡ್ಡಿನಲ್ಲ, ಆದರೆ ವಿಶೇಷ ಮತ್ತು ವಿಚಿತ್ರ. ಇದರ ಜೊತೆಗೆ, ಒಣಗಿದ ಬೀಫ್ ಸಲಾಡ್‌ನಂತಹ ಆಕರ್ಷಕ ಮನುಷ್ಯಾಕೃತಿಗಳನ್ನು ಹೊಂದಲು ವೈವಿಧ್ಯಮಯ ಪದಾರ್ಥಗಳೊಂದಿಗೆ ಸಂಸ್ಕರಿಸುವ ಹಲವು ವಿಧಾನಗಳಿವೆ; ತಾಜಾ ಮಾವಿನ ಪಪ್ಪಾಯಿ ಜೆಲ್ಲಿ ಮೀನು ಸಲಾಡ್; ನೇರಳೆ ಎಲೆಕೋಸು, ಬಿಳಿ ಈರುಳ್ಳಿ, ಬಾಳೆ ಹೂವು, ಸೌತೆಕಾಯಿ, ಲಕ್ಸಾ ಎಲೆಗಳು, ಕಡಲೆಕಾಯಿ, ಒಣಗಿದ ದನದ, ಮೆಣಸಿನಕಾಯಿ,… ಜೊತೆಗೆ ಐದು ಬಣ್ಣದ ತರಕಾರಿ ಸಲಾಡ್; ಗರಿಗರಿಯಾದ ಮತ್ತು ಸಿಹಿ ಮತ್ತು ಹುಳಿ ಹಂದಿಯ ಇಯರ್ ಸಲಾಡ್;… ಆದ್ದರಿಂದ, ಸಾಂಪ್ರದಾಯಿಕ ಟೆಟ್ ಊಟಕ್ಕಾಗಿ 15 ರುಚಿಕರವಾದ ಭಕ್ಷ್ಯಗಳ ಮೆನುವಿನಲ್ಲಿದೆ. ಸಾಂಪ್ರದಾಯಿಕ ತಿನಿಸುಗಳೊಂದಿಗೆ ಸಂಯೋಜಿಸಲ್ಪಟ್ಟ ಈ ಭಕ್ಷ್ಯಗಳು ಊಟಕ್ಕೆ ವಿಶೇಷ ಮತ್ತು ಹೊಸತನವನ್ನು ಸೃಷ್ಟಿಸುತ್ತದೆ ಅದು ಎಲ್ಲರಿಗೂ ಆಕರ್ಷಕವಾಗಿದೆ. ಟೆಟ್ ರಜಾದಿನದ ಭಕ್ಷ್ಯಗಳಲ್ಲಿ ಸುಂದರವಾದ ಮತ್ತು ರುಚಿಕರವಾದ ಅಕ್ಕಿ ಟ್ರೇಗಳನ್ನು ಬದಲಾಯಿಸಲು ಮತ್ತು ರಚಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ ಎಂದು ಭಾವಿಸುತ್ತೇವೆ.
ZL ಸರಣಿ ಅಕ್ಷೀಯ ಫ್ಯಾನ್ ನಮ್ಮ ಕಂಪನಿಯು ಅಭಿವೃದ್ಧಿಪಡಿಸಿದ ಹವಾನಿಯಂತ್ರಣ ವ್ಯವಸ್ಥೆಗಾಗಿ ವಿಶೇಷ ಅಭಿಮಾನಿಯಾಗಿದೆ. ದೊಡ್ಡ ಹರಿವು ಮತ್ತು ಕಡಿಮೆ ಗಾಳಿಯ ಒತ್ತಡವಿರುವ ವಾತಾಯನ ಸಂದರ್ಭಗಳಲ್ಲಿ ಇದು ಸೂಕ್ತವಾಗಿದೆ. ಇದರ ದ್ರವ ಮಾದರಿಯನ್ನು CFD ಸುಧಾರಿತ ತಂತ್ರಜ್ಞಾನದಿಂದ ಹೊಂದುವಂತೆ ಮಾಡಲಾಗಿದೆ, ಇದು ಔಟ್ಪುಟ್ ಒತ್ತಡವನ್ನು ಸುಧಾರಿಸುವುದಲ್ಲದೆ, ಶಬ್ದವನ್ನು ಕಡಿಮೆ ಮಾಡುತ್ತದೆ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ. ಇದು ಶಕ್ತಿಯ ಉಳಿತಾಯ ಮತ್ತು ಕಡಿಮೆ ಶಬ್ದದ ಗುಣಲಕ್ಷಣಗಳನ್ನು ಹೊಂದಿದೆ. ಇದು ವಿಶೇಷವಾಗಿ ಎಲ್ಲಾ ರೀತಿಯ ಹವಾನಿಯಂತ್ರಣ, ಶುದ್ಧೀಕರಣ, ತಾಜಾ ಗಾಳಿ, ಎಚ್‌ವಿಎಸಿ ಬೆಂಬಲಿತ ಶೈತ್ಯೀಕರಣ ಘಟಕಗಳನ್ನು ಹೋಟೆಲ್‌ಗಳು, ಹೋಟೆಲ್‌ಗಳು, ಕಚೇರಿ ಕಟ್ಟಡಗಳು, ಮನೆಗಳು, ಶಾಲೆಗಳು, ಆಸ್ಪತ್ರೆಗಳು, ಕಾರ್ಖಾನೆಗಳು, ಗಣಿಗಳು, ಚಿತ್ರಮಂದಿರಗಳು, ವಾಹನ ಹವಾನಿಯಂತ್ರಣಗಳು ಮತ್ತು ಇತರವುಗಳಲ್ಲಿ ವ್ಯಾಪಕವಾಗಿ ಬಳಸಲಾಗಿದೆ ಜಾಗ ಈ ಸರಣಿಯ ಅಭಿಮಾನಿಗಳು ಎರಡು ವಿಭಿನ್ನ ರೀತಿಯ ಪೋಷಕ ಮೋಟಾರ್‌ಗಳನ್ನು ಹೊಂದಿದ್ದಾರೆ: ಏಕ-ಹಂತದ ಮೋಟಾರ್ ಮತ್ತು ಮೂರು-ಹಂತದ ಮೋಟಾರ್. ನಿಮ್ಮ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ವೋಲ್ಟೇಜ್ ಮತ್ತು ಆವರ್ತನಗಳೊಂದಿಗೆ ವಿಶೇಷ ಪೋಷಕ ಮೋಟಾರ್‌ಗಳನ್ನು ಸಹ ನೀವು ಗ್ರಾಹಕೀಯಗೊಳಿಸಬಹುದು. ವಿವಿಧ ದೇಶಗಳು, ಪ್ರದೇಶಗಳು ಮತ್ತು ಕ್ಷೇತ್ರಗಳಲ್ಲಿ ಅನ್ವಯಿಸಲು ಇದು ತುಂಬಾ ಅನುಕೂಲಕರವಾಗಿದೆ. ವಿಚಾರಣೆವಿವರ DWZ ಸರಣಿ ಬಾಹ್ಯ ರೋಟರ್ ಅಕ್ಷೀಯ ಹರಿವಿನ ಫ್ಯಾನ್ DWZ ಸರಣಿ ಬಾಹ್ಯ ರೋಟರ್ ಅಕ್ಷೀಯ ಹರಿವು ಅಭಿಮಾನಿ ನಾವು ಅಭಿವೃದ್ಧಿಪಡಿಸುವ ಮತ್ತು ಸ್ವಾಮ್ಯದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಆನಂದಿಸುವ ಹೊಸ ರೀತಿಯ ಅಕ್ಷೀಯ ಹರಿವಿನ ಅಭಿಮಾನಿ. ಇದರ ವೈಶಿಷ್ಟ್ಯಗಳೆಂದರೆ ಮೋಟಾರ್ ಎನ್ನುವುದು ಬಾಹ್ಯ ರೋಟರ್ ಎಲೆಕ್ಟ್ರಿಕ್ ಯಂತ್ರವಾಗಿದ್ದು ಬ್ಲೇಡ್‌ಗಳು ಮತ್ತು ಜಾಲರಿಯ ಆವರಣವನ್ನು ನೇರವಾಗಿ ಮೋಟಾರ್‌ನಲ್ಲಿ ನಿವಾರಿಸಲಾಗಿದೆ; ಮೋಟರ್ ಕಾಂಪ್ಯಾಕ್ಟ್ ರಚನೆಯನ್ನು ಹೊಂದಿದೆ ಮತ್ತು ಅನುಸ್ಥಾಪಿಸಲು ಸುಲಭವಾಗಿದೆ. ಫ್ಯಾನ್ ಬ್ಲೇಡ್ ವಿನ್ಯಾಸ ಮತ್ತು ಅನುಸ್ಥಾಪನೆಯು ಡೈನಾಮಿಕ್ಸ್ ತತ್ವಕ್ಕೆ ಅನುಗುಣವಾಗಿರುತ್ತವೆ, ಹೆಚ್ಚಿನ ದಕ್ಷತೆ ಮತ್ತು ಕಡಿಮೆ ಶಬ್ದವನ್ನು ಸಾಧಿಸುತ್ತದೆ. ಶೈತ್ಯೀಕರಣ, ಶಾಖ ವಿನಿಮಯ, ವಾತಾಯನ ಮತ್ತು ಇತರ ಕ್ಷೇತ್ರಗಳಲ್ಲಿ ಫ್ಯಾನ್ ಅನ್ನು ವ್ಯಾಪಕವಾಗಿ ಅನ್ವಯಿಸಬಹುದು. ವಿವರಗಳು ಹೀಗಿವೆ: ವಿಚಾರಣೆವಿವರ ಅಕ್ಷೀಯ ಹರಿವಿನ ಅಭಿಮಾನಿಗಳ LKZ ಸರಣಿ ಫ್ಯಾನ್ ಮಾದರಿ ವಿವರಣೆ ಉತ್ಪನ್ನದ ರಚನೆ ಮತ್ತು ವಿವರಣೆ 1. ಮೋಟಾರ್ ಫ್ಯಾನ್ ಅನ್ನು ಮೂರು-ಹಂತದ ಅಸಮಕಾಲಿಕ ಮೋಟಾರ್ ಮೂಲಕ ನಡೆಸಲಾಗುತ್ತದೆ. ಮೋಟಾರ್ ಇನ್ಸುಲೇಷನ್ ಗ್ರೇಡ್ ಎಫ್ ಮತ್ತು ಪ್ರೊಟೆಕ್ಷನ್ ಗ್ರೇಡ್ ಐಪಿ 55 ಆಗಿದೆ. 2. ಇಂಪೆಲ್ಲರ್ ಅನ್ನು ಕೋಲ್ಡ್-ರೋಲ್ ಸ್ಟೀಲ್ ಹಾಳೆಗಳಿಂದ ತಯಾರಿಸಲಾಗುತ್ತದೆ ಮತ್ತು ವಾಯುಬಲವೈಜ್ಞಾನಿಕ ತತ್ತ್ವದ ಪ್ರಕಾರ ವಿನ್ಯಾಸಗೊಳಿಸಲಾಗಿದೆ. ಇದು ದೊಡ್ಡ ಗಾಳಿಯ ಪರಿಮಾಣ, ಅಧಿಕ ಒತ್ತಡ ಮತ್ತು ಕಡಿಮೆ ಶಬ್ದದ ಲಕ್ಷಣಗಳನ್ನು ಹೊಂದಿದೆ. ಪ್ರಚೋದಕ ಸಮತೋಲನ ನಿಖರತೆಯ ಗ್ರೇಡ್ G2.5 ಆಗಿದೆ. 3. ಮೇಳವು ಅಭಿಮಾನಿಗಳ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದನ್ನು ಸಂಸ್ಕರಿಸಲಾಗುತ್ತದೆ ...
SIWAY FR PU FOAM ಬಹು ಉದ್ದೇಶ, ಭರ್ತಿ ಮತ್ತು ನಿರೋಧನ ಫೋಮ್ ಆಗಿದ್ದು ಅದು DIN4102 ಮಾನದಂಡಗಳನ್ನು ಹೊಂದಿದೆ.ಇದು ಅಗ್ನಿ ನಿರೋಧಕತೆಯನ್ನು (B2) ಹೊಂದಿರುತ್ತದೆ.ಇದು ಫೋಮ್ ಅಪ್ಲಿಕೇಶನ್ ಗನ್ ಅಥವಾ ಒಣಹುಲ್ಲಿನೊಂದಿಗೆ ಬಳಸಲು ಪ್ಲಾಸ್ಟಿಕ್ ಅಡಾಪ್ಟರ್ ಹೆಡ್ನೊಂದಿಗೆ ಅಳವಡಿಸಲಾಗಿದೆ.ಫೋಮ್ ಗಾಳಿಯಲ್ಲಿ ತೇವಾಂಶದಿಂದ ವಿಸ್ತರಿಸುತ್ತದೆ ಮತ್ತು ಗುಣಪಡಿಸುತ್ತದೆ.ಇದನ್ನು ವ್ಯಾಪಕ ಶ್ರೇಣಿಯ ಕಟ್ಟಡ ಅನ್ವಯಗಳಿಗೆ ಬಳಸಲಾಗುತ್ತದೆ.ಅತ್ಯುತ್ತಮ ಆರೋಹಿಸುವಾಗ ಸಾಮರ್ಥ್ಯಗಳು, ಹೆಚ್ಚಿನ ಉಷ್ಣ ಮತ್ತು ಅಕೌಸ್ಟಿಕಲ್ ನಿರೋಧನದೊಂದಿಗೆ ತುಂಬಲು ಮತ್ತು ಸೀಲಿಂಗ್ ಮಾಡಲು ಇದು ತುಂಬಾ ಒಳ್ಳೆಯದು.ಇದು ಯಾವುದೇ CFC ಸಾಮಗ್ರಿಗಳನ್ನು ಹೊಂದಿರದ ಕಾರಣ ಇದು ಪರಿಸರ ಸ್ನೇಹಿಯಾಗಿದೆ. ವಿಚಾರಣೆವಿವರ SIWAY A1 PU ಫೋಮ್ SIWAY A1 PU ಫೋಮ್ ಒಂದು-ಘಟಕ, ಆರ್ಥಿಕ ಪ್ರಕಾರ ಮತ್ತು ಉತ್ತಮ ಕಾರ್ಯಕ್ಷಮತೆಯ ಪಾಲಿಯುರೆಥೇನ್ ಫೋಮ್ ಆಗಿದೆ.ಇದು ಫೋಮ್ ಅಪ್ಲಿಕೇಶನ್ ಗನ್ ಅಥವಾ ಒಣಹುಲ್ಲಿನೊಂದಿಗೆ ಬಳಸಲು ಪ್ಲಾಸ್ಟಿಕ್ ಅಡಾಪ್ಟರ್ ಹೆಡ್ನೊಂದಿಗೆ ಅಳವಡಿಸಲಾಗಿದೆ.ಫೋಮ್ ಗಾಳಿಯಲ್ಲಿ ತೇವಾಂಶದಿಂದ ವಿಸ್ತರಿಸುತ್ತದೆ ಮತ್ತು ಗುಣಪಡಿಸುತ್ತದೆ.ಇದನ್ನು ವ್ಯಾಪಕ ಶ್ರೇಣಿಯ ಕಟ್ಟಡ ಅನ್ವಯಗಳಿಗೆ ಬಳಸಲಾಗುತ್ತದೆ.ಅತ್ಯುತ್ತಮ ಆರೋಹಿಸುವಾಗ ಸಾಮರ್ಥ್ಯಗಳು, ಹೆಚ್ಚಿನ ಉಷ್ಣ ಮತ್ತು ಅಕೌಸ್ಟಿಕಲ್ ನಿರೋಧನದೊಂದಿಗೆ ತುಂಬಲು ಮತ್ತು ಸೀಲಿಂಗ್ ಮಾಡಲು ಇದು ತುಂಬಾ ಒಳ್ಳೆಯದು.ಇದು ಯಾವುದೇ CFC ಸಾಮಗ್ರಿಗಳನ್ನು ಹೊಂದಿರದ ಕಾರಣ ಇದು ಪರಿಸರ ಸ್ನೇಹಿಯಾಗಿದೆ. ವಿಚಾರಣೆವಿವರ ಶಾಂಘೈ ಸಿವೇ ಬಿಲ್ಡಿಂಗ್ ಮೆಟೀರಿಯಲ್ ಕಂ., ಲಿಮಿಟೆಡ್ ಯಾವಾಗಲೂ ಉತ್ತಮ ಉತ್ಪನ್ನಗಳು, ಉತ್ತಮ ಸೇವೆ ಮತ್ತು ಉತ್ತಮ ಖ್ಯಾತಿಯನ್ನು ಪೂರೈಸುತ್ತದೆ ಮತ್ತು ನಿಮ್ಮ ಅತ್ಯಂತ ವಿಶ್ವಾಸಾರ್ಹ ದೀರ್ಘಕಾಲೀನ ಪಾಲುದಾರರಾಗಲು ನಾವು ಸಿದ್ಧರಿದ್ದೇವೆ.
ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 04/2016, PÀ®A 498(J), 504, 506 eÉÆvÉ 34 L¦¹ ªÀÄvÀÄÛ PÀ®A 3 & 4 r.¦ PÁAiÉÄÝ :- ¦üAiÀiÁ𢠸ÀÄeÁvÁ UÀAqÀ ªÀĺÉñÀ PÀ¯Á® ªÀAiÀÄ: 29 ªÀµÀð, eÁw: PÀ¯Á®, G: ¸Á¥sÀÖªÉÃgï EAf¤ÃAiÀÄgï, ¸Á: ºÀ¼É DzÀ±Àð PÁ¯ÉÆä ©ÃzÀgÀ gÀªÀjUÉ ¨sÁ°Ì vÁ®ÆQ£À £ÉüÀV UÁæªÀÄzÀªÀgÁzÀ ¨Á§ÄgÁªÀ PÀ¯Á® ¸ÀzÀå: ºÀħâ½î EªÀgÀ ªÀÄUÀ£ÁzÀ ªÀĺÉñÀ JA§ÄªÀªÀgÉÆA¢UÉ ¢£ÁAPÀ 09-07-2011 gÀAzÀÄ ©ÃzÀgÀ £ÀUÀgÀzÀ jhÄgÁ ¥sÀAPÀë£À ºÁ®zÀ°è ªÀÄzÀĪÉAiÀiÁVzÀÄÝ, ªÀÄzÀĪÉAiÀÄ°è ¦üAiÀiÁð¢AiÀĪÀgÀ vÀAzÉ vÁ¬ÄAiÀĪÀgÀÄ UÀAqÀ ªÀÄvÀÄÛ CªÀ£À vÀAzÉ vÁ¬Ä ªÀÄvÀÄÛ ªÀÄ£ÉAiÀĪÀgÀÄ ¤²ÑvÁxÀðzÀ°è PÉýzÀAvÉ ªÀÄzÀĪÉAiÀÄ°è 51 vÉÆ¯É §AUÁgÀ, §mÉÖ, ªÀÄ£É §¼ÀPÉ ¸ÁªÀiÁ£ÀÄUÀ¼ÀÄ GqÀÄUÉÆgÉAiÀiÁV UÀAqÀ£À ªÀÄ£ÉAiÀĪÀjUÉ PÉÆnÖgÀÄvÁÛgÉ, ªÀÄzÀÄªÉ PÁ®PÉÌ vÀAzÉ AiÀiÁzÀªÀgÁªÀ, vÁ¬Ä, CtÚ ªÀÄ£ÉÆÃdPÀĪÀiÁgÀ, CPÀ̼ÁzÀ «ÄãÁ ªÀÄvÀÄÛ vÀAVAiÀiÁzÀ ¸À«vÁ ªÀÄvÀÄÛ ¸ÀA§A¢üPÀgÁzÀ ¨sÁªÀgÁªÀ vÉ®AUÀ, ¸ÀÄ©zÁæ ¸Á: ¨sÀgÀvÀ£ÀÆgï, f: UÀÄ®§UÁð, EªÀįï UÀAqÀ ¢°¥À vÉ®AUÀ ¸Á: gÁªÀÄ£ÀUÀgÀ ©ÃzÀgÀ, gÁdPÀĪÀiÁgÀ ¥Ánî ¸Á: DzÀ±Àð PÁ¯ÉÆä EªÀgÉ®ègÀÄ ºÁUÀÄ EvÀgÀgÀÄ §A¢zÀÝgÀÄ, ªÀÄzÀĪÉAiÀiÁzÀ £ÀAvÀgÀ MAzÀÄ wAUÀ¼ÀªÀgÉUÉ DgÉÆævÀgÁzÀ 1) ªÀĺÉñÀ vÀAzÉ ¨Á§ÄgÁªÀ (UÀAqÀ), 2) ¨Á§ÄgÁªÀ (ªÀiÁªÀ), 3) ¸ÀÄgÉÃSÁ UÀAqÀ ¨Á§ÄgÁªÀ (CvÉÛ), 4) ªÁt vÀAzÉ ¨Á§ÄgÁªÀ (£ÁzÀ¤), 5) £ÁUÉñÀ vÀAzÉ ¨Á§ÄgÁªÀ (ªÉÄÊzÀÄ£À), 6) D±Á UÀAqÀ £ÁUÉñÀ J®ègÀÄ ¸Á: ºÀħâ½î EªÀgÉ®ègÀÆ ¦üAiÀiÁð¢UÉ ¸ÀjAiÀiÁV £ÉÆÃrPÉÆAqÀÄ £ÀAvÀgÀ ¸ÀzÀj DgÉÆævÀgÀÄ ¦üAiÀiÁð¢UÉ ¤ªÀÄä vÀAzÉ ¤ªÀÄä ªÀÄzÀÄªÉ ¸ÀjAiÀiÁV ªÀiÁrPÉÆnÖ®è ªÀÄvÀÄÛ ªÀÄzÀĪÉAiÀÄ°è £ÀªÀÄä £ÉAljUÉ ¸ÀjAiÀiÁV £ÉÆÃrPÉÆAr®è CAvÀ ºÉÆqÉ §qÉ ªÀiÁr zÉÊ»PÀ QgÀÄPÀļÀ PÉÆnÖgÀÄvÁÛgÉ, F «µÀAiÀÄ ¦üAiÀiÁð¢AiÀÄÄ vÀ£Àß vÀAzÉ vÁ¬ÄUÉ ºÉýzÁUÀ vÀAzÉ, vÁ¬Ä ªÀÄvÀÄÛ zÉÆqÀØ¥Àà£À ªÀÄUÀ£ÁzÀ PÉÆAr¨Á EªÀgÉ®ègÀÄ ºÀħâ½îUÉ §AzÀÄ UÀAqÀ ªÀÄvÀÄÛ ªÀÄ£ÉAiÀĪÀjUÉ ¸ÀªÀÄeÁ¬Ä¹ ¸ÀÄeÁvÁ EªÀ½UÉ F vÀgÀºÀ QgÀÄPÀļÀ PÉÆqÀzÉ ¸ÀjAiÀiÁV £ÉÆÃrPÉƽîj CAvÀ ºÉý ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀÄÄ vÀ£Àß UÀAqÀ ¨ÉAUÀ¼ÀÆj£À°èAiÀÄ vÀªÀÄä ¸ÀéAvÀ ªÀÄ£É EzÀÄÝ E§âgÀÄ UÀAqÀ ºÉAqÀw ¨ÉAUÀ¼ÀÆgÀzÀ°è ºÉÆÃV ªÁ¸ÀªÁVzÀÄÝ, £ÀAvÀgÀ UÀAqÀ ªÀĺÉñÀ EªÀ£ÀÄ ¥ÀÆ£ÁzÀ°è PÉ®¸À ªÀiÁqÀ®Ä ºÉÆUÀÄvÉÛãÉAzÀÄ ºÉý ¨ÉAUÀ¼ÀÆgÀzÀ°èzÀÝ vÀªÀÄä ªÀÄ£É ªÀiÁgÁl ªÀiÁr ¦üAiÀiÁð¢UÉ MAzÀÄ ¨ÁrUÉ ªÀÄ£É ªÀiÁr ¦üAiÀiÁð¢AiÀÄ eÉÆvÉ £Á¢¤ ªÁt EªÀ½UÉ ElÄÖ ¥ÀÆ£ÁPÉÌ ºÉÆÃzÀgÀÄ, £ÀAvÀgÀ ¸ÀzÀj DgÉÆævÀgÀÄ MAzÀÄ wAUÀ¼À°è MAzÉgÉqÀÄ ¸À® ¨ÉAUÀ¼ÀÆjUÉ §AzÀÄ ¤£ÀUÉ CqÀÄUÉ ªÀiÁqÀ®Ä ¸ÀjAiÀiÁV §gÀĪÀÅ¢®è, §mÉÖ MUÉAiÀÄ®Ä §gÀĪÀÅ¢®è ªÀÄvÀÄÛ ¤£Àß ªÀÄzÀĪÉAiÀÄ°è ¤ªÀÄä vÀAzÉ vÁ¬Ä £ÀªÀÄUÉ ¨ÉÃPÁzÀµÀÄÖ ªÀgÀzÀQëuÉ PÉÆnÖ®è, ¤Ã£ÀÄ ¨ÉAUÀ¼ÀÆj£À°è EzÀÝgÉ ¤£ÀUÉ ªÀÄ£É ¨ÁrUÉ ªÀÄvÀÄÛ ¤£Àß Gl-G¥ÀZÁgÀPÁÌV ªÀÄvÀÄÛ ¨ÉAUÀ¼ÀÆj£À°è ªÀÄ£É PÀlÄÖªÀ ¸À®ÄªÁV ¤£Àß vÀªÀgÀÄ ªÀģɬÄAzÀ 25 ®PÀë gÀÆ ªÀgÀzÀQëuÉ vÉUÉzÀÄPÉÆAqÀÄ ¨Á CAvÀ zÉÊ»PÀ ºÁUÀÄ ªÀiÁ£À¹PÀªÁV QgÀÄPÀļÀ PÉÆqÀÄwÛzÀÝgÀÄ ªÀÄvÀÄÛ ¸ÀjAiÀiÁV ¸ÀA¸ÁgÀ ªÀiÁrgÀĪÀÅ¢®è, DzÀgÀÆ ¦üAiÀiÁð¢AiÀÄÄ ¸À»¹PÉÆAqÀÄ ¸ÀĪÀÄä¤zÀÄÝ, FUÀ ¸ÀĪÀiÁgÀÄ 6 wAUÀ¼À »AzÉ ¥ÀÄ£ÀB ¸ÀzÀj DgÉÆævÀgÉ®ègÀÆ ¨ÉAUÀ¼ÀÆjUÉ §AzÀÄ ¤Ã£ÀÄ £ÀªÀÄä ªÀÄ£ÉAiÀÄ°è EgÀ¨ÉÃPÁzÀgÉ ¤£Àß vÀªÀgÀÄ ªÀģɬÄAzÀ 25 ®PÀë gÀÆ ªÀgÀzÀQëuÉ vÉUÉzÀÄPÉÆAqÀÄ ¨Á CAvÀ ºÉÆqÉ §qÉ ªÀiÁr ¦üAiÀiÁð¢UÉ ªÀģɬÄAzÀ ºÉÆgÀUÉ ºÁQzÀÝjAzÀ ¦üAiÀiÁð¢AiÀÄÄ ¨ÉAUÀ¼ÀÆj£À°èzÀÝ vÀ£Àß CtÚ ªÀÄ£ÉÆÃdPÀĪÀiÁgÀ EªÀgÀ ºÀwÛgÀ §AzÀÄ ªÁ¸ÀªÁVzÀÄÝ, ¢£ÁAPÀ 11-03-2016 gÀAzÀÄ ¦üAiÀiÁð¢AiÀÄ vÁ¬Ä wÃjPÉÆArzÀÝjAzÀ ¦üAiÀiÁð¢AiÀÄÄ vÀ£Àß CtÚ£À eÉÆvÉ ¢£ÁAPÀ 12-03-2016 gÀAzÀÄ ©ÃzÀgÀzÀ°èzÀÝ DzÀ±Àð PÁ¯ÉÆäAiÀÄ vÀªÀÄä ªÀÄ£ÉUÉ §A¢zÀÄÝ, vÁ¬Ä wÃjPÉÆAqÀ «µÀAiÀÄ DgÉÆævÀjUÉ UÉÆvÁÛV ¢£ÁAPÀ 13-03-2016 gÀAzÀÄ ©ÃzÀgÀPÉÌ §A¢zÀÝgÀÄ DUÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ vÀAzÉ ¸ÀzÀj DgÉÆævÀjUÉ vÁ¬Ä wÃjPÉÆArgÀÄvÁÛ¼É vÀAzÉAiÀÄ ºÀwÛgÀ ºÀt E®è ¸ÀjAiÀiÁV ElÄÖPÉƽîj £Á£ÀÄ ¤ªÀÄä eÉÆvÉAiÀÄ°è §gÀÄvÉÛãÉAzÀÄ PÉýzÁUÀ ¸ÀzÀj DgÉÆævÀgÀÄ ¦üAiÀiÁð¢UÉ ¤£Àß vÀªÀgÀÄ ªÀģɬÄAzÀ 25 ®PÀë gÀÆ. vÀAzÀgÉ £ÀªÀÄä ªÀÄ£ÉUÉ §gÀ¨ÉÃPÀÄ ºÀt vÀgÀzÉ §AzÀgÉ ¤£ÀUÉ fêÀ ¸À»vÀ ©qÀĪÀÅ¢®è CAvÀ fêÀzÀ ¨ÉzÀjPÉ ºÁQ ªÀÄvÀÄÛ £À£Àß ªÀÄUÀ¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛÃ£É CAvÀ ºÉý ºÉÆÃVgÀÄvÁÛgÉ, ¦üAiÀiÁð¢AiÀÄÄ ©ÃzÀgÀzÀ°èAiÉÄà vÀªÀÄä vÀAzÉAiÀÄ ªÀÄ£ÉAiÀÄ°èzÁÝUÀ UÀAqÀ ªÀĺÉñÀ EªÀ£ÀÄ ¸ÀĪÀiÁgÀÄ 4-5 ¸Áj PÀgÉ ªÀiÁr CªÁZÀå ±À§ÝUÀ½AzÀ ¨ÉÊAiÀÄÄvÀÛ ¤Ã£ÀÄ ºÀt vÉUÉzÀÄPÉÆAqÀÄ §AzÀgÉ ¨ÉAUÀ¼ÀÆjUÉ §gÀ¨ÉÃPÀÄ E®è¢zÀÝgÉ ¤£Àß vÀAzÉAiÀÄ ªÀÄ£ÉAiÀÄ°èAiÉÄà EgÀ¨ÉÃPÀÄ CAvÀ ªÀiÁ£À¹PÀªÁV QgÀÄPÀļÀ ¤ÃrgÀÄvÁÛ£É ªÀÄvÀÄÛ ¢£ÁAPÀ 02-04-2016 gÀAzÀÄ UÀAqÀ PÀgÉ ªÀiÁr ¥ÀÄ£ÀB CªÁZÀå ±À§ÝUÀ½AzÀ »AiÀiÁ½¹ ¨ÉÊzÀÄ ¤Ã£ÀÄ ¨ÉAUÀ¼ÀÆjUÉ §AzÀgÉ ¤£ÀUÉ £ÀªÀÄä ªÀÄ£ÉAiÀÄ°è ElÄÖPÉƼÀÄîªÀÅ¢®è ºÀt vÀAzÀgÉ ªÀiÁvÀæ ElÄÖPÉƼÀÄîvÉÛÃ£É CAvÀ ªÀiÁ£À¹PÀ QgÀÄPÀļÀ ¤Ãr fêÀ ¨ÉzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 04/2016, PÀ®A 174 ¹.Dgï.¦.¹ :- ಫಿರ್ಯಾದಿ ಶ್ರೀದೇವಿ ಗಂಡ ಈಶ್ವರ ಖಂಡಗೊಂಡ ವಯ: 38 ವರ್ಷ, ಜಾತಿ: ಕುರುಬ, ಸಾ: ಕಬೀರಾಬಾದ ವಾಡಿ ರವರ ಗಂಡನಾದ ಈಶ್ವರ ತಂದೆ ಕಲ್ಲಪ್ಪಾ ಖಂಡಗೊಂಡ ವಯ: 42 ವರ್ಷ ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು, ಫಿರ್ಯಾದಿಯವರು ತಮ್ಮ ಹಿರಿಯ ಮಗಳಿಗೆ ಲಗ್ನ ಮಾಡಿಕೊಟ್ಟಿದ್ದು ಇದರಿಂದ ಸ್ವಲ್ಪ ಸಾಲವಾಗಿರುತ್ತದೆ, ಉಳಿದ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಮುಂದೆ ಇವರೆಲ್ಲರ ಲಗ್ನ ಹೇಗೆ ಮಾಡಿಕೊಡುವುದು ಜೀವನವೆ ಸಾಕಾಗಿದೆ ಹಾಗೆ ಹೀಗೆ ಅಂತ ಗಂಡ ಆವಾಗಾವಾಗ ಹೇಳುತ್ತಿದ್ದು, ಹೀಗಿರಲು ದಿನಾಂಕ 02-04-2016 ರಂದು ಗಂಡ ಈಶ್ವರ ಇವರು ಮನೆಯಿಂದ ಹೊರಗೆ ಹೋಗಿ ಬರುತ್ತೆನೆಂದು ಹೇಳಿ ಮನೆಯಿಂದ ಹೋದವರು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲಾ, ರಾತ್ರಿ ದಾರಿ ಕಾದು ನಂತರ ಮನೆಯಲ್ಲಿ ಮಲಗಿಕೊಂಡಿದ್ದು, ನಂತರ ಗಂಡ ಮನೆಗೆ ಬರದ ಕಾರಣ ಫಿರ್ಯಾದಿಯು ತನ್ನ ಮೈದುನ ಹಾಗೂ ಗ್ರಾಮದವರು ಗಂಡನನ್ನು ಹುಡುಕಾತ್ತಾ ಊರಿನ ಶಿವಾರದಲ್ಲಿರುವ ಮಹಾದೇವಿ ಗಂಡ ವೀರಪ್ಪಾ ಅರಕಿ ರವರ ಹೊಲದ ಹತ್ತಿರ ಹುಡುಕುತ್ತಾ ಹೋದಾಗ ಇವರ ಹೊಲದ ಕಟ್ಟೆಗೆ ಇರುವ ಬೇವಿನ ಮರಕ್ಕೆ ಫಿರ್ಯಾದಿಯವರ ಗಂಡ ಹಗ್ಗದಿಂದ ನೇಣು ಹಾಕಿಕೊಂಡು ಮ್ರತಪಟ್ಟಿದ್ದು ಇರುತ್ತದೆ, ಫಿರ್ಯಾದಿಗೆ 5 ಜನ ಹೆಣ್ಣು ಮಕ್ಕಳಿದ್ದುದ್ದರಿಂದ ಮುಂದೆ ಜೀವನ ನಡೆಸುವುದು ಹೇಗೆ ಅಂತ ಗಂಡ ಜೀವನದಲ್ಲಿ ಜಿಗುಪ್ಸೆಗೊಂಡು ಹಗ್ಗದಿಂದ ನೇಣು ಹಾಕಿಕೊಂಡು ಮ್ರತಪಟ್ಟಿದ್ದು ಇರುತ್ತದೆ, ಈ ಬಗ್ಗೆ ಯಾರ ಮೇಲೆಯು ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 78/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :- ದಿನಾಂಕ 03-04-2016 ಸಂತಪೂರ ಗ್ರಾಮದಲ್ಲಿ ಸಂತೆ ಇರುವುದರಿಂದ ಫಿರ್ಯಾದಿ ¥sÁwªÀiÁ UÀAqÀ AiÀÄĸÀÆ¥sÀ«ÄAiÀiÁå ¦AeÁgÀ ªÀAiÀÄ: 50 ªÀµÀð, eÁw: ªÀÄĹèA, ¸Á: ¨ÉÆVð(eÉ) ರವರು ಸಂತಪೂರ ಗ್ರಾಮಕ್ಕೆ ಬಂದು ಮಗಳಾದ ಸಮೀನಾಬೇಗಂ ಇವಳೀಗೆ ಕರೆದುಕೊಂಡು ಸಂತಪೂರ ಗ್ರಾಮದಲ್ಲಿರುವ ಸಂತೆಯಲ್ಲಿ ತರಕಾರಿ ಖರೀದಿ ಮಾಡಲು ಹೋಗಿ ಸಂತಪೂರ ವಡಗಾಂವ ರೋಡಿನ ಮೇಲೆ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಸಂತೆಯಲ್ಲಿ ತರಕಾರಿ ಖರಿದಿಸುತ್ತಿದ್ದಾಗ ಸಂತಪೂರ ಕಡೆಯಿಂದ ಬಸ್ಸ ನಂ. ಕೆಎ-38/ಎಫ್-455 ನೇದರ ಚಾಲಕನಾದ ಆರೋಪಿ £Ë£ÁxÀ vÀAzÉ zÀvÁÛwæ ¸Á: d£ÀªÁqÀ ಇತನು ತನ್ನ ಬಸ್ಸ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೋಂಡು ಬಂದು ತರಕಾರಿ ಖರೀದಿಸುತ್ತಿದ್ದ ಫಿರ್ಯಾದಿಯ ಮಗಳಾದ ಸಮೀನಾಬೇಗಂ ಇವಳಿಗೆ ಡಿಕ್ಕಿ ಮಾಡಿರುತ್ತಾನೆ ಇದರಿಂದ ಸಮೀನಾ ಬೇಗಂ ಇವಳೀಗೆ ತಲೆಗೆ ಭಾರಿ ರಕ್ತಗಾಯವಾಗಿವಾಗಿದ್ದು ಅಲ್ಲದೆ ಸದರಿ ಆರೋಪಿಯು ತನ್ನ ಬಸ್ಸ ಹಾಗೆ ಮುಂದೆ ಚಲಾಯಿಸಿಕೊಂಡು ಹೋಗಿ ವಡಗಾಂವ ಕಡೆಯಿಂದ ಬರುತ್ತಿದ್ದ ಕಾರ ನಂ. ಎಂಎಚ್‌-04/ಎವಾಯ್-5942 ನೇದಕ್ಕೆ ಡಿಕ್ಕಿ ಮಾಡಿ ಅಲ್ಲೆ ನಿಲ್ಲಿಸಿ ಆರೋಪಿಯು ತನ್ನ ಬಸ್ಸ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಮಗಳ ತಲೆಗೆ ಭಾರಿ ರಕ್ತಗಾಯವಾಗಿ ಸಮೀನಾ ಬೇಗಂ ಇವಳು ಸ್ಥಳದ್ಲಲಿಯೇ ಮೃತ ಪಟ್ಟಿರುತ್ತಾಳೆ , ಅಲ್ಲದೆ ಆರೋಪಿಯು ತನ್ನ ಬಸ್ಸನ್ನು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಬಸ್ಸಿನ ಎಡ ಹಾಗೂ ಬಲ ಭಾಗಕ್ಕೆ ಗಿಡಗಳು ಹತ್ತಿ ಬಸ್ಸಿನ ಮುಂದಿನ ಹಾಗೂ ಎರಡೂ ಕಡೆಯ ಗ್ಲಾಸಗಳು ಒಡೆದು ಹೊಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÉÄúÀPÀgÀ ¥Éưøï oÁuÉ UÀÄ£Éß £ÀA. 61/2016, PÀ®A 306 L¦¹ :- ಫಿರ್ಯಾದಿ ಕಮಳಾಬಾಯಿ ಗಂಡ ಮಾರುತಿ ಘಯಾಳೆ ವಯ: 60 ವರ್ಷ, ಜಾತಿ: ಸಮಗಾರ, ಸಾ: ಜಾಮಖಂಡಿ ರವರಿಗೆ 3 ಜನ ಗಂಡು ಮಕ್ಕಳಿದ್ದು ಅವರೆಲ್ಲರು ಈಗ ಬೇರೆ ಬೇರೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ, ಅವರ ಪೈಕಿ ಫಿರ್ಯಾದಿಯ ಮಗ ಸಯಾಜಿರಾವ ವಯ: 35 ವರ್ಷ ಇತನಿಗೆ 10 ವರ್ಷಗಳ ಹಿಂದೆ ಬಬೀತಾ ಸಾ: ಸಾಯಗಾಂವ ಗ್ರಾಮದವಳೊಂದಿಗೆ ಮದುವೆಯಾಗಿತ್ತದೆ, ಫಿರ್ಯಾದಿಯ ಸೊಸೆ ಬಬಿತಾ ಇಕೆಯು ಸುಮಾರು ದಿವಸಗಳಿಂದ ಗಂಡ ಸಯಾಜಿರಾವ ಇತನು ಮನೆಗೆ ಎನು ತಂದು ಕೊಡುತ್ತಾ ಇಲ್ಲಾ ಮನೆ ಹೇಗೆ ನಡೆಬೇಕೆಂದು ಹೇಳುತ್ತಾ ಪದೆ ಪದೆ ಗಂಡ ಸಯಾಜಿರಾವಗೆ ಕೀರುಕುಳ ನೀಡುತಿದ್ದಳು, ತನ್ನ ಹೆಂಡತಿಯ ಕೀರುಕುಳ ತಾಳಲಾರದೆ ಜೀವನದಲ್ಲಿ ಜಗುಪ್ಸೆ ಹೊಂದಿ ದಿನಾಂಕ 03-04-2016 ರಂದು ಮನೆಯಲ್ಲಿದ್ದ ವಿಷ ಸೇವನೆ ಮಾಡಿದ್ದು ಚಿಕಿತ್ಸೆ ಕುರಿತು ಔರಾದಗೆ ತೆಗೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕುರಿತು ನಿಲಂಗಾ ಕಡೆಗೆ ತೆಗೆದುಕೊಂಡು ಹೋಗುವಾಗ ದಾರಿ ಮದ್ಯ ಫಿರ್ಯಾದಿಯವರ ±ÁºÁfÃgÁªÀ vÀAzÉ ªÀiÁgÀÄw WÀAiÀiÁ¼É ªÀAiÀÄ: 35 ವರ್ಷ, eÁw: ¸ÀªÀÄUÁgÀ, ¸Á: eÁªÀÄRAr ಇತನು ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 6:09 PM No comments: Kalaburagi District Reported Crimes ಸಿಡಿಲು ಬಡಿದು ಸಾವು ಪ್ರಕರಣ : ಫರತಾಬಾದ ಠಾಣೆ : ದಿನಾಂಕ: 03/04/2016 ರಂದು ಸಾಯಂಕಾಲ 4:15 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದ ಹೊಲ ಸರ್ವೇ ನಂ 3 ರಲ್ಲಿ ಬೇವಿನ ಗಿಡದ ಕೆಳೆಗೆ ಹಾಕಿರುವ ಉಳ್ಳಾಗಡ್ಡಿಯ ಮೇಲೆ ತಾಡಪತ್ರಿ ಹಾಕಲು ಹೋದಾಗ ಅದೇ ವೇಳೆಗೆ ಒಮ್ಮೇಲೆ ಅಕಾಲಿಕವಾಗಿ ಮಳೇ ಗಾಳಿ ಗುಡುಗು ಸಿಡಿಲು ಬಂದು. ಅಲ್ಲಿ ಕೆಲಸ ಮಾಡುತ್ತಿದ್ದ ಸದರಿ ಮೃತ ಭೀಮ್ಮಪ್ಪಾ ತಂದೆ ಶರಣಪ್ಪ ನಾಯ್ಕೋಡಿ ಇವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶರಣಪ್ಪಾ ತಂದೆ ಮರೇಣ್ಣಾ ನಾಯ್ಕೋಡಿ ಸಾ:ಕದ್ದರಗಿ ತಾ:ಚಿತ್ತಾಪೂರ ಹಾ:ವ:ಸೀತನೂರ ತಾ: ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಸ ಮಾಡಿದ ಪ್ರಕರಣ : ಜೇವರಗಿ ಠಾಣೆ : ದಿನಾಂಕ 22.03.2016 ರಂದು 10:30 ಗಂಟೆಯಿಂದ 16:00 ಗಂಟೆಯ ಮಧ್ಯದ ಅವಧಿಯಲ್ಲಿ 1) ಸೋಮಲಿಂಗಪ್ಪ ತಂದೆ ಬಸವಂತರಾಯ ಹೇರೂರ 2) ಹುಲಕಂಠರಾಯ ತಂದೆ ಬಸವಂತರಾಯ ಹೇರೂರ 3) ಚಂದ್ರಾಮಪ್ಪ ತಂದೆ ರಾವುತಪ್ಪ ಚೀರಲದಿನ್ನಿ ಸಾ|| ಮೂರು ಜನರು ಮುರಗಾನುರ 4) ಪ್ರೇಮನಗೌಡ ತಂದೆ ಕುಪ್ಪನಗೌಡ ಸಾ|| ನೆಲೋಗಿ ಎಲ್ಲರು ಕೂಡಿಕೊಂಡು ಜೇವರಗಿ ಪಟ್ಟಣದ ಉಪ ನೊಂದವಣಾಧೀಕಾರಿ ಕಾರ್ಯಾಲಯದಲ್ಲಿ ವಂಚನೆಯಿಂದ ಮತ್ತು ನಂಬಿಕೆ ದ್ರೋಹ ಮಾಡಿ ಬೇರೆಯವರಂತೆ ನಟನೆ ಮಾಡಿ ನನಗೆ ಮೋಸ ಮಾಡಿ ನನ್ನ ಹೆಸರಿನಲ್ಲಿ ಇದ್ದ ಮುರಗಾನೂರ ಸೀಮಾಂತರದ ಹೊಲದ ಸರ್ವೇ ನಂ 3/4 ನೇದ್ದರಲ್ಲಿನ 3 ಎಕರೆ 3 ಗುಂಟೆ ಜಮಿನನ್ನು ತಮ್ಮ ಹೆಸರಿಗೆ ನೊಂದಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತಾ ಶ್ರೀ ಕಾಮಣ್ಣ ತಂದೆ ಸಾಯಬಣ್ಣ ಮಾದರ್ ಸಾ : ಮುರಗಾನೂರ ತಾ: ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಣ್ಣುಮಗಳು ಕಾಣೆಯಾದ ಪ್ರಕರಣ : ಆಳಂದ ಠಾಣೆ : ಶ್ರೀ ಪ್ರಭುಲಿಂಗ ತಂದೆ ಮಲ್ಲಪ್ಪ ದೊಡ್ಡಮನಿ ಸಾ:ಜಂಬಗಾ(ಜೆ) ತಾ: ಆಳಂದ ರವರ ಚಿಕ್ಕ ಮಗಳಾದ ಕಾಂಚನಾ ವಯ: 19 ವರ್ಷ ಇವಳು 10ನೇ ತರಗತಿಯಲ್ಲಿ ಅನುತಿರ್ಣ ವಾಗಿದ್ದರಿಂದ ಶಾಲೆ ಬಿಡಿಸಿ ನಮ್ಮೂಂದಿಗೆ ಕೂಲಿ ಕೆಲಸ ಮಾಡುತ್ತಾ ಬಂದಿದ್ದು ದಿನಾಂಕ:30/03/2016 ರಂದು ಬುಧುವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಮಗಳು ಕಾಂಚನಾ ಇವಳು ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ನನ್ನ ಹೆಂಡತಿ ನಂದಾಬಾಯಿಗೆ ತಿಳಿಸಿ ಹೋದಳು ಆಕೆಯ ಹೋಗಿ 2 ಗಂಟೆ ಆದರೂ ಮನೆಗೆ ಬರದಿದ್ದರಿಂದ ನಾನು ನಮ್ಮ ಊರಲ್ಲಿ ಆಕೆಯ ಗೆಳತಿಯ ಮನೆಗೆ ಹೋಗಿ ವಿಚಾರಿಸಿದ್ದು ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನಾನು ಹಾಗೂ ನನ್ನ ಹೆಂಡತಿ ಕೂಡಿ ಸಂಬಂಧಿಕರಿಗೆ ಪೋನ ಮುಖಾಂತರ ವಿಚಾರಿಸಿದ್ದು ಬಂದಿರುವುದಿಲ್ಲಾ. ಅಂತಾ ತಿಳಿಸಿರುತ್ತಾರೆ. ನಾವು ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಐಕ್ಯತೆ ಮತ್ತು ಸಮಗ್ರತೆ ಉಳಿಯುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಅಸಮಾನತೆ, ಅಸ್ಪೃಷ್ಯತೆ ರಹಿತ, ಸೌಹಾರ್ಧ ಭಾರತವನ್ನು ಕಟ್ಟಬೇಕಿದೆ ಎಂದು ಸರ್ವೋದಯ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮೇಜರ್ ಎಚ್.ನಾರಾಯಣಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ವಿಜಯನಗರ ಸರ್ವೋದರ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವವಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಲವಾರು, ಭಾಷೆ,ಜಾತಿ, ಧರ್ಮಗಳ ಸಮ್ಮಿಲನವಾಗಿರುವ ಭಾರತ ಮತ್ತಷ್ಟು ಉಜ್ವಲ ಭವಿಷ್ಯ ಕಾಣಬೇಕಾದರೆ, ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಮೂಡುವಂತೆ ಮಾಡಬೇಕಿದೆ ಎಂದರು. ಇಂದು ಇಡೀ ದೇಶವೇ ಭಾರತದ ಸ್ವಾತಂತ್ರ ದಿನದ ಅಮೃತ ಮಹೋತ್ಸವದ ಆಚರಣೆಯಲ್ಲಿ ತೊಡಗಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸುದೈವ ಎಂದು ನಾನು ಭಾವಿಸಿದ್ದೇನೆ. ದೇಶದ ಸ್ವಾತಂತ್ರಕ್ಕಾಗಿ ಒಟ್ಟಾರೆ ದೇಶದ ಶೇ5ರಷ್ಟು ಜನ ಮಾತ್ರ ಹೋರಾಟ ನಡೆಸಿದ್ದಾರೆ. ಉಳಿದ ಶೇ95ರಷ್ಟು ಜನ ಅದರ ಫಲವನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಹಿಂಸೆಯನ್ನು ತ್ಯಜಿಸಿ, ಪರಿವರ್ತನೆಯ ಕಡೆಗೆ ನಾವೆಲ್ಲರೂ ಹೆಜ್ಜೆ ಇಡಬೇಕಾಗಿದೆ ಎಂದು ಮೇಜರ್ ನಾರಾಯಣಪ್ಪ ತಿಳಿದರು. ಸರ್ವೋದಯ ಕಾಲೇಜಿನ ನನ್ನ 35 ವರ್ಷಗಳ ಸೇವೆ ಎಂದಿಗೂ ಮರೆಯಲಾರೆ, ಜನರಲ್ ಕಾರ್ಯಪ್ಪ ನಮ್ಮ ಸಂಸ್ಥೆಯ ಎನ್.ಸಿ.ಸಿ.ತಂಡ ಕಟ್ಟಲು ಚಾಲನೆ ನೀಡಿದರು. ಅಂದಿನಿಂದ ಹಂತ ಹಂತವಾಗಿ ಉತ್ತಮ ಕಾಲೇಜಾಗಿ ಬೆಳೆದು ಬಂದಿದೆ. ಹಿರಿಯ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಆದ ಸೀತಾರಾಮ್ ಅವರು ತಾವು ಬೋಧನೆ ಮಾಡುವ ವಿಷಯದ ಜೊತೆಗೆ, ಮಕ್ಕಳಲ್ಲಿ ದೇಶ ಪ್ರೇಮ, ಪರಿಸರ ಪ್ರೇಮ ಬೆಳೆಸಲು ಹಗಲಿರುಳು ಶ್ರಮಿಸಿದ್ದಾರೆ. ಸರ್ವೋದಯ ಸಂಸ್ಥೆಯ ಸದಸ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಮೇಜರ್ ನಾರಾಯಣಪ್ಪ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಜಗದೀಶ್ ಮಾತನಾಡಿ, ನಾವೆಲ್ಲರೂ 75ನೇ ವರ್ಷದ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸುತಿದ್ದೇವೆ.ಆದರೆ ಇದುವರೆಗಿನ ಭಾರತದ ಸಾಧನೆ ಸಾಲದು, ದುಡಿಯುವ ಕೈಗಳಿಗೆ, ಅದರಲ್ಲಿಯೂ ಯುವಜನರಿಗೆ ಉದ್ಯೋಗ ದೊರಕಿಸುವಂತಹ ಗುರುತರ ಜವಾಬ್ದಾರಿಯನ್ನು ಸರ್ಕಾರಗಳು ಕೈಗೊಳ್ಳಬೇಕಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಯುವ ಅಮೇರಿಕಾ ತನ್ನ ಈ ಸಾಧನೆಗೆ 150ವರ್ಷ ತೆಗೆದುಕೊಂಡಿದೆ. ಆದರೆ ಭಾರತ 75ನೇ ವರ್ಷದಲ್ಲಿಯೇ ವಿಶ್ವದ 5ನೇ ಅರ್ಥಿಕ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಇದಕ್ಕೆ ಈ ಹಿಂದೆ ಆಳ್ವಿಕೆ ನಡೆಸಿದ ಎಲ್ಲ ಮಹನೀಯರು ಕಾರಣ. ಅವರೆಲ್ಲರನ್ನು ನಾವು ಸ್ಮರಿಸಬೇಕಿದೆ. ವಿಶ್ವದ ನಂಬರ್ 1 ಅರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಲು ನಾವೆಲ್ಲರೂ ಕಾಯಾ, ವಾಚಾ, ಮನಸ್ಸಾ ಶ್ರಮಿಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಸೇನಾ ಮೆಡಲ್ ಪುರಸ್ಕೃತರಾದ ಹವಾಲ್ದಾರ್ ಎಂ.ಸಾಧಿಕ್ ಅವರನ್ನು ಸಂಸ್ಥೆಯ ವತಿಯಿಂದ ಹೃಪೂರ್ವಕವಾಗಿ ಅಭಿನಂದಿಸಲಾಯಿತು.75ನೇ ಸ್ವಾತಂತ್ರದ ಅಮೃತಮಹೋತ್ಸವ ಕಾರ್ಯಕ್ರಮದ ಪಥಸಂಚಲನ ಪೇರೆಡ್‌ನಲ್ಲಿ ಪಾಲ್ಗೊಂಡಿದ್ದ ಸರ್ವೊದಯ ವಿದ್ಯಾಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ 18ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪಥಸಂಚಲನದ ನೇತೃತ್ವವನ್ನು ಎನ್.ಸಿ.ಸಿ.ಜೂನಿಯರ್ ಅಂಡರ್ ಅಫೀಸರ್ ಸೂರ್ಯ ವಹಿಸಿದ್ದರು. ವೇದಿಕೆಯಲ್ಲಿ ಸರ್ವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಸೀತಾರಾಮ್, ಜಂಟಿ ಕಾರ್ಯದರ್ಶಿ ಕೆ.ವಿ.ಸುಬ್ಬರಾವ್, ಸಂಸ್ಥೆಯ ನಿರ್ದೇಶಕರಾದ ಕೆ.ಎಸ್.ಚಂದ್ರಶೇಖರ್, ಸಿ.ವಿ.ಕೇಶವಮೂರ್ತಿ, ವರದರಾಜ ಪೈ, ಶಿಕ್ಷಕರಾದ ನಾಗರಾಜರಾವ್, ಶಂಕರಿ ಕಾಮತ್, ಜಿ.ಶ್ರೀನಿವಾಸಮೂರ್ತಿ, ವಿ.ಎಸ್.ಕಾಮಾಕ್ಷಿ,ನಾಗೇಶ್, ಗಾಯಿತ್ರಿ, ಸವಿತ, ಶ್ರೀಹರ್ಷ ಹಾಗೂ ಎನ್.ಸಿ.ಸಿ.ಅಧಿಕಾರಿ ಪ್ರದೀಪ್ ಉಪಸ್ಥಿತರಿದ್ದರು.
ಪಂಡಿತ್ ಮಂಜುನಾಥ ಗುರೂಜಿ, ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಂ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಮೇಷ ರಾಶಿ.. ಇಂದಿನ ದಿನ ಇಂದು ಮಧ್ಯಮ ಫಲಪ್ರದ ದಿನವಾಗಿರುತ್ತದೆ. ಕುಟುಂಬ ಚರ್ಚೆಗಳನ್ನು ತಪ್ಪಿಸಿ, ಇಲ್ಲದಿದ್ದರೆ ಕೋಪದಲ್ಲಿ ಸಂಬಂಧಗಳು ಮಾತ್ರ ಹದಗೆಡುತ್ತವೆ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಪರವಾಗಿ ಕೆಲವು ಬದಲಾವಣೆಗಳಿರಬಹುದು, ಈ ಕಾರಣದಿಂದಾಗಿ, ನಿಮ್ಮ ಸಹೋದ್ಯೋಗಿಗಳ ಮನಸ್ಥಿತಿ ತೊಂದರೆಗೊಳಗಾಗಬಹುದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು, ಯಶಸ್ಸಿಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕು. ಹಣಕಾಸಿನ ವಹಿವಾಟಿನ ವಿಷಯದಲ್ಲಿ ಕಾಳಜಿ ವಹಿಸಿ ಇಲ್ಲದಿದ್ದರೆ ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ. ಸಂಜೆ ಹೆಂಡತಿಯ ಆರೋಗ್ಯದ ಕೊರತೆಯಿಂದಾಗಿ, ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ವೃಷಭ ರಾಶಿ.. ಇಂದಿನ ದಿನ ಕುಟುಂಬ ಮತ್ತು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲಾಗುತ್ತದೆ ಮತ್ತು ತಾಯಿಯ ಆರೋಗ್ಯವು ಅನುಕೂಲಕರವಾಗಿರುತ್ತದೆ. ಅದೃಷ್ಟವಶಾತ್ ಮಧ್ಯಾಹ್ನದ ಹೊತ್ತಿಗೆ ನಿಮಗೆ ಸಂತೋಷಕರವಾದ ಒಳ್ಳೆಯ ಸುದ್ದಿ ಸಿಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅರ್ಹತೆಗಳನ್ನು ಹೆಚ್ಚಿಸುವ ಮೂಲಕ ಯಶಸ್ಸನ್ನು ಸಾಧಿಸಲಾಗುತ್ತದೆ. ವ್ಯಾಪಾರ ವರ್ಗಕ್ಕೆ ಇದು ಅತ್ಯುತ್ತಮ ಸಮಯ. ಪ್ರೇಮ ವಿವಾಹದಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಅತ್ಯಂತ ಶುಭ ಸಮಯ. ಹೂಡಿಕೆ ಲಾಭವಾಗಲಿದೆ ಮತ್ತು ಆಸ್ತಿ ಹೆಚ್ಚಾಗುತ್ತದೆ. ಸಂಜೆಯ ಸಮಯದಲ್ಲಿ ಅತಿಥಿಯ ಆಗಮನವು ಸಂತೋಷದಾಯಕವಾಗಿರುತ್ತದೆ ಮತ್ತು ಯಾವುದೇ ಬೇಡಿಕೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಗೌರವವು ಹೆಚ್ಚಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಮಿಥುನ ರಾಶಿ.. ಇಂದಿನ ದಿನ ನೀವು ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ ಮತ್ತು ಭವಿಷ್ಯದ ವಿಷಯಗಳ ಬಗ್ಗೆಯೂ ಚರ್ಚಿಸಲಾಗುವುದು. ಯಾವುದೇ ಅಮೂಲ್ಯವಾದ ವಸ್ತು ಅಥವಾ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಯಕೆಯನ್ನು ಇಂದು ಉನ್ನತ ಅಧಿಕಾರಿಗಳ ಅನುಗ್ರಹದಿಂದ ಈಡೇರಿಸಿಕೊಳ್ಳುವಿರಿ. ಹೊಂದಾಣಿಕೆಯು ಕಾರ್ಯ ಕ್ಷೇತ್ರದಲ್ಲಿ ಹೆಚ್ಚಾಗಿರುತ್ತದೆ. ಆದರೆ ವ್ಯರ್ಥ ವೆಚ್ಚವನ್ನು ತಪ್ಪಿಸಿ. ಆತ್ಮೀಯ ಮತ್ತು ಮಹಾನ್ ಪುರುಷರು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತಾರೆ. ವ್ಯಾಪಾರದಲ್ಲಿನ ಹೊಸ ಒಪ್ಪಂದಗಳು ಲಾಭದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಒಡಹುಟ್ಟಿದವರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಪ್ರೀತಿ ಜೀವನದಲ್ಲಿ ಮಾಧುರ್ಯತೆ ಇರುತ್ತದೆ. ವೇಗದ ವಾಹನಗಳನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಕಟಕ ರಾಶಿ.. ಇಂದಿನ ದಿನ ನಿಮ್ಮ ನಾಯಕತ್ವದಲ್ಲಿ ನಡೆಯುತ್ತಿರುವ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಅಧಿಕಾರಿಗಳೊಂದಿಗಿನ ಸಂಬಂಧ ಸುಧಾರಿಸುತ್ತದೆ. ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸಲಾಗುವುದು, ಅದು ಸಂಪತ್ತನ್ನು ಹೆಚ್ಚಿಸುತ್ತದೆ. ವ್ಯವಹಾರ ಯೋಜನೆಗಳು ವೇಗವನ್ನು ಪಡೆಯುತ್ತವೆ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಯಾವುದೇ ನಿರ್ಧಾರವನ್ನು ತ್ವರಿತವಾಗಿ ತೆಗೆದುಕೊಳ್ಳಬೇಡಿ. ಕುಟುಂಬ ವ್ಯವಹಾರದಲ್ಲಿ, ತಂದೆಯ ಮಾರ್ಗದರ್ಶನ ಸಿಗುತ್ತದೆ ಮತ್ತು ಅವರ ಸಹಕಾರದಿಂದ ಅನೇಕ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಇದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಕಾರಣವಾಗುತ್ತದೆ. ಹಳೆಯ ಸಾಲಗಳಿಂದ ನಿಮಗೆ ಸ್ವಾತಂತ್ರ್ಯ ಸಿಗುತ್ತದೆ. ಸಂಜೆ ಸಮಯದಲ್ಲಿ ದೇವರ ದರ್ಶನ ಮಾಡುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಸಿಂಹ ರಾಶಿ.. ಇಂದಿನ ದಿನ ಇದು ವಿದ್ಯಾರ್ಥಿಗಳಿಗೆ ಶುಭ ದಿನವಾಗಿದೆ, ಏಕಾಗ್ರತೆಯಿಂದ ಕೆಲಸ ಮಾಡಿ. ಪ್ರಮುಖ ವಿಷಯಗಳನ್ನು ಕುಟುಂಬದೊಂದಿಗೆ ಚರ್ಚಿಸಲಾಗುವುದು. ಕ್ಷೇತ್ರದಲ್ಲಿ ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಇರುತ್ತದೆ ಮತ್ತು ಮಕ್ಕಳ ಬಗೆಗಿನ ಬಾಧ್ಯತೆಯನ್ನು ಪೂರೈಸಲಾಗುತ್ತದೆ. ಸಹೋದರರ ಸಹಾಯದಿಂದ, ಸ್ಥಗಿತಗೊಂಡ ಕೆಲಸವೂ ಪೂರ್ಣಗೊಳ್ಳುತ್ತದೆ ಮತ್ತು ಅವರು ಸ್ಪರ್ಧೆಯ ಕ್ಷೇತ್ರದಲ್ಲಿ ಮುಂದುವರಿಯುತ್ತಾರೆ. ಆಸ್ತಿ ಸಂಬಂಧಿತ ವಿವಾದಗಳಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ವಿದೇಶದಿಂದ ವ್ಯಾಪಾರ ಮಾಡುವವರಿಗೆ ಸಕಾರಾತ್ಮಕ ಫಲಿತಾಂಶ ಸಿಗುತ್ತದೆ. ಸಂಜೆ ತತ್ವಶಾಸ್ತ್ರ ಮತ್ತು ಹಾಸ್ಯದಲ್ಲಿ ಕಳೆಯಲಾಗುವುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಕನ್ಯಾ ರಾಶಿ.. ಇಂದಿನ ದಿನ ಸಹೋದರರ ಸಹಾಯದಿಂದ, ನೀವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಗುರುಗಳು ಮತ್ತು ಸಹಪಾಠಿಗಳ ಬೆಂಬಲ ಸಿಗುತ್ತದೆ. ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ಕುಟುಂಬ ಸದಸ್ಯರಿಂದ ಸಂತೋಷ ಇರುತ್ತದೆ, ಕುಟುಂಬ ಕಾರ್ಯಗಳಲ್ಲಿ ಸಂತೋಷ ಇರುತ್ತದೆ ಮತ್ತು ಮನಸ್ಸು ಸೃಜನಶೀಲ ಕಾರ್ಯಗಳಲ್ಲಿ ತೊಡಗುತ್ತದೆ. ಕೆಲಸದ ಸ್ಥಳದಲ್ಲಿ ಕೋಪ ಸಂಭವಿಸಿದಾಗ, ಕೋಪವನ್ನು ನಿಯಂತ್ರಿಸಿ. ಸ್ನೇಹಿತರ ಸಹಾಯದಿಂದ, ಹೊಸ ಅವಕಾಶಗಳನ್ನು ಪಡೆಯಲಾಗುವುದು ಮತ್ತು ರಾಜ್ಯದ ಸಹಾಯವೂ ಲಭ್ಯವಿರುತ್ತದೆ. ಸಂಜೆ ಹಠಾತ್ ಲಾಭ ಗಳಿಸುವ ಸಾಧ್ಯತೆಗಳಿವೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ತುಲಾ ರಾಶಿ.. ಇಂದಿನ ದಿನ ವ್ಯಾಪಾರಿಗಳಿಗೆ ರಾಜ್ಯ ಕಡೆಯಿಂದ ಹೊಸ ಅವಕಾಶಗಳು ಸಿಗುತ್ತವೆ ಮತ್ತು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಲಾಗುವುದು. ಶಿಕ್ಷಣ ಮತ್ತು ಸ್ಪರ್ಧೆಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಸಾಧನೆಯ ಅವಕಾಶ ಸಿಗುತ್ತಿದೆ. ಮಗುವಿನ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ ಮತ್ತು ಕೆಲವು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಸಂಗಾತಿಯ ಸಾಕಷ್ಟು ಬೆಂಬಲ ಮತ್ತು ಒಡನಾಟವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಲಾಭದ ಪರಿಸ್ಥಿತಿಗಳು ಕಂಡುಬರುತ್ತವೆ ಮತ್ತು ಹೊಸ ಅವಕಾಶಗಳು ಬರುತ್ತವೆ. ಪ್ರೀತಿಯ ಜೀವನದಲ್ಲಿ ಹೆಚ್ಚಿನ ನಿರೀಕ್ಷೆಯಿಂದಾಗಿ ಒಬ್ಬರು ನಿರಾಸೆಯನ್ನು ಎದುರಿಸಬಹುದು. ತಂದೆಯ ಆಶೀರ್ವಾದದಿಂದ ಪ್ರಾರಂಭವಾದ ಎಲ್ಲಾ ಕೆಲಸಗಳಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ವೃಶ್ಚಿಕ ರಾಶಿ.. ಇಂದಿನ ದಿನ ಪೋಷಕರಿಗೆ ವಾತ್ಸಲ್ಯ ಸಿಗುತ್ತದೆ ಮತ್ತು ಆರ್ಥಿಕ ಭಾಗವು ಬಲವಾಗಿರುತ್ತದೆ. ನಿಲ್ಲಿಸಿದ ಕೆಲಸವು ಪೂರ್ಣಗೊಳ್ಳುತ್ತದೆ. ಮತ್ತು ಪ್ರೀತಿಪಾತ್ರರು ನಿಮ್ಮನ್ನು ಭೇಟಿಯಾಗುತ್ತಾರೆ. ಕಾನೂನಿಗೆ ಸಂಬಂಧಿತ ವಿಷಯಗಳಲ್ಲಿ ನೀವು ಪ್ರಯೋಜನ ಪಡೆಯುತ್ತೀರಿ. ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳದಿರುವುದು ಪ್ರತಿಕೂಲ ಸಂದರ್ಭಗಳಿಗೆ ಕಾರಣವಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಂದ ನಿಮಗೆ ಸ್ವಾತಂತ್ರ್ಯ ಸಿಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುತ್ತದೆ. ವ್ಯಾಪಾರಿಗಳು ಹೊಸ ಆದಾಯದ ಮೂಲಗಳಿಂದ ಲಾಭ ಪಡೆಯುತ್ತಿರುವ ಲಕ್ಷಣಗಳಿವೆ. ಸಂಜೆ ಸಮಯವನ್ನು ಸ್ನೇಹಿತರೊಂದಿಗೆ ಕಳೆಯಲಾಗುತ್ತದೆ, ವಿಹಾರ ಮತ್ತು ಮೋಜು ಇರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಧನಸ್ಸು ರಾಶಿ.. ಇಂದಿನ ದಿನ ಇಂದು ಮಿಶ್ರ ಫಲವನ್ನು ಪಡೆಯುವ ದಿನವಾಗಿರುತ್ತದೆ. ಪಾಲುದಾರಿಕೆಯಲ್ಲಿ ನಡೆಯುತ್ತಿರುವ ಕೆಲಸದಲ್ಲಿ ಕೆಲವು ವಿರೋಧಗಳು ಉದ್ಭವಿಸಬಹುದು ಮತ್ತು ಮನೆಯ ಉಪಯುಕ್ತತೆಗಳಿಗಾಗಿ ಹಣವನ್ನು ಖರ್ಚು ಮಾಡಲಾಗುತ್ತದೆ. ಲೌಕಿಕ ಸುಖಗಳ ಸಾಧನಗಳು ಹೆಚ್ಚಾಗುತ್ತವೆ ಮತ್ತು ಕೆಲಸದ ಸ್ಥಳದಲ್ಲಿ ಕೆಲಸಗಾರರು ಅಥವಾ ಸಂಬಂಧಿಕರಿಂದ ಒತ್ತಡ ಹೆಚ್ಚಾಗಬಹುದು. ಇತರರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಕೋರ್ಟು- ನ್ಯಾಯಾಲಯದ ಪ್ರಕರಣಗಳಲ್ಲಿ ನೀವು ಗೆಲುವನ್ನು ಸಾಧಿಸುವಿರಿ ಮತ್ತು ನಿಮ್ಮ ವಿರುದ್ಧದ ಪಿತೂರಿಗಳು ವಿಫಲಗೊಳ್ಳುತ್ತವೆ. ಅಪೇಕ್ಷಿತ ಯಶಸ್ಸನ್ನು ಸಾಧಿಸಲು ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ತಂದೆಯ ಆರೋಗ್ಯದತ್ತ ಹೆಚ್ಚಿನ ಗಮನ ನೀಡಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಮಕರ ರಾಶಿ.. ಇಂದಿನ ದಿನ ಇಂದು ಕೆಲಸದ ಸ್ಥಳವು ಹೆಚ್ಚು ಕಾರ್ಯನಿರತವಾಗಿದೆ ಮತ್ತು ಕೆಲಸದ ಹೊರೆ ಕೂಡ ಹೆಚ್ಚಾಗುತ್ತದೆ. ವ್ಯಾಪಾರ ವಲಯದಲ್ಲಿ ಮನಸ್ಸಿನ ಅನುಕೂಲಕರ ಪ್ರಯೋಜನಗಳನ್ನು ಹೊಂದಿರುವುದು ಸಂತೋಷದ ಸಂಗತಿಯಾಗಿದೆ. ನೀವು ಕುಟುಂಬದ ಸದಸ್ಯರಿಂದ ಅನುಕೂಲಕರ ಸುದ್ದಿಗಳನ್ನು ಕೇಳುವಿರಿ. ಕುಟುಂಬದಲ್ಲಿ ಯಾವುದೇ ಮಹಿಳಾ ಸದಸ್ಯರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ ಮತ್ತು ಅವರಿಗೆ ಬೆಂಬಲವೂ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ, ಅದು ಅವರ ಕುಟುಂಬದ ಜವಾಬ್ದಾರಿಗಳನ್ನು ಪೂರೈಸುತ್ತದೆ. ವೈವಾಹಿಕ ಜೀವನ ಆನಂದದಾಯಕವಾಗಿರುತ್ತದೆ. ಸಂಜೆ ಸಮಯದಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ವಾಹನ ಬಳಕೆಯಲ್ಲಿ ಎಚ್ಚರಿಕೆಯಿಂದ ಬಳಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಕುಂಭ ರಾಶಿ.. ಇಂದಿನ ದಿನ ಇಂದು ಮಧ್ಯಮ ಫಲಪ್ರದ ದಿನವಾಗಿರುತ್ತದೆ. ಗೌಪ್ಯ ವಿಷಯ ಬೇರೆಯವರ ಮುಂದೆ ಬರಲು ಬಿಡಬೇಡಿ, ಇದರಿಂದ ನೀವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕಾರ್ಯ ಕ್ಷೇತ್ರದ ಸಹೋದ್ಯೋಗಿಯಿಂದ ದ್ರೋಹವನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿನ ಯಾವುದೇ ಉದ್ವೇಗದಿಂದ ದೂರವಿರಿ ಮತ್ತು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಹಠಾತ್ ದೇಹದ ನೋವು ಉಂಟಾಗುವುದು. ಹೆಂಡತಿ ಆರೋಗ್ಯದ ಸಮಸ್ಯೆಗಳ ನಿವಾರಣೆಗೆ ವೆಚ್ಚ ಹೆಚ್ಚಾಗಬಹುದು. ಆಸ್ತಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಮೊದಲು, ಅದರ ಎಲ್ಲಾ ಕಾನೂನು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ. ಸಂಬಂಧಿಕರೊಂದಿಗಿನ ಸಂಬಂಧಗಳು ಬಲವಾಗಿರುತ್ತವೆ ಮತ್ತು ನಿಮ್ಮ ಸಮಸ್ಯೆಗಳಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 ಮೀನ ರಾಶಿ.. ಇಂದಿನ ದಿನ ವ್ಯಾಪಾರ ಕ್ಷೇತ್ರದಲ್ಲಿ ಬರುವ ಅಡೆತಡೆಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಸಾಮಾಜಿಕ ಖ್ಯಾತಿ ವಿಸ್ತರಿಸುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಹೊಸ ಆದಾಯದ ಮೂಲಗಳು ಅಭಿವೃದ್ಧಿಗೊಳ್ಳುತ್ತವೆ. ಆದಾಗ್ಯೂ, ಅನಗತ್ಯ ವೆಚ್ಚಗಳು ಸಮತೋಲನ ಕ್ಷೀಣಿಸಲು ಕಾರಣವಾಗಬಹುದು. ವ್ಯವಹಾರದಲ್ಲಿ ಬೆಳೆಯುತ್ತಿರುವ ಪ್ರಗತಿ ತುಂಬಾ ಸಂತೋಷವನ್ನು ನೀಡುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಕಾಪಾಡಿಕೊಳ್ಳಲು ಪೋಷಕರ ಸಲಹೆ ಮತ್ತು ಆಶೀರ್ವಾದ ಉಪಯುಕ್ತವೆಂದು ಸಾಬೀತಾಗುತ್ತದೆ. ವಿದ್ಯಾರ್ಥಿಗಳು ಮಾನಸಿಕ ಮತ್ತು ಬೌದ್ಧಿಕ ಹೊರೆಯನ್ನು ತೊಡೆದುಹಾಕುತ್ತಾರೆ ಮತ್ತು ನಿಮ್ಮ ಮನಸ್ಸು ಸಹ ವಿಶ್ರಾಂತಿ ಪಡೆಯುತ್ತದೆ. ಯಾವುದೇ ಪ್ರಮುಖ ಮಾಹಿತಿಯನ್ನು ಸಂಜೆ ಸಮಯದಲ್ಲಿ ಕಾಣಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98869 99747 Post Views: 322 Post navigation ನಂಜುಂಡೇಶ್ವರ ಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. ನರಸಿಂಹಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಕಾರವಾರ(ಅ.07): ರಾಜ್ಯದ ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಏಳೆಂಟು ವರ್ಷದಿಂದ ಕುಂಟುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಖಡಕ್ ಸೂಚನೆ ಬೆನ್ನಲ್ಲೇ ಐಆರ್ ಬಿ ಕಂಪೆನಿ ಹೆದ್ದಾರಿ ಕಾಮಗಾರಿಗೆ ವೇಗ ನೀಡಲು ಮುಂದಾಗಿದೆ. ಆದರೆ, ಹೆದ್ದಾರಿ ಪ್ರಾಧಿಕಾರ ಹಾಗೂ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಹಿಂದೊಮ್ಮೆ ಸರ್ವೇ ನಡೆಸಿದ್ದರೂ, ಇದೀಗ ಮತ್ತೆ ಐಆರ್‌ಬಿ ಕಂಪನಿಯವರು ಹೆದ್ದಾರಿಯ ಸೆಂಟರ್ ಲೈನ್ ಬದಲಿಸಿ ಮತ್ತೊಮ್ಮೆ ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಇದು ಹೆದ್ದಾರಿಯಂಚಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಈ‌ ಕುರಿತ ಒಂದು ವರದಿ ಇಲ್ಲಿದೆ‌ ನೋಡಿ... ಹೌದು, ಮಹಾರಾಷ್ಟ್ರದ ಪನ್ವೇಲ್‌ನಿಂದ ಕನ್ಯಾಕುಮಾರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯು ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯದ ಪಶ್ಚಿಮ‌ ಘಟ್ಟಗಳ ಅಂಚಿನಲ್ಲಿ ಹಾದು ಹೋಗುತ್ತದೆ. ಎಲ್ಲಾ ಕಡೆ ಬಹುತೇಕ ಕಾಮಗಾರಿ ಮುಕ್ತಾಯವಾಗಿದೆಯಾದ್ರೂ ಕರ್ನಾಟಕದಲ್ಲಿ ಮಾತ್ರ ಕುಂಟುತ್ತಾ ಸಾಗುತ್ತಿದೆ. ಅದರಲ್ಲಿಯೂ ಉತ್ತರ ಕನ್ನಡದ ಕರಾವಳಿಯುದ್ದಕ್ಕೂ ಅರೆಬರೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇತ್ತೀಚೆಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್ಬಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ದಾಂಡೇಲಿಯಲ್ಲಿ ಜಿ+2 ಮಾದರಿ ಮನೆ ನನೆಗುದಿಗೆ ಇದೀಗ ಕಾಮಗಾರಿಗೆ ವೇಗ ನೀಡಲು ಮುಂದಾಗಿರುವ ಐಆರ್‌ಬಿ ಕಂಪೆನಿ ಕೆಲವೆಡೆ ಸೆಂಟರ್ ಲೈನ್ ಬದಲಿಸಿ ಕಾಮಗಾರಿಗೆ ಮುಂದಾಗಿದೆ.‌ ಇದರಿಂದ ಈ ಹಿಂದೆ ಸರ್ವೆ ಮಾಡಿದ ಪ್ರದೇಶಗಳಿಗಿಂತ ಹೆಚ್ಚಿನ ಪ್ರಮಾಣದ ಭೂಮಿ ಹೋಗುತ್ತಿದೆ. ಆದರೆ, ಸಂತ್ರಸ್ಥರಿಗೆ ಈ ಹಿಂದೆ ನಿಗದಿ ಮಾಡಿದಷ್ಟು ಜಮೀನಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಸೆಂಟರ್ ಲೈನ್ ಬದಲಿಸುವ ಅಧಿಕಾರ ಇಲ್ಲದಿದ್ದರೂ ಈ ರೀತಿ ಮಾಡಲಾಗುತ್ತಿದ್ದು, ಸರ್ವೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮಾಜಾಳಿ ನಿವಾಸಿ ಬಿ.ಜಿ. ಸಾವಂತ ಆಗ್ರಹಿಸಿದ್ದಾರೆ. ಇನ್ನು ಕಾರವಾರದ ಮಾಜಾಳಿಯ ಭಾಗದಲ್ಲಿ ಹೆದ್ದಾರಿಗಾಗಿ ಕೆಲವರ ಮನೆಗಳು ಹಾಗೂ ಜಮೀನುಗಳು ಶೇ. 90 ರಷ್ಟು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಸ್ವಾಧೀನ ಭೂಮಿಯ ಶೇ.15 ರಷ್ಟು ಮಾತ್ರ ಪರಿಹಾರ ನೀಡಿದ್ದಾರೆ. ಪರಿಹಾರ ನೀಡುವ ಕುರಿತು ಜಮೀನು ಮಾಲೀಕರನ್ನು ಕೇಳದೆ ನೇರವಾಗಿ ನ್ಯಾಯಾಲಯಕ್ಕೆ ಠೇವಣಿ ಮಾಡಿದ್ದಾರೆ. ಈ ಬಗ್ಗೆ ಜಮೀನು ಮಾಲೀಕರಿಗೆ ತಿಳಿದು ಕಂಗಲಾಗಿದ್ದಾರೆ. ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಬೃಹತ್‌ ಪ್ರತಿಭಟನೆ ಅಧಿಕಾರಿಗಳನ್ನು ಕೇಳಿದರೆ ಅವರ ಲೆಕ್ಕಕ್ಕೂ, ಜಮೀನಿನ ಸ್ವಾಧೀನದ ಲೆಕ್ಕಕ್ಕೂ ತಾಳೆಯಾಗುವುದಿಲ್ಲ. ಅಲ್ಲದೇ, ಜಮೀನಿನ ಸ್ವಾಧೀನದ ಅಂಕಿಅಂಶಗಳನ್ನು ಲಿಖಿತವಾಗಿಯೂ ನೀಡುತ್ತಿಲ್ಲ. ಕಳೆದುಕೊಂಡ ಜಮೀನಿಗೆ ತಕ್ಕಂತೆ ಪರಿಹಾರ ಸಿಗದೇ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಿದೆ. ಮೇಲಿಂದ ಅ.10ರಂದು ಜೆಸಿಬಿಯೊಂದಿಗೆ ಭೂ ಸ್ವಾಧೀನಕ್ಕೆ ಬರುವುದಾಗಿ ತಿಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ, ಜಿಲ್ಲೆಯ ಕರಾವಳಿಯಲ್ಲಿ ಹಾದುಹೋಗಿರುವ ಹೆದ್ದಾರಿಗಾಗಿ 4 ಸಾವಿರಕ್ಕೂ ಹೆಚ್ಚು ಸರ್ವೆ ನಂಬರ‌್‌ಗಳಲ್ಲಿನ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಬಳಿಕ ಆಯಾ ಸರ್ವೆ ನಂಬರ್ ನಲ್ಲಿ ಉಳಿದ ಜಮಿನುಗಳ ಸರ್ವೇ ಮಾಡಿ ಕೆಡಿಪಿ ಮಾಡಬೇಕಾಗಿತ್ತಾದರೂ ಈವರೆಗೂ ಅದನ್ನು ಮಾಡಿಲ್ಲ. ಒಂದೊಮ್ಮೆ ಸರ್ವೇ ಮಾಡಿ ಗಡಿ ಗುರುತು ಮಾಡದೆ ಇದ್ದಲ್ಲಿ ಮುಂದೆ ಜಮೀನು ವಾರಸುದಾರರಿಗೆ ಸಮಸ್ಯೆಯಾಗಲಿದೆ.‌ ಅಲ್ಲದೇ, ಜಮೀನು ಕೊಟ್ಟ ತಪ್ಪಿಗೆ ಸ್ವಂತ ಖರ್ಚಿನಲ್ಲಿ ಇದೆಲ್ಲವನ್ನೂ ಮಾಡಿಸಬೇಕಾಗಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರಾದ ಪ್ರವೀಣ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂ ಸ್ವಾಧೀನ‌ ಪ್ರಕ್ರಿಯೆಯಿಂದಾಗಿ ಹೆದ್ದಾರಿಯಂಚಿನ ಜನರು ಮತ್ತಷ್ಟು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇನ್ನೊಂದೆಡೆ ಹೆದ್ದಾರಿಗಾಗಿ ಜಮೀನು ಕೊಟ್ಟವರ ಜಮೀನಿನ ಸರ್ವೆ ನಡೆಸಿ ಗಡಿ ಗುರುತಿಸಬೇಕಿದ್ದ ಅಧಿಕಾರಿಗಳು ತೆಪ್ಪಗೆ ಕುಳಿತಿರುವುದು ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಕಾರಣದಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಸಂತ್ರಸ್ತರ ಸಮಸ್ಯೆ ಬಗೆಹರಿಸಬೇಕಿದೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP) ಸಮೂಹ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲು ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ತುದಿಗಾಲಲ್ಲಿ ನಿಂತಿರುವಂತೆಯೇ, ದೇಶವ್ಯಾಪಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ RCEP ವಿರುದ್ಧ ಅಸಮಾಧಾನದ ಕಿಡಿಗಳು ಅಂತರ್ಗತವಾಗಿ ಪ್ರವಹಿಸತೊಡಗಿವೆ. ಆಸಕ್ತ ಜನ ಸಮುದಾಯಗಳು RCEP ವಿರುದ್ಧ ಸಮಾಜಿಕ ಜಾಲತಾಣಗಳಲ್ಲಿ ಪ್ರಚಾರಾಂದೋಲನ ಪ್ರಾರಂಭಿಸಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ರಾಹುಲ್ ಹೇಳಿಕೆ ಬೆನ್ನಲ್ಲೇ ಪೈಲಟ್ ಜತೆಗಿನ ಗುದ್ದಾಟಕ್ಕೆ ತೆರೆ ಎಳೆದ ಗೆಹ್ಲೋಟ್ ಉಡುಪಿ; ವಿದ್ಯಾರ್ಥಿಯನ್ನು ಕಸಬ್ ಎಂದು ಸಂಬೋಧಿಸಿದ ಶಿಕ್ಷಕ ಅಮಾನತು ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ರದ್ದು ಪಡಿಸಿದ ಕೇಂದ್ರ ದೇಶದ ಬೆನ್ನೆಲುಬಾಗಿರುವ ಕೃಷಿ ಮತ್ತು ಹೈನುಗಾರಿಕೆಯ ಬೆನ್ನುಮೂಳೆಯನ್ನು ಮುರಿಯುವ ದುಸ್ಸಾಹಸಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆ. ಅತ್ತ ಬಾಂಕಾಂಕ್ ನಲ್ಲಿ RCEP ಸಮೂಹ ರಾಷ್ಟ್ರಗಳ ಜತೆಗೆ ಮುಕ್ತ ವ್ಯಾಪಾರಕ್ಕೆ ಒಪ್ಪಂದಕ್ಕೆ ಸಹಿ ಹಾಕುವ ಪೂರ್ವಭಾವಿ ಪ್ರಕ್ರಿಯೆ ಅಕ್ಟೋಬರ್ 23ಕ್ಕೆ ಪೂರ್ಣಗೊಂಡಿವೆ. ನವೆಂಬರ್ 1ರಂದು ಮೊದಲ ಹಂತದಲ್ಲಿ ಅಂತಿಮ ಸುತ್ತಿನ ಷರತ್ತುಗಳು, ಒಪ್ಪಂದಗಳು ಪೂರ್ಣಗೊಳ್ಳಲಿದ್ದು, ನವೆಂಬರ್ 4ಕ್ಕೆ ಭಾರತ, ಚೀನಾ ಸೇರಿದಂತೆ 16 ರಾಷ್ಟ್ರಗಳ ಮುಖ್ಯಸ್ಥರು ಸಹಿ ಹಾಕಲಿದ್ದಾರೆ. ಒಂದು ವೇಳೆ, ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು RCEP ಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದರೆ, ಅದು ಕರ್ನಾಟಕ ಸೇರಿದಂತೆ ದೇಶದ ರೈತರ ಮರಣಶಾಸನಕ್ಕೆ ಸಹಿ ಹಾಕಿದಂತಾಗುತ್ತದೆ. ಮುಂಬರುವ ವರ್ಷಗಳಲ್ಲಿ ಕೃಷಿ, ಕೃಷಿ ಆಧಾರಿತ ಉದ್ಯಮಗಳು ಮತ್ತು ಹೈನು ಉದ್ಯಮ ಅವನತಿಯತ್ತ ಸಾಗಲಿದೆ. ಕೃಷಿಯನ್ನು ಅವಲಂಬಿಸಿರುವ ರೈತ, ಕೃಷಿ ಕಾರ್ಮಿಕ, ಕೃಷಿಯಾಧಾರಿತ ಉದ್ದಿಮೆಗಳು, ಅಲ್ಲಿನ ಕಾರ್ಮಿಕರು, ಹೈನೋದ್ಯಮ ಮತ್ತು ಹೈನೋದ್ಯಮದಲ್ಲಿ ಪೂರ್ಣ ಮತ್ತು ಅರೆ ಉದ್ಯೋಗ ಪಡೆದಿರುವವರು ದಿಕ್ಕಾಪಾಲಾಗುತ್ತಾರೆ. ಪ್ರಾಕೃತಿಕ ವಿಕೋಪಗಳಿಂದಾಗಿಯೇ ಆಗುತ್ತಿರುವ ನಷ್ಟವನ್ನು ತಡೆದುಕೊಳ್ಳಲಾಗದ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಇನ್ನು ತಮ್ಮದೇ ನೆಲದಲ್ಲಿ ತಮ್ಮದೇ ಬೆಳೆಯ ಮುಂದೆ ವಿದೇಶಿ ಬೆಳೆಯನ್ನು ತಂದು ಕಡಮೆ ಬೆಲೆ ಮಾರಾಟ ಮಾಡಿದರೆ ರೈತರಿಗೆ ಬೇರೆ ದಾರಿಯಾವುದಿರಲು ಸಾಧ್ಯ? RCEP ಬಗ್ಗೆ ಆತಂಕ ಏಕೆ? ಏಕೆಂದರೆ RCEP ಜತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲು ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ಎಲ್ಲಾ ಭಾಗೀದಾರರೊಂದಿಗೆ ಒಪ್ಪಂದಗಳಲ್ಲಿನ ಷರತ್ತು ಮತ್ತು ಅವಕಾಶಗಳ ಕುರಿತಂತೆ ಮಾಹಿತಿ ಹಂಚಿಕೊಂಡಿಲ್ಲ. ಅದನ್ನು ಅತ್ಯಂತ ಗೌಪ್ಯವಾಗಿಟ್ಟು ವ್ಯವಹರಿಸಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಿಕ ಸತ್ಸಂಪ್ರದಾಯಗಳನ್ನು ಇಲ್ಲಿ ನಿಚ್ಚಳವಾಗಿ ಉಲ್ಲಂಘಿಸಲಾಗಿದೆ. ಸದ್ಯಕ್ಕೆ ಸೋರಿಕೆಯಾಗಿರುವ ಕರಡು ಒಪ್ಪಂದಗಳ ಮಾಹಿತಿಯನುಸಾರ ಯಾವ ಯಾವ ವಲಯದಲ್ಲಿ ವಿದೇಶಿ ಸರಕುಗಳಿಗೆ ಇದುವರೆಗೆ ಮಾರಾಟಕ್ಕೆ ಮತ್ತು ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲವೋ ಅಂತಹ ಎಲ್ಲಾ ವಲಯಗಳಲ್ಲೂ ವಿದೇಶಿ ಸರಕುಗಳಿಗೆ ಅವಕಾಶ ನೀಡಲಾಗುತ್ತಿದೆ. ಅಂತಹ ವಲಯಗಳಲ್ಲಿ ಕೃಷಿ ಮತ್ತು ಹೈನು ಉದ್ಯಮ ಪ್ರಮುಖವಾದುದು. ಕೃಷಿ ಮತ್ತು ಹೈನು ಅವಲಂಬಿಸಿರುವವರ ಮತ್ತು ಈ ಎರಡೂ ವಲಯವನ್ನು ಆಧರಿಸಿದ ಉದ್ಯಮವನ್ನು ಅವಲಂಬಿಸಿರುವವರ ಸಂಖ್ಯೆ ಬಹುದೊಡ್ಡದಿದೆ. ಸ್ವಂತ ಜಮೀನಿರುವ ಕೃಷಿಕರು ಮತ್ತು ಸ್ವಂತ ಜಮೀನಿಲ್ಲದೇ ಕೃಷಿ ವಲಯದಲ್ಲಿ ದುಡಿಯುವ ಕೃಷಿ ಕಾರ್ಮಿಕರ ಸಂಖ್ಯೆ 30ಕೋಟಿ ಮೀರುತ್ತದೆ. ಹೈನು ಉದ್ಯಮದಲ್ಲಿ ನೇರವಾಗಿ ತೊಡಗಿರುವರ ಸಂಖ್ಯೆ 5 ಕೋಟಿ ಮೀರಿದೆ. ಪರೋಕ್ಷವಾಗಿ ಅಷ್ಟೇ ಸಂಖ್ಯೆಯ ಉದ್ಯೋಗವನ್ನು ಈ ಉದ್ಯಮ ಒದಗಿಸಿದೆ. ಈಗಾಗಲೇ ಬೃಹತ್ ಪ್ರಮಾಣದಲ್ಲಿ ಯಾಂತ್ರೀಕರಣ ಅಳವಡಿಸಿಕೊಂಡಿರುವ ದೇಶಗಳಲ್ಲಿನ ಕೃಷಿ ಉತ್ಪನ್ನಗಳು ಮತ್ತು ಹೈನು ಉತ್ಪನ್ನಗಳ ಉತ್ಪಾದನಾ ವೆಚ್ಚವು ಭಾರತದಲ್ಲಿನ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಅತ್ಯಂತ ಕಡಮೆ ಇರುತ್ತದೆ. ಉದಾಹರಣೆಗೆ ಭಾರತದಲ್ಲಿ ಉತ್ಪಾದನೆಯಾಗುವ ಸಂಸ್ಕರಿತ ಬೆಣ್ಣೆ 1ಕೆಜಿಗೆ ಸರಾಸರಿ 400 ರೂಪಾಯಿ ಎಂದಿಟ್ಟುಕೊಂಡರೆ, ಅದೇ ಚೀನಾದಿಂದ ಬರುವ ಸಂಸ್ಕರಿತ ಬೆಣ್ಣೆ 100 ರೂಪಾಯಿಗಳಾಗಿರುತ್ತದೆ. ಅಲ್ಲದೇ ಯಾಂತ್ರೀಕರಣ ಅಳವಡಿಸಿಕೊಂಡು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವುದರಿಂದ ಅಲ್ಲಿನ ಎಲ್ಲಾ ಹೆಚ್ಚುವರಿ ಉತ್ಪನ್ನಗಳನ್ನು ತಂದು ಭಾರತಕ್ಕೆ ಸುರಿಯಲಾಗುತ್ತದೆ. ಆಗ ಭಾರತದ ದೇಶೀಯ ಉತ್ಪನ್ನಗಳ ಬೆಲೆಗೂ ಆಮದಾದ ಉತ್ಪನ್ನಗಳ ಬೆಲೆಯ ನಡುವೆ ಭಾರಿ ಅಂತರ ಇರುತ್ತದೆ. ಗ್ರಾಹಕರು ಕಡಮೆ ಬೆಲೆಯ ಆಮದಾದ ಸರಕನ್ನೇ ಖರೀದಿಸುತ್ತಾರೆ. ಭಾರತದ ಸಮಸ್ಯೆ ಏನೆಂದರೆ- ಹಾಲು ಉತ್ಪಾದಿಸುವವರು ಬಳಕೆ ಮಾಡುವ ಹಾಲಿನ ಪ್ರಮಾಣ ಅತ್ಯಲ್ಪ. ಹೀಗಾಗಿ ತಮ್ಮ ಸರಕಿನ ಮಾರಾಟ ಮೇಲೆ ಅವರಿಗೆ ನಿಯಂತ್ರಣ ಇರುವುದಿಲ್ಲ. ಇದು ಬರೀ ಬೆಣ್ಣೆಯ ವಿಷಯವಲ್ಲ. ಹಾಲು, ಮೊಸರು, ಮಜ್ಜಿಗೆ, ತುಪ್ಪ, ಸಿಹಿಪದಾರ್ಥಗಳ ಸ್ಥಿತಿಯೂ ಹೀಗೆ ಆಗುತ್ತದೆ. ಅಮೃತಸರದಲ್ಲಿ RCEP ವಿರುದ್ಧ ರೈತರ ಪ್ರತಿಭಟನೆ ಮೊಬೈಲ್ ಮಾರುಕಟ್ಟೆ ನೋಡಿ: ಹಾಗೆ ಮೈಕ್ರೊಮ್ಯಾಕ್ಸ್ ಮತ್ತು ಇಂಟೆಕ್ಸ್ ಮೊಬೈಲ್ ಗಳನ್ನು ನೆನಪು ಮಾಡಿಕೊಳ್ಳಿ. ಐದು ವರ್ಷಗಳ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಮೈಕ್ರೊಮ್ಯಾಕ್ಸ್ ಶೇ.30ರಷ್ಟು ಮತ್ತು ಇಂಟೆಕ್ಸ್ ಸುಮಾರು ಶೇ.10ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದವು. ಮೈಕ್ರೋಮ್ಯಾಕ್ಸ್ ಅಂತೂ ಭಾರತದ ಮಾರುಕಟ್ಟೆಯಲ್ಲಿ ಬೇರು ಬಿಟ್ಟಿದ್ದ ಸ್ಯಾಮ್ಸಂಗ್ ಮತ್ತು ನೊಕಿಯಾಗೆ ಸೆಡ್ಡುಹೊಡೆದಿತ್ತು. ಐದೇ ವರ್ಷದಲ್ಲಿ ಆ ಎರಡೂ ಕಂಪನಿಗಳ ಮೊಬೈಲ್ ಗಳು ಹೇಳಹೆಸರಿಲ್ಲದಂತಾಗಿವೆ. ಈಗ ಮಾರುಕಟ್ಟೆಯಲ್ಲಿ ಏನಿದ್ದರೂ ಬಹುಪಾಲು ಚೀನದಲ್ಲಿ ತಯಾರಾದ ಶವೊಮಿ, ರಿಯಲ್ ಮಿ, ಒಪ್ಪೊ ಮೊಬೈಲ್ ಗಳದ್ದೇ ದರ್ಬಾರು. ಕೊರಿಯಾದ ಸಾಮ್ಸಂಗ್, ಅಮೆರಿಕದ ಆಪಲ್ ಸಹ ಚೀನ ಕಂಪನಿಗಳ ವಿರುದ್ಧ ಸ್ಪರ್ಧಿಸಲು ಹೆಣಗಾಡುತ್ತಿವೆ. ಕನಿಷ್ಠ ಶೇ. 2ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಯಾವುದೇ ಭಾರತೀಯ ಮೊಬೈಲ್ ಈಗ ನಮ್ಮ ಮಾರುಕಟ್ಟೆಯಲ್ಲಿ ಇಲ್ಲ. ಇವತ್ತು ಮೊಬೈಲ್ ಗೆ ಆದ ಗತಿ ಮುಂದೆ ಕೃಷಿ ಉತ್ಪನ್ನಗಳಿಗೂ ಹೈನು ಉತ್ಪನ್ನಗಳಿಗೂ ಆಗುತ್ತದೆ. ಮೈಕ್ರೊಮ್ಯಾಕ್ಸ್, ಇಂಟೆಕ್ಸ್ ಮೊಬೈಲ್ ಮಾರುಕಟ್ಟೆ ಕಳೆದುಕೊಂಡಿದ್ದರಿಂದ ದೇಶದ ಆರ್ಥಿಕತೆ ಮೇಲೆ ಅಂತಹ ಪರಿಣಾಮವೇನೂ ಆಗಿಲ್ಲ. ಸುಮಾರು 2-3 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿರಬಹುದು ಅಷ್ಟೇ. ಆದರೆ, ಮೊಬೈಲ್ ಗೆ ಬಂದ ಪರಿಸ್ಥಿತಿ ಕೃಷಿ ಮತ್ತು ಹೈನು ಉತ್ಪನ್ನಗಳಿಗೂ ಬಂದರೆ, ದೇಶದಲ್ಲಿರುವ ಕೋಟ್ಯಂತರ ರೈತರು ಬೀದಿ ಪಾಲಾಗುತ್ತಾರೆ. ಕೃಷಿ ಮತ್ತು ಹೈನು ಉದ್ಯಮವನ್ನೇ ನಂಬಿಕೊಂಡವರು ಬದುಕುವ ದಾರಿಯಿಲ್ಲದೇ ಹತಾಶರಾಗುತ್ತಾರೆ. ಇಲ್ಲಿ ಮೊಬೈಲ್ ಮತ್ತು ಹೈನು ಉತ್ಪನ್ನಗಳನ್ನು ಸಾಂಕೇತಿಕವಾಗಿ ಮಾತ್ರ ವಿವರಿಸಲಾಗಿದೆ. ಒಂದು ಬಾರಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದ ನಂತರ ಚೀನಾದ ಎಲ್ಲಾ ಗೃಹೋಪಯೋಗಿ ವಸ್ತುಗಳೂ ನಮ್ಮ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತವೆ. ದರ ಸಮರದಲ್ಲಿ ಅಮೆರಿಕವನ್ನೇ ಅಲುಗಾಡಿಸುವ ಚೀನಾಕ್ಕೆ ಭಾರತದ ಗ್ರಾಹಕರು ಮತ್ತು ಮಾರುಕಟ್ಟೆ ಯಾವ ಲೆಕ್ಕ? RCEP ಗೆ ತಕರಾರು ಏಕೆ? ತಕರಾರು ಏಕೆಂದರೆ, ಭಾಗೀದಾರ ರಾಷ್ಟ್ರಗಳೊಂದಿಗೆ ಭಾರತವು ಈಗಾಗಲೇ ಮುಕ್ತ ಮಾರುಕಟ್ಟೆ ಪ್ರವೇಶ ಪಡೆದಿದೆ. ಹೊಸದಾಗಿ ಪ್ರವೇಶಿಸುವ ಅಗತ್ಯವಿಲ್ಲ. ಈಗ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಇತರ ಭಾಗೀದಾರ ರಾಷ್ಟ್ರಗಳಿಗೆ ಮುಕ್ತ ಹೆಬ್ಬಾಗಿಲು ತೆರೆದಂತಾಗುತ್ತದೆ. ವಿಶೇಷ ಎಂದರೆ ಈಗ ಅಧಿಕಾರದಲ್ಲಿರುವ ಬಿಜೆಪಿ ತಾನು ವಿರೋಧ ಪಕ್ಷದಲ್ಲಿ ಇದ್ದಾಗ ಇಂತಹ ಮುಕ್ತ ವ್ಯಾಪಾರ ಒಪ್ಪಂದಗಳನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ, ಈಗ ಬಿಜೆಪಿ ಮುಕ್ತ ವ್ಯಾಪಾರ ಒಪ್ಪಂದ ಕುರಿತಾದ ಮಾಹಿತಿಯನ್ನೇ ತನ್ನ ದೇಶದ ಜನರಿಗೆ ನೀಡದೇ ಗೌಪ್ಯವಾಗಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. RCEP ಕರಡು ಒಪ್ಪಂದವನ್ನು ಎಲ್ಲಾ ರಾಷ್ಟ್ರಗಳೂ ಮುಂಚಿತವಾಗಿ ಪ್ರಕಟಿಸಿ ಜನರ ಅಭಿಪ್ರಾಯ ಪಡೆದು ನಂತರ ಮುಂದುವರೆಯಬೇಕೆಂಬುದು ನಿಯಮ. ಆದರೆ, ಭಾರತ ಸರ್ಕಾರ ಈ ಮೂಲಭೂತ ನಿಯಮವನ್ನೇ ಉಲ್ಲಂಘಿಸಿದೆ. RCEP ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಭಾರತ ಸರ್ಕಾರ ಬಹುದೂರ ಸಾಗಿದ್ದರೂ ಜನರಿಗೆ ಅಂದರೆ ಮುಖ್ಯ ಭಾಗೀದಾರರು ಮತ್ತು ಪಾಲುದಾರರಿಗೆ ಮಾತ್ರ ಪೂರ್ಣಮಾಹಿತಿಯೇ ಸಿಕ್ಕಿಲ್ಲ. ಕೃಷಿ ಉತ್ಪನ್ನ, ಹೈನು ಉತ್ಪನ್ನ, ವಾಣಿಜ್ಯ ಬೆಳೆಗಳಾದ ಅಡಕೆ, ಕೋಕೋವಾ, ವೆನಿಲಾ, ಕೊನೆಗೆ ನಾವು ನಿತ್ಯ ಬಳಸುವ ಅಕ್ಕಿ, ಗೋಧಿ, ಮಕ್ಕೆ ಜೋಳವೂ ನಮ್ಮ ಮಾರುಕಟ್ಟೆಗೆ ದಾಳಿ ಇಡಬಹುದು. ಇಡೀ ದೇಶದ ಅರ್ಧದಷ್ಟು ಜನಸಂಖ್ಯೆಯೇ ಸಂಕಷ್ಟಕ್ಕೆ ಸಿಲುಕಿದಾಗ, ಉಳಿದರ್ಧ ಜನರು ಕಡಮೆ ಬೆಲೆಯ ಸರಕು ಖರೀದಿಸಿ ಸಂತುಷ್ಟರಾಗಿರಲು ಸಾಧ್ಯವೇ? ಹಾಗಾದಾಗ ದೇಶ ಉದ್ದಾರ ಆಗುತ್ತದಾ? ನಮ್ಮದು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುತ್ತದಾ? ಕುಸಿದು ಹೋಗಿರುವ ಆರ್ಥಿಕತೆಗೆ ಚೇತರಿಕೆ ಬರುತ್ತದಾ? ಈ ಪ್ರಶ್ನೆಗಳನ್ನು ನರೇಂದ್ರ ಮೋದಿ ಸರ್ಕಾರದಲ್ಲಿರುವ ಆರ್ಥಿಕ ತಜ್ಞರು ಮತ್ತು ಆರ್ಥಿಕ ಸಲಹೆಗಾರರು ತಮಗೆ ತಾವೇ ಕೇಳಿಕೊಳ್ಳಬೇಕಿದೆ!
ಒಬ್ಬ ವ್ಯಕ್ತಿಯ ಯಶಸ್ವಿಯಾಗಲು ಆ ವ್ಯಕ್ತಿಗೆ ಜೀವನದಲ್ಲಿ ಬುದ್ಧಿ ಮತ್ತು ಅದರ ಜೊತೆ ಅದೃಷ್ಟವು ಸಹ ಇರಬೇಕಾಗುತ್ತದೆ ಕೆಲವೊಬ್ಬರಿಗೆ ಯಶಸ್ಸು ಅನ್ನುವುದು ಬೇಗ ಸಿಗುತ್ತದೆ ಯಶಸ್ಸು ಸಿಗುತ್ತಿದ್ದ ಹಾಗೆ ಕೆಲವರಿಗೆ ದೃಷ್ಟಿದೋಷ ಅನ್ನುವುದು ಅಷ್ಟೇ ಬೇಗ ಬರುತ್ತದೆ ಆ ಸಮಯದಲ್ಲಿ ಆತನ ಜೀವನವೇ ಬದಲಾಗಿಬಿಡುತ್ತದೆ ನಾನಾ ರೀತಿಯ ಕಷ್ಟಗಳು ಅವರ ಕಣ್ಣುಮುಂದೆ ಇರುತ್ತದೆ ಮಾಡುತ್ತಿರುವ ಕೆಲಸಕಾರ್ಯಗಳಲ್ಲಿ ಸಮಸ್ಯೆ ಹೆಚ್ಚಾಗುತ್ತದೆ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಕೆಟ್ಟದ್ದನ್ನೇ ಪ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ ಸಾಲದ ಸಮಸ್ಯೆ ಹೆಚ್ಚಾಗುತ್ತದೆ ದೃಷ್ಟಿ ದೋಷದಿಂದ ಮನುಷ್ಯನಿಗೆ ಸಾಕಷ್ಟು ಕೆಟ್ಟ ಸಮಯ ಬರುತ್ತದೆ ಈ ರೀತಿ ದೃಷ್ಟಿದೋಷ ನಿಮಗೆ ಆಗಿದ್ದರೆ ನಾವು ಹೇಳುವ ದಿನ ಸರಳವಾಗಿ ಈ ರೀತಿಯ ಒಂದು ಕೆಲಸವನ್ನು ಮಾಡಿ. ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು 9538866755 ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755 ಮುಖ್ಯವಾಗಿ ಒಂದು ಸರಳ ಕೆಲಸವನ್ನು ಮಾಡಲು ಬಳಿ ವಿಳೆದೆಲೆ ಇರಬೇಕಾಗುತ್ತದೆ ಮನೆಯಲ್ಲಿ ಇರುವಂತಹ ಅಡುಗೆ ಉಪ್ಪು ಜೊತೆಗೆ ಒಂದು ನಿಂಬೆಹಣ್ಣು ಮತ್ತು ಎರಡು ಲವಂಗಗಳು ಈ ಕಾರ್ಯಕ್ಕೆ ಬೇಕಾಗುತ್ತದೆ ಇಷ್ಟು ವಸ್ತುಗಳನ್ನು ಮೊದಲು ನಿಮ್ಮ ದೇವರ ಮನೆಯಲ್ಲಿ ನೀವು ಇಡಬೇಕಾಗುತ್ತದೆ ಪ್ರತಿಯೊಬ್ಬರೂ ಮನೆಯಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ ಆದರೆ ಈ ರೀತಿಯ ಸಮಸ್ಯೆ ಇರುವವರು ವಿಶೇಷವಾಗಿ ಮೋಸ ಲಕ್ಷ್ಮಿಯನ್ನು ಪೂಜಿಸುವ ಬೇಕಾಗುತ್ತದೆ ಮಹಾಲಕ್ಷ್ಮಿಯನ್ನು ಪೂಜಿಸಬೇಕಾದ ರೆ ನೀವು ಮೊದಲು ಈ ರೀತಿಯ ವಸ್ತುವನ್ನು ಇಡಬೇಕಾಗುತ್ತದೆ ಪ್ರತಿದಿನ ನಾವು ಹೇಳುವ ರೀತಿಯಲ್ಲಿ ಮಹಾಲಕ್ಷ್ಮಿಯನ್ನು ಈ ರೀತಿಯಾಗಿ ಪೂಜಿಸಿದರೆ ನಿಮ್ಮ ಜೀವನದಲ್ಲಿ ನೆಮ್ಮದಿ ಮತ್ತು ಸಂಪತ್ತು ಅನ್ನುವುದು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಮೊದಲು ಈ ವಸ್ತುಗಳನ್ನು ನೀವು ದೇವರ ಮನೆಯಲ್ಲಿ ಇಟ್ಟು ನೀವು ವಾರದಲ್ಲಿ ಮೂರು ದಿನ ಈ ಕಾರ್ಯವನ್ನು ಮಾಡಬೇಕಾಗುತ್ತದೆ ಸೋಮವಾರ ಬುಧವಾರ ಶುಕ್ರವಾರ ದಿನದಂದು ಮಾಡಬೇಕಾಗುತ್ತದೆ ಮೊದಲು ಮಹಾಲಕ್ಷ್ಮಿಯ ಫೋಟೋ ಅದಾವ ವಿಗ್ರಹದ ಮುಂದೆ ಒಂದು ವಿಳ್ಳೆದೆಲೆ ಇಡಬೇಕು ನಂತರ ನಿಮ್ಮ ಮನೆಯ ಅಡುಗೆ ಉಪ್ಪನ್ನು ವೀಳ್ಯದೆಲೆಯ ಮೇಲೆ ಇಡಬೇಕು ನಂತರ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಆ ನಿಂಬೆಹಣ್ಣನ್ನು ನಾಲ್ಕು ಭಾಗಗಳಾಗಿ ಕತ್ತರಿಸಬೇಕಾಗುತ್ತದೆ ನಂತರ ಆ ನಾಲ್ಕು ನಂತರ ನೀವು ತಂದಿರುವಂತಹ ಲವಂಗವನ್ನು ಅದರ ಒಳಗೆ ಹಾಕಬೇಕು ಅದನ್ನು ವಿಳ್ಳೆದೆಲೆ ಉಪ್ಪಿನ ಮೇಲೆ ಇಡಬೇಕು ಇದನ್ನು ನೀವು ಕೈಯಲ್ಲಿ ತೆಗೆದುಕೊಂಡು ಆರತಿಯ ರೂಪದಲ್ಲಿ ಬೆಳಗ್ಗೆ ಮಹಾಲಕ್ಷ್ಮಿಯ ಫೋಟೋ ಮುಂದೆ ಇಡಬೇಕು ಈ ರೀತಿ ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಹೋಗಿ ನಿಮಗೆ ಧನಸಂಪತ್ತು ಹೆಚ್ಚಾಗುತ್ತದೆ. ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು 9538866755 ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755
Categories Select Category Location ಆಫ್ರಿಕಾ ಆಸ್ಟ್ರೇಲಿಯಾ ಉತ್ತರ ಅಮೇರಿಕಾ ಏಷ್ಯಾ ಇಂಡೋನೇಶಿಯಾ ಚೀನಾ ನೇಪಾಲ ಪಾಕಿಸ್ತಾನ ಬಾಂಗ್ಲಾದೇಶ ಭಾರತ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಸ್ಸಾಂ ಉತ್ತರ ಪ್ರದೇಶ ಉತ್ತಾರಾಖಾಂಡ ಒಡಿಶಾ ಕರ್ನಾಟಕ ಕೇರಳ ಗುಜರಾತ ಗೋವಾ ಛತ್ತೀಸಗಡ ಜಮ್ಮು-ಕಾಶ್ಮೀರ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದೆಹಲಿ ನಾಗಾಲ್ಯಾಂಡ ಪಂಜಾಬ ಪಾಂಡಿಚೆರಿ ಬಂಗಾಲ ಬಿಹಾರ ಮಣಿಪುರ ಮಧ್ಯಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಸ್ಥಾನ ಲಡಾಖ ಹರಿಯಾಣಾ ಹಿಮಾಚಲ ಪ್ರದೇಶ ಮ್ಯಾನ್ಮಾರ್ ಶ್ರೀಲಂಕಾ ದಕ್ಷಿಣ ಅಮೇರಿಕಾ ಯುರೋಪ PDF Post Type ಚೌಕಟ್ಟು ಮನವಿ ರಾಷ್ಟ್ರ ಧರ್ಮದ ಚೌಕಟ್ಟು ಸಾಧನೆ ಚೌಕಟ್ಟು ಜಾಗೊ ಪ. ಪೂ. ಡಾ. ಆಠವಲೆ ಫಲಕ ಪ್ರಸಿದ್ಧಿ ರಾಷ್ಟ್ರ ಧರ್ಮದ ವಿಶೇಷ ಆಪತ್ಕಾಲ ರಾಷ್ಟ್ರ ಮತ್ತು ಧರ್ಮ ಸಂಪಾದಕೀಯ ವಾರ್ತೆಗಳು ಅಂತರರಾಷ್ಟ್ರೀಯ ರಾಜ್ಯದ ವಾರ್ತೆಗಳು ರಾಷ್ಟ್ರೀಯ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ವೃತ್ತ ವಿಶೇಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಾಧಕರಿಗಾಗಿ ಸೂಚನೆ ಅನುಭೂತಿ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ನವರಾತ್ರಿ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಿತೃಪಕ್ಷ ಮಹಾಶಿವರಾತ್ರಿ ವಿಶೇಷಾಂಕ ಯುಗಾದಿ ವಿಶೇಷಾಂಕ ಲೇಖನಗಳು ಹಬ್ಬ-ವ್ರತಗಳು ವಿಶೇಷ ಸ್ಮರಣಿಕೆ ಆಯುರ್ವೇದ ಆಹಾರ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಮರ್ಥ ಸಾಧನೆ ಸುವಚನ ಹಿಂದೂ ಧರ್ಮ ದೈವೀ ಬಾಲಕರು ಧರ್ಮಶಿಕ್ಷಣ ಸಂಶೋಧನೆ ಸೂಕ್ಷ್ಮ ಪರೀಕ್ಷಣೆ Tags Select Tag ೩೧ ಡಿಸೆಂಬರ ಅಕ್ಷಯ ತದಿಗೆ ವಿಶೇಷಾಂಕ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂತರರಾಷ್ಟ್ರೀಯ ಅಂತರರಾಷ್ಟ್ರೀಯ ಗಡಿ ವಿವಾದ ಅತ್ಯಾಚಾರ ಅಧ್ಯಾತ್ಮ ಅಧ್ಯಾತ್ಮಿಕ ಸಂಶೋಧನೆ ಅನುಭೂತಿ ಅಪರಾಧ ಅಫ್ಘಾನಿಸ್ತಾನ ಅಭಯ ವರ್ತಕ ಅಮರನಾಥ ಅಮಿತ ಶಾಹ ಅಮೇರಿಕಾ ಅರವಿಂದ ಕೆಜರಿವಾಲ ಅಲ್ ಖೈದಾ ಅಲ್ಪಸಂಖ್ಯಾತ-ಹಿಂದೂ ಅಲ್ಪಸಂಖ್ಯಾತರ ಓಲೈಕೆ ಅಸುರಕ್ಷಿತ ಹಿಂದೂ ದೇವಸ್ಥಾನಗಳು ಆಡಳಿತ ಆಡಳಿತದ ದುರುಪಯೋಗ ಆತ್ಮಹತ್ಯೆ ಆಂದೋಲನ ಆಂಧ್ರ ಪ್ರದೇಶ ಆಪತ್ಕಾಲ ಆಮ್ ಆದ್ಮಿ ಪಕ್ಷ ಆಯುರ್ವೇದ ಆರೋಗ್ಯ ಆರೋಗ್ಯ ಸಹಾಯ ಸಮಿತಿ ಆಸ್ಪತ್ರೆ ಇಮ್ರಾನ್ ಖಾನ್ ಇಸ್ಲಾಂ ಉಚ್ಚ ನ್ಯಾಯಾಲಯ ಉತ್ತರ ಪ್ರದೇಶ ಎನ್.ಸಿ.ಇ.ಆರ್.ಟಿ ಐಸಿಸ್ ಔಷಧಿ ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 11 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 12 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 13 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 14 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 15 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 16 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 17 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 18 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 19 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 20 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 21 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 22 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 23 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 24 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 25 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 26 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 27 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 28 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 29 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 30 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 31 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 32 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 33 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 34 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 35 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 36 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 37 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 38 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 39 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 40 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 41 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 42 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 11 ಕಲ್ಲುತೂರಾಟ ಕಳ್ಳತನ ಕಾಂಗ್ರೆಸ್ ಕಾನೂನು ಕಾಶ್ಮೀರ ಪ್ರಶ್ನೆ ಕಾಶ್ಮೀರೀ ಪಂಡಿತ ಕುಂಭಮೇಳಾ ಕೃತಜ್ಞತಾ ವಿಶೇಷಾಂಕ ಕೆ. ಚಂದ್ರಶೇಖರ ರಾವ್ ಕೇರಳ ಕೇರಳ ದೇವಸ್ಥಾನ ಕೊರೋನಾ ರೋಗಾಣು ಕ್ರಾಂತಿಕಾರಕ ಕ್ರೈಸ್ತ ಖಂಡನೆ ಗಣೆಶೋತ್ಸವ ಗಲಭೆ ಗುರುಪೂರ್ಣಿಮಾ ಮಹೋತ್ಸವ ೨೦೨೧ ಗುರುಪೂರ್ಣಿಮಾ ವಿಶೇಷಾಂಕ ಗೋ ಮಾತೆ ಗೋ ಸಾಗಾಟ ಗೋಮಾಂಸ ಚಲನಚಿತ್ರದ ಮೂಲಕ ವಿಡಂಬನೆ ಚೀನಾ ಚೀನಾದ ಪ್ರಶ್ನೆ ಚುನಾವಣೆ ಚೇತನ ರಾಜಹಂಸ ಚೌಕಟ್ಟು ಛತ್ರಪತಿ ಶಿವಾಜಿ ಮಹಾರಾಜ ಜಾಕಿರ ನಾಯಿಕ ಜಾಗೊ ಜಾತ್ಯತೀತ ಜಾರಿ ನಿರ್ದೇಶನಾಲಯ ಜಿಹಾದ್ ಜೆಎನ್‌ಯು ಜೈಶ್-ಎ-ಮೊಹಮ್ಮದ್ ಜೋ-ಬೈಡನ್ ಜ್ಞಾನವಾಪಿ ಟಿ. ರಾಜಾಸಿಂಗ್ ಡಿ.ಕೆ. ಶಿವಕುಮಾರ ತಸ್ಲೀಮಾ ತಾಲಿಬಾನ್‍ ತೃಣಮೂಲ ಕಾಂಗ್ರೆಸ್ ದ ಕಾಶ್ಮೀರ ಫೈಲ್ಸ್ ದತ್ತ ವಿಶೇಷಾಂಕ ದಾಳಿ ದಿನವಿಶೇಷ ದಿವ್ಯ ರಥೋತ್ಸವ ವಿಶೇಷಾಂಕ ದೀಪಾವಳಿ ೨೦೨೨ ದೀಪಾವಳಿ ವಿಶೇಷಾಂಕ ದುಷ್ಕೃತ್ಯ ದೇವಸ್ಥಾನ ದೇವಸ್ಥಾನದ ಸರಕಾರಿಕರಣ ದೇಶದ್ರೋಹಿ ದೈವೀ ಬಾಲಕರು ದ್ರೌಪದಿ ಮುರ್ಮು ಧರ್ಮಜಾಗೃತಿ ಸಭೆ ಧರ್ಮದ್ರೋಹಿ ಧರ್ಮಶಿಕ್ಷಣ ನಕ್ಸಲರು ನರಮೇಧ ನರೇಂದ್ರ ಮೋದಿ ನವರಾತ್ರಿ ವಿಶೇಷಾಂಕ ನವರಾತ್ರೋತ್ಸವ ನಿಧನ ನೇಪಾಳ ನೈಸರ್ಗಿಕ ಆಪತ್ತು ನೌಕಾದಳ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ್ ನ್ಯಾಯಾಲಯ ಪ.ಪೂ. ಪಾಂಡೆ ಮಹಾರಾಜ ಪತಂಜಲಿ ಪತ್ರಿಕಾಗೋಷ್ಠೀ ಪನೂನ್ ಕಾಶ್ಮೀರ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಕಿಸ್ತಾನದ ಓಲೈಕೆ ಪಾದ್ರಿ ಪಿಎಫ್‌ಐ ಪಿಡಿಪಿ ಪಿಣರಾಯಿ ವಿಜಯನ್‌ ಪಿತೃಪಕ್ಷ ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ ಪೂ. ಸಂದೀಪ ಆಳಶಿ ಪೊಲೀಸ್ ಪೋಪ್ ಫ್ರಾನ್ಸಿಸ್ ಪ್ರತಿಭಟನೆ ಪ್ರತ್ತೇಕತವಾದಿ ಪ್ರಮೋದ ಮುತಾಲಿಕ ಪ್ರವಾಹ ಪ್ರಸಾರ ಮಾಧ್ಯಮ ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಫಲಕ ಬಂಧನ ಬಸವರಾಜ ಬೊಮ್ಮಾಯಿ ಬಾಂಗ್ಲಾದೇಶ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಅಕ್ಟೋಬರ್ 2021 ಬಾಂಗ್ಲಾದೇಶಿ ನುಸುಳುಖೋರ ಬೆಂಬಲ ಬ್ರಿಗೇಡಿಯರ್ ಹೇಮಂತ ಮಹಾಜನ ಭಕ್ತಿ ಭಾವ ಭಜರಂಗ ದಳ ಭಯೋತ್ಪಾದನೆ ಭಾರತ ಭಾರತದ ಇತಿಹಾಸ ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರ ಮಕರ ಸಂಕ್ರಾಂತಿ ಮತಾಂಧ ಮದರಸಾ ಮನವಿ ಮಮತಾ ಬ್ಯಾನರ್ಜಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಹಾಶಿವರಾತ್ರಿ ಮಹಿಳೆಯರ ಮೇಲೆ ದೌರ್ಜನ್ಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಮೀಸಲಾತಿ ಮುಸಲ್ಮಾನ ಮೆಹಬೂಬಾ ಮುಫ್ತಿ ಮೇಘಾಲಯ ಮೋಹನ ಭಾಗವತ ಮೌಲ್ವಿ ಯಜ್ಞ ಯುಗಾದಿ ಹಬ್ಬ ವಿಶೇಷಾಂಕ ಯುವ ಮತ್ತು ಭಾರತ ವಿಶೇಷಾಂಕ ಯೆಡಿಯೂರಪ್ಪ ಯೋಗ ಯೋಗಿ ಆದಿತ್ಯನಾಥ ರಮೇಶ ಶಿಂದೆ ರಷ್ಯಾ-ಯುಕ್ರೇನ್-ಸಂಘರ್ಷ ರಾ ರಾಜಕೀಯ ರಾಜನಾಥ ಸಿಂಗ್ ರಾಜ್ಯಸಭೆ ರಾಮ ಜನ್ಮಭೂಮಿ ರಾಮದೇವ ಬಾಬಾ ರಾಷ್ಟ್ರಪುರುಷ ರಾಷ್ಟ್ರೀಯ ರಾಷ್ಟ್ರೀಯ ಜನತಾದಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಹುಲ ಗಾಂಧಿ ರೋಹಿಂಗ್ಯಾ ಪ್ರಶ್ನೆ ಲವ್ ಜಿಹಾದ್ ಲಷ್ಕರ್-ಎ-ತೋಯಿಬಾ ಲೇಖನ ಲೋಕಸಭೆ ಲ್ಯಾಂಡ್ ಜಿಹಾದ್ ವಾಯುದಳ ವಾರಕರಿ ವಿದೇಶಾಂಗ ನೀತಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಹಿಂದೂ ಪರಿಷತ್ತು ವೃತ್ತ ವಿಶೇಷ ವೈದ್ಯಕೀಯ ವ್ಲಾದಿಮೀರ ಪುತಿನ್ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಶಬರಿಮಲೈ ದೇವಸ್ಥಾನ ಶಿವರಾಜ ಸಿಂಹ ಚೌಹಾಣ ಶಿವಸೇನೆ ಶೀ-ಜಿನಪಿಂಗ್ ಶೈಕ್ಷಣಿಕ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗಿಳ ಶ್ರೀಕೃಷ್ಣ ಜನ್ಮಭೂಮಿ ಶ್ರೀರಾಮ ಸೇನೆ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಂತರ ಅವಮಾನ ಸಂತರ ಆಶಿರ್ವಾದ ಸಂತರ ಮಾರ್ಗದರ್ಶನ ಸದ್ಗುರು (ಡಾ.) ಮುಕುಲ ಗಾಡಗಿಳ ಸದ್ಗುರು ಚಾರುದತ್ತ ಪಿಂಗಳೆ ಸದ್ಗುರು ರಾಜೇಂದ್ರ ಶಿಂದೆ ಸನಾತನ ಆಶ್ರಮ ರಾಮನಾಥಿ ಸನಾತನ ಪ್ರಭಾತ ಸನಾತನ ಪ್ರಭಾತ ವರ್ಧ್ಯಂತೂತ್ಸವ ಸನಾತನ ಸಂಸ್ಥೆ ಸನಾತನ ಸಂಸ್ಥೆಗೆ ವಿರೋಧ ಸನಾತನದ ಸಂತರು ಸಂಪಾದಕೀಯ ಸಮರ್ಥ ಸಮಾಜವಾದಿ ಪಕ್ಷ ಸರ್ವೋಚ್ಛ ನ್ಯಾಯಾಲಯ ಸಂಶೋಧನೆ ಸಂಸ್ಕೃತ ಭಾಷೆ ಸಂಸ್ಥೆಗಳ ಹಿಂದೂದ್ವೇಷ ಸಾಧಕರಿಗೆ ಸೂಚನೆ ಸಾಧನೆ ಸಾಧ್ವಿ ಪ್ರಜ್ಞಾಸಿಂಗ್ ಸಾಪ್ತಾಹಿಕ ಸಾಮಾಜಿಕ ಸಾಮಾಜಿಕ ಜಾಲತಾಣ ಸಾಮಾಜಿಕ ಪ್ರಸಾರ ಮಾಧ್ಯಮ ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಸಿಬಿಐ ಸುನೀಲ ಘನವಟ ಸುಬ್ರಮಣ್ಯಮ್ ಸ್ವಾಮಿ ಸುರೇಶ ಚೌವಾಣಕೆ ಸುವಚನ ಸೂಕ್ಷ್ಮ ಪರೀಕ್ಷಣೆ ಸೂನಿಯಾ ಗಾಂಧಿ ಸೆನ್ಸಾರ್ ಬೋರ್ಡ್ ಸೆರೆಮನೆ ಸೈನಿಕರು ಸೈಬರ ಅಪರಾಧ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಸ್ವಾ. ಸಾವರಕರ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹತ್ಯೆ ಹಬ್ಬ ಹಲಾಲ್ ಹಿಜಾಬ್ / ಬುರ್ಖಾ ವಿವಾದ ಹಿಜ್ಬುಲ್ ಮುಜಾಹಿದ್ದೀನ್ ಹಿಂದು ರಾಷ್ಟ್ರಜಾಗೃತಿ ಅಭಿಯಾನ ಹಿಂದುತ್ವನಿಷ್ಠ ಸಂಘಟನೆ ಹಿಂದೂ ಅಧಿವೇಶನ ಹಿಂದೂ ಜನಜಾಗೃತಿ ಸಮಿತಿ ಹಿಂದೂ ದೇವತೆಗಳ ವಿಡಂಬನೆ ಹಿಂದೂ ಧರ್ಮ ಹಿಂದೂ ಧರ್ಮ ಸಂಸ್ಕಾರ ಹಿಂದೂ ಧರ್ಮಜಾಗೃತಿ ಸಭೆ ಹಿಂದೂ ನಾಯಕ ಹಿಂದೂ ರಾಷ್ಟ್ರ ಹಿಂದೂ ವಿಧಿಜ್ಞ ಪರಿಷತ್ತು ಹಿಂದೂ ವಿರೋಧಿ ಹಿಂದೂ ವಿರೋಧಿ ಹೇಳಿಕೆ ಹಿಂದೂಗಳ ಇತಿಹಾಸ ಹಿಂದೂಗಳ ಮತಾಂತರ ಹಿಂದೂಗಳ ಮೇಲೆ ಆಘಾತ ಹಿಂದೂಗಳ ಮೇಲೆ ದಾಳಿ ಹಿಂದೂಗಳ ರಾಜ ಹಿಂದೂಗಳ ವಿರೋಧ ಹಿಂದೂಗಳಿಗೆ ಜಯ ಹಿಂದೂಗಳಿಗೆ ಸಕಾರಾತ್ಮಕ ಹಿಂದೂರಾಷ್ಟ್ರ ಸಂಕಲ್ಪ ಅಭಿಯಾನ Archives Archives Select Month December 2022 November 2022 October 2022 September 2022 August 2022 July 2022 June 2022 May 2022 April 2022 March 2022 February 2022 January 2022 December 2021 November 2021 October 2021 September 2021 August 2021 July 2021 June 2021 May 2021 April 2021 March 2021 February 2021 January 2021 December 2020 November 2020 October 2020 September 2020 August 2020 July 2020 June 2020 May 2020 April 2020 Categories Categories Select Category PDF ಅಂತರರಾಷ್ಟ್ರೀಯ ಅನುಭೂತಿ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಪತ್ಕಾಲ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಆಫ್ರಿಕಾ ಆಯುರ್ವೇದ ಆಸ್ಟ್ರೇಲಿಯಾ ಆಸ್ಸಾಂ ಆಹಾರ ಇಂಡೋನೇಶಿಯಾ ಉತ್ತರ ಅಮೇರಿಕಾ ಉತ್ತರ ಪ್ರದೇಶ ಉತ್ತಾರಾಖಾಂಡ ಏಷ್ಯಾ ಒಡಿಶಾ ಕರ್ನಾಟಕ ಕೇರಳ ಗುಜರಾತ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ಗೋವಾ ಚೀನಾ ಚೌಕಟ್ಟು ಛತ್ತೀಸಗಡ ಜಮ್ಮು-ಕಾಶ್ಮೀರ ಜಾಗೊ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದಕ್ಷಿಣ ಅಮೇರಿಕಾ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ದೆಹಲಿ ದೈವೀ ಬಾಲಕರು ಧರ್ಮಶಿಕ್ಷಣ ನವರಾತ್ರಿ ವಿಶೇಷಾಂಕ ನಾಗಾಲ್ಯಾಂಡ ನೇಪಾಲ ಪ. ಪೂ. ಡಾ. ಆಠವಲೆ ಪಂಜಾಬ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಂಡಿಚೆರಿ ಪಿತೃಪಕ್ಷ ಫಲಕ ಪ್ರಸಿದ್ಧಿ ಬಂಗಾಲ ಬಾಂಗ್ಲಾದೇಶ ಬಿಹಾರ ಭಾರತ ಮಣಿಪುರ ಮಧ್ಯಪ್ರದೇಶ ಮನವಿ ಮಹಾರಾಷ್ಟ್ರ ಮಹಾಶಿವರಾತ್ರಿ ವಿಶೇಷಾಂಕ ಮೇಘಾಲಯ ಮ್ಯಾನ್ಮಾರ್ ಯುಗಾದಿ ವಿಶೇಷಾಂಕ ಯುರೋಪ ರಾಜಸ್ಥಾನ ರಾಜ್ಯದ ವಾರ್ತೆಗಳು ರಾಷ್ಟ್ರ ಧರ್ಮದ ಚೌಕಟ್ಟು ರಾಷ್ಟ್ರ ಮತ್ತು ಧರ್ಮ ರಾಷ್ಟ್ರೀಯ ಲಡಾಖ ವಾರ್ತೆಗಳು ವೃತ್ತ ವಿಶೇಷ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀಲಂಕಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಂಪಾದಕೀಯ ಸಮರ್ಥ ಸಂಶೋಧನೆ ಸಾಧಕರಿಗಾಗಿ ಸೂಚನೆ ಸಾಧನೆ ಸಾಧನೆ ಚೌಕಟ್ಟು ಸುವಚನ ಸೂಕ್ಷ್ಮ ಪರೀಕ್ಷಣೆ ಹಬ್ಬ-ವ್ರತಗಳು ಹರಿಯಾಣಾ ಹಿಂದೂ ಧರ್ಮ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ಹಿಮಾಚಲ ಪ್ರದೇಶ
Kannada News » Entertainment » Sandalwood » Prajwal Devaraj talks about his cameo role in Meghana Raj starrer comeback movie Meghana Raj: ಮೇಘನಾ ರಾಜ್​ ಕಮ್​ಬ್ಯಾಕ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ಅಭಿಮಾನಿಗಳು ಫುಲ್​ ಖುಷ್​ Prajwal Devaraj Meghana Raj Movie: ಮೇಘನಾ ರಾಜ್​ ನಟನೆಯ ಈ ಚಿತ್ರವನ್ನು ಪನ್ನಗ ಭರಣ ನಿರ್ಮಿಸುತ್ತಿದ್ದಾರೆ. ಅತಿಥಿ ಪಾತ್ರ ಮಾಡುವ ಮೂಲಕ ಪ್ರಜ್ವಲ್​ ದೇವರಾಜ್​ ಕೂಡ ಚಿತ್ರತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಪನ್ನಗ ಭರಣ, ಮೇಘನಾ ರಾಜ್, ಪ್ರಜ್ವಲ್ ದೇವರಾಜ್ TV9kannada Web Team | Edited By: Madan Kumar Sep 29, 2022 | 1:02 PM ನಟಿ ಮೇಘನಾ ರಾಜ್​ (Meghana Raj) ಅವರು ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ‘ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ’ ಚಿತ್ರದ ಬಂತರ ಅವರು ಯಾವುದೇ ಚಿತ್ರಗಳಲ್ಲಿ ನಟಿಸಿರಲಿಲ್ಲ. ಈಗ ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮಗೆ ಸರಿ ಎನಿಸುವಂತಹ ಪಾತ್ರ ಮತ್ತು ಕಥೆಯನ್ನು ಆಯ್ದುಕೊಂಡು ಬಣ್ಣ ಹಚ್ಚುತ್ತಿದ್ದಾರೆ. ಆ ಪೈಕಿ ಪನ್ನಗ ಭರಣ (Pannaga Bharana) ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಮೇಲೆ ನಿರೀಕ್ಷೆ ಇದೆ. ಈ ಸಿನಿಮಾಗೆ ವಿಶಾಲ್​ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಏನು ಎಂಬುದು ಇನ್ನೂ ರಿವೀಲ್​ ಆಗಿಲ್ಲ. ಈ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ (Prajwal Devaraj) ಅವರು ಅತಿಥಿ ಪಾತ್ರ ಮಾಡಿರುವುದು ಅಧಿಕೃತವಾಗಿದೆ. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅವರಿಗೆ ಖುಷಿ ಇದೆ. ಬಾಲ್ಯದ ಸ್ನೇಹಿತರಾದ ಮೇಘನಾ ರಾಜ್​ ಮತ್ತು ಪ್ರಜ್ವಲ್​ ದೇವರಾಜ್​ ಅವರು ಒಂದೇ ಸಿನಿಮಾದಲ್ಲಿ ಅಭಿನಯಿಸಿದ ಸುದ್ದಿ ಕೇಳಿ ಫ್ಯಾನ್ಸ್​ ಕೂಡ ಎಗ್ಸೈಟ್​ ಆಗಿದ್ದಾರೆ. ಚಿರಂಜೀವಿ ಸರ್ಜಾ, ಪನ್ನಗ ಭರಣ, ಪ್ರಜ್ವಲ್​ ದೇವರಾಜ್​ ಜೊತೆ ಸೇರಿ ಒಂದು ಸಿನಿಮಾ ಮಾಡಬೇಕು ಎಂಬುದು ಒಂದಷ್ಟು ವರ್ಷಗಳ ಹಿಂದಿನ ಕನಸಾಗಿತ್ತು. ಆದರೆ ಇಂದು ಚಿರಂಜೀವಿ ಸರ್ಜಾ ಅವರು ಭೌತಿಕವಾಗಿ ಇಲ್ಲ. ಪತಿಯ ಅಗಲಿಕೆಯ ನೋವನ್ನು ನುಂಗಿಕೊಂಡು ಮೇಘನಾ ರಾಜ್​ ಅವರು ಕಮ್​ ಬ್ಯಾಕ್​ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಪನ್ನಗ ಭರಣ ಬಂಡವಾಳ ಹೂಡುತ್ತಿದ್ದಾರೆ. ಅತಿಥಿ ಪಾತ್ರ ಮಾಡುವ ಮೂಲಕ ಪ್ರಜ್ವಲ್​ ದೇವರಾಜ್​ ಅವರು ಎಂಟ್ರಿ ನೀಡಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದಂತಾಗಿದೆ. ‘ಈ ಸಿನಿಮಾ ಶುರು ಆದಾಗಿನಿಂದ ನಾನು ಚಿತ್ರತಂಡದ ಜೊತೆ ಸಂಪರ್ಕದಲ್ಲಿದ್ದೆ. ನಿರ್ದೇಶಕ ವಿಶಾಲ್​ ಒಂದು ದಿನ ಸ್ಕ್ರಿಪ್ಟ್​ ಬಗ್ಗೆ ಮಾತನಾಡಲು ಬರುತ್ತಾರೆ ಅಂತ ಪನ್ನಗ ಮತ್ತು ಮೇಘನಾ ಹೇಳಿದರು. ನನ್ನ ಅಭಿಪ್ರಾಯ ತಿಳಿಯಲು ಬರುತ್ತಿದ್ದಾರೆ ಅಂತ ನಾನು ಊಹಿಸಿದ್ದೆ. ಬಳಿಕ ಮೇಘನಾ ಕರೆಮಾಡಿ ಹೇಗನಿಸಿತು ಎಂದು ಕೇಳಿದರು. ನನಗೆ ಇಷ್ಟವಾಯ್ತು ಎಂದೆ. ಈ ಚಿತ್ರದಲ್ಲಿ ನಟಿಸಬೇಕು ಎಂದು ಅವರು ಹೇಳಿದಾಗ ಒಪ್ಪಿಕೊಳದೇ ಇರಲು ಸಾಧ್ಯವೇ?’ ಎಂದು ಟೈಮ್ಸ್​ ಆಫ್​ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್​ ದೇವರಾಜ್​ ಹೇಳಿದ್ದಾರೆ. ಚಂದನವನದಲ್ಲಿ ಪ್ರಜ್ವಲ್​ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ವೀರಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಮಾಫಿಯಾ’ ಚಿತ್ರದ ಕೆಲಸಗಳು ಕೂಡ ಬಿರುಸಿನಿಂದ ಸಾಗಿವೆ. ಮೇಘನಾ ರಾಜ್​-ಚಿರಂಜೀವಿ ಕುಟುಂಬದ ಜೊತೆಗೆ ಅವರಿಗೆ ಉತ್ತಮ ಸ್ನೇಹ ಇದೆ. ಇದನ್ನೂ ಓದಿ Meghana Raj: ಮೇಘನಾ ರಾಜ್​ ಕೈ ಮೇಲೆ ಶಾಶ್ವತವಾಗಿ ಅಚ್ಚಾಯಿತು ಚಿರು, ರಾಯನ್​ ಹೆಸರು; ಹೇಗಿದೆ ನೋಡಿ ಟ್ಯಾಟೂ ಎರಡನೇ ಮದುವೆ ಆಗಬೇಕೇ ಎಂಬ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ ಎಂದ ಮೇಘನಾ ರಾಜ್ Meghana Raj: ಅಮ್ಮ ಅಂತ ಹೇಳಿಕೊಟ್ರೂ ಅಪ್ಪ ಎನ್ನುತ್ತಾನೆ ರಾಯನ್​ ರಾಜ್​ ಸರ್ಜಾ; ಇಲ್ಲಿದೆ ಮೇಘನಾ ರಾಜ್​ ಮಗನ ಕ್ಯೂಟ್​ ವಿಡಿಯೋ
ಖ್ಯಾತ ಹಾಸ್ಯ ನಟ ತರಂಗ ವಿಶ್ವ ನಟನೆಯೊಂದಿಗೆ ನಿರ್ಮಾಣ ಕೂಡ ಮಾಡಿರುವ ``ಗಿರ್ಕಿ`` ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜುಲೈ ಎಂಟರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಾಸುಕಿ ಭುವನ್, ವಿಶ್ವ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ವೀರೇಶ್ ಪಿ.ಎಂ ನಿರ್ದೇಶನ ಮಾಡಿದ್ದಾರೆ. ನಾನು ಕಲಾವಿದನಾಗಿ ಬಂದ ದಿನದಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಅಪಾರ. ಈಗ ನಿರ್ಮಾಪಕನಾಗಿ ``ಗಿರ್ಕಿ``ಚಿತ್ರ ನಿರ್ಮಿಸಿದ್ದೇನೆ. ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದೆ. ಎಲ್ಲರಿಗೂ ಮಚ್ವುಗೆಯಾಗಿದೆ. ಚಿತ್ರ ಇದೇ ಎಂಟರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲವಿರಲಿ ಎಂದರು ವಿಶ್ವ. ವಿಶ್ವ ಅವರನ್ನು ನಾನು ಬಹಳ ದಿನಗಳಿಂದ ಬಲ್ಲೆ. ಒಂದು ದಿನ ಅವರು ನನ್ನ ಬಳಿ ಬಂದು, ನಾನು ಒಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾನು ಹಾಗೂ ವಿಲೋಕ್ ರಾಜ್ ಪ್ರಮುಖಪಾತ್ರದಲ್ಲಿ ನಟಿಸುತ್ತೇವೆ. ನೀವು ನಿರ್ದೇಶನ ಮಾಡಬೇಕೆಂದರು. ಆಗ ``ಗಿರ್ಕಿ`` ಚಿತ್ರ ಆರಂಭವಾಯಿತು. ಮೊದಲ ನಿರ್ದೇಶನಕ್ಕೆ ಅವಕಾಶ ನೀಡಿದ್ದ ವಿಶ್ವ ಹಾಗೂ ವಾಸುಕಿ ಭುವನ್ ಅವರಿಗೆ ಧನ್ಯವಾದ. ``ಗಿರ್ಕಿ``ಎಂದರೆ ಸುತ್ತಾಟ. ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನನಗೆ ಸಹಕಾರ ನೀಡಿದ ಚಿತ್ರತಂಡವನ್ನು ನೆನೆಯುತ್ತೇನೆ. ನಮ್ಮ ಚಿತ್ರಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಕೇಳುತ್ತೇನೆ ಎಂದರು ನಿರ್ದೇಶಕ ವೀರೇಶ್ ಪಿ.ಎಂ. ನಾನು ಈ ಹಿಂದೆ ``ಮಾಸ್ಟರ್ ಪೀಸ್`` ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ವಿಶ್ವ ನನ್ನ ಮಿತ್ರರು. ಅವರು ನಾನು ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದೇವೆ. ಒಳ್ಳೆಯ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ನೀಡಿ ಎಂದರು ನಟ ವಿಲೋಕ್ ರಾಜ್. ``ಗಿರ್ಕಿ`` ಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ನಟಿ ದಿವ್ಯ ಉರುಡಗ, ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನೋಡಿ ಹಾರೈಸಿ ಎಂದರು.
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 26-05-2014 ರಂದು ರಾತ್ರಿ ವೇಳೆಯಲ್ಲಿ ದುಳಪ್ಪಾ ಕುಂಬಾರ ಈತನಿಗೆ ತಮ್ಮ ಅನೈತಿಕ ಸಂಬಂಧ ಮುಚ್ಚಿ ಹಾಕುವ ಉದ್ದೇಶದಿಂದ ವಿಜಯಕುಮಾರ ಹಾಗು ಆತನ ಪ್ರೆಯಸಿ ಸೇರಿ ಇ.ಎಸ್.ಐ ಆಸ್ಪತ್ರೆ ಹಿಂದುಗಡೆ ರೋಡಿನ ಮೇಲೆ ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಗಂಭೀರತೆ ಮತ್ತು ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್.ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ಮತ್ತು ಶ್ರೀ ಸಂತೋಷ ಬಾಬು.ಐ.ಪಿ.ಎಸ್. ಸಹಾಯ ಪೊಲೀಸ್ ಅಧೀಕ್ಷಕರು ಗ್ರಾಮಾಂತ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ, ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ಅಜರ್ುನ ಎ.ಹೆಚ್.ಸಿ, ಮೊಯಿಜೂದ್ದಿನ ಸಿ.ಪಿ.ಸಿ, ಮಲ್ಲಿಕಾಜರ್ುನ ಸಿ.ಪಿ.ಸಿ, ಸಿದ್ರಾಮಯ್ಯ ಸಿ.ಪಿ.ಸಿ, ಅಶೋಕ ಮುಧೋಳ ಸಿ.ಪಿ.ಸಿ, ಅಶೋಕ ಹಳಿಗೋದಿ ಸಿ.ಪಿ.ಸಿ, ಚನ್ನಬಸಯ್ಯ ಸ್ವಾಮಿ ಸಿ.ಪಿ.ಸಿ, ಬಲರಾಮ ಸಿಪಿಸಿ, ಸುಧಾ ಮಪಿಸಿ ರವರೆಲ್ಲರೂ ಕೂಡಿಕೊಂಡು ಕಾರ್ಯಚರಣೆ ನಡೆಸಿದ್ದು, ಈ ಕೊಲೆ ಪ್ರಕರಣವನ್ನು ಭೇದಿಸಿ, ದಿನಾಂಕ 28-05-2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. 1. ವಿಜಯಕುಮಾರ ತಂದೆ ನಿಂಗಪ್ಪಾ ಕಾಳೆ ಸಾ : ಹತ್ತಿಕುಣಿ ತಾ :ಜಿಲ್ಲಾ ಯಾದಗಿರಿ ಹಾಲಿ ವಸ್ತಿ ಇ.ಎಸ್.ಐ ಆಸ್ಪತ್ರೆ ಹಿಂದುಗಡೆ ಶೇಡ್ಡಿನ ಕ್ವಾಟರ್ಸ ಸೇಡಂ ರೋಡ್ ಗುಲಬರ್ಗಾ 2. ಲಕ್ಷ್ಮಿಬಾಯಿ ಗಂಡ ಮಹಾದೇವ ಕುಂಬಾರ ಸಾ: ಬೊಳೆವಾಡ ಹಾಲಿ ವಸ್ತಿ ಸಿದ್ದೇಶ್ವರ ಕಾಲೋನಿ ಗುಲಬರ್ಗಾ ಈ ಕೊಲೆಗೆ ಕಾರಣ ಆರೋಪಿ ವಿಜಯಕುಮಾರ ಈತನು ಲಕ್ಷ್ಮಿಬಾಯಿ ಈತಳ ಸಂಗಡ ಕಳೆದ 4 ವರ್ಷಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಸದರಿ ಅನೈತಿಕ ಸಂಬಂಧ ವಿಷಯ ಲಕ್ಷ್ಮಿಬಾಯಿ ಈತಳ ಭಾವನ ಮಗನಾದ ಧೂಳಪ್ಪ ತಂದೆ ಮಲ್ಲಣ್ಣ ಕುಂಬಾರ ಈತನಿಗೆ ಗೊತ್ತಾಗಿ ತನ್ನ ಮನೆಯವರಿಗೆ ತನ್ನ ಅನೈತಿಕ ಸಂಬಂಧ ಬಗ್ಗೆ ಹೇಳುತ್ತಾನೆ ಅಂತಾ ಅಂದುಕೊಂಡು ಆತನಿಗೆ ಕೊಲೆ ಮಾಡಿಸಿದರೆ ತಮ್ಮ ಅನೈತಿಕ ಸಂಬಂಧ ಬಗ್ಗೆ ಮನೆಯಲ್ಲಿ ಗೊತ್ತಾಗುವದಿಲ್ಲ ಅಂತಾ ಭಾವಿಸಿ ಲಕ್ಷ್ಮಿಬಾಯಿ ಈತಳು ವಿಜಯಕುಮಾರ ಈತನ ಮುಖಾಂತರ ತನ್ನ ಭಾವನ ಮಗನಾದ ಧೂಳಪ್ಪ ಕುಂಬಾರ ಈತನಿಗೆ ಸಂಚು ಮಾಡಿ ಸೆಂದಿ ಕುಡಿಯಲು ಹೋಗೋಣಾ ಬಾ ಅಂತಾ ವಿಜಯಕುಮಾರ ಈತನು ಮನೆಯಿಂದ ಕರೆದುಕೊಂಡು ಬಂದು ಇ.ಎಸ್.ಐ ಆಸ್ಪತ್ರೆ ಹಿಂದುಗಡೆ ಇರುವ ವಿಶ್ವವಿದ್ಯಾಲಯ ಆವರಣದಲ್ಲಿರುವ ಕಾಮರ್ಸ ಡಿಪಾರ್ಟಮೆಂಟ ಕಡೆಗೆ ಹೋಗುವ ರೋಡಿನ ಹತ್ತಿರ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ. ಸದರಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೊಪಿತರನ್ನು ಮೇಲ್ಕಂಡ ತನಿಖಾ ತಂಡವು ಬೇದಿಸುವಲ್ಲಿ ಮತ್ತು ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. ಅಪಘಾತ ಪ್ರಕರಣಗಳು : ಫರತಾಬಾದ ಠಾಣೆ : ಪೀರೋಜಾಬಾದ ಗ್ರಾಮದ ಶಬ್ಬೀರ ಮತ್ತು ಹಸನ ಇವರು ದಿನಾಂಕ 25-05-2014 ರಂದು ರಾತ್ರಿ 1130 ಗಂಟೆಯ ಸುಮಾರಿಗೆ ನಾವಿಬ್ಬರು ದರ್ಗಾದಲ್ಲಿದ್ದಾಗ ದರ್ಗಾದ ಹತ್ತಿರ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ವಾಹನಗಳು ಡಿಕ್ಕಿಯಾದ ಸಪ್ಪಳ ಕೇಳಿ ನಾವು ಅಲ್ಲಿಗೆ ಹೋಗಿ ನೋಡಲಾಗಿ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಒಂದು ಟಿಪ್ಪರ ನಿಲ್ಲಿಸಿದ್ದು ಅದರ ನಂಬರ ಜಿಜೆ-07 ವ್ಹಿ ಡಬ್ಲೂ-4793 ಅಂತಾ ಇದ್ದು ಸದರ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಯಾವುದೇ ಡಿಕೇಟರ ವೈಗೆರೆ ಹಾಕದೇ,ಅಲಕ್ಷತನ ಮತ್ತು ಬೇಜಾವಬ್ದಾರಿತನದಿಂದ ನಿಲ್ಲಿಸಿ ಹೋಗಿದರಿಂದ ಜೇವರ್ಗಿ ಕಡೆಗೆ ಹೊರಟ ಮೋಟಾರ ಸೈಕಲ ಸವಾರನು ಹೆದ್ದಾರಿ ಮೇಲೆ ಇಂಡಿಕೇಟರ ಹಾಕದೇ ನಿಲ್ಲಿಸಿದ ಟಿಪ್ಪರ ನಂ ಜಿಜೆ-07 ವ್ಹಿಡಬ್ಲೂ-4793 ನೆದ್ದಕ್ಕೆ ಹಿಂದೆ ಡಿಕ್ಕಿಪಡಿಸಿದರಿಂದ ಸದರಿಯವನ ತಲೆಗೆ,ಬಲಗೈ ಮತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಸದರಿಯವನ ಹೆಸರು ಹೀರು ತಂದೆ ರಾಮು ಚವ್ಹಾಣ ಸಾ||ಮುದ್ದವಾಳ ತಾ|| ಜೇವರ್ಗಿ ಅಂತಾ ತಿಳಿಸಿದ್ದರ ಸಾರಾಂಶದ ಮೇರೆಗೆ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 29-05-2014 ರಂದು ಬೆಳಿಗ್ಗೆ 08-30 ಗಂಟೆಗೆ ಶ್ರೀ ಕೌಶಿಕ ತಂದೆ ದಿಲೀಪ ಕೌಲಗಿಕರ್ ಸಾ: ಸರಸ್ವತಿ ಗೋದಾಮ ಜಗತ ಪೊಸ್ಟ ಆಫೀಸ್ ಎದುರು ಗುಲಬರ್ಗಾ ರವರು ತನ್ನ ಕಾರ ನಂ: ಕೆಎ 32 ಎನ್ 3992 ನೆದ್ದನ್ನು ಕೇಂದ್ರ ಬಸ್ ನಿಲ್ದಾಣ ದಿಂದ ಆರ್.ಜಿ.ನಗರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮಹ್ಮದಿ ಚೌಕ ದಾಟಿ ರಿಹಾನ ತಾರಿ ಹೊಟೇಲ ಎದುರು ರೋಡ ಮೇಲೆ ಆರ್.ಜಿ.ನಗರ ಕಡೆಯಿಂದ ಸ್ಕಾರ್ಫಿಯೋ ಕಾರ ನಂ: ಕೆಎ 32 ಎನ್ 2866 ರ ಚಾಲಕನು ಅತಿವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಕಾರ ಡ್ಯಾಮೇಜ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಣೆ ಕಿರುಕಳ ಪ್ರಕರಣ : ಮಹಿಳಾ ಠಾಣೆ : ಶ್ರೀಮತಿ ವಂದನಾ ಗಂಡ ಉಜ್ವಲ್ ಸಿಂಗ್ ಹಜಾರಿ ಸಾ: ಖಾದ್ರಿ ಚೌಕ ಗುಲಬರ್ಗಾ ಇವರನ್ನು ದಿನಾಂಕ: 06.12.2007 ರಂದು ತಂದೆ ತಾಯಿಯವರು ಬೀದರದ ಉಜ್ವಲ್ ಸಿಂಗ್ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಮಾತನಾಡಿದ ಪ್ರಕಾರ 01 ಲಕ್ಷ ವರದಕ್ಷಿಣೆ 10 ತೊಲೆ ಬಂಗಾರ ಕೊಡಬೇಕಾಗಿತ್ತು. ಆದರೆ ನಾವು ನಮ್ಮ ತಂದೆ ತಾಯಿಯವರು ಮದುವೆಯಲ್ಲಿ 75 ಸಾವಿರ ರೂ 8 ತೊಲೆ ಬಂಗಾರ ಕೊಟ್ಟಿರುತ್ತಾರೆ. ಮದುವೆಯಾದ ಮೂರು ತಿಂಗಳು ಗಂಡ ಹಾಗೂ ಗಂಡ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು ನಂತರ ದಿನಾಲೂ ಇನ್ನು ಉಳಿದ ವರದಕ್ಷಿಣೆ ಹಣ & ಬಂಗಾರ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಪ್ರಾರಂಬಿಸಿದರು . ಅವರು ಕೊಡುವ ಹಿಂಸೆ ತಾಳಲಾರದೆ ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾದ ಖಾದ್ರಿ ಚೌಕ ನಬಿ ಕಾಲೋನಿಯಲ್ಲಿ ನಮ್ಮ ತಾಯಿಯೊಂದಿಗೆ ವಾಸವಾಗಿರುತ್ತೇನೆ . ಆದರು ಕೂಡ ನನ್ನ ಗಂಡ ಉಜ್ವಲ್ ಸಿಂಗ ಇತನು ಫೋನ ಮುಖಾಂತರ ಅವಾಚ್ಯಶಬ್ದಗಳಿಂದ ಬೈಯುತ್ತಿದ್ದನು . ದಿನಾಂಕ: 29.05.2014 ರಂದು ಬೆಳಗ್ಗೆ 9.00 ಗಂಟೆಗೆ ನನ್ನ ಗಂಡ ಉಜ್ವಲ್ ಸಿಂಗ್ ಅತ್ತೆ, ಪುಷ್ಪಾಬಾಯಿ, ಮಾವ ಬಾಬುಸಿಂಗ್, ಮೈದುನ ಪ್ರಕಾಶ ,ನಾದಿನಿ ನೀತು ಸಿಂಗ್ , ಇವರೆಲ್ಲರೂ ಕೂಡಿಕೊಂಡು ನಮ್ಮ ತವರು ಮನೆಗೆ ಬಂದು ರಂಡಿ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂದರೆ ತವರು ಮನೆಯಲ್ಲಿ ಕುಳಿತ್ತಿರುವಿಯಾ ನಿಮ್ಮ ತಾಯಿಗೆ ಖಲಾಸ ಮಾಡಿದರ ನಿನಗೆ ಯಾರು ನೊಡಿಕೊಳ್ಳಲು ಇರುವುದಿಲ್ಲಾ ಈಗ ನಿಮ್ಮ ತಾಯಿಯಿಂದ 50 ಸಾವಿರ ರೂ ಮತ್ತು 2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ನಮ್ಮ ಮನೆಯಲ್ಲಿ ನಿನಗೆ ಜಾಗ ಕೊಡುತ್ತೇವೆ ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ನನ್ನ ಗಂಡ ಉಜ್ವಲ್ ಸಿಂಗ ಇತನು ಕೈಯಿಂದ ಹೊಡೆದನು ನನ್ನ ನಾದಿನಿ ಕೈ ಹಿಡಿದು ಜಗ್ಗಾಡಿದಳು ಅತ್ತೆ, ಮಾವ, ಮೈದುನ ಎಲ್ಲರು ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Posted by Inspector General Of Police North Eastern Range Kalaburagi. at 7:41 PM No comments: Raichur District Reported Crimes ¥ÀwæPÁ ¥ÀæPÀluÉ ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- ¥Éưøï zÁ½ ¥ÀæPÀgÀtzÀ ªÀiÁ»w:- ¢£ÁAPÀ 28-05-2014 gÀAzÀÄ gÁwæ 19-30 UÀAmÉUÉ ªÀÄAdÄ£ÁxÀ vÀAzÉ ±ÉÃRgÀ¥Àà ªÀAiÀĸÀÄì 23 ªÀµÀð eÁw F½UÉÃgÀ G: ¥Á£À±Á¥À ªÁå¥ÁgÀ ¸Á: HlPÀ£ÀÆgÀÄ FvÀ£ÀÄ HlPÀ£ÀÆgÀÄ UÁæªÀÄzÀ ¸ÁªÀðd¤PÀ ±Á¯ÉAiÀÄ ºÀwÛgÀ vÀ£Àß qÀ¨Éâ CAVrAiÀÄ ªÀÄÄAzÉ AiÀiÁªÀÅzÉà ¯ÉʸɣÀì E®èzÉà C£À¢üPÀÈvÀªÁV ¸ÁªÀðd¤PÀjUÉ ªÀÄzÀåzÀ ¨Ál°UÀ¼À£ÀÄß ªÀiÁgÁl ªÀiÁqÀÄwÛzÁÝUÀ, ¦.J¸ï.L.PÀ«vÁ¼ÀgÀªÀgÀÄ ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀ¤AzÀ 1) 180 JA.J¯ï. Njf£À¯ï ZÁ¬Ä¸ï «¹Ì 8 ¨ÁPïìUÀ¼À°è MlÄÖ 390 ¥ËZÀÄUÀ¼ÀÄ MAzÀPÉÌ 40/- gÀÆ zÀAvÉ C.Q.gÀÆ.18,720= ªÀÄvÀÄÛ 2) 90 JA.J¯ï. M¯ïØ mÁªÀgÉ£ï ¥ÉmÁæ ¥ÁåPï 2 1/2 ¨ÁPïì MlÄÖ 110 ¥ËZÀÄUÀ¼ÀÄ MAzÀPÉÌ 34-00gÀÆ. gÀAvÉ C.Q.gÀÆ 3740/-, »ÃUÉ MlÄÖ 22,460=00, ªÀÄvÀÄÛ £ÀUÀzÀÄ ºÀt gÀÆ. 250/- EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ DgÉÆævÀ£ÉÆA¢UÉ oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ PÀ«vÁ¼À oÁuÁ oÁuÁ UÀÄ£Éß £ÀA 20/2014 PÀ®A 32, 34 PÉ.E.PÁ¬ÄzÉ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¢£ÁAPÀ:- 28-05-2014 gÀAzÀÄ PÉ. ºÉƸÀ½î UÁæªÀÄzÀ ±ÉÃRgÀ¥ÀàUËqÀ gÀªÀgÀ ºÉÆ®zÀ ºÀ¼ÀîzÀ ¸ÁªÀðd¤PÀ ¸ÀܼÀzÀ°è 1) ºÀĸÉãÀ¸Á¨ï vÀAzÉ gÁeÁ¸Á§ ªÀAiÀiÁ: 35 eÁ: ªÀÄĹèA G: MPÀÌ®ÄvÀ£À ¸Á: PÉ. ºÉƸÀ½î ºÁUÀÆ EvÀgÉ 3 d£ÀgÀÄ ¸ÉÃj vÀªÀÄä ¯Á¨sÀPÁÌV CAzÀgï-§ºÁgï JA§ £À¹Ã©£À 52 E¸ÉàÃmï J¯ÉUÀ¼À ¸ÀºÁAiÀÄ¢AzÀ ºÀtzÀ ¥ÀAxÀ PÀnÖ dÆeÁl DqÀÄwÛgÀĪÁUÀ ¦.J¸ï.L vÀÄgÀÄ«ºÁ¼À gÀªÀgÀÄ ªÀiÁ»w ¥ÀqÉzÀÄ ¹§âA¢ ªÀÄvÀÄÛ ¥ÀAZÀgÉÆA¢UÉ ºÉÆÃV zÁ½ £Àqɹ MlÄÖ 4 d£À CgÉÆævÀgÀ£ÀÄß zÀ¸ÀÛVj ªÀiÁr CªÀjAzÀ dÆeÁlzÀ ºÀt gÀÆ. 2700/- ªÀÄvÀÄÛ 52 E¸ÉàÃmï J¯ÉUÀ¼ÀÄ ªÀ±À¥Àr¹PÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ vÀÄgÀÄ«ºÁ¼À oÁuÉ. UÀÄ£Éß £ÀA: 86/2014 PÀ®A 87 PÉ.¦. AiÀiÁåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ. ¢£ÁAPÀ:- 28-05-2014 gÀAzÀÄ vÀÄgÀÄ«ºÁ¼À ¹ÃªÀiÁzÀ ±ÉõÀVjgÁªï PÀÄ®PÀÀtÂð gÀªÀgÀ ºÉÆ®zÀ ºÀ¼ÀîzÀ ¸ÁªÀðd¤PÀ ¸ÀܼÀzÀ°è 1) ªÀÄ®è¥Àà vÀAzÉ ²ªÀ¥Àà ªÀAiÀiÁ: 40 eÁ: PÀÄgÀħgÀÄ G: MPÀÌ®ÄvÀ£À ¸Á: vÀÄgÀÄ«ºÁ¼À ºÁUÀÆ EvÀgÉ E§âgÀÆ ¸ÉÃj vÀªÀÄä ¯Á¨sÀPÁÌV CAzÀgï-§ºÁgï JA§ £À¹Ã©£À 52 E¸ÉàÃmï J¯ÉUÀ¼À ¸ÀºÁAiÀÄ¢AzÀ ºÀtzÀ ¥ÀAxÀ PÀnÖ dÆeÁl DqÀÄwÛgÀĪÁUÀ ¦.J¸ï.L vÀÄgÀÄ«ºÁ¼À gÀªÀgÀÄ ªÀiÁ»w ¥ÀqÉzÀÄ ¹§âA¢ ªÀÄvÀÄÛ ¥ÀAZÀgÉÆA¢UÉ ºÉÆÃV zÁ½ £Àqɹ MlÄÖ 3 d£À CgÉÆævÀgÀ£ÀÄß zÀ¸ÀÛVj ªÀiÁr CªÀjAzÀ dÆeÁlzÀ ºÀt gÀÆ. 1200/- ªÀÄvÀÄÛ 52 E¸ÉàÃmï J¯ÉUÀ¼ÀÄ ªÀ±À¥Àr¹PÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ vÀÄgÀÄ«ºÁ¼À oÁuÉ. UÀÄ£Éß £ÀA: 85/2014 PÀ®A 87 PÉ.¦. AiÀiÁåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ UÁAiÀÄzÀ ¥ÀæPÀgÀtzÀ ªÀiÁ»w:- ¢£ÁAPÀ-28-05-2014 gÀAzÀÄ gÁwæ 8-00 UÀAmÉ ¸ÀĪÀiÁjUÉ ¦üAiÀiÁ𢠲æà CªÀdªÀÄä UÀAqÀ ºÀ£ÀĪÀÄAvÀ, 30ªÀµÀð, £ÁAiÀÄPÀ ºÉÆ®ªÀÄ£ÉPÉ®¸À, À¸Á- ¥ÀgÀvÀ¥ÀÄgÀ, vÁ: zÉêÀzÀÄUÀð ºÁUÀÆ DPÉAiÀÄ ªÀÄPÀ̼ÀÄ ¥ÀgÀvÀ¥ÀÄgÀ UÁæªÀÄzÀ°è vÀªÀÄä ªÀÄ£É ªÀÄÄAzÉ EzÁÝU,À ¦üAiÀiÁð¢zÁgÀ¼ÀÄ ªÀÄ£ÉAiÀÄ£ÀÄß PÀnÖ¸ÀĪÀ ¸À®ÄªÁV G¸ÀÄPÀ£ÀÄß mÁåçPÀÖgÀzÀ°è vÀÄA§ÄªÀ «µÀAiÀÄzÀ°è 1) ©üêÀÄtÚ vÀAzÉ ªÀÄ®è¥Àà2) ¤AUÀ¥Àà vÀAzÉ ªÀiÁ£À±À¥Àà3) ªÀiÁ£À±À¥Àà vÀAzÉ ¢: ©üêÀÄgÁAiÀÄ J¯ÁègÀÆ eÁ:£ÁAiÀÄPÀ, ¸Á: ¥ÀgÀvï¥ÀÄgÀ EªÀgÀÄUÀ¼ÀÄ §AzÀÄ DgÉÆæ ¤AUÀ¥Àà FvÀ£ÀÄ K¯Éà ºÀ£ÀªÀÄå ¨ÁgÀ¯Éà ºÉÆgÀUÉ CAvÁ PÀgÉzÀÄ , ¦üAiÀiÁð¢zÁgÀ½UÀÆ CªÁZÀå ±À§ÝUÀ½AzÀ ¨ÉÊzÀÄ, DPÉUÉ PÀnÖUɬÄAzÀ §® ºÀuÉUÉ ºÉÆqÉzÀÄ, DgÉÆæ ©üêÀÄtÚ£ÀÆ PÀÆqÀ CªÁZÀåªÁV ¨ÉÊzÀÄ, ¤AUÀ¥Àà PÉÊAiÀÄ°èzÀÝ PÀnÖUÉAiÀÄ£ÀÄß vÉUÉzÀÄ PÉÆAqÀÄ ¦üAiÀiÁ𢠪ÀÄUÀ ªÀÄ°èPÁdÄð£À¤UÉ vÀ¯ÉAiÀĪÉÄÃ¯É ºÉÆqÉzÀÄ gÀPÀÛUÁAiÀÄ UÉƽ¹zÀÄÝ, ªÀiÁ£À±ÀAiÀÄå£ÀÄ ¦üAiÀiÁð¢zÁgÀ½UÉ ¤Ã£ÀÄ ¤£Àß UÀAqÀ K£ÀÆ ªÀiÁqÀ®Ä DUÀĪÀÅ¢®è CAvÁ ¨ÉÊ¢ ¦üAiÀiÁ𢠪ÀÄUÀ¤UÀÆ CªÁZÀå ±À§ÝUÀ½AzÀ ¨ÉÊzÀÄ, ¦üAiÀiÁ¢UÉ PÉʬÄrzÀÄ J¼ÉzÁr C¥ÀªÀiÁ£ÀUÀ¥À½¹zÀÄÝ, DgÉÆævÀgÉ®ègÀÆ ¦üAiÀiÁ𢠪ÀÄvÀÄÛ ¦üAiÀiÁ𢠪ÀÄPÀ̽UÉ J¯Éà ¸ÀÆ¼É ªÀÄPÀÌ¼É ¤ÃªÀÅ G¸ÀÄPÀÄ ºÉÆqÉAiÀĨÉÃPÁzÀgÉ næ¦UÉ 200 gÀÆ PÉÆlÖgÉ ¸Àj E®è¢zÀÝgÉ. ¤ªÀÄä£ÀÄ fêÀ¸À»vÀ ©qÀĪÀÅ¢®,è CAvÁ fêzÀÀ ¨ÉzÀjPÉ ºÁQzÀÄÝ EgÀÄvÀÛzÉ, CAvÁ PÉÆlÖ zÀÆj£À ªÉÄðAzÀ zÉÃêÀzÀÄUÀð ¥Éưøï oÁuÉ UÀÄ£Éß £ÀA.95/2014. PÀ®A-504,323,324,354,506,¸À»vÀ34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÀÛgÉ. ದಿನಾಂಕ 28-05-2014 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ಫಿರ್ಯಾದಿ ²æÃ. ªÀĺÉñÀ vÀAzÉ a£ÀßgÉrØ ªÀAiÀiÁ|| 22 ªÀµÀð, eÁw. ºÀjd£À, G. PÀÆ° PÉ®¸À ¸Á|| ¹AUÀ£ÉÆÃr vÁ.f. gÁAiÀÄZÀÆgÀÄ ಮತ್ತು ಅತನ ತಮ್ಮ ಹಾಗೂ ತಾಯಿ ತಮ್ಮ ಮನೆಯಲ್ಲಿ ಇದ್ದಾಗ ಆರೋಪಿತರಾದ ಚಿನ್ನರೆಡ್ಡಿ ಮತ್ತು ಸಣ್ಣ ಹನುಮಂತ @ ಅದೆಪ್ಪ ಇವರು ಫಿರ್ಯಾದಿಯ ಮನೆಯ ಮುಂದೆ ಬಂದು ಆರೋಪಿ ನಂ.01 ಇತನು ‘’ ಎಲೇ ಸೂಳೆ ಮಗನೆ ನೀನು ನನ್ನ ಮನೆ ಬಿಟ್ಟುಹೋಗು ನೀನು ನನ್ನ ಮನೆಯಲ್ಲಿ ಇರಬಾರದು ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಪುನ: ನಿನ್ನ ತಾಯಿಗೆ ಅಕೆಯ ತವರು ಮನೆಯವರು 02 ಎಕರೆ ಜಮೀನು ಕೊಡುತ್ತೇನೆಂದು ಹೇಳಿದ್ದರು ಆ 02 ಎಕರೆ ಜಮೀನು ನಿನ್ನ ತಾಯಿ ಹೆಸರುನಲ್ಲಿ ಮಾಡಿಸಿಕೊಂಡು ಬಾ ಎಂದು ನಿನ್ನ ತಾಯಿಗೆ ಹೇಳು ಅಂತಾ ಹೇಳಿದಕ್ಕೆ ಫಿರ್ಯಾದಿಯು ನನ್ನ ತಾಯಿಯ ತವರು ಮನೆಯವರು 02 ಎಕರೆ ಜಮೀನು ಯಾಕೆ ಕೊಡಬೇಕು ಅಂತಾ ಹೇಳಿದಕ್ಕೆ ಆರೋಪಿ ನಂ.01 ಈತನು ಸಿಟ್ಟಿಗೆ ಬಂದು ಫಿರ್ಯಾದಿಗೆ ಬಾಯಿಯಿಂದ ಬಲ ಜುಜಕ್ಕೆ ಕಚ್ಚಿ ಕಟ್ಟಿಗೆಯಿಂದ ಮೈ ಕೈ ಗೆ ಹೊಡೆದಿದ್ದು ಆರೋಪಿ ನಂ.02 ಈತನು ಸಹ ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ಬಲಗೈ ಮೊಣಕೈಗೆ ಬೆನ್ನಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥Éưøï oÁuÉ UÀÄ£Éß £ÀA: 66/2014 PÀ®A: 323. 324. 504. 506 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ. ಕರೆಂಟ ಶಾಟ್ ¥ÀæPÀgÀtzÀ ªÀiÁ»w:- ದಿನಾಂಕ 28-05-2014 ರಂದು ಸಂಜೆ 06-45 ಗಂಟೆ ಸಮಯಕ್ಕೆ ಆರೋಪಿ ನಂ.01] CdÄð£À vÀAzÉ dªÀÄÄ£Áf ªÀAiÀiÁ|| 36 ªÀµÀð, eÁw. PÀlUÀÀgÀ G|| ¯ÉÊ£ÀªÀÄ£ï ¸Á|| AiÀiÁ¥À®¢¤ß ಈತನು ಮೃತ ನಡುಪಿ ಯಲ್ಲಪ್ಪನಿಗೆ ಎಲ್.ಸಿ. ತೆಗೆದುಕೊಳ್ಳದೆ ಕರೆಂಟ ಚಾಲು ಸ್ಥಿತಿಯಲ್ಲಿದ್ದಾಗ ಕರೆಂಟ ಕಂಬ ಹತ್ತಿಸಿ ಲೈನ ದುರಸ್ತಿ ಮಾಡುವ ಕೆಲಸಕ್ಕೆ ಹಚ್ಚಿದ್ದರಿಂದ ನಡುಪಿ ಯಲ್ಲಪ್ಪನಿಗೆ ಕರೆಂಟ ಶಾಟ್ ಹೊಡೆದು ಮೃತ ಪಟ್ಟಿದ್ದು ಇರುತ್ತದೆ. 01] CdÄð£À vÀAzÉ dªÀÄÄ£Áf ªÀAiÀiÁ|| 36 ªÀµÀð, eÁw. PÀlUÀÀgÀ G|| ¯ÉÊ£ÀªÀÄ£ï ¸Á|| AiÀiÁ¥À®¢¤ß 02] UÉÆëAzÀ f.E. 03] zÁ¸À¥Àà J.E.E.04] §¸ÀªÀgÁd E.E. EªÀgÀÄUÀ¼ÀÄ ಮೃತನಿಗೆ ಕೆ.ಇ.ಬಿ.ಯಲ್ಲಿ ಖಾಯಂ ನೌಕರಿ ಕೊಡುಸುತ್ತೆವೆಂದು ಆಶೆ ಹುಟ್ಟಿಸಿ ಯಾವುದೇ ತರಬೇತಿ ಇಲ್ಲದವನಿಗೆ ಲೈನಮನ್ ಕೆಲಸ ಮಾಡಲು ಸೂಚಿಸಿದ್ದು ಇರುತ್ತದೆ. CAvÁ PÉÆl ²æÃ. AiÀÄ®è¥Àà vÀAzÉ CrªÉÀ¥Àà ªÀAiÀiÁ|| 30 ªÀµÀð, eÁw|| ªÀiÁ®zÁ¸ÀgÀÄ G|| PÀÆ° PÉ®¸À ¸Á|| AiÀiÁ¥À®¢¤ß vÁ.f.gÁAiÀÄZÀÆgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥Éưøï oÁuÉ UÀÄ£Éß £ÀA: 67/2014 PÀ®A: 336, 304 (J) L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.05.2014 gÀAzÀÄ 135 ¥ÀææPÀgÀtUÀ¼À£ÀÄß ¥ÀvÉÛ ªÀiÁr 27,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ. Posted by Inspector General Of Police North Eastern Range Kalaburagi. at 6:39 PM No comments: Koppal District Crimes ¸ÀAZÁgÀ ¥Éưøï oÁuÉ PÉÆ¥À༠ಗುನ್ನೆ ನಂಬರ್ 30/2014 ಕಲಂ. 279, 338 ಐಪಿಸಿ ದಿನಾಂಕ 28-05-2014 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಲ್ಲಪ್ಪ ಸಿ.ಪಿ.ಸಿ 114 ಕೊಪ್ಪಳ ಸಂಚಾರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 28-05-2014 ರಂದು ಮಧ್ಯಾಹ್ನ 2-00 ಗಂಟೆಯಿಂದ ರಾತ್ರಿ 8-30 ಗಂಟೆಯವರೆಗೆ ತಮ್ಮನ್ನು ಕೊಪ್ಪಳ ನಗರದ ಕೇಂದ್ರಯ ಬಸ್ ನಿಲ್ದಾಣದ ಹತ್ತಿರ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಸಂಜೆ 7-20 ಗಂಟೆಯ ಸುಮಾರಿಗೆ ಹೊಸಪೇಟೆ – ಗದಗ ಎನ್.ಹೆಚ್ 63 ರಸ್ತೆಯ ಮೇಲೆ ಬಸ್ ನಿಲ್ದಾಣದ ಮುಂದೆ ಇರುವ ಹಣ್ಣಿನ ಅಂಗಡಿಯ ಮುಂದೆ ನಿಂತು ಕರ್ತವ್ಯ ನಿರ್ವಹಿಸುತ್ತಿರುವಾಗ ಗೋವಿಂದಪ್ಪ ಪತ್ತಾರ ಇವರು ಗದಗ-ಹೊಸಪೇಟೆ ಎನ್.ಹೆಚ್ 63 ರಸ್ತೆಯನ್ನು ದಾಟುತ್ತಿರುವಾಗ ಗದಗ ರಸ್ತೆಯ ಕಡೆಯಿಂದ ಒಬ್ಬ ಮೋಟಾರ್ ಸೈಕಲ್ ನಂಬರ್ KA 37 / L 9368 ನೇದ್ದರ ಸವಾರನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಾವು ನೋಡ ನೋಡುತ್ತಿದ್ದಂತೆಯೇ ರಸ್ತೆಯನ್ನು ದಾಟುತ್ತಿದ್ದ ವ್ಯಕ್ತಿಗೆ ಠಕ್ಕರ್ ಮಾಡಿ ಅಪಘಾತ ಮಾಡಿದ್ದು, ಇದರಿಂದ ಗೋವಿಂದಪ್ಪ ಇವರಿಗೆ ಎಡಹಣೆಗೆ, ಎಡಗೈಗೆ, ಎಡಗಡೆ ಮಲಕಿಗೆ, ಮೂಗಿಗೆ ತೆರಚಿದ ಗಾಯ ಹಾಗೂ ತಲೆಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಗಣಕೀಕೃತ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. PÉÆ¥Àà¼À £ÀUÀgÀ ¥Éưøï oÁuÉ UÀÄ£Éß £ÀA: 114/2014 PÀ®A: 379 L¦¹ ¢£ÁAPÀ: 28-05-2014 gÀAzÀÄ gÁwæ 8-15 UÀAmÉUÉ ¦ügÁå¢zÁgÀgÁzÀ dA§tÚ vÀAzÉ PÀ¼ÀPÀ¥Àà £ÀAzÁå¥ÀÆgÀ ¸Á: §¸À¥Àà ¢ªÀlgÀ £ÀUÀgÀ ªÁqÀð £ÀA: 28 PÉÆ¥Àà¼À EªÀgÀÄ oÁuÉUÉ ºÁdgÁV °TvÀ ¦ügÁå¢AiÀÄ£ÀÄß ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, ¢£ÁAPÀ: 12-05-2014 gÀAzÀÄ ¸ÀAeÉ 5-00 UÀAmÉAiÀÄ ¸ÀĪÀiÁjUÉ PÉÆ¥Àà¼À §¸ï ¤¯ÁÝtzÀ ºÀwÛgÀ vÀªÀÄä »gÉÆúÉÆAqÁ ¥ÁåµÀ£ï ¥ÉÆæà ¸ÉÊPÀ¯ï ªÉÆÃmÁgÀ £ÀA: PÉJ37/AiÀÄÄ-5239 £ÉÃzÀÝ£ÀÄß ¤°è¹ §¸ï ¤¯ÁÝtzÉƼÀUÉ HjAzÀ §gÀĪÀ vÀªÀÄä ªÀÄUÀ¼À£ÀÄß PÀgÉzÀÄPÉƪÀÄqÀÄ §gÀ®Ä ºÉÆÃVzÀÄÝ, £ÀAvÀgÀ gÁwæ 8-00 UÀAmÉUÉ vÀªÀÄä ªÀÄUÀ¼À£ÀÄß PÀgÉzÀÄPÉƪÀÄqÀÄ ªÁ¥À¸À vÁªÀÅ ¤°è¹zÀ vÀªÀÄä ¸ÉÊPÀ¯ï ªÉÆÃmÁgÀ ºÀwÛgÀ §AzÀÄ £ÉÆÃqÀ¯ÁV CªÀgÀ ¸ÉÊPÀ¯ï ªÉÆÃmÁgÀ PÁt°¯Áè, £ÀAvÀgÀ gÁwæ 10-00 UÀAmÉAiÀĪÀgÉUÀÆ ºÀÄqÀÄPÁrzÀgÀÆ J°èAiÀÄÆ PÁt°¯Áè. AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ PÀAqÀħA¢vÀÄ. PÁgÀt vÀ£Àß »gÉÆúÉÆAqÁ ¥ÁåµÀ£ï ¥ÉÆæà ¸ÉÊPÀ¯ï ªÉÆÃmÁgÀ £ÀA: PÉJ37/AiÀÄÄ-5239 CA.Q.gÀÆ: 30,000=00 ¨É¯É ¨Á¼ÀĪÀÅzÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃzÀ AiÀiÁgÉÆà PÀ¼ÀîgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw ºÁUÀÆ PÀ¼ÀîvÀ£ÀªÁzÀ vÀ£Àß ¸ÉÊPÀ¯ï ªÉÆÃmÁgÀ£ÀÄß ¥ÀvÉÛà ªÀiÁrPÉÆAqÀĪÀAvÉ EgÀĪÀ ¦ügÀå¢ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ CzÉ. UÀAUÁªÀw UÁæ«ÄÃt ¥Éưøï oÁuÉAiÀÄ UÀÄ£Éß £ÀA: 154/2014 PÀ®A 420 gÉqï«vï 34 L¦¹. ¢£ÁAPÀ:- 28/05/2014 gÀAzÀÄ ¸ÀAeÉ 6:00 UÀAmÉUÉ ¦üAiÀiÁð¢zÁgÀgÁzÀ VjñÀgÁªï UÁAiÀÄPÀªÁqÀ vÀAzÉ D£ÀAzÀ¥Àà, 36 ªÀµÀð, ªÀÄgÁoÀ G: MPÀÌ®ÄvÀ£À ªÀÄvÀÄÛ mÁæ£ïì¥ÉÆÃlð ¸Á: ¹¢ÝPÉÃj vÁ: UÀAUÁªÀw EªÀgÀÄ oÁuÉUÉ ºÁdgÁV UÀtQÃPÀgÀt ªÀiÁr¹zÀ ¦üAiÀiÁð¢AiÀÄ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ.“£Á£ÀÄ MPÀÌ®ÄvÀ£À ªÀiÁrPÉÆArzÀÄÝ, C®èzÉà mÁæ£ïì¥ÉÆÃlð ªÀåªÀºÁgÀªÀ£ÀÄß ªÀiÁrPÉÆArgÀÄvÉÛãÉ. £Á£ÀÄ £À£Àß mÁæ£ïì¥ÉÆÃlð ªÀåªÀºÁgÀPÁÌV E£ÀÆß ºÉaÑ£À ¯ÁjUÀ¼À£ÀÄß Rjâ ªÀiÁqÀ®Ä EaÒ¹ ºÉƸÀ¥ÉÃmÉAiÀÄ gÁdÄ JA§ ªÀÄzsÀåªÀwðAiÀÄ ªÀÄÆ®PÀ vÀ«Ä¼ÀÄ£Ár£À PÀgÀÆgÀÄ ¤ªÁ¹UÀ¼ÁzÀ (1) «. PÀtÚ£ï vÀAzÉ ¦. «ÃgÀ¥Àà£ï ¸Á: vÁAzÉÆä ªÀįÉÊ-PÀgÀÆgÀÄ (2) ªÉîĸÁé«Ä ¸Á: PÀgÀÆgÀÄ EªÀjAzÀ MlÄÖ 10 ¯ÁjUÀ¼À£ÀÄß Rjâ ªÀiÁqÀ®Ä ªÀiÁvÀÄPÀvÉAiÀiÁr gÀÆ. 11,31,000/- UÀ½UÉ MAzÀÄ ¯ÁjAiÀÄAvÉ MlÄÖ gÀÆ. 1,13,10,000/- UÀ½UÉ 10 ¯ÁjUÀ¼À RjâUÉ ªÀåªÀºÁgÀªÀ£ÀÄß PÀÄzÀÄj¹zɪÀÅ. ¢£ÁAPÀ:- 29-06-2013 gÀAzÀÄ ªÀiÁvÀÄPÀvÉAiÀiÁzÀ PÀÆqÀ¯Éà ªÀÄÄAUÀqÀªÁV gÀÆ. 50,000/- UÀ¼À£ÀÄß PÉÆmÉÖªÀÅ. EzÀ£ÀÄß CVæêÉÄAmï §gÉAiÀÄĪÀ ¸ÀªÀÄAiÀÄzÀ°è £ÀªÀÄÆ¢¸À¯Á¬ÄvÀÄ. EzÁzÀ £ÀAvÀgÀ CAzÉ ¸ÀAeÉ gÀÆ. 3,00,000/- UÀ¼À£ÀÄß £ÀUÀzÀÄ gÀÆ¥ÀzÀ°è ¤ÃrzÉ£ÀÄ. £ÀAvÀgÀ ¢:03-07-2013 gÀAzÀÄ «. PÀtÚ£ï EªÀgÀ ºÉZï.r.J¥sï.¹. ¨ÁåAPï SÁvÉ ¸ÀA: 50200000226112 £ÉÃzÀÝPÉÌ gÀÆ. 5,00,000/- UÀ¼À£ÀÄß UÀAUÁªÀwAiÀÄ ºÉZï.r.J¥sï.¹. ¨ÁåAPï ªÀÄÆ®PÀ dªÀiÁ ªÀiÁrzÉ£ÀÄ. £ÀAvÀgÀ ¢:04-07-2013 gÀAzÀÄ £À£Àß UÀAUÁªÀwAiÀÄ L¹L¹L ¨ÁåAPï SÁvÉ ¸ÀA: 086501000194 £ÉÃzÀÝjAzÀ JA. ªÉîĸÁé«Ä FvÀ£À ºÉZï.r.J¥sï.¹.¨ÁåAPï SÁvÉ ¸ÀA: 05662320000564 £ÉÃzÀÝPÉÌ gÀÆ. 4,00,000/- UÀ¼À£ÀÄß Dgï.n.f.J¸ï (mÁæ£ïì¥sÀgï) ªÀiÁr¸À¯Á¬ÄvÀÄ. £ÀAvÀgÀ EzÉà jÃw ¢£ÁAPÀ:- 05-07-2013 gÀAzÀÄ gÀÆ. 2,50,000/- UÀ¼À£ÀÄß £À£Àß SÁvɬÄAzÀ JA. ªÉîĸÁé«Ä FvÀ£À SÁvÉUÉ Dgï.n.f.J¸ï (mÁæ£ïì¥sÀgï) ªÀiÁr¸À¯Á¬ÄvÀÄ. F ¥ÀæPÁgÀ MlÄÖ gÀÆ. 15,00,000/- UÀ¼À£ÀÄß «. PÀtÚ£ï ªÀÄvÀÄÛ ªÉîĸÁé«Ä EªÀjUÉ PÉÆqÀ¯Á¬ÄvÀÄ. EªÀgÀÄ 20 ¢ªÀ¸ÀUÀ¼À°è G½zÀ ºÀtªÀ£ÀÄß PÉÆlÄÖ J¯Áè 10 ¯ÁjUÀ¼À£ÀÄß PÉÆqÀĪÀÅzÁV ªÀÄvÀÄÛ Dgï.n.N. ªÀÄÆ®PÀ ¯ÁjUÀ¼À J£ï.N.¹. PÀ¼ÀÄ»¸ÀĪÀÅzÁV w½¹zÀgÀÄ. CªÀgÀÄ 20 ¢ªÀ¸ÀUÀ¼À°è J£ï.N.¹. PÀ¼ÀÄ»¸ÀzÉà ªÀÄÆgÀÄ wAUÀ¼À £ÀAvÀgÀ 4 ¯ÁjUÀ¼À J£ï.N.¹.UÀ¼À£ÀÄß PÀ¼ÀÄ»¹zÀÄÝ, EzÀjAzÀ £ÀªÀÄUÉ ¥sÉÊ£Á£ïì ¸Ë®¨sÀå ¹UÀ°¯Áè. F PÁgÀtPÁÌV £ÁªÀÅ CªÀjUÉ PÉÆlÖ ºÀtªÀ£ÀÄß ªÁ¥À¸ï PÉÆqÀĪÀAvÉ PÉýzÀgÀÆ ¸ÀºÀ EAzÀÄ PÉÆqÀÄvÉÛÃªÉ £Á¼É PÉÆqÀÄvÉÛÃªÉ CAvÁ ºÉüÀÄvÁÛ EzÀĪÀgÉUÀÆ 15,00,000/- gÀÆ.UÀ¼À£ÀÄß PÉÆqÀzÉà ªÉÆøÀ ªÀiÁrgÀÄvÁÛgÉ. PÁgÀt £À£ÀUÉ ªÀAa¹zÀªÀgÀ «gÀÄzÀÞ ¥ÀæPÀgÀtªÀ£ÀÄß zÁR®Ä ªÀiÁr PÁ£ÀÆ£ÀÄ PÀæªÀÄ dgÀÄV¸À®Ä «£ÀAw. ” CAvÁ ªÀÄÄAvÁV EzÀÝ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ. Posted by Inspector General Of Police North Eastern Range Kalaburagi. at 12:18 PM No comments: Gulbarga District Reported Crimes ಅಪಘಾತ ಪ್ರಕರಣಗಳು : ಸೇಡಂ ಠಾಣೆ : ಶ್ರೀಮತಿ. ಜಯಶ್ರೀ ಗಂಡ ವಿನಾಯಕ ಭೋಸಲೆ ಸಾ:ರವಿವಾರಪೇಟ, ಸೋಲಾಪೂರ ಇವರ ದಿನಾಂಕ:26-05-2014 ರಂದು ನಾವು ನಮ್ಮ ಕುಟುಂಬ ಸಮೇತ ತಿರುಪತಿ ದೇವರ ದರ್ಶನಕ್ಕೆಂದು ಕಾರ ನಂ-MH12-HN-2557 ನೇದ್ದರಲ್ಲಿ ಕುಳಿತು ಸೋಲಾಪೂರದಿಂದ ತಿರುಪತಿಗೆ ಹೋಗಿ ದೇವರ ದರ್ಶನ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಸೇಡಂ ಮಾರ್ಗವಾಗಿ ಬರುವಾಗ, ರಂಜೋಳ-ಕುರಕುಂಟಾ ಕ್ರಾಸ್ ಮಧ್ಯೆದಲ್ಲಿ, ರೋಡಿನ ಮಧ್ಯೆದಲ್ಲಿ ಸೇಡಂ ಕಡೆ ಮುಖಮಾಡಿ ಒಂದು ಲಾರಿ ನಂ-AP28-V-6502 ನೇದ್ದು ಯಾವುದೇ ಮುನ್ಸೂಚನೆ ಇಂಡಿಕೇಟರ್ ಅಥವಾ ಲಾರಿ ಸುತ್ತಲೂ ಸುಚನಾ ಕಲ್ಲುಗಳು ಇಡದೇ ನಿಷ್ಕಾಳಜಿ ತನದಿಂದ ರೋಡಿನ ಮೇಲೆ ನಿಲ್ಲಿಸಿದ್ದು, ಸದರಿ ವಾಹನಕ್ಕೆ ಮಗ್ಗಲಾಗಿ ಸೈಡ್ ತೆಗೆದುಕೊಂಡು ನಮ್ಮ ಕಾರ ಚಾಲಕನು ಹೋಗುತ್ತಿ ರುವಾಗ, ಎದುರುಗಡೆಯಿಂದ ಒಂದು ಲಾರಿ ಟ್ಯಾಂಕರ್ ನಂ-KA22-B-9739 ನೇದ್ದರ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿದ್ದರಿಂದ ಅಪಘಾತದಲ್ಲಿ ನನಗೆ ಭಾರಿ ರಕ್ತಗಾಯಗಳಾದವು ನನ್ನ ಹಾಗೆಯೇ ನಮ್ಮ ತಂಗಿಯಾದ ರಾಜಶ್ರೀ, ಅಣ್ಣನಾದ ವಿನಾಯಕ, ತಾಯಿಯಾದ ಮಂಗಲಾಬಾಯಿ ಹಾಗೂ ನಮ್ಮ ಕಾರ ಚಾಲಕನಾದ ನಾಗೇಶ ಇವರುಗಳಿಗೆ ಸಾದಾ ಹಾಗೂ ಭಾರಿ ರಕ್ತಗಾಯಗಳಾದವು. ಹಾಗೂ ಈ ಘಟನೆಯಲ್ಲಿ ಭಾರಿ ರಕ್ತಗಾಯವಾಗಿ ನನ್ನ ಮಕ್ಕಳಾದ ಪ್ರೀತಿ,ಶ್ರುತಿ ಮತ್ತು ತಂದೆಯಾದ ಕೊಂಡಿಬಾ ಹಾಗೂ ನಮ್ಮ ಗುರುಗಳಾದ ವಿಷ್ಣು ತಂದೆ ದತ್ತು ಮಹರಾಜ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 28-05-2014 ರಂದು 8;00 ಪಿ.ಎಂ ಕ್ಕೆ ಶ್ರೀಮತಿ ಗಂಗಾಬಾಯಿ ಗಂಡ ಮಹಾದೇವ ಬಾಣಿ ಸಾ|| ದೇವರನಾವುದಗಿ vÁ: ¹AzÀV ರವರ ತಂಗಿ ಗಂಡ ಚಂದ್ರಕಾಂತ ಇವರು ನಮಗೆ ಫೋನ ಮಾಡಿ ನಾನು ಮತ್ತು ನನ್ನ ಹೆಂಡತಿ ರೇಣುಕಾ ಹಾಗು ನನ್ನ ಮಗಳು ಮಾಯಾ ರವರೆಲ್ಲರು ಕೂಡಿಕೊಂಡು ದೇವರು ಕೇಳಲು ಸಿಂದಿಗಿ ತಾಲೂಕಿನ ತಾರಾಪೂರ ಗ್ರಾಮಕ್ಕೆ ನಮ್ಮೂರ ಶರಬುಕಾಂತ ಕುಮುಸಗಿ ರವರ ಮೋಟರ ಸೈಕಲ್ ನಂ ಕೆ.ಎ-32/ಇಇ-2392 ನೇದ್ದರ ಮೇಲೆ ಗೊಬ್ಬೂರದಿಂದ 6;00 ಪಿ.ಎಂ ಸುಮಾರಿಗೆ ಹೊರಟಿರುತ್ತೇವೆ, ನಂತರ ಅಂದಾಜು 7;30 ಪಿ.ಎಂ ಸುಮಾರಿಗೆ ನಾವು ಅಫಜಲಪೂರದ ಸಮೀಪ ನಿರಾವರಿ ಆಫಿಸನಿಂದ ಅರ್ದಾ ಕೀ.ಮಿ ದಾಟಿ ರಸ್ತೆಯ ಎಡಗಡೆಯಿಂದ ಹೋಗುತ್ತಿದ್ದಾಗ ಮಳೆ ಬಂದು ಅಲ್ಲಿ ಕೆಸರು ಜಾಸ್ತಿಯಾಗಿದ್ದರಿಂದ ನಮ್ಮ ಮೋಟರ ಸೈಕಲ್ ಒಮ್ಮೇಲೆ ಕಟ್ಟ ಮಾಡಲುಹೋಗಿ ಕೆಳಗೆ ಬಿದ್ದೆವು, ನನ್ನ ಹೆಂಡತಿಗೆ ಒಳಪೆಟ್ಟಾಗಿ ಬಿಕ್ಕುತ್ತಿದ್ದಳು ನನಗೆ ಸ್ವಲ್ಪ ತರಚಿದಗಾಯಗಳು ಆಗಿರುತ್ತವೆ ನನ್ನ ಮಗಳಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ, ನಂತರ ನಾನು 108 ಅಂಬೂಲೆನ್ಸಗೆ ಫೋನ ಮಾಡಿ ವಿಷಯತಿಳಿಸಿ ಅಂಬೂಲೆನ್ಸ್ ಬಂದ ನಂತರ ನನ್ನ ಹೆಂಡತಿಯನ್ನು ಉಪಚಾರ ಕುರಿತು ಅಫಜಲಪೂರ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೋದೆನು. ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾಗ ಅಂದಾಜ ಸಮಯ 8;00 ಗಂಟೆಗೆ ನನ್ನ ಹೆಂಡತಿ ರೇಣುಕಾ ಇವಳು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ನಮ್ಮ ಹಿರಿಯರು ತಮ್ಮ ಸುತ್ತಲಿನ ಸಸ್ಯ ಸಂಪತ್ತಿನ ಮಹತ್ವ ಅರಿತಿದ್ದರು. ಅವುಗಳನ್ನು ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದರು. ಪ್ರಸ್ತುತ ನಮ್ಮ ಹಿರಿಯರ ಸಸ್ಯ ಜ್ಞಾನದ ಬಗ್ಗೆ ಆಸಕ್ತಿ ವಹಿಸಿ ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಲಹೆ ನೀಡಿದರು. ಪೂರ್ಣಪ್ರಜ್ಞ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕ, ಕನ್ನಡ ವಿಭಾಗ ಮತ್ತು ರಕ್ಷಕ-ಶಿಕ್ಷಕ ಸಂಘ ಆಯೋಜಿಸಿದ್ದ `ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಲ್ಲಿ ಮನೆಮದ್ದುಗಳ ಪಾತ್ರ’ ಕುರಿತ ಯೂಟ್ಯೂಬ್ ಉಪನ್ಯಾಸದ ನೇರಪ್ರಸಾರ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲವ್ಯಕ್ತಿ ಮುನಿಯಾಲು ಗಣೇಶ ಶೆಣೈ, ನಮ್ಮ ಮನೆ ಎದುರು ತುಳಸಿ ಇದ್ದರೆ ಸರ್ವರೋಗದಿಂದಲೂ ಪಾರಾಗಬಹುದು ಎಂದು ಹಿಂದಿನವರು ಹೇಳಿದ್ದಾರೆ. ತುಳಸಿಯ ಬೇರಿನಲ್ಲಿ ಸರ್ವದೇವತೆಗಳು, ಕಾಂಡದಲ್ಲಿ ಪವಿತ್ರ ಕ್ಷೇತ್ರಗಳು, ತುದಿಯಲ್ಲಿ ವೇದಗಳು ಅಡಗಿವೆ ಎಂಬುದು ಹಿರಿಯರ ನಂಬಿಕೆ. ನಾವು ಮನೆಯಲ್ಲಿ ಬಳಸುವ ಬೆಳ್ಳುಳ್ಳಿ ಉತ್ತಮ ರೋಗನಿರೋಧಕ ಶಕ್ತಿ ಹೊಂದಿದೆ ಎಂದರು. ಈಜಿಪ್ಟ್ ನಲ್ಲಿ ಪಿರಮಿಡ್ ಕೆಲಸಗಾರರು ಬೆಳ್ಳುಳ್ಳಿ ಸೇವಿಸಿ ಶಕ್ತಿ ಸಂಪಾದಿಸುತ್ತಿದ್ದರು. ಒಂದೊಮ್ಮೆ ಬೆಳ್ಳುಳ್ಳಿ ಸಿಗದಿದ್ದಾಗ ಕಾರ್ಮಿಕರು ಮುಷ್ಕರ ಹೂಡಿದ್ದರು. ನಾವು ಬಳಸುವ ಕಾಳುಮೆಣಸು ವಿದೇಶದಲ್ಲಿ ಹಿಂದಿನಿಂದಲೂ ಬಹಳ ಬೇಡಿಕಎ ಪಡೆದಿತ್ತು. ಕಾಳುಮೆಣಸಿಗೋಸ್ಕರ ಅದರ ಮೂಲ ಹುಡುಕುತ್ತಾ ಭಾರತದತ್ತ ಬಂದಾಗ ಅಮೇರಿಕ ದೇಶವನ್ನು ಕಂಡುಹಿಡಿಯಲಾಯಿತು ಎಂಬ ಉಲ್ಲೇಖವಿದೆ. ಹಾಗಾಗಿ ನಮ್ಮಲ್ಲಿ ಲಭ್ಯವಿರುವ ಔಷಧೀಯ ಗುಣಗಳುಳ್ಳ ಸಸ್ಯಸಂಪತ್ತುಗಳತ್ತ ನಾವು ಅರಿವು ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಎ. ರಾಘವೇಂದ್ರ, ಉಪಪ್ರಾಂಶುಪಾಲ ಡಾ. ಪ್ರಕಾಶ ರಾವ್, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ರಮೇಶ ಟಿ. ಎಸ್., ಭೌತಶಾಸ್ತ್ರ ವಿಭಾಗ ಉಪನ್ಯಾಸಕ ಅತುಲ್ ಭಟ್ ಇದ್ದರು.
ಬೆಂಗಳೂರು: ಚಾಮರಾಜನಗರ (Chamrajnagar) ಜಿಲ್ಲೆಯ ಗುಂಡ್ಲುಪೇಟೆ ಆರ್​ಟಿಒ (RTO) ಚೆಕ್​ಪೋಸ್ಟ್​ (Check Post) ಮೇಲೆ ಇಂದು ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚೆಕ್​ಪೋಸ್ಟ್​ನಲ್ಲಿ ಅವ್ಯಾಹತವಾಗಿ ಲಂಚ ಪಡೆಯುತ್ತಿದ್ದ ಆರೋಪ ಹಿನ್ನೆಲೆ ಮೈಸೂರು ಮತ್ತು ಚಾಮರಾಜನಗರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಸ್​ಪಿ, ಇಬ್ಬರು ಡಿವೈಎಸ್​ಪಿ, ಮೂವರು ಇನ್ಸ್​ಪೆಕ್ಟರ್​ ನೇತೃತ್ವದ ತಂಡ ದಾಳಿ ಮಾಡಿದ್ದು, ದಾಳಿ ವೇಳೆ 94,950 ರೂಪಾಯಿ ಪತ್ತೆಯಾಗಿದೆ. ಇದರಲ್ಲಿ 7,999 ರೂಪಾಯಿಗೆ ಯಾವುದೇ ರಶೀದಿ ಹಾಕದೆ ಸಂಗ್ರಹಿಸಿದ್ದರು. ನಂಗಲಿ ಚೆಕ್​​ಪೋಸ್ಟ್​​ ಮೇಲೆ ಲೋಕಾಯುಕ್ತ ದಾಳಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ‌ ಚೆಕ್​ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ದಾಳಿ ವೇಳೆ 75 ಸಾವಿರ ನಗದು, ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದೆ. ಲೋಕಾಯುಕ್ತ ಎಸ್​​ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಚೆಕ್​​ಪೋಸ್ಟ್​​ನಲ್ಲಿ ಸತತ 7 ಗಂಟೆ ತಪಾಸಣೆ ಮಾಡಿದ್ದಾರೆ. ಹಾಗೇ ಕಲಬುರಗಿ ಜಿಲ್ಲೆ ವ್ಯಾಪ್ತಿಯ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಸಾರಿಗೆ ಇಲಾಖೆಯ ಚೆಕ್​​ಪೋಸ್ಟ್​ಗಳಲ್ಲಿ ಲಕ್ಷ ಲಕ್ಷ ಹಣ ಜಪ್ತಿ ರಾಜ್ಯದ ವಿವಿಧ ಚೆಕ್​​ಪೋಸ್ಟ್​​ಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಲಕ್ಷ ಲಕ್ಷ ಹಣ ಜಪ್ತಿ ಮಾಡಿದೆ. ದಾಳಿಯಲ್ಲಿ ಲೋಕಾಯುಕ್ತ ಮಹತ್ವದ ದಾಖಲೆ, ಹಣ ಜಪ್ತಿ ಮಾಡಿಕೊಂಡಿದೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ವಿಜಯಪುರ ಧೂಳ್ಖೇಡ್ ಚೆಕ್​​ಪೋಸ್ಟ್​ನಲ್ಲಿ 4 ಲಕ್ಷ 53 ಸಾವಿರ ಹಣ ಜಪ್ತಿ ವಿಜಯಪುರ ಧೂಳ್ಖೇಡ್ ಚೆಕ್​​ಪೋಸ್ಟ್​ನಲ್ಲಿ ಲಕ್ಷ ಲಕ್ಷ ಹಣ ಜಪ್ತಿ ಮಾಡಲಾಗಿದೆ. ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣನವರ್ ನೇತೃತ್ವದ ದಾಳಿ ನಡೆದಿದ್ದು, ದಾಳಿ ವೇಳೆ 4 ಲಕ್ಷ 53 ಸಾವಿರ ಅಕ್ರಮ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಬೆಳಗಾವಿಯ ಕೊಂಗನಹಳ್ಳಿ ಚೆಕ್ಪೋಸ್ಟ್​​​ನಲ್ಲಿ 3 ಲಕ್ಷ 62 ಸಾವಿರ ಹಣ ಜಪ್ತಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಂಗನಹಳ್ಳಿ ಚೆಕ್ಪೋಸ್ಟ್​​ ಮೇಲೆ ಲೋಕಾಯುಕ್ತ ಎಎಸ್ಪಿ ಜೆ. ರಘು ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ವೇಳೆ 3 ಲಕ್ಷ 62 ಸಾವಿರ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಅತ್ತಿಬೆಲೆ ಚೆಕ್ಪೋಸ್ಟ್​​ನಲ್ಲಿ 62,227 ಹಣ ಜಪ್ತಿ ಬೆಂಗಳೂರು ಗ್ರಾಮಾಂತರ ಅತ್ತಿಬೆಲೆ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಜೋಶಿ ಶೀನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ 62,227 ಹಣ ಜಪ್ತಿ ಮಾಡಿ, ಮುಂದಿನ ಕ್ರಮಕ್ಕೆ ಆದೇಶಿಸಲಾಗಿದೆ. ವಾಹನ ನಿರೀಕ್ಷಕಿ ಲಕ್ಷ್ಮಿ ಕಿಟಕಿಯಿಂದ 14 ಸಾವಿರ ಹಣ ಎಸೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಬೀದರ್ ಬೋಲ್ಕೆರೆ ಚೆಕ್​ಪೋಸ್ಟ್​ನಲ್ಲಿ 1,54,536 ಹಣ ಜಪ್ತಿ ಬೀದರ್ ಜಿಲ್ಲೆ ಹುಮ್ನಾಬಾದ್​ ತಾಲೂಕಿನ ಬೋಲ್ಕೆರೆ ಚೆಕ್​ಪೋಸ್ಟ್​ ಮೇಲೆ ಲೋಕಾಯುಕ್ತ ಎಸ್​​ಪಿ ಎ.ಆರ್.ಕರ್ನೋಲ್ ನೇತೃತ್ವದಲ್ಲಿ ದಾಳಿ ಮಾಡಿದ್ದು, 1,54,536 ಅಕ್ರಮ ಹಣ ಜಪ್ತಿ ಮಾಡಲಾಗಿದೆ. ಬಳ್ಳಾರಿ ಗೋದಾಳ್​ ಚೆಕ್​ಪೋಸ್ಟ್​ನಲ್ಲಿ 54,900 ರೂ. ಹಣ ಪತ್ತೆ ಬಳ್ಳಾರಿ ತಾಲೂಕಿನ ಹಗರಿ ಬಳಿಯಿರುವ ಗೋದಾಳ್​ ಚೆಕ್​ಪೋಸ್ಟ್ ಮೇಲೆ ಲೋಕಾಯುಕ್ತ ಎಸ್​​ಪಿ ಪಿ.ಎ.ಪುರುಷೋತ್ತಮ್​ ನೇತೃತ್ವದಲ್ಲಿ ದಾಳಿ ಮಾಡಿದ್ದು, ​ ಚೆಕ್​ಪೋಸ್ಟ್​ನಲ್ಲಿ 54,900 ರೂ. ಅಕ್ರಮ ಹಣ ಪತ್ತೆಯಾಗಿದೆ. ಪರ್ಮಿಟ್ ಹಾಗೂ ಟ್ಯಾಕ್ಸ್ ಇಲ್ಲದೇ ಓಡಾಡುತ್ತಿರುವ ಬಸ್​ಗಳ ಮೇಲೂ ದಾಳಿ ತುಮಕೂರು: ದಸರಾ ಹಬ್ಬ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮೇಲೆ ಆರ್​ಟಿಓ ಅಧಿಕಾರಿಗಳ ದಾಳಿ ಮಾಡಿದ್ದು, ಬೆಂಗಳೂರು ಹಾಗೂ ಹೊಸದುರ್ಗಕ್ಕೆ ಓಡಾಡುತ್ತಿದ್ದ Ka41 c8898 ಹಾಗೂ ka41 c 8903 ನಂಬರ್​ನ ಎರಡು‌ ಖಾಸಗಿ ಬಸ್ ವಶಕ್ಕೆ ಪಡೆದಿದ್ದಾರೆ. ತುಮಕೂರು ಆರ್​ಟಿಓ ಇನ್ಸಪೇಕ್ಟರ್ ಷರೀಪ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಸರಾ ಹಬ್ಬಕ್ಕೆ ಹೆಚ್ಚಿನ ಶುಲ್ಕ ಪಡೆಯುತ್ತಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಪರ್ಮಿಟ್ ಹಾಗೂ ಟ್ಯಾಕ್ಸ್ ಇಲ್ಲದೇ ಓಡಾಡುತ್ತಿರುವ ಬಸ್​ಗಳ ಮೇಲೂ ದಾಳಿ ಮಾಡಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಓಡಿಸಲು ಪರ್ಮಿಟ್ ಇರುವ ಬಸ್​ಗಳು, ಆದರೆ ಬೆಂಗಳೂರಿನಿಂದ ಹೊಸದುರ್ಗ ನಡುವೆ ಬಸ್​ಗಳು ಓಡಾಟ ಮಾಡುತ್ತಿದ್ದವು. ಬೆಂಗಳೂರಿನಲ್ಲಿ ಫ್ಯಾಕ್ಟರಿಗಳಿಗೆ ಓಡಾಡಲು ಬಳಸುವ ಬಸ್​ನಲ್ಲಿ ಪ್ರಯಾಣಿಕರಿದ್ದ ಕಾರಣ ದಾಳಿ ಮಾಡಲಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ನಂಗಲಿ ಆರ್.ಟಿ.ಓ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದ ತಂಡ ದಾಳಿ ಮಾಡಿದೆ. ಗಡಿ ಭಾಗದಲ್ಲಿ ವಾಹನಗಳಿಂದ ಹಣ ವಸೂಲಿ ಆರೋಪ ಹಿನ್ನೆಲೆ ದಾಳಿ ಮಾಡಿದ್ದು, ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
33 ಸರ್ಕಾರಿ ವಾಹನಗಳು, 109 ಖಾಸಗಿ ವಾಹನಗಳು ಸಂಪೂರ್ಣವಾಗಿ ಆಹುತಿಯಾಗಿವೆ ಇಲ್ಲವೇ ಗಂಭೀರವಾಗಿ ಜಖಂಗೊಂಡಿವೆ. ಪೊಲೀಸ್‌ ಠಾಣೆ ಹಾಗೂ ಶಾಸಕರ ಮನೆಗಳಲ್ಲದೆ 8 ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿದೆ. Bar & Bench Published on : 20 Aug, 2020, 1:43 pm ಇದೇ ಆಗಸ್ಟ್‌ 11ರಂದು ನಡೆದ ಬೆಂಗಳೂರು ಗಲಭೆ ವೇಳೆ ಉಂಟಾದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಹಾನಿ ಪ್ರಮಾಣವನ್ನು ತನಿಖೆ ನಡೆಸಿ ಅಂದಾಜು ಮಾಡಲು ‘ಪರಿಹಾರ ಆಯುಕ್ತ’ರನ್ನು ನೇಮಿಸುವಂತೆ ಕೋರಿ ರಾಜ್ಯ ಸರ್ಕಾರವು ಹೈಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ. ಅಲ್ಲದೆ, ಗುಂಪು ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿತು ಹಾಗೂ ಡಿ ಜೆ ಹಳ್ಳಿ ಮತ್ತು ಕೆ ಜೆ ಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಮೇಲೆ ಹಲ್ಲೆಯನ್ನು ಮಾಡಿತು. ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿಗಳ ಮೇಲೆ ಕಲ್ಲು ತೂರುವ ಮೂಲಕ ಹಾಗೂ ಮಾರಣಾಂತಿಕ ಆಯುಧಗಳಿಂದ ದಾಳಿ ನಡೆಸಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮುಂದುವರೆದು,: 33 ಸರ್ಕಾರಿ ವಾಹನಗಳು, 109 ಖಾಸಗಿ ವಾಹನಗಳು ಸಂಪೂರ್ಣವಾಗಿ ಆಹುತಿಯಾಗಿವೆ ಇಲ್ಲವೇ ಗಂಭೀರವಾಗಿ ಜಖಂಗೊಂಡಿವೆ. ಡಿ ಜೆ ಹಳ್ಳಿ ಹಾಗೂ ಕೆ ಜೆ ಹಳ್ಳಿ ಪೊಲೀಸ್‌ ಠಾಣೆಗಳಿಗೆ ಹಾಗೂ ಶಾಸಕರ ಮನೆಗೆ ಗಂಭೀರ ಹಾನಿಯಾಗಿದೆ. ಅಲ್ಲದೆ, 8 ಕಟ್ಟಡಗಳಿಗೂ ಸಹ ಈ ವಿಧ್ವಂಸಕ ಕೃತ್ಯದಿಂದಾಗಿ, ಬೆಂಕಿ ಹಚ್ಚಿದ್ದರಿಂದಾಗಿ ಹಾನಿಯಾಗಿದೆ. ಪೊಲೀಸರು ಬಳಸುವ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಾಶಮಾಡಲಾಗಿದೆ ಸರ್ಕಾರ ಸಲ್ಲಿಸಿರುವ ಪಿಐಎಲ್ ನಲ್ಲಿನ ಹೇಳಿಕೆ ಈವರೆಗೆ ಗಲಭೆಯ ಸಂಬಂಧ 64 ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿದ್ದು, ತನಿಖೆಯು ನಡೆದಿದೆ. 270 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಾಶದ ಕುರಿತ ಪ್ರಕರಣದಲ್ಲಿ ಗಲಭೆ, ದೊಂಬಿಯಿಂದ ಉಂಟಾಗುವ ಆಸ್ತಿಪಾಸ್ತಿ ಹಾನಿಯ ಕುರಿತ ತನಿಖೆ ಹಾಗೂ ಪರಿಹಾರದ ಕುರಿತು ಸುಪ್ರೀಂ ಕೋರ್ಟ್‌ ವಿವರವಾದ ಮಾರ್ಗದರ್ಶಿ ನಿಯಮಾವಳಿ ನೀಡಿದೆ. ಇದೇ ತೀರ್ಪಿನಲ್ಲಿ, ಹೈಕೋರ್ಟ್‌ ಈ ಸಂಬಂಧ ಹಾಲಿ ಅಥವಾ ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರು/ಜಿಲ್ಲಾ ನ್ಯಾಯಾಧೀಶರನ್ನು ಪರಿಹಾರ ಆಯುಕ್ತರನ್ನಾಗಿ (ಕ್ಲೇಮ್ಸ್ ಕಮಿಷನರ್‌) ನೇಮಿಸಬಹುದು ಎಂದಿದೆ. ಆ ಮೂಲಕ ಆಸ್ತಿಪಾಸ್ತಿ ನಷ್ಟದ ಕುರಿತು ಅಂದಾಜು ಮಾಡುವುದು, ತನಿಖೆ ನಡೆಸುವುದು ಸಾಧ್ಯವಾಗಿಸಿದೆ. ಹಾಗಾಗಿ, ನ್ಯಾಯಾಲಯವು ಸ್ವಯಂ ಪ್ರೇರಣೆಯಿಂದ ‘ಪರಿಹಾರ ಆಯುಕ್ತ’ರನ್ನು ನೇಮಿಸುವಂತೆ ರಾಜ್ಯ ಸರ್ಕಾರವು ತನ್ನ ಅರ್ಜಿಯಲ್ಲಿ ಹೈಕೋರ್ಟ್‌ ಅನ್ನು ಒತ್ತಾಯಿಸಿದೆ. ಆ ಮೂಲಕ ಸುಪ್ರೀಂ ಕೋರ್ಟ್‌ ಮಾರ್ಗದರ್ಶಿ ಸೂಚನೆಗಳ ಅನ್ವಯ ಆಸ್ತಿಪಾಸ್ತಿ ಹಾನಿಯ ಕುರಿತು ತನಿಖೆ ನಡೆಸಿ, ಅಂದಾಜು ಹಾನಿಯನ್ನು ದಾಖಲಿಸಿ, ಪರಿಹಾರ ನಿರ್ಧರಿಸಬೇಕು ಎಂದು ಕೋರಿದೆ.
by athreebook | Sep 16, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್‌, ಸುಬ್ಬಯ್ಯ ಎ.ಪಿ | 0 comments ಅಧ್ಯಾಯ ಇಪ್ಪತ್ತೊಂದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ಮೂರನೇ ಕಂತು ಸ್ಟೀಯರ್ಫೋರ್ತನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗಲೇ ಇದ್ದ ಅವನ ಕೆಲಸದವನೊಬ್ಬನು ಈಗಲೂ ಅವನ ಮನೆಯಲ್ಲಿ ಸೇವಕನಾಗಿದ್ದನು. ಅವನು ಕೆಲಸದವನು – ಸೇವಕನು – ಎಂದಂದುಬಿಡಬಹುದಾದವನಂತೆ ಎಂದೂ ಇರುತ್ತಿರಲಿಲ್ಲ. ಗೌರವಕ್ಕೆ ಅರ್ಹತೆಯುಳ್ಳವರು ಯಾರಾದರೂ ಇರುವುದಾದರೆ ಹಾಗೆ ಇರುವವನೇ ಅವನು, ಎಂಬಷ್ಟರ ಮಟ್ಟಿಗೆ ಅವನು ಗೌರವಯೋಗ್ಯ ಮೂರ್ತಿಯಾಗಿದ್ದನು. ಒಂದು ವೇಳೆ, ಈ ಮಾತುಗಳು ಉತ್ಪ್ರೇಕ್ಷೆಯವು ಎಂದು ಯಾರಾದರೂ ಆಕ್ಷೇಪಿಸುವುದಿದ್ದರೆ, ಅವನ್ನೇ ಸ್ವಲ್ಪ ಬದಲು ಮಾಡಿ, ಅವನ ವೃತ್ತಿಯಲ್ಲಿ ಇರುವವರಲ್ಲೆಲ್ಲ, ಅತ್ಯಂತ ಗೌರವಾನ್ವಿತನಾಗಿರಲು ಬೇಕಾದ ದೇಹ, ಮುಖವರ್ಚಸ್ಸು, ನಡೆನುಡಿ, ಅವನ ವೃತ್ತಿಯ ತಜ್ಞತೆ, ಲೋಕಾನುಭವ, ಮೊದಲಾದ್ದೆಲ್ಲ ಅವನಿಗೆ ಇತ್ತು ಎಂದಾದರೂ ಹೇಳಲೇಬೇಕಾದಂತೆ ಅವನಿದ್ದನು. ಅವನ ಮುಖ ಗಾಂಭೀರ್ಯವಾಗಿತ್ತು ಅವನ ಸ್ವರವೂ ಗಂಭೀರತರದ್ದಾಗಿತ್ತು. ತನಗಿಂತ ಮೇಲ್ತರಗತಿಯವರನ್ನು ಕಂಡುಕೊಂಡು ಅವರೊಡನೆ ವಿನಯದಿಂದ ವರ್ತಿಸಿ ತನಗಿಂತ ಕೀಳ್ತರಗತಿಯವರಲ್ಲೆಲ್ಲ ಬಹು ಘನಸ್ತಿಕೆಯಿಂದ ಮೆರೆದು, ಒಂದೆಡೆ ಆಳಾಗಿ – ಇನ್ನೊಂದೆಡೆ ಯಜಮಾನನಾಗಿ – ಇರುವ ಅನುಭವಸಂಪನ್ನನೇ ಈ ಆಳು. ತನ್ನ ಸಂಪರ್ಕಕ್ಕೆ ಬಂದ ಜನ, ಸನ್ನಿವೇಶ, ಸಂದರ್ಭಗಳನ್ನು ಸೂಕ್ಷ್ಮವಾಗಿ, ವಿಚಾರಿಸಿ ನೋಡಿ, ಮನಸ್ಸಿನಲ್ಲಿ ಕಾದಿಟ್ಟು, ಯಜಮಾನನಿಗೆ ಬೇಕಾದಾಗ, ಬೇಕಾದಷ್ಟು ಮಾತ್ರ ಒದಗಿಸಬಲ್ಲ ಕಾರ್ಯಚತುರನಿವನು. ಅವನ ಪ್ರಾಯ ತಿಳಿದವರಿಲ್ಲ – ವಿಚಾರಿಸಲು ಯಾರಿಗೂ ಧೈರ್ಯವಿದ್ದಿರಲಾರದು. ಅವನ ಹೆಸರನ್ನೂ ಪೂರ್ತಿಯಾಗಿ ಅರಿತವರಿಲ್ಲ. ಅದಕ್ಕೆ ಮುಂದಾಗುವ ಎದೆಗಾರಿಕೆಯವರೂ ಇದ್ದಿರಲಾರರು. ನನ್ನ ಅಂದಾಜಿನಲ್ಲಿ ಅವನ ಪ್ರಾಯ ನಲವತ್ತೂ ಆಗಿರಬಹುದು –ಅರವತ್ತೂ ಆಗಿರಬಹುದು. ಎಲ್ಲರೂ ತಿಳಿದಿರುವ ಪ್ರಕಾರದ ಅವನ ಹೆಸರು ಲಿಟ್ಮರ್ ಎಂದಾಗಿತ್ತು. ನಮ್ಮನ್ನು ನೋಡುವಾಗಲೆಲ್ಲ ಅವನು, ಸ್ವಲ್ಪ ಬಗ್ಗಿಯೇ ನಿಲ್ಲುತ್ತಿದ್ದನು. ನಮ್ಮನ್ನೆಂದೂ ಅವನು ದೃಷ್ಟಿಸಿ ನೋಡುತ್ತಿರಲಿಲ್ಲ. ನಮ್ಮೊಡನೆ ಮಾತಾಡುವಾಗಲೆಲ್ಲ `ಸರ್’, `ಸ್ವಾಮೀ’, `ತಾವು’ ಎಂದು ವಿನಯದಿಂದ, ಮೃದುವಾಗಿ, ವಿಶೇಷವೆಂದು ತೋರ್ಪಡದಂತೆ ಪ್ರಯೋಗಿಸಿ ನಾವು ಬಯಸಿದಾಗ ಮಾತ್ರ ಎದುರಿಸುತ್ತಾ, ಯಾರೂ ಇರಬಾರದೆಂದು ನಾವು ಗ್ರಹಿಸುವ ಮೊದಲೇ ಕಾಣದೇ ಆಗುತ್ತಾ ಎಂದೂ ಕಾಲು ಸಪ್ಪಳವನ್ನಾಗಲೀ ಇತರ ಶಬ್ದಗಳನ್ನಾಗಲೀ ಮಾಡದೇ ಎಂದೂ ಯಾವ ತಪ್ಪನ್ನು ಮಾಡದ ಆಳು ಅಂದರೆ ಈ ಲಿಟ್ಮರನಾಗಿದ್ದನು. ನನ್ನಂಥ ಚಿಕ್ಕವರಿಗೆ ಅಷ್ಟೊಂದು ಲೋಕಾನುಭವವಿದ್ದವನ ಎದುರು ಕುಳಿತಿರುವುದೆಂದರೇ ಹೆದರಿಕೆಯ ಪ್ರಸಂಗವೆಂದು ತೋರುತ್ತಿತ್ತು. ಇಂಥ ಶಕ್ತಿವಂತ, ಗಾಂಭೀರ್ಯಯುತ, ಸೇವಕನನ್ನು ಆಳಾಗಿ ನಡೆಸಿ ಬರುತ್ತಿದ್ದ ಸ್ಟೀಯರ್ಫೋತನ ಶಕ್ತಿ ಇನ್ನೆಷ್ಟಿರಬೇಕೆಂದು ನಾನು ಆಶ್ಚರ್ಯಪಡುತ್ತಿದ್ದೆ. ನಾನು ಸ್ಟೀಯರ್ಫೋರ್ತನ ಮನೆಯಲ್ಲಿ ಇದ್ದ ಒಂದೆರಡು ದಿನಗಳಲ್ಲಿ ಈ ಲಿಟ್ಮರನ ಪರಿಚಯ ನನಗೆ ಸಾಕಷ್ಟು ಆಗಿತ್ತು. ಆ ಮನೆಯಲ್ಲಿ ನಾನು ಬಹು ಸುಖವಾಗಿಯೂ ಸಂತೋಷವಾಗಿಯೂ ಆ ಒಂದೆರಡು ದಿನಗಳನ್ನು ಕಳೆದೆನು. ಆದರೂ ಲಿಟ್ಮರನು ನನ್ನೆದುರು ಇದ್ದಾಗ ನನಗೆ ಆಗುತ್ತಿದ್ದ ಕಷ್ಟವೊಂದಿಲ್ಲದಿರುತ್ತಿದ್ದರೆ, ನನ್ನ ಸಂತೋಷವು ಇನ್ನಷ್ಟು ಹೆಚ್ಚೇ ಆಗಿರುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ. ನಾನೂ ಸ್ಟೀಯರ್ಫೋರ್ತನೂ ಜತೆಯಾಗಿಯೇ ಯಾರ್ಮತ್ತಿಗೆ ಹೋಗುವುದೆಂದೂ ಯಾರ್ಮತ್ತಿಗೆ ತಲುಪಿದನಂತರ ನಾವು ನಮಗೆ ಕುಷಿ ಕಂಡಂತೆ ಬೇರೆ ಬೇರೆಯಾಗಿ ಹೋಗಿ, ಕೊನೆಗೆ ಮಿ. ಪೆಗಟಿಯ ಮನೆಗೆ ಜತೆಯಾಗಿಯೇ ಹೋಗುವುದೆಂದು ನಿಶ್ಚಯಿಸಿಕೊಂಡೆವು. ಇಷ್ಟೆಲ್ಲಾ ನಿಶ್ಚೈಸಿಕೊಂಡು ನಾವು ಟಪಾಲು ಬಂಡಿಯನ್ನೇರಿ ಯಾರ್ಮತ್ತಿಗೆ ಪ್ರಯಾಣ ಬೆಳೆಸಿದೆವು. ಯಾರ್ಮತ್ತಿಗೆ ತಲುಪಿದನಂತರ ನಾನು ಓಮರರ ಮನೆಗೆ ಹೋದೆನು. ಮಿ. ಓಮರರು, ಅವರ ಖಾಸಶ್ವಾಸದ ಖಾಯಿಲವನ್ನು ತನ್ನ ಜೀವನದ ಒಂದು ಅಂಶವೆಂದೇ ಅಂಗೀಕರಿಸಿಕೊಂಡು, ಮೊದಲಿನಂತೆಯೇ ತನ್ನ ಜೀವನದಲ್ಲಿನ ಸಂತೃಪ್ತಿ ಸಂತೋಷಗಳಿಂದ ಆನಂದದಲ್ಲೇ ಇದ್ದರು. ಅವರ ಅಂಗಡಿಯ ಬೋರ್ಡು ಈಗ `ಓಮರ್ ಮತ್ತು ಜೋರಾಂ’ ಎಂಬ ಹೆಸರಿನಿಂದಿತ್ತು. ಓಮರರು ನನ್ನನ್ನು ಕಂಡಕೂಡಲೇ ಗುರುತಿಸಲಾರದೆ, “ಓಮರರಿದ್ದಾರೆಯೇ?” ಎಂದು ನಾನು ವಿಚಾರಿಸಿದ್ದಕ್ಕೆ – “ಇದ್ದೇನೆ ಸರ್, ನನ್ನಿಂದೇನಾಗಬೇಕು, ದಯಮಾಡಿ ತಿಳಿಸಿ” ಅಂದರು. ನಾನು ಹಸ್ತಲಾಘವವನ್ನಿತ್ತಾಗ ಸ್ವಲ್ಪ ಅನುಮಾನದಿಂದಲೇ ತಮ್ಮ ಕೈ ನೀಡಿದರು. ಆಗ ನಾನು – “ಜ್ಞಾಪಿಸಿಕೊಳ್ಳಿರಿ, ಮಿ. ಓಮರ್, ಆ ದಿನ ನಾನು, ಒಂದು ಶವ ದಫನ್ ಸಂಬಂಧ ಬಂದಿದ್ದೆ. ನಿಮ್ಮ ಮಗಳು, ಮಿ. ಜೋರಾಂ, ನೀವೂ ನಾನೂ ಬ್ಲಂಡರ್ಸ್ಟನ್ನಿಗೆ ಹೋದೆವು” ಎಂದನ್ನುವಾಗಲೇ “ ಆ ದಿನದ ಮುಖ್ಯ ಪಾತ್ರಿ – ಒಬ್ಬ ಸ್ತ್ರೀ ಅಲ್ಲವೇ?” ಅಂದರು. “ನನ್ನ ತಾಯಿ” ಎಂದು ನಾನಂದೆ. “ಜತೆಯಲ್ಲೊಂದು ಚಿಕ್ಕ ಮಗುವೂ ಇತ್ತು” ಎಂದನ್ನುತ್ತಾ ನನ್ನನ್ನು ನೋಡಿ ಬಹು ಆಶ್ಚರ್ಯಪಟ್ಟುಕೊಂಡು, “ಓ ದೇವರೇ ನೀವೆಷ್ಟು ದೊಡ್ಡವರಾಗಿರುತ್ತೀರಪ್ಪಾ” ಎಂದಂದು ನನ್ನನ್ನು ಒಳಗೆ ಕರೆದು ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ಅನಂತರ ನಾವು ಅನೇಕ ವಿಷಯಗಳನ್ನು ಮಾತಾಡಿದೆವು. ಮೊದಲು ಅವರ ಕೆಲಸಗಾರನಾಗಿದ್ದ ಜೋರಾಂನು ಓಮರರ ಮಗಳು ಮಿನ್ನಿಯನ್ನು ಮದುವೆಯಾಗಿ, ಓಮರರ ಪಾಲುಗಾರನಾಗಿ ಆ ಅಂಗಡಿಯನ್ನು ಇಬ್ಬರು ನಡೆಸುತ್ತಿದ್ದರು. ಎಮಿಲಿಯೂ ಅಲ್ಲಿದ್ದಳು. ಅವಳು ನನ್ನನ್ನು ಕಂಡು ಮುಗುಳ್ನಗೆ ನಕ್ಕು ಅಡಗಿಕೊಂಡಳು. ಆಗಲೇ ಎಮಿಲಿಯ ಪ್ರಸ್ತಾಪವೂ ಬಂತು. ಎಮಿಲಿಯು ತನ್ನ ಕುಟುಂಬದ ವೃತ್ತಿಯನ್ನು ಬಿಟ್ಟು ಹೊಲಿಗೆ ಕೆಲಸವನ್ನು ಕಲಿಯುತ್ತಿದ್ದಳಂತೆ. ಈ ವಿಷಯವನ್ನು ತಿಳಿಸುವಾಗ ಮಿನ್ನಿಯೂ ಜತೆ ಕೂಡಿದಳು. ಎಮಿಲಿಗೆ ತನ್ನ ಕುಟುಂಬದ ವೃತ್ತಿಯ ಮೇಲಿನ ಪ್ರೀತಿಗಿಂತ ಹೆಚ್ಚಾದ ಪ್ರೀತಿ ಮೇಲ್ತರಗತಿ ಸಂಸಾರಗಳ – ಶ್ರೀಮಂತರ – ವೃತ್ತಿಗಳ ಮೇಲೆ ಇತ್ತೆಂದು ಮಿನ್ನಿ ತಿಳಿಸಿದಳು. ಹೊಲಿಗೆ ಕೆಲಸವು ಶ್ರೀಮಂತರ ಸಂಸರ್ಗಕ್ಕೆ ಹೆಚ್ಚು ಅನುಕೂಲವೆಂದೂ – ತಮ್ಮ ಕುಟುಂಬದ ವೃತ್ತಿಗಿಂತ ಮೇಲಾದದ್ದೆಂದೂ ಎಮಿಲಿ ಭಾವಿಸಿಯೇ ಆ ವೃತ್ತಿಯಲ್ಲಿ ತರಬೇತು ಹೊಂದುತ್ತಿದ್ದುದಂತೆ. ಎಮಿಲಿ ತಮ್ಮ ಆನುವಂಶಿಕವಾದ ವೃತ್ತಿಯನ್ನು ಬಿಟ್ಟು ಈ ರೀತಿ ಇರುವುದನ್ನು ಕುರಿತು ಮಿ. ಪೆಗಟೀ, ಹೇಮ್ ಮೊದಲಾದವರು ಬೇಸರಪಡುತ್ತಿದ್ದರೆಂದೂ ತಿಳಿದೆನು. ಅನಂತರ ನಾನು ಬಾರ್ಕಿಸನ ಮನೆಗೆ ಹೋದೆನು. ಬಾರ್ಕಿಸನು ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದನು. ಪೆಗಟಿ-ಬಾರ್ಕಿಸರ ಸಂಸಾರ ಸುಖಕರವಾಗಿಯೇ ನಡೆದಿತ್ತೆಂದೂ ಈಗಲೂ ನಡೆಯುತ್ತಿದೆಯೆಂದೂ ಪೆಗಟಿ ತಿಳಿಸಿದಳು. ಬಾರ್ಕಿಸನ ಕೊರೆತೆಯೆಂದ ಪಕ್ಷಕ್ಕೆ ಅವನ ಜಿಪುಣತ್ವ ಮಾತ್ರವಾಗಿತ್ತಂತೆ. ಅದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಸಂಗತಿಯನ್ನೇ ಪೆಗಟಿ – ತಮಾಶೆಗಾಗಿ – ತಿಳಿಸಿದಳು. ಬಾರ್ಕಿಸನು ಮಲಗಿದ್ದ ಹಾಸಿಗೆಯ ಅಡಿಯಲ್ಲಿ, ತಲೆ ಕಡೆಯಲ್ಲಿ ಒಂದು ಪೆಟ್ಟಿಗೆ ಇತ್ತು. ಅವನ ಒಂದು ಕೈಯ್ಯನ್ನು ಅವನು ಸದಾ ಅತ್ತ ಕಡೆ ಇಟ್ಟುಕೊಂಡಿರುತ್ತಿದ್ದನು. ಅಷ್ಟೂ ಅಲ್ಲದೆ ಅವನ ಕೋಣೆಗೆ ಯಾರಾದರೂ ಬಂದು ಹೋದ ಕೂಡಲೇ ಒಂದು ಚಿಕ್ಕ ಗೂಟದಿಂದ ಪೆಟ್ಟಿಗೆ ಕಡೆಗೆ ನೂಕಿ ನೂಕಿ ಅದು ಅಲ್ಲೇ ಉಂಟೋ ಎಂದೂ ಪರೀಕ್ಷಿಸಿಕೊಳ್ಳುತ್ತಿದ್ದನಂತೆ. ಮತ್ತೆ, ಈ ಗೂಟವನ್ನು ಲಾಡಿಯಿಂದ ಕಟ್ಟಿ, ತನ್ನ ಹಾಸಿಗೆಗೆ ಲಾಡಿಯ ಒಂದು ತುದಿಯನ್ನು ಹೊಲೆದಿದ್ದನಂತೆ. ಈ ವಿಧದ ಜಿಪುಣತ್ವವೇನಿದರೂ ಆ ದಂಪತಿಗಳ ಸಂಸಾರ ಸುಖವಾಗಿ ಸಾಗುತಿತ್ತು ಎಂದು ತಿಳಿದೆನು. ಪೆಗಟಿ ಅವಳ ಮನೆಯಲ್ಲಿ ಈಗಲೂ ನನ್ನ ಬಾಲ್ಯದ ಕೆಲವು ವಸ್ತುಗಳನ್ನೂ ನನ್ನ ಮೊಸಳೆ ಪುಸ್ತಕ, ಮತ್ತೆ ಕೆಲವು ಚಿತ್ರಗಳನ್ನೂ ಬಹು ಎಚ್ಚರಿಕೆಯಿಂದ ಕಾಪಾಡಿಟ್ಟುಕೊಂಡಿದ್ದುದನ್ನು ತೋರಿಸಿದಳು. ಪೆಗಟಿಯ ಮನೆಯಲ್ಲಿ ಹೀಗೆ ಸ್ವಲ್ಪ ಹೊತ್ತು ಇದ್ದು, ಅವಳು ಕೊಟ್ಟ ಹಣ್ಣು ಹಂಪಲುಗಳನ್ನು ತಿಂದು, ಮಿ. ಪೆಗಟಿಯ ಮನೆ ಕಡೆಗೆ ಹೊರಟೆನು. ದಾರಿಯಲ್ಲೇ – ನಾವು ಮೊದಲೇ ಏರ್ಪಡಿಸಿಕೊಂಡಿದ್ದಂತೆ – ಸ್ಟೀಯರ್ಫೋರ್ತನೂ ನನ್ನ ಜತೆ ಸೇರಿದನು. ನಾವು ಮಿ. ಪೆಗಟಿಯ ಮನೆಗೆ ಸಮೀಪಿಸುತ್ತಿದ್ದ ಹಾಗೆ ಆ ಮನೆಯೊಳಗಿನ ಮಾತುಗಳೂ ನಗಾಡುವ ಶಬ್ದವೂ ಕೇಳಿಸತೊಡಗಿತು. ನಾವು ಅಲ್ಲಿಗೆ ಹಠಾತ್ತಾಗಿ ಪ್ರವೇಶಿಸಿ ಅವರನ್ನು ಭೇಟಿ ಮಾಡಬೇಕೆಂದಿದ್ದುದರಿಂದ, ಮಾತಾಡದೆ, ಬಾಗಿಲು ತೆಗೆದು, ಒಳಗೆ ಪ್ರವೇಶಿಸಿದೆವು. ನಾವು ನುಗ್ಗುವಾಗ ಮೊದಲು ಕಂಡದ್ದು ಮಿಸೆಸ್ ಗಮ್ಮಿಜ್ಜಳ ಹರ್ಷೋದ್ಗಾರ – ಅವಳು ಕೈ ಚಪ್ಪಾಳೆ ತಟ್ಟಿ ನಗಾಡುತ್ತಿದ್ದಳು. ಮಿಸೆಸ್ ಗಮ್ಮಿಜ್ಜಳೇ ಈ ಪರಿಸ್ಥಿತಿಗೆ ಬಂದಿರುವಾಗ ಅಲ್ಲಿನ ಸಂತೋಷದ ಸಂದರ್ಭಗಳು ಹೇಗಿರಬಹುದೆಂದು ನನಗೆ ಆಶ್ಚರ್ಯವಾಯಿತು. ಮಿ. ಪೆಗಟಿ ಮುಖದಲ್ಲಿ ಸಂತೋಷ ಸಂತೃಪ್ತಿಗಳು ತುಂಬಿ ತುಳುಕುತ್ತಿದ್ದು, ತನ್ನ ಎರಡು ಕೈಗಳನ್ನು ಅಗಲಿಸಿ ಹಿಡಿದುಕೊಂಡು, ತನ್ನೆದುರು ನಿಂತಿದ್ದ ಎಮಿಲಿಯನ್ನು ಅಪ್ಪಿಕೊಳ್ಳಲು ಸಿದ್ಧನಾಗಿದ್ದನು. ಹೇಮನು ರೂಪ ಲಾವಣ್ಯಗಳನ್ನು ಮೆಚ್ಚಿ ಸಂತೋಷಿಸುತ್ತಾ ಅವನ ಸ್ವಾಭಾವಿಕವಾದ ಹೆಡ್ದುತನ ಮತ್ತು ನಾಚಿಕೆಗಳಿಂದ ಸ್ವಲ್ಪ ಮಾತ್ರ ನಗುತ್ತಾ ಆದರೂ ಅಲ್ಲಿ ನಡೆದಿದ್ದ ಪ್ರಸಂಗವನ್ನು ಸಂಪೂರ್ಣ ತಿಳಿದು ಆನಂದಿಸುತ್ತಾ ಎಮಿಲಿಯನ್ನು ಮಿ. ಪೆಗಟಿಗೆ ಅರ್ಪಿಸುವ ಸಿಧ್ಧತೆಯಲ್ಲಿದ್ದನು. ನವ ತರುಣಿ, ಸುಂದರಿ ಎಮಿಲಿ ಅಲ್ಲಿದ್ದ ಎಲ್ಲರ ಮುದ್ದು ಕೂಸಿನಂತೆ ಮಾತ್ರ ಬೆಳೆದು ಬಂದು, ಇಂದು ಈ ಪ್ರಸಂಗದಲ್ಲಿನ ಹೇಮನ ಸಂಪರ್ಕ, ಸಂಬಂಧಗಳ ಅರಿವನ್ನು ಗ್ರಹಿಸಿ, ಸಂತೋಷಿಸಿ, ಮುಖದಲ್ಲಿ ನಸುಗೆಂಪು ತಂದುಕೊಂಡು ಹೇಮನ ಕೈಯಿಂದ ಬಿಟ್ಟು ಮಿ. ಪೆಗಟಿಯ ಬಳಿ ಸೇರಲು ಒಂದು ಹೆಜ್ಜೆಯನ್ನೆತ್ತಿದ್ದಳು. ನಮ್ಮ ಪ್ರವೇಶ ಈ ಸನ್ನಿವೇಶದಲ್ಲೇ ಆಗಿದ್ದುದರಿಂದ ಎಮಿಲಿ ನಿಂತಲ್ಲೇ ನಿಂತುಬಿಟ್ಟಳು. ನಮ್ಮ ಹಠಾತ್ತಾದ ಪ್ರವೇಶ ಅಲ್ಲಿನ ಆನಂದಮಯ ಪರಿಸ್ಥಿತಿಯನ್ನು ಏಕಾಏಕಿಯಾಗಿ ಕರಗಿಸಿ ಮಾಯಗೊಳಿಸಿತು. ಅಲ್ಲಿ ಎಲ್ಲರ ಮುಖದಲ್ಲಿ ಆಗ ಇದ್ದದ್ದು ಒಂದು ವಿಧದ ಶೂನ್ಯತೆ. ಮತ್ತೆ ಕ್ರಮೇಣವಾಗಿ ಚೇತರಿಸಿ ಬಂದ ಆಶ್ಚರ್ಯ. ನಾವೂ ಸ್ವಲ್ಪ ಗಾಬರಿಗೊಂಡು ಸ್ತಬ್ದವಾಗಿ ಹೋದೆವು. ಕೊನೆಗೆ ನಾನು “ಮಿ. ಪೆಗಟಿ ನನ್ನ ಗುರುತು ಸಿಕ್ಕಲಿಲ್ಲವೇ” ಎಂದು ಕೇಳಿದೆ. ಅಷ್ಟರಲ್ಲಿ ಹೇಮನಿಗೆ ನನ್ನ ಗುರುತು ಸಿಕ್ಕಿತು – “ಮಾಸ್ಟರ್ ಡೇವಿ, ಮಾಸ್ಟರ್ ಡೇವಿ” ಎಂದು ಅವನು ಸಂತೋಷದಿಂದ ಕೂಗಿಕೊಂಡನು. ಸ್ಟೀಯರ್ಫೋರ್ತನ ಪರಿಚಯ ಮಿ. ಪೆಗಟಿ, ಹೇಮರಿಗೆ ಹೇಗೂ ಇದ್ದುದರಿಂದಲೂ ಸ್ಟೀಯರ್ಫೋರ್ತನ ಸುಲಭವಾದ, ಸಲಿಗೆಯ ಸರಳ ಸ್ವಭಾವದ ಮಾತುಗಳಿಂದಲೂ ನಾವೆಲ್ಲರೂ ಅರೆಕ್ಷಣದಲ್ಲೇ ಚಿರಪರಿಚಿತರಂತೆ ಕಲೆತು ಮಾತಾಡತೊಡಗಿದೆವು. ನನ್ನ ಪರಿಚಯ ಹೇಮನಿಗೆ ನನ್ನ ಬಾಲ್ಯಾರಭ್ಯ ಇದ್ದುದನ್ನು ತಿಳಿಸುತ್ತಾ ಬಹು ಸಂತೋಷದಿಂದ – “ಮಾಸ್ಟರ್ ಡೇವಿ ಈಗ ದೊಡ್ಡವನಾಗಿದ್ದಾನೆ. ಜ್ಞಾನ ಭಂಡಾರವೇ ಈಗ ನಮ್ಮೆದುರು ಬಂದು ನಿಂತಿದ್ದಾನೆ – ವಿದ್ಯಾಸಾಗರನಾಗಿದ್ದಾನೆ ನಮ್ಮ ಡೇವಿ” ಅಂದನು ಹೇಮನು. ಈ ಸಂತೋಷಕೂಟದಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಹೆಚ್ಚು ಸಂತೋಷಪಡುತ್ತಿದ್ದರೆಂಬಂತೆ, ಮಿ. ಪೆಗಟಿ ಆವೇಶದಿಂದ ಅನ್ನತೊಡಗಿದನು – “ಮಹನೀಯರುಗಳೇ – ತೋರುವಿಕೆಯಲ್ಲಿ ಇಬ್ಬರಾಗಿದ್ದರೂ ನಿಮ್ಮೊಳಗಿನ ಪ್ರೇಮದ ಕಟ್ಟಿನಿಂದ ಒಬ್ಬರೇ ಆಗಿರುವ ಮಹನೀಯರೇ – ನಾನೊಬ್ಬ ಒರಟು ನಾವಿಕ. ಅನೇಕ ವಿಷಯಗಳಲ್ಲಿ ಒರಟನಾದರೂ ಪ್ರೀತಿಸುವುದರಲ್ಲೂ ಒಬ್ಬರನ್ನು ನಂಬುವುದರಲ್ಲೂ ಉಕ್ಕಿನಂತೆ ಸ್ಥಿರವಾಗಿರುವವನು. ನನ್ನ ಒರಟುತನ ತಮಗೆ ಆಶ್ಚರ್ಯಕರವಾಗಿ ತೋರಿದರೆ ನನಗೆ ಬೇಸರವಿಲ್ಲ. ಅದು ತಮಗೆ ಅಸಹ್ಯವಾಗಿ ಕಂಡರೆ, ನನ್ನನ್ನು ದಯಮಾಡಿ ಕ್ಷಮಿಸಿರಿ. ತಮಗೆ ಇಂದಿನ ದಿನ, ಇಲ್ಲಿನ ಸಂದರ್ಭಗಳು, ವಿಶೇಷವಾಗದಿರಬಹುದು. ಆದರೆ ನನ್ನ ಮಟ್ಟಿಗೆ ಇಂದಿನ ದಿನಕ್ಕಿಂತ ಮಹತ್ವದ ಸುದಿನ ಬೇರೊಂದಿಲ್ಲ. ನನ್ನನ್ನೇ ಪ್ರೀತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಸಲಹಿ, ಸಾಕಿಬಂದಿರುವ ನನ್ನ ಮುದ್ದು ಎಮಿಲಿಯನ್ನು, ಪುಟ್ಟು ಎಮಿಲಿಯನ್ನು, ಯೋಗ್ಯನಾದ, ದೃಢಕಾಯ, ಸರಳ, ಶಕ್ತಿವಂತ ನಾವಿಕನೊಬ್ಬನಿಗೆ ಮದುವೆ ಮಾಡಿಕೊಡುವ ನಿರ್ಧಾರ ಈಗಲೇ ಆಗಿದೆ. ಮದುಮಗನಾಗತಕ್ಕವನನ್ನೂ ನಾನು ಸಾಕಿ ಬಂದಿರುತ್ತೇನೆ. ಅವನು ತನ್ನ ಸಂಸಾರವನ್ನು ಮರ್ಯಾದೆಯಿಂದ ನಡೆಸಿ ಬರಲು ತ್ರಾಣವಿರುವ ಯುವಕ. ಈ ತರುಣ ತರುಣಿಯರು ಅನಾಥರಾಗಿ ನನ್ನ ಲಾಲನೆಪಾಲನೆಯಲ್ಲಿದ್ದುದು ಮಾತ್ರವಲ್ಲ – ನನ್ನ ಶರೀರದಲ್ಲಿ ಹೃದಯದ ಬಡಿತವಿರುವವರೆಗೆ ಅವರನ್ನು ನನಗೆ ಮಕ್ಕಳಿದ್ದಿದ್ದರೆ ಆ ಮಕ್ಕಳನ್ನು ಪ್ರೀತಿಸುತ್ತಿರಬಹುದಾದುದಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಅವರ ಅಭಿವೃದ್ಧಿ, ಸುಖಸಂತೋಷಗಳಿಗಾಗಿಯೇ ನನ್ನ ಇನ್ನು ಮುಂದಿನ ಜೀವನವೂ ನಡೆಯಬೇಕೆಂದು ನಿಶ್ಚೈಸಿರುವೆನು,” ಹೀಗಂದುಕೊಂಡು, ತನ್ನ ಬಲವಾದ ಎದೆಯನ್ನು ಮುಟ್ಟಿ ತೋರಿಸಿಕೊಂಡು, ಎಮಿಲಿಯನ್ನು ನೋಡಿ – “ಮುದ್ದು, ಎಮಿಲೀ, ಈ ಕಡೆ ಬಾ. ನಿನ್ನ ಬಾಲ್ಯದ ಸ್ನೇಹಿತರಾದ ಮಿ. ಡೇವಿಡ್ಡರೂ ಅವರ ಆಪ್ತ ಸ್ನೇಹಿತರಾದ ಮಿ. ಸ್ಟೀಯರ್ಫೋರ್ತರೂ ಇಂದಿನ ಈ ಸುಮುಹೂರ್ತದಲ್ಲೇ ಬಂದಿರುವವರು. ಅದೂ ಒಂದು ಮಹತ್ವದ ಸಂಗತಿಯೇ ಸರಿ. ಅವರು ನಿನ್ನೊಡನೆ ಮಾತಾಡಿ, ನಿನ್ನ ಶುಭವನ್ನು ಕೋರಿ ಹರಸುವರು, ಇತ್ತ ಬಾ ಅಮ್ಮಾ” ಎಂದು ಕರೆದನು. ಸ್ಟೀಯರ್ಫೋರ್ತನು ಈ ಸಂದರ್ಭಕ್ಕೆ ತಕ್ಕದಾಗಿ, ಗಂಭೀರತೆಯನ್ನು ತಾಳಿ – “ನೀನೊಬ್ಬ ಬಹುಯೋಗ್ಯ ಗೃಹಸ್ಥ. ಸಂತೋಷದಿಂದ ಬಾಳಿ ಬದುಕಲು ಪರಿಪೂರ್ಣ ಅರ್ಹತೆಯುಳ್ಳವನು. ನಿಮ್ಮ ಹೇಮನೂ ಹಾಗೆಯೇ – ಉತ್ತಮ ಯುವಕನು. ನಿಮಗೆಲ್ಲ ಶುಭವಾಗಲಿ” ಅಂದನು. ಮಿ. ಪೆಗಟಿಯ ಉತ್ಸಾಹ ಇಳಿಯಲಿಲ್ಲ. ಪುನಃ ಆವೇಶದಿಂದಲೇ ಹೇಳತೊಡಗಿದನು – “ನನ್ನ ಜೀವಮಾನದ ಕೊನೆಯ ಸಂತೋಷವೇ ಇಂದಿನದು. ನೆಂಟರಿಷ್ಟರ ಸಮಕ್ಷಮದಲ್ಲಿ ಪುಟ್ಟ ಎಮಿಲಿಯ ಭವಿಷ್ಯವನ್ನೆಲ್ಲ ಯೋಗ್ಯ ಪತಿಯ ಕೈಗೆ ಒಪ್ಪಿಸುವ ಇಂದು ದೊರಕಿರುವಂಥ ಮುಹೂರ್ತ ಪುನಃ ಎಂದಿಗೂ ದೊರಕಲಾರದು. ನಾನು ಇಂದೇ ಈಗಲೇ ಸತ್ತರೂ ನಾನು ಸ್ವಲ್ಪವೂ ಚಿಂತಿಸೆನು. ನಾನು ಇನ್ನು ಎಂದು ಸತ್ತರೂ ನನ್ನ ಮನಸ್ಸಿಗೆ ಸಮಾಧಾನವಿದೆ. ಕತ್ತಲೆಯ ರಾತ್ರಿ ಸಮಯ ಸಮುದ್ರದಲ್ಲಿ ಬಿರುಗಾಳಿಯೆದ್ದು, ಯಾರ್ಮತ್ತನ್ನೆ ಅಲೆಗಳು ಬಡಿದು ನಡುಗಿಸುವಾಗ, ನಾನೊಬ್ಬನೇ ಸಮುದ್ರದಲ್ಲಿ ಏಕಾಂಗಿಯಾಗಿ ಊರನ್ನು ಸೇರಲು ಬರುವಾಗ, ಅಲೆಗಳ ಜತೆಯಲ್ಲಿ ಯುದ್ಧಗೈದು, ಸೋತು ಸಮುದ್ರಗತವಾಗುತ್ತಿರುವಾಗ ಯಾರ್ಮತ್ತಿನ ಬೆಳಕನ್ನು ನಾನು ಕೊನೆಯದಾಗಿ ಕಂಡು ಮಡಿಯಬೇಕಾಗುವ ಪ್ರಸಂಗವೇ ಬಂದರೂ ನಾನು ಬೆದರೆನು. ನನ್ನ ಒಲವಿನ ಎಮಿಲಿಯನ್ನು ರಕ್ಷಿಸಿ, ಪೋಷಿಸುವ ಸಮರ್ಥ ಈ ಸ್ಥಳದಲ್ಲಿದ್ದಾನೆಂಬ ನನ್ನ ನಂಬಿಕೆಯೇ ನನ್ನ ಮರಣ ಕಾಲದಲ್ಲು ಸ್ಥಿರ ಶಾಂತಿಯನ್ನು ಕೊಡಬಲ್ಲುದು. ಅಲ್ಲವೇ ಹೇಮ್?” ಎಂದು ಹೇಳುತ್ತಾ ತನ್ನ ಅಭಿಪ್ರಾಯದ ಸಮರ್ಥನೆಗೆ ಹೇಮನ ಕಡೆ ನೋಡಿದನು. ಹೇಮನು ತನ್ನ ಮುಖಭಾವದಿಂದ ಮುಖ್ಯವಾಗಿಯೂ ಕೈಕರಣ, ಶಬ್ದಗಳಿಂದ ಎರಡನೆಯದಾಗಿಯೂ ಮಿ. ಪೆಗಟಿಯ ಮಾತುಗಳನ್ನು ಸಂತೋಷದಿಂದ ಸಮರ್ಥಿಸಿದನು. ಹೀಗೆ ನಾವು ಮನಸ್ವೀಯಾಗಿ ಮಾತುಗಳನ್ನು ನಡೆಸಿ, ಅನಂತರ ಊಟ ಮಾಡಿದೆವು. ಊಟವಾದನಂತರ ಕಥೆ, ಚರಿತ್ರೆ, ಪ್ರವಾಸಗಳ ಅನುಭವ ಇತ್ಯಾದಿಗಳನ್ನು ಒಬ್ಬೊಬ್ಬರೇ ತಂತಮಗೆ ತಿಳಿದಷ್ಟನ್ನು ಹೇಳುತ್ತಾ ಕಾಲ ಕಳೆದೆವು. ಈ ಕಥೆ ಹೇಳುವುದರಲ್ಲೂ ಸ್ಟೀಯರ್ಫೋರ್ತನು ಬಹು ಕೌಶಲವುಳ್ಳವನಾಗಿದ್ದನು. ಅವನ ವಾಕ್ಚಾತುರ್ಯ, ವಿವರಣೆಗಳನ್ನೆಲ್ಲ ಎಲ್ಲರೂ ನಿಶ್ಶಬ್ದದಿಂದ ಕೇಳಿ ಆನಂದಿಸಿದರು. ಸ್ಟೀಯರ್ಫೋರ್ತನು ಜನ, ಸಂದರ್ಭಗಳಿಗೆ ತಕ್ಕವಾಗಿ ನಜರು, ಸಹಾಯ ಮೊದಲಾದುವನ್ನು ಕೊಡುವ ಮಾಡುವ ಅನುಭವಿಯಾಗಿದ್ದುದರಿಂದ, ಇಲ್ಲಿಗೆ ಬರುವಾಗಲೇ ಮಿ. ಪೆಗಟಿಗಾಗಿ ಒಂದು ಬಾಟ್ಲಿ (ನಾವಿಕರಿಗೆ ಬಹುಪ್ರಿಯವಾದ ನಮೂನೆಯ) ವೈನನ್ನು ತಂದಿದ್ದನು. ಅದನ್ನು ಅವನು ಮಿ. ಪೆಗಟಿಗೆ ನಜರಾಗಿ ಕೊಟ್ಟನು. ಅದನ್ನು ಎಲ್ಲರೂ ಸ್ವಲ್ಪ ಸ್ವಲ್ಪ ಕುಡಿದರು. ಅಂದಿನ ಸಂತೋಷಕ್ಕೆ ಒಂದು ಪದವನ್ನು ಹಾಡಬೇಕೆಂದು ಮಿ. ಪೆಗಟಿಗೆ ತೋರಿ ಅವನು ನಾವಿಕರ ಒಂದು ಪದವನ್ನು ಹಾಡಿದನು. ಅವನು ಹಾಡಿದ್ದೋ ಆರ್ಭಟಿಸಿದ್ದೋ ಎಂಬುದನ್ನು ಅವರವರ ಅಭಿರುಚಿ ಪ್ರಕಾರ ನಾವು ಗ್ರಹಿಸಿಕೊಂಡೆವು. ಸ್ಟಿಯರ್ಫೋರ್ತನು ಪ್ರತಿಯಾಗಿ ಒಂದು ಪದವನ್ನು ಹಾಡಿದನು. ಅವನ ಹಾಡುಗಾರಿಕೆ ಎಲ್ಲರನ್ನೂ ಮುಗ್ಧಗೊಳಿಸಿತು. ಸ್ಟೀಯರ್ಫೋರ್ತನ ನಡೆನುಡಿ, ಸಂಗೀತ, ಕಥೆ, ಪ್ರತಿಭೆಗಳನ್ನು ಎಲ್ಲರೂ ಕಂಡು ಬೆರಗಾಗಿ – ಮರುಳಾಗಿ – ಮೈಮರೆತು ಎಲ್ಲರೂ ಒಂದೇ ಸಂಸಾರದವರಂತೆ – ನಾಚಿಕೆ, ಹೇಡಿತನಗಳನ್ನು ಬಿಟ್ಟು – ಬೆರೆತು ಸಂತೋಷಿಸಿದೆವು. ನಮ್ಮ ಕೂಟದ ಪ್ರಾರಂಭ ಭಾಗದಲ್ಲಿ ಸ್ವಲ್ಪ ನಾಚಿಕೆಯಿಂದ ಅಡಗಿ ಕುಳಿತಿದ್ದ ಎಮಿಲಿಯೂ ಸಹ ನಮ್ಮೆಲ್ಲರಂತೆ ಸಲಿಗೆಯಿಂದ ಕೂಟದ ಆನಂದಗಳಲ್ಲಿ ಭಾಗಿಯಾಗಿದ್ದಳು. ಈ ಸಂತೋಷಕೂಟ ಮುಕ್ತಾಯವಾದನಂತರ ಸ್ಟೀಯರ್ಫೋರ್ತನೂ ನಾನೂ ಅಲ್ಲಿಂದ – ಅವರೆಲ್ಲರಿಂದ ಬೀಳ್ಕೊಳ್ಳಲ್ಪಟ್ಟು – ಹೊರಟೆವು. ನಾವು ಸ್ವಲ್ಪ ದೂರ ಜತೆಯಲ್ಲೇ ಹೋಗಿ, ಅನಂತರ ನಮ್ಮ ನಮ್ಮ ಕಡೆಯ ಸ್ಥಳಗಳಿಗೆ ಹೋಗಬೇಕಾಗಿದ್ದಿತು. ನಾವು ಜತೆಯಲ್ಲೇ ಹೋಗುತ್ತಿದ್ದಾಗ ಸ್ಟೀಯರ್ಫೋರ್ತನು ತುಂಬಾ ಆಲೋಚನೆಗಳಲ್ಲಿದ್ದಂತೆ ತೋರಿದನು. ಅಂತೂ ಆಲೋಚನೆಯೇ ಸ್ಪೋಟನವಾದಂತೆ – “ಆ ಒರಟು ಕರಡಿ ಹೇಮನು ಸುಂದರೀಮಣಿ ಎಮಿಲಿಗೆ ತಕ್ಕಂಥ ಗಂಡ ಎಷ್ಟು ಮಾತ್ರಕ್ಕೂ ಅಲ್ಲ” ಎಂದನು. ಸ್ಟೀಯರ್ಫೋರ್ತನು ಬಡವರನ್ನು ಕುರಿತಾಗಿ ಮಾತಾಡುತ್ತಿದ್ದುದೇ ಹೆಚ್ಚಾಗಿ ಹಾಗೆಂದು ತಿಳಿದಿದ್ದ ನಾನು ಸ್ವಲ್ಪ ಬೇಸರದಿಂದಲೇ – “ಪ್ರೇಮಕ್ಕೆ ಅಂತರಂಗದ ಸೊಬಗು ಮಾತ್ರ ಪ್ರಧಾನವಾದುದು. ಬಹಿರಂಗದ ಒರಟುತನ ನಿರ್ಲಕ್ಷ್ಯವಾದುದಲ್ಲವೇನು, ಸ್ಟೀಯರ್ಫೋರ್ತ್?” ಎಂದು ಕೇಳಿದೆನು. ಇದಕ್ಕೆ ಸ್ಟೀಯರ್ಫೋರ್ತನು ಯಾವ ಉತ್ತರವನ್ನೂ ಕೊಡದೇ ನಡೆಯುತ್ತಿದ್ದನು. ಸ್ವಲ್ಪ ದೂರ ಹೋಗುತ್ತಾ ಕಳವಳದಿಂದಲೇ ಎಂಬಂತೆ ಮತ್ತೂ ಬಹ್ವಂಶ ಆತ್ಮಗತವೇ ಎಂಬಂತೆ, ನನ್ನನ್ನು ನೋಡಿ ಅವನಂದನು – “ಡೇವೀ ನಿನ್ನ ಪ್ರಶ್ನೆಗೆ ಉತ್ತರಕೊಡುವ ವಿಷಯ ಹಾಗಿರಲಿ. ನನ್ನ ಮನಸ್ಸಿನ ಗತಿಯನ್ನು ನಿನಗೆ ತಿಳಿಸಲಿಚ್ಛಿಸುತ್ತೇನೆ, ನೋಡು. ನನಗೆ ನಾನೇ ಶತ್ರುವಾಗಿರುವೆನೆಂಬ ಭಾವನೆಯು ನನಗೆ ಕೆಲವೊಮ್ಮೆ ಮೂಡುವುದಿದೆ! ಬಾಲ್ಯದಲ್ಲಿ ಶಿಸ್ತಿಲ್ಲದೆ ಬೆಳೆದವರ ಬಾಳೆಲ್ಲ ಹೀಗೆಯೇ! ಶಿಸ್ತನ್ನು ಬೋಧಿಸಿ ನನ್ನನ್ನು ಬೆಳೆಸಬಲ್ಲ ತಂದೆ ನನಗೆ ಬಾಲ್ಯದಲ್ಲಿ ಇರಬೇಕಿತ್ತು, ಡೇವಿ. ನಿನ್ನ ಪ್ರಶ್ನೆಗೆ ಉತ್ತರಿಸದೆ – ಅಥವಾ ನನ್ನ ಮಾತುಗಳಿಂದ ನಿನಗೆ ನೋವಾದರೆ ಕ್ಷಮಿಸು, ಡೇವಿ. ನಿನಗೆ ಶುಭವಾಗಲಿ!” ಈ ಮಾತುಗಳು ಅವನ ಅಂತರಂಗದ ವೇದನೆಯಿಂದ ಹೊರಬಂದಂತೆ ತೋರಿದುವು. ಅನಂತರ ನಾವು ಮುಂದುವರಿಯುವಾಗ, ಸದಾ ಹರ್ಷಚಿತ್ತನಾಗಿರುವ ಅವನ ಸ್ವಭಾವಕ್ಕೆ ಸರಿಯಾಗಿ ಸ್ಟೀಯರ್ಫೋರ್ತನು ಮಿ. ಪೆಗಟಿ ಆರ್ಭಟೆಯಂತೆ ಹಾಡಿದ್ದ ಪದವನ್ನೇ ಬಹು ಮಧುರವಾಗಿ ಹಾಡುತ್ತಾ ನಡೆದನು. ಈ ರೀತಿ ನಾವು ಯಾರ್ಮತ್ ಪಟ್ಟಣದ ಕಡೆಗೆ ಸಾಗಿದೆವು.
ದಿನಾಂಕ 26-01-2021 ರಂದು ಫಿರ್ಯಾದಿ ಕುಶಾಲ ತಂದೆ ಶಿವರಾಜ ವಯ: 23 ವರ್ಷ, ಜಾತಿ: ಕುಂಬಾರ, ಸಾ: ಬುತ್ತಿ ಬಸವಣ್ಣ ಮಂದಿರ ಹತ್ತಿರ ಚಿದ್ರಿ ಬೀದರ ರವರ ತಮ್ಮನಾದ ಈಶ್ವರ ತಂದೆ ಶಿವರಾಜ ವಯ: 21 ವರ್ಷ ಇತನು ಬೀದರ ನಗರದ ಹಕ್ ಕಾಲೋನಿಯಲ್ಲಿರುವ ರೆಹಮಾನ ಎಂಬುವವರ ಮನೆಗೆ ಗಿಲಾವ ಕೆಲಸಕ್ಕೆಂದು ಹೋಗಿ ರೆಹಮಾನ ರವರ ಮನೆಯಲ್ಲಿ ಗಿಲಾವ ಕೆಲಸ ಮಾಡುತ್ತಿರುವಾಗ ಮನೆಯಲ್ಲಿದ್ದ ವಿದ್ಯುತ್ ಸಂಪರ್ಕದಿಂದ ಆಕಸ್ಮಿಕವಾಗಿ ತಮ್ಮನಿಗೆ ಕರೆಂಟ ಹತ್ತಿ ನೆಲದ ಮೇಲೆ ಬಿದ್ದಾಗ ಮನೆಯ ಮಾಲಿಕ ರೆಹಮಾನ ಈತನು ಚಿಕಿತ್ಸೆಗೆಂದು ಬೀದರ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ನೋಡಿ ಕರೆಂಟ ಹತ್ತಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ, ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ತನ್ನ ತಮ್ಮನ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 17/2021, ಕಲಂ. 304(ಎ) ಐಪಿಸಿ :- ದಿನಾಂಕ 25-01-2021 ರಂದು ಫಿರ್ಯಾದಿ ಪರವೀನ ಗಂಡ ಶಾಬೋದ್ದೀನ ಬೋರಲವಾಲೆ ವಯ: 39 ವರ್ಷ, ಜಾತಿ: ಮುಸ್ಲಿಂ, ಸಾ: ಶಿವಪುರ ಗಲ್ಲಿ ಹುಮನಾಬಾದ ರವರ ಓಣಿಯ ಶಾರುಖ ಇವರು ಕರೆ ಮಾಡಿ ತಿಳಿಸಿದ್ದೆನೆಂದರೆ ನನ್ನ ಜೊತೆಯಲ್ಲಿ ಉಮರ ಮತ್ತು ಖಾಸಿಮ ರವರು ಕಮಲಾಪುರದಿಂದ ಕಟ್ಟಿಗೆ ಹೊಟ್ಟು ತುಂಬಿಕೊಂಡು ಹುಮನಾಬಾದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಖಾಜಾ ಕಂಪನಿಯ ಪೇಪರ ಮಿಲಗೆ ತಲುಪಿ ತಮ್ಮ ಗಾಡಿ ಖಾಲಿ ಮಾಡುವಾಗ ನಿಮ್ಮ ಗಂಡ ಥಕಾವಟ ಆಗಿ ಹೊಟ್ಟಿನ ಪಕ್ಕದಲ್ಲಿ ಕುಳಿತಾಗ ಖಾಜಾ ಕಂಪನಿಯ ಟ್ರಾಕ್ಟರ್ ನಂ. ಕೆಎ-39/ಟಿ-6012 ನೇದರ ಚಾಲಕನಾದ ಆರೋಪಿ ನರಸಿಂಗ ತಂದೆ ಶ್ರವಣಕುಮಾರ ಸಾ: ಚಂದನಹಳ್ಳಿ ಇತನು ತನ್ನ ಟ್ರಾಕ್ಟರ್ ಖಾಜಾ ಕಂಪನಿಯ ಒಳಗೆ ನಿರ್ಲಕ್ಷದಿಂದ ಚಲಾಯಿಸಿ ಹೊಟ್ಟಿನ ಪಕ್ಕದಲ್ಲಿ ಕುಳಿತ ನಿಮ್ಮ ಗಂಡ ಶಾಬೋದ್ದೀನ ಇವರಿಗೆ ಹೊಟ್ಟಿನಲ್ಲಿ ಒತ್ತಿದಾಗ ಬುಲ ಬಕೇಟ ಅವರ ಕುತ್ತಿಯ ಹತ್ತಿರ ತಗುಲಿ ಎಳೆದಾಗ ಕುತ್ತಿಗೆ ಮತ್ತು ಬಲಗೈಗೆ ಗಾಯವಾಗಿರುವದರಿಂದ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ ನೀವು ಬನ್ನಿ ಅಂತಾ ತಿಳಿಸಿದ್ದರಿಂದ ಫಿರ್ಯಾದಿಯು ಆಸ್ಪತ್ರೆಗೆ ಬಂದು ನೋಡಲು ಫಿರ್ಯಾದಿಯವರ ಗಂಡ ಶಾಬೋದ್ದಿನ್ ರವರ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಖ 26-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 18/2021, ಕಲಂ. 309 ಐಪಿಸಿ :- ದಿನಾಂಕ 26-01-2021 ರಂದು ಫಿರ್ಯಾದಿ ಶ್ರೀಪಾದ ಮುಖ್ಯಾಧಿಕಾರಿಗಳು ಪುರಸಭೆ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪುರಸಭೆ ಕಛೇರಿಯ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಸದರಿ ದ್ವಜಾರೋರಣ ಕಾರ್ಯಕ್ರಮದ ಮುಗಿದ ನಂತರ ಆರೋಪಿ ರಾಘವೇಂದ್ರ ತಂದೆ ರೇವಣಸಿದ್ದಪ್ಪಾ ಹೊರ ಗುತ್ತಿಗೆ ಪೌರ ಕಾರ್ಮಿಕ (ಜಿ.ಸಿ.ಬಿ. ಚಾಲಕ), ಸಾ: ಚಿಟಗುಪ್ಪಾ ಇತನು ನೌಕರರ ಪುರಸಭೆ ಕಛೇರಿಯ ಕಟ್ಟಡದ ಮೇಲೆ ಏಕಾಏಕಿ ಏರಿ ಕೆಳಗಿರುವ ಎಲ್ಲ ಜನಪ್ರತಿನಿಧಿಗಳು ಹಾಗು ಉಪಸ್ತಿತರಿದ್ದ ಸಾರ್ವಜನಿಕರು ಧ್ವನಿಯ ಮೂಲಕ ಎಲ್ಲರೂ ಕೂಗಾಡಿ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಿರುವಾಗ ಪುರಸಭೆ ಸದಸ್ಯರಾದ ನಸೀರ ಮತ್ತಿತರರು ಕಛೇರಿಯ ಕಟ್ಟಡದ ಮೇಲೆ ಓಡೊಡಿ ಹೋಗಿ ರಾಘವೇಂದ್ರ ಇತನಿಗೆ ಹಿಡಿದುಕೊಂಡು ಕೆಳಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸುರಕ್ಷಿತವಾಗಿ ರೈಸಿಂಗ್ ವಾಹನ - ಕಾರ್ ಬ್ಯಾಟರಿ ಅಥವಾ ಚಾಸಿಸ್ ಹಾನಿಯಾಗದಂತೆ ತಡೆಯಲು ಬಾಳಿಕೆ ಬರುವ, ಹಾನಿ-ವಿರೋಧಿ NBR ರಬ್ಬರ್‌ನಿಂದ ಮಾಡಲ್ಪಟ್ಟಿದೆ.ಒತ್ತಡ-ಬೇರಿಂಗ್ ಫೋರ್ಸ್ 1000 ಕೆ.ಜಿ. Tesla ಮಾಡೆಲ್‌ಗಳು 3 ಮತ್ತು ಮಾಡೆಲ್ Y ಗಾಗಿ ಮಾಡೆಲ್-ಸ್ಪೆಸಿಫಿಕ್ ಅಡಾಪ್ಟರ್‌ಗಳು. ನಮ್ಮ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ ಜ್ಯಾಕ್ ಅಡಾಪ್ಟರ್‌ಗಳು ಜ್ಯಾಕ್ ಪಾಯಿಂಟ್‌ಗಳನ್ನು ಕ್ಲಿಕ್ ಮಾಡುತ್ತವೆ ಮತ್ತು ವಾಹನವನ್ನು ಎತ್ತುವಾಗ ಜಾರಿಕೊಳ್ಳದ ಅಥವಾ ಚಲಿಸದ ಹೆಚ್ಚು ಸುರಕ್ಷಿತ ಮತ್ತು ಗಟ್ಟಿಮುಟ್ಟಾದ ಜಾಕಿಂಗ್ ಪಾಯಿಂಟ್ ಅನ್ನು ಒದಗಿಸುತ್ತದೆ. ಸುಲಭ ಮತ್ತು ತ್ವರಿತ ಸ್ಥಾಪನೆ - ವಾಹನದ ಜ್ಯಾಕ್ ಪಾಯಿಂಟ್ ಹೋಲ್‌ಗೆ ಅಡಾಪ್ಟರ್ ಪ್ಯಾಡ್ ಅನ್ನು ಸೇರಿಸಿ ಮತ್ತು ನಿಮ್ಮ ಜ್ಯಾಕ್ ಅನ್ನು ನೇರವಾಗಿ ಕೆಳಗೆ ಇರಿಸಿ, ಜ್ಯಾಕ್ ಅಡಾಪ್ಟರ್ ಪ್ಯಾಡ್‌ನಲ್ಲಿ ಕೇಂದ್ರೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಆಳವಾದ ಹಿಡಿತಕ್ಕಾಗಿ ಹೆಚ್ಚುವರಿ ದಪ್ಪ O-ರಿಂಗ್ - ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧಿಗಳಿಗಿಂತ ದಪ್ಪವಾಗಿರುತ್ತದೆ.ನಮ್ಮ ಟೆಸ್ಲಾ ಜ್ಯಾಕ್ ಪ್ಯಾಡ್ ವಾಹನದ ಜ್ಯಾಕ್ ಪಾಯಿಂಟ್‌ನಲ್ಲಿ ತುಂಬಾ ಬಿಗಿಯಾಗಿ ಉಳಿಯುತ್ತದೆ. O-ರಿಂಗ್‌ನ ಈ ವಿನ್ಯಾಸವು ಟೆಸ್ಲಾ ಲಿಫ್ಟ್ ಪಕ್‌ಗಳನ್ನು ಮೊದಲೇ ಸ್ಥಾಪಿಸಲು ಸಹಾಯ ಮಾಡುತ್ತದೆ, ಇದು ನೆಲದ ಜ್ಯಾಕ್ ಅಥವಾ ಲಿಫ್ಟ್ ಅನ್ನು ಸುಲಭವಾಗಿ ಇರಿಸಲು ಅನುವು ಮಾಡಿಕೊಡುತ್ತದೆ. ಶೇಖರಣಾ ಚೀಲಗಳು ಜ್ಯಾಕ್ ಲಿಫ್ಟ್ ಪ್ಯಾಡ್‌ಗಳನ್ನು ವ್ಯವಸ್ಥಿತವಾಗಿರಿಸಿಕೊಳ್ಳುತ್ತವೆ.ಎತ್ತರದ ನೆಲದ ಜ್ಯಾಕ್ ಸ್ಯಾಡಲ್‌ಗಳು ಮತ್ತು ಹೆಚ್ಚಿನ 2-ಪೋಸ್ಟ್ ಲಿಫ್ಟ್ ಆರ್ಮ್‌ಗಳನ್ನು ಅಳವಡಿಸಲು ಕಡಿಮೆ ಪ್ರೊಫೈಲ್ ಅನ್ನು ಹೊಂದಿದೆ.
ನಮಗೆ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದಿದ್ದರೂ ಈ ದೇಶದಲ್ಲಿ ನಿಜವಾಗಿಯೂ ಸ್ವಾತಂತ್ರ್ಯದಿಂದ ಬದುಕಿತ್ತಿದ್ದೇವೆ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಕ್ಷಣ ದೂರ ದೃಷ್ಠಿಯಿಲ್ಲದ ವ್ಯಕ್ತಿಗಳ ಕೈಗೆ ಅಧಿಕಾರ ಹಸ್ತಾಂತರವಾದ ಪರಿಣಾಮ ಇಂದಿಗೂ ನಮ್ಮ ಜುಟ್ಟು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವಿದೇಶಿಗರ ಕೈಯಲ್ಲಿಯೇ ಇದೆ ಎಂಬ ಸತ್ಯ ಸ್ವಾತಂತ್ರ್ಯ ದಿನಾಚರಣೆಯಂದೂ ನಮ್ಮನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಆಗಸ್ಟ್ 15 ಬಂತೆಂದರೆ ನಮ್ಮಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತದೆ, ನಮ್ಮ ತನಕ್ಕೆ, ನಮ್ಮ ನಾಡಿಗೆ ಪರಿಪೂರ್ಣಅರ್ಥ ದೊರೆತ ಮಹತ್ವವಾದ ದಿನ ಎಂದು ಹಿಗ್ಗುತ್ತೇವೆ. ವಂದೇ ಮಾತರಂ, ಜನ ಗಣ ಮನ ಗೀತೆ ಮೊಳಗುತ್ತದೆ. ಇದರೊಂದಿಗೆ ಭಾರತಕ್ಕಾಗಿ ಬಲಿದಾನ ಮಾಡಿದವರನ್ನೂ ನೆನೆಯುತ್ತೇವೆ, ನಿಜ ದೇಶಾಭಿಮಾನದ ಸಂಕೇತವಾಗಿ ಇವೆಲ್ಲವೂ ಸಹಜವೇ ಒಬ್ಬ ದೇಶಪ್ರೇಮಿ ಮಾಡಬೇಕಾದ್ದೆ. ಆದರೆ ನಮಗೆ ಸ್ವಾತಂತ್ರ್ಯ ದೊರೆತ ತಕ್ಷಣವೇ ನಮ್ಮಿಂದಲೇ ಬೇರ್ಪಟ್ಟ ಭಾರತದ ಅವಿಭಾಜ್ಯ ಅಂಗವಾಗಿದ್ದ ಪಾಕಿಸ್ತಾನದ ಉಪಟಳ, ಯೋಧರ ಹತ್ಯೆ, ಜಮ್ಮು ಕಾಶ್ಮೀರದಲ್ಲಿ ಕೋಮುಗಲಭೆ, ಎಲ್ಲಕ್ಕಿಂತ ಹೆಚ್ಚಾಗಿ ರಕ್ತವನ್ನು ಕೊತಕೊತ ಕುದಿಯುವಂತೆ ಮಾಡಿರುವ ನಮ್ಮ ನಾಯಕರ ನಿರ್ಲಜ್ಜ ನಿಷ್ಕ್ರಿಯತೆಗಳ ನಡುವೆ ಸ್ವಾತಂತ್ರ್ಯ ದಿನಾಚರಣೆ ಹೇಗೆ ಪೂರ್ಣವಾದೀತು.....? ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯನೂ ಆಗಸ್ಟ್ 15 ಸಂಭ್ರಮಿಸಲೇ ಬೇಕಾದ ದಿನ, ಹಾಗೆಯೇ ಪ್ರಸ್ತುತ ಸ್ವಾತಂತ್ರ್ಯ ಸ್ವೇಚ್ಛೆಗೆ ತಿರುಗಿ ಸ್ವಾತಂತ್ರ್ಯದ ಹೆಸರಿನಲ್ಲಿ ಮೀರುತ್ತಿರುವ ಎಲ್ಲೆಗಳ ಬಗ್ಗೆಯೂ ನಾವು ಯೋಚಿಸಬೇಕಲ್ಲವೇ? ಇತ್ತೀಚೆಗಷ್ಟೇ ನಮ್ಮ ದೇಶದ ಯೋಧರ ಶಿರಚ್ಛೇಧನ ಮಾಡಿ ರವಾನೆ ಮಾಡಿದಾಗ, ಮುಂದಿನ ಬಾರಿ ಈ ರೀತಿಯಾದರೆ ಕ್ರಮ ಕೈಗೊಳ್ಳುತ್ತೇವೆ ಎಂಬ ಸರ್ಕಾರದ ಎಚ್ಚರಿಕೆ 5 ಭಾರತೀಯ ಯೋಧರನ್ನು ಹತ್ಯೆ ಮಾಡಿದ ನಂತರವೂ ಮುಂದುವರೆದಿದೆ!. ನಮ್ಮದೇನೂ ತಪ್ಪೇ ಇಲ್ಲ ಎಂದು ಹೇಳಿರುವ ಪಾಕಿಸ್ತಾನ, ಭಾರತ ಸರ್ಕಾರದ ವಿರುದ್ಧ ನಿರ್ಣಯವನ್ನು ಮಂಡಿಸುವವರೆಗೂ ನಿಷ್ಕ್ರೀಯ ಧೋರಣೆ ವಿಜೃಂಭಿಸುತ್ತಿರುವುದು ನಮ್ಮ ಸ್ವಾತಂತ್ರ್ಯದ ಅಸ್ಥಿತ್ವವನ್ನೇ ಪಣಕ್ಕಿಟ್ಟಂತಾಗಿದೆ. ಮತ್ತೊಂದೆಡೆ ಸ್ವಾತಂತ್ರ್ಯವೆಂಬುದು ಸ್ವೇಚ್ಛಾಚಾರಕ್ಕೆ ತಿರುಗಿ ಮನಸೋ ಇಚ್ಛೆ ಗಲಭೆ ನಡೆಯುತ್ತಿದ್ದರೂ ಸೆಕ್ಯೂಲರ್ ಎಂಬ ಧ್ಯೇಯ ಸಿದ್ಧಾಂತಗಳು ನಮ್ಮ ನೇತಾಗಳ ಕೈಗಳನ್ನು ಕಟ್ಟಿ ಹಾಕಿ ದೇಶದ ಸಾರ್ವಭೌಮತೆಯ ಅರ್ಥವನ್ನೇ ಬದಲಿಸಿಬಿಟ್ಟಿವೆ ಅಂದರೆ ಸ್ವಾತಂತ್ರ್ಯ ಹಾಗೂ ಸಾರ್ವಭೌಮತೆಗಳೆರಡು ಅವಕಾಶವಾದದ ಕೈಗೆ ಸಿಲುಕಿ ನಲುಗುತ್ತಿರಬೇಕಾದರೆ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥವೆಲ್ಲಿದೆ? ಸ್ವಾತಂತ್ರ್ಯ ಮತ್ತು ಸೆಕ್ಯುಲರಿಸಂ :1947 ರಲ್ಲಿ ನಮ್ಮನ್ನು ಬ್ರಿಟೀಷರಿಂದ ಮುಕ್ತಗೊಳಿಸಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ದೇಶ ಸ್ವತಂತ್ರವಾಗಲು ಪ್ರಮುಖ ಪಾತ್ರ ವಹಿಸಿದರು. ಎಲ್ಲರಿಗೂ ಸಮಾನತೆ ಸಾರಿದ್ದ ಗಾಂಧಿಜಿ, ಸ್ವಾತಂತ್ರ್ಯ ದೊರೆತ ನಂತರ ಮಾಡಿದ್ದು ಏನು? ದೇಶದ ಅಭಿವೃದ್ಧಿ ಹಾಗೂ ಭಾರತ ರಾಷ್ಟ್ರದ ಬಗ್ಗೆ ಉತ್ತಮ ಚಿಂತನೆಗಳನ್ನು,ದೂರ ದೃಷ್ಠಿಯನ್ನು ಹೊಂದಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಂತಹ ಅರ್ಹ ನಾಯಕರನ್ನು ಬಿಟ್ಟು ತಮಗೆ ಆಪ್ಯಾಯಮಾನವಾಗಿದ್ದ, ದೇಶದ ಬಗ್ಗೆ ಪರಿಕಲ್ಪನೆಯನ್ನೇ ಹೊಂದದ ಪಂಡಿತ್ ಜವಹರಲಾಲ್ ನೆಹರೂ ಅವರನ್ನು ಪ್ರಧಾನಿ ಪಟ್ಟಕ್ಕೇರಿಸಿದರು. ಅಲ್ಲಿಗೆ ವಂಶಾಡಳಿತ ನಡೆಸುತ್ತುದ್ದ ರಾಜರುಗಳಿಂದ ರಾಜ್ಯಗಳನ್ನು ವಶಪಡಿಸಿಕೊಂಡು ನೆಹರೂ ಎಂಬ ಏಕಚಕ್ರಾಧಿಪತಿ ವಂಶಕ್ಕೆ ಸಮಸ್ತ ದೇಶವನ್ನು ಸಮರ್ಪಿಸಿದ್ದಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಆಡಳಿತ ಬೇರೆ ಬೇರೆ ರಾಜ ಮನೆತನಗಳದ್ದಾಗಿತ್ತು. ಸ್ವಾತಂತ್ರ್ಯಾನಂತರ ಆಡಳಿತ ಒಂದೇ ರಾಜಮನೆತನದ್ದಾಗಿದೆ. ಸ್ವಾತಂತ್ರ್ಯದ ಬದಲಾವಣೆ ಅಷ್ಟಕ್ಕೆ ಮಾತ್ರ ಸೀಮಿತವಾಯಿತು.! ಸೆಕ್ಯುಲರ್ ಎನ್ನುವ ಹೆಸರಿನಲ್ಲಿ ಗಾಂಧೀಜಿ ನಮಗೆ ಕೊಟ್ಟಿದ್ದು ಒಂದು ಸಾರ್ವಕಾಲಿಕ ವಂಶಾಡಳಿತವನ್ನು ಎನಿಸುವುದಿಲ್ಲವೇ? ಈ ಮಧ್ಯೆ ಭಾರತದ ಅವಿಭಾಜ್ಯ ಅಂಗವಾಗಿದ್ದ ಪಾಕಿಸ್ತಾನವನ್ನು ಪ್ರತ್ಯೇಕಗೊಳಿಸಿದರು (ಅಂದಿನ ಸಂಧರ್ಭಕ್ಕೆ ಅದು ಅನಿವಾರ್ಯವಾಗಿತ್ತೇನೋ ಗೊತ್ತಿಲ್ಲ) ಆದರೆ ಪಾಕಿಸ್ತಾನ ಪ್ರತ್ಯೇಕ ಅಸ್ಥಿತ್ವ ಪಡೆದ ಕೆಲವೇ ದಿನಗಳಲ್ಲಿ ತನ್ನ ಕಿಡಿಗೇಡಿ ಬುದ್ದಿ ಪ್ರದರ್ಶಿಸಿತ್ತು. ಆದರೆ ಅಂದು ಮುಂಚೂಣಿಯಲ್ಲಿದ್ದ ಸಖಲವನ್ನೂ ನಿರ್ಧರಿಸುತ್ತಿದ್ದ ಭಾರತದ ನಾಯಕರು ಕೆಟ್ಟದ್ದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲಿಲ್ಲ. ಪರಿಣಾಮ ಪಾಕಿಸ್ತಾನ ಇಂದಿಗೂ ತನ್ನ ದೂರ್ತ ಬುದ್ಧಿ ಪ್ರದರ್ಶಿಸುವುದನ್ನು ಬಿಟ್ಟಿಲ್ಲ! ಹಾಗೆಯೇ ಅಂದಿನ ನೆಹರು ಕುಡಿಗಳೂ ತಮ್ಮ ದುರಾಡಳಿತ ಬಿಟ್ಟಿಲ್ಲ!. ಎಷ್ಟು ಸಾಮ್ಯತೆ ಅಲ್ಲವೇ? ಕಾಲ ಬದಲಾದರೇನು ಸೆಕ್ಯೂಲರಿಸಂ ಹೆಸರಿನಲ್ಲಿ ಅಧಿಕಾರಕ್ಕೆ ಅಂಟಿಕೊಂಡು ಕೊಳ್ಳೆಹೊಡೆಯುವುದು ಬದಲಾಗಿಲ್ಲವಲ್ಲ. ಸೆಕ್ಯುಲರ್ ವಾದ ಮಂಡಿಸುತ್ತಿದ್ದ ಮಹಾತ್ಮ ಗಾಂಧೀ ಹಾಗೂ ನೆಹರು ಅವರಿಗೆ ಪಾಕಿಸ್ತಾನವನ್ನು ಬೇರ್ಪಡಿಸುವ ಅನಿವಾರ್ಯತೆ ಏನಿತ್ತು? ಸ್ಯೆಕ್ಯುಲರ್ ಎಂದರೆ ಸಮಾನವಾಗಿ ಕಾಣುವುದೋ ಅಥವಾ ಪ್ರತ್ಯೇಕಗೊಳಿಸುವುದೋ? ಅದೇನು ಜಾತ್ಯಾತೀತತೆ ಅಡಿಯಲ್ಲಿ ಮನ್ನಣೆ ಪಡೆಯುವವರು( ಅಲ್ಪಸಂಖ್ಯಾತರು) ದೇವಲೋಕದಿಂದ ಇಳಿದಿದ್ದಾರೆಯೇ ವಿಶೇಷ ಸ್ಥಾನಮಾನ ನೀಡಲು? ಸ್ವಾತಂತ್ರ್ಯದ ಬಗ್ಗೆ ಪ್ರತಿ ಬಾರಿ ಯೋಚಿಸಿದಾಗಲೂ ಪಾಕಿಸ್ತಾನ ತನ್ನ ಮೊದಲ ದಿನದ(1947 ರಲ್ಲಿ ನಡೆದ ಕೋಮು ಗಲಭೆ, ಕಾಶ್ಮೀರ ಸ್ವಾಧೀನ ಪಡಿಸಿಕೊಳ್ಳಲು ನಡೆಸಿದ ಕುತಂತ್ರ) ಸಂಘರ್ಷದಿಂದ ಹಿಡಿದು, ಯೋಧರ ಶಿರಚ್ಛೇಧನ, ಮೋದಿಗೆ ವೀಸಾ ನಿರಾಕರಣೆ, ಕೆಲ ದಿನಗಳ ಹಿಂದಷ್ಟೇ ನಡೆದಿರುವ ಯೋಧರ ಹತ್ಯೆ ಸೇರಿದಂತೆ ನಮ್ಮ ದೇಶಕ್ಕೇ ಆಪತ್ತು ತರುವ ಯಾವುದೇ ಸಂಗತಿಗಳು ನಡೆದರೂ ಸ್ವಾತಂತ್ರ್ಯ ಹಾಗೂ ಸೆಕ್ಯುಲರ್ ಎಂಬ ಶ್ರೀರಕ್ಷೆ ಕಾವಲಿಗಿರುತ್ತದೆ. ಪಾಕ್ ಸರ್ಕಾರದ ಕೃತ್ಯಗಳ ಬಗ್ಗೆ ನಮ್ಮ ದೇಶದ ರಕ್ಷಣಾ ಮತ್ರಿ ಬಿಡಿ, ಅಂತಹ ರಾಜಕಾರಣಿಗಳನ್ನು ಆರಿಸಿರುವ ಜನತೆಯೇ ಸೆಕ್ಯುಲರ್ ಹೆಸರಿನಲ್ಲಿ ಪಾಕಿಸ್ತಾನವನ್ನು ವಹಿಸಿಕೊಂಡು ಮಾತನಾಡುತ್ತಾರಲ್ಲ ಇದಕ್ಕೆ ಏನನ್ನಬೇಕು? ಮೊನ್ನೆ ಪಾಕಿಸ್ತಾನ ಯೋಧರು ಭಾರತದ ಯೋಧರನ್ನು ಹತ್ಯೆ ಮಾಡಿರುವುದರ ಬಗ್ಗೆ ಖಾಸಗಿ ನ್ಯೂಸ್ ಚಾನೆಲ್ ನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೈದ್ರಾಬಾದ್ ನ ಮುಸ್ಲಿಂ ಸಮುದಾಯದವರೊಬ್ಬರು ಪಾಕಿಸ್ತಾನ ಎಷ್ಟೇ ತಪ್ಪು ಮಾಡಿದರೂ ನಮ್ಮ ನೆರೆ ರಾಷ್ಟ್ರ, ಅವರಿಗೆ ತಪ್ಪು ಮಾಡದಂತೆ 50 ಬಾರಿ ಅಲ್ಲ 500 ಬಾರಿ ಮನವಿ ಮಾಡಿದರೂ ತಪ್ಪಿಲ್ಲ ಎಂದು ಭಾರತ ಸರ್ಕಾರಕ್ಕೆ ಸಲಹೆ ಬೇರೆ ನೀಡುತ್ತಾರೆ!. ಭಲೆ! ಅಲ್ಪಸಂಖ್ಯಾತರನ್ನು ಓಲೈಸಲು ಸೆಕ್ಯುಲರಿಸಂ ಹೆಸರಿನಲ್ಲಿ ಒಂದು ಧರ್ಮದವರು ತಪ್ಪು ಮಾಡಿದರೂ ಕ್ಷಮಿಸುವ ಔದಾರ್ಯ 66 ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಿಣಾಮವಾಗಿ ನಾವು ಈ ಮಾತುನ್ನು ಕೇಳಬೇಕಾಗಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಮಾರ್ಪಾಡಾಗಿರುವುದರ ಪರಿಣಾಮ, ಸೆಕ್ಯುಲರ್ ಅಡಿಯಲ್ಲಿ ಗುರುತಿಸಿಕೊಳ್ಳುವವರು ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ಈ ಜಾತ್ಯಾತೀತತೆ ಎಂಬುದು ಸಾರ್ವಭೌಮತೆಗೆ ಪೂರಕವಾಗಿರುವ ಬದಲು ಹಿಂದೂಗಳನ್ನು ಗುಲಾಮರನ್ನಾಗಿಸಿಕೊಂಡಿವೆ. ಜಾತ್ಯಾತೀತತೆಯಿಂದ ಓಟ್ ಬ್ಯಾಂಕ್ ರಾಜಕೀಯ ಅದರಿಂದ ವಂಶಾಡಳಿತಕ್ಕೆ ಕುಮ್ಮಕ್ಕು, ನಂತರ ಭ್ರಷ್ಟಾಚಾರ, ದೌರ್ಜನ್ಯ, ಮುಂದೊಂದು ದಿನ ಪರದೇಶಿಯರ ಆಡಳಿತ.... ಒಬ್ಬ ರಾಜಕಾರಣಿ ಹಿಂದೂ ರಾಷ್ಟ್ರೀಯವಾದಿ ಎಂದು ಹೇಳಿದರೆ ಸ್ವತಃ ಹಿಂದೂ ರಾಜಕಾರಣಿಗಳು ತಮಗೆ ಆಪ್ಯಾಯಮಾನವಾಗಿರುವ ಅಲ್ಪಸಂಖ್ಯಾತರ ಮನಸ್ಸಿಗೆ ನೋವುಂಟಾಗುತ್ತದೆ ಎಂದು ಬೊಬ್ಬೆ ಹಾಕುತ್ತಾರೆ. ಸುಳ್ಳು ಸೆಕ್ಯುಲರಿಸಂ ಅಡಿಯಲ್ಲಿ ಇಂತಹ ಮನಸ್ಥಿತಿಯನ್ನು ಹುಟ್ಟಿ ಹಾಕಿದ್ದು ನಮ್ಮ ಸ್ವತಂತ್ರ ಭಾರತದ ನಾಯಕರಾದ ಗಾಂಧಿ ಮತ್ತು ನೆಹರೂ ಅಲ್ಲವೇ? ಇಷ್ಟಕ್ಕೂ ಒಬ್ಬ ರಾಜಕಾರಣಿ, ಕಾರ್ಯಕ್ರಮವೊಂದರಲ್ಲಿ "ಬಾಂಧವರ" ಟೋಪಿ ಧರಿಸಿಲ್ಲ ಎಂದಾಗ ಜಾತ್ಯಾತೀತತೆಗೆ ಧಕ್ಕೆಯಾಗಿದೆ ಎಂದು ಬಾಯಿಬೊಡೆದುಕೊಳ್ಳುತ್ತಾರೆ. ಒಬ್ಬ ಮುಸ್ಲಿಂ ನಟ ಹಿಂದೂಗಳ ಗಣೇಶ ಹಬ್ಬದಲ್ಲಿ ಗಣೇಶನ ವಿಗ್ರಹವಿಟ್ಟು ಪೂಜೆ ಸಲ್ಲಿಸಿದರೆ ಮುಸ್ಲಿಂ ಸಮುದಾಯದ ಗಣ್ಯರು ಆತನಿಗೆ ಫತ್ವಾ ಹೊರಡಿಸುತ್ತಾರೆ. ಅದನ್ನು ಪ್ರಶ್ನಿಸಲು ಸೆಕ್ಯುಲರ್ ಮನಸ್ಥಿತಿ ಹೊಂದಿರುವವರು ಗರಬಡಿದಂತೆ ವರ್ತಿಸುತ್ತಾರೆ. ಇದೇನಾ ಸ್ವತಂತ್ರ ಪ್ರಜಾಪ್ರಭುತ್ವ ಭಾರತದ ಜತ್ಯಾತೀತತೆ. ಇದ್ಯಾವ ಸೀಮೆ ಸೆಕ್ಯುಲರಿಸಂ ಸ್ವಾಮೀ....?! ಬರೀ ರಾಜಕಾರಣದಲ್ಲೇ ಅಲ್ಲ ಕಲೆಯಲ್ಲಿಯೂ ಅಭಿವ್ಯಕ್ತಿಸ್ವಾತಂತ್ರ ಸೆಕ್ಯುಲರಿಸಂ ಎನ್ನುವುದು ಕೇವಲ ಒಬ್ಬರಿಗೇ ಸೇರಿದಂತೆ ಬಿಂಬಿತವಾಗಿರುವುದೂ ಆಶ್ಚರ್ಯದ ಸಂಗತಿ.! ಕಲೆಯಲ್ಲಿ ,ಕೊಲೆಯಲ್ಲಿ ,ತಾವು ವಾಸಿಸುತ್ತಿರುವ ದೇಶದ ರಾಜಕಾರಣಿಯ ಬಗ್ಗೆ ಅನ್ಯ ದೇಶದವರಿಗೆ ಪತ್ರ ಬರೆಯುವವರೆಗೆ ಅಲ್ಪಸಂಖ್ಯಾತರು ಏನೇ ಮಾಡಿದರೂ ಅದು ಸರಿ ಎನ್ನುವ ಮನಸ್ಥಿತಿ ಇರುವವರೆಗೂ ನಮ್ಮ ದೇಶ ಎಂಬ ಅಭಿಮಾನ ಮೂಡಲು ಹೇಗೆ ಸಾಧ್ಯ? ನಮ್ಮ ದೇಶವೆಂಬ ಅಭಿಮಾನವೇ ಇರದಿದ್ದ ಮೇಲೆ ಅಲ್ಲಿನ ಸ್ವಾತಂತ್ರ್ಯಕ್ಕೇನು ಬೆಲೆ? ಯಾವುದೋ ಮತ ಬ್ಯಾಂಕ್ ರಾಜಕಾರಣಕ್ಕೆ ಒಂದು ಸಮುದಾಯ ಮಾಡುವ ಎಲ್ಲಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯ, ಸೆಕ್ಯುಲರ್ ಹಣೆಪಟ್ಟಿ ತೊಡಿಸುವ ಮೂಲಕ ಧರ್ಮಗಳ ಬಗ್ಗೆ ಅಭಿಮಾನ ಬೆಳೆಸುವುದಕ್ಕಿಂತಲೂ ದೇಶಾಭಿಮಾನ ಬೆಳೆಸುವುದರಿಂದ ನಿಜವಾದ ಸ್ವಾತಂತ್ರ್ಯಕ್ಕೆ ಬೆಲೆ ಅಲ್ಲವೇ? ಇಷ್ಟಕ್ಕೂ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಒಂದು ಮಾತನಾಡುವುದಕ್ಕೂ ಅಧಿನಾಯಕರ ಕಟ್ಟಪ್ಪಣೆಗೆ ಕಾಯುವ ಮಹಾನುಭಾವರ ಆಡಳಿತದಲ್ಲಿ ಈ ರೀತಿಯ ಬದಲಾವಣೆ ನಿರೀಕ್ಷಿಸಲು ಸಾಧ್ಯವೆ?
ಮೈಸೂರು,ಮಾ.೨೭(ಎಂಟಿವೈ)- ಆಸ್ಪತ್ರೆಗಳಲ್ಲಿ ದಾಖಲಾಗುವÀ ರೋಗಿಗಳ ಮೇಲೆ ಆಸ್ಪತ್ರೆ ಸಿಬ್ಬಂದಿಗಳು ಕಾಳಜಿ ವಹಿಸಿದಾಗ(ಕೇರ್ ಕಂಪ್ಯಾನಿಯನ್) ಮಾತ್ರ, ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರೊಂದಿಗೆ ಸದೃಢ ರನ್ನಾಗಿ ಮಾಡುತ್ತದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನೂರಾಹೆಲ್ತ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ೩ ದಿನಗಳ ಕಾಲ ನಡೆದ ಶುಶ್ರೂಷÀಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರೋಗಿಗಳಿಗೆ ಖಾಯಿಲೆಗಳು ಮಾತ್ರ ಇರುವುದಿಲ್ಲ. ಅವರಿಗೆ ಭಾವನೆಗಳು ಇರುತ್ತವೆ. ಎಷ್ಟೋ ರೋಗಿಗಳಿಗೆ ವೈದ್ಯರ ಬಳಿ ಮನಬಿಚ್ಚಿ ಮಾತನಾಡಲು ಆಗುವುದಿಲ್ಲ. ರೋಗಿಗಳಿಗೆ ಕೇವಲ ಶಸ್ತçಚಿಕಿತ್ಸೆ, ಆಂಜಿಯೋಗ್ರಾA, ಆಂಜಿಯೋಪ್ಲಾಸ್ಟ್ ಮಾಡಿದರೆ ಅವರ ಆರೋಗ್ಯ ಪರಿಪೂರ್ಣವಾಗುವುದಿಲ್ಲ. ಹಲವು ರೋಗಿ ಗಳಿಗೆ ಅವರಿಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಲು ಸಾಧ್ಯವಾಗುವುದಿಲ್ಲ. ಇದರಿಂದ ಉತ್ತರ ಸಿಗದಂತಹ ಪ್ರಶ್ನೆಗಳು ರೋಗಿಗಳಲ್ಲಿ ರುತ್ತವೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಶುಶ್ರೂಷÀಕಿ ಯರು ಮಾಡಬೇಕಾಗಿರುತ್ತದೆ ಎಂದರು. ಜಯದೇವ ಆಸ್ಪತ್ರೆಯಲ್ಲಿ ರೋಗಿಗಳಿಗೆ ಇನ್ನಷ್ಟು ಕೇರ್ ಮಾಡುವುದಕ್ಕೆ ಸಂಬA ಧಿಸಿದಂತೆ ಶುಶ್ರೂಷಕಿಯರಿಗೆ ತರಬೇತಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಮೈಸೂರು ಮತ್ತು ಗುಲ್ಬರ್ಗದ ೨೦ ಶುಶ್ರೂಷಕರಿಗೆ ತರಬೇತಿ ನೀಡಲಾಗಿದೆ. ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ಕೋ-ಆರ್ಡಿನೇಟರ್‌ಗಳು ಫೋನ್ ಮೂಲಕ ಫೀಡ್‌ಬ್ಯಾಕ್ ತೆಗೆದು ಕೊಂಡು ರೋಗಿಗಳ ಸಂಪರ್ಕದಲ್ಲಿರಬೇಕು. ಅಗತ್ಯ ಸಲಹೆ ಸೂಚನೆ ನೀಡಬೇಕು. ಇದರಿಂದ ಸಾವಿನ ಪ್ರಮಾಣವು ಕಡಿಮೆಯಾಗುತ್ತದೆ. ಆಸ್ಪತ್ರೆಯ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದು ಸಲಹೆ ನೀಡಿದರು. ರೋಗಿಗಳ ಒಡನಾಡಿ, ಕುಟುಂಬದ ಸದಸ್ಯರಿಗೆ ರೋಗಿಗಳ ಸ್ಥಿತಿಗತಿ ಹಾಗೂ ನೋಡಿಕೊಳ್ಳುವ ಕುರಿತಂತೆ ಮಾಹಿತಿ ನೀಡಬೇಕು. ಆಸ್ಪತ್ರೆಯಲ್ಲಿ ಶುಶ್ರೂಷಕಿಯರಿಂದ ಆತ್ಮಸ್ಥೆöÊರ್ಯದ ಮಾತು ಗಳಾಡಿದರೆ ರೋಗಿಗಳಲ್ಲಿರುವ ಆತಂಕ, ಹೆದರಿಕೆ ನಿವಾರಣೆಯಾಗಲಿದೆ. ಆಸ್ಪತ್ರೆಯಲ್ಲಿ ರಿಜಿಸ್ಟರ್ ಆಗಿರುವ ರೋಗಿಗಳ ವ್ಯಾಟ್ಸ್ಪ್ ಗ್ರೂಫ್‌ಗೆ ೦೮೦-೪೫೬೯೧೨೭೪ಗೆ ಮಿಸ್ಡ್ಕಾಲ್ ಕೊಟ್ಟರೆ ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದರು. ಇದೆ ಸಂದರ್ಭದಲ್ಲಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಅಭಿನಂದಿಸ ಲಾಯಿತು ಹಾಗೂ ತರಬೇತಿಯಲ್ಲಿ ಭಾಗ ವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡ ಲಾಯಿತು. ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ, ಕೇರ್ ಕಂಪ್ಯಾನಿಯನ್ ನಿರ್ದೇಶಕ ಡಾ. ಸೀಮಾಮೂರ್ತಿ, ಹೆಚ್.ಜಿ. ಆನಂದ್, ಡಾ.ಶಂಕರಶಿರಾ, ಡಾ. ವೀರೇಶ್ ಪಾಟೀಲ್, ಡಾ.ದೇವರಾಜ್, ಡಾ.ಮಂಜುನಾಥ್, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿಆರ್‌ಒ ವಾಣ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಯಾಕೆ ಈಗ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ? ಯಾಕೆಂದರೆ ಅವರದ್ದೇ ಪಕ್ಷದ ಒಬ್ಬ ನಿಷ್ಟಾವಂತ ಕಾರ್ಯಕರ್ತನ ಹತ್ಯೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಸಹಿತ ಸಂಘಪರಿವಾರದ ಕಾರ್ಯಕರ್ತರ ಹತ್ಯೆಗಳಾಗುತ್ತಿದ್ದವು. ಆಗಲೂ ಇದೇ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದರು. ಈಗಲೂ ಹೋರಾಟ ಮಾಡುತ್ತಿದ್ದಾರೆ. ಆಗ ಇವರು ಪ್ರತಿಭಟಿಸಲು ನಿಂತಾಗ ಯಾರ ವಿರುದ್ಧ ಎಂದು ಕರೆಕ್ಟಾಗಿ ಗೊತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಹತ್ಯೆಗಳಾಗುವಾಗ ಹಿಂದೂ ಕಾರ್ಯಕರ್ತರಲ್ಲಿ ಅಸಮಾಧಾನದ ಗೆರೆಗಳು ಮೂಡಲು ಶುರುವಾಯಿತು. ಯಾರಲ್ಲಿ ದು:ಖ ತೋಡಿಕೊಳ್ಳುವುದು. ಯಾರಲ್ಲಿ ನ್ಯಾಯ ಕೇಳುವುದು. ಹೋರಾಟಕ್ಕೆ ನಿಂತಾಗ ಯಾರ ವಿರುದ್ಧ ಎಂದು ಗೊಂದಲ ಆರಂಭದಲ್ಲಿ ಇತ್ತು. ಆ ಗೊಂದಲ ತುಂಬಾ ಸಮಯ ಗೊಂದಲವಾಗಿಯೇ ಉಳಿಯಲಿಲ್ಲ. ಹರ್ಷಾ ಕೊಲೆಯಾದಾಗ ಆ ಗೊಂದಲ ಇತ್ತು ನಿಜ. ಆದರೆ ಯಾವಾಗ ಸುಳ್ಯದ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾದಾಗ ಆ ಗೊಂದಲ ಉಳಿದಿಲ್ಲ. ಯಾಕೆಂದರೆ ಈ ಎಲ್ಲಾ ಹತ್ಯೆಗಳನ್ನು ತಡೆಯಬಹುದಿತ್ತು, ಆದರೆ ತಡೆಯುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಕಾರ್ಯಕರ್ತರಿಗೆ ಮನದಟ್ಟಾಗಿದೆ. ಅದಕ್ಕಾಗಿ ಅವರು ಇತಿಹಾಸದಲ್ಲಿ ಮೊದಲ ಬಾರಿ ಈ ಪ್ರಮಾಣದಲ್ಲಿ ತಮ್ಮದೇ ನಾಯಕರ ವಿರುದ್ಧ ಕೆಂಡಕಾರುತ್ತಿದ್ದಾರೆ. ಹಿಂದೆ ಹೀಗೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಜನರು ಬೀದಿಗೆ ಇಳಿಯುತ್ತಾ ಇದ್ದರೆ ಆಗ ಇದೇ ಬಿಜೆಪಿ ನಾಯಕರಿಗೆ ಖುಷಿಯಾಗುತ್ತಿತ್ತು. ಮತಗಳ ಧ್ರುವೀಕರಣವಾಗುತ್ತಿದೆ ಎನ್ನುವ ಸ್ಪಷ್ಟ ಸಂದೇಶ ಸಮಾಧಾನ ತರುತ್ತಿತ್ತು. ಆದರೆ ಈಗ ಪರಿಸ್ಥಿತಿ ರಿವಸ್ಸ್ ಆಗಿದೆ. ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿಯದ್ದೇ ಕಾರ್ಯಕರ್ತರು ಹತ್ಯೆಗೊಳಗಾಗುತ್ತಿದ್ದಾರೆ. ಆವತ್ತು ಕಾಂಗ್ರೆಸ್ ಸರಕಾರ ಇದ್ದಾಗ ಬೀದಿಗೆ ಇಳಿದವರೇ ಈಗ ಮತ್ತೆ ಬೀದಿಗೆ ಇಳಿದಿದ್ದಾರೆ. ಒಂದೆರಡು ಸಲ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರೆ ಜನ ನಂಬುತ್ತಾರೆ. ಆದರೆ ಅದೇ ಚರ್ವಿತಚರ್ವಣ ಹೇಳಿಕೆಗಳು ಹೊರಬಂದರೆ ನಂಬಲು ಸಾಧ್ಯವಿದೆಯಾ? ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ, ಗೃಹಸಚಿವರು ಹೇಳುತ್ತಿದ್ದಾಗ ಅಲ್ಲಿಯೇ ಪಕ್ಕದ ಜೈಲಿನಲ್ಲಿ ಅದೇ ಹರ್ಷಾ ಕೊಲೆ ಆರೋಪಿಗಳು ಮಜಾ ಉಡಾಯಿಸಿದ ಸುದ್ದಿ ರಾಜ್ಯದ ಜನರಿಗೆ ಟಿವಿಯಲ್ಲಿ ಕಾಣುತ್ತಿದ್ದರೆ ಯಾವ ಬಿಜೆಪಿ ಅಥವಾ ಹಿಂದೂ ಕಾರ್ಯಕರ್ತ ತಾನೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುವ ಹೇಳಿಕೆಯನ್ನು ನಂಬುತ್ತಾನೆ. ಆದರೂ ಮೇಲೆ ನೋಡಿ ಉಗಿಯುವುದು ಬೇಡಾ ಎಂದು ಬಿಜೆಪಿ ಕಾರ್ಯಕರ್ತರು ಸುಮ್ಮನಿದ್ದರು. ಆದರೆ ಯಾವಾಗ ಪ್ರವೀಣ್ ನೆಟ್ಟಾರು ಎಂಬ ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯನನ್ನು ಆತನದ್ದೇ ಅಂಗಡಿಯ ಹೊರಗೆ ಅಟ್ಟಾಡಿಸಿ ಕೊಂದು ಹಾಕಿದರಲ್ಲ, ಆಗ ಇದೇ ಕಾರ್ಯಕರ್ತರ ಸಹನೆಯ ಕಟ್ಟೆ ಓಡೆಯಿತು. ಅಷ್ಟೂ ಕೋಪ ಹೋಗಿರುವುದು ಇದೇ ಆರಗ ಜ್ಞಾನೇಂದ್ರರ ಮೇಲೆ. ಇವರ ಸರಕಾರ ಶೂಟೌಟ್ ಅಂತೂ ಮಾಡುವುದಿಲ್ಲ. ಆದರೆ ಕನಿಷ್ಟ ಹಂತಕರ ಕೈಕಾಲು ಮುರಿದು ಮೂಲೆಗೆ ಹಾಕಬಹುದಲ್ಲ. ಅದು ಕೂಡ ಮಾಡದೇ ಜೈಲಿನೊಳಗೆ ಬಿರಿಯಾನಿ, ವಿಡಿಯೋ ಕಾಲ್ ಗೆ ಅವಕಾಶ ಕೊಡುತ್ತಾರಲ್ಲ, ಇನ್ನು ಇದರ ನ್ಯಾಯ ಕೇಳಲು ಹರ್ಷಾ ಸಹೋದರಿ ಅರಗ ಬಳಿ ಅವರು ಮಾತನಾಡಿದ ರೀತಿ ಕೂಡ ಜನರಿಗೆ ಬೇಸರ ತಂದಿದೆ. ಹೀಗೆ ಇರುವಾಗಲೇ ಪ್ರವೀಣ್ ಹತ್ಯೆಯಾಗಿದೆ. ಪ್ರವೀಣ್ ಹತ್ಯೆ ಒಂದು ಸಂಚು ಎನ್ನುವುದು ಸುಳ್ಯದಲ್ಲಿ ಇರುವವರಿಗೂ, ಸುಳ್ಯದ ಹೊರಗಿನವರಿಗೂ ಚೆನ್ನಾಗಿ ಗೊತ್ತು. ಗೊತ್ತಿಲ್ಲದಿರುವುದು ಬೆಳ್ಳಾರೆ ಸಹಿತ ಆಸುಪಾಸಿನ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾತ್ರ. ಒಂದು ವಾರದ ಹಿಂದೆ ಮಸೂದ್ ಎನ್ನುವ ಮುಸ್ಲಿಂ ಯುವಕನ ಮೇಲೆ ಹಿಂದೂ ಯುವಕರು ಹಲ್ಲೆ ಮಾಡಿದ್ದರು. ಅದರಿಂದ ಆ ಯುವಕ ಮೃತಪಟ್ಟಿದ್ದ. ಆರೋಪಿಗಳು ಈಗ ಜೈಲಿನಲ್ಲಿದ್ದಾರೆ. ಆಗಲೇ ಕೆಲವರು ಮಸೂದ್ ಹತ್ಯೆಗೆ ವಾರದೊಳಗೆ ಪ್ರತೀಕಾರ ಮಾಡುತ್ತೇವೆ ಎಂದಿದ್ದರು. ಇದು ಆವತ್ತು ಇಡೀ ಸುಳ್ಯಕ್ಕೆ ಗೊತ್ತಿತ್ತು. ಪೊಲೀಸರು ಗುಪ್ತಚರ ಇಲಾಖೆಯ ಸಹಾಯ ಪಡೆದು ಹಾಗೆ ಹೇಳಿದವರನ್ನು ಬಂಧಿಸಬಹುದಿತ್ತು. ಆದರೆ ಮಾಡಿರಲಿಲ್ಲ. ಮತಾಂಧರು ಮೂರು ಗುಂಪುಗಳಲ್ಲಿ ಯಾರು ಸಿಗುತ್ತಾರೆ ಎಂದು ಹುಡುಕುತ್ತಿದ್ದರಂತೆ. ಎರಡು ದಿನಗಳ ಮೊದಲು ಒಂದು ಗುಂಪು ಒಬ್ಬ ಹಿಂದೂವಿನ ಹತ್ಯೆಗೆ ಸ್ಕೆಚ್ ಹಾಕಿ ಕುಳಿತಿದ್ದಾಗ ಅವನು ಸ್ವಲ್ಪದರಲ್ಲಿಯೇ ಪಾರಾಗಿದ್ದ ಎನ್ನುವ ಮಾಹಿತಿ ಇದೆ. ಇದೆಲ್ಲವೂ ಪೊಲೀಸರ ಗಮನಕ್ಕೆ ಬರದೇ ಇರಲು ಸಾಧ್ಯವೇ? ಆದರೂ ಕ್ಯಾರಲೆಸ್ ಮಾಡಲಾಗಿತ್ತು. ಇನ್ನು ಪೊಲೀಸರು ಬೀಸಿದ ಲಾಠಿಗೆ ಕೆಲವರ ತಲೆ ಓಡೆದಿದೆ. ಅಷ್ಟಕ್ಕೂ ಪೊಲೀಸರು ಲಾಠಿ ಬೀಸಿದ್ದು ಎಂದು ಸರಕಾರ ಹೇಳಿದರೂ ಹೇಳಬಹುದು. ಆದರೆ ಒಂದು ಪ್ರತಿಭಟನೆಯಲ್ಲಿ ಬಿಜೆಪಿಯ ಉನ್ನತ ನಾಯಕರು ಇದ್ದಾಗ ಅವರದ್ದೇ ಪಕ್ಷದ ಕಾರ್ಯಕರ್ತರು ಎದುರಿಗೆ ಇರುವಾಗ ಲಾಠಿ ಬೀಸಲು ಹೋಗುವುದು ಎಂದರೆ ಪೊಲೀಸ್ ಇಲಾಖೆಗೂ ಸರಕಾರಕ್ಕೂ ಪರಸ್ಪರ ಸಂವಹನ ಇಲ್ಲ ಎಂದೇ ಅರ್ಥ. ಒಂದು ವೇಳೆ ಪೊಲೀಸರೇ ಸರಕಾರದ ವಿರುದ್ಧ ಹೋಗಿ ಲಾಠಿ ಬೀಸಿ ಕೆಲವರ ತಲೆ ಓಡೆದರು ಎಂದೇ ಇಟ್ಟುಕೊಳ್ಳೋಣ. ಆದರೆ ಇದೇ ಪೊಲೀಸ್ ವ್ಯವಸ್ಥೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಈಡಿ ವಿರುದ್ಧ ಪ್ರತಿಭಟನೆ ಮಾಡಿದಾಗ ಎಷ್ಟು ಶಾಂತವಾಗಿತ್ತು. ಅಲ್ಲೆಲ್ಲೋ ಇದೇ ವಿಷಯದಲ್ಲಿ ರೈಲಿಗೆ ಬೆಂಕಿ ಹಚ್ಚಲಾದರೂ ಲಾಠಿ ಬೀಸಿಲ್ಲ. ಪ್ರತಿಭಟನಾಕಾರರು ಅಲ್ಲಿಯೇ ಇದ್ದ ಮಸೀದಿಗೆ ಕಲ್ಲು ಹೊಡೆಯುವುದನ್ನು ತಡೆಯುವುದಕ್ಕಾಗಿ ಲಾಠಿಚಾರ್ಜ್ ಮಾಡಲಾಯಿತು ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಪೊಲೀಸರು ಯಾರನ್ನು ಹೊಡೆದಿದ್ದಾರೆ ಎನ್ನುವುದು ವಿಡಿಯೋದಲ್ಲಿ ದಾಖಲಾಗಿದೆ. ಅದನ್ನು ಇಲ್ಲಾ ಎಂದು ಹೇಳಲು ಸಾಧ್ಯವಿಲ್ಲ. ಕೊನೆಯದಾಗಿ ರಾಜೀನಾಮೆ ಪರ್ವ ಶುರುವಾಗಿದೆ. ಪಕ್ಷದ ವಿವಿಧ ಪದಾಧಿಕಾರಿಗಳಾಗಿದ್ದವರು ರಾಜೀನಾಮೆ ಕೊಡುತ್ತಿದ್ದಾರೆ. ಅವರ ಮನವೊಲಿಸಿ ಸರಿ ಮಾಡೋಣ ಎಂದು ಬಿಜೆಪಿ ನಾಯಕರು ಅಂದುಕೊಳ್ಳಬಹುದು. ನಮ್ಮ ಕಾರ್ಯಕರ್ತರು ನಮಗೆ ಬಿಟ್ಟು ಬೇರೆಯವರಿಗೆ ಎಲ್ಲಿ ವೋಟ್ ಹಾಕುತ್ತಾರೆ. ನಾಲ್ಕು ದಿನ ಕೋಪ ಇರುತ್ತದೆ. ನಂತರ ಸರಿಯಾಗುತ್ತದೆ ಎನ್ನುವ ಮನಸ್ಥಿತಿಯಿಂದ ಬಿಜೆಪಿ ಹೊರಬರಬೇಕು. ಇಲ್ಲದಿದ್ದರೆ ಐದು ವರ್ಷ ರೆಸ್ಟ್ ಸಿಗುವ ಸಾಧ್ಯತೆ ಹೆಚ್ಚಾಗಲಿದೆ!
ಆರು ಮಂಗಳವಾರ ಕ್ರಮ ತಪ್ಪದೇ ಈ ನಾಲ್ಕು ಕೆಲಸ ಮಾಡಿದರೆ ಲಕ್ಷ್ಮೀದೇವಿ ಅನುಗ್ರಹ ನಿಮಗಿರಲಿದೇ ಆರು ಮಂಗಳವಾರಗಳು ಈ ಕೆಲಸವನ್ನು ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಇದರಿಂದ ಶ್ರೀ ಮಹಾಲಕ್ಷ್ಮಿಯ ಅನುಗ್ರಹವು ನಿಮಗೆ ನಿಮ್ಮ ಮನೆಗೆ ಬೀಳುತ್ತದೆ ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಮಾಯವಾಗುತ್ತದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588 ಇನ್ನು ಮೊದಲನೆಯದಾಗಿ ಎರಡು ಚಿಕ್ಕ ಚಿಕ್ಕ ಮಡಿಕೆಗಳನ್ನು ಹರಿಯುತ್ತಿರುವ ನದಿಗೆ ಖಾಲಿಯಾಗಿ ಹರಿಯಲು ಬಿಡಿ ಇದೇ ರೀತಿ ಕ್ರಮ ತಪ್ಪದೇ 6 ಮಂಗಳವಾರಗಳು ಮಾಡಿದರೆ ಶ್ರೀಲಕ್ಷ್ಮಿಯ ಅನುಗ್ರಹವು ನಿಮಗೆ ಒಲಿಯುತ್ತದೆ ಎರಡನೆಯದಾಗಿ ನಿಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೆ ಸುಲಿದ ತೆಂಗಿನಕಾಯಿಗೆ ಕುಂಕುಮ ಅರಿಷಿಣ ಹಚ್ಚಿ ನಿಮ್ಮ ಇಷ್ಟಾರ್ಥವನ್ನು ಧ್ಯಾನಿಸಿ ಅದನ್ನು ಹರಿಯುವ ನೀರಿಗೆ ಅರಿಯಲು ಬಿಟ್ಟರೆ ತುಂಬಾ ಒಳ್ಳೆಯದಾಗುತ್ತದೆ ಈ ರೀತಿ 6ವಾರಗಳ ಮಾಡಿದರೆ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತದೆ ಇನ್ನು ಮೂರನೆಯದಾಗಿ ನಮ್ಮ ಪುರಾತನ ಸಂಪ್ರದಾಯವಾದ ಅರ್ಥ ದರ್ಶನದಿಂದ ಬೆಳಿಗ್ಗೆ ಎದ್ದ ತಕ್ಷಣ ಎರಡು ಕರಗಳನ್ನು ನಿಮ್ಮ ಕಣ್ಣಿಗೆ ಹಚ್ಚಿಕೊಂಡು ಅಂಗೈಯನ್ನು ತಿಕ್ಕಿ ಕಣ್ಣಿಗೆ ಹಚ್ಚಿಕೊಂಡು ಇಡು ನಮಸ್ಕರಿಸಿ ನೋಡಿಕೊಳ್ಳಿ ಇತರ ದರ್ಶನದಿಂದ ಶ್ರೀ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಒಲಿದು ಬರುತ್ತದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588
ಬೆಟ್ಟದ ನಡುವೆ ಇದ್ದ ಆ ಮುರುಕು ಬಂಗಲೆಯ ಹಿಂಭಾಗದಲ್ಲಿರುವ ಪುಟ್ಟ ಗುಡಿಸಲಿನಲ್ಲಿ ಅವನೇಕೆ ಮುದುರಿ ಕುಳಿತಿದ್ದ? ಅವನ ಪಕ್ಕದಲ್ಲಿದ್ದ ಮೂಟೆಗಳಲ್ಲಿ ಏನಿದ್ದವು? ಮತ್ತೆ ನಡೆಯತೊಡಗಿದೆವು. ಒಂದು ಗಂಟೆ ನಡೆದ ನಂತರ, ಒಮ್ಮೆಗೇ ದೊಡ್ಡ ದೊಡ್ಡ ಮರಗಳ ಸಂಖ್ಯೆ ಜಾಸ್ತಿಯಾಗತೊಡಗಿತು. ಬಿಳಲುಗಳು, ಪೊದೆಗಳು, ಕುರುಚಲು ಗಿಡಗಳ ಸಂಖ್ಯೆಯೂ ಜಾಸ್ತಿಯಾಯಿತು. ಬಿಸಿಲೇರಿದ್ದರೂ, ಸಾಕಷ್ಟು ನೆರಳಿದ್ದುದರಿಂದ, ನಡೆಯು ವಾಗ ಸುಸ್ತಾಗಲಿಲ್ಲ. ಡಾ. ಕಲ್ಲೂರಾಯರು ತಂದಿದ್ದ ಕ್ಯಾನಿನ ನೀರು ಬಾಯಾರಿಕೆ ತಣಿಸಿತು. ಸ್ವಲ್ಪ ದೂರ ನಡೆದ ನಂತರ, ಒಂದು ಮುರುಕಲು ಗೋಡೆ ಕಾಣಿಸಿತು. ಅದು ಒಂದು ಪಾಗಾರ. ಅದರಾಚೆ, ಮಂಗಳೂರು ಹೆಂಚು ಹೊದಿಸಿದ, ತುಸು ದೊಡ್ಡದಾದ ಕಟ್ಟಡ ಕಾಣಿಸಿತು. ‘ಇದೇ ಸಾರ್, ಬಂಗಲೆ! ಅಲ್ವಾ! ಬ್ರಿಟಿಷರು ಕಟ್ಟಿದ್ದು ಇನ್ನೂ ಇದೆ’ ಎಂದ ರಾಮಸ್ವಾಮಿ, ಸ್ವಲ್ಪ ಉದ್ವೇಗದಿಂದಲೇ ನೇರವಾಗಿ ಆ ಮುರುಕಲು ಕಟ್ಟಡದತ್ತ ನಡೆದ. ಕಲ್ಲೂರಾ ಯರು ಸಹ ಕುತೂಹಲದಿಂದ ನೋಡಿ, ‘ಯೆಸ್’ ಎನ್ನುತ್ತಾ ತಲೆಯಾಡಿಸಿದರು. ಸುತ್ತಲೂ ಬೆಳೆದಿದ್ದ ಕಾಡಿನ ನಡುವೆ, ಒಂದಷ್ಟು ಜಾಗವನ್ನು ತೆರೆವು ಮಾಡಿ, ಬಯಲನ್ನಾಗಿಸಿ ದ್ದರು. ಅದರ ನಡುವೆ ಈ ಬಂಗಲೆ! ಅದು ಸುಸ್ಥಿತಿಯಲ್ಲಿದ್ದಾಗ, ಅದರೊಳಗೆ ಇದ್ದವರು, ಒಂದು ಕೋವಿ ಹಿಡಿದು, ಸುತ್ತಲೂ ತೆರವು ಮಾಡಿದ್ದ ಜಾಗದಲ್ಲಿ ಕಂಡ ಯಾವುದೇ ಪ್ರಾಣಿಯತ್ತ ಬೇಕಾದರೂ ಗುಂಡು ಹಾರಿಸಬಹುದಿತ್ತು. ಆ ಕಟ್ಟಡದ ಗೋಡೆಯ ಗಾರೆ ಕಿತ್ತುಹೋಗಿತ್ತು. ಮರದ ಬಾಗಿಲುಗಳು ಅರ್ಧಂಬರ್ಧ ಮುರಿದು ಬಿದ್ದಿದ್ದವು. ಕಿಟಿಕಿ ಮತ್ತು ಬಾಗಿಲಿನ ಕೆಲವು ಹಲಗೆಗಳನ್ನು ಮತ್ತೊಮ್ಮೆ ಜೋಡಿಸಿ, ರಿಪೇರಿ ಮಾಡುವ ಯತ್ನ ಮಾಡಿದ್ದು ಗೊತ್ತಾಗುತ್ತಿತ್ತು. ಛಾವಣಿಯ ಮೇಲೆ ಹುಲ್ಲುಗಿಡಗಳು, ಕೆಲವು ಬಳ್ಳಿಗಳು ಬೆಳೆದಿದ್ದವು. ಆದರೂ ಅದೊಂದು ಬಂಗಲೆ! ಕಾಲದಿಂದ ಕಾಲಕ್ಕೆ ರಿಪೇರಿ ಇಲ್ಲದೇ, ಭೂತಬಂಗಲೆಯ ರೀತಿ ಕಾಣಿಸುತ್ತಿತ್ತು. ನಿಧಾನವಾಗಿ ಅದರ ಸುತ್ತಲೂ ಇದ್ದ ಖಾಲಿ ಜಾಗದಲ್ಲಿ ಒಂದು ಸುತ್ತು ಹಾಕಿ, ಅಲ್ಲೇ ನೆಲಕ್ಕೆ ಹಾಸಿದ್ದ ಚಪ್ಪಡಿ ಕಲ್ಲಿನ ಮೇಲೆ ಕುಳಿತೆವು. ನಡೆದು ನಡೆದು ಸುಸ್ತಾಗಿತ್ತು. ನೀರು ಕುಡಿದೆವು. ‘ನಾನು ಎಲ್ಲೋ ಓದಿದ್ದೆ. ಈ ಕಾಡಿನಲ್ಲಿ ಬ್ರಿಟಿಷರು ಬಂಗಲೆ ಕಟ್ಟಿದ್ದರು ಅಂತ. ಆದರೆ, ಅದರ ಗೋಡೆಗಳು ಇನ್ನೂ ಇವೆ, ಛಾವಣಿಯೂ ಇದೆ ಎಂದು ಕಂಡು ಆಶ್ಚರ್ಯವಾಗಿದೆ. ಬೇಸಗೆಯ ಸಮಯದಲ್ಲಿ ಬ್ರಿಟಿಷರು ಇರುವುದಕ್ಕೆ ಮಾಡಿಕೊಂಡ ಬಂಗಲೆ ಇದು’ ಎಂದರು ಕಲ್ಲೂರಾಯರು. ನಮ್ಮ ತಂಡದ ಮೂವರಿಗಿಂತ ವಯಸ್ಸಿನಲ್ಲಿ ಅವರು ನಾಲ್ಕಾರು ವರ್ಷ ದೊಡ್ಡವ ರಾಗಿದ್ದ ಅವರು, ನೋಡನೋಡು ತ್ತಿದ್ದಂತೆಯೇ ನಮ್ಮ ಆ ಪುಟ್ಟ ತಂಡದ ನಾಯಕರಾಗಿ ರೂಪುಗೊಂಡ ಪರಿ ವಿಸ್ಮಯ ಮೂಡಿಸಿತು! ನಾವೆಲ್ಲರೂ ಅವರ ಅಭಿಪ್ರಾಯಗಳನ್ನು ಕೇಳುತ್ತಾ, ಅವರ ಮಾತಿಗೆ ಬೆಲೆಕೊಡಲು ಆರಂಭಿಸಿದ್ದೆವು. ಇವತ್ತು ತಾನೇ ಪರಿಚಯಗೊಂಡಿದ್ದ ರಾಮಸ್ವಾಮಿಯೂ, ತನಗೆ ಸ್ಥಳೀಯ ವಿವರ ಗೊತ್ತಿದೆ ಎಂದು ಬಡಾಯಿ ಕೊಚ್ಚಿ ಕೊಂಡರೂ, ಕಲ್ಲೂರಾಯರ ತಿಳಿವಳಿಕೆಗೆ ಗೌರವ ಕೊಡುತ್ತಿದ್ದ. ಭಾಸ್ಕರನು ಇಡ್ಲಿ ಡಬ್ಬಿ ತೆರೆದು, ಮುತ್ತುಗದ ಎಲೆಯಲ್ಲಿ ಇಡ್ಲಿ, ಚಟ್ನಿ, ಉಪ್ಪಿಟ್ಟು ಹಾಕಿ ಎಲ್ಲರಿಗೂ ಕೊಟ್ಟ. ತಿಂಡಿ ತಿನ್ನುವಾಗ ರಾಮಸ್ವಾಮಿಯದು ವಿಪರೀತ ಮಾತು, ಒಟಗುಟ್ಟುವಿಕೆ. ಇಡ್ಲಿ ಉಪ್ಪಿಟ್ಟು ತಿಂದ ನಂತರ, ನಾನು ಒಂದು ಮರದ ಬುಡದಲ್ಲಿ ನಿಂತು, ಕೈತೊಳೆಯುತ್ತಾ, ಬಾಯಿಗೆ ನೀರು ಹಾಕಿಕೊಂಡು ಮುಕ್ಕಳಿಸುತ್ತಾ ಇದ್ದೆ. ನನ್ನ ಹಿಂದಿನಿಂದ ಒಂದು ದನಿ ಕೇಳಿಸಿತು. ‘ನಮಸ್ಕಾರ ಸೋಮಿ’ ನಾನು ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸುತ್ತಾ ಇದ್ದುದರಿಂದ, ತಕ್ಷಣ ತಿರುಗಿ ನೋಡಲು ಸಾಧ್ಯವಾಗಲಿಲ್ಲ, ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಮಾಡಲೂ ಸಾಧ್ಯವಾಗಲಿಲ್ಲ. ಈ ಕಾಡಿನ ಮಧ್ಯೆ ನನಗೆ ನಮಸ್ಕಾರ ಮಾಡುವವರಾರಪ್ಪಾ ಎಂದು ಅಚ್ಚರಿಗೊಂಡೆ. ‘ಯಾರಯ್ಯಾ ನೀನು?’ ಕಲ್ಲೂರಾಯರ ಗದರಿಕೆಯ ಪ್ರಶ್ನೆ. ‘ನಾವು ಸೋಮಿ’ ‘ನಾವು ಅಂದರೆ ಯಾರು?’ ‘ನಾವು ಸೋಮೆ. ಈ ಸೋಮೇರಿಗೆ ಗೊತ್ತೈತೆ ನಾವು ಯಾರು ಅಂತ’ ಎನ್ನುತ್ತಾ ಆ ದನಿ ಇನ್ನಷ್ಟು ಹತ್ತಿರ ಬಂತು. ಬಾಯಲ್ಲಿದ್ದ ನೀರನ್ನು ಮರದ ಬುಡಕ್ಕೆ ಉಗುಳಿ, ತಿರುಗಿ ನೋಡಿದೆ. ನನ್ನೆದರು ತೆಳ್ಳಗಿನ ಆಕೃತಿ ನಿಂತಿತ್ತು. ಸುಮಾರು ಆರು ಅಡಿ ಎತ್ತರ, ತಲೆಗೊಂದು ಮಾಸಲು ಬಟ್ಟೆಯ ಮುಂಡಾಸು. ಆ ಮುಂಡಾಸನ್ನು ಕಟ್ಟಿದ ರೀತಿಗೆ, ತಲೆ, ಕಣ್ಣು, ಭುಜ ಎಲ್ಲವೂ ಬಹುಪಾಲು ಮುಚ್ಚಿ ಹೋಗಿತ್ತು. ಪೂರ್ತಿ ಜೂಲುಜೂಲಾದ ಅರ್ಧತೋಳಿನ ಅಂಗಿ, ಅಲ್ಲಲ್ಲಿ ಹರಿದುಹೋಗಿತ್ತು. ಆತನ ಭುಜದ ಮೇಲೆ ನಾಲ್ಕಾರು ಉದ್ದನೆಯ ಗಳದಂತಹ ಮರದ ಕಾಂಡಗಳಿದ್ದವು. ಎಡಗೈಯಲ್ಲಿ ಒಂದು ಸಣ್ಣ ಗೋಣಿಚೀಲದಲ್ಲಿ, ಏನನ್ನೋ ತುಂಬಿಸಿಕೊಂಡಿದ್ದ. ‘ನಾವು ಸೋಮಿ’ ಎಂದು ಆತ ಊರಗಲ ಬಾಯಿ ತೆರೆದು, ಎಲ್ಲಾ ಹಲ್ಲುಗಳನ್ನೂ ಕಾಣಿಸುವ ರೀತಿ ನಕ್ಕ. ಕೂಡಲೆ ಗೊತ್ತಾಯಿತು, ಕೆಂಚಪ್ಪ! ಬೆಳಗಿನಿಂದ ಕಾಡಿನಲ್ಲಿ ನಡೆದು, ನಾಡಿನ ಪ್ರಪಂಚದ ನೆನಪುಗಳ ಕೋಶವನ್ನು ನಾಡಿನಲ್ಲೇ ನಾನು ಬಿಟ್ಟುಬಂದಿದ್ದೆನೆ? ಒಮ್ಮೆಗೇ ಆತನ ಹೆಸರಿನ ನೆನಪು ಸಹ ಆಗಲಿಲ್ಲ. ನೆಗಡಿಯಾದವರ ರೀತಿ ಆತನ ದನಿಯೂ ಬದಲಾಗಿತ್ತು. ಆದರೆ ಮಾತನಾಡುವ ಶೈಲಿ ಅದೇ. ‘ಓ ಕೆಂಚಪ್ಪ. ಎಲ್ಲೇನೋ ಮಾಡ್ತಿ ದೀಯಾ? ನಿನ್ನ ಸ್ವರಕ್ಕೆ ಏನಾಗಿದೆ? ನೆಗಡಿನಾ?’ ಎಂದೆ ಅಚ್ಚರಿಯಿಂದ. ‘ನೆಗಡಿ ಪಗಡಿ ನಮಗೆಲ್ಲಿ ಬರುತ್ತೆ ಸೋಮೆ, ಕಾಡಲ್ಲೇ ಸುತ್ತಾಡೋ ಜನ ನಾವು. ಇಲ್ಲೇ ಸೋಮೆ ನಮ್ಮ ಗುಡ್ಲು ಇರೋದು. ಅವತ್ತು ನಿಮ್ಮ ಬ್ಯಾಂಕಿನ ಅಕವಂಟ್ ಮಾಡೋವಾಗ, ಹಿರೆಕಲ್ಲುಗುಡ್ಡ ಅಂತ ಎಡ್ರಾಸ್ ಕೊಟ್ಟಿದ್ದೆ ಸೋಮಿ, ಇದೇ ಆ ಜಾಗ. ಕುಪ್ಪೂರು ಪರಮೇಶಿಗೆ ಅದ್ಯಾವುದೋ ಮರದ ಚಕ್ಕೆ ಬೇಕಿತ್ತು. ಔಸ್ದಿಗೆ. ಅದನ್ನು ತರಾಣ ಅಂತ ಬಂದಿದ್ದೆ. ಇಲ್ಲೇ, ಈ ಬಂಗ್ಲೆ ಹಿಂಭಾಗದಲ್ಲೇ ನಮ್ಮ ಗುಡ್ಲು ಇದೆ. ಇನ್ನೊಂದು ಗುಡ್ಲು, ಬೆಟ್ಟದ ಕೆಳಗೆ ಇದೆ’ ಎಂದು ತನ್ನ ಭುಜದ ಮೇಲಿದ್ದ ಮರದ ಕೋಲುಗಳನ್ನು ಕೆಳಗೆ ಹಾಕಿದ. ಆದರೆ ಕೈಲಿದ್ದ ಗೋಣಿಚೀಲವನ್ನು ಮಾತ್ರ ಭದ್ರವಾಗಿ ಹಿಡಿದಿದ್ದ. ‘ಅಲ್ಲಾ ಕಣೋ, ಈ ಕಾಡಲ್ಲಿ ಒಬ್ಬನೇ ಹೆಂಗೆ ಸುತ್ತುತ್ತೀಯಾ? ಭಯ ಇಲ್ಲವಾ?’ ಎಂದೆ. ‘ನಮಗೆ ಅದೆಂತಾ ಭಯ ಸೋಮಿ. ಈ ಬಂಗ್ಲೆ ಹಿಂದಿನ ಗುಡ್ಲುವಿನಲ್ಲಿ ಇರ‍್ತೀನಿ. ನಮ್ಮಪ್ಪಾರ ಕಾಲದಿಂದಲೂ ಇದೇ ಗುಡ್ಲಲ್ಲಿ ಇದೀನಿ. ಒಂದ್ ಸಾರಿ ಭಾರೀ ಮಳೆಗಾಲ ಬಂದಿತ್ತು, ಆಗ ಬಂದ ದೊಡ್ಡ ಜ್ವರಕ್ಕೆ ನಮ್ಮಪ್ಪ ಅಮ್ಮ ತೀರಿಕೊಂಡದ್ದು ಇದೇ ಗುಡ್ಲಲ್ಲಿ ಸೋಮೆ. ಒಂದೊಂದು ಸಲ ಬೆಟ್ಟದ ಕೆಳಗೆ ಹಳ್ಳಿಲಿರೋ ಗುಡ್ಲುಗೆ ಹೋಗ್ತೀನಿ. ನಂಗೇನೂ ಭಯ ಇಲ್ಲ ಸೋಮೆ. ಕರಡಿ, ಚಿರತೆ ಒಂದೊಂದು ಐತೆ, ಒಂದೆರಡು ಸಲ ಈ ಬಂಗ್ಲೆ ತಾವ ಬಂದಿತ್ತು. ಆದರೆ, ಅದು ಅದರ ಪಾಡಿಗೆ ಹೋಗುತ್ತೆ, ನಾವು ಅದರ ತಂಟೆಗೆ ಹೋಗಬಾರದು ಅಷ್ಟೆ. ಚಿರತೆ ಏನೂ ಪರವಾಗಿಲ್ಲ ಸೋಮಿ, ಕರಡಿಯ ಹತ್ತಿರ ಹಗಲಿನಲ್ಲಿ ಹೋಗಲೇಬಾರದು, ತಿವಿಯೋಕೆ ಬರುತ್ತೆ’ ಎಂದ ಕೆಂಚಪ್ಪ ನಗುತ್ತಾ. ನಾವಿಬ್ಬರೂ ಲೋಕಾಭಿ ರಾಮ ಮಾತನಾಡುವುದನ್ನು ಕಂಡು ಕಲ್ಲೂರಾಯರು ನಿಬ್ಬೆರಗಾದರು. ನಾನು ಏನೋ ನೆನಪಿಸಿಕೊಂಡವನಂತೆ, ಕಲ್ಲೂರಾಯ ರತ್ತ ತಿರುಗಿ, ‘ಸಾರ್ ಇವನ ಹತ್ತಿರ ಒಂದು ಪೆಂಗೊಲಿನ್ (ಚಿಪ್ಪುಹಂದಿ) ಇತ್ತು. ನಾನು ಕಲ್ಕೆರೆಗೆ ಬಂದ ದಿನ, ಒಂದು ದಾರಕ್ಕೆ ಪೆಂಗೊಲಿನ್‌ನ್ನು ಕಟ್ಟಿಕೊಂಡು ಕಲ್ಕೆರೆಯಲ್ಲಿ ಓಡಾಡ್ತಿದ್ದ.. (ಕೆಂಚಪ್ಪನತ್ತ ತಿರುಗಿ) ಈ ಬೆಟ್ಟದಲ್ಲೂ ಚಿಪ್ಪುಹಂದಿ ಇದಾವೆ ಅಂದ್ಯಲ್ಲ, ಎಲ್ಲಿ ಇದಾವೆ?’ ಎಂದು ಕೇಳಿದೆ. ಅಷ್ಟರ ತನಕ ಎಲ್ಲಾ ಹಲ್ಲುಗಳನ್ನು ತೋರಿ ಸುತ್ತಾ ನಗುತ್ತಾ ಮಾತನಾಡುತ್ತಿದ್ದ ಕೆಂಚಪ್ಪನು, ಒಮ್ಮೆಗೇ ಗಂಭೀರನಾಗಿ, ಎಚ್ಚರಿಕೆಯಿಂದ ಮಾತನಾಡುವವನಂತೆ ‘ಇಲ್ಲಿಂದ ದೂರ ಇರೋ ಚಿಕ್ಕ ತಿರುಪತಿ ಬೆಟ್ಟದಲ್ಲಿ ಒಂದೊಂದು ಐತೆ’ ಎಂದು ಸುಮ್ಮನಾದ. ಅದು ವರೆಗೆ ಮುಕ್ತವಾಗಿ ಮಾತನಾಡುತ್ತಿದ್ದ ಆತ, ಚಿಪ್ಪುಹಂದಿಯ ಹೆಸರು ಕೇಳಿದ ಕೂಡಲೇ ತುಸು ಗಾಬರಿಗೊಂಡದ್ದು ನಮಗೆಲ್ಲಾ ಗೊತ್ತಾಯಿತು. ‘ಓಹ್, ಚಿಪ್ಪು ಹಂದಿ ಇದೆಯಾ? ನಮಗೆ ತೋರಿಸುತ್ತೀಯಾ?’ ಎಂದು ಕಲ್ಲೂರಾಯರು ಪ್ರಶ್ನಿಸಿದ ಶೈಲಿಗೆ, ಕೆಂಚಪ್ಪ ಪೂರ್ತಿ ಬೆಚ್ಚಿ ಬಿದ್ದು, ‘ಈಗ ಇಲ್ಲಿ ಇಲ್ಲ ಸೋಮಿ, ಎಲ್ಲೋ ಒಂದೊಂದು ದೂರದ ಬೆಟ್ಟದಾಗೆ ಐತೆ. ಆದರೆ ಅದನ್ನು ನೋಡೋದಿಕ್ಕೆ ರಾತ್ರಿ ಹೋಗಬೇಕು’ ಎನ್ನುತ್ತಾ, ನಿಧಾನವಾಗಿ ಬಂಗಲೆಯ ಹಿಂಭಾಗದತ್ತ ನಡೆದ. ನನ್ನನ್ನು ಕಂಡು ಇಷ್ಟಗಲ ನಗುತ್ತಾ ಸಂತಸ ವ್ಯಕ್ತಪಡಿಸಿ ಮಾತನಾಡಿಸಿದ್ದ ಅವನೀಗ, ಸಂಕೋಚ ಮುದ್ದೆಯಾಗಿ, ಮೌನವಾಗಿ ನಮ್ಮಿಂದ ತಪ್ಪಿಸಿಕೊಂಡು ಹೋಗುವವನಂತೆ ಸದ್ದು ಮಾಡದೇ ಬಂಗಲೆಯ ಹಿಂಭಾಗಕ್ಕೆ ಹೋಗಿದ್ದು ನನ್ನಲ್ಲಿ ಅಚ್ಚರಿ ಹುಟ್ಟಿ ಸಿತ್ತು. ರಾಮಸ್ವಾಮಿ ಮತ್ತು ಭಾಸ್ಕರ ಇಬ್ಬರೂ ಪರಸ್ಪರ ನೋಡಿ, ಕಣ್ಣಲ್ಲೇ ಮಾತನಾಡಿಕೊಂಡರು. ಕಲ್ಲೂರಾಯರು ಅವನು ಹೋದ ದಿಕ್ಕಿನತ್ತ ನೋಡುತ್ತಾ ನಿಂತರು. ಬಂಗಲೆಯ ಸುತ್ತಲೂ ಮರ, ಗಿಡ ಕಡಿದು ಮೈದಾನದಂತಹ ಖಾಲಿ ಜಾಗ ಮಾಡಿದ್ದರಲ್ಲ, ಅದರಲ್ಲೇ ನಡೆದು ಅವನು ಬಂಗಲೆಯ ಹಿಂಭಾಗದಲ್ಲಿ ಮರೆಯಾದ ನಂತರ, ರಾಮಸ್ವಾಮಿಯು ಮೆತ್ತಗಿನ ದನಿಯಲ್ಲಿ ‘ಅದನ್ನು ಹಿಡಿಯುವುದೇ ಅವನ ಕೆಲಸ ಸಾರ್’ ಎಂದ. ‘ಯಾವುದನ್ನು?’ ಎಂದರು ಕಲ್ಲೂರಾಯರು. “ಅದೇ ಸಾರ್, ಪೆಂಗೊಲಿನ್, ಚಿಪ್ಪುಹಂದಿ!” ನಾನು ಅವನು ಸಾಗಿದ ದಾರಿಯಲ್ಲೇ ಹಿಂಬಾಲಿಸಿದೆ. ಬಂಗಲೆಯ ಹಿಂದೆ ಪೊದೆ ಬೆಳೆದ ಭಾಗದಲ್ಲಿ, ಪೊದೆಗಳ ನಡುವೆ ಒಂದು ಕಾಲ್ದಾರಿ ಇತ್ತು. ಅದರಾಚೆ ಒಂದಷ್ಟು ಮರಗಿಡಗಳ ನಡುವೆ ಒಂದು ಗುಡಿಸಲು ಇತ್ತು. ಅದನ್ನು ಗುಡಿಸಲು ಎಂದು ಕರೆಯುವುದು ತುಸು ಕಷ್ಟವೇ. ಒಂದು ಭಾಗದಲ್ಲಿ ಜರಿದು ಬಿದ್ದ ಗೋಡೆ, ಆ ಗೋಡೆ ಬಿದ್ದ ಭಾಗದಲ್ಲಿ ಮುಳ್ಳುಗಿಡಗಳ ರಕ್ಷಣೆ. ಅದರ ಇನ್ನೊಂದು ಭಾಗದಲ್ಲಿ ಇಳಿಜಾರಿನ ಮಾಡು. ಇನ್ನೊಂದು ಕಡೆ ಬಿದ್ದುಹೋದಂತಿದ್ದ ಗೋಡೆಯ ಸಂದಿಯಲ್ಲಿ, ಹಳೆಯ ಹಲಗೆಗಳನ್ನು ಆಧಾರವಾಗಿರಿಸಿ, ಬಾಗಿಲಿನಂತಹ ರಚನೆ ಮಾಡಲಾಗಿತ್ತು. ಅದಕ್ಕೊಂದು ಮುಳ್ಳಿನ ತಡಿಕೆಯ ರಕ್ಷಣೆ! ಮಾಡಿನ ಮೇಲೆಲ್ಲಾ, ಒಣಗಿದ ಸೊಪ್ಪು ಸದೆಯನ್ನು ಹೊದಿಸಲಾಗಿತ್ತು. ಬಹುಷಃ ಬ್ರಿಟಿಷರ ಕಾಲದಲ್ಲೋ, ನಂತರದಲ್ಲೋ ನಿರ್ಮಾಣಗೊಂಡಿದ್ದ ಔಟ್‌ಹೌಸ್‌ನಂತಹ ರಚನೆ ಅದಾಗಿರಬೇಕು. ಆಗಲೋ ಈಗಲೋ ಬಿದ್ದುಹೋಗುವಂತಹ ಸ್ಥಿತಿಯನ್ನು ತಲುಪಿ ವರ್ಷಗಳೇ ಕಳೆದಿತ್ತು. ಮುಳ್ಳುಗಿಡಗಳು, ಒಣಗಿದ ಸೊಪ್ಪು ಸೌದೆಗಳೇ ಅದಕ್ಕೀಗ ಆಧಾರ. ಅದರ ಮುಳ್ಳಿನ ತಡಿಕೆ ಬಾಗಿಲ ಬಳಿ ಹೋಗಿ ಇಣುಕಿ ನೋಡಿದರೆ, ಒಳಗೆ ಕೆಂಚಪ್ಪ ಒಂದು ಮೂಲೆಯಲ್ಲಿ ಕುಳಿತಿದ್ದ. ಆ ಗುಡಿಸ ಲಿನ ನೆಲ ಬರೇ ಮಣ್ಣು! ನನ್ನನ್ನು ಕಂಡವನೇ ಬೆಚ್ಚಿಬಿದ್ದವರಂತೆ ತಡಬಾಯಿಸಿ, ಎದ್ದು ಹೊರಬಂದ. ‘ಇಲ್ಲೇನೋ ಮಾಡ್ತಿದೀ ಯಾ?’ ಎಂದೆ. ಹತ್ತಾರು ಕಿ.ಮೀ. -ಸಲೆಯಲ್ಲಿ ಜನವಸತಿಯೇ ಇಲ್ಲದ ಈ ಕಾಡುಪ್ರದೇಶದಲ್ಲಿ, ಹೊಟ್ಟೆಪಾಡಿಗಾಗಿ ಮುರುಕಲು ಗುಡಿಸಲಿನಲ್ಲಿ ಏಕಾಂಗಿಯಾಗಿ ಬಂದು ಕುಳಿತಿದ್ದ ಕೆಂಚಪ್ಪನಿಗೂ, ಜೀವರಕ್ಷಣೆಗೆ ನೆಲದಲ್ಲಿ ಹದಿನೈದು ಅಡಿ ಉದ್ದದ ಸುರಂಗ ತೋಡಿ ಅದರಲ್ಲಿ ಅಡಗಿ ಕುಳಿತುಕೊಳ್ಳುವ ಪೆಂಗೊಲಿನ್‌ಗೂ ತುಸು ಸಾಮ್ಯತೆ ಕಂಡು, ಅವನ ಕುರಿತು ಮೂಡಿದ್ದ ಕನಿಕರ ಇನ್ನಷ್ಟು ಹೆಚ್ಚಾಯಿತು! ‘ಹೋಗಲಿ ಬಿಡು, ನಾನು ಯಾರಿಗೂ ಹೇಳೊಲ್ಲ, ನಿಜವಾಗಿಯೂ ಚಿಪ್ಪುಹಂದಿ ಹಿಡಿದಿದ್ದೀಯಾ ನೀನು?’ ಎಂದು ಕೇಳುತ್ತಾ ಅವನ ಗುಡಿಸಲಿನೊಳಗೆ ಇಣುಕಲು ಪ್ರಯತ್ನಿಸಿದೆ. ‘ಸೋಮಿ, ಕಾಲಿಗೆ ಬೀಳ್ತೀನಿ, ಒಳಗೆ ಹೋಗ್ಬೇಡಿ. ನೆಲವೆಲ್ಲಾ ಮಣ್ಣು. ಆ ಮೂಲೆ ಯಲ್ಲಿ ಹಾವೂ ಐತೆ, ಬೇರೇನೋ ಐತೆ ದಮ್ಮಯ್ಯ ಸೋಮಿ, ಬಂಗ್ಲೆಗೆ ನಡೀರಿ, ನಾನೂ ಬತ್ತೀನಿ’ ಎಂದ ಕೆಂಚಪ್ಪ, ಬಾಗಿ ಕೈ ಮುಗಿದ. ನಾನು ಒಂದು ಹೆಜ್ಜೆ ಒಳಗೆ ಇಟ್ಟು,ಗುಡಿಸಲಿನ ಒಳಗೆಲ್ಲಾ ಸಮೀಕ್ಷೆ ಮಾಡಿದೆ. ಹೊರಗಿನಿಂದ ಕಂಡದ್ದಕ್ಕಿಂತಲೂ ಒಳಗೆ ತುಸು ವಿಶಾಲವಾಗಿತ್ತು ಆ ಗುಡಿಸಲು. ಅಲ್ಲಿ ಒಳಭಾಗದಲ್ಲಿ ಇನ್ನೊಂದು ಕೊಠಡಿಯೂ ಇತ್ತು! ಒಂದು ಮೂಲೆಯಲ್ಲಿ ನಾಲ್ಕಾರು ಗೋಣಿಚೀಲಗಳು ಕಂಡವು. ಅವುಗಳ ಒಳಗೆ ಏನಿರಬಹುದು? ಕೆಂಚಪ್ಪ ಹೇಳಿದಂತೆ ಹಾವು ಮತ್ತು ಇನ್ನೇನಾದರೂ ಪ್ರಾಣಿಗಳು ಇರಬಹುದೆ? ಒಂದು ಗೋಣಿಚೀಲವು ತುಸು ಅಲ್ಲಾಡಿದಂತೆ ಅನಿಸಿದ್ದು ನನ್ನ ಭ್ರಮೆಯೋ ಅಥವಾ ಆ ಮಬ್ಬುಬೆಳಕಿನಲ್ಲಿ ನಡೆದ ಕತ್ತಲುಬೆಳಕಿನ ಆಟವೋ?
ಬೆಂಗಳೂರು, ಜೂ.3- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸದ್ಯದ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿ ದ್ದಾರೆ. ಮಾತ್ರವಲ್ಲ, ಪಠ್ಯ ವಿವಾದ ವಿಚಾರವಾಗಿ ಸರ್ಕಾರ ಒಂದಷ್ಟು ಮಹತ್ವದ ನಿರ್ಣಯಗಳನ್ನೂ ಕೈಗೊಂಡಿದೆ. ಶಾಲಾ ಪಠ್ಯಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ರುವ ಹಿನ್ನೆಲೆಯಲ್ಲಿ ವಿಶೇಷ ಸಭೆ ನಂತರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ ರುವ ಮುಖ್ಯಮಂತ್ರಿಗಳು, ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗು ತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕಗಳಲ್ಲಿ ಹಲವು ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು ಹಾಗೂ ನಾಡಿನ ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯ ಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಣೆಗಳನ್ನು ಮಾಡಿದ್ದಾರೆ. ಬಸವಣ್ಣನವರ ಇದೇ ವಿಷಯಾಂಶಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಪೆÇ್ರ.ಬರಗೂರು ರಾಮಚಂದ್ರಪ್ಪ ಇವರ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳಿವೆ. ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶವನ್ನು ಯಾರ ಭಾವನೆಗೂ ಧಕ್ಕೆ ಆಗದಂತೆ ಪರಿಷ್ಕರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಹಾಗೂ ಇತರರ ಆಶಯದಂತೆ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ವಿಕೃತಗೊಳಿಸುವ ರೀತಿಯಲ್ಲಿ ನಾಡಗೀತೆಯ ಧಾಟಿಯಲ್ಲಿ ಮೂಲ ಕವನವನ್ನು ಬರೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೈಬರ್ ಕ್ರೈಮ್‍ನವರು ತನಿಖೆ ನಡೆಸುವಂತೆ ಸಿಎಂ ಸೂಚಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಂದಿರುವ ಆರೋಪ, ಆಕ್ಷೇಪಣೆಗಳಿಗೆ ಸ್ಪಷ್ಟೀಕರಣಗಳನ್ನು ಒಳಗೊಂಡ ಟಿಪ್ಪಣಿ ಲಗತ್ತಿಸಿದೆ. ಹಲವಾರು ಅಂಶಗಳಿಗೆ ವಾಸ್ತವ ಅಂಶಗಳಿಂದ ಸ್ಪಷ್ಟೀಕರಣವನ್ನು ಕೊಡಲಾಗಿದೆ. ಪ್ರಸ್ತುತ ಆಕ್ಷೇಪ ಮಾಡಿರುವಂತೆ ಮಹಾನ್ ವ್ಯಕ್ತಿಗಳ ಯಾವುದೇ ಪಾಠವನ್ನು ಕೈಬಿಡಲಾಗಿಲ್ಲ ಎಂಬುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಾಕಿಸ್ತಾನ ಮಣಿಸಿ ಏಷ್ಯಾ ಕಪ್ ಗೆದ್ದ ಶ್ರೀಲಂಕಾ ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಾಕಿಸ್ತಾನ ಮಣಿಸಿ ಏಷ್ಯಾ ಕಪ್ ಗೆದ್ದ ಶ್ರೀಲಂಕಾ ಪಾಕಿಸ್ತಾನ ಮಣಿಸಿ ಏಷ್ಯಾ ಕಪ್ ಗೆದ್ದ ಶ್ರೀಲಂಕಾ ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಬಾರಿಯ ಏಷ್ಯಾ ಕಪ್ ಕಿರೀಟ ಅತಿಥೇಯ ಶ್ರೀಲಂಕಾ ಪಾಲಾಗಿದೆ. ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ 23 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ ಕಾಂಗ್ರೆಸ್ಸಿಗರೇ ಹಾಗೆ. ದೇಶವನ್ನು 60 ವರ್ಷ ಆಳುವ ಜತೆಗೆ ಹಾಳೂ ಮಾಡಿ ಈಗ ಸುಬಗರಂತೆ ಮಾತನಾಡುತ್ತಾರೆ. ಈ ದೇಶದ ಪ್ರಧಾನಿಯೊಬ್ಬರು 10 ವರ್ಷ ಮಾತೇ ಆಡದೆ ಆಳ್ವಿಕೆ ನಡೆಸಿದರೂ, ದೇಶದಲ್ಲಿ ಲಕ್ಷಾಂತರ ಕೋಟಿ ರೂ. ಹಗರಣ ನಡೆದರೂ, ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ನಡೆದರೂ ಪ್ರಧಾನಿಯೊಬ್ಬರು ಬಾಯಿಗೆ ಫೆವಿಕಾಲ್ ಹಾಕಿಕೊಂಡಂತೆ ಕೂತಿದ್ದರೂ ಕಾಂಗ್ರೆಸ್ಸಿಗರು ಸೊಲ್ಲೆತ್ತಲಿಲ್ಲ. ಆದರೆ ಈಗ ನೋಡಿ, ದೇಶದ ಯಾವ ರಾಜ್ಯದಲ್ಲಿ ಅನಾಹುತ ನಡೆದರೂ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬೊಬ್ಬೆ ಹೊಡೆಯುತ್ತಾರೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ವೈಫಲ್ಯದಿಂದ ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯಾದರೂ, ಮೋದಿ ಅವರ ವಿರುದ್ಧವೇ ಆರೋಪಿಸುವ ಮೂಲಕ ಕಾಂಗ್ರೆಸ್ ತಾನೆಂತ ಕುತ್ಸಿತ ಮನಸ್ಸಿನ ಪಕ್ಷ ಎಂಬುದು ಸಾಬೀತುಪಡಿಸುತ್ತದೆ. ಈಗಲೂ ಅಷ್ಟೇ, ಉನ್ನಾವೋ, ಕಥುವಾ ಎಂಬಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಆರೋಪಿಗಳಿಗೆ ಶಿಕ್ಷೆ ವಿಧಿಸದೇ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಹೇಳಿದ್ದಾರೆ. ಹೀಗಿದ್ದರೂ, ಕಾಂಗ್ರೆಸ್ಸಿಗರು, ಕೆಲವು ಸೋ ಕಾಲ್ಡ್ ಬುದ್ಧಿಜೀವಿಗಳು ಮಾತ್ರ ಮೋದಿ ಈ ಕುರಿತು ಮಾತನಾಡುತ್ತಿಲ್ಲ, ಬಾಯಿಯೇ ಬಿಡುತ್ತಿಲ್ಲ ಎಂದು ಬೊಬ್ಬೆ ಹಾಕಿದರು. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯಾವ ಮೂಲೆಯಲ್ಲಿ ಅನಾಹುತ ನಡೆದರೂ, ಏನೇ ಆದರೂ ಮೊದಲು ಪ್ರತಿಕ್ರಿಯಿಸಬೇಕೆ? ಆಗೋ ಅನಿಷ್ಠಕ್ಕೆಲ್ಲ ಅವರೇ ಕಾರಣವೇ? ಅಥವಾ ಅವರ ಮೇಲೆಯೇ ಎಲ್ಲ ಹೊಣೆ ಇದೆಯೇ? ಮೋದಿ ಅವರೇ ಎಲ್ಲದಕ್ಕೂಉತ್ತರಿಸಬೇಕು ಎಂದು ಆಯಾ ರಾಜ್ಯ ಸರ್ಕಾರಗಳು ಇರುವುದು ಏಕೆ? ಅಷ್ಟಕ್ಕೂ ಮೋದಿ ಅವರು ಮಾತನಾಡದೆಯೇ ಎಲ್ಲ ಕೆಲಸ ಮಾಡುತ್ತಿದ್ದಾರಲ್ಲ, ಅದಕ್ಕೇನೆನ್ನುತ್ತಾರೆ ಈ ಕಾಂಗ್ರೆಸ್ಸಿಗರು? ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಹಾಗೇ ಯೋಚನೆ ಮಾಡಿ ನೋಡಿ. 60 ವರ್ಷ ದೇಶವನ್ನು ಆಳಿದರೂ ಕಾಂಗ್ರೆಸ್ ಸ್ವಚ್ಛತೆ ಮಾಡುವುದು ಬಿಡಿ, ಆ ಕುರಿತು ಸಣ್ಣ ಜಾಗೃತಿ ಸಹ ಮೂಡಿಸಿರಲಿಲ್ಲ. ಭ್ರಷ್ಟಾಚಾರದ ಬೇರುಗಳು ದೇಶದ ಆಳಕ್ಕೆ ಹೋಗಿದ್ದವು. ತೆರಿಗೆ ವ್ಯವಸ್ಥೆ ದಲ್ಲಾಳಿಗಳಿಂದ ನಲುಗುತ್ತಿತ್ತು. ಅದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ ಮೊದಲು ಕೈಗೊಂಡ ಪ್ರಮುಖ ನಿರ್ಧಾರವೇ ಸ್ವಚ್ಛ ಭಾರತ್ ಅಭಿಯಾನ. ಅದರ ಪರಿಣಾಮವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಶೌಚಾಲಯ ನಿರ್ಮಿಸಲಾಗಿದೆ. ಇನ್ನು ನೋಟು ನಿಷೇಧಗೊಳಿಸಿ ಭ್ರಷ್ಟರನ್ನು ಹೆಡೆಮುರಿಕಟ್ಟಿದ್ದು ಇದೇ ನರೇಂದ್ರ ಮೋದಿ. ಸರಕು ಮತ್ತು ಸೇವಾ ತೆರಿಗೆ ಮೂಲಕ ದೇಶದ ತೆರಿಗೆ ವ್ಯವಸ್ಥೆಯನ್ನು ಸುಧಾರಣೆಯತ್ತ ಕೊಂಡೊಯ್ಯುತ್ತಿರುವುದು ಇದೇ ಮೋದಿ ಅವರೇ. ಮಾತನಾಡದೆಯೇ ದೇಶದ ಹಿತಕ್ಕಾಗಿ ಇಷ್ಟೆಲ್ಲ ಮಾಡುತ್ತಿರುವ ನರೇಂದ್ರ ಮೋದಿ ಅವರು, ಯಾವುದೇ ಅವಾಂತರ ಸಹ ಸಹಿಸಿಕೊಳ್ಳುವುದಿಲ್ಲ. ಮಾತನಾಡದೆಯೇ ಕ್ರಮ ಕೈಗೊಂಡು ಬಿಡುತ್ತಾರೆ. ಇದಕ್ಕೆ ಜಮ್ಮು ಕಾಶ್ಮೀರದಲ್ಲಿ ಉಪಟಳ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ತಿರುಗೇಟು ನೀಡಿದ್ದು, ಡೋಕ್ಲಾಂ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಾಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಿದ್ದು ಇದಕ್ಕೆ ಪ್ರಮುಖ ಉದಾಹರಣೆ. ಇನ್ನು ತೀರಾ ಇತ್ತೀಚೆಗೆ ಬ್ಯಾಂಕುಗಳಿಗೆ ಮೋಸ ಮಾಡಿ ವಿದೇಶಕ್ಕೆ ಹಾರುವವರಿಗೂ ಮೋದಿ ಅವರು ಇದೇ ಗತಿ ಕಾಣಿಸಿದ್ದಾರೆ. ಅದಕ್ಕೆ ನೀರವ್ ಮೋದಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದೇ ನಿದರ್ಶನ. ಹೇಳಿ ಮಾತನಾಡದೆಯೇ ಮೋದಿ ಇಷ್ಟೆಲ್ಲ ಮಾಡಲಿಲ್ಲವೇ? ಸಂಸತ್ ಅಧಿವೇಶನಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನರೇಂದ್ರ ಮೋದಿ ಅವರು ಉಪವಾಸ ಮಾಡಿ ಕಾಂಗ್ರೆಸ್ಸಿಗರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದು, ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಉನ್ನಾವೋ, ಕಥಾವೋ ಅತ್ಯಾಚಾರ ಪ್ರಕರಣದ ಕುರಿತು ಮೋದಿ ಮಾತಾಡಿಲ್ಲ ಮಾತಾಡಿಲ್ಲ ಎಂದು ಬೊಬ್ಬೆ ಹಾಕಿತು. ಕೊನೆಗೂ ಅಪರಾಧಿಗಳಿಗೆ ಶಿಕ್ಷೆ ವಿಧಿಸದೆ ಬಿಡುವುದಿಲ್ಲ ಎಂದು ಮೋದಿ ಅವರು ತಿಳಿಸಿದ್ದಾರೆ. ಈಗ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡು ತೆಪ್ಪಗಾಗಿದೆ.
ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಖುದ್ದು ಭೇಟಿ ಮಾಡಿದ ಸಚಿವ ಡಾ.ನಾರಾಯಣ ಗೌಡ ಅವರು ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಆಹ್ವಾನ ನೀಡಿದರು. ಮಂಡ್ಯ: ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭ ಮೇಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ತಿಳಿಸಿದರು. ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಖುದ್ದು ಭೇಟಿ ಮಾಡಿದ ಸಚಿವ ಡಾ.ನಾರಾಯಣ ಗೌಡ ಅವರು ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಆಹ್ವಾನ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಸಚಿವ ಡಾ.ನಾರಾಯಣ ಗೌಡ ಅಕ್ಟೋಬರ್ 13 ರಿಂದ 16ರ ವರೆಗೂ ಕೆಆರ್ ಪೇಟೆಯ ಲಕ್ಷ್ಮಣತೀರ್ಥ-ಹೇಮಾವತಿ-ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಈ ಮಹಾಕುಂಭ ಮೇಳದಲ್ಲಿ ಅಕ್ಟೋಬರ್ 16 ರಂದು ಪಾಲ್ಗೊಳ್ಳುವುದಾಗಿ ಯೋಗಿ ಆದಿತ್ಯನಾಥ್ ತಿಳಿಸಿರುವುದಾಗಿ ಸಚಿವರು ಹೇಳಿದರು. ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಸಚಿವ ಡಾ.ನಾರಾಯಣ ಗೌಡ ಮುಕ್ಕಾಲು ಗಂಟೆ ಮಾತುಕತೆ-ವಿಶೇಷ ಆತಿಥ್ಯ: ಡಾ.ನಾರಾಯಣ ಗೌಡ ಹಾಗೂ ನಿಯೋಗದ ಜೊತೆ ಮುಕ್ಕಾಲು ಗಂಟೆಗೂ ಅಧಿಕ ಕಾಲ ಯೋಗಿ ಆದಿತ್ಯನಾಥ್ ಅವರು ಮಾತುಕತೆ ನಡೆಸಿ, ವಿಶೇಷ ಆತಿಥ್ಯ ನೀಡಿದ್ದಾರೆ. ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೂ ಗೋರಖನಾಥೇಶ್ವರನ ಸಂಬಂಧದ ಬಗ್ಗೆ ಯೋಗಿ ಮೆಲುಕು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪರಶುರಾಮನ ಕಥೆ, ಕಾಲಬೈರವೇಶ್ವರನ ಕಥೆ, ಧರ್ಮಸ್ಥಳ ಮತ್ತು ಆದಿಚುಂಚನಗಿರಿಯ ಇತಿಹಾಸ ಹಾಗೂ ನಾಥ ಪರಂಪರೆಯ ಹಾಗೂ ಕರ್ನಾಟಕ ಸರ್ಕಾರ ಪ್ರಸ್ತುತ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಸುದೀರ್ಘವಾಗಿ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಕುವೆಂಪು ಅವರ ರಾಮಯಣ ದರ್ಶನಂ ಹಾಗೂ ಎಸ್.ಎಲ್ ಭೈರಪ್ಪನವರ ಪರ್ವ ಪುಸ್ತಕವನ್ನು ಯೋಗಿ ಆದಿತ್ಯನಾಥ್ ಅವರಿಗೆ ಸಚಿವರು ನೀಡಿದರು.
ಬೆಂಗಳೂರು: ರಾಜ್ಯದಲ್ಲಿನ ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ ಮಾಡಲಾಗಿದ್ದು, ಈ ಹಿಂದಿನ ಆದೇಶವನ್ನು ರದ್ದುಪಡಿಸಿ, ಹೊಸ ಆದೇಶ ಹೊರಡಿಸಲಾಗಿದೆ. ಕಳೆದ ವರ್ಷದ ಸೆ. 10ರಂದು ಹೊರಡಿಸಲಾಗಿದ್ದ ಜಿಲ್ಲಾ ಉಸ್ತುವಾರಿ ಪಟ್ಟಿ ರದ್ದು ಮಾಡಲಾಗಿದ್ದು, ಹೊಸ ಪಟ್ಟಿಯಲ್ಲಿ ಅಚ್ಚರಿ ಎನ್ನುವಂಥ ಬದಲಾವಣೆಗಳಾಗಿವೆ. ಇಂದಿನಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಹೊಸದಾಗಿ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಸ್ತುವಾರಿಯಲ್ಲಿ ಇರಲಿದ್ದು, ಉಳಿದಂತೆ ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ ಕಳೆದ ವರ್ಷದ ಸೆ. 10ರಂದು ಹೊರಡಿಸಲಾಗಿದ್ದ ಜಿಲ್ಲಾ ಉಸ್ತುವಾರಿ ಪಟ್ಟಿ ರದ್ದು ಮಾಡಲಾಗಿದ್ದು, ಹೊಸ ಪಟ್ಟಿಯಲ್ಲಿ ಅಚ್ಚರಿ ಎನ್ನುವಂಥ ಬದಲಾವಣೆಗಳಾಗಿವೆ. ಇಂದಿನಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಹೊಸದಾಗಿ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಲಾಗಿದೆ.
ಅರ್ಜಿದಾರರು ಮಹಿಳೆ ಮತ್ತು ಹಿರಿಯ ನಾಗರಿಕರಾಗಿರುವುದರಿಂದ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಯಾವಾಗ ಬೇಕಾದರೂ ವಿನಾಯಿತಿ ಪಡೆಯಬಹುದು ಎಂದು ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠ ತಿಳಿಸಿತು. Cheque Bouncing Bar & Bench Published on : 29 Oct, 2022, 11:17 am ನೆಗೋಷಿಯಬಲ್‌ ಇನ್‌ಸ್ಟ್ರುಮೆಂಟ್‌ ಕಾಯಿದೆಯ ಸೆಕ್ಷನ್ 138ರಡಿ (ವರ್ಗಾವಣೀಯ ಲಿಖಿತಗಳ ಅಧಿನಿಯಮ) ಆರೋಪಿಯ ಅನುಕೂಲಕ್ಕೆ ತಕ್ಕಂತೆ ದೂರು ವರ್ಗಾಯಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ [ಎಸ್ ನಳಿನಿ ಜಯಂತಿ ಮತ್ತು ಎಂ. ರಾಮಸುಬ್ಬಾ ರೆಡ್ಡಿ ನಡುವಣ ಪ್ರಕರಣ]. ಅರ್ಜಿದಾರರು ಮಹಿಳೆ ಮತ್ತು ಹಿರಿಯ ನಾಗರಿಕರಾಗಿರುವುದರಿಂದ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಯಾವಾಗ ಬೇಕಾದರೂ ವಿನಾಯಿತಿ ಪಡೆಯಬಹುದು ಎಂದು ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಅಭಯ್‌ ಎಸ್‌ ಓಕಾ ಅವರಿದ್ದ ಪೀಠ ತಿಳಿಸಿತು. ಕಾಯಿದೆಯ ಸೆಕ್ಷನ್ 138ರ ಅಡಿ ತನ್ನ ವಿರುದ್ಧ ದಾಖಲಾಗಿರುವ ದೂರನ್ನು ವರ್ಗಾಯಿಸುವಂತೆ ಕೋರಿ ಎಸ್‌ ನಳಿನಿ ಜಯಂತಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. Also Read ಐ ಟಿ ನಿಯಮಾವಳಿಗೆ ತಿದ್ದುಪಡಿ: ಹೇಗಿರಲಿದೆ ದೂರು ಮೇಲ್ಮನವಿ ಸಮಿತಿಯ ಸ್ವರೂಪ? ವಿನಾಯಿತಿ ನೀಡುವಂತೆ ಅರ್ಜಿದಾರರು ಅರ್ಜಿ ಸಲ್ಲಿಸಿದರೆ, ವಿಚಾರಣಾ ನ್ಯಾಯಾಧೀಶರು ಅದನ್ನು ಅನುಕೂಲಕರವಾಗಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ. ವಿಚಾರಣೆಗೆ ಹಾಜರಾಗುವುದು ಸಂಪೂರ್ಣ ಕಡ್ಡಾಯವಾಗಿದ್ದಾಗ ಮಾತ್ರ ವಿಚಾರಣಾ ನ್ಯಾಯಾಧೀಶರು ಆಕೆಯನ್ನು ಖುದ್ದು ಹಾಜರಾಗಲು ತಿಳಿಸಬೇಕು ಎಂದ ನ್ಯಾಯಾಲಯ ಮನವಿಯನ್ನು ವಜಾಗೊಳಿಸಿತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಮಂತ್ರಿ ಶ್ರೀ ಪಿವಿ ನರಸಿಂಹ ರಾವ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತು ಪ್ರಧಾನಿಯವರು ಟ್ವೀಟ್ ಮಾಡಿ, “ನಮ್ಮ ಮಾಜಿ ಪ್ರಧಾನಿ ಶ್ರೀ ಪಿ.ವಿ.ನರಸಿಂಹ ರಾವ್ ಅವರ ಜನ್ಮದಿನದಂದು ಅವರಿಗೆ ನಮನಗಳು. ದೇಶದ ಪ್ರಗತಿಗೆ ಅವರು ನೀಡಿದ ಶ್ರೀಮಂತ ಕೊಡುಗೆಗಾಗಿ ಭಾರತ ಅವರಿಗೆ ಕೃತಜ್ಞವಾಗಿದೆ. ಅವರು ಶ್ರೇಷ್ಠ ವಿದ್ವಾಂಸರು ಮತ್ತು ಮೇಧಾವಿಯೂ ಆಗಿದ್ದರು.” ಎಂದು ಹೇಳಿದ್ದಾರೆ. ******** (Release ID: 1837736) Visitor Counter : 43 Read this release in: English , Urdu , Hindi , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam ಪ್ರಧಾನ ಮಂತ್ರಿಯವರ ಕಛೇರಿ ಪಿ.ವಿ. ನರಸಿಂಹ ರಾವ್ ಅವರ ಜನ್ಮದಿನದಂದು ಅವರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ Posted On: 28 JUN 2022 2:43PM by PIB Bengaluru ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಮಂತ್ರಿ ಶ್ರೀ ಪಿವಿ ನರಸಿಂಹ ರಾವ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತು ಪ್ರಧಾನಿಯವರು ಟ್ವೀಟ್ ಮಾಡಿ, “ನಮ್ಮ ಮಾಜಿ ಪ್ರಧಾನಿ ಶ್ರೀ ಪಿ.ವಿ.ನರಸಿಂಹ ರಾವ್ ಅವರ ಜನ್ಮದಿನದಂದು ಅವರಿಗೆ ನಮನಗಳು. ದೇಶದ ಪ್ರಗತಿಗೆ ಅವರು ನೀಡಿದ ಶ್ರೀಮಂತ ಕೊಡುಗೆಗಾಗಿ ಭಾರತ ಅವರಿಗೆ ಕೃತಜ್ಞವಾಗಿದೆ. ಅವರು ಶ್ರೇಷ್ಠ ವಿದ್ವಾಂಸರು ಮತ್ತು ಮೇಧಾವಿಯೂ ಆಗಿದ್ದರು.” ಎಂದು ಹೇಳಿದ್ದಾರೆ.
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ ರಾಶಿ.. ಇಂದಿನ ದಿನ ಉದ್ಯಮ-ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಅನುಕೂಲ, ಉತ್ತಮ ಹೆಸರು ಗೌರವ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಸಂಪತ್ತು ಲಭಿಸುವುದು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ ರಾಶಿ.. ಇಂದಿನ ದಿನ ಆರ್ಥಿಕ ಸಂಕಷ್ಟ ಅಧಿಕ, ಮಕ್ಕಳಿಂದ ನಷ್ಟ, ನೆರೆಹೊರೆ ಬಂಧುಗಳಿಂದ ಸಂಕಷ್ಟ, ಕುಟುಂಬಸ್ಥರಿಂದಲೇ ಅವಮಾನ, ಗೌರವಕ್ಕೆ ಧಕ್ಕೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ ರಾಶಿ.. ಇಂದಿನ ದಿನ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಉದ್ಯೋಗ ಸಂಕಷ್ಟದಿಂದ ಮುಕ್ತಿ, ಉತ್ತಮ ಉದ್ಯೋಗ ಲಭಿಸುವುದು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ ರಾಶಿ.. ಇಂದಿನ ದಿನ ದಾಂಪತ್ಯದಲ್ಲಿ ವಿರಸ, ಅಹಂಭಾವ, ವಾಗ್ವಾದ ಅಧಿಕ, ವಾಹನ ಚಾಲನೆಯಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ, ಮಾತೃವಿನಿಂದ ಅನುಕೂಲ, ಕೃಷಿ ಭೂಮಿಯಿಂದ ಧನಲಾಭ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ ರಾಶಿ.. ಇಂದಿನ ದಿನ ಸ್ನೇಹಿತರಿಂದ ಉದ್ಯೋಗ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ ರಾಶಿ.. ಇಂದಿನ ದಿನ ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಕಲಹ, ಕಿರಿಕಿರಿ ಹೆಚ್ಚಾಗುವುದು, ಆಕಸ್ಮಿಕ ದುರ್ಘಟನೆ, ಆತ್ಮ ಸಂಕಟ, ಅಧಿಕವಾದ ಉಷ್ಣ, ಪಿತ್ತ ಬಾಧೆ..ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ ರಾಶಿ.. ಇಂದಿನ ದಿನ ಪ್ರಯಾಣದಿಂದ ಅದೃಷ್ಟ ಒಲಿಯುವುದು, ಕೋರ್ಟ್ ಕೇಸ್‍ಗಳಲ್ಲಿ ಜಯ, ಕೌಟುಂಬಿಕ ಜೀವನದಲ್ಲಿ ಅಶಾಂತಿ, ಯೋಚನೆಗಳಿಂದ ನಿದ್ರಾಭಂಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ ರಾಶಿ.. ಇಂದಿನ ದಿನ ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಾಲ ಬಾಧೆ, ಮಾನಸಿಕ ಹಿಂಸೆ, ಉದ್ಯೋಗ ಬದಲಾವಣೆಯಿಂದ ಅನುಕೂಲ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನ ರಾಶಿ.. ಇಂದಿನ ದಿನ ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಹೃದಯ ಸಂಬಂಧಿ ಸಮಸ್ಯೆ ಇರುವವರು ಎಚ್ಚರ, ಆಕಸ್ಮಿಕ ತೊಂದರೆ ಎದುರಾಗುವ ಸಾಧ್ಯತೆ, ಬಂಧುಗಳಿಂದ ಕಿರಿಕಿರಿ, ಸಾಲ ಬಾಧೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ ರಾಶಿ.. ಇಂದಿನ ದಿನ ಸಂಗಾತಿಯಿಂದ ಅನುಕೂಲ, ಪಿತ್ರಾರ್ಜಿತ ಸ್ವತ್ತು ಒಲಿಯುವುದು, ಪ್ರೀತಿ ಮಾಡಲು ಮನಸ್ಸು, ಸ್ಥಿರಾಸ್ತಿ ಮೇಲೆ ಸಾಲ ಪಡೆಯುವ ಆಲೋಚನೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ ರಾಶಿ.. ಇಂದಿನ ದಿನ ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬದಲ್ಲಿ ಮನಃಸ್ತಾಪ, ಆಕಸ್ಮಿಕ ಉದ್ಯೋಗ ಬಡ್ತಿ, ವ್ಯಾಪಾರೋದ್ಯಮಸ್ಥರಿಗೆ ಲಾಭ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು ರಾಶಿ.. ಇಂದಿನ ದಿನ ವಿಪರೀತ ರಾಜಯೋಗ, ದೇಹದಲ್ಲಿ ಆಲಸ್ಯ, ಅಧಿಕ ನಿದ್ರಾಭಾವ, ಮಿತ್ರರಿಂದ ಸಾಲ ಸಹಾಯ, ಆಕಸ್ಮಿಕ ಅದೃಷ್ಟ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 114 Post navigation ಸರ್ಜಾ ಕುಟುಂಬಕ್ಕೆ ಮತ್ತೊಂದು ನೋವು.. ಖುದ್ದು ವಿಚಾರ ತಿಳಿಸಿದ ಧೃವ ಸರ್ಜಾ.. ಯಾವ ಕುಟುಂಬಕ್ಕೂ ಇಂತಹ ನೋವು ಬೇಡ.. ಧೃವ ಸರ್ಜಾ ಹಾಗೂ ಪ್ರೇರಣಾ ಅವರ ವಿಚಾರದಲ್ಲೀಗ ಸಿಹಿ ಸುದ್ದಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಇಲ್ಲಿನ ಲೇಖನಗಳು ಕರ್ನಾಟಕ, ಭಾರತಕ್ಕೆ ಸಂಬಂಧಿಸಿದ್ದಾಗಿವೆ. ಕನ್ನಡದ ಪ್ರಸಿದ್ಧ ಪತ್ರಕರ್ತರದ್ದಾಗಿವೆ. ವಿಶ್ವದಾದ್ಯಂತ ಓದುಗರು ಈ ಲೇಖನಗಳಿಗೆ ಸ್ಪಂದಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. Monday, November 17, 2008 ಮತಾಂತರಿ ಪಾದ್ರಿ ಮತ್ತು ಕುವೆಂಪು ತಂದೆಯವರು ‘ಉದಯರವಿ’ ಮನೆಬಿಟ್ಟು ಎಲ್ಲಿಯೂ ಹೊರಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಅವರದು ಸ್ಥಾವರ ಪ್ರಕೃತಿ. ನಿವೃತ್ತಿ ಜೀವನದಲ್ಲಿ ಕಾಲವನ್ನು ಅಧ್ಯಯನ, ಓದು, ಬರವಣಿಗೆಯಲ್ಲಿ ಮತ್ತು ಮೊಮ್ಮಕ್ಕಳ ಸಂಗ, ಸಹವಾಸದಲ್ಲಿ ಆನಂದದಿಂದ ಕಳೆಯುತ್ತಿದ್ದರು. ಅವರನ್ನು ಹೊರಗಡೆ ನಡೆಯುವ ಸಭೆ ಸಮಾರಂಭ ಮುಂತಾದ ಕಾರ್ಯಕ್ರಮಕ್ಕೆ ಆಹ್ವಾನಿಸುವುದೂ, ಒಪ್ಪಿಸುವುದೂ ಕಷ್ಟದ ಕೆಲಸವೇ ಆಗಿತ್ತು. ಆದರೂ ಅನೇಕ ಜನಗಳು ಯಾವಾಗಲೂ ಅವರನ್ನು ಆಹ್ವಾನಿಸುವ ಆ ಉದ್ದೇಶದಿಂದ ಅವರನ್ನು ನೋಡಲು ಮನೆಗೆ ಬರುತ್ತಿದ್ದರು. “ನಾನು ಕುಟೀಚಕ, ಆದರೂ ಭಗವಂತನು ಮನೆಯ ಬಾಗಿಲಿಗೆ ಎಲ್ಲಾ ರೀತಿಯ ಜನರ ಪರಿಚಯ ಮಾಡಿಸಲು ಕಳುಹಿಸುವನು” ಎಂದು ಅವರು ಹೇಳುತ್ತಿದ್ದರು. ತಂದೆಯವರ ದಿನಚರಿ ಕಾಲಕಾಲಕ್ಕೆ ಅನುಗುಣವಾಗಿ ಬದಲಾವಣೆ ಹೊಂದುತ್ತಿತ್ತು. ಬೇಗ ಕತ್ತಲು ಆವರಿಸುತ್ತಿದ್ದ ಚಳಿಗಾಲದ ದಿನಗಳಲ್ಲಿ ತಂದೆಯವರು ಸಂಜೆಯ ವಾಯುಸಂಚಾರ ಅರ್ಧಗಂಟೆ ಮುಂಚಿತವಾಗಿಯೇ ಮುಗಿಸುತ್ತಿದ್ದರು. ಅಂದು ಸಂಜೆ ಆಗತಾನೆ ಸಂಚಾರ ಮುಗಿಸಿ ಬಂದು ಎದುರು ವರಾಂಡದ ತಮ್ಮ ದೊಡ್ಡ ಸೋಫಾ ಮೇಲೆ ಕುಳಿತಿದ್ದರು. ಮುಸ್ಸಂಜೆ ಸಮಯ. ಬಿಳಿಬಟ್ಟೆ, ತೊಟ್ಟ ಒಬ್ಬ ಪಾದ್ರಿ ಮನೆಗೆ ಬಂದರು. ವರಾಂಡದ ಬಾಗಿಲು ತೆರೆದಿತ್ತು. ಪಾದ್ರಿ ಮೆಟ್ಟಿಲು ಹತ್ತಿ ವರಾಂಡ ಪ್ರವೇಶಿಸಿದೊಡನೆ ತಂದೆಯವರು ‘ಯಾರು ಏನುಬೇಕು?’ ಎಂದು ವಿಚಾರಿಸಿದರು. ‘ನಿಮ್ಮನ್ನು ನೋಡಲು ಬಂದೆ’ ಎಂದು ಹೇಳಿ ಪಾದ್ರಿ ನಮಸ್ಕರಿಸಿದರು. ತಂದೆಯವರು ಪ್ರತಿ ನಮಸ್ಕಾರದೊಡನೆ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ಪಾದ್ರಿ ಕುರ್ಚಿಯಲ್ಲಿ ಕುಳಿತರು. ಪಾದ್ರಿಗೆ ಮಧ್ಯವಯಸ್ಸು ಮೀರಿರಲಿಲ್ಲ. ಯಾವುದೋ ಕ್ರೈಸ್ತ ಸಂಸ್ಥೆ ಅವರನ್ನು ಮತಪ್ರಚಾರಕ್ಕೆ ಕಳುಹಿಸಿದೆ. ದೊಡ್ಡಮನೆ ನೋಡಿ ಬಂದಿರಬಹುದು. ಯಾರ ಮನೆಯೆಂದು ಗೊತ್ತಿಲ್ಲ. ಗೊತ್ತಾಗಿದ್ದರೆ ಬಹುಶಃ ಒಳಗೆ ಪ್ರವೇಶಿಸಲು ಧೈರ್ಯವಾಗುತ್ತಿರಲಿಲ್ಲವೇನೋ. ತಂದೆಯವರು ಏನು ವಿಚಾರ? ಏನು ಬೇಕು? ಎಂದು ಕೇಳಿದ ತಕ್ಷಣವೇ ಅವರಿಗೆ ಬಾಯಿಪಾಠ ಮಾಡಿಸಿದ ಏಸುವಿನ ವಿಚಾರ ಹೇಳಲು ಪ್ರಾರಂಭಿಸಿದರು. ತಂದೆಯವರಿಗೆ ಅರ್ಥವಾಯಿತು ಪಾದ್ರಿ ಬಂದ ಉದ್ದೇಶ. ಇಂತಹ ಎಷ್ಟೋ ಮತ ಪ್ರಚಾರಕರನ್ನು ಅವರು ನೋಡಿದ್ದರು. ಸ್ವಲ್ಪ ಹೊತ್ತು ಸುಮ್ಮನಿದ್ದರು. ಪಾದ್ರಿ ಮಾತು ನಿಲ್ಲಿಸಿದ ಮೇಲೆ ತಂದೆಯವರ ವಾಕ್ ಪ್ರವಾಹ ಪ್ರಾರಂಭವಾಯಿತು. “ಏತಕ್ಕಾಗಿ ಇನ್ನೂ ಈಗಿನ ಕಾಲದಲ್ಲಿ ಈ ರೀತಿ ಮತಪ್ರಚಾರ ಮಾಡುವಿರಿ? ಈ ಕಾಲದಲ್ಲಿ ಎಲ್ಲರೂ ವಿದ್ಯಾಭ್ಯಾಸ ಪಡೆದು ಅವರವರಿಗೆ ಬೇಕಾದ ದೃಷ್ಟಿ ಅವರವರು ಬೆಳೆಸಿಕೊಳ್ಳುತ್ತಾರೆ. ಏಸು ಕ್ರಿಸ್ತ ಎಲ್ಲರನ್ನೂ ತಮ್ಮ ಮತಕ್ಕೆ ಸೇರಿಸಿ ಎಂದು ಹೇಳಿರುವನಾ? ಅವನು ಎಷ್ಟು ಉದಾತ್ತ ಭಾವನೆಗಳನ್ನು ಹೇಳಿರುವನು. ಅದನ್ನಾದರೂ ಓದಿರುವಿರಾ? ಇದೆನ್ನೆಲ್ಲಾ ನನಗೆ ಹೇಳಲು ಬಂದಿರುವಿರಾ? ನಾನು ಓದಿರುವುದರಲ್ಲಿ ಕಾಲು ಅಂಶವಾದರೂ ನೀವು ಓದಿರುವಿರಾ? ಎಲ್ಲಾ ಪಂಗಡಗಳ, ಜಾತಿ ಧರ್ಮದ ಕಚ್ಚಾಟ ಹೋಗಲಾಡಿಸಲೇ ಶ್ರೀ ರಾಮಕೃಷ್ಣರು ಈ ಯುಗದಲ್ಲಿ ಬಂದಿದ್ದು. ಅವರ ವಿಚಾರವಾಗಿ ನಿಮಗೇನಾದರೂ ತಿಳಿದಿದೆಯೇ? ವಿವೇಕಾನಂದರು ಷಿಕಾಗೋದಲ್ಲಿ ಭಾಷಣ ಮಾಡಿದ್ದು ಗೊತ್ತಿದೆಯೇ? ಅವರನ್ನು ಇಡೀ ಪ್ರಪಂಚವೇ ಕೊಂಡಾಡಿರುವುದು ನಿಮಗೂ ಗೊತ್ತಿರಬೇಕು ಅಲ್ಲವೆ ಈಗ ಜನಕ್ಕೆ ಬೇಕಾಗಿರುವುದು ಉತ್ತಮ ಬದುಕು, ಉದಾತ್ತ ತತ್ವಗಳು, ಮನುಜಮತ ಮತ್ತು ವಿಶ್ವಪಥ. ಮತಾಂತರವಲ್ಲ. ಬರೀ ಬಾಯಲ್ಲಿ ಹೇಳುತ್ತಾ ಹೋದರೆ ಏನು ಪ್ರಯೋಜನ? ಸ್ವಲ್ಪವಾದರೂ ಏಸು ಹೇಳಿದ ಕೆಲಸವನ್ನಾದರೂ ಮಾಡಿರುವಿರಾ? ನನಗೆ ಉಪದೇಶ ಕೊಡುವ ಅಗತ್ಯವಿಲ್ಲ. ನೀವು ಶ್ರೀ ರಾಮಕೃಷ್ಣ ವಿವೇಕಾನಂದರ ಸಾಹಿತ್ಯ ಓದಿ ವಿಶಾಲ ಮನಸ್ಸು, ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳಿ. ಇಲ್ಲೇ ಹತ್ತಿರದಲ್ಲಿ ರಾಮಕೃಷ್ಣ ಆಶ್ರಮ ಇದೆ. ಅಲ್ಲಿಗೆ ಹೋಗಿ, ಪುಸ್ತಕ ವಿಭಾಗದಲ್ಲಿ ಪುಸ್ತಕಗಳು ಮಾರಾಟಕ್ಕೆ ದೊರೆಯುತ್ತದೆ ನಿಮಗೆ ಬೇಕಾದ ಪುಸ್ತಕ ತೆಗೆದುಕೊಂಡು ಓದಿ, ನಿಮ್ಮ ಮನಸ್ಸು, ಹೃದಯ ವಿಶಾಲ ಮಾಡಿಕೊಳ್ಳಿ. ವಿಶ್ವಮಾನವರಾಗಿ. ನನ್ನ ವಿಶ್ವಮಾನವ ಸಂದೇಶವನ್ನು ಕೊಡುವೆನು ಓದಿ ವೈಚಾರಿಕ ಬುದ್ಧಿ ಬೆಳೆಸಿಕೊಳ್ಳಿ. ಹುಟ್ಟುತ್ತಲೇ ಎಲ್ಲರೂ ವಿಶ್ವಮಾನವರು. ಬೆಳೆಯುತ್ತಾ ನಾವೇ ಅವರನ್ನು ಅಲ್ಪಮಾನವರನ್ನಾಗಿ ಮಾಡುತ್ತೇವೆ. ಜಾತಿ, ಮತ, ವರ್ಗ, ಪಂಗಡ ಎಂದು ಹೊಡೆದಾಡುವುದು, ಬಡಿದಾಡುವುದು ಜಾಸ್ತಿಯಾಗುತ್ತಿದೆ. ಈ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯ” ಎಂದು ಹೇಳಿ ‘ವಿಶ್ವಮಾನವ ಸಂದೇಶ’ದ ಬಗ್ಗೆಯೂ ಆ ಪಾದ್ರಿಗೆ ಮಾತಾಡಲು ಅವಕಾಶವಿಲ್ಲದಂತೆ ಸಾಕಷ್ಟು ವಿವರಿಸಿದರು. ಪಾದ್ರಿಯೂ ಕಂಗಾಲಾಗಿ ಏನೂ ಮಾತಾಡಲು ತೋಚದೆ ಸುಮ್ಮನೆ ಕುಳಿತಿದ್ದರು. ತಂದೆಯವರು ತಾವು ಅಚ್ಚು ಹಾಕಿಸಿರುವ ‘ವಿಶ್ವಮಾನವ ಸಂದೇಶ’ದ ಪತ್ರಿಕೆ ಕೊಟ್ಟು “ಓದಿ ನೋಡಿ, ನಮ್ಮ ರಾಮಕೃಷ್ಣರು ನಿಮ್ಮ ಏಸು, ಮೊಹಮೊದ್, ರಾಮ, ಬುದ್ಧ, ಕೃಷ್ಣ ಎಲ್ಲರನ್ನೂ ಜೀರ್ಣಿಸಿಕೊಂಡಿದ್ದಾರೆ. ಎಲ್ಲರ ಒಳ್ಳೆಯ ಭಾವನೆಯನ್ನು ತೆಗೆದುಕೊಂಡಿದ್ದಾರೆ. ಎಲ್ಲ ರೀತಿಯ ಸಾಧನೆಯಿಂದ ಅನುಭವ ಪಡೆದಿರುವರು” ಮುಂತಾಗಿ ಹೇಳಿದರು. ಆದರೆ ಪಾದ್ರಿಗೆ ಅರ್ಥವಾದಂತೆ ಕಾಣಲಿಲ್ಲ. ಪಾದ್ರಿ ಮಾತಿಲ್ಲದೆ ಎದ್ದು ಅಸಮಾಧಾನವಾದಂತೆ ತಂದೆಯವರು ಕೊಟ್ಟ ವಿಶ್ವಮಾನವ ಸಂದೇಶ ತೆಗೆದುಕೊಂಡು ವೇಗವಾಗಿ ಮೆಟ್ಟಲಿಳಿದು ಹೋದರು. ಅಷ್ಟರಲ್ಲಿ ಪೂರ್ತಿ ಕತ್ತಲೆ ಆವರಿಸಿತ್ತು. ಪಾದ್ರಿ ಹೋದ ನಂತರ ತಂದೆಯವರು ನಗುತ್ತಾ “ಇನ್ನೂ ಅಂದಿನ ಕತೆ ಇವರು ಬಿಟ್ಟಿಲ್ಲ. ನಿಮ್ಮ ಕೃಷ್ಣ ಬೆಣ್ಣೆ ಕದ್ದ, ನಮ್ಮ ಏಸು ಏನು ಮಾಡಿದ? ನೀವೆಲ್ಲಾ ಕುರಿಗಳು ನಮ್ಮ ಯೇಸು ಕುರುಬ ಎಂದು ಹೇಳುತ್ತಿದ್ದಾರೆ. ಪಾಪ ಪಾದ್ರಿ ಏನು ಮಾಡುವನು? ಮೇಲಿನವರು ಹೇಳಿಕೊಟ್ಟದ್ದು ಬಾಯಿಪಾಠಮಾಡಿ ಒಪ್ಪಿಸಿ ಹೋಗುವನು ಅಷ್ಟೆ” ಎಂದರು. ಮಾರನೆಯ ದಿನ ಬೆಳಗ್ಗೆ ತಂದೆಯವರ ದಿನಚರಿಯಂತೆ ಐದೂವರೆ ಗಂಟೆಗೆ ಎದ್ದು ವಾಯು ಸಂಚಾರಕ್ಕೆ ಹೊರಟರು. (ಚಳಿಗಾಲದ ದಿನವಾದ್ದರಿಂದ ಇನ್ನೂ ಕತ್ತಲೆ ಇತ್ತು) ಹೊರಹೋಗಿ ಗೇಟು ತೆರೆಯಲು ನೋಡಿದಾಗ ಮನೆಯೊಳಗೆ ಗೇಟಿನ ಹತ್ತಿರ ಇರುವ ಗಿಡದ ಮೇಲೆ, ಸಂದಿಯಲ್ಲಿ ಒಂದು ದೊಡ್ಡ ಕಾಗದ ಬಿದ್ದಿರುವುದು ಕಾಣಿಸಿತು. ಕಾಗದ ತೆಗೆದುಕೊಂಡು ಮಡಚಿ ಜೇಬಿಗೆ ಇಟ್ಟುಕೊಂಡರು. ಕೆಲವು ಸಂದರ್ಭದಲ್ಲಿ ಯಾರಾದರು ಆಹ್ವಾನ ಪತ್ರಿಕೆ, ಇತ್ಯಾದಿಗಳನ್ನು ಮನೆ ಒಳಗೆ ಬಂದು ಕೊಡಲಾಗದೆ ಗೇಟಿನ ಒಳಗೆ ಎಸೆದು ಹೋಗುತ್ತಿದ್ದರು. ಏಕೆಂದರೆ ನಮ್ಮ ನಾಯಿ ಬಿಟ್ಟಿದ್ದರೆ ಅದು ಕಾಂಪೌಂಡ್ ಒಳಗೆ ಓಡಾಡುವುದು, ಬೊಗಳುವುದು ನೋಡಿ, ಒಳಗೆ ಬಂದರೆ ಅಪಾಯವೆಂದು ಕೆಲವರು ಗೇಟಿನ ಹತ್ತಿರವೇ ಎಸೆದು ಹೋಗುತ್ತಿದ್ದರು. ತಂದೆಯವರು ಅಂತಹುದೇ ಒಂದು ಕಾಗದ ಇರಬಹುದು ಎಂದು ಸಂಚಾರ ಮುಗಿಸಿ ನಂತರ ನೋಡೋಣ ಎಂದು ಜೇಬಿಗೆ ಹಾಕಿಕೊಂಡು ಹೊರಟರು. ಓದಲು ಕನ್ನಡಕವೂ ಇರಲಿಲ್ಲ. ಬೆಳಗಿನ ಸಂಚಾರ ಮುಗಿಸಿ ಏಳು ಗಂಟೆಗೆ ಮನೆಗೆ ಹಿಂದಿರುಗಿದರು. ಮನೆಗೆ ಬಂದ ನಂತರ ಚಪ್ಪಲಿಬಿಟ್ಟು ಹಾಲಿನಲ್ಲಿ ಕುಳಿತು ನಮ್ಮೆಲ್ಲರ ಎದುರಿಗೆ “ಬೆಳಗ್ಗೆ ಏನೋ ಕಾಗದವೊಂದು ಗೇಟಿನ ಹತ್ತಿರ ಬಿದ್ದಿತ್ತು” ಎಂದು ಜೇಬಿನಿಂದ ತೆಗೆಯುತ್ತಾ, “ನನ್ನ ಕನ್ನಡಕ ತಂದು ಕೊಡಕ್ಕಾ ಓದಿ ನೋಡುವೆ” ಎಂದರು. ಅಲ್ಲೇ ನಿಂತಿದ್ದ ನಾನು ಕನ್ನಡಕ ತಂದುಕೊಟ್ಟೆನು. ಕನ್ನಡಕ ಹಾಕಿ ನೋಡುತ್ತಾರೆ ಹಿಂದಿನ ದಿನ ಆ ಪಾದ್ರಿಗೆ ಕೊಟ್ಟಿದ್ದ ‘ವಿಶ್ವಮಾನವ ಸಂದೇಶ’ ಪತ್ರಿಕೆ ! ಇದೆಲ್ಲ ನೋಡುತ್ತಾ ನಿಂತಿದ್ದ ಮೊಮ್ಮಕ್ಕಳು “ಇದೇನು ಅಜ್ಜಯ್ಯ ನಿಮ್ಮ ವಿಶ್ವಮಾನವ ಸಂದೇಶ ಇದು. ಈ ಮೇಜಿನ ಮೇಲೆ ಇಟ್ಟಿರುವುದನ್ನು ಅಲ್ಲಿ ಯಾರು ಬಿಸಾಕಿದ್ದು? ಯಾರು ನಿಮ್ಮನ್ನು ಕೇಳದೆ ಇದನ್ನು ಮುಟ್ಟಿದ್ದು?” ಎಂದರು. ವಿಶ್ವಮಾನವ ಸಂದೇಶ ತಂದೆಯವರು ಕೊಟ್ಟಾಗ ಪಾದ್ರಿ ತೆಗೆದುಕೊಂಡು ಹೋಗಿ, ನಂತರ ಗೇಟಿನಿಂದ ಹೊರಹೋಗುವಾಗ, ಗೇಟಿನ ಒಳಗೆ ಎಸೆದು ಹೋಗಿರುವುದು. ರಾತ್ರಿ ತಂದೆಯವರ ಗಮನಕ್ಕೂ ಅದು ಬಂದಿತ್ತು. ಹೊರಹೋಗಿದ್ದ ಪಾದ್ರಿ ಕೈ ಏನನ್ನೋ ಮನೆಯೊಳಗೆ ಎಸೆದಂತೆ ಕಾಣಿಸಿತಂತೆ. ಕತ್ತಲೆಯಾದ್ದರಿಂದ ತಂದೆಯವರಿಗೆ ಸ್ಪಷ್ಟವಾಗಿ ಪಾದ್ರಿ ಏನು ಮಾಡಿದರು ಎಂದು ಗೊತ್ತಾಗಲಿಲ್ಲ. ತಂದೆಯವರಿಗೆ ಏನೋ ಹಾಗೆ ಕಂಡಿರಬಹುದು ಎಂದು ಸುಮ್ಮನಾದರಂತೆ. ಬೆಳಗ್ಗೆ ಗೊತ್ತಾಯಿತು ಅವರು ಎಸೆದಿರುವುದು ಏನು ಎಂದು. ಅದನ್ನು ನೋಡಿ “ಅಯ್ಯೋ ಪಾಪ, ಪಾದ್ರಿ ತಾನು ಅಲ್ಪಮಾನವ ಅನ್ನುವುದನ್ನು ಪೂರ್ತಿ ಸಾಬೀತುಪಡಿಸಿದ. ಅದರಲ್ಲಿ ಏನಿದೆ ಎಂದು ನೋಡುವಷ್ಟು ದೊಡ್ಡತನವಿಲ್ಲ ದವರು. ಕ್ರೈಸ್ತಮತ ಪ್ರಚಾರಕ್ಕೆ ಕೈಹಾಕಿದ್ದಾರೆ. ಪಾಪ ಆತನ ಅಲ್ಪಮತಿಗೆ ಭಾರತೀಯ ದರ್ಶನಗಳ ಅರಿವೂ ಇಲ್ಲ. ಆ ಮರಿ ಕ್ರೈಸ್ತನ ಮತಭ್ರಾಂತಿಗೆ ಇದೆಲ್ಲಾ ಎಲ್ಲಿ ಹಿಡಿಸುತ್ತದೆ? ಹೊಟ್ಟೆ ಪಾಡಿಗೆ ಪಾದ್ರಿಯಾಗಿರುವರೇನೋ, ಏನು ಕೆಲಸ ಮಾಡುವರೋ ಆ ಯೇಸುವಿಗೇ ಗೊತ್ತು !” ಎಂದು ನಕ್ಕರು. ಅವರ ನಗುವಿನೊಡನೆ ಮೊಮ್ಮಕ್ಕಳೂ ಸೇರಿದರು. “ಅವರಿಗೆ ಬೇಡದಿದ್ದರೆ ಇನ್ಯಾರಿಗಾದರೂ ಕೊಡಬಹುದಿತ್ತು. ಸದ್ಯ ಹರಿದು ಎಸೆಯಲಿಲ್ಲವಲ್ಲಾ, ಮನೆಯೊಳಗೆ ಹಾಕಿ ಹೋದರು” ಎಂದು ವಿಶ್ವಮಾನವ ಸಂದೇಶದ ಕಾಗದ ತೆಗೆದುಕೊಂಡು ಮುದುರಿದ ಕಾಗದ ಬಿಚ್ಚಿ ಚೆನ್ನಾಗಿ ಮಡಿಕೆಯೆಲ್ಲಾ ಹೋಗುವಂತೆ ಉಜ್ಜಿ, ಸರಿಪಡಿಸಿ ಅಚ್ಚುಕಟ್ಟು ಮಾಡಿ ಅವರ ಮೇಜಿನ ಮೇಲೆ ಉಳಿದ ವಿಶ್ವಮಾನವ ಸಂದೇಶ ಪತ್ರಿಕೆಗಳ ಜತೆಗೆ ಜೋಡಿಸಿ ಇಟ್ಟರು. “ಸರಿ ಈಗ ನನಗೆ ತುಂಬಾ ಹಸಿವಾಗುತ್ತಿದೆ. ಎಲ್ಲರೂ ಬನ್ನಿ, ಎಲ್ಲರೂ ಬನ್ನಿ ಕಾಫಿ ಕುಡಿಯೋಣ” ಎಂದು ಎದ್ದು ಊಟದ ಮನೆ ಕಡೆ ಹೊರಟರು. ಮೊಮ್ಮಕ್ಕಳು ನಗುತ್ತಾ, “ಅಜ್ಜಯ್ಯ ಬಿಸಾಡುವ ಜನಗಳಿಗೆ ಇನ್ನು ಮುಂದೆ ವಿಶ್ವಮಾನವ ಸಂದೇಶ ಕೊಡಬೇಡಿ” ಎಂದು ಹೇಳುತ್ತಾ ಅಜ್ಜಯ್ಯನೊಡನೆ ತಿಂಡಿ ತಿನ್ನಲು ಅವರನ್ನು ಹಿಂಬಾಲಿಸಿದರು. -ತಾರಿಣಿ ಚಿದಾನಂದ (ಕುವೆಂಪು ಮಗಳು), ಮೈಸೂರು (ವಿಜಯ ಕರ್ನಾಟಕ, ನವಂಬರ್ ೧೧, ೨೦೦೮) Posted by ಒಬ್ಬ ಓದುಗ at 1:49 PM 4 comments: Labels: ಕುವೆಂಪು, ಕ್ರೈಸ್ತ, ಪಾದ್ರಿ, ಮತಾಂತರ, ಹಿಂದೂ Thursday, October 23, 2008 ಅವ್ಯಾಹತ ಕ್ರಿಸ್ತೀಕರಣ: ಎಸ್.ಎಲ್.ಭೈರಪ್ಪ ಲೇಖಕ: ಎಸ್.ಎಲ್.ಭೈರಪ್ಪ [ವಿಜಯ ಕರ್ನಾಟಕ, ಅಕ್ಟೋಬರ್ ೧೬, ೨೦೦೮ ರಂದು ಪ್ರಕಟವಾದ ಲೇಖನ] “ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದಕ ಕೃತ್ಯ ನಡೆದಿಲ್ಲ. ನಮ್ಮಲ್ಲಿ ಪ್ರತಿ ದಿನ ಜನ ಉಗ್ರಗಾಮಿಗಳಿಂದ ಸಾಯುತ್ತಲೇ ಇದ್ದಾರೆ. ನಮ್ಮ ರಾಜಕಾರಣಿಗಳು ಇದನ್ನು ತಡೆಯುವುದು ಕನಸಿನ ಮಾತು.” “ಭಾರತದಲ್ಲಿ ದಿನಕ್ಕೆ ೫೦೦೦ ಜನರು ಕ್ರೈಸ್ತರಾಗಿ ಪರಿವರ್ತಿತರಾಗುತ್ತಿದ್ದಾರೆಂಬ ಒಂದು ಲೆಕ್ಕವಿದೆ. ಚರ್ಚಿಗೆ ಇರುವ ಆದಾಯ ಅಗಾಧವಾದದ್ದು. ಜನ ಬಲವೂ ಅಷ್ಟೇ ಅಗಾಧವಾದದ್ದು. ತಮ್ಮ ಮತ ವಿಸ್ತರಣೆಗಾಗಿ ಇವರು ಇಷ್ಟೊಂದು ಹಣ, ಮಾನವ ಶಕ್ತಿ ಮತ್ತು ಸಂಘಟನಾ ತಂತ್ರಗಳನ್ನೆಲ್ಲ ಯಾಕೆ ಕ್ರೋಡೀಕರಿಸಿ ವ್ಯಯ ಮಾಡುತ್ತಾರೆ?” “ಮತಾಂತರ ಚಟುವಟಿಕೆಯು ತಪ್ಪು ಎಂದು ನಾವು ಹೇಳುತ್ತೇವೆ. ಸರ್ವೋಚ್ಚ ನ್ಯಾಯಾಲಯವೂ ಹೀಗೆಯೇ ವ್ಯಾಖ್ಯೆ ಮಾಡಿದೆ. ಆದರೆ ಅದು ತಪ್ಪೆಂದು ಅವರು ಭಾವಿಸುವುದಿಲ್ಲ. ಧರ್ಮಬೋಧೆಯು ಅವಿಭಾಜ್ಯ ಅಂಗವಾಗಿ ಅವರ ತಲೆಯಲ್ಲಿ ಗಟ್ಟಿಯಾಗಿ ಕೂತಿರುವಾಗ ಅವರು ಬೇರೆ ರೀತಿ ಆಲೋಚಿಸುವುದು ಹೇಗೆ ಸಾಧ್ಯ?” “ಚರ್ಚಿನ ತಂತ್ರವು ಒಂದೊಂದು ಸಂದರ್ಭದಲ್ಲಿ ಒಂದೊಂದು ತೆರನಾಗಿರುತ್ತದೆ. ಬೆದರಿಸುವಲ್ಲಿ ಬೆದರಿಕೆ , ಹಿಂಸಿಸುವಲ್ಲಿ ಹಿಂಸೆ, ನಯಗಾರಿಕೆಯಲ್ಲಿ ನಯ, ಆಮಿಷದಲ್ಲಿ ಪೂರೈಕೆ ಮೊದಲಾಗಿ ಅವರದು ವಿವಿಧ ಸಮಯ ಸಾಧಕ ಮಾರ್ಗಗಳು.” ನಾಲ್ಕು ಶತಮಾನಗಳಿಂದಲೂ ಸತತವಾಗಿ ಭಾರತದಲ್ಲಿ ನಡೆಯುತ್ತಿರುವ ಕ್ರಿಸ್ತೀಕರಣವು ಸೋನಿಯಾ ಗಾಂಧಿಯ ಪಟ್ಟಾಭಿಷೇಕವಾದ ನಂತರ ಅಗಾಧವಾದ ಪ್ರಮಾಣಕ್ಕೆ ಏರಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಯಾವ ಪತ್ರಿಕೆ ಅಥವಾ ಟಿವಿ ಚಾನೆಲ್ ನವರು ಹಾಗೆಂದು ಸ್ಪಷ್ಟವಾಗಿ ಬರೆದಿಲ್ಲ, ಹೇಳಿಲ್ಲ. ಆದರೆ ಈ ಅಗಾಧತೆಯಿಂದ ಎಚ್ಚೆತ್ತು ಒರಿಸ್ಸಾ, ಕರ್ನಾಟಕ ಮೊದಲಾದ ಕಡೆ ಅಲ್ಲಲ್ಲಿ ಪ್ರತಿಕ್ರಿಯೆಯಾಗುತ್ತಿರುವುದನ್ನು ಎಲ್ಲ ಮಾಧ್ಯಮದವರೂ ಮುಖಪುಟದ ಸುದ್ದಿ ಮಾಡುತ್ತಿರುವುದು, ಜಾತ್ಯತೀತ ಪತ್ರಿಕೆಗಳು, ಎಡಪಂಥದ ಮಾಧ್ಯಮಗಳು ಭಾರತದ ವಿನಾಶವೇ ಸಂಭವಿಸುತ್ತಿದೆ ಎಂಬಂತೆ ಹುಯಿಲೆಬ್ಬಿಸಿ ಮಿಶನರಿಗಳಿಗೆ ಸಹಕಾರಿಯಾಗಿ ವರ್ತಿಸುತ್ತಿರುವುದು ಸಾಧಾರಣ ಓದುಗನಿಗೂ ಅರ್ಥವಾಗುತ್ತದೆ. ಈ ಹುಯಿಲನ್ನು ಸೋನಿಯಾಗಾಂಧಿಯ ಅನುಯಾಯಿಗಳು, ಬುದ್ಧಿಜೀವಿಗಳು, ಜಾತ್ಯತೀತರು, ತಾರಕಕ್ಕೇರಿಸಿ ಹಿಂದೂ ಪರ ಸಂಘಟನೆಗಳು, ಮಠಾಧೀಶರು ಮತ್ತು ಬಿಜೆಪಿ ಸರಕಾರಗಳಿಗೆ ಮಸಿ ಬಳಿಯುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶ್ವಸಂಸ್ಥೆಯ ಮಟ್ಟದಲ್ಲಿ ಭಾರತಕ್ಕೆ ಛೀಮಾರಿ ಹಾಕಿಸಲು ಉದ್ಯುಕ್ತವಾಗಿರುವ ಕ್ರೈಸ್ತ ಸಂಘಟನೆಗಳಿಗ ನೆರವಾಗುತ್ತಿರುವುದೂ ಸ್ಪಷ್ಟವಾಗಿದೆ. ಕೇಂದ್ರ ಸರಕಾರವನ್ನು ಹಿಡಿದುಕೊಂಡಿರುವ ಸೋನಿಯಾ ಗಾಂಧಿಯ ಕಾಂಗ್ರೆಸ್ ಪಕ್ಷವಂತೂ ಈ ಸನ್ನಿವೇಶವನ್ನು ದೊಡ್ಡದು ಮಾಡಿಕೊಂಡು ಕರ್ನಾಟಕ ಮತ್ತು ಒರಿಸ್ಸಾ ಸರಕಾರಗಳನ್ನು ಬರ್ಖಾಸ್ತ್ ಮಾಡುವ ಹುನ್ನಾರವನ್ನೂ ಮಾಡುತ್ತಿದೆ. ಹಾಗೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನಗಳು ಬರ್ಖಾಸ್ತುಗೊಂಡ ಸರಕಾರಗಳನ್ನು ಪುನರ್ಪ್ರತಿಷ್ಠಾಪಿಸಿಯಾರೆಂಬ ಲೆಕ್ಕಾಚಾರದಿಂದ ತಡೆದುಕೊಂಡಿದೆ. ಪ್ರತಿಕ್ರಿಯೆಯಾಗಿ ಗಲಭೆ ಮಾಡುತ್ತಿರುವವರು ಭಜರಂಗದಳದವರೆಂದು ಕೇಂದ್ರದ ಆಡಳಿತ ಪಕ್ಷವೂ ಎಡಪಂಥೀಯ ಮತ್ತು ವಿಶೇಷವಾಗಿ ಇಂಗ್ಲಿಷ್ ಮಾಧ್ಯಮವೂ ಥಟ್ಟನೆ ಆಪಾದಿಸುತ್ತಿವೆ. ಆದರೆ ಈ ಗಲಭೆಯಲ್ಲಿ ಭಜರಂಗದಳದ ಪಾತ್ರವೆಷ್ಟು ? ಭಜರಂಗದಳದ ಹೆಸರಿನಲ್ಲಿ ನಡೆಯುವ ಗಲಭೆಗಳೆಷ್ಟು ? ಮಿಶನರಿಗಳ ಆಮಿಷ ಮತ್ತು ಅಪಪ್ರಚಾರಕ್ಕೆ ಒಳಗಾಗಿ ಮತಾಂತರಗೊಂಡವರ ನೆರೆ ಹೊರೆಯವರೇ ಸ್ವಯಂಪ್ರೇರಿತರಾಗಿ ಗಲಭೆ ಮಾಡಿರುವವರೆಷ್ಟು ಎಂಬ ವಿವರಗಳನ್ನು ಯೋಚಿಸುವುದು ಇವರಾರಿಗೂ ಬೇಕಿಲ್ಲ. ಭಾರತದಲ್ಲಿ ವಾಸಿಸುತ್ತಿರುವ ಫ್ರಾಂಕ್ವಾಗೋತಿಯೆ ಎಂಬ ಫ್ರೆಂಚ್ ಪತ್ರಕರ್ತನು ಸೋನಿಯಾಗಾಂಧಿಯ ಆಡಳಿತದಲ್ಲಿ ನಡೆಯುತ್ತಿರುವ ಕ್ರಿಸ್ತೀಕರಣವನ್ನು ವಿವರಿಸುತ್ತಾ ಅಂಜಿಕೆಯನ್ನು ವ್ಯಕ್ತಪಡಿಸಿದ್ದಾನೆ. ಆತ ಹೇಳುತ್ತಾನೆ; “ನಾನು ಸ್ವತಃ ಪಾಶ್ಚಿಮಾತ್ಯ ಹಾಗೂ ಹುಟ್ಟಿನಿಂದ ಕ್ರೈಸ್ತ. ಹೆಚ್ಚಾಗಿ ಕ್ಯಾಥೊಲಿಕ್ ಶಾಲೆಗಳಲ್ಲಿ ಬೆಳೆದವನು. ಚಿನ್ನದಂಥ ಮನುಷ್ಯನಾಗಿದ್ದ ನನ್ನ ಚಿಕ್ಕಪ್ಪ ಹೈಗೋತಿಯೇ ಪ್ಯಾರಿಸ್ಸಿನ ಒಂದು ಸುಂದರ ಚರ್ಚಿನ ಅರ್ಚಕನಾಗಿದ್ದ. ಫ್ರ್ರಾನ್ಸಿನಲ್ಲಿ ಪ್ರಸಿದ್ಧ ಕಲಾವಿದನಾಗಿದ್ದ ನನ್ನ ತಂದೆ ಜೀವನವಿಡೀ ನಿಷ್ಠಾವಂತ ಕ್ಯಾಥೊಲಿಕ್. ಅವರು ಪ್ರತಿದಿನ ಚರ್ಚಿಗೆ ಹೋಗುತ್ತಿದ್ದರು...ಆದರೂ ಸೋನಿಯಾಗಾಂಧಿಯ ರಾಜ್ಯಭಾರದಲ್ಲಿ ಕ್ರೈಸ್ತ ಧರ್ಮವು ಎಷ್ಟೊಂದು ಪ್ರಮಾಣದಲ್ಲಿ ಭಾರತವನ್ನು ವಶಕ್ಕೆ ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಿದಾಗ ನಾನು ಕಸಿವಿಸಿಗೊಳ್ಳುತ್ತೇನೆ. ೨೦೦೧ನೇ ಸೆನ್ಸಸ್ ಪ್ರಕಾರ ಭಾರತದಲ್ಲಿ ೨೩೪ ಲಕ್ಷ ಕ್ರೈಸ್ತರಿದ್ದಾರೆ. ಎಂದರೆ ಶೇಕಡಾ ೨.೫ ರಷ್ಟೂ ಇಲ್ಲ. ಇದೊಂದು ನಗಣ್ಯ ಸಂಖ್ಯೆ. ಆದರೂ ಇಂದು ಭಾರತದಲ್ಲಿ ಐದು ಜನ ಕ್ರೈಸ್ತ ಮುಖ್ಯಮಂತ್ರಿಗಳಿದ್ದಾರೆ- ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಕೇರಳ ಮತ್ತು ಆಂಧ್ರ ಪ್ರದೇಶ. ಸೋನಿಯಾಗಾಂಧಿಯ ಸಮೀಪ ವರ್ತುಲದಲ್ಲಿರುವ ರಾಜಕಾರಣಿಗಳಲ್ಲಿ ಬಹುತೇಕರು ಕ್ರೈಸ್ತರು ಅಥವಾ ಮುಸ್ಲಿಮರು. ಆಕೆಗೆ ಹಿಂದೂಗಳಲ್ಲಿ ನಂಬಿಕೆ ಇಲ್ಲವೆಂದು ತೋರುತ್ತದೆ. ಕ್ರೈಸ್ತಳಾದ ಅಂಬಿಕಾ ಸೋನಿ ಕಾಂಗ್ರೆಸ್ಸಿನ ಜನರಲ್ ಸೆಕ್ರೆಟರಿ, ರಾಜಕೀಯವಾಗಿ ಬಹಳ ಬಲಶಾಲಿಯಾದ ವ್ಯಕ್ತಿ, ಸೋನಿಯಾ ಗಾಂಧಿಗೆ ಹತ್ತಿರದ ಪ್ರವೇಶಾಧಿಕಾರವುಳ್ಳವಳು. ಆಸ್ಕರ್ ಫರ್ನಾಂಡೀಸರು ಕೇಂದ್ರ ಸರಕಾರದ ಕಾರ್‍ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮಂತ್ರಿ. ಮಾರ್ಗರೇಟ್ ಆಳ್ವಾ ಮಹಾರಾಷ್ಟ್ರದಲ್ಲಿ ಭಯ ಹುಟ್ಟಿಸುವಂಥ ಹೆಗ್ಗಳಿಕೆಯವರು. ಕರ್ನಾಟಕವು ವಸ್ತುಶಃ ಎ.ಕೆ. ಆಂಟನಿಯವರ ನಿಯಂತ್ರಣದಲ್ಲಿದೆ; ಅವರ ಕಾರ್ಯದರ್ಶಿಗಳೆಲ್ಲ ದಕ್ಷಿಣ ಭಾರತದ ಕ್ರೈಸ್ತ ಸಂಘಟನೆಯಿಂದ ಬಂದವರು. ಹಿಂದೂ ದ್ವೇಷಿಯಾದ ವಾಲ್ಸನ್ ಥಂಪುವು ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್) ಪಠ್ಯಕ್ರಮದ ವಿಮರ್ಶಾ ಸಮಿತಿಯ ಅಧ್ಯಕ್ಷ. ಹಿಂದೂ ಹಿಂಸಕನೆಂದೇ ಪ್ರಸಿದ್ಧನಾದ ಜಾನ್ ದಯಾಳ್ ಸೋನಿಯಾ ಗಾಂಧಿಯಿಂದ ರಾಷ್ಟ್ರೀಯ ಭಾವೈಕ್ಯತಾ ಸಮಿತಿಗೆ ನಾಮಕರಣಗೊಂಡವನು. ಹಿಂದೂ ದ್ವೇಷಿ ಕಾಂಚಾ ಎಲ್ಲಯ್ಯ ಅವರಿಗೆ ವಿಶ್ವಸಂಸ್ಥೆ ಮತ್ತು ಅಮೆರಿಕದ ಸಂಸತ್ತಿನಲ್ಲಿ ಭಾರತದಲ್ಲಿ ಜಾತಿ ಭೇದವಿರುವುದೆಂದೂ, ಅದನ್ನು ಈ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕೆಂದೂ ವಶೀಲಿ ಮಾಡಲು ಭಾರತ ಸರಕಾರವು ಅನುಮತಿ ಕೊಟ್ಟಿದೆ.... ಸೋನಿಯಾಗಾಂಧಿ ವಿರುದ್ಧ ನನಗೆ ವೈಯಕ್ತಿಕವಾಗಿ ಏನೂ ಕಹಿ ಭಾವನೆ ಇಲ್ಲ... ಆದರೆ ಆಕೆ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿ ತೊಡಗಿದಂದಿನಿಂದ ಕ್ರೈಸ್ತ ಮತಕ್ಕೆ ಪರಿವರ್ತನೆಗೊಳ್ಳುತ್ತಿರುವವರ ಸಂಖ್ಯೆ ನಾಗಾಲೋಟ ಹೊಡೆಯುತ್ತಿದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದೇಶಿ ಮಿಶನರಿಗಳು ಕ್ರೈಸ್ತ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯವು ಬಂದಾಗ ತ್ರಿಪುರದಲ್ಲಿ ಕ್ರೈಸ್ತರೇ ಇರಲಿಲ್ಲ; ಈಗ ಒಂದು ಲಕ್ಷ ಇಪ್ಪತ್ತು ಸಾವಿರವಿದ್ದಾರೆ. ೧೯೯೧ ರಿಂದ ಅವರ ಸಂಖ್ಯೆಯಲ್ಲಿ ಶೇ. ೯೦ ರಷ್ಟು ಹೆಚ್ಚಳವಾಗಿದೆ. ಅರುಣಾಚಲ ಪ್ರದೇಶದಲ್ಲಿ ಈ ಸಂಖ್ಯೆಯು ಇನ್ನೂ ಎದ್ದು ಹೊಡೆದು ಕಾಣುತ್ತದೆ. ೧೯೨೧ ರಲ್ಲಿ ೧೭೭೦ ಕ್ರೈಸ್ತರಿದ್ದದ್ದು, ಈಗ ಹನ್ನೆರಡು ಲಕ್ಷವಿದ್ದಾರೆ ; ಅಲ್ಲದೇ ೭೮೦ ಚರ್ಚುಗಳಿವೆ. ಆಂಧ್ರ ಪ್ರದೇಶದಲ್ಲಂತೂ ಹೊಸ ಹೊಸ ಚರ್ಚುಗಳು ಪ್ರತಿದಿನವೂ ದೂರದೂರದ ಹಳ್ಳಿಗಳಲ್ಲಿ ತಲೆ ಎತ್ತುತ್ತಿರುವುದು ಮಾತ್ರವಲ್ಲದೆ ತಿರುಪತಿಯಲ್ಲೂ ಕಟ್ಟುವ ಹುನ್ನಾರ ನಡೆದಿದೆ. ಈಶಾನ್ಯ ರಾಜ್ಯಗಳ ಮಿಜೋ, ಬೋಡೋಗಳಂಥ ಹಲವು ಚಳವಳಿಗಳು ಕ್ರೈಸ್ತ ಪ್ರಬಲವಾಗಿರುವುದು ಮಾತ್ರವಲ್ಲದೇ ಮಿಶನರಿಗಳ ಕುಮ್ಮಕ್ಕಿ ನಿಂದಲೇ ನಡೆಯುತ್ತಿವೆ...ಕಳೆದ ಎರಡು ದಶಕಗಳಲ್ಲಿ ಅಸ್ಸಾಮ್ ಮತ್ತು ಮಣಿಪುರಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ದಂಗೆಯಿಂದ ಜೀವ ಕಳೆದುಕೊಂಡಿದ್ದಾರೆ.... ಸರಕಾರದ ಮಾಲೀಕತ್ವದಲ್ಲಿರುವ ಇಂಡಿಯನ್ ಏರ್ ಲೈನ್ಸ್‌ನವರು ದ್ವಾರಕಾ ಪೀಠದ ಸನ್ಯಾಸಿ ಅವಿಮುಕ್ತಾನಂದ ಸರಸ್ವತಿ ಅವರನ್ನು ಕೈಯಲ್ಲಿ ತನ್ನ ಸನ್ಯಾಸದ ಲಾಂಛನವಾದ ಒಂದು ದಂಡವನ್ನು ಹಿಡಿದುಕೊಂಡಿದ್ದರಿಂದ ವಿಮಾನದಿಂದ ಕೆಳಗಿಳಿಸಿದರು. ಅದೊಂದು ಸಣ್ಣ ಬಿದಿರು ತುಂಡು. ಸೋನಿಯಾಗಾಂಧಿಯಂಥ ವಿದೇಶಿಗೆ ರಾಷ್ಟ್ರದ ಪಟ್ಟ ಕಟ್ಟಿದ ಈ ದುರ್ಬಲ ದೇಶದಲ್ಲಲ್ಲದೇ ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆಯಲು ಸಾಧ್ಯ?” ನಾನು ಇಲ್ಲಿ ಫ್ರಾಂಕ್ವಾ ಗೋತಿಯೆ ಅವರ ಲೇಖನದ ಕೆಲವು ವಾಕ್ಯಗಳನ್ನಷ್ಟೇ ಉದ್ಧರಿಸಿದ್ದೇನೆ. (Francois Gautier:www.francoisgautier.com 09343538419/09442123255) . ಕ್ರೈಸ್ತರ ಧರ್ಮಗುರು ಪೋಪ್ ಭಾರತಕ್ಕೆ ಭೇಟಿ ಕೊಟ್ಟಾಗ ಇಡೀ ಮಾಧ್ಯಮವು ಅದರಲ್ಲೂ ಇಂಗ್ಲಿಷ್ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಎಷ್ಟೊಂದು ಸಂಭ್ರಮಪಟ್ಟವು ? ಸಂಭ್ರಮ ಸೃಷ್ಟಿಸಿದವು ! ಒಬ್ಬ ರಾಷ್ಟ್ರಾಧ್ಯಕ್ಷನಿಗೆ ಸಲ್ಲುವ ಸ್ವಾಗತವನ್ನು ಭಾರತ ಸರಕಾರವು ಸಲ್ಲಿಸಿತು. ಭಾರತದ ರಾಷ್ಟ್ರಾಧ್ಯಕ್ಷರು, ಪ್ರಧಾನಿಯಾದಿಯಾಗಿ ಮಂತ್ರಿ ಗಣವು ಸಾಲುಗಟ್ಟಿ ಅಭಿವಂದಿಸಿತು. ಇವರು ಭಾರತಕ್ಕೆ ಬರುತ್ತಿರುವುದು ನಮ್ಮ ಜನಗಳ ಮತ ಪರಿವರ್ತನೆಗೆ, ಈತನಿಗೆ ದೇಶದಲ್ಲಿ ಪ್ರವೇಶ ಕೊಡಕೂಡದು, ಕೊಟ್ಟರೂ ಸರ್ಕಾರದ ವತಿಯಿಂದ ಸ್ವಾಗತ ನೀಡಕೂಡದು ಎಂದು ಕೆಲವು ಹಿಂದೂ ಸಂಘಟನೆಗಳು ದನಿ ಎತ್ತಿದ್ದಕ್ಕೆ ಇಂಗ್ಲಿಷ್ ಮಾಧ್ಯಮಗಳು ಮತ್ತು ಪ್ರಗತಿಪರರೆಂದು ವೇಷ ಹಾಕುವ ಗುಂಪುಗಳು ಹಿಂದೂ ಮೂಲಭೂತವಾದಿಗಳೆಂದು ಬಾಯಿ ಬಡಿದುಕೊಂಡವು. ಆದರೂ ಈ ಪೋಪ್ ಮಹಾಶಯ ಮಾಡಿದ್ದೇನು? “ಮೊದಲನೆಯ ಸಹಸ್ರಮಾನದಲ್ಲಿ ಶಿಲುಬೆಯನ್ನು ಯೂರೋಪಿನ ನೆಲದಲ್ಲಿ ನೆಟ್ಟಂತೆ, ಎರಡನೆ ಸಹಸ್ರಮಾನದಲ್ಲಿ ಅಮೆರಿಕಗಳು ಮತ್ತು ಆಫ್ರಿಕದಲ್ಲಿ ನೆಟ್ಟಂತೆ, ಮೂರನೆಯ ಸಹಸ್ರಮಾನದಲ್ಲಿ ನಮ್ಮ ನಂಬಿಕೆಯ ಭಾರಿ ಫಸಲನ್ನು ಈ ದೊಡ್ಡ ಮತ್ತು ಸಶಕ್ತ ಖಂಡದಲ್ಲಿ (ಏಷ್ಯಾ) ತೆಗೆಯುತ್ತೇವೆ” ಎಂದು ರಾಜಾರೋಷವಾಗಿ ಘೋಷಿಸಿದರು. ಪೋಪರು ತಮ್ಮ ಉದ್ದೇಶದಲ್ಲಿ ಮುಚ್ಚು ಮರೆ ಮಾಡಲಿಲ್ಲ. ಆದರೆ ಹಿಂದೂ ಸಂಘಟನೆಗಳನ್ನು ಮೂಲಭೂತವಾದಿಗಳೆಂದು ಬಾಯಿ ಬಡಿದುಕೊಂಡಿದ್ದ ಮಾಧ್ಯಮದವರು ಮತ್ತು ಪ್ರಗತಿಶೀಲ ವೇಷಧಾರಿಗಳು ಸದ್ಯಕ್ಕೆ ಜಾಣ ಮೌನ ತಾಳಿದರು. ಮೊದಲಿನಿಂದಲೂ ಕ್ರೈಸ್ತ ಮತದ ಸೋಂಕಿಲ್ಲದೆ ತಮ್ಮ ತಮ್ಮ ಮೂಲ ಮತಗಳನ್ನು ಅನುಸರಿಸಿಕೊಂಡು ಬದುಕುತ್ತಿದ್ದ ಈ ಕೆಳಕಂಡ ದೇಶಗಳು ಆಕ್ರಮಣಕಾರಿ ಮಿಶನರಿಗಳ ತಂತ್ರಗಳಿಂದ ಕ್ರೈಸ್ತರಾಗಿರುವ ಶೇಕಡವಾರು ಸಂಖ್ಯೆಯು ಈ ರೀತಿ ಇದೆ : ಅಂಗೋಲಾ ಶೇಕಡ ೯೦, ಬುರುಂಡಿ ಶೇಕಡ ೭೮, ಕೆಮರೂನ್ ಶೇಕಡ ೩೫, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಶೇಕಡ ೮೨, ಚಾದ್ ಶೇಕಡ ೩೩, ಕಾಂಗೋ ಶೇಕಡ ೬೨, ಪೂರ್ವ ತೈಮೂರ್ ಶೇ.೯೮, ಇಥಿಯೋಪಿಯಾ ಶೇ.೫೨, ಈಕ್ವಟೋರಿಯಲ್‌ಗಿನಿ ಶೇ. ೯೪, ಗಬನ್ ಶೇ.೭೯, ಕೆನ್ಯ ಶೇ.೨೫, ಲೈಬೀರಿಯಾ ಶೇ.೬೮, ಮೊಸಾಂಬಿಕ್ ಶೇ.೩೧, ನೈಜೀರಿಯಾ ಶೇ.೫೨, ಪಾಪುವಾ ನ್ಯೂಗಿನೀ ಶೇ.೯೭, ಫಿಲಿಪ್ಪೀನ್ಸ್ ಶೇ.೮೪, ರುವಾಂಡ ಶೇ.೬೯, ದಕ್ಷಿಣ ಆಫ್ರಿಕ ಶೇ.೭೮, ದಕ್ಷಿಣ ಕೊರಿಯಾ ಶೇ.೪೯, ಸೂಡಾನ್ ಶೇ.೩೦, ತಾಂಜಾನಿಯಾ ಶೇ.೨೦, ಟೋಗೋ ಶೇ.೨೩, ಉಗಾಂಡಾ ಶೇ.೭೦, ಜೈರೆ ಶೇ.೯೦. ಮಿಶನರಿ ಕೆಲಸಗಳಿಗೆ ಅಮೆರಿಕದಿಂದ (USA) ವರ್ಷಕ್ಕೆ ೧೪೫ ಬಿಲಿಯನ್ ಡಾಲರ್ ಹರಿದು ಬರುತ್ತದೆ. ಇಡೀ ಪ್ರಪಂಚದಲ್ಲಿ ಚರ್ಚುಗಳು ೧.೧ ಬಿಲಿಯನ್ ಡಾಲರ್‌ಗಳನ್ನು ಮತ ಪರಿವರ್ತನೆಯನ್ನು ಗುರಿಯಾಗಿಟ್ಟುಕೊಂಡ ಸಂಶೋಧನೆಗೆ ಖರ್ಚು ಮಾಡುತ್ತವೆ. ಇವುಗಳು ೩೦೦ ಭಾಷೆಗಳಲ್ಲಿ ೧೮೦ ವಿಷಯಗಳನ್ನು ಕುರಿತದ್ದಾಗಿರುತ್ತವೆ. ಪುಸ್ತಕ ಅಥವಾ ಲೇಖನಗಳು ೫೦೦ ಭಾಷೆಗಳಲ್ಲಿ ಪ್ರಕಟವಾಗುತ್ತವೆ. ಅವುಗಳ ಒಟ್ಟು ಸಂಖ್ಯೆ ೧೭೫೦೦೦. ಪ್ರತಿಯೊಬ್ಬ ವ್ಯಕ್ತಿಯ ಮತ ಪರಿವರ್ತನೆಗೂ ಒಟ್ಟು ೩,೩೦೦೦ ಡಾಲರ್‌ಗಳು ಖರ್ಚಾಗುತ್ತವೆ. ಈ ಮೊತ್ತವು ಪರಿವರ್ತಿತನಾಗುವವನಿಗೆ ಸೇರುತ್ತದೆಂದಲ್ಲ. ಪರಿವರ್ತನಾ ಚಟುವಟಿಕೆಗಳ ಆಡಳಿತ, ಯೋಜನೆ, ಕಾರ್ಯಾಚರಣೆ ಇವುಗಳ ಒಟ್ಟು ಲೆಕ್ಕದಲ್ಲಿ ಈ ಖರ್ಚನ್ನು ಲೆಕ್ಕ ಹಾಕಲಾಗಿದೆ. ಕ್ರಿ.ಶ. ೧೫೦೦ರಲ್ಲಿ ಮಿಶನರಿ ಕಾರ್ಯದಲ್ಲಿ ತೊಡಗಿಸಿಕೊಂಡ ಕ್ರೈಸ್ತರ ಸಂಖ್ಯೆ ಮೂವತ್ತು ಲಕ್ಷವಿತ್ತು.. ಈಗ ಅದು ೬೪.೮ ಕೋಟಿಯಾಗಿದೆ. ಅದರಲ್ಲಿ ಶೇ.೫೪ ಬಿಳಿಯೇತರರೇ ಆಗಿದ್ದಾರೆ. ಎಂದರೆ ಬಿಳಿಯೇತರರಿಗೆ ತರಬೇತಿ ಕೊಟ್ಟು, ಹಣ ಪ್ರಭಾವಗಳನ್ನು ಒದಗಿಸಿ ಮಿಶನರಿ ಕೆಲಸಗಳಲ್ಲಿ ತೊಡಗಿಸುವುದು ಈ ತಂತ್ರವಾಗಿದೆ. ಇದು ಬ್ರಿಟಿಷರ ಕಾಲದಲ್ಲಿ ಭಾರತೀಯರನ್ನು ಸೈನಿಕರಾಗಿ ನೇಮಿಸಿಕೊಂಡು ಸರಿಯಾದ ಸಂಬಳ ಸಾರಿಗೆ ಕೊಟ್ಟು ಭಾರತವನ್ನು ಆಳಲು ಬಳಸಿಕೊಳ್ಳುತ್ತಿದ್ದಂತೆ. ಇದರಿಂದ ಯಾವ ಅಧ್ಯಾತ್ಮ ಸಾಧನೆಯಾಗುತ್ತದೆ? ಭಾರತೀಯರಿಗೆ ಇದು ಅರ್ಥವಾಗದ ಸಮಸ್ಯೆ. ಏಕೆಂದರೆ ಭಾರತೀಯರಿಗೆ ಅಧ್ಯಾತ್ಮವೆಂದರೆ ಕಾಡಿನ ಪರ್ಣಶಾಲೆಯಲ್ಲಿ, ಬೆಟ್ಟದ ಗುಹೆಗಳಲ್ಲಿ, ಹಿಮಾಲಯದ ಹೆಪ್ಪುಗಟ್ಟಿಸುವ ಎತ್ತರದಲ್ಲಿ ಕುಳಿತು ಅಂತರ್ಮುಖಿಯಾಗುವ ಸಾಧನೆ . ತನ್ನೊಳಗೆ ಬೆಳಕು ಸಾಧಿಸುವ ಮುನ್ನ ಅನ್ಯರಿಗೆ ಉಪದೇಶ ಮಾಡುವ ಅಧಿಕಾರವಿರುವುದಿಲ್ಲ. ಉಪದೇಶ ಮಾಡುವುದಾದರೂ ಏನನ್ನು? ಅಂತರ್ಮುಖಿಯಾಗು. ನಿನ್ನನ್ನು ನೀನು ಅರಿ. ಧರ್ಮವೆಂದರೆ ಈ ಅರಿವು. ಅದನ್ನು ವಿವರಿಸುವ ರೀತಿಗೆ ಜಿಜ್ಞಾಸೆ ಎಂದು ಹೆಸರು. ಆದರೆ ಕ್ರೈಸ್ತಮತದ ತಿರುಳಾಗಲಿ, ರೀತಿಯಾಗಲಿ ಅದಲ್ಲ. ಕ್ರೈಸ್ತ ಮತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸೆಮೆಟಕ್ ರಿಲಿಜನ್‌ಗಳ ಗುಣಲಕ್ಷಣಗಳನ್ನು ನಾವು ತಿಳಿಯಬೇಕು. ಇವುಗಳನ್ನು ಪ್ರವಾದಿ ಮತಗಳು (Prophetic Religions) ಎಂದು ಕೂಡ ಕರೆಯುತ್ತಾರೆ. ಎಂದರೆ ಈ ಮತಗಳು ಒಬ್ಬೊಬ್ಬ ಪ್ರವಾದಿಯಿಂದ ಸ್ಥಾಪಿತವಾದವು. ಪ್ರವಾದಿ ಅಬ್ರಹಾಮನಿಂದ ಸ್ಥಾಪಿತವಾದ ಎಹೂದಿ ಮತವು ಮೂಲ. ಅದರ ಪರಿವರ್ತಿತ ರೂಪವೇ ಏಸುವಿನಿಂದ ಸ್ಥಾಪಿತವಾದ ಕ್ರೈಸ್ತ ಮತ. ಅನಂತರ ಅದೇ ಅಬ್ರಹಾಮನ ಮತದ ಎಷ್ಟೋ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ಪ್ರವಾದಿ ಮಹಮ್ಮದರಿಂದ ಸ್ಥಾಪಿತವಾದದ್ದು ಇಸ್ಲಾಂ. ಈ ಮೂರೂ ಪ್ರವಾದಿ ಮತಗಳಲ್ಲಿರುವ ಸಾಮಾನ್ಯ ಅಂಶವೆಂದರೆ : ದೇವರು ನಿಮಗೆ ನೇರವಾಗಿ ಲಭ್ಯನಲ್ಲ. ನೀವು ಮೂಲತಃ ಪಾಪಿಗಳು. ದೇವರು ಮಹಾ ಭಯಂಕರ, ಮಹಾಕ್ರೂರ ಶಿಕ್ಷೆಯನ್ನು ಮುಲಾಜಿಲ್ಲದೆ ಕೊಡುವವನು. ಪ್ರವಾದಿಯಾದ ನನ್ನನ್ನು ನಂಬಿ ನನ್ನ ಬೋಧೆಯಂತೆ ನಡೆದರೆ ನಿನಗೆ ಸತ್ತ ನಂತರ ಘೋರ ನರಕಕ್ಕೆ ಬೀಳುವುದನ್ನು ತಪ್ಪಿಸಿಕೊಳ್ಳುವ ಅವಕಾಶವುಂಟು. ಇಲ್ಲದಿದ್ದರೆ ಕೊನೆ ಇಲ್ಲದ ನೋವಿನ ನರಕ ಕಟ್ಟಿಟ್ಟದ್ದು. ನೀನು ನಂಬಬೇಕು. ಇತರರನ್ನು ನಂಬಿಸಬೇಕು. ಎಲ್ಲೆಲ್ಲಿಯೂ ಹೋಗಿ ಬಲ ಪ್ರಯೋಗವನ್ನಾದರೂ ಮಾಡಿ ನಂಬುವವರನ್ನು ಹೆಚ್ಚಿಸಬೇಕು. ಅದೇ ಧರ್ಮ, ಅದೇ ನೀತಿ. ನಂಬದವರನ್ನು ಹಿಂಸಿಸಿ ಕೊಲ್ಲುವ, ಗುಲಾಮರನ್ನಾಗಿ ತುಳಿದು ದುಡಿಸಿಕೊಳ್ಳುವ ವಿಧಾನವನ್ನು ಪ್ರವಾದಿ ಮಹಮದರು ಬೋಧಿಸಿದರು. ಈ ಬೋಧನೆಯು ಹಲವು ಕಡೆಗಳಲ್ಲಿ ಪ್ರಖರವಾಗಿ ಪ್ರಧಾನವಾಗಿ ಕುರಾನಿನ ಅವಿಭಾಜ್ಯ ಅಂಗವಾಗಿದೆ. ಅನ್ಯಮತಗಳ ದೇವರುಗಳನ್ನು ಯಾವ ಪ್ರವಾದಿಯೂ ಸಹಿಸುವುದಿಲ್ಲ. ನನ್ನ ‘ಆವರಣ’ ಕಾದಂಬರಿಯಲ್ಲಿ ಈ ಗುಣಲಕ್ಷಣಗಳನ್ನು ಚಿತ್ರಿಸಿದ್ದೇನೆ. ಸಮರ್ಪಕ ಉತ್ತರ ಇಲ್ಲ ಏಸುವೂ ಇಂಥ ಒಬ್ಬ ಪ್ರವಾದಿಯೇ.. ಆದರೆ ಅವನು ಪ್ರವಾದಿ ಅಬ್ರಹಾಮನ ಬೋಧನೆಗಿಂತ ಭಿನ್ನವಾದ ತಾಳ್ಮೆ ಮತ್ತು ಪ್ರೇಮವನ್ನು ಬೋಧಿಸಿದನೆಂದು ಪ್ರತೀತಿ. ವಾಸ್ತವವಾಗಿ ಏಸುವೆಂಬ ಒಬ್ಬ ವ್ಯಕ್ತಿ ಇದ್ದನೇ ಎಂಬ ಸಂಶಯವು ಸಂಶೋಧಕರಲ್ಲಿದೆ. ಇದ್ದಿದ್ದರೂ ಅವನು ಬೈಬಲಿನ ಹೊಸ ಒಡಂಬಡಿಕೆಯಲ್ಲಿ ಚಿತ್ರಿತವಾಗಿರುವಂತೆ ಇದ್ದನೇ? ಎಂಬ ಇನ್ನೊಂದು ಸಂಶಯವೂ ಪ್ರಬಲವಾಗಿದೆ. Dead Sea Scrolls ಸಂಶೋಧನೆಯಾದ ನಂತರ ಈ ಸಂಶಯವು ತುಂಬ ಗಟ್ಟಿಯಾಗಿದೆ. ವಾಸ್ತವವಾಗಿ ಕ್ರೈಸ್ತ ಧರ್ಮಕ್ಕೆ ಈಗಿರುವ ಸ್ವರೂಪವನ್ನು ಕೊಟ್ಟವನು ಚರ್ಚಿನ ಸ್ಥಾಪಕನಾದ ಪಾಲ್. ಅದು ಏನೇ ಇರಲಿ, ನೀವು ಬೈಬಲನ್ನು ನಂಬದಿದ್ದರೆ ನಿಮಗೆ ಮಹಾಘೋರ ನರಕವೇ ಗತಿ ಎಂಬ ವಿಷಯದಲ್ಲಿ ಬೈಬಲಿಗೂ ಕುರಾನಿಗೂ ವ್ಯತ್ಯಾಸವಿಲ್ಲ. ನಮ್ಮ ಏಸುವನ್ನು ಶಿಲುಬೆಗೆ ಏರಿಸಿದವರು ಎಹೂದಿಗಳು ಎಂಬ (ತಪ್ಪು) ಗ್ರಹಿಕೆಯಿಂದ ಆನಂತರ ಪ್ರಬಲರಾದ ಕ್ರೈಸ್ತರು, ಎಹೂದಿಗಳನ್ನು ಹಿಂಸಿಸತೊಡಗಿ, ಬಲವಂತ ಮತಾಂತರಗೊಳಿಸಿ, ಮತಾಂತರಕ್ಕೆ ಒಪ್ಪದವರನ್ನು ಮತ್ತಷ್ಟು ಹಿಂಸಿಸಿದ್ದರಿಂದ ಎಹೂದಿಗಳು ಬೇರೆಯವರನ್ನು ಮತಾಂತರಿಸಲು ಹೋಗಲಿಲ್ಲ. ಅಷ್ಟು ಮಾತ್ರವಲ್ಲ, ಆರಂಭ ಕಾಲದಿಂದಲೇ ಎಹೂದಿ ಧರ್ಮೀಯರು ಬೇರೆಯವರಿಂದ ಹಿಂಸೆಯನ್ನನುಭವಿಸಿದರು. ಇವತ್ತೂ ಅನುಭವಿಸುತ್ತಿದ್ದಾರೆ. ಹಿಟ್ಲರನು ಅರವತ್ತು ಲಕ್ಷ ಯಹೂದಿಗಳನ್ನು ಅನಿಲ ಕೋಣೆ (ಗ್ಯಾಸ್ ಚೇಂಬರ್)ಗಳಲ್ಲಿ ಕೊಲ್ಲುತ್ತಿದ್ದುದು ಆಗ ಪೋಪರಾಗಿದ್ದ ೧೨ನೇ ಪಯಸ್‌ಗೆ ಗೊತ್ತಿತ್ತು. ಪೋಪ್ ಪಯಸನು ‘ಹಿಟ್ಲರನ ಪೋಪ್’- ಎಂದೇ ಕುಖ್ಯಾತನಾಗಿದ್ದಾನೆ. ಅವರು ಮನಸ್ಸು ಮಾಡಿದ್ದರೆ ಕ್ರೈಸ್ತನಾದ ಹಿಟ್ಲರನಿಗೆ ಹೇಳಿ ಆ ಮಹಾಸಾಮೂಹಿಕ ಕೊಲೆಯನ್ನು ಸ್ವಲ್ಪಮಟ್ಟಿಗಾದರೂ ನಿಲ್ಲಿಸಬಹುದಿತ್ತು. ಆದರೆ ನಮ್ಮ ಏಸುವನ್ನು ಶಿಲುಬೆಗೆ ಏರಿಸಿದ ಆ ಜನಾಂಗದವರು ಸಾಯಲಿ ಎಂದು ಪೋಪರು ಸುಮ್ಮನಿದ್ದರು ಎಂಬ ಆಪಾದನೆಯು ಪ್ರಬಲವಾಗಿದೆ. ಅದಕ್ಕೆ ಕ್ರೈಸ್ತರು ಸಮರ್ಪಕ ಉತ್ತರ ಕೊಟ್ಟಿಲ್ಲ. ಗೋವಾ ಇನ್‌ಕ್ವಿಸಿಶನ್ (Goa Inquisition)ಎಂದು ಕುಪ್ರಸಿದ್ಧವಾಗಿರುವ, ಮತಾಂತರಕ್ಕೆ ಒಪ್ಪದವರನ್ನು ಪೋರ್ಚ್‌ಗೀಸ್ ಪಾದ್ರಿಗಳು (೧೫೬೦ರಿಂದ ೧೮೧೭ರ ನಡುವಿನ ಇನ್ನೂರಐವತ್ತೆರಡು ವರ್ಷಗಳ ಅವಧಿಯಲ್ಲಿ) ಮಾಡುತ್ತಿದ್ದ ಕ್ರೂರ ಹಿಂಸೆಗಳ ವಿವರಗಳು ದಾಖಲಾಗಿವೆ. ಈ ಇನ್‌ಕ್ವಿಸಿಶನ್ ಕಾನೂನುಗಳು ೨೩೦ ಪುಟಗಳಷ್ಟು ದೊಡ್ಡದಾಗಿದ್ದವು. (Inquisition= ತನಿಖೆ, ಹಿಂಸಾತ್ಮಕ ತನಿಖೆ). ಸ್ಟಾಲಿನ್ ಮಾಡುತ್ತಿದ್ದ ಕ್ರೂರ ಹಿಂಸಾತ್ಮಕ ತನಿಖೆಯ ವಿಧಾನಗಳು ಕ್ರೈಸ್ತ inquisition ತನಿಖೆಗಳ ಮಾದರಿಯಿಂದ ಅಳವಡಿಸಿಕೊಂಡವು. ಗೋವಾದಲ್ಲಿ ಈ ತನಿಖೆಯನ್ನು ದೊಡ್ಡಮನೆ ಎಂಬಲ್ಲಿ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮಾಡುತ್ತಿದ್ದರು. ಏಸುವನ್ನು ನಂಬುವುದಿಲ್ಲವೆಂದು ಹೇಳುವವನು ಸೈತಾನನ ಪ್ರಭಾವಕ್ಕೆ ಒಳಗಾದವನೇ ಇರಬೇಕು. ಶಿಕ್ಷೆಯಿಂದ ಅವನ ಬಾಯಿ ಬಿಡಿಸಬೇಕು, ಎಂದು ನಂಬದ ಗಂಡಸು, ಹೆಂಗಸು ಮತ್ತು ಮಕ್ಕಳನ್ನು ನಾನಾತರಹದ ಕ್ರೌರ್ಯಕ್ಕೆ ಒಳಪಡಿಸುತ್ತಿದ್ದರು. ರಾತ್ರಿಯ ನಿಶ್ಯಬ್ದದಲ್ಲಿ ಈ ಬಲಿಮಾನವರು ನೋವಿನಿಂದ ಚೀತ್ಕರಿಸುತ್ತಿದ್ದುದು ಕೇರಿಯ ಇತರರಿಗೂ ಕೇಳಿಸುತ್ತಿತ್ತು. ಅವರಿಗೆ ಚಾವಟಿಯಿಂದ ಬಾರಿಸುತ್ತಿದ್ದರು. ಅವರ ದೇಹದ ಅಂಗಗಳನ್ನು ಹರಿಯುತ್ತಿದ್ದರು. ಮುರಿಯುತ್ತಿದ್ದರು. ಕಣ್ಣು ರೆಪ್ಪೆಗಳನ್ನು ಕೀಳುತ್ತಿದ್ದರು. ಕೈ ಕಾಲುಗಳ ತುದಿಗಳನ್ನು ಸ್ವಲ್ಪಸ್ವಲ್ಪವಾಗಿ ಕತ್ತರಿಸುತ್ತಿದ್ದರು. ಇವೆಲ್ಲವನ್ನೂ ಆತನ (ಅವಳ) ಬಂಧುಗಳೆದುರಿಗೇ ಮಾಡುತ್ತಿದ್ದರು. ಡೈಯಾಗೋ ಡಿ ಬೋರ್ಡೋ ಎಂಬ ಕ್ರೈಸ್ತ ಪೂಜಾರಿ ಮತ್ತು ಚರ್ಚುಗಳ ಪ್ರಾಂತ್ಯಾಧಿಕಾರಿ ಮಿಗ್ವೆಲ್‌ವಾಜ್ ಎಂಬುವವರು ಹಿಂದೂಗಳನ್ನು ಹಿಂಸಿಸುವ ೪೧ ಅಂಶಗಳ ಯೋಜನೆಯನ್ನು ಸಿದ್ಧಪಡಿಸಿದರು. ಈ ಯೋಜನೆಯಡಿಯಲ್ಲಿ ಗೋವಾದ ವೈಸ್‌ರಾಯ್ ಆಗಿದ್ದ ಅಂಟಾನೋಡಿ ನೊರೋನ್ಹಾನು ೧೫೬೬ರಲ್ಲಿ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದ ಇಡೀ ಪ್ರದೇಶಕ್ಕೆ ಅನ್ವಯವಾಗುವಂತೆ ಕೆಳಕಂಡ ಹುಕುಂ ಅನ್ನು ಜಾರಿ ಮಾಡಿದ. “ನಾನು ಈ ಮೂಲಕ ಹುಕುಂ ಮಾಡುವುದೇನೆಂದರೆ ನನ್ನ ದೊರೆಯ ಆಡಳಿತದಲ್ಲಿರುವ ಪ್ರದೇಶದಲ್ಲಿ ಯಾರೂ ಒಂದೂ ಹಿಂದೂ ದೇವಾಲಯವನ್ನು ಕಟ್ಟಕೂಡದು: ಈಗಾಗಲೇ ಕಟ್ಟಿರುವ ಯಾವ ದೇವಾಲಯದ ದುರಸ್ತಿಯನ್ನೂ ನನ್ನ ಅನುಮತಿ ಇಲ್ಲದೆ ಮಾಡಕೂಡದು. ಈ ಹುಕುಂ ಅನ್ನು ಉಲ್ಲಂಘಿಸಿದರೆ ಆ ದೇವಾಲಯಗಳನ್ನು ನಾಶಪಡಿಸಿ ಅವುಗಳಲ್ಲಿರುವ ವಸ್ತುಗಳನ್ನು ಪುಣ್ಯ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು.” ಇದಲ್ಲದೆ ಅವರು ಹುಕುಂ ಮಾಡಿದ ಇನ್ನೂ ಕೆಲವು ಉದಾಹರಣೆಗಳು: ಹಿಂದೂಗಳ ಮದುವೆಯಲ್ಲಿ ಯಾವ ವಾದ್ಯವನ್ನೂ ಬಾರಿಸಕೂಡದು. ವೀಳ್ಯಶಾಸ್ತ್ರದಲ್ಲಿ ಗಂಡು ಮತ್ತು ಹೆಣ್ಣಿನ ಯಾವ ಸಂಬಂಧಿಗಳನ್ನೂ ಕರೆಯಕೂಡದು. ಮದುವೆಯಲ್ಲಿ ಯಾರಿಗೂ ವೀಳ್ಯ ಕೊಡ ಕೂಡದು. ಹೂವು ಹಣ್ಣು ಅಡಕೆ ಮೊದಲಾದವನ್ನು ಹೆಣ್ಣು ಮತ್ತು ಗಂಡಿನ ಮನೆಗಳಿಗೆ ಕಳಿಸಬಾರದು. ಕುಲದೇವತೆಗಳ ಪೂಜೆ ಮಾಡಕೂಡದು: ಪದ್ಧತಿಯಂತೆ ಮದುವೆಗೆ ಮೊದಲು ಭತ್ತ ಕುಟ್ಟುವ , ಸಂಬಾರ ಪದಾರ್ಥಗಳನ್ನು ಪುಡಿ ಮಾಡುವುದಾಗಲಿ ಕೂಡದು: ಪೆಂಡಾಲ್ ಹಾಕಕೂಡದು. ಯಾರಾದರೂ ಸತ್ತಾಗ ವೈಕುಂಠ ಸಮಾರಾಧನೆ ಅಥವಾ ಗಣಾರಾಧನೆ ಮಾಡಕೂಡದು. ಸತ್ತ ಹನ್ನೆರಡನೆ ದಿನದ ಶಾಸ್ತ್ರವನ್ನು ಮಾಡಕೂಡದು. ಏಕಾದಶಿಯಂದು ಉಪವಾಸ ಮಾಡಕೂಡದು. ಹಿಂದೂ ಗಂಡಸರು ಯಾವತ್ತೂ ಪಂಚೆ ಉಡಕೂಡದು: ಹೆಂಗಸರು ರವಿಕೆ ತೊಡಕೂಡದು: ಮನೆಯ ಮುಂದಾಗಲಿ, ಹಿತ್ತಲಲ್ಲಾಗಲಿ, ತೋಟಗಳಲ್ಲಾಗಲಿ ಎಲ್ಲೂ ತುಳಸಿಯನ್ನು ಬೆಳೆಸಕೂಡದು. ಯಾರೂ ಹಿಂದೂ ಹೆಸರನ್ನಾಗಲಿ ಮನೆತನದ ಹೆಸರನ್ನಾಗಲಿ ಉಪಯೋಗಿಸಕೂಡದು. ೧೫೭೦ನೇ ಸೆಪ್ಟೆಂಬರ್ ೨೨ ರಂದು ಜಾರಿ ಮಾಡಿದ ಹುಕುಂ ಪ್ರಕಾರ ಕ್ರೈಸ್ತ ಧರ್ಮಕ್ಕೆ ಸೇರಿದ ಹಿಂದೂಗಳಿಗೆ ಹದಿನೈದು ವರ್ಷ ಕಾಲ ಸಮಸ್ತ ತೆರಿಗೆಗಳಿಂದಲೂ ವಿನಾಯಿತಿ ದೊರೆಯುತ್ತಿತ್ತು. ಹೀಗೆಯೇ ಬರೆಯುತ್ತಾ ಹೋದರೆ ಈ ಸಣ್ಣ ಲೇಖನದಲ್ಲಿ ಸ್ಥಳ ಸಾಲುವುದಿಲ್ಲ. ಓದುಗರು A.K.PRIOLKAR ಅವರು ಬರೆದಿರುವ THE GOA INQUISITION (Voice of India. New Delhi) ಎಂಬ ಗ್ರಂಥವನ್ನು ಪೂರ್ತಿ ಓದಬೇಕು. ಈ ಗ್ರಂಥದ 79-80-81-82-83-84 ಪುಟಗಳ ಭರ್ತಿ ಮಿಶನರಿಗಳು ನಾಶ ಮಾಡಿದ ಹಿಂದೂ ದೇವಸ್ಥಾನಗಳ ಮತ್ತು ಅವುಗಳು ಇದ್ದ ಊರುಗಳ ಹೆಸರುಗಳಿವೆ. ಈ ಗ್ರಂಥದ ಕೊನೆಯಲ್ಲಿ ಸಮಕಾಲೀನ ಪೋರ್ಚುಗೀಸರೇ ಬರೆದ ಆಧಾರ ಗ್ರಂಥಗಳ ದೊಡ್ಡ ಪಟ್ಟಿಯೇ ಇದೆ. ಮತಾಂತರಕ್ಕೆ ಒಪ್ಪದವರಿಗೆ ಕೊಡುತ್ತಿದ್ದ ಕ್ರೂರ ಹಿಂಸೆ ಮತ್ತು ದೇವಾಲಯ ನಾಶಗಳಲ್ಲಿ ಈ ಕ್ರೈಸ್ತರಿಗೂ ಭಾರತದಲ್ಲಿ ಇದೇ ಕೆಲಸ ಮಾಡಿದ ಮುಸಲ್ಮಾನ ದೊರೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ತಮ್ಮ ಧರ್ಮವನ್ನು ಬಿಡದೆ ಜೀವಿಸಲು ಗೋವೆಯ ಲಕ್ಷಾಂತರ ಜನರು ಪಕ್ಕದ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳಗಳಿಗೆ ಓಡಿ ಹೋದರು. ಅವರೇ ಈಗ ತಮ್ಮನ್ನು ತಾವು ಕೊಂಕಣಿ ಹಿಂದೂಗಳೆಂದು ಗುರುತಿಸಿಕೊಳ್ಳುವವರು. ಬ್ರಾಹ್ಮಣರಲ್ಲಿ ಜಿಎಸ್‌ಬಿ (ಜಿಎಸ್‌ಬಿ = ಗೌಡ ಸಾರಸ್ವತ ಬ್ರಾಹ್ಮಣ) ಮತ್ತು ಸಾರಸ್ವತರೆಂದು ಪ್ರಸಿದ್ಧರಾದವರೂ ಹೀಗೆ ಓಡಿ ಬಂದು ತಮ್ಮ ಧರ್ಮ ಸಮೇತ ಜೀವ ಉಳಿಸಿಕೊಂಡವರ ವಂಶಜರು. ಪ್ರಸಿದ್ಧ ಇತಿಹಾಸಕಾರ ಕೆ.ಎಂ.ಪಣಿಕ್ಕರ್ ಅವರು ತಮ್ಮ MALABAR AND THE PORTUGUESE ಎಂಬ ಗ್ರಂಥದ (VOICE OF INDIA, NEW DELHI 1997 RePrint) PORTUGUESE RELIGIOUS POLICY IN MALABAR ಎಂಬ ಹನ್ನೆರಡನೆ ಅಧ್ಯಾಯದಲ್ಲಿ ಬರೆಯುತ್ತಾರೆ: ಸಿರಿಯನ್ ಚರ್ಚಿನ ಕ್ರೈಸ್ತರನ್ನು ಮಲಬಾರಿನ ಹಿಂದೂ ರಾಜರು ಅವರ ಧರ್ಮಾಚರಣೆಗಳಲ್ಲಿ ಸ್ವಲ್ಪವೂ ತಲೆ ಹಾಕದೆ ಉದಾರವಾಗಿ ನಡೆಸಿಕೊಳ್ಳುತ್ತಿದ್ದರು. ಹಾಗೆಂದು ಪೋರ್ಚುಗೀಸ್ ಪ್ರವಾಸಿಗಳೇ ದಾಖಲಿಸಿದ್ದಾರೆ. ಆದರೆ ಈ ಭಾರತೀಯ ಸಿರಿಯನ್ ಕ್ರೈಸ್ತರು ತಮಗೊದಗಿದ ಮೊದಲ ಅವಕಾಶದಲ್ಲೇ ಹಿಂದೂ ರಾಜರಿಗೆ ತಾವು ಇಟ್ಟಿದ್ದ ನಿಷ್ಠೆಯನ್ನು ತಿರಸ್ಕರಿಸಿ ಪೋರ್ಚುಗಲ್ ರಾಜನ ಅಧಿಕಾರವನ್ನು ಸ್ವೀಕರಿಸಿರುವುದಾಗಿ ಘೋಷಿಸಿಕೊಂಡರು.... ತಮ್ಮಲ್ಲಿದ್ದ ಪುರಾತನ ದಾಖಲೆಗಳು ಮತ್ತು ಧರ್ಮ ಚಿಹ್ನೆಗಳನ್ನು ವಾಸ್ಕೊಡಗಾಮನಿಗೆ ಸಮರ್ಪಿಸಿದರು. ಅಲ್ಲದೆ ಹಿಂದೂ ರಾಜ್ಯಗಳನ್ನು ವಶಪಡಿಸಿಕೊಳ್ಳುವಂತೆಯೂ. ಅದಕ್ಕೆ ತಾವು ಸಹಾಯ ಮಾಡುವುದಾಗಿಯೂ ಅವನಿಗೆ ಸೂಚಿಸಿದರು. ಈ ಉದ್ದೇಶಕ್ಕಾಗಿ ಗ್ರಾಂಗನೂರಿನಲ್ಲಿ ಒಂದು ಕೋಟೆ ಕಟ್ಟುವಂತೆ ಆಹ್ವಾನಿಸಿದರು. ಕ್ರೈಸ್ತರಿಗೆ ತಾವು ತೋರಿಸಿದ ಔದಾರ್ಯ ಮತ್ತು ದಯೆಗೆ ಹಿಂದೂ ರಾಜರುಗಳು ಪಡೆದ ಪ್ರತಿಫಲ ಇದು. ಕೊಚಿನ್‌ನ ಹಿಂದೂ ರಾಜನನ್ನೇ ಮತ ಪರಿವರ್ತನೆ ಮಾಡುವಂತೆ ಪೋರ್ಚುಗಲ್‌ನ ವೈಸರಾಯಿಗೆ ಆದೇಶ ಮಾಡಲಾಯಿತು. ಟಿಪ್ಪಣಿ ಮಾಡುವ ಅಗತ್ಯವಿಲ್ಲ ಚರ್ಚು ತನ್ನ ಮತ ವಿಸ್ತರಣೆಯ ವಿಧಾನದಲ್ಲಿ ಕ್ರೌರ್ಯವನ್ನು ಕಡಿಮೆ ಮಾಡಿಕೊಂಡದ್ದಕ್ಕೆ ಪ್ರಮುಖ ಕಾರಣವೆಂದರೆ ಯೂರೋಪಿನಲ್ಲಿ ನವೋದಯ ಉಂಟಾಗಿ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆಯಾಗಿ ಯೂರೋಪಿನ ಹಲವು ರಾಜ್ಯಗಳು ಹೊಸ ಭೂಮಿಗಳನ್ನು ಆಕ್ರಮಿಸಿ ಸಾಮ್ರಾಜ್ಯ ಸ್ಥಾಪನೆ ಮಾಡತೊಡಗಿ ಧರ್ಮವೆಂದರೆ ಚರ್ಚಿನ ಧರ್ಮವೊಂದೇ ಅಲ್ಲ, ಪ್ರಪಂಚದಲ್ಲಿ ಬೇರೆ ಬೇರೆ ನಂಬಿಕೆಗಳಿವೆ ಎಂಬ ತಿಳಿವಳಿಕೆಯು ಮೇಲುವರ್ಗದವರಲ್ಲಿ ಉಂಟಾದದ್ದು . ಚರ್ಚಿನ ಅಧಿಕಾರಕ್ಕೆ ಸವಾಲು ಹಾಕಿದ ರಾಜ್ಯಶಕ್ತಿಗಳು ಪ್ರೊಟೆಸ್ಟೆಂಟ್ ಧರ್ಮವನ್ನು ಆರಂಭಿಸಿದವು. ಆಧುನಿಕ ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ಉದಯವಾಗಿ ಚರ್ಚಿನ ಕಂದಾಚಾರಗಳನ್ನು ಜನರು ತಿರಸ್ಕರಿಸತೊಡಗಿದರು. ತನ್ನ ಉಳಿವಿಗಾಗಿ ಚರ್ಚು ಈ ಹೊಸ ಚಿಂತನೆಗಳನ್ನು ತನ್ನ ಹಳೆಯ ನಂಬಿಕೆಗಳಿಂದ ಉದ್ಭವಿಸಿದ ವಿಚಾರಗಳೇ ಎಂಬಂತೆ ಬಿಂಬಿಸತೊಡಗಿತು. Christian Science ಎಂಬ ಹೊಸ ನಾಮಕರಣವನ್ನು ಮಾಡಿತು. ವಿಜ್ಞಾನವೇ ಬೇರೆ, Faith ಬೇರೆ. ವಿಜ್ಞಾನದ ವಿಧಾನಗಳಿಂದ Faith ಅನ್ನು ಅಳೆಯುವುದಾಗಲಿ, ತಿರಸ್ಕರಿಸುವುದಾಗಲಿ ಸಲ್ಲದು ಎಂಬ ವಾದವನ್ನು ಮುಂದೆ ಮಾಡಿತು. ಸಮಸ್ತ ಭಾರತದಲ್ಲಿ ಸಾಮ್ರಾಜ್ಯವನ್ನು ಕಟ್ಟಿದ ಬ್ರಿಟಿಷರು ರೋಮಿನ ವ್ಯಾಟಿಕನ್‌ನಿಂದ ಸ್ವತಂತ್ರವಾದ Church of England ಅನ್ನು ಸ್ಥಾಪಿಸಿಕೊಂಡವರು. ಭಾರತದ ಧರ್ಮಗಳನ್ನು ನೇರವಾಗಿ ಕೆಣಕಿ ತಮ್ಮ ಸಾಮ್ರಾಜ್ಯವನ್ನು ಅಸ್ಥಿರಗೊಳಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಆದ್ದರಿಂದ ತೋರಿಕೆಗಾದರೂ ಮಿಶನರಿಗಳಿಗಿಂತ ಸರ್ಕಾರವು ಭಿನ್ನವೆಂಬ ನಿಲುವನ್ನು ಅಳವಡಿಸಿಕೊಂಡರು. ಆದರೆ ಒಂದು ಹಂತದಲ್ಲಿ ಮಿಶನರಿಗಳಿಗೂ ಬ್ರಿಟಿಷರಿಗೂ ಒಂದೇ ಗುರಿ, ಒಂದೇ ಉದ್ದೇಶವಿತ್ತು. ಭಾರತೀಯರ ಭಾರತೀಯತೆಯನ್ನು ನಾಶಪಡಿಸಿದರೆ ತಮ್ಮ ಸಾಮ್ರಾಜ್ಯವನ್ನು ವಿರೋಧಿಸುವ ಅವರ ಶಕ್ತಿಯು ಉಡುಗುತ್ತದೆಂದು ಅವರು ಆಲೋಚಿಸಿ ನಿರ್ಧರಿಸಿದರು. ಮೆಕಾಲೆಯ ವಿದ್ಯಾಭ್ಯಾಸ ನೀತಿ, ಆರ್ಯರು ಹೊರಗಿನಿಂದ ಬಂದವರೆಂಬ ಸಿದ್ಧಾಂತ, ಭಾರತದ ಇತಿಹಾಸ ವ್ಯಾಖ್ಯಾನ, ವರ್ಣಾಶ್ರಮದ ವ್ಯಾಖ್ಯಾನ, ಸಮಾಜಶಾಸ್ತ್ರದ ವಿಶ್ಲೇಷಣೆ, ಸೆನ್ಸಸ್ ನೀತಿ, ಬೌದ್ಧರು, ಜೈನರು, ಸಿಖ್ಖರು, ಹಿಂದೂಗಳಲ್ಲವೆಂಬ ಸಿದ್ಧಾಂತ, ಆರ್ಯ ದ್ರಾವಿಡ ಸಿದ್ಧಾಂತ, ಮುಸ್ಲಿಮರ ಪ್ರತ್ಯೇಕತಾಭಾವದ ಪೋಷಣೆ ಮೊದಲಾದ ವಿಘಟನಾತ್ಮಕ ವ್ಯಾಖ್ಯಾನವನ್ನು ಸಿದ್ಧಪಡಿಸಿ ವಿಶ್ವವಿದ್ಯಾಲಯಗಳಲ್ಲಿ, ಪಠ್ಯಗಳಲ್ಲಿ ಪ್ರಚುರಪಡಿಸಿ ಭಾರತದ ಹೊಸ ತಳಿಗಳಲ್ಲಿ ಬಿತ್ತಿ ಬೆಳೆಸಿದರು. ಇವೆಲ್ಲವನ್ನೂ ಮಿಶನರಿಗಳು ಬಳಸಿಕೊಂಡದ್ದಲ್ಲದೆ, ಹಿಂದೂ ದೇವ ದೇವತೆಗಳನ್ನು ಅಪವ್ಯಾಖ್ಯಾನಿಸಿ ಇಡೀ ಹಿಂದೂ ಧರ್ಮವನ್ನು ಹೀಗಳೆಯುವ ಕೆಲಸವನ್ನು ಮಾಡುವ ಮೂಲಕ ಮತ ಪರಿವರ್ತನೆಯನ್ನು ಸುಲಭ ಮಾಡಿಕೊಂಡರು. ಅಷ್ಟರಲ್ಲಿ ಮಿಶನರಿಗಳು ಮತ ಪರಿವರ್ತನೆಯ ಅಸ್ತ್ರವಾಗಿ ಬೆಳೆಸಿಕೊಂಡಿದ್ದ ಶಾಲೆ, ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಅವರು ಕೇಳಿದ ಕಡೆ, ಕೇಳಿದಷ್ಟು ಜಾಗಗಳನ್ನು ಕೊಡುತ್ತಾ, ದೇಶಿ ರಾಜರುಗಳಿಂದ ಕೊಡಿಸುತ್ತಾ, ಅಲೋಪತಿ ಚಿಕಿತ್ಸೆಯ ಮುಖ್ಯ ವಾಹಕರನ್ನಾಗಿ ಅವರನ್ನು ಬಿಂಬಿಸುತ್ತಾ ಪ್ರೋತ್ಸಾಹಿಸಿದರು. ಕ್ರೈಸ್ತರಾಗಿ ಮತ ಪರಿವರ್ತಿತರಾದವರಿಗೆ ನೌಕರಿ ಮತ್ತು ಬಡ್ತಿಗಳಲ್ಲೂ ಆದ್ಯತೆ ಕೊಡತೊಡಗಿದರು. ಪರಿವರ್ತಿತರಾದವರು ಬೇರೆಯವರಿಗಿಂತ ಕೆಂಪು ದೊರೆಗಳಿಗೆ ಹೆಚ್ಚು ನಿಷ್ಠರಾಗಿರುವಂತೆ ಚರ್ಚು ಮತ್ತು ಆಡಳಿತ ಎರಡೂ ನೋಡಿಕೊಂಡವು. ಅಚಾರ ವಿಚಾರ, ವೇಷ, ಊಟದ ರೀತಿ, ಜೀವನ ಶೈಲಿ ಮೊದಲಾದ ಎಲ್ಲ ವಿಧಗಳಲ್ಲೂ ಅವರು ಬ್ರಿಟಿಷರ ರೀತಿಯಲ್ಲೇ ಇರುವಂತೆ, ಬೆಳೆಯುವಂತೆ ಚರ್ಚು ಮಾಡಿತು. ಎಂಥೆಂಥ ವಿದ್ಯಾಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಅವರು ಕಟ್ಟಿದರು! ಎಂದು ನಮ್ಮ ಎಷ್ಟೋ ಜನರು ಮೆಚ್ಚುಗೆಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದನ್ನು ನಾನೇ ನೋಡಿದ್ದೇನೆ (ಈಗ ನಮ್ಮವರೂ ಅವಕ್ಕಿಂತ ದೊಡ್ಡ ಸಂಸ್ಥೆಗಳನ್ನು ಕಟ್ಟಿದ್ದಾರೆ. ಕಟ್ಟುತ್ತಿದ್ದಾರೆ). ಆದರೆ ಒಂದು ಅಂಶವನ್ನು ಮಾತ್ರ ನಾವು ಮರೆಯಬಾರದು. ಅವರ ವೈದ್ಯಕೀಯ ಕಾಲೇಜುಗಳ ಬಹುಭಾಗ ಸೌಲಭ್ಯಗಳನ್ನು ಬಳಸುತ್ತಿದ್ದುದು, ಈಗಲೂ ಬಳಸುತ್ತಿರುವುದು ಕ್ರೈಸ್ತರಿಗೆ ವೈದ್ಯಕೀಯ ತರಬೇತಿ ಕೊಡುವುದಕ್ಕೆ, ವಿಶೇಷ ಪರಿಣತಿಗಳಲ್ಲಿ ಅವರನ್ನು ಮುಂದೆ ತರುವುದಕ್ಕೆ. ಈ ಸಂಸ್ಥೆಗಳನ್ನು ಕಟ್ಟಲು ಅವರಿಗೆ ದೊರೆತ ಸೌಲಭ್ಯಗಳನ್ನು ಹೋಲುವ ಒಂದು ಉದಾಹರಣೆಯನ್ನು ಇಲ್ಲಿ ಕೊಡಬಹುದು. ಎಂಥ ಗೊಂಡಾರಣ್ಯಗಳನ್ನು ಕಡಿದು ಕಾಫಿ ತೋಟಗಳನ್ನಾಗಿ ಪರಿವರ್ತಿಸಿದ ಇಂಗ್ಲಿಷ್ ರ ಸಾಹಸ ನಮ್ಮವರಿಗೆ ಎಲ್ಲಿಂದ ಬರಬೇಕು! ಎಂದು ಅವರನ್ನು ಹೊಗಳುತ್ತಿದ್ದ ಮಾತನ್ನು ಚಿಕ್ಕ ಹುಡುಗನಲ್ಲಿ ನಾನು ಕೇಳಿದ್ದೇನೆ. ಆನಂತರ ಒಬ್ಬ ನಿವೃತ್ತ ಹಿರಿಯ ಕಂದಾಯ ಅಧಿಕಾರಿಯು ನನಗೆ ವಿವರಿಸಿದರು: ಬೆಂಗಳೂರಿನಲ್ಲಿರುತ್ತಿದ್ದ ಬ್ರಿಟಿಷ್ ರೆಸಿಡೆಂಟರಿಂದ ಸಂಸ್ಥಾನದ ಸರಕಾರಕ್ಕೆ ಇಂತಿಂಥವರಿಗೆ ಕಾಫಿ ತೋಟಕ್ಕೆ ಜಮೀನು ಕೊಡಿ ಎಂದು ಸೂಚನೆ ಹೋಗುತ್ತಿತ್ತು. ಸೂಚನೆ ಎಂದರೆ ವಸ್ತುಶಃ ಹುಕುಂ. ಅದು ಜಿಲ್ಲಾಧಿಕಾರಿಯ ಮೂಲಕ ತಾಲೂಕಿನ ಅಮಲ್ದಾರರಿಗೆ ತಲುಪಿ ಅವರು ಒಬ್ಬ ರೆವಿನ್ಯೂ ಇನ್ಸ್‌ಪೆಕ್ಟರನ್ನು ಕಳಿಸುತ್ತಿದ್ದರು. ಈ ರೆವಿನ್ಯೂ ಇನ್ಸ್‌ಪೆಕ್ಟರೊಡನೆ ಕುದುರೆ ಏರಿದ ಬಿಳಿಯ ದೊರೆಯು (ಆಗ ಬಿಳಿಯರನ್ನೆಲ್ಲ ದೊರೆ ಎಂದೇ ಕರೆಯುತ್ತಿದ್ದುದು) ಒಂದು ಗುಡ್ಡದ ನೆತ್ತಿಯನ್ನೇರಿ ನಿಂತು ವೃತ್ತಾಕಾರದಲ್ಲಿ ಬೆರಳು ತೋರಿಸಿ ಇಷ್ಟು ಭೂಮಿ ಬೇಕು ಎನ್ನುತ್ತಿದ್ದ. ಈ ರೆವಿನ್ಯೂ ಅಧಿಕಾರಿ ವಿನಯದಿಂದ ತಲೆಬಾಗಿ ಆ ವಿಶಾಲ ವೃತ್ತಾಕಾರವನ್ನು ಅಳತೆ ಮಾಡಿಸಿ ಮೇಲಧಿಕಾರಿಗಳಿಗೆ ವರದಿ ಮಾಡುತ್ತಿದ್ದ. ಒಂದು ವಾರದಲ್ಲಿ ಸಾವಿರಾರು ಎಕರೆ ಕಾಡು ಆ ದೊರೆಗೆ ಮಂಜೂರಾಗುತ್ತಿತ್ತು. ಸ್ಥಳೀಯರನ್ನು ಕೂಲಿಗಳಾಗಿ ನೇಮಿಸಿಕೊಂಡು ದೊರೆಯು ಕಾಡಿನ ತೇಗ, ಬೀಟೆ, ಮತ್ತಿ ಮೊದಲಾದ ಹೆಮ್ಮರಗಳನ್ನು ಕಡಿಸಿ ಮಾರಿ ಹಣ ಮಾಡಿಕೊಂಡು ಅದೇ ಹಣವನ್ನು ಕಾಫಿ ತೋಟ ಮಾಡಲು ಬಳಸಿಕೊಳ್ಳುತ್ತಿದ್ದ. ಜತೆಗೆ ಬ್ರಿಟಿಷ್ ಮಾಲೀಕತ್ವದ ಇಂಪೀರಿಯಲ್ ಬ್ಯಾಂಕ್ ಅಂಥ ದೊರೆಗಳಿಗೆ ಕಾಫಿ ಬೆಳೆ ಬರುವವರೆಗೆ ಬಡ್ಡಿ ರಹಿತ, ಬೆಳೆ ಶುರುವಾದ ನಂತರ ಶೇಕಡಾ ಒಂದರಂತೆ ಬಡ್ಡಿ ಸಹಿತ ಸಾಲ ಕೊಡುತ್ತಿತ್ತು. ಒಬ್ಬೊಬ್ಬ ದೊರೆಯೂ ಸಾವಿರಾರು ಎಕರೆ ಕಾಫಿ ತೋಟದ ಒಡೆಯನಾಗಿ ಗುಡ್ಡದ ನೆತ್ತಿಯ ಮೇಲೆ ಇಂಗ್ಲಿಷ್ ಶೈಲಿಯ ಬಂಗಲೆ ಕಟ್ಟಿಸಿಕೊಳ್ಳುತ್ತಿದ್ದ. ಎಂಥ ಸಾಹಸ ! ಭಾರತೀಯ ಹೇಡಿಗಳಿಗೆ ಎಲ್ಲಿಂದ ಬರಬೇಕು, ಈ ಸಾಹಸ ! ಆಗ ಸಕಲೇಶಪುರದಲ್ಲಿದ್ದ ಪ್ಲಾಂಟರ್ಸ್ ಅಸೋಸಿಯೇಶನ್ ಕಟ್ಟಡದ ಬಾಗಿಲಿನಲ್ಲಿ “ಸ್ಥಳೀಯರಿಗೂ ನಾಯಿಗಳಿಗೂ ಪ್ರವೇಶ ಇಲ್ಲ” ಎಂಬ ಬೋರ್ಡ್ ಇತ್ತೆಂದು ಈಗಲೂ ಹೇಳುತ್ತಾರೆ. ಮರಳುಗಾಡಿನಲ್ಲಿ ಜನ್ಮ ತಳೆದ ಈ ಮೂರು ಪ್ರವಾದಿ ಮತಗಳಿಗೂ ಭಾರತದಲ್ಲಿ ಹುಟ್ಟಿದ ಧರ್ಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಪ್ರತಿಯೊಬ್ಬ ಪ್ರವಾದಿಯೂ ನಾನು ಹೇಳುವುದೇ ಪರಮ ಸತ್ಯ. ; ನನ್ನ ಮೂಲಕವೇ ದೈವವಾಣಿಯು ಅಭಿವ್ಯಕ್ತವಾಗಿದೆ. ನೀವು ಅದಕ್ಕೆ ಎಂದರೆ ನನಗೆ, ಸಮರ್ಪಿಸಿಕೊಳ್ಳದಿದ್ದರೆ ನರಕವೇ ಗತಿ. ಅಷ್ಟು ಮಾತ್ರವಲ್ಲ. ಅದನ್ನು ಹಿಂಸೆಯನ್ನಾದರೂ ಪ್ರಯೋಗಿಸಿ ಪ್ರಪಂಚದಲ್ಲೆಲ್ಲ ವಿಸ್ತರಿಸುವುದು ನಿಮ್ಮ ಮತ ನಿಷ್ಠೆಯ ಮೂಲ ಗುಣ, ಆದ್ಯ ಕರ್ತವ್ಯ ಎಂದು ಬೋಧಿಸುತ್ತಾನೆ. ಪ್ರವಾದಿ ಮತವು ಮೂಲತಃ ಮತಾಂಧವಾದದ್ದು. ಭಾರತ ಧರ್ಮದ ಅತ್ಯಂತ ಪ್ರಾಚೀನ ಅಭಿವ್ಯಕ್ತಿಯಾದ ವೇದದ ಬಹುಮುಖ್ಯವಾದ ಬೋಧೆ, ಏಕಂ ಸತ್ ವಿಪ್ರಾಃ ಬಹುಧಾ ವದಂತಿ. ಸತ್ ಎಂಬುದು ಒಂದೇ. ತಿಳಿದವರು ಅದನ್ನು ಹಲವು ವಿಧಗಳಲ್ಲಿ ಹೇಳುತ್ತಾರೆ ಎಂಬ ಅತ್ಯಂತ ಮುಕ್ತ ಕಲ್ಪನೆಯು ಆನಂತರ ಕವಲೊಡೆದ ಎಲ್ಲ ವಾಹಿನಿಗಳಲ್ಲೂ ವ್ಯಕ್ತವಾಗಿದೆ. ಜೈನ ಜಿಜ್ಞಾಸೆಯಲ್ಲಿ ಸ್ಯಾದ್ವಾದ (ಸ್ಯಾತ್=ಬಹುದು, ಇರಬಹುದು, may be) ಎಂಬುದು ಬಹು ಮುಖ್ಯವಾದ ತತ್ತ್ವ. ಯಾವುದನ್ನೂ ಇದೇ ಪರಮಸತ್ಯವೆಂದು ಹಟ ಹಿಡಿಯಬಾರದು. ಯಾವ ವಿಚಾರವಾಗಲಿ, ನಾನು ಹೇಳುತ್ತಿರುವುದನ್ನೂ ಸೇರಿಸಿ, ಇರಬಹುದು. ಅದರ ವಿರುದ್ಧವಾದುದೂ ಇರಬಹುದು. ಇವೆರಡೂ ಏಕಕಾಲದಲ್ಲಿ ಇರಬಹುದು. ಹೀಗೆ ಅವರು ಏಕಕಾಲದಲ್ಲಿ ಏಳು ಬಗೆಯ ಸಾಧ್ಯತೆಗಳನ್ನು ಗುರುತಿಸುತ್ತಾರೆ. ಇದು ವೇದದ ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂಬ ದೃಷ್ಟಿಯ ಬೇರೊಂದು ಉಕ್ತಿ. ಭಾರತೀಯ ದರ್ಶನಗಳೆಲ್ಲವೂ ತರ್ಕವನ್ನು ಒಪ್ಪಿಕೊಂಡವು. ವಾದ ವಿವಾದಗಳನ್ನು ಮಾನ್ಯ ಮಾಡಿದವು. ಹೀಗಾಗಿ ಇಲ್ಲಿ ಪ್ರವಾದಿ ಮತದ ಮೂಲ ಬೇರಾದ ಮತಾಂಧತೆಗೆ ಅವಕಾಶವಾಗಲಿಲ್ಲ. ವೇದ ಮತ್ತು ಉಪನಿಷತ್ತುಗಳ ಋಷಿಗಳಾರೂ ಪ್ರವಾದಿಗಳಲ್ಲ. ಬೆಲ್ಜಿಯಂ ದೇಶದ ಕಾನ್ರಾಡ್ ಎಲ್ಸ್ಟ್ (KOENRAAD ELST) ಎಂಬ ತೌಲನಿಕ ಮತಧರ್ಮಗಳ ವಿದ್ವಾಂಸನು PSYCHOLOGY OF PROPHETISM ಎಂಬ ತನ್ನ ಗ್ರಂಥದ ಕೊನೆಯ ಅಧ್ಯಾಯದಲ್ಲಿ “ಪ್ರವಾದಿಗಳು ತಮ್ಮ ಬಗೆಗೇ ತುಂಬ ಹೇಳಿಕೊಳ್ಳುತ್ತಾರೆ. ತಾವು ವಿಶೇಷವಾದ ವ್ಯಕ್ತಿಗಳು, ತಮಗೂ ಸೃಷ್ಟಿಕರ್ತನಿಗೂ ಬೇರಾರಿಗೂ ಇಲ್ಲದ ವಿಶೇಷ ಸಂಬಂಧವುಂಟೆಂದು ಭಾವಿಸುತ್ತಾರೆ. ಋಷಿಗಳಾದರೋ ವಿಶ್ವಾತ್ಮಕ ಸತ್ಯವನ್ನು ಮಾತ್ರ ಹೇಳುತ್ತಾರೆ. ಸತ್ಯವು ಚೇತನದ ಒಂದು ವಿಶೇಷ ಸ್ಥಿತಿಯಲ್ಲಿ ಅರಿಯಬಹುದಾದದ್ದು. ಆ ಸ್ಥಿತಿಯನ್ನು ನಾವು ನೀವೆಲ್ಲ ಸಾಧನೆಯಿಂದ ಪಡೆಯಬಹುದು” ಎನ್ನುತ್ತಾರೆ. ಕಾನ್ರಾಡ್ ಎಲ್ಸ್ಟ್ ಅವರ ಈ ಪುಸ್ತಕವನ್ನು ಈ ವಿಷಯದಲ್ಲಿ ಗಂಭೀರ ಆಸಕ್ತಿ ಇರುವ ಪ್ರತಿಯೊಬ್ಬರೂ ಓದಬೇಕು. ಬೌದ್ಧ ಧರ್ಮವನ್ನು ಬೋಧಿಸಿದ ಬುದ್ಧನು ಪ್ರವಾದಿಯಲ್ಲ; ಋಷಿ. ಉಪನಿಷತ್ ಯುಗದ ಧರ್ಮ ಜಿಜ್ಞಾಸೆಗೆ ತೊಡಗಿದ ಮಹರ್ಷಿ. ಅವನ ಕಾಣ್ಕೆಯು ಉಪನಿಷತ್ತುಗಳಿಗೆ ವಿರೋಧವಾಗಿಲ್ಲ. ಈ ಬಗೆಗೆ R.D. RANADE ಯವರ A Constructive Survey of the Upanishadic Philosophy ಎಂಬ ಗ್ರಂಥದ ನಾಲ್ಕನೆ ಪ್ರಕರಣ, ಎರಡನೆ ವಿಭಾಗವನ್ನು ನೋಡಬೇಕು. ಈ ಪುಸ್ತಕದ ಕನ್ನಡಾನುವಾದವನ್ನು ಆರ್.ಆರ್. ದಿವಾಕರ, ದ.ರಾ.ಬೇಂದ್ರೆ ಮತ್ತು ಶಂಬಾ ಜೋಷಿಯವರು ಜೊತೆಗೂಡಿ ಮಾಡಿ ಮೂಲ ಇಂಗ್ಲಿಷ್ ಕೃತಿಯು ಪ್ರಕಟವಾದ ಎರಡು ವರ್ಷದೊಳಗೆ ಪ್ರಕಟಿಸಿದರು. ನನ್ನಲ್ಲಿರುವುದು ೨೦೦೪ರಲ್ಲಿ ಗುರುದೇವ ರಾನಡೆ ಸಮಾಧಿ ಟ್ರಸ್ಟ್, ನಿಂಬಾಳ, ವಿಜಾಪುರ ಜಿಲ್ಲೆ ಅವರು ಪ್ರಕಟಿಸಿರುವ ನಾಲ್ಕನೆಯ ಆವೃತ್ತಿಯ ಕನ್ನಡ ಪ್ರತಿ. ವೈದಿಕ ವಾಹಿನಿಯಾಗಲಿ, ಜೈನ, ಬೌದ್ಧ ವಾಹಿನಿಗಳಾಗಲಿ ಬಳಸುವುದು ಧರ್ಮ ಎಂಬ ಶಬ್ದವನ್ನೇ ಹೊರತು ಪ್ರವಾದಿ ಮತಗಳು ತಮ್ಮನ್ನು ತಾವು ಬಳಸಿಕೊಳ್ಳುವ religion ಎಂಬ ಶಬ್ದವನ್ನಲ್ಲ. ಅಧ್ಯಾತ್ಮವನ್ನು ಹೀಗೆ ಅಳೆಯದಿರಿ ಇತರ ಧರ್ಮ ಅಥವಾ ಮತಗಳ ಬಗೆಗೆ ಔದಾರ್ಯ ಮತ್ತು ಧರ್ಮಭಾವಗಳನ್ನು ಸೃಷ್ಟಿಸಿದ ಏಕಂ ಸತ್‌ವಿಪ್ರಾಃ ಬಹುಧಾ ವದಂತಿ ತತ್ತ್ವವು ಬೇಟೆಗಾರ ಮತಗಳು ಭಾರತವನ್ನು ದಾಳಿ ಮಾಡಿ ಆಕ್ರಮಿಸಿಕೊಳ್ಳತೊಡಗಿದಾಗ ನಮ್ಮ ಮತಾಚಾರ್ಯರುಗಳನ್ನು ಮೈ ಮರೆಸಿತು. ದಾಳಿ ಮಾಡಿ ಅಮಾನವೀಯವಾಗಿ ಲಕ್ಷ ಲಕ್ಷ ಜನರನ್ನು ಕೊಂದು ಹೆಂಗಸರು ಮಕ್ಕಳನ್ನು ಅತ್ಯಾಚಾರ ಮಾಡಿ ಗುಲಾಮರನ್ನಾಗಿ ಎಳೆದು ಕೊಳ್ಳುವವರು ಹೀನವರ್ತನೆಯವರೇ ವಿನಾ ಅವರ ಧರ್ಮದಲ್ಲಿ ಏನೂ ತಪ್ಪಿಲ್ಲ ಎಂಬ ಅಭ್ಯಾಸ ಬಲದ ಗ್ರಹಿಕೆಯ ಅಜ್ಞಾನದಲ್ಲೇ ಅವರು ಪ್ರವಚನ ಮಾಡುತ್ತಿದ್ದರು. ಶೃಂಗೇರಿ ಮಠದ ಎರಡು ತಲೆಮಾರು ಹಿಂದಿನ ಚಂದ್ರಶೇಖರ ಭಾರತಿ ಸ್ವಾಮಿಗಳಿಗೆ ಸಂಬಂಧಿಸಿದ ಒಂದು ಘಟನೆಯನ್ನು ಬಹುಜನರು ಹಿಂದೂ ಧರ್ಮದ ಉದಾರತೆಯ ಉದಾಹರಣೆಯಾಗಿ ಬರೆದಿದ್ದಾರೆ. ಯಾರೋ ಒಬ್ಬ ಯೂರೋಪಿಯನ್ನನು ಸ್ವಾಮಿಗಳನ್ನು ಸಂದರ್ಶಿಸಿ “ನನಗೆ ಹಿಂದೂವಾಗುವ ಬಯಕೆ ಇದೆ. ದೀಕ್ಷೆ ಕೊಡಿ” ಎಂದನಂತೆ. ಅದಕ್ಕೆ ಸ್ವಾಮಿಗಳು “ನೀನು ಒಳ್ಳೆಯ, ಕ್ರೈಸ್ತನಾಗು. ಆಗ ಹಿಂದೂವೂ ಆಗುತ್ತೀಯೆ” ಎಂದರಂತೆ. ಆದರೆ ಒಳ್ಳೆಯ ಕ್ರೈಸ್ತ ಎಂದರೆ ಸಾಧ್ಯವಾದಷ್ಟು ಜನರನ್ನು ಕ್ರೈಸ್ತ ಮತಕ್ಕೆ ಪರಿವರ್ತನೆ ಮಾಡುವವನೂ ಆಗಿರಬೇಕು ಎಂಬ ಒಳ ತತ್ತ್ವವು ಸ್ವಾಮಿಗಳಿಗೆ ತಿಳಿದಿತ್ತೇ? ಅಥವಾ ಏಕಂ ಸತ್ ವಿಪ್ರಾಃ ಎಂಬ ಮಂತ್ರದಲ್ಲಿ ಅವರು ಮುಳುಗಿ ಹೋಗಿದ್ದರೆ? ಅಥವಾ ಅನ್ಯಜಾತಿ ಅಥವಾ ಅನ್ಯ ಧರ್ಮೀಯನಿಗೆ ಉಪದೇಶ ಕೊಡದಿರುವ ಸಂಪ್ರದಾಯವನ್ನು ದಾಟುವುದು ಸ್ವಾಮಿಗಳಿಗೆ ಸಾಧ್ಯವಾಗಲಿಲ್ಲವೇ? ಎಂಬ ಪ್ರಶ್ನೆಗಳು ಉಳಿಯುತ್ತವೆ. ಮುಸಲ್ಮಾನರು ನಮ್ಮನ್ನು ಸದೆಬಡಿದು ಮತಾಂತರಿಸುತ್ತಿದ್ದಾಗ ಪೋರ್ಚುಗೀಸರು ಗೋವ, ಮಲಬಾರುಗಳಲ್ಲಿ INQUISITION ಮಾಡುತ್ತಿದ್ದಾಗ, ಬ್ರಿಟಿಷರ ಕಾಲದಲ್ಲಿ ಪಾದ್ರಿಗಳು ಸಮಾಜಸೇವೆಯ ಸೋಗಿನಲ್ಲಿ ಎಲ್ಲೆಲ್ಲೂ ಪರಿವರ್ತನೆ ಮಾಡುತ್ತಿದ್ದಾಗ ಈ ಬೇಟೆಗಾರ ಮತಗಳ ಗ್ರಂಥಗಳನ್ನು ಓದಿ ಅವುಗಳನ್ನು ಧಾರ್ಮಿಕ ಜಿಜ್ಞಾಸೆಗೆ ಒಳಪಡಿಸುವ ಕೆಲಸವನ್ನು ನಮ್ಮ ಧರ್ಮಾಚಾರ್ಯರುಗಳು ಮಾಡಲಿಲ್ಲ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಆಧ್ಯಾತ್ಮಿಕ ಪ್ರೇರಕರೂ ಮಾರ್ಗದರ್ಶಕರೂ ಆಗಿದ್ದ ವಿದ್ಯಾರಣ್ಯರಿಗೆ ದೇಶದ ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆ ಗೊತ್ತಿತ್ತು. ಆದರೆ ಅವರು ಆ ಬೇಟೆಗಾರ ಮತವನ್ನು ಓದಿ ವಿಶ್ಲೇಷಿಸಿ ಬರೆದಿರುವುದು ನನಗೆ ಗೊತ್ತಿಲ್ಲ. ಈ ಕೆಲಸವನ್ನು ನೇರವಾಗಿ ಕೈಗೆತ್ತಿಕೊಂಡು ಅಧ್ಯಾತ್ಮ ಮತ್ತು ಜಿಜ್ಞಾಸೆಯ ಮಟ್ಟದಲ್ಲಿ ಮಾಡಿದವರು ನನ್ನ ಓದಿನ ವ್ಯಾಪ್ತಿಯ ಮಿತಿಯಲ್ಲಿ ಹೇಳುವುದಾದರೆ ಮಹರ್ಷಿ ದಯಾನಂದ ಸರಸ್ವತಿಯವರು ಮತ್ತು ಸ್ವಾಮಿ ವಿವೇಕಾನಂದರು. ಪೂರ್ವದ ಮತ್ತು ಬಹುತೇಕ ಇಂದಿನ ಹಿಂದೂ ಧರ್ಮಾಚಾರ್ಯರುಗಳಿಗಿರುವ ಬೇಟೆಗಾರ ಮತಗಳ ಬಗೆಗಿನ ಅವಜ್ಞೆಯು ಅಷ್ಟೇ ಬಹುತೇಕ ವಿದ್ಯಾವಂತ ಲೌಕಿಕರಿಗೂ ಇದೆ. ತಮ್ಮ ಜೀವನವನ್ನೇ ಬಲಿಯಾಗಿಟ್ಟು ಜಿಹಾದಿಗಳು ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವಂತೆ ಹಳ್ಳಿ ಹಳ್ಳಿಗಳಲ್ಲಿ , ಗುಡ್ಡಗಾಡುಗಳಲ್ಲಿ ತಿರುಗಿ ಜನರನ್ನು ಮತಾಂತರಕ್ಕೆ ಪ್ರಚೋದಿಸುವ ಕಾಯಕದಲ್ಲಿ ತೊಡಗಿರುವ ಮಿಷನರಿಗಳ ಪ್ರೇರಕಶಕ್ತಿಯು ಅವರ ತಲೆಯಲ್ಲಿ ಕೂರಿಸಿರುವ ಈ ಬೋಧೆಯೇ. ಸೇವೆಯ ಮಾನದಿಂದ ಧರ್ಮವನ್ನು ತೂಗುವುದು ಸಮಾಜದ ಆರ್ಥಿಕ ಬೆಳವಣಿಗೆ ಮತ್ತು ನ್ಯಾಯದ ದೃಷ್ಟಿಯಿಂದ ಸಹಜವೇ. ಪಶ್ಚಿಮ ದೇಶಗಳಲ್ಲಿ ಸುಖೀ ರಾಜ್ಯ ಅಥವಾ WELFARE STATEನ ಕಲ್ಪನೆ ಬೆಳೆದು-ವಿದ್ಯಾಭ್ಯಾಸ, ವೈದ್ಯಕೀಯ ಸೇವೆ, ಉದ್ಯೋಗ ಖಾತರಿ, ನಿರುದ್ಯೋಗ ಭತ್ಯೆ, ವೃದ್ಧ ರಕ್ಷಣೆ ಮೊದಲಾದ ಕಾರ್ಯಗಳು ಸರಕಾರದ ಜವಾಬ್ದಾರಿಗೆ ಒಳಪಟ್ಟು ಸರಕಾರವು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸತೊಡಗಿದಾಗ ಮತಕ್ಕೂ ಸೇವೆಗೂ ಸಂಬಂಧವಿಲ್ಲ ಎಂಬ ಭಾವನೆ ಬೆಳೆಯಿತು. ಕೆಲವು ದಶಕಗಳ ಹಿಂದೆ ನಮ್ಮವರೇ ಕೆಲವರು “ಕ್ರೈಸ್ತ ಮತವನ್ನು ನೋಡು, ಶಾಲೆ, ಕಾಲೇಜು, ಆಸ್ಪತ್ರೆ, ಅನಾಥಾಶ್ರಮ, ಶುಶ್ರೂಷೆ ಹೀಗೆ ಎಷ್ಟೊಂದು ಸೇವಾ ಕಾರ್ಯ ಮಾಡುತ್ತಾರೆ. ನಮ್ಮ ಧರ್ಮದಲ್ಲಿ ಏನಿದೆ?” ಎನ್ನುತ್ತಿದ್ದರು. ಈಗ ನಮ್ಮ ಎಷ್ಟೋ ಮಠಗಳು ಇಂಥ ಹಲವಾರು ನೂರಾರು ಸಂಸ್ಥೆಗಳನ್ನು ನಡೆಸುತ್ತಿವೆ. ಆದರೆ ಸೈದ್ಧಾಂತಿಕವಾಗಿ ನೋಡಿದರೆ ಇವು ನಿಜವಾಗಿಯೂ ಮಠದ ಕೆಲಸಗಳೆ? ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಸರಕಾರವು ತಮ್ಮ ಕರ್ತವ್ಯಗಳಲ್ಲಿ ಸೋತಿರುವಾಗ ಮಠಗಳಾದರೂ ಈ ಕೆಲಸ ಮಾಡುತ್ತಿರುವುದು ವಂದನೀಯ. ಆದರೆ ಅವು ಎಷ್ಟರ ಮಟ್ಟಿಗೆ ಅಧ್ಯಾತ್ಮದ ಬುಗ್ಗೆಗಳಾಗಿವೆ? ಅಧ್ಯಾತ್ಮದ ಪ್ರಸಾರ ಕೇಂದ್ರಗಳಾಗಿವೆ? ಅನ್ನ , ಬಟ್ಟೆ ಆಸ್ಪತ್ರೆ, ಉದ್ಯೋಗ , ವಿದ್ಯಾಭ್ಯಾಸ, ವಿಜ್ಞಾನದ ಅಧ್ಯಯನಾವಕಾಶಗಳೆಲ್ಲ ದಕ್ಕಿಯೂ ಮನುಷ್ಯನ ಜೀವವು ಅನುಭವಿಸುವ ಅರಕೆ, ಅದನ್ನು ತುಂಬುವ ತುಡಿತವನ್ನು ಪೂರೈಸಲು ನಮ್ಮ ಮಠಗಳು ಸಮರ್ಥವಾಗಿವೆಯೇ? ಅಧ್ಯಾತ್ಮವು ನಮ್ಮ ನೈತಿಕ ಪ್ರಜ್ಞೆಯನ್ನು ಉದ್ದೀಪಿಸುವ ಬೆಳಕು ಎಂಬುದು ನಿಜವಾದರೂ ಲೌಕಿಕ ಚಟುವಟಿಕೆಗಳಿಂದ ಅಧ್ಯಾತ್ಮವನ್ನು ಅಳೆಯಬಾರದು. ೧೯೭೫ರಲ್ಲಿ ನಾನು UNESCO ಸಂಸ್ಥೆಯು ಟೋಕಿಯೋ ನಗರದಲ್ಲಿ ಒಂದು ತಿಂಗಳು ಏರ್ಪಡಿಸಿದ್ದ ನೀತಿ ಶಿಕ್ಷಣ ಕುರಿತ ಸಂಕಿರಣಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗಿದ್ದೆ. ಸಂಕಿರಣಕ್ಕೆ ಪೂರಕವಾಗಿ ಜಪಾನಿನ ಕೆಲವು ಶಾಲೆಗಳನ್ನು ಅಲ್ಲಿ ನೀತಿ ಶಿಕ್ಷಣವನ್ನು ಹೇಗೆ ನೀಡುತ್ತಾರೆಂಬ ದೃಷ್ಟಿಯಿಂದ ಸಂದರ್ಶಿಸುವ ಕಾರ್ಯಕ್ರಮವಿತ್ತು. ಅವುಗಳಲ್ಲಿ ಒಂದು ಕ್ರೈಸ್ತ ಮಿಶನರಿ ಶಾಲೆ. ವಿವರಗಳನ್ನೆಲ್ಲ ತಿಳಿದ ಮೇಲೆ ನಾನು ಅದರ ಪ್ರಿನ್ಸಿಪಾಲರನ್ನು ಕೇಳಿದೆ; “ಈ ದೇಶದ ಇತರ ಶಾಲೆಗಳಿಗಿಂತ ನಿಮ್ಮ ಶಾಲೆಯು ಈ ವಿಷಯದಲ್ಲಿ ಭಿನ್ನವಾಗಿದೆಯೇ? ವಿಶಿಷ್ಟವಾಗಿದೆಯೇ?” “ವೆರಿಗುಡ್ ಕ್ವೆಶ್ಚನ್. ನಮ್ಮದು ವಿಶಿಷ್ಟ.” ಜಪಾನೀ, ಆದರೆ ಕ್ರೈಸ್ತ ಮತೀಯನಾದ ಆತ ಉತ್ತರಿಸಿದ. “ಹೇಗೆ?” “ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಸುಮಾರು ಮೂವತ್ತು ಜನರು ಬೆಳೆದು ವಯಸ್ಕರಾದ ನಂತರ ಕ್ರೈಸ್ತ ಮತಕ್ಕೆ ಬದಲಾಯಿಸಿಕೊಂಡಿದ್ದಾರೆ". ಧೈರ್ಯವೆಲ್ಲಿದೆ? ಅವರಿಗೆ ನೀತಿ ಎಂದರೆ ಜಾತಿ ಬದಲಾಯಿಸಿಕೊಳ್ಳುವುದು. ಕ್ರೈಸ್ತನಲ್ಲದವನು ನೀತಿವಂತನಾಗಲಾರ. ಮಹಾತ್ಮ ಗಾಂಧಿಯ ವಿಷಯದಲ್ಲಿ ಒಬ್ಬ ಮುಸ್ಲಿಂ ನಾಯಕನು ಹೇಳಿದ ಮಾತು ಪ್ರಸಿದ್ಧವಾಗಿದೆ. “ಅವನು ಮಹಾತ್ಮನಿರಬಹುದು. ಆದರೆ ಒಬ್ಬ ಲಫಂಗನಾದ ಮುಸ್ಲಿಮನಿಗಿಂತ ಅವನು ಕೀಳೇ. ಏಕೆಂದರೆ ಅವನು ಮುಸ್ಲಿಮನಲ್ಲ.” ಈ ಮನಃಸ್ಥಿತಿಯವರಿಗೆ ನೀತಿಯು ಮತವನ್ನು ಅವಲಂಬಿಸಬೇಕಿಲ್ಲ ಎಂಬ ದೃಷ್ಟಿಯಾಗಲಿ, ಮತ ವಿಸ್ತರಣೆಗೆ ಹಿಂಸೆ, ಕ್ರೌರ್ಯ, ಬಲ, ಹಣ, ಆಮಿಷ ಪ್ರಚಾರಗಳನ್ನು ಬಳಸಬಾರದೆಂಬ ಸೂಕ್ಷ್ಮವಾಗಲಿ ಇರುವುದು ಸಾಧ್ಯವಿಲ್ಲ. ಎಲ್ಲೆಲ್ಲಿಯೂ, ಎಲ್ಲಾ ಮಾಧ್ಯಮಗಳಲ್ಲಿ, ರಾಜಕೀಯ ಶಕ್ತಿ ಸ್ಥಾನಗಳಲ್ಲಿ, ಅಂತಾರಾಷ್ಟ್ರೀಯ ವಲಯಗಳಲ್ಲಿ ಭಾರಿ ಪ್ರಚಾರವನ್ನು ಗಿಟ್ಟಿಸಿಕೊಂಡು ಈಗ ವ್ಯಾಟಿಕನ್‌ನಿಂದ ಸೇಂಟ್ ಎಂಬ ಬಿರುದನ್ನು ಪಡೆಯುವ ಹಂತದಲ್ಲಿರುವ ಮದರ್ ಥೇರೇಸಾರ ಬಗೆಗೆ ಒಂದು ಪ್ರಶ್ನೆ : ಅನಾಥ ಮಕ್ಕಳನ್ನು ತಮ್ಮ ಆಶ್ರಮಕ್ಕೆ ಸೇರಿಸಿಕೊಂಡು ಪೋಷಿಸಿದ ಆಕೆಯು ಈ ಮಕ್ಕಳನ್ನು ಅವರವರ ಮೂಲ ಧರ್ಮವನ್ನರಿಯಲು, ಅನುಸರಿಸಲು ಬಿಟ್ಟರೆ? ಆಕೆ ತೀರಿದ ಮೇಲೆ ನಾನು ಕಲ್ಕತ್ತೆಯಲ್ಲಿ ಆ ಆಶ್ರಮಕ್ಕೆ (MISSIONERIES OF CHARITY) ಹೋಗಿ ವಿಚಾರಿಸಿದೆ. ಆ ಮಕ್ಕಳನ್ನೆಲ್ಲ ಕ್ರೈಸ್ತರನ್ನು ಮಾಡಿಯೇ ಇದ್ದಾರೆ. ಇದೊಂದು ಮತ ವಿಸ್ತರಣೆಯ ಹುನ್ನಾರವಲ್ಲವೆ? ಇಂಥವರಿಗೆ ವ್ಯಾಟಿಕನ್ ಸಹಾಯದಿಂದ ಹಣ ಮತ್ತು ಪ್ರಚಾರಗಳು ದೊರೆತು, ಪಾಶ್ಚಿಮಾತ್ಯ ಮಾಧ್ಯಮಗಳ ಪ್ರತಿಧ್ವನಿಯಾದ ನಮ್ಮ ಮಾಧ್ಯಮಗಳೂ ಆ ಪ್ರಚಾರವನ್ನೇ ಪ್ರತಿಧ್ವನಿಸಿ ಆಕೆಯನ್ನು ಮುಗಿಲೆತ್ತರಕ್ಕೆ ಏರಿಸಲಿಲ್ಲವೆ? ಸೇಂಟ್ ಎನ್ನಿಸಿಕೊಳ್ಳುವ ವ್ಯಕ್ತಿಯು ತನ್ನ ಜೀವನದಲ್ಲಿ ಕೆಲವಾದರೂ ಪವಾಡಗಳನ್ನು ಮಾಡಿರಬೇಕೆಂಬ ಕ್ರೈಸ್ತ ನಿಯಮವನ್ನು ಪೂರೈಸಲು ಕಲ್ಕತ್ತಾ ಆಶ್ರಮದ ಕೆಲವು ಸನ್ಯಾಸಿನಿಯರು ಆಕೆ ಕೆಲವು ಪವಾಡಗಳನ್ನು ಮಾಡಿದ್ದನ್ನು ತಾವು ಕಣ್ಣಾರೆ ಕಂಡೆವೆಂದು ಹೇಳಿಕೆ ನೀಡಿದಾಗ, ಸಾಯಿಬಾಬಾ ಮಾಡುತ್ತಿದ್ದರೆಂಬ ಪವಾಡಗಳಿಗೆ ಸಾರ್ವಜನಿಕ ಸವಾಲು ಎಸೆದ ನಮ್ಮ ಬುದ್ಧಿಜೀವಿಗಳು ನಿಶ್ಶಬ್ದವಾಗಿರಲಿಲ್ಲವೆ? ಈಗ ಅರವತ್ತು ವರ್ಷಗಳ ಹಿಂದೆ ನಾನು ನನ್ನ ಹಳ್ಳಿ ಮತ್ತು ಸುತ್ತಣ ಹಳ್ಳಿಗಳಲ್ಲಿ ಕಣ್ಣಾರೆ ನೋಡುತ್ತಿದ್ದ ಸಂಗತಿ: ಒಂದು ಬಸವನ ಮೇಲೆ ಕಟ್ಟಿದ ನಗಾರಿಯ ಸದ್ದು. ಅದನ್ನು ಕೇಳುತ್ತಿದ್ದ ಗ್ರಾಮಸ್ಥರು “ಸಿದ್ಧಗಂಗೆ ಸ್ವಾಮಿಗಳು ಭಿಕ್ಷಕ್ಕೆ ಬಂದವರೆ” ಎಂದು ಮನೆಯಿಂದ ಹೊರಗೆ ಬರುತ್ತಿದ್ದರು. ಈಗ ಶತಾಯುಷಿಯಾಗಿರುವ ಶಿವಕುಮಾರಸ್ವಾಮಿಗಳಿಗೆ ಆಗ ನಲವತ್ತರ ಪ್ರಾಯ. ಎತ್ತಿನ ಗಾಡಿಯಲ್ಲಿ ಕುಳಿತು ಬರುತ್ತಿದ್ದರು. ಹಳ್ಳಿಯವರು ತಾವೇ ಮನೆಮನೆಗಳಿಂದ ರಾಗಿ, ಕಾಳು, ಮೆಣಸಿನಕಾಯಿಗಳನ್ನು ಎತ್ತಿ ಮೂಟೆ ಕಟ್ಟಿ ತಮ್ಮದೇ ಗಾಡಿಗೆ ತುಂಬಿ ತಮ್ಮ ಎತ್ತುಗಳನ್ನು ಕಟ್ಟಿ, ಆಳಿನೊಡನೆ ನಲವತ್ತು ಮೈಲಿ ದೂರದ ಸಿದ್ಧಗಂಗೆಗೆ ಕಳಿಸುತ್ತಿದ್ದರು. ಹಳ್ಳಿ ಹಳ್ಳಿಗಳಿಂದ ಹೀಗೆ ದಿನಸಿ ಹೋಗುತ್ತಿತ್ತು. ಸ್ವಾಮಿಗಳು ದಿನಸಿಯನ್ನು ಕೇಳುತ್ತಿರಲಿಲ್ಲ. ಗ್ರಾಮಸ್ಥರು ತಾವಾಗಿಯೇ ಕೊಡುತ್ತಿದ್ದರು. ಸ್ವಾಮಿಗಳು ಕೇಳುತ್ತಿದ್ದದ್ದು “ನಿಮ್ಮೂರಿನಲ್ಲಿ ಬಡ ಮಕ್ಕಳು ಎಷ್ಟು ಜನವಿದ್ದರೂ ನನ್ನ ಜೊತೆ ಕಳಿಸಿ, ನಾವು ಊಟ ಹಾಕಿ, ಬಟ್ಟೆ ಸ್ಲೇಟು ಪುಸ್ತಕ ಕೊಟ್ಟು ಓದಿಸುತೀವಿ. ವಿದ್ಯಾಭ್ಯಾಸ ಮುಖ್ಯ”. ಆಗ ಸಿದ್ಧ ಗಂಗೆಯಲ್ಲಿ ಇಷ್ಟು ಮಕ್ಕಳಿರಲಿಲ್ಲ. ಕ್ರಮೇಣ ಸಂಖ್ಯೆಯು ವರ್ಧಿಸಿ ಈಗ ಏಳೆಂಟು ಸಾವಿರವಾಗಿದೆ. ಸ್ವಾಮಿಗಳು ಸನ್ಯಾಸಿ ಧರ್ಮವಾದ ಭಿಕ್ಷಾಟನೆಯಿಂದ ದಿನಕ್ಕೆ ಮೂರು ನಾಲ್ಕು ಹಳ್ಳಿಗಳನ್ನು ಸುತ್ತಿ, ದಾಸೋಹದ ಪ್ರಮಾಣವನ್ನು ಬೆಳೆಸಿದರು. ಎಲ್ಲ ಜಾತಿ ಎಲ್ಲ ಪಂಗಡಗಳ ಮಕ್ಕಳನ್ನೂ ಬೆಳೆಸಿದರು. ಮುಸಲ್ಮಾನ ಹುಡುಗರನ್ನೂ ನಾನು ಅಲ್ಲಿ ನೋಡಿದ್ದೇನೆ. ಯಾರಿಗೂ ಲಿಂಗಧಾರಣೆ ಮಾಡಿಲ್ಲ. ಅವರವರ ಜಾತಿ ಆಚರಣೆಗಳು ಅವರವರದ್ದು. ಉತ್ತಮ ನಡತೆ ಕಲಿಸುವುದಷ್ಟೇ ನಮ್ಮ ಕರ್ತವ್ಯ ಎಂಬ ನಿಯಮವಿಟ್ಟುಕೊಂಡು ನಡೆಸುತ್ತಿದ್ದಾರೆ. ಅವರಿಗೆ ಮೊನ್ನೆ ಮೊನ್ನೆ ನೂರು ವರ್ಷವಾದಾಗ ಪತ್ರಿಕೆಗಳು ಗಮನಹರಿಸಿದವು; ಅವೂ ಕನ್ನಡ ಪತ್ರಿಕೆಗಳು. ಅವರಿಗೆ ಮದರ್ ಥೆರೇಸಾರಿಗೆ ದಕ್ಕಿದ ಪ್ರಚಾರ ಸಿಗಲಿಲ್ಲ. ಸಿಗುತ್ತಿಲ್ಲವೆಂದು ನಾವು ಖೇದಪಡಬೇಕಿಲ್ಲ. ಯಾವ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಈಶ್ವರ ಪ್ರಣಿಧಾನ ಭಾವನೆಯಿಂದ ಸಾಧಿಸುವುದು ಯೋಗಿಯ ಪಂಚನಿಯಮಗಳಲ್ಲಿ ಒಂದು. ನಾನು ಮಾಡಿದೆ ಎಂಬ ಭಾವನೆಗೆ ಒಳಗಾಗುವುದು ಅಹಂಕಾರವನ್ನು ಉಬ್ಬಿಸಿಕೊಂಡಂತೆ. ಅವನು ಯೋಗ ಸಾಧನೆಯ ಮುಂದಿನ ಮೆಟ್ಟಿಲನ್ನು ಹತ್ತಲಾರ. ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು, ಬಾಬಾ ಆಮ್ಟೆ, ಬಿಳಿಗಿರಿರಂಗನಬೆಟ್ಟದ ಡಾ.ಸುದರ್ಶನ ಮೊದಲಾಗಿ ಆಧುನಿಕ ಭಾರತದ ಹಲವರು ಜನಸೇವೆಯ ನಿಷ್ಕಾಮ ಕರ್ಮದಲ್ಲಿ ತೊಡಗಿದ್ದಾರೆ. ಮದರ್ ಥೆರೇಸಾರಿಗಿಂತ ಹೆಚ್ಚಿನ ಸೇವೆ ಮಾಡಿದ್ದಾರೆ. ಅವರು ಯಾರಿಗೂ ಆಕೆಗೆ ಸಂದ ವೈಭವ ದೊರೆಯಲಿಲ್ಲ. ಏಕೆಂದರೆ ಅವರದು ಏಸುವಿನ ಮಹಿಮೆಯನ್ನು ಪ್ರಚಾರ ಮಾಡುವ ಸೇವೆಯಲ್ಲ. ಅನುಷ್ಠಾನಗೊಳಿಸುವವರಾರು? ಹಲವರನ್ನಾದರೂ ಕ್ರೈಸ್ತ ಮತಕ್ಕೆ ತಂದರೆ ಮಾತ್ರ ನೀನು ನಿಜವಾದ ಕ್ರೈಸ್ತ ಎಂಬ ಬೋಧನೆಯನ್ನು ತಲೆಗೆ ತುಂಬಿಕೊಂಡ ಸಾವಿರಾರು ಜನರು ಕೇರಿಕೇರಿಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ, ಕಾಡುಗುಡ್ಡಗಳಲ್ಲಿ ಮತ ಪರಿವರ್ತನೆಯ ಕೆಲಸದಲ್ಲಿ ತೊಡಗಿದ್ದಾರೆ. ಅವರಿಗೆ ಬೇಕಾದ ಕಡೆ ತರಬೇತಿ, ಹಣ, ಮಾರ್ಗದರ್ಶನ, ಎಲ್ಲಾದರೂ ಎಡವಟ್ಟಾದರೆ ಸಾರ್ವಜನಿಕ ಹಾಗೂ ರಾಜಕೀಯ ಅಬ್ಬರವನ್ನು ಒದಗಿಸುವ ಮಹಾದಂಡ ನಾಯಕತ್ವವು ವಿದೇಶೀ ಮೂಲದ ಮಿಶನರಿಗಳದು. ಹಿಂದೂಗಳಿಗಾದರೋ ಕಳೆದು ಗೊತ್ತೇ ಹೊರತು ಗಳಿಸಿ ಗೊತ್ತಿಲ್ಲ. ಮತ ಪರಿವರ್ತನೆಗೆ ಸಂಬಂಧಿಸಿ ಒಂದು ಕಾನೂನೇನೋ ಇದೆ. ಅದನ್ನು ನ್ಯಾಯಾಲಯವು ಕೂಡ ವಿವರಿಸಿದೆ. ಆದರೆ ಈ ವಿವರಣೆಯನ್ನು ಅನುಷ್ಠಾನಗೊಳಿಸುವವರಾರು? ಯಾರಾದರೂ ಹಿಂದೂಗಳು ಪರಿವರ್ತನೆಯಲ್ಲಿ ತೊಡಗಿರುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಯತ್ನಿಸಿದರೆ ನಮ್ಮ ಮಾಧ್ಯಮಗಳ ಚಿತ್ರಣಗಳಲ್ಲಿ ಅವರೇ ಧರ್ಮಾಂಧರಾಗುತ್ತಾರೆ. ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ. ಯಾವ ಪಾತಕಿಗೂ ಶಿಕ್ಷೆಯಾಗುವುದಿಲ್ಲ. ತಡೆಯ ಹೊರಟವರನ್ನು ನೂರಾರು ಹೆಸರಿನ ಕ್ರೈಸ್ತ ಸಂಘಗಳಲ್ಲದೆ ನಮ್ಮ ರಾಜಕೀಯ ಪಕ್ಷಗಳು, ವಿವಿಧ ಬಣ್ಣಗಳ ಸಾಮಾಜಿಕ ಪಕ್ಷಗಳು, ವಿವಿಧ ಬಣ್ಣಗಳ ಬುದ್ಧಿಜೀವಿಗಳು ಮುಗಿಲು ಮುಟ್ಟುವಂತೆ ಖಂಡಿಸುತ್ತಾರೆ. ಸರ್ಕಾರವಂತೂ ಅವರನ್ನು ಅರೆಸ್ಟ್ ಮಾಡಿಸುತ್ತದೆ. ಅಶಾಂತಿಯ ಉತ್ಪಾದಕರು ಎಂಬ ಆಪಾದನೆ ಹೊರಿಸುತ್ತದೆ. ಕಾಂಗ್ರೆಸ್ಸಿಗೆ ನೆಹರೂ ಕಾಲದಿಂದಲೂ ಹಿಂದೂಗಳನ್ನು ಬಲಿಕೊಟ್ಟು ಅದನ್ನು ಸಮರ್ಥಿಸುವ ಪರಿಪಾಠವಿದೆ. ಕಾಂಗ್ರೆಸ್ ಮೇಲೆ ಮಹಾತ್ಮಗಾಂಧಿಯ ಹಿಡಿತವು ಸ್ವಾತಂತ್ರ್ಯ ಪ್ರಾಪ್ತಿಯ ಮೊದಲೇ ಸಡಿಲವಾಗಿತ್ತು. ನೆಹರೂರ ರೀತಿ ನೀತಿಗಳು ಎಂದೂ ಗಾಂಧಿ ತತ್ತ್ವಕ್ಕೆ ವಿರೋಧವಾಗಿಯೇ ಇದ್ದವು. ಈಗಂತೂ ಈ ಪಕ್ಷವನ್ನು ವ್ಯಾಟಿಕನ್ ದೇಶದ ಕ್ರೈಸ್ತ ಮಹಿಳೆಯು ನಿಯಂತ್ರಿಸುತ್ತಿದ್ದಾಳೆ. ಪ್ರತಿಯೊಬ್ಬ ಕಾಂಗ್ರೆಸಿಗನೂ ಆಕೆಗೆ ಡೊಗ್ಗು ಸಲಾಮು ಹಾಕದೆ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಸಾಧ್ಯವಾಗಿರುವಾಗ, ಪ್ರತಿಯೊಬ್ಬ ಕಾಂಗ್ರೆಸಿಗನಿಗೂ ಅಧಿಕಾರದಲ್ಲುಳಿದು, ಹಣ ಮಾಡುವುದೇ ಗುರಿಯಾಗಿರುವಾಗ ಆಕೆಯನ್ನು, ಆಕೆಯ ಮತ ವಿಸ್ತರಣೆಯನ್ನು ವಿರೋಧಿಸಿ ಒಂದೇ ಒಂದು ಮಾತನಾಡುವ, ವಿರೋಧಿಸುವವರನ್ನು ನಾಮುಂದು ತಾಮುಂದು ಎಂದು ಬೈಯದೆ ಸುಮ್ಮನಿರುವ ಧೈರ್ಯ ಎಲ್ಲಿಂದ ಬರಬೇಕು? ಕಾಂಗ್ರೆಸಿನಲ್ಲಿಲ್ಲದ ದೇವೇಗೌಡರು, ಮುಲಾಯಂ ಸಿಂಗ್, ಲಾಲೂ ಪ್ರಸಾದ್ ಯಾದವ್ ಮೊದಲಾದವರಿಗೆ ಅಲ್ಪಸಂಖ್ಯಾತರ ಓಟಿನ ಮೇಲೆ ಕಣ್ಣು. ಹಿಂದೂ ಪರವೆಂದು ಬಿಂಬಿಸಿಕೊಂಡಿರುವ ಬಿಜೆಪಿ ಮೇಲೆ ದ್ವೇಷ. ಹಿಂದೂ ದ್ವೇಷವು ಭಾರತದ ಕಮ್ಯೂನಿಸ್ಟರ ಬದ್ಧ ತತ್ತ್ವಗಳಲ್ಲೊಂದು. ಬುದ್ಧಿಜೀವಿಗಳ ಬುದ್ಧಿಯು ರೂಪಿತವಾಗಿರುವುದೇ ಮೆಕಾಲೆಯು ಗುರಿ ಇಟ್ಟ ವಿಚಾರಗಳಿಂದ. ದಿನಕ್ಕೆ ಒಂದು ವೇದ ಮಂತ್ರಗಳಿಂದ ಪೂಜೆ ನಡೆಯುವ ದೇವಾಲಯ, ಒಂದು ಕುರಿ ಹೋತಗಳ ಬಲಿಯನ್ನು ಕದ್ದು ಮಾಡುವ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿ, ಇಪ್ಪತ್ತೊಂದು, ಐವತ್ತೊಂದು ಅಥವಾ ನೂರಾಒಂದು ಋತ್ವಿಜ ರಿಂದ ಹತ್ತಾರು ಲಕ್ಷ ರೂಪಾಯಿಗಳ ಖರ್ಚಿನಿಂದ ಹೋಮ ಮಾಡಿಸಿ ಅದರ ಭಸ್ಮವನ್ನು ಹಣೆಗೆ ಹಚ್ಚಿ ಸಂಜೆ ಮಸೀದಿಗೆ ಹೋಗಿ ಮುಂದಿನ ಜನ್ಮದಲ್ಲಿ ಮುಸಲ್ಮಾನ ಜನ್ಮವನ್ನು ಕೊಡುವಂತೆ ತಾನು ದೇವರನ್ನು ಸದಾ ಪ್ರಾರ್ಥಿಸು ತ್ತಿರುವುದಾಗಿ ಭಾಷಣ ಮಾಡುವ ರಾಜಕಾರಣಿಗಳೇ ನಮ್ಮಲ್ಲಿ ಹೆಚ್ಚು. ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವದಲ್ಲಿ ಉಳಿಯುವುದೆಂತು? ಎಂಬುದು ಅವರ ಅಂತರಂಗದ ಕಾಳಜಿ. ಇವರು ಮತ ಪರಿವರ್ತನೆಯನ್ನು ವಿರೋಧಿಸುವವರ ವಿರುದ್ಧ ಗಾಂಧಿ ಪ್ರತಿಮೆಯ ಎದುರು ಮಧ್ಯಾಹ್ನ ಊಟದ ಹೊತ್ತಿನವರೆಗೆ ಉಪವಾಸ ಮಾಡುತ್ತಾರೆ. ಮತ ಪರಿವರ್ತನೆಯನ್ನು ಕಾನೂನಿನಲ್ಲಿ ನಿಷೇಧಿಸಬೇಕೆಂಬ ಬೇಡಿಕೆಯನ್ನು ದಲಿತ ಬುದ್ಧಿಜೀವಿಗಳು ವಿರೋಧಿಸುತ್ತಾರೆ. ತಾವೆಲ್ಲ ಒಟ್ಟಿಗೆ ಕ್ರೈಸ್ತ ಅಥವಾ ಮುಸಲ್ಮಾನರಾಗುತ್ತೇವೆಂಬ ಬೆದರಿಕೆಯ ಅಸ್ತ್ರ ಕಳೆದು ಹೋಗುತ್ತದೆಂಬ ಕಾರಣ ಅವರದು. ಆದರೆ ಕ್ರೈಸ್ತರಾದ ದಲಿತರಿಗೂ ಮೀಸಲಾತಿ ಕೊಡಿಸುವ, ಆ ಮೂಲಕ ಕ್ರೈಸ್ತರಾದರೆ ಮೀಸಲಾತಿ ಹೋಗುತ್ತ ದೆಂಬ ಅಡ್ಡಿಯನ್ನು ನಿವಾರಿಸುವ ಚರ್ಚಿನ ಹುನ್ನಾರವನ್ನು ಇದೇ ದಲಿತ ಬುದ್ಧಿ ಜೀವಿಗಳು ವಿರೋಧಿಸುತ್ತಾರೆ. ದಲಿತ ಕ್ರೈಸ್ತರಿಗೂ ಮೀಸಲಾತಿಯನ್ನು ವಿಸ್ತರಿಸಿದರೆ ದಲಿತರಾಗಿಯೇ ಇರುವ ತಮಗೆ ದೊರೆಯುವ ಈ ಸೌಲಭ್ಯವನ್ನು ಹಂಚಿಕೊಳ್ಳಬೇಕಾಗುವ ಅನನುಕೂಲಕ್ಕೆ ಅವರು ಸಿದ್ಧರಿಲ್ಲ. ಮುಸಲ್ಮಾನರಿಗೂ ಮೀಸಲಾತಿಯನ್ನು ವಿಸ್ತರಿಸಿದ ಆಂಧ್ರದ ಸ್ಯಾಮ್ಯುಯೆಲ್ ರಾಜಶೇಖರ್ ರೆಡ್ಡಿಯದು ಮುಂದೆ ಈ ವಿಸ್ತರಣೆಯನ್ನು ಕ್ರೈಸ್ತರಿಗೆ ಕೊಡುವ ಯೋಜಿತ ತಂತ್ರ. ದಲಿತರಿಗೆಲ್ಲ ತಮ್ಮ ಮನೆಯಿಂದ ಹಿಂದೂ ದೇವದೇವತೆಯರ, ಮಾರಮ್ಮನದೂ ಸೇರಿದಂತೆ, ಪಟಗಳನ್ನು ಹೊರ ಹಾಕಿಸಿ ಬುದ್ಧ ದೀಕ್ಷೆ ಕೊಡಿಸುವ ಚಳವಳಿ ಮಾಡುವ ದಲಿತ ಬುದ್ಧಿ ಜೀವಿಗಳು ಸರ್ಕಾರಿ ದಾಖಲೆಯಲ್ಲಿ ಮಾತ್ರ ದಲಿತ ಜಾತಿ ಎಂದೇ ಬರೆಸುತ್ತಾರೆ. ಪರಿವರ್ತನೆಯನ್ನು ನಿಷೇಧಿಸಬೇಕೆಂದು ಮನವಿ ಅರ್ಪಿಸುವ ಮಠಾಧೀಶರಿಗೆ ಈ ಎಲ್ಲ ತಂತ್ರಗಾರರೂ ‘ಮಠಾಧೀಶರು ತಮ್ಮ ಕೆಲಸ ತಾವು ಮಾಡಿಕೊಂಡಿರಲಿ. ಈ ವಿಷಯಕ್ಕೆ ಬರುವುದು ಬೇಡ" ಎಂದು ಎಚ್ಚರಿಕೆ ನೀಡುತ್ತಾರೆ. ಮಠಾಧೀಶರ ಕೆಲಸವೆಂದರೆ ಚುನಾವಣಾ ಪೂರ್ವದಲ್ಲಿ ರಾಜಕಾರಣಿಗಳು ತಾವು ಕರೆತರುವ ಛಾಯಾಚಿತ್ರಕಾರನ ಎದುರು ಅವರಿಗೆ ಫಲಪುಷ್ಪಗಳನ್ನು ಅರ್ಪಿಸಿ ಪಾದಸ್ಪರ್ಶ ಮಾಡುವಾಗ , ಆಶೀರ್ವಾದ ಸೂಚಕ ಬಲಗೈ ಎತ್ತುವುದು ಮಾತ್ರವೆ? ನೈತಿಕ ಹೊಣೆ ಯಾರದು? ಇಂಥ ಸ್ಥಿತಿಯಲ್ಲಿ ಕೆಲವು ಹಿಂದೂ ಯುವಕರು, ಮತ ಪರಿವರ್ತನೆಯು ಅವ್ಯಾಹತವಾಗಿ ನಡೆಯುವ ಪ್ರದೇಶದವರು, ತಾವೇ ಅದನ್ನು ತಡೆಯಲು ಮುಂದೆ ಹೋದಾಗ ಈ ತಂತ್ರಗಾರರು ಮತ್ತು ಮಾಧ್ಯಮದವರು ದೊಡ್ಡ ಗದ್ದಲ ಎಬ್ಬಿಸುತ್ತಾರೆ. ಆ ಮೂಲಕ ಅಂತಾರಾಷ್ಟ್ರೀಯ ಆಧಿಪತ್ಯವುಳ್ಳ ಕ್ರೈಸ್ತರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಅನಾಹುತವಾಗುತ್ತಿದೆ ಎಂಬ ಗದ್ದಲ ಎಬ್ಬಿಸುತ್ತಿದ್ದಾರೆ. ಫ್ರಾನ್ಸ್ ದೇಶದಲ್ಲಿ ಯಾವ ಶಾಲಾ ಮಕ್ಕಳೂ ತಮ್ಮ ಮತ ಲಾಂಛನಗಳನ್ನು ಧರಿಸಬಾರದು. ಎಲ್ಲರಲ್ಲೂ ಭೇದವಿಲ್ಲದೆ ತಾವು ಫ್ರೆಂಚರು ಎಂಬ ಭಾವನೆ ಬೆಳೆಯಬೇಕು ಎಂಬ ಉದ್ದೇಶದಿಂದ ಮುಸ್ಲಿಂ ಹುಡುಗಿಯರು ತಲೆಗೆ ಚೌಕ ಕಟ್ಟುವುದನ್ನೂ ಸಿಖ್ ಹುಡುಗರು ಪೇಟಾ ಕಟ್ಟುವುದನ್ನೂ ನಿಷೇಧಿಸಿದ್ದಾರೆ. ಮೊನ್ನೆ ಫ್ರಾನ್ಸಿಗೆ ಅಲ್ಪಾವಧಿ ಭೇಟಿ ನೀಡಿದ ನಮ್ಮ ಪ್ರಧಾನಿ ಮನಮೋಹನ ಸಿಂಗರು ಸಿಖ್ ಹುಡುಗರಿಗೆ ಪೇಟಾ ಕಟ್ಟಿ ಶಾಲೆಗೆ ಹೋಗುವ ಅವಕಾಶ ಕೊಡುವಂತೆ ಅಧ್ಯಕ್ಷ ಸರ್ಕೋಜಿಗೆ ಮನವಿ ಮಾಡಿದರು. ಆದರೆ ಮಿಶನರಿಗಳ ವಿರುದ್ಧ ಒರಿಸ್ಸಾ ಮತ್ತು ಕರ್ನಾಟಕದ ಕೆಲವು ಕಡೆಗಳಲ್ಲಿ ನಡೆಯುತ್ತಿರುವ ಗಲಭೆಯ ಹಿಂದಿರುವ ಕಾರಣವನ್ನು ವಿವರಿಸದೆ ತಾವು ಸ್ವದೇಶಕ್ಕೆ ಹಿಂತಿರುಗಿದ ತಕ್ಷಣ ಕಠಿಣ ಕ್ರಮ ಕೈಗೊಂಡು ಗಲಭೆಯನ್ನು ಹತ್ತಿಕ್ಕುವುದಾಗಿ ಆಶ್ವಾಸನೆ ಇತ್ತು ಬಂದರು. ದಿಲ್ಲಿಗೆ ಬಂದ ತಕ್ಷಣ ಈ ಗಲಭೆಗಳನ್ನು ಬಳಸಿಕೊಂಡು ಈ ಎರಡು ರಾಜ್ಯಗಳಲ್ಲಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಎಂದರೆ ತಮ್ಮದೇ ಆದ ಕಾಂಗ್ರೆಸ್ ಆಳ್ವಿಕೆಯನ್ನು ಹೇರುವ ಹುನ್ನಾರ ನಡೆಸಿದ್ದಾರೆ. ಪ್ರಜಾಪ್ರಭುತ್ವಾತ್ಮಕವಾಗಿ, ಕಾನೂನು ಸಮ್ಮತವಾದ ವಿಧಾನಗಳಿಂದ ಮತಾಂತರದ ಪಿಡುಗನ್ನು ತಡೆಯುವುದು ಸಾಧ್ಯವಿಲ್ಲವೆಂಬ ಸ್ಥಿತಿಯಲ್ಲಿ ಕೆಲವರಾದರೂ ಹತಾಶರು ಹಿಂಸಾ ಮಾರ್ಗಕ್ಕೆ ಇಳಿದು, ಹಿಂಸಾ ಮಾರ್ಗದ ಪರಿಣಾಮದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಭೂಗತ ಮಾರ್ಗವನ್ನು ಆರಂಭಿಸಿದರೆ ಅದಕ್ಕೆ ನೈತಿಕ ಹೊಣೆ ಯಾರದು? ಮುಸ್ಲಿಂ ಭಯೋತ್ಪಾದಕರನ್ನು ನಿವಾರಿಸುವ ಇಚ್ಛೆಯಾಗಲಿ, ಶಕ್ತಿಯಾಗಲಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ಇಲ್ಲದಿರುವಾಗ ತಾವೇ ಯಾಕೆ ದೇಶದ ಸಂಸ್ಕೃತಿಯ ರಕ್ಷಣೆಯ ಮಾರ್ಗಗಳನ್ನು ಹುಡುಕಬಾರದು ಎಂಬ ವಿಚಾರದ ಜನರು ಇಲ್ಲವೆ? ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದನೆ ನಡೆದಿಲ್ಲ. ನಮ್ಮಲ್ಲಿ ಪ್ರತಿದಿನ ಒಂದಲ್ಲ ಒಂದು ಊರಿನಲ್ಲಿ ಹತ್ತಿಪ್ಪತ್ತು ಮೂವತ್ತು ಐವತ್ತು ಜನರನ್ನು ಸಾಯಿಸುತ್ತಲೇ ಇದ್ದಾರೆ. ಏನಕೇನಪ್ರಕಾರೇಣ ಅಧಿಕಾರ ಹಿಡಿದುಕೊಂಡಿರುವ ರಾಜಕಾರಣಿಗಳು ಇದನ್ನು ತಡೆಯುವುದು ಕನಸಿನ ಮಾತು. ಸತತ ಭಯೋತ್ಪಾದನೆಯಿಂದ ದೇಶದ ಧೃತಿಯನ್ನು ಉಡುಗಿಸಿ ಆನಂತರ ಎಲ್ಲ ಕಡೆಗಳಲ್ಲೂ ಏಕಕಾಲದಲ್ಲಿ ಬೆಂಕಿ ಹಚ್ಚಿ ಅಧಿಕಾರ ಹಿಡಿಯುವ ತಂತ್ರ ಭಯೋತ್ಪಾದಕರದು. ಲೆನಿನ್ ಮಾಡಿದ್ದೂ ಇದೇ ತಂತ್ರವನ್ನು, ಮಾವೋ ಮಾಡಿದ್ದೂ ಇದೇ ತಂತ್ರವನ್ನು, ನೇಪಾಳದ ಪ್ರಚಂಡನದೂ, ನಮ್ಮ ನಕ್ಸಲೀಯರದೂ ಇದೇ ತಂತ್ರ, ಇದೇ ವಿಧಾನ. ಈ ಹತಾಶೆ ಹಿಂದೂಗಳಲ್ಲಿಲ್ಲವೆ? ಅವರಲ್ಲಿ ಕೆಲವರಾದರೂ ಹತಾಶೆಯ ದಾರಿ ಹಿಡಿದರೆ ಸಮೂಹ ಖಂಡನೆಯಿಂದ ಅದನ್ನು ತಡೆಯಲು ಸಾಧ್ಯವೇ? ಜಾತಿ ಆಧಾರದ ಮೇಲೆ ಅಧಿಕಾರ ಹಿಡಿಯುವ ರಾಜಕಾರಣಿಗಳು, ಮಾಧ್ಯಮದವರು, ಬುದ್ಧಿಜೀವಿಗಳನ್ನೆಸಿಕೊಳ್ಳುವವರು ಈ ಅತ್ಯಂತ ಜವಾಬ್ದಾರಿಯ ಪ್ರಶ್ನೆಯನ್ನು ಸ್ವಲ್ಪವಾದರೂ ಜವಾಬ್ದಾರಿಯಿಂದ ಚಿಂತಿಸಿ, ತುಸುವಾದರೂ ಪ್ರಾಮಾಣಿಕತೆಯಿಂದ ವರ್ತಿಸಬೇಕು. ಫ್ರಾಂಕ್ವಾಗೋತಿಯೇ ತಮ್ಮ ಲೇಖನವನ್ನು ಈ ವಾಕ್ಯಗಳಿಂದ ಮುಗಿಸುತ್ತಾರೆ. “ಸೋನಿಯಾಗಾಂಧಿಯ ಚುಕ್ಕಾಣಿಯಲ್ಲಿ ನಾವು ಕ್ರೈಸ್ತ ಇಂಡಿಯಾದೆಡೆಗೆ ಸಾಗುತ್ತಿದ್ದೇವೆಯೆ? ಅದು ಭಾರತಕ್ಕೆ ಮಾತ್ರವಲ್ಲ. ಪ್ರಪಂಚಕ್ಕೇ ಬಹು ದೊಡ್ಡ ನಷ್ಟವಾಗುತ್ತದೆ. ಏಕೆಂದರೆ ಈ ಗ್ರಹದಲ್ಲಿ ಜೀವಂತವಾಗಿರುವ ಅಧ್ಯಾತ್ಮವು ಭಾರತದಲ್ಲಿ ಮಾತ್ರ ಇದೆ.” -ಮುಕ್ತಾಯ ಈ ವಿಷಯದಲ್ಲಿ ಆಸಕ್ತಿಯುಳ್ಳವರು ಕೆಳಗಿನ ಗ್ರಂಥಗಳನ್ನು ಪರಾಮರ್ಶಿಸಬಹುದು 1. ARUN SHOURIE : HARVESTING OUR SOULS (ASA) 2. ARUN SHOURIE : MISSIONARIES IN INDIA (ASA) 3. MATILDA JOSLYN GAGE : WOMAN, CHURCH AND STATE (VOICE OF INDIA, NEW DELHI) 4. SITARAM GOEL : CATHOLIC ASHRAMS Sannyasins or Swindlers? (VOICE OF INDIA) 5. SITARAM GOEL : HISTORY OF HINDU-CHRISTIAN ENCOUNTERS (A.D.304 to 1996) (VOICE OF INDIA.NEW DELHI) 6. ಡಾ.ನವರತ್ನ ಎಸ್.ರಾಜಾರಾಂ : ಕ್ರೈಸ್ತ ಮತದ ಉಗಮ ಮತ್ತು ಸದ್ಯಃ ಸ್ಥಿತಿ(ಹೊಸ ಶೋಧಗಳು) ಜಾಗರಣ ಪ್ರಕಾಶನ, ಬೆಂಗಳೂರು. 7. ಡಾ.ನವರತ್ನ ಎಸ್.ರಾಜಾರಾಂ : Dead Sea Scrolls and The Crisis of Christianity (Minerra press London) 8. N.S.Rajaram : Profiles in Deception; Ayodhya and the Dead Sea Scrolls (Voice of India) 9. N.S.Rajaram : Christianity is Collapsing Empire and its Designs in India (Hindu Writers Forum, New Delhi) Posted by ಒಬ್ಬ ಓದುಗ at 11:51 AM 4 comments: Labels: ಬುದ್ಧಿಜೀವಿ, ಭೈರಪ್ಪ, ಮತಾಂತರ ಮಕ್ಕಳ ವಿಭಾಗದಲ್ಲಿ ಹೀಗಾ ಬರಿಯೋದು? ವಿಕ್ರಾಂತಕರ್ನಾಟಕ ಕನ್ನಡ ಪತ್ರಿಕೆ (ಜುಲೈ ೧೮, ೨೦೦೮) ಆಟ-ಪಾಠ ಮಕ್ಕಳ ವಿಭಾಗದಲ್ಲಿ ಈ ಲೇಖನ ಬಂದಿದೆ. “... ಹಿಂದೂ ವಾಯ್ಸ್” ಎಂಬ ಬುದ್ದಿಗೇಡಿ ಪತ್ರಿಕೆ ಸುಳ್ಳು ಹರಡುತ್ತಿದೆ. ...ರೀಲು ಬಿಡುತ್ತಿದೆ. ... ಉಗ್ರ ಹಿಂದುತ್ವವಾದಿಗಳಿಗೆ ಉಗಿಯುತ್ತಲೇ ಇದ್ದಾರೆ... ” “ರಾಮಾಯಣ ಮಹಾಭಾರತಗಳು ಭಾರತೀಯರು ಗೌರವಿಸುವ ಮಹಾನ್ ಪುರಾಣಗಳು. ಅವು ನಡೆದ ಘಟನೆಗಳಲ್ಲ...” ಸ್ವಾಮೀ ವಿಕ್ರಾಂತಕರ್ನಾಟಕದ ಸಂಪಾದಕರೇ... ಮಕ್ಕಳ ವಿಭಾಗದಲ್ಲಿ ಬರೆಯೋ ರೀತೀನಾ ಇದು? ನಿಮ್ಮ ಎಡಪಂಥೀಯ ಜಗಳಾನ ಮಕ್ಕಳ ಆಟದ ಮೈದಾನಕ್ಕೂ ತರಬೇಡಿ. ಅವರ ಮನಸ್ಸನ್ನು ಹೊಲಸು ಮಾಡಬೇಡಿ. ರಾಮಾಯಣ ನಡೀತೋ ಇಲ್ವೋ, ಆದ್ರೆ ರಾಮನನ್ನ ದೇವರು ಅಂತ ನಾವು ಪೂಜಿಸ್ತೀವಿ. ನಮ್ಮ ಮಕ್ಕಳು ದೊಡ್ಡೋರಾದ ಮೇಲೆ ದೇವ್ರನ್ನ ನಂಬ್ತಾರೋ ಬಿಡ್ತಾರೋ ಅದು ಅವ್ರಿಗೆ ಬಿಟ್ಟದ್ದು. ಅದುಬಿಟ್ಟು ಈಗ್ಲಿಂದಾನೇ ರಾಮ ನಿಜವಾದ ವ್ಯಕ್ತಿಯಲ್ಲಾ, ದೇವರಿಲ್ಲ... ಅಂತ ವಿಷವುಣಿಸೋ ಕಮ್ಯುನಿಸ್ಟ್ ದುರ್ಬುದ್ದಿ ಯಾಕೆ? ಎಲ್ಲಾ ಧರ್ಮಗಳಲ್ಲೂ ದೇವರ ಬಗ್ಗೆ ಕಾಲ್ಪನಿಕ ಕಥೆಗಳು, ಅತಿಮಾನುಷ ಪ್ರಸಂಗಗಳು ಇದ್ದದ್ದೇ. ನಾವು ರಾಮಸೇತುವೆ ಬಗ್ಗೆ ಮಾತಾಡಿದ್ರೆ ಹುಬ್ಬೇರಿಸೋ ಈ ಜನ್ರಿಗೆ ನ್ಯಾಷನಲ್ ಜಿಯೋಗ್ರಫಿಕ್ಸ್ ನೋರು ನೋಹಾನ ನೌಕೆ ಹುಡುಕೋ ಪ್ರಯತ್ನ ಮಾಡೋದು ತಮಾಶಿ ಅನ್ಸಲ್ವಾ? ಅಂದಹಾಗೆ, ಮೇಲಿನ ಚಿತ್ರದಲ್ಲಿ ಘಟೋತ್ಕಚನ ಅಸ್ಥಿಪಂಜರಾನ ಮೂಡಿಸೋ ಕೆಲಸ ಯಾರೋ ಚೆನ್ನಾಗಿ ಮಾಡಿದ್ದಾರೆ! Posted by ಒಬ್ಬ ಓದುಗ at 7:21 AM No comments: Friday, September 14, 2007 ಭಾರತದಲ್ಲಿ ‘ರಾಮ’ರಾಜ್ಯ ಕಾಣಲು ಸಾಧ್ಯವೆ? ಕಾಂಗ್ರೆಸ್ ಆಳ್ವಿಕೆಯಲ್ಲಂತೂ ಅದು ಸಾಧ್ಯವಿಲ್ಲ. Posted by ಒಬ್ಬ ಓದುಗ at 1:29 PM 4 comments: Monday, August 13, 2007 ಭಾರತದಲ್ಲಿ ಇಂದು ನಿಜವಾದ ದಲಿತರು ಯಾರು? ವಿಜಯ ಕರ್ನಾಟಕ - ಆಗಸ್ಟ್ ೮, ೨೦೦೭ ================== Posted by ಒಬ್ಬ ಓದುಗ at 7:55 AM 2 comments: Friday, June 22, 2007 ಬ್ರಾಹ್ಮಣರೇನು ಮಾಡಬೇಕು? ಒಂದು ಜ್ವಲಂತ ಸಮಸ್ಯೆಯ ನಿರ್ವಿಕಾರ ವಿವೇಚನೆ [ಶ್ರೀ ಪಾ.ವೆಂ. ಆಚಾರ್ಯ ಅವರ “ಬ್ರಾಹ್ಮಣರೇನು ಮಾಡಬೇಕು?” ಪುಸ್ತಕದಿಂದ ಆರಿಸಿದ್ದು] ಹಲವು ವರ್ಷಗಳಿಂದ ಬ್ರಾಹ್ಮಣ ಆಡಳಿತದಲ್ಲಿರುವ ವಿದ್ಯಾಸಂಸ್ಥೆಯೊಂದರ ಸಮಾರಂಭದಲ್ಲಿ ಮಾತಾಡುತ್ತ ಇತ್ತೀಚೆಗೆ ದಲಿತ ಸಾಹಿತ್ಯ ಪ್ರತಿಪಾದಕ ಸಾಹಿತಿಗಳೊಬ್ಬರು, ದೇಶದಲ್ಲಿ ಎಲ್ಲರೂ ಬ್ರಾಹ್ಮಣರಾಗಬೇಕೆಂದು ಪ್ರತಿಪಾದಿಸಿದರು. ಅದು ಪತ್ರಿಕೆಗಳಲ್ಲಿ ವರದಿಯಾಯಿತು. ಅದನ್ನೇ ನೆವಮಾಡಿ ಬ್ರಾಹ್ಮಣ ವಿರೋಧಿ ಹೇಳಿಕೆಗಳನ್ನು ಒಳಗೊಂಡ ಅನೇಕ ಪತ್ರಗಳು ಪತ್ರಿಕೆಯಲ್ಲಿ ಪ್ರಕಟವಾದವು. ಬರೆದವರಲ್ಲಿ ಹಲವಾರು ಸಾಹಿತಿಗಳಾಗಿದ್ದರು. ವಾಸ್ತವಿಕವಾಗಿ ಕಳೆದ ಒಂದು ದಶಕದಿಂದ ಸಾಹಿತಿಗಳ ಒಂದು ದೊಡ್ಡ ಗುಂಪು ಬ್ರಾಹ್ಮಣ ವಿರೋಧವನ್ನು ತನ್ನ ಚಟುವಟಿಕೆಯ ಮುಖ್ಯಾಂಶವಾಗಿ ಮಾಡಿಕೊಂಡಿದೆ. ಆಗಾಗ್ಗೆ ಒಂದಲ್ಲ ಒಂದು ನೆವದಿಂದ ಬ್ರಾಹ್ಮಣರ ಮೇಲೆ ಏನಾದರೊಂದು ಕೂಗೆಬ್ಬಿಸುವುದು ನಡೆದೇ ಇದೆ. ಬ್ರಾಹ್ಮಣೇತರ ಸಾಹಿತಿಗಳಲ್ಲಿ ಮತ್ತು ಸಾಹಿತಿಗಳಲ್ಲದವರಲ್ಲಿ ಕೆಲವರಾದರೂ ಈ ಬಗೆಯ ಪ್ರಚಾರವನ್ನು ವಿರೋಧಿಸುತ್ತಾ ಬಂದಿದ್ದಾರೆಂಬುದನ್ನು ಇಲ್ಲಿ ಹೇಳಬೇಕು. ಅಂಥವರನ್ನು ಸಾಮಾನ್ಯವಾಗಿ ಬ್ರಾಹ್ಮಣರ ಚೇಲಾಗಳೆಂದೋ, ಪ್ರತಿಗಾಮಿಗಳೆಂದೋ ನಿಂದಿಸಲಾಗುತ್ತದೆ. ಖಾಸಗಿಯಲ್ಲಿ ಎಷ್ಟು ರೋಷ ಪ್ರಕಟಿಸಿದರೂ ಬಹಿರಂಗದಲ್ಲಿ ಈ ಪ್ರಶ್ನೆಯನ್ನು ಕುರಿತು ತಮ್ಮ ಅಭಿಪ್ರಾಯಗಳನ್ನಾಗಲಿ ಬ್ರಾಹ್ಮಣರ ಸಮರ್ಥನೆಯನ್ನಾಗಲೀ ಪ್ರಕಟಮಾಡಿದ ಬ್ರಾಹ್ಮಣರು ವಿರಳ. ೧೯೨೦ರ ಸುತ್ತಮುತ್ತ ಮಹಾರಾಷ್ಟ್ರದಲ್ಲಿಯೂ ಮದ್ರಾಸ್ ಪ್ರಾಂತದಲ್ಲಿಯೂ ತಲೆಯೆತ್ತಿ ಕರ್ನಾಟಕದಲ್ಲಿಯೂ ಹಬ್ಬಿದ ಬ್ರಾಹ್ಮಣೇತರ ಚಳುವಳಿ ಬಹುತರವಾಗಿ ಮಧ್ಯಮ ಜಾತಿಗಳ ಬ್ರಾಹ್ಮಣೇತರ ರಾಜಕೀಯ ನಾಯಕರ ಮತ್ತು ಸುಶಿಕ್ಷಿತರ ಆಂದೋಲನವಾಗಿತ್ತು. ಸಾಹಿತಿಗಳು ಅದರಲ್ಲಿ ಪಾಲುಗೊಂಡಿದ್ದು ಅಪರೂಪ. ಆದರೆ ಈಗ ಸಾಹಿತಿಗಳ ಮತ್ತು ಬೌದ್ಧಿಕರ ಆಂದೋಲನವಾಗುತ್ತಿರುವುದು ವಿಶೇಷ. ಆ ಚಳುವಳಿಗೆ ಸರಕಾರಿ ನೌಕರಿಗಳಲ್ಲಿ ಬ್ರಾಹ್ಮಣರಿಗಿದ್ದ ಪ್ರಾಧಾನ್ಯವನ್ನು ಅಳಿಸಿ ಹಾಕಿ ಸಂಖ್ಯಾಬಲದಲ್ಲಿ ಹೆಚ್ಚಾಗಿದ್ದರೂ ನೌಕರಿಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲದ ಬ್ರಾಹ್ಮಣೇತರರಿಗೆ ಅಂಥಾ ಪ್ರಾತಿನಿಧ್ಯ ದೊರಕಿಸಿಕೊಳ್ಳುವುದು ಉದ್ದೇಶವಾಗಿತ್ತು. ಇದಕ್ಕಾಗಿ ಅರ್ಹತಾ ನಿಯಮಗಳನ್ನು ಸಡಿಲಿಸಬೇಕೆಂಬುದೇ ಮೊದಲಾದ ಸ್ಪಷ್ಟ ಬೇಡಿಕೆಗಳು ಮಂಡಿಸಲ್ಪಟ್ಟಿದ್ದವು. ರಾಜಕೀಯ ಒತ್ತಡಗಳ ಪರಿಣಾಮವಾಗಿ ಈ ಬೇಡಿಕೆಗಳು ಬಹಳ ಮಟ್ಟಿಗೆ ಸ್ವೀಕರಿಸಲ್ಪಟ್ಟು, ಬ್ರಾಹ್ಮಣೇತರ ವರ್ಗಗಳಲ್ಲಿ ಹೆಚ್ಚು ಮುಂದುವರೆದಿದ ಜಾತಿಗಳು ಮೇಲೆ ಬರುವುದು ಸಾಧ್ಯವಾಯಿತು. ಹೀಗೆ ಒಂದೆಡೆಗೆ ಸರಕಾರಿ ನೌಕರಿಗಳಲ್ಲಿ ತಮಗಿದ್ದ ಪ್ರಾಧಾನ್ಯವನ್ನು ಕಳೆದುಕೊಳ್ಳುವುದರೊಡನೆ ಸ್ವಾತಂತ್ರ್ಯಾನಂತರ ಭೂಸುಧಾರಣೆಗಳಲ್ಲಿ ದಕ್ಷಿಣ ಭಾರತದಲ್ಲಿ ಬ್ರಾಹ್ಮಣರು ಬಹುತರವಾಗಿ ತಮ್ಮ ಕೃಷಿಭೂಮಿಗಳಿಗೆ ಎರವಾಗಿ ಗ್ರಾಮಗಳಲ್ಲಿ ಇದ್ದು ಬಿದ್ದ ಸ್ಥಾನಮಾನಕ್ಕೂ ಎರವಾದರು. ಅವರು ಎಲ್ಲಾ ಜಾತಿಗಳಿಗಿಂತ ಹೆಚ್ಚು ನಗರೀಕೃತರಾಗಿ ಕೃಷಿಭೂಮಿಯ ವಿಷಯದಲ್ಲಿ ದೂರವಾಸಿ ಭೂಮಾಲೀಕರಾಗಿದ್ದರಿಂದ ಅವರಿಗೆ ಸ್ವಾಭಾವಿಕವಾಗಿಯೆ ಭೂಸುಧಾರಣೆಯಲ್ಲಿ ಹೆಚ್ಚು ಪೆಟ್ಟು ಬಿತ್ತು ಎನ್ನುವಾ. ಸಂಖ್ಯಾಬಲದಲ್ಲಿ ದಕ್ಷಿಣದಲ್ಲಿ ಎಲ್ಲಿಯೂ ಶೇಕಡಾ ೫ನ್ನು ಮೀರದ ಬ್ರಾಹ್ಮಣರಿಗೆ ಪ್ರಜಾತಂತ್ರಾತ್ಮಕ ಆಡಳಿತದಲ್ಲಿ ನಿರ್ಣಾಯಕ ಸ್ಥಾನಗಳಿಂದ ಉಚ್ಚಾಟನೆಯಾಯಿತು. ದಕ್ಷಿಣದ ರಾಜ್ಯಗಳಲ್ಲಿ ಬ್ರಾಹ್ಮಣರಿಗೆ ಯಾವ ಮಂತ್ರಿ ಸಂಪುಟದಲ್ಲಿಯೂ ಸ್ಥಾನವಿಲ್ಲದೇ ದಶಕಗಳೇ ಕಳೆದದ್ದುಂಟು. ಬ್ರಾಹ್ಮಣರ ಅನೇಕ ‘ಹಲ್ಲುಗಳು’ ಉದುರಿಸಲ್ಪಟ್ಟು ಅವರು ಅಶಕ್ತ ಸ್ಥಿತಿಗಿಳಿಸಲ್ಪಟ್ಟ ಕಾಲದಲ್ಲಿ ಬ್ರಾಹ್ಮಣ ವಿರೋಧದ ಕಡಾಯಿ ಆರತೊಡಗಬೇಕಿತ್ತು. ಆದರೆ ಹಾಗಾಗದೆ ಅದನ್ನು ಮತ್ತೆ ಹೊತ್ತಿಸುವ ಪ್ರಯತ್ನ, ಅದೂ ಸಾಹಿತಿಗಳಿಂದ ಪ್ರಾರಂಭವಾದದ್ದು ಸೋಜಿಗವಾಗಿದೆ. ಈ ಹೊಸ ಬ್ರಾಹ್ಮಣ ವಿರೋಧ ಸತ್ರದಲ್ಲಿ ಕೆಲವೊಂದು ಸ್ವಾರಸ್ಯಾಂಶಗಳು ಅಡಗಿವೆ. ಜಾತಿಯನ್ನೆತ್ತಿ ಆಡುವುದು ನನಗೂ ಸಂತೋಷದ ಕೃತ್ಯವಲ್ಲ. ಆದರೆ ಬ್ರಾಹ್ಮಣ ಜಾತಿಯನ್ನು ಕುರಿತು ಆಡುವವರು ಜಾತಿಯನ್ನು ಗಮನಿಸಿ ಆಡುತ್ತಿರುವುದರಿಂದ ನಾನೂ ಒಂದು ಕ್ಷಣ ಆ ಮಾರ್ಗವನ್ನು ಅನುಸರಿಸಿದರೆ ಅಪರಾಧವಾಗಲಿಕ್ಕಿಲ್ಲ. ಈ ಬ್ರಾಹ್ಮಣ ವಿರೋಧದ ಅಂದೋಲನದಲ್ಲಿ ಮುಂದಾಳ್ತನ ವಹಿಸಿದವರ ಜಾತಿಗಳನ್ನು ನೋಡಿದರೆ ಅವರಲ್ಲಿ ಹೆಚ್ಚಿನವರು ಬ್ರಾಹ್ಮಣೇತರ ಹಕ್ಕುಗಳನ್ನು ಎತ್ತಿ ಹಿಡಿದು ೧೯೨೦ರಿಂದಲೂ ಹೋರಾಡುತ್ತಾ ಬಂದ, ಅದರಿಂದ ಲಾಭ ಪಡೆದ ಮಧ್ಯಮ ಜಾತಿಗಳ ಬ್ರಾಹ್ಮಣೇತರರು. ಎಲ್ಲಾ ತರಹದ ನೌಕರಿಗಳಲ್ಲಿ ಅವರ ಪಾಲು ಒಂದೇ ಸಮನೆ ಹೆಚ್ಚುತ್ತ ಬಂದಿದೆ. ಭೂಸುಧಾರಣೆಗಳಿಂದಾಗಿ ಕಡಿಮೆ ಪೆಟ್ಟು ತಿಂದ ಜಾತಿಗಳೂ ಇವೇ ಆಗಿವೆ. ಈ ವರ್ಗಗಳೇ ಬ್ರಾಹ್ಮಣರನ್ನು ಅಪ್ಪಳಿಸಿದ ನಂತರದ ಭೂಸುಧಾರಣೆಯ ಹೆದ್ದೆರೆಗಳು ಅನಿವಾರ್ಯವಾಗಿ ತಮ್ಮ ಜಾತಿಯವರ ಜಮೀನುಗಳನ್ನೂ ಕೊಚ್ಚಿಕೊಂಡು ಹೋಗುವುದನ್ನು ತಡೆಯಲು ಬಯಸಿ ಆ ಸುಧಾರಣೆಗಳ ಮುಂದಿನ ಹೆಜ್ಜೆಗಳನ್ನು ಹತ್ತಿಕ್ಕಲು ಯತ್ನಿಸಿದವರೆಂದೂ ಇಲ್ಲಿ ಗಮನಿಸಬೇಕು. ಈ ವರ್ಗದ ಜನರೇ, ಅಂದರೆ ೧೯೨೦ರ ದಶಕದಲ್ಲಿ ಜಾತಿ ಆಧಾರದ ಮೇಲೆ ತಮಗಿಂತ ಹಿಂದುಳಿದವರಿಗೆ ಪ್ರಾಧಾನ್ಯ ಕೊಡುವ ಯತ್ನಗಳನ್ನು ಬಲವಾಗಿ ವಿರೋಧಿಸುವವರಾಗಿದ್ದಾರೆ. ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಬಹುಜನ ಸಮಾಜಗಳ ಹೆಸರಲ್ಲಿ ಅಧಿಕಾರ ನಡೆಸಿದ ಈ ವರ್ಗವೇ ಅಧಿಕಾರದ ಫಲಗಳನ್ನು ಹೆಚ್ಚಾಗಿ ಉಪಭೋಗಿಸಿ ಆರ್ಥಿಕ ಸಾಮಾಜಿಕ ಉತ್ಕರ್ಷ ಸಾಧಿಸಿಕೊಂಡಿದ್ದು. ಈಗ ಅವರಿಗಿಂತ ಕೆಳಗಿರುವವರು ಎಚ್ಚೆತ್ತು ತಮಗೆ ಸಿಗಬೇಕಾದ್ದು ಸಿಗಲಿಲ್ಲವೆಂದು ಕೋಪಿಸತೊಡಗಿದ್ದಾರೆ. ಈ ಅವರ ಸಿಟ್ಟನ್ನು ತಮ್ಮಿಂದ ಅರ್ಧ ಶತಮಾನದಿಂದ ‘ಅನಿಷ್ಟಕ್ಕೆ ಶನೀಶ್ವರ’ ಎನಿಸಿರುವ ಬ್ರಾಹ್ಮಣ ಜಾತಿಯ ಮೇಲೆ ತಿರುಗಿಸಿಬಿಡುವ ಹೇತುವಿನಿಂದ ಈ ಹೊಸ ಬ್ರಾಹ್ಮಣ ವಿರೋಧ ಆಂದೋಲನ ಪ್ರೇರಿತವಾಗಿದೆಯೆಂದು ಕಾಣುತ್ತದೆ. ಇಂಥ ಆರೋಪ ಮಾಡುವುದು ಸಂತೋಷಕರವಾದದ್ದಲ್ಲ. ಆದರೆ ಬ್ರಾಹ್ಮಣರ ಮೇಲೆ ನಿಷ್ಕಾರಣ ಪ್ರಹಾರ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಮಧ್ಯಮ ಜಾತಿಗಳ ಈ ಸಾಹಿತಿಗಳ ಕೃತಿಗಳನ್ನು ಯಾವ ರೀತಿ ಅರ್ಥೈಸಲು ಸಾಧ್ಯವಿದೆಯೆಂದು ತೋರಿಸಲು ಇದನ್ನು ಕುರಿತಾಗಿ ಹೇಳಬೇಕಾಗಿದೆ. ಈ ದೇಶದಲ್ಲಿ ಕಳೆದ ಮೂರೋ ಐದೋ ಸಾವಿರ ವರ್ಷಗಳಿಂದ (ಭಾರತೀಯ ಇತಿಹಾಸದ ಪ್ರಾಚೀನತೆಯ ಬಗ್ಗೆ ಅವರವರ ಕಲ್ಪನೆಗಳನ್ನು ಅನುಸರಿಸಿ) ಆದ ತಪ್ಪುತಡೆ ಅನಾಹುತಗಳಿಗೆಲ್ಲ ಬ್ರಾಹ್ಮಣರನ್ನು ಜವಾಬ್ದಾರಿ ಹಿಡಿಯುವುದು ಇವರ ಫ್ಯಾಷನ್ ಆಗಿಬಿಟ್ಟಿದೆ. ಜಾತಿ ಪದ್ಧತಿಯನ್ನು ಸೃಷ್ಟಿಸಿದವರು ಬ್ರಾಹ್ಮಣರು; ಅದಕ್ಕೆ ಧಾರ್ಮಿಕ ಸ್ವರೂಪ ಕೊಟ್ಟವರು ಬ್ರಾಹ್ಮಣರು; ಅದರಿಂದ ಪ್ರಯೋಜನ ಪಡೆದು ಸುಖಪಟ್ಟವರು ಬ್ರಾಹ್ಮಣರು; ಶಾಸ್ತ್ರ ಸಾಹಿತ್ಯಾದಿಗಳನ್ನು ಸಂಸ್ಕೃತದಲ್ಲಿ ಬರೆದು ಸಾಮಾನ್ಯರಿಗೆ ತಿಳಿಯದಂತೆ ಮಾಡಿ ವಿದ್ಯೆಯ ಗುತ್ತಿಗೆ ಹಿಡಿದವರು ಬ್ರಾಹ್ಮಣರು; ಬ್ರಾಹ್ಮಣೇತರರಿಗೆ ವಿದ್ಯೆಯನ್ನು ನಿರಾಕರಿಸಿದವರು ಬ್ರಾಹ್ಮಣರು; ಸಮಾಜವನ್ನು ಶೋಷಿಸಿ ಪರೋಪಜೀವನ ನಡೆಸಿದವರು ಈ ಪುರೋಹಿತ ವರ್ಗದವರು; ಇವರಿಂದಾಗಿಯೇ ಇತರ ಜಾತಿಗಳವರಿಗೆ ವಿದ್ಯೆಗಳಲ್ಲಿ ಮುಕ್ತ ಸ್ಪರ್ಧೆ ಸಾಧ್ಯವಾಗುತ್ತಿಲ್ಲ... ಆದ್ದರಿಂದ ಬ್ರಾಹ್ಮಣರನ್ನು ಎಲ್ಲಾ ರಂಗಗಳಲ್ಲಿ ಕೆಲಕಾಲ ತಡೆಹಿಡಿಯಬೇಕೆಂಬುದು ಅವರ ಈಗಿನ ಕೂಗು. ಈ ಆರೋಪಗಳು ಬೌದ್ಧಿಕರೆನಿಸುವ ಜನರಿಂದ ಬರುತ್ತಿರುವುದರಿಂದ ಇನ್ನಷ್ಟು ಆಶ್ಚರ್ಯಕರವಾಗಿದೆ. ಬ್ರಾಹ್ಮಣರು ಜಾತಿ ಪದ್ಧತಿಯನ್ನು ನಿರ್ಮಿಸಿದರೆಂದು ಇತಿಹಾಸ ಸಮಾಜಶಾಸ್ತ್ರಗಳಲ್ಲಿ ನಿರಕ್ಷರಿಗಳಾದವರು ಮಾತ್ರ ನಂಬಬಹುದು. ಜಾತಿಗಳು ನಿರ್ಮಾಣವಾದದ್ದು ಐತಿಹಾಸಿಕ ಒತ್ತಡಗಳಿಂದ; ಭಾರತದ ವಿಶಿಷ್ಟ ಭೌಗೋಲಿಕ ಪರಿಸರದಿಂದಾಗಿ ಅದು ಗಟ್ಟಿಯಾಯಿತು. ಯೂರೋಪ್ ಅಥವಾ ಪಶ್ಚಿಮ ಏಶಿಯಾದಲ್ಲಿ ಎದ್ದಂಥ ಜನಾಂಗಗಳ ಒತ್ತಡ, ದಂಡಯಾತ್ರೆಗಳು ಇಲ್ಲಿ ಎದ್ದು ನಿಂತ ನೀರಿನ ಕಟ್ಟೆಯೊಡೆದು ಬಿಡಲಿಲ್ಲವಾಗಿ ಅದು ಸ್ಥಿರವಾಯಿತು. ರೋಮನ್ ಇತಿಹಾಸದಲ್ಲಿ ಆಢ್ಯರಿಗೂ ಪ್ಲೆಬ್(ಸಾಮಾನ್ಯ) ರಿಗೂ ಗಂಭೀರ ಕಲಹಗಳಾದಂತೆ ಇಲ್ಲಿ ಮೇಲ್ಜಾತಿಗಳವರಿಗೂ ಶೂದ್ರರಿಗೂ ಹೋರಾಟವಾಗಲಿಲ್ಲ. ಇದಕ್ಕೆಲ್ಲಾ ಬ್ರಾಹ್ಮಣರು ಕಾರಣವೆಂದು ಹೇಳುವುದಾದರೆ ಬ್ರಾಹ್ಮಣರು ಅತಿಮಾನುಷ ಬುದ್ಧಿಬಲದಿಂದ ಸಾವಿರಾರು ವರ್ಷಗಳಿಗಾಗಿ ಯಶಸ್ವಿ ಯೋಜನೆ ಹಾಕಿದರೆಂದು ಒಪ್ಪಬೇಕಾಗುತ್ತದೆ. ಅಂಥ ಅತಿಮಾನುಷ ಬುದ್ಧಿಶಕ್ತಿ ಬ್ರಾಹ್ಮಣರಿಗಿತ್ತೆಂದು ಯಾರೂ ನಂಬುವಂತಿಲ್ಲ. ನಿಜವಾಗಿ ನಡೆದದ್ದೆಂದರೆ ಶತಮಾನಗಳ ಕಾಲ ನಡೆದು ಬಂದ ಸಂಪ್ರದಾಯಕ್ಕೆ ಬ್ರಾಹ್ಮಣ ಶಾಸ್ತ್ರಕಾರರು ಶಾಸ್ತ್ರಮುದ್ರೆ ಒತ್ತಿದರಷ್ಟೇ. ಆಗಿನ ಎಲ್ಲಾ ಅರ್ಥವಂತ ವರ್ಗಗಳಿಗೂ ಅದು ಅನುಕೂಲವಿದ್ದುದರಿಂದ ಈ ಶಾಸ್ತ್ರಮುದ್ರೆ ಒತ್ತಲು ಸಾಧ್ಯವಾಯಿತೆಂದು ತೋರುತ್ತದೆ. ಪೌರೋಹಿತ್ಯದಿಂದ ಜೀವಿಸುವ ವರ್ಗಕ್ಕೆ ಯಜಮಾನ ಜಾತಿಗಳ ಬೆಂಬಲವಿಲ್ಲದಿದ್ದರೆ ಇದು ಆಗುತ್ತಲೂ ಇರಲಿಲ್ಲ. ಈ ದೇಶದಲ್ಲಿ ಜಾತಿ ಪದ್ಧತಿಯನ್ನು ಎತ್ತಿ ಹಿಡಿದವರು ಬ್ರಾಹ್ಮಣರು ಮಾತ್ರ ಎಂಬ ರೀತಿಯಲ್ಲಿ ನಮ್ಮ ಇತಿಹಾಸವನ್ನು ಬರೆಯಲಾಗುತ್ತಿದೆ. ಬೌದ್ಧ ಜೈನ ಧರ್ಮಗಳನ್ನು ಕುರಿತು ಬರೆಯುವಾಗ ನಮ್ಮ ಚಿಕ್ಕಮಕ್ಕಳ ಪಾಠಗಳಲ್ಲಿ ಕೂಡ ಆ ಧರ್ಮಗಳ ಸಂಸ್ಥಾಪಕರು ಮಾನವ ಸಮತೆಯಲ್ಲಿ ನಂಬಿಕೆಯಿಟ್ಟಿದ್ದರೆಂದೂ ಜಾತೀಯ ಉಚ್ಚ ನೀಚವನ್ನು ಖಂಡಿಸುತ್ತಿದ್ದರೆಂದೂ ಬರೆಯಲಾಗುತ್ತದೆ. ಇದು ಸತ್ಯಕ್ಕೆ ದೂರವಾದದ್ದು. ನಿಜಕ್ಕೂ ಇವೆರೆಡೂ ಧರ್ಮಗಳು ಯಜ್ಞಸಂಸ್ಥೆಯ ವಿರುದ್ಧ ತಲೆಯೆತ್ತಿದವುಗಳು. ಅವುಗಳ ಮುಂದಾಳುಗಳು ಕ್ಷತ್ರಿಯರಾಗಿದ್ದರೂ ಬೆಂಬಲಿಗರು ವೈಶ್ಯರಾಗಿದ್ದರೆಂಬುದಕ್ಕೆ ತುಂಬಾ ಕುರುಹುಗಳು ಸಿಗುತ್ತವೆ. ವೇದ ಧರ್ಮದಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಲ್ಲರೂ ‘ದ್ವಿಜ’ರೆನಿಸಿದರೂ ವೈಶ್ಯರಿಗಾಗಿ ಅವರ ಸಂಪತ್ತಿಗನುಗುಣವಾದ ಸ್ಥಾನ ಮಾನ ಇಲ್ಲದ್ದರಿಂದ ಅಸಂತುಷ್ಟರಾದ ಅವರು ಹೊಸ ಧರ್ಮಗಳಿಗೆ ಶರಣು ಹೋದರೆಂದು ಜಗತ್ತಿನ ಇತರ ಕಡೆಗಳ ಇತಿಹಾಸದಿಂದ ತರ್ಕಿಸಬಹುದು. ಆದರೆ ಜನ್ಮಸಿದ್ಧ ಜಾತಿಗಳನ್ನು ಬೌದ್ಧರೂ ಜೈನರೂ ಒಂದು ಸಾಮಾಜಿಕ ಒಡಂಬಡಿಕೆಯೆಂಬ ರೀತಿಯಲ್ಲಿ ಅಂಗೀಕರಿಸಿದ್ದರೆಂಬುದಕ್ಕೆ ಅವೆರಡರ ಸಾಹಿತ್ಯಗಳಲ್ಲಿಯೂ ಪ್ರಮಾಣಗಳು ಸಿಗುತ್ತವೆ. ಅಂತರವಿಷ್ಟೇ: ಅವರು ಬ್ರಾಹ್ಮಣರಿಗಿಂತ ಕ್ಷತ್ರಿಯ ವೈಶ್ಯರಿಗೆ ಮಹತ್ವ ಕೊಟ್ಟಿದ್ದಾರೆ. ಶೂದ್ರಾತಿಶೂದ್ರರನ್ನು ಅವರು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಈ ವ್ಯವಸ್ಥೆಯಿಂದ ಬ್ರಾಹ್ಮಣರು ಇತರರನ್ನು ಶೋಷಿಸಿ ತಾವು ಲಾಭ ಮಾಡಿಕೊಂಡರೆಂಬುದೂ ಸರಿಯಲ್ಲ. ಶ್ರೀಮಂತಿಕೆ ಎಂದೂ ಬ್ರಾಹ್ಮಣರ ಆದರ್ಶವಾಗಿರಲಿಲ್ಲ. ‘ಬಡ ಬ್ರಾಹ್ಮಣ’ನೇ ಎಲ್ಲಾ ಕಥೆಗಳಲ್ಲಿ ಕಾಣಿಸಿಕೊಳ್ಳುವಾತ. ಶಾಸ್ತ್ರಗಳಲ್ಲಿ ಹೇಳಿದ ರೀತಿಯಲ್ಲಿ ಗಾರ್ಹಸ್ಥ್ಯ ಧರ್ಮ ಪಾಲಿಸುವವರಿಗೆ ಸಂಪತ್ತಿನ ಸಂಚಯ ಸಾಧ್ಯವೂ ಇರಲಿಲ್ಲ. ನಿರಂತರವಾದ ದಾನ ಪ್ರತಿಗ್ರಹಗಳ ಶ್ರೇಣಿಯಿಂದ ಬ್ರಾಹಣರು ತಮ್ಮೊಳಗೆ ಒಂದು ತರಹದ ಅನಾದಿ ಸಮಾಜವಾದವನ್ನು ಜಾರಿಗೆ ತಂದಿದ್ದರು. ಇತ್ತೀಚಿನವರೆಗೆ ಬ್ರಾಹ್ಮಣದಲ್ಲಿ ಅತಿ ಶ್ರೀಮಂತರೂ ಅತಿ ದರಿದ್ರರೂ, ಇತರ ಜಾತಿಗಳಲ್ಲಿರುವಂತೆ, ಇರಲಿಲ್ಲ. ಅವರ ಸರಾಸರಿ ಆದಾಯ ಇತರರಿಗಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ಇದ್ದರೆ ಅದಕ್ಕೆ ಈ ಸಮಾಜವಾದ ಕಾರಣವಾಗಿತ್ತು. ಸ್ವಾರಸ್ಯವೆಂದರೆ ಒಂದು ದಶಕದ ಹಿಂದೆ ಎದ್ದ ಬ್ರಾಹ್ಮಣ ವಿರೋಧಿ ಸಾಹಿತ್ಯ ಚಳುವಳಿಯಲ್ಲಿ ಒಬ್ಬ ಸಾಹಿತಿಗಳು “ಬ್ರಾಹ್ಮಣರಿಗೆ ಆಸ್ತಿ ಕಡಿಮೆ ಇತ್ತು ಮತ್ತು ಸುಧಾರಣೆಗಳ ನಂತರ ಇನ್ನೂ ಕಡಿಮೆಯಾಯಿತು” ಎಂಬ ಅಂಶವನ್ನೇ ಅವರ ವಿರುದ್ಧ ಒಂದು ವಾದವಾಗಿ ಉಪಯೋಗಿಸಿದರು. ಹೌದು ಅವರಿಗೆ ಆಸ್ತಿಯಿಲ್ಲ, ಆದ್ದರಿಂದ ತಾವು ಬದುಕಿರುವ ಪ್ರದೇಶದ ಹಿತಾಹಿತ ಸುಖದುಃಖಗಳಲ್ಲಿ ಅವರಿಗೆ ಆಸಕ್ತಿಯಿಲ್ಲ. ಆದ್ದರಿಂದ ಅವರು ಇನ್ನೂ ಅಪಾಯಕಾರಿಗಳು ಎಂದು ವಾದಿಸಿದರು. ಬ್ರಾಹ್ಮಣರು ಶ್ರೀಮಂತರಾದರೂ ಅಪರಾಧ, ಬಡವರಾದರೂ ಅಪರಾಧವೇ. ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು. ಬ್ರಾಹ್ಮಣರು ಇತರರಿಗೆ ವಿದ್ಯೆಯನ್ನು ನಿರಾಕರಿಸಿ ಅಜ್ಞಾನದಲ್ಲಿಟ್ಟರು ಎಂಬುದು ಅವರ ಮೇಲಿನ ಇನ್ನೊಂದು ಕೋಟಿ. ಇದೂ ಮಿಥ್ಯಾರೋಪ. ವೇದಪಾಠವನ್ನು ಶೂದ್ರರಿಗೂ ಸ್ತ್ರೀಯರಿಗೂ ವೇದೋತ್ತರ ಕಾಲದಲ್ಲಿ ನಿರಾಕರಿಸಿದ್ದು ಸತ್ಯ. ಆದರೆ ಇತರ ಯಾವ ಶಾಸ್ತ್ರವೂ ನಿರಾಕರಿಸಲ್ಪಡಲಿಲ್ಲ. ಸಂಸ್ಕೃತದ ಅಧ್ಯಯನ ಕೂಡ ಇದಕ್ಕೆ ಪ್ರಮಾಣ. ಬೇಕಾದರೆ ಮಹಾಭಾರತದಲ್ಲಿ ಬರುವ ಅತಿ ಪವಿತ್ರ ಅಂಶವಾದ ವಿಷ್ಣುಸಹಸ್ರ ನಾಮದ ಫಲಶೃತಿಯನ್ನು ನೋಡಿದರೆ ಸಾಕು. ಅದರ ಫಲಭಾಗದಲ್ಲಿ ಈ ಸ್ತೋತ್ರವನ್ನು ಓದಲು ಕೇಳಲು (ಶೃಣುಯಾತ್ ಪರಿಕೀರ್ತಯೇತ್) ಬ್ರಾಹ್ಮಣರಿಗೆ ಕ್ಷತ್ರಿಯರಿಗೆ ವೈಶ್ಯರಿಗೆ ಶೂದ್ರರಿಗೆಲ್ಲ ಹಕ್ಕು ಕೊಟ್ಟಿದೆ. ಪುರಾಣಗಳ ರಚನೆಯಾದದ್ದೇ ‘ಸ್ತ್ರೀ ಶೂದ್ರ ದ್ವಿಜ ಬಂಧೂನಾಂ’ (ಹೆಂಗಸರು, ಶೂದ್ರರು ಮತ್ತು ವಿದ್ಯೆ ಓದದ ಬ್ರಾಹ್ಮಣರ) ಸಲುವಾಗಿ. ಇದು ಬರೇ ಹೇಳಿಕೆಯಲ್ಲ, ಸಂಸ್ಕೃತದಲ್ಲಿ ಶೂದ್ರ ಕವಿಗಳೂ ಇದ್ದರು. ಬ್ರಾಹ್ಮಣ ಧರ್ಮದ ಅತ್ಯಂತ ಕಠೋರ ನೆಲೆವೀಡಾಗಿದ್ದ ಕೇರಳದಲ್ಲಿ ಅನೇಕ ಅಬ್ರಾಹ್ಮಣ ಸಂಸ್ಕೃತ ವಿದ್ವಾಂಸರು ಈಗಲೂ ಇದ್ದಾರೆ. ವಾಸ್ತವಿಕವಾಗಿ ನಡೆದದ್ದೆಂದರೆ, ಬ್ರಾಹ್ಮಣರು ಇತರರಿಗೆ ಸಂಸ್ಕೃತ ವಿದ್ಯೆ ನಿರಾಕರಿಸಲಿಲ್ಲ. ಆಗಿನ ರಾಜಕೀಯ ಸಂಬಂಧಗಳಲ್ಲಿಯೂ ಉತ್ಪಾದನೆ ವಿತರಣೆಗಳ ಪದ್ಧತಿಯಲ್ಲಿಯೂ ಅಕ್ಷರವಿದ್ಯೆಗೆ ಈಗಿನ ಮಹತ್ವ ಇರಲಿಲ್ಲ. ಬಹುಶಃ ಕೃಷಿಯಲ್ಲಿ ನಿರತರಾಗಿದ್ದವರಿಗೆ ಅಕ್ಷರವಿದ್ಯೆಯಲ್ಲಿ ತಲೆಹಾಕಲು ವೇಳೆಯೂ ಇದ್ದಿರಲಿಕ್ಕಿಲ್ಲ. ವಿದ್ಯೆಯ ನಿರಾಕರಣೆಯ ವಿಷಯದಲ್ಲಿ ತಿಳಿದ ತಿಳಿಯದ ತಪ್ಪು ಭಾವನೆಗಳೂ ತುಂಬಾ ಹಬ್ಬಿವೆ. ಬ್ರಾಹ್ಮಣ ಗಂಡಸರು ವೇದಗಳನ್ನು ತಮ್ಮ ಸ್ವಂತ ಗುತ್ತಿಗೆಯಾಗಿ ಮಾಡಿಕೊಂಡದ್ದರಿಂದ ಯಾರಿಗೂ ಲಾಭ ನಷ್ಟವಾಗಲಿಲ್ಲ. ಬರೇ ವೇದ ಓದಿದವರಿಗೆ ಬ್ರಾಹ್ಮಣರಲ್ಲಿಯೂ ಗೌರವ ಹೆಚ್ಚು ಇರಲಿಲ್ಲ. ತರ್ಕ ವೇದಾಂತಗಳನ್ನು ಓದಿದವರಿಗೆ ಮಾತ್ರ ಗೌರವ ಇತ್ತು. ವೇದ ಮಾತ್ರ ಓದಿ ಪೌರೋಹಿತ್ಯ ವೃತ್ತಿಯಿಂದ ಜೀವಿಸುವವರಲ್ಲಿ ಅನೇಕರು ನಿರಕ್ಷರಿಗಳಾಗಿದ್ದರು. ‘ವೇದಾಭ್ಯಾಸ ಜಡರು’ ಎಂಬುದಾಗಿ ಕವಿಗಳೂ ತಾರ್ಕಿಕರೂ ವೇದಂತಿಗಳೂ ಅವರನ್ನು ತಿರಸ್ಕರಿಸುತ್ತಿದ್ದರು. ಇಂದಿಗೂ ಈ ಜನರೇ ಬ್ರಾಹ್ಮಣರಲ್ಲಿ ಅತಿ ಹಿಂದುಳಿದವರಾಗಿದ್ದಾರೆ. ಆದ್ದರಿಂದ ಬ್ರಾಹ್ಮಣರನ್ನು ನಿಂದಿಸಬೇಕಾದಾಗ ‘ಪುರೋಹಿತ ವರ್ಗ’ ಎಂದು ಬಯ್ಯುವವರು ಅತ್ಯಂತ ಅಜ್ಞಾನವನ್ನು ಪ್ರದರ್ಶಿಸುತ್ತಾರೆ. ವಿದ್ಯೆ ಇಲ್ಲದಿರುವಿಕೆಯ ನೈಜ ಕಾರಣ ತಿಳಿಯಬೇಕಾದರೆ ಲಿಂಗಾಯಿತರ ಉದಾಹರಣೆಯನ್ನು ಪರಿಶೀಲಿಸಬೇಕು. ೧೨ನೇ ಶತಮಾನದಲ್ಲಿ ವೈದಿಕ ಸಂಸ್ಥೆಯನ್ನು ಪೂರ್ತಿ ಧಿಕ್ಕರಿಸಿ ಜಾತ್ಯಾತೀತ ವ್ಯವಸ್ಥೆಯೊಂದನ್ನು ತರುವ ಕಲ್ಪನೆ ಲಿಂಗಾಯಿತ ನಾಯಕರಾದ ಬಸವಣ್ಣನವರಿಂದಾಯಿತು. ಲಿಂಗಾಯಿತ ಧರ್ಮವನ್ನು ಸೇರಿದವರೆಲ್ಲರಿಗೂ ಸಮಾನಾಧಿಕಾರ ತಾತ್ವಿಕವಾಗಿಯಾದರೂ ದೊರೆಯಿತು. ಅವರಲ್ಲಿ ಕೆಲವರು ಸಂಸ್ಕೃತ ಕನ್ನಡಗಳೆರಡರಲ್ಲಿ ಅಗಾಧ ವಿದ್ವಾಂಸರೂ ಮಹಾಕವಿಗಳೂ ಆದರು. ಆದರೆ ಈ ಶರ್ತಮಾನದ ಪ್ರಾರಂಭದಷ್ಟು ಹೊತ್ತಿಗೆ ಅವರು ವಿದ್ಯೆಯಲ್ಲಿ ಹಿಂದುಳಿದವರೆಂದು ಸವಲತ್ತುಗಳನ್ನು ಬೇಡಲಾರಂಭಿಸಿದರು. ಈ ನಿರ್ವಿದ್ಯೆಗೆ ಬ್ರಾಹ್ಮಣರು ಕಾರಣವಾಗಿರಲಿಲ್ಲ. ಅವರಿಗೆ ಪ್ರತ್ಯೇಕ ಮಠಗಳೂ ಇದ್ದವು. ಅವರಿಗೆ ವಿದ್ಯೆ ಬೇಕಾದರೆ ಬ್ರಾಹ್ಮಣರನ್ನು ಆಶ್ರಯಿಸಬೇಕಾಗಿರಲಿಲ್ಲ. ಆದರೆ ಆರ್ಥಿಕ ಸಂಬಂಧಗಳಲ್ಲಿ ಕೃಷಿಕರ ಸ್ಥಾನ ಮತ್ತು ಅಗತ್ಯಗಳು ವಿದ್ಯೆಯನ್ನು ಅವರಿಗೆ ಅನಿವಾರ್ಯವಾಗಿ ಮಾಡಲಿಲ್ಲವಾದ್ದರಿಂದ ಅವರು ವಿದ್ಯೆಯಲ್ಲಿ ಹೆಚ್ಚು ಆಸಕ್ತರಾಗಲಿಲ್ಲ. ಅಕ್ಷರವಿದ್ಯೆಯ ಅಗತ್ಯದ ಪ್ರಮಾಣವನ್ನಾಧರಿಸಿ ಲಿಂಗಾಯಿತರಲ್ಲಿ ಅಯ್ಯನವರೂ ಬಣಜಿಗರೂ ಹೆಚ್ಚು ಅಕ್ಷರಸ್ಥರಾಗಿದ್ದರು. ಬ್ರಾಹ್ಮಣರಲ್ಲಿಯೂ ಹಳ್ಳಿಗಾಡಿನಲ್ಲಿದ್ದವರು ಪಟ್ಟಣವಾಸಿಗಳಿಗಿಂತ ಕಡಿಮೆ ವಿದ್ಯಾವಂತರಾಗಿದ್ದರು, ಅಗ್ರಹಾರ ಘಟಿಕಾ ಸ್ಥಾನಗಳಲ್ಲಿದ್ದವರು ಹೆಚ್ಚು ವಿದ್ಯಾವಂತರಾಗಿದ್ದರು. ಹೌದು, ಒಂದು ವಿಷಯದಲ್ಲಿ ಬ್ರಾಹ್ಮಣರು ಭಿನ್ನರಾಗಿದ್ದರು. ಅದೆಂದರೆ ವಿದ್ಯೆಯ ಮೋಹ. ಶತಮಾನಗಳ ಪರಂಪರೆಯಿಂದ ಬ್ರಾಹ್ಮಣರ ಒಂದು ಪ್ರಾಥಮಿಕ ಮಹತ್ವಾಕಾಂಕ್ಷೆ ವಿದ್ಯಾವಂತರಾಗಬೇಕೆಂಬುದಾಗಿ ಇತ್ತು. ಈ ಹೇತು(motivation) ಬ್ರಾಹ್ಮಣರನ್ನು ಪ್ರೇರಿಸುತ್ತಿದ್ದುದರಿಂದ ಅವಕಾಶ ಸಿಕ್ಕಾಗಲೆಲ್ಲ ಬ್ರಾಹ್ಮಣರು ವಿದ್ಯಾರ್ಜನೆಯನ್ನು ಉಳಿದೆಲ್ಲಕ್ಕಿಂತ ಹೆಚ್ಚಾಗಿ ಬೆಂಬತ್ತಿದರು. ಈಗಿನ ಕಾಲದಲ್ಲಿಯೂ ಬ್ರಾಹ್ಮಣರು ವಿದ್ಯೆಯಲ್ಲಿ ಹೆಚ್ಚು ಯಶಸ್ವಿಗಳಾಗುತ್ತಿದ್ದರೆ ಈ ಹೇತುವಿನಿಂದಲೇ ಹೊರತು ಬೇರಾವ ಸೌಕರ್ಯದಿಂದಲ್ಲ. ಅವರ ತಲೆಯಲ್ಲಿ ಹೆಚ್ಚು ಮಿದುಳು ಖಂಡಿತಾ ಇಲ್ಲ. ಆದರೆ ಸುಧೀರ್ಘ ಪರಂಪರೆಯಿಂದ ಮಿದುಳನ್ನು ಉಪಯೋಗಿಸುವ ಶಿಸ್ತು ಅವರಿಗೆ ಲಭಿಸಿತು. ವಿದ್ಯೆಯಲ್ಲಿ ಯಶಸ್ಸು ಮಿದುಳಿನ ಗಾತ್ರದಿಂದ ಸಿದ್ಧವಾಗತಕ್ಕದ್ದಲ್ಲ. ಅದನ್ನು ಪ್ರೇರಿಸುವ ಹೇತು ಮತ್ತು ನಿಯೋಜಿಸುವ ಶಿಸ್ತು ಇವು ಯಶಸ್ಸಿನ ಗುಟ್ಟು. ಇದನ್ನು ನಾನು ಬ್ರಾಹ್ಮಣ ಬ್ರಾಹ್ಮಣೇತರ ಇಬ್ಬರ ಗಮನಕ್ಕಾಗಿಯೂ ಹೇಳುತ್ತಿದ್ದೇನೆ. ಬ್ರಾಹ್ಮಣರಲ್ಲಿ ಕೆಲವರು ಇಂದು ಕೂಡ ತಮ್ಮ ಮಿದುಳು ಶೂದ್ರ ಮಿದುಳಿಗಿಂತ ಶ್ರೇಷ್ಠವಾದುದೆಂಬ ಭ್ರಾಮಕ ಕಲ್ಪನೆಯಲ್ಲಿದ್ದಾರೆ. ಅದನ್ನು ಬಾಯಿಬಿಟ್ಟು ಹೇಳುತ್ತಲೂ ಇರುತ್ತಾರೆ. ಇದರಿಂದ ಅವರು ಇತರ ಜಾತಿಗಳ ಜನರ ದ್ವೇಷವನ್ನು ಮಾತ್ರ ಸಂಪಾದಿಸುತ್ತಾರಷ್ಟೇ. ವಸ್ತುತಃ ಬ್ರಾಹ್ಮಣ ದ್ವೇಷದ ಮೂಲದಲ್ಲಿ ದುಯ್ಯಂ ಬ್ರಾಹ್ಮಣರ (ಅವ್ವಲ್ ಮಿದುಳಿನವರು ತಮ್ಮ ಮಿದುಳಿನ ಬಗ್ಗೆ ಹೇಳಿಕೊಳ್ಳುವುದಿಲ್ಲ) ಈ ತರಹದ ದುರಹಂಕಾರದ ಮಾತುಗಳೇ ಹಾರುವರು ವಾಸ್ತವಿಕವಾಗಿ ಶೂದ್ರರಿಗೆ ಮಾಡಿದ ಅಥವಾ ಮಾಡುವ ಅಥವಾ ಮಾಡದಿರುವ ಅನ್ಯಾಯಗಳಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತವೆಂದು ಬ್ರಾಹ್ಮಣರು ತಿಳಿಯಲಾರದೆ ಹೋಗಿದ್ದಾರೆ. ಆದ್ದರಿಂದ ವಿದ್ಯಾಪ್ರಪಂಚದಲ್ಲಿ ತಮ್ಮ ಮುಂದಾಳ್ತನಕ್ಕೆ ನಿಜವಾದ ಕಾರಣ ಮಾನಸಿಕ ಹೇತು ಮತ್ತು ದೈಹಿಕ ಮಾನಸಿಕ ಶಿಸ್ತು ಎಂಬುದನ್ನು ಮರೆಯುತ್ತಿದ್ದಾರೆ. ಅವರು ಇದನ್ನು ಮರೆತು ಬರೆ ಜಂಬವನ್ನು ನೆಚ್ಚಿಕೊಂಡರೆ ಮುಂದೆ ಅವರು ಈ ರಂಗದಲ್ಲಿ ಪೂರ್ತಿ ಹಿಂದೆ ಬೀಳುವುದು ಖಂಡಿತ. ಬ್ರಾಹ್ಮಣೇತರರಿಗೆ ಯಾಕೆ ಇದನ್ನು ಹೇಳುತ್ತಿದ್ದೇನೆಂದರೆ, ಅವರಲ್ಲಿ ಅನೇಕರು ಬಾಯಿಯಿಂದ ಅಲ್ಲದಿದ್ದರೂ ಮನಸ್ಸಿನಿಂದ ಬ್ರಾಹ್ಮಣ ಬುದ್ಧಿಯ ಶ್ರೇಷ್ಠತ್ವವನ್ನು ಸುಳ್ಳು ಸುಳ್ಳೇ ನಂಬಿ ಧೃತಿಗೆಟ್ಟು ಕೋಪಗೊಳ್ಳುತ್ತಾರೆ. ಹೆಚ್ಚು ಬಲವಾದ ಪ್ರೇರಣೆ ಮತ್ತು ಮಾನಸಿಕ ಶಿಸ್ತನ್ನು ಅವರು ರೂಪಿಸಿಕೊಂಡರೆ ಬ್ರಾಹ್ಮಣರೊಡನೆ ಹೆಚ್ಚು ನಿಃಶಂಕೆಯಿಂದ ಆತ್ಮವಿಸ್ವಾಸದಿಂದ ಸ್ಪರ್ಧಿಸಬಲ್ಲರು. ಅಷ್ಟಾದರೆ ಬ್ರಾಹ್ಮಣರನ್ನು ನಿಂದಿಸುವ ಅಗತ್ಯ ಅವರಿಗೆ ಉಳಿಯುವುದಿಲ್ಲ. ಇದರಲ್ಲಿ ಬ್ರಾಹ್ಮಣರ ಹಿತವೂ ಅಡಗಿದೆ. ಬ್ರಾಹ್ಮಣರ ಮೇಲೆ ಮಾಡಲಾಗುವ ಆರೋಪಗಳಲ್ಲಿ ಹುರುಳಿಲ್ಲವೆಂದು ತೋರಿಸಲು ನಾನು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ. ಸರಕಾರಿ ಸೇವೆಗಳಲ್ಲಿ ಅವರಿಗಿದ್ದ ಸಂಖ್ಯಾಪ್ರಾಧಾನ್ಯ ಕೂಡ ಸಂಸ್ಕೃತಿಕ ಮತ್ತು ಐತಿಹಾಸಿಕ ಆಕಸ್ಮಿಕವೇ. ಬ್ರಿಟಿಷ್ ಪೂರ್ವದ ಆಳಿಕೆಗಳಲ್ಲಿ ಬ್ರಾಹ್ಮಣರು ಈ ನೌಕರಿಗಳಲ್ಲಿ ಹೆಚ್ಚಾಗಿ ಇದ್ದಿಲ್ಲ. ಮುಸ್ಲಿಂ ಮತ್ತು ಬ್ರಿಟಿಷ್ ಆಳಿಕೆಗಳಲ್ಲಿ ಬ್ರಾಹ್ಮಣ ವಿದ್ವಾಂಸರಿಗೆ ಹಿಂದಿದ್ದ ರಾಜಾಶ್ರಯ ತಪ್ಪಿದ್ದರಿಂದ ಅವರು ಪಾಶ್ಚಾತ್ಯ ವಿದ್ಯೆಯತ್ತ ಹೊರಳಿದರು. ಭಾರತದ ಪರಂಪರಾಗತ ಆರ್ಥಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆ ಸರಕಾರಿ ಕೆಲಸವನ್ನೊಳಗೊಂಡು ಹೆಚ್ಚಿನ ರಂಗಗಳಲ್ಲಿ ಅಕ್ಷರ ವಿದ್ಯೆಗೆ ಮಹತ್ವ ಇರಲಿಲ್ಲ. ಭೂಮಿಯನ್ನೊಳಗೊಂಡು ಸಮಾಜದ ಸಂಪತ್ತಿನ ಅಧಿಕ ಭಾಗ ದಕ್ಷಿಣಭಾರತದಲ್ಲಂತೂ ಬ್ರಾಹ್ಮಣೇತರ ಮೇಲ್ಜಾತಿಗಳವರ ಕೈಯಲ್ಲೇ ಇತ್ತು. ಅವರು ಸುಲಭವಾಗಿ ದಕ್ಷಿಣೆ ಕೊಟ್ಟು ಬ್ರಾಹ್ಮಣರಿಂದ ತಮಗೆ ಬೇಕಾದ ಸೇವೆಗಳನ್ನು ಪಡೆಯುತ್ತಿದ್ದರು. ಆಗಿನ ದೃಷ್ಟಿಯಿಂದ ಅವರಿಗೆ ಅದು ಅಗ್ಗವಾಗಿಯೂ ಇತ್ತು. ಆದರೆ ವಿದೇಶೀ ಆಳಿಕೆಯ ಆಗಮನ ಮತ್ತು ಆರ್ಥಿಕ ಸಂಬಂಧಗಳ ಬದಲಾವಣೆಯಿಂದ ಸರಕಾರಿ ನೌಕರಿಗಳ ಅಗಾಧ ಬೆಳವಣಿಗೆ ಮತ್ತು ಅದರೊಂದಿಗೆ ಆ ನೌಕರಿಗಳಿಗೆ ದೊರಕಿದ ಹೊಸ ಪ್ರತಿಷ್ಠೆಯೂ ಅಂಥ ನೌಕರಿಗಳಲ್ಲಿ ವಿದ್ಯಾರ್ಹತೆಗಳಿಗೆ ಸಿಕ್ಕಿದ ಪ್ರಾಧಾನ್ಯವೂ ಹೊಸ ಪರಿಸ್ಥಿತಿಯನ್ನು ನಿರ್ಮಿಸಿದವು. ಇದರ ಪ್ರಯೋಜನ ಪಡೆಯಲು ಬ್ರಾಹ್ಮಣರಿಗೆ ಇತರರಿಗಿಂತ ತುಂಬಾ ಸೌಲಭ್ಯವಿತ್ತು. ಅವರಿಗೆ ಒಂದು ಬಗೆಯ ವಿದ್ಯೆಯಿಂದ ಇನ್ನೊಂದಕ್ಕೆ ಬದಲಾಯಿಸುವ ಸಮಸ್ಯೆ ಮಾತ್ರ ಇತ್ತು. ಹಿಂದೆ ವಿದ್ಯೆಯನ್ನು ಕಡೆಗಣಿಸಿದ ಜಾತಿಗಳಿಗೆ, ಅಕ್ಷರವಿದ್ಯೆಯ ಕೇವಲ ಲಾಭದಿಂದ ದಾಪುಗಾಲಿಕ್ಕುವವರಿಗೆ ಅಕ್ಷರವಿದ್ಯೆಯಲ್ಲಿ ಪಳಗಿದವರೊಡನೆ ಸ್ಪರ್ಧಿಸಿ ಗೆಲ್ಲುವ ಪ್ರಚಂಡ ಸಮಸ್ಯೆ ಇತ್ತು. ಇದರಲ್ಲಿ ಬ್ರಾಹ್ಮಣರ ತಪ್ಪೇನೂ ಇದ್ದಿಲ್ಲ. ಸಿಕ್ಕಿದ ಸಂದರ್ಭವನ್ನು ಅವರು ಪೂರ್ತಿ ಉಪಯೋಗಿಸಿಕೊಂಡರು ಮಾತ್ರ. ಬ್ರಾಹ್ಮಣರ ಮುಂದೆ ಈಗ ಮುಖ್ಯವಾಗಿ ಎರಡು ಬಗೆಯ ಸಮಸ್ಯೆಗಳಿವೆ. ಒಂದು ತಮ್ಮ ಮೇಲೆ ನಡೆಯುವ ಮಿಥ್ಯಾಪ್ರಚಾರವನ್ನು ಎದುರಿಸುವ ಪ್ರಶ್ನೆ. ಇನೊಂದು, ತಮ್ಮ ಆರ್ಥಿಕ ಬೌದ್ಧಿಕ ಮಟ್ಟವನ್ನು ಕಾದುಕೊಳ್ಳುವುದು ಹೇಗೆ ಎಂಬುದು. ಬ್ರಾಹ್ಮಣರ ಮೇಲಿನ ಮುಖ್ಯ ಆರೋಪಗಳು ಎಷ್ಟು ಟೊಳ್ಳು ಎಂಬುದನ್ನು ಮೇಲೆ ವಿವರಿಸಲಾಗಿದೆ. ತಮ್ಮ ಪೂರ್ವಜರು ಮಹಾಪರಾಧ ಮಾಡಿದ್ದಾರೆ ಎಂಬ ಆಂತರಿಕ ಶಂಕೆಯನ್ನು ಬ್ರಾಹ್ಮಣರು ತೊರೆಯಬೇಕು. ಯಾವುದಾದರೂ ದೇಶದಲ್ಲಿ ಇಂಥದೇ ಪರಿಸ್ಥಿತಿಯಲ್ಲಿ ಯಾವೊಂದು ವರ್ಗ ಸಿಲುಕಿದಾಗ ಏನು ಮಾಡಬಹುದೋ ಅದನ್ನಷ್ಟೇ ಬ್ರಾಹ್ಮಣರು ಮಾಡಿದ್ದಾರೆ. ಜಾತಿಯನ್ನು ನಿವಾರಿಸುವ ಉದ್ದೇಶದಿಂದಲೇ ಹೊರಟವರು ತಾವೇ ಕಾಲಾಂತರದಲ್ಲಿ ಜಾತಿಗಳಾಗಿ ಹೋದದ್ದನ್ನು ಈ ದೇಶದಲ್ಲಿ ನೋಡುತ್ತಿದ್ದೇವೆ. ತೀರ ಇತ್ತೀಚಿನ ಉದಾಹರಣೆ ಬೇಕಾದರೆ ನವಬೌದ್ಧರು. ಹಿಂದೂ ಧರ್ಮದ ಜಾತಿಕಟ್ಟು ಅಳಿಯಲಾರದೆಂದು ಹೇಳಿ ಡಾ. ಅಂಬೇಡಕರರು ಬೌದ್ಧಧರ್ಮ ಸ್ವೀಕರಿಸಿ ತಮ್ಮ ಅನುಯಾಯಿಗಳಿಗೂ ಹಾಗೆ ಮಾಡಲು ಸೂಚಿಸಿದರು. ಆದರೆ ಮಹಾರಾಷ್ಟ್ರದ ‘ಮಹಾರ’ರಿಗೇ ಈ ನವಬೌದ್ಧಮತ ಬಹಳ ಮಟ್ಟಿಗೆ ಸೀಮಿತವಾಗಿದೆ. ಜಾತಿಗಳು ಅಳಿದು ಅಖಂಡ ಹಿಂದೂ ಸಮಾಜ ಸ್ಥಾಪಿತವಾಗುವುದು ಎಲ್ಲಾ ದೃಷ್ಟಿಯಿಂದ ಆದರ್ಶ ಪರಿಹಾರ ನಿಜ. ಆದರೆ ಇಂದಿನ ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಇದು ಸದ್ಯಕ್ಕಂತೂ ಸಾಧ್ಯವಾಗಿ ಕಾಣುವುದಿಲ್ಲ. ಜಾತ್ಯಾತೀತತೆಯನ್ನು ಉದ್ಘೋಷಿಸುತ್ತಾ ಜಾತಿಗಳನ್ನು ಗಟ್ಟಿ ಮಾಡುವ ಧೋರಣೆಗಳನ್ನು ಜಾರಿಗೆ ತರಲಾಗುತ್ತಿದೆ. ಅಖಂಡ ಹಿಂದೂ ಸಮಾಜದ ಕಲ್ಪನೆಯನ್ನು ಪ್ರತಿಪಾದಿಸುವವರನ್ನು ಮತವಾದಿಗಳು (communalists) ಎಂದು ಕರೆಯಲಾಗುತ್ತಿದೆ. ಏನಿದ್ದರೂ ಹಿಂದೂ ಸಮಾಜವನ್ನು ಜಾತಿಯಿಂದ ಮುಕ್ತಗೊಳಿಸುವ ಯತ್ನಕ್ಕೆ ಬ್ರಾಹ್ಮಣರು ಕೈಹಾಕಿದರೆ ಅವರ ಮೇಲಿನ ಸಂಶಯ ಮತ್ತು ಹೆಚ್ಚಬಹುದಾಗಿದೆ. ಆದ್ದರಿಂದ ಬ್ರಾಹ್ಮಣರು ಆತ್ಮರಕ್ಷಣೆ ಮಾತ್ರ ಮಾಡಿಕೊಳ್ಳಬಲ್ಲರು. ತಮ್ಮ ಮೇಲಿನ ದ್ವೇಷದ ಕಾರಣಗಳಲ್ಲೊಂದಾದ ದುರಭಿಮಾನದ ಮಾತು ಆಡುವುದನ್ನು ಅವರು ತೊರೆಯಬೇಕು. ಎರಡನೆಯದಾಗಿ ತಮ್ಮೊಳಗಿನ ಉಪಭೇದಗಳನ್ನು ಸಾವಕಾಶವಾಗಿಯಾದರೂ ಬುದ್ಧಿಪೂರ್ವಕ ನಿವಾರಿಸಿಕೊಳ್ಳಬೇಕು. ನೌಕರಿಗಳಲ್ಲಿ ಅವರಿಗಿರುವ ಪ್ರಾಧಾನ್ಯ ಮಂಜಿನ ನೀರು. ಬೇಗನೇ ಅದು ರಾಜಕೀಯ ವಸ್ತಿಸ್ಥಿತಿಗಳಿಂದ ನಷ್ಟವಾದೀತು. ಬ್ರಾಹ್ಮಣರೂ ಉದ್ಯಮ, ವ್ಯಾಪಾರ ಮೊದಲಾದ ಎಲ್ಲ ಮಾನವ ಉಪಕ್ರಮಗಳಲ್ಲಿಯೂ ತಮ್ಮ ಜೀವನೋಪಾಯಗಳನ್ನು ಅರಸಬೇಕು. ಯಾವ ಉದ್ಯೋಗವೂ ತಮ್ಮ ಗೌರವಕ್ಕೆ ಕಡಿಮೆ ಎಂದು ತಿಳಿಯಬಾರದು ಮತ್ತು ಇದೆಲ್ಲದರೊಡನೆ ಅವರು ತಮ್ಮ ಬೌದ್ಧಿಕ ಮಟ್ಟವನ್ನು ಕಾಯ್ದುಕೊಳ್ಳಬೇಕು. ತಮ್ಮ ಪ್ರಾಚೀನ ವಿದ್ಯಾಪ್ರೇಮ ಮಾನಸಿಕ ಕುತೂಹಲವನ್ನು ಹಿಂದಿಗಿಂತಲೂ ಹೆಚ್ಚು ಬೆಳೆಸಿಕೊಳ್ಳಬೇಕು. ಅವರು ಇಂದು ಸಿಲುಕಿಕೊಂದಿರುವ ಪರಿಸ್ಥಿತಿಯಲ್ಲಿ ತಮ್ಮ ಅಸ್ತಿತ್ವವನ್ನು ಸದ್ಯದ ಮಟ್ಟದಲ್ಲಿ ಉಳಿಸಿಕೊಳ್ಳುವುದಕ್ಕಾಗಿಯೇ ಇತರರಿಗಿಂತ ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ. ಆದ್ದರಿಂದ ಅವರು ಈಗ ಎಲ್ಲೆಲ್ಲಿಯೂ ತಾಂಡವಾಡುತ್ತಿರುವ ಸುಲಭ ವಿದ್ಯೆ, ಪರಿಶ್ರಮಹೀನವಾದ ಡಿಗ್ರಿ, ಐಷಾರಾಮದ ಜೀವನದ ಹುಚ್ಚಿಗೆ ಸಿಲುಕಬಾರದು. ಹೀಗೆ ಮಾಡುವುದರಿಂದ ಮಾತ್ರ ಅವರಲ್ಲಿ ಪ್ರಗತಿ ಶಾಶ್ವತವಾದೀತು. ಯೋರೋಪಿನ ಯಹೂದ್ಯರ ಕೈಯಿಂದ ಬ್ರಾಹ್ಮಣರು ಕಲಿಯಬಹುದಾದ್ದು ಬಹಳ ಇದೆ. ಪಾ.ವೆಂ. ಆಚಾರ್ಯ ಜೂನ್ ೧೯೮೦. Posted by ಒಬ್ಬ ಓದುಗ at 7:57 AM 3 comments: Monday, September 25, 2006 ಇತಿಹಾಸದ ಸುಳ್ಳು ಚಿತ್ರಣ ಬೇಡ "ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆ ಗಟ್ಟಿಗೊಳಿಸುವುದು ಅಸಾಧ್ಯ" ವಿದ್ಯಾಮಂತ್ರಿ ಶಂಕರಮೂರ್ತಿಯವರು, ಮೊದಲು ಇದ್ದ ಕನ್ನಡದ ಬದಲಿಗೆ ಫಾರಸಿಯನ್ನು ಮೈಸೂರು ರಾಜ್ಯದ ಆಡಳಿತ ಭಾಷೆಯಾಗಿ ಮಾಡಿಕೊಂಡ ಟಿಪ್ಪುಸುಲ್ತಾನನು ಒಬ್ಬ ಕನ್ನಡ ವಿರೋಧಿ ಎಂದು ಹೇಳಿದುದಕ್ಕೆ ನಿರೀಕ್ಷಿತ ವಲಯಗಳಲ್ಲಿ ನಿರೀಕ್ಷಿತ ಗುಂಪುಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು, ಅವರು ರಾಜೀನಾಮೆ ಕೊಡದಿದ್ದರೆ, ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡದಿದ್ದರೆ, ಉಗ್ರ ಹೋರಾಟ ಪ್ರಾರಂಭಿಸುವುದಾಗಿ ಎಚ್ಚರಿಕೆ ಕೊಡುತ್ತಿರುವುದು ಕರ್ನಾಟಕ ರಾಜಕೀಯದ ಸದ್ಯದ ರಂಜಕ ಸುದ್ದಿಯಾಗಿದೆ. ಈ ವಿಷಯದಲ್ಲಿ ತಾವು ಸಾರ್ವಜನಿಕ ಚರ್ಚೆಗೆ ಸಿದ್ಧವಾಗಿರುವುದಾಗಿ ಸಚಿವರು ಪುನಃ ಸಮರ್ಥಿಸಿಕೊಂಡಿದ್ದಾರೆ. ನಿನ್ನೆ(೨೧-೯-೨೦೦೬) ಅದಕ್ಕಾಗಿಯೇ ತಮ್ಮ ಸಂಗಡಿಗರಾದ ಕೆ. ಮರುಳಸಿದ್ದಪ್ಪ, ಕಾಂಗ್ರೆಸ್‌ನ ಮಾಜಿ ಪ್ರಾಥಮಿಕ ವಿದ್ಯಾಮಂತ್ರಿ ಪ್ರೊ.ಬಿ.ಕೆ. ಚಂದ್ರಶೇಖರ್ ಸಂಗಡ ಒಂದು ಮಾಧ್ಯಮಗೋಷ್ಠಿ ಯನ್ನು ಕರೆದ ನಟ, ನಿರ್ದೇಶಕ, ನಾಟಕ ಕಾರ ಗಿರೀಶ್ ಕಾರ್ನಾಡರು ಟಿಪ್ಪುಕುರಿತು ನಾಟಕ ಬರೆದಿರುವ ತಾವು ಶಂಕರಮೂರ್ತಿಯವರೊ ಡನೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಇದನ್ನು ನಾನು ಮೆಚ್ಚುತ್ತೇನೆ. ಆದರೆ ಅವರು ಮತ್ತು ಅವರ ಸಂಗಡಿಗರು ಶಂಕರಮೂರ್ತಿಗಳ ಮಾತು ಅಪಾಯಕಾರಿ, ರಾಷ್ಟ್ರಘಾತಕ ಎಂಬ ತೀರ್ಪನ್ನೂ ನೀಡಿ ಬಿಟ್ಟಿದ್ದಾರೆ. ಈ ಚರ್ಚೆಯ ರಾಜಕೀಯ ಒಳ ಸುಳಿಗಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶವಲ್ಲ. ಕಾರ್ನಾಡರನ್ನು ಒಬ್ಬ ಸಾಹಿತಿ, ಕಲಾವಿದ ಎಂದು ಮಾತ್ರ ಭಾವಿಸಿ, ನಾನು ಕೆಳಗಿನ ನಾಲ್ಕು ಮಾತುಗಳನ್ನು ಹೇಳಲಿಚ್ಛಿಸುತ್ತೇನೆ. ಅವರ `ತುಘಲಕ್' ನಾಟಕವು ಪ್ರಕಟವಾದ ಹೊಸತರಲ್ಲಿಯೇ ನಾನು ಓದಿದೆ. ಅದರ ರಚನಾ ಕೌಶಲ ಚೆನ್ನಾಗಿದೆ. ಹಾಸ್ಯ ಗಂಭೀರಗಳ ಮಿಶ್ರಣ ಪರಿಣಾಮಕಾರಿಯಾಗಿದೆ. ನಿರ್ದೇಶನಕ್ಕೆ ತುಂಬ ಅವಕಾಶವಿದೆ. ಆಗ ಯೂರೋಪಿನಲ್ಲಿ ಪ್ರಭಾವಶಾಲಿ ಲೇಖಕನಾಗಿದ್ದ ಎಕ್ಸಿಸ್ಟೆಂಶಿಯಲಿಸ್ಟ್ ಕಾಮೂನ `ಕಾಲಿಗುಲ' ನಾಟಕದ ಮಾದರಿಯಲ್ಲಿ ಅದರ ಪ್ರಭಾವದಿಂದ ರಚಿತವಾಗಿದೆ. ನಾನು ತಿಳಿದ ಐತಿಹಾಸಿಕ ಮಹಮ್ಮದ್ ಬಿನ್ ತುಘಲಕ್‌ನ ಪಾತ್ರಕ್ಕಿಂತ ಇಲ್ಲಿ ಅವನನ್ನು ಆದರ್ಶೀಕರಿಸಿದ್ದಾರೆ ಎಂಬುದು ನನ್ನ ಭಾವನೆಯಾಗಿತ್ತು. ಆ ಕುರಿತು ಹೆಚ್ಚು ಸಂಶೋಧನೆ ಮಾಡುವ ಆಸಕ್ತಿಯಾಗಲಿ ವ್ಯವಧಾನವಾಗಲಿ ನನಗೆ ಆಗ ಇರಲಿಲ್ಲ. ಅನಂತರ, ಸುಮಾರು ನಲವತ್ತು ವರ್ಷಗಳ ಮೇಲೆ, ಅವರ `ಟಿಪೂ ಸುಲ್ತಾನ್ ಕಂಡ ಕನಸು' ಎಂಬ ನಾಟಕವನ್ನು ಓದಿದೆ. ನಾನು ತಿಳಿದ ಟಿಪ್ಪುವಿಗೆ ಅವರು ಸಂಪೂರ್ಣ ವಾಗಿ ಬಿಳಿ ಬಣ್ಣ ಬಳಿದು ಅವನನ್ನೊಬ್ಬ ಧೀರೋದಾತ್ತ ದುರಂತ ನಾಯಕನನ್ನಾಗಿ ಮಾಡಿದ್ದಾರೆ ಎನಿಸಿತು. ಏಕೆಂದರೆ ಹಳೆ ಮೈಸೂರಿನವನಾದ ನನಗೆ ಟಿಪ್ಪುವಿನ ವಿಷಯ ಸಹಜವಾಗಿಯೇ ಹೆಚ್ಚು ವಿವರವಾಗಿ ತಿಳಿದಿತ್ತು. ಈ ನಡುವೆ ಕಾರ್ನಾಡರ ರಾಜಕೀಯ ಹಿನ್ನೆಲೆಯ ಹೇಳಿಕೆಗಳು, ಚಟುವಟಿಕೆಗಳು, ಧರಣಿ ಮೊದಲಾದವನ್ನು ಗಮನಿಸಿ ಅವರೊಬ್ಬ ಕಟ್ಟಾ ಎಡಪಂಥೀಯರು ಎಂಬುದನ್ನು ಅರ್ಥಮಾಡಿಕೊಂಡಿದ್ದೆ. ಅದು ಅವರ ಸ್ವಂತ ಅನಿಸಿಕೆ ಮತ್ತು ಚಟುವಟಿಕೆಗಳು. ಪ್ರತಿಯೊಬ್ಬನಿಗೂ ಅವನವನ ನಂಬಿಕೆಗಳಿರುತ್ತವೆ ಎಂಬ ದೂರ ಭಾವದಲ್ಲಿದ್ದೆ. `ಟಿಪೂ ಸುಲ್ತಾನ್ ಕಂಡ ಕನಸು' ಓದಿದ ಮೇಲೆ `ತುಘಲಕ್' ಮತ್ತು ಟಿಪ್ಪುವಿನ ಬಗೆಗೆ ತುಸು ವಿವರವಾಗಿ ಅಧ್ಯಯನ ಮಾಡಿ ಈ ನಾಟಕಕಾರರಿಗೆ ಇತಿಹಾಸದ ಸತ್ಯದ ಬಗೆಗಿರುವ ನಿಷ್ಠೆಯು ಎಷ್ಟು ಮಟ್ಟಿನದು ಎಂಬುದನ್ನು ತಿಳಿಯಬೇಕೆನ್ನಿಸಿತು. ಅಧ್ಯಯನದಲ್ಲಿ ತೊಡಗಿದೆ. ಇತಿಹಾಸ ನನಗೆ ಮೊದಲಿನಿಂದ ಆಸಕ್ತಿ ಇರುವ ವಿಷಯ. ಅದರಲ್ಲಿಯೂ ಭಾರತೀಯ ಇತಿಹಾಸವನ್ನು ತಕ್ಕಮಟ್ಟಿಗೆ ಓದಿಯೂ ಇದ್ದೇನೆ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ ಎಂದು ಬೆನ್ನುಡಿಯಲ್ಲಿ ಹೇಳಿದ್ದರೂ `ತುಘಲಕ್' ನಾಟಕ ವನ್ನು ಆಡಿದ ಕಡೆಯಲ್ಲೆಲ್ಲ ನೋಡಿದವರ ಮನಸ್ಸಿನಲ್ಲೆಲ್ಲ ಆಡಿದವರ ಮನಸ್ಸಿನಲ್ಲಿ ಕೂಡ ಅವನೇ ನಿಜವಾದ ಸುಲ್ತಾನ ಎಂಬ ಭಾವನೆ ಹುಟ್ಟಿತ್ತು. `ನನ್ನ ಅಧಿಕಾರಿಗಳಿಂದ ಒಬ್ಬ ಬ್ರಾಹ್ಮಣನಿಗೆ ಅನ್ಯಾಯ ವಾಯಿತು. ಆ ಅನ್ಯಾಯವನ್ನು ಅಳಿಸಿ ನಾನು ನ್ಯಾಯದ ಮಾರ್ಗವನ್ನು ಅನುಸರಿಸಲಿಕ್ಕೆ ಸಿದ್ಧನಿದ್ದೇನೆ ಎಂಬುದನ್ನು ನೀವು ಕಂಡಿರಿ. ಧರ್ಮ ದ್ವೇಷದಿಂದ ಒಡೆದು ಚೂರಾಗಿದ್ದ ನಮ್ಮ ರಾಜ್ಯದ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಗಳಿಗೆ. ನನಗೆ ರಾಜ್ಯದಲ್ಲಿ ಸಮತೆ ಬೇಕು, ಪ್ರಗತಿ ಬೇಕು, ತರ್ಕಶುದ್ಧ ನ್ಯಾಯ ಬೇಕು. ಶಾಂತಿ ಇದ್ದರೆ ಸಾಕಾಗಲಿಲ್ಲ. ಜೀವಕಳೆ ಬೇಕು'. `ಎಲ್ಲಕ್ಕೂ ಮಹತ್ತ್ವದ ಮಾತೆಂದರೆ ದೌಲತಾಬಾದ್ ಮುಖ್ಯತಃ ಹಿಂದೂ ಜನರ ನಗರವಾಗಿದೆ. ನನ್ನ ರಾಜಧಾನಿಯನ್ನು ಅಲ್ಲಿಗೊಯ್ದು ನನಗೆ ಹಿಂದೂ ಮುಸಲ್ಮಾನರಲ್ಲಿ ಹೆಚ್ಚಿನ ಮೈತ್ರಿ ಬೆಳೆಸಬೇಕಾಗಿದೆ' ಎಂಬ ಸುಲ್ತಾನನ ಮಾತು. `ಬ್ರಾಹ್ಮಣನೊಡನೆ ಮುಸಲ್ಮಾನ ಗೆಳೆಯನನ್ನು ಕಂಡರೆ ಸುಲ್ತಾನರು ಹಿರಿ ಹಿರಿ ಹಿಗ್ಗುತ್ತಾರೆ' ಎಂಬ ಮಾತು ಗಳು ಸುಲ್ತಾನನು ಅಕ್ಬರನಿಗಿಂತ ಇನ್ನೂರ ಮೂವತ್ತು ವರ್ಷ ಮೊದಲು ಅಕ್ಬರನಿಗಿಂತ ಹೆಚ್ಚು ಪರಧರ್ಮ ಸಹಿಷ್ಣುವೂ ಸರ್ವ ಸಮಾನ ಭಾವದವನೂ ಎಂಬ ಭಾವನೆಯನ್ನು ಕೊಡುತ್ತದೆ. ಆದರೆ ಇದೇ ಸುಲ್ತಾನನಲ್ಲವೆ ಐತಿಹಾಸಿಕವಾಗಿ ದೇವಗಿರಿ ಎಂಬ ಹಿಂದೂ ಹೆಸರನ್ನು ದೌಲತ್ತಾಬಾದ್ ಎಂಬ ಮುಸ್ಲಿಂ ಹೆಸರಿಗೆ ಬದಲಾಯಿಸಿದವನು? ಕ್ರಿಸ್ತಶಕ ೧೩೨೭ರಲ್ಲಿ ಅವನ ವಿರುದ್ಧ ದಂಗೆ ಎದ್ದಿದ್ದ ದಕ್ಷಿಣದ ತುಂಗಭದ್ರಾ ತೀರದ ಕಂಪ್ಲಿಯ ರಾಜನ ಹನ್ನೊಂದು ಗಂಡು ಮಕ್ಕಳನ್ನು ಒಟ್ಟಿಗೆ ಸೆರೆ ಹಿಡಿದು ಇಸ್ಲಾಮಿಗೆ ಮತಾಂತರಿಸಿದ ಎಂದು ಇಬನ್ ಬತ್ತೂತನು ದಾಖಲಿಸಿದ್ದಾನೆ. (Ibn Battuta, The Rehla of Ibn Battuta, English translation by Dr.Mahdi Hussain 1953, P 95. ಈಶ್ವರೀ ಪ್ರಸಾದರ Qaraunah Turks in India. Vol I, Allahabad 1936 P 65-66. Mahdi Hussain: TugalaQ Dynasty, calutta 1963 P 207-208. Quoted in Muslim Slave System in Medieval India by K.S.Lal. Aditya Prakashan. New Delhi, 1994, P 56) ಆದರೆ (Ibn Battuta, The Rchla of Ibn Battuta, eng.translation by Dr.Mahdi Hussain 1953, ಪುಟ 95. ಈಶ್ವರೀ ಪ್ರಸಾದರ Qaraunah Turks in India. Vol I, Allahabad 1936 P 65-66. Mahdi Hussain: Tugalaq Dynasty, calcutta 1963 P207-208. Quoted in muslim slave system in medieval India by K.S.lal. Aditya Prakashan. New Delhi, 1994, P 56) ಇದೇ ಮಹಮ್ಮದ್ ಬಿನ್ ತುಘಲಕನು ಹಿಂದೂ ದೇವಾಲಯವನ್ನು ನಾಶಮಾಡಿ ಅವೇಜಾಗಳಲ್ಲಿ ಮಸೀದಿಗಳನ್ನು ಕಟ್ಟಿಸದೆ ಬಿಟ್ಟವನಲ್ಲ. ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ ಬೋಧನ್‌ನಲ್ಲಿ ದೇವಲ್ ಮಸೀದಿ ಎಂಬ ಒಂದು ಮಸೀದಿ ಇದೆ. ಹೆಸರೇ ಹೇಳುವಂತೆ ಅದೊಂದು ದೇವಾಲಯವನ್ನು ಒಡೆದು ಕಟ್ಟಿದ ಮಸೀದಿ. ಮಹಮ್ಮದ್ ಬಿನ್ ತುಘಲಕ್‌ನ ಆಡಳಿತದಲ್ಲಿ ಕಟ್ಟಿಸಿದ್ದೆಂದು ಹೇಳುವ ಎರಡು ಶಾಸನಗಳು ಇನ್ನೂ ಇವೆ. ಜಿ. ಯಜ್‌ದಾನಿಯವರು Epigraphia Indomosliemica 1919-1920 ಪುಟ ೧೬ರಲ್ಲಿ ಹೇಳುತ್ತಾರೆ: `ಹೆಸರೇ ಹೇಳುವಂತೆ ದೇವಲ್ ಮಸೀದಿಯು ಮೂಲ ಜೈನ ಮಂದಿರವಾಗಿದ್ದು ಮಹಮ್ಮದ್ ತುಘಲಕನು ಡೆಕ್ಕನ್ನನ್ನು ಗೆದ್ದಾಗ ಈ ಮಂದಿರವನ್ನು ಮಸೀದಿಯಾಗಿ ಮಾರ್ಪಡಿಸಿದ. ಈ ಕಟ್ಟಡವು ನಕ್ಷತ್ರಾಕೃತಿಯಲ್ಲಿತ್ತು. ಆದರೆ ಮುಸ್ಲಿಮರು (ತುಘಲಕನು) ಗರ್ಭಗೃಹವನ್ನು ತೆಗೆದು ಉಪದೇಶ ವೇದಿಕೆ ನಿರ್ಮಿಸುವುದನ್ನು ಬಿಟ್ಟು ಹೆಚ್ಚು ಬದಲಾವಣೆ ಮಾಡಿಲ್ಲ. ಮೂಲದ ಕಂಬಗಳು ಹಾಗೆಯೇ ಇವೆ. ಕಂಬಗಳ ಮೇಲೆ ಕೆತ್ತಿರುವ ತೀರ್ಥಂಕರರ ವಿಗ್ರಹಗಳು ಇವತ್ತಿಗೂ ಇವೆ.' (ಸೀತಾರಾಮ ಗೋಯೆಲ್: Hindu Temples: What happend to them? Vol II ಪುಟ ೬೭ ನೋಡಿ) ಅಬೂನಾಸಿರ್ ಐಸಿಯು ಹೇಳುವ ಪ್ರಕಾರ ಸುಲ್ತಾನ್ ಮಹಮ್ಮದ್ ಬಿನ್ ತುಘಲಕನು ಇಸ್ಲಾಮಿಕನ ಬಾವುಟಗಳನ್ನು ಹಿಂದೆ ಎಂದೂ ತಲುಪದ ಎಡೆಗಳಿಗೆ ಒಯ್ದು ಹಾರಿಸಿದ; ಹಿಂದೆ ಎಂದೂ ಕೇಳದ ಕಡೆಗಳಲ್ಲಿ ಕುರಾನಿನ ಶ್ಲೋಕಗಳನ್ನು ಕೇಳಿಸಿದ. ಅಗ್ನಿಪೂಜಕ ಮಂತ್ರಗಳನ್ನು ನಿಲ್ಲಿಸಿ ಅಜಾನನ್ನು ಮೊಳಗಿಸಿದ. (S.A.A. ರಿಜ್ವಿ: ತುಘಲಕ್ ಕಾಲೀನ ಭಾರತ. ಅಲಿಗಡ್, 1956, 1ನೇ ಸಂಪುಟ, ಪುಟ ೩೨೫) ಇವನನ್ನು ಪರಮತ ಸಹಿಷ್ಣುವೆಂದು ಚಿತ್ರಿಸಲು ಈ ನಾಟಕಕಾರರಿಗೆ ಮಾರ್ಕ್ಸಿಸ್ಟ್ ಪ್ರಚಾರವನ್ನು ಬಿಟ್ಟು ಬೇರೆ ಯಾವ ಆಧಾರವಿತ್ತು ? ಸುಲ್ತಾನ್ ಮಹಮ್ಮದ್ ತುಘಲಕ್‌ನ ಗುಲಾಮ ಬೇಟೆಯು ದೂರ ದೇಶಗಳಲ್ಲೆಲ್ಲಾ ಕುಖ್ಯಾತವಾಗಿತ್ತು. ಅವನ ಈ ಹುರುಪಿನ ಬಗೆಗೆ ಶಿಹಾಬುದ್ದೀನ್ ಅಹಮದ್ ಅಬ್ಬಾಸ್ ಬರೆದಿದ್ದಾನೆ: `ಕಾಫಿರರ ಮೇಲೆ ಯುದ್ಧ ಮಾಡುವ ಸುಲ್ತಾನನ ಉತ್ಸಾಹ ಎಂದಿಗೂ ಕಡಿಮೆಯಾಗಿಲ್ಲ. ಅವರು ಬೇಟೆಯಾಡಿದ ಕೈದಿಗಳ ಸಂಖ್ಯೆ ಎಷ್ಟಿರುತ್ತೆಂದರೆ ಪ್ರತಿ ದಿನವೂ ಸಾವಿರಾರು ಗುಲಾಮರನ್ನು ತೀರ ಹೀನ ಬೆಲೆಗೆ ಮಾರುತ್ತಿದ್ದರು. (ಮಸಾಲಿಕ್-ಉಲ್-ಅಬಸರ್ ಫಿ ಮುಮಾ ಲಿಕ್-ಉಲ್-ಅಂಸರ್. Translated in E.D. III, P 580. ಹಿಂದೀ ಅನುವಾದ ರಿಜ್ವಿಯ ತುಘಲಕ್ ಕಾಲೀನ ಭಾರತ). ಯುದ್ಧದಲ್ಲಿ ಮಾತ್ರವಲ್ಲ ವಿದೇಶ ಮತ್ತು ಹಿಂದೂಸ್ತಾನಿ ಗುಲಾಮರನ್ನು ಕೊಂಡು ಸಂಗ್ರಹಿಸುವ ಶೋಕಿ ಅವನಿಗೆ ಬಹಳ ಇತ್ತು. ಪ್ರತಿ ಯುದ್ಧ ಅಥವಾ ದಂಗೆಯನ್ನು ಅಡಗಿಸುವಾಗಲೂ ಸುಲ್ತಾನನು ಹಿಡಿಸಿ ತರುತ್ತಿದ್ದ ಕಾಫಿರ್(ಮುಸ್ಲಿಮೇತರ) ಹೆಂಗಸು ಕೈದಿಗಳ ಸಂಖ್ಯೆ ಎಷ್ಟಿರುತ್ತಿತ್ತೆಂದರೆ ಇಬನ್ ಬತ್ತೂತ ಬರೆದಿದ್ದಾನೆ: `ಒಂದು ಸಲ ದಿಲ್ಲಿಯಲ್ಲಿ ಬಹಳ ಜನ ಹೆಂಗಸು ಕೈದಿಗಳನ್ನು ಜಮಾಯಿಸಿದರು. ಅವರಲ್ಲಿ ಹತ್ತು ಜನರನ್ನು ವಜೀರರು ನನಗೆ ಕಳಿಸಿದರು. ಅವರಲ್ಲಿ ಒಬ್ಬಳನ್ನು ನಾನು ಅವರನ್ನು ತಂದವನಿಗೇ ಕೊಟ್ಟೆ. ಆದರೆ ಅವನಿಗೆ ತೃಪ್ತಿಯಾಗಲಿಲ್ಲ. ನನ್ನ ಜತೆಗಾರನು ಮೂವರು ಚಿಕ್ಕ ಹುಡುಗಿಯರನ್ನು ತೆಗೆದುಕೊಂಡ. ಉಳಿದವರು ಏನಾದರೋ ನಾನು ಕಾಣೆ. (ಇಬನ್ ಬತ್ತೂತ, ಮೇಲ್ಕಾಣಿಸಿದ ಗ್ರಂಥ ಪುಟ ೧೨೩). ಸುಲ್ತಾನ್ ಮಹಮ್ಮದನ ಬಗೆಗೆ ಶಿಹಾಬುದ್ದೀನ್ ಅಲ್ ಉಮರಿ ಹೇಳು ತ್ತಾನೆ: ರಾಜಕುಮಾರನಾಗಿದ್ದಾಗ ಅವನು ಬೇಟೆಗೆ ಹೋದಾಗ ೧೨೦೦ ಹಕೀಮರು, ಅಶ್ವಾರೋಹಿಗಳಾಗಿ ಗಿಡಗಳನ್ನು ಹಾರಿ ಬಿಡುವ ಹತ್ತು ಸಾವಿರ ಪರಿಣತರು. ಮುನ್ನೂರು ಜನ ತಮ್ಮಟೆ ಬಾರಿಸುವವರು, ಬೇಟೆಯ ಸಾಮಾನುಗಳನ್ನು ಮಾರುವ ಮೂರು ಸಾವಿರ ವ್ಯಾಪಾರಿಗಳು, ಜತೆಯಲ್ಲಿ ಊಟ ಮಾಡುವ ಐನೂರು ಜನರು, ಗುಲಾಮ ಸಂಗೀತಗಾರರಲ್ಲದೆ ಸಂಬಳ ಪಡೆಯುವ ಒಂದು ಸಾವಿರ ಸಂಗೀತಗಾರರು, ಒಂದು ಸಾವಿರ ಕವಿಗಳು ಹೋಗುತ್ತಿದ್ದರು. (ಶಿಹಾಬುದ್ದೀನ್ ಅಲ್ ಉಮರಿ: ಮೇಲ್ಕಾಣಿಸಿದ ಗ್ರಂಥ. ಪುಟ ೫೭೮-೮೦). ಈ ಸುಲ್ತಾನನನ್ನು ಯಾವ ಬಗೆಯ ಆದರ್ಶದ ಬೆನ್ನು ಹತ್ತಿದ ರಾಜನೆನ್ನಬೇಕು ? `ಟಿಪೂ ಸುಲ್ತಾನ್ ಕಂಡ ಕನಸು' ನಾಟಕದಲ್ಲೂ ಗಿರೀಶ್ ಕಾರ್ನಾಡರ ಮನಸ್ಸು ಇದೇ ರೀತಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಹಳೆ ಮೈಸೂರಿನ ಸಂತೆ ಜಾತ್ರೆಗಳಲ್ಲಿ ಮಾರುಕಟ್ಟೆಯ ಮೂಲೆಗಳಲ್ಲಿ ಇತಿಹಾಸದ ಅಧ್ಯಯನವಿಲ್ಲದ, ಅರೆ ಓದು ಬರಹ ಬಲ್ಲ ಲಾವಣಿಕಾರರು ಟಿಪ್ಪುವನ್ನು ವೈಭವೀಕರಿಸಿ ಬರೆದ ಲಾವಣಿಗಳನ್ನು ದಮಡಿ ಬಾರಿಸಿಕೊಂಡು ಹಾಡುತ್ತಿದ್ದರು. ಮುಸಲ್ಮಾನರು ಅದರಲ್ಲೂ ಮುಸಲ್ಮಾನ ವ್ಯಾಪಾರಿಗಳು ಈ ಲಾವಣಿ ಕಾರರಿಗೆ ಹಣ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಹಾಗೆಯೇ ಟಿಪ್ಪುವನ್ನು ವೈಭವೀಕರಿಸಿದ ನಾಟಕಗಳು. ಬ್ರಿಟಿಷರ ವಿರುದ್ಧ ಚಳವಳಿ ಮಾಡುತ್ತಿದ್ದಾಗ ಅವರ ವಿರುದ್ಧ ಹೋರಾಡಿದನೆಂಬ ಏಕೈಕ ಕಾರಣದಿಂದ ಆತನನ್ನು ಭಾರತ ದೇಶದ ಭಕ್ತನೆಂದು ಚಿತ್ರಿಸಿ ನಾಟಕ ಬರೆದರು. ಪ್ರೇಕ್ಷಕರು ಆ ಚಿತ್ರವನ್ನೆಲ್ಲಾ ನಿಜವಾದ ಇತಿಹಾಸವೆಂದು ನಂಬಿದರು. ಸ್ವಾತಂತ್ರ್ಯಾನಂತರವಂತೂ ಮಾರ್ಕ್ಸಿಸ್ಟರು, ಓಟು ಬ್ಯಾಂಕಿನವರು, ನಿಷ್ಠ ಮುಸ್ಲಿಮ ಕಲಾವಿದರು, ನಾಟಕಕಾರರು, ಚಲನಚಿತ್ರ ತಯಾರಕರು ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಬಿಂಬಿಸಿದರು. ನಿಜವಾದ ಇತಿಹಾಸ ಸತ್ತೇ ಹೋಯಿತು. ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟ ಪ್ರಸಂಗವನ್ನು ಎತ್ತಿಕೊಂಡು ಬ್ರಿಟಿಷರು ಎಂಥ ಕಟುಕರೆಂದು ಚಿತ್ರಿಸಿದರು. ಮೇಲೆ ಹೇಳಿದ ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಚಿತ್ರಿಸುವ ಸಂಪ್ರದಾಯಕ್ಕೆ ಬದ್ಧರಾದ ಗಿರೀಶ್ ಕಾರ್ನಾಡರೂ ಈ ಪ್ರಸಂಗವನ್ನು ಎತ್ತಿಕೊಂಡು ಟಿಪ್ಪುವಿನ ಬಾಯಿಯಲ್ಲಿ `ನಮ್ಮ ನಾಡಿನಲ್ಲೊಂದು ಹೊಸ ಭಾಷೆ ಬಂದಿದೆ. ಹೊಸ ಸಂಸ್ಕೃತಿ ಬಂದಿದೆ. ಅಂಗ್ರೇ ಜಿ ! ಏಳು-ಎಂಟು ವರ್ಷದ ಕಂದಮ್ಮಗಳನ್ನು ಯುದ್ಧ ಕೈದಿಯಾಗಿ ಬಳಸಬಲ್ಲ ಸಂಸ್ಕೃತಿ' ಎಂಬ ಸಮಾಜ ಶಾಸ್ತ್ರದ ದಾರ್ಶನಿಕ ಮಾತನ್ನು ಹಾಕುತ್ತಾರೆ. ಆದರೆ ಯುದ್ಧ ಬಂಧಿಗಳನ್ನು ತೆಗೆದುಕೊಳ್ಳುವುದು ಭಾರತವನ್ನಾಳಿದ ಮುಸ್ಲಿಂ ದೊರೆಗಳ ಸಂಪ್ರದಾಯವೇ ಆಗಿತ್ತು. ಅದನ್ನು ಬ್ರಿಟಿಷರು ಇಲ್ಲಿ ಅನುಸರಿಸಿದರು ಎಂಬ ಸತ್ಯ ಕಾರ್ನಾಡರಿಗೆ ತಿಳಿದಿಲ್ಲ ಅಥವಾ ತಿಳಿದಿದ್ದರೂ ಮರೆ ಮಾಚಿದ್ದಾರೆ. ಔರಂಗಜೇಬನ ಸೇನಾಪತಿ ಮೀರ್ ಜುಮ್ಲಾನು ಅಸ್ಸಾಮಿನ ರಾಜನನ್ನು ಸೋಲಿಸಿದಾಗ ಅವನಲ್ಲಿದ್ದ ಚಿನ್ನ, ಬೆಳ್ಳಿ, ನಗದನ್ನೆಲ್ಲ ದೋಚಿ, ಬಲವಂತವಾಗಿ ಕೇಳಿದ ಇನ್ನಷ್ಟು ನಗದನ್ನು ಒಪ್ಪಿಸುವವರೆಗೆ ರಾಜನ ಮಗಳು ಮತ್ತು ಗಂಡು ಮಕ್ಕಳು; ಬುರ್ಹ ಗೋಹೆನ್, ಬಾರ್ ಗೊಹೇನ್, ಘಡ ದೊನಿಯಾಪುಖಾನ್ ಮತ್ತು ಬಡ್ ಪತ್ರಾಪುಖಾನ್ ಎಂಬ ನಾಲ್ವರು ಸಾಮಂತರ ಗಂಡು ಮಕ್ಕಳನ್ನು ಯುದ್ಧ ಬಂಧಿಗಳಾಗಿರುವಂತೆ ಬಲಾತ್ಕರಿಸಿ ಕೊಂಡೊಯ್ದನೆಂದು ಔರಂಗಜೇಬನ ಅಧಿಕೃತ ಇತಿಹಾಸದಲ್ಲೇ ಬರೆದಿದೆ. (ಮಾಸಿರ್ -ಇ-ಅಲಂಗೀರ್, ಪುಸ್ತಕ ಬರೆದವನು ಸಾಕಿ ಮುಸ್ತಾದ್ ಖಾನ್, ಐದನೆಯ ವರ್ಷ, ೫ನೇ ಜಮಾದ್, ಅಲ್ ಹಿಜಿರಾ ೧೦೭೨, ೫. ಜನವರಿ ೧೬೬೩) ಮೊಘಲರ ಕಾಲದಲ್ಲಿ ರಾಜಪೂತ ರಾಜರುಗಳು ತಮ್ಮ ಒಬ್ಬನಾದರೂ ಮಗನನ್ನು ಬಾದಶಹನ ಆಸ್ಥಾನದಲ್ಲಿ ಇಡಬೇಕಾಗಿತ್ತು. ಅವರು ವಸ್ತುತಃ ಯುದ್ಧಬಂಧಿಗಳೇ. ಅಕ್ಬರ್‌ನಿಂದ ಆರಂಭವಾಗಿ ಮುಂದುವರಿದ ಪದ್ಧತಿ ಸೋತ ರಾಜಪೂತ ರಾಜನು ತನ್ನ ಮಗಳನ್ನು ಬಾದಶಹರಿಗೆ ಕೊಟ್ಟು ಮದುವೆ ಮಾಡಬೇಕಾದದ್ದು ಕೂಡ ವಸ್ತುತಃ ಯುದ್ಧ ಬಂಧಿಯಾಗಿಯೇ. ಮಹಾರಾಣಾ ಪ್ರತಾಪನು ಅವನ ಮಗನನ್ನು ತನ್ನ ಆಸ್ಥಾನಕ್ಕೆ ಕಳಿಸಬೇಕೆಂದು ಅಕ್ಬರನು ಕೇಳಿದ್ದ. ಆದರೆ ಪ್ರತಾಪನು ಒಪ್ಪಲಿಲ್ಲ. ಮುಂದೆ ಶಹಜಹಾನನೆಂದು ನಾಮಕರಣ ಮಾಡಿಕೊಂಡ ಖುರ್ರಮ್ ತನ್ನ ತಂದೆ ಜಹಾಂಗೀರನ ವಿರುದ್ಧ ದಂಗೆ ಎದ್ದು ಸೋತಾಗ ಜಹಾಂಗೀರನು ಖುರ್ರಮನ ಇಬ್ಬರು ಮಕ್ಕಳು ಎಂದರೆ ತನ್ನ ಮೊಮ್ಮಕ್ಕಳು, ದಾರಾ ಮತ್ತು ಔರಂಗಜೇಬರುಗಳನ್ನು ಯುದ್ಧ ಬಂಧಿಗಳನ್ನಾಗಿ ತೆಗೆದುಕೊಂಡಿದ್ದ. ಬ್ರಿಟಿಷನಾದ ಕಾರ್ನ್‌ವಾಲೀಸನು ಟಿಪ್ಪುವಿನ ಇಬ್ಬರು ಮಕ್ಕಳನ್ನು ನೋಡಿಕೊಂಡಷ್ಟು ಮುಚ್ಚಟೆಯಿಂದ, ಮುಸ್ಲಿಮ ದೊರೆಗಳು ತಮ್ಮ ಯುದ್ಧ ಬಂಧಿಗಳನ್ನು ಎಂದೂ ನೋಡಿಕೊಳ್ಳುತ್ತಿರಲಿಲ್ಲ. ಯುದ್ಧಬಂಧಿಗಳು ಅನ್ಯ ಧರ್ಮೀಯರಾದರೆ ಅವರನ್ನು ಧರ್ಮಾಂತರಿಸದೆ ಬಿಡುತ್ತಿರಲಿಲ್ಲ. ಟಿಪ್ಪುವು ಮಕ್ಕಳನ್ನು ಯುದ್ಧ ಬಂಧಿಗಳಾಗಿ ಇಟ್ಟ ಕರಾರು ಯಾವುದು? ಯುದ್ಧದಲ್ಲಿ ಸೋತ ನಂತರ ಇಂತಿಷ್ಟು ಹಣವನ್ನು ಬ್ರಿಟಿಷರಿಗೆ ಕೊಡುವುದಾಗಿ ಅವನು ಒಪ್ಪಿಕೊಂಡ. ಸದ್ಯದಲ್ಲಿ ಕೈಲಿ ಹಣವಿರಲಿಲ್ಲ. ಹೊಂದಿಸಿಕೊಡುವ ತನಕ ಒತ್ತೆ ಇಡಲು ಬೇರೇನೂ ಇರಲಿಲ್ಲ. ಅವನ ಬರಿ ಮಾತನ್ನು, ಆಣೆ ಪ್ರಮಾಣಗಳನ್ನು ಬ್ರಿಟಿಷರು ನಂಬಿ ಹೋಗಬಹುದಿತ್ತೆ? ಮಕ್ಕಳನ್ನು ಒಯ್ಯುವುದು ಬ್ರಿಟಿಷರ ಉದ್ದೇಶವಾ ಗಿರಲಿಲ್ಲ. ಒತ್ತೆ ಇಡಲು ಟಿಪ್ಪುವಿನ ಹತ್ತಿರ ಬೇರೆ ಏನೂ ಇರಲಿಲ್ಲ. ಒತ್ತೆ ಇರಿಸಿಕೊಂಡ ಮಕ್ಕಳ ಯೋಗಕ್ಷೇಮವನ್ನು ಬ್ರಿಟಿಷರು ಚೆನ್ನಾಗಿಯೇ ನೋಡಿಕೊಂಡರು. ಟಿಪ್ಪುವನ್ನು ಕನ್ನಡದ ಕುವರನೆಂದು ಕೆಲವು ರಾಜ ಕಾರಣಿಗಳು ಭಾಷಣ ಮಾಡುವುದು ಹೊಸತಲ್ಲ. ಆದರೆ ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪು ಬದಲಿಸಿ ಫಾರಸಿ ಭಾಷೆಯನ್ನು ತಂದ. ಹಳೆ ಮೈಸೂರಿನ ಕಂದಾಯ ಇಲಾಖೆಗೆ ಸೇರಿದ ಶ್ಯಾನುಭೋಗರ ಮನೆತನದ ನನಗೆ ಆಗಿನ ಕಂದಾಯದ ಲೆಕ್ಕಗಳ ಪರಿಚಯವಿದೆ. ಖಾತೆ, ಖಿರ್ದಿ, ಪಹಣಿ, ಖಾನೀಸು ಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮ ಲ್ದಾರ್, ಶಿರಸ್ತೇದಾರ್ ಹೀಗೆ ಆಡಳಿತದ ಪ್ರತಿಯೊಂದು ಶಬ್ದವೂ ಫಾರಸಿಯಾದದ್ದು ಟಿಪ್ಪುವಿನ ಕಾಲದಲ್ಲಿ ಸೇರಿದ್ದು. ಊರುಗಳ ಮೂಲ ಹೆಸರುಗಳನ್ನೆಲ್ಲ ಟಿಪ್ಪುವು ಬದಲಿಸಿದ್ದ. ಬ್ರಹ್ಮಪುರಿಯನ್ನು ಸುಲ್ತಾನ್ ಪೇಟ್ ಎಂದು ಬದಲಿಸಿದ. ಕೇರಳದ ಕಾಳೀಕೋಟೆ-ಈಗಿನ ಕಲ್ಲೀಕೋಟೆಯನ್ನು ಫರೂಕಾಬಾದ್; ಚಿತ್ರದುರ್ಗ ವನ್ನು ಫಾರ್ರುಕ್ ಯಬ್ ಹಿಸ್ಸಾರ್; ಕೊಡಗನ್ನು ಜಫರಾಬಾದ್; ದೇವನಹಳ್ಳಿಯನ್ನು ಯೂಸುಫಾಬಾದ್; ದಿಂಡಿಗಲ್ ಅನ್ನು ಖಲೀಲಾಬಾದ್; ಗುತ್ತಿ ಯನ್ನು ಫೈಜ್ ಹಿಸ್ಸಾರ್; ಕೃಷ್ಣಗಿರಿಯನ್ನು ಫಲ್ಕ್ ಇಲ್ ಅಜಮ್; ಮೈಸೂರನ್ನು ನಜರಾಬಾದ್(ಈಗ ನಜರ್‌ಬಾದ್ ಎನ್ನುವುದು ಮೈಸೂರಿನ ಒಂದು ಮೊಹಲ್ಲಾ ಆಗಿದೆ); ಪೆನುಗೊಂಡವನ್ನು ಫಕ್ರಾಬಾದ್; ಸಂಕ್ರಿದುರ್ಗವನ್ನು ಮುಜ್ಜಫರಾಬಾದ್; ಸಿರಾವನ್ನು ರುಸ್ತುಮಾಬಾದ್; ಸಕಲೇಶಪುರವನ್ನು ಮಂಜ್ರಾಬಾದ್ ಎಂದು ಬದಲಿಸಿದ. ಇವೆಲ್ಲ ಟಿಪ್ಪುವಿನ ರಾಷ್ಟ್ರೀಯತೆಯನ್ನು, ಕನ್ನಡ ನಿಷ್ಠೆಯನ್ನು ಅನ್ಯಧರ್ಮ ಸಹಿಷ್ಣುತೆಯನ್ನು ತೋರಿಸುತ್ತದೆಯೆ? `ಟಿಪೂ ಸುಲ್ತಾನ್ ಕಂಡ ಕನಸು' ಎಂಬ ತಮ್ಮ ನಾಟಕದ ಹೆಸರನ್ನು ಗಿರೀಶ್ ಕಾರ್ನಾಡರು `ಟಿಪ್ಪು ಸುಲ್ತಾನನ ಕನಸುಗಳು' ಎಂಬ ಟಿಪ್ಪುವು ಸ್ವತಃ ಅಕ್ಷರಗಳಲ್ಲಿ ಫಾರ್ಸಿ ಭಾಷೆಯಲ್ಲಿ ಬರೆದಿಡುತ್ತಿದ್ದ ಕಿರು ಹೊತ್ತಗೆ, ಅದರ ಇಂಗ್ಲಿಷ್ ಸಂಪಾದಕ ಮೇಜರ್ ಬೀಟ್‌ಸನ್ ಕೊಟ್ಟ ಹೆಸರಿನಿಂದ ತೆಗೆದುಕೊಂಡಿದ್ದಾರೆ. ಈ ಇಂಗ್ಲಿಷ್ ಅನುವಾದವನ್ನು ನಾನು ಓದಿದ್ದೇನೆ. ತಾನು ಬರೆಯುವಾಗ, ಬರೆದದ್ದನ್ನು ಓದುವಾಗ ಯಾರೂ ನೋಡಬಾರದೆಂದು ಟಿಪ್ಪುವು ಕಳವಳ ಪಡುತ್ತಿದ್ದ. ಶ್ರೀರಂಗಪಟ್ಟಣದ ಅರಮನೆಯ ಕಕ್ಕಸಿನಲ್ಲಿ ಪತ್ತೆ ಹಚ್ಚಿದ್ದಾಗಿ ಟಿಪ್ಪುವಿನ ಅತ್ಯಂತ ನಂಬಿಕೆಯ ಸೇವಕ ಹಬೀ ಬುಲ್ಲಾಹನು ಅದನ್ನು ಗುರುತಿಸಿ ಟಿಪ್ಪುವೇ ಬರೆದದ್ದೆಂದು ಹೇಳಿದ. ಅದರ ಮೂಲ ಮತ್ತು ಇಂಗ್ಲಿಷ್ ಅನುವಾದಗಳು ಲಂಡನ್ನಿನ ಇಂಡಿಯಾ ಆಫೀಸಿನಲ್ಲಿವೆ. ಅದನ್ನು ಓದಿದರೆ ಟಿಪ್ಪುವು ಎಂಥ ಧರ್ಮಾಂಧನೆಂಬುದು ಇನ್ನಷ್ಟು ಖಚಿತವಾಗುತ್ತದೆ. ಅದರಲ್ಲೆಲ್ಲ ಹಿಂದೂಗಳನ್ನು ಕಾಫಿರರೆಂದೇ ಕರೆಯುತ್ತಾನೆ. ಇಂಗ್ಲಿಷರನ್ನು ಕ್ರೈಸ್ತ ರೆಂದು ನಿರ್ದೇಶಿಸುತ್ತಾನೆ. ಉದ್ದನೆಯ ಗಡ್ಡ ಬಿಟ್ಟ ಮೌಲ್ವಿಗಳು ಆತನ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಾರೆ. ತಾನು ಮೆಕ್ಕಾ ಯಾತ್ರೆ ಹೋಗಿದ್ದಂತೆ ಕನಸು ಕಾಣುತ್ತಾನೆ. ಸ ಪ್ರವಾದಿ ಮೊಹಮ್ಮದರು(೫) `ಟಿಪ್ಪುವನ್ನು ಬಿಟ್ಟು ನಾನು ಸ್ವರ್ಗದೊಳಕ್ಕೆ ಹೆಜ್ಜೆ ಇಡುವುದಿಲ್ಲವೆಂದು ಹೇಳಿದರು' ಎಂದು ಒಬ್ಬ ಉದ್ದನೆಯ ಗಡ್ಡದ ಅರಬನು ಹೇಳುತ್ತಾನೆ. ಮುಸ್ಲಿಮರಲ್ಲದ ಸಮಸ್ತರನ್ನೂ ಮುಸ್ಲಿಮರಾಗಿ ಮುಸ್ಲಿಮೇತರ ರಾಜ್ಯವನ್ನು ಸಂಪೂರ್ಣ ಮುಸ್ಲಿಂ ರಾಜ್ಯವಾಗಿ ಪರಿವರ್ತಿಸುವ ಕನಸು ಕಾಣುತ್ತಾನೆ. ಈ ಇಡೀ ಕಿರುಹೊತ್ತಗೆಯಲ್ಲಿ ಭಾರತವನ್ನು ಆಧುನೀಕರಿಸುವ ಕಿಂಚಿತ್ ಆಲೋಚನೆಯೂ ಇಲ್ಲ. ತನಗೆ ದೊಡ್ಡ ಮುಳುವಾಗಿದ್ದ ಇಂಗ್ಲಿಷರನ್ನು (ಅವರನ್ನು ಉದ್ದಕ್ಕೂ ಕ್ರೈಸ್ತರೆಂದು ಜಾತಿವಾಚಕದಿಂದ ನಿರ್ದೇಶಿಸುತ್ತಾನೆ) ಓಡಿಸುವ ಬಯಕೆ ಇದೆ. ಮಲಬಾರ್ ಮತ್ತು ಕೊಡಗುಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದ ಟಿಪ್ಪು ಮೈಸೂರು ಪ್ರಾಂತ್ಯದಲ್ಲಿ ಆ ದುಸ್ಸಾಹಸಕ್ಕೆ ಹೋಗಲಿಲ್ಲ. ೧೭೯೧ ರಲ್ಲಿ ಮೂರನೇ ಮೈಸೂರು ಯುದ್ಧ ವಾಗಿ ಸೋತು ಬ್ರಿಟಿಷರಿಗೆ ದೊಡ್ಡ ಮೊತ್ತದ ಸಂಪತ್ತನ್ನು ರಾಜ್ಯದ ಮುಖ್ಯ ಭಾಗಗಳನ್ನೂ ಒಪ್ಪಿಸಿ ಮಕ್ಕಳನ್ನು ಯುದ್ಧ ಬಂಧಿಯಾಗಿ ಕೊಟ್ಟ ಮೇಲೆ ಶೃಂಗೇರಿ ಮಠಕ್ಕೆ ಕಾಣಿಕೆ ಸಲ್ಲಿಸುವ ಮೂಲಕ ಹಿಂದೂಗಳ ಅಸಮಾಧಾನವನ್ನು ಕಡಿಮೆ ಮಾಡಲು ಪ್ರಯತ್ನಿಸಿದುದನ್ನು ಇವತ್ತಿನ ಜಾತ್ಯತೀತವಾದಿಗಳು ದೊಡ್ಡದು ಮಾಡಿ ಅವನನ್ನೊಬ್ಬ ಧರ್ಮ ಸಹಿಷ್ಣುನೆಂದು ಬಿಂಬಿಸುತ್ತಿದ್ದಾರೆ. ಆಫ್‌ಘಾನ್ ದೊರೆ ಜಿಮಾಳ್‌ಶಾಹನಿಗೆ ಮತ್ತು ತುರ್ಕಿಯ ಖಲೀಫನಿಗೆ ಭಾರತದ ಮೇಲೆ ದಂಡೆತ್ತಿ ಬಂದು ಇಸ್ಲಾಂ ರಾಜ್ಯವನ್ನು ಸಂಪೂರ್ಣವಾಗಿ ಸ್ಥಾಪಿಸುವಂತೆ ಟಿಪ್ಪು ಕಾಗದ ಬರೆದಿದ್ದ. ೧೭೯೬ರಲ್ಲಿ ಮೈಸೂರಿನ ರಾಜರ ಅರಮನೆಯನ್ನು ಲೂಟಿ ಮಾಡಿದಾಗ ಅರಮನೆಯ ಗ್ರಂಥಾಲಯದಲ್ಲಿದ್ದ ಅಮೂಲ್ಯ ಗ್ರಂಥಗಳು ತಾಳೆಯೋಲೆಯ ಹಸ್ತಪ್ರತಿಗಳು ಮತ್ತು ಕಡತಗಳನ್ನು ಕುದುರೆಗಳಿಗೆ ಹುರುಳಿ ಬೇಯಿಸಲು ಇಂಧನವಾಗಿ ಉಪಯೋಗಿಸುವಂತೆ ಅಪ್ಪಣೆ ಮಾಡಿದ. ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ. ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು. ಕನ್ನಡದಲ್ಲಿ ಓದಿ ಬರೆಯದೆ ಇರುವುದು. ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ. ನನ್ನ ಮೂಲಭೂತ ಪ್ರಶ್ನೆ ಎಂದರೆ ಐತಿಹಾಸಿಕ ವಸ್ತು ಮತ್ತು ವ್ಯಕ್ತಿಗಳನ್ನು ಪಾತ್ರಗಳಾಗಿ ಚಿತ್ರಿಸುವಾಗ ಸಾಹಿತಿಯು ವಹಿಸಬಹುದಾದ ಸ್ವಾತಂತ್ರ್ಯ ಯಾವ ರೀತಿಯದು? ಕಾಲ್ಪನಿಕ ಪಾತ್ರಗಳನ್ನು ತನಗಿಷ್ಟ ಬಂದಂತೆ ರಚಿಸುವ ಸ್ವಾತಂತ್ರ್ಯ ಸಾಹಿತಿಗೆ ಯಾವತ್ತೂ ಇದೆ. ಏಕೆಂದರೆ ಅದು ಆತನ ಸ್ವಂತ ಸೃಷ್ಟಿ. ಆದರೆ ಐತಿಹಾಸಿಕ ಪಾತ್ರವನ್ನು ಚಿತ್ರಿಸುವಾಗ ಐಸಿಹಾಸಿಕ ಸತ್ಯಕ್ಕೆ ಅವನು ನಿಷ್ಠನಾಗಿರಬೇಕು. ಸರ್ವ ಸಮ್ಮತ ವಾದ ಐತಿಹಾಸಿಕ ಸತ್ಯತೆಯೆಂಬುದೇ ಇಲ್ಲ. ಇತಿಹಾಸಕಾರನು ವ್ಯಾಖ್ಯಾನಿಸಿದಂತೆಯೇ ಅದರ ಸತ್ಯ ಎಂದು ಹೇಳುವವರೂ ಇದ್ದಾರೆ. ಸಾಹಿತಿಯು ಯಾವುದಾದರೊಂದು ಸಿದ್ಧಾಂತಕ್ಕೆ ಬದ್ಧನಾಗಿದ್ದರೆ ಆ ಸಿದ್ಧಾಂತವು ಅಥವಾ ಆ ಸಿದ್ಧಾಂತದ ಗುಂಪು ಹೇಳಿ ನಿರ್ದೇಶಿಸದಂತೆಯೇ ಇತಿಹಾಸದ ಪ್ರತಿಯೊಂದು ಘಟನೆ ಮತ್ತು ಪಾತ್ರಗಳನ್ನು ಅರ್ಥೈಸುವುದು ಅವನಿಗೆ ಅನಿವಾರ್ಯವಾಗುತ್ತದೆ. ಕಮ್ಯುನಿಸ್ಟ್, ಜೆ.ಎನ್.ಯು.ಗುಂಪು. ವಾಮ ಪಂಥೀಯ ಎಂಬ ಒಳ ಜಾತಿ, ಉಪ ಜಾತಿಗಳು ಏನೇ ಇದ್ದರೂ ಗಿರೀಶ್ ಕಾರ್ನಾಡರು ಮಾರ್ಕ್ಸಿಸ್ಟ್ ಪಂಥಕ್ಕೆ ಸೇರಿದವರು. ಇಸ್ಲಾಂನಲ್ಲಿ ಸಮಾಜವಾದವಿದೆ. ಹಿಂದೂಗಳಲ್ಲಿ ಇಲ್ಲ ಎಂದು ನಂಬಿದ ಗುಂಪು ಇದು. ಶೀತ ಯುದ್ಧವಾಗುತ್ತಿದ್ದಾಗ ಬಂಡವಾಳಶಾಹಿ ಅಮೆರಿಕ ವಿರುದ್ಧವಾಗಿ ಅರಬರ ಸ್ನೇಹವನ್ನು ಗಳಿಸುವ ಹುನ್ನಾರದಿಂದ ಸ್ಟಾಲಿನ್ ಇಸ್ಲಾಮಿನ ಸಾಮಾಜಿಕ ನ್ಯಾಯವನ್ನು ಮತ್ತೊಮ್ಮೆ ಒತ್ತಿ ಹೇಳಿದ. ಭಾರತದ ಇತಿಹಾಸದ ಮುಸ್ಲಿಂ ವ್ಯಕ್ತಿಗಳನ್ನು ವಿಮರ್ಶಾತ್ಮಕವಾಗಿ ನೋಡಲು ಅವರಿಗೆ ಸಾಧ್ಯವಿಲ್ಲದಂತಾಯಿತು. ಜೊತೆಗೆ ಹಿಂದೂವಾದದ ಬಿಜೆಪಿಯನ್ನು ಹೊಡೆಯಲು ಮುಸ್ಲಿಮರನ್ನು ಎತ್ತಿ ಕಟ್ಟಿ ಬೆಂಬಲಿಸುವ ಒಳ ಸನ್ನಾಹ. ಆದುದರಿಂದ ಕಾರ್ನಾಡರಂಥ ಬುದ್ಧಿಜೀವಿಗಳು ರಾಜಕೀಯವಾಗಿ ಯಾವಾಗಲೂ ಬಿಜೆಪಿಯ ವಿರುದ್ಧ ಗದ್ದಲ ಮಾಡಲು ಸಿದ್ಧವಾಗಿ ನಿಂತಿರುತ್ತಾರೆ. ದತ್ತ ಜಯಂತಿಯ ವಿಷಯವಾಗಲಿ, ಶಾಲೆಯಲ್ಲಿ ಸರಸ್ವತಿ ಪ್ರಾರ್ಥನೆಯ ವಿಷಯದಲ್ಲಿಯಾಗಲಿ ಸಮಯ ಕಾಯುತ್ತಿರುತ್ತಾರೆ. ಇಷ್ಟೊಂದು ಸೈದ್ಧಾಂತಿಕ ಬದ್ಧತೆ ಇರುವ ಲೇಖಕರು ತಮ್ಮ ಸೃಜನಶಕ್ತಿಯನ್ನು ತಮ್ಮ ಸಿದ್ಧಾಂತದ ಅಡಿಯಾಳಾಗಿ ದುಡಿಸಿಕೊಳ್ಳುತ್ತಾರೆ. ಅವರಿಗೆ ಕಲೆ ಎನ್ನುವುದು ತಮ್ಮ ರಾಜಕೀಯ ನಂಬಿಕೆಗಳ ಒಂದು ಸಾಧನ ಮಾತ್ರವಾಗಿ ಬಿಡುತ್ತದೆ. ಸಾಹಿತಿಯು ರಾಜಕೀಯದಿಂದ ತಟಸ್ಥವಾಗಿರಬೇಕು. ಅಕಸ್ಮಾತ್ ರಾಜಕೀಯಕ್ಕೆ ಇಳಿದರೂ ತನ್ನ ಬರವಣಿಗೆಯಲ್ಲಿ ಅದರಿಂದ ತಟಸ್ಥನಾಗಬೇಕು (ಅದು ಕಷ್ಟ ಸಾಧ್ಯ) ಎಂದು ನಾನು ನಂಬಿದ್ದೇನೆ. ರಾಜಕಾರಣದ ಆಯಾಮವಿಲ್ಲದ ಕಲೆ, ನೀತಿ ಅರ್ಥ. ಇತಿಹಾಸ ಆಧ್ಯಾತ್ಮ ಯಾವುದೂ ಇಲ್ಲವೆಂದು ವಾಮಪಂಥೀಯರು ಹೇಳುತ್ತಾರೆ. ನನ್ನ ಈ ಲೇಖನದ ಉದ್ದೇಶ ಶಂಕರಮೂರ್ತಿ ಯವರನ್ನು ಬೆಂಬಲಿಸುವುದಲ್ಲ. ಮುಸ್ಲಿಂ ಐತಿಹಾಸಿಕ ವ್ಯಕ್ತಿಗಳನ್ನು ಹೀಗಳೆಯುವುದೂ ಅಲ್ಲ. ಭಾರತ ದೇಶದಲ್ಲಿರುವ ಮುಸ್ಲಿಮರೆಲ್ಲರೂ ನಮ್ಮ ಭ್ರಾತೃಗಳು. ಈ ಭ್ರಾತೃತ್ವದ ಬುನಾದಿಯ ಮೇಲೆಯೇ ನಮ್ಮ ರಾಷ್ಟ್ರೀಯತೆ ಗಟ್ಟಿಗೊಳ್ಳಬೇಕು. ಹಾಗೆಂದು ಇತಿ ಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲ. ಹಿಂದೂಗಳ ತಪ್ಪು ನೆಪ್ಪುಗಳನ್ನು ನಾವು ನಿರ್ಭಯವಾಗಿ ಚರ್ಚಿಸಿ ಸರಿ ಪಡಿಸಲು ಆರಂಭಿಸಿ ಒಂದು ಶತಮಾನವಾಯಿತು. ಇಂಥ ಮುಕ್ತ ಚರ್ಚೆ ವಿಮರ್ಶೆಗಳಿಂದ ಹಿಂದೂ ಸಮಾಜವು ಗಟ್ಟಿಯಾಗುತ್ತಿದೆ. ಮುಸ್ಲಿಂ ಆಡಳಿತದಲ್ಲಿ ನಡೆದ ವಾಸ್ತವಾಂಶಗಳನ್ನು ಮುಕ್ತವಾಗಿ ಬರೆಯುವು ದರಿಂದ ಅವರಿಗೆ ಅಪಮಾನಮಾಡಿದಂತೆ ಆಗುವುದಿಲ್ಲ. ನಾವೆಲ್ಲ ಇತಿಹಾಸದಿಂದ ಪಾಠ ಕಲಿಯಬೇಕು. ಇತಿಹಾಸದ ವಾಸ್ತವತೆಯನ್ನು ಹೇಳಿದರೆ ಎಲ್ಲಿ ಯಾರು ಮುನಿಸಿಕೊಳ್ಳುತ್ತಾರೋ ಎಂಬ ಅಂಜಿಕೆಯಿಂದ ಸತ್ಯವನ್ನು ಮುಚ್ಚಿ ಸುಳ್ಳು ಇತಿಹಾಸವನ್ನು ಸೃಷ್ಟಿಸಿದರೆ ಅಂಥ ಸುಳ್ಳು ಬುನಾದಿಯ ಮೇಲೆ ಗಟ್ಟಿ ಕಟ್ಟಡವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿನವರ ತಪ್ಪುಗಳಿಗೆ ಇಂದಿನವರನ್ನು ದೂಷಿಸುವುದು ಅಪಕತ್ವತೆಯ ಕುರುಹು. ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು ವಾರಸುದಾರರಂತೆ ಕಲ್ಪಿಸಿಕೊಂಡು ಉಬ್ಬುವುದು ಅಥವಾ ಕುಗ್ಗುವುದು ಅಷ್ಟೇ ಅಪಕತ್ವತೆಯ ಲಕ್ಷಣ. ಎಸ್.ಎಲ್. ಭೈರಪ್ಪ. [ಸೆಪ್ಟೆಂಬರ್ ೨೪, ೨೦೦೬, ವಿಜಯ ಕರ್ನಾಟಕ] Posted by ಒಬ್ಬ ಓದುಗ at 12:03 PM 8 comments: Labels: ಗಿರೀಶ್ ಕಾರ್ನಾಡ್, ಟಿಪ್ಪು ಸುಲ್ತಾನ್, ಭೈರಪ್ಪ Thursday, August 24, 2006 ವಂದೇ ಮಾತರಂಗೆ ಕಡೆವಂದೇ ಹೇಳಹೊರಟವರ ಕುರಿತು ವಿಶ್ವೇಶ್ವರ ಭಟ್: ಪತ್ರಕರ್ತ ಚೋ.ರಾಮಸ್ವಾಮಿ ಹೇಳುತ್ತಿದ್ದರು, `ನಮ್ಮ ರಾಜಕಾರಣಿಗಳು ಎಂಥ ನೀಚ ಮಟ್ಟಕ್ಕೆ ಬೇಕಾದರೂ ಹೋಗಲೂ ಹೇಸದವರು. ಅದಕ್ಕೆ ಭಾರತದ ರಾಜಕಾರಣದಲ್ಲಿ ಅಸಂಖ್ಯ‌ಉದಾಹರಣೆಗಳು ಸಿಗುತ್ತವೆ. ಗಡಿಯಲ್ಲಿನ ನಮ್ಮ ಬೇಹುಗಾರನ ಸುಳಿವನ್ನು ಶತ್ರು ದೇಶದ ಸೈನಿಕರಿಗೆ ಹೇಳುವುದರಿಂದ ಹಿಡಿದು ರಕ್ಷಣೆ, ಬಾಹ್ಯಾಕಾಶ, ಅಣುಸ್ಥಾವರ, ದೇಶದ ಭದ್ರತೆಗೆ ಸಂಬಂಸಿದ ಅಮೂಲ್ಯ, ಸೂಕ್ಷ್ಮ ಮಾಹಿತಿಯನ್ನು ಸಹಾ ಮಾರಾಟಕ್ಕಿಡಬಲ್ಲರು. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಮಾರಾಟ ಮಾಡುವ ಸಂದರ್ಭ ಬಂದರೆ, ಚೌಕಾಶಿ ಮಾತುಕತೆಗೆ ಕುಳಿತುಕೊಳ್ಳಬಲ್ಲರು'. ಚೋ ಏರಿದ ದನಿಯಲ್ಲಿ ಪಟಾಕಿಸರಕ್ಕೆ ಬೆಂಕಿಯಿಟ್ಟವರಂತೆ ಸಡಸಡ ಮಾತಾಡುವಾಗ ವಿಷಯವನ್ನು ಉತ್ಪ್ರೇಕ್ಷಿಸಬಹುದೇನೋ ಎಂದೆನಿಸುತ್ತದೆ. ಆಗ ಅವರು ಹೇಳುತ್ತಿದ್ದರು -ನಾನು ಹೀಗೆ ಮಾತಾಡಿದರೆ ನಿಮಗೆ ಅನಿಸುತ್ತದೆ ಈ ಚೋ.ರಾಮಸ್ವಾಮಿಗೆ ಬುದ್ಧಿಯಿಲ್ಲ. ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಾನೆ. ರಾಜಕಾರಣಿಗಳನ್ನು ಹೀನಾಯಮಾನವಾಗಿ ಬೈಯುತ್ತಾನೆ ಅಂತ ಒಳಗೊಳಗೆ ಅಂದುಕೊಳ್ಳುತ್ತಾರೆ. ನನ್ನ ಮಾತಿನ ಮರ್ಮ ತಕ್ಷಣ ಅವರಿಗೆ ಅರ್ಥವಾಗದಿರಬಹುದು. ಆದರೆ ನನ್ನ ಮಾತು ಅವರಿಗೆ ಅರ್ಥವಾಗಲು ಹೆಚ್ಚು ದಿನ ಬೇಕಾಗುವುದಿಲ್ಲ. ಯಾಕೋ ಎಂದೋ ಹೇಳಿದ ಚೋ ಮಾತು ಮನಸ್ಸಿನ ಮುಂದೆ ಹಾದು ಹೋಯಿತು. `ವಂದೇ ಮಾತಾರಂ' ಕುರಿತು ಎದ್ದಿರುವ ವಿವಾದವನ್ನೇ ನೋಡಿ. ನಮ್ಮ ಸ್ವಾರ್ಥ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರೆಂಬುದಕ್ಕೆ ನಿದರ್ಶನ. ವೋಟ್‌ಬ್ಯಾಂಕ್ ರಾಜಕಾರಣದ ಮುಂದೆ ನಮ್ಮ ದೇಶ, ದೇಶಗೀತೆ, ಧ್ಯೇಯ, ಮೌಲ್ಯ, ದೇಶಹಿತ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಧ್ಯೇಯದೀವಿಗೆಯಾಗಿ ಅಸಂಖ್ಯ ಭಾರತೀಯರ ಅಪದಮನಿ, ಅಭಿದಮನಿಗಳಲ್ಲಿ ಸೂರ್ತಿ ಕಾರಂಜಿ ಸೃಜಿಸಿದ ಗೀತೆ -`ವಂದೇ ಮಾತರಂ' ಸಹ ರಾಜಕಾರಣಿಗಳ ಕೈಯಲ್ಲಿ ಹೇಗೆ ದಾಳವಾಗುತ್ತದೆ ನೋಡಿ. `ವಂದೇ ಮಾತರಂ' ವಿವಾದ ಆರಂಭವಾಗುವುದು ಹೀಗೆ. ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆಯುತ್ತಾರೆ. ವಿಷಯ ಏನಂದ್ರೆ -`ಸೆಪ್ಟೆಂಬರ್ ೭ರಂದು ವಂದೇ ಮಾತರಂ ಶತಮಾನೋತ್ಸವ ನಿಮಿತ್ತ, ಅಂದು ಬೆಳಗ್ಗೆ ೧೧ಕ್ಕೆ ದೇಶಾದ್ಯಂತ ಎಲ್ಲ ಶಾಲೆಗಳಲ್ಲಿ ಈ ರಾಷ್ಟ್ರಗೀತೆ(ವಂದೇ ಮಾತರಂ)ಯ ಮೊದಲ ಎರಡು ಪಲ್ಲವಿಗಳನ್ನು ಕಡ್ಡಾಯವಾಗಿ ಹಾಡಬೇಕು. ' ಈ ಪತ್ರ ಬರುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದರು. `ವಂದೇ ಮಾತರಂ'ನ್ನು ಹಾಡುವಂತೆ ಅದರಲ್ಲಿ ಸೂಚಿಸಲಾಗಿತ್ತು. ಮುಲಾಯಂ ಸಿಂಗ್‌ರು ಅಜುನ್‌ಸಿಂಗ್ ಅವರ ಪತ್ರವನ್ನು ಅನುಮೋದಿಸಿದ್ದರು. ಯಾವಾಗ ಮುಲಾಯಂ ಸಿಂಗ್ ಯಾದವ್‌ರ ಸುತ್ತೋಲೆ ಹೊರಬಿತ್ತೋ, ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಹಿರಿಯರು, ಧರ್ಮಗುರುಗಳು, ಮೌಲ್ವಿಗಳು ರಾತ್ರೋ ರಾತ್ರಿ ಸಭೆ ಸೇರಿದರು. ವಂದೇ ಮಾತರಂ ವಿರುದ್ಧ ದನಿ‌ಎತ್ತಲು ನಿರ್ಧರಿಸಿದರು. ಪ್ರಮುಖ ಇಸ್ಲಾಮಿಕ್ ಸಂಘಟನೆಗಳ ಪೈಕಿ ಒಂದಾದ ಫಿರಂಗಿ ಮಹಲ್ ಅಧ್ಯಕ್ಷ ಮೌಲಾನ ಖಲೀದ್ ರಶೀದ್ ಹೇಳಿದರು -`ಮುಸ್ಲಿಂ ವಿದ್ಯಾರ್ಥಿಗಳು ವಂದೇಮಾತರಂ ಹಾಡುವುದು ಇಸ್ಲಾಂ ವಿರೋ. ನಮ್ಮ ಸಮುದಾಯದವರ್‍ಯಾರೂ ಇದನ್ನು ಹಾಡಬಾರದು. ವಂದೇಮಾತರಂ ಹಾಡಿದರೆ ಇಸ್ಲಾಮ್‌ಗೆ ಅವಹೇಳನ ಮಾಡಿದ ಹಾಗೆ. ಸೆಪ್ಟೆಂಬರ್ ೭ರಂದು ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಹಾಡಕೂಡದೆಂದು ನಾನು ಕರೆ ಕೊಡುತ್ತೇನೆ.' ದಿಲ್ಲಿಯ ಜಮಾ ಮಸೀದಿ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಮಿಂಚಿನಂತೆ ಕಾರ್ಯಪ್ರವೃತ್ತರಾದರು. ತಕ್ಷಣ ತಮ್ಮ ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಹಿರಿಯರೊಂದಿಗೆ ಸಭೆ ಸೇರಿ ಅನಂತರ ಕರೆ ಕೊಟ್ಟರು -`ವಂದೇಮಾತರಂನ್ನು ಯಾವ ಕಾರಣಕ್ಕೂ ಹಾಡಕೂಡದು. ಅದು ಇಸ್ಲಾಮಿನ ನಂಬಿಕೆಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ವಂದೇ ಮಾತರಂನ್ನು ಹಾಡಲೇ ಬೇಕೆಂಬ ಒತ್ತಡ ಹೇರುವುದೆಂದರೆ ನಮ್ಮ ಸಮುದಾಯವನ್ನು ತುಳಿದಂತೆ. ಇಸ್ಲಾಂ ಪ್ರಕಾರ ಒಬ್ಬನು ತನ್ನ ದೇಶವನ್ನು ಪ್ರೀತಿಸುವುದು, ಗೌರವಿಸುವುದು ತಪ್ಪಲ್ಲ. ಅಷ್ಟೇ ಅಲ್ಲ ಸಂದರ್ಭ ಬಂದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬಹುದು. ಆದರೆ ಯಾರನ್ನಾದರೂ ಪೂಜಿಸುವ ಪ್ರಶ್ನೆ ಎದುರಾದರೆ, ಅಲ್ಲಾಹನನ್ನು ಮಾತ್ರ ಪೂಜಿಸಬೇಕು. ಮುಸ್ಲಿಮನಾದವನು ತನ್ನ ತಂದೆ, ತಾಯಿ, ಮಾತೃಭೂಮಿ ಹಾಗೂ ಪ್ರವಾದಿಯನ್ನು ಉನ್ನತ ಸ್ಥಾನದಲ್ಲಿರಿಸಿ ಗೌರವಿಸಿದರೂ, ಇವರೆಲ್ಲರನ್ನೂ ಪೂಜಿಸುವಂತಿಲ್ಲ. ಸ್ವಾತಂತ್ರ್ಯ ನಂತರದಿಂದ ಕೇಂದ್ರದ ಹಾಗೂ ರಾಜ್ಯಗಳ ಎಲ್ಲ ಸರ್ಕಾರಗಳು ಮುಸ್ಲಿಮರನ್ನು ತುಳಿಯುತ್ತಿವೆ. ವಂದೇಮಾತರಂ ಹಾಡಬೇಕೆಂಬ ಸುತ್ತೋಲೆ ಈ ದಿಸೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಎಸಗಿದ ಮತ್ತೊಂದು ಗದಾಪ್ರಹಾರ. ಸ್ವಯಂಪ್ರೇರಿತರಾಗಿ ಯಾರಾದರೂ ಹಾಡುವುದಾದರೆ ನನ್ನ ಆಕ್ಷೇಪವಿಲ್ಲ. ಆದರೆ ಹಾಡಲೇ ಬೇಕೆಂಬ Pಕ್ಷಿಟ್ಟಳೆ, ಕಟ್ಟುಪಾಡು ವಿಸಿದರೆ, ಅದನ್ನು ಬಲವಾಗಿ ಪ್ರತಿಭಟಿಸಬೇಕಾದೀತಿ. ಇಂಥ ಸುತ್ತೋಲೆ ವಾಪಸ್ ಪಡೆಯುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದೀತು. ದೇಶವನ್ನು ಪೂಜಿಸುವುದು ವಂದೇ ಮಾತರಂ ಉದ್ದೇಶ ಅಲ್ಲ. ಈ ಹಾಡಿನಲ್ಲಿ ದೇಶವನ್ನು ತಾಯಿಗೆ ಹೋಲಿಸಲಾಗಿದೆ ಹಾಗೂ ಜನರನ್ನು ಆಕೆಯ ಮಕ್ಕಳೆಂದು ಚಿತ್ರಿಸಲಾಗಿದೆ. ಈ ವಾದವನ್ನು ನಾವು ಒಪ್ಪುವುದಿಲ್ಲ. ಇದು ನಮ್ಮ ಧರ್ಮಕ್ಕೆ ವಿರೋಧವಾದುದು. ' ಅರ್ಜುನ್ ಸಿಂಗ್ ಸುತ್ತೋಲೆ ಕೇವಲ ೨೪ ಗಂಟೆಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಅದೆಂಥ ಸಂಚಲನವನ್ನುಂಟು ಮಾಡಿತೆಂದರೆ, ದೇಶದೆಲ್ಲೆಡೆಯಿರುವ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ತಮ್ಮ ಊರುಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಂದೇ ಮಾತರಂನ್ನು ಹಾಡಬೇಕೆಂಬ ಪ್ರಸ್ತಾಪವನ್ನು ವಿರೋಸಿದರು. ಅರ್ಜುನ್ ಸಿಂಗ್ ಮುಸ್ಲಿಂ ಸಮುದಾಯದ ಅಂತರಂಗ ತುಮುಲವೇನೆಂಬುದು ತಟ್ಟನೆ ಅರ್ಥವಾಯಿತು. ತಮ್ಮ ಮೊದಲಿನ ಆದೇಶದಿಂದ ದೇಶಾದ್ಯಂತವಿರುವ ಮುಸ್ಲಿಮರಿಗೆ ಅಸಮಾಧಾನವಾಗಿದೆಯೆಂದು ಮನವರಿಕೆಯಾಯಿತು. ಅದು ರಾಷ್ಟ್ರಗೀತೆಯ ವಿಚಾರವಾಗಿರಬಹುದು ಅಥವಾ ಇನ್ನಿತರ ಯಾವುದೇ ವಿಷಯವಾಗಿರಬಹುದು, ಅಲ್ಪಸಂಖ್ಯಾತರನ್ನು ಎದುರು ಹಾಕಿಕೊಳ್ಳುವುದುಂಟಾ? ಅರ್ಜುನ್ ಸಿಂಗ್ ಮತ್ತೊಂದು ಸುತ್ತೋಲೆ ಕಳಿಸಿದರು. ಅಂದು ಭಾನುವಾರ ಸರಕಾರಿ ಕಚೇರಿಗೆ ರಜೆಯಿದ್ದರೂ ತಮ್ಮ ಸಿಬ್ಬಂದಿಯನ್ನು ಕರೆದು ಆದೇಶ ಹೊರಡಿಸಿದರು. ವಾರಣಸಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದರು -`ವಂದೇಮಾತರಂನ್ನು ಹಾಡಲೇಬೇಕೆಂಬ ಕಡ್ಡಾಯವಿಲ್ಲ. ಹಾಡಬಹುದು ಅಥವಾ ಬಿಡಬಹುದು' ಎಂದು ಬಿಟ್ಟರು. ಆಗಲೇ ಮುಸ್ಲಿಂ ಸಮುದಾಯ ನಿಟ್ಟುಸಿರುಬಿಟ್ಟಿದ್ದು. ಅರ್ಜುನ್‌ಸಿಂಗ್ ಹೇಳಿದ್ದಕ್ಕೆ ಕಾಂಗ್ರೆಸ್ ಠಸ್ಸೆ ಒತ್ತಿತ್ತು. ಆ ಪಕ್ಷದ ವಕ್ತಾ ಅಭಿಷೇಕ್ ಮನು ಸಿಂಘ್ವಿ ಹೇಳಿದರು -`ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರೇರಣೆ ಮೂಡಿಸಿದ, ದೇಶಕ್ಕಾಗಿ ಬಲಿದಾನಗೈದ ಅಸಂಖ್ಯ ಜನರಿಗೆ ಸೂರ್ತಿಯಾದ ವಂದೇಮಾತರಂ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ರಾಷ್ಟ್ರಕ್ಕೆ ಅಪಾರ ಗೌರವವಿದೆ. ಆದರೂ ಯಾವುದೋ ಒಂದು ಸಮುದಾಯ ಅಥವಾ ಗುಂಪು ವಂದೇ ಮಾತರಂ ಹಾಡುವುದರ ಬಗ್ಗೆ ಬೇರೆ ರೀತಿ ಯೋಚಿಸಿದರೆ ಅವರು ಹಾಡಬಹುದು, ಇಲ್ಲವೇ ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಕೇಂದ್ರ ಮಂತ್ರಿ ಅರ್ಜುನ್ ಸಿಂಗ್ ನಿರ್ಧಾರವನ್ನು ಕಾಂಗ್ರೆಸ್ ಸಮ್ಮತಿಸುತ್ತದೆ. ವಂದೇ ಮಾತರಂನ್ನು ಹಾಡಲೇಬೇಕೆಂಬ ನಿಯಮ ಕಡ್ಡಾಯವೇನಿಲ್ಲ. ಅದು ಐಚ್ಛಿಕ. ' ಯಾವ ವಾರಾಣಸಿ ಅಖಿಲ ಭಾರತ ಕಾಂಗ್ರೆಸ್ ಅವೇಶನದಲ್ಲಿ ೧೯೦೫ರಲ್ಲಿ ವಂದೇ ಮಾತರಂನ್ನು ಹಾಡಲಾಗಿದ್ದೋ ಹಾಗೂ ರಾಷ್ಟ್ರೀಯ ಹಾಡು ಎಂದು ಮಾನ್ಯ ಮಾಡಿ ಸ್ವೀಕರಿಸಲಾಗಿತ್ತೋ, ಅದೇ ವಾರಾಣಸಿಯಲ್ಲಿ ಅರ್ಜುನ್ ಸಿಂಗ್ `ವಂದೇ ಮಾತರಂನ್ನು ಹಾಡಿದರೆ ಹಾಡಿ ಬಿಟ್ಟರೆ ಬಿಡಿ' ಎಂದು ಅಪ್ಪಣೆ ಕೊಡಿಸಿದ್ದರು. ೧೮೭೬ರಲ್ಲಿ ಬಂಕಿಮ್‌ಚಂದ್ರ ಚಟರ್ಜಿ ವಂದೇ ಮಾತರಂ ಬರೆದಾಗ ಅದು ಸ್ವಾತಂತ್ರ್ಯದ ರಣಕಹಳೆಯಂತೆ ಎಲ್ಲ ದೇಶಭಕ್ತರ ಬಾಯಲ್ಲಿ ಮೊಳಗತೊಡಗಿತು. `ವಂದೇ ಮಾತರಂ' ಘೋಷಣೆಯಿಲ್ಲದೇ ಯಾವ ಕಾರ್ಯಕ್ರಮವೂ ಆರಂಭವಾಗುತ್ತಿರಲಿಲ್ಲ. ಕೊನೆಗೊಳ್ಳುತ್ತಿರಲಿಲ್ಲ. ವಂದೇ ಮಾತರಂ ಅಂದರೆ ಪ್ರಖರ ದೇಶಪ್ರೇಮ, ದೇಶಭಕ್ತಿಯ ಸಂಕೇತ. ಈ ಘೋಷಣೆಗೆ ಇಡೀ ದೇಶವಾಸಿಗಳನ್ನು ಬಡಿದೆಬ್ಬಿಸುವ ಃಶಕ್ತಿಯಿತ್ತು. ಒಂದು ಹಂತದಲ್ಲಿ ವಂದೇಮಾತರಂ ಘೋಷಣೆಯನ್ನು ಬ್ರಿಟಿಷರು ನಿಷೇಸಿದ್ದರು. ಇದನ್ನು ಪ್ರತಿಭಟಿಸಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ಸಹಸ್ರಾರು ಜನರನ್ನು ಅವರು ಜೈಲಿಗೆ ಹಾಕಿದ್ದರು. ವಂದೇ ಮಾತರಂ ಅಂದ್ರೆ ಭಾರತವನ್ನು ಪ್ರೀತಿಸುವವರೆಲ್ಲರ ರಾಷ್ಟ್ರೀಯ ಮಂತ್ರ. ೧೮೯೬ರಲ್ಲಿ ಕೋಲ್ಕತಾ ಕಾಂಗ್ರೆಸ್ ಅವೇಶನದಲ್ಲಿ ಸ್ವತಃ ರವೀಂದ್ರ ನಾಥ ಟಾಗೋರ್‌ರು ವಂದೇ ಮಾತರಂ ಹಾಡಿದ್ದರು. ಲಾಲಾ ಲಜಪತರಾಯ್ ಲಾಹೋರ್‌ನಿಂದ ವಂದೇ ಮಾತರಂ ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಗುಂಡಿಗೆ ಬಲಿಯಾದ, ನೇಣಿಗೆ ಶರಣಾದ ಅದೆಷ್ಟೋ ದೇಶಪ್ರೇಮಿಗಳ ಕೊನೆಯ ಉದ್ಗಾರ -ವಂದೇ ಮಾತರಂ! ಅನೇಕ ವರ್ಷಗಳ ಕಾಲ ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯೂ ಆಗಿತ್ತು. ಅನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಗ `ಜನಗಣಮನ' ರಾಷ್ಟ್ರಗೀತೆಯಾಯಿತು. ಇದರ ಹಿಂದಿನ ರಾಜಕೀಯ, ಉದ್ದೇಶ ಅದೇನೇ ಇರಲಿ, ಜನಗಣಮನಕ್ಕಿಂತ ವಂದೇಮಾತರಂನಲ್ಲೇ ರಾಷ್ಟ್ರಭಕ್ತಿಯ ಅದಮ್ಯ ಸುರಣವಿದೆಯೆಂಬ ಅಭಿಪ್ರಾಯವಿದೆ. ಅಂತಿಮವಾಗಿ ವಂದೇಮಾತರಂ ಬದಲಿಗೆ `ಜನಗಣಮನ'ವನ್ನೇ ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಲಾಯಿತು. ೧೯೫೦ರ ಜನವರಿ ೨೪ರಂದು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಕಾನ್‌ಸ್ಟಿಟುಯೆಂಟ್ ಅಸೆಂಬ್ಲಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದು ಉಲ್ಲೇಖಾರ್ಹ -`ಜನಗಣಮನ ಪದಗಳುಳ್ಳ ಹಾಡನ್ನು ಭಾರತದ ರಾಷ್ಟ್ರಗೀತೆ(anthem)ಯಾಗಿ ವಂದೇ ಮಾತರಂನ್ನು ರಾಷ್ಟ್ರೀಯ ಹಾಡಾಗಿ(national song) ಸ್ವೀಕರಿಸಲಾಗಿದೆ. ಆದರೂ ವಂದೇ ಮಾತರಂ ಹಾಡಿಗೆ ಜನಗಣಮನದಷ್ಟೇ ಸಮನಾದ ಗೌರವ ಮತ್ತು ಸ್ಥಾನಮಾನವಿದೆ' ರಾಷ್ಟ್ರಪತಿಯವರ ಈ ಘೋಷಣೆಯನ್ನು ಇಡೀ ಅಸೆಂಬ್ಲಿ ಮೇಜುಕುಟ್ಟಿ ಸ್ವಾಗತಿಸಿತ್ತು. ಆನಂತರ ನಮ್ಮ ಸಂವಿಧಾನದಲ್ಲೂ ಸಹ ವಂದೇ ಮಾತರಂನ್ನು ಸಂಸತ್ತಿನಲ್ಲೂ ಹಾಡುವ ಸಂಪ್ರದಾಯವಿದೆ. ಹೀಗಿರುವಾಗ ಒಂದು ಕೋಮಿನ ಕೆಲ ನಾಯಕರು ಆಕ್ಷೇಪಿಸಿದರೆಂಬ ಕಾರಣಕ್ಕೆ, ವೋಟ್‌ಬ್ಯಾಂಕ್ ರಾಜಕಾರಣಕ್ಕೆ ವಂದೇ ಮಾತರಂ ಬಗ್ಗೆ ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿರ್ಧಾರ ದುಗ್ಭ್ರಮೆ ಮೂಡಿಸುವಂಥದ್ದು. ಜಗತ್ತಿನ ಬೇರಾವ ದೇಶದಲ್ಲೂ ಘಟಿಸದ, ಊಹಿಸಲೂ ಆಗದಂಥ ಘಟನೆಗೆ ನಾವೆಲ್ಲ ಸಾಕ್ಷಿಯಾಗಬೇಕಿರುವುದು ದುರ್ದೈವ. ಇದು ರಾಷ್ಟ್ರಕ್ಕೆಸಗಲಾದ ಅವಮಾನವಲ್ಲದೇ ಮತ್ತೇನು? ಈ ದೇಶದಲ್ಲಿ ನೆಲೆಸುವ ಪ್ರತಿಯೊಬ್ಬರೂ ರಾಷ್ಟ್ರ, ರಾಷ್ಟ್ರೀಯತೆಯನ್ನು ಪ್ರತಿನಿಸುವ ಸಂಕೇತಗಳಿಗೆ ತಲೆಬಾಗಲೇಬೇಕು. ಇಂದು ರಾಷ್ಟ್ರೀಯ ಹಾಡಿಗೆ ಆಕ್ಷೇಪಿಸುವವರು ನಾಳೆ ರಾಷ್ಟ್ರಧ್ವಜದ ಬಗ್ಗೆ ತಕರಾರು ತೆಗೆಯಬಹುದು. ಅವರನ್ನು ಓಲೈಸಲು ಸರಕಾರ ಮಣಿಯುವುದಿಲ್ಲವೆನ್ನುವ ಗ್ಯಾರಂಟಿಯೇನು? ರಾಷ್ಟ್ರಗೀತೆಗೂ ಇದೇ ಒತ್ತಡ ಬಂದರೆ? ಆಗಲೂ ನಮ್ಮ ಮಾನಗೆಟ್ಟ ಸರಕಾರಗಳು ಮಣಿಯಲಾರವೆಂಬ ಗ್ಯಾರಂಟಿಯೇನು? ಈ ದೇಶದ ಘೋಷವಾಕ್ಯಕ್ಕೇ ಅದರ ಶತಮಾನೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಈ ಗತಿ ಬಂದರೂ ಯಾರೂ ಕ್ಕಾರದ ಘೋಷಣೆ ಹಾಕುತ್ತಿಲ್ಲ. ಏನೆನ್ನೋಣ? Posted by ಒಬ್ಬ ಓದುಗ at 7:56 AM 3 comments: Thursday, August 10, 2006 ತಿರುಪತಿಯಲ್ಲಿ ಮತಾಂತರ ತಿರುಮಲ ತಿರುಪತಿ ಸಂರಕ್ಷಣಾ ಸಮಿತಿ (ಕರ್ನಾಟಕ) ನಂ. ೫೫, ಯಾದವ ಸ್ಮೃತಿ, ಶೇಷಾದ್ರಿಪುರ, ೧ನೇ ಮುಖ್ಯ ರಸ್ತೆ, ಬೆಂಗಳೂರು - ೫೬೦೦೨೦ (ಪ್ರಕಟಣೆಯ ಕೃಪೆಗಾಗಿ) ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಪರಮ ಪವಿತ್ರ ಕ್ಷೇತ್ರ ಭೂವೈಕುಂಠವೆನಿಸಿರುವ ತಿರುಮಲ ತಿರುಪತಿ ಪರಿಸರದಲ್ಲಿ ಅನೇಕ ರೀತಿಯ ಕ್ರಿಸ್ತೀಕರಣ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು, ಪೇಜಾವರ ಮಠ, ಉಡುಪಿ ಇವರ ಆದೇಶದಂತೆ ಸತ್ಯ ಶೋಧನಾ ಸಮಿತಿಯೊಂದು ಎರಡು ದಿನಗಳ ಕಾಲ ತನಿಖೆ ನಡೆಸಿದೆ. ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶ್ರೀ ಬಿಕ್ಷಾಪತಿಯವರ ನೇತೃತ್ವದ ಈ ಸಮಿತಿ ತನ್ನ ವರದಿಯಲ್ಲಿ ತಿರುಮಲ ತಿರುಪತಿ ಶ್ರೀ ಕ್ಷೇತ್ರದಲ್ಲಿ ತೀವ್ರವಾಗಿ ನಡೆಯುತ್ತಿರುವ ಕ್ರಿಸ್ತೀಕರಣದ ಚಟುವಟಿಕೆಗಳನ್ನು ಬಹಿರಂಗಗೊಳಿಸಿದೆ. ಸತ್ಯ ಶೋಧನಾ ಸಮಿತಿಯು ಬಹಿರಂಗಗೊಳಿಸಿರುವ ವರದಿಯ ಸಂಕ್ಷಿಪ್ತ ರೂಪ ಸಮಿತಿಯು ದಿನಾಂಕ ೨೧, ೨೨ ಜೂನ್ ೨೦೦೬ರಂದು ತಿರುಪತಿ-ತಿರುಮಲಕ್ಕೆ ಭೇಟಿ ನೀಡಿದಾಗ ೫೦ಕ್ಕೂ ಹೆಚ್ಚು ಸಾರ್ವಜನಿಕರು ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ತಮ್ಮ ಗಮನಕ್ಕೆ ಬಂದ ಚಟುವಟಿಕೆಗಳನ್ನು ವಿವರಿಸಿದ್ದಾರೆ. ಅಲ್ಲದೆ ಸಮಿತಿಯು TTDಯ ನಿರ್ವಾಹಕ ಮುಖ್ಯಸ್ಥ ಶ್ರೀ APVN ಶರ್ಮಾ, IAS ರವರನ್ನು ದಿನಾಂಕ ೨೨-೬-೦೬ರಂದು ಭೇಟಿ ಮಾಡಿತು. ಅದೇ ಸಂದರ್ಭದಲ್ಲಿ ಶ್ರೀ ಧರ್ಮಾ ರೆಡ್ಡಿ, ವಿಶೇಷಾಧಿಕಾರಿಗಳು, ಶ್ರೀ ಅರವಿಂದ ಕುಮಾರ್, IPS, ಮುಖ್ಯ ಸುರಕ್ಷಾ ಅಧಿಕಾರಿ, ಶ್ರೀ ರಾಮಚಂದ್ರ ರೆಡ್ಡಿ, ಕಾನೂನು ಅಧಿಕಾರಿ ಇವರೂ ಉಪಸ್ಥಿತರಿದ್ದರು. ಈ ಎಲ್ಲರೂ ನೀಡಿದ ಮಾಹಿತಿಯ ವಿಶ್ಲೇಷಣೆಯಿಂದ ಹೊರಬಂದ ಸತ್ಯಾಂಶಗಳು: ೧. ಕ್ರೈಸ್ತಮತ ಪ್ರಚಾರ ಮತ್ತು ಮತಾಂತರ ಪ್ರಯತ್ನದ ಚಟುವಟಿಕೆಗಳು ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಗಳು ಹಾಗೂ ಮಿಶನರಿಗಳು ತಿರುಪತಿ-ತಿರುಮಲದಲ್ಲಿ ತಮ್ಮ ಮತಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕಾಲೇಜುಗಳಲ್ಲಿ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಗೆ, ತಿರುಮಲದಿಂದ ತಿರುಪತಿಗೆ ಬಸ್‌ನಲ್ಲಿ ಬರುವಾಗ ಯಾತ್ರಾರ್ಥಿಗಳಿಗೆ, ಧರ್ಮದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಬೈಬಲ್ ಹಂಚುವ ಪ್ರಕರಣಗಳ ಬಗ್ಗೆ ದೂರುಗಳು ದಾಖಲಾಗಿವೆ. ೨. TTDಯ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತಮತ ಪ್ರಚಾರ * ಶ್ರೀ ವೇಂಕಟೇಶ್ವರ ವಿಶ್ವವಿದ್ಯಾಲಯದ (SV University) ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೇವಸಂಗೀತಂ ವಿದ್ಯಾರ್ಥಿಗಳಿಗೆ ಕ್ರೈಸ್ತಮತ ಪ್ರಚಾರ ಮಾಡುವುದಲ್ಲದೆ ಚರ್ಚ್‌ಗೆ ಹೋಗಲು ಬಲವಂತ ಮಾಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ. * ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಮತಿ ವೀಣಾ ನೋಬಲ್ ದಾಸ್ ವಿಶ್ವವಿದ್ಯಾಲಯದ ಕಾಲೇಜುಗಳಿಂದ ವೇಂಕಟೇಶ್ವರ ಮತ್ತು ಪದ್ಮಾವತಿಯರ ಭಾವಚಿತ್ರಗಳನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಯೇಸುಕ್ರಿಸ್ತನ ಭಾವಚಿತ್ರ ಮತ್ತು ಶಿಲುಬೆಗಳನ್ನು ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಣೆಗೆ ತಿಲಕ ಇಡುವುದನ್ನು ನಿಷೇಧಿಸಿದ್ದಾರೆ. ೩. TTDಯಲ್ಲಿ ಉದ್ಯೋಗ * TTDಯ ಕೆಲವು ಹುದ್ದೆಗಳಿಗೆ ಕ್ರೈಸ್ತರು ಮತ್ತು ಮುಸಲ್ಮಾನರನ್ನು ಕಾನೂನು ಮೀರಿ ನೇಮಿಸಿಕೊಳ್ಳಲಾಗಿದೆ. ಹೀಗಾಗಿ ತಿರುಮಲದಲ್ಲಿ ನೆಲೆಸಿರುವ ೪೦ ಕ್ರೈಸ್ತ ಕುಟುಂಬಗಳು ಪ್ರಾರ್ಥನಾಕೂಟ, ಸಭೆಗಳನ್ನು ನಡೆಸುತ್ತಿದ್ದಾರೆ. ತೋಟಗಾರಿಕೆ ಮೇಲ್ವಿಚಾರಕರಾಗಿರುವ ಕ್ರೈಸ್ತಮತಸ್ಥರಾದ ಗೋಪೀನಾಥ್ ``ಆ ಕಪ್ಪು ಶಿಲೆಗೆ ಹೂವಿನ ಹಾರ ಏಕೆ ಹಾಕುತ್ತೀರಿ?'' ಎಂದು ಶ್ರೀ ವೇಂಕಟೇಶ್ವರನ ಮೂರ್ತಿಯನ್ನು ಭಕ್ತಾದಿಗಳ ಎದುರೇ ನಿಂದಿಸುತ್ತಾರೆ. ಗುತ್ತಿಗೆ ಕೆಲಸಗಾರರನ್ನು (Contract employees) ತೆಗೆದುಕೊಳ್ಳುವಾಗಲೂ ಹಿಂದುಗಳಲ್ಲದವರನ್ನು ಕಾನೂನಿನ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತಿದೆ. ಸುಮಾರು ೪೦ ಮುಸ್ಲಿಂ ಕುಟುಂಬಗಳು ಅಂಗಡಿ ಮುಂಗಟ್ಟು ತೆರೆದು ತಿರುಮಲದಲ್ಲಿ ನೆಲೆಸಿವೆ. ೪. ತಿರುಮಲದಲ್ಲಿ ನಡೆಯುತ್ತಿರುವ ಇತರ ಕಾನೂನುಬಾಹಿರ ಚಟುವಟಿಕೆಗಳು * TTD ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಶ್ರದ್ಧೆಯ ಫಲವಾಗಿ ತಿರುಮಲ-ತಿರುಪತಿಯಲ್ಲಿ ಮದ್ಯಮಾರಾಟ, ಮಾಂಸಮಾರಾಟ, ಜೂಜು, ಗೋಹತ್ಯೆಯಂತಹ ಘೋರಕೃತ್ಯಗಳು ನಡೆಯುತ್ತಿವೆ. * ನಾಗಲಾಪುರದ TTD ಕಲ್ಯಾಣಮಂಟಪವನ್ನೇ ಕ್ರೈಸ್ತ ಪಾದ್ರಿಗಳು ತಮ್ಮ ಪ್ರಾರ್ಥನಾಸಭೆಗಳಿಗೆ ಉಪಯೋಗಿಸುತ್ತಿದ್ದಾರೆ. * ಹೊಸದಾಗಿ ರಚನೆಯಾಗಿರುವ TTDಯ ಮಂಡಳಿಗೆ ಮತಾಂತರಿತ ವ್ಯಕ್ತಿ ಶ್ರೀ ರೋಸಯ್ಯ, IAS ರವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ತಿರುಮಲದಲ್ಲಿ ಭಕ್ತಾದಿಗಳ ಇಚ್ಛೆಗೆ ವಿರುದ್ಧವಾಗಿ mallಗಳು, food courtಗಳು ಮುಂತಾದ ಮನರಂಜನಾ ಚಟುವಟಿಕೆಗಳನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಲು ಮುಂದಾಗಿದೆ. ೫. ಪವಿತ್ರ ಸಪ್ತಗಿರಿ `ತಿರುಮಲದ ಎಲ್ಲ ಏಳು ಬೆಟ್ಟಗಳೂ ಶ್ರೀ ವೇಂಕಟೇಶ್ವರನ ಅಧೀನ, ಅವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ' ಎಂದು ಆಂಧ್ರಪ್ರದೇಶದ ಉಚ್ಚನ್ಯಾಯಾಲಯದ ವಿಭಾಗೀಯ ಪೀಠವು ತನ್ನ ತೀರ್ಪೊಂದರಲ್ಲಿ ಆದೇಶ ಹೊರಡಿಸಿದೆ. ಈ ತೀರ್ಪನ್ನು ಮತ್ತು ಕೋಟ್ಯಂತರ ಭಕ್ತಾದಿಗಳ ಭಾವನೆಗಳನ್ನು ತಿರಸ್ಕರಿಸಿ ತಿರುಮಲದ ಎರಡೇ ಬೆಟ್ಟಗಳನ್ನೊಳಗೊಂಡ ಸುಮಾರು ೨೭ ಚದರ ಕಿ. ಮೀ. ಕ್ಷೇತ್ರವನ್ನು ಮಾತ್ರ ತಿರುಮಲದ ಅಧೀನಕ್ಕೆ ಬಿಟ್ಟು ಉಳಿದ ಕ್ಷೇತ್ರವನ್ನು ಅದರ ವ್ಯಾಪ್ತಿಯಿಂದ ಹೊರತೆಗೆದು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಯೋಚನೆ ನಡೆದಿದೆ. ೬. TTDಯ ಸಂಪನ್ಮೂಲ `ಹಿಂದು ಧರ್ಮ ಪರಿರಕ್ಷಣಾ ಸಮಿತಿ'ಯ `ಹಿಂದು' ಪದ ಕೈಬಿಟ್ಟು ಅದನ್ನು `ಧರ್ಮ ಪ್ರಚಾರ ಪರಿಷತ್' ಎಂದು ಮರುನಾಮಕರಣ ಮಾಡಲಾಗಿದೆ. ತಿರುಮಲದಲ್ಲಿ ಭಕ್ತಾದಿಗಳ ಕೊಡುಗೆಯಿಂದ ಸಂಗ್ರಹವಾಗುವ ಧನರಾಶಿಯು ಹಿಂದುಧರ್ಮದ ಪ್ರಚಾರಕ್ಕಾಗಿ, ತತ್ಸಂಬಂಧಿತ ಉಪನ್ಯಾಸಗಳು, ಹರಿಕಥೆ, ಪ್ರವಚನ, ಗಾಯನಸಭೆ ಇತ್ಯಾದಿಗಳಿಗೆ, ಹಿಂದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿನಿಯೋಗವಾಗಬೇಕಿತ್ತು. ಆದರೆ, ಇಂತಹ ಕಾರ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಮಾಡುತ್ತಲೇ ಇಲ್ಲ. ಬದಲಾಗಿ ಇತರ ಚಟುವಟಿಕೆಗಳಿಗೆ ಹಣವನ್ನು ವಿನಿಯೋಗಿಸಲಾಗುತ್ತಿದೆ. ಬಹುದೊಡ್ಡ ಜಾಗವನ್ನು ಮಸೀದಿ ಕಟ್ಟಲು ದಾನ ಮಾಡಲಾಗಿದೆ. ಸಮಿತಿಯ ಸದಸ್ಯರು: ಶ್ರೀ ಜಸ್ಟಿಸ್ ಜಿ. ಬಿಕ್ಷಾಪತಿ, ನಿವೃತ್ತ ನ್ಯಾಯಾಧೀಶರು, ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಶ್ರೀ ಟಿ. ಎಸ್. ರಾವ್, IPS, ನಿವೃತ್ತ ಪೋಲೀಸ್ ಮಹಾ ನಿರ್ದೇಶಕರು, ಆಂಧ್ರಪ್ರದೇಶ ಸರಕಾರ ಶ್ರೀಮತಿ ಡಾ ಪಿ. ಗೀರ್ವಾಣಿ, ನಿವೃತ್ತ ಉಪಕುಲಪತಿ, ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ತಿರುಪತಿ ಶ್ರೀ ಡಾ ಆರ್. ಶ್ರೀಹರಿ, ನಿವೃತ್ತ ಉಪಕುಲಪತಿ, ದ್ರವಿಡ ವಿಶ್ವವಿದ್ಯಾಲಯ, ಕುಪ್ಪಂ Posted by ಒಬ್ಬ ಓದುಗ at 1:51 PM 9 comments: Labels: ಮತಾಂತರ Thursday, August 03, 2006 ಇಂಡಿಯಾ, ನಿನ್ನನ್ನು ಆಳಲು ಒಬ್ಬ ಶುದ್ಧ ಇಂಡಿಯನ್ ಇಲ್ಲವಾ ? ರವಿ ಬೆಳಗೆರೆ ಇನ್ನು ಮೇಲೆ ಜಗತ್ತಿನ ಯಾವುದೇ ದೇಶದ ಯಾವುದೇ ಪತ್ರಿಕೆ ಸುದ್ದಿ ಬರೆದರೂ, `ಇಟಲಿ ಮೂಲದ ಭಾರತದ ಪ್ರಧಾನಿ ಸೋನಿಯಾಗಾಂ ಏನೆಂದರೆಂದರೆ... ' ಅಂತಲೇ ಬರೆಯುತ್ತದೆ. ಇತಿಹಾಸ ರಿಪೀಟಾಗಿದೆ. ಭಾರತ ಇನ್ನೊಂದು ಸಲ ವಿದೇಶದವರ ಆಳ್ವಿಕೆಗೆ ಒಳಪಟ್ಟಿದೆ. ನೂರು ಕೋಟಿ ಜನರಿರುವ ದೇಶಕ್ಕೆ ಒಬ್ಬೇ ಒಬ್ಬ ಭಾರತೀಯ ಪ್ರಧಾನಿಯನ್ನು ಹುಡುಕಲಾಗಲಿಲ್ಲ. ಇದಲ್ಲವೇ ದುರಂತ? ಇದು ನಾಚಿಕೆಗೇಡು. ವಂದೇ ಮಾತ ರೋಮ್!' ಅಂತ ಬಿಜೆಪಿಯವರು ಒಬ್ಬರಾದ ಮೇಲೊಬ್ಬರಂತೆ ಮೊಬೈಲುಗಳಿಗೆ ಮೆಸೇಜು ಕಳಿಸಿ ನಿಡುಸುಯ್ಯುತ್ತಿದ್ದಾರೆ. ಮತ್ತೆ ನೆಹರೂ ಕುಟುಂಬದ ಕೂಸು ಕೆಂಪುಕೋಟೆಯ ಬುರುಜಿನ ಮೇಲೆ ನಿಂತು ಆಗಸ್ಟ್ ಪಂದ್ರಾದ ಪತಾಕೆ ಹಾರಿಸುವ ಕಾಲ ಬಂದಿದೆ. ಇಲ್ಲಿ ಎಸ್ಸೆಂ ಕೃಷ್ಣ, ಪಕ್ಕದಲ್ಲಿ ನಾಯುಡು ಕೆತ್ತಾ ಪತ್ತಾ ಒದೆ ತಿಂದಿದ್ದಾರೆ. ಕೃಷ್ಣ ಒಬ್ಬರೇ ಅಲ್ಲ: ಅವರೊಂದಿಗೆ ಅನೈತಿಕ ಸಂಧಾನಗಳನ್ನು ಮಾಡಿಕೊಂಡ ಮಾದೇಗೌಡ, ರೈತ ಸಂಘದ ಪುಟ್ಟಣ್ಣನಯ್ಯನಂಥವರು ಕೂಡಾ ತಪರಾಕಿ ತಿಂದಿದ್ದಾರೆ. ಮೋಟಮ್ಮ, ಸಗೀರ್, ವಿಶ್ವನಾಥ್, ಮಲಕರೆಡ್ಡಿ ಮುಂತಾದ ಸಜ್ಜನ ಮಂತ್ರಿಗಳನ್ನು ಸೋಲಿಸಿದ ಕೈಯಲ್ಲೇ ಜಯಚಂದ್ರ, ದಿವಾಕರ ಬಾಬು, ಬೆಂಕಿ ಮಹದೇವ, ಚಂದ್ರೇಗೌಡ, ಉಸ್ತಾದ್, ರಮನಾಥ ರೈ, ಚಿಂಚನಸೂರ, ಶ್ರಿಕಂಠಯ್ಯ, ಕಮರುಲ್ಲ ಇಸ್ಲಾಂರಂತಹದ ನೀಚ ಮಂತ್ರಿಗಳನ್ನೂ ಮತದಾರ ಕೆನ್ನೆಗೆ ಬಾರಿಸಿ ಮನೆಗೆ ಕಳಿಸಿದ್ದಾನೆ. ಈ ಸೋಲು, ಅವಮಾನ, ಹೀನಾಯ ಸ್ಥಿತಿಯ ಅಷ್ಟೂ ಜವಾಬ್ದಾರಿ ಕೃಷ್ಣರದು ಮತ್ತು ಅವರ ಮೂರ್ಖತನದ್ದು. ಎಸ್ಸೆಂ ಕೃಷ್ಣ ಕೆಲವು ಎಚ್ಚರಿಕೆಗಳನ್ನು ಸಾರಾಸಗಟಾಗಿ ignore ಮಾಡಿದರು. ಆರಂಭದಿಂದಲೂ ಅವರು ಜನರ ಕಣ್ಣಿಗೆ ಮಿತ್ರನಾಗಿ ಕಾಣಲಿಲ್ಲ. ಅವರ ಮಿತ್ರರ್‍ಯಾರೂ ಜನಸಾಮಾನ್ಯರ ದೃಷ್ಟಿಯಲ್ಲಿ ಗೌರವವಂತರಾಗಿರಲಿಲ್ಲ. ಪಂಚತಾರಾ ಹೊಟೇಲುಗಳಲ್ಲಿ ಸಣ್ಣ ಪ್ರಾಯದ ಹುಡುಗಿಯರ ಜೀವ ಹಿಸುಕುತ್ತ ಕೂತಿರುತ್ತಿದ್ದ ನಾರಾಯಣ-ಕೃಷ್ಣರ ಅರ್ಧಕಾಲದ ಆಡಳಿತ ನುಂಗಿದರು. ಇನ್ನರ್ಧ ನುಂಗಿದವನು yellow pages ನ ರಾಘವೇಂದ್ರ ಶಾಸ್ತ್ರಿ . ಅವನೇನು ರಾಜಕಾರಣಿಯೇ? ಅಕಾರಿಯೇ? ಆಡಳಿತ ಬಲ್ಲವನೇ? ಬುದ್ಧಿಜೀವಿಯೇ? ಇದ್ಯಾವುದೂ ಅಲ್ಲ. ಅಂಥವನನ್ನು ಸದಾ ಬೆನ್ನಿಗೆ ಶನಿಯನ್ನು ಕಟ್ಟಿಕೊಂಡಂತೆ ಕಟ್ಟಿಕೊಂಡು ತಿರುಗಿದ ಕೃಷ್ಣರಿಗೆ ತಾವು ಆಳುವ ಜನರ ಮನಸ್ಸೇನು ಎಂಬುದೂ ಕಡೆಗೂ ಗೊತ್ತಾಗಲಿಲ್ಲ. ಆತ ಒಬ್ಬೇ ಒಬ್ಬ ರೈತನನ್ನು ಹತ್ತಿರಕ್ಕೆಳೆದು ತಬ್ಬಿಕೊಳ್ಳಲಿಲ್ಲ. ಕೈ ಕುಲುಕಲಿಲ್ಲ, ಒಬ್ಬ ಊರಾಚಿನ ಅಸ್ಪ್ರಶ್ಯನ ಮನೆಯಲ್ಲಿ ನೀರುಕೇಳಿ ಕುಡಿಯಲಿಲ್ಲ. ಎಸ್ಸೆ ಂ ಕೃಷ್ಣ ಮತ್ತು ನಾಯುಡು ಬೀಗತನ ಮಾಡಿದ್ದೇ ಐ.ಟಿ.-ಬಿ.ಟಿ.ಯವರೊಂದಿಗೆ. ಈ ನೆಲದ ರೈತ ಸಗಾಟಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಅವರೆಡೆಗೆ ತಿರುಗಿ ಕೂಡಾ ನೋಡದ ಕೃಷ್ಣ ಜಿಲ್ಲಾಕಾರಿಗಳೊಂದಿಗೆ ವಿಡಿಯೋ ಕಾನರೆನ್ಸಿಂಗ್ ಮಾಡಿಕೊಂಡು ಕೂತರು. ಅವರ ಮೇಲೆ ರೈತರಿಗಿದ್ದ ವಿಶ್ವಾಸ ಎಕ್ಕುಟ್ಟಿ ಹೋಯಿತು. ಇಂಗ್ಲೀಷ್ ಪತ್ರಿಕೆಗಳವರು, ಟೀವಿ ಛಾನಲ್ಲುಗಳವರು ಕೈತುಂಬ ಸೈಟು ಪಡೆದು ಕೃಷ್ಣರನ್ನು ಬೆಸ್ಟು ಚೀಫ್ ಮಿನಿಸ್ಟರು ಅಂತ ಹೊಗಳಿ ಮರ್ಯಾದೆ ಕಳೆದು ಕೊಂಡರೇ ಹೊರತು ಅದನ್ನು ಮತದಾರ ನಯಾ ಪೈಸೆಯಸ್ಟು ವಿಶ್ವಾಸದಿಂದ ನೋಡಲಿಲ್ಲ, ಓದಲಿಲ್ಲ. ಪ್ರತೀ ವಾರ ಒಂದಲ್ಲ ಒಂದು ರೀತಿಯಲ್ಲಿ ಕೃಷ್ಣರನ್ನು ಎಚ್ಟರಿಸಿ, ಅವರ ಸುತ್ತಲಿನ ಭ್ರಷ್ಟರ ಬಗ್ಗೆ ವಿವರ ನೀಡಿ ಇಂಥವರನ್ನು ದೂರವಿಡಿ ಅಂತ ಬರೆಯಿತು `ಪತ್ರಿಕೆ'. ಆದರೆ ಎಸ್ಸೆಂ ಕೃಷ್ಣ ಪರಿಮಳ ನಾಗಪ್ಪನವರ ಮನೆಬಾಗಿಲಲ್ಲಿ ನಿಂತು ಅದನ್ಯಾಕೆ ಓದ್ತೀರಿ? ಪುಂಡ ಪೋಕುರಿಗಳ ಪತ್ರಿಕೆಯನ್ನ? ಅಂದರು. ಅದೇ ಪರಿಮಳ ನಾಗಪ್ಪ ಇವತ್ತು ಕೃಷ್ಣರ ಪುಂಡು ಪೋಕರಿ ಶಿಷ್ಯರ ಮುಖಕ್ಕೆ ಎಕ್ಕಡದಲ್ಲಿ ಹೊಡೆದಂತೆ ಗೆದ್ದಿದ್ದಾರೆ. ಶುದ್ಧ ಅರ್ಬನ್ ಮತದಾರರನ್ನು ಓಲೈಸಿಕೊಂಡೇ ನಾಲ್ಕೂವರೆ ವರ್ಷ ಕಳೆದ ಕೃಷ್ಣ ಚಾಮರಾಜಪೇಟೆಯಲ್ಲಿ ಪಡೆದ ಓಟುಗಳಾದರೂ ಎಷ್ಟು? ಒಬ್ಬ ಬೆಸ್ಟು ಚೀಫ್ ಮಿನಿಸ್ಟರು ಪಡೆಯಬೇಕಾದ ಲೀಡಾ ಅದು? ಇನ್ನು ರಾಜ್ಯದ ರಾಜಕಾರಣದಲ್ಲಿ ಕೃಷ್ಣರಿಗೆ ಕವಡೆ ಕಾಸಿನ ಕಿಮ್ಮತ್ತೂ ಉಳಿದಿಲ್ಲ. ಅವರು ಸೈಟು ಕೊಟ್ಟು ಬೆನ್ನು ಕೆರೆಸಿಕೊಂಡ ಪತ್ರಕರ್ತರೇ ಕೃಷ್ಣರ ಮನೆ ಕಂಪೌಡಿನ ಬಳಿ ಸುಳಿಯುತ್ತಿಲ್ಲ. ಆದರೆ ರಾಜ್ಯದ ರಾಜಕೀಯ ಭವಿಷ್ಯ ಅತಂತ್ರಕ್ಕೆ ಬಿದ್ದಂತಾಗಿದೆ. ದೇವೇಗೌಡ ಕಾಂಗ್ರೆಸ್ ಸೇರಿ ಸರಕಾರ ರಚಿಸುತ್ತಾರೆ. ಅಂದರೆ ಬರಲಿರುವ ದಿನಗಳಲ್ಲಿ ರಾಜ್ಯಾದ್ಯಂತ ಕದನ ಕುತೂಹಲ ರಾಗದ ಮ್ಯಾಳವೇ! ದೇವೇಗೌಡರನ್ನು ಖುದ್ದು ಅವರ ಮಕ್ಕಳು ಸಹಿಸಿಕೊಳ್ಳುವುದು ಕಷ್ಟ. ಈಗಾಗಲೇ ಸಿದ್ರಾಮಯ್ಯ ಮುಖ್ಯಮಂತ್ರಿಯಾಗ ಕೂಡದು ಎಂಬ ರಾಗ ಆರಂಭವಾಗಿದೆ. ಮುಂದೆ ಏನನ್ನು ಕಾಣಲಿಕ್ಕಿದೆಯೋ? ಒಂದೇ ಸಂತೋಷವೆಂದರೆ ಮೂರು ಪಕ್ಷಗಳ ಪೈಕಿ ಯಾವ ಪಕ್ಷ ಒಪೋಸಿಷನ್‌ನಲ್ಲಿ ಕುಳಿತರೂ, ರಾಜ್ಯದಲ್ಲಿ ಒಂದು ಪ್ರಬಲ ಮತ್ತು vibrant ಆದ ವಿರೋಧ ಪಕ್ಷವಾಗಿ ವರ್ತಿಸಬೇಕಾಗುತ್ತದೆ. ಕೆಲವರ ಗೆಲುವುಗಳು ನಿಜಕ್ಕೂ ಈ ಸಲದ ಅಸೆಂಬ್ಲಿ ಹಾಲಿಗೆ ಚುರುಕು, ರಂಗು ಮತ್ತು ಕಳೆ ತಂದಿತ್ತಿವೆ. ಶಿರಾದ ಸತ್ಯನಾರಾಯಣ, ರಮೇಶ್ ಕುಮಾರ್, ಕೆ.ಆರ್.ಪೇಟೆ ಕೃಷ್ಣ , ವಾಟಾಳ್ ನಾಗರಾಜ್, ಎವಿ ರಾಮಸ್ವಾಮಿ, ಮಹಿಮಾ ಪಟೇಲ್, ಕುಮಾರ್ ಬಂಗಾರಪ್ಪ ಮುಂತಾದವರ ಗೆಲುವು ನಿಜಕ್ಕೂ ಸ್ವಾಗತಾರ್ಹ. ಆ ಮಟ್ಟಿಗೆ `ಪತ್ರಿಕೆ' ಯಾರ್‍ಯಾರು ಗೆಲ್ಲ ಬೇಕು ಅಂತ ಬಯಸಿತ್ತೋ, ಯಾರ್‍ಯಾರು ಗೆಲ್ಲುತ್ತಾರೆ ಅಂತ ಅಂದುಕೊಂಡಿತ್ತೋ, ಆ ಪಟ್ಟಿಯಲ್ಲಿ ೯೦% ನಷ್ಟು ನಿರೀಕ್ಷೆಗಳು ನಿಜವಾಗಿವೆ. ಕಳೆದ ಎಂಟು ವರ್ಷಗಳಿಂದ ಶತಾಯಗತಾಯ ವಿರೋಸಿಕೊಂಡು ಬಂದಿದ್ದ ಮಾಲಿಕಯ್ಯ ಗುತ್ತೇದಾರ ಮತ್ತು ಸುಭಾಷ್ ಗುತ್ತೇದಾರ ಎಂಬ ಹಂತಕರಿಬ್ಬರೂ ಸೋತು ಸರ್ವನಾಶವಾಗಿದ್ದಾರೆ. ಶಿವರಾಮೇಗೌಡನ ಸೋಲಿದೆಯಲ್ಲ ? ಅದನ್ನೇನು ನಾನು `ಪತ್ರಿಕೆ'ಯ ದಿಗ್ವಿಜಯ ಅಂತ ಭಾವಿಸಿಲ್ಲ. ಒಂದು ಹುಳು ಸೋಲಬೇಕಿತ್ತು ; ಸೋತಿದೆ. ಅದೇ ರೀತಿಯ ಮರ್ಡರಸ್ ರಾಜಕಾರಣಿ ಬಚ್ಚೇಗೌಡ, ಕೆ.ಆರ್.ಪೇಟೆಯ ಚಂದ್ರ ಶೇಖರ, ಕೆರೆಗೋಡು ಶಿವಕುಮಾರ, ಗಾಂ ನಗರದ ಬಾಂಬ್ ನಾಗ, ಸಾಗರದ ಕಾಗೋಡು ತಿಮ್ಮಪ್ಪ ಮುಂತಾದವರು ಸೋತಿದ್ದಾರೆ. ಹಂಗ್ ಅಸೆಂಬ್ಲಿ ಆಗುತ್ತಿರುವುದು ಬೇಸರದ ಸಂಗತಿಯೇ ಆದರೂ, ಕರ್ನಾಟಕದ ಮಟ್ಟಿಗೆ ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಇನ್ನೂ ಒಂದಿಷ್ಟು ಉಳಿಸಿಕೊಂಡು ಬಂದಿರುವ ಜಾತ್ಯತೀತ ಜನತಾದಳ ಈ ಬಾರಿ ಪ್ರಖರಗೊಂಡಿರುವುದು ಸಮಾಧಾನದ ಸಂಗತಿ. ಹಡಗಲಿಯಿಂದ ಪ್ರಕಾಶ್, ಕನಕಪುರದಿಂದ ಸಿಂಧ್ಯಾ, ನಂಜನಗೂಡಿನಿಂದ ಜಯಕುಮಾರ್ ಮುಂತಾದವರು ಗೆದ್ದು ಬಂದಿರುವುದು ಆರೋಗ್ಯವಂತ ಲಕ್ಷಣವೇ. ಒಂದು ಕಡೆಯಿಂದ ಲೆಕ್ಕ ಹಾಕಿ ನೋಡಿದರೆ, ನನಗೆ ವೈಯುಕ್ತಿಕವಾಗಿ ಪರಿಚಯವಿರುವ ಸುಮಾರು ಇಪ್ಪತ್ತು ಶಾಸಕರು ಸಾಲಿಟ್ಟು ಗೆದ್ದು ಬಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಪೈಕಿ ಎಷ್ಟು ಜನ ಶತ್ರುಗಳಾಗುತ್ತಾರೋ? ಆ ಮಾತು ಬೇರೆ. ಆದರೆ ಹೊಸ ಸರಕಾರ , ಹೊಸ ಕಾಂಬಿನೇಷನ್ನು, ಹೊಸ ಮುಖಗಳು ಎಲ್ಲ ಸೇರಿ ಒಂದು ಹೊಸ ವಾತಾವರಣ ಮತ್ತು ಒಂದು ಹೊಸ hope ಸೃಷ್ಟಿಸಿದರೆ ಅದಕ್ಕಿಂತ ಸಂತೋಷ ಇನ್ನೊಂದಿರಲಾರದು. ಬಸವನಗುಡಿಯಿಂದ ಗೆದ್ದು ಬಂದಿರುವ ಚಂದ್ರಶೇಖರ್‌ರಂತಹ ಮಿತ್ರರೂ ಕಾಂಗ್ರೆಸ್‌ನಲ್ಲೇ ಇದ್ದರೂ, ನನ್ನಂಥವರಲ್ಲಿ ಒಂದು ಆಸೆ ಮೂಡಿಸುತ್ತಾರೆ. ಅಷ್ಟರಮಟ್ಟಿಗೆ ಆ ಚುನಾವಣೆಗಳು ತೃಪ್ತಿಕರವೇ. ಆದರೆ ಪ್ರಧಾನಿಯಾಗಿ ಸೋನಿಯಾ ಗತಿ ಮತ್ತು ಭಾರತದ ಗತಿ ಏನಾಗಲಿದೆಯೋ ಎಂಬ ಕಳವಳಕ್ಕೆ ನಿಮ್ಮಂತೆಯೇ ನಾನೂ ಬಿದ್ದಿದ್ದೇನೆ. ಆಕೆ ವಿದೇಶಿಯಳು ಎಂಬುದು ಸುಲಭಕ್ಕೆ ಮರೆಯುವಂಥ ಮಾತಲ್ಲ. ನಮ್ಮ ಇಂದಿರಮ್ಮನ ಸೊಸೆಯಲ್ವಾ? ಇಷ್ಟು ವರ್ಷ ಇದ್ದ ಮೇಲೆ ನಮ್ಮ ಮನೆಯ ಹೆಣ್ಣು ಮಗಳೇ ಬಿಡು ಅಂತಾ ಅಂದುಕೊಳ್ಳುತ್ತೇವಾದರೂ, ಈ ದೇಶದ ಪ್ರಧಾನಿಯಾಗಿ ಆಕೆ ಇನ್ನೊಂದು ದೇಶದೊಂದಿಗೆ ವ್ಯವಹರಿಸುವಾಗ ಇಡೀ ದೇಶ ಒಂದು ಆತಂಕಕ್ಕೆ, ಅನುಮಾನಕ್ಕೆ ಬೀಳುವುದು ಸಹಜ. ಈ ಹಿಂದೆ ಹೊರಗಿನಿಂದ ಆಪತ್ತುಗಳು ಬಂದಾಗ ನಮ್ಮ ನೆಹರೂ, ನಮ್ಮ ಶಾಸ್ತ್ರೀಜಿ, ನಮ್ಮ ರಾಜೀವ್, ನಮ್ಮ ವಾಜಪೇಯಿ- ಇವರೆಲ್ಲ `ನೋಡ್ಕೋತಾರೆ ಬಿಡು'ಎಂಬಂಥ ಅನಿಸಿಕೆಯೊಂದು ಮನಸ್ಸಿನಲ್ಲಿರುತ್ತಿತ್ತು. ಆದರೆ ಸ್ವತಃ ಸೋನಿಯಾ ವಿದೇಶಿ ಮೂಲದವರಾಗಿರುವಾಗ ಆಕೆಯ ನಿಲುವು ಅದೆಷ್ಟರ ಮಟ್ಟಿಗೆ ಭಾರತದ ಆಸಕ್ತಿಗಳನ್ನು protect ಮಾಡುತ್ತದೋ ಎಂಬ ಆತಂಕ ಎಂಥವರನ್ನೂ ಕಾಡಿಯೇ ಕಾಡುತ್ತದೆ. ತನ್ನ ಅತ್ತೆ ಕೊಲೆಯಾಗಿ, ಆಕೆಯ ಶವದೆದುರೇ ರಾಜೀವ್ ಗಾಂ ಭಾರತದ ಪ್ರಧಾನಿಯಾಗಲು ಅಣಿಯಾದಾಗ ಇದೇ ಸೋನಿಯಾ ದೊಡ್ಡ ದನಿಯಲ್ಲಿ ಹಟ ತೆಗೆದಿದ್ದರು. ಈ ರಾಜಕೀಯ, ಈ ದೇಶ ನಮಗೆ ಹೇಳಿ ಮಾಡಿಸಿದ್ದುದಲ್ಲ ಅಂದಿದ್ದರು. ಈಗ ಅದೇ ಸೋನಿಯಾ ಪ್ರಧಾನಿಯಾಗುತ್ತಿದ್ದಾರೆ. ಅವರನ್ನು ಮುಲಾಯಂ, ಶರದ್‌ಪವಾರ್, ಲಾಲೂ, ದೇವೇಗೌಡ, ಜ್ಯೋತಿ ಬಸು, ಸುರ್ಜಿತ್- ಹೀಗೇ ಘಟಾನುಘಟಿಗಳು ಒಪ್ಪಿಕೊಂಡಾಗಿದೆ. ವಿದೇಶಿ ಮೂಲದ issue ಈಗ ದೊಡ್ಡ ಸಂಗತಿಯಾಗಿ ಉಳಿದಿಲ್ಲ. ಸುಪ್ರಿಂ ಕೋರ್ಟ್ ಕೂಡಾ ಆಕೆಯನ್ನು ಶುದ್ಧ ಭಾರತೀಯಳೆಂದು ಘೋಷಿಸಿಯಾಗಿದೆ. ಆ ಮಾತು ಅಲ್ಲಿಗೆ ಬಿಡೋಣ. ಆದರೆ ಇವತ್ತಿನ ಭಾರತದ ರಾಜಕೀಯ ಸ್ಥಿತಿ ನೋಡಿ? ಇಡೀ ದೇಶ ನಾನಾ ನಮೂನೆಯ ಪಾಳೆಯಗಾರರ ಕೈಗೆ ಸಿಕ್ಕುಹೋಗಿದೆ. ಆ ರಾಜ್ಯಕ್ಕೆ ಅವನೇ ನಾಯಕ! ಅಂಥವರನ್ನೆಲ್ಲ ಒಟ್ಟುಗೂಡಿಸಿ ಒಂದು ಸರ್ಕಾರ ಅಂತ ರಚಿಸಿ ಹೇಗೋ ರಾಜ್ಯಭಾರ ತೂಗಿಸಿಕೊಂಡು ಹೋಗಬಹುದು ಮತ್ತು ಹೋಗಲೇ ಬೇಕು ಎಂಬುದನ್ನು ತೋರಿಸಿಕೊಟ್ಟದ್ದು ವಾಜಪೇಯಿ. ಆ ತಾಕತ್ತು ಆತನಿಗಿತ್ತು. ಆದರೆ ಸೋನಿಯಾಗೆ ಅಂಥ vision, ಅಂಥ ನಾಯಕತ್ವ, ಅಂಥಾ ಮುತ್ಸದ್ದಿತನ ಇದೆಯಾ ಎಂಬುದೇ ಪ್ರಶ್ನೆ. ರಾಜಕಾರಣದ ಪಾಠಗಳನ್ನು ಸೋನಿಯಾ ತನ್ನ ಅತ್ತೆಯಂತೆ ರಾತ್ರೋರಾತ್ರಿ ಕಲಿತ ಬುದ್ಧಿವಂತೆಯಲ್ಲ. ಆಕೆ ಚದುರಂಗದಲ್ಲಿ ಪಳಗಲಿಕ್ಕೆ ವರ್ಷಗಳೇ ಬೇಕಾದವು. ಇವತ್ತಿಗೂ ಆಕೆಯ ಮುಖದಲ್ಲಿ ಒಬ್ಬ ಆಡಳಿತಗಾರ್ತಿ ಕಾಣುವುದಿಲ್ಲ. ಈ ತೆರನಾದ ಪ್ರಾದೇಶಿಕ, ಪಾಳೇಗಾರಿ ಪಕ್ಷಗಳು, ಅನನುಭವಿ ನಾಯಕಿ, ಆಕೆಯ ಸುತ್ತಲಿನ ಭಟ್ಟಂಗಿ ಕೂಟಗಳು ಇವೆಲ್ಲ form ಆದಾಗಲೇ ದೇಶ ಆಪತ್ತಿಗೆ ಬೀಳುವ ಅಪಾಯವಿರುತ್ತದೆ. ಅಲ್ಲದೆ, ಇಂದಿರಾಗಾಂ ಆಳಿದ ಕಾಲಕ್ಕೂ ಸೋನಿಯಾ ಆಳಲಿರುವ ಕಾಲಕ್ಕೂ ಹೋಲಿಸಿಕೊಂಡರೆ ದೇಶದ ಸಮಸ್ಯೆಗಳು ಅಗಾಧ ಮತ್ತು ಆತಂಕಕಾರಿ ಸ್ಥಿತಿ ತಲುಪಿವೆ. ಜಾಗತೀಕರಣ ನಮ್ಮ ವ್ಯಾಪಾರಿಗಳನ್ನ, ಉದ್ದಿಮೆದಾರರನ್ನ ತಿಂದು ಹಾಕಿ ಬಿಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಹಳ್ಳಿಹಳ್ಳಿಯನ್ನೂ ಕಂಗೆಡಿಸಿದೆ. ವಾಜಪೇಯಿ ಕಾಲದ ವಿತ್ತ ನೀತಿ ಷೇರು ಮಾರುಕಟ್ಟೆಯನ್ನು ನಾಶ ಮಾಡಿ ಹಾಕಿದೆ. ಇವರು ಪ್ರತಿಯೊಂದನ್ನು disinvestment ಮಾಡಿ, ಸರ್ಕಾರಿ ಉದ್ದಿಮೆಗಳನ್ನು ಮಾರಿ ಕಾರ್ಮಿಕ ವಲಯದಲ್ಲಿ ದುರ್ಭರವಾದ ಹತಾಶ ಸ್ಥಿತಿ ಉಂಟುಮಾಡಿದ್ದಾರೆ. ಕೋಟ್ಯಂತರ ಜನಕ್ಕೆ ಉದ್ಯೋಗ ಬೇಕು, ನೀರು ಬೇಕು, ರಸ್ತೆಗಳು ಬೇಕು, ಮುಂದೆ ಬದುಕು ಹಸನಾದಿತೆಂಬ hope ಬೇಕು. ಸೋನಿಯಾ ಕೈಯಲ್ಲಿ ಅದನ್ನೆಲ್ಲ ಕೊಡಮಾಡಲು ಸಾಧ್ಯವಾದೀತೇ? ಸಾಧ್ಯವಾಗಲೀ ಅಂತಲೇ ಇಟ್ಟುಕೊಳ್ಳೋಣ. ಆದರೂ ನೂರು ಕೋಟಿ ಜನ ಸಂಖ್ಯೆಯಿರುವ ಈ ರಾಷ್ಟ್ರಕ್ಕೆ, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ಸಿಗೆ ಒಬ್ಬ ಭಾರತೀಯ ಪ್ರಜೆಯನ್ನು ಪ್ರಧಾನಿಯನ್ನಾಗಿ ಆಯ್ಕೆಮಾಡಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ? ಅದು ನಿಜಕ್ಕೂ ನೋವೇ.
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ಮೈಸೂರು: ದಲಿತರ ವಿಳ್ಯೆದೆಲೆ ತೋಟಗಳನ್ನು ಉಳಿಸಬೇಕು. 245 ವಿಳ್ಯೆದೆಲೆ ವ್ಯವಸಾಯಗಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ವಿಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ ಆಶ್ರಯದಲ್ಲಿ ನೂರಾರು ಮಂದಿ ಬುಧವಾರ ಮೈಸೂರಿನಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು. ಮೈಸೂರು ನ್ಯಾಯಾಲಯ ಎದುರಿನ ಗಾಂದಿ ಪುತ್ಥಳಿ ಬಳಿಯಿಂದ ಅರೆ ಬೆತ್ತಲೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದು ಅಲ್ಲಿ ಧರಣಿ ಕುಳಿತರು. ವಿಳ್ಯೆದೆಲೆ ಬೆಳೆದು ಜೀವನ ನಿರ್ವಹಿಸುತ್ತಿದ್ದ ಕುಟುಂಬಗಳು ಕೆಲವು ರಿಯಲ್ ಎಸ್ಟೇಟ್ ದಂಧೆಕೋರರ ಕುತಂತ್ರದಿಂದ ಬೀದಿ ಪಾಲಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಶೋಕಪುರಂ ಜನತೆಗೆ ದೇವರಾಜು ಅರಸು ಮತ್ತು ಬಸವಲಿಂಗಪ್ಪನವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ 1976ರ ಅಡಿ ಸಿಕ್ಕಿದ್ದ ತುಂಡು ಭೂಮಿಯಲ್ಲಿ ನಮ್ಮ ಹಿರಿಯರು ವಿಳ್ಯೆದೆಲೆ ಬೇಸಾಯ ಮಾಡಿಕೊಂಡು ವಿಶ್ವವೇ ಕೊಂಡಾಡುವಂತೆ ಮೈಸೂರಿನ ಖ್ಯಾತಿಯನ್ನು ಮುಗಿಲೆತ್ತರಕ್ಕೆ ಬೆಳೆಸಿದ್ದರು. ಆದರೆ ಇಂತಹ ಚಿನ್ನದ ಭೂಮಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಹಲವರು ದಲಿತ ಸಮುದಾಯದವರ ಜೀವನವನ್ನು ಹಾಳು ಮಾಡಿದ್ದಾರೆ. ಇವರಿಗೆ ಕೆಲವು ದಲಿತ ನಾಯಕರೇ ಮಧ್ಯವರ್ತಿಯಾಗಿ ಕೆಲಸ ಮಾಡಿ, ನಮ್ಮನ್ನು ನಡು ಬೀದಿಗೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗಾಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಪರಿಶಿಷ್ಟ ಜಾತಿ, ವರ್ಗಗಳ ವಿಳ್ಯೆದೆಲೆ ಭೂಮಿಯನ್ನು ಅಕ್ರಮ ಮತ್ತು ಕಾನೂನು ಬಾಹಿರವಾಗಿ ಕ್ರಯಕ್ಕೆ ಪಡೆದು ಸದರಿ ಭೂಮಿಗಳಲ್ಲಿ ಮುನಿಸಿಪಲ್ ಆಕ್ಟ್ 1976 ಕಾಲಂ 321ನ್ನು ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ವಿಳ್ಯೆದೆಲೆ ಭೂಮಿಗಳನ್ನು ಖರೀದಿಸಿರುವ ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. 40 ವರ್ಷಗಳಿಂದಲೂ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿರುವ 245 ಜನ ವಿಳ್ಯೆದೆಲೆ ಭೂಮಿ ರೈತರಿಗೆ ಮೈಸೂರು ಮಹಾನಗರ ಪಾಲಿಕೆ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಜೆಎಸ್‍ಎಸ್ ಆಸ್ಪತ್ರೆಗಾಗಿ ಭೂಮಿ ಕಳೆದುಕೊಂಡ ವಿಳ್ಯೆದೆಲೆ ರೈತರಿಗೆ ತಲಾ 2 ಎಕರೆ ಜಮೀನು ನೀಡಬೇಕು. ಅಂದು ನೀಡಿದ್ದ ಭರವಸೆಯಂತೆ ಭೂಮಿ ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಒಂದು ಉದ್ಯೋಗ ನೀಡಬೇಕು. ಸರ್ವೆ ನಂ:16 ಮತ್ತು 17ರ ಪ್ರಕರಣ ಸಂಖ್ಯೆ ಕೆಎಲ್‍ಆರ್‍ಎಂ:3566ರಿಂದ 3539/74-75ರ ಪ್ರಕರಣದಲ್ಲಿ ಮೈಸೂರು ಹಾಗೂ ವಿಶೇಷ ಭೂ ಸ್ವಾಧೀನಾಧಿಕಾಧಿಕಾರಿಯು ಬದುಕಿರುವ ದೂರುದಾರ ವೆಂಕಟೇಶ್ ಬದುಕಿದ್ದರೂ ನಿಧನರಾಗಿದ್ದಾರೆಂದು ಉಲ್ಲೇಖಿಸಿ ಏಕ ಪಕ್ಷೀಯ ನಿರ್ಧಾರ ಕೈಗೊಂಡು ಆದೇಶ ನೀಡಿರುವ ಅಧಿಕಾರಿಯನ್ನು ಅಮಾನತುಗೊಳಿಸಿ, ತನಿಖೆ ನಡೆಸಬೇಕು. ತಾಲೂಕು ಆಡಳಿತ ಸ್ವಯಂ ಪ್ರೇರಿತವಾಗಿ 1978ರಿಂದ 1984ರವರೆಗೆ ವಿಳ್ಯೆದೆಲೆ ಭೂಮಿಗೆ ಹಕ್ಕುಪತ್ರ ಪಡೆದಿರುವ ಗೇಣಿದಾರರ ಹೆಸರಿಗೆ ಖಾತೆ ನೊಂದಣಿ ಮಾಡುವ ಆದೇಶವನ್ನು ಜಿಲ್ಲಾಡಳಿತ ಹೊರಡಿಸಬೇಕು. ಸುಮಾರು 25 ಮಂದಿಗೆ ಚಿಕ್ಕಾಟೂರಿನಲ್ಲಿ ಬದಲಿ ಭೂಮಿ ನೀಡಿರುವ ಸರ್ಕಾರ ಸದರಿ ಭೂಮಿಯಲ್ಲಿರುವ ಅಕ್ರಮದಾರರನ್ನು ತೆರವುಗೊಳಿಸಿ ವಿಳ್ಯೆದೆಲೆ ಬೆಳೆಗಾರರ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು ಆಗಿರುವ ಅನ್ಯಾಯ ಕುರಿತು ವಿವರಿಸಿದರು. ಬಳಿಕ ಜಿಲ್ಲಾಧಿಕಾರಿಗಳು, ಈ ಸಂಬಂಧ ಪಾಲಿಕೆ ಅಧಿಕಾರಿಗಳಿಂದ ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಲಾಗುವುದು. ಜು.30ರೊಳಗೆ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನಾಕಾರರು ಅನಿರ್ಧಿಷ್ಟಾವಧಿಯ ಧರಣಿ ವಾಪಸು ಪಡೆದುಕೊಂಡರು. ಪ್ರತಿಭಟನೆಯಲ್ಲಿ ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ವಿಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ ಗೌರವಾಧ್ಯಕ್ಷ ವೆಂಕಟೇಶ್, ಅಧ್ಯಕ್ಷ ಪಿ.ಕುಮಾರ್, ಉಪಾಧ್ಯಕ್ಷ ಚಿದಂಬರ, ಕಾರ್ಯದರ್ಶಿ ಜಯಶಂಕರ್, ಶ್ರೀಧರ್, ದಸಂಸದ ಬೆಟ್ಟಯ್ಯಕೋಟೆ, ಈಶ್ವರ ಚಕ್ಕಡಿ, ಶ್ರೀಧರ್ ಇನ್ನಿತರರು ಪಾಲ್ಗೊಂಡಿದ್ದರು.
ಮನುಷ್ಯನೆಂದಿಗೂ ಸಂಘಜೀವಿ. ಏಕಾಕಿಯಾಗಿಯಾಗಿ ಬದುಕುವುದು ಬಹುಶಃ ಸಾಧ್ಯವೇ ಇಲ್ಲ. ಯಾರೊಂದಿಗಾದರೂ ಮಾತುಕತೆ, ಒಡನಾಟ ಇರಲೇ ಬೇಕಾಗುತ್ತದೆ. ಎಲ್ಲವನ್ನು ತೊರೆದ ಸನ್ನ್ಯಾಸಿಗಳಿಗೂ ಗುರುಗಳದ್ದೋ, ಶಿಷ್ಯರದ್ದೋ, ನಂಬಿಕಸ್ಥರ ಸಾಂಗತ್ಯವಂತೂ ಇದ್ದೇ ಇರುತ್ತದೆ. ಅಂತರಂಗದ ಭಾವನೆಗಳನ್ನು ಬಚ್ಚಿಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಮನುಜನ ಮನಸ್ಸಿಗಂತೂ ಮುಚ್ಚಳವೇ ಇಲ್ಲವೆನ್ನಬಹುದು. ಸಂತಸವನ್ನಾಗಲೀ, ಬೇಸರವನ್ನಾಗಲೀ, ಯಾರ ಬಳಿಯಾದರೂ ಹಂಚಿಕೊಂಡಾಗಲೇ ಸಮಾಧಾನ. ಪ್ರಾಯಶಃ ಈ ವಿಷಯದಲ್ಲಂತೂ ಎಲ್ಲರ ಮನಸ್ಸಿನ ಸ್ವಭಾವವೂ ಒಂದೇ . ಶಾಲೆಯಿಂದೋಡಿಬಂದು ನಡೆದುದೆಲ್ಲವನ್ನೂ ಒಂದೇ ಉಸಿರಿಸಿನಲ್ಲಿ ಅಮ್ಮನ ಬಳಿ ಹೇಳಿ ನಿರುಮ್ಮಳವಾಗುವ ಮುಗ್ಧ ಮಗುವಿನಂತೆ. ಮನದೊಳಗಿನ ಸಂತಸವನ್ನು ಹಂಚಿಕೊಳ್ಳಲು, ಒಡಲಿನಾಳದ ವೇದನೆಗಳನ್ನು ಹೊರಹಾಕಲು, ಗೊಂದಲಗಳನ್ನು ಬಗೆಹರಿಸಿಕೊಳ್ಳಲು, ಮತ್ತು ಮುಕ್ತವಾಗಿ ಮಾತನಾಡಲು ನಮ್ಮೊಡನೆ ನಂಬಿಕೆಯ ಜನರಿರಬೇಕು. ಬಂಧುಗಳು, ಮಿತ್ರರಿರಬೇಕು. ನಮ್ಮವರೆನಿಸಿಕೊಳ್ಳುವವರು, ನಂಬಿಕಸ್ಥರು ಸದಾ ನಮ್ಮ ಜೊತೆಗಿರಬೇಕು. ಅವರು ಒಳ್ಳೆಯವರಾಗಿರಬೇಕು. ಏಕೆಂದರೆ, ನಮ್ಮೊಡನಾಡಿಗಳ ನಡೆನುಡಿಗಳ ಪ್ರಭಾವ ನಮ್ಮ ಮೇಲೂ ಪರಿಣಾಮ ಬೀರುತ್ತದೆ. ಸಹಜ ಸ್ವಭಾವವೂ ಸುತ್ತಲಿನವರ ಪ್ರಭಾವದ ಪ್ರಖರತೆಗೆ ಮಂಕಾಗುತ್ತದೆ. ಅಥವಾ ಮತ್ತಷ್ಟು ಸ್ಫುಟಗೊಳ್ಳುತ್ತದೆ. ಕೆಟ್ಟವರ ಒಡನಾಟವಿರುವವರು ದುಶ್ಚಟಗಳಿಗೆ ದಾಸರಾಗುವುದು ಖಂಡಿತ. ಸಜ್ಜನರ ಸಹವಾಸದಿಂದ ಸದ್ಗುಣಗಳ ವಿಕಾಸವಾಗುವುದೂ ನಿಶ್ಚಿತ. ಮಣ್ಣಿನ ಕೊಳೆಯನ್ನು ಮೆತ್ತಿಸಿಕೊಂಡರೆ ಮಾಣಿಕ್ಯವೂ ಕಳೆಗುಂದುತ್ತದೆ. ಹೂವಿನ ಸಹವಾಸದಿಂದ ನಾರೂ ದೇವರಿಗೆ ಹಾರವಾಗುತ್ತದೆ. ’ಸತ್ಸಂಗತಿಃ ಕಥಯ ಕಿಂ ನ ಕರೋತಿ ಪುಂಸಾಂ” ಜಗತ್ತಿಗೇ ’ಮಿತ್ರ’ ಸೂರ್ಯನಂತೆ! ಯಾಕೆ ಗೊತ್ತಾ? ನಾವೇಳಲಿ ಬಿಡಲಿ. ಕರೆಯಲಿ ಕರೆಯದಿರಲಿ. ಅನುದಿನವೂ ನಮ್ಮ ಮುಂದೆ ಅವನಂತೂ ಪ್ರತ್ಯಕ್ಷ! ಎಂದೆಂದಿಗೂ ಸಮಯಕ್ಕೆ ಸರಿಯಾಗಿ ಅವನ ಹಾಜರಾತಿ. ಸರ್ವದಾ ಪರೋಪಕಾರನಿರತನಾದ ದಿನಕರನಿಗೆ ಒಂದಿನಿತೂ ಔದಾಸೀನ್ಯವಿಲ್ಲ. ಯಾರು ಗಮನಿಸದಿದ್ದರೂ ಬೇಸರವಿಲ್ಲ. ಗುರುತಿಸಿ ಗೌರವಿಸಬೇಕೆನ್ನುವ ಆಗ್ರಹವಿಲ್ಲ. ನನ್ನಿಂದ ತಾನೇ ಇವರೆಲ್ಲರ ದಿನ ? ನಾನಿಲ್ಲದಿದ್ದರೆ ಇವರಿಗೆಲ್ಲಿಯ ಜೀವನ ? ನಾ ಬರದಿದ್ದರೆ ಇವರೇನು ಮಾಡುತ್ತಾರೆ ನೋಡೋಣ, ಎಂದು ಅಜ್ಜಿ ಸಾಕಿದ ಕೋಳಿಯಂತೆ ದರ್ಪದಿಂದ ಒಂದು ದಿನ ರಜೆ ಹಾಕಿ ಕುಳಿತವನಲ್ಲ! ಎಲ್ಲರಿಗೂ ಅವನು ಬೇಕು. ಅವನಿಗೆ ಯಾರಿಂದಲೂ ಏನೂ ಬೇಕಾಗಿಲ್ಲ. ಆದರೂ, ಬರುವಾಗ ಅವನ ಅಬ್ಬರವಿಲ್ಲ. ಹೋಗುವಾಗಲೂ ಸದ್ದಿಲ್ಲ. ಪ್ರತಿದಿನವೂ ಶಾಂತನಾಗಿಯೇ ಬರುವ ಶಾಂತನಾಗಿಯೇ ಹಿಂತಿರುಗುವ ಸೂರ್ಯನಿಗೆ ಸರಿಸಾಟಿಯಾದ ಮಿತ್ರ ಇಲ್ಲಿ ನಮಗಿನ್ನೊಬ್ಬನಿಲ್ಲ. ಮಾಡಿದ ಕಾರ್ಯ ಪುಟ್ಟದಾದರೂ, ಬೆಟ್ಟದಷ್ಟು ಬೀಗುವ ನಮ್ಮಂತಹ ಕ್ಷುಲ್ಲಕ ಬುದ್ಧಿ ಅವನದ್ದಲ್ಲ. ಅದಕ್ಕೇ ಇರಬೇಕು, ನಮ್ಮ ಬುದ್ಧಿಯನ್ನು ಸದಾ ಸನ್ಮಾರ್ಗದಲ್ಲಿರಿಸೆಂದು ಸಂಧ್ಯಾಕಾಲದಲ್ಲಿ ಅವನನ್ನೇ ಬೇಡುವುದು. ” ಧಿಯೋ ಯೋ ನಃ ಪ್ರಚೋದಯಾತ್” ಸನ್ಮಿತ್ರನೆಂದರೆ ’ಸೂರ್ಯ’ ನಂಥವನು. ಒಳ್ಳೆಯ ಗುಣಗಳಿಗೆ ಬೆಳಕು ಚೆಲ್ಲುವವನು. ಸದ್ಬುದ್ಧಿಗೆ ಪ್ರಚೋದಕನು. ತಪ್ಪೆಸಗದಂತೆ ತಡೆಯುವವನು. ದೌರ್ಬಲ್ಯಗಳನ್ನು ಮರೆಮಾಚಿ, ಒಳ್ಳೆಯತನವನ್ನು ಹೊರಗೆಡಹುವವನು. ಕಷ್ಟಕಾಲದಲ್ಲೂ ಕೈಬಿಡದವನು. ಅಗತ್ಯಕ್ಕೆ ನೆರವಾಗುವವನು. ಪಾಪಾನ್ನಿವಾರಯತಿ ಯೋಜಯತೇ ಹಿತಾಯ ಗುಹ್ಯಾನಿ ಗೂಹತಿ ಗುಣಾನ್ ಪ್ರಕಟೀಕರೋತಿ | ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ ಸನ್ಮಿತ್ರಲಕ್ಷಣಮಿದಂ ಹಿ ಪ್ರವದಂತಿ ಸಂತಃ || ಒಳ್ಳೆಯ ಗೆಳೆಯರೆಂದರೆ ವೈದ್ಯರಂತೆ. ಕಹಿ ಗುಳಿಗೆಗಳನ್ನು ಕೊಟ್ಟಾದರೂ ಖಾಯಿಲೆ ವಾಸಿಮಾಡಬೇಕು. ಸೂಜಿಯಿಂದ ಚುಚ್ಚಿಯಾದರೂ ಒಳಸೇರಿರುವ ಮುಳ್ಳನ್ನು ಹೊರಗೆಳೆಯಬೇಕು. ಆ ಕ್ಷಣಕ್ಕೆ ನೋವುಮಾಡಿದಂತೆ ಕಂಡರೂ ಪರಿಹಾರ ಮಾತ್ರ ಶಾಶ್ವತ. ಒತ್ತಾಯದಿಂದ ಸಿಹಿಯನ್ನು ತಿನ್ನಿಸಿದರೆ ನಾಲಿಗೆಗೆ ಕ್ಷಣಿಕ ಸುಖ. ದೇಹಕ್ಕಾಗುವ ಹಾನಿ ಮಾತ್ರ ದೀರ್ಘಕಾಲಿಕ. ಪ್ರಾಯಶಃ ಗೆಳೆತನವೆನ್ನುವುದೂ ವಿಷಯಾಧಾರಿತ. ’ಸಮಾನ-ಶೀಲ-ವ್ಯಸನೇಷು ಸಖ್ಯಂ’ ಎಂಬಂತೆ ಅವರವರ ಸ್ವಭಾವಕ್ಕನುಗುಣವಾಗಿ ಇಷ್ಟಪಡುವ ವಿಚಾರ, ವಿಹಾರಗಳಲ್ಲಿ ಸಮಾನಮನಸ್ಕರು ಜೊತೆಯಾಗುತ್ತಾರೆ. ಬಹಳಷ್ಟು ಗೆಳೆತನ ಸಭೆ, ಸಮಾರಂಭ, ಹರಟೆ, ಮಾತುಕತೆಗಳಿಗಷ್ಟೇ ಸೀಮಿತವಾಗಿರುತ್ತದೆ. ಕಾಲದ ಪರಿಮಿತಿಗೆ ಒಳಗಾಗಿರುತ್ತದೆ. ವೈಯ್ಯಕ್ತಿಕ ಬದುಕು ಬವಣೆಗಳ ಮಧ್ಯೆ ಸಮಯ, ಅವಕಾಶ ಸಿಕ್ಕಿದರಷ್ಟೇ ಭೇಟಿ, ಔಪಚಾರಿಕ ಮಾತುಕತೆಗಳು. ನಮಗೆ ಅತ್ಯಂತ ಆತ್ಮೀಯರೆಂದರೆ ನಮ್ಮ ಜೊತೆಗೆ ಬದುಕು ಹಂಚಿಕೊಂಡವರು. ತಂದೆ ತಾಯಿಗಳು. ಹೆಂಡತಿ ಮಕ್ಕಳು. ನಮಗೇನು ಇಷ್ಟ ಎನ್ನುವುದಕ್ಕಿಂತಲೂ ನಮಗೆ ಯಾವುದು ಹಿತ ಎಂಬುದನ್ನು ಅರಿತವರು. ಒಟ್ಟಿಗಿದ್ದವರಿಗೆ ಅರ್ಥೈಸಿಕೊಳ್ಳುವ ಅವಕಾಶ ಅಧಿಕವಾಗಿರುತ್ತದೆ. ಅವರನ್ನು ನಾವೂ ಅರಿತುಕೊಂಡರೆ ಆಪ್ತತೆ ಮತ್ತಷ್ಟು ಆಪ್ಯಾಯಮಾನವಾಗಿರುತ್ತದೆ. ಸಂಪತ್ತು, ಅಧಿಕಾರ ಇದ್ದವರ ಸುತ್ತ ಮಿತ್ರರು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಉಪಗ್ರಹಗಳಂತೆ ಸುತ್ತುತ್ತಿರುತ್ತಾರೆ. ಅತ್ಯಂತ ಆತ್ಮೀಯರಂತೆ ವರ್ತಿಸುತ್ತಾರೆ. ಸುಮ್ಮಸುಮ್ಮನೆ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಯಾವಾಗಲೂ ಮಾತನಾಡಿಸುತ್ತಾರೆ. ಅವರ ಸಮಾನರನ್ನೋ, ಉತ್ತಮರನ್ನೋ ಕ್ಷುಲ್ಲಕ ಕಾರಣಗಳಿಗೆ ದೂರುತ್ತಾರೆ. ಹೇಗಾದರೂ ಮಾಡಿ ಗಮನ ಸೆಳೆಯಲು ಯತ್ನಿಸುತ್ತಾರೆ. ವಸ್ತುತಃ ಇವರೆಲ್ಲ ಸ್ವಂತ ಲಾಭಸ್ಕೋಸ್ಕರ ಪ್ರಭಾವಿಗಳನ್ನು ಬಳಸಿಕೊಳ್ಳುತ್ತಾರಷ್ಟೆ. ಕೇವಲ ಗುಣಗ್ರಾಹಿಗಳಾಗಿದ್ದರೆ ಏನೂ ಇಲ್ಲದವರ, ಬಡವರ ಹಿಂದೇಕೆ ಇವರು ಕಾಣಿಸಿಕೊಳ್ಳುವುದಿಲ್ಲ ? ಸ್ವಾರ್ಥಸಾಧನೆ ಬಿಟ್ಟರೆ ಇನ್ಯಾವ ಅಪ್ತತೆಯೂ ಅಲ್ಲಿರುವುದಿಲ್ಲ. ಹಣ, ಅಧಿಕಾರ ದೂರವಾದಾಗ ಇವರೂ ಅದೃಶ್ಯರಾಗಿ ಬಿಡುತ್ತಾರೆ. ಸಂಗಡಿಗನ ಸಾಧನೆಗೆ, ಯಶಸ್ಸಿಗೆ ಸನ್ಮಿತ್ರನೆಂದಿಗೂ ಅಸೂಯೆ ಪಡುವುದಿಲ್ಲ. ಯೋಗ್ಯತೆಗೆ, ಪರಿಶ್ರಮಕ್ಕೆ ಅನುಗುಣವಾಗಿ ಸಿಗುವ ಗೌರವವನ್ನು ಗುರುತಿಸಿ ಸಂತಸಪಡುತ್ತಾನೆ. ಗೆಳೆಯನ ಯಶಸ್ಸು, ಗೌರವದಲ್ಲಿ ಪಾಲು ಕೇಳುವುದಿಲ್ಲ. ಸಾಧಕನ ಮಿತ್ರ ಅಥವಾ ಸಮಕಾಲೀನ ಎನ್ನುವುದು ಗೌರವ ಹಂಚಿಕೊಳ್ಳುವ ಅರ್ಹತೆಯಾಗುವುದಿಲ್ಲ. ಶ್ರಮಪಟ್ಟು ಓದಿ ಪದವಿ ಪಡೆದವನ ಜೊತೆಯವ ನಾನವನ ಮಿತ್ರ ನನಗೂ ಇರಲಿ ಪ್ರಮಾಣಪತ್ರ ಎನ್ನುವುದನ್ನು ಒಪ್ಪಲಾಗುವುದಿಲ್ಲ. ವಾಸ್ತವವಾಗಿ ಪ್ರತಿಯೊಬ್ಬನಿಗೂ ಆತ್ಯಂತ ಆಪ್ತನೆಂದರೆ ತಾನು ಮಾತ್ರ. ಯಾರ ಜೊತೆಗೂ ಹಂಚಿಕೊಳ್ಳಲಾರದ ಗುಟ್ಟು, ಅನುಭವ ಮತ್ತು ಅಭಿಪ್ರಾಯಗಳು ನಮ್ಮ ಮನಸ್ಸಿನಾಳದಲ್ಲಿ ಅದೆಷ್ಟೋ ಇರುತ್ತವೆ. ಗೆಳೆತನವೆಂದರೆ ನಂಬಿಕೆ. ನೂರಕ್ಕೆ ನೂರು ನಂಬುವುದು ನಾವು ನಮ್ಮನ್ನು ಮಾತ್ರ. ಅದು ನಮ್ಮ ಖಾಸಗಿತನ. ಮಿತ್ರನು ಎಷ್ಟೇ ಹತ್ತಿರದವರಾದರೂ ಎಲ್ಲವನ್ನೂ ಹೇಳಿಕೊಳ್ಳುವಂತಿಲ್ಲ. ಎಂತಹ ಆತ್ಮೀಯನ ನಡುವೆಯೂ ನಯವಾದ ಒಂದು ಅಂತರವಿರಬೇಕು. ಕಾಲದ ಜೊತೆಗೇ ಅಭಿಪ್ರಾಯಗಳೂ ಬದಲಾಗುತ್ತವೆ. ಸಂಬಂಧ ಇಂದು ಇದ್ದಂತೆಯೇ ನಾಳೆಗಿರದು. ಆದ್ದರಿಂದ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಯಾವ ನಂಬಿಕೆಯೂ ಮಿತಿಯನ್ನು ಮೀರಬಾರದು.
ಈ ಕುಕೀ ಪಾಲಿಸಿಯು ಕುಕೀ ಪಾಲಿಸಿ ("ಕುಕೀ ಪಾಲಿಸಿ") ಬಳಕೆಯ ಷರತ್ತುಗಳು ಷರತ್ತುಗಳು ("ಷರತ್ತುಗಳು") ಮತ್ತು ನಮ್ಮ ಪ್ರೈವಸಿ ಪಾಲಿಸ ಗಳ ಭಾಗವಾಗಿದೆ ಮತ್ತು ಅವುಗಳೊಳಗೆ ಅಳವಡಿಸಿಕೊಳ್ಳಲಾಗಿದೆ ಹಾಗೂ ಅವುಗಳೊಂದಿಗೇ ಓದಿಕೊಳ್ಳಬೇಕು. ಈ ಕುಕೀ ಪಾಲಿಸಿಯಲ್ಲಿ ದಪ್ಪನೇ ಅಕ್ಷರಗಳಲ್ಲಿ ಬಳಸಲಾಗಿರುವ, ಆದರೆ ಇಲ್ಲಿ ವ್ಯಾಖ್ಯಾನಿಸಿರದ ಪದಗಳು, ಷರತ್ತುಗಳು, ಇದರಲ್ಲಿ ಇಂಥ ಪದಗಳಿಗೆ ನೀಡಲಾದ ಅರ್ಥವನ್ನು ಹೊಂದಿರುತ್ತವೆ. ಕುಕೀಸ್, ಪಿಕ್ಸಲ್ಸ್ ಮತ್ತು ಲೋಕಲ್ ಸ್ಟೋರೇಜ್ ಎಂದರೇನು?# ಕುಕೀಸ್ ಎಂದರೆ ವೆಬ್ಸೈಟ್ಗಳು ನೀವು ವೆಬ್ ಬ್ರೌಸ್ ಮಾಡುವಾಗ ನಿಮ್ಮ ಕಂಪ್ಯೂಟರ್ನಲ್ಲಿ ಇಡುವ ಸಣ್ಣ ಫೈಲ್ ಗಳು. ಅನೇಕ ವೆಬ್ಸೈಟ್ಗಳಂತೆ, ನಾವು ಕುಕೀಗಳನ್ನು ಜನರು ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಹೇಗೆ ಬಳಸುತ್ತಾರೆ ಎಂದು ತಿಳಿಯಲು ಮತ್ತು ಅವುಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಬಳಸುತ್ತೇವೆ. ಪಿಕ್ಸೆಲ್ ಎಂದರೆ ವೆಬ್ ಪುಟದಲ್ಲಿ ಅಥವಾ ಇಮೇಲ್ ಅಧಿಸೂಚನೆಯಲ್ಲಿ ಬಳಸುವ ಸಣ್ಣ ಪ್ರಮಾಣದ ಕೋಡ್ ಆಗಿದೆ. ಇತರ ಹಲವು ವೆಬ್ಸೈಟ್ಗಳು ಮಾಡಿದಂತೆ, ನೀವು ಕೆಲವು ವೆಬ್ ಅಥವಾ ಇಮೇಲ್ ವಿಷಯದೊಂದಿಗೆ ಸಂವಹನ ನಡೆಸುತ್ತೀರಾ ಎಂದು ತಿಳಿಯಲು ನಾವು ಪಿಕ್ಸೆಲ್ಗಳನ್ನು ಬಳಸುತ್ತೇವೆ. ಇದು ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಸುಧಾರಿಸುತ್ತದೆ ಮತ್ತು ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ಸಹಾಯ ಮಾಡುತ್ತದೆ. ಲೋಕಲ್ ಸ್ಟೋರೇಜ್ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ಸ್ಥಳೀಯವಾಗಿ ಮಾಹಿತಿಯನ್ನು ಸಂಗ್ರಹಿಸಲು ವೆಬ್ಸೈಟ್ ಅಥವಾ ಅಪ್ಲಿಕೇಶನ್ಗೆ ಅನುಮತಿಸುವ ಒಂದು ಉದ್ಯಮ-ಪ್ರಮಾಣಿತ ತಂತ್ರಜ್ಞಾನವಾಗಿದೆ. ನಮ್ಮ ಪ್ಲ್ಯಾಟ್ಫಾರ್ಮ್ನೊಂದಿಗೆ ನಿಮ್ಮ ಹಿಂದಿನ ಸಂವಹನಗಳ ಆಧಾರದ ಮೇಲೆ ನಾವು ನಿಮಗೆ ತೋರಿಸಿದಂತೆ ಕಸ್ಟಮೈಸ್ ಮಾಡಲು ನಾವು ಲೋಕಲ್ ಸ್ಟೋರೇಜ್ ಗಳನ್ನು ಬಳಸುತ್ತೇವೆ. ನಾವು ಈ ತಂತ್ರಜ್ಞಾನಗಳನ್ನು ಏಕೆ ಬಳಸುತ್ತೇವೆ?# ನಿಮಗೆ ಸೂಕ್ತವಾದ ವಿಷಯವನ್ನು ತೋರಿಸಲು, ನಿಮ್ಮ ಅನುಭವವನ್ನು ಸುಧಾರಿಸಲು ಮತ್ತು ನಮ್ಮನ್ನು ಮತ್ತು ನಮ್ಮ ಬಳಕೆದಾರರನ್ನು ರಕ್ಷಿಸಲು ನಾವು ಈ ತಂತ್ರಜ್ಞಾನಗಳನ್ನು ಬಳಸಬಹುದು. ಇವುಗಳನ್ನು ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ಸೇವೆಗಳನ್ನು ಒದಗಿಸಲು, ಸುಲಭ ಮತ್ತು ವೇಗವಾಗಿ ಬಳಸಲು, ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಮತ್ತು ಅದರ ವೈಶಿಷ್ಟ್ಯಗಳನ್ನು ಬಳಸಲು ನಿಮಗೆ ಸಹಾಯ ಮಾಡಲು ನಾವು ಬಳಸಬಹುದು. ನಾವು ಇದನ್ನು ನಿಮಗೆ ಕೆಲವು ಸೇವೆಗಳನ್ನು ಒದಗಿಸಲು, ನಿಮ್ಮ ಭಾಷೆಯ ಆದ್ಯತೆಯನ್ನು ಉಳಿಸಿಕೊಳ್ಳಲು, ನಿಮ್ಮ ಸ್ಥಳ ಅಗತ್ಯವಿರುವ "ಶೇಕ್ ಎನ್ ಚಾಟ್" ನಂತಹ ಮ್ಯಾಪಿಂಗ್, ಸ್ಥಳ ಆಧಾರಿತ ಸೇವೆಗಳನ್ನು ಒದಗಿಸಲು ಮತ್ತು ದೃಢೀಕರಣ ಮಾಹಿತಿಯನ್ನು ಉಳಿಸಿಕೊಳ್ಳಲು ಬಳಸಬಹುದು. ನೀವು ನಮ್ಮ ವೇದಿಕೆ ಅನ್ನು ಹೇಗೆ ಬಳಸುತ್ತೀರಿ ಎಂಬುದರ ಕುರಿತು ಮಾಹಿತಿಯನ್ನು ಸಂಗ್ರಹಿಸಲು ನಾವು ಈ ತಂತ್ರಜ್ಞಾನಗಳನ್ನು ಬಳಸಬಹುದು, ಉದಾಹರಣೆಗೆ, ನೀವು ಯಾವ ಪುಟಗಳನ್ನು ಹೆಚ್ಚಾಗಿ ಭೇಟಿ ನೀಡುತ್ತೀರಿ, ಮತ್ತು ಕೆಲವು ಪುಟಗಳನ್ನು ಭೇಟಿ ಮಾಡಿದಲ್ಲಿ ನಿಮಗೆ ಎರರ್ ಸಂದೇಶಗಳನ್ನು ನೀಡುತ್ತದೆ. ದಿನದಿಂದ ದಿನಕ್ಕೆ ನಮ್ಮ ಪ್ಲ್ಯಾಟ್ಫಾರ್ಮ್ಗೆ ಭೇಟಿ ನೀಡುವ ಒಟ್ಟು ಸಂಖ್ಯೆಯ ಮಾಹಿತಿಯನ್ನು ಸಂಗ್ರಹಿಸಲು ನಾವು ಈ ತಂತ್ರಜ್ಞಾನಗಳನ್ನು ಬಳಸಬಹುದು. ನಮ್ಮ ಜಾಹೀರಾತು ಪಾಲುದಾರರೊಂದಿಗೆ ನಾವು, ನೀವು ನೋಡುವ ಜಾಹೀರಾತುಗಳನ್ನು ತಲುಪಿಸಲು, ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಲು ಈ ತಂತ್ರಜ್ಞಾನಗಳನ್ನು ಬಳಸಬಹುದು. ಈ ಕುಕೀಸ್ ಸಂಗ್ರಹಿಸಿದ ಮಾಹಿತಿಯಿಂದ ವೈಯಕ್ತಿಕವಾಗಿ ನಿಮ್ಮನ್ನು ಗುರುತಿಸಲು ನಮಗೆ ಸಾಧ್ಯವಿಲ್ಲ. ಕ್ರಿಯಾತ್ಮಕ ಉದ್ದೇಶಗಳಿಗಾಗಿ ಮಾತ್ರ, ನಿಮ್ಮ ಯೂಸರ್ ನೇಮ್ ಮತ್ತು ಪ್ರೊಫೈಲ್ ಪಿಕ್ಚರ್ ನಂತಹ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಸಂಗ್ರಹಿಸಬಹುದು. ಯಾವ ಮಾಹಿತಿಯು ಸಂಗ್ರಹಿಸಲ್ಪಡುತ್ತದೆ, ಅದನ್ನು ಹೇಗೆ ಬಳಸುವುದು ಮತ್ತು ಅದನ್ನು ಯಾರೊಂದಿಗೆ ಹಂಚಲಾಗುತ್ತದೆ ಎಂಬುದರ ಕುರಿತು ನಿಮ್ಮೊಂದಿಗೆ ಸಂಪೂರ್ಣ ಪಾರದರ್ಶಕತೆ ಖಚಿತಪಡಿಸುತ್ತೇವೆ. ನಾವು ಯಾವ ರೀತಿಯ ಕುಕೀಗಳನ್ನು ಬಳಸುತ್ತೇವೆ?# ಎರಡು ವಿಧದ ಕುಕೀಗಳನ್ನು ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ಬಳಸಬಹುದು - "ಸೆಷನ್ ಕುಕೀಸ್" ಮತ್ತು "ಪರ್ಸಿಸ್ಟೆಂಟ್ ಕುಕೀಸ್". ಸೆಷನ್ ಕುಕೀಗಳು ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಬಿಡುವವರೆಗೆ ನಿಮ್ಮ ಸಾಧನದಲ್ಲಿ ಉಳಿಯುವ ತಾತ್ಕಾಲಿಕ ಕುಕೀಗಳಾಗಿವೆ. ಪರ್ಸಿಸ್ಟೆಂಟ್ ಕುಕೀ ನಿಮ್ಮ ಸಾಧನದಲ್ಲಿ ಹೆಚ್ಚು ಕಾಲ ಅಥವಾ ನೀವು ಅದನ್ನು ಕೈಯಾರೆ ಅಳಿಸುವವರೆಗೆ ಉಳಿಯುತ್ತದೆ (ನಿಮ್ಮ ಸಾಧನದಲ್ಲಿ ಕುಕೀ ಎಲ್ಲಿಯವರೆಗೆ ಉಳಿಯುತ್ತದೆ ಎಂಬುದು ನಿಮ್ಮ ಅಪ್ಲಿಕೇಶನ್ ಸೆಟ್ಟಿಂಗ್ಗಳ ಅವಧಿ ಅಥವಾ "ಜೀವಿತಾವಧಿ" ಮೇಲೆ ಅವಲಂಬಿಸಿರುತ್ತದೆ). ನೀವು ಭೇಟಿ ನೀಡುವ ಕೆಲವು ಪುಟಗಳು ಸಹ ಪಿಕ್ಸೆಲ್ ಟ್ಯಾಗ್ಗಳನ್ನು (ಕ್ಲಿಯರ್ ಗಿಫ್ಸ್ ಎಂದು ಸಹ ಕರೆಯಲಾಗುತ್ತದೆ) ಬಳಸಿಕೊಂಡು ಮಾಹಿತಿಯನ್ನು ಸಂಗ್ರಹಿಸಬಹುದು, ಅವುಗಳನ್ನು ನಮ್ಮ ಚಟುವಟಿಕೆಗಳು ಮತ್ತು ಪ್ಲಾಟ್ಫಾರ್ಮ್ ಅಭಿವೃದ್ಧಿಯನ್ನು ನೇರವಾಗಿ ಬೆಂಬಲಿಸುವ ಮೂರನೇ ಪಾರ್ಟಿಗಳೊಂದಿಗೆ ಹಚಿಕೊಳ್ಳಬಹುದು. ಉದಾಹರಣೆಗೆ, ಪ್ಲ್ಯಾಟ್ಫಾರ್ಮ್ನಲ್ಲಿ ಉತ್ತಮ ಗುರಿ ಇಂಟರ್ನೆಟ್ ಬ್ಯಾನರ್ ಜಾಹಿರಾತುಗಳಿಗಾಗಿ ನಮ್ಮ ಪಾರ್ಟ್ನರ್ ಜಾಹೀರಾತು ಸಂಸ್ಥೆಯೊಂದಿಗೆ ನಮ್ಮ ಪ್ಲಾಟ್ಫಾರ್ಮ್ನ ಭೇಟಿ ನೀಡುವವರ ಬಳಕೆಯ ಮಾಹಿತಿಯನ್ನು ಹಂಚಿಕೊಳ್ಳಬಹುದು. ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ ಇಲ್ಲವಾದರೂ ಇದು ನಿಮ್ಮ ವೈಯಕ್ತಿಕ ಮಾಹಿತಿಗೆ ಲಿಂಕ್ ಮಾಡಬಹುದು. ಪ್ಲ್ಯಾಟ್ಫಾರ್ಮ್ನಲ್ಲಿ ಬಳಸಲಾಗುವ ಕುಕೀಸ್# ಕುಕಿಯ ಪ್ರಕಾರ ಅವು ಏನು ಮಾಡುತ್ತವೆ? ಈ ಕುಕೀಸ್ ನನ್ನ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಿ ನನ್ನನ್ನು ಗುರುತಿಸುವೆಯೇ? ಅಗತ್ಯವಾದ ಈ ಕುಕೀಗಳು ನಮ್ಮ ಪ್ಲ್ಯಾಟ್ಫಾರ್ಮ್ ಸರಿಯಾಗಿ ಕೆಲಸವನ್ನು ಮಾಡಲು, ಲಾಗ್-ಇನ್ ಅನ್ನು ದೃಢೀಕರಿಸಲು, ನಮ್ಮ ಪ್ಲ್ಯಾಟ್ಫಾರ್ಮ್ ಮತ್ತು ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಲು, ಮೋಸ, ಕ್ರಿಮಿನಲ್ ಅಥವಾ ಇತರ ಶಂಕಿತ ಚಟುವಟಿಕೆಗಳನ್ನು ತಡೆಯಲು ಅತ್ಯಗತ್ಯ. ಈ ಕುಕೀಸ್ ಇಲ್ಲದೆ, ನಮ್ಮ ವೇದಿಕೆಯು ನಿಮ್ಮ ಹಿಂದಿನ ಕ್ರಿಯೆಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಅದೇ ಅಧಿವೇಶನ ಪುಟಕ್ಕೆ ಮರಳಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಕುಕೀಗಳು ನಿಮ್ಮನ್ನು ವ್ಯಕ್ತಿಯಾಗಿ ಗುರುತಿಸುವುದಿಲ್ಲ. ಪರ್ಫಾರ್ಮೆನ್ಸ್/ ಪ್ರದರ್ಶನ ನಮ್ಮ ಪ್ಲ್ಯಾಟ್ಫಾರ್ಮ್ ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿಶ್ಲೇಷಿಸಲು ಮತ್ತು ಅದರ ಕಾರ್ಯಕ್ಷಮತೆಯನ್ನು ನಿರಂತರವಾಗಿ ಸುಧಾರಿಸಲು ಈ ಕುಕೀಸ್ಗಳು ನಮಗೆ ಸಹಾಯ ಮಾಡುತ್ತವೆ. ಭೇಟಿ ನೀಡಿದ ವೆಬ್ಸೈಟ್ ಗಳ ಬಗ್ಗೆ ಮಾಹಿತಿ, ನಮ್ಮ ವೇದಿಕೆಯಲ್ಲಿ ಕಳೆದ ಸಮಯ ಮತ್ತು ಎರರ್ ಸಂದೇಶಗಳಂತಹ ಯಾವುದೇ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಸಂದರ್ಶಕರು ನಮ್ಮ ಪ್ಲಾಟ್ಫಾರ್ಮ್ನೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಈ ಕುಕೀಸ್ಗಳು ನಮಗೆ ತಿಳಿಸುತ್ತವೆ. ಈ ಕುಕೀಗಳು ನಿಮ್ಮನ್ನು ವ್ಯಕ್ತಿಯಾಗಿ ಗುರುತಿಸುವುದಿಲ್ಲ. ಎಲ್ಲಾ ಡೇಟಾವನ್ನು ಅನಾಮಧೇಯವಾಗಿ ಸಂಗ್ರಹಿಸಿ ಒಟ್ಟುಗೂಡಿಸಲಾಗಿದೆ. ಕಾರ್ಯವಿಧಾನ ಪ್ಲ್ಯಾಟ್ಫಾರ್ಮ್ ನಲ್ಲಿ ನೀವು ಮಾಡುವ ಆಯ್ಕೆಗಳನ್ನು (ನಿಮ್ಮ ಭಾಷೆಯ ಆದ್ಯತೆ, ನೀವು ಅನ್ವಯಿಸಿದ ಸೆಟ್ಟಿಂಗ್ಗಳು) ಸಂಗ್ರಹಿಸಿ, ನೀವು ಲಾಗ್ ಇನ್ ಮಾಡಿದಾಗ ತೋರಿಸಿ, ನಿಮಗಾಗಿ ನಮ್ಮ ಪ್ಲ್ಯಾಟ್ಫಾರ್ಮ್ಗೆ ಅನುಗುಣವಾಗಿ ಆಯ್ಕೆ ಮಾಡುವಿಕೆಯನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ಪ್ಲ್ಯಾಟ್ಫಾರ್ಮ್ ನಲ್ಲಿ ನೀವು ಕೇಳಿದ ಸೇವೆಗಳನ್ನು ಒದಗಿಸಲಾಗಿತ್ತದೆ. ನೀವು ಈ ಕುಕೀಸ್ ಅನ್ನು ಸ್ವೀಕರಿಸದಿದ್ದರೆ, ನಮ್ಮ ಪ್ಲಾಟ್ಫಾರ್ಮ್ನ ಕಾರ್ಯಕ್ಷಮತೆ ಮತ್ತು ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಅದರಲ್ಲಿರುವ ವಿಷಯಗಳನ್ನು ನಿರ್ಬಂಧಿಸಬಹುದು. ಈ ಕುಕೀಸ್ ಸಂಗ್ರಹಿಸಿದ ಮಾಹಿತಿಯಲ್ಲಿ ನಿಮ್ಮ ಯೂಸರ್ ನೇಮ್ ಅಥವಾ ಪ್ರೊಫೈಲ್ ಪಿಕ್ಚರ್ ನಂತಹ ನೀವು ಬಹಿರಂಗಪಡಿಸಿದ ಮಾಹಿತಿಯನ್ನು ವೈಯಕ್ತಿಕವಾಗಿ ಗುರುತಿಸಬಹುದು. ನಾವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತೇವೆ, ಅದರೊಂದಿಗೆ ನಾವು ಏನು ಮಾಡುತ್ತೇವೆ ಮತ್ತು ಯಾರೊಂದಿಗೆ ನಾವು ಅದನ್ನು ಹಂಚಿಕೊಳ್ಳುತ್ತೇವೆ ಎಂದು ನಾವು ಯಾವಾಗಲೂ ನಿಮ್ಮೊಂದಿಗೆ ಪಾರದರ್ಶಕರಾಗಿರುತ್ತೇವೆ. ಟಾರ್ಗೆಟಿಂಗ್ / ಜಾಹೀರಾತು ನಿಮಗೆ ಮತ್ತು ನಿಮ್ಮ ಆಸಕ್ತಿಗಳಿಗೆ ಹೆಚ್ಚು ಸೂಕ್ತವಾದ ವಿಷಯವನ್ನು ತಲುಪಿಸಲು ಈ ಕುಕೀಗಳನ್ನು ಬಳಸಲಾಗುತ್ತದೆ. ಉದ್ದೇಶಿತ ಜಾಹೀರಾತುಗಳನ್ನು ತಲುಪಿಸಲು ಅಥವಾ ಜಾಹಿರಾತುಗಳ ಸಂಖ್ಯೆಯನ್ನು ಮಿತಿಗೊಳಿಸಲು ಅವುಗಳನ್ನು ಬಳಸಬಹುದು. ಜಾಹೀರಾತು ಅಭಿಯಾನಗಳ ಪರಿಣಾಮಕಾರಿತ್ವವನ್ನು ಅಳೆಯಲು ಇವುಗಳು ನಮಗೆ ಸಹಾಯ ಮಾಡುತ್ತವೆ. ಈ ರೀತಿಯ ಹೆಚ್ಚಿನ ಕುಕೀಗಳು ಗ್ರಾಹಕರನ್ನು IP ವಿಳಾಸದ ಮೂಲಕ ಟ್ರ್ಯಾಕ್ ಮಾಡುತ್ತವೆ, ಹಾಗಾಗಿ ಕೆಲವು ವೈಯಕ್ತಿಕ ಗುರುತಿಸುವ ಮಾಹಿತಿಯನ್ನು ಸಂಗ್ರಹಿಸಬಹುದು. ಈ ತಂತ್ರಜ್ಞಾನಗಳನ್ನು ಎಲ್ಲಿ ಬಳಸಲಾಗಿದೆ?# ನಾವು ಈ ತಂತ್ರಜ್ಞಾನಗಳನ್ನು ನಮ್ಮ ವೇದಿಕೆಯಲ್ಲಿ ಮತ್ತು ನಮ್ಮ ಸೇವೆಗಳನ್ನು ಸಂಯೋಜಿಸಿದ ಇತರ ವೆಬ್ಸೈಟ್ಗಳಲ್ಲಿ ಬಳಸುತ್ತೇವೆ. ಇವು ನಮ್ಮ ಜಾಹೀರಾತು ಮತ್ತು ಪ್ಲಾಟ್ಫಾರ್ಮ್ ಪಾಲುದಾರರನ್ನು ಒಳಗೊಂಡಿವೆ. ಮೂರನೇ ಪಕ್ಷಗಳು ಸಹ ಈ ತಂತ್ರಜ್ಞಾನಗಳನ್ನು ಬಳಸಬಹುದು, ಉದಾಹರಣೆಗೆ, ನೀವು ಪ್ಲಾಟ್ಫಾರ್ಮ್ನಲ್ಲಿಯೇ ತಮ್ಮ ವಿಷಯದೊಂದಿಗೆ ಸಂವಹನ ನಡೆಸಿದಾಗ, ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ನೀವು ಮೂರನೇ ಪಕ್ಷದ ಸೇವೆಯ ಲಿಂಕ್ ಅಥವಾ ಸ್ಟ್ರೀಮ್ ಮಾಧ್ಯಮವನ್ನು ಕ್ಲಿಕ್ ಮಾಡಿದಾಗ, ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ತೋರಿಸಬಹುದಾದಂತಹ ಜಾಹೀರಾತುಗಳ ವಿತರಣೆಯಲ್ಲಿ ಸಹಾಯ ಮಾಡಲಾಗುವುದು. ನಾವು ಮೂರನೇ ಪಕ್ಷದ ಕುಕೀಸ್ ಬಳಸುತ್ತೀವಾ?# ನಮ್ಮ ಪ್ಲ್ಯಾಟ್ಫಾರ್ಮ್ಗೆ ನೀವು ಭೇಟಿ ನೀಡಿದಾಗ ನಮ್ಮ ಪರವಾಗಿ ನಿಮ್ಮ ಸಾಧನದಲ್ಲಿ ಕುಕೀಗಳನ್ನು ಸಹ ಹೊಂದಿಸಲು, ಇಂತಹ ಮೂರನೇ ಪಕ್ಷಗಳು ಒದಗಿಸುವ ಸೇವೆಗಳನ್ನು ತಲುಪಿಸಲು, ಅನುಮತಿಸಲು ನಾವು ಹಲವಾರು ಪೂರೈಕೆದಾರರನ್ನು ಬಳಸುತ್ತೇವೆ. ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ನೀವು ಭೇಟಿ ಮಾಡಿದಾಗ, ನೀವು ಮೂರನೇ ಪಕ್ಷ ವೆಬ್ಸೈಟ್ಗಳು ಅಥವಾ ಡೊಮೇನ್ಗಳಿಂದ ಕುಕೀಗಳನ್ನು ಸ್ವೀಕರಿಸಬಹುದು. ಈ ಕುಕೀಸ್ ಅನ್ನು ಬಳಸುವ ಮೊದಲು ನಾವು ಅದನ್ನು ಗುರುತಿಸಲು ಪ್ರಯತ್ನಿಸುತ್ತೇವೆ, ಇದರಿಂದ ನೀವು ಅವುಗಳನ್ನು ಸ್ವೀಕರಿಸಲು ಬಯಸುತ್ತೀರಾ ಇಲ್ಲವೆಂಬುದನ್ನು ನಿರ್ಧರಿಸಬಹುದು. ಈ ಕುಕೀಸ್ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಮೂರನೇ ಪಕ್ಷದ ವೆಬ್ಸೈಟ್ನಲ್ಲಿ ಲಭ್ಯವಿರಬಹುದು. ನಾನು ಕುಕೀಸ್ ಗಳನ್ನು ಹೇಗೆ ನಿಯಂತ್ರಿಸಬಹುದು?# ಬಹುತೇಕ ಇಂಟರ್ನೆಟ್ ಬ್ರೌಸರ್ಗಳು ಕುಕೀಸ್ ಅನ್ನು ಸ್ವಯಂಚಾಲಿತವಾಗಿ ಸ್ವೀಕರಿಸಲು ಹೊಂದಿಸಲಾಗಿವೆ. ಕುಕೀಗಳನ್ನು ನಿರ್ಬಂಧಿಸಲು ಅಥವಾ ಕುಕೀಸ್ ಗಳನ್ನು ನಿಮ್ಮ ಸಾಧನಕ್ಕೆ ಕಳುಹಿಸಿದಾಗ ನಿಮಗೆ ಎಚ್ಚರಿಕೆಯನ್ನು ನೀಡಲು ನೀವು ಸೆಟ್ಟಿಂಗ್ಗಳನ್ನು ಬದಲಾಯಿಸಬಹುದು. ಕುಕೀಗಳನ್ನು ನಿರ್ವಹಿಸಲು ಹಲವಾರು ವಿಧಾನಗಳಿವೆ. ನಿಮ್ಮ ಅಪ್ಲಿಕೇಶನ್ ಸೆಟ್ಟಿಂಗ್ಗಳನ್ನು ಹೇಗೆ ಹೊಂದಿಸಬೇಕು ಅಥವಾ ಮಾರ್ಪಡಿಸುವುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಪ್ಲಾಟ್ಫಾರ್ಮ್ ಸೂಚನೆಗಳನ್ನು ಅಥವಾ ಸಹಾಯ ಪರದೆಯನ್ನು ನೋಡಿ. ನಾವು ಬಳಸುವ ಕುಕೀಗಳನ್ನು ನೀವು ನಿಷ್ಕ್ರಿಯಗೊಳಿಸಿದರೆ, ಇದು ಪ್ಲಾಟ್ಫಾರ್ಮ್ನಲ್ಲಿರುವಾಗ ನಿಮ್ಮ ಅನುಭವದ ಮೇಲೆ ಪರಿಣಾಮ ಬೀರಬಹುದು, ಉದಾಹರಣೆಗೆ ನೀವು ನಮ್ಮ ಪ್ಲ್ಯಾಟ್ಫಾರ್ಮ್ನ ಕೆಲವು ಪ್ರದೇಶಗಳನ್ನು ಭೇಟಿ ಮಾಡಲು ಸಾಧ್ಯವಾಗದಿರಬಹುದು ಅಥವಾ ನೀವು ನಮ್ಮ ಪ್ಲಾಟ್ಫಾರ್ಮ್ಗೆ ಭೇಟಿ ನೀಡಿದಾಗ ವೈಯಕ್ತೀಕರಿಸಿದ ಮಾಹಿತಿಯನ್ನು ಪಡೆಯುವುದಿಲ್ಲ. ಪ್ಲಾಟ್ಫಾರ್ಮ್ ಅನ್ನು ವೀಕ್ಷಿಸಲು ಮತ್ತು ಪ್ರವೇಶಿಸಲು ನೀವು ವಿಭಿನ್ನ ಸಾಧನೆಗಳನ್ನು ಬಳಸಿದರೆ (ಉದಾ. ನಿಮ್ಮ ಕಂಪ್ಯೂಟರ್, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಇತ್ಯಾದಿ) ಪ್ರತಿ ಸಾಧನದಲ್ಲಿನ ಪ್ರತಿ ಬ್ರೌಸರ್ ನಿಮ್ಮ ಕುಕೀಯ ಆದ್ಯತೆಗಳಿಗೆ ಸರಿಹೊಂದುವಂತೆ ನೀವು ಖಚಿತಪಡಿಸಿಕೊಳ್ಳಬೇಕು. ಕುಕಿ ಪಾಲಿಸಿಗೆ ಬದಲಾವಣೆಗಳು# ನಮ್ಮ ಪ್ಲ್ಯಾಟ್ಫಾರ್ಮ್ ಮತ್ತು ಸೇವೆಗಳ ಬದಲಾವಣೆಯನ್ನು ಪ್ರತಿಬಿಂಬಿಸಲು ನಾವು ಈ ಕುಕೀ ಪಾಲಿಸಿಯನ್ನು ನಿಯಮಿತವಾಗಿ ನವೀಕರಿಸುತ್ತೇವೆ. ಕುಕೀಗಳಲ್ಲಿ ನಾವು ಮಾಹಿತಿಯನ್ನು ಸಂಗ್ರಹಿಸುವ ರೀತಿ, ಬಳಸುವ ರೀತಿ ಅಥವಾ ಹಂಚಿಕೊಳ್ಳುವ ರೀತಿಯಲ್ಲಿ ಯಾವುದೇ ವಸ್ತು ಬದಲಾವಣೆಗಳನ್ನು ಮಾಡಿದರೆ, ನಾವು ಈ ಬದಲಾವಣೆಗಳನ್ನು ಈ ಕುಕಿ ಪಾಲಿಸಿ ಯಲ್ಲಿ ಪೋಸ್ಟ್ ಮಾಡುತ್ತೇವೆ, ಮತ್ತು ಕುಕೀ ನೀತಿಯ ಮೇಲ್ಭಾಗದಲ್ಲಿ "ಲಾಸ್ಟ ಅಪ್ಡೇಟೆಡ್" ದಿನಾಂಕವನ್ನು ಪರಿಷ್ಕರಿಸುವುತ್ತೇವೆ. ಹಿಂದೆ ಹೊಂದಿಸಲಾದ ಕುಕೀಸ್# ನೀವು ಒಂದು ಅಥವಾ ಹೆಚ್ಚಿನ ಕುಕೀಗಳನ್ನು ನಿಷ್ಕ್ರಿಯಗೊಳಿಸಿದರೆ, ನಾವು ಯಾವುದೇ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ನಿಷ್ಕ್ರಿಯಗೊಳಿಸಿದ ಕುಕೀಯನ್ನು ಬಳಸುವುದನ್ನು ನಿಲ್ಲಿಸುತ್ತೇವೆ. ಸಂಪರ್ಕಿಸಿ# ಈ ಕುಕೀ ಪಾಲಿಸಿಯ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಮೆಂಟ್ಗಳನ್ನು ಹೊಂದಿದ್ದರೆ, ನೀವು ನಮ್ಮನ್ನು ಸಂಪರ್ಕಿಸಬಹುದು grievance@sharechat.co ಅಥವಾ ಪೋಸ್ಟ್ ಮೂಲಕ ಸಂಪರ್ಕಿಸಿ Address: No.2 26, 27 1st Floor, Sona Towers, Hosur Rd, Krishna Nagar, Industrial Area, Bengaluru, Karnataka 560029
ಕಾಫಿನಾಡಿನ 6 ಸ್ಥಳಗಳಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮನಡೆದರೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಇಂದು ಚಾಲನೆ ನೀಡಿದರು. Suvarna News First Published Oct 28, 2022, 5:39 PM IST ಚಿಕ್ಕಮಗಳೂರು (ಅ.28): ಕಾಫಿನಾಡಿನ 6 ಸ್ಥಳಗಳಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮನಡೆದರೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಇಂದು ಚಾಲನೆ ನೀಡಿದರು. ಕೋಟಿಕಂಠ ಗಾಯನದಲ್ಲಿ ಐದು ಹಾಡುಗಳನ್ನು ಹಾಡಲಾಯಿತು. ಜಿಲ್ಲಾ ಕೇಂದ್ರವಾದ ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನ, ಶೃಂಗೇರಿಯ ವಿದ್ಯಾಶಂಕರ ದೇವಾಲಯ ಆವರಣ, ಕಡೂರು ತಾಲೂಕು ಹಿರೇನಲ್ಲೂರಿನ ಹೇಮಗಿರಿಬೆಟ್ಟ, ತರೀಕೆರೆ ತಾಲೂಕಿನ ಅಮೃತಾಪುರದ ಅಮೃತೇಶ್ವರ ದೇವಾಲಯ ಆವರಣದಲ್ಲಿ ಹಾಡಲಾಯಿತು. ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಬಾರಿಸುಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ, ವರನಟ ಡಾ.ರಾಜ್‌ಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಈ ಐದು ಗೀತೆಗಳನ್ನು ಗಾಯಕರು ಮತ್ತು ವಿದ್ಯಾರ್ಥಿಗಳು ಹಾಡಿದರು. ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ ಸಿ.ಟಿ.ರವಿ, ಸಫಾಯಿ ಕರ್ಮಚಾರಿ ನಿಗಮ ಅಧ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಆನಂದ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಉಮಾಪ್ರಶಾಂತ್, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ರೂಪ, ಉಪವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ವಿನಾಯಕ ಸಾಗರ್ ಸಮ್ಮುಖದಲ್ಲಿ ಗಾಯಕರುಗಳು ಕೋಟಿಕಂಠ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಂಕಲ್ಪ ವಿಧಿಬೋಧನೆ: ಕನ್ನಡ ನಾಡಿನ ಪ್ರಜೆಯಾಗಿ ನಾನು ನಾಡುನುಡಿಯನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ, ಕನ್ನಡದಲ್ಲೇ ಮಾತನಾಡುತ್ತೇನೆ, ಕನ್ನಡ ಬರೆಯುತ್ತೇನೆ, ಕನ್ನಡವನ್ನೆ ಬಳಸುತ್ತೇನೆ, ಕನ್ನಡ ನಾಡು, ನುಡಿ, ಸಂಸ್ಕೃತಿ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ. ಕನ್ನಡೇತರರಿಗೂ ಕನ್ನಡ ಕಲಿಸುತ್ತೇನೆಂದು ಸಂಕಲ್ಪ ತೊಡಲಾಯಿತು. ಸುವರ್ಣ ಸೌಧದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಶಿಕಲಾ ಜೊಲ್ಲೆ ಸ್ಟೆಪ್ಪು ಹಾಕಿದ ಶಾಸಕ ರವಿ: ನಾದಬ್ರಹ್ಮ ಹಂಸಲೇಖಾ ರಚಿಸಿರುವ ವರನಟ ಡಾ.ರಾಜಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಕುಣಿದರು. ಅಪ್ಪು ಅಭಿಮಾನಿ ಕಾಫಿನಾಡಿನ ಚಂದ್ರು ಹಾಡಿನ ನಟಿಸುವ ಮೂಲಕ ಶಾಸಕರ ಕುಣಿತಕ್ಕೆ ಸಾಥ್ ನೀಡಿದರು. ಈಹಾಡಿಗೆ ಹಾಕಿದ ಸ್ಟೆಪ್ ಸಾರ್ವಜನಿಕರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಕಾಫಿನಾಡು ಚಂದುವನ್ನ ಅಭಿಮಾನದಿಂದ ವಿದ್ಯಾರ್ಥಿಗಳು ಮುತ್ತಿಕೊಂಡ್ರು. ವಿದ್ಯಾರ್ಥಿಗಳ ಅಭಿಮಾನಕ್ಕೆ ಚಂದು ಕಣ್ಣೀರಿಟ್ಟರು.ವಿದ್ಯಾರ್ಥಿಗಳನ್ನು ಸಂಭಾಳಿಸಲು ಶಿಕ್ಷಕರು ಹೈರಾಣು ಆದ್ರು. ವಿಧಾನಸೌಧ ಮುಂಭಾಗ ವಿಶೇಷವಾದ ಕೋಟಿ ಕಂಠ ಗೀತ ಗಾಯನ ಅಭಿಯಾನಕ್ಕೆ ಚಾಲನೆ: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ಪಾರ್ಕ್ ನಿರ್ಮಾಣಕ್ಕೆ ಮಣ್ಣು ಸಂಗ್ರಹಿಸುತ್ತಿರುವ ಅಭಿಯಾನದ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪುಷ್ಪಾರ್ಚನೆ ನೇರವೇರಿಸುವ ಮೂಲಕ ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು.ವಿವಿಧ ಪಂಚಾಯಿತಿಗಳಿಗೆ ಸಂಗ್ರಹಿಸಿದ್ದ ಮೃತ್ತಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಅವರು ಶಾಸಕ ಸಿ.ಟಿ. ರವಿ ಮತ್ತು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿಬಸವರಾಜ್ ಮಾತನಾಡಿ, ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರಮೋದಿಯವರು ಅನಾವರಣಗೊಳಿಸಲಿದ್ದಾರೆಂದು ಹೇಳಿದರು. ಶಾಸಕ ಸಿ.ಟಿ.ರವಿ ಮಾತನಾಡಿ ಕೋಟಿ ಕಂಠಗಾಯನ ಕನ್ನಡನಾಡಿನ ಜನರೊಂದಿಗೆ ಜೋಡಿಸಲಿದೆ. ಭಾಷೆಯ ಮೂಲಕ ದೇಶಕಟ್ಟುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಪ್ರತಿಮೆ ಭಾವನೆಯೊಂದಿಗೆ ಭಾಷೆಯನ್ನು ಬೆಸೆಯುತ್ತದೆ ಎಂದು ಶಾಸಕರು ಹೇಳಿದರು.
B Sriramulu on Siddaramaiah: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎಂದು ಭವಿಷ್ಯ ನುಡಿದಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು, ಅವರ ವಿರುದ್ಧ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ ಎಂದು ತಿಳಿಸಿದ್ದಾರೆ. Govindaraj S First Published Nov 14, 2022, 10:10 AM IST ಗಂಗಾವತಿ (ನ.14): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎಂದು ಭವಿಷ್ಯ ನುಡಿದಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು, ಅವರ ವಿರುದ್ಧ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ ಎಂದು ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಬಾದಾಮಿಯ ಜನ ಯಾವ ಕಾರಣಕ್ಕೂ ಕ್ಷಮಿಸಲ್ಲ. ಚುನಾಯಿತರಾದ ನಂತರ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿಲ್ಲ. ಚುನಾವಣಾ ಗಿಮಿಕ್‌ಗಾಗಿ ಅವರು ಕೋಲಾರ ಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ಅಲ್ಲಿಯೂ ಭವಿಷ್ಯ ಇಲ್ಲ. ರಾಜಕಿಯ ಪುನರ್ಜನ್ಮ ನೀಡಿದ ಬಾದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯನವರ ನಾಟಕ ಎಲ್ಲರಿಗೂ ಗೊತ್ತಾಗಿದೆ. ಸಿದ್ದರಾಮಯ್ಯ ಅವರು ವರುಣಾದಲ್ಲಿ ಸ್ಪರ್ಧಿಸಿದರೂ ಈ ಬಾರಿ ಗೆಲ್ಲುವುದು ಕಷ್ಟ ಎಂದರು. ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಪರದೇಶಿ ಗಿರಾಕಿ: ಸಚಿವ ಶ್ರೀರಾಮುಲು ಸಿದ್ದುಗೆ ಚುನಾವಣೆ ಸ್ಪರ್ಧಿಸಲು ಭಯ: ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆ ಇದೆ. ಅಂದರೆ ಅದು ಅವರ ವ್ಯಕ್ತಿತ್ವ ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಲೇವಡಿ ಮಾಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿಯಲ್ಲಿ ಜನರು ಸಿದ್ದರಾಮಯ್ಯರನ್ನು ತಿರಸ್ಕರಿಸಿದರು. ಬಾದಾಮಿಯಲ್ಲಿ ಕನಿಷ್ಠ ಮತಗಳ ಅಂತರದಿಂದ ಗೆದ್ದಿದ್ದರು. ಗೆದ್ದೂ ಸೋತಂತೆಯೇ ಆಗಿದ್ದರು. ಈಗ ಕೋಲಾರದಲ್ಲಿ ಅಥವಾ ಬಾದಾಮಿಯಲ್ಲಿ ನಿಲ್ಲಲಿ. ಅದು ಅವರಿಗೆ ಬಿಟ್ಟಿದ್ದು. ಕೋಲಾರದಲ್ಲಿ ಪಕ್ಷದ ಸ್ಥಿತಿ ಏನಿದೆ ಎಂಬುದನ್ನು ಅವರು ಮೊದಲು ಅರ್ಥಮಾಡಿಕೊಳ್ಳಬೇಕು. ದೇಶದಲ್ಲಿ ಕಾಂಗ್ರೆಸ್‌ ಅಧೋಗತಿಗೆ ತಲುಪಿದೆ. ಕರ್ನಾಟಕದಲ್ಲೂ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳಲಿದೆ. ಏನೇ ಆದರೂ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೊದಲು ಕಾಂಗ್ರೆಸ್‌ನಲ್ಲಿ ಎರಡು ಪವರ್‌ ಸೆಂಟರ್‌ ಇದ್ದವು. ಅದರೆ ಈಗ ಸಂಖ್ಯೆ ಮೂರಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಮಲ್ಲಿಕಾರ್ಜುನ ಖರ್ಗೆ ಮನೆಗೆ ಹೋಗುತ್ತಿದ್ದಾರೆ. ಇದು ಮತ್ತೊಂದು ಪವರ್‌ ಸೆಂಟರ್‌ನ ಮಹತ್ವವಾಗಿದೆ. ಈ ಪವರ್‌ ಸೆಂಟರ್‌ಗಳಿಂದಲೇ ಕಾಂಗ್ರೆಸ್‌ ಇನ್ನಷ್ಟುಅಧೋಗತಿಗೆ ಹೋಗಲಿದೆ. ಚುನಾವಣೆ ಬರುವ ಮುನ್ನ ಸಿದ್ದರಾಮಯ್ಯ ಎಲ್ಲಿ ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಅಹಿಂದ ನಾಯಕನ ಅರ್ಹತೆ ಸಿದ್ದರಾಮಯ್ಯಗೆ ಇಲ್ಲ: ಸಚಿವ ಶ್ರೀರಾಮುಲು ಕ್ಷೇತ್ರ ಬದಲಿಸಿಕೊಂಡೇ ಸಿದು ರಾಜಕಾರಣ: ತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕ್ಷೇತ್ರ ಅದಲು ಬದಲು ಮಾಡಿಕೊಂಡೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕುಟುಕಿದರು. ರಾಜಕಾರಣದಲ್ಲಿ ಒಂದು ಕ್ಷೇತ್ರ ಗಟ್ಟಿಯಾಗಿ ಹಿಡಿದುಕೊಂಡು ಜನರ ಮನಸ್ಸು ಗೆದ್ದು ನಾಯಕರಾಗಬೇಕು. ಆದರೆ ಸಿದ್ದರಾಮಯ್ಯ ಅನೇಕ ಕ್ಷೇತ್ರವನ್ನು ಬದಲಾವಣೆ ಮಾಡಿದ್ದಾರೆ. ಇದೀಗ ಅದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಹಿರಿಯ ನಾಯಕರು, ನಾನು ಅವರ ಬಗ್ಗೆ ಮಾತನಾಡಲ್ಲ. ಅವರು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ ಮೇಲೆ ಮಾತನಾಡೋಣ ಎಂದರು.
ಬಾಲಿವುಡ್‌ ನಟಿ ಕಂಗನಾ ರನಾವತ್‌ ತಾವು ನಿರೂಪಿಸಲಿರುವ ‘Lock Upp’ ರಿಯಾಲಿಟಿ ಶೋನ ಟೀಸರ್‌ ಹಂಚಿಕೊಂಡಿದ್ದಾರೆ. ಹದಿನಾರು ವಿವಾದಾತ್ಮಕ ಸ್ಪರ್ಧಿಗಳನ್ನು 72 ದಿನಗಳ ಕಾಲ ಲಾಕ್‌ ಮಾಡುವ ವಿಶಿಷ್ಟ ಫಾರ್ಮ್ಯಾಟ್‌ ಇದು. ಫೆಬ್ರವರಿ 27ರಿಂದ ಶೋ ALTBalaji ಮತ್ತು MX Playerನಲ್ಲಿ ಸ್ಟ್ರೀಮ್‌ ಆಗಲಿದೆ. ‘Lock Upp’ ರಿಯಾಲಿಟಿ ಶೋ ನಿರೂಪಕಿಯಾಗಿ ಬಾಲಿವುಡ್‌ ನಟಿ ಕಂಗನಾ ರನಾವತ್‌ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊನ್ನೆ ಶೋನಲ್ಲಿನ ತಮ್ಮ ಫಸ್ಟ್‌ ಲುಕ್‌ ಶೇರ್‌ ಮಾಡಿದ್ದ ನಟಿ ಇದೀಗ ಟೀಸರ್‌ ಹಂಚಿಕೊಂಡಿದ್ದಾರೆ. ಈ ಟೀಸರ್‌ ಕಂಗನಾರ ತೆರೆಯಾಚೆಗಿನ ವಿವಾದದ ಹೇಳಿಕೆಗಳು, ನಡವಳಿಕೆಗಳಿಗೆ ಕನ್ನಡಿಯಂತಿದೆ. ಬ್ಲಾಕ್‌ ಮತ್ತು ಸಿಲ್ವರ್‌ ಗೌನ್‌ ತೊಟ್ಟ ನಟಿ, ““Iss duniya mein do type ke log hai. Ek jo mujhe pasand karte hai and dusre woh B-grade strugglers, jo meri burai karke news mein rehte hai” (ಈ ಜಗತ್ತಿನಲ್ಲಿ ಎರಡು ವಿಧದ ಜನ ಇದ್ದಾರೆ. ಒಂದು ವರ್ಗದವರು ನನ್ನನ್ನು ಇಷ್ಟಪಡುತ್ತಾರೆ. ಮತ್ತೊಂದು ವರ್ಗದವರು ನನ್ನ ಬಗ್ಗೆ ಕಾಮೆಂಟ್‌ಗಳನ್ನು ಮಾಡುತ್ತಾ ಸುದ್ದಿಯಲ್ಲಿರುತ್ತಾರೆ) ಎಂದು ಡೈಲಾಗ್‌ ಹೇಳುತ್ತಾರೆ. ಕೆಲವರು ತಮ್ಮ ಮೇಲೆ FIR ದಾಖಲಿಸುತ್ತಾ ತಮ್ಮ ಬದುಕನ್ನೇ ರಿಯಾಲಿಟಿ ಶೋ ಮಾಡಿದ್ದಾರೆ ಎನ್ನುವ ಕಂಗನಾ, “ಇದೀಗ ನನ್ನ ಸರದಿ. ನಾನು ರಿಯಾಲಿಟಿ ಶೋಗ ಬಾಪ್‌ ಎನ್ನುವಂತಹ ಶೋ ಮಾಡುತ್ತಿದ್ದೇನೆ. ಇದು ನನ್ನ ಜೈಲು. ಇಲ್ಲಿ ನನ್ನದೇ ರೂಲ್ಸ್‌. ಅದರಲ್ಲಿ ಹದಿನಾರು ವಿವಾದಾತ್ಮಕ ಸೆಲೆಬ್ರಿಟಿಗಳು ಲಾಕ್‌ ಆಗಿರುತ್ತಾರೆ. ಅವರ ಹಣೆಬರಹವನ್ನು ನಾನು ನಿರ್ಧರಿಸುತ್ತೇನೆ” ಎಂದಿದ್ದಾರೆ. View this post on Instagram A post shared by Kangana Ranaut (@kanganaranaut) “Mera jail hai aisa, na chalegi bhaigiri na papa ka paisa! Get ready for #LockUpp streaming FREE from 27th Feb on @mxplayer and @altbalaji. Trailer out on 16th Feb,” ಎನ್ನುವ ಕಾಮೆಂಟ್‌ನೊಂದಿಗೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಟೀಸರ್‌ ಶೇರ್‌ ಮಾಡಿದ್ದಾರೆ. ಹಿಂದಿ ಕಿರುತೆರೆಯ ಜನಪ್ರಿಯ ನಿರ್ಮಾಪಕಿ ಏಕ್ತಾ ಕಪೂರ್‌ ಈ ರಿಯಾಲಿಟಿ ಶೋ ನಿರ್ಮಿಸುತ್ತಿದ್ದು, ಸ್ಪರ್ಧಿಗಳ ಅಂತಿಮ ಪಟ್ಟಿ ಇನ್ನೂ ಸಿದ್ಧವಾಗಿಲ್ಲ. ನಟ – ನಟಿಯರಾದ ಆದಿತ್ಯ ಸಿಂಗ್‌ ರಜಪೂತ್‌, ಅನುಷ್ಕಾ ಸೇನ್‌, ರೊಹ್ಮನ್‌ ಶಾಲ್‌, ಪೂನಂ ಪಾಂಡೆ, ಹರ್ಷ್‌ ಬೆನಿವಾಲ್‌, ಮಾನವ್‌ ಗೋಹಿಲ್‌ ಮತ್ತಿತರ ಹೆಸರುಗಳ ಸ್ಪರ್ಧಿಗಳ ಪಟ್ಟಿಯಲ್ಲಿವೆ ಎನ್ನಲಾಗಿದೆ. ಈ ಶೋನಲ್ಲಿ ಹದಿನಾರು ಸ್ಪರ್ಧಿಗಳನ್ನು 72 ದಿನಗಳ ಕಾಲ ಲಾಕ್‌ ಮಾಡಲಾಗುತ್ತದೆ. ಬಿಗ್‌ಬಾಸ್‌ ಮಾದರಿಯಲ್ಲೇ ಇಲ್ಲಿಯೂ ವೀಕ್ಷಕರ ವೋಟಿಂಗ್‌ ಇರುತ್ತದೆ. ಫೆಬ್ರವರಿ 27ರಿಂದ ALTBalaji ಮತ್ತು MX Playerನಲ್ಲಿ ಸ್ಟ್ರೀಮ್‌ ಆಗಲಿದೆ.
2005 ರಲ್ಲಿ ಸ್ಥಾಪಿಸಲಾಯಿತು, ಪ್ಲಾಸ್ಟ್ರಾನ್ ಟೆಕ್ನಾಲಜಿ (ಶೆನ್ಜೆನ್) ಕಂ., ಲಿಮಿಟೆಡ್. ಬೋರ್ಡ್ ಟು ಬೋರ್ಡ್ ಕನೆಕ್ಟರ್, I/O ಪೋರ್ಟ್‌ಗಳು ಮತ್ತು ಇತರ ವೃತ್ತಿಪರ ನಿಖರ ಎಲೆಕ್ಟ್ರಾನಿಕ್ ಕನೆಕ್ಟರ್‌ಗಳಲ್ಲಿ ಪರಿಣತಿ ಹೊಂದಿರುವ ವೃತ್ತಿಪರ ತಯಾರಕ. 2020 ರಲ್ಲಿ, ನಮ್ಮ ಕಂಪನಿಯು ಡಾಂಗ್‌ಗುವಾನ್ ಚೆಂಗ್ ಟಿಂಗ್ ಎಲೆಕ್ಟ್ರಾನಿಕ್ ಟೆಕ್ನಾಲಜಿ ಕಂ., ಲಿಮಿಟೆಡ್‌ನೊಂದಿಗೆ ವಿಲೀನಗೊಂಡಿತು ಮತ್ತು ಡಾಂಗ್‌ಗುವಾನ್ ಸಿಟಿಯ ಕ್ವಿಂಗ್‌ಕ್ಸಿ ಟೌನ್‌ನಲ್ಲಿ ಹೊಸ ಫ್ಯಾಕ್ಟರಿ ಪ್ಲಾಸ್ಟ್ರಾನ್ ಎಲೆಕ್ಟ್ರಾನಿಕ್ ಟೆಕ್ನಾಲಜಿ (ಡಾಂಗ್‌ಗುವಾನ್) ಕಂ., ಲಿಮಿಟೆಡ್ ಅನ್ನು ಸ್ಥಾಪಿಸಿತು.ಕಂಪನಿಯು 3,600 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ, ಸ್ಟ್ಯಾಂಪಿಂಗ್, ಮೋಲ್ಡಿಂಗ್, ಅಸೆಂಬ್ಲಿ ಕಾರ್ಯಾಗಾರಗಳು ಮನೆಯಲ್ಲಿದೆ.ನಾವು ಭಾಗಗಳ ಉತ್ಪಾದನೆ, ಜೋಡಣೆಯಿಂದ FG ಮತ್ತು ಸಾಗಣೆಗೆ ಪೂರ್ಣ ಪ್ರಕ್ರಿಯೆಯ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದೇವೆ. ನಮ್ಮ ಮುಖ್ಯ ಉತ್ಪನ್ನಗಳು ಸೇರಿವೆ: ಬೋರ್ಡ್ ಕನೆಕ್ಟರ್‌ಗೆ 0.5/0.8/1.0mm ಸಿಂಗಲ್ ಸ್ಲಾಟ್ ಬೋರ್ಡ್, ಬೋರ್ಡ್ ಕನೆಕ್ಟರ್‌ಗೆ 0.5/0.8mm ಡಬಲ್ ಸ್ಲಾಟ್ ಬೋರ್ಡ್, 1.0/1.27/2.0/2.54mm ಹೆಡರ್ ಮತ್ತು ಸಾಕೆಟ್ ಸರಣಿ, 1.27mm SMC ಕನೆಕ್ಟರ್, HDMI ಸರಣಿ, ಪೋರ್ಟ್ ಸರಣಿ, ನಿಖರವಾದ ಯಂತ್ರಾಂಶ, ಪ್ಲಾಸ್ಟಿಕ್ ಭಾಗಗಳು ಮತ್ತು ಇತರ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಪ್ರದರ್ಶಿಸಿ. ಅವುಗಳಲ್ಲಿ ಬಹುಪಾಲು ಪ್ರಪಂಚದಾದ್ಯಂತದ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ ಮತ್ತು ಸಾಕಷ್ಟು ಪ್ರಸಿದ್ಧ ಗ್ರಾಹಕರು ಪ್ರೀತಿಯಿಂದ ಸ್ವಾಗತಿಸಿದ್ದಾರೆ.ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳು, ಸಂವಹನ ಜಾಲಗಳು, ಕೈಗಾರಿಕಾ ಯಾಂತ್ರೀಕೃತಗೊಂಡ, ವೈದ್ಯಕೀಯ ಉಪಕರಣಗಳು, ಆಟೋಮೊಬೈಲ್ ಉತ್ಪಾದನೆ, ಕಂಪ್ಯೂಟರ್ ಮದರ್‌ಬೋರ್ಡ್‌ಗಳು, LCD ಮಾನಿಟರ್‌ಗಳು, ವಾಹನ ಮತ್ತು ಭದ್ರತಾ ಸಾಧನಗಳಿಗೆ ಉತ್ಪನ್ನಗಳನ್ನು ವ್ಯಾಪಕವಾಗಿ ಅನ್ವಯಿಸಲಾಗುತ್ತದೆ. ಉತ್ಪನ್ನ ವಿನ್ಯಾಸ, ಅಚ್ಚು ಅಭಿವೃದ್ಧಿಯಿಂದ ಮಾರಾಟದ ನಂತರದ ಸೇವೆಗೆ ಏಕ-ನಿಲುಗಡೆ ಸೇವೆಯನ್ನು ಒದಗಿಸಲು ಪ್ಲಾಸ್ಟ್ರಾನ್-ತಂತ್ರಜ್ಞಾನವು ಸಮರ್ಪಿಸುತ್ತಿದೆ. ನಮ್ಮ ಕಾರ್ಖಾನೆಯು ಜಪಾನ್ ಮತ್ತು ತೈವಾನ್‌ನಿಂದ ಆಮದು ಮಾಡಿಕೊಂಡ ಸುಧಾರಿತ ಉತ್ಪಾದನಾ ಯಂತ್ರಗಳು ಮತ್ತು ತಪಾಸಣೆ ಸೌಲಭ್ಯಗಳನ್ನು ಹೊಂದಿದೆ. ಕಂಪನಿಯು ISO 9001: 2015 ಪ್ರಮಾಣೀಕರಣವನ್ನು ಅಂಗೀಕರಿಸಿದೆ.ISO14000 ಮತ್ತು IATF16949 ಅನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು. ಪ್ಲಾಸ್ಟ್ರಾನ್ 40 ಕ್ಕೂ ಹೆಚ್ಚು ವೃತ್ತಿಪರ ಮತ್ತು ತಾಂತ್ರಿಕ ಸಿಬ್ಬಂದಿಗಳೊಂದಿಗೆ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ನಮ್ಮ ಬಲವಾದ ಉತ್ಪಾದನಾ ಸಾಮರ್ಥ್ಯವು ನಮ್ಮ ವಿಶ್ವಾದ್ಯಂತ ಗ್ರಾಹಕರಿಗೆ ನಮ್ಮ ನಿರಂತರ ಉನ್ನತ ಶ್ರೇಣಿಯ ಸೇವೆಯನ್ನು ಖಾತರಿಪಡಿಸುತ್ತದೆ. ಪ್ರತಿಯೊಂದು ಕನೆಕ್ಟರ್ ಅನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ ಮತ್ತು ಸಾಗಣೆಗೆ ಮೊದಲು ವೃತ್ತಿಪರ ಗುಣಮಟ್ಟದ ತಪಾಸಣೆ ತಂಡವು ಪರಿಶೀಲಿಸುತ್ತದೆ. ಮಾರುಕಟ್ಟೆ ಮತ್ತು ಉದ್ಯಮದ ಅಭಿವೃದ್ಧಿಯ ಅಗತ್ಯತೆಗಳನ್ನು ಪೂರೈಸಲು ನಾವು ಯಾವಾಗಲೂ ಉತ್ತಮ ಗುಣಮಟ್ಟದ, ಉನ್ನತ ನಾವೀನ್ಯತೆ, ಉನ್ನತ ತಂತ್ರಜ್ಞಾನದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಒತ್ತಾಯಿಸುತ್ತೇವೆ. ನಿಮ್ಮ ಸಮಯಕ್ಕೆ ಧನ್ಯವಾದಗಳು ಮತ್ತು ನಮ್ಮ ನಿಗಮಗಳಿಗಾಗಿ ಎದುರು ನೋಡುತ್ತಿದ್ದೇವೆ! 0086-0755-83948425 pt-sz@plastron-tech.com © ಕೃತಿಸ್ವಾಮ್ಯ - 2010-2022 : ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ., , , , , , , , ಉತ್ಪನ್ನ SMC ಕನೆಕ್ಟರ್ ಏಕ ಸ್ಲಾಟ್ BTB ಕನೆಕ್ಟರ್ ಕಾರ್ಯಕ್ರಮಗಳು 2022.03.23 ಮೆಟಲ್ ಸ್ಟ್ಯಾಂಪಿಂಗ್ಗೆ ಯಾವ ಕಚ್ಚಾ ವಸ್ತು ಉತ್ತಮವಾಗಿದೆ? ...... ನಮ್ಮನ್ನು ಸಂಪರ್ಕಿಸಿ ಇದೀಗ ನಮ್ಮ ಸುದ್ದಿಪತ್ರಗಳಿಗೆ ಚಂದಾದಾರರಾಗಿ ಮತ್ತು ಹೊಸ ಸಂಗ್ರಹಣೆಗಳು, ಇತ್ತೀಚಿನ ಲುಕ್‌ಬುಕ್‌ಗಳು ಮತ್ತು ವಿಶೇಷ ಕೊಡುಗೆಗಳೊಂದಿಗೆ ನವೀಕೃತವಾಗಿರಿ.
Mohammed Shami: ಟಿ20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರನಾಗಿ ಕಾಣಿಸಿಕೊಂಡಿರುವ ಮೊಹಮ್ಮದ್ ಶಮಿ ಕಳೆದ ಒಂದು ವರ್ಷದಿಂದ ಭಾರತದ ಪರ ಟಿ20 ಪಂದ್ಯವಾಡಿಲ್ಲ. Team India TV9kannada Web Team | Edited By: Zahir PY Sep 26, 2022 | 6:28 PM ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಟಿ20 ಸರಣಿಗೂ ಮೊಹಮ್ಮದ್ ಶಮಿ (Mohammed Shami) ಅಲಭ್ಯರಾಗುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಕೊರೋನಾ ಸೋಂಕಿಗೆ ಒಳಗಾಗಿದ್ದ ಶಮಿ ತಂಡದಿಂದ ಹೊರಗುಳಿದಿದ್ದರು. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಶಮಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಳ್ಳದಿದ್ದರೆ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರನಾಗಿ ಕಾಣಿಸಿಕೊಂಡಿರುವ ಮೊಹಮ್ಮದ್ ಶಮಿ ಕಳೆದ ಒಂದು ವರ್ಷದಿಂದ ಭಾರತದ ಪರ ಟಿ20 ಪಂದ್ಯವಾಡಿಲ್ಲ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯು ಹಿರಿಯ ವೇಗಿಯ ಪಾಲಿಗೆ ನಿರ್ಣಾಯಕ. ಒಂದು ವೇಳೆ ಮುಂಬರುವ ಸರಣಿಯಿಂದಲೂ ಕೊರೋನಾ ಕಾರಣದಿಂದ ಹೊರಗುಳಿದರೆ ಅವರ ಬದಲಿಗೆ ಬಿಸಿಸಿಐ ಮತ್ತೋರ್ವ ವೇಗಿಯನ್ನು ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ. ಅದರಂತೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಸ್ಪೀಡ್ ಮಾಸ್ಟರ್​ ಉಮ್ರಾನ್ ಮಲಿಕ್ ಹೆಸರು ಮುಂಚೂಣಿಯಲ್ಲಿದೆ. ಈಗಾಗಲೇ ಜಮ್ಮು ಕಾಶ್ಮೀರದ ಯುವ ವೇಗಿಗೆ ಸಿದ್ಧತೆಯಲ್ಲಿರುವಂತೆ ತಿಳಿಸಲಾಗಿದ್ದು, ಒಂದು ವೇಳೆ ಶಮಿ ಹೊರಗುಳಿದರೆ ಉಮ್ರಾನ್ ಮಲಿಕ್ ಮೀಸಲು ಆಟಗಾರನಾಗಿ ಆಯ್ಕೆಯಾಗಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಉಮ್ರಾನ್ ಮಲಿಕ್ ಮೀಸಲು ಆಟಗಾರನಾಗಿ ತೆರಳುವ ಸಾಧ್ಯತೆ ಹೆಚ್ಚಿದೆ. ಇದಾಗ್ಯೂ ಶಮಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡರೆ ಮಲಿಕ್ ನೆಟ್ ಬೌಲರ್ ಆಗಿ ತಂಡದ ಜೊತೆ ಇರಲಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾದ ಬೌನ್ಸಿ ಪಿಚ್​ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಹಾಗಾಗಿ ಭಾರತೀಯ ಬ್ಯಾಟ್ಸ್​ಮನ್​ಗಳಿಗೆ ಅಭ್ಯಾಸದ ವೇಳೆ 150 ಕಿ.ಮೀ ವೇಗದಲ್ಲಿ ಚೆಂಡೆಸೆಳೆಯಲು ಮಲಿಕ್ ಅವರನ್ನು ಕಳುಹಿಸಿಕೊಡುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ 2021 ರ ಟಿ20 ವಿಶ್ವಕಪ್ ವೇಳೆ ಉಮ್ರಾನ್ ಮಲಿಕ್ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಆಸ್ಟ್ರೇಲಿಯಾಗೂ ಜಮ್ಮು ಎಕ್ಸ್​ಪ್ರೆಸ್ ನೆಟ್ ಬೌಲರ್​ ಆಗಿ ತೆರೆಳುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಮೊಹಮ್ಮದ್ ಶಮಿ ಅವರ ಲಭ್ಯತೆಯು ಸ್ಪಷ್ಟವಾಗಬೇಕಿದೆ. ಶಮಿ ಅಲಭ್ಯರಾದರೆ ಉಮ್ರಾನ್ ಮಲಿಕ್ ಮೀಸಲು ಆಟಗಾರನಾಗಿ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಲಿದ್ದಾರೆ. ಭಾರತ-ಸೌತ್ ಆಫ್ರಿಕಾ ನಡುವಣ ಸರಣಿಯು ಸೆಪ್ಟೆಂಬರ್ 28 ರಿಂದ ಶುರುವಾಗಲಿದ್ದು, ಈ ಸರಣಿಯಿಂದ ಮೊಹಮ್ಮದ್ ಶಮಿ ಹೊರಗುಳಿದರೆ ಅವರ ಬದಲಿ ಆಟಗಾರನಾಗಿ ಉಮ್ರಾನ್ ಮಲಿಕ್ ಅವಕಾಶ ಪಡೆಯುವುದು ಬಹುತೇಕ ಖಚಿತ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಶಮಿ ಬದಲಿಗೆ ಕಾಣಿಸಿಕೊಂಡ ಉಮೇಶ್ ಯಾದವ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಈ ಬಾರಿ ಯುವ ವೇಗಿಗೆ ಚಾನ್ಸ್ ನೀಡುವ ಸಾಧ್ಯತೆಯಿದೆ. ಅದರಂತೆ ಶಮಿ ಸ್ಥಾನದಲ್ಲಿ ಟಿ20 ವಿಶ್ವಕಪ್ ಬಳಗದಲ್ಲಿ ಉಮ್ರಾನ್ ಮಲಿಕ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ. ಸೌತ್ ಆಫ್ರಿಕಾ ಟಿ20 ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ*.
Vishwavani Kannada Daily > ಜಿಲ್ಲೆ > ಬೆಂಗಳೂರು ನಗರ > ಸ್ತನಕ್ಯಾನ್ಸರ್‌ನ ನೂತನ ಚಿಕಿತ್ಸೆ ಕುರಿತು ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಕಾರ್ಯಾಗಾರ ಸ್ತನಕ್ಯಾನ್ಸರ್‌ನ ನೂತನ ಚಿಕಿತ್ಸೆ ಕುರಿತು ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಕಾರ್ಯಾಗಾರ Monday, April 18th, 2022 ವಿಶ್ವವಾಣಿ ಬೆಂಗಳೂರು: ಆರಂಭದಲ್ಲಿಯೇ ಸ್ತನ ಕ್ಯಾನ್ಸರ್‌ ಪತ್ತೆ ಹಚ್ಚುವುದು ಉತ್ತಮವೇ? ಇದಕ್ಕೆ ನೂತನ ಚಿಕಿತ್ಸಾ ವಿಧಾನ ಈ ಕುರಿತು “ಸರ್ಜಿಕಲ್‌ ಕಾರ್ಯಾಗಾರ”ವನ್ನು ಫೊರ್ಟಿಸ್‌ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ ಆಯೋಜಿಸಿತ್ತು. ಸೋಮವಾರ ಈ ಕಾರ್ಯಾಗಾರವನ್ನು ನಟಿ ರಾಚೆಲ್‌ ಡೇವಿಟ್‌ ಉದ್ಘಾಟಿಸಿದರು. ಈ ವೇಳೆ ಮಾತ ನಾಡಿದ ಫೊರ್ಟಿಸ್‌ ಆಸ್ಪತ್ರೆಯ ಸರ್ಜಿಕಲ್‌ ಆಂಕಾಲಜಿ ನಿರ್ದೇಶಕ ಡಾ. ಸಂದೀಪ್‌ ನಾಯಕ್‌, ಸ್ತನ ಕ್ಯಾನ್ಸರ್‌ನನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವುದು ಅನಿವಾರ್ಯ. ಸ್ತನ ಕ್ಯಾನ್ಸರ್‌ಗೆ ಪ್ರಾರಂಭದಲ್ಲಿ ಸರ್ಜಿಕಲ್‌ ಚಿಕಿತ್ಸೆ ನೀಡುವುದು ಅನಿವಾರ್ಯ. ಇಂಟ್ರಾ ಆಪರೇಟಿವ್‌ ರೇಡಿಯೇಶನ್‌ ಥೆರಪಿ (ಐಒಆರ್‌ಟಿ) ಹೊಸ ಸುಧಾರಿತ ಚಿಕಿತ್ಸೆಯು ಸನ್ತಕ್ಯಾನ್ಸರ್‌ ರೋಗಿಗಳಿಗೆ ಹೆಚ್ಚು ಉಪಯುಕ್ತ. ೩೦ ನಿಮಿಷಗಳಂತೆ ಕೇವಲ ೩೦ ದಿನಗಳಲ್ಲಿ ರೇಡಿಯೇಷನ್‌ನ್ನು ನೋಡಬಹುದು. ಈ ಮೊದಲು ಈ ಚಿಕಿತ್ಸೆಯು ತಿಂಗಳಾನುಗಟ್ಟಲೆ ತೆಗೆದುಕೊಳ್ಳುತ್ತಿತ್ತು ಎಂದರು. ಫ್ಲೋರಸೆನ್ಸ್‌ ಟೆಕ್ನಾಲಜಿ ಬಳಸಿ ಸೆಂಟಿನೆಲ್‌ ಲಿಂಫ್‌ ನೋಡ್‌ ಬಯಾಪ್ಸಿ ಮೂಲಕ ರೇಡಿಐೋ ಆಕ್ಟಿವ್‌ ಅಂಶಗಳನ್ನು ದೂರ ಇಡಬಹುದು. ಈ ಎಲ್ಲಾ ವಿಧಾನಗಳು ಸ್ತನಕ್ಯಾನ್ಸರ್‌ನನ್ನು ಶೀಘ್ರವೇ ಗುಣಮುಖ ಮಾಡಲು ಸಹಕಾರಿಯಾಗಿದೆ. ಈ ಸರ್ಜರಿಯು ಆಯ್ದ ಆಸ್ಪತ್ರೆಗಳನ್ನ ಮಾತ್ರ ಲಭ್ಯ. ಈ ನೂತನ ಸರ್ಜರಿಯ ಕುರಿತು ನಡೆದ ಕಾರ್ಯಾಗಾರದಲ್ಲಿ ೧೦೦ ಕ್ಯಾನ್ಸರ್‌ ಸ್ಪೆಷಲಿಸ್ಟ್‌ ಹಾಗೂ ಸರ್ಜನ್‌ಗಳು ಪಾಲ್ಗೊಂಡಿದ್ದರು.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುವಲ್ಲಿ ಪ್ರತಿಯೊಬ್ಬರದೂ ಪಾತ್ರವಿದೆ. ಅದಕ್ಕಾಗಿಯೇ ನಾವು ಖಾತೆ ಹಂಚಿಕೆ, ಖಾತೆದಾರರ ವಯಸ್ಸು ಮತ್ತು ಮುಂತಾದವುಗಳಿಗೆ ಸಂಬಂಧಿಸಿದಂತೆ ನಮ್ಮದೇ ಆದ ಮಾನದಂಡಗಳನ್ನು ಹೊಂದಿದ್ದೇವೆ. ಖಾತೆ ಹಂಚಿಕೆ ಖಾತೆಯನ್ನು ಹಂಚಿಕೊಳ್ಳಲು ಅನುಮತಿಸಲಾಗುವುದಿಲ್ಲ. ಯಾವುದೇ Uber ಆ್ಯಪ್ ಅನ್ನು ಬಳಸಲು, ನೀವು ಸಕ್ರಿಯ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು ಮತ್ತು ನಿರ್ವಹಿಸಬೇಕು. ನಿಮ್ಮ ಖಾತೆಯನ್ನು ಇನ್ನೊಬ್ಬ ವ್ಯಕ್ತಿ ಬಳಸಲು ಅವಕಾಶ ನೀಡಬೇಡಿ ಮತ್ತು ನಿಮ್ಮ ಲಾಗಿನ್ ಮಾಹಿತಿಯನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಬೇಡಿ. ಸವಾರರಿಗಾಗಿ ಸಲಹೆಗಳು ನಿಮ್ಮ ಖಾತೆಯನ್ನು ರಕ್ಷಿಸಿಕೊಳ್ಳಿ. ನಿಮ್ಮ ಖಾತೆಗೆ ಬೇರೊಬ್ಬರು ಪ್ರವೇಶಿಸಲು ಬಿಡಬೇಡಿ. ನಮ್ಮ ವಯಸ್ಸಿನ ಅಗತ್ಯತೆಯನ್ನು ಪೂರೈಸುವ ಇನ್ನೊಬ್ಬ ವ್ಯಕ್ತಿಗೆ ಸವಾರಿ ಮಾಡಲು ವಿನಂತಿಸುವುದು ಸರಿ ಮತ್ತು ಅದು Uber ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯಲ್ಲ. ಚಾಲಕರಿಗಾಗಿ ಸಲಹೆಗಳು ನಿಮ್ಮ ಖಾತೆಯನ್ನು ರಕ್ಷಿಸಿಕೊಳ್ಳಿ. ನಿಮ್ಮ ಖಾತೆಯನ್ನು ಬಳಸಿಕೊಂಡು ಬೇರೆ ಯಾವುದೋ ವ್ಯಕ್ತಿಯು Uber ಆ್ಯಪ್ ಮೂಲಕ ವಿನಂತಿಗಳನ್ನು ಸ್ವೀಕರಿಸಲು ಎಂದಿಗೂ ಅನುಮತಿಸಬೇಡಿ. ಬೈಕು ಮತ್ತು ಸ್ಕೂಟರ್ ಸವಾರರಿಗಾಗಿ ಸಲಹೆಗಳು ನಿಮ್ಮ ಖಾತೆಯನ್ನು ಸಂರಕ್ಷಿಸಿ. ನಿಮ್ಮ ಖಾತೆಯನ್ನು ಬಳಸಿಕೊಂಡು ಬೇರೊಬ್ಬರು ಸ್ಕೂಟರ್ ಅಥವಾ ಬೈಕು ಬಾಡಿಗೆಗೆ ಪಡೆಯಲು ಎಂದಿಗೂ ಅವಕಾಶ ನೀಡಬೇಡಿ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ನೀವು ಸವಾರರ ಖಾತೆಯನ್ನು ಹೊಂದಬೇಕಾದರೆ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಖಾತೆದಾರರ ಜೊತೆಗೆ ಒಟ್ಟಿಗೆ ಪ್ರಯಾಣಿಸದ ಹೊರತು, ಅಂತಹ ಅಪ್ರಾಪ್ತರು ಸವಾರಿ ಮಾಡಲೆಂದು ಸವಾರಿಗಾಗಿ ವಿನಂತಿಸಲು ಖಾತೆದಾರರಿಗೆ ಸಾಧ್ಯವಾಗುವುದಿಲ್ಲ. ಖಾತೆದಾರರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬಳಸಬೇಕಾದ ಬೈಕು ಅಥವಾ ಸ್ಕೂಟರ್ ಅನ್ನು ಸಹ ಬಾಡಿಗೆಗೆ ಪಡೆಯಲು ಸಾಧ್ಯವಿಲ್ಲ. ಚಾಲಕರಿಗಾಗಿ ಸಲಹೆಗಳು ಪಿಕಪ್ ಸಮಯದಲ್ಲಿ ನಿಮ್ಮ ಸವಾರರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ನಿಮ್ಮ ಗಮನಕ್ಕೆ ಬಂದರೆ, ನೀವು ಟ್ರಿಪ್‌ಗಳನ್ನು ನಿರಾಕರಿಸಬಹುದು ಮತ್ತು ಆ ಕುರಿತು Uber ‌ಗೆ ವರದಿ ಮಾಡಬಹುದು. ಇದರ ಆಧಾರದ ಮೇಲೆ ಟ್ರಿಪ್‌ಗಳನ್ನು ನಿರಾಕರಿಸುವುದು ಅಥವಾ ರದ್ದುಪಡಿಸುವುದರಿಂದ ನಿಮ್ಮ ಚಾಲಕ ರೇಟಿಂಗ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ನೀವು ಯಾಕೆ ಟ್ರಿಪ್ ಸ್ವೀಕರಿಸಲು ಸಾಧ್ಯವಿಲ್ಲ ಎಂಬುದರ ಕುರಿತು ನಿಮ್ಮ ಸವಾರರಿಗೆ ತಿಳಿಸುವುದು ಒಳ್ಳೆಯದು. ಆಗ ಅವರಿಗೆ ಯಾಕೆ ರದ್ದಾಯಿತು ಎಂಬ ಗೊಂದಲ ಮೂಡುವುದಿಲ್ಲ. ಸವಾರರಿಗಾಗಿ ಸಲಹೆಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸವಾರಿ ಮಾಡುವುದಕ್ಕೆ ವಯಸ್ಕರು ವಿನಂತಿಸಿಕೊಳ್ಳುವಂತಿಲ್ಲ ಅಥವಾ ಏಕಾಂಗಿಯಾಗಿ ಸವಾರಿ ಮಾಡಲು ಕೂಡ ಅನುಮತಿಸುವಂತಿಲ್ಲ. ಬೈಕು ಮತ್ತು ಸ್ಕೂಟರ್ ಸವಾರರಿಗಾಗಿ ಸಲಹೆಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ Uber ಆ್ಯಪ್ ಬಳಸಿ ಬೈಕು ಅಥವಾ ಸ್ಕೂಟರ್ ಬಾಡಿಗೆಗೆ ಪಡೆಯಲು ಅನುಮತಿಸಲಾಗುವುದಿಲ್ಲ. ಹೆಚ್ಚುವರಿ ಪ್ರಯಾಣಿಕರು ಮತ್ತು ಪ್ಯಾಕೇಜ್‌ಗಳು Uber ಜೊತೆಗೆ ಚಾಲನೆ ಮಾಡುವಾಗ, ವಿನಂತಿಸುವ ಸವಾರ ಮತ್ತು ಸವಾರ'ರ ಅತಿಥಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ವಾಹನಕ್ಕೆ ಏರಲು ಅನುಮತಿ ಇರುವುದಿಲ್ಲ. Uber ಜೊತೆಗೆ ಸವಾರಿ ಮಾಡುವಾಗ, ಅವರ ಇಡೀ ಸಮೂಹದ ವರ್ತನೆಗೆ ಖಾತೆದಾರರೇ ಜವಾಬ್ದಾರರಾಗಿರುತ್ತಾರೆ. ನೀವು ಬೇರೊಬ್ಬ ವಯಸ್ಕರಿಗಾಗಿ ಸವಾರಿಯನ್ನು ವಿನಂತಿಸಿಕೊಂಡರೆ ಅಥವಾ ಬೈಕು ಇಲ್ಲವೇ ಸ್ಕೂಟರ್ ಅನ್ನು ಬಾಡಿಗೆಗೆ ಪಡೆದರೆ, ಅವರು ಟ್ರಿಪ್‌ನಲ್ಲಿರುವಾಗ ತೋರುವ ವರ್ತನೆಗೆ ನೀವೇ ಜವಾಬ್ದಾರರಾಗಿರುತ್ತೀರಿ. ಜೊತೆಗೆ, Uber ಆ್ಯಪ್ ಅನ್ನು ವಿತರಣಾ ಸೇವೆಯಾಗಿ ಬಳಸಲು ಉದ್ದೇಶಿಸಿಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ. ಐಟಂ ಮತ್ತು/ಅಥವಾ ಪ್ಯಾಕೇಜ್ ಅನ್ನು ತಲುಪಿಸುವ ಉದ್ದೇಶದಿಂದ ಸವಾರರು ವಿನಂತಿಸಿದ್ದರೆ, ಸವಾರಿಯನ್ನು ಸ್ವೀಕರಿಸದಿರಲು ಅಥವಾ ಸವಾರಿ ವಿನಂತಿಯನ್ನು ರದ್ದುಗೊಳಿಸಲು ಚಾಲಕರಿಗೆ ಹಕ್ಕಿರುತ್ತದೆ. ಪ್ಯಾಕೇಜ್ ಮತ್ತು/ಅಥವಾ ಐಟಂ ವಿತರಣೆಯ ಉದ್ದೇಶಕ್ಕಾಗಿ ನೀವು Uber ಆ್ಯಪ್‌ಗಳನ್ನು ಬಳಸಲು ಪರಿಗಣಿಸಿದರೆ, ವಿತರಣೆಯ ಸಂದರ್ಭದಲ್ಲಿ ಪ್ಯಾಕೇಜ್(‌ಗಳಿಗೆ)ಗೆ ಮತ್ತು/ಅಥವಾ ಐಟಂಗಳಿಗೆ ಏನಾದರೂ ಆದರೆ ಅದಕ್ಕೆ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ. ಅಂತಹ ಪ್ಯಾಕೇಜ್‌ಗಳು ಮತ್ತು/ಅಥವಾ ಐಟಂಗಳು Uber ನ ವಿಮೆಗೆ ಒಳಪಟ್ಟಿರುವುದಿಲ್ಲ. ವಾಹನದ ಮಾಹಿತಿ ಸುಲಭ ಪಿಕಪ್‌ಗಾಗಿ, Uber ಆ್ಯಪ್‌ಗಳು ಚಾಲಕರು ಮತ್ತು ಅವರ ವಾಹನಗಳ ಬಗ್ಗೆ ಗುರುತಿಸುವ ಮಾಹಿತಿಯನ್ನು ಸವಾರರಿಗೆ ನೀಡುತ್ತವೆ. ಅವುಗಳಲ್ಲಿ ಪರವಾನಗಿ ಪ್ಲೇಟ್ ಸಂಖ್ಯೆ, ವಾಹನ ತಯಾರಿಕೆ ಮತ್ತು ಮಾದರಿ, ಪ್ರೊಫೈಲ್ ಚಿತ್ರ ಮತ್ತು ಹೆಸರು ಮುಂತಾದ ವಿವರಗಳು ಸೇರಿರುತ್ತವೆ. ಚಾಲಕರಿಗಾಗಿ ಸಲಹೆಗಳು ನಿಮ್ಮ ವಾಹನದ ಮಾಹಿತಿ ಮತ್ತು ಇನ್ನೇನು ಅವಧಿ ಮೀರಲಿರುವ ಚಾಲಕ ಪರವಾನಗಿ ರೀತಿಯ ಅಮಾನ್ಯವಾಗಬಹುದಾದ ನಿಮ್ಮ ದಾಖಲೆಗಳಿಗೆ ಯಾವುದೇ ಪರಿಷ್ಕರಣೆಗಳಾಗಿದ್ದಲ್ಲಿ, ನಮಗೆ ತಿಳಿಸಿ ಇದರಿಂದಾಗಿ Uber ನಿಖರವಾದ ಮಾಹಿತಿಯನ್ನು' ಒದಗಿಸಬಹುದು. ಸವಾರರಿಗಾಗಿ ಸಲಹೆಗಳು ಆ್ಯಪ್‌ನಲ್ಲಿ ಒದಗಿಸಲಾದ ಮಾಹಿತಿಗೆ ಪ್ರತಿಯಾಗಿ ನಿಮ್ಮ ಸವಾರಿಯನ್ನು ಯಾವಾಗಲೂ ಪರಿಶೀಲಿಸಿ. ಕಾರು' ಚಾಲಕರು ಸರಿಯಾದ ಗುರುತಿಸುವಿಕೆ ಮಾಹಿತಿಯನ್ನು ಹೊಂದಿಲ್ಲದಿದ್ದರೆ, ಕಾರನಲ್ಲಿ ಹೋಗಬೇಡಿ. ಸೀಟ್ ಬೆಲ್ಟ್‌ಗಳು ಕಾರು ಅಪಘಾತಗಳಲ್ಲಿ ಜೀವಗಳನ್ನು ಉಳಿಸಲು ಮತ್ತು ದೇಹಕ್ಕಾಗುವ ಹಾನಿಗಳನ್ನು ಕಡಿಮೆ ಮಾಡಲು ಸೀಟ್ ಬೆಲ್ಟ್ ಬಳಕೆಯು ಹೆಚ್ಚು ಪರಿಣಾಮಕಾರಿ ವಿಧಾನವಾಗಿದೆ. ಪ್ರತಿಯೊಬ್ಬ ಚಾಲಕರು ಮತ್ತು ಹಿಂಬದಿ ಸೀಟಿನಲ್ಲಿ ಕುಳಿತಿರುವ ಸವಾರರು ಯಾವಾಗಲೂ ಸೀಟ್ ಬೆಲ್ಟ್ ಅನ್ನು ಧರಿಸಿರಬೇಕು. ಸವಾರರು ತಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಸೀಟ್ ಬೆಲ್ಟ್‌ಗಳಿರುವ ಕಾರನ್ನು ವಿನಂತಿಸಿಕೊಳ್ಳಬೇಕು ಮತ್ತು ಚಾಲಕರು ತಮ್ಮ ಕಾರಿನಲ್ಲಿರುವ ಎಲ್ಲಾ ಪ್ರಯಾಣಿಕರಿಗೂ ಬೇಕಾಗುವಷ್ಟು ಸೀಟ್ ಬೆಲ್ಟುಗಳು ಇಲ್ಲದಿದ್ದರೆ ಸವಾರಿ ವಿನಂತಿಯನ್ನು ತಿರಸ್ಕರಿಸಬಹುದು. ಬೈಕ್‌ಗಳು, ಮೋಟರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳಿಗಾಗಿ ಹೆಲ್ಮೆಟ್‌ಗಳು ನಿಮ್ಮ ಸುರಕ್ಷತೆಗಾಗಿ, ಬೈಕು, ಮೋಟಾರ್‌ಸೈಕಲ್ ಅಥವಾ ಸ್ಕೂಟರ್ ಸವಾರಿ ಮಾಡುವಾಗ, ನಿಮಗೆ ಅನುಕೂಲಕರವೆನಿಸುವ ಹೆಲ್ಮೆಟ್ ಅನ್ನು ಧರಿಸಿ. ತಯಾರಕರ ಸೂಚನೆಗಳ ಪ್ರಕಾರ ನೀವು ಹೆಲ್ಮೆಟ್‌ಗಳನ್ನು ಧರಿಸಿದಾಗ, ನಿಮ್ಮನ್ನು ಅಪಾಯಗಳಿಂದ ಸಂರಕ್ಷಿಸುತ್ತವೆ: ನಿಮ್ಮ ಹಣೆಯ ಕೆಳಗೆ ಮತ್ತು ನಿಮ್ಮ ಗಲ್ಲದ ಕೆಳಗೆ ಕಟ್ಟಿಕೊಳ್ಳಿ. ಕ್ಯಾಮರಾಗಳು ಅಥವಾ ಇತರ ವೀಡಿಯೊ ಅಥವಾ ಆಡಿಯೊ ರೆಕಾರ್ಡಿಂಗ್ ಸಾಧನಗಳ ಬಳಕೆ Uber ಆ್ಯಪ್‌ಗಳನ್ನು ಬಳಸುವ ಯಾರಾದರೂ ಅವರು Uber ಅಥವಾ ಸಂಬಂಧಿತ ಪ್ರಾಧಿಕಾರಕ್ಕೆ ವರದಿ ಮಾಡಲು ಬಯಸುವ ಸಮಸ್ಯೆಯನ್ನು ದಾಖಲಿಸುವುದು ಸೇರಿದಂತೆ ಅನ್ವಯವಾಗುವ ಕಾನೂನುಗಳಿಂದ ಅನುಮತಿಸಲಾದ ಮಟ್ಟಿಗೆ ಟ್ರಿಪ್ ಅಥವಾ ವಿತರಣೆಯ ಎಲ್ಲಾ ಅಥವಾ ಭಾಗಶಃ ಮಾಹಿತಿಯನ್ನು ರೆಕಾರ್ಡ್ ಮಾಡಲು ಆಯ್ಕೆ ಮಾಡಬಹುದು. ಯಾವ ವ್ಯಕ್ತಿಯ ಮಾಹಿತಿಯನ್ನು ದಾಖಲಿಸಲಾಗುತ್ತಿದೆಯೋ ಆ ವ್ಯಕ್ತಿಗೆ ತಿಳಿಸಲು ಮತ್ತು/ಅಥವಾ ಅವರ ಸಮ್ಮತಿಯನ್ನು ಪಡೆದುಕೊಳ್ಳಲು, ಅನ್ವಯವಾಗುವ ಕಾನೂನುಗಳು ಅಥವಾ ನಿಬಂಧನೆಗಳು ರೆಕಾರ್ಡಿಂಗ್ ಸಾಧನಗಳನ್ನು ಬಳಸುವ ಅಗತ್ಯವಿರುತ್ತದೆ. ಈ ನಿಯಮಗಳು ಅನ್ವಯವಾಗುತ್ತವೆ ಎಂಬುದನ್ನು ನಿರ್ಧರಿಸಲು ಸ್ಥಳೀಯ ನಿಯಮಾವಳಿಗಳನ್ನೊಮ್ಮೆ ಪರಿಶೀಲಿಸಿ. ವ್ಯಕ್ತಿಯ ಚಿತ್ರ, ಆಡಿಯೊ ಅಥವಾ ವೀಡಿಯೊ ರೆಕಾರ್ಡಿಂಗ್ ಪ್ರಸಾರ ಮಾಡಲು ಅನುಮತಿಸಲಾಗುವುದಿಲ್ಲ. ಎಚ್ಚರದಿಂದಿರಿ ರಸ್ತೆಯಿಂದ ಹೊರಗುಳಿಯುವುದು ಎಂದರೆ ನಿಮ್ಮನ್ನು ಮತ್ತು ಇತರರನ್ನು ಸುರಕ್ಷಿತವಾಗಿಡಲು ನಿಮ್ಮ ಕೈಲಾದಷ್ಟು ಸಹಾಯ ಮಾಡುವುದು ಎಂದರ್ಥ. ಅಂದರೆ, ನಿಮ್ಮ ಕಣ್ಣುಗಳನ್ನು ರಸ್ತೆಯ ಮೇಲೆ ಹಾಯಿಸುವುದು, ಚೆನ್ನಾಗಿ ವಿಶ್ರಾಂತಿ ಪಡೆಯುವುದು ಮತ್ತು ತ್ವರಿತ ಕ್ರಮ ಕೈಗೊಳ್ಳುವ ಅಗತ್ಯವಿರುವ ಸಂದರ್ಭಗಳನ್ನು ನಿಭಾಯಿಸುವುದು. ಅಸುರಕ್ಷಿತ ಚಾಲನೆ ನಡವಳಿಕೆಯ ಕುರಿತು ವರದಿಗಳನ್ನು ನಾವು ಪರಿಶೀಲನೆ ನಡೆಸುತ್ತೇವೆ. ಸೂಕ್ತ ಕಾರ್ಯನಿರ್ವಹಣೆ ಮತ್ತು ನಿಯಂತ್ರಣ ಉದ್ಯಮದ ಸುರಕ್ಷತೆ ಮತ್ತು ನಿರ್ವಹಣಾ ಮಾನದಂಡಗಳ ಪ್ರಕಾರ ಚಾಲಕರು ತಮ್ಮ ವಾಹನಗಳಲ್ಲಿ ಉತ್ತಮ ಬ್ರೇಕ್, ಸೀಟ್ ಬೆಲ್ಟ್ ಮತ್ತು ಟೈರ್‌ಗಳಿಂದ ಕೂಡಿದ ಉತ್ತಮ ಕಾರ್ಯಾಚರಣೆ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಮತ್ತು ವಾಹನ ತಯಾರಕರು ಹಿಂಪಡೆದ ಯಾವುದೇ ಬಿಡಿಭಾಗಗಳನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ದುರಸ್ತಿ ಮಾಡಿಸಬೇಕು. ರಸ್ತೆ ಮಾರ್ಗವನ್ನು ಹಂಚಿಕೊಳ್ಳಿ ಸುರಕ್ಷಿತ ರಸ್ತೆ ಮಾರ್ಗಗಳು ಎಂದರೆ ಸುರಕ್ಷಿತ ನಡವಳಿಕೆಯನ್ನು ಅಭ್ಯಾಸ ಮಾಡುವುದು ಎಂಬರ್ಥ. ಇದರಲ್ಲಿ ಹೇಗೆ ಪ್ರಯಾಣಿಸುತ್ತಾರೆ ಎಂಬುದನ್ನು ಲೆಕ್ಕಿಸದೆಯೇ ಎಲ್ಲಾ ರೀತಿಯ ಪ್ರಯಾಣಿಕರನ್ನು ಹುಡುಕುವುದೂ ಸೇರಿರುತ್ತದೆ. ಸವಾರರಿಗಾಗಿ ಸಲಹೆಗಳು ವಾಹನದಿಂದ ಕೆಳಗಿಳಿಯುವ ಮೊದಲು ಯಾವಾಗಲೂ ನಿಮ್ಮ ಭುಜದ ಮೇಲೆ ಕಣ್ಣಾಡಿಸಿ, ಮತ್ತು ದ್ವಿಚಕ್ರ ವಾಹನ ಸವಾರರು, ಕಾರುಗಳು, ಪಾದಚಾರಿಗಳು ಮತ್ತು ಸ್ಕೂಟರ್‌ಗಳ ಬಗ್ಗೆ ಗಮನವಿರಿಸಿ. ಬೈಕು ಮತ್ತು ಸ್ಕೂಟರ್ ಸವಾರರಿಗಾಗಿ ಸಲಹೆಗಳು ಬೈಕು, ಸ್ಕೂಟರ್ ಅಥವಾ ಕಾಲ್ನಡಿಗೆಯಲ್ಲಿ ಪ್ರಯಾಣಿಸುವ ಇತರ ಜನರ ಬಗ್ಗೆ ಗಮನವಿರಲಿ ಮತ್ತು ನಿಮ್ಮ ಮುಂದಿರುವ ರಸ್ತೆ ಪರಿಸ್ಥಿತಿಗಳ ಬಗ್ಗೆಯೂ ಕೂಡ ಎಚ್ಚರವಿರಲಿ. ಸಾರ್ವಜನಿಕ ತುರ್ತುಸ್ಥಿತಿಗಳು ನೈಸರ್ಗಿಕ ವಿಪತ್ತುಗಳು, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳು ಮತ್ತು ಸಾರ್ವಜನಿಕ ಬಿಕ್ಕಟ್ಟಿನ ಸಂದರ್ಭಗಳನ್ನು ಒಳಗೊಂಡಂತೆ ಆದರೆ ಸೀಮಿತವಾಗಿರದ ಸಾರ್ವಜನಿಕ ತುರ್ತುಸ್ಥಿತಿಯ ಸಂದರ್ಭಗಳಲ್ಲಿ ನಮ್ಮ ಪ್ಲಾಟ್‌ಫಾರ್ಮ್‌ನ ಸುರಕ್ಷತೆಯನ್ನು ಕಾಪಾಡಲು Uber ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ, Uber ಪ್ಲಾಟ್‌ಫಾರ್ಮ್ ಬಳಸುವ ಯಾರಾದರೂ ಸಾರ್ವಜನಿಕ ಹಾನಿಯಾಗುವ ಸಾಮರ್ಥ್ಯವನ್ನು ಪ್ರಸ್ತುತಪಡಿಸಬಹುದು ಎಂದು Uber ಸಾರ್ವಜನಿಕ ಆರೋಗ್ಯ ಪ್ರಾಧಿಕಾರದಿಂದ ಸೂಚನೆ ಪಡೆದರೆ, Uber ಪ್ಲಾಟ್‌ಫಾರ್ಮ್ ಬಳಸಿ ಪುನರಾರಂಭಿಸಲು ವ್ಯಕ್ತಿಯನ್ನು ಅನುಮತಿಸಲು ಸಮಂಜಸವಾಗಿ ಸುರಕ್ಷಿತವಾಗುವವರೆಗೆ ನಾವು ವ್ಯಕ್ತಿಯ ಖಾತೆಯನ್ನು ನಿರೀಕ್ಷೆಯಲ್ಲಿರಿಸುವಂತೆ ಮಾಡಬಹುದು. ಅಂತೆಯೇ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ, ನೈಸರ್ಗಿಕ ವಿಪತ್ತು ಅಥವಾ ಇತರ ಸಾರ್ವಜನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅಥವಾ ಮುಂದುವರಿದ Uber ಪ್ಲಾಟ್‌ಫಾರ್ಮ್‌ನ ಲಭ್ಯತೆಯು ಸ್ಪಷ್ಟ ಮತ್ತು ಪ್ರಸ್ತುತ ಅಪಾಯವನ್ನು ಅನುಸರಿಸಲು ನಾವು ಇಡೀ ನಗರ ಅಥವಾ ಪ್ರದೇಶದ ವ್ಯಕ್ತಿಗಳು Uber ಪ್ಲಾಟ್‌ಫಾರ್ಮ್‌ನ ಭಾಗ ಅಥವಾ ಎಲ್ಲದರ ಬಳಕೆಯನ್ನು ನಾವು ತಡೆಯಬಹುದು.
ಬಾಳು ಬಂಗಾರವಾಗಿಲಿ ಮನಸ್ಸು ಮಲ್ಲಿಗೆಯಂತೆ ಮೃದುವಾಗಿರಲ್ಲಿ ಸ್ನೇಹ ಚಿರಕಾಲ ಉಳಿಯಲ್ಲಿ, ಪ್ರೀತಿ ವಿಶ್ವಾಸ ಅಮರವಾಗಿರಲಿ,ತಾಯಿ ಚಾಮುಂಡೇಶ್ವರಿ ದೇವಿಯು ಎಲ್ಲರಿಗೂ ಸುಖ ಸಂತೋಷ ಸಮೃದ್ಧಿ ನೀಡಿ ಹರಿಸಲ್ಲಿ. ನಿಮ್ಮಗೂ ನಿಮ್ಮ ಕುಟುಂಬದರಿಗೂ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು ಇನ್ನೇನು ನವರಾತ್ರಿ ಬಂದೇ ಬಿಟ್ಟಿದೆ. 10 ದಿನಗಳ ಈ ಕಾರ್ಯಕ್ರಮವನ್ನು ಭಾರತದಾದ್ಯಂತ ಬಹಳ ಭವ್ಯತೆ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ದುರ್ಗಾ ದೇವಿಯನ್ನು (Durga Puja) ಪೂಜಿಸಲಾಗುತ್ತದೆ; ಅವಳು ಶಕ್ತಿಯ ಸಂಕೇತ. ನವರಾತ್ರಿ ಎಂದರೆ “ಒಂಬತ್ತು ರಾತ್ರಿಗಳು”(nine nights), ಇದು ಈ ವರ್ಷದ ಅಕ್ಟೋಬರ್ 7ರಿಂದ ಆರಂಭವಾಗಲಿದೆ. ಅಕ್ಟೋಬರ್ 15 ರವರೆಗೆ ನಡೆಯಲಿದೆ. ನವರಾತ್ರಿ ಒಂದು ಹಿಂದೂ ಹಬ್ಬವಾಗಿದ್ದು, ರಾಕ್ಷಸ ರಾಜ ಮಹಿಷಾಸುರನನ್ನು ಗೆದ್ದ ದುರ್ಗಾ ದೇವಿಯನ್ನು ಈ ಹಬ್ಬದಲ್ಲಿ ಸ್ಮರಿಸಲಾಗುತ್ತದೆ. ಹಬ್ಬದ ಇತಿಹಾಸ (History of Navaratri) ನವರಾತ್ರಿಯ ಬಗ್ಗೆ ಹಲವಾರು ಪುರಾಣ ಕಥೆಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ. ಪುರಾಣಗಳ ಪ್ರಕಾರ, ಬ್ರಹ್ಮದೇವನು ರಾಕ್ಷಸ ರಾಜ ಮಹಿಷಾಸುರನಿಗೆ (Demon Mahisha) ಅಮರತ್ವವನ್ನು ವಾಗ್ದಾನ ಮಾಡಿದನು . ಅಂದರೆ ಕೇವಲ ಒಬ್ಬ ಮಹಿಳೆಯಿಂದ ಮಾತ್ರ ಅವನನ್ನು ಸೋಲಿಸಲು ಅಥವಾ ಸಂಹಾರ ಮಾಡಲು ಸಾಧ್ಯ ಎಂದು ವರ ನೀಡಲಾಗಿತ್ತು. ಯಾವ ಹೆಣ್ಣು ತನ್ನನ್ನು ಕೊಲ್ಲಲು ಸಾಧ್ಯವೇ ಇಲ್ಲ ಎಂಬ ಭ್ರಮೆಯಲ್ಲಿದ್ದ ಮಹಿಷಾಸುರನು ತ್ರಿಲೋಕಗಳ ಮೇಲೆ ದಾಳಿ ಮಾಡುವುದನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ, ಅವುಗಳೆಂದರೆ ಭೂಮಿ (Earth), ಸ್ವರ್ಗ (Heaven) ಮತ್ತು ನರಕ (Hell). ಆಗ ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಶಿವನ ಶಕ್ತಿಗಳು ಸೇರಿ ದುರ್ಗಾ ದೇವಿಯಾಗಿ ಅವತರಿಸದರು ಎನ್ನಲಾಗಿದೆ. ಇದರ ಪರಿಣಾಮವಾಗಿ ಮಹಿಷಾಸುರ ಮತ್ತು ದೇವಿ ದುರ್ಗಾ ನಡುವೆ 15 ದಿನಗಳ ಕಾಲ ನಡೆದ ಯುದ್ಧದ ಸಮಯದಲ್ಲಿ ರಾಕ್ಷಸ ರಾಜನು ದೇವಿಯನ್ನು ದಾರಿ ತಪ್ಪಿಸಲು ತನ್ನ ಆಕಾರವನ್ನು ಬದಲಾಯಿಸಿದನು. ಆತ ಮಹಿಷನಾಗಿ ಬದಲಾದನು ಎನ್ನಲಾಗಿದೆ. ಯುದ್ದದಲ್ಲಿ (War) ದುರ್ಗಾ ದೇವಿಯು ತನ್ನ ತ್ರಿಶೂಲದಿಂದ ಅವನನ್ನು ಕೊಲ್ಲುತ್ತಾಳೆ. ಮಹಾಲಯದ ದಿನ ಮಹಿಷಾಸುರನನ್ನು ಕೊಲ್ಲಲಾಯಿತು. ಹಬ್ಬದ ಮಹತ್ವ ಮತ್ತು ಆಚರಣೆ ದೇವಿಯರಾದ ಶೈಲಪುತ್ರಿ (ದಿನ 1), ಬ್ರಹ್ಮಚಾರಿನಿ (ದಿನ 2), ಚಂದ್ರಘಂಟಾ (ದಿನ 3), ಕೂಷ್ಮಾಂಡ (ದಿನ 4), ಸ್ಕಂದಮಾತಾ (ದಿನ 5), ಕಾತ್ಯಾಯನಿ (ದಿನ 6), ಕಾಲರಾತ್ರಿ (ದಿನ 7), ಮಹಾಗೌರಿ (ದಿನ 8) ಮತ್ತು ಸಿದ್ಧಿದಾತ್ರಿ (ದಿನ 9) ಅವರನ್ನು ಒಂಬತ್ತು ದಿನಗಳ (Nine days)ಅವಧಿಯಲ್ಲಿ ಗೌರವಿಸಲಾಗುತ್ತದೆ. ಈ ಸಂದರ್ಭದಲ್ಲಿ, ಸಂಬಂಧಿಕರು ಮತ್ತು ಸ್ನೇಹಿತರು ತಮ್ಮ ಸಂಪ್ರದಾಯಗಳನ್ನು ಜೊತೆಯಾಗಿ ಆಚರಿಸಲು ಒಟ್ಟುಗೂಡುತ್ತಾರೆ. ಹಬ್ಬದ ಸಮಯದಲ್ಲಿ, ದಾಂಡಿಯಾವನ್ನು ಗುಜರಾತ್ ನಾದ್ಯಂತ (Dandiya in Gujrat) ಆಡಲಾಗುತ್ತದೆ, ಮತ್ತು ಹೆಚ್ಚಿನ ಜನರು ಉಪವಾಸ ಮಾಡುತ್ತಾರೆ ಮತ್ತು ಪ್ರಾರ್ಥನೆಯಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಮೈಸೂರು : ಮೈಸೂರಿನ ದಸರಾವನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವು ಕರುನಾಡ ಹಬ್ಬ (Sate Festival). ಕರ್ನಾಟಕದ ಪ್ರಮುಖ ಹಬ್ಬವಾಗಿದೆ. ನವರಾತ್ರಿಯ ಆ ವೈಭವ, ವಿಜಯ ದಶಮಿ (Vijaya Dashami), ಜಂಬೂ ಸವಾರಿಯನ್ನು (Jambu Savari), ನವರಾತ್ರಿಯ ಅಲಂಕಾರಗೊಳ್ಳುವ ಮೈಸೂರು ಅರಮನೆ (Mysore Palace) , ಮೈಸೂರು ನಗರ, ಶೃಂಗಾರಗೊಂಡ ನಗರ, ವಿವಿಧ ಕಾರ್ಯಕ್ರಮ, ಸಾಂಸ್ಕೃತಿಕ ವೈಭವ ನೋಡಲು ದೇಶ, ವಿದೇಶಗಳಿಂದ ಜನ ಸಾಗರವೇ ಹರಿದು ಬರುತ್ತದೆ. ಕೋಲ್ಕತ್ತಾದ ದುರ್ಗಾ ಪೂಜೆ (Durga Puja in Kolkata) ನವರಾತ್ರಿ ಉತ್ಸವವನ್ನು ಪಶ್ಚಿಮ ಬಂಗಾಳದಲ್ಲಿ ಅದರಲ್ಲೂ ವಿಶೇಷವಾಗಿ ಕೊಲ್ಕತ್ತಾದಲ್ಲಿ ದುರ್ಗಾ ಪೂಜಾ ಎಂಬ ಹೆಸರಿನಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಇದರ ಖ್ಯಾತಿ ಎಷ್ಟಿದೆ ಎಂದರೆ ಭಾರತದಲ್ಲಿ ದುರ್ಗಾ ಪೂಜೆ ಅಥವಾ ನವರಾತ್ರಿ ಎಂದರೆ ಎಲ್ಲರೂ ಮೊದಲಿಗೆ ಕೊಲ್ಕತ್ತಾ ಎಂತಲೆ ಹೇಳುತ್ತಾರೆ. ರಾಮ್ ಲೀಲಾವನ್ನು (Ram Leela) ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ, ಮತ್ತು ಒಂಬತ್ತು ದಿನಗಳ ಉತ್ಸವವು ದಸರಾದೊಂದಿಗೆ ಕೊನೆಗೊಳ್ಳುತ್ತದೆ, ಈ ಸಮಯದಲ್ಲಿ ರಾವಣನ ಹುಲ್ಲಿನ ಪ್ರತಿಕೃತಿಗಳನ್ನು ಸುಡಲಾಗುತ್ತದೆ, ಇದು ದುಷ್ಟರ ಮೇಲೆ ಸದ್ಗುಣದ ವಿಜಯವನ್ನು ಸಂಕೇತಿಸುತ್ತದೆ. ರಾಮ ರಾವಣನ್ನು ಸಂಹರಿಸಿದ ದಿನ : ನವರಾತ್ರಿ ರಾಮಾಯಣಕ್ಕೂ ಒಂದು ಸಂಬಂಧವಿದೆ ಎಂದು ಪುರಾಣಗಳು ಹೇಳುತ್ತವೆ. ರಾವಣನೆಂಬ ಬಲಶಾಲಿ ರಾಕ್ಷಸನನ್ನು ವಧೆ ಮಾಡಲು ರಾಮನು ಒಂಬತ್ತು ದಿನಗಳ ಕಾಲ ದುರ್ಗೆಯ ಪೂಜೆ ಮಾಡಿ ಆಕೆಯಿಂದ ಶಕ್ತಿ ಹಾಗೂ ಬಲ ಪಡೆದ ಎನ್ನಲಾಗುತ್ತದೆ. ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಇದರ ಬಳಿಕ ರಾಮ ವಧಿಸಿದ. ಒಂಬತ್ತು ದಿನ ಕಾಲ ನವರಾತ್ರಿ ಎಂದು ಕರೆಯಲಾಗುವುದು ಮತ್ತು ರಾಮನು ರಾವಣನನ್ನು ಅಂತಿಮ ದಿನ ವಧಿಸಿದ. ಈ ದಿನವನ್ನು ದಸರಾ (Dasara) ಅಥವಾ ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ರಾವಣನಂತಹ ದುಷ್ಟ ರಾಕ್ಷಸನ ಮೇಲೆ ರಾಮನ ಗೆಲುವನ್ನು ತೋರಿಸುತ್ತದೆ ಎಂದು ಸಹ ಹೇಳಲಾಗುತ್ತದೆ. ನಾಡಿನ ಸಮಸ್ತ ಜನತೆಗೆ ಎಎಪಿ ಜಿಲ್ಲಾ ಮಟ್ಟ ಹಾಗೂ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಮತ್ತು ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು. ವರದಿ – ಸಂಪಾದಕೀಯಾ Post Views: 83 Post navigation ದಾವಣಗೆರೆ ಜಿಲ್ಲೆಯ ವಿವಿದ ಭಾಗಗಳಲ್ಲಿ ಸುರಿದ ಬಾರಿ ಮಳೆಗೆ ಭದ್ರಾ ಜಲಾಶಯದ ಬಲದಂಡೆಯ ನಾಲೆಯ ತೊಟ್ಟಿಲು ಸೇತುವೆ ಒಡೆದಿದ್ದುದರಿಂದ ಸ್ಥಳಕ್ಕೆ ಭೇಟಿಕೊಟ್ಟು ಅಧಿಕಾರಿಗಳು ಪರಿಶೀಲಿಸಲಾಯಿತು..
ಮಕ್ರ್ಯುರಿ, ಕೊಡೈಕೆನಾಲ್‍ನಲ್ಲಿ ಪಾದರಸ ಫ್ಯಾಕ್ಟರಿಯೊಂದರಲ್ಲಿ ನಡೆದ ದುರಂತಗಳ ಸರಮಾಲೆಗಳ ಕಥೆ. ನೀವು ಮಕ್ರ್ಯುರಿ ಚಿತ್ರದ ಪೋಸ್ಟರ್‍ನ್ನು ಒಮ್ಮೆ ನೆನಪಿಸಿಕೊಳ್ಳಿ. ಅದು ಪಾದರಸದ ಎಫೆಕ್ಟ್‍ನ ಪಿಕ್ಚರ್. ಕಾರ್ಖಾನೆಗಳಿಂದ ಸೋರಿಕೆಯಾಗುವ ಕೆಮಿಕಲ್ ಜನರ ಮೇಲೆ ಏನೇನೆಲ್ಲ ಪರಿಣಾಮ ಬೀರಬಹುದು ಅನ್ನೋದನ್ನ ತೆರೆಯ ಮೇಲೆ ತರಲಾಗಿದೆ. ಸಾಮಾನ್ಯವಾಗಿ ಸಿನಿಮಾದ ಕಡೆಯ 20 ನಿಮಿಷವನ್ನ ಕ್ಲೈಮಾಕ್ಸ್ ಅಂತಾರೆ. ಆದರೆ, ಈ ಸಿನಿಮಾದಲ್ಲಿ ಕಡೆಯ ಒಂದೂವರೆ ಗಂಟೆ.. ಸಂಪೂರ್ಣ ಕ್ಲೈಮಾಕ್ಸ್‍ನ ಫೀಲ್ ಕೊಡುತ್ತದಂತೆ. ಹೀಗೆಂದು ಹೇಳಿರುವುದು ಪ್ರಭುದೇವ. ಮಕ್ರ್ಯುರಿ ನಿಮಗೆ ಅಚ್ಚರಿ ಉಂಟು ಮಾಡುತ್ತೆ. ನೋಡ್ತಾ ನೋಡ್ತಾ ಶಾಕ್ ಆಗ್ತೀರಿ. ಮನಸ್ಸಿನೊಳಗೆ ಪ್ರಶ್ನೆಗಳು ಉದ್ಭವವಾಗುತ್ತಾ ಹೋಗುತ್ತವೆ. ಮಕ್ರ್ಯುರಿ ನಮ್ಮನ್ನು ಪ್ರಶ್ನೆ ಮಾಡುತ್ತಲೇ ಹೋಗುತ್ತೆ. ಹೀಗಾಗಿಯೇ.. ಈ ಸಂದೇಶ ಇರುವ ಕಾರಣಕ್ಕಾಗಿಯೇ ಈ ಚಿತ್ರದ ಕರ್ನಾಟಕ ವಿತರಣೆಯನ್ನು ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪರಂವಾ ಸ್ಟುಡಿಯೋಸ್ ವಹಿಸಿಕೊಂಡಿರುವುದು. ಸಿನಿಮಾ ನಾಳೆಯೇ ರಿಲೀಸ್. Does Mercury Have A Controversial Subject? The upcoming silent film Mercury has invoked great interest for many reasons. It is one of the rare films that does not have dialogues. The trailer of the film has stunned audience with Prabhudeva in an unusual and never-seen-before role. The trailer seemed like a thriller and horror film combined. But the film makers have not yet revealed what the story is. However some details are trickling down and it is said that there could be a controversial subject in the project. The trailer shows a monument for 84 people killed in mercury poisoning. But where did so many people die in India due to poisoning by chemicals? Is the film about ghosts of those people facing up the trekkers who have lost their way? The film could also be about the effects of Mercury poisoning. Prabhudeva could well be playing a victim of the poisoning who has somehow survived but has become blind. By creating so much speculation by revealing so little about the film the film makers have managed to make the film a much awaited release. The film is releasing in Kannada this Friday. Though there are no dialogues the title card and other details will be in Kannada. Luckyman has a huge star cast Luckyman, which is releasing this week on September 9 has a huge star cast. The film is eagerly awaited by the fans of Appu as this will be last time he will be seen in a song on the big screen. The film starring Darling Krishna, Sangeetha Sringeri and Roshani Prakash also has a big cast. Puneeth Rajkumar, in the role of God, is in a significant role. Prabhudeva, who is the elder brother of debutant director S Nagendra Prasad will be seen in a song alongside Puneeth Rajkumar. Apart from the top stars there are a huge number of character artistes which include Nagabhushana, Arya, Sundar Raj, Sadhu Kokila, Rangayana Raghu, Yogaraj Bhat, Sudha Belawadi and Malavika Avinash. Mercury Movie Review, Chitraloka Rating 4/5 The movie mercury is an unusual experience for the audience. It combines an experimental silent narrative with horror and suspense. The film has no dialogues but it is made up for by very good background score and music. Without the need for dialogues the director has managed to express his thoughts and ideas and the story through just the visuals and acting alone. The film starts with a group of friends going for a reunion party. After a late night party the friends go out for a drive. The meet with an accident and after that they are on the run for their lives. A mysterious entity is trying to kill them. Woven into this suspense thriller is also a story about industrial pollution. The place where the five friends are trapped is a factory that has been shutdown after polluting the local area with Mercury. 84 people have died because of the Mercury poisoning. How are these two things connected? The director as intelligently mixed these two narratives. Prabhu Deva gives an impressive performance in this movie. Horror suspense and thrilling elements are all part and parcel of Mercury. Apart from dialogues there are also no songs in the film so it is very fast and every scene is a thriller. On the technical front the cinematography the editing and background score are top class. Full credit should go to the director for having the conviction to make a movie without dialogues that too when he has a serious subject to tell. Mercury is one of the better films that has released this year and it is full value for money proposition. Chitraloka Rating 4/5 Nagendra Prasad back to Kannada cinema Actor Nagendra Prasad, brother of well known choreographer and director Prabhudeva who made his debut in Kannada cinema with 'Chitra' almost 15 years back is all set to make his comeback with a new Kannada film called 'Mareyuva Munna'. Recently, the song recording of the film was launched at the Prasad Studios in Bangalore and the shooting for the film is starting soon. Nagendra Prasad says he had taken a break from acting as he wanted to become a director. 'My brother Prabhudeva had advised me to take up a direction course as I was very much interested in direction. Likewise, I had taken up a directors course in London and after finishing that, I came back to India to assist my brother in films like 'Rowdy Rathore' and others. I wanted to direct my own film and before that, I got this opportunity to act. This is like my re-entry to Kannada films and I am very much happy with that' says Prasad. 'Mareyuva Munna' is being produced by Kumar and directed by Supreeth Shankar Ratna. Pushkar And Rakshith To Distribute 'Mercury' Producer Pushkar Mallikarjunaiah and actor-director Rakshith Shetty are all set to distribute Tamil silent film 'Mercury' across Karnataka under the banner Pushkar films & Paramvah studios. 'Mercury' stars Prabhudeva, Sanath Reddy, Deepak Paramesh, Shashank Purushottam, Remya Nambeesan and others in prominent roles. Karthik Subbaraj who had earlier directed 'Pizza', 'Jigar Thanda' and other films has directed the film. 'Mercury' will be released in multiplexes by Pushkar and Rakshith, while Jayanna will be releasing the film in single screens. Related Articles :- ಪಾದರಸದಂತೆ ಬಂದರು ಪ್ರಭುದೇವ Shooting for Kuladalli Melyavudo starts As announced earlier, the shooting for the tentatively titled Kuladalli Melyavudo starting Hattrick Hero Shiva Rajkumar and dancing sensation Prabhudeva has commenced in Bengaluru. The film is produced by Rockline Entertainment and it is senior producer Rockline Venkatesh's 47th film. The title of the film is yet to be announced but is generally believed to be Kuladalli Melyavudo. Incidentally, he is also acting in the film as a police officer. Portions involving these three actors were shot during the shooting in the last four days. This film is special because it is the first time Yograj Bhat is directing Shiva Rajkumar. It is also the first time Shivanna and Prabhudeva are acting together. It is also the first time Rockline Venkatesh and Bhat are combining to make a movie together as producer and director. ಅಪ್ಪು ಪ್ರಭುದೇವ ಒಟ್ಟಿಗೇ ಡ್ಯಾನ್ಸ್ ಮಾಡೋ ಸಿನಿಮಾ ಫಿಕ್ಸ್ ಇಂಡಿಯಾದ ಮೈಕೆಲ್ ಜಾಕ್ಸನ್ ಎಂದೇ ಒಂದು ಕಾಲಕ್ಕೆ ಕರೆಸಿಕೊಳ್ಳುತ್ತಿದ್ದ ಪ್ರಭುದೇವ ಈಗ ಆ ಹಂತವನ್ನೂ ದಾಟಿದ್ದಾರೆ. ಪ್ರಭುದೇವ ಅವರಿಗೆ ಬೇರೆಯದ್ದೇ ಆದ ಸ್ಪೆಷಾಲಿಟಿಯೂ ಇದೆ. ಇನ್ನು ಕನ್ನಡಿಗರ ಪಾಲಿಗೆ ಡ್ಯಾನ್ಸ್ ಎಂದರೆ ಅದು ಪುನೀತ್ ರಾಜ್‍ಕುಮಾರ್. ಈ ಇಬ್ಬರನ್ನೂ ಒಟ್ಟಿಗೇ ಕುಣಿಸಿದರೆ ಹೇಗೆ ಅನ್ನೋ ಐಡಿಯಾ ಹಲವರಿಗೆ ಇತ್ತು. ಆ ಕನಸಿಗೆ ಈಗ ರೆಕ್ಕೆ ಪುಕ್ಕ ಬಂದಿದೆ. ಪುನೀತ್ ಮತ್ತು ಅಪ್ಪು ಲಕ್ಕಿಮ್ಯಾನ್ ಅನ್ನೋ ಚಿತ್ರದಲ್ಲಿ ಒಟ್ಟಿಗೇ ಡ್ಯಾನ್ಸ್ ಮಾಡುತ್ತಿದ್ದಾರೆ. ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ಲಕ್ಕಿ ಮ್ಯಾನ್ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಅದು ತಮಿಳಿನ ಓ ಮೈ ಕಡವುಳೆ ಚಿತ್ರದಿಂದ ಸ್ಫೂರ್ತಿ ಪಡೆದಿರೋ ಸಿನಿಮಾ. ಆ ಚಿತ್ರದಲ್ಲಿ ಅಪ್ಪು ಅತಿಥಿ ನಟ. ಆ ಚಿತ್ರದಲ್ಲಿ ಪುನೀತ್ ಮತ್ತು ಪ್ರಭುದೇವ ಒಟ್ಟಿಗೇ ನೃತ್ಯ ಮಾಡಲಿದ್ದಾರಂತೆ. ಜಾನಿ ಮಾಸ್ಟರ್ ಆ ಹಾಡಿಗೆ ಕೊರಿಯೋಗ್ರಫಿ ಮಾಡಲಿದ್ದಾರಂತೆ. ಅಂದಹಾಗೆ ಲಕ್ಕಿಮ್ಯಾನ್ ಚಿತ್ರದ ಹೀರೋ ಯಾರು ಗೊತ್ತಾ? ಪುನೀತ್ ಅವರ ಹಾರ್ಡ್‍ಕೋರ್ ಫ್ಯಾನ್ ಡಾರ್ಲಿಂಗ್ ಕೃಷ್ಣ. ಕೆಡಿ ಭಟ್ಟರ ಕರಟಕ ದಮನಕ ಮಂತ್ರ.. ಶಿವಣ್ಣ ಮತ್ತು ಪ್ರಭುದೇವ ಒಟ್ಟಾಗಿ ನಟಿಸುತ್ತಿರೋ ಯೋಗರಾಜ್ ಭಟ್ ನಿರ್ದೇಶನದ ಚಿತ್ರಕ್ಕೆ ಕುಲದಲ್ಲಿ ಮೇಲ್ಯಾವುದೋ.. ಅನ್ನೋ ತಾತ್ಕಾಲಿಕ ಟೈಟಲ್ ಇಟ್ಟುಕೊಳಲಾಗಿತ್ತು. ಈಗ ಕರಕಟ ದಮನಕ ಅನ್ನೋ ಹೆಸರು ಬಂದಿದೆ. ಜೊತೆಗೆ ಕೆಡಿ ಅನ್ನೋ ಪದಗಳನ್ನ ಇಂಗ್ಲಿಷಿನಲ್ಲಿ ತೋರಿಸಿ ಇನ್ನೇನೋ ಹುಳ ಬಿಟ್ಟಿದ್ದಾರೆ ಭಟ್ಟರು. ಇದು ಟೈಟಲ್ಲಾ.. ಅಂದ್ರೆ ಯಾವನಿಗ್ಗೊತ್ತು ಅನ್ನೋ ಸ್ಟೈಲಲ್ಲಿ ಪರಮಾತ್ಮನ ಪೋಸು ಕೊಡ್ತಾರೆ. ಶಿವಣ್ಣ+ಪ್ರಭುದೇವ+ಯೋಗರಾಜ್ ಭಟ್+ರಾಕ್ ಲೈನ್ ವೆಂಕಟೇಶ್ ಅವರ ಪ್ಲಸ್ಸು ಪ್ಲಸ್ಸುಗಳ ಮಿಲನದಲ್ಲಿ ಕರಟಕ ಯಾರು? ದಮನಕ ಯಾರು? ಶೂಟಿಂಗಂತೂ ಶುರುವಾಗಿದೆ. ಕೊನೆಯ ಚಿತ್ರದಲ್ಲಿ ದೇವರಾಗಿರೋ ಅಪ್ಪು..! ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಹೃದಯದಲ್ಲಿ ದೇವರೇ ಆಗಿ ಹೋಗಿದ್ದಾರೆ. ಅಂತಹ ಪುನೀತ್ ತಮ್ಮ ಕೊನೆಯ ಚಿತ್ರದಲ್ಲಿ ನಿಜವಾಗಿಯೂ ದೇವರಾಗಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಅಂದಹಾಗೆ ನಾವ್ ಹೇಳ್ತಿರೋದು ಚೇತನ್ ನಿರ್ದೇಶನದ ಜೇಮ್ಸ್ ಬಗ್ಗೆ ಅಲ್ಲ. ಅದರ ನಂತರ ಅಪ್ಪು, ಪ್ರಭುದೇವ ಜೊತೆ ಲಕ್ಕಿ ಮ್ಯಾನ್ ಚಿತ್ರದಲ್ಲಿ ಗೆಸ್ಟ್ ಆಗಿ ನಟಿಸಿದ್ದರು. ಅಪ್ಪು ಮತ್ತು ಪ್ರಭುದೇವ ಡ್ಯಾನ್ಸ್ ಮಾಡುತ್ತಿರುವ ಪುಟ್ಟ ವಿಡಿಯೋಗಳು ವೈರಲ್ ಆಗಿದ್ದವು. ಡಾರ್ಲಿಂಗ್ ಕೃಷ್ಣ ಹೀರೋ ಆಗಿರುವ ಆ ಚಿತ್ರದಲ್ಲಿ ಅಪ್ಪು ದೇವರ ಪಾತ್ರ ಮಾಡಿದ್ದಾರಂತೆ. ಪ್ರಭುದೇವ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನದ ಚಿತ್ರ ಲಕ್ಕಿ ಮ್ಯಾನ್. ಸಂಗೀತಾ ಶೃಂಗೇರಿ ಮತ್ತು ರೋಹಿಣಿ ಪ್ರಕಾಶ್ ನಾಯಕಿಯರು. ಈ ಚಿತ್ರದಲ್ಲಿ ಅಪ್ಪು ದೇವರ ಪಾತ್ರವನ್ನೇ ಮಾಡಿದ್ದಾರಂತೆ. ಪುನೀತ್, ಮಾಸ್ಟರ್ ಲೋಹಿತ್ ಆಗಿದ್ದಾಗ ಭೂಮಿಗೆ ಬಂದ ಭಗವಂತ ಚಿತ್ರದಲ್ಲಿ ಶ್ರೀಕೃಷ್ಣನಾಗಿದ್ದರು. ಭೂಮಿಗೆ ಬಂದ ದೇವಕಿ ಕಂದ.. ಹಾಡು ನೆನಪಿದೆಯಲ್ಲವೇ. ಆ ಹಾಡಿನಲ್ಲಿ ಕೃಷ್ಣನಾಗಿ ಮನಸ್ಸು ಕದ್ದಿದ್ದ ಬಾಲಕ ಪುನೀತ್. ಬಾಲಕನಾಗಿದ್ದಾಗ ಪುನೀತ್ ನಟಿಸಿದ್ದ ಎಲ್ಲ ಚಿತ್ರಗಳಲ್ಲಿ ಡಾ.ರಾಜ್ ಇದ್ದರು. ಡಾ.ರಾಜ್ ಇಲ್ಲದೇ ಇರುವ ಮತ್ತು ಬಾಲಕ ಪುನೀತ್ ನಟಿಸಿರುವ ಏಕೈಕ ಚಿತ್ರ ಭೂಮಿಗೆ ಬಂದ ಭಗವಂತ. ಲೋಕೇಶ್, ಲಕ್ಷ್ಮಿ ಅಭಿನಯದ ಚಿತ್ರವದು. ಗಾಳಿಪಟ-2ಗೆ ಪ್ರಭುದೇವ ಡ್ಯಾನ್ಸ್ ಪವರ್..? ಪಂಚತಂತ್ರ ಸಕ್ಸಸ್ ಬಳಿಕ ಯೋಗರಾಜ್ ಭಟ್ ಕೈಗೆತ್ತಿಕೊಂಡಿರೋ ಸಿನಿಮಾ ‘ಗಾಳಿಪಟ-2. ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ತಾರಾಗಣದಲ್ಲಿ ಬದಲಾವಣೆ ಮಾಡಿಕೊಂಡು ಸುದ್ದಿಯಾಗಿದ್ದ ಯೋಗರಾಜ್ ಭಟ್, ಈಗ ತಮ್ಮ ಟೀಂಗೆ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವಗೆ ಆಹ್ವಾನ ಕೊಟ್ಟಿದ್ದಾರೆ. ಈಗಾಗಲೇ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಮಹೇಶ್ ದಾನಣ್ಣವರ್ ಪ್ರಭುದೇವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದಾರಂತೆ. ಮಾತುಕತೆಯೂ ನಡೆದಿದೆಯಂತೆ. 2002ರಲ್ಲಿ ಹೆಚ್2ಒ ಚಿತ್ರದಲ್ಲಿ ನಟಿಸಿದ್ದ ಪ್ರಭುದೇವ,ಆನಂತರ ಕನ್ನಡದಲ್ಲಿ ನಟಿಸಿಲ್ಲ. ಸದ್ಯಕ್ಕೆ ದಬಾಂಗ್-3ಯಲ್ಲಿ ಬ್ಯುಸಿಯಾಗಿರುವ ಪ್ರಭುದೇವ, ಭಟ್ಟರ ಚಿತ್ರಕ್ಕೆ ಓಕೆ ಎಂದಿದ್ದಾರೆ ಎಂಬ ಸುದ್ದಿಗಳಿವೆ. ಗಣೇಶ್, ದಿಗಂತ್, ಪವನ್ ಕುಮಾರ್, ಆದಿತಿ ಪ್ರಭುದೇವ, ಸೋನಲ್ ಮಂಥೆರೋ, ಶರ್ಮಿಳಾ ಮಾಂಡ್ರೆ ನಟಿಸುತ್ತಿರುವ ಚಿತ್ರವಿದು. ಸೆಪ್ಟೆಂಬರ್ನಿಂದ ಶೂಟಿಂಗ್ ಶುರುವಾಗಲಿದ್ದು, ಮಲೆನಾಡಿನಲ್ಲಿಯೇ ಚಿತ್ರೀಕರಣಕ್ಕೆ ಪ್ಲಾನ್ ಮಾಡಿದ್ದಾರೆ ಯೋಗರಾಜ್ ಭಟ್. ದಬಾಂಗ್ 3 ಕನ್ನಡಿಗರ ಸಿನಿಮಾ - ಸಲ್ಮಾನ್ ಚಿತ್ರದ ಡೈರೆಕ್ಟರ್ ಕನ್ನಡಿಗ, ಪ್ರಭುದೇವ. ಚಿತ್ರದ ವಿಲನ್ ಕನ್ನಡಿಗ ಸುದೀಪ್. ಜೊತೆಗೆ ಸಲ್ಮಾನ್ ಖಾನ್ ಚಿತ್ರವೊಂದು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬರುತ್ತಿದೆ. ಹೀಗಾಗಿ ಇದು ಕನ್ನಡ ಸಿನಿಮಾ. ಕನ್ನಡಿಗರ ಸಿನಿಮಾ ಎಂದರು ಸಲ್ಲು. ಸುದೀಪ್ ನನ್ನ ಸಹೋದರನಿದ್ದಂತೆ ಎಂದು ಹೊಗಳಿದ್ದ ಸಲ್ಮಾನ್, ಇದು ಸುದೀಪ್ ಸಿನಿಮಾ. ಅವರು ನಿಜವಾದ ಸೂಪರ್ ಸ್ಟಾರ್ ಎಂದು ಹೊಗಳಿದರು. ತಾರೀಕು ನಂದು, ಟೈಮೂ ನಂದು ಎಂದು ಕನ್ನಡದಲ್ಲೇ ಹೇಳಿದ ಸಲ್ಮಾನ್ ಕನ್ನಡ ನಂಗೂ ಬರುತ್ತೆ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಾಯಕಿ ಸೋನಾಕ್ಷಿ ಸಿನ್ಹಾ, ನಿರ್ದೇಶಕ ಪ್ರಭುದೇವ ಕೂಡಾ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪಾದರಸದಂತೆ ಬಂದರು ಪ್ರಭುದೇವ ಪ್ರಭುದೇವ, ಡ್ಯಾನ್ಸ್‍ಗೆ ನಿಂತರೆ, ಅವರ ಕಾಲು, ದೇಹ ಅಕ್ಷರಶಃ ಪಾದರಸದಂತೆಯೇ ಚಲಿಸೋಕೆ ಶುರು ಮಾಡುತ್ತವೆ. ಬಹುಶಃ ಅದನ್ನು ನೋಡಿಯೋ ಏನೋ.. ಅವರ ಅಭಿನಯದ ಈ ಚಿತ್ರಕ್ಕೆ ಮಕ್ರ್ಯುರಿ ಎಂದೇ ಹೆಸರಿಟ್ಟುಬಿಟ್ಟಿದ್ದಾರೆ. ಹಲವು ವರ್ಷಗಳ ನಂತರ ಪ್ರಭುದೇವ ಅಭಿನಯದ ಚಿತ್ರ, ಕನ್ನಡದಲ್ಲಿಯೂ ಬರುತ್ತಿದೆ. ಅಂದಹಾಗೆ ಇದು ಮಾತಿಲ್ಲ, ಕಥೆಯಿಲ್ಲ ಶೈಲಿಯ ಚಿತ್ರ. ಪುಷ್ಪಕವಿಮಾನದ ನಂತರ, ಸ್ಟಾರ್ ನಟರೊಬ್ಬರು ಅಭಿನಯಿಸಿರುವ ಮೂಕಿ ಚಿತ್ರ. ಕನ್ನಡದಲ್ಲಿ ಚಿತ್ರದ ಹಂಚಿಕೆ ಹೊಣೆಯನ್ನು ಜಯಣ್ಣ ಫಿಲ್ಮ್ಸ್ ಮತ್ತು ಪರಮ್‍ವಃ ಸ್ಟುಡಿಯೋ ಹೊತ್ತುಕೊಂಡಿವೆ. ರಕ್ಷಿತ್ ಶೆಟ್ಟಿ ಟೀಂನ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಲ್ಟಿಪ್ಲೆಕ್ಸ್‍ಗಳಲ್ಲಿ ಚಿತ್ರದ ವಿತರಣೆ ಮಾಡುತ್ತಿದ್ದರೆ, ಸಿಂಗಲ್ ಸ್ಕ್ರೀನ್ ಥಿಯೇಟರ್‍ಗಳಲ್ಲಿ ಬಿಡುಗಡೆ ಜವಾಬ್ದಾರಿಯನ್ನು ಜಯಣ್ಣ ವಹಿಸಿಕೊಂಡಿದ್ದಾರೆ. ಏಪ್ರಿಲ್ 13ಕ್ಕೆ ತೆರೆಗೆ ಬರುತ್ತಿರುವ ಚಿತ್ರ, ಮೌನದಲ್ಲಿಯೇ ಮೋಡಿ ಮಾಡುವ ಉತ್ಸಾಹದಲ್ಲಿದೆ. ಪ್ರಭುದೇವ ಜೊತೆ ನಿಕ್ಕಿ ಗರ್ಲಾನಿ ಪ್ರಭುದೇವ, ಈಗ ಭಾರತದ ಮೈಕೆಲ್ ಜಾಕ್ಸನ್ ಎನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದ್ದಾರೆ. ಇಂತಹ ಪ್ರಭುದೇವ ಈಗ ಚಾರ್ಲಿ ಚಾಪ್ಲಿನ್ ಎಂಬ ಚಿತ್ರ ಮಾಡುತ್ತಿದ್ದಾರೆ. ಅದು ಅವರೇ ನಟಿಸಿದ್ದ ಹಳೆಯ ಸಿನಿಮಾ. ತಮಿಳಿನಲ್ಲಿ ಮಾಡಿದ್ದ ಅದೇ ಸಿನಿಮಾವನ್ನು ಈಗ 6 ಭಾಷೆಗಳಲ್ಲಿ ಮತ್ತೆ ನಿರ್ಮಿಸಲು ಮುಂದಾಗಿದ್ದಾರೆ ಪ್ರಭುದೇವ. ಆ ಚಿತ್ರದಲ್ಲಿ ನಿಕ್ಕಿ ಗರ್ಲಾನಿ ಅವರಿಗೆ ಒಂದು ಪ್ರಮುಖ ಪಾತ್ರವಿದೆಯಂತೆ. ಒಂದು ಸಣ್ಣ ಕನ್‍ಫ್ಯೂಷನ್ ಏನೇನೆಲ್ಲ ಅವಾಂತರ ಸೃಷ್ಟಿಸಬಹುದು ಎಂಬುದನ್ನು ನಕ್ಕೂ ನಕ್ಕೂ ಸುಸ್ತಾಗುವಂತೆ ಹೇಳಿದ್ದರು ಆ ಚಿತ್ರದ ನಿರ್ದೇಶಕ ಶಕ್ತಿ ಚಿದಂಬರಂ. ಈಗ ಅದೇ ಚಿತ್ರದಲ್ಲಿ ನಿಕ್ಕಿ ಗರ್ಲಾನಿ ಪ್ರಭುದೇವ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನೊಬ್ಬ ನಾಯಕಿಯಾಗಿ ಕರುಪ್ಪಮ್ ಖ್ಯಾತಿಯ ತನ್ಯಾ ರವಿಚಂದ್ರನ್ ಇರುತ್ತಾರೆ. ಪ್ರಭುದೇವ ಜೊತೆ ನಟಿಸುವ ಅವಕಾಶ ನಿಕ್ಕಿ ಗರ್ಲಾನಿ ಅವರನ್ನು ಥ್ರಿಲ್ ಆಗುವಂತೆ ಮಾಡಿದೆ. ಪ್ರಭುದೇವ ಶಿವಣ್ಣ ಚಿತ್ರ ಜೂನ್ 9ರಿಂದ ಆರಂಭ : ಕಥೆಗಾರ ಯಾರು? ಹ್ಯಾಟ್ರಿಕ್ ಹೀರೋ.. ಸೆಂಚುರಿ ಸ್ಟಾರ್ ಶಿವಣ್ಣ ಒಂದು ಕಡೆ. ಇಂಡಿಯನ್ ಮೈಕೇಲ್ ಜಾಕ್ಸನ್ ಎಂದೇ ಫೇಮಸ್ ಆಗಿರೋ ಪ್ರಭುದೇವ ಮತ್ತೊಂದು ಕಡೆ. ಅವರಿಬ್ಬರೂ ಒಟ್ಟಿಗೇ ಸೇರಿರುವುದು ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ. ಆ್ಯಕ್ಷನ್ ಕಟ್ ಹೇಳುತ್ತಿರುವುದು ಯೋಗರಾಜ್ ಭಟ್. ಸಿನಿಮಾ ಅಧಿಕೃತವಾಗಿ ಜೂನ್ 9ರಿಂದ ಶುರುವಾಗುತ್ತಿದೆ. ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಇದು ಆ್ಯಕ್ಷನ್ ಡ್ರಾಮಾ ಸಬ್ಜೆಕ್ಟ್ ಎಂದಿದ್ದಾರೆ ಯೋಗರಾಜ್ ಭಟ್. ಶಿವಣ್ಣ ಮತ್ತು ಪ್ರಭುದೇವ ಇಬ್ಬರಿಗೂ ಸ್ಕ್ರೀನ್ ಪೇಸ್ ಸಮಾನವಾಗಿ ಇರಲಿದೆ ಅನ್ನೋದು ಅವರ ಪ್ರಾಮಿಸ್. ಜೂನ್ 9ರಂದು ಮುಹೂರ್ತ ಮುಗಿಸಿ ಮರುದಿನವೇ ಚಿತ್ರೀಕರಣ ಶುರು ಮಾಡಲಿದ್ದಾರಂತೆ ಭಟ್ಟರು. ಇತ್ತ ಶಿವಣ್ಣ ಕೈಲಿ ಅವರದ್ದೇ ನಿರ್ಮಾಣದ ವೇದ, ನೀ ಸಿಗೋವರೆಗೂ, ಘೋಸ್ಟ್.. ಹೀಗೆ ಸಾಲು ಸಾಲು ಚಿತ್ರಗಳಿವೆ. ಭಟ್ಟರ ಕಥೆ ಇಷ್ಟವಾಯ್ತು. ಕಮರ್ಷಿಯಲ್ ಎಲಿಮೆಂಟ್ ಇರುವ ಕಥೆ ನನಗಂತೂ ಸಿಕ್ಕಾಪಟ್ಟೆ ಇಷ್ಟವಾಯ್ತು. ಜೊತೆಗೆ ಪ್ರಭುದೇವ ಕಾಂಬಿನೇಷನ್. ಹೀಗಾಗಿ ಒಪ್ಪಿದೆ ಎಂದಿದ್ದಾರೆ ಶಿವರಾಜಕುಮಾರ್. ಈ ಚಿತ್ರಕ್ಕೆ ಭಟ್ಟರೆ ಜೊತೆ ಕಥೆ ಬರೆಯಲು ಕೈಜೋಡಿಸಿರುವುದು ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಚಿತ್ರಕ್ಕಿನ್ನೂ ನಾಯಕಿಯರ ಆಯ್ಕೆ ಆಗಿಲ್ಲ. ಪ್ರಭುದೇವಗೆ ಮೂಕಿ ಚಿತ್ರ ಸವಾಲಾಗಲಿಲ್ಲ. ಏಕೆ ಗೊತ್ತಾ..? ಮಕ್ರ್ಯುರಿ.. ಮೂಕಿ ಸಿನಿಮಾ. ಸೈಲೆಂಟ್ ಥ್ರಿಲ್ಲರ್. ಇಡೀ ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ. ಡ್ಯಾನ್ಸ್ ಕೂಡಾ ಇಲ್ಲ. ಕಾಮಿಡಿಯೂ ಇಲ್ಲ. ಆದರೆ, ಈ ಚಿತ್ರದ ಹೀರೋ ಪ್ರಭುದೇವ. ಪ್ರಭುದೇವ ಇದ್ದೂ, ಇವ್ಯಾವುದೂ ಇಲ್ಲ ಎಂದರೆ ಹೇಗೆ..? ಪ್ರಭುದೇವ ಅವರಿಗೆ ಇದು ರಿಸ್ಕ್ ಎನಿಸಲಿಲ್ಲವಾ..? ಇಂಥಾದ್ದೊಂದು ಪ್ರಶ್ನೆಯನ್ನು ಪ್ರಭುದೇವ ಮುಂದಿಟ್ಟಾಗ ಅವರು ಹೇಳಿದ್ದು ನಮಗೆ ಅಚ್ಚರಿ ತರಬಹುದು. `ನಾನು ಮೂಲತಃ ಡ್ಯಾನ್ಸರ್. ಡ್ಯಾನ್ಸ್ ಮಾಡುವವರು ಮಾತನಾಡದೆಯೇ ಸಂಭಾಷಣೆ ನಡೆಸೋದು ಅತ್ಯಂತ ಸಹಜವಾಗಿ ನಡೆದು ಹೋಗುತ್ತೆ. ಕಣ್ಣು, ಕೈಬಾಯಿ ಸನ್ನೆಗಳಲ್ಲೇ ಕಮ್ಯುನಿಕೇಷನ್ ಆಗಿರುತ್ತೆ. ಹೀಗಾಗಿ ಈ ಸಿನಿಮಾದಲ್ಲಿ ನಟಿಸುವುದು ನನಗೆ ಚಾಲೆಂಜ್ ಎನಿಸಲಿಲ್ಲ' ಇದು ಪ್ರಭುದೇವ ಉತ್ತರ. ಮಕ್ರ್ಯುರಿ ಚಿತ್ರದ ಕಥೆ ಕೇಳಿದಾಗ ಥ್ರಿಲ್ ಆಗಿದ್ದರಂತೆ ಪ್ರಭುದೇವ. ನನ್ನೊಳಗೆ ಡ್ಯಾನ್ಸರ್ ಅಷ್ಟೇ ಅಲ್ಲ, ನಟನೂ ಇದ್ದಾನೆ. ಒಳ್ಳೆಯ ಪಾತ್ರಕ್ಕಾಗಿ ಮನಸ್ಸು ಹುಡುಕುತ್ತಿರುತ್ತೆ. ಹೀಗಿರುವಾಗಲೇ ಈ ಸಿನಿಮಾದ ಆಫರ್ ಬಂತು. ಥ್ರಿಲ್ಲಾಗಿಬಿಟ್ಟೆ ಅಂತಾರೆ ಪ್ರಭುದೇವ. ಸಿನಿಮಾ ಇದೇ ವಾರ ರಿಲೀಸ್. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್‍ನ ಪರಂವಾ ಸ್ಟುಡಿಯೋಸ್ ಸಿನಿಮಾವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ.ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಚಿತ್ರ, ಕಾರ್ತಿಕ್-ಪ್ರಭುದೇವ ಕಾಂಬಿನೇಷನ್ ಹಾಗೂ ಸೈಲೆಂಟ್ ಮೂವಿ ಎಂಬ ಕಾರಣಕ್ಕೇ ನಿರೀಕ್ಷೆ ಹುಟ್ಟಿಸಿದೆ. ಬಘೀರನ ಶೂಟಿಂಗ್ ಯಾವಾಗ ಶುರು? ರೋರಿಂಗ್ ಸ್ಟಾರ್ ಶ್ರೀಮುರಳಿ ಈಗಾಗಲೇ ಮದಗಜ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನೇನಿದ್ದರೂ ಪೋಸ್ಟ್ ಪ್ರೊಡಕ್ಷನ್ ಕೆಲಸ. ಅದು ಮುಗಿಯುತ್ತಿದ್ದಂತೆಯೇ ಶುರುವಾಗಬೇಕಿದ್ದ ಬಘೀರ ಚಿತ್ರದ ಚಿತ್ರೀಕರಣ ಯಾವಾಗ? ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ. ಚಿತ್ರೀಕರಣ ವಿಳಂಬವಾಗುತ್ತಿರುವುದು ಹೌದು. ಆದರೆ, ಅದಕ್ಕೆ ಕೊರೊನಾ ಕಾರಣ ಅಲ್ಲ. ಚಿತ್ರದ ಕಥೆಯೇ ಅಂತದ್ದೊಂದು ತಯಾರಿ ಕೇಳುತ್ತಿದೆ ಎಂದಿದ್ದಾರೆ ಡಾ.ಸೂರಿ. ಹೊಂಬಾಳೆ ವಿಜಯ್ ಕಿರಗಂದೂರು ಜೊತೆ ಶ್ರೀಮುರಳಿ ಕೈ ಜೋಡಿಸಿರುವ ಮೊದಲ ಪ್ರಾಜೆಕ್ಟ್ ಇದು. ಚಿತ್ರಕ್ಕಿನ್ನೂ ತಾಂತ್ರಿಕ ವರ್ಗ ಮತ್ತು ಇತರೆ ಕಲವಿದರ ಆಯ್ಕೆ ಆಗಿಲ್ಲ.ನ ಭಲೇ ಅದೃಷ್ಟವೋ ಅದೃಷ್ಟ - ಪ್ರಭುದೇವಾಗೆ ಹೀರೋಯಿನ್ ಆದ ಸಂಯುಕ್ತಾ ಹೆಗಡೆ ಕಿರಿಕ್ ಪಾರ್ಟಿ ಚಿತ್ರದಲ್ಲಿನ ನೀನಿರೆ.. ಸನಿಹ ನೀನಿರೆ ಹಾಡು ಮತ್ತು ಡ್ಯಾನ್ಸ್. ಅದರಲ್ಲೂ ಎರಡೂ ಕಾಲುಗಳನ್ನು ಸ್ಕೇಲ್‍ನಂತೆ ಮಾಡುವ ಆ ಶೈಲಿ. ಆ ಮೂಲಕ ತಾನೊಬ್ಬ ಪಕ್ಕಾ ಡ್ಯಾನ್ಸರ್ ಎನ್ನುವುದನ್ನು ಸಾಬೀತು ಮಾಡಿದ ಸಂಯುಕ್ತಾ ಹೆಗಡೆಗೆ ಈಗ ಅದೃಷ್ಟ ಖುಲಾಯಿಸಿದೆ. ಸಂಯುಕ್ತಾ ಹೆಗಡೆ ಪ್ರಭುದೇವಾ ಅವರಿಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಹಿಂದಿ, ತಮಿಳು, ತೆಲುಗಿನಲ್ಲಿ ಬರಲಿರುವ ಆ ಚಿತ್ರದಲ್ಲಿ ಸಂಯುಕ್ತಾ ಹೆಗಡೆ 25 ವರ್ಷದ ಡ್ಯಾನ್ಸರ್ ಪಾತ್ರ ಮಾಡುತ್ತಿದ್ದಾರೆ. ಕಾಮಿಡಿ ಲವ್ ಸ್ಟೋರಿಯಾಗಿರುವ ಚಿತ್ರದಲ್ಲಿ ಸಂಯುಕ್ತಾ ಹೆಗಡೆಗೆ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡುವ ಅವಕಾಶವೂ ಇದೆಯಂತೆ. ಸ್ವತಃ ಡ್ಯಾನ್ಸರ್ ಆಗಿರುವ ಸಂಯುಕ್ತಾಗೆ ಸಹಜವಾಗಿಯೇ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡಬಬೇಕು ಎನ್ನುವ ಹುಚ್ಚಿತ್ತು. ಚಿಕ್ಕಂದಿನಿಂದ ಬೆಳೆಸಿಕೊಂಡಿದ್ದ ಆ ಆಸೆ ಈಗ ಈಡೇರುತ್ತಿದೆ. ಡೇಟ್ ಸಮಸ್ಯೆಯಿಂದಾಗಿ ಹೆಚ್ಚೂ ಕಡಿಮೆ ಕೈತಪ್ಪಿತು ಎಂದುಕೊಂಡಿದ್ದ ಚಿತ್ರದಲ್ಲಿ ಮತ್ತೆ ಅವಕಾಶ ಸಿಕ್ಕಿದೆ. ಒಬ್ಬ ಡ್ಯಾನ್ಸರ್ ಆಗಿರುವ ನನಗೆ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡುವುದು ನಿಜಕ್ಕೂ ಥ್ರಿಲ್ ನೀಡಲಿದೆ ಎಂದಿದ್ದಾರೆ ಸಂಯುಕ್ತಾ. ಮಕ್ರ್ಯುರಿ ಒಂದು ದಿನ ಮೊದಲೇ ರಿಲೀಸ್.. ಇಲ್ಲಲ್ಲ..! ಮಕ್ರ್ಯುರಿ .. ಈ ಮೂಕಭಾಷೆಯ ಸಿನಿಮಾ ಏಪ್ರಿಲ್ 13ಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ, ಇದಕ್ಕೂ ಮೊದಲೇ.. ಅಂದರೆ ಒಂದು ದಿನ ಮೊದಲು ಮಕ್ರ್ಯುರಿ ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ. ಅದು ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಲಾಸ್ ಏಂಜಲೀಸ್ ಚಲನಚಿತ್ರೋತ್ಸವದಲ್ಲಿ. ಮಕ್ರ್ಯುರಿ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವುದು ತಮಿಳಿನಲ್ಲಿ ಧನುಷ್ ಹಾಗೂ ತೆಲುಗಿನಲ್ಲಿ ರಾಣಾದಗ್ಗುಬಾಟಿ. ಕನ್ನಡದಲ್ಲಿ ಮಕ್ರ್ಯುರಿಗೆ ಬೆಂಬಲ ಕೊಟ್ಟಿರುವುದು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ. ಕರ್ನಾಟಕದಲ್ಲಿ ಸಿನಿಮಾವನ್ನು ವಿತರಣೆ ಮಾಡುತ್ತಿರುವ ಮಲ್ಲಿಕಾರ್ಜುನಯ್ಯ, ಒಂದು ದಿನ ಮೊದಲೇ ಚಿತ್ರ ಅಮೆರಿಕದಲ್ಲಿ ಪ್ರದರ್ಶನವಾಗುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಚಿತ್ರದಲ್ಲಿ ಪ್ರಭುದೇವ ಮುಖ್ಯಪಾತ್ರದಲ್ಲಿದ್ದಾರೆ. ಕಾರ್ತಿಕೇಯನ್, ಸಂತಾನಂ, ಜಯಂತಿಲಾಲ್ ಗಡ ಜಂಟಿಯಾಗಿ ನಿರ್ಮಿಸಿರುವ ಚಿತ್ರ ಇದು. ಕಾರ್ತಿಕ್ ಸುಬ್ಬರಾಜು ಚಿತ್ರದ ನಿರ್ದೇಶಕ. ಮಕ್ರ್ಯುರಿ ಚಿತ್ರದಲ್ಲಿ ಕೊಡೈಕೆನಾಲ್ ಪಾಯ್ಸನ್ ದುರಂತದ ಕಥೆ ಮಕ್ರ್ಯುರಿ ಚಿತ್ರ, ಸೈಲೆಂಟ್ ಥ್ರಿಲ್ಲರ್ ಎಂಬ ಕಾರಣಕ್ಕಾಗಿಯೇ ಗಮನ ಸೆಳೆಯುತ್ತಿರುವ ಸಿನಿಮಾ. ಸಂಭಾಷಣೆ ಇಲ್ಲದ ಚಿತ್ರದಲ್ಲಿರುವ ಕಥೆ ಏನು ಎಂಬುದಕ್ಕೆ ಉತ್ತರ ಸಿಕ್ಕಿದೆ. ಚಿತ್ರದಲ್ಲಿನ ಕಥೆಯ ಮೂಲವಸ್ತು ಕೊಡೈಕೆನಾಲ್‍ನ ಮಕ್ರ್ಯುರಿ ಫ್ಯಾಕ್ಟರಿಯಲ್ಲಿ ನಡೆದ ದುರಂತದ ಕಥೆ. ಅದನ್ನು ನಾಲ್ವರು ಗೆಳೆಯರ ಮೂಲಕ ಹೇಳಲಾಗಿದೆ. 1987ರಲ್ಲಿ ಕೊಡೈಕೆನಾಲ್‍ನಲ್ಲಿ ಪಾಂಡ್ಸ್ ಕಂಪೆನಿಯವರು ಮಕ್ರ್ಯುರಿ ಥರ್ಮಾಮೀಟರ್ ಘಟಕ ಸ್ಥಾಪಿಸಿದರು. ಅಮೆರಿಕದಿಂದ ಪಾದರಸ ತರಿಸಿಕೊಂಡು, ಥರ್ಮಾಮೀಟರ್ ತಯಾರಿಸುವುದು ಆ ಫ್ಯಾಕ್ಟರಿಯ ಕೆಲಸ. 2001ರ ಹೊತ್ತಿಗೆ ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತು. ಕಾರಣ ಏನೆಂದು ಹುಡುಕುತ್ತಾ ಹೊರಟಾಗ, ಫ್ಯಾಕ್ಟರಿಯವರು ಪಾದರಸದ ವೇಸ್ಟ್‍ನ್ನು ಯಾವುದೇ ಮುಂಜಾಗ್ರತೆ ವಹಿಸದೆ ಕಸ ಎಸೆಯುವಂತೆ ಎಸೆಯುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ನೂರಾರಲ್ಲ.. ಸಾವಿರಾರು ಕಾರ್ಮಿಕರು, ಕಿಡ್ನಿ ಕಳೆದುಕೊಂಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಅವರ ಮಕ್ಕಳು ಇಂದಿಗೂ ನರಳುತ್ತಿದ್ದಾರೆ. ನಮ್ಮ ಕರಾವಳಿ ಭಾಗದ ಎಂಡೋಸಲ್ಫಾನ್ ಕಥೆಯಂತಹುದೇ ಕಥೆ ವಿಷಕಾರಿ ಪಾದರಸದ್ದು. ಆ ಜನರಿಗೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಕಂಪೆನಿಯ ತಪ್ಪೇ ಇಲ್ಲ ಎಂಬ ವರದಿ ಬಂದಿದೆ. ಇದು ಸತ್ಯ ಘಟನೆ. ಮಕ್ರ್ಯುರಿ ಚಿತ್ರದಲ್ಲಿರೋದು ಇದೇ ಕಥೆ. ಈ ನೈಜ ಘಟನೆಯನ್ನಿಟ್ಟುಕೊಂಡು ಥ್ರಿಲ್ಲರ್ ಕಥೆ ಹೆಣೆಯಲಾಗಿದೆ. ಹೀಗಾಗಿಯೇ ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪರಂವಾ ಸ್ಟುಡಿಯೋ, ಚಿತ್ರವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಗುರಿ ಇಟ್ಟುಕೊಂಡು ಹೊರಟಿದೆ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯ ಜವಾಬ್ದಾರಿ ಹೊತ್ತಿರುವುದೇ ಪರಂವಾ ಸ್ಟುಡಿಯೋ. ಒಂದು ಸಾಮಾಜಿಕ ಕಳಕಳಿ ಇರುವ ಚಿತ್ರ, ಇದೇ ವಾರ ಬಿಡುಗಡೆಯಾಗುತ್ತಿದೆ.
“ದಲಿತ ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ. ಜತೆಗೆ ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ ಆಕ್ರಮಣಗಳು ದಿನೇದಿನೆ ಹೆಚ್ಚಾಗುತ್ತಿದ್ದು, ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ” ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಅಧ್ಯಕ್ಷ ಶಿವಶಂಕರ್ ಆರೋಪಿಸಿದರು. ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಇತ್ತೀಚೆಗೆ ಅರಕಲಗೂಡು ತಾಲೂಕಿನಲ್ಲಿ ಗಿರಿಜಾನಂದ ಮುಂಬಳೆ ಅವರ ಮೇಲೆ ಹಲ್ಲೆ ನಡೆಸಿದ ಶಿವಕುಮಾರ್ ಅವರನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ನಾನಾ ದಲಿತಪರ ಸಂಘಟನೆಗಳ ವತಿಯಿಂದ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಇತ್ತೀಚೆಗೆ ಅರಕಲಗೂಡು ತಾಲೂಕಿನ ಶಿಕ್ಷಕರ ಕಾರ್ಯಾಗಾರದಲ್ಲಿ ತಪ್ಪು ಗಣಿತ ಲೆಕ್ಕಗಳನ್ನು ಮಾಡುತ್ತಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕನ ತಪ್ಪನ್ನು ಸರಿಪಡಿಸಿದ ಕಾರಣದಿಂದ ಶಿಕ್ಷಣ ಸಂಯೋಜಕ ಗಿರಿಜಾನಂದ ಮುಂಬಳೆ ಅವರನ್ನು ಮನ ಬಂದಂತೆ ಥಳಿಸಿದ್ದಲ್ಲದೆ , ಜಾತಿ ನಿಂದನೆ ಮಾಡಿ ಅಮಾನವೀಯವಾಗಿ ಬಡೆಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಸಿ, ಎಸ್ಟಿ ಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ” ಎಂದು ಆರೋಪಿಸಿದರು. “ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಹಲ್ಲೆ ನಡೆಸಿರುವುದು ಖಂಡನೀಯ. ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಸೇವೆಯಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು. “ಅಧಿಕಾರಿ ಗಿರಿಜಾನಂದ ಮುಂಬಳೆ ಅವರ ಮೇಲಿನ ಹಲ್ಲೆಯಿಂದ ಜಿಲ್ಲೆಯಲ್ಲಿ ದಲಿತರು ಭಯಭೀತರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಪೊಲೀಸರು ಮುಂಬಾಳೆ ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು. ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ಕ್ಷೌರಿಕನ ಅಂಗಡಿಗೆ ಬೀಗ ಜಡಿಯಲು ಮುಂದಾದ ಗ್ರಾಮ ಪಂಚಾಯ್ತಿ! ಕೈಗೆ ಕಪ್ಪು ಪಟ್ಟಿ ಧರಿಸಿದ್ದ ಪ್ರತಿಭಟನಾಕಾರರು ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಎನ್ ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಕೆಲ ಕಾಲ ಧರಣಿ ನಡೆಸಿ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಶ್ರೀಧರ ಕಲಿವೀರ್, ಕೃಷ್ಣ ದಾಸ್, ಎಚ್ ಕೆ ಸಂದೇಶ್, ಕೆ ಈರಪ್ಪ, ಗಂಗಾಧರ್ ಬಹುಜನ್, ಆರ್ ಪಿ ಐ ಸತೀಶ್, ಎಂ ಜಿ ಪೃಥ್ವಿ, ಶಿವಮ್ಮ, ನಾಗರಾಜ್ ಹೆತ್ತೂರು, ಅಂಬುಗ ಮಲ್ಲೇಶ್, ಕೆ ಟಿ ಶಿವಪ್ರಸಾದ್, ಕೆ ಟಿ ಸುವರ್ಣ, ಜಿ ಓ ಮಹಾಂತಪ್ಪ, ಎಸ್‌ಸಿ- ಎಸ್‌ಟಿ ನಿವೃತ್ತ ನೌಕರರು ಭಾಗವಹಿಸಿದ್ದರು.
ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್​ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ. ಜೆ.ಪಿ. ನಗರದಲ್ಲಿ 2010 ರ ಡಿಸೆಂಬರ್ ನಲ್ಲಿ ಅಸ್ಸಾಂ ಮೂಲದ ಪಾಯಲ್ ಸುರೇಖಾ ಅವರ ಹತ್ಯೆ ನಡೆದಿತ್ತು. ಜಿಮ್ ಟ್ರೈನರ್ ಜೇಮ್ಸ್ ಕುಮಾರ್ ರಾಯ್ ಮೇಲೆ ಕೊಲೆ ಆರೋಪ […] sadhu srinath | Nov 11, 2019 | 1:08 PM ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್​ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ. ಜೆ.ಪಿ. ನಗರದಲ್ಲಿ 2010 ರ ಡಿಸೆಂಬರ್ ನಲ್ಲಿ ಅಸ್ಸಾಂ ಮೂಲದ ಪಾಯಲ್ ಸುರೇಖಾ ಅವರ ಹತ್ಯೆ ನಡೆದಿತ್ತು. ಜಿಮ್ ಟ್ರೈನರ್ ಜೇಮ್ಸ್ ಕುಮಾರ್ ರಾಯ್ ಮೇಲೆ ಕೊಲೆ ಆರೋಪ ಕೇಳಿಬಂದಿತ್ತು. ಪ್ರಕರಣದ ಕುರಿತು ಬೆಂಗಳೂರಿನ ಸಿಬಿಐ ಕೋರ್ಟ್ ಇಂದು ತೀರ್ಪು ನೀಡಿದೆ. ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿತ್ತು. ಪತಿ ಮೇಲಿನ ದ್ವೇಷಕ್ಕೆ ಪಾಯಲ್ ಸುರೇಖಾ ಅವರನ್ನ ಜಿಮ್ ಟ್ರೈನರ್ ಜೇಮ್ಸ್ ಕೊಲೆ ಮಾಡಿದ್ದ ಎಂಬ ಆರೋಪದ ಮೇಲೆ ಅಂದಿನ ಇನ್ಸ್ ಪೆಕ್ಟರ್ ಕೆ. ಉಮೇಶ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿತ್ತು. ಆರೋಪಿಯೇ ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಸಿಬಿಐ ಕೂಡಾ ಜೇಮ್ಸ್ ವಿರುದ್ಧವೇ ಆರೋಪಪಟ್ಟಿ ದಾಖಲಿಸಿತ್ತು. ಸಿಬಿಐ ಪರ ಎಸ್ ಪಿಪಿ ಶಿವಾನಂದ ಪೆರ್ಲ ವಾದಿಸಿದ್ದರು. ಪ್ರಕರಣದ ವೃತ್ತಾಂತ: ಜೆಪಿ ನಗರದಲ್ಲಿ 2010ರ ಡಿಸೆಂಬರ್ ನಲ್ಲಿ ನಡೆದಿದ್ದ ಕೊಲೆ ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿದ್ದ ಕೊಲೆ ಪ್ರಕರಣಬೆಂಗಳೂರು ಪೊಲೀಸರಿಂದ ಆರೋಪಿ ಜೆಮ್ಸ್​ನ ಬಂಧನಅಂದಿನ ಇನ್ಸ್​ಪೆಕ್ಟರ್​ ಎಸ್​.ಕೆ.ಉಮೇಶ್​ ಬಂಧಿಸಿದ್ದರು. ಆದ್ರೆ ಆರೋಪಿ ಆತ ಅಲ್ಲ ಎಂದು ಕೊಲೆಯಾದ ಸುರೇಖಾ ತಂದೆ ಆರೋಪ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ತಂದೆ ದೀನ್​ದಯಾಳ್​ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದರು. ಬೆಂಗಳೂರು ಪೊಲೀಸರ ತನಿಖೆ ಸರಿ ಇಲ್ಲವೆಂದೂ, ಸುರೇಖಾಳ ಗಂಡನೇ ಕೊಲೆ ಮಾಡಿದ್ದಾನೆ ಎಂದು ಸುರೇಖಾ ಪೋಷಕರು ಆರೋಪಿಸಿದ್ದರು. ಪೋಷಕರ ಒತ್ತಡದಿಂದ ತನಿಖೆಯನ್ನ ಸಿಬಿಐಗೆ ಒಪ್ಪಿಸಲಾಗಿತ್ತು. ಇದೀಗ ಸಿಬಿಐ ತನಿಖೆಯಿಂದ ಜೇಮ್ಸ್​ ಆರೋಪಿ ಎಂದು ಸಾಬೀತಾಗಿದ್ದು, ಈ ಮೂಲಕ ಬೆಂಗಳೂರು ಪೊಲೀಸರ ತನಿಖೆ ಸರಿ ಎಂಬುದೂ ಇದೀಗ ಸಾಬೀತಾಗಿದೆ.
ಡೆಹ್ರಾಡೂನ್: ಉತ್ತರಾಖಂಡ್ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರು ಶುಕ್ರವಾರ ಕೇದಾರನಾಥನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ಹೇಮಕುಂಡ್ ಸಾಹಿಬ್ ರೋಪ್‌ವೇ ಮತ್ತು ಕೆಲವೊಂದು ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನರೇಂದ್ರ ಮೋದಿಯವರು ಅಲ್ಲಿನ ಬೆಟ್ಟದ ಜನರ ಸಾಂಪ್ರದಾಯಿಕ ಉಡುಪನ್ನು ಧರಿಸಿ ಕೇದಾರನಾಥ ದೇವಾಲಯಕ್ಕೆ ಆಗಮಿಸಿದರು. ಅಲ್ಲದೇ ಭಕ್ತಿಯಿಂದ ಕೇದಾರನಾಥನಿಗೆ ಪೂಜೆಯನ್ನು ಸಲ್ಲಿಸಿದರು. ಇದೇ ಸಮಯದಲ್ಲಿ ಪೂಜೆ ನೆರವೇರಿಸಿದ ಪುರೋಹಿತರು ಪ್ರಧಾನಿಯವರಿಗೆ ದೇಶವನ್ನು ಮುನ್ನಡೆಯಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಗೌರಿಕುಂಡ್‌ನಿಂದ ಕೇದಾರನಾಥ ರೋಪ್‌ವೇ ಯೋಜನೆ ಕೇದಾರನಾಥದಲ್ಲಿ ರೋಪ್‌ವೇ ಸುಮಾರು 9.7 ಕಿಮೀ ಉದ್ದವಿರುತ್ತದೆ ಮತ್ತು ಗೌರಿಕುಂಡ್ ಅನ್ನು ಕೇದಾರನಾಥಕ್ಕೆ ಸಂಪರ್ಕಿಸುತ್ತದೆ, ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6-7 ಗಂಟೆಗಳಿಂದ ಕೇವಲ 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಹೇಮಕುಂಡ್ ರೋಪ್‌ವೇ ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿರುತ್ತದೆ ಮತ್ತು ಪ್ರಯಾಣದ ಸಮಯವನ್ನು ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್‌ಗೆ ಗೇಟ್‌ವೇ ಆಗಿರುವ ಘಂಗಾರಿಯಾವನ್ನು ಈ ರೋಪ್‌ವೇ ಸಂಪರ್ಕಿಸುತ್ತದೆ ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ. Uttarakhand | PM Narendra Modi at the Badrinath Dham pic.twitter.com/uVqCXWTkuV — ANI (@ANI) October 21, 2022 ಸುಮಾರು 2,430 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ಈ ರೋಪ್‌ವೇಗಳು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದ್ದು, ಇದು ಸುರಕ್ಷಿತ ಮತ್ತು ಸ್ಥಿರವಾದ ಸಾರಿಗೆ ವಿಧಾನವನ್ನು ಒದಗಿಸುತ್ತದೆ. ಈ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಯು ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುತ್ತದೆ, ಇದು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕತೆಯನ್ನು ನೀಡುತ್ತದೆ ಮತ್ತು ಬಹು ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗಲಿದೆ.
'ತಮ್ಮ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿಗಳು ಮಾತ್ರ' ಎಂದು ಟೀಮ್ ಇಂಡಿಯಾದ ಅನುಭವಿ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌, ಪತ್ನಿ ಧನಶ್ರೀ ವರ್ಮಾ ಸ್ಪಷ್ಟಪಡಿಸಿದ್ದಾರೆ. ʻಗಾಳಿ ಸುದ್ದಿಗಳನ್ನು ನಂಬಬೇಡಿʼ ಎಂದು ಅನುಭವಿ ಸ್ಪಿನ್‌ ಬೌಲರ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಜಿಂಬಾಬ್ವೆ ಪ್ರವಾಸದಿಂದ ಸದ್ಯ ಟೀಮ್‌ ಇಂಡಿಯಾದಿಂದ ಹೊರಗುಳಿದಿರುವ ಚಾಹಲ್, ಆಗಸ್ಟ್‌ 27ರಿಂದ ಆರಂಭವಾಗಲಿರುವ ಏಷ್ಯಾಕಪ್‌ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇಲ್ಲಿಗೆ ಕೊನೆಗೊಳಿಸಿ; ಧನಶ್ರೀ ವರ್ಮಾ ವಿವಾದದ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಚಾಹಲ್‌ ಪತ್ನಿ, ಯೂಟ್ಯೂಬರ್‌ ಧನಶ್ರೀ ವರ್ಮಾ, “ನಮ್ಮ ದಾಂಪತ್ಯಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ಎಲ್ಲರಲ್ಲೂ ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ದಯವಿಟ್ಟು, ಎಲ್ಲವನ್ನೂ ಇಲ್ಲಿಗೆ ಕೊನೆಗೊಳಿಸಿ. ಎಲ್ಲರ ಬಾಳಲ್ಲೂ ಪ್ರೀತಿ ಮತ್ತು ಬೆಳಕು ಮೂಡಲಿʼ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. Image ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯರಾಗಿರುವ ಯಜುವೇಂದ್ರ ಚಾಹಲ್‌ - ಧನಶ್ರೀ ದಂಪತಿ ತಾವು ಜೊತೆಯಾಗಿರುವ ಫೋಟೋ – ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಧನಶ್ರೀ ವರ್ಮಾ ಭಾರತ ತಂಡದ ಆಟಗಾರರಾದ ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಜೊತೆಗೆ ತೆಗೆಸಿಕೊಂಡ ಫೋಟೊ ಒಂದನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿನ ಹೆಸರಿನಲ್ಲಿ ಬದಲಾವಣೆ ಮಾಡಿ ಚಾಹಲ್‌ ಉಪನಾಮವನ್ನು ಕೈಬಿಟ್ಟಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಚಾಹಲ್‌ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ 'ಹೊಸ ಬದುಕಿನ ಆರಂಭ' ಎಂಬ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಇವರಿಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ರೀತಿಯಲ್ಲಿ ವ್ಯಾಪಕವಾಗಿ ಸುದ್ದಿಗಳು ಹರಡಿದ್ದವು.
ಸರಕಾರ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದಕ್ಕೆ ಕೊವಿಡ್-19ನಂತಹ ಸಂಕಷ್ಟದಲ್ಲಿಯೂ ಸಹ ಜನತೆಯ ಮನೆ ಬಾಗಿಲಿಗೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದೆ. ಆದರೆ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸಿಗದೇ ಜನತೆಯ ಜೀವದ ಜೊತೆ ಚೆಲ್ಲಾಟ ಹಾಗೂ ವೈದ್ಯರ ಅಸಹಾಯಕತೆ ಇಲ್ಲಿ ಕೇಳೋರು ಯಾರು ಇಲ್ಲದಂತಾಗಿದೆ. 6 ತಿಂಗಳುಗಳಿಂದ ಸಮಸ್ಯೆ : ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗಾಗಲೀ ಅಥವಾ ಬೇರೆ ಸ್ಥಳಗಳಿಗೆ ತೆರಳಲು ವರವಾಗಬೇಕಿದ್ದಂತಹ 108 ಅಂಬ್ಯುಲೆನ್ಸ್ ಕಳೆದ ಆರು ತಿಂಗಳುಗಳಿಂದ ಸಮರ್ಪಕವಾಗಿ ಕಾರ‍್ಯನಿರ್ವಹಿಸದೇ ಇರುವುದಕ್ಕೆ ಆಸ್ಪತ್ರೆಯಲ್ಲಿ ಇರುವಂತಹ ವೈದ್ಯರು ಅಂಬ್ಯುಲೆನ್ಸ್‌ಗಾಗಿ ನಿತ್ಯವೂ ಪರದಾಡುತಿದ್ದಾರೆ. ವೈದ್ಯರು ಅಂಬ್ಯುಲೆನ್ಸ್‌ಗಾಗಿ ಸಂಪರ್ಕಿಸಿದಂತಹ ಸಂದರ್ಭದಲ್ಲಿ ಬೇರೆ ಸ್ಥಳಗಳಲ್ಲಿ ಇರುವುದಾಗಿ ಹೇಳುತ್ತಿದ್ದಾರೆ. ಅನಿವಾರ್ಯವಾದಾಗ ಹೆರಿಗೆಯಾದ ತಾಯಂದಿರನ್ನು ಮನೆಗೆ ಕಳುಹಿಸಿಕೊಡುವುದಕ್ಕೆ ಇರುವ ನಗು-ಮಗು ವಾಹನ, ಹಾಗೂ ಜೆಎಸ್‌ವೈ ಅಂಬ್ಯುಲೆನ್ಸ್‌ಗಳನ್ನು ಉಪಯೋಗಿಸಲಾಗುತ್ತಿದೆ. ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ತಾಲೂಕಾ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಸಿಗುತ್ತಿಲ್ಲ, ಇಲ್ಲಿಯೇ ಖಾಯಂ ಇರಬೇಕೆಂದು ಹೇಳಿದರೂ ಬೇರೆ ಕಡೆಗಳಲ್ಲಿ ಇರುವುದಾಗಿ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಇದರಿಂದ ನಮಗೂ ಹಾಗೂ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿವಿಕೆ ಏಜೆನ್ಸಿಯವರ ಗಮನಕ್ಕೂ ತಂದರೂ ಸಹ ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಚಂದ್ರು ಲಮಾಣಿ, ವೈದ್ಯಾಧಿಕಾರಿ. ಗುರುವಾರ ಮಧ್ಯರಾತ್ರಿ ಪರದಾಡಿದ ಜನತೆ ತಾಲೂಕಾ ಆಸ್ಪತ್ರೆಯಲ್ಲಿ ಗುರುವಾರ ಮಧ್ಯರಾತ್ರಿ ಒಂದು ಪಾಯಿಜನ್ ಕೇಸ್, ಒಂದು ಡಿಲೆವರಿ ಕೇಸ್ ಮತ್ತೊಂದು ತೀವ್ರ ಜ್ವರದಿಂದ ಬಳಲುತ್ತಿದ್ದಂತಹ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಸಿಗದೇ ಇರುವುದಕ್ಕೆ ಪರದಾಡಿದ ಘಟನೆಯು ಜರುಗಿದ್ದು, ಮಧ್ಯರಾತ್ರಿಯೇ ವೈದ್ಯ ಚಂದ್ರು ಲಮಾಣಿ ಮತ್ತು ಸಿಬ್ಬಂದಿ ಎಷ್ಟೇ ಪ್ರಯತ್ನ ಮಾಡಿದರೂ ಅಂಬ್ಯುಲೆನ್ಸ್ ಲಭ್ಯವಾಗಲಿಲ್ಲ. ಅನಿವಾರ್ಯವಾಗಿ ಲಭ್ಯವಿರುವ ಬೇರೆ ಅಂಬ್ಯುಲೆನ್ಸ್‌ನಲ್ಲಿ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ. ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ? ಜನತೆಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಯನ್ನು ಒದಗಿಸಲು ಅನುಕೂಲ ಕಲ್ಪಿಸುವುದಕ್ಕಾಗಿಯೇ ಇರುವಂತಹ 108 ಅಂಬ್ಯುಲೆನ್ಸ್ ಇದ್ದು, ಆದರೆ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಲಭ್ಯವಿಲ್ಲದೇ ಇರುವುದರಿಂದ ಸದ್ಯ ಕೊವಿಡ್-19 ನಿಂದ ತತ್ತರಿಸಿರುವಂತಹ ಜನತೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವಂತಹ ವಯೋವೃದ್ಧರಿಗೆ, ಮಹಿಳೆಯರಿಗೆ ಮತ್ತು ಮಕ್ಕಳ ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ? ಎಂಬುದಕ್ಕೆ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕಿದೆ.
150 ಪ್ಯಾಸೆಂಜರ್ ರೈಲುಗಾಡಿಗಳನ್ನು ಓಡಿಸಲು ಅನುವಾಗುವಂತೆ ಕನಿಷ್ಠ ಪಕ್ಷ ನೂರು ರೇಲ್ವೆ ಮಾರ್ಗಗಳನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಮುಂದಾಗತೊಡಗಿದೆ. ಈ ತಿಂಗಳ ಅಂತ್ಯದಲ್ಲಿ ನಡೆಯುವ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮೌಲ್ಯಮಾಪನ ಸಮಿತಿಯ ಸಭೆಯಲ್ಲಿ ಈ ಪ್ರಸ್ತಾವ ಚರ್ಚೆಗೆ ಬರಲಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು 150 ಪ್ರಯಾಣಿಕರ ರೈಲುಗಾಡಿಗಳು ಎಂದರೆ ದೇಶದ ಒಟ್ಟು ರೇಲ್ವೆ ಕಾರ್ಯಾಚರಣೆಯ ಶೇ.5ರಷ್ಟು ಮಾತ್ರ ಎಂಬುದು ಸರ್ಕಾರಿ ಅಂದಾಜು. ಈ ಪ್ರಸ್ತಾವದಿಂದ 22 ಸಾವಿರ ಕೋಟಿ ರುಪಾಯಿಗಳಿಗೂ ಹೆಚ್ಚು ಖಾಸಗಿ ಬಂಡವಾಳ ರೇಲ್ವೆಗೆ ಹರಿದು ಬರುವ ನಿರೀಕ್ಷೆಯಿರುವ ಈ ಪ್ರಸ್ತಾವವನ್ನು ರೇಲ್ವೆ ಮಂಡಳಿಯು ವ್ಯಾಪಕ ಸಮಾಲೋಚನೆಗಳ ನಂತರ ಅಂತಿಮಗೊಳಿಸಿದೆ. ದೂರಸಂಪರ್ಕ ಮತ್ತು ನಾಗರಿಕ ವಿಮಾನಯಾನ ವಲಯಗಳಲ್ಲಿ ಈಗಾಗಲೆ ಆಗಿರುವಂತೆ ಪ್ರಯಾಣಿಕರ ರೈಲುಗಾಡಿಗಳ ಕಾರ್ಯಾಚರಣೆಯಲ್ಲೂ ಖಾಸಗಿ ವಲಯದ ಪ್ರವೇಶ ಅನಿವಾರ್ಯ ಎಂಬುದು ಸರ್ಕಾರದ ನಿಲುವು. ಐ.ಆರ್.ಸಿ.ಟಿ..ಸಿ. ನಡೆಸುವ ದೇಶದ ಮೊದಲ ಖಾಸಗಿ ರೈಲುಗಾಡಿ ತೇಜಸ್ ಎಕ್ಸ್ಪ್ ಪ್ರೆಸ್ ಗೆ ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಅದು ಸರ್ಕಾರಿ ಉದ್ಯಮವಾಗಿದ್ದು ಹೊಸ ವ್ಯಾಪಾರ ಮಾದರಿಯ ಪ್ರಾಯೋಗಿಕ ಕಾರ್ಯಾಚರಣೆಯಾಗಿರುವುದೇ ಈ ರಿಯಾಯಿತಿಗಳಿಗೆ ಕಾರಣ. ಈ ರಿಯಾಯತಿಗಳನ್ನು ಖಾಸಗಿಯವರಿಗೆ ನೀಡುವುದು ಸಾಧ್ಯವಿಲ್ಲ ಎನ್ನಲಾಗಿದೆ. ತಾವು ಓಡಿಸುವ ಪ್ರಯಾಣಿಕರ ರೈಲುಗಾಡಿಗಳ ಪ್ರಯಾಣದರಗಳು ಮತ್ತು ನಿಲುಗಡೆಗಳನ್ನು ತಾವೇ ನಿರ್ಧರಿಸುವ ಸ್ವಾತಂತ್ರ್ಯವನ್ನು ಖಾಸಗಿಯವರಿಗೆ ನೀಡಲಾಗುತ್ತದೆ. ಪಾರ್ಸೆಲ್ ಗಳನ್ನೂ ಅವರು ತಾವು ನಿರ್ಧರಿಸಿದ ದರಗಳ ಮೇರೆಗೆ ರವಾನಿಸಬಹುದಾಗಿದೆ. ರೇಲ್ವೆ ಟರ್ಮಿನಲ್ ಗಳ ಬಳಕೆ, ವಿದ್ಯುತ್ ವೆಚ್ಚ, ರೈಲುಗಾಡಿಯ ರವಾನೆ, ಹಳಿಗಳ ನಿರ್ವಹಣೆ, ಸಿಗ್ನಲಿಂಗ್ ಮತ್ತು ಸಿಬ್ಬಂದಿ ವೆಚ್ಚದ ಶೇ.25ರಷ್ಟನ್ನು ಅವರು ಭರಿಸಬೇಕಿದೆ. ಈ ಎಲ್ಲ ವೆಚ್ಚ ಭರಿಸುವುದರ ಜೊತೆಗೆ ಪ್ರಯಾಣದರ ಮತ್ತು ಇತರೆ ಆದಾಯದಲ್ಲಿ ರೇಲ್ವೆಗೆ ಪಾಲು ನೀಡಬೇಕಿರುತ್ತದೆ. ಅರ್ಹ ಉದ್ಯಮಿಗಳಿಗೆ ಈ ರೈಲು ಮಾರ್ಗಗಳನ್ನು 35 ವರ್ಷಗಳ ಗುತ್ತಿಗೆಗೆ ನೀಡಲಾಗುವುದು. ಕಳೆದ ಐದು ವರ್ಷಗಳಲ್ಲಿ ಉದ್ಯಮ ಇಲ್ಲವೇ ರೇಲ್ವೆ ಮೂಲಸೌಕರ್ಯಗಳಲ್ಲಿ 2,700 ಕೋಟಿ ರುಪಾಯಿಗಳನ್ನು ತೊಡಗಿಸಿರುವವರು ಮತ್ತು 450 ಕೋಟಿ ರುಪಾಯಿಗಳ ನಿವ್ವಳ ಸಂಪತ್ತನ್ನು ಹೊಂದಿದವರು ಈ ಗುತ್ತಿಗೆಗಳನ್ನು ಪಡೆಯಲು ಅರ್ಹರು. ಟೂರ್ ಆಪರೇಟರುಗಳು, ವಿಮಾನಯಾನ ಕಂಪನಿಗಳು, ರೋಲಿಂಗ್ ಸ್ಟಾಕ್ ಕಂಪನಿಗಳು ಖಾಸಗಿ ರೇಲುಗಾಡಿಗಳನ್ನು ಓಡಿಸಲು ಮುಂದೆ ಬರುವ ನಿರೀಕ್ಷೆ ಇದೆ. ಪ್ರತಿಯೊಬ್ಬರಿಗೆ ಕನಿಷ್ಠ 12 ಮತ್ತು ಗರಿಷ್ಠ 30 ರೈಲುಗಾಡಿಗಳನ್ನು ನೀಡಲಾಗುವುದು. ಪ್ರತಿಯೊಂದು ರೈಲುಗಾಡಿಯಲ್ಲಿ ವಿಶ್ವದರ್ಜೆಯ ಕನಿಷ್ಠ 16 ಕೋಚ್ ಗಳು ಇರಲೇಬೇಕು.
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಬಹು ಕಾಳಜಿಯಿಂದ ಇತಿಹಾಸದ ದಾಖಲೆಗಳನ್ನು ಆಧರಿಸಿ ರೂಪಿಸಿದ ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್‌ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಈ ಕ್ರಮದಿಂದಾಗಿ ತುಳು ಲಿಪಿಯು ಯುನಿಕೋಡ್‌ ನಕಾಶೆಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುವ ಕಾರ್ಯವು ವೇಗ ಪಡೆಯಲಿದೆ ಎಂದು ಹೇಳಿರುವ ಅವರು, ಸುಮಾರು ಹತ್ತು ವರ್ಷಗಳಿಂದ ತುಳು ಲಿಪಿಯನ್ನು ರೂಪಿಸುವ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ತುಳು ಭಾಷಾ ಮತ್ತು ಲಿಪಿ ತಜ್ಞರು ಸರ್ವಾನುಮತಿಯಿಂದ ರೂಪಿಸಿದ ತುಳು ಲಿಪಿ ಪಟ್ಟಿಯನ್ನು ಅಕಾಡೆಮಿಯು ಅಂಗೀಕರಿಸಿ ಯುನಿಕೋಡ್‌ ನಕಾಶೆಗೆ ಸೇರಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತುಳು ಲಿಪಿ ಪಟ್ಟಿಯನ್ನು ಪರಾಮರ್ಶಿಸಿ ಅನುಮೋದಿಸಲು ಮೈಸೂರಿನಲ್ಲಿರುವ ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಂಸ್ಥಾನಕ್ಕೆ ಕರ್ನಾಟಕ ಸರ್ಕಾರದಿಂದ ಕೋರಲಾಗಿತ್ತು. ಭಾಭಾ ಸಂಸ್ಥಾನವು ಇದಕ್ಕಾಗಿ ಭಾಷಾ ತಜ್ಞರ ಸಮಿತಿಯನ್ನು ರಚಿಸಿ, ಚರ್ಚಿಸಿ ಲಿಪಿ ಪಟ್ಟಿಯನ್ನು ಅನುಮೋದಿಸಿ, ಯುನಿಕೋಡ್‌ ಕನ್ಸಾರ್ಶಿಯಂಗೆ ಸಲ್ಲಿಸಲು ಶಿಫಾರಸು ಮಾಡಿತು. ಅದರಂತೆ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತುಳು ಅಕಾಡೆಮಿಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಅಲ್ಲದೇ ಯುನಿಕೋಡ್‌ ನಕಾಶೆಗೆ ಸೇರಿಸಲು ಅಗತ್ಯವಿರುವ ಇನ್ನಿತರೆ ತಾಂತ್ರಿಕ ಅಂಶಗಳ ಬಗ್ಗೆಯೂ ಗಮನ ಕೊಡುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು. ಇನ್ನು ತುಳು ಲಿಪಿಯನ್ನು ಯುನಿಕೋಡ್‌ ನಕಾಶೆಗೆ ತಕ್ಕಂತೆ ರೂಪಿಸುವಲ್ಲಿ ಶ್ರಮವಹಿಸಿದ ಎಲ್ಲ ತಜ್ಞರಿಗೂ ಸಚಿವ ಅರವಿಂದ ಲಿಂಬಾವಳಿ ಅಭಿನಂದನೆ ಸಲ್ಲಿಸಿದ್ದಾರೆ. ಡಿಜಿಟಲ್‌ ವೇದಿಕೆಗಳಲ್ಲಿ, ಮುದ್ರಿತ ಸಾಹಿತ್ಯದಲ್ಲಿ, ಪ್ರಚಾರ ಸಾಹಿತ್ಯದಲ್ಲಿ – ಹೀಗೆ ತುಳು ಲಿಪಿಯು ಹೆಚ್ಚು ಹೆಚ್ಚು ಬಳಕೆಗೆ ಬಂದರೆ ಲಿಪಿಯನ್ನು ರೂಪಿಸಿದ್ದಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದಿರುವ ಅವರು ಕರ್ನಾಟಕದ ಇತಿಹಾಸದಲ್ಲಿ ಒಂಬತ್ತು ಶತಮಾನಗಳ ಅತಿದೀರ್ಘವಾದ ಆಡಳಿತವನ್ನು ನಡೆಸಿದ ಖ್ಯಾತಿಯನ್ನು ಹೊಂದಿದ ತುಳು ಸಂಸ್ಕೃತಿಯ ಪ್ರತೀಕವಾದ ತುಳು ಲಿಪಿಯು ಯುನಿಕೋಡ್‌ಗೆ ಸೇರುತ್ತಿರುವುದಕ್ಕೆ ಲಕ್ಷಾಂತರ ತುಳು ಭಾಷಿಗರು ತೋರಿದ ಸಂಭ್ರಮದಲ್ಲಿ ಭಾಗಿಯಾಗಲು ನನಗೂ ಹರ್ಷವಾಗುತ್ತಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಕನ್ನಡ ನಾಡಿನ ಉಳಿದೆಲ್ಲ ಭಾಷೆಗಳಂತೆಯೇ ತುಳು ಭಾಷೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗಾಗಿ ನಮ್ಮ ಸರ್ಕಾರದ ಪ್ರಯತ್ನವು ನಿರಂತರವಾಗಿ ನಡೆಯುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಇನ್ನೇನು ಬರಲಿರುವ ಅನ್ನಬೋನದಲ್ಲಿ ರಾಜುವಿನ ಬಹುದಿನದ ಆಸೆ ಈಡೇರುವುದರಲ್ಲಿತ್ತು. ಅನ್ನವನ್ನು ಬಚ್ಚಿಡುವುದು ಹೇಗೆಂಬುದು ಮಾತ್ರ ಅವನಿಗೆ ತಲೆನೋವಾಗಿತ್ತು. ರಾಜುವಿನ ಅವ್ವ ಚೆನ್ನಮ್ಮಳ ಶ್ರಮ ಹೇಳ ತೀರದ್ದು. ಅದಕ್ಕಾಗಿ ಸತತ ಆರು ತಿಂಗಳಿನಿಂದ ಸೊಸೈಟಿಯಲ್ಲಿ ಸಿಗುವ ನಾಲ್ಕು ಕೆಜಿ ಅಕ್ಕಿಯಲ್ಲಿ ಒಂದೂ ಮುಕ್ಕಾಗದಂತೆ ಜತನ ಮಾಡಿಕೊಂಡಿಟ್ಟುಕೊಂಡಿದ್ದಳು. ಚೆನ್ನಮ್ಮಳ ಮಗನಿಗಿದು ಗಂಟಲು ಬಿಗಿದಿಡುವ ಸ್ಥಿತಿಯನ್ನೊದಗಿಸಿತ್ತು. ಆದರೂ ಬೋನದ ದಿನದ ತರಹೇವಾರಿ ಅನ್ನದ ಹೆಸರುಗಳನ್ನು ಕೇಳಿಯೇ ಗಪ್ಚುಪ್ಪೆನ್ನದೆ ಸುಮ್ಮನಿದ್ದ. ಚಿತ್ರಾನ್ನ, ಅಕ್ಕಿಪಾಯಸ, ಹುಳಿಯೋಗರೆ, ಕೆಂಬಾತು, ತಂಬಾತು…. ಅನ್ನಗಳೆಲ್ಲ ಕಿವಿಯೊಳಗೆ ಮೋಡದುಂಬಿ ನೆಲನಾಲಗೆಗೆ ತಂಪೆರುಯುತಿದ್ದವು. ಮಗ ರಾಜುವಿಗೆ ತಾಯಿ ಚೆನ್ನಮ್ಮಳ ಮೇಲೆ ವಿಪರೀತ ಕೋಪವಿತ್ತು. ಅದೊಂದು ಸಿಂಧೂ ನಾಗರೀಕತೆಯಿಂದಿರುವ ಸಿಡುಕು. ‘ಹುಟ್ಟಿದಂದಿನಿಂದ ನಮ್ಮ ಬಡತನಕ್ಕೆಲ್ಲ ಇವಳೇ ಕಾರಣ! ಅಷ್ಟು ಪ್ರೀತಿಸುವ ಅಪ್ಪನು ನಮ್ಮೆನ್ನೆಲ್ಲ ಬಿಟ್ಟು ಹೋಗಲು ಇವಳ ಒಣಕಲು ಅಡುಗೆಯೇ ಸಾಕು!’. ಯಾವಾಗಲೂ ಅವವೇ ಕಡಕಲು ರೊಟ್ಟಿ, ಬಳಕಲು ಮುದ್ದೆಗಳದೇ ಕಾರುಬಾರು. ರೊಟ್ಟಿಗಿಷ್ಟು ಕುರುಶೆಣ್ಣಿ ಚಟ್ನಿ, ಮೆಂತ್ಯೆಚಟ್ನಿ, ಶೇಂಗಾ ಪುಡಿ, ಕುಟ್ಹಿಂಡಿ, ಪುಡ್ಚಟ್ನಿ…. ಆಗಾಗ ಜುಮುಕಿ, ಬಜ್ಜಿ, ಬೇಯ್ಸಿಚಟ್ನಿ! ಮುದ್ದೆಗಾದರೆ ಮತ್ತದೇ ಉತ್ಗ, ತಂಬ್ಳೆ, ಹಸೆಂಬ್ರಾ, ಸೀಪಲ್ಯ, ಹಸೆಸಾರು! ಅಪರೂಪಕ್ಕಾದರೂ ಸರಿಯೇ ಕೊಬ್ಬರಿ, ಒಗ್ಗರಣೆಯನ್ನೇ ಕಾಣದ ಮತ್ತಷ್ಟು ತಿಂಬೋಣಗಳು.. ಗಾರಿಗೆ, ಕಿಲಾಸ, ಕರಿಕಡುಬು, ಹೋಳಿಗೆ, ಸಂಡಿಗೆ ಹುಗ್ಗಿ, ಗೋಧಿ ಹುಗ್ಗಿ…. ‘ಹೀಗೆ ನಮ್ಮ ಬಡತನದ ಬಾವುಟಕ್ಕೆ ನೂರಾರು ನಕ್ಷತ್ರಗಳು! ಊರಿಗೆಲ್ಲ ಕಾಣುವಂತೆ ಅವ್ವ ಮತ್ತೆ ಮತ್ತೆ ಇವುಗಳನ್ನೇ ಹಾರಿಸಿದ್ದು ನಮಗೆ ಬಹುದೊಡ್ಡ ನಾಚಿಗೆಯ ಸಂಗತಿ. ನಮ್ಮ ಅಡುಗೆಯ ಪಟ್ಟಿಯಲ್ಲಿ ಸೂರ್ಯತೇಜದಂಥ ‘ಅನ್ನ’ವೇ ಇಲ್ಲದ್ದು ನಮ್ಮ ಮಹಾಬಡತನಕ್ಕೆ ಮೂಲಕಾರಣ’ ಎಂಬುದು ರಾಜುವಿನ ಬಹುದೊಡ್ಡ ಕೊರಗು. ‘ನಮ್ಮೀ ಬಡತನಕ್ಕೆ ಚಿತ್ರವೈಚಿತ್ರ್ಯ ಅಡುಗೆಯ ಸಾಲೇ ಕಾರಣ..’ವೆಂಬುದು ರಾಜುವನ್ನು ದ್ವೇಷಕ್ಕೆ ತಿರುಗಿಸಿತ್ತು. ಅನ್ನಬೋನದ ದಿನ ಅನ್ನವನ್ನೇ ತಿನ್ನುವ ಹಠಕ್ಕೆ ಬಿದ್ದು ಮಾಡಿಟ್ಟಿದ್ದ ರೊಟ್ಟಿಗಳನ್ನು ಹದಿನೈದು ದಿನಗಳಿಂದ ಮುಟ್ಟಿರಲಿಲ್ಲ. ದಿನಗಳೆದಂತೆ ರೊಟ್ಟಿಗಳು ಒಣಗಿ ಮುರುಟಿ ಹಬ್ಬದ ಮಾರನೆಯ ದಿನಕ್ಕಾಗಿ ಕಾದುಕುಳಿತ ಕಾಡತೂಸುಗಳಂತಾಗಿದ್ದವು. ತಾಯಿ ಚೆನ್ನಮ್ಮಳಂತೂ ‘ಇವ ತಿನ್ನದಿದ್ದರೆ… ಅಜ್ಜಿ ಜುಟ್ಟು ಕೊತ್ತಂಬರಿ ಕಟ್ಟು… ಹಬ್ಬ ಕಳೆಯಲಿ ಮತ್ತಿವೇ ಗತಿ’ ಎಂದುಕೊಂಡು ಬುಸುಗುಡುತ್ತಲೇ ಇದ್ದಳು. ಅನ್ನಬೋನದ ಮಾರನೆಯ ದಿನಕ್ಕಾಗಿಯೇ ಕಾದುಕುಳಿತು ಅಣಕಿಸುತ್ತಿರುವ ರೊಟ್ಟಿ ಸುರುಳಿಯ ಚಕ್ಕೆಗಳನ್ನು ಎಲ್ಲಾದರು ಎಸೆದು ಬಿಡುವ ಯೋಚನೆ ಬಂದಿತಾದರೂ ಅವ್ವಳ ಪೆಟ್ಟಿನ ರುಚಿಗೆ ಮುಗುಮ್ಮಾಗಿರಬೇಕಾಯಿತು. ಇನ್ನೇನು ಬರಲಿರುವ ಅನ್ನವುಣ್ಣುವ ಸಂಭ್ರಮವೇನಾದರೂ ತಪ್ಪಿ ಹೋದೀತೆಂದೂ ಬಗೆದು ತೆಪ್ಪಗಿರಬೇಕಾಯಿತು. ಬಂಧುಬಳಗಗಳಲ್ಲಿ ರಾಜುವಿನ ಮನೆಯಲ್ಲಿ ಮಾತ್ರ ಇಂಥ ಸಂಕಷ್ಟಗಳಿದ್ದವು ಬಿಟ್ಟರೆ, ಉಳಿದೆಲ್ಲರು ಅನುಕೂಲಸ್ಥರೇ ಆಗಿದ್ದರು. ಪೌರುಷವಾಗಿ ಬತ್ತದೆನೆಗಳಂತೆ ತೊನೆಯುತಿದ್ದರೂ ಕೂಡ. ರಾಜುವಿನ ಪರಿಸರ ಮಳೆ ಕಂಡ ಬೆಳೆಯ ಅತಂತ್ರತೆ. ಆದರೆ ವೈವಿಧ್ಯಗಳಿಗೆ ಕೊರತೆಗಳಿರಲಿಲ್ಲ. ಅದೇನೋ ಭಗೀರಥರಂತೆ ಗಂಗೆಯನ್ನು ತಂದು ಅಕ್ಕಿಯೊಂದನ್ನಷ್ಟೇ ಬೆಳೆಯುವ ಬಂಧುಗಳ ಮುಂದೆ ಅಹಲ್ಯೆಯಂತೆ ಮಳೆರಾಮನಿಗೆ ಕಾದು ಕುಳಿತ ನಿಸ್ತೇಜತೆಯ ಮೂರ್ತಿಯಾಗಿ ಎರೆಹೊಲದೆಂಟೆಗಳು ಅಣಕಿಸುತಿದ್ದವು. ಅನ್ನಬೋನ ಹತ್ತಿರವಾಗುತ್ತಿದ್ದಂತೆ ರಾಜುವಿನ ತಳಮಳಗಳ ಒಂದೆರಡಲ್ಲ. ಅನ್ನವನ್ನೇ ಉಂಡೂ ಉಂಡು ಸಾಕಷ್ಟು ಸರ್ವಿಸ್ಸಿರುವ ಮಂದಿ ಅಂದೆನಗೆ ಅನ್ನ ಉಳಿಸುತ್ತಾರೋ ಇಲ್ಲವೋ ಎಂಬ ದಿಗಿಲು. ಅನ್ನವನ್ನು ಬಚ್ಚಿಡಲಾದೀತೆ? ಅದೂ ಔತಣಕ್ಕೆಂದು ಬಸಿದ ಅನ್ನ. ನೆಂಟರೂರುಗಳಿಗೆ ಅನ್ನವುಣಲೆಂದೇ ಹೋಗುತಿದ್ದಾಗ ‘ಬರಗೆಟ್ಟ ಮಕ್ಕಳಿವು, ಎಲ್ಲಾ ಖಾಲಿ ಮಾಡಿಬಿಡುತ್ತವೆಂದು’ ಬೀರುವಿನೊಳಗೆ ಬಚ್ಚಿಡುತ್ತಿದ್ದ ಸೇಡನ್ನು ತೀರಿಸಿಕೊಳ್ಳಲು ಅವಕಾಶವಾದರೆ… ಹೀಗೆ ಹದಿನೈದಿಪ್ಪತ್ತು ದಿನಗಳಿಂದ ಹಸಿದು ಕೂತಿರುವ ಕುಂಭಕರ್ಣದ ಹೊಟ್ಟೆಗಿದು ಸಾಕಾಗುತ್ತದೋ ಇಲ್ಲವೋ ಎಂದು ಹುತ್ತಗಟ್ಟಿತ್ತು. ಕೊನೆಗೆ ಒಂದು ಬೊಗಸೆಯಷ್ಟಾದರೂ ಉಳಿಸುತ್ತಾರೋ ಇಲ್ಲವೋ ಎಂದು ಬಾಲಸುಟ್ಟ ಬೆಕ್ಕಿನಂತೆ ತವಕಿಸುವುದೇ ಆಯಿತು. ಮೊದಲೇ ದಡೂತಿ ಮಂದಿ ಸಹವಾಸ ಒಳ್ಳೆಯದಲ್ಲವೆಂದು ಒಂದು ಹಿಡಿಯಷ್ಟಾದರೂ ಬಚ್ಚಿಡಲು ಜೀವ ಹಾತೊರೆಯುತ್ತಿತ್ತು. ಆದರೆ ಪಾಪವದು! ನಮ್ಮನೆಯದೇ ಅನ್ನಬೋನ ಬೇರೆ. ಬಸಿದನ್ನವನ್ನು ತೆರೆದ ಈಚಲಚಾಪೆಗಳಲ್ಲಿ ಹರವಿ ಸತ್ಕರಿಸಬೇಕು. ಅಷ್ಟಲ್ಲದೆ ಆ ಪ್ರಮಾಣದ ಅನ್ನವನ್ನು ಬಚ್ಚಿಡುವುದೂ ಅಸಾಧ್ಯವಿತ್ತು. ಮಗನ ಈ ಬಿಳಿಹೆಂಡತಿಯಂಥ ಅನ್ನಕಾಮಕ್ಕೆ ತಹತಹಿಸುವುದನ್ನು ನೋಡಿ ತಾಯಿ ಚೆನ್ನಮ್ಮ ಬೇಸತ್ತು ಹೋಗಿದ್ದಳು. ಹುಟ್ಟಿದಾಗಿನಿಂದ ಅನ್ನದ್ದೊಂದೇ ಧ್ಯಾನ. ಅವಳ್ಯಾವಳೋ ಮಾಯಗಾತಿಯ ಸೆರಗು ಹಿಡಿದು ಹೋದ ಗಂಡ, ಓದು ಬಿಟ್ಟು ತಿನ್ನುವುದೇ ಬದುಕಿನ ಗುರಿಯೆಂದುಕೊಂಡಿರುವ ಮಗ, ಇದ್ದ ಗುಡಿಸಲನ್ನು ಮನೆಯಾಗಿಸಿಕೊಳ್ಳುವಲ್ಲಿನ ಸೋಲು ಚೆನ್ನಮ್ಮಳನ್ನು ಬಹುವಾಗಿ ಕಾಡಿದ್ದವು. ಪರಿಹಾರಕ್ಕಾಗಿ ಸ್ವಾಮೇರು ಹೇಳಿದ ಈ ಅನ್ನಬೋನವೆಂಬ ಉರುಳು! ‘ನಮ್ದು ಅಂಕ್ಲೇ ಆಗಿರ‌್ಬೋದು, ಮಳೆ ಕಂಡ ಬೆಳೆನೆ… ನಮ್ ಭೂಮಿಸತ್ವ ಆ ಗದ್ದೆಸೀಮೆ ಅನ್ನದಾಗೆಲ್ಲಿದ್ದಾತು..’ ಒಂದೇ ಒಂದು ಅನ್ನಸಂಭ್ರಮೆಗೆ ಮಗ ಹುಚ್ಚನಂತಾಗಿರುವುದಕ್ಕೆ ರೋಸಿ ಹೋಗಿದ್ದಳು. ‘ಮುಗಿಲಿ… ಅದೇನ್ ದಿಕ್ಕು ನಾ ನೋಡ್ತೀನಿ…ಬುಟ್ಟಿ ಸಮೇತ ರೊಟ್ಟಿ ತಿನ್ಲಿಲ್ಲಾ… ನಾನು ಬೆನ್ಕಪ್ಪನ್ ಮಗಳೇ ಅಲ್ಲ..ಅನ್ಕೋತಿನಿ.. ಅಪ್ಪನ ಚಾಳಿ ತಿನ್ನೋ ಅನ್ನದಾಗೆ ಬಂದು ಕೂತತಿ… ಮುರಿದೇ ಬಿಡಲ್ಲ ನಾನಿದನ್ನ… ಕಳಿಲಿ ಇದೊಂದು…’ ವಟಗುಟ್ಟುತ್ತಲೇ ಅನ್ನಬೋನಕ್ಕೆ ಬೇಕಿದ್ದ ಸೌದೆ ಒಟ್ಟುತಿದ್ದಳು. ಮಗ ಉಣ್ಣುವ ಆಸೆಗೆ ಬಿದ್ದು ಅದೂ ಸಣ್ಣಕ್ಕಿಯಲ್ಲ ಮತ್ತೊಂದಲ್ಲ ಈ ಸೊಸೈಟಿ ಅಕ್ಕಿಯಾಸೆಗೆ ಬಿದ್ದು ಹೊರಳಾಡುತ್ತಿರುವುದು ತಾಯಿ ಚೆನ್ನಮ್ಮಳಿಗೆ ಸಂಕಟವಾಗಿ ನಾನೇನು ಕಮ್ಮಿಯೆಂಬಂತೆ ಬುಟ್ಟಿಯಲಿ ರೊಟ್ಟಿಗಳು ಹೆಚ್ಚಾಗಲು ಮತ್ತಷ್ಟು ಇಂಬಾದಳು. ಕಲಿತದ್ದೊಂದು ಅಡಕೆ ಎಲೆ ತಂಬೂಲದ ರುಚಿಯೊಂದಷ್ಟೆ ಸಾಕಿತ್ತವಳಿಗೆ. ನರನಾಡಿಗಳು ಸೆಟೆದು ಲಟಿಕೆ ಬಂದು ಇನ್ನೇನು ಬಟ್ಟಿಯೊಂದು ಬಿದ್ದು ಒದ್ದಾಡಬೇಕು ಆ ಮಟ್ಟಿಗೆ ರೊಟ್ಟಿ ತಟ್ಟಿ ಮುದ್ದೆ ಮಾಡಿಟ್ಟರೂ ಬೆರಳಿನ ಮೂರುಗೆರೆಯಷ್ಟು ನೀರು ಹಾಕಿಸಿಕೊಂಡು ತನಗೆ ತಾನೆ ಬೆಂದು ಬೆವರುವ ಅಕ್ಕಿ ಇವಳೆಲ್ಲ ಶ್ರಮವನ್ನೀಗ ಅಣಕಿಸುತ್ತಿತ್ತು. ಇದು ಸೆಳೆತವಷ್ಟೆ… ಬೋನದ ದಿನ ಮಗನನ್ನು ಮೊದಲ ಪಂಕ್ತಿಗೇ ಕೂರಿಸಿ ಚಟ ಮುರಿಯುವಂತೆ ನಿವಾಳಿಸಬೇಕೆಂದುಕೊಂಡಳು ಚೆನ್ನಮ್ಮ. ಬಂಧುಬಳಗವೆಲ್ಲ ಬಾರದಿದ್ದರೇ ಒಳಿತೇನೋ ಎಂದುಕೊಂಡಿದ್ದ ರಾಜುವಿಗೆ ದೇವರು ಕೈ ಹಿಡಿಯಲಿಲ್ಲ. ಅನ್ನಬೋನದ ದಿನ ಯಾವ ಕಷ್ಟದಲ್ಲೂ ಬಾರದ ಸುಖವನ್ನೂ ವಿಚಾರಿಸದವರೆಲ್ಲ ಜಮಾಯಿಸಿ ಆಗಿತ್ತು. ಸಾಲುಸಾಲು ಕಾರು! ಗುಡಿಯ ಮುಂದೆ ಹಸಿದ ಬಂಡಿಯಂತೆ! ರಾಜುವಿಗೆ ಭಯ ತರಿಸಿತ್ತು. ದೇವರ ಕೋರೂಟವೆಲ್ಲ ಮುಗಿದ ಕೂಡಲೆ ಸ್ವಾಮೇರ ಪಂಕ್ತಿಗೂ ಅವಕಾಶ ಕೊಡದೆ ಬೋನದೆಡೆಗೆ ನೆಂಟರು ದಾಂಗುಡಿಯಿಡುತ್ತಾರೆ. ಉಣ್ಣುವ ಜಾಗದ ಮುಂದಿನ ಗುಡಿಸಲ ಮೂಲೆಯಲ್ಲಿದ್ದ ಕಡಕಲು ರೊಟ್ಟಿಗಳ ದರ್ಶನವಾಗಿದ್ದೇ ತಡ…. ಹೂವಿಗೆ ಜೇನು ಮುತ್ತುವಂತೆ. … ರಿಯಾಯಿತಿಯ ಸೀರೆಮೇಳಕ್ಕೆ ನುಗ್ಗುವ ಹೆಂಗಳೆಯರಂತೆ… ಹೊಸದೊಂದು ಆಟಕ್ಕೆ ಓಡಿ ಬರುವ ಮಕ್ಕಳಂತೆ ನೆಂಟರಿಷ್ಟರೆಲ್ಲ ಆ ರೊಟ್ಟಿಯ ಬುಟ್ಟಿಗೆ ಮುತ್ತಿಕೊಳ್ಳುತ್ತಾರೆ. ಸುತ್ತಲೂ ಇರುವೆಯಂತೆ ಸೇರಿದ ಮಂದಿ ಆ ಕಡಕಲು ರೊಟ್ಟಿಗಳನ್ನು ಆನೆಗಳಂತೆ ಮೆಲ್ಲತೊಡಗುತ್ತಾರೆ. ಸಧ್ಯ ರೊಟ್ಟಿಯ ಬುಟ್ಟಿಯನ್ನುಳಿಸಿದ್ದೇ ಹೆಚ್ಚು. ”ರೊಟ್ಟಿ ತಿನ್ನದೆ ಅದೆಷ್ಟು ದಿನಗಳಾಗಿದ್ದವು. ಅದರಲ್ಲೂ ಈ ಕಟಗಲು ರೊಟ್ಟಿಗಳೆಂದರೆ ಅಮೃತಕ್ಕೆ ಸಮಾನ”ವೆಂದು ಸವಿದದ್ದೇ ಬಂತು. ಗಂಡಸರಂತೂ ‘ನಮ್ಮನೆ ಮೂದೇವಿಗಳೂ ಇದ್ದಾವೆ? ಅನ್ನ ಬಸಿಯೋದೊಂದೇ ಗೊತ್ತು. ರೊಟ್ಟಿ ತಟ್ಟೊ ಮುಖಗಳೆ ಅವು…ಎರಡು ಹನಿ ಬೆವರು ಬಿದ್ದರೆ ಸಾಕು… ಉಸ್ಸೆಂದು ಕೂರುತ್ತವೆ’. ಇನ್ನು ಹೆಂಗಳೆಯರಂತೂ ‘ಬಯಲಸೀಮೆಯಲ್ಲಿ ಎರಡು ಗುಂಟೆ ಜಮೀನು ಹಿಡಿದು ಬಿಳ್ಜೋಳ ಬೆಳೆದು.. ಬಿಸಿಲಲ್ಲಿ ಬೆಂದು ಚೀಲ ತುಂಬೋ ತೋಳುಗಳ ಇವು… ಏನಿದ್ರೂ ಕೂಲಿನೋ ಗುತ್ತಿಗೇನೋ ಕೊಟ್ಟು ಮೀಸೆ ತಿರುವುತ್ತವಷ್ಟೆ..ಬರೀ ತಿನ್ನೋಕಾಗಿ ಇದ್ನೆಲ್ಲ ಮಾಡಾದೂ ಅಷ್ಟಕ್ಕಷ್ಟೆ’… ಹೀಗೆ ಮಾತು ತುತ್ತು ಎರಡೂ ಸೇರಿ ನೆಂಚಿಕೊಳ್ಳಲಿಲ್ಲದಿದ್ದರೂ ರೊಟ್ಟಿ ಖಾಲಿಯಾದವು. ಕುರುಶೆಣ್ಣಿ ಪುಡಿ, ಉಪ್ಪು, ಒಂದಿಷ್ಟು ಖಾರಪುಡಿ ಹಾಕಿಕೊಂಡು ಸ್ವಲ್ಪ ನೀರು ಚಿಮುಕಿಸಿಕೊಂಡು ದೇವರ ಪ್ರಸಾದವೆಂಬಂತೆ ಕಬಳಿಸಿ ಬಿಡುತ್ತಾರೆ. ‘ಹೀಗೆಲ್ಲ ತಿನ್ನೋ ಮಂದಿ ಈಗೀಗ ಎರಡು ತಿನ್ನೋ ಕಾಳೂ ಬೆಳೆಯೋಕಾಗದೆ ದುಡ್ಡಿನ ಹಿಂದೆ ಬಿದ್ದು ಅಡಕೆ ಮಾಡೋಕೊಂಟಾವ್ರಂತೆ..’ ಎಂದು ಕಂಡವರ ಮೂದಲಿಕೆಗೊಳಗಾದರೂ ಅದರ ಪರಿವಿಲ್ಲದೆ ತಮ್ಮ ಚಿಂತೆ ಬೊಂತೆಯಲ್ಲೇ ಮುಳುಗಿದ್ದರು. ತಾಯಿ ಚೆನ್ನಮ್ಮಳಿಗೆ ದಿಗಿಲು, ಮಗ ರಾಜುವಿಗೆ ಖುಷಿಯ ಹೊನಲು. ‘ಅನ್ನದ ರಾಶಿಯೇ ನನ್ನದು! ಅದೆಷ್ಟು ಸವಿಯಬಹುದು!? ದಿನಗಳೇಕೆ ಇಂದೇ ಎಲ್ಲವನು ಸವಿದು ಬಿಡುವೆ! ನೆಂಟರನ್ನೂ ದೇವರೇ ನನಗಾಗಿ ಕಳುಹಿಸಿದ್ದಾನೆ’. ಚೆನ್ನಮ್ಮಳಿಗೆ ಅನ್ನಬೋನದಲ್ಲಿ ಒಂದಗಳನ್ನೂ ಉಳಿಸದಂತೆ ನೇಮವನ್ನು ಪೂರ್ಣಗೊಳಿಸುವ ತವಕ…. ‘ಇದ್ದ ಬದ್ದ ಅಕ್ಕಿಯನ್ನೆಲ್ಲ ಬಸಿದು ಈಚಲು ಚಾಪೆಗೆ ಹರಡಿಯಾಗಿದೆ. ಆದರೆ ಬಂದ ನೆಂಟರೆಲ್ಲ ರೊಟ್ಟಿಗೆ ಮುತ್ತಿಗೊಂಡು ನಮ್ಮ ಭಾಗ್ಯಕ್ಕೇ ಅಡಚಣೆಯಾಗಿದ್ದಾರೆ. ಈ ಕೂಸು ನೋಡಿದರೆ ಅದಕ್ಕೆ ಖುಷಿಪಟ್ಟು ಎಲ್ಲ ತಿಂದು ಬಿಡುವ ನಾಟಕವಾಡುತ್ತಿದೆ. ಇದಕ್ಕೆಲ್ಲೋ ಭ್ರಾಂತು…’ ಮಗನ ಮೇಲೆ ಅಸಹನೀಯ ಕೋಪವೇಳುತ್ತದೆ. ಹೇಗಾದರೂ ಮಾಡಿ ಬಂದ ನೆಂಟರನ್ನು ಅನ್ನದೆಡೆ ತಿರುಗಿಸಲು ಇನ್ನಿಲ್ಲದಂತೆ ಮಾತಿಗಿಳಿಯುತ್ತಾಳೆ… ಅವರೋ ಮುರುಟಿಕೊಂಡ ಆ ಕಾಡತೂಸಿನಂಥ ರೊಟ್ಟಿಗಳನ್ನು ತಮ್ಮ ಹೊಟ್ಟೆ ಕೋಟೆಯೊಳಗಿಳಿಸಿಕೊಂಡು ಕೆನೆಯುತ್ತಿದ್ದಾರೆ. ರಾಜುವಿಗೆ ದಿಗಿಲು ಇವರೆಲ್ಲ ತಮ್ಮ ಮನ ಬದಲಾಯಿಸಿ ಅನ್ನದೆಡೆ ಬಂದರೇನು ಗತಿ? ಲಕ್ಷ್ಯವಿಟ್ಟು ಅವರನ್ನು ಗಮನಿಸ ತೊಡಗುತ್ತಾನೆ. ಕೆಲವೇ ನಿಮಿಷಗಳ ಮಾತು ಕೇಳಿಯೇ ರಾಜುವಿನ ಹೃದಯ ಒಡೆಯುವುದೊಂದು ಬಾಕಿ. ಅಷ್ಟೊಂದು ಎರಕ ಒಯ್ದ ಮಾತುಗಳು…’ನಮ್ಮ ಡಾಕ್ಟರ್ ಹೇಳುತ್ತಾರೆ ..ಅನ್ನವೊಂದು ಬಿಳಿ ವಿಷ… ಅನ್ನವುಣ್ಣುವುದೇ ರೋಗಕ್ಕೆ ಕಾರಣ… ಅವನೊಬ್ಬನಿದ್ದ ಅನ್ನ ತಿಂದೇ ಸತ‌್ತ, ಹೇಳಿದರೆ ಕೇಳಲಿಲ್ಲ… ಅನ್ನ ತಿನ್ನು; ಆಸ್ಪತ್ರೆ ಸೇರು… ರೊಟ್ಟಿ ತಿನ್ನು; ಗಟ್ಟಿಯಾಗು… ಅನ್ನ ವಿಷ; ರೊಟ್ಟಿ ಪೀಯೂಷ….. ಅದು ಬಂದು ಇವರದ್ದು ಸೊಸೈಟಿ ಅಕ್ಕಿ ಬೇರೆ… ತಿನ್ನೋಕಿಂತ, ಸೂಸೈಡೇ ಗತಿ… ನಮ್ಮ ಮನೆಯಲ್ಲಿದನ್ನು ನಾಯಿಯೂ ಮುಟ್ಟೋಲ್ಲ…’ ಅನ್ನದ ರಾಶಿಯ ಹಿಮದೆದುರು ಕೂತಿದ್ದ ರಾಜುವಿಗೆ ನಾಭಿಯಿಂದೆದ್ದ ಜ್ವಾಲಾಮುಖಿಯ ದಿಗಿಲು. ಎದ್ದವನೆ ದೇವರ ಮುಂದೆ ಕೂತಿದ್ದ ಅವ್ವಳ ಕಾಲಿಗೆ ಬಿದ್ದು ದೊಡ್ಡವೆರಡು ಚೊಂಬು ನೀರು ಕುಡಿದು ಹೋಗಿ ಮಲಗಿ ಬಿಡುತ್ತಾನೆ. ಎಂದೂ ತೋರದ ಈ ವಿನಯ ಕಂಡು ಅವ್ವಳಿಗೆ ಕೋಪ ಕೆರಳುತ್ತದೆ. ಯಾವ ಪುರುಷಾರ್ಥಕ್ಕೆ ನಾನಿದನ್ನು ಮಾಡಬೇಕಿತ್ತು… ಒಂದು ತುತ್ತೂ ತಿನ್ನದೆ ಮಗನೂ ಕೈ ಬಿಟ್ಟ’ ಗೋಳಾಡುತ್ತಾಳೆ. ‘ರಾತ್ರಿ ಹಸಿವಾದರೆ ನಾಯಿಯಂತೆ ತಾನೇ ಎದ್ದು ತಿಂತಾನೆ.. ಬಿದ್ಕೊಳ್ಳಿ ಬೇವರ್ಸಿ ದಂಡಪಿಂಡ… ‘ ಎಂದವಳೇ ಕಂಬಕ್ಕೊರಗಿಕೊಳ್ಳುತ್ತಾಳೆ. ದೇವರ ದೀಪ ಮಂಕಾಗ ತೊಡಗುತ್ತದೆ. ಮುಂಜಾನೆಗೇ ರಾಜುವಿಗೆ ಹಂಡೆಯಷ್ಟು ಹಸಿವು. ತನಗೇನಾದರೂ ಸಿಕ್ಕರೀಗ ತಿನ್ನಲಾಗುತ್ತದೋ ಇಲ್ಲವೋ ಎಂಬಷ್ಟು ಚಡಪಡಿಸುತ್ತಿರುತ್ತಾನೆ. ‘ಅನ್ನವೋ ರೊಟ್ಟಿಯೋ ಎಲ್ಲವೂ ದೇವರಂಥ ಅವ್ವಳ ಪ್ರಸಾದ ತಾನೆ?’ ಎಂದುಕೊಂಡು ಮೆಲ್ಲನೆ ಹೆಜ್ಜೆಗಳನೇರಿಸುತ್ತಾನೆ. ತಾಯಿಯ ಕಣ್ಣಾಲಿಗಳು ನೆರೆ ಇಳಿದ ಕೆರೆಯಂತಾಗಿರುತ್ತವೆ. ಮಗ ರಾಜು ತನ್ನೆಲ್ಲ ಚೈತನ್ಯ ತುಂಬಿಕೊಂಡು ಹಸಿದು ಕೂರುತ್ತಾನೆ. ಆದರೇನು ಮಾಡುವುದು… ‘ಅನ್ನ ಹಳಸಿತ್ತು-ರೊಟ್ಟಿ ಬಳಿದಿತ್ತು’.
ನಿತ್ಯವಾಣಿ,ಟೊರೊಂಟೊ (ಮೇ,29) : 1978 ರಲ್ಲಿ ಮುಚ್ಚಲಾಗಿದ್ದ ಕೆನಡಾದ ಬ್ರಿಟೀಷ್ ಕೊಲಂಬಿಯಾದ ಸ್ಥಳೀಯ ವಸತಿ ಶಾಲೆಯೊಂದರಲ್ಲಿ 215 ಮಕ್ಕಳ ಅಸ್ಥಿಪಂಜರ ಪತ್ತೆಯಾಗಿವೆ ಎಂದು ವರದಿಯೊಂದು ಹೇಳಿದೆ. ಪತ್ತೆಯಾಗಿರುವ ಕಳೇಬರಗಳು ಬ್ರಿಟೀಷ್ ಕೊಲಂಬಿಯಾದ ಕಾಮ್​ಲೂಪ್ಸ್​ ಇಂಡಿಯನ್ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಸಂಬಂಧಿಸಿವೆ ಎನ್ನಲಾಗಿದೆ. ಈ 215 ಮಕ್ಕಳಲ್ಲಿ ಕೆಲವು ಮಕ್ಕಳು ಮೂರು ವರ್ಷಕ್ಕಿಂತಲೂ ಚಿಕ್ಕವು ಎಂಬುದು ತಿಳಿದು ಬಂದಿದೆ. ರಡಾರ್ ತಂತ್ರಜ್ಞಾನದ ಸಹಾಯದಿಂದ ಕಳೇಬರಗಳನ್ನು ಪತ್ತೆಹಚ್ಚಲಾಗಿದೆ. ಈ ಘಟನೆ ಕೆನಡಾವನ್ನು ಬೆಚ್ಚಿ ಬೀಳಿಸಿದ್ದು, ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇದೊಂದು ಹೃದಯ ವಿದ್ರಾವಕ ಸಂಗತಿ ಎಂದು ಹೇಳಿದ್ದಾರೆ. 1840 ರಿಂದ 1990 ರವರೆಗೆ ಕೆನಡಾದಲ್ಲಿ ಕ್ರಿಶ್ಚಿಯನ್ ಚರ್ಚ್​ಗಳು ನಡೆಸುತ್ತಿದ್ದ ವಸತಿ ಶಾಲೆಗಳಲ್ಲಿ ದಾಖಲಾದ ಮಕ್ಕಳಿಗೆ ತಮ್ಮ ಮಾತೃಭಾಷೆ ಹಾಗೂ ಸಂಸ್ಕೃತಿಯನ್ನು ಪಾಲಿಸಲು ಶಾಲೆಗಳು ಅನುಮತಿ ನೀಡುತ್ತಿರಲಿಲ್ಲ. ಅಂತಹ ಮಕ್ಕಳಿಗೆ ಚಿತ್ರಹಿಂಸೆ ಕೊಟ್ಟು ಅವರನ್ನು ಹಸಿವಿನಿಂದ ದೈಹಿಕ ನ್ಯೂನ್ಯತೆಗಳಿಂದ ಸಾಯುವಂತೆ ಮಾಡಲಾಗುತ್ತಿತ್ತು. ಅಂತಹ ಮಕ್ಕಳನ್ನು ಶಾಲೆಗಳಲ್ಲೇ ಹೂಳಲಾಗಿತ್ತು ಎಂದು ವರದಿ ಹೇಳಿದೆ. ಈ ರೀತಿಯ ವಸತಿ ಶಾಲೆಗಳಲ್ಲಿ ಸುಮಾರು 4100 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಈ ಸಂಗತಿಯ ಬಗ್ಗೆ ಬೆಳಕು ಚೆಲ್ಲಿದ ಸಂಸ್ಥೆ ಹೇಳಿದೆ. ಕೆನಡಾದಲ್ಲಿನ ಹಿಂಸಾತ್ಮಕ ವಸತಿ ಶಾಲಾ ವ್ಯವಸ್ಥೆ ಬಗ್ಗೆ 2008 ರಲ್ಲಿ ಕೆನಡಾದ ಅಂದಿನ ಸರ್ಕಾರ ಸಾರ್ವಜನಿಕರ ಕ್ಷಮೆ ಕೇಳಿತ್ತು. Post navigation ಗ್ರಾಮ ಬೂತ್ ಮಟ್ಟದಲ್ಲಿ ನಿಗಾವಹಿಸಿ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಬೇಕಿದೆ : ಪೊಲೀಸ್ಇನ್ಸ್ಪೆಕ್ಟರ್ ಎಸ್.ಬಾಲಚಂದ್ರನಾಯ್ಕ್
ಇಂದು ಯಾವ ಉದ್ಯೋಗಕ್ಕೆ ಸೇರಿದವರು ಸಹ ಪಾನ್ ಕಾರ್ಡ್‌ ಬೇಕೆ ಬೇಕು. ಹಳ್ಳಿಯಲ್ಲಿನ ಜನರು ಸಹ ಬ್ಯಾಂಕ್ ಖಾತೆ ತೆರೆದು ಸರ್ಕಾರದ ಹಲವು ಯೋಜನೆಗಳಿಂದ ಆರ್ಥಿಕ ನೆರವು ಪಡೆಯಲು, ಸಹಾಯಧನ ಪಡೆಯಲು ಹಾಗೂ ಇನ್ನಿತರೆ ಹಲವು ಉದ್ದೇಶಗಳಿಗಾಗಿ ಪಾನ್‌ ಕಾರ್ಡ್‌ ಬೇಕೇ ಬೇಕು. ಪಟ್ಟಣಗಳಲ್ಲಿರುವ ಪೋಸ್ಟ್‌ ಆಫೀಸ್ ಕಛೇರಿಗಳಿಗೆ ಭೇಟಿ ನೀಡಿ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿ ಪಾನ್ ಕಾರ್ಡ್ ಮಾಡಿಸಲು ತಗಲುವ ವೆಚ್ಚ ಕೇವಲ 110 ರೂ ಅಷ್ಟೆ. ಆದರೆ ಇದೇ ಪಾನ್ ಕಾರ್ಡ್ ಮಾಡಿಸಲು ಹಳ್ಳಿಯಲ್ಲಿರುವ ಜನರ ಹತ್ತಿರ ಪಾನ್ ಕಾರ್ಡ್ ಮಾಡಿಸಲು ಬ್ರೋಕರ್ ಗಳು 200-250 ಪೀಕ್‌ತ್ತಾರೆ. ಕೆಲವರು ಅದರಲ್ಲೂ ಹಳ್ಳಿಯವರು ಇವೆಲ್ಲ ನಮಗೆ ತಲೆ ನೋವು ರೀ.. ಅದರ ಬದಲು ಬ್ರೋಕರ್‌ಗಳಿಗೆ ದುಡ್ಡು ಕೊಟ್ರೆ ಅವರೇ ಮಾಡಿಸಿ ಕೊಡುತ್ತಾರೆ ಎನ್ನಬಹುದು. ಆದ್ರೆ ಇಂತಹ ಕಛೇರಿ ಕೆಲಸಗಳ ಬಗ್ಗೆ ಇನ್ಯಾವಾಗ ನೀವೆಲ್ಲಾ ತಿಳಿದುಕೊಳ್ಳುವುದು? ಅನ್ನೋ ಪ್ರಶ್ನೆ ನಮ್ಮದು. ಏನೇ ಇರಲಿ. ಅದರೆ ಈಗ ಪಾನ್‌ ಕಾರ್ಡ್ ಮಾಡಿಸಲು ಪಟ್ಟಣಕ್ಕೂ ಹೋಗುವ ಅಗತ್ಯವಿಲ್ಲ. ಜಸ್ಟ್ ಮನೆಯಲ್ಲೇ ಕುಳಿತು ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಹೌದು. ಹೇಗೆ ಅನ್ನೋದನ್ನ ತಿಳಿಯಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ. ಇತರರಿಗೂ ಈ ಮಾಹಿತಿಯನ್ನು ಶೇರ್ ಮಾಡಿ, ತಿಳಿಸಿ. ಆನ್‌ಲೈನ್‌ ನಲ್ಲಿ ಪಾನ್‌ ಕಾರ್ಡ್ ಗಾಗಿ ಅಪ್ಲೇ ಮಾಡಲು ಈ 11 ಸರಳ ಹಂತಗಳನ್ನು ಫಾಲೋ ಮಾಡಿ 1. ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ ಇವುಗಳಲ್ಲಿ ಯಾವ ಗ್ಯಾಜೆಟ್ ನಲ್ಲಾದರೂ ಮೊದಲು ಎನ್‌ಎಸ್‌ಡಿಎಲ್‌ ವೆಬ್‌ಸೈಟ್‌ https://tin.nsdl.com/pan/ ಓಪನ್‌ ಮಾಡಿ. 2. ಎರಡನೇ ಹಂತದಲ್ಲಿ New PAN for Indian Citizens (Form 49A) ಎಂಬ ಲಿಂಕ್‌ ಮೇಲೆ ಕ್ಲಿಕ್ ಮಾಡಿ. 3. online Application for New PAN (Form 49A) ಎಂಬ ಲಿಂಕ್‌ ಮೇಲೆ ಕ್ಲಿಕ್‌ಮಾಡಿ. ಆದರೆ ಅರ್ಜಿ ಸಲ್ಲಿಸುವ ಮೊದಲು ಯಾವುದನ್ನು ಫಿಲ್ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಓದಿಕೊಳ್ಳಿ. 4. ಸೂಚನೆಗಳನ್ನೆಲ್ಲಾ ನಿಖರವಾಗಿ ಓದಿಕೊಳ್ಳಿ. ನಂತರದಲ್ಲಿ ಪೇಜ್‌ ಕೆಳಗೆ ನೋಡಲು ಸ್ಕ್ರಾಲ್‌ ಮಾಡಿ. ಅಲ್ಲಿ ಯಾವ ವಿಧದ ಅರ್ಜಿದಾರ ಎಂಬುದನ್ನು ಆಯ್ಕೆ ಮಾಡಲು ಆಯ್ಕೆಗಳು ಕಾಣುತ್ತದೆ. 5. ಅರ್ಜಿದಾರರ ವಿಧದಲ್ಲಿ ನೀವು ಯಾವ ರೀತಿಯ ಅರ್ಜಿದಾರ ಎಂಬುದನ್ನ ಆಯ್ಕೆ ಮಾಡಿ. ಸಾಮಾನ್ಯವಾಗಿ ವಯಕ್ತಿಕವಾಗಿ ನೀವು ಪಾನ್‌ ಕಾರ್ಡ್‌ ಹೊಂದಲು ಬಯಸುವವರಾಗಿದ್ದರೆ Induvidual ಎಂಬುದನ್ನು ಆಯ್ಕೆ ಮಾಡಿ. 6. ಅರ್ಜಿಯ ಕೆಟಗರಿ ಆಯ್ಕೆ ಮಾಡಿದ ನಂತರ ನಿಮಗೆ ಅರ್ಜಿಯ ಆನ್‌ಲೈನ್‌ ಫಾರ್ಮ್‌ ಓಪನ್‌ ಆಗುತ್ತದೆ. ಅದನ್ನು ನಿಖರವಾಗಿ ಎಚ್ಚರದಿಂದ ಓದಿಕೊಂಡು ಭರ್ತಿ ಮಾಡಿ. ನಂತರ ನೀವು ಶುಲ್ಕವನ್ನು ಕ್ರೆಡಿಟ್/ಡೆಬಿಟ್ ಕಾರ್ಡ್‌ ಮೂಲಕ ಅಥವಾ ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ಅಲ್ಲದೇ ಅಲ್ಲಿ AO ಕೋಡ್‌ ಸರ್ಚ್‌ ಮಾಡಿ ನೀಡಬೇಕಾಗುತ್ತದೆ. 7. ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನೀವು ಒಂದು ಸ್ವೀಕೃತಿ ಫಾರ್ಮ್‌ ಅನ್ನು 16 ಸಂಖ್ಯೆಯ ಸ್ವೀಕೃತಿ ನಂಬರ್‌ನೊಂದಿಗೆ ಪಡೆಯುತ್ತೀರಿ. ಇದನ್ನು ಪ್ರಿಂಟ್‌ ತೆಗೆದುಕೊಳ್ಳಿ. 8. ಇತ್ತೀಚಿನ ಎರಡು ಭಾವಚಿತ್ರ ಫೋಟೋಗಳನ್ನು ಸ್ವೀಕೃತಿ ಫಾರ್ಮ್‌ನಲ್ಲಿ ಫೋಟೋಗಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಅಂಟಿಸಿ ಮತ್ತು ಸಹಿ ಬಾಕ್ಸ್‌ನಲ್ಲಿ ಸಹಿ ಮಾಡಿ. 9. ಒಂದು ವೇಳೆ ಆನ್‌ಲೈನ್‌ನಲ್ಲಿ ನೀವು ಶುಲ್ಕ 106 ರೂಪಾಯಿಗಳನ್ನು ಪಾವತಿ ಮಾಡದಿದ್ದಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಅನ್ನು ಸೆಲ್ಪ್‌ ಅಟೆಸ್ಟ್‌ ಮಾಡಿದ ನಿಮ್ಮ ಡಾಕುಮೆಂಟ್‌ಗಳ ಜೊತೆ ಪೋಸ್ಟ್‌ ಕವರ್‌ ಒಳಗೆ ಹಾಕಿರಿ. 10. ಪೋಸ್ಟ್‌ ಮಾಡುವ ಕವರ್‌ ಮೇಲೆ “Application for PAN” ಎಂದು ಬರೆದು ನಿಮ್ಮ ಸ್ವೀಕೃತ ನಂಬರ್ ಅನ್ನು ಸಹ ಬರೆಯಿರಿ. 11. ಪೋಸ್ಟ್‌ ಕವರ್‌ ಅನ್ನು ಎನ್‌ಎಸ್‌ಡಿಎಲ್‌ನ ವಿಳಾಸ: Income Tax PAN Services Unit, NSDL e-Governance Infrastructure Limited, 5th floor, Mantri Sterling, Plot No. 341, Survey No. 997/8, Model Colony, Near Deep Bungalow Chowk, Pune – 411016 ಬರೆದು ಪೋಸ್ಟ್ ಮಾಡಿ 12. ಅರ್ಜಿಯನ್ನು ಪೋಸ್ಟ್‌ ಮಾಡಿದ 15 ದಿನದ ಒಳಗೆ ನಿಮಗೆ ನಿಮ್ಮ ಪೋಸ್ಟ್‌ ಎನ್‌ಎಸ್‌ಡಿಎಲ್‌ಗೆ ತಲುಪಿದ್ದರೆ, ನೀವು ನೀಡಿರುವ ಇಮೇಲ್‌ ವಿಳಾಸಕ್ಕೆ ಇಮೇಲ್‌ ಸಂದೇಶ ಪಡೆಯುತ್ತೀರಿ. ನಂತರದಲ್ಲಿ ಪಾನ್‌ ಕಾರ್ಡ್‌ ನೀವು ನೀಡಿರುವ ಪೋಸ್ಟ್‌ ವಿಳಾಸಕ್ಕೆ ಬರುತ್ತದೆ. In this article Kannadaadvisor giving information about online procedure for apply to PAN card. People can apply via online for PAN(Personal Account Number) card just following these simple steps.
ಮಡಿಕೇರಿ, ಆ. 7: ಸೂತಕದ ಛಾಯೆಯಲ್ಲಿ ರಾಜಕೀಯದ ಲಾಭ ಪಡೆಯುವದು ಬಿಜೆಪಿಯ ಚಾಳಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಜೀವಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಯ ಶವ ಯಾತ್ರೆ ಮಾಡಲಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್ ತಿರುಗೇಟು ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ಶವಯಾತ್ರೆ ಎಂದು ಟೀಕಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಶವ, ಸಾವು, ಸೂತಕ ಮತ್ತು ಹತ್ಯೆ ಇವುಗಳು ಬಿಜೆಪಿಯ ಕೆಳಮಟ್ಟದ ರಾಜಕಾರಣದ ಮನೋಭಾವವಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರಕಾರ ದಲಿತರ, ಅಲ್ಪಸಂಖ್ಯಾತರ ಹಾಗೂ ರೈತರ ವಿರೋಧಿಯಾಗಿದೆ ಎಂದು ಆರೋಪಿಸಿರುವ ಅವರು ಕೇಂದ್ರ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಮಣಿಸುವದಲ್ಲದೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸನ್ನು ಅಧಿಕಾರಕ್ಕೆ ತರುವ ಮೂಲಕ ಬಿಜೆಪಿಯ ಶವ ಯಾತ್ರೆ ಮಾಡಲು ಪಕ್ಷ ಸಜ್ಜಾಗಿದೆ. ಯಾರಾದರು ಸಾಯುವದನ್ನೇ ಕಾಯುವ ಬಿಜೆಪಿ ಸಾವಿನಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುತ್ತದೆ ಎಂದು ಆರೋಪಿಸಿ ದರು. ಮಾಹಿತಿ ತಂತ್ರಜ್ಞಾನ, ಉದ್ಯೋಗ ಸೃಷ್ಟಿಯ ಮೂಲಕ ಯುವ ಸಮೂಹವನ್ನು ಮೇಲ್ಪಂಕ್ತಿಗೆ ತರುವಲ್ಲಿ ಕೇಂದ್ರದ ಬಿಜೆಪಿ ಸÀರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸುಮಾರು 122 ಮಂದಿ ಪೊಲೀಸ್ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಯಾವದಾದರು ಸಚಿವರು ರಾಜೀನಾಮೆ ನೀಡಿದ್ದರೆ ಎನ್ನುವದನ್ನು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಂಜುನಾಥ್ ಕುಮಾರ್ ತಿಳಿಸಿದರು. ಕೇಂದ್ರ ಸರ್ಕಾರ ಕೇವಲ ಪ್ರಚಾರ ಮತ್ತು ಜಾಹೀರಾತಿನ ಮೂಲಕ ಕಾಲ ಕಳೆಯುತ್ತಿದೆ. ಚುನಾವಣೆಗೂ ಮುನ್ನ ಸ್ವದೇಶಿ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಅಧಿಕಾರಕ್ಕೆ ಬಂದ ಬಳಿಕ ವಿದೇಶದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ದೇಶದ ಜನರ ಬಗ್ಗೆ ಕಾಳಜಿ ಇಲ್ಲದ ಪ್ರಧಾನಿ, ಅನಿವಾಸಿ ಭಾರತೀಯರು ಮತ್ತು ವಿದೇಶಿಯರಿಗಾಗಿ ಸಮಯ ಮೀಸಲಿಡುತ್ತಿದ್ದಾರೆ. ಸ್ವದೇಶಿ ವ್ಯಾಮೋಹ ಈಗ ಎಲ್ಲಿ ಮಾಯವಾಯಿತು ಎಂದು ಪ್ರಶ್ನಿಸಿದ ಮಂಜುನಾಥ್ ಕುಮಾರ್, ಬಿಜೆಪಿ ಅಧಿಕಾರಕ್ಕೆ ಬರುವದಕ್ಕೆ ಮೊದಲು ಮತ್ತು ನಂತರ ಒಂದೊಂದು ಮನೋಭಾವವನ್ನು ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯವನ್ನು ನೀಡಿ ಹಸಿವಿನಿಂದ ಬಡವರು ನರಳುವದನ್ನು ತಪ್ಪಿಸಿದೆ. ಅಪೌಷ್ಠಿಕತೆ ಮತ್ತು ಬುದ್ಧಿ ಮಾಂಧ್ಯತೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳ ನೆರವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿದೆ. ಈ ರೀತಿಯ ಜನಪರವಾದ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸದ ಕೇಂದ್ರ ಸರ್ಕಾರ ಪಾಳೇಗಾರಿಕೆಯ ಸಂಸ್ಕøತಿಯನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು. ಹಿಂದೆ ಯುಪಿಎ ಸರ್ಕಾರವಿದ್ದಾಗ ದೇಶದಲ್ಲಿ ಸುಮಾರು 22 ಸಾವಿರ ದೌರ್ಜನ್ಯ ಪ್ರಕರಣಗಳು ನಡೆದಿವೆ, ಆದರೆ ಇಂದು ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ 37 ಸಾವಿರ ಪ್ರಕರಣ ದಾಖಲಾಗಿದ್ದು, ದೌರ್ಜನ್ಯದ ತೀವ್ರತೆ ಹೆಚ್ಚಾಗಿದೆಯೆಂದು ಮಂಜುನಾಥ್ ಕುಮಾರ್ ಆರೋಪಿಸಿದರು. 2009 ರಲ್ಲಿ ಕೇವಲ ಶೇ.18 ರಷ್ಟು ಮತಗಳಿಸಿದ್ದ ಬಿಜೆಪಿ, ನಂತರದ ಲೋಕಸಭಾ ಚುನಾವಣೆಯಲ್ಲಿ ಮೋಡಿ ಮಾಡಿ, ಶೇ.33 ರಷ್ಟು ಮತಗಳಿಸಲು ಯಶಸ್ವಿಯಾಗಿತ್ತು. ಆದರೆ, ದಲಿತರು ಮತ್ತು ಅಲ್ಪಸಂಖ್ಯಾ ತರಿಗೆ ರಕ್ಷಣೆ ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಶೇ.37 ರಷ್ಟು ಮಂದಿ ಇದ್ದು, ಇವರೆಲ್ಲರು ಒಗ್ಗಟ್ಟಾಗಿ ಕಾಂಗ್ರೆಸ್ ಪರ ನಿಂತರೆ ಬಿಜೆಪಿ ಹೀನಾಯ ಸ್ಥಿತಿ ಅನುಭವಿಸಲಿದೆ ಯೆಂದು ಮಂಜುನಾಥ್ ಕುಮಾರ್ ಅಭಿಪ್ರಾಯಪಟ್ಟರು. ಯುಪಿಎ ಸರ್ಕಾರವಿದ್ದಾಗ ಪೆಟ್ರೋಲ್ ದರ ರೂ.100 ರಷ್ಟು ಏರಿಸುವ ಅನಿವಾರ್ಯತೆ ಇದ್ದಾಗಲು ರೂ.30 ರಷ್ಟು ಸಹಾಯಧನವನ್ನು ಒದಗಿಸಿತ್ತು. ಆದರೆ, ಇಂದು ವಿದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಲೀಟರ್‍ಗೆ ಕೇವಲ ರೂ.36 ಇದ್ದರೂ 66 ರೂ.ಗಳಿಗೆ ಮಾರಾಟ ಮಾಡುತ್ತಿದೆ. ತೈಲೋತ್ಪನ್ನ ಕ್ಷೇತ್ರಗಳಲ್ಲಿ ಸಹಾಯಧನವನ್ನು ಕಡಿತ ಮಾಡಿ ಕೇಂದ್ರ ಸರ್ಕಾರ ಜನ ವಿರೋಧಿ ನಿಲುವನ್ನು ಅನುಸರಿಸುತ್ತಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿ ದರು. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಬಿಜೆಪಿ ಹೇಳಿಕೆ ಸಂವಿಧಾನದ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಟೀಕಿಸಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ರಮಾನಾಥ್, ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಹಾಗೂ ಡಿಸಿಸಿ ಸದಸ್ಯ ಎ.ಕೆ. ಹಕೀಂ ಉಪಸ್ಥಿತರಿದ್ದರು.