title
stringlengths
1
95
url
stringlengths
31
125
text
stringlengths
0
216k
ಅಮಿತ್ ತಿವಾರಿ (ಏರ್ ಮಾರ್ಷಲ್)
https://kn.wikipedia.org/wiki/ಅಮಿತ್_ತಿವಾರಿ_(ಏರ್_ಮಾರ್ಷಲ್)
ಏರ್ ಮಾರ್ಷಲ್ ಅಮಿತ್ ತಿವಾರಿ ಅವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಅವರು ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಒಸಿ-ಇನ್-ಸಿ) ಸೆಂಟ್ರಲ್ ಏರ್ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದರು. ಅವರು ೨೦೨೧ರ ಫೆಬ್ರವರಿ ೧ ರಂದು ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರ ನಂತರ ಅಧಿಕಾರ ವಹಿಸಿಕೊಂಡು ೨೦೨೧ರ ಮೇ ೩೧ರವರೆಗೆ ಸೇವೆ ಸಲ್ಲಿಸಿದರು. ಅವರ ನಂತರ ಏರ್ ಮಾರ್ಷಲ್ ರಿಚರ್ಡ್ ಜಾನ್ ಡಕ್ವರ್ತ್ ಅಧಿಕಾರ ವಹಿಸಿಕೊಂಡರು. ಈ ಹಿಂದೆ, ಅವರು ದಕ್ಷಿಣ ವಾಯು ಕಮಾಂಡ್ ಎಒಸಿ-ಇನ್-ಸಿ ಆಗಿ ಸೇವೆ ಸಲ್ಲಿಸಿದ್ದರು. ಇವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಾಯು ಸೇನಾ ಪದಕ ಪಡೆದಿದ್ದಾರೆ."Air Marshal Amit Tiwari takes over as SAC chief". The Hindu. 1 November 2019. ಆರಂಭಿಕ ಜೀವನ ಮತ್ತು ಶಿಕ್ಷಣ ಅಮಿತ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿ. ಅವರು ರಕ್ಷಣಾ ನಿರ್ವಹಣೆ ಮತ್ತು ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಾದ, ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜ್‌ನಿಂದ ಪದವಿ ಪಡೆದಿದ್ದಾರೆ. ವೃತ್ತಿಜೀವನ ಅಮಿತ್ ಅವರು ಭಾರತೀಯ ವಾಯುಪಡೆಗೆ ಜೂನ್ ೧೯೮೨ ರಲ್ಲಿ ಫೈಟರ್ ಪೈಲಟ್ ಆಗಿ ನಿಯೋಜಿಸಲ್ಪಟ್ಟಿದ್ದರು. ಅವರು ಅರ್ಹ ವಿಮಾನ ತರಬೇತುದಾರರಾಗಿದ್ದು, ವಿವಿಧ ಯುದ್ಧ ವಿಮಾನಗಳಲ್ಲಿ ೩೫೦೦ ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದಾರೆ."Air Marshal Amit Tiwari new SAC Air Officer Commanding-in-Chief". 1 November 2019. ತಮ್ಮ ವೃತ್ತಿಜೀವನದಲ್ಲಿ, ಅವರು ಸೂರ್ಯ ಕಿರಣ್ ಏರೋಬ್ಯಾಟಿಕ್ ಸ್ಕ್ವಾಡ್ರನ್ ತಂಡದ ನಾಯಕ, ಫಾರ್ವರ್ಡ್ ಬೇಸ್‌ ನ ಸ್ಟೇಷನ್ ಕಮಾಂಡರ್, ಅಫ್ಘಾನಿಸ್ತಾನ ಭಾರತೀಯ ರಾಯಭಾರ ಕಚೇರಿಯಲ್ಲಿ ಏರ್ ಅಟ್ಯಾಚೆ, ಜೊತೆಗೆ ವಾಯು ರಕ್ಷಣಾ ಕಮಾಂಡರ್ ಮತ್ತು ಕಾರ್ಯಾಚರಣೆಯ ಕಮಾಂಡ್ನಲ್ಲಿ ಹಿರಿಯ ಅಧಿಕಾರಿ-ಉಸ್ತುವಾರಿ ಸೇರಿದಂತೆ ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅವರು ಸಹಾಯಕ ವಾಯು ಸಿಬ್ಬಂದಿ ಮುಖ್ಯಸ್ಥ (ವಾಯು ಕೇಂದ್ರ ಕಛೇರಿಯಲ್ಲಿ ತರಬೇತಿ ಮತ್ತು ಕಮಾಂಡೆಂಟ್ ವಾಯುಪಡೆಯ ಅಕಾಡೆಮಿ) ಹುದ್ದೆಯನ್ನು ಸೇರಿದಂತೆ ಹಲಾವರು ನೇಮಕಾತಿಗಳ ಭಾಗವಾಗಿದ್ದರು. ದಕ್ಷಿಣ ವಾಯು ಕಮಾಂಡ್ ನ ಎಒಸಿ-ಇನ್-ಸಿ ದಕ್ಷಿಣ ಏರ್‌ ಕಮಾಂಡ್ ಆಗಿ ನೇಮಕಗೊಳ್ಳುವ ಮೊದಲು, ಅಮಿತ್ ನವದೆಹಲಿಯ ವಾಯು ಸೇನಾ ಭವನದ ವಾಯು ಪ್ರಧಾನ ಕಚೇರಿಯಲ್ಲಿ ಸಿಬ್ಬಂದಿ ಉಸ್ತುವಾರಿ ವಾಯು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು."Air Marshal Amit Tiwari takes over as SAC chief". The Hindu. 1 November 2019. ಗೌರವಗಳು ಮತ್ತು ಪದಕಗಳು ಅಮಿತ್ ಅವರ ವೃತ್ತಿಜೀವನದ ಅವಧಿಯಲ್ಲಿ, ಅವರ ಸೇವೆಗಾಗಿ ಅವರಿಗೆ ವಾಯುಸೇನಾ ಪದಕ (ವಿಎಂ) ಮತ್ತು ಅತಿ ವಿಶಿಷ್ಟ ಸೇವಾ ಪದಕ (ಎವಿಎಸ್ಎಂ) ಮತ್ತು ೨೦೨೧ ರಲ್ಲಿ ಪರಮ ವಿಶಿಷ್ಟ ಸೇವಾ ಪದಕವನ್ನು ನೀಡಲಾಯಿತು. ಪರಮ ವಿಶಿಷ್ಟ ಸೇವಾ ಪದಕಅತಿ ವಿಶಿಷ್ಟ ಸೇವಾ ಪದಕವಾಯು ಸೇನಾ ಪದಕ ವೈಯಕ್ತಿಕ ಜೀವನ ಅಮಿತ್ ಅವರು ಏರ್ ಫೋರ್ಸ್ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (ಪ್ರಾದೇಶಿಕ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪೂನಂ ತಿವಾರಿಯವರನ್ನು ವಿವಾಹವಾಗಿದ್ದಾರೆ."Air Marshal Amit Tiwari new SAC Air Officer Commanding-in-Chief". 1 November 2019. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಹರ್ಷನ್ ಆರ್. ನಾಯರ್
https://kn.wikipedia.org/wiki/ಹರ್ಷನ್_ಆರ್._ನಾಯರ್
ಅಶ್ವನಿ ಕುಮಾರ್ ಚನ್ನನ್
https://kn.wikipedia.org/wiki/ಅಶ್ವನಿ_ಕುಮಾರ್_ಚನ್ನನ್
ಮೇಜರ್ ಜನರಲ್ ಎ.ಕೆ ಚನ್ನನ್ ಭಾರತೀಯ ಸೇನೆಯಲ್ಲಿ ನಿವೃತ್ತ ಫಿರಂಗಿ ಅಧಿಕಾರಿ. ಅವರು ೩೮ ವರ್ಷಗಳ ಕಾಲ ಅದರಲ್ಲಿ ಸೇವೆ ಸಲ್ಲಿಸಿದರು. ಅವರು ಆರ್ಮಿ ಮುಖ್ಯ ಕಚೇರಿಯ ಗ್ರಹಿಕಾ ಯೋಜನಾ ನಿರ್ದೇಶನಾಲಯದಲ್ಲಿ ಸೇವೆ ಸಲ್ಲಿಸಿದರು ಮತ್ತು ಮತ್ತು ಕಾರ್ಯಾಚರಣೆಯ ಪ್ರದೇಶಗಳಲ್ಲಿ ವಿವಿಧ ಕಮಾಂಡ್ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ನಡೆಸಿದರು. ಅಲ್ಲದೆ ಅವರು ಆರ್ಮಿ ಡಿಸೈನ್ ಬ್ಯೂರೋ ಸಂಸ್ಥೆಯ ಮೊದಲ ಎಡಿಜಿ ಆಗಿದ್ದರು. ಇವರು ಪರಮ ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪಡೆದಿದ್ದಾರೆ. ವೃತ್ತಿ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಖಡಕ್ವಾಸಲಾ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜ್, ದೆಹಲಿಯ ಹಳೆಯ ವಿದ್ಯಾರ್ಥಿ. ಅವರು ವೆಲ್ಲಿಂಗ್ಟನ್‌ನ ಡಿಎಸ್‌ಎಸ್‌ಸಿಯಿಂದ ಪದವಿ ಪಡೆದಿದ್ದಾರೆ. ಮತ್ತು ಎ‌ಡಬ್ಲ್ಯೂಸಿ, Mhow ನಿಂದ ಎಚ್‌ಸಿಯನ್ನು ಪೂರ್ಣಗೊಳಿಸಿದರು. ಅವರು ಬರಹಗಾರರೂ ಹೌದು. ಅವರು ಕೌಂಟರ್ ಬಂಡಾಯ ಪ್ರದೇಶದಲ್ಲಿ ಜಿಎಸ್‌ಒ ೧ ಆಗಿದ್ದರು. ಸೇನಾ ಪ್ರಧಾನ ಕಛೇರಿಯಲ್ಲಿ ಪಿಪಿ ನಿರ್ದೇಶನಾಲಯದಲ್ಲಿ ಇದ್ದರು. ಅವರು ಡಿವಿ, ಡಿಡಿಜಿ ಪಿ & ಎಂ ಸೆಲ್‌ನ ಕರ್ನಲ್ ಅಡ್ಮ್ ಮತ್ತು ಕರ್ನಲ್ ಎಂಎಸ್ ಆಗಿ ಸೇವೆ ಸಲ್ಲಿಸಿದರು ಮತ್ತು ಪರ್ಸ್ಪೆಕ್ಟಿವ್ ಪ್ಲಾನಿಂಗ್ ಮತ್ತು ಎಡಿಬಿಯ ಎಡಿಜಿ ಆಗಿದ್ದರು. ಅವರು ೩೧ ಆಗಸ್ಟ್ ೨೦೨೦ ರಂದು ನಿವೃತ್ತರಾದರು. ಪ್ರಶಸ್ತಿಗಳು ಅವರ ೩೮ ವರ್ಷಗಳ ಮಿಲಿಟರಿ ವೃತ್ತಿಜೀವನದಲ್ಲಿ, ಅವರು ೨೦೨೦ ರಲ್ಲಿ ಪರಮ ವಿಶಿಷ್ಟ ಸೇವಾ ಪದಕ ಮತ್ತು ೨೦೧೫ ರಲ್ಲಿ ಸೇನಾ ಪದಕವನ್ನು ಪಡೆದರು. 105x105px 105x105px105x105px105x105px105x105px105x105px105x105px105x105px105x105px105x105px105x105px105x105px105x105px105x105px ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ರೋಹಿತ್ ಶುಕ್ಲಾ
https://kn.wikipedia.org/wiki/ರೋಹಿತ್_ಶುಕ್ಲಾ
ಮೇಜರ್ ರೋಹಿತ್ ಶುಕ್ಲಾ ಅವರು ಭಾರತೀಯ ಸೈನ್ಯದ ೪೪ ರಾಷ್ಟ್ರೀಯ ರೈಫಲ್ಸ್‌ನ ಅಧಿಕಾರಿಯಾಗಿದ್ದಾರೆ. ಮಾರ್ಚ್ ೨೭, ೨೦೧೮ ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಒಂದನೇ ರಕ್ಷಣಾ ಹೂಡಿಕೆ ಸಮಾರಂಭದಲ್ಲಿ, ಅವರು ಭಾರತದ ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ್ ಅವರಿಂದ ಮೂರನೇ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ಪಡೆದಿದ್ದಾರೆ. ಮೇಜರ್ ಶುಕ್ಲಾ ಅವರಿಗೆ ೨೬ ಜನವರಿ ೨೦೧೮ ರಂದು ಸೇನಾ ಪದಕ ನೀಡಲಾಯಿತು. ಆರಂಭಿಕ ಜೀವನ ಮತ್ತು ಶಿಕ್ಷಣ ಶುಕ್ಲಾ ಅವರು ಸೇಂಟ್ ಜೋಸೆಫ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು  ನ್ಯಾಷನಲ್ ಡಿಫೆನ್ಸ್ ಆಕಾಡೆಮಿ (ಎನ್.ಡಿ.ಎ) ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ಭಾರತೀಯ ಸೇನೆಗೆ ಸೇರಿದರು. ಮಿಲಿಟರಿ ವೃತ್ತಿ ಜೀವನ ಮೇಜರ್ ರೋಹಿತ್ ಶುಕ್ಲಾ ಅವರು ಭಯೋತ್ಪಾದನೆ ಮತ್ತು ಉಗ್ರರ ವಿರುದ್ಧ ಭಾರತೀಯ ಸೇನೆಯು ನಡೆಸಿದ ೫೨ ಕ್ಕೂ ಹೆಚ್ಚು ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಭಾರತೀಯ ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ೩೦ ಏಪ್ರಿಲ್ ೨೦೧೮ ರಂದು, ಮೇಜರ್ ಶುಕ್ಲಾ ಅವರು ಹಿಜ್ಬುಲ್ ಮುಜಾಹಿದ್ದೀನ್‌ನ ಮುಖ್ಯ ಉಗ್ರನಾದ ಸಮೀರ್ ಟೈಗರ್ ಮೇಲೆ ದಾಳಿ ಮಾಡಿ ಸದೆ ಬಡೆದರು. ಆ ಎನ್‌ಕೌಂಟರ್‌ಗೆ ಒಂದು ದಿನ ಮೊದಲು, ಉಗ್ರ ಸಮೀರ ಟೈಗರ್ ಭಾರತೀಯ ಸೇನೆಗೆ ಅದರಲ್ಲೂ ವಿಶೇಷವಾಗಿ ಮೇಜರ್ ಶುಕ್ಲಾ ಅವರಿಗೆ ವಿಡಿಯೋ ಮೂಲಕ ಬೆದರಿಕೆ ಹಾಕಿದ್ದ. ಆ ವಿಡಿಯೋ ಬಹಳ ವೈರಲ್ ಆಗಿತ್ತು. ಆ ಕಾರ್ಯಾಚರಣೆಯಲ್ಲಿ ಮೇಜರ್ ಶುಕ್ಲಾ ಅವರು ಎದೆಯ ಮೇಲೆ ಉಗ್ರರ ಗುಂಡಿನ ಗಾಯದಿಂದ ಗಂಭೀರವಾಗಿ ಗಾಯಗೊಂಡರು. ಅವರು ಚಿಕಿತ್ಸೆ ಪಡೆದು ಕೆಲ ಸಮಯದ ನಂತರ ಗುಣಮುಖರಾಗಿ ಸೇವೆಗೆ ಹಾಜರಾದರು. ಆದರೆ, ಉಗ್ರ ಸಮೀರ್ ಟೈಗರ್‌ನನ್ನು ಕೊಂದಿದ್ದಕ್ಕಾಗಿ, ಪ್ರತೀಕಾರದ ರೂಪದಲ್ಲಿ ಭಯೋತ್ಪಾದಕರು ಆ ಕಾರ್ಯಾಚರಣೆಯಲ್ಲಿ ಮೇಜರ್ ಶುಕ್ಲಾ ಜೊತೆಗಿದ್ದು, ಸೇವೆ ಸಲ್ಲಿಸಿದ್ದ ಔರಂಗಜೇಬ್ ಎಂಬ ರೈಫಲ್‌ಮ್ಯಾನ್‌ನನ್ನು ಅಪಹರಿಸಿದರು.ನಂತರ ಆ ಜೌರಂಗಜೇಬ್‌ನನ್ನು ಚಿತ್ರಹಿಂಸೆ ನೀಡಿ ಮತ್ತು ಕೊಂದರು. ಆ ಹಿಂಸೆ ನೀಡಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ ವರ್ಗ:ಶೌರ್ಯ ಚಕ್ರ ಪುರಸ್ಕೃತರು
ಜ್ಯೋತಿ ಪ್ರಕಾಶ್ ನಿರಾಲಾ
https://kn.wikipedia.org/wiki/ಜ್ಯೋತಿ_ಪ್ರಕಾಶ್_ನಿರಾಲಾ
ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ(೧೫ ನವೆಂಬರ್ ೧೯೮೬ -೧೮ ನವೆಂಬರ್ ೨೦೧೭) ಅವರು ಗರುಡ್ ಕಮಾಂಡೋ ಪಡೆಯ ಸದಸ್ಯರಾಗಿದ್ದರು. ಅವರಿಗೆ ಜನವರಿ ೨೦೧೮ ರಲ್ಲಿ, ಮರಣೋತ್ತರವಾಗಿ ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಗೌರವವಾದ ಅಶೋಕ ಚಕ್ರವನ್ನು ನೀಡಲಾಯಿತು. ನೆಲದಾಳಿ ಯುದ್ಧಕ್ಕಾಗಿ ಪ್ರಶಸ್ತಿಯನ್ನು ಪಡೆದ ಸುಹಾಸ್ ಬಿಸ್ವಾಸ್ ಮತ್ತು ರಾಕೇಶ್ ಶರ್ಮಾ ನಂತರ ನಿರಾಲಾರವರು ಮೂರನೆಯವರಾಗಿ ಈ ಗೌರವವನ್ನು ಪಡೆದ ಏರ್‌ಮ್ಯಾನ್ ಆಗಿದ್ದಾರೆ. ಆರಂಭಿಕ ಮತ್ತು ವೈಯಕ್ತಿಕ ಜೀವನ ನಿರಾಲಾ ಅವರು ಬಿಹಾರದ ರೋಹ್ತಾಸ್ ಜಿಲ್ಲೆಯ ಬದ್ಲಾಡಿ ಗ್ರಾಮದ ನಿವಾಸಿಯಾಗಿದ್ದರು. ನಿರಾಲಾರವರು ನವೆಂಬರ್ ೧೫, ೧೯೮೬ ರಂದು ಯಾದವ್ ಕುಟುಂಬದಲ್ಲಿ ತೇಜ್ ನಾರಾಯಣ ಸಿಂಗ್ ಯಾದವ್ ಮತ್ತು ಮಾಲ್ತಿ ದೇವಿಗೆ ಜನಿಸಿದರು. ಜ್ಯೋತಿ ಪ್ರಕಾಶ್ ನಿರಾಲಾ ಅವರು ಸುಷ್ಮಾನಂದ ಯಾದವ್ ಅವರನ್ನು ೨೦೧೦ ರಲ್ಲಿ ವಿವಾಹವಾದರು ಮತ್ತು ಅವರಿಗೆ ಜಿಜ್ಞಾಸಾ ಕುಮಾರಿ ಎಂಬ ಮಗಳಿದ್ದಾಳೆ. ಸೇನಾ ಸೇವೆ ನಿರಾಲಾ ಅವರು ೨೦೦೫ ರಲ್ಲಿ ಭಾರತೀಯ ವಾಯುಪಡೆಯ ಗರುಡ್ ಕಮಾಂಡೋ ದಳಕ್ಕೆ ಸೇರಿದರು. ಅವರ ಘಟಕವನ್ನು ೧೩ ರಾಷ್ಟ್ರೀಯ ರೈಫಲ್ಸ್‌ಗೆ ನಿಯೋಜಿಸಲಾಯಿತು ಮತ್ತು ಆಪರೇಷನ್ ರಕ್ಷಕ್ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆ ಮಾಡಲಾಯಿತು. "Press Information Bureau". ಅಶೋಕ ಚಕ್ರ left|thumb| ಜ್ಯೋತಿ ಪ್ರಕಾಶ್ ನಿರಾಲಾ ಅವರ ಪತ್ನಿ ವಿಧವೆಯಾಗಿ ಮತ್ತು ತಾಯಿಯವರು ೨೬ ಜನವರಿ ೨೦೧೮ ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಅಶೋಕ ಚಕ್ರವನ್ನು ಸ್ವೀಕರಿಸಿರುತ್ತಾರೆ. ತಾಂತ್ರಿಕ ಗುಪ್ತಚರರು ನೀಡಿದ ಸುಳಿವಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಚಂದರ್ಗರ್ ಗ್ರಾಮದಲ್ಲಿ ಗರುಡ್ ತುಕಡಿ ಮತ್ತು ೧೩ ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ಆಕ್ರಮಣವನ್ನು ಪ್ರಾರಂಭಿಸಿದವು. ಉಗ್ರರು ಅಡಗಿರುವ ಶಂಕಿತ ಮನೆಯನ್ನು ನಿರಾಲಾರವರ ತುಕಡಿಯು ರಹಸ್ಯವಾಗಿ ಸಮೀಪಿಸಿತು ಮತ್ತು ಬಹು ಹತ್ತಿರದಿಂದ ಹೊಂಚು ಹಾಕಿ ದಾಳಿ ನಡೆಸಿತು. ಹಗುರವಾದ ಮೆಷಿನ್ ಗನ್‌ನೊಂದಿಗೆ ಶಸ್ತ್ರಸಜ್ಜಿತವಾದ ನಿರಾಲಾ ಅಡಗುತಾಣದ ಸಮೀಪದಲ್ಲಿ ಬಚ್ಚಿಟ್ಟುಕೊಂಡರು ಹಾಗೂ ಉಗ್ರರು ತಪ್ಪಿಸಿಕೊಳ್ಳಬಹುದಾದ ಎಲ್ಲಾ ಮಾರ್ಗಗಳನ್ನು ಕಡಿತಗೊಳಿಸಿದರು. "Press Information Bureau". "IAF commando Jyoti Prakash Nirala awarded Ashok Chakra for role in Kashmir encounter that killed six terrorists. - Firstpost". "Martyred Corporal Jyoti Prakash Nirala joins elite IAF club tomorrow - Times of India". ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಆರು ಉಗ್ರರು ಗುಂಡು ಹಾರಿಸಿ ಗ್ರೆನೇಡ್‌ಗಳನ್ನು ಎಸೆದರು. ನಿರಾಲಾರವರು ಪ್ರತಿದಾಳಿ ನಡೆಸಿದರು ಮತ್ತು ಇಬ್ಬರು 'ಎ' ವರ್ಗದ ಉಗ್ರರನ್ನು ಹೊಡೆದು ಉರುಳಿಸಿದರು ಹಾಗೂ ಇನ್ನಿಬ್ಬರು ಗಾಯಗೊಂಡರು. ಗುಂಡಿನ ವಿನಿಮಯದಲ್ಲಿ ನಿರಾಲಾರವರು ಕಿರುಶಸ್ತ್ರಾಸ್ತ್ರಗಳ ಗುಂಡಿನ ದಾಳಿಗೆ ಒಳಗಾಗಿದ್ದರು ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ ಸಹ ಗುಂಡು ಹಾರಿಸುತ್ತಲೇ ಇದ್ದರು. ಎಲ್ಲಾ ಆರು ಉಗ್ರರು ಹತರಾಗಿದ್ದರು. ಈ ದಾಳಿಯಲ್ಲಾದ ಮಾರಣಾಂತಿಕ ಗಾಯಗಳಿಂದಾಗಿ ನಿರಾಲಾ ಮರಣ ಹೊಂದಿದರು. "Press Information Bureau". "IAF commando Jyoti Prakash Nirala awarded Ashok Chakra for role in Kashmir encounter that killed six terrorists. - Firstpost". "Martyred Corporal Jyoti Prakash Nirala joins elite IAF club tomorrow - Times of India". ೨೦೧೮ ರ ಜನವರಿ ೨೬ ರಂದು ಅವರಿಗೆ ಅಶೋಕ ಚಕ್ರವನ್ನು ನೀಡಲಾಯಿತು. ನಿರಾಲಾರವರು ಉಗ್ರಗಾಮಿಗಳ ವಿರುದ್ಧ ಹೋರಾಡುವಲ್ಲಿ ಶೌರ್ಯವನ್ನು ಮತ್ತು ತಮ್ಮ ದೇಶಸೇವೆಯನ್ನು ಪ್ರದರ್ಶಿಸಿದರು. "Press Information Bureau". ಲಕ್ಷರ್-ಎ-ತೈಬಾದ ಸ್ಥಳೀಯ ನಾಯಕತ್ವವನ್ನು ತೊಡೆದುಹಾಕಿದ ಕೀರ್ತಿ ಜ್ಯೋತಿ‌ ಪ್ರಕಾಶ್ ನಿರಾಲಾ ಅವರಿಗೆ ಸಲ್ಲುತ್ತದೆ. ಕಾರ್ಯಾಚರಣೆಯ ಸಮಯದಲ್ಲಿ ಕೊಲ್ಲಲ್ಪಟ್ಟ ಉಗ್ರರಲ್ಲಿ ಒಬ್ಬ ೨೦೦೮ ರ ಮುಂಬೈ ದಾಳಿಯ ಪ್ರಮುಖ ಯೋಜಕ ಲಷ್ಕರ್-ಎ-ತೊಯ್ಬಾ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಅವರ ಸೋದರಳಿಯ. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ರವೀಂದರ್ ನಾಥ ಭಾರದ್ವಾಜ್
https://kn.wikipedia.org/wiki/ರವೀಂದರ್_ನಾಥ_ಭಾರದ್ವಾಜ್
ಏರ್ ಮಾರ್ಷಲ್ ರವೀಂದರ್ ನಾಥ ಭಾರದ್ವಾಜ್ ಅವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ. ಇವರು ಪರಮ ವಿಶಿಷ್ಟ ಸೇವಾ ಪದಕ, ಮಹಾವೀರ ಚಕ್ರ (ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ) ಮತ್ತು ವಾಯು ಸೇನಾ ಪದಕ ಪಡೆದಿದ್ದಾರೆ. ಆರಂಭಿಕ ವೃತ್ತಿ ಜೀವನ ಏರ್ ಮಾರ್ಷಲ್ ರವೀಂದರ್ ನಾಥ್ ಭಾರದ್ವಾಜ್ ಅವರು ೧೯೩೫ರ ಜುಲೈನಲ್ಲಿ ಅವಿಭಜಿತ ಬ್ರಿಟಿಷ್ ಭಾರತದ ಲಾಹೋರ್ನಲ್ಲಿ ಜನಿಸಿದರು. ಅವರ ತಂದೆ ಶ್ರೀ ಪಿ. ಎನ್. ಭಾರದ್ವಾಜ್. ಸೇನಾ ವೃತ್ತಿಜೀವನ ಭಾರದ್ವಾಜ್ ಅವರನ್ನು ೧೯೫೫ ರ ಅಕ್ಟೋಬರ್ ೮ ರಂದು ಭಾರತೀಯ ವಾಯುಪಡೆಗೆ (ಐಎಎಫ್) ನಿಯೋಜಿಸಲಾಯಿತು. ಅವರು ೧೯೬೫ ಮತ್ತು ೧೯೭೧ರ ಭಾರತ-ಪಾಕಿಸ್ತಾನ ಯುದ್ಧಗಳೆರಡರಲ್ಲೂ ಕಾರ್ಯಪ್ರವೃತ್ತರಾಗಿದ್ದರು. ೧೯೭೧ರ ಜನವರಿಯಲ್ಲಿ, ಅವರು ಕಾರ್ಯಾಚರಣೆಯ ತರಬೇತಿ ಪಡೆಯೊಂದರಲ್ಲಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ಸುಧಾರಿತ ಹಾರಾಟ ಕೌಶಲ್ಯ ಮತ್ತು ತರಬೇತಿ ಪಡೆಯುವವರಲ್ಲಿ ಅಗತ್ಯ ಜ್ಞಾನವನ್ನೊದಗಿಸಲು ಸೂಕ್ತ ಕ್ರಮಗಳನ್ನು ಜಾರಿಗೆ ತಂದರು. ಈ ಸೇವೆಗಾಗಿ ಅವರು ವಾಯು ಸೇನಾ ಪದಕಕ್ಕೆ ಭಾಜನರಾದರು. ೧೯೭೧ರ ಯುದ್ಧದ ಸಮಯದಲ್ಲಿ, ಅವರು ಹಾಕರ್ ಹಂಟರ್ ವಿಮಾನಗಳನ್ನು ಹೊಂದಿದ ಫೈಟರ್ ಬಾಂಬರ್ ಸ್ಕ್ವಾಡ್ರನ್ ಐಎಎಫ್ ನ ೨೦ನೇ ಸ್ಕ್ವಾಡ್ರನ್ನಲ್ಲಿ ಸ್ಕ್ವಾಡ್ರನ್ನ ನಾಯಕ ಹುದ್ದೆಯನ್ನು ಅಲಂಕರಿಸಿದ್ದರು. ಸ್ಕ್ವಾಡ್ರನ್ನ ಹಿರಿಯ ಅಧಿಕಾರಿಯಾಗಿ, ಅವರು ಪಾಕಿಸ್ತಾನದ ಭೂಪ್ರದೇಶದೊಳಗೆ ಅನೇಕ ತೀಕ್ಷ್ಣ ಕಾರ್ಯಾಚರಣೆಗಳನ್ನು ಕೈಗೊಂಡು ಸೇನಾಪಡೆಯನ್ನು ಮುನ್ನಡೆಸಿದರು. ವಾಯುನೆಲೆಗಳು, ತೈಲ ಸಂಸ್ಕರಣಾಗಾರಗಳು ಮತ್ತು ಭೂ ಕಾರ್ಯಾಚರಣೆಗಳಿಗೆ ಬೆಂಬಲ ಸೇರಿದಂತೆ ಹೆಚ್ಚು ರಕ್ಷಿಸಲ್ಪಟ್ಟ ಪ್ರದೇಶಗಳ ಮೇಲೆ ದಾಳಿ ಮಾಡಿದರು. ಯುದ್ಧ ಕಾರ್ಯಾಚರಣೆಗಳಲ್ಲಿ ಪ್ರದರ್ಶಿಸಿದ ಶೌರ್ಯ ಮತ್ತು ನಾಯಕತ್ವಕ್ಕಾಗಿ, ಸ್ಕ್ವಾಡ್ರನ್ ಲೀಡರ್ ರವೀಂದರ್ ನಾಥ ಭಾರದ್ವಾಜ ಅವರಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ನೀಡಿ ಗೌರವಿಸಲಾಯಿತು. ಯುದ್ದದ ನಂತರ ಅವರು ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅವೆಂದರೆ: ನಿರ್ದೇಶಕರು, ಯೋಜನೆಗಳು, ವಾಯು ಕೇಂದ್ರ ಕಛೇರಿ. ೧೫ ನೇ ವಿಂಗ್ ನ ಏರ್ ಆಫೀಸರ್ ಕಮಾಂಡಿಂಗ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಉಪ ಕಮಾಂಡೆಂಟ್ ಮತ್ತು ಮುಖ್ಯ ಬೋಧಕರು, ಖಡಕ್ವಾಸ್ಲಾ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ದಕ್ಷಿಣ ಏರ್ ಕಮಾಂಡ್, ತಿರುವನಂತಪುರಂ ೧೯೯೩ ರ ಜುಲೈ ೩೧ರಂದು ನಿವೃತ್ತರಾಗುವ ಮೊದಲು ಅವರು ಏರ್ ಮಾರ್ಷಲ್ ಹುದ್ದೆಗೆ ಏರಿದರು. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ ವರ್ಗ:ಮಹಾವೀರ ಚಕ್ರ ಪುರಸ್ಕೃತರು
ಬಾಬು ರಾಮ್
https://kn.wikipedia.org/wiki/ಬಾಬು_ರಾಮ್
ಸಹಾಯಕ ಸಬ್ ಇನ್ಸ್ಪೆಕ್ಟರ್ ಬಾಬು ರಾಮ್ (೧೯೭೨-೧೯೨೦) ಅವರು ಶ್ರೀನಗರದ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್ಒಜಿ) ಪೊಲೀಸ್ ಅಧಿಕಾರಿ. ಅವರಿಗೆ ಶಾಂತಿ ಸಮಯದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ ನೀಡಲಾಯಿತು. ಆರಂಭಿಕ ಜೀವನ ಜಮ್ಮು ಪ್ರದೇಶದ ಮೆಂಧಾರ್ ಜಿಲ್ಲೆಯ ಪೂಂಚ್ ಜಿಲ್ಲೆ ಧರಣ ಗ್ರಾಮದಲ್ಲಿ ೧೯೭೨ರ ಮೇ ೧೫ರಂದು ಜನಿಸಿದ ರಾಮ್, ಬಾಲ್ಯದಿಂದಲೂ ಸಶಸ್ತ್ರ ಸೇವೆಗಳಿಗೆ ಸೇರಲು ಬಯಸಿದ್ದರು."J&K Cop Babu Ram Conferred With Ashok Chakra Posthumously". NDTV.com. Retrieved 2021-08-16. ಪೊಲೀಸ್ ವೃತ್ತಿಜೀವನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರನ್ನು ೧೯೯೯ ರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನಲ್ಲಿ ಕಾನ್ಸ್ಟೇಬಲ್ ಆಗಿ, ೨೦೦೨ರ ಜುಲೈ ೨೭ ರಂದು ನೇಮಿಸಲಾಯಿತು. ಶ್ರೀನಗರ ವಿಶೇಷ ಕಾರ್ಯಾಚರಣೆ ಗುಂಪಿಗೆ (ಎಸ್. ಒ. ಜಿ.) ಸೇರಿದ ಅವರು ಹಲವಾರು ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಇದರಲ್ಲಿ ಹಲವಾರು ಉಗ್ರಗಾಮಿಗಳು ಹತರಾದರು. ಬಂಡಾಯ ವಿರೋಧಿ ಘಟಕದಲ್ಲಿದ್ದ ಸಮಯದಲ್ಲಿ ೧೪ ಯುದ್ಧಗಳಲ್ಲಿ ಭಾಗವಹಿಸಿದರು. ಅಗ ೨೮ ಭಯೋತ್ಪಾದಕರು ಹತರಾದರು. ಬಾಬು ರಾಮ್ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಆಗಾಗ್ಗೆ ಮುಂಚೂಣಿಯಲ್ಲಿದ್ದರು. ಶೌರ್ಯ ಮತ್ತು ಆತ್ಮಸಾಕ್ಷಿಯ ಕಾರಣಕ್ಕಾಗಿ ಅವರು ಅಕಾಲಿಕ ಬಡ್ತಿ ಪಡೆದರು. ದಿಟ್ಟತನ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಪಂಥಾ-ಚೌಕ್ ಮೂಲಕ ಪ್ರಯಾಣಿಸುವ ವಾಹನಗಳನ್ನು ಪರಿಶೀಲಿಸುತ್ತಿದ್ದರು. ನಂತರ ಮೂವರು ಭಯೋತ್ಪಾದಕರು ಮೊಪೆಡ್ನಲ್ಲಿ ಬಂದು ಹೆದ್ದಾರಿಯಲ್ಲಿ ನಿಂತಿದ್ದ ಅರೆಸೈನಿಕ ಪಡೆ ಸದಸ್ಯರ ಮೇಲೆ ದಾಳಿ ಮಾಡಿದರು. ಅವರ ಶಸ್ತ್ರಾಸ್ತ್ರವನ್ನು ತೆಗೆದುಕೊಂಡು ಪೊಲೀಸರು ಮತ್ತು ಭದ್ರತಾ ಪಡೆಗಳ ಮೇಲೆ ವಿವೇಚನಾರಹಿತವಾಗಿ ಗುಂಡು ಹಾರಿಸಿದರು. ದಾಳಿಯ ನಂತರ, ಭಯೋತ್ಪಾದಕರು ಪಂಥಾ-ಚೌಕ್ನ ಧೋಬಿ ಮೊಹಲ್ಲಾವನ್ನು ಪ್ರವೇಶಿಸಿದರು. ತಕ್ಷಣವೇ ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಎಎಸ್ಐ ರಾಮ್ ಅಡ್ವಾಸ್ಡ್ ಪಾರ್ಟಿಯ ಭಾಗವಾಗಿದ್ದರು. ಅಡಗಿಕೊಂಡಿದ್ದ ಭಯೋತ್ಪಾದಕರ ವಿರುದ್ಧ ದಾಳಿ ನಡೆಸಿದರು, ನಂತರ ಭಯೋತ್ಪಾದಕರು ಜಂಟಿ ಶೋಧ ತಂಡದ ಮೇಲೆ ಗುಂಡು ಹಾರಿಸಿದರು. ಇದು ಎನ್ಕೌಂಟರ್‌ಗೆ ಕಾರಣವಾಯಿತು. ಕಮಾಂಡರ್ ಸೇರಿದಂತೆ ಮೂವರು ಲಷ್ಕರ್-ಎ-ತೈಬಾ (ಎಲ್ಇಟಿ) ಭಯೋತ್ಪಾದಕರ ಹತ್ಯೆಯೊಂದಿಗೆ ಈ ಎನ್ಕೌಂಟರ್ ಕೊನೆಗೊಂಡಿತು. ಆದರೆ, ಈ ಚಕಮಕಿಯಲ್ಲಿ ರಾಮ್ ಅವರು ಕೊಲ್ಲಲ್ಪಟ್ಟರು. ಅಶೋಕ ಚಕ್ರ ಭಾರತದ ೭೫ ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ, ಅವರ ಧೈರ್ಯ, ಸಮರ್ಪಣೆ ಮತ್ತು ಆತ್ಮಸಾಕ್ಷಿಯನ್ನು ಗುರುತಿಸಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಿದರು. ೨೦೨೨ ರ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿ ರಾಮ್ ಅವರ ಕುಟುಂಬದವರಿಗೆ ಅದನ್ನು ಪ್ರದಾನ ಮಾಡಿದರು. ಉಲ್ಲೇಖಗಳು ಬಾಹ್ಯ ಕೊಂಡಿ ಎಎಸ್ಐ ಬಾಬು ರಾಮ್ ಅವರ ಜೀವನಚರಿತ್ರೆ ಹಿಂದಿಯಲ್ಲಿ-https://hindiyojna.in/asi-babu-ram-biography-in-hindi ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಸಂಜಯ್ ಚೌಹಾಣ್ (ಸೈನಿಕ)
https://kn.wikipedia.org/wiki/ಸಂಜಯ್_ಚೌಹಾಣ್_(ಸೈನಿಕ)
ಕ್ಯಾಪ್ಟನ್ಸಂಜಯ್ ಚೌಹಾಣ್ಶೌರ್ಯ ಚಕ್ರframelessಮೃತಪಟ್ಟರು.ಲಚ್ಚಿಂಪೋರಾ, ಜಮ್ಮು ಮತ್ತು ಕಾಶ್ಮೀರನಿಷ್ಠೆlink=India|alt=India|border|23x23px ಭಾರತ ಗಣರಾಜ್ಯಸೇವೆ/ಶಾಖೆ24x24px ಭಾರತೀಯ ಸೇನೆಶ್ರೇಯಾಂಕ61x61pxಕ್ಯಾಪ್ಟನ್ಘಟಕ೧೬ ರಜಪೂತಾನಾ ರೈಫಲ್ಸ್ಯುದ್ಧಗಳು/ಯುದ್ಧಗಳುಕಾಶ್ಮೀರ ವಿವಾದಪ್ರಶಸ್ತಿಗಳು32x32pxಶೌರ್ಯ ಚಕ್ರ ಕ್ಯಾಪ್ಟನ್ ಸಂಜಯ್ ಚೌಹಾಣ್ ಅವರು ಶೌರ್ಯ ಚಕ್ರ ಪುರಸ್ಕೃತರು. ಇವರು ೧೬ ನೇ ರಜಪೂತಾನಾ ರೈಫಲ್ಸ್‌ನ ಭಾರತೀಯ ಸೇನಾ ಅಧಿಕಾರಿ. ೧೯೯೪ ರಲ್ಲಿ ಉತ್ತರ ಕಾಶ್ಮೀರದಲ್ಲಿ ವಿದೇಶಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾಗ ಹುತಾತ್ಮರಾದರು. ಅವರು ರಜಪೂತ ಕುಟುಂಬದಲ್ಲಿ ಜನಿಸಿದವರು. ೧೯೯೪ರ ಅಕ್ಟೋಬರ್ ೨೮ರಂದು ಜಮ್ಮು ಮತ್ತು ಕಾಶ್ಮೀರ ಲಚ್ಚಿಂಪೋರಾ ಗ್ರಾಮದಲ್ಲಿ ಕ್ಯಾಪ್ಟನ್ ಚೌಹಾಣ್ ಮತ್ತು ಅವರ ಮೂವರು ಸಹಸೈನಿಕರನ್ನು ಕೊಲ್ಲಲಾಯಿತು. ಆ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ವಿದೇಶಿ ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಿಂದ ಭಾರತವನ್ನು ಪ್ರವೇಶಿಸಿದ್ದರಿಂದ ಕಾಶ್ಮೀರದ ಬಂಡಾಯವು ಉತ್ತುಂಗದಲ್ಲಿತ್ತು. ಆಪರೇಷನ್ ಸಾಹಸ್ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿಲಿಟರಿ ಪ್ರತಿ-ಬಂಡಾಯ ಕಾರ್ಯಾಚರಣೆಯ ಸಮಯದಲ್ಲಿ, ಕ್ಯಾಪ್ಟನ್ ಚೌಹಾಣ್ ಶತ್ರು ಭಯೋತ್ಪಾದಕ ಗುಂಪಿಗೆ ನುಸುಳಲು ಪ್ರಯತ್ನಿಸಿದರು. ಕಾಶ್ಮೀರದಲ್ಲಿ ತನ್ನ ಮಾಹಿತಿದಾರರ ಜಾಲದಿಂದ ಸಂಗ್ರಹಿಸಿದ ಕಾರ್ಯಸಾಧ್ಯವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಅವರು ಜಮ್ಮು ಮತ್ತು ಕಾಶ್ಮೀರದ ಲಚ್ಚಿಂಪೋರಾದಲ್ಲಿ ಅಡಗಿದ್ದ ವಿದೇಶಿ ಭಯೋತ್ಪಾದಕರ ಮೇಲೆ ದಾಳಿ ನಡೆಸಲು ಯೋಜಿಸಿದ್ದರು. ಈ ಕಾರ್ಯಾಚರಣೆ ಯಶಸ್ವಿಯಾದರೆ, ಕಾಶ್ಮೀರದ ಸೂಕ್ಷ್ಮ ಪ್ರದೇಶದಲ್ಲಿ ವಿದೇಶಿ ಉಗ್ರಗಾಮಿಗಳ ಶ್ರೇಣಿಯನ್ನು ನಿರ್ಮೂಲನೆ ಮಾಡಲು ಕಾರಣವಾಗಬಹುದು ಎಂದು ಯೋಚಿಸಿದ್ದರು. ವಿದೇಶಿ ಭಯೋತ್ಪಾದಕರ ವೇಷ ಧರಿಸಿದ ಕ್ಯಾಪ್ಟನ್ ಚೌಹಾಣ್ ಮತ್ತು ಅವನ ಜೊತೆಗಿನ ಮೂವರು ಸೈನಿಕರ ತಂಡವು ಎಕೆ-೪೭ ಶಸ್ತ್ರಾಸ್ತ್ರಗಳೊಂದಿಗೆ ಲಚ್ಚಿಂಪೋರಾ ಗ್ರಾಮವನ್ನು ಪ್ರವೇಶಿಸಿತು. ಜೆಸಿಒ ನೇತೃತ್ವದಲ್ಲಿ ಒಂದು ತುಕಡಿಯು ಹತ್ತಿರದ ಪರ್ವತಶ್ರೇಣಿಯಲ್ಲಿ ಅಡಗಿಕೊಂಡು, ಪರಿಸ್ಥಿತಿಯನ್ನು ಅವರ ಅನುಕೂಲ ಸ್ಥಳದಿಂದ ಗಮನಿಸಬೇಕು ಮತ್ತು ಸಹಾಯಕ್ಕಾಗಿ ಯಾವುದೇ ಕರೆಗೆ ಸ್ಪಂದಿಸಬೇಕು ಎಂದು ತೀರ್ಮಾನಿಸಲಾಯಿತು. ಸೈನಿಕರ ವೇಷಧಾರಿಗಳಾಗಿದ್ದ ಉಗ್ರಗಾಮಿಗಳಿಗೆ ಅನುಮಾನ ಮೂಡಿತು. ಶೀಘ್ರದಲ್ಲೇ, ತಂಡವು ಪತ್ತೆಯಾಯಿತು. ಅವರು ಭಯೋತ್ಪಾದಕರ ಗುಂಪಿನಿಂದ ತಪ್ಪಿಸಿಕೊಂಡು ಒಂದು ಗುಡಿಸಲಿನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡರು. ಆಗ ಭಯೋತ್ಪಾದಕರು ಬೆಟ್ಟಗಳಿಂದ ಇಳಿದರೂ ಸಹ ಬೆಂಬಲಕ್ಕಾಗಿ ಕರೆ ನೀಡಿದ ಸೈನಿಕರಿಗೆ ಪ್ರತಿಕ್ರಿಯಿಸುವಲ್ಲಿ ಜೆಸಿಒ ವಿಫಲರಾದರು. ಸೈನಿಕರ ಗುಂಪನ್ನು ಜೀವಂತವಾಗಿ ಸೆರೆಹಿಡಿದು ನಂತರ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು. ಹಂದ್ವಾರ ಗ್ರಾಮದ ಮಧ್ಯದಲ್ಲಿ ಸೈನಿಕರ ಛಿದ್ರಗೊಂಡ ದೇಹಗಳು, ಪತ್ತೆಯಾದವು. ಉಗ್ರಗಾಮಿಗಳು ಅತ್ಯಂತ ಭೀಕರವಾಗಿ ಸೈನಿಕರ ಬೆರಳಿನ ಉಗುರುಗಳನ್ನು ಹೊರತೆಗೆದು, ಅವರ ಕಣ್ಣುಗಳನ್ನು ಹೊರತೆಗೆದು, ಅವರ ಕೈಗಳನ್ನು ಕತ್ತರಿಸಿ ಮತ್ತು ಅವರ ಖಾಸಗಿ ಭಾಗಗಳನ್ನು ಅಂಗವಿಕಲಗೊಳಿಸುವ ಮೂಲಕ ಚಿತ್ರಹಿಂಸೆ ನೀಡಿದ್ದಾರೆ ಎಂದು ಬಹಿರಂಗಪಡಿಸಿತು. ಶತ್ರುವಿನ ಎದುರಿನಲ್ಲಿ ಶೌರ್ಯ ತೋರಿದ್ದಕ್ಕಾಗಿ ಕ್ಯಾಪ್ಟನ್ ಸಂಜಯ್ ಚೌಹಾಣ್ ಅವರಿಗೆ ಭಾರತದ ಮೂರನೇ ಅತ್ಯುನ್ನತ ಮಿಲಿಟರಿ ಗೌರವಶೌರ್ಯ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. ಉಲ್ಲೇಖಗಳು ಇತರೆ ಓದು ೧. ಕರ್ನಲ್ ದನ್ವಿರ್ ಸಿಂಗ್ (೧೮ನೇ ಆಗಸ್ಟ್ ೨೦೧೪), ಕಾಶ್ಮಿರ್ಸ್ ಡೆತ್ ಟ್ರಾಪ್; ಟೇಲ್ಸ್ ಆಫ್ ಪರ್ಡಿಫ಼ೈ ಅಂಡ್ ವಾಲೋರ್. ಲಾನ್ಸರ್ ಪಬ್ಲಿ‌‍ಷರ್ಸ್ ಎಲ್ ಎಲ್ ಸಿ. ಪಿಪಿ.೩೮-೩೯, ಐಎಸ್ ಬಿಎನ್ ೯೭೮-೧-೯೪೦೯೮೮-೧೩-೯ ಬಾಹ್ಯ ಸಂಪರ್ಕಗಳು ಕಾಶ್ಮೀರಿ ಪಂಡಿತರು : ಒಂದು ಜನಾಂಗೀಯ ಶುದ್ಧೀಕರಣ ಜಗತ್ತನ್ನು ಮರೆತುಬಿಟ್ಟಿದೆ ಸಶಸ್ತ್ರ ಪಡೆಗಳ ನ್ಯಾಯಾಧಿಕರಣ, ಪ್ರಧಾನ ಪೀಠ, ನವದೆಹಲಿ ೨೦೦೯ರ ಟಿ. ಎ. ೫೯೪ ರಿಟ್ ಅರ್ಜಿ (೧೯೯೭ರ ಸಿವಿಲ್ ಸಂಖ್ಯೆ ೫೩೪೯) ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ ವರ್ಗ:ಶೌರ್ಯ ಚಕ್ರ ಪುರಸ್ಕೃತರು
ವಿನೋದ್ ಜಿ. ಖಂಡಾರೆ
https://kn.wikipedia.org/wiki/ವಿನೋದ್_ಜಿ._ಖಂಡಾರೆ
ಲೆಫ್ಟಿನೆಂಟ್ ಜನರಲ್ ವಿನೋದ್ ಜಿ. ಖಂಡಾರೆ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ಮಾಜಿ ಅಧಿಕಾರಿಯಾಗಿದ್ದು, ಪ್ರಸ್ತುತ ರಕ್ಷಣಾ ಸಚಿವಾಲಯದಲ್ಲಿ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ೩೧ ಜನವರಿ ೨೦೧೮ ರಂದು ಸಕ್ರಿಯ ಮಿಲಿಟರಿ ಸೇವೆಯಿಂದ ನಿವೃತ್ತರಾದರು. ೨೦೧೮ ರಿಂದ ೨೦೨೧ ರವರೆಗೆ ಕಾರ್ಯದರ್ಶಿ ಮಟ್ಟದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಮಿಲಿಟರಿ ಸಲಹೆಗಾರರಾಗಿದ್ದರು. ತಮ್ಮ ಅಂತಿಮ ಸಕ್ರಿಯ ಮಿಲಿಟರಿ ನೇಮಕಾತಿಯಲ್ಲಿ, ಅವರು ರಕ್ಷಣಾ ಗುಪ್ತಚರ ಸಂಸ್ಥೆ ಮಹಾ ನಿರ್ದೇಶಕರಾಗಿ ಮತ್ತು ಗುಪ್ತಚರ ಇಲಾಖೆಯ ಸಮಗ್ರ ರಕ್ಷಣಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ನವೆಂಬರ್ ೨೦೧೫ ರಿಂದ ಜನವರಿ ೨೦೧೮ ರವರೆಗೆ ಸೇವೆ ಸಲ್ಲಿಸಿದರು. ಸೈನಿಕ ಜೀವನ ೧೯೭೯ರ ಸೆಪ್ಟೆಂಬರ್‌ನಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯ,ಎಸ್‌ಎಸ್‌-೨೮ ತರಬೇತಿಯಲ್ಲಿ ಭಾರತೀಯ ಸೇನೆಯ ೧೪ನೇ ಗರ್ವಾಲ್ ರೈಫಲ್ಸ್‌ಗೆ ಇವರನ್ನ ನೇಮಕಮಾಡಲಾಯಿತು. ಪದಾತಿದಳದ ಅಧಿಕಾರಿಯಾಗಿ, ಅವರು ಸಿಯಾಚಿನ್, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಮತ್ತು ಈಶಾನ್ಯ ಪ್ರದೇಶದ ವಿವಿಧ ವಲಯಗಳಲ್ಲಿ ಕಾರ್ಯಾಚರಣೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.ಖಂಡಾರೆಯವರು ಭಾರತದ ಈಶಾನ್ಯ ಗಡಿಯಲ್ಲಿ ಕಾರ್ಯಾಚರಣೆಯ ಮಾಡುವ ಬ್ರಿಗೇಡ್‌ನ ನೇತೃತ್ವ ವಹಿಸಿದ್ದರು. ಇವರು ಕಾಶ್ಮೀರ ಕಣಿವೆಯಲ್ಲಿ ೨೦೧೦-೧೧ ರಲ್ಲಿ ಉತ್ತರ ಕಾಶ್ಮೀರದಲ್ಲಿ ಪ್ರತಿ ಬಂಡಾಯ ಪಡೆಯ ಉಪ ಜಿ.ಓ.ಸಿ. ಯಾಗಿ ಸೇವೆ ಸಲ್ಲಿಸಿದರು. ಇವರು ಮಹೂ ಪದಾತಿದಳ ಶಾಲೆ ಶಸ್ತ್ರಾಸ್ತ್ರಗಳ ಬೋಧಕರಾಗಿ ಮತ್ತು ವೆಲ್ಲಿಂಗ್ಟನ್ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೫ ರಿಂದ ೨೦೧೮ ರವರೆಗೆ ಭಾರತದ ರಕ್ಷಣಾ ಗುಪ್ತಚರ ಸಂಸ್ಥೆಯ (ಡಿಐಎ) ಮಹಾ ನಿರ್ದೇಶಕರಾಗಿದ್ದರು. ಸೇನಾ ನಂತರದ ವೃತ್ತಿಜೀವನ ಅಕ್ಟೋಬರ್ ೨೦೧೮ ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್‌ನ ಮಿಲಿಟರಿ ಸಲಹೆಗಾರರಾಗಿ ಖಂಡಾರೆ ಅವರನ್ನು ನೇಮಿಸಲಾಯಿತು. ಅವರು ೨೦೧೧ ರಿಂದ ೨೦೧೪ ರವರೆಗೆ ಸೈನ್ಯ ಸಲಹೆಗಾರರಾಗಿದ್ದ ಲೆಫ್ಟಿನೆಂಟ್ ಜನರಲ್ ಪ್ರಕಾಶ್ ಮೆನನ್ ಅವರ ಉತ್ತರಾಧಿಕಾರಿಯಾಗಿದ್ದರು. ಈ ಸ್ಥಾನವು ೨೦೧೮ ರಲ್ಲಿ ಖಂಡಾರೆ ಅವರು ನೇಮಕಗೊಳ್ಳುವವರೆಗೂ ಖಾಲಿಯಾಗಿತ್ತು, ಈ ನೆಮಕಾತಿಯೊಂದಿಗೆ ಅವರು ಎನ್‌ಎಸ್‌ಸಿ‌ಎಸ್ ಇತಿಹಾಸದಲ್ಲೇ ಎರಡನೇ ಮಿಲಿಟರಿ ಸಲಹೆಗಾರರು ಎಂದು ಹೆಸರಾದರು. ಅವರ ನೇಮಕಾತಿಯ ಭಾಗವಾಗಿ ಎನ್‌ಎಸ್‌ಸಿ‌ಎಸ್ ಮಿಲಿಟರಿ ವಿಭಾಗವನ್ನು ಪುನರುಜ್ಜೀವನಗೊಳಿಸಲಾಯಿತು. ಸೆಪ್ಟೆಂಬರ್ ೨೦೨೧ ರಲ್ಲಿ, ಖಂಡಾರೆ ಅವರು ನೈಜೀರಿಯಾದ ರಕ್ಷಣಾ ಸಂಸ್ಥೆಗಳೊಂದಿಗೆ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ನೈಜೀರಿಯಾಗೆ ಭಾರತೀಯ ರಕ್ಷಣಾ ನಿಯೋಗದ ಮುಂದಾಳತ್ವ ವಹಿಸಿದ್ದರು. ಈ ನಿಯೋಗದಲ್ಲಿ NSCS ಸದಸ್ಯರು, ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮೂರು ಸಶಸ್ತ್ರ ಪಡೆಗಳು ಮತ್ತು ರಕ್ಷಣಾ ಉದ್ಯಮದ ಪ್ರತಿನಿಧಿಗಳು ಸೇರಿದ್ದರು. ಗೌರವಗಳು ಯುಎನ್ ಪದಕ-ಒ.ಎನ್.ಯು.ಎಸ್.ಎ.ಎಲ್- ೧೯೯೩ ಸೇನಾ ಪದಕ (ಗ್ಯಾಲಂಟ್ರಿ-ಗಣರಾಜ್ಯೋತ್ಸವ- ೨೦೦೨ ಸೇನಾ ಸಿಬ್ಬಂದಿ ಮುಖ್ಯಸ್ಥರ ಶ್ಲಾಘನಾ ಪತ್ರ-ಸೇನಾ ದಿನ- ೨೦೧೨ ಅತಿ ವಿಶಿಷ್ಟ ಸೇವಾ ಪದಕ-ಗಣರಾಜ್ಯೋತ್ಸವ- ೨೦೧೫ Citation of Gallantry and Distinguished Awards 2015 by President Pranab Mukherjee http://pranabmukherjee.nic.in/pdf/Pr210315.pdf ಪರಮ ವಿಶಿಷ್ಟ ಸೇವಾ ಪದಕ-ಗಣರಾಜ್ಯೋತ್ಸವ- ೨೦೧೭ ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ರಾಯ್ ಸಿಂಗ್ ಯಾದವ್
https://kn.wikipedia.org/wiki/ರಾಯ್_ಸಿಂಗ್_ಯಾದವ್
ಬ್ರಿಗೇಡಿಯರ್ ರಾಯ್ ಸಿಂಗ್ ಯಾದವ್, (೧೭ ಮಾರ್ಚ್ ೧೯೨೫ - ೨೩ ಮಾರ್ಚ್ ೨೦೧೭ ) ಅವರು ಭಾರತೀಯ ಸೇನೆಯ ಅಧಿಕಾರಿ. ಇವರು ೧೯೬೭ರ ನಾಥು ಲಾ ಮತ್ತು ಚೋ ಲಾ ಘರ್ಷಣೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದರು. ಸಂಘರ್ಷದ ಸಮಯದಲ್ಲಿ ಅವರು ಪ್ರದರ್ಶಿಸಿದ ಧೈರ್ಯಕ್ಕಾಗಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ಸೇನಾ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. ಅವರನ್ನು ನಾಥು ಲಾ ಹುಲಿ ಎಂದೂ ಕರೆಯಲಾಗುತ್ತದೆ. ಆರಂಭಿಕ ಜೀವನ ರಾಯ್ ಸಿಂಗ್ ಯಾದವ್ ಅವರು ಪಂಜಾಬ್ ಪ್ರಾಂತ್ಯದ ಗುರ್ಗಾಂವ್ ಜಿಲ್ಲೆ ಕೋಸ್ಲಿ ಗ್ರಾಮದಲ್ಲಿ (ಈಗಿನ ಹರಿಯಾಣ ರಾಜ್ಯದ ರೆವಾರಿ ಜಿಲ್ಲೆ) ೧೯೨೫ರ ಮಾರ್ಚ್ ೧೭ರಂದು ಜನಿಸಿದರು. ಅವರ ತಂದೆ ರಾಯ್ ಸಾಹಿಬ್ ಗಣಪತ್ ಸಿಂಗ್ ಅವರು ೧೯೨೦ರ ದಶಕದಲ್ಲಿ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಯ್ ಸಿಂಗ್ ಅವರು ತಮ್ಮ ಹಿರಿಯ ಕೇಂಬ್ರಿಡ್ಜ್ ಪದವಿಯನ್ನು ಜುಲಂದೂರಿನ ಕಿಂಗ್ ಜಾರ್ಜ್ ಮಿಲಿಟರಿ ಶಾಲೆಯಿಂದ ಪಡೆದರು. ಸೇನಾ ವೃತ್ತಿಜೀವನ ರಾಯ್ ಸಿಂಗ್ ೧೯೪೪ ರಲ್ಲಿ ಎರಡನೇ ಲೆಫ್ಟಿನೆಂಟ್ ಆಗಿ ಸೇನೆಗೆ ಸೇರಿದರು. ೧೯೫೦ರ ಡಿಸೆಂಬರ್ ೧೦ರಂದು ಅವರನ್ನು ೨ ಗ್ರೆನೇಡಿಯರ್‌ಗಳಿಗೆ ನಿಯೋಜಿಸಲಾಯಿತು. ೧೯೬೭ ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿದ್ದ ಅವರು ಸಿಕ್ಕಿಂ ನಾಥು ಲಾ ನಿಯೋಜಿಸಲಾಗಿದ್ದ ೨ ಗ್ರೆನೇಡಿಯರ್ಸ್ ಬೆಟಾಲಿಯನ್‌ಗೆ ಕಮಾಂಡಿಂಗ್ ಮಾಡುತ್ತಿದ್ದಾಗ, ಚೀನಾದ ಸೇನೆಯು ಭಾರತದ ವಶದಲ್ಲಿದ್ದ ಭೂಪ್ರದೇಶದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿ ನಾಥು ಲಾ ಮತ್ತು ಚೋ ಲಾ ಘರ್ಷಣೆಗಳಿಗೆ ಕಾರಣವಾಯಿತು. ನಾಥು ಲಾ ಕಣಿವೆಯನ್ನು ಹಿಡಿದಿಡಲು ಮತ್ತು ಚೀನಾದ ಆಕ್ರಮಣಗಳನ್ನು ಸೋಲಿಸಲು, ಲೆಫ್ಟಿನೆಂಟ್ ಕರ್ನಲ್ ರಾಯ್ ಸಿಂಗ್ ತನ್ನ ಸೈನಿಕರನ್ನು ಮುಂಭಾಗದಿಂದ ಮುನ್ನಡೆಸಿದರು ಮತ್ತು ಶತ್ರುಗಳ ಎದುರಿನಲ್ಲಿ ಶೌರ್ಯ ಮತ್ತು ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದರು. ಜನಪ್ರಿಯ ಸಂಸ್ಕೃತಿಯಲ್ಲಿ ೨೦೧೮ ರ ಭಾರತೀಯ ಹಿಂದಿ ಭಾಷೆಯ ಚಲನಚಿತ್ರ ಪಲ್ಟಾನ್ ನಲ್ಲಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು ಬ್ರಿಗೇಡಿಯರ್ ರಾಯ್ ಸಿಂಗ್ ಯಾದವ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಇದನ್ನೂ ನೋಡಿ ನಾಥು ಲಾ ಮತ್ತು ಚೋ ಲಾ ಘರ್ಷಣೆಗಳು ಇತರೆ ಓದು ಮೇಜರ್ ಜನರಲ್ ಡಿ. ಕೆ. ಪಾಲಿತ್, ವಾರ್ ಇನ್ ದಿ ಹೈ ಹಿಮಾಲಯ, ಲ್ಯಾನ್ಸರ್ಸ್ ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ ವರ್ಗ:ಮಹಾವೀರ ಚಕ್ರ ಪುರಸ್ಕೃತರು
ಮಹಾಸುಂದರಿ ದೇವಿ
https://kn.wikipedia.org/wiki/ಮಹಾಸುಂದರಿ_ದೇವಿ
ಮಹಾಸುಂದರಿ ದೇವಿ ಅವರು (೧೫ ಏಪ್ರಿಲ್ ೧೯೨೨-೪ ಜುಲೈ ೨೦೧೩) ಭಾರತೀಯ ಕಲಾವಿದೆ. ಮಧುಬನಿ ವರ್ಣಚಿತ್ರಕಾರ್ತಿ. ೧೯೯೫ರಲ್ಲಿ ಮಧ್ಯಪ್ರದೇಶ ಸರ್ಕಾರ ಅವರಿಗೆ ತುಳಸಿ ಸಮ್ಮಾನವನ್ನು ನೀಡಿ ಗೌರವಿಸಿತು ಮತ್ತು ೨೦೧೧ ರಲ್ಲಿ ಅವರು ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಜೀವನಚರಿತ್ರೆ ತಮ್ಮ ಚಿಕ್ಕಮ್ಮನಿಂದ ಚಿತ್ರಕಲೆ ಮತ್ತು ಮಧುಬನಿ ಕಲೆಯನ್ನು ಕಲಿಯಲು ಪ್ರಾರಂಭಿಸಿದರು. ಅವರು ತಮ್ಮ ೧೮ ನೇ ವಯಸ್ಸಿನಲ್ಲಿ ಶಾಲಾ ಶಿಕ್ಷಕ ಕೃಷ್ಣ ಕುಮಾರ್ ದಾಸ್ ಅವರನ್ನು ವಿವಾಹವಾದರು. ೧೯೬೧ ರಲ್ಲಿ, ದೇವಿ ಆಗ ಪ್ರಚಲಿತದಲ್ಲಿದ್ದ ಪರ್ದಾ (ವೀಲ್) ವ್ಯವಸ್ಥೆಯನ್ನು ತೊರೆದು ಒಬ್ಬ ಕಲಾವಿದೆಯಾಗಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿದರು. ಅವರು ಮಿಥಿಲಾ ಹಸ್ತಶಿಲ್ಪ ಕಲಾಕರ್ ಉದ್ಯೋಗ್ ಸಮಿತಿ ಎಂಬ ಸಹಕಾರಿ ಸಂಘವನ್ನು ಸ್ಥಾಪಿಸಿದರು, ಇದು ಕರಕುಶಲ ವಸ್ತುಗಳಿಗೆ, ಕಲಾವಿದರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಿತು. ಮಿಥಿಲಾ ಚಿತ್ರಕಲೆಯ ಜೊತೆಗೆ, ಜೇಡಿಮಣ್ಣು, ಕಾಗದದ ಮಚ್ಚೆ, ಸುಜಾನಿ ಮತ್ತು ಸಿಕ್ಕಿಗಳಲ್ಲಿ ತಮ್ಮ ಪರಿಣತಿಯನ್ನು ಹೊಂದಿದ್ದರು. ಅವರ ಕುಟುಂಬದ ಪ್ರಕಾರ, ದೇವಿ ತಮ್ಮ ಕೊನೆಯ ವರ್ಣಚಿತ್ರವನ್ನು ೨೦೧೧ ರಲ್ಲಿ ರಚಿಸಿದರು. ದೇವಿ ಅವರು ತಮ್ಮ ೯೨ನೇ ವಯಸ್ಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ೨೦೧೩ರ ಜುಲೈ ೪ ರಂದು ನಿಧನರಾದರು ಎಂದು ಮೂಲಗಳು ತಿಳಿಸಿವೆ. ಮರುದಿನ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಗುರುತಿಸುವಿಕೆ ಅವರು ತಮ್ಮ ಮೊದಲ ಸನ್ಮಾನವನ್ನು ೧೯೭೬ರಲ್ಲಿ ಭಾರತೀಯ ನೃತ್ಯ ಕಲೆಯಿಂದ ಮೈಥಿಲ್ ಹುಡುಗಿಯೊಬ್ಬಳ ಹೋರಾಟದ ಸಾಹಸಕ್ಕಾಗಿ ಪಡೆದರು. ಅವರು ೧೯೮೨ರಲ್ಲಿ ಭಾರತದ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಾಷ್ಟ್ರೀಯ ಪ್ರಶಸ್ತಿ ಪಡೆದರು.Prakash, Manisha (29 May 2007). ದೇವಿಯನ್ನು ಚಿತ್ರಕಲೆಯ "ಜೀವಂತ ದಂತಕಥೆ" ಎಂದು ಪರಿಗಣಿಸಲಾಗಿತ್ತು. ಅವರಿಗೆ ೧೯೯೫ರಲ್ಲಿ ಮಧ್ಯಪ್ರದೇಶ ಸರ್ಕಾರ ತುಳಸಿ ಸಮ್ಮಾನ್ ಮತ್ತು ೨೦೦೭ರಲ್ಲಿ ಶಿಲ್ಪ ಗುರು ಪ್ರಶಸ್ತಿ ನೀಡಿತು."Straight from the art". ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರು ೨೦೧೧ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ವೈಯಕ್ತಿಕ ಜೀವನ ದೇವಿ ಬಿಹಾರದ ಮಧುಬಾನಿಯಲ್ಲಿರುವ ರಂತಿ ಗ್ರಾಮದ ನಿವಾಸಿಯಾಗಿದ್ದರು.Prakash, Manisha (29 May 2007). ಅವರ ಸೊಸೆ ಬಿಭಾ ದಾಸ್ ಮತ್ತು ಅವರ ಅತ್ತಿಗೆ ಕರ್ಪೂರಿ ದೇವಿ ಕೂಡ ಮಧುಬನಿ ವರ್ಣಚಿತ್ರಕಾರರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರಿಯರು ಮತ್ತು ಮೂವರು ಪುತ್ರರಿದ್ದರು. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
ರಾಜೇಶ್ ಕುಮಾರ್ (ಏರ್ ಮಾರ್ಷಲ್)
https://kn.wikipedia.org/wiki/ರಾಜೇಶ್_ಕುಮಾರ್_(ಏರ್_ಮಾರ್ಷಲ್)
ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದಾರೆ. ಅವರು ಕೊನೆಯದಾಗಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು. ಏರ್ ಮಾರ್ಷಲ್ ನವಕರಣಜಿತ್ ಸಿಂಗ್ ಧಿಲ್ಲಾನ್ ಅವರ ನಿವೃತ್ತಿಯ ನಂತರ ೨೦೨೧ ರ ಜನವರಿ ೩೧ ರಂದು ಅವರು ಅಧಿಕಾರ ವಹಿಸಿಕೊಂಡರು. ಈ ಹಿಂದೆ ಅವರು ಸೆಂಟ್ರಲ್ ಏರ್ ಕಮಾಂಡ್ ಎಒಸಿ-ಇನ್-ಸಿ ಮತ್ತು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಎಸ್ಎಎಸ್ಒ ಆಗಿ ಸೇವೆ ಸಲ್ಲಿಸಿದ್ದರು. ಅವರು ೩೧ ಆಗಸ್ಟ್ ೨೦೨೧ ರಂದು ನಿವೃತ್ತರಾದರು. ಆರಂಭಿಕ ಜೀವನ ಮತ್ತು ಶಿಕ್ಷಣ ಕುಮಾರ್ ಅವರು ಅಜಮೇರ್‌ನ ಮಾಯೊ ಕಾಲೇಜು ಮತ್ತು ರಾ‌ಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕವಸ್ಲ- ಇದರ ಹಳೆವಿದ್ಯಾರ್ಥಿ. ವಾಯು ಕಮಾಂಡ್ ಮತ್ತು ಸ್ಥಾಫ್ ಕಾಲೇಜು, ಮೋಂಟ್ಗೋಮೇರಿ, ಅಲಬಾಮ -ಇಲ್ಲಿನ ಪದವೀಧರರು. ಸಿಕಂದರಾಬಾದ್‌ನಲ್ಲಿರುವ ರಕ್ಷಣಾ ನಿರ್ವಹಣಾ ಕಾಲೇಜಿನಿಂದ ಉನ್ನತ ರಕ್ಷಣಾ ನಿರ್ವಹಣಾ ತರಬೇತಿಯನ್ನೂ ಪಡೆದಿರುವರು. ವೃತ್ತಿಜೀವನ ಕುಮಾರ್ ಅವರನ್ನು ೧೯೮೨ ರ ಜೂನ್ ೪ ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಯಿತು. ಅವರು ಫೈಟರ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಮತ್ತು ಫ್ರಂಟ್-ಲೈನ್ ವಾಯುನೆಲೆಯನ್ನು ಮುನ್ನಡೆಸಿದ್ದಾರೆ. ಅವರು ಎ ವರ್ಗದ ಫ್ಲೈಯಿಂಗ್ ಬೋಧಕ, ಇನ್ಸ್ಟ್ರುಮೆಂಟ್ ರೇಟಿಂಗ್ ಬೋಧಕ ಮತ್ತು ಏರ್ ಕ್ರೂ ಮೇಲ್ವಿಚಾರಕರಾಗಿದ್ದಾರೆ. ಅವರು ಇಸ್ರೇಲ್‌ನ ಎಡಬ್ಲ್ಯೂಎಸಿಎಸ್ ಯೋಜನೆಯ ಮೇಲ್ವಿಚಾರಣಾ ತಂಡದ ನಾಯಕರಾಗಿ, ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಭಾರತೀಯ ವಾಯುಪಡೆಯ ಯೋಜನಾ ನಿರ್ವಹಣಾ ತಂಡದ ನಿರ್ದೇಶಕರಾಗಿ ಮತ್ತು ಶಿಲ್ಲಾಂಗ್‌ನ ಪೂರ್ವ ವಾಯು ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ನೇಮಕರಾಗಿದ್ದಾರೆ. ತಮ್ಮ ೩೬ ವರ್ಷಗಳ ವೃತ್ತಿಜೀವನದಲ್ಲಿ, ಕುಮಾರ್ ಅವರಿಗೆ ೨೦೨೧ ರಲ್ಲಿ ಪರಮ್ ವಿಶಿಷ್ಟ ಸೇವಾ ಪದಕ, ೨೦೧೯ ರಲ್ಲಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ಆಪರೇಷನ್ ಪರಾಕ್ರಮ ಶೌರ್ಯಕ್ಕಾಗಿ ವಾಯು ಸೇನಾ ಪದಕ ನೀಡಲಾಗಿದೆ."Air Marshal Rajesh taken over as the Senior Air Staff Officer at HQ EAC". ಪರಮ ವಿಶಿಷ್ಟ ಸೇವಾ ಪದಕಅತಿ ವಿಶಿಷ್ಟ ಸೇವಾ ಪದಕವಾಯು ಸೇನಾ ಪದಕ ರಾಜೇಶ್ ಕುಮಾರ್ ಅವರು ಜಯಾ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದಾರೆ ."Air Marshal Rajesh taken over as the Senior Air Staff Officer at HQ EAC". ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ವಿನಯ ವರ್ಮಾ
https://kn.wikipedia.org/wiki/ವಿನಯ_ವರ್ಮಾ
ವಿನಯ್ ವರ್ಮಾ ಒಬ್ಬ ಭಾರತೀಯ ನಟ, ಚಿತ್ರಕಥೆಗಾರ ಮತ್ತು ಪಾತ್ರವರ್ಗ ಹಾಗು ನಿರ್ದೇಶಕರಾಗಿದ್ದು, ಅವರು ಮುಖ್ಯವಾಗಿ ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿಹೆಚ ಕೆಲಸ ಮಾಡುತ್ತಾರೆ. ವೃತ್ತಿಜೀವನ ಸೂತ್ರಧಾರ್ ಸಂಸ್ಥಾಪಕ ವಿನಯ ವರ್ಮಾ ಹವ್ಯಾಸಿ ರಂಗಭೂಮಿಯ ಹವ್ಯಾಸ್ಸಿ ಕಲಾವಿದರಾಗಿ ಪ್ರಾರಂಭಿಸಿದರು. ಅವರು 40 ವರ್ಷಗಳಿಗೂ ಹೆಚ್ಚು ಕಾಲ ರಂಗಭೂಮಿಯ ನಂಟುನೊಂದಿದೆ ತೊಡಗಿಸಿಕೊಂಡಿದ್ದಾರೆ. ಅವರು ಒಂದು ಹಾಲಿವುಡ್ ಚಲನಚಿತ್ರದ ಜೊತೆಗೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ಲಕ್ಷ್ಮೀನಾರಾಯಣ ಲಾಲ್ ಬರೆದ ಕಾಫಿ ಹೌಸ್ ಮೇ ಇಂತೇಜಾರ ನಾಟಕದೊಂದಿಗೆ ಅವರು ತಮ್ಮ ರಂಗಭೂಮಿಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ವರ್ಮಾ ಅವರು ನಟನೆಯನ್ನು ಮುಂದುವರಿಸಲು ತಮ್ಮ ಬ್ಯಾಂಕಿಂಗ್ ಕೆಲಕ್ಕೆ ರಾಜನಾಮೆ ನೀಡಿದರು. ಅವರು 45ಕ್ಕೂ ಹೆಚ್ಚುರಂಗ ನಾಟಕಗಳನ್ನು ನಿರ್ದೇಶಿಸಿದ್ದಾರೆ ಮತ್ತು 50ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿದ್ದು, ಭಾರತ ಮತ್ತು ವಿದೇಶಗಳಲ್ಲಿ 200ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಕೆಲವು ಪ್ರದರ್ಶನಗಳಲ್ಲಿ ನಟಸಮ್ರಾಟ್, ರಕ್ತಬೀಜ್, ಮೈ ರಾಹಿ ಮಾಸೂಮ್, ಸಿಯಾ ಹಾಶಿಯ, ಸ್ಟ್ರಾಂಗರ್ ದಾನ್ ಸೂಪರಮ್ಯಾನ, ಮೈ ನಾಥುರಾಮ್ ಗೋಡ್ಸೆ, ಡೆತ್ ವಾಚ್, ಕಂಜೂಸ್ ಮಕ್ಕಿ ಚೂಸ್, ಡೇವಿಡ್ ಮಾಮೆಟ್ ಅವರ ಒಲಿಯಾನಾ ಸೇರಿವೆ. ಅವರ ನಾಟಕ ಮೈ ರಾಹಿ ಮಾಸೂಮ್ ಬರಹಗಾರ ಡಾ ರಾಹಿ ಮಾಸೂಂ ರಝಾ ಅವರ ಜೀವನವನ್ನು ಆಧರಿಸಿದೆ ನಾಟಕವಾಗಿದೆ. ಹೈದರಾಬಾದ್ ಜೊತೆಗೆ, ಮುಂಬೈ ಕಾಲಾ ಘೋಡಾ ಆರ್ಟ್ಸ್ ಫೆಸ್ಟಿವಲ್, ಕೋಲ್ಕತ್ತಾ 3ನೇ ಮಿನರ್ವಾ ನ್ಯಾಷನಲ್ ಥಿಯೇಟರ್ ಫೆಸ್ಟಿವൽ, ಕೊಲ್ಹಾಪುರ ಪ್ರತ್ಯಯ್ ಥಿಯೇಟರ್ ಫೆಸ್ಟಿವೆಲ್, ನವದೆಹಲಿಯ 12ನೇ ಭಾರತ ರಂಗ ಮಹೋತ್ಸವ, ಅಲಹಾಬಾದ್ 22ನೇ ರಾಷ್ಟ್ರೀಯ ನಾಟಕ ಉತ್ಸವ, 8ನೇ ವಿಶ್ವ ರಂಗಭೂಮಿ ಒಲಿಂಪಿಕ್ಸ್-ಚಂಡೀಗಢ, ಪುಣೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ- ಪುಣೆಯಲ್ಲಿ ಮೈ ರಾಹಿ ಮಾಸೂಮ್ ಪ್ರದರ್ಶನವಾಗಿದೆ. ಇದನ್ನು ಚೆನ್ನೈ, ಅಹಮದಾಬಾದ್, ಇಂದೋರ್, ಬೆಂಗಳೂರು ಇತ್ಯಾದಿಗಳಲ್ಲಿ ಪ್ರದರ್ಶಿಸಲಾಯಿತು. ವಿನಯ್ ವರ್ಮಾ ಅವರನ್ನು ಲಂಡನ್ ಸೊಸೈಟಿ ಆಫ್ ಫ್ರೆಂಡ್ಸ್ ಇಂಟರ್ನ್ಯಾಷನಲ್, ಮೈ ರಾಹಿ ಮಾಸೂಮ್ ಅನ್ನು ಪ್ರದರ್ಶಿಸಲು ಆಹ್ವಾನಿಸಿತು. 2018ರ ಮಾರ್ಚ್ 2ರಂದು, ಮೈ ರಾಹಿ ಮಾಸೂಮ್ ತನ್ನ 50ನೇ ಪ್ರದರ್ಶನವನ್ನು ಭಾರತದ ಹೈದರಾಬಾದನಲ್ಲಿ ಪ್ರದರ್ಶಗೊಂಡಿತು. ರಂಗ ನಿರ್ದೇಶಕರಾಗಿ, ಅವರ ಕೆಲವು ಪ್ರಸಿದ್ಧ ನಾಟಕಗಳು ಹೀಗಿವೆಃ ಜಾನ್ ಪಿಲ್ಮಿಯರ್ ಅವರ ಆಗ್ನೆಸ್ ಆಫ್ ಗಾಡ್. ಡಾ. ಸಿ. ಎಚ್. ಫನ್ಸಾಲ್ಕರ್ ಅವರ ಐಸೊಸೆಲೆಸ್ ಟ್ರಯಾಂಗಲ್. ಬಿರ್ಜೀಸ್ ಖಾದರ್ ಕಾ ಕುಂಬಾ, ದಿ ಹೌಸ್ ಆಫ್ ಬರ್ನಾರ್ಡಾ ಆಲ್ಬಾ ಕೃತಿಯ ಉರ್ದು ರೂಪಾಂತರವಾಗಿದೆ. ಪಿಂಕಿ ವಿರಾನಿ ಕಹಿ ಚಾಕೊಲೇಟ್. ಬಾದಲ್ ಸರ್ಕಾರ್ ಅವರ ಬಲ್ಲಭ್ ಪುರ್ ಕಿ ರೂಪಕಥಾಬಲ್ಲಭ್ಪುರ್ ಕಿ ರೂಪಕಥಾ ಡಾ. ಶಂಕರ್ ಶೇಶ್ ಅವರ ರಕ್ತಬೀಜ್. ಡಾ. ಶಂಕರ್ ಶೇಶ್ ಅವರ ಫಂಡಿ. ಡಾ. ಪ್ರೇಮ್ ಜನ್ಮೆಜೈ ಅವರ ಸೀತಾ ಅಪಹಾರನ್ ಪ್ರಕರಣ. ಸಾಗರ್ ಸರಹದಿ ಅವರ ಕಿಸಿ ಸೀಮಾ ಕಿ ಏಕ್ ಮಾಮೂಲಿ ಸಿ ಘಟ್ನಾ. ಸುರೇಂದ್ರ ವರ್ಮಾ ಅವರ ಮಾರನೋಪರಂತ್. ನೀಮ್ ಹಕೀಮ್ ಖತಾರ್ ಇ ಜಾನ್, ಲೆ ಮೆಡಿಸಿನ್ ಮಾಲ್ಗ್ರೆ ಲೂಯಿ ಚಿತ್ರದ ಹೈದರಾಬಾದೀ ರೂಪಾಂತರವಾಗಿದೆ. ಸಾದತ್ ಹಸನ್ ಮಾಂಟೊ ಅವರ ಸಿಯಾ ಹಾಶಿಯ (ದೀಪ್ತಿ ಗಿರೋಟ್ರಾ ಅವರೊಂದಿಗೆ ಸಹ-ನಿರ್ದೇಶನ). ಇಸ್ಮತ್ ಚುಗ್ತೈನ ಇಸ್ಮತ್-ಏಕ್ ಔರತ್. ಗಾಂಧಿ ಅಂಬೇಡ್ಕರ್ ಮತ್ತು ಮೈ ನಾಥೂರಾಮ್ ಗೋಡ್ಸೆ (ಪ್ರೊ. ಭಾಸ್ಕರ್ ಶೆವಾಲ್ಕರ್ ಅವರೊಂದಿಗೆ ಸಹ-ನಿರ್ದೇಶನ) 18ನೇ ಶತಮಾನದ ಉರ್ದು ಕವಿ ಮತ್ತು ತನ್ನ ಕೃತಿಯ ದಿವಾನ್ (ಆಂಥಾಲಜಿ) ಹೊಂದಿರುವ ಮೊದಲ ಮಹಿಳೆ ಮಹ್ ಲಾಕಾ ಬಾಯಿ ಜೀವನವನ್ನು ಆಧರಿಸಿದ ಮಹ್ ಲಕಾ ಬಾಯಿ ಚಂದಾ. ಕಂಜೂಸ್ ಮಕ್ಕಿ ಚೂಸ್, ದಿ ಮಿಸರ್ ಹೈದರಾಬಾದೀ ರೂಪಾಂತರವಾಗಿದೆ. ನಿರ್ಮಲ್ ವರ್ಮಾ ಅವರ ವೀಕೆಂಡ್. ದುಶಲಾ ವರ್ಮಾ ಅವರು 1999ರಿಂದ ಸೂತ್ರಧಾರನಲ್ಲಿ, ಧ್ವನಿ ಮತ್ತು ದೇಹ ಭಾಷಾ ಕಾರ್ಯಾಗಾರಗಳನ್ನು ನಡೆಸುತ್ತಿದ್ದು, ನೂರಕ್ಕೂ ಹೆಚ್ಚು ಕಲಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಿದ್ದಾರೆ. ಆತನಿಂದ ತರಬೇತಿ ಪಡೆದ ನಟುರುಗಾಳದ ವಿಜಯ್ ವರ್ಮಾ, ಶ್ರೀ ವಿಷ್ಣು, ಅದಿತಿ ಶರ್ಮಾ (ಕಸಮ್ ತೇರೇ ಪ್ಯಾರ್ ಕಿ) ವಿಜಯ್ ದೇವರಕೊಂಡ, ಆನಂದ್ ದೇವರಕೊಂಡ, ಮತ್ತು ಅಬೆರಾಮ್ ವರ್ಮಾ ಸಿನೆಮಾ ರಂಗದಲ್ಲಿ ಜನ ಪ್ರಿಯ ಕಲಾವಿದರಾಗಿದ್ದರೆ ರಂಗಭೂಮಿ   ಚಲನಚಿತ್ರಗಳ ಪಟ್ಟಿ ತೆಲುಗು ಚಲನಚಿತ್ರಗಳು   16 ಡಿಸೆಂಬರ್ (2002) <i id="mwyA">ರುದ್ರಾಕ್ಷ್</i> (2004) ಮುಖಬೀರ್ (2008) <i id="mwzg">ನಾಕ್ ಔಟ್</i> (2010) ಯೇ ಹೈ ಬಕ್ರಾಪುರ್ (2013) <i id="mw1A">ಬಾಬಿ ಜಾಸೂಸ್</i> (2014) <i id="mw1w">ಜರ್ಸಿ</i> (2022) ಸಂಗೀತ ಶಾಲೆ (2023) <i id="mw3Q">ಫೈಟರ್</i> (2024) ಇಂಗ್ಲಿಷ್ ಚಲನಚಿತ್ರ ಎ ಸಿಂಪಲ್ ಮರ್ಡರ್ (2020) ಪವಿತ್ರ ಆಟಗಳು ಆಟ (2021) ಕುಬೂಲ್ ಹೈ? (2022) ದೂರದರ್ಶನ ಪೀಟರ್ ದಿ 2 (ದೂರದರ್ಶನ ಚಲನಚಿತ್ರ) ಮಾಧವಿ ದಾನವ್ ಬೇಟೆಗಾರರು ಧರ್ತಿ ಬನೇ ಫುಲ್ವಾರಿ ನಗ್ಮೇ ಕಾ ಸಫರ್ ಮೈ ಫಿರ್ ಜನ್ಮ ಹೂ (ದೂರದರ್ಶನ ಚಲನಚಿತ್ರ) ಬಾಲಾ. ಏಕ್ ಕಹಾನಿ ಮನುಶುಲು-ಮಾಮತಾಲು ಡಬ್ಬಿಂಗ್ ಕಲಾವಿದ ಟೀನು ಆನಂದ್-ಅಂಜಿಅಂಜಿ. ಇಲವರಸು-ಡೋಂಗಾದೊಂಗಾ ನಾಸರ್-ಒಕ್ಕಡುನ್ನಡುಒಕ್ಕಡುನಾಡು ರಾಜ್ ಅರ್ಜುನ್-ಆತ್ಮೀಯ ಒಡನಾಡಿಪ್ರಿಯ ಕಾಮ್ರೇಡ್ ರಾಹುಲ್ ದೇವ್-ಆಕಾಶ ವೀಧಿಲೋಅಕಾಸಾ ವೀಧಿಲೋ ಸಿ. ವಿ. ಎಸ್. ನಲ್ಲಿ ಪಂಚತಂತ್ರ ಕಥೆಗಳು ಉಲ್ಲೇಖಗಳು ಬಾಹ್ಯ ಸಂಪರ್ಕಗಳು ವರ್ಗ:ಜೀವಂತ ವ್ಯಕ್ತಿಗಳು
ತರುವಾ
https://kn.wikipedia.org/wiki/ತರುವಾ
ತರುವಾ ತೆಳುವಾಗಿ ಕತ್ತರಿಸಿದ ತರಕಾರಿಗಳನ್ನು ಅಕ್ಕಿ ಹಿಟ್ಟಿನಿಂದ ಲೇಪಿಸಿ ಎಣ್ಣೆಯಲ್ಲಿ ಕರಿದು ತಯಾರಿಸುವ ಭಕ್ಷ್ಯವಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ಹುಟ್ಟಿಕೊಂಡಿತು ಮತ್ತು ಭಾರತ ಹಾಗೂ ನೇಪಾಳದ ಮೈಥಿಲರಲ್ಲಿ ಜನಪ್ರಿಯವಾಗಿದೆ. ಇದು ಮಿಥಿಲಾ ಪ್ರದೇಶದ ಜನಪ್ರಿಯ ಮತ್ತು ವಿಶೇಷ ಖಾದ್ಯವಾಗಿದೆ. ತರುವಾವನ್ನು ಬಡಿಸದೆ ಅತಿಥಿಯನ್ನು ಸ್ವಾಗತಿಸುವುದು ಅಸಾಧ್ಯವೆಂದು ನಂಬಲಾಗಿದೆ. ತಯಾರಿಕೆ ಹಸಿರು ತರಕಾರಿಗಳು ಮತ್ತು ತರಕಾರಿ ಎಲೆಗಳನ್ನು ವಿವಿಧ ಆಕಾರಗಳಲ್ಲಿ ಕತ್ತರಿಸಿ ತರುವಾವನ್ನು ತಯಾರಿಸಲಾಗುತ್ತದೆ. ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟಿನಿಂದ ತಯಾರಿಸಿದ ತೆಳು ಕಣಕದಲ್ಲಿ ಕರಿ ಮೆಣಸು, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚೂರುಗಳನ್ನು ಮುಳುಗಿಸಿ ನಂತರ ಅವನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ವ್ಯತ್ಯಾಸಗಳು ತರುವಾವನ್ನು ಯಾವುದೇ ಹಸಿರು ತರಕಾರಿಯಿಂದ ತಯಾರಿಸಬಹುದು."मिथिला का तरूआ तो तरूआ है, पकौड़ा नहीं है". aajtak.intoday.in (in Hindi). 19 February 2018. Retrieved 2020-05-21. Category:CS1 Hindi-language sources (hi) ತರುವಾದ ಅತ್ಯಂತ ಜನಪ್ರಿಯ ವಿಧಗಳಲ್ಲಿ ತೊಂಡೆ ಎಲೆಯ ತರುವಾ, ಮತ್ತು ಆಲೂಗಡ್ಡೆಯ ತರುವಾ ಸೇರಿವೆ. ತರುವಾದ ಇತರ ವಿಧಗಳಲ್ಲಿ ಬೆಂಡೆಕಾಯಿಯಿಂದ ತಯಾರಿಸಿದ ಭಿಂಡಿ ತರುವಾ, ಹೂಕೋಸಿನಿಂದ ತಯಾರಿಸಿದ ಗೋಬಿ ತರುವಾ, ಬದನೆಕಾಯಿಯಿಂದ ತಯಾರಿಸಿದ ಬೈಂಗನ್ ತರುವಾ, ಕುಂಬಳಕಾಯಿಯಿಂದ ತಯಾರಿಸಿದ ಕದಿಮಾ ತರುವಾ, ಸೋರೆಕಾಯಿಯಿಂದ ತಯಾರಿಸಿದ ಕದ್ದು ತರುವಾ, ಹಾಗಲಕಾಯಿಯಿಂದ ತಯಾರಿಸಿದ ಕರೇಲಾ ತರುವಾ, ಸುವರ್ಣ ಗೆಡ್ಡೆಯಿಂದ ತಯಾರಿಸಿದ ಓಳ್ ತರುವಾ, ಕೆಸುವಿನಿಂದ ತಯಾರಿಸಿದ ಔರಬಿ ತರುವಾ, ಬೂದುಗುಂಬಳದಿಂದ ತಯಾರಿಸಿದ ಕುಮಹರ್ ತರುವಾ, ಖಮ್‍ಹರುವಾ ತರುವಾ, ಮೊನಚಾದ ಸೋರೆಕಾಯಿಯಿಂದ ತಯಾರಿಸಿದ ಪರ್ವಲ್ ತರುವಾ ಸೇರಿವೆ. ಉಲ್ಲೇಖಗಳು ವರ್ಗ:ಖಾದ್ಯ, ತಿನಿಸು
ಸಾಗರ ಭೂವಿಜ್ಞಾನ
https://kn.wikipedia.org/wiki/ಸಾಗರ_ಭೂವಿಜ್ಞಾನ
right|thumb|250x250px|ಶಿಲಾಮಂಡಲವು ಸಾಗರದ ಕಂದಕಗಳ ಅಡಿಯಲ್ಲಿ ಮುಳುಗಿ ಅಸ್ತೆನೋಸ್ಫಿಯರಿನ ಭಾಗವಾಗುವಾಗ ಸಾಗರದ ಪರ್ವತಶ್ರೇಣಿಯಲ್ಲಿ ಸಾಗರದ ಫಲಕಗಳು ರೂಪುಗೊಳ್ಳುತ್ತದೆ. ಸಾಗರ ಭೂವಿಜ್ಞಾನ ಅಥವಾ ಭೂವೈಜ್ಞಾನಿಕ ಸಮುದ್ರಶಾಸ್ತ್ರವು ಸಮುದ್ರ ತಳದ ಇತಿಹಾಸ ಮತ್ತು ರಚನೆಯ ಅಧ್ಯಯನವಾಗಿದೆ. ಇದು ಸಮುದ್ರ ತಳ ಮತ್ತು ಕರಾವಳಿ ವಲಯದ ಭೂಭೌತಶಾಸ್ತ್ರ, ಭೂರಾಸಾಯನಿಕ, ಕೆಸರಿನ ಕಣಗಳ ಮತ್ತು ಪಳೆಯುಳಿಕೆ ವಿಜ್ಞಾನದ ತನಿಖೆಗಳನ್ನು ಒಳಗೊಂಡಿರುತ್ತದೆ. ಸಾಗರ ಭೂವಿಜ್ಞಾನವು ಭೂಭೌತಶಾಸ್ತ್ರ ಮತ್ತು ಭೌತಿಕ ಸಮುದ್ರಶಾಸ್ತ್ರದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ. ಎರಡನೇ ಮಹಾಯುದ್ಧದ ನಂತರದ ವರ್ಷಗಳಲ್ಲಿ ಸಮುದ್ರ ತಳದ ಹರಡುವಿಕೆ ಮತ್ತು ಭೂಫಲಕದ ಚಲನೆಗೆ ಸಂಬಂಧಿಸಿದ ನಿರ್ಣಾಯಕ ಪುರಾವೆಗಳನ್ನು ಒದಗಿಸುವಲ್ಲಿ ಸಾಗರ ಭೂವೈಜ್ಞಾನಿಕ ಅಧ್ಯಯನಗಳು ಅತ್ಯಂತ ಮಹತ್ವದ್ದಾಗಿದ್ದವು. ಆಳವಾದ ಸಾಗರ ತಳದ ಬಹುಪಾಲು ಭಾಗವು ಈ ತನಕ ಅನ್ವೇಷಣೆಯಾಗಿಲ್ಲ. ಪೆಟ್ರೋಲಿಯಂ ಮತ್ತು ಇತರೆ ಖನಿಜಗಳ ಇರುವಿಕೆಯು ಸಾಗರದ ಆರ್ಥಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. .
ಸಿ. ಡಿ. ಸುಬ್ಬಯ್ಯ
https://kn.wikipedia.org/wiki/ಸಿ._ಡಿ._ಸುಬ್ಬಯ್ಯ
ಏರ್ ಮಾರ್ಷಲ್ ಚೆಪ್ಪುದಿರ ದೇವಯ್ಯ ಸುಬ್ಬಯ್ಯ ಅವರು ಭಾರತೀಯ ವಾಯುಪಡೆಯ ಮಾಜಿ ಪೈಲಟ್ ಮತ್ತು ಅಧಿಕಾರಿಯಾಗಿದ್ದರು. ಆರಂಭಿಕ ಜೀವನ ಏರ್ ಮಾರ್ಷಲ್ ಚೆಪ್ಪುದಿರ ದೇವಯ್ಯ ಸುಬ್ಬಯ್ಯ ೧೯೨೪ ರ ಮಾರ್ಚ್ ೬ ರಂದು ಜನಿಸಿದರು. ಅವರನ್ನು ಸಿ. ಡಿ. ಸುಬ್ಬಯ್ಯ ಎಂದೂ ಕರೆಯಲಾಗುತ್ತಿತ್ತು. ಅವರು ಏಪ್ರಿಲ್ ೧೯೪೨ ರಲ್ಲಿ ೧೮ ನೇ ವಯಸ್ಸಿನಲ್ಲಿ ಭಾರತಿಯ ವಾಯು ಸೇನೆಗೆ ನಿಯೋಜಿಸಲ್ಪಟ್ಟರು ಮತ್ತು ಅವರ ಸೇವೆಯ ಸಂಖ್ಯೆ ೧೮೬೬ ಆಗಿತ್ತು. ಎರಡನೇ ಮಹಾಯುದ್ಧದ ಪೈಲಟ್ ಅವರು ಬ್ರಿಟಿಷ್ ಇಂಡಿಯಾ ಎರಡನೇ ಮಹಾಯುದ್ಧದ ಪ್ರಮುಖ ಪೈಲಟ್ ಗಳಲ್ಲಿ ಒಬ್ಬರಾಗಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಐಎಎಫ್ ನ ೮ನೇ ಸ್ಕ್ವಾಡ್ರನ್ ನಲ್ಲಿ ಫ್ಲೈಯಿಂಗ್ ಅಧಿಕಾರಿಯಾಗಿದ್ದರು. ಅದೇ ಯುದ್ಧದಲ್ಲಿ ಅರಾಕನ್ ಕಾರ್ಯಾಚರಣೆಯ ಸಮಯದಲ್ಲಿ, ಅವರು ಸ್ಪಿಟ್ಫೈರ್ ಪೈಲಟ್ ಆಗಿದ್ದರು. ಅವರಿಗೆ ವೀರ ಚಕ್ರ ಮತ್ತು ನಂತರ ಪರಮ ವಿಶಿಷ್ಟ ಸೇವಾ ಪದಕವನ್ನು ನೀಡಲಾಯಿತು. ಅವರು ಜಪಾನ್ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ಸ್ಕ್ವಾಡ್ರನ್ ೪ ರ ಭಾಗವಾಗಿದ್ದರು. ಕಾಶ್ಮೀರ ಯುದ್ಧ ೧೯೪೭ (ವೀರ ಚಕ್ರ ಪ್ರಶಸ್ತಿ) ೧೯೪೭ - ೪೮ ರ ಕಾಶ್ಮೀರ ಕಾರ್ಯಾಚರಣೆಗಳ ಸಮಯದಲ್ಲಿ ಲೆಫ್ಟಿನೆಂಟ್ ಸಿ. ಡಿ. ಸುಬ್ಬಯ್ಯ ಅವರು ಅವರ ಯುದ್ಧದ ಸಮಯದ ಕಾರ್ಯಾಚರಣೆಗೆ ಹೆಸರುವಾಸಿಯಾಗಿದ್ದರು. ಅವರನ್ನು ಸ್ಕ್ವಾಡ್ರನ್ ಲೀಡರ್ ಆಗಿ ನೇಮಿಸಲಾಯಿತು ಮತ್ತು ಅವರ ಸ್ಕ್ವಾಡ್ರನ ಪೈಲಟ್ಗಳಿಗೆ ಸ್ಫೂರ್ತಿ ನೀಡುವಲ್ಲಿ ಹೆಸರುವಾಸಿಯಾಗಿದ್ದರು. ಅವರು ಒಂದೂವರೆ ತಿಂಗಳ ಕಾಲ ೭೦ ವಿಮಾನಗಳನ್ನು ಹಾರಿಸಿದರು. ಗುರಾಯಿಸ್ ನಲ್ಲಿ ಶತ್ರುವಿನ ಪ್ರತಿರೋಧವು ವಿಫಲವಾಯಿತು. ಇದು ಭಾರತೀಯ ಸೇನೆಯು ಗುರಾಯಿಯರನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲು ಕಾರಣವಾಯಿತು. ಇದಕ್ಕಾಗಿ ಅವರಿಗೆ ನಂತರ ೧೯೫೦ ರ ಜನವರಿ ೨೬ ರಂದು, ಅಂದರೆ ಮೊದಲ ಗಣರಾಜ್ಯೋತ್ಸವದಂದು ವೀರ ಚಕ್ರವನ್ನು ನೀಡಲಾಯಿತು. ನಂತರದ ಜೀವನ ೧೯೪೮ ರಲ್ಲಿ, ಮೂರು ಜನ ಆಗಮಿಸಿ, ಸ್ಕ್ವಾಡ್ರನ್ ಲೀಡರ್ ಸುಬ್ಬಯ್ಯ ಅವರ ಅಡಿಯಲ್ಲಿರುವ ಎಟಿಯು ಎಂಬ ಘಟಕಕ್ಕೆ ಸೇರಿದರು. ೧೯೪೯ ರ ಮಧ್ಯಭಾಗದಲ್ಲಿ, ಎಟಿಯು ೭ ನೇ ಸ್ಕ್ವಾಡ್ರನ್ನೊಂದಿಗೆ ವಿಲೀನಗೊಂಡಿತು ಮತ್ತು ಸ್ಕ್ವಾಡ್ರನ್ ನಾಯಕ ಸುಬ್ಬಯ್ಯ ಅಧಿಕಾರ ವಹಿಸಿಕೊಂಡರು. ಗ್ರೂಪ್ ಕ್ಯಾಪ್ಟನ್ ಆಗಿ, ೧೯೬೨ - ೧೯೬೩ ನಲ್ಲಿ, ಅವರು ಎಎಫ್ಎಸ್ ಹೈದರಾಬಾದ್ ನ ಕಮಾಂಡಿಂಗ್ ಅಧಿಕಾರಿಯಾಗಿದ್ದರು ಮತ್ತು ಬೇಗಂಪೇಟ್‌ನಲ್ಲಿ ನೆಲೆಸಿದ್ದರು. ನಂತರ ಅವರನ್ನು ಏರ್ ವೈಸ್ ಮಾರ್ಷಲ್ ಆಗಿ ನೇಮಿಸಲಾಯಿತು ಮತ್ತು ಪಶ್ಚಿಮ ವಾಯು ಕಮಾಂಡ್‍ನ ಅಧಿಕಾರವನ್ನು ವಹಿಸಿಕೊಂಡರು. ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಶ್ಚಿಮ ವಲಯದಲ್ಲಿನ ಕಾರ್ಯಾಚರಣೆಗಳ ವಾಯು ಕಾರ್ಯಾಚರಣೆಗಳ ಯೋಜನೆಯನ್ನು ಅಧ್ಯಯನ ಮಾಡುವಲ್ಲಿ ಅವರು ತೊಡಗಿಸಿಕೊಂಡಿದ್ದರು. ಇದಕ್ಕಾಗಿ ಮತ್ತು ಅವರ ವಿಶಿಷ್ಟ ವೃತ್ತಿಜೀವನಕ್ಕಾಗಿ ಅವರಿಗೆ ೧೯೭೨ ರಲ್ಲಿ ಪರಮ ವಿಶಿಷ್ಟ ಸೇವಾ ಪದಕ ನೀಡಲಾಯಿತು. ೧೯೭೭ - ೧೯೭೮ ರಲ್ಲಿ, ಅವರು ಎಂಸಿಗೆ ಕಮಾಂಡಿಂಗ್ ಅಧಿಕಾರಿಯಾಗಿದ್ದರು ಮತ್ತು ನಾಗ್ಪುರದಲ್ಲಿ ಎಒಸಿ-ಇನ್-ಸಿ ಆಗಿ ನೆಲೆಸಿದ್ದರು. ಮೇ ೧೯೭೮ ರಲ್ಲಿ, AOC-in-C ಆಗಿ, ಅವರು ನಿರ್ವಹಣಾ ಘಟಕಗಳ ಬೇಸ್ ರಿಪೇರಿ ಡಿಪೋಗಾಗಿ ಫೀನಿಕ್ಸ್ ಕ್ರೆಸ್ಟ್ ಅನ್ನು ಸ್ಥಾಪಿಸಿದರು. ಅವರು ಪೂರ್ಣ ಅಧಿಕಾರಾವಧಿಯಲ್ಲಿ ಸೇವೆ ಸಲ್ಲಿಸಿದ ನಂತರ ೧೯೭೮ ರಲ್ಲಿ ಏರ್ ಮಾರ್ಷಲ್ ಆಗಿ ನಿವೃತ್ತರಾದರು.[4] ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಎರಡನೇ ಮಹಾಯುದ್ಧದ ಸಮಯದಲ್ಲಿ ರಾಯಲ್ ಇಂಡಿಯನ್ ಏರ್ ಫೋರ್ಸ್ನ ಚಿತ್ರಗಳ ಗ್ಯಾಲರಿ ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಬಹದ್ದೂರ್ ಸಿಂಗ್ ಬೊಹ್ರಾ
https://kn.wikipedia.org/wiki/ಬಹದ್ದೂರ್_ಸಿಂಗ್_ಬೊಹ್ರಾ
ಹವಾಲ್ದಾರ್ ಬಹದ್ದೂರ್ ಸಿಂಗ್ ಬೋಹ್ರಾ ಅವರು ಭಾರತೀಯ ಸೇನೆಯ ೧೦ ನೇ ಬೆಟಾಲಿಯನ್, ಪ್ಯಾರಾಚೂಟ್ ರೆಜಿಮೆಂಟ್‌ನ ನಾನ್ ಕಮಿಷನ್‌ಡ್ ಆಫೀಸರ್ (ಎನ್.ಸಿ.ಒ) ಆಗಿದ್ದರು. ಇವರು ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ಪಡೆದರು."Profile: Havildar Bahadur Singh Bohra" . ಅಶೋಕ ಚಕ್ರ right|thumb| ಬೋಹ್ರಾ ಅವರ ಪತ್ನಿ, ಶ್ರೀಮತಿ ಶಾಂತಿ ದೇವಿ ಅವರು ೨೬ ಜನವರಿ ೨೦೦೯ ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಅಶೋಕ ಚಕ್ರವನ್ನು ಸ್ವೀಕರಿಸುತ್ತಿರುವ ಚಿತ್ರ. ವಿವರಣೆ ಹವಿಲ್ದಾರ್ ಬಹದ್ದೂರ್ ಸಿಂಗ್ ಬೋಹ್ರಾ (೧೦ ನೇ ಬೆಟಾಲಿಯನ್ ಪ್ಯಾರಾಚೂಟ್ ರೆಜಿಮೆಂಟ್ (ವಿಶೇಷ ಪಡೆ)): ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಪ್ರದೇಶದವಾದ ಲಾವಾಂಜ್‌ನಲ್ಲಿ ಶೋಧ ಕಾರ್ಯಾಚರಣೆಗಾಗಿ ನಿಯೋಜಿಸಲಾದ ಆಕ್ರಮಣ ತಂಡದ ಕಮಾಂಡರ್ ಆಗಿದ್ದರು.೨೫ ಸೆಪ್ಟೆಂಬರ್ ೨೦೦೮ ರಂದು, ಸಂಜೆ ೬.೧೫ ಕ್ಕೆ, ಅವರು ಭಯೋತ್ಪಾದಕರ ಗುಂಪನ್ನು ಗಮನಿಸಿದರು ಮತ್ತು ಅವರನ್ನು ತಡೆಯಲು ಮುನ್ನಡೆದರು. ಈ ಪ್ರಕ್ರಿಯೆಯಲ್ಲಿ, ಅವರು ಭಾರೀ ಪ್ರತಿಕೂಲದ ಬೆಂಕಿಯ ದಾಳಿಗೆ ಒಳಗಾದರು. ಧೈರ್ಯಗೆಡದೆ, ಭಯೋತ್ಪಾದಕರ ಮೇಲೆ ದಾಳಿ ಮಾಡಿ ಅವರಲ್ಲಿ ಒಬ್ಬನನ್ನು ಕೊಂದರು. ಆದಾಗ್ಯೂ, ಅವರು ತೀವ್ರ ಗುಂಡಿನ ಗಾಯಗಳನ್ನು ಅನುಭವಿಸಿದರು. ಅಲ್ಲಿಂದ ಹೊರಡಲು ನಿರಾಕರಿಸಿದ ಅವರು ದಾಳಿಯನ್ನು ಮುಂದುವರೆಸಿದರು ಮತ್ತು ಇಬ್ಬರು ಭಯೋತ್ಪಾದಕರನ್ನು ಅತ್ಯಂತ ಸಮೀಪದಲ್ಲಿ ಕೊಂದರು. ಹವಿಲ್ದಾರ್ ಬಹದ್ದೂರ್ ಸಿಂಗ್ ಬೋಹ್ರಾ ಅವರು ಅತ್ಯಂತ ಚೇತೋಹಾರಿ ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುವಲ್ಲಿ ರಾಷ್ಟ್ರಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದರು.'' "Ashok Chakra 2009 citations" ವೈಯಕ್ತಿಕ ಜೀವನ ಅವರು ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ರಾವಲ್ಖೇಟ್ ಎಂಬ ದೂರದ ಹಳ್ಳಿಯಲ್ಲಿ ಜನಿಸಿದರು. ಇಬ್ಬರು ಹಿರಿಯ ಸಹೋದರಿಯರು ಮತ್ತು ಹಿರಿಯ ಸಹೋದರರೊಂದಿಗೆ ೪ ಮಕ್ಕಳಲ್ಲಿ ಅವರೇ ಕಿರಿಯರಾಗಿದ್ದರು. ಅವರು ಪತ್ನಿ ಶಾಂತಿ ಮತ್ತುಇಬ್ಬರು ಪುತ್ರಿಯರಾದ ಮಾನ್ಸಿ ಮತ್ತು ಸಾಕ್ಷಿ ಅವರನ್ನು ಅಗಲಿದ್ದಾರೆ. "Martyr’s widow turned away from Rashtrapati Bhavan" ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ರೇಣು ಬಾಲಾ ಚಾನು
https://kn.wikipedia.org/wiki/ರೇಣು_ಬಾಲಾ_ಚಾನು
right|thumb|ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 2014 ರ ಅರ್ಜುನ ಪ್ರಶಸ್ತಿಯನ್ನು ಯುಮನಂ ರೇನು ಬಾಲ ಚಾನು ಅವರಿಗೆ ಪ್ರದಾನ ಮಾಡಿದರು. ಈ ಮೈತೇಯಿ ಹೆಸರಿನಲ್ಲಿ, ಕುಟುಂಬದ ಹೆಸರು ಯುಮ್ನಮ್ ಆದರೂ ಇಲ್ಲಿ ಕೊಟ್ಟಿರುವ ಹೆಸರು ರೇಣು ಬಾಲಾ. "ಚಾನು" ಎಂಬುದು ಹೆಸರಿನ ಪ್ರತ್ಯಯವಾಗಿದೆ. ಯುಮ್ನಮ್ ರೇಣು ಬಾಲಾ ಚಾನು (ಜನನ ೨ ಅಕ್ಟೋಬರ್ ೧೯೮೬) ಅವರು ಭಾರತ ಮೂಲದ ತೂಕ ಎತ್ತುವ ವ್ಯಾಯಾಮ ಪಟು (ವೇಟ್‌ಲಿಫ್ಟರ್). ಇವರು ಮಣಿಪುರದ ಇಂಫಾಲ್ ಬಳಿ ಇರುವ ಕ್ಯಾಮ್‌ಗೆಯ್ ಮಾಯಾಯ್ ಲೈಕೈ ಗ್ರಾಮದಿಂದ ಬಂದವರು. ೨೦೦೬ ರಲ್ಲಿ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ೫೮ ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. ವೃತ್ತಿಜೀವನ ೨೦೦೦ ರಲ್ಲಿ ಇಂಫಾಲ್‌ನಲ್ಲಿ ನಡೆದ ಭಾರತೀಯ ಕ್ರೀಡಾ ಪ್ರಾಧಿಕಾರದ 'ಟ್ಯಾಲೆಂಟ್ ಹಂಟ್' ಶಿಬಿರದಲ್ಲಿ ತರಬೇತಿಗೆ ಆಯ್ಕೆಯಾದಾಗ ರೇಣು ಬಾಲಾ ಅವರ ವೃತ್ತಿಜೀವನವು ಪ್ರಾರಂಭವಾಯಿತು. ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಅವರನ್ನು ಎಸ್‌ಎ‌ಐ ಗೆ ಸೇರಲು ಶಿಫಾರಸು ಮಾಡಲಾಯಿತು. ಅವರು ಹಂಸಾ ಶರ್ಮಾ ಮತ್ತು ಜಿಪಿ ಶರ್ಮಾ ಅವರ ಶಿಷ್ಯರಾಗಿ ಲಕ್ನೋದಲ್ಲಿ ತರಬೇತಿ ಪಡೆದರು. ರೇಣುಬಾಲಾ ಅವರು ಮಣಿಪುರದಿಂದ ಬಂದವರಾದರೂ ಅಸ್ಸಾಂ ಅನ್ನು ಪ್ರತಿನಿಧಿಸುತ್ತಾರೆ. ಇವರು ಸೋನಿಯಾ ಚಾನು (ಮಹಿಳೆಯರ ೪೮ ಕೆ.ಜಿ ಯಲ್ಲಿ ಬೆಳ್ಳಿ ಪದಕ) ಮತ್ತು ಸಂಧಯಾ ರಾಣಿ ದೇವಿ (ಮಹಿಳೆಯರ ೪೮ ಕೆ.ಜಿ ಯಲ್ಲಿ ಕಂಚು) ನಂತರ ಪದಕ ಗೆದ್ದ ಮೂರನೆ ಮಹಿಳಾ ಆಟಗಾರ್ತಿಯಾಗಿದ್ದರು. ಅವರು ೨೦೦೭ ರ ಗುವಾಹಟಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಸ್ಸಾಂ ಅನ್ನು ಪ್ರತಿನಿಧಿಸಿದರು ಮತ್ತು ರಾಜ್ಯಕ್ಕೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಕೊಟ್ಟರು. ೨೦೧೦ ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ಸಹ ಯಶಸ್ವಿಯಾದರು. ಈಶಾನ್ಯ ಫ್ರಾಂಟಿಯರ್ ರೈಲ್ವೆ ಈ ಉದ್ಯೋಗಿ ಸ್ನ್ಯಾಚ್ ಶೈಲಿಯ ವೇಟ್ ಲಿಫ್ಟಿಂಗ್ ನಲ್ಲಿ ೯೦ ಕೆಜಿ ಭಾರ ಎತ್ತುವ ಮೂಲಕ ಹೊಸ ದಾಖಲೆ ನಿರ್ಮಿಸಿ, ತಮ್ಮ ಅಂತಿಮ ಪ್ರಯತ್ನದಲ್ಲಿ ೧೦೭ ಕೆ.ಜಿ ಯನ್ನು ಎತ್ತಿ ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ಗೆದ್ದರು. ಅವರ ಒಟ್ಟಾರೆ ದಾಖಲೆಯು ೧೯೭ ಕೆ.ಜಿ (ಎರಡು ವಿಭಿನ್ನ ಶೈಲಿಗಳನ್ನು ಒಳಗೊಂಡಂತೆ) ಆಗಿತ್ತು. ೨೦೦೨ ರ ಕ್ರೀಡಾಕೂಟದಲ್ಲಿ ಕೆನಡಾದ ಮೇರಿಸ್ ಟರ್ಕೋಟ್ ಅವರ ಹಿಂದಿನ ದಾಖಲೆಯನ್ನು ಮುರಿದು ೮೮ ಕೆಜಿ ಎತ್ತಿದರು. ಮುಂದೆ ಅದನ್ನು ೯೦ ಕೆಜಿಗೆ ಎತ್ತಿ ತಮ್ಮ ದಾಖಲೆಯನ್ನು ಸುಧಾರಿಸಿಕೊಂಡರು. ಇವರ ರಾಷ್ಟ್ರೀಯ ಸ್ನ್ಯಾಚ್‌ ಶೈಲಿಯ ದಾಖಲೆಯು ೯೩ ಮತ್ತು ಕ್ಲೀನ್ ಜರ್ಕ್‌ ಶೈಲಿಯ ೧೧೯. ಒಟ್ಟು ೨೦೯ ಆಗಿದೆ. ಅವರು ತಮ್ಮ ಚಿನ್ನದ ಪದಕವನ್ನು ಭಾರತದ ಜನರಿಗೆ ಮತ್ತು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ಗೆ ಅರ್ಪಿಸಿದರು. "ನನ್ನ ಗೆಲುವು ಫೆಡರೇಶನ್ ಅವರ ಇದುವರೆಗೆ ಅನುಭವಿಸಿದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ಹೇಳಿದರು ೨೦೧೪ ರಲ್ಲಿ, ಅಸ್ಸಾಂ ವೇಟ್‌ಲಿಫ್ಟಿಂಗ್ ಅಸೋಸಿಯೇಷನ್ (AWA) ಮತ್ತು ಅಸ್ಸಾಂ ಒಲಿಂಪಿಕ್ ಅಸೋಸಿಯೇಷನ್ (AOA) ಜಂಟಿಯಾಗಿ ಅವರನ್ನು ಸನ್ಮಾನಿಸಿತು. ಅವರು ೨೦೧೪ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದರು. ೨೦೧೦ ರಲ್ಲಿ ಗುವಾಂಗ್‌ ಝೌ ಏಷ್ಯನ್ ಗೇಮ್ಸ್ ಮತ್ತು ೨೦೧೪ ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅನಾರೋಗ್ಯದಿಂದಾಗಿ ಅವರಿಗೆ ಭಾಗವಹಿಸಲು ಸಾಧ್ಯವಾಗಲಿಲ್ಲ. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಕೆ. ಎಂ. ಬಿನು
https://kn.wikipedia.org/wiki/ಕೆ._ಎಂ._ಬಿನು
ಕಲಾಯತುಮ್ಕುಳಿ ಮ್ಯಾಥ್ಯೂಸ್ ಬಿನು (ಜನನ ೨೦ ಡಿಸೆಂಬರ್ ೧೯೮೦) ಇವರು ಕೇರಳದ ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ಇವರು ೪೦೦ ಮೀಟರ್ ಮತ್ತು ೮೦೦ ಮೀಟರ್‌ ಓಟದಲ್ಲಿ ವಿಶೇಷ ಪರಿಣತರು. ೨೦ ಆಗಸ್ಟ್ ೨೦೦೪ ರಂದು ೨೦೦೪ ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿರಲ್ಲಿ ನಡೆದ 400 ಮೀಟರ್‌ಗಳ ಓಟವನ್ನು ೪೫.೪೮ ಸೆಕೆಂಡುಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದರು. ಇದನ್ನು ಮೊಹಮ್ಮದ್ ಅನಾಸ್ ೧೫.೩೨ ಸೆಕೆಂಡ್‌ಗಳು ಕಾಮನ್‌ವೆಲ್ತ್ ಆಟದಲ್ಲಿ, ಗೋಲ್ಡ್ ಕೋಸ್ಟ್ ೨೦೧೮ ಸೆಕೆಂಡ್‌ನಲ್ಲಿ ಮುರಿದರು.. ಬಿನು, ೧೯೬೦ ರ ರೋಮ್ ಒಲಿಂಪಿಕ್ಸ್‌ನಲ್ಲಿ ೪೫.೭೩ ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ದಾಖಲೆ ಸ್ಥಾಪಿಸಿದ್ದ ಭಾರತದ ಮಿಲ್ಕಾ ಸಿಂಗ್ ದಾಖಲೆ ಯನ್ನು ಮುರಿದರು. ಸತತ ೪೪ ವರ್ಷದ ವರಗೆ ಮಿಲ್ಕಾ ಸಿಂಗ್ ಅವರ ದಾಖಲೆ ಅವಿಚ್ಛಿನ್ನವಾಗಿತ್ತು. ಇವರು ಮತ್ತು ಇವರ ಅಕ್ಕ ಕೆ.ಎಂ.ಬೀನಮೋಳ್ ಅವರು ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಒಡಹುಟ್ಟಿದವರು ಎಂಬ ಇತಿಹಾಸ ನಿರ್ಮಿಸಿದರು. ಇವರಿಬ್ಬರು ಬುಸಾನ್ ಏಷ್ಯನ್ ಕ್ರೀಡಾಕೂಟದಲ್ಲಿ (೨೦೦೨) ಪದಕಗಳನ್ನು ಗೆದ್ದರು. ಪುರುಷರ ೮೦೦ ಮೀಟರ್ಸ್ ಓಟದಲ್ಲಿ ಬಿನು ಬೆಳ್ಳಿ ಗೆದ್ದರೆ, ಮಹಿಳೆಯರ ವಿಭಾಗದಲ್ಲಿ ಅವರ ಸಹೋದರಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತೀಯ ಅಥ್ಲೆಟಿಕ್ಸ್‌ನಲ್ಲಿನ ಈ ಸಾಧನೆಗಾಗಿ ಬಿನು ೨೦೦೬ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. ಜೀವನಚರಿತ್ರೆ ಕೇರಳದ ಇಡುಕ್ಕಿ ಜಿಲ್ಲೆಯವರಾದ ಬಿನು ಅವರು ೨೦ ಡಿಸೆಂಬರ್ ೧೯೮೦ ರಂದು ಜನಿಸಿದರು. ಅವರ ಸಹೋದರಿ ಬೀನಾಮೋಲ್ ಅವರ ಮಾರ್ಗದರ್ಶನದಲ್ಲಿಅವರು ಅಥ್ಲೆಟಿಕ್ಸ್ ಅನ್ನು ತಮ್ಮ ವೃತ್ತಿಯಾಗಿ ಮಾಡಿಕೊಂಡರು. ಸಹೋದರಿ ಬೀನಾಮೋಲ್‌ಗೆ ತರಬೇತಿ ನೀಡಿದ್ದ ಉಕ್ರೇನ್‌‌ನಿನ ಯೂರಿ ಅವರು ಬಿನು ಅವರಿಗೂ ಸಹ ತರಬೇತಿ ನೀಡಿದರು. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ದುವ ಲಿಪಾ
https://kn.wikipedia.org/wiki/ದುವ_ಲಿಪಾ
REDIRECT ದುವಾ ಲಿಪಾ
ಯುಐ (ಚಲನಚಿತ್ರ)
https://kn.wikipedia.org/wiki/ಯುಐ_(ಚಲನಚಿತ್ರ)
ಯುಐ ಮುಂಬರುವ ಭಾರತೀಯ ಕನ್ನಡ ಭಾಷೆಯ ಅತಿವಾಸ್ತವಿಕವಾದ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಉಪೇಂದ್ರ ಅವರು ಬರೆದು ನಿರ್ದೇಶಿಸಿದ್ದಾರೆ, ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ರೀಷ್ಮಾ ನಾನಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ಹುಚ್ಚಿ ಅಶ್ರಫ್ , ನಿಧಿ ಸುಬ್ಬಯ್ಯ, ಸಾಧು ಕೋಕಿಲ, ಮುರಳಿ ಕೃಷ್ಣ ಮತ್ತು ಇಂದ್ರಜಿತ್ ಲಂಕೇಶ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್ಟೈನರ್ಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ . ಯುಐಅನ್ನು ಜೂನ್ 2022 ರಲ್ಲಿ ಘೋಷಿಸಲಾಯಿತು. ತಾರಾಗಣ ಉಪೇಂದ್ರ ರೀಷ್ಮಾ ನಾಣಯ್ಯ ಸನ್ನಿ ಲಿಯೋನ್ ಜಿಶ್ಶು ಸೇನ್ ಗುಪ್ತಾ ಮುರಳಿ ಶರ್ಮಾ ನೀತು ವನಜಾಕ್ಷಿ ಇಂದ್ರಜಿತ್ ಲಂಕೇಶ್ ನಿಧಿ ಸುಬ್ಬಯ್ಯ ಓಂ ಸಾಯಿ ಪ್ರಕಾಶ್ ಪ್ರಶಾಂತ್ ಸಂಬರಗಿ ಭೀಮ ಕಾಕ್ರೋಜ್ ಸುಧಿ ಗುರುಪ್ರಸಾದ್ ಪವನ್ ಆಚಾರ್ಯ
ಸನ್ನಿ ಲಿಯೋನ್
https://kn.wikipedia.org/wiki/ಸನ್ನಿ_ಲಿಯೋನ್
ಕರೆಂಜಿತ್ " ಕರೆನ್ " ಕೌರ್ ವೋಹ್ರಾ (ಜನನ ಮೇ 13, 1981), ಸನ್ನಿ ಲಿಯೋನ್ ಎಂಬ ತನ್ನ ರಂಗನಾಮದಿಂದ ಪರಿಚಿತಳಾಗಿದ್ದಾಳೆ, ನಟಿ, ರೂಪದರ್ಶಿ ಮತ್ತು ಮಾಜಿ ಅಶ್ಲೀಲ ನಟಿ. ಅವರು ಕೆನಡಾದಲ್ಲಿ ಭಾರತೀಯ ಸಿಖ್ ಕುಟುಂಬದಲ್ಲಿ ಜನಿಸಿದರು ಮತ್ತು ಕೆನಡಿಯನ್ ಮತ್ತು ಅಮೆರಿಕನ್ ಪೌರತ್ವವನ್ನು ಹೊಂದಿದ್ದಾರೆ . ಅವರು 2003 ರಲ್ಲಿ ವರ್ಷದ ಪೆಂಟ್‌ಹೌಸ್ ಪೆಟ್ ಎಂದು ಹೆಸರಿಸಲ್ಪಟ್ಟರು, ವಿವಿಡ್ ಎಂಟರ್‌ಟೈನ್‌ಮೆಂಟ್‌ಗಾಗಿ ಒಪ್ಪಂದದ ಪ್ರದರ್ಶಕರಾಗಿದ್ದರು ಮತ್ತು 2010 ರಲ್ಲಿ ಮ್ಯಾಕ್ಸಿಮ್ ಅವರು 12 ಟಾಪ್ ಪೋರ್ನ್ ಸ್ಟಾರ್‌ಗಳಲ್ಲಿ ಒಬ್ಬರು ಎಂದು ಹೆಸರಿಸಿದರು. ಅವರು 2018 ರಲ್ಲಿ AVN ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು. ಅವರು ಸ್ವತಂತ್ರ ಮುಖ್ಯವಾಹಿನಿಯ ಘಟನೆಗಳು, ಚಲನಚಿತ್ರಗಳು ಮತ್ತು ದೂರದರ್ಶನ ಸರಣಿಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2005 ರಲ್ಲಿ MTV ಇಂಡಿಯಾದಲ್ಲಿ MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ಗಾಗಿ ರೆಡ್ ಕಾರ್ಪೆಟ್ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದಾಗ ಆಕೆಯ ಮೊದಲ ಮುಖ್ಯವಾಹಿನಿಯ ಪ್ರದರ್ಶನವಾಗಿತ್ತು. 2011 ರಲ್ಲಿ, ಅವರು ಭಾರತೀಯ ರಿಯಾಲಿಟಿ ದೂರದರ್ಶನ ಸರಣಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದರು. ಅವರು ಭಾರತೀಯ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾವನ್ನು ಸಹ ಆಯೋಜಿಸಿದ್ದಾರೆ. 2012 ರಲ್ಲಿ, ಅವರು ಪೂಜಾ ಭಟ್ ಅವರ ಕಾಮಪ್ರಚೋದಕ ಥ್ರಿಲ್ಲರ್ ಜಿಸ್ಮ್ 2 (2012) ನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಜಾಕ್‌ಪಾಟ್ (2013), ರಾಗಿಣಿ ಎಂಎಂಎಸ್ 2 (2014), ಏಕ್ ಪಹೇಲಿ ಲೀಲಾ (2015) ಮೂಲಕ ಮುಖ್ಯವಾಹಿನಿಯ ನಟನೆಯತ್ತ ಗಮನ ಹರಿಸಿದರು., ತೇರಾ ಇಂತೇಜಾರ್ (2017), ಮತ್ತು 2019 ರಲ್ಲಿ ಮಲಯಾಳಂ ಚಲನಚಿತ್ರ ಮಧುರಾ ರಾಜ . ಅವರ ನಟನಾ ವೃತ್ತಿಜೀವನದ ಹೊರತಾಗಿ, ಅವರು ಅಮೇರಿಕನ್ ಕ್ಯಾನ್ಸರ್ ಸೊಸೈಟಿಗಾಗಿ ಹಣವನ್ನು ಸಂಗ್ರಹಿಸಲು ರಾಕ್ 'ಎನ್' ರೋಲ್ ಲಾಸ್ ಏಂಜಲೀಸ್ ಹಾಫ್-ಮ್ಯಾರಥಾನ್ ಸೇರಿದಂತೆ ಕ್ರಿಯಾಶೀಲತೆಯ ಅಭಿಯಾನದ ಭಾಗವಾಗಿದ್ದಾರೆ ಮತ್ತು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಜಾಹೀರಾತಿಗೆ ಸಹ ಪೋಸ್ ನೀಡಿದ್ದಾರೆ. ರಕ್ಷಿಸಿದ ನಾಯಿಯೊಂದಿಗೆ ಪ್ರಚಾರ ಮಾಡಿ, ಸಾಕುಪ್ರಾಣಿಗಳ ಮಾಲೀಕರು ತಮ್ಮ ಬೆಕ್ಕುಗಳು ಮತ್ತು ನಾಯಿಗಳನ್ನು ಸಂತಾನಹರಣ ಮತ್ತು ಸಂತಾನಹರಣ ಮಾಡುವಂತೆ ಪ್ರೋತ್ಸಾಹಿಸುತ್ತಾರೆ.
ವಿಜಯಕುಮಾರ್ ವೈಶಾಕ್
https://kn.wikipedia.org/wiki/ವಿಜಯಕುಮಾರ್_ವೈಶಾಕ್
ವಿಜಯ್‌ಕುಮಾರ್ ವೈಶಾಕ್ (ಜನನ 31 ಜನವರಿ 1997) ಒಬ್ಬ ಭಾರತೀಯ ಕ್ರಿಕೆಟಿಗ, ಇವರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕಕ್ಕಾಗಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ . ಅವರು 24 ಫೆಬ್ರವರಿ 2021 ರಂದು ಕರ್ನಾಟಕಕ್ಕಾಗಿ 2020-21 ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಲಿಸ್ಟ್ A ಗೆ ಪಾದಾರ್ಪಣೆ ಮಾಡಿದರು . ಅವರು 2021-22 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕಕ್ಕಾಗಿ 5 ನವೆಂಬರ್ 2021 ರಂದು ತಮ್ಮ ಟ್ವೆಂಟಿ 20 ಚೊಚ್ಚಲ ಪಂದ್ಯವನ್ನು ಮಾಡಿದರು . ಅವರು 2021-22 ರ ರಣಜಿ ಟ್ರೋಫಿಯಲ್ಲಿ ಕರ್ನಾಟಕಕ್ಕಾಗಿ 17 ಫೆಬ್ರವರಿ 2022 ರಂದು ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು . ಏಪ್ರಿಲ್ 7, 2023 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು 2023 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಜತ್ ಪಾಟಿದಾರ್ ಬದಲಿಗೆ ವೈಶಾಕ್ ವಿಜಯ್ ಕುಮಾರ್ ಅವರನ್ನು ಸಹಿ ಹಾಕಿತು. 15 ಏಪ್ರಿಲ್ 2023 ರಂದು, ಅವರು 2023 ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ IPL ಚೊಚ್ಚಲ ಪಂದ್ಯವನ್ನು ಮಾಡಿದರು.
ರಜತ್ ಚೌಹಾಣ್
https://kn.wikipedia.org/wiki/ರಜತ್_ಚೌಹಾಣ್
ರಜತ್ ಚೌಹಾಣ್ (ಜನನ ೩೦ ಡಿಸೆಂಬರ್ ೧೯೯೪) ಇವರು ಭಾರತೀಯ ಬಿಲ್ಲುಗಾರರು. ಕೋಪನ್ ಹ್ಯಾಗನ್ ನಲ್ಲಿ ನಡೆದ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ನಲ್ಲಿ ಚೌಹಾಣ್ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ೨೦೧೪ ರಲ್ಲಿ ಪುರುಷರ  ಸಂಯುಕ್ತ ಬಿಲ್ಲುಗಾರಿಕೆಯ ಗುಂಪು ಪಂದ್ಯಾವಳಿಯಲ್ಲಿ ಅಭಿಷೇಕ್ ವರ್ಮಾ ಮತ್ತು ಸಂದೀಪ್ ಕುಮಾರ್ ಅವರೊಂದಿಗೆ ಚಿನ್ನದ ಪದಕವನ್ನು ಗೆದ್ದರು. ೨೦೧೪ ರಲ್ಲಿ ಅವರು ಬಿಲ್ಲುಗಾರಿಕೆಯಲ್ಲಿ ವಿಶ್ವಕಪ್‌ನ ಅಂತಿಮ ಹಂತಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಸಂಯುಕ್ತ ಬಿಲ್ಲುಗಾರರಾದರು ಮತ್ತು ೨೦೧೫ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನ ಅಂತಿಮ ಘಟ್ಟಕ್ಕೆ ತಲುಪಿದರು. ಇತರ ಸಾಧನೆಗಳು ೨೦೧೫ ರ ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ಪುರುಷರ ವಿಭಾಗದಲ್ಲಿ - ಪುರುಷರ ವಿಭಾಗದಲ್ಲಿ ಪ್ರಶಸ್ತಿಗಳು thumb|೨೯ ಆಗಸ್ಟ್ ೨೦೧೬ ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಬಿಲ್ಲುಗಾರಿಕೆಗಾಗಿ ರಜತ್ ಚೌಹಾಣ್ ಅವರಿಗೆ ೨೦೧೬ ರ ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅರ್ಜುನ ಪ್ರಶಸ್ತಿ (೨೦೧೬) ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ರೋಹಿತ್ ಭಾಕರ್
https://kn.wikipedia.org/wiki/ರೋಹಿತ್_ಭಾಕರ್
ರೋಹಿತ್ ಭಾಕರ್ (ಜನನ ೨೬ ಅಕ್ಟೋಬರ್ ೧೯೮೪) ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು. ಇವರು ಶ್ರವಣ ದೋಷ ಹೊಂದಿದ್ದರು. ಹಿನ್ನೆಲೆ ರೋಹಿತ್ ಭಾಕರ್ ಹುಟ್ಟಿನಿಂದಲೇ ಕಿವುಡ ಮತ್ತು ಮಾತನಾಡಲು ಅಸಮರ್ಥರಾಗಿದ್ದರು. ಇವರು ಭಿವಾನಿ ನಗರದವರು. ಪ್ರಸ್ತುತ ಭಿವಾನಿ ನಗರದಲ್ಲಿ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದಾರೆ. ಇವರು HVPNL ನ ಉದ್ಯೋಗಿ. ೧೯೯೭ ರಲ್ಲಿ ತಮ್ಮ ಪ್ರಥಮ ಡೆಫ್ಲಿಂಪಿಕ್ ಈವೆಂಟ್‌ನಲ್ಲಿನ ಮಾಡಿದ ಸಾಧನೆಗೆ ಇವರು ''ಅಸಾಧಾರಣ ಸಾಧನೆಗಳನ್ನು ಮಾಡುವ ಬಾಲ ಕಲಾವಿದ''ರಿಗೆ ದೊರೆಯುವ ಭಾರತ ರಾಷ್ಟ್ರೀಯ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಪಡೆದರು. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿನ ಅವರ ಪ್ರಯತ್ನಗಳಿಗಾಗಿ ಅವರು ಅರ್ಜುನ ಪ್ರಶಸ್ತಿಯನ್ನು ಸಹ ಪಡೆದರು. ವೃತ್ತಿ ರೋಹಿತ್ ಕೇವಲ ಹನ್ನೆರಡನೆಯ ವಯಸ್ಸಿನಲ್ಲಿ ೧೯೯೭ ರ ಬೇಸಿಗೆ ಡೆಫ್ಲಿಂಪಿಕ್‌ಗೆ ಪಾದಾರ್ಪಣೆ ಮಾಡಿದರು. ರಾಜೀವ್ ಬಗ್ಗಾ ಜೊತೆ ಆಡಿದ ಮಿಕ್ಸೆಡ್ ಡಬಲ್ ನಲ್ಲಿ ಚಿನ್ನದ ಪದಕವನ್ನು ಗೆದ್ದರು . ಈ ಸಾಧನೆಯು ಅವರನ್ನು ಡೆಫ್ಲಿಂಪಿಕ್ ಇತಿಹಾಸದಲ್ಲಿ (೧೨ ವರ್ಷ, ೮ ತಿಂಗಳು ಮತ್ತು ೧೨ ದಿನಗಳ) ಅತ್ಯಂತ ಕಿರಿಯ ಪುರುಷ ಪದಕ ವಿಜೇತರನ್ನಾಗಿ ಮಾಡಿತು. ಡೆಫ್ಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಚಿನ್ನದ ಪದಕ ವಿಜೇತರಾದರು. ಇದಲ್ಲದೆ ರೋಹಿತ್ ಭಾಕರ್ 2005 ರ ಬೇಸಿಗೆ ಡೆಫ್ಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಮತ್ತು ಮಿಕ್ಸೆಡ್ ಡಬಲ್ ನಲ್ಲಿ ಕಂಚಿನ ಪದಕಗಳನ್ನು ಪಡೆದರು. ಇವರನ್ನು ಡೆಫ್ಲಿಂಪಿಕ್ಸ್‌ನಲ್ಲಿ ೧೨ ಚಿನ್ನದ ಪದಕಗಳನ್ನು ಗೆದ್ದ ಭಾರತದ ಮತ್ತೊಬ್ಬ ಕಿವುಡ ಬ್ಯಾಡ್ಮಿಂಟನ್ ಆಟಗಾರ ರಾಜೀವ್ ಬಗ್ಗಾ ಅವರೊಂದಿಗೆ ಹೋಲಿಸುತ್ತಾರೆ. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:೧೯೮೪ ಜನನ ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ರಮೇಶ್ ಹಲಗಲಿ
https://kn.wikipedia.org/wiki/ರಮೇಶ್_ಹಲಗಲಿ
ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ಅವರು ಭಾರತೀಯ ಸೇನೆಯ Halgali was former deputy chief of Indian Army ಮಾಜಿ ಪ್ರಧಾನ ಅಧಿಕಾರಿ ಮತ್ತು ಆರ್ಮಿ ಸ್ಟಾಫ್‌ನ ಮಾಜಿ ಉಪ ಮುಖ್ಯಸ್ಥರಾಗಿದ್ದರು. ಇವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ಸೇವಾ ಪದಕವನ್ನು ಪಡೆದಿದ್ದಾರೆ. ಹಲಗಲಿಯವರು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದವರು. ಅವರು ಕರ್ನಾಟಕದ ಬಿಜಾಪುರ ಜಿಲ್ಲೆಯ ಬಿಜಾಪುರದ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ಹಲಗಲಿ ಅವರನ್ನು ಡಿಸೆಂಬರ್, ೧೯೭೨ ರಲ್ಲಿ ಸಿಖ್ ಲೈಟ್ ಪದಾತಿದಳಕ್ಕೆ ನಿಯೋಜಿಸಲಾಯಿತು. ಅವರು ೧೧ ಫೆಬ್ರವರಿ ೨೦೧೨ ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವವರೆಗೂ ಮಿಲಿಟರಿ ತರಬೇತಿ ವಿಭಾಗದ ಮಹಾನಿರ್ದೇಶಕರಾಗಿದ್ದರು. Ramesh Halagali takes over as the deputy chief ಲೆಫ್ಟಿನೆಂಟ್ ಜನರಲ್ ಹಲಗಲಿಯವರು, ೨೦೦೯ರಲ್ಲಿ ಪಶ್ಚಿಮ ಬಂಗಾಳದ ೭೦ ಎಕರೆ ಸುಕ್ನಾ ಮಿಲಿಟರಿ ಸ್ಟೇಷನ್ ಭೂ ಹಗರಣದಲ್ಲಿ ವಿಸಿಲ್ ಬ್ಲೋವರ್ ಆಗಿದ್ದರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
೨೦೨೪ ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಲೆಂಜ್ ಲೀಗ್ ಪ್ಲೇ-ಆಫ್
https://kn.wikipedia.org/wiki/೨೦೨೪_ಐಸಿಸಿ_ಕ್ರಿಕೆಟ್_ವಿಶ್ವಕಪ್_ಚಾಲೆಂಜ್_ಲೀಗ್_ಪ್ಲೇ-ಆಫ್
ಕಾಸರಗೋಡು ಪಟ್ನಾಶೆಟ್ಟಿ ಗೋಪಾಲ್ ರಾವ್
https://kn.wikipedia.org/wiki/ಕಾಸರಗೋಡು_ಪಟ್ನಾಶೆಟ್ಟಿ_ಗೋಪಾಲ್_ರಾವ್
ಕಮೋಡೋರ್ ಕಾಸರಗೋಡು ಪಟ್ನಶೆಟ್ಟಿ ಗೋಪಾಲ್ ರಾವ್ (೧೨ ನವೆಂಬರ್ ೧೯೨೬ - ೯ ಆಗಸ್ಟ್ ೨೦೨೧) ಇವರು ಮಹಾ ವೀರ ಚಕ್ರ ಹಾಗೂ ವಿಶಿಷ್ಟ ಸೇವಾ ಪದಕ ಪುರಸ್ಕೃತರು. ಇವರು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದರು. ಈ ಯುದ್ದದ ಆಪರೇಷನ್ ಟ್ರೈಡೆಂಟ್ (೧೯೭೧) ಕಾರ್ಯಾಚರಣೆಯಲ್ಲಿ ಅವರು ಸಲ್ಲಿಸಿದ ಕೊಡುಗೆಗಳಿಗಾಗಿ ಅವರಿಗೆ ಮಹಾವೀರ ಚಕ್ರವನ್ನು ನೀಡಲಾಯಿತು. . ಹಿನ್ನೆಲೆ ಕಮೋಡೋರ್ ಕೆಪಿ ಗೋಪಾಲ್ ರಾವ್ ರವರು ಮಂಗಳೂರಿನಲ್ಲಿ ೧೩ ನವೆಂಬರ್ ೧೯೨೬ ರಂದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ರಾಯ್ ಬಹದ್ದೂರ್ ಕೆ.ಪಿ.ಜನಾರ್ದನ್ ರಾವ್. ಅವರ ಹಿರಿಯ ಸಹೋದರ ಮೇಜರ್ ಕೆಪಿಎಸ್ ರಾವ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮಿಲಿಟರಿ ವೃತ್ತಿ ಕಮೋಡೋರ್ ಕೆಪಿ ಗೋಪಾಲ್ ರಾವ್ ಅವರನ್ನು ೨೧ ಏಪ್ರಿಲ್ ೧೯೫೦ ರಂದು ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. ಜನವರಿ ೧೯೭೧ ರಲ್ಲಿ, ಸಲ್ಲಿಸಿದ ಉನ್ನತ ಶ್ರೇಣಿಯ ಸೇವೆಗಾಗಿ ಅವರಿಗೆ ವಿಶಿಷ್ಟ ಸೇವಾ ಪದಕವನ್ನು ನೀಡಲಾಯಿತು. ೧೯೭೧ ರ ಭಾರತ ಪಾಕಿಸ್ತಾನ ಯುದ್ದದಲ್ಲಿ ಆಪರೇಷನ್ ಟ್ರೈಡೆಂಟ್ ಕಾರ್ಯಚರಣೆಯಲ್ಲಿ ಇವರು ಜಲಾಂತರ್ಗಾಮಿ ಗಳನ್ನು ತಡೆಯುವ ಅರ್ನಲ-ಕಾರ್ವೆಟ್‌‌ಗಳಾದ (ಸುಸಜ್ಜಿತ ಸಣ್ಣ ಯುದ್ದ ನೌಕೆ) ಐ‌ಎನ್‌ಎಸ್ ಕಿಲ್ತಾನ್ ಮತ್ತು ಐ‌ಎನ್‌ಎಸ್ ಕಚ್ಚಲ್‌ಗಳ ಕಮಾಂಡರ್ ಆಗಿದ್ದರು. ಇವರ ಪಡೆ ೪ನೇ ಡಿಸೆಂಬರ್ ೧೯೭೧ ರಂದು ಕರಾಚಿಯ ಬಂದರಿನ ಮೇಲೆ ದಾಳಿ ಮಾಡಿದ ಕಾರ್ಯಾಚರಣೆಯ ಭಾಗವಾಗಿತ್ತು. ಇವರ ಎರಡು ಕಾರ್ವೆಟ್‌ಗಳು ತಮ್ಮ ಅತ್ಯುತ್ತಮ ರೇಡಾರ್‌ ಮತ್ತು ಸ೦ಪರ್ಕ ಸಾಧನಗಳಿಂದ ಶತ್ರು ಜಲಾಂತರ್ಗಾಮಿಗಳನ್ನು ಗುರುತಿಸಿದ್ದಲ್ಲದೆ ಭಾರತದ ಜಲಾಂತರ್ಗಾಮಿಗಳಿಗೆ ರಕ್ಷಣೆ ಕೊಡುವ ಮಹತ್ತರ ಜವಾಬ್ದಾರಿ ಇವರದ್ದಾಗಿತ್ತು. ಆಪರೇಷನ್ ಟ್ರೈಡೆಂಟ್ ಕಾರ್ಯಾಚರಣೆ ಬಹುದೊಡ್ಡ ಯಶಸ್ಸನ್ನು ಗಳಿಸಿತು. ಈ ಕಾರ್ಯಚರಣೆಯಲ್ಲಿ ಎರಡು ಪಾಕಿಸ್ತಾನಿ ವಿಧ್ವಂಸಕಗಳಾದ (ಪಿಎನ್‌ಎಸ್ ಖೈಬರ್ ಮತ್ತು ಪಿಎನ್‌ಎಸ್ ಷಾ ಜೆಹಾನ್) ಗಳನ್ನು ಮುಳುಗಿಸಿದ್ದಲ್ಲದೆ ಒಂದು ಮೈನ್‌ಸ್ವೀಪರ್ ( ಪಿಎನ್‌ಎಸ್ ಮುಹಾಫಿಜ್ ), ಒಂದು ಸರಕು ಹಡಗಿನ(ಎಂವಿ ವೀನಸ್ ಚಾಲೆಂಜರ್) ತೈಲ ಶೇಖರಣೆಯನ್ನು ಬೆಂಕಿಗೆ ಆಹುತಿ ಮಾಡಿತು. ಅವರ ಅತ್ಯುತ್ತಮ ಸಾಧನೆಗೆ, ಅವರಿಗೆ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು. ವೈಯಕ್ತಿಕ ಜೀವನ ರಾವ್ ಅವರಿಗೆ ವಿವಾಹವಾಗಿದ್ದು, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಅವರು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದಿಂದ ಬಂದವರು. ಅವರು ಆಗಸ್ಟ್ ೯, ೨೦೨೧ ರಂದು ದಕ್ಷಿಣ ಭಾರತದ ನಗರವಾದ ಚೆನ್ನೈನಲ್ಲಿ ನಿಧನರಾದರು. ಆಗ ಅವರ ವಯಸ್ಸು ೯೪. ಸಹ ನೋಡಿ ೧೯೭೧ ರ ಭಾರತ-ಪಾಕಿಸ್ತಾನ ಯುದ್ಧ ಆಪರೇಷನ್ ಟ್ರೈಡೆಂಟ್ (1971) ಆಪರೇಷನ್ ಪೈಥಾನ್ ಉಲ್ಲೇಖಗಳು
ದಕ್ಷಿಣ ಏಷ್ಯಾದ ಭಾಷೆಗಳು
https://kn.wikipedia.org/wiki/ದಕ್ಷಿಣ_ಏಷ್ಯಾದ_ಭಾಷೆಗಳು
thumb|ದಕ್ಷಿಣ ಏಷ್ಯಾ ಭಾಷಾ ಕುಟುಂಬಗಳ ನಕ್ಷೆ. ದಕ್ಷಿಣ ಏಷ್ಯಾ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಲ್ಲಿ ಹರಡಿರುವ ನೂರಾರು ಭಾಷೆಗಳಿಗೆ ನೆಲೆಯಾಗಿದೆ. ಇದು ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಹಿಂದಿ-ಉರ್ದು ಮತ್ತು ಆರನೇ ಅತಿ ಹೆಚ್ಚು ಮಾತನಾಡಲ್ಪಡುವ ಭಾಷೆಯಾದ ಬಂಗಾಳಿ. ಈ ಪ್ರದೇಶದ ಭಾಷೆಗಳು ಹೆಚ್ಚಾಗಿ ಇಂಡೋ-ಇರಾನಿಕ್ ಮತ್ತು ದ್ರಾವಿಡ ಭಾಷೆಗಳನ್ನು ಒಳಗೊಂಡಿವೆ. ಆಸ್ಟ್ರೊ-ಏಷ್ಯಾಟಿಕ್ ಮತ್ತು ಟಿಬೆಟೊ-ಬರ್ಮನ್ ಭಾಷೆಗಳಂತಹ ಇತರ ಭಾಷಾ ಕುಟುಂಬಗಳ ಸದಸ್ಯರನ್ನು ಒಳಗೊಂಡಿವೆ. ಇಂಗ್ಲಿಷನ್ನು ದಕ್ಷಿಣ ಏಷ್ಯಾದ ದೇಶಗಳ ಅಂತರರಾಷ್ಟ್ರೀಯ ಸಂಪರ್ಕ ಭಾಷೆ ಎಂದು ಪರಿಗಣಿಸಲಾಗಿದೆ. ವಸಾಹತುಶಾಹಿ ಕಾಲದಿಂದ, ದಕ್ಷಿಣ ಏಷ್ಯಾದ ಭಾಷೆಗಳು ಇಂಗ್ಲಿಷ್ ಭಾಷೆಯಿಂದ ಗಮನಾರ್ಹ ಪ್ರಭಾವವನ್ನು ಪಡೆದಿವೆ. ಹೆಚ್ಚು ಮಾತನಾಡುವ ದಕ್ಷಿಣ ಏಷ್ಯಾದ ಭಾಷೆ ಹಿಂದೂಸ್ತಾನಿ. ನಗರ ಪ್ರದೇಶಗಳಲ್ಲಿ ಹೆಚ್ಚು ಮಾತನಾಡುವ ಹಿಂಗ್ಲಿಷ್ ಎಂಬ ಹೊಸ ಇಂಗ್ಲಿಷ್-ಪ್ರಭಾವಿತ ರೂಪಾಂತರವನ್ನು ಪಡೆದುಕೊಂಡಿದೆ.Salwathura, A. N. "Evolutionary development of ‘hinglish’language within the indian sub-continent." International Journal of Research-GRANTHAALAYAH. Vol. 8. No. 11. Granthaalayah Publications and Printers, 2020. 41-48. ಭೌಗೋಳಿಕ ಹಂಚಿಕೆ ಭೌಗೋಳಿಕವಾಗಿ, ಇಂಡೋ-ಆರ್ಯನ್, ದ್ರಾವಿಡ ಮತ್ತು ಮುಂಡಾ ಭಾಷಾ ಗುಂಪುಗಳು ಪ್ರಧಾನವಾಗಿ ಭಾರತೀಯ ಉಪಖಂಡಗಳಲ್ಲಿ ಹರಡಿಕೊಂಡಿವೆ. ಆದ್ದರಿಂದ ಕೆಲವೊಮ್ಮೆ ಒಟ್ಟಾರೆಯಾಗಿ ಇವುಗಳನ್ನು ಭಾರತೀಯ ಭಾಷೆಗಳು ಎಂದು ಕರೆಯಲಾಗುತ್ತದೆ. ಬುರುಷಸ್ಕಿ, ಕುಸುಂಡಾ, ನಿಹಾಲಿ ಮತ್ತು ವೇಡ್ಡದಂತಹ ಕೆಲವು ಪ್ರತ್ಯೇಕ ಭಾಷೆಗಳೂ ಸಹ ಈ ಉಪಖಂಡದಲ್ಲಿದೆ. ಪ್ರಾದೇಶಿಕವಾಗಿ, ಭಾಷೆಗಳ ಪ್ರಭಾವವು ಉಪಖಂಡದ ಆಚೆ ಇತರ ನೆರೆಯ ದಕ್ಷಿಣ ಏಷ್ಯಾ ಮತ್ತು ಪೂರ್ವ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಿಗೆ ವಿಸ್ತರಿಸಿದೆ. ವಿಸ್ತೃತ ಭಾಷಾ ಪ್ರದೇಶವನ್ನು ಇಂಡೋಸ್ಫಿಯರ್ ಎಂದು ಕರೆಯಲಾಗುತ್ತದೆ. ಹೆಚ್ಚು ನಿಖರವಾಗಿ ಹೇಳುವುದಾದರೆ, ಇಂಡಿಕ್ ಭಾಷೆಗಳು ಮತ್ತು ಇತರ ಭೂ-ರಾಜಕೀಯ-ನೆರೆಹೊರೆಯ ಭಾಷೆಗಳಾದ ಸ್ಪ್ರಾಚ್ಬಂಡ್ ಭಾಷೆಯನ್ನು ದಕ್ಷಿಣ ಏಷ್ಯಾದ ಭಾಷೆಗಳು ಎಂದು ಕರೆಯಲಾಗುತ್ತದೆ (ಇದರಲ್ಲಿ ಹೆಚ್ಚುವರಿಯಾಗಿ ಪೂರ್ವ-ಇರಾನಿಕ್ ಮತ್ತು ನುರಿಸ್ತಾನಿ ಭಾಷೆಗಳು, ಹಾಗೆಯೇ ಮಧ್ಯ ಮತ್ತು ಪಶ್ಚಿಮ-ಟಿಬೆಟೊ-ಬರ್ಮನ್ ಸಂಪರ್ಕಗಳು ಸೇರಿವೆ). ಉಪಖಂಡದ ಪಶ್ಚಿಮದಲ್ಲಿರುವ ಇರಾನ್ ಪ್ರಸ್ಥಭೂಮಿ ಇರಾನಿನ ಭಾಷೆಗಳಿಗೆ ನೆಲೆಯಾಗಿದೆ. ಇದು ಪ್ರಸ್ಥಭೂಮಿಯ ಪೂರ್ವ ಭಾಗದಲ್ಲಿ ಪಾಶ್ತೂನಸ್ತಾನದ ಪಾಶ್ತೋ ಮತ್ತು ಬಲೂಚಿಯ ಬಲೂಚಿ ಭಾಷೆಯಿಂದ ಪ್ರಾರಂಭವಾಗುತ್ತದೆ. ಕಫಿರಿ ಭಾಷೆಗಳನ್ನು ಪ್ರಸ್ಥಭೂಮಿ ಮತ್ತು ಉಪಖಂಡದ ಉತ್ತರದ ಛೇದಕದಲ್ಲಿರುವ ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಟ್ರಾನ್ಸ್-ಹಿಮಾಲಯನ್ ಕುಟುಂಬ ಟಿಬೆಟೊ-ಬರ್ಮನ್ ಭಾಷೆಗಳು ಮತ್ತು ಆಸ್ಟ್ರೋ-ಏಷ್ಯಾಟಿಕ್ ಕುಟುಂಬ ಖಾಸಿ-ಪಲಾಂಗಿಕ್ ಭಾಷೆಗಳನ್ನು ಹಿಮಾಲಯ ಮತ್ತು ಇಂಡೋ-ಬರ್ಮನ್ ಶ್ರೇಣಿಗಳ ಪ್ರದೇಶಗಳಲ್ಲಿ ಮತ್ತು ಅದರಾಚೆ, ಪ್ರಧಾನವಾಗಿ ಟಿಬೆಟಿಯನ್ ಪ್ರಸ್ಥಭೂಮಿ ಹಾಗೂ ಬರ್ಮಾದಲ್ಲಿ ಮಾತನಾಡುತ್ತಾರೆ. ಅಂಡಮಾನ್ ದ್ವೀಪಗಳಲ್ಲಿ ಅಂಡಮಾನೀಸ್ ಭಾಷೆಗಳನ್ನು ಮಾತನಾಡುತ್ತಾರೆ. ದೇಶವಾರು ಅಫ್ಘಾನಿಸ್ತಾನ ಅಫ್ಘಾನಿಸ್ತಾನದ ಅಧಿಕೃತ ಭಾಷೆಗಳೆಂದರೆ ಪಾಶ್ತೋ ಮತ್ತು ದರಿ (ಎರಡೂ ಇರಾನಿನ ಭಾಷೆಗಳು). ಪರ್ಷಿಯನ್ ಭಾಷೆ ಆಫ್ಘನ್ ಪ್ರಮಾಣೀಕೃತ ದಾಖಲೆಯಾದ ದರಿಯನ್ನು ಆಫ್ಘಾನಿಸ್ತಾನದ ಸಂಪರ್ಕ ಭಾಷೆಯಾಗಿ ಪರಿಗಣಿಸಲಾಗಿದೆ. ಇದನ್ನು ಆಫ್ಘನ್ ಸಾಹಿತ್ಯವನ್ನು ಬರೆಯಲು ಬಳಸಲಾಗುತ್ತದೆ. ಅಧಿಕೃತವಾಗಿ ದರಿ ಭಾಷೆಯನ್ನು ಹೋಲುತ್ತದೆಯಾದರೂ, ತಾಜಿಕ್ ಭಾಷೆಯನ್ನು ತಜಕಿಸ್ತಾನಕ್ಕೆ ಹತ್ತಿರವಿರುವ ಜನರು ಮಾತನಾಡುತ್ತಾರೆ. ಪಾಶ್ತೂನರು ವ್ಯಾಪಕವಾಗಿ ಪಾಶ್ತೂ ಭಾಷೆಯನ್ನು ಮಾತನಾಡುತ್ತಾರೆ. ಅವರು ಮುಖ್ಯವಾಗಿ ಅಫ್ಘಾನಿಸ್ತಾನದ ದಕ್ಷಿಣಕ್ಕೆ ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ವಾಸಿಸುತ್ತಾರೆ. ಉಜ್ಬೆಕ್ ಮತ್ತು ತುರ್ಕಮೆನ್ನ ಕೆಲವು ತುರ್ಕಿ ಭಾಷೆಗಳನ್ನು ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಬಾಂಗ್ಲಾದೇಶ ರಾರಿ ಉಪಭಾಷೆ ಆಧರಿಸಿದ ಪ್ರಮಾಣಿತ ಬಂಗಾಳಿ ಬಾಂಗ್ಲಾದೇಶದ ರಾಷ್ಟ್ರೀಯ ಭಾಷೆಯಾಗಿದೆ. ಬಹುಪಾಲು ಬಾಂಗ್ಲಾದೇಶಿಯರು ಪೂರ್ವ ಬಂಗಾಳಿ ಭಾಷೆಯನ್ನು ಮಾತನಾಡುತ್ತಾರೆ. ಬಾಂಗ್ಲಾದೇಶದ ಸ್ಥಳೀಯ ಭಾಷೆಗಳು ಸಿಲ್ಹೆಟ್ಟಿ ಮತ್ತು ಚಿತ್ತಗೋನಿಯನ್ ಆಗಿದೆ. ಕೆಲವು ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳು ಟಿಬೆಟೊ-ಬರ್ಮನ್, ದ್ರಾವಿಡ ಮತ್ತು ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳನ್ನು ಸಹ ಮಾತನಾಡುತ್ತವೆ. ಭೂತಾನ್ ಝೊಂಗ್ಖಾ ಭೂತಾನ್ ಸಾಮ್ರಾಜ್ಯದ ರಾಷ್ಟ್ರೀಯ ಭಾಷೆಯಾಗಿದೆ. ಮಾತನಾಡುವ ಇತರ ಭಾಷೆಗಳಲ್ಲಿ ಬ್ರೋಕ್ಪಾ, ದಝಾಲಾ, ಚಾಲಿ ಚೋಕಂಗಚಖಾ, ಡಾಕ್ಪಾ ಭಾಷೆ, ಖೆಂಗ್ಖಾ ಭಾಷೆ, ನೇಪಾಳಿ ಭಾಷೆ, ಗೊಂಗ್ಡುಕ್, ನ್ಯೆನ್ಖಾ, ಲೋಕ್ಪು, ತಕ್ಪಾ ಮತ್ತು ತ್ಸಾಂಗ್ಲಾ ಸೇರಿವೆ. ಭೂತಾನಿನ ಬಹುತೇಕ ಎಲ್ಲಾ ಭಾಷೆಗಳು ಟಿಬೆಟಿಕ್ ಕುಟುಂಬ ಸೇರಿದವು.(ನೇಪಾಳಿ, ಇಂಡೋ-ಆರ್ಯನ್ ಭಾಷೆಯನ್ನು ಹೊರತುಪಡಿಸಿ) ಭಾರತ ಭಾರತ ಗಣರಾಜ್ಯದಲ್ಲಿ ಮಾತನಾಡುವ ಹೆಚ್ಚಿನ ಭಾಷೆಗಳು ಇಂಡೋ-ಆರ್ಯನ್ (ಸುಮಾರು 74% ) ದ್ರಾವಿಡ (ಸುಮಾರು 24%) ಆಸ್ಟ್ರೋ-ಏಷ್ಯಾಟಿಕ್ (ಸುಮಾರು 1.2%) ಅಥವಾ ಟಿಬೆಟೊ-ಬರ್ಮನ್ (ಸುಮಾರು 0.6%) ಕುಟುಂಬಗಳಿಗೆ ಸೇರಿವೆ. ಹಿಮಾಲಯದ ಕೆಲವು ಭಾಷೆಗಳು ಇನ್ನೂ ವರ್ಗೀಕರಿಸಲ್ಪಟ್ಟಿಲ್ಲ. .ಎಸ್. ಐ. ಎಲ್. ಎಥ್ನೋಲಾಗ್‌ನಲ್ಲಿ ಭಾರತೀಯ ಗಣರಾಜ್ಯದ 461 ಜೀವಂತ ಭಾಷೆಗಳನ್ನು ಪಟ್ಟಿ ಮಾಡಲಾಗಿದೆ. ಹಿಂದೂಸ್ತಾನಿ ಭಾರತದ ಅತ್ಯಂತ ವ್ಯಾಪಕವಾದ ಭಾಷೆಯಾಗಿದೆ. ಭಾರತೀಯ ಜನಗಣತಿ "ಹಿಂದಿ" ಎಂಬ ಪದವನ್ನು ಹಿಂದಿ ಭಾಷೆಗಳ ವಿಶಾಲ ವೈವಿಧ್ಯವೆಂದು ಸಾಧ್ಯವಾದಷ್ಟು ವಿಶಾಲವಾದ ವ್ಯಾಖ್ಯಾನವನ್ನು ನೀಡುತ್ತದೆ. ಹಿಂದಿ ಭಾಷೆಯನ್ನು ಮಾತನಾಡುವ ಸ್ಥಳೀಯ ಜನರು ಭಾರತೀಯರಲ್ಲಿ 39% ರಷ್ಟಿದ್ದಾರೆ. ಬಾಂಗ್ಲಾದೇಶ ಮತ್ತು ಭಾರತದ ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಕಂಡುಬರುವ ಬಂಗಾಳಿ ದಕ್ಷಿಣ ಏಷ್ಯಾದ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಬಂಗಾಳಿ ಭಾಷೆಯ ಸ್ಮರಣಾರ್ಥವಾಗಿ ಯುನೆಸ್ಕೋ ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಸ್ಥಾಪಿಸಿತು. ಇತರ ಗಮನಾರ್ಹ ಭಾಷೆಗಳಲ್ಲಿ ಒಡಿಯಾ, ತೆಲುಗು, ಪಂಜಾಬಿ, ಮರಾಠಿ, ತಮಿಳು, ಉರ್ದು, ಸಿಂಧಿ, ಕನ್ನಡ, ಪಶ್ತೋ, ಮಲಯಾಳಂ, ಮೈಥಿಲಿ, ಮೈತೇಯಿ (ಮಣಿಪುರಿ) ಕೊಂಕಣಿ ಮತ್ತು ತುಳು ಸೇರಿವೆ. ಸಂವಿಧಾನದ ಅನುಸೂಚಿತ ಭಾಷೆಗಳಾದ ಹದಿಮೂರು ಭಾಷೆಗಳನ್ನು ಭಾರತೀಯ ಜನಸಂಖ್ಯೆಯ 1% ಕ್ಕಿಂತ ಹೆಚ್ಚು ಮಂದಿ ಮಾತನಾಡುತ್ತಾರೆ. ಅವರು ಅದೇ ಭಾಷೆಯನ್ನು ಆ ಪ್ರದೇಶದಲ್ಲಿ 95% ಕ್ಕಿಂತ ಹೆಚ್ಚು ಮಂದಿ ಮಾತನಾಡುತ್ತಾರೆ. 1% ಕ್ಕಿಂತ ಕಡಿಮೆ ಭಾರತೀಯರು ಮಾತನಾಡುವ ಪರಿಶಿಷ್ಟ ಭಾಷೆಗಳೆಂದರೆ, ಸಂತಾಲಿ 0.64%) ಮೈತೇಯಿ (ಮಣಿಪುರಿ) (0.14%), ಬೋಡೋ (0.13%) ಡೋಗ್ರಿ (0.01% ಜಮ್ಮು ಮತ್ತು ಕಾಶ್ಮೀರ ಮಾತನಾಡುತ್ತಾರೆ). "ನಿಗದಿತ" ಅಲ್ಲದ ಅತಿದೊಡ್ಡ ಭಾಷೆಯು ಭಿಲಿ (0.95%), ನಂತರ ಗೊಂಡಿ (0.27%), ತುಳು (0.17%) ಮತ್ತು ಕುರುಖ್ (0.099%) ಮಾಲ್ಡೀವ್ಸ್ ದಿವೇಹಿಯು ಮಾಲ್ಡೀವ್ಸ್ನ ರಾಷ್ಟ್ರಭಾಷೆಯಾಗಿದೆ. ಅಲ್ಲಿನ ಜನಸಂಖ್ಯೆಯ 95% ರಷ್ಟು ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಅರಬ್ಬಿಯನ್ನು ಧಾರ್ಮಿಕ ಭಾಷೆಯಾಗಿ ಪರಿಗಣಿಸಲಾಗಿದೆ. ಶಿಕ್ಷಣ ಮತ್ತು ಪ್ರವಾಸೋದ್ಯಮದಂತಹ ಅಂತರರಾಷ್ಟ್ರೀಯ ಉದ್ದೇಶಗಳಿಗಾಗಿ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿದೆ. ನೇಪಾಳ ನೇಪಾಳದ ಹೆಚ್ಚಿನ ಭಾಷೆಗಳು ಇಂಡೋ-ಆರ್ಯನ್ ಭಾಷೆಗಳು ಅಥವಾ ಸೈನೊ-ಟಿಬೆಟಿಯನ್ ಭಾಷೆಗಳ ಅಡಿಯಲ್ಲಿ ಬರುತ್ತವೆ. ದೇಶದ ಅಧಿಕೃತ ಭಾಷೆಯು ನೇಪಾಳಿ. ಇದನ್ನು ಹಿಂದೆ ನೇಪಾಳ ಸಾಮ್ರಾಜ್ಯದಲ್ಲಿ ಗೂರ್ಖಾಲಿ ಎಂದು ಕರೆಯಲಾಗುತ್ತಿತ್ತು, ಇದು ಇಂಡೋ-ಆರ್ಯನ್ ಗುಂಪಿನ ಭಾಗವಾಗಿದೆ. ಈ ಭಾಷೆಯನ್ನು ನೇಪಾಳದ ಬಹುಪಾಲು ಜನರು ಮಾತನಾಡುತ್ತಾರೆ. ನೇಪಾಳದಲ್ಲಿ ಮಾತನಾಡುವ ಇಂಡೋ-ಆರ್ಯನ್ ಭಾಷೆಗಳಲ್ಲಿ ಮೈಥಿಲಿ ಭಾಷೆ, ಭೋಜ್ಪುರಿ ಭಾಷೆ ಮತ್ತು ತಾರು ಭಾಷೆ ಸೇರಿವೆ. ಇದು ದಕ್ಷಿಣ ನೇಪಾಳದ ತೆರಾಯ್ ಪ್ರದೇಶದಲ್ಲಿ ಮಾತನಾಡುವ ಬಹುಪಾಲು ಭಾಷೆಗಳನ್ನು ಒಳಗೊಂಡಿದೆ. ಸೈನೋ-ಟಿಬೆಟಿಯನ್ ಭಾಷೆಗಳು ತಮಂಗ್, ನೆವಾರಿ, ಮಗರ್ ಭಾಷೆ, ಗುರುಂಗ್ ಭಾಷೆ, ಕಿರಂತಿ ಭಾಷೆಗಳು ಮತ್ತು ಶೆರ್ಪಾ ಭಾಷೆಗಳನ್ನು ಒಳಗೊಂಡಿವೆ, ಮಧ್ಯ ಮತ್ತು ಉತ್ತರ ನೇಪಾಳದಲ್ಲಿ ಗುಡ್ಡಗಾಡು ಮತ್ತು ಪರ್ವತ ಪ್ರದೇಶಗಳಲ್ಲಿ ಈ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ. ಪಾಕಿಸ್ತಾನ ಪಾಕಿಸ್ತಾನ ಭಾಷಾಶಾಸ್ತ್ರದಲ್ಲಿ ವೈವಿಧ್ಯಮಯ ಭಾಷಾ ಪ್ರದೇಶವಾಗಿದೆ. ಇದು ಮೊದಲ ಭಾಷೆಗಳಾಗಿ ಮಾತನಾಡುವ ಅನೇಕ ಡಜನ್ಗಟ್ಟಲೆ ಭಾಷೆಗಳನ್ನು ಹೊಂದಿದೆ. ಪಾಕಿಸ್ತಾನದ ಪ್ರಮುಖ ಭಾಷೆಗಳು ವಿಶಾಲವಾಗಿ ಇಂಡೋ-ಇರಾನಿಯನ್ ಭಾಷೆಗಳ ವರ್ಗಕ್ಕೆ ಸೇರುತ್ತವೆ. ಪಾಕಿಸ್ತಾನದ ಪಶ್ಚಿಮ ಪ್ರದೇಶಗಳು (ಇರಾನ್ ಮತ್ತು ಅಫ್ಘಾನಿಸ್ತಾನಕ್ಕೆ ಹತ್ತಿರದಲ್ಲಿ) ಇರಾನಿನ ಭಾಷೆಗಳನ್ನು ಮಾತನಾಡುತ್ತವೆ. ಪೂರ್ವ ಪ್ರದೇಶಗಳು (ಭಾರತಕ್ಕೆ ಹತ್ತಿರದಲ್ಲಿ) ಇಂಡೋ-ಆರ್ಯನ್ ಭಾಷೆಗಳನ್ನು ಮಾತನಾಡುತ್ತಾರೆ.(ಸಿಂಧೂ ನದಿ ಸರಿಸುಮಾರು ಕುಟುಂಬಗಳನ್ನು ವಿಭಜಿಸುತ್ತದೆ). ಪಾಕಿಸ್ತಾನದ ಇತರ ಭಾಷಾ ಕುಟುಂಬಗಳಲ್ಲಿ ದ್ರಾವಿಡ (ಮಧ್ಯ ಬಲೂಚಿಸ್ತಾನ ಮಾತನಾಡುವ ಬ್ರಾಹುಯಿ), ಈಶಾನ್ಯದಲ್ಲಿ ಮಾತನಾಡುವ ಬಾಲ್ಟಿ ಮತ್ತು ಪುರ್ಗಿಯಂತಹ ಸೈನೋ-ಟಿಬೆಟಿಯನ್ ಭಾಷೆಗಳು (ಪಾಕಿಸ್ತಾನದ ಬಾಲ್ಟಿಸ್ತಾನ ಪ್ರದೇಶದಲ್ಲಿ), ವಾಯವ್ಯದಲ್ಲಿ ಮಾತನಾಡುವ ಕಾಮ್ಕಟಾ-ವಾರಿಗಳಂತಹ ನೂರಿಸ್ತಾನಿ ಭಾಷೆಗಳು (ಉತ್ತರದಲ್ಲಿ ಮಾತನಾಡುವ ಪಾಕಿಸ್ತಾನದ ಚಿತ್ರಾಲ್ ಪ್ರದೇಶದಲ್ಲಿ), ಬುರುಶಾಸ್ಕಿ ಭಾಷೆಯನ್ನು ಪ್ರತ್ಯೇಕವಾಗಿ ಮಾತನಾಡುತ್ತಾರೆ.(ಗಿಲ್ಗಿಟ್ ವಿಭಾಗ) ಉತ್ತರದಲ್ಲಿ ಕಿರ್ಗಿಜ್ ವಲಸೆ ಕುಟುಂಬಗಳು ಮತ್ತು ಖೈಬರ್ ಪಖ್ತುನ್‌ಖ್ವಾ, ಉಜ್ಬೆಕ್ ಮತ್ತು ತುರ್ಕಮೆನ್, ಅಫ್ಘಾನಿಸ್ತಾನ ಮತ್ತು ಚೀನಾದ ನಿರಾಶ್ರಿತರು ಸಹ ಟರ್ಕಿಕ್ ಭಾಷೆಗಳನ್ನು ಮಾತನಾಡುತ್ತಾರೆ. ಪಾಕಿಸ್ತಾನದ ರಾಷ್ಟ್ರೀಯ ಏಕೀಕರಣ ಮಾಧ್ಯಮವು ಉರ್ದು. ಇದು ಹಿಂದೂಸ್ತಾನಿ ಭಾಷೆಯ ಪರ್ಷಿಯನೀಕರಣವೆಂದು ದಾಖಲೆಯಾಗಿದೆ. ಪಂಜಾಬಿ, ಸರೈಕಿ, ಸಿಂಧಿ, ಬಲೂಚಿ ಮತ್ತು ಪಾಶ್ತೋ ಪಾಕಿಸ್ತಾನದ ಪ್ರಮುಖ ಸ್ಥಳೀಯ ಭಾಷೆಗಳು. ಶೀನಾ, ಬಾಲ್ಟಿ, ಗುಜರಾತಿ, ಬಂಗಾಳಿ ಮುಂತಾದ 70ಕ್ಕೂ ಹೆಚ್ಚು ಇತರ ಭಾಷೆಗಳನ್ನು ಸಹ ಮಾತನಾಡಲಾಗುತ್ತದೆ. ಶ್ರೀಲಂಕಾ ಸಿಂಹಳ ಮತ್ತು ತಮಿಳು ಶ್ರೀಲಂಕಾದ ಅಧಿಕೃತ ಭಾಷೆಗಳು. ಇಂಗ್ಲಿಷ್ ಸಂಪರ್ಕ ಭಾಷೆಯಾಗಿದೆ. ತಮಿಳು ಒಂದು ದಕ್ಷಿಣ-ದ್ರಾವಿಡ ಭಾಷೆಯಾಗಿದೆ. ಸಿಂಹಳವು ದ್ವೀಪಕಲ್ಪದ ಭಾರತೀಯ ಕುಟುಂಬಕ್ಕೆ ಸೇರಿದೆ.(ಮಾಲ್ಡೀವ್ಸ್‌ನ ಧಿವೇಹಿ ಜೊತೆಗೆ) ಇಂಡೋ-ಆರ್ಯರು ಮತ್ತು ದ್ರಾವಿಡರ ಆಗಮನದ ಮೊದಲು ವೇದವನ್ನು ಶ್ರೀಲಂಕಾದ ಸ್ಥಳೀಯ ಭಾಷೆ ಎಂದು ಹೇಳಲಾಗುತ್ತದೆ. ಇದನ್ನೂ ನೋಡಿ ಏಷ್ಯಾದ ಭಾಷೆಗಳು ಬಾಂಗ್ಲಾದೇಶದ ಭಾಷೆಗಳು ಭೂತಾನ್ನ ಭಾಷೆಗಳು ಭಾರತದ ಭಾಷೆಗಳು ಭಾರತದಲ್ಲಿ ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು ಭಾರತದಲ್ಲಿ ಸ್ಥಳೀಯವಾಗಿ ಮಾತನಾಡುವವರ ಸಂಖ್ಯೆಯ ಪ್ರಕಾರ ಭಾಷೆಗಳ ಪಟ್ಟಿ ಮಾಲ್ಡೀವ್ಸ್‌ನ ಭಾಷೆಗಳು ನೇಪಾಳದ ಭಾಷೆಗಳು ಪಾಕಿಸ್ತಾನದ ಭಾಷೆಗಳು ಶ್ರೀಲಂಕಾದ ಭಾಷೆಗಳು ಉಲ್ಲೇಖಗಳು ಉಲ್ಲೇಖಗಳು ಭಾರತದ ಜನಗಣತಿಯ ದತ್ತಾಂಶ ಕೋಷ್ಟಕ, 2001 ಭಾಷಣಕಾರರ ಪ್ರಭಾವದ ಆದೇಶವನ್ನು ವಿವರಿಸುವ ವೇಳಾಪಟ್ಟಿ ಭಾಷೆಗಳು-2001 1971, 1981, 1991 ಮತ್ತು 2001ರಲ್ಲಿ ಭಾಷಣಕಾರರ ಪ್ರಭಾವದ ಆದೇಶವನ್ನು ವಿವರಿಸುವಲ್ಲಿ ವೇಳಾಪಟ್ಟಿ ಭಾಷೆಗಳ ತುಲನಾತ್ಮಕ ಶ್ರೇಣಿಯನ್ನು ಭಾಷೆಗಳ ಜನಗಣತಿಯ ದತ್ತಾಂಶ ಟಿಪ್ಪಣಿಗಳು The national uniting medium of Pakistan is Urdu, a persianized register of the Hindustani language. ಬಾಹ್ಯ ಸಂಪರ್ಕಗಳು ಭಾರತದ ಪ್ರಮುಖ ಭಾಷೆಗಳು ಜನಾಂಗೀಯ ವರದಿ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ
೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಲೆಂಜ್ ಲೀಗ್
https://kn.wikipedia.org/wiki/೨೦೨೪-೨೦೨೬_ಐಸಿಸಿ_ಕ್ರಿಕೆಟ್_ವಿಶ್ವಕಪ್_ಚಾಲೆಂಜ್_ಲೀಗ್
೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨
https://kn.wikipedia.org/wiki/೨೦೨೪-೨೦೨೬_ಐಸಿಸಿ_ಕ್ರಿಕೆಟ್_ವಿಶ್ವಕಪ್_ಲೀಗ್_೨
೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨, ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨ ರ ಎರಡನೇ ಆವೃತ್ತಿಯಾಗಿದೆ, ಇದು ೨೦೨೭ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪ್ರಕ್ರಿಯೆಯ ಭಾಗವಾಗಿರುವ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಸೂಪರ್ ಲೀಗ್‌ನ ರದ್ದುಗೊಳಿಸಿದ ಪರಿಣಾಮವಾಗಿ, ಲೀಗ್ ೨ ರ ಈ ಸುತ್ತು 7 ರಿಂದ 8 ತಂಡಗಳಿಗೆ ಏರಿಕೆ ಕಂಡಿತು. ತಂಡದ ಎಣಿಕೆಯಲ್ಲಿನ ಏರಿಕೆಯು ಒಟ್ಟು ಪಂದ್ಯಗಳ ಸಂಖ್ಯೆಯನ್ನು 126 ರಿಂದ 144 ಕ್ಕೆ ಹೆಚ್ಚಿಸಿತು. ಸ್ಕಾಟ್ಲೆಂಡ್ ಹಾಲಿ ಚಾಂಪಿಯನ್ ಆಗಿ ಸ್ಪರ್ಧೆಯನ್ನು ಪ್ರವೇಶಿಸಿತು. ತಂಡಗಳು ಮತ್ತು ಅರ್ಹತೆ ಹಿಂದಿನ ಟೂರ್ನಮೆಂಟ್ ವಿಜೇತರಾದ ಸ್ಕಾಟ್ಲೆಂಡ್ ಅನ್ನು ನೆದರ್ಲ್ಯಾಂಡ್ಸ್ ಸೇರಿಕೊಂಡರು, ಅವರು ಹಿಂದೆ ಸೂಪರ್ ಲೀಗ್‌ನ ಭಾಗವಾಗಿತ್ತು. ಲೀಗ್ ೨ ರ ಹಿಂದಿನ ಸುತ್ತಿನ ಅಗ್ರ ಐದು ತಂಡಗಳು ಮತ್ತು ೨೦೨೩ ಕ್ವಾಲಿಫೈಯರ್ ಪ್ಲೇ ಆಫ್‌ನಿಂದ ಅಗ್ರ ಎರಡು ತಂಡಗಳು ಅವರನ್ನು ಸೇರಿಕೊಂಡವು. Means of qualificationDateVenueBerthsQualifiedಸೂಪರ್ ಲೀಗ್‌೩೦ ಜುಲೈ ೨೦೨೦ – ೧೪ ಮೇ ೨೦೨೩ವಿವಿಧ​೧ಲೀಗ್ ೨೧೪ ಆಗಸ್ಟ್ ೨೦೧೯ – ೧೬ ಮಾರ್ಚ್ ೨೦೨೩ವಿವಿಧ​೫ಕ್ವಾಲಿಫೈಯರ್ ಪ್ಲೇ ಆಫ್‌೨೬ ಮಾರ್ಚ್ – ೫ ಏಪ್ರಿಲ್ ೨೦೨೩ನಮೀಬಿಯ೨ಒಟ್ಟು೮ ಪಂದ್ಯಗಳು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಫೆಬ್ರವರಿ ೨೦೨೪ ರಲ್ಲಿ ತ್ರಿಕೋನ ಸರಣಿ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಪ್ರಕಟಿಸಿತು ಪ್ರತಿ ರಾಷ್ಟ್ರವು ಮೂರು ಸರಣಿಗಳನ್ನು ಆತಿಥ್ಯ ವಹಿಸುತ್ತದೆ ಮತ್ತು ತವರಿನ ಹೊರಗೆ (ಒಟ್ಟು 36 ಪಂದ್ಯಗಳಿಗೆ) ಇನ್ನೂ ಆರು ಸರಣಿಗಳನ್ನು ಆಡುತ್ತದೆ. ಇತರ ಸ್ಪರ್ಧಾತ್ಮಕ ರಾಷ್ಟ್ರಗಳಲ್ಲಿ ಒಂದನ್ನು ಹೊರತುಪಡಿಸಿ ಎಲ್ಲಾ ತಂಡಗಳು ತ್ರಿಕೋನ ಸರಣಿಯನ್ನು ಆಡುತ್ತವೆ. ಸುತ್ತುದಿನಾಂಕಆತಿಥೇಯರು೨ನೇ ತಂಡ೩ನೇ ತಂಡವಿಜೇತರುಟಿಪ್ಪಣಿ೧ಫೆಬ್ರವರಿ ೨೦೨೪೨ಫೆಬ್ರವರಿ–ಮಾರ್ಚ್ ೨೦೨೪ಯುಎಇ ಮತ್ತು ಸ್ಕಾಟ್ಲೆಂಡ್ ನಡುವಿನ ಕೊನೆಯ ಪಂದ್ಯ ಚಂಡಮಾರುತದಿಂದಾಗಿ ರದ್ದಾಗಿತ್ತು.೩ಮೇ ೨೦೨೪೪ಆಗಸ್ಟ್ ೨೦೨೪೫ಸೆಪ್ಟೆಂಬರ್ ೨೦೨೪೬ಸೆಪ್ಟೆಂಬರ್ ೨೦೨೪೭ಅಕ್ಟೋಬರ್ ೨೦೨೪೮ಅಕ್ಟೋಬರ್ ೨೦೨೪೯ಜನವರಿ ೨೦೨೫೧೦ಮಾರ್ಚ್ ೨೦೨೫೧೧ಮೇ ೨೦೨೫೧೨ಮೇ ೨೦೨೫೧೩ಜೂನ್ ೨೦೨೫೧೪ಆಗಸ್ಟ್ ೨೦೨೫೧೫ಅಕ್ಟೋಬರ್ ೨೦೨೫೧೬ನವೆಂಬರ್ ೨೦೨೫೧೭ಏಪ್ರಿಲ್ ೨೦೨೬೧೮ಮೇ ೨೦೨೬೧೯ಜೂನ್ ೨೦೨೬೨೦ಆಗಸ್ಟ್ ೨೦೨೬೨೧ಆಗಸ್ಟ್ ೨೦೨೬೨೨ಅಕ್ಟೋಬರ್ ೨೦೨೬೨೩ನವೆಂಬರ್ ೨೦೨೬೨೪ಡಿಸೆಂಬರ್ ೨೦೨೬ ಫಲಿತಾಂಶಗಳು ತವರು ಮತ್ತು ವಿದೇಶ ಪಂದ್ಯಗಳ ಫಲಿತಾಂಶಗಳು ಹೀಗಿವೆ: ನ್ಯೂಟ್ರಲ್ ಸ್ಥಳದ ಪಂದ್ಯಗಳ ಫಲಿತಾಂಶಗಳು ಈ ಕೆಳಗಿನಂತಿವೆ: ಪಾಯಿಂಟ್ ಟೇಬಲ್ ಇದನ್ನೂ ನೋಡಿ ೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಲೆಂಜ್ ಲೀಗ್ 2027 Cricket World Cup ಉಲ್ಲೇಖಗಳು
ಕೊಚ್ಚಿನ್ ಪೋರ್ಚುಗೀಸ್ ಕ್ರಿಯೋಲ್ ಭಾಷೆ
https://kn.wikipedia.org/wiki/ಕೊಚ್ಚಿನ್_ಪೋರ್ಚುಗೀಸ್_ಕ್ರಿಯೋಲ್_ಭಾಷೆ
ಕೊಚ್ಚಿನ್ ಇಂಡೋ-ಪೋರ್ಚುಗೀಸ್ವೈಪಿನ್ ಇಂಡೋ-ಪೋರ್ಚುಗೀಸ್ಸ್ಥಳೀಯ ಭಾರತಪ್ರದೇಶಕೊಚ್ಚಿಅಳಿವಿನಂಚಿನಲ್ಲಿರುವ20 ಆಗಸ್ಟ್ 2010, ವಿಲಿಯಂ ರೋಜಾರಿಯೊನ ಮರಣದೊಂದಿಗೆ ಭಾಷಾ ಕುಟುಂಬಪೋರ್ಚುಗೀಸ್ ಕ್ರಿಯೋಲ್ ಇಂಡೋ-ಪೋರ್ಚುಗೀಸ್ ಕ್ರಿಯೋಲ್ಸ್ ಕೊಚ್ಚಿನ್ ಇಂಡೋ-ಪೋರ್ಚುಗೀಸ್ಭಾಷಾ ಸಂಕೇತಗಳುISO 639-3 - ಎಂದುಗ್ಲೋಟಾಲೊಗ್ಮಾಲಾ1544 ಮಲಬಾರ್-ಶ್ರೀಲಂಕಾ ಪೋರ್ಚುಗೀಸ್ ಇಎಲ್ಪಿಮಲಬಾರ್ ಇಂಡೋ-ಪೋರ್ಚುಗೀಸ್ ಕ್ರಿಯೋಲ್ ಕೊಚ್ಚಿನ್ ಇಂಡೋ-ಪೋರ್ಚುಗೀಸ್, ಅದರ ಭೌಗೋಳಿಕ ಕೇಂದ್ರದಿಂದ ವೈಪಿನ್ ಇಂಡೋ-ಪೋರ್ಚುಗಲ್ ಎಂದೂ ಕರೆಯಲ್ಪಡುತ್ತದೆ. ಇದು ಭಾರತದ ಮಲಬಾರ್ ಕರಾವಳಿ, ವಿಶೇಷವಾಗಿ ಕೇರಳ ರಾಜ್ಯದ ಕೊಚ್ಚಿನ್ ಕೋಟೆಯಲ್ಲಿ ಮಾತನಾಡುವ ಇಂಡೋ-ಪೋರ್ಚುಗೀಸರ ಕ್ರಿಯೋಲ್ ಆಗಿದೆ. ಇದನ್ನು ಮೊದಲ ಭಾಷೆಯಾಗಿ ಮಾತನಾಡುವ ಕೊನೆಯ ವ್ಯಕ್ತಿ, ವಿಲಿಯಂ ರೋಜಾರಿಯೊ, 2010 ರಲ್ಲಿ ನಿಧನರಾದರು. ಇದನ್ನು ಈಗ ವೈಪೀನ್ ದ್ವೀಪ ಸುತ್ತಮುತ್ತಲಿನ (ವೈಪಿನ್ ದ್ವೀಪ) ಮತ್ತು ಕೊಚ್ಚಿ ಮಹಾನಗರ ಪ್ರದೇಶ ಇತರ ಪ್ರದೇಶಗಳಲ್ಲಿ ಕ್ರಿಶ್ಚಿಯನ್ ಕುಟುಂಬಗಳು ಮಾತನಾಡುತ್ತವೆ. ಇತಿಹಾಸ ಸ್ಥಳೀಯವಾಗಿ "ಪೋರ್ಚುಗೀಸ್" ಅಥವಾ "ಕೊಚ್ಚಿನ್ ಪೋರ್ಚುಗೀಸ್" ಎಂದು ಕರೆಯಲ್ಪಡುವ ಕೊಚ್ಚಿನ್ ಇಂಡೋ-ಪೋರ್ಚುಗೀಸ್, ಪೋರ್ಚುಗೀಸ್, ಮಲಯಾಳಂ ಮತ್ತು ಹಳೆಯ ಕೊಚ್ಚಿಯಲ್ಲಿ ಮಾತನಾಡುವ ಇತರ ಭಾಷೆಗಳ ನಡುವಿನ ಸಂಪರ್ಕದಿಂದ ರೂಪುಗೊಂಡಿತು. ಏಷ್ಯಾದಲ್ಲಿ ಯುರೋಪಿಯನ್ ಸಂಪರ್ಕದಿಂದ ಹುಟ್ಟಿಕೊಂಡ ಮೊದಲ ಸಂಪರ್ಕ ಭಾಷೆಗಳಲ್ಲಿ ಕೊಚ್ಚಿನ್ ಒಂದಾಗಿತ್ತು. ಇದು 15ರಿಂದ 19ನೇ ಶತಮಾನದಲ್ಲಿ ಸ್ಥಳೀಯ ಕ್ಯಾಥೋಲಿಕ್ ಸಮುದಾಯದ ಮಾತೃಭಾಷೆಯಾಯಿತು. ಮಲಬಾರ್ನಲ್ಲಿನ ಕ್ಯಾಥೊಲಿಕ್ ಇಂಡೋ-ಪೋರ್ಚುಗೀಸ್ ಕುಟುಂಬಗಳಿಂದ ಹೊರಹೊಮ್ಮಿತು. ಇದು 17ನೇ ಶತಮಾನದಲ್ಲಿ ಜರ್ಮನಿಯ ಆಕ್ರಮಣದಲ್ಲಿ ಮುಂದುವರಿಯಿತು ಎಂದು ದಾಖಲೆಯಿದೆ. 19ನೇ ಶತಮಾನದ ತಿರುವಿನಲ್ಲಿ ಭಾಷಣಕಾರರು ಭಾಷೆಯಿಂದ ದೂರ ಸರಿಯಲು ಪ್ರಾರಂಭಿಸಿದರು. ಕೊನೆಯ ಸ್ಥಳೀಯ ಭಾಷಣಕಾರರಾದ ವಿಲಿಯಂ ರೋಜಾರಿಯೊ 2010ರ ಆಗಸ್ಟ್ 20ರಂದು ವೈಪೀನ್‌ನಲ್ಲಿ ನಿಧನರಾದರು. ಕೊಚ್ಚಿಯಲ್ಲಿನ ಕೆಲವರು ಈಗಲೂ ಅದನ್ನು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳುತ್ತಾರೆ. ಉದಾಹರಣೆಗಳು +ಕೊಚ್ಚಿನ್ ಪೋರ್ಚುಗೀಸ್ ಭಾಷೆಯಲ್ಲಿ ಸಂಖ್ಯೆಗಳುಕ್ರಿಯೋಲ್ಸ್ಟ್ಯಾಂಡರ್ಡ್ ಪೋರ್ಚುಗೀಸ್ಕನ್ನಡಅಮ್ಮಾ.ಉಮ್.ಒಂದುಡಾ.ದಯವಿಟ್ಟುಎರಡುಥ್ರೆಸ್ಮೂರುಮೂರುಕಾತ್ರುಕ್ವಾಟ್ರೋನಾಲ್ಕುಸಿಂಕ್ಸಿನ್ಕೊಐದುಹೇಳುಇದೆ.ಆರುಸೆಥಿಸೆಟ್ಏಳುಒಯ್ತುಒಯಿಟೋಎಂಟುಹೊಸನವೆಒಂಬತ್ತುದಿನಗಳುದೆಜ್ಹತ್ತು ಪೋರ್ಚುಗೀಸ್ ಮತ್ತು ಮಲಯಾಳಂ ಪ್ರಭಾವ ಪೋರ್ಚುಗೀಸ್ ಮತ್ತು ಮಲಯಾಳಂ ಎರಡೂ ಮಲಬಾರ್ ಇಂಡೋ-ಪೋರ್ಚುಗೀಸ್‌ನಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿವೆ. ಉದಾಹರಣೆಗೆ, tæ ಎಂಬ ಕ್ರಿಯಾಪದವು ಇತರ ಪೋರ್ಚುಗೀಸ್ ಕ್ರಿಯಾಪದಗಳಿಂದ ಅದರ ಶಬ್ದಾರ್ಥದ ಸಂದರ್ಭವನ್ನು ಎರವಲು ಪಡೆಯುತ್ತದೆ. ಅವುಗಳೆಂದರೆ ಟೆರ್ (ಹಾವೆ) ಮತ್ತು ಎಸ್ಟಾರ್ (ಬೆ) ಎಂಬ ಕ್ರಿಯಾಪದಗಳಿಂದ. ಇದಕ್ಕೆ ವಿರುದ್ಧವಾಗಿ, ಕ್ರಿಯಾಪದದ ರೂಪಸೂಚಕ ಮತ್ತು ಶಬ್ದಾರ್ಥದ ರಚನೆಗಳು ಮಲಯಾಳಂನಿಂದ ಹೆಚ್ಚು ಪ್ರಭಾವಿತವಾಗಿವೆ. ಉಲ್ಲೇಖಗಳು
೨೦೨೪ ನೇಪಾಳ ತ್ರಿ-ರಾಷ್ಟ್ರ ಸರಣಿ (ಸುತ್ತು ೧)
https://kn.wikipedia.org/wiki/೨೦೨೪_ನೇಪಾಳ_ತ್ರಿ-ರಾಷ್ಟ್ರ_ಸರಣಿ_(ಸುತ್ತು_೧)
೨೦೨೪ ನೇಪಾಳ ತ್ರಿ-ರಾಷ್ಟ್ರ ಸರಣಿಯು ೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಫೆಬ್ರವರಿ 2024 ರಲ್ಲಿ ನೇಪಾಳದಲ್ಲಿ ನಡೆಯಿತು. ನಮೀಬಿಯ, ನೇಪಾಳ ಮತ್ತು ನೆದರ್ಲ್ಯಾಂಡ್ಸ್ ರಾಷ್ಟ್ರೀಯ ತಂಡಗಳು ಸರಣಿಯಲ್ಲಿ ಭಾಗವಹಿಸಿದ್ದವು. ODI ಸರಣಿಯ ನಂತರ, ಮೂರು ತಂಡಗಳು ಟ್ವೆಂಟಿ20 ಅಂತರಾಷ್ಟ್ರೀಯ (ಟಿ೨೦ಐ) ತ್ರಿ-ರಾಷ್ಟ್ರ ಸರಣಿಯನ್ನು ಆಡಿದವು. ಲೀಗ್ ೨ ಸರಣಿ ತಂಡಗಳು ಗೆರ್ಹಾರ್ಡ್ ಎರಾಸ್ಮಸ್ (ನಾಯಕ) ಜೆ.ಜೆ ಸ್ಮಿತ್ (ಉ.ನಾ) ಜಾಕ್ ಬ್ರಾಸ್ಸೆಲ್ ನಿಕೊ ಡೇವಿನ್ ಶಾನ್ ಫೌಚೆ ಜಾನ್ ಫ್ರೈಲಿಂಕ್ ಜೇನ್ ಗ್ರೀನ್ (wk) ಜೀನ್-ಪಿಯರ್ ಕೋಟ್ಜೆ (wk) ಮಲನ್ ಕ್ರುಗರ್ ಮೈಕೆಲ್ ವ್ಯಾನ್ ಲಿಂಗೆನ್ ಜಾನ್ ನಿಕೋಲ್ ಲಾಫ್ಟಿ-ಈಟನ್ ತಂಗೇಣಿ ಲುಂಗಮೇನಿ ಬರ್ನಾರ್ಡ್ ಸ್ಕೋಲ್ಟ್ಜ್ ಬೆನ್ ಶಿಕೊಂಗೊ ರುಬೆನ್ ಟ್ರಂಪೆಲ್ಮನ್ ರೋಹಿತ್ ಪೌಡೆಲ್ (ನಾಯಕ) ದೀಪೇಂದ್ರ ಸಿಂಗ್ ಐರಿ ಕುಶಾಲ್ ಭುರ್ಟೆಲ್ ಗುಲ್ಶನ್ ಝಾ ದೇವ್ ಖನಾಲ್ ಸೋಂಪಲ್ ಕಾಮಿ ಕರಣ್ ಕೆ.ಸಿ ಕುಶಾಲ್ ಮಲ್ಲ ಲಲಿತ್ ರಾಜಬಂಶಿ ಪವನ್ ಸರ್ರಾಫ್ ಅನಿಲ್ ಸಾಹ್ (wk) ಭೀಮ್ ಶಾರ್ಕಿ ಆರಿಫ್ ಶೇಖ್ ಆಸಿಫ್ ಶೇಖ್ (wk) ಸೂರ್ಯ ತಮಾಂಗ್ ಸ್ಕಾಟ್ ಎಡ್ವರ್ಡ್ಸ್ (ನಾಯಕ, wk) ಶರೀಜ್ ಅಹ್ಮದ್ ವೆಸ್ಲಿ ಬ್ಯಾರೆಸಿ ನೋಹ್ ಕ್ರೋಸ್ ಮ್ಯಾಕ್ಸ್ ಒ'ಡೌಡ್ ಆರ್ಯನ್ ದತ್ ಒಲಿವಿಯರ್ ಎಲೆನ್ಬಾಸ್ ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ವಿವಿಯನ್ ಕಿಂಗ್ಮಾ ಕೈಲ್ ಕ್ಲೈನ್ ಬಾಸ್ ಡಿ ಲೀಡೆ ಮೈಕೆಲ್ ಲೆವಿಟ್ ರೋಲೋಫ್ ವ್ಯಾನ್ ಡೆರ್ ಮೆರ್ವೆ ತೇಜ ನಿಡಮನೂರು ವಿಕ್ರಮಜಿತ್ ಸಿಂಗ್ ಪಂದ್ಯಗಳು ೧ನೇ ಏಕದಿನ​ ೨ನೇ ಏಕದಿನ​ ೩ನೇ ಏಕದಿನ​ ೪ನೇ ಏಕದಿನ​ ೫ನೇ ಏಕದಿನ​ ೬ನೇ ಏಕದಿನ​ ಟಿ೨೦ಐ ಸರಣಿ ರೌಂಡ್ ರಾಬಿನ್ ಪಾಯಿಂಟ್ ಟೇಬಲ್ ಪಂದ್ಯಗಳು ಫೈನಲ್ ಉಲ್ಲೇಖಗಳು
ವಿಲ್‍ಹೆಲ್ಮ್ ವೂಂಟ್
https://kn.wikipedia.org/wiki/ವಿಲ್‍ಹೆಲ್ಮ್_ವೂಂಟ್
thumb|೧೯೦೨ರಲ್ಲಿ ವೂಂಟ್ ವಿಲ್‍ಹೆಲ್ಮ್ ವೂಂಟ್ (1832-1920) ಒಬ್ಬ ಜರ್ಮನ್ ಶರೀರವಿಜ್ಞಾನಿ. ವೈದ್ಯಕೀಯದಲ್ಲಿ ಪಿಎಚ್.ಡಿ. ಮತ್ತು ಎಂ.ಡಿ. ಪದವಿ ಗಳಿಸಿದ ಬಳಿಕ ಹೈಡೆಲ್‌ಬರ್ಗ್ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ ಸೇರಿದ (1854). ಅಲ್ಲಿ ಈತನ ಆಸಕ್ತಿ ಮನೋವಿಜ್ಞಾನದತ್ತ ಹೊರಳಿತು. ವೇಬರ್, ಅರ್ನ್‌ಸ್ಟ್ ಹೈನ್ರಿಚ್ ಮತ್ತು ಫೆಕ್ನರ್ ಇವರ ಕೊಡುಗೆಗಳ ಬೆಳಕಿನಲ್ಲಿ ಮನೋವಿಜ್ಞಾನದ ಪುನರ್ವ್ಯಾಖ್ಯಾನಗೈಯಲು ಮುಂದಾದ. ಮಾನವ ವರ್ತನೆಯ ಕೆಲವು ಮುಖಗಳನ್ನು ಅಲ್ಲಿಯೂ ಸಂವೇದನ ಪ್ರಭಾವಗಳನ್ನು ವ್ಯಕ್ತಿ ಗ್ರಹಿಸುವ ಬಗೆಗಳನ್ನು, ಮಾಪನೆಗೆ ಒಳಪಡಿಸಬಹುದೆಂದು ಈತನಿಗೆ ಅನ್ನಿಸಿತು. ದೃಷ್ಟಿ ಮತ್ತು ಶ್ರವಣ ಕುರಿತಂತೆ ಹೆಲ್ಮ್‌ಹಾಲ್ಸ್ ನೀಡಿದ ಕೊಡುಗೆ ಗಮನಾರ್ಹವೆಂದು ಪರಿಗಣಿಸಿ ಈ ನಿಟ್ಟಿನಲ್ಲಿ ಪ್ರಾಯೋಗಿಕ ಮನೋವಿಜ್ಞಾನದ ಅಧ್ಯಯನಾರ್ಥ ವಿಶ್ವವಿದ್ಯಾಲಯದಲ್ಲಿ ತರಗತಿ ಆರಂಭಿಸಿದ. ಮುಂದೆ ಲೈಪ್‌ಜಿಗ್ ವಿಶ್ವವಿದ್ಯಾಲಯದಲ್ಲಿ ಈ ವಿಷಯಕ್ಕೆಂದೇ ಒಂದು ಪ್ರಯೋಗಾಲಯವನ್ನು ಕೂಡ ಸ್ಥಾಪಿಸಿದ. ಉಲ್ಲೇಖಗಳು ಹೊರಗಿನ ಕೊಂಡಿಗಳು Max Planck Institute for the History of Science: Wilhelm Maximilian Wundt. Biography and bibliography in the Virtual Laboratory of the Max Planck Institute for the History of Science Wilhelm Wundt Bibliography 589 entries ವರ್ಗ:ವೈದ್ಯರು ವರ್ಗ:ಮನೋವಿಜ್ಞಾನಿಗಳು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ವಿಶ್ವವಿದ್ಯಾಲಯ
https://kn.wikipedia.org/wiki/ವಿಶ್ವವಿದ್ಯಾಲಯ
redirect ವಿಶ್ವವಿದ್ಯಾನಿಲಯ
ವಾಲ್ಟರ್ ರೂಡೋಲ್ಫ್ ಹೆಸ್
https://kn.wikipedia.org/wiki/ವಾಲ್ಟರ್_ರೂಡೋಲ್ಫ್_ಹೆಸ್
thumb ವಾಲ್ಟರ್ ರೂಡೋಲ್ಫ್ ಹೆಸ್ (1881-1973) ಸ್ವಿಟ್ಸರ್ಲೆಂಡಿನ ಒಬ್ಬ ದೇಹವಿಜ್ಞಾನಿ ಮತ್ತು 1949 ರ ನೊಬೆಲ್ ಪ್ರಶಸ್ತಿ ಪುರಸ್ಕೃತ. ಜನನ, ವಿದ್ಯಾಭ್ಯಾಸ ಫ್ರಾನ್‌ಫೆಲ್ಡ್‌ನಲ್ಲಿ ಜನನ. ಲ್ವಾಸೇನ್, ಬರ್ನ್, ಝೂರಿಚ್, ಬರ್ಲಿನ್ ಮತ್ತು ಕೀಲ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಪದವೀಧರನಾದ (1906). ವೃತ್ತಿಜೀವನ, ಸಾಧನೆಗಳು ಝೂರಿಚ್ ವಿಶ್ವವಿದ್ಯಾಲಯದಲ್ಲಿ ದೇಹವಿಜ್ಞಾನ ಪ್ರಾಧ್ಯಾಪಕನೂ ಫಿಸಿಯಾಲಜಿ ಇನ್‌ಸ್ಟಿಟ್ಯೂಟಿನ ನಿರ್ದೇಶಕನೂ (1917-51) ಆಗಿ ಸಂಶೋಧನೆ ಮಾಡಿದ. ರಕ್ತದೊತ್ತಡದ ಕ್ರಮನಿಯಂತ್ರಣ ಹಾಗೂ ಗುಂಡಿಗೆ ಮಿಡಿತದರ ಮತ್ತು ಉಸಿರಾಟದೊಂದಿಗೆ ಇವುಗಳ ಸಂಬಂಧ-ಇವನ್ನು ಅಧ್ಯಯನಗೈದ. ಮಿದುಳು ತಳದಲ್ಲಿಯ ರಚನೆಗಳ ಕ್ರಿಯಾತಂತ್ರದ ಬಗ್ಗೆ 1925ರಿಂದ ಮುಂದಕ್ಕೆ ಸಂಶೋಧನೆ ಎಸಗಿದ. ಮಿದುಳಿನ ವಿಶಿಷ್ಟ ಪ್ರದೇಶಗಳನ್ನು ಅತಿಸೂಕ್ಷ್ಮ ಸೂಜಿ ಎಲೆಕ್ಟ್ರೋಡುಗಳನ್ನು ನವುರಾಗಿ ಕುತ್ತಿ ಉದ್ದೀಪನಗೊಳಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಿದ. ಈ ತಂತ್ರಗಳಿಂದಾಗಿ ಮಿದುಳವ್ಯಾಪಾರ ಅರಿಯುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುವುದು ಕೈಗೂಡಿತು. ಹೈಪೊತೆಲಮಸ್‌ನ ವಿವಿಧ ಭಾಗಗಳನ್ನು ಉದ್ದೀಪನಗೊಳಿಸಿ ದೇಹೋಷ್ಣತೆ, ರಕ್ತದೊತ್ತಡ, ಉಸಿರಾಟಗಳಲ್ಲಿಯೂ ಜೊತೆಗೆ ಕೋಪ, ಲೈಂಗಿಕಾಸಕ್ತಿ, ನಿದ್ರೆಗಳಲ್ಲಿಯೂ ವ್ಯತ್ಯಯಗಳನ್ನು ತರಬಹುದೆಂದು ಹೆಸ್ ತೋರಿಸಿದ. ಉಲ್ಲೇಖಗಳು ಹೊರಗಿನ ಕೊಂಡಿಗಳು including the Nobel Lecture, 12 December 1949 The Central Control of the Activity of Internal Organs ವರ್ಗ:ನೊಬೆಲ್ ಪ್ರಶಸ್ತಿ ಪುರಸ್ಕೃತರು ವರ್ಗ:ನರವಿಜ್ಞಾನಿಗಳು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ವಾಲ್ಟರ್ ರೀಡ್
https://kn.wikipedia.org/wiki/ವಾಲ್ಟರ್_ರೀಡ್
thumb ವಾಲ್ಟರ್ ರೀಡ್ (1851-1902) ಅಮೆರಿಕದ ಒಬ್ಬ ಮಿಲಿಟರಿ ಸರ್ಜನ್."Reed, Walter ." Complete Dictionary of Scientific Biography. . Encyclopedia.com. 18 Mar. 2024 <https://www.encyclopedia.com>.Underwood, E. Ashworth. "Walter Reed". Encyclopedia Britannica, 5 Apr. 2024, https://www.britannica.com/biography/Walter-Reed. Accessed 11 April 2024.https://www.ncpedia.org/biography/reed-walter ಜೀವನ, ಸಾಧನೆಗಳು ಏಕಾಣುಜೀವಿವಿಜ್ಞಾನ ಇವನ ಅಧ್ಯಯನ ವಿಷಯ. ಈತನನ್ನು ಆರ್ಮಿ ಮೆಡಿಕಲ್ ಸ್ಕೂಲ್‌ನಲ್ಲಿ ಏಕಾಣುಜೀವಿವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಿಸಲಾಯಿತು (1893). ಸ್ಪ್ಯಾನಿಷ್-ಅಮೆರಿಕನ್ ಯುದ್ಧದಲ್ಲಿ ಸ್ಪೇನಿಗರ ತುಪಾಕಿಗಳಿಂದ ಹತರಾದ ಅಮೆರಿಕನ್ ಯೋಧರ ಸಂಖ್ಯೆಗಿಂತ ಬಲು ಮಿಗಿಲಾಗಿ ಸೋಂಕು ಬೇನೆಗಳಿಂದ ಮಡಿದವರ ಸಂಖ್ಯೆ ಇತ್ತು. ಟೈಫಾಯಿಡ್ ಜ್ವರದ ಕಾರಣ ಮತ್ತು ಪಿಡುಗುರೂಪದ ಹರಡಿಕೆ ಬಗ್ಗೆ ತಿಳಿಯಲು ನೇಮಕಗೊಂಡ ಆಯೋಗದ ಮುಖ್ಯಸ್ಥ ಇವನೇ ಆಗಿದ್ದ. ಆಗ ಜನರನ್ನು ಬಾಧಿಸುತ್ತಿದ್ದ ಇನ್ನೊಂದು ಪಿಡುಗು ಹಳದಿಜ್ವರ. ಇದು ಏಕಾಣುಜೀವಿಜನ್ಯ ರೋಗವೆಂದು ರೀಡ್ ರುಜುವಾತಿಸಿದ (1897). ಯುದ್ಧ ಮುಗಿದಾಗ (1899) ಈತನನ್ನು ಹಳದಿ ಜ್ವರದ ಕಾರಣ ಶೋಧಿಸುವ ಆಯೋಗದ ಮುಖ್ಯಸ್ಥನಾಗಿ ನೇಮಿಸಿ ಕ್ಯೂಬಾಕ್ಕೆ (ತಾತ್ಕಾಲಿಕವಾಗಿ ಅಮೆರಿಕದ ರಕ್ಷಣೆಗೆ ಒಳಪಟ್ಟ ದೇಶ) ನಿಯೋಜಿಸಲಾಯಿತು. ಈತನ ಅಧ್ಯಯನ ಎರಡು ಮುಖ್ಯ ಸಂಗತಿಗಳನ್ನು ಶ್ರುತಪಡಿಸಿತು. ದೇಹಸಂಪರ್ಕ, ಬಟ್ಟೆ, ಹಾಸಿಗೆ ಮುಂತಾದವುಗಳ ಮೂಲಕ ಹಳದಿಜ್ವರ ಹರಡುವುದಿಲ್ಲ, ಬದಲು, ಸೊಳ್ಳೆ ಕಡಿತವೇ ಇದರ ಕಾರಣ. ಏಡಿಸ್ ಎಂದು ಈ ಸೊಳ್ಳೆಯ ಹೆಸರು. ಇದರ ಪ್ರಜನನ ಮೂಲವನ್ನೇ ನಾಶಗೊಳಿಸಬೇಕು, ಅಲ್ಲದೇ ಸೊಳ್ಳೆಯ ಕಡಿತವಾಗದಂತೆ ಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೀಡ್ ತೀರ್ಮಾನಿಸಿದ. ಈತ ಇನ್ನೂ ಒಂದು ಸಂಶೋಧನೆ ಮಾಡಿದ: ಹಳದಿಜ್ವರವಾಹಕ ಸೊಳ್ಳೆಗಳು ವಾಸ್ತವವಾಗಿ ವಿಶಿಷ್ಟ ಬಗೆಯ ವೈರಸುಗಳನ್ನು ಒಯ್ಯುವ ಮಧ್ಯವರ್ತಿಗಳು ಮಾತ್ರ, ವ್ಯಕ್ತಿಗಳನ್ನು ಸೊಳ್ಳೆಗಳು ಕಡಿದಾಗ ವೈರಸ್ ಅವರ ರಕ್ತಗತವಾಗಿ ಮುಂದೆ ಜ್ವರಕ್ಕೆ ಕಾರಣವಾಗುತ್ತದೆ (1901). ನಿಜಕ್ಕೂ ವೈರಸ್‌ಜನ್ಯ ಪ್ರಥಮ ಮಾನವ ವ್ಯಾಧಿಯೇ ಹಳದಿಜ್ವರ. ರೀಡ್‌ನ ಸಂಶೋಧನೆ ಫಲವಾಗಿ ಹವಾನದಿಂದ ಹಳದಿಜ್ವರ ಸಂಪೂರ್ಣವಾಗಿ ಉಚ್ಚಾಟನೆಗೊಂಡಿತು. ಉಲ್ಲೇಖಗಳು ಹೆಚ್ಚಿನ ಓದಿಗೆ Bean, William B., Walter Reed: A Biography, Charlottesville: University Press of Virginia, 1982. Bean, William B., "Walter Reed and Yellow Fever", JAMA 250.5 (August 5, 1983): 659–62. Pierce J.R., (2005). Yellow Jack: How Yellow Fever Ravaged America and Walter Reed Discovered its Deadly Secrets. John Wiley and Sons. ಹೊರಗಿನ ಕೊಂಡಿಗಳು Video: Reed Medical Pioneers Biography on Health.mil – The Military Health System provides a look at the life and work of Walter Reed. WRAMC Website Reed History ವರ್ಗ:ವಿಜ್ಞಾನಿಗಳು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ರಾಧೆ ದೇವಿ
https://kn.wikipedia.org/wiki/ರಾಧೆ_ದೇವಿ
ರಾಧೆ ದೇವಿಯವರು ಭಾರತೀಯ ವಧುವಿನ ಉಡುಗೆ ವಿನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ೨೦೨೧ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಆರಂಭಿಕ ಜೀವನ ರಾಧೆ ದೇವಿಯವರು ಮಣಿಪುರದ ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ಸೊರೊಖೈಬಾಮ್ ಲೈಕೈ ಮೂಲದವರು. "Child bride to bridalwear designer: The story of Manipur's newest Padma Shri". The Indian Express. 2021-01-28. Retrieved 2022-06-11. ವೃತ್ತಿ ರಾಧೆ ದೇವಿಯವರು ತಮ್ಮ ೨೫ ನೇ ವಯಸ್ಸಿನಲ್ಲಿ ಪೊಟ್ಲೋಯ್ ಪ್ರಕ್ರಿಯೆಯ ಕಲಿಕೆಯ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಖಂಬಾ-ತೊಯ್ಬಿ ನೃತ್ಯಕ್ಕಾಗಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. "88-Year-Old Manipuri Textile Veteran Awarded Padma Shri". femina.in. Retrieved 2022-06-11. ಪ್ರಶಸ್ತಿಗಳು ೨೦೨೧ ರಲ್ಲಿ ಪದ್ಮಶ್ರೀ "Child bride to bridalwear designer: The story of Manipur's newest Padma Shri". The Indian Express. 2021-01-28. Retrieved 2022-06-11. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
ಬಿಟಿಎಸ್
https://kn.wikipedia.org/wiki/ಬಿಟಿಎಸ್
ಬಿಟಿಎಸ್ ಅಥವಾ ಬ್ಯಾಂಗ್ಟನ್ ಬಾಯ್ಸ್ ಎಂದೂ ಕರೆಯುತ್ತಾರೆ, ಇದು 2010 ರಲ್ಲಿ ರೂಪುಗೊಂಡ ದಕ್ಷಿಣ ಕೊರಿಯಾದ ಬಾಯ್ ಬ್ಯಾಂಡ್ ಆಗಿದೆ. ಬ್ಯಾಂಡ್ ಜಿನ್, ಸುಗಾ, ಜೆ-ಹೋಪ್, ಆರ್ಎಮ್, ಜಿಮಿನ್, ವಿ ಮತ್ತು ಜಂಗ್‌ಕೂಕ್ ಅನ್ನು ಒಳಗೊಂಡಿದೆ, ಅವರು ತಮ್ಮ ಹೆಚ್ಚಿನ ವಸ್ತುಗಳನ್ನು ಸಹ-ಬರೆಯುತ್ತಾರೆ ಅಥವಾ ಸಹ-ನಿರ್ಮಾಣ ಮಾಡುತ್ತಾರೆ. ಮೂಲತಃ ಹಿಪ್ ಹಾಪ್ ಗುಂಪು, ಅವರು ತಮ್ಮ ಸಂಗೀತ ಶೈಲಿಯನ್ನು ವ್ಯಾಪಕ ಶ್ರೇಣಿಯ ಪ್ರಕಾರಗಳನ್ನು ಸಂಯೋಜಿಸಲು ವಿಸ್ತರಿಸಿದರು, ಆದರೆ ಅವರ ಸಾಹಿತ್ಯವು ಮಾನಸಿಕ ಆರೋಗ್ಯ, ಶಾಲಾ ವಯಸ್ಸಿನ ಯುವಕರ ತೊಂದರೆಗಳು ಮತ್ತು ವಯಸ್ಸಿಗೆ ಬರುವುದು, ನಷ್ಟ, ಸ್ವಯಂ ಪ್ರೀತಿಯ ಕಡೆಗೆ ಪ್ರಯಾಣ ಸೇರಿದಂತೆ ವಿಷಯಗಳ ಮೇಲೆ ಕೇಂದ್ರೀಕರಿಸಿದೆ ., ವ್ಯಕ್ತಿವಾದ, ಮತ್ತು ಖ್ಯಾತಿ ಮತ್ತು ಮನ್ನಣೆಯ ಪರಿಣಾಮಗಳು. ಅವರ ಧ್ವನಿಮುದ್ರಿಕೆ ಮತ್ತು ಪಕ್ಕದ ಕೆಲಸವು ಸಾಹಿತ್ಯ, ತತ್ವಶಾಸ್ತ್ರ ಮತ್ತು ಮನೋವಿಜ್ಞಾನವನ್ನು ಉಲ್ಲೇಖಿಸಿದೆ ಮತ್ತು ಪರ್ಯಾಯ ಬ್ರಹ್ಮಾಂಡದ ಕಥಾಹಂದರವನ್ನು ಒಳಗೊಂಡಿದೆ . ಬಿಟಿಎಸ್ 2013 ರಲ್ಲಿ ಬಿಗ್ ಹಿಟ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಏಕ ಆಲ್ಬಂ 2 ಕೂಲ್ 4 ಸ್ಕೂಲ್‌ನೊಂದಿಗೆ ಪ್ರಾರಂಭವಾಯಿತು . BTS ತಮ್ಮ ಮೊದಲ ಕೊರಿಯನ್ ಮತ್ತು ಜಪಾನೀಸ್ ಭಾಷೆಯ ಸ್ಟುಡಿಯೋ ಆಲ್ಬಂಗಳಾದ ಡಾರ್ಕ್ & ವೈಲ್ಡ್ ಮತ್ತು ವೇಕ್ ಅಪ್ ಅನ್ನು ಕ್ರಮವಾಗಿ 2014 ರಲ್ಲಿ ಬಿಡುಗಡೆ ಮಾಡಿತು . ಗುಂಪಿನ ಎರಡನೇ ಕೊರಿಯನ್ ಸ್ಟುಡಿಯೋ ಆಲ್ಬಂ , ವಿಂಗ್ಸ್ (2016), ದಕ್ಷಿಣ ಕೊರಿಯಾದಲ್ಲಿ ಒಂದು ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡಿದ ಮೊದಲನೆಯದು . 2017 ರ ಹೊತ್ತಿಗೆ, BTS ಜಾಗತಿಕ ಸಂಗೀತ ಮಾರುಕಟ್ಟೆಗೆ ಪ್ರವೇಶಿಸಿತು ಮತ್ತು ಕೊರಿಯನ್ ವೇವ್ ಅನ್ನು ಯುನೈಟೆಡ್ ಸ್ಟೇಟ್ಸ್‌ಗೆ ಮುನ್ನಡೆಸಿತು, ಅವರ ಏಕಗೀತೆ " ಮೈಕ್ ಡ್ರಾಪ್ " ಗಾಗಿ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಶನ್ ಆಫ್ ಅಮೇರಿಕಾ (RIAA) ನಿಂದ ಚಿನ್ನದ ಪ್ರಮಾಣೀಕರಣವನ್ನು ಪಡೆದ ಮೊದಲ ಕೊರಿಯನ್ ಮೇಳವಾಯಿತು. ತಮ್ಮ ಸ್ಟುಡಿಯೋ ಆಲ್ಬಂ ಲವ್ ಯುವರ್‌ಸೆಲ್ಫ್: ಟಿಯರ್ (2018) ನೊಂದಿಗೆ ಬಿಲ್‌ಬೋರ್ಡ್ 200 ಅನ್ನು ಅಗ್ರಸ್ಥಾನಕ್ಕೇರಿಸಿದ ದಕ್ಷಿಣ ಕೊರಿಯಾದ ಮೊದಲ ಕಾರ್ಯವಾಗಿದೆ . 2020 ರಲ್ಲಿ, ಬೀಟಲ್ಸ್ (1966-1968 ರಲ್ಲಿ) ಎರಡು ವರ್ಷಗಳಲ್ಲಿ ನಾಲ್ಕು US ನಂಬರ್-ಒನ್ ಆಲ್ಬಮ್‌ಗಳನ್ನು ಪಟ್ಟಿ ಮಾಡಿದ ಕೆಲವೇ ಗುಂಪುಗಳಲ್ಲಿ BTS ಒಂದಾಯಿತು, ಲವ್ ಯುವರ್‌ಸೆಲ್ಫ್: ಉತ್ತರ (2018) ಪ್ಲಾಟಿನಂ ಪ್ರಮಾಣೀಕರಿಸಿದ ಮೊದಲ ಕೊರಿಯನ್ ಆಲ್ಬಂ ಆಯಿತು . RIAA; ಅದೇ ವರ್ಷದಲ್ಲಿ, ಬಿಲ್ಬೋರ್ಡ್ ಹಾಟ್ ಎರಡರಲ್ಲೂ ಪ್ರಥಮ ಸ್ಥಾನವನ್ನು ತಲುಪಿದ ಮೊದಲ ಸಂಪೂರ್ಣ ದಕ್ಷಿಣ ಕೊರಿಯಾದ ಆಕ್ಟ್ ಕೂಡ ಆಯಿತು. 100 ಮತ್ತು ಬಿಲ್ಬೋರ್ಡ್ ಗ್ಲೋಬಲ್ ಅವರ ಗ್ರ್ಯಾಮಿ-ನಾಮನಿರ್ದೇಶಿತ ಸಿಂಗಲ್ " ಡೈನಮೈಟ್ " ನೊಂದಿಗೆ 200 . ಫಾಲೋ-ಅಪ್ ಬಿಡುಗಡೆಗಳು " ಸ್ಯಾವೇಜ್ ಲವ್ ", " ಲೈಫ್ ಗೋಸ್ ಆನ್ ", " ಬಟರ್ ", ಮತ್ತು " ಪರ್ಮಿಷನ್ ಟು ಡ್ಯಾನ್ಸ್ " 2006 ರಲ್ಲಿ ಜಸ್ಟಿನ್ ಟಿಂಬರ್ಲೇಕ್ ನಂತರ ನಾಲ್ಕು US ನಂಬರ್ ಒನ್ ಸಿಂಗಲ್ಸ್ ಗಳಿಸಿದ ಅತ್ಯಂತ ವೇಗದ ಕಾರ್ಯವನ್ನು ಮಾಡಿತು . ಜೂನ್ 14, 2022 ರಂದು, ಗುಂಪು ತಮ್ಮ 18 ತಿಂಗಳ ಕಡ್ಡಾಯ ದಕ್ಷಿಣ ಕೊರಿಯಾದ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಲು ಸದಸ್ಯರಿಗೆ ಅನುವು ಮಾಡಿಕೊಡಲು ಗುಂಪು ಚಟುವಟಿಕೆಗಳಲ್ಲಿ ನಿಗದಿತ ವಿರಾಮವನ್ನು ಘೋಷಿಸಿತು, 2025 ಕ್ಕೆ ಪುನರ್ಮಿಲನವನ್ನು ಯೋಜಿಸಲಾಗಿದೆ ಜಿನ್, ಅತ್ಯಂತ ಹಳೆಯ ಸದಸ್ಯ, ಡಿಸೆಂಬರ್ 13, 2022 ರಂದು ಸೇರ್ಪಡೆಗೊಂಡರು; ಇತರರು 2023 ರಲ್ಲಿ ಅನುಸರಿಸಿದರು .
ತುಂಗಾ ಸೇತುವೆ
https://kn.wikipedia.org/wiki/ತುಂಗಾ_ಸೇತುವೆ
ಭಾರತದ ಕರ್ನಾಟಕದ ತೀರ್ಥಹಳ್ಳಿಯಲ್ಲಿರುವ ತುಂಗಾ ಸೇತುವೆ ತುಂಗಾ ನದಿಗೆ ಅಡ್ಡಲಾಗಿರುವ ಅತ್ಯಂತ ಹಳೆಯ ಸೇತುವೆಗಳಲ್ಲಿ ಒಂದಾಗಿದೆ . ಈ ಸೇತುವೆಯು 75 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಇದನ್ನು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ವಿನ್ಯಾಸಗೊಳಿಸಿದ್ದಾರೆ ಮತ್ತು ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಿದ್ದಾರೆ. ಈ ಸೇತುವೆಯು ಕುರುವಳ್ಳಿ ಪ್ರದೇಶವನ್ನು ತೀರ್ಥಹಳ್ಳಿಯೊಂದಿಗೆ ಸಂಪರ್ಕಿಸುತ್ತದೆ. ತುಂಗಾ ಸೇತುವೆಯನ್ನು ಜಯಚಾಮರಾಜೇಂದ್ರ ಸೇತುವೆ ಎಂದೂ ಕರೆಯುತ್ತಾರೆ . ತುಂಗಾ ಸೇತುವೆಯು ಅನೇಕ ಪ್ರವಾಸಿಗರನ್ನು ಸೆಳೆಯುತ್ತದೆ, ವಿಶೇಷವಾಗಿ ವಾರಾಂತ್ಯದಲ್ಲಿ ಸೇತುವೆಯ ವಿಶಿಷ್ಟತೆಯನ್ನು ನೋಡಲು . ಸೇತುವೆಯ ರಚನೆ ಈ ಸೇತುವೆಯು ಮೇಲ್ಭಾಗದಲ್ಲಿ ಆರ್ಕ್-ರೀತಿಯ ರಚನೆಯನ್ನು ಹೊಂದಿದೆ, ಇದನ್ನು ಸೇತುವೆಯ ಎರಡೂ ಬದಿಗಳಲ್ಲಿ ಸತತವಾಗಿ ಕಂಬಗಳು ಬೆಂಬಲಿಸುತ್ತವೆ.ಮೇಲ್ಭಾಗದಲ್ಲಿ ಕಿರಣದಂತಹ ರಚನೆಗಳಿವೆ, ಎರಡು ಚಾಪಗಳನ್ನು ಸಂಪರ್ಕಿಸುತ್ತದೆ, ಛಾವಣಿಯಂತೆ ಕಾಣುತ್ತದೆ. ಈ ವಿಶಿಷ್ಟ ಸೇತುವೆಯು ಸಿಡ್ನಿ ಹಾರ್ಬರ್ ಸೇತುವೆ ಅನ್ನು ಹೋಲುತ್ತದೆ ಆದರೆ ಸ್ವಲ್ಪ ವ್ಯತ್ಯಾಸವಿದೆ. ಇತಿಹಾಸ ಸೇತುವೆಯನ್ನು 1943 ರಲ್ಲಿ ಪೂರ್ಣಗೊಳಿಸಲಾಯಿತು ಮತ್ತು ನಂತರ ಮೈಸೂರಿನ ಮಹಾರಾಜ ಹೆಚ್. ಹೆಚ್ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದರು ಮತ್ತು ಅವರ ಹೆಸರನ್ನು ಇಡಲಾಯಿತು. ಉಲ್ಲೇಖಗಳು
೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)
https://kn.wikipedia.org/wiki/೨೦೨೪_ಸಂಯುಕ್ತ_ಅರಬ್_ಸಂಸ್ಥಾನ_ತ್ರಿ-ರಾಷ್ಟ್ರ_ಸರಣಿ_(ಸುತ್ತು_೨)
೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿಯು ೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಫೆಬ್ರವರಿ ಮತ್ತು ಮಾರ್ಚ್ ೨೦೨೪ ರಲ್ಲಿ ಯು.ಎ.ಇ ನಲ್ಲಿ ನಡೆಯಿತು ತ್ರಿ-ರಾಷ್ಟ್ರಗಳ ಸರಣಿಯನ್ನು ಯುಎಇ, ಸ್ಕಾಟ್ಲೆಂಡ್ ಮತ್ತು ಕೆನಡಾದ ಪುರುಷರ ರಾಷ್ಟ್ರೀಯ ತಂಡಗಳು ಸ್ಪರ್ಧಿಸಿದ್ದವು. ಪಂದ್ಯಗಳನ್ನು ಏಕದಿನ ಅಂತರಾಷ್ಟ್ರೀಯ (ODI) ಪಂದ್ಯಗಳಾಗಿ ಆಡಲಾಯಿತು. ತ್ರಿಕೋನ ಸರಣಿಯ ನಂತರ, ಯುಎಇ ಮತ್ತು ಸ್ಕಾಟ್ಲೆಂಡ್ ಮೂರು ಪಂದ್ಯಗಳ ಟ್ವೆಂಟಿ೨೦ ಇಂಟರ್ನ್ಯಾಷನಲ್ (ಟಿ೨೦ಐ) ಸರಣಿಯನ್ನು ಆಡಿದರು. ಸ್ಕಾಟ್ಲೆಂಡ್ ಸರಣಿಯನ್ನು ೨-೧ ರಿಂದ ಗೆದ್ದುಕೊಂಡಿತು. ಲೀಗ್ ೨ ಸರಣಿ ತಂಡಗಳು ಸಾದ್ ಬಿನ್ ಜಫರ್ (ನಾಯಕ) ದಿಲ್ಪ್ರೀತ್ ಬಜ್ವ ಉದಯ್ ಭಗವಾನ್ ನವನೀತ್ ಧಲಿವಾಲ್ ನಿಖಿಲ್ ದತ್ತ ಡಿಲ್ಲನ್ ಹೇಲಿಗರ್ ಆರನ್ ಜಾನ್ಸನ್ ನಿಕೋಲಸ್ ಕರ್ಟನ್ ಅಮ್ಮರ್ ಖಾಲಿದ್ ಶ್ರೇಯಸ್ ಮೊವ್ವ (wk) ಕಲೀಮ್ ಸನಾ ಪರ್ಗತ್ ಸಿಂಗ್ ಈಶ್ವರ್ಜೋತ್ ಸೋಹಿ ಹರ್ಷ್ ಠಾಕರ್ ಶ್ರೀಮಂತ ವಿಜೆರತ್ನೆ (wk) ರಿಚಿ ಬೆರಿಂಗ್ಟನ್ (ನಾಯಕ) ಮ್ಯಾಥ್ಯೂ ಕ್ರಾಸ್ (wk) ಬ್ರಾಡ್ ಕರ್ರಿ ಸ್ಕಾಟ್ ಕರ್ರಿ ಕ್ರಿಸ್ ಗ್ರೀವ್ಸ್ ಓಲಿ ಹೇರ್ಸ್ ಮೈಕಲ್ ಲೀಸ್ಕ್ ಬ್ರ್ಯಾಂಡನ್ ಮೆಕ್ಮಲ್ಲೇನ್ ಜಾರ್ಜ್ ಮುನ್ಸಿ ಸಫ್ಯಾನ್ ಷರೀಫ್ ಕ್ರಿಸ್ ಸೋಲ್ ಹಮ್ಜಾ ತಾಹಿರ್ ಚಾರ್ಲಿ ಟಿಯರ್ (wk) ಆಂಡ್ರ್ಯೂ ಉಮೀದ್ ಮಾರ್ಕ್ ವ್ಯಾಟ್ ಬ್ರಾಡ್ ವೀಲ್ ಮುಹಮ್ಮದ್ ವಸೀಮ್ (ನಾಯಕ) ಆಯನ್ ಅಫ್ಜಲ್ ಖಾನ್ ವ್ರೀತ್ಯಾ ಅರವಿಂದ್ (wk) ರಾಹುಲ್ ಭಾಟಿಯಾ ರಾಹುಲ್ ಚೋಪ್ರಾ ಬೇಸಿಲ್ ಹಮೀದ್ ಆಸಿಫ್ ಖಾನ್ ಜಹೂರ್ ಖಾನ್ ಆಕಿಫ್ ರಾಜ ಓಮಿದ್ ಶಾಫಿ ಅಲಿಷಾನ್ ಶರಾಫೂ ಸಂಚಿತ್ ಶರ್ಮಾ ಜುನೈದ್ ಸಿದ್ದೀಕ್ ತನೀಶ್ ಸೂರಿ (wk) ಜುಹೇಬ್ ಜುಬೇರ್ ಮಾರ್ಚ್ 5 ರಂದು, ಗಾಯಗೊಂಡ ಆಂಡ್ರ್ಯೂ ಉಮೀದ್ ಬದಲಿಗೆ ಸ್ಕಾಟ್ಲೆಂಡ್ ಒಲಿ ಹೇರ್ಸ್ ಅನ್ನು ಹೆಸರಿಸಿತು. ಪಂದ್ಯಗಳು ೧ನೇ ಏಕದಿನ ೨ನೇ ಏಕದಿನ ೩ನೇ ಏಕದಿನ ೪ನೇ ಏಕದಿನ ೫ನೇ ಏಕದಿನ ೬ನೇ ಏಕದಿನ ಸಂಯುಕ್ತ ಅರಬ್ ಸಂಸ್ಥಾನ ವಿರುದ್ಧ ಸ್ಕಾಟ್ಲೆಂಡ್ ಟಿ೨೦ಐ ಸರಣಿ ತಂಡಗಳು ಮುಹಮ್ಮದ್ ವಸೀಮ್ (ನಾಯಕ​) ವ್ರೀತ್ಯ​ ಅರವಿಂದ್ (wk) ರಾಹುಲ್ ಚೋಪ್ರಾ ಬೇಸಿಲ್ ಹಮೀದ್ ನೀಲಾನ್ಶ್ ಕೇಸ್ವಾನಿ ಆಯನ್ ಅಫ್ಜಲ್ ಖಾನ್ ಆರ್ಯನ್ ಲಾಕ್ರಾ ಹಜರತ್ ಲುಕ್ಮಾನ್ ಓಮಿದ್ ಶಫಿ ಆಕಿಫ್ ರಾಜಾ ಅಲಿಶಾನ್ ಶರಾಫು ಜುನೈದ್ ಸಿದ್ದಿಕ್ ತನೀಶ್ ಸೂರಿ (wk) ಅಶ್ವಂತ್ ವಾಲ್ಥಾಪ​ ಜುಹೇಬ್ ಜುಬೇರ್ ರಿಚಿ ಬೆರಿಂಗ್ಟನ್ (ನಾಯಕ​) ಮ್ಯಾಥ್ಯೂ ಕ್ರಾಸ್ (wk) ಬ್ರಾಡ್ ಕರ್ರಿ ಜೇಮ್ಸ್ ಡಿಕಿನ್ಸನ್ ಕ್ರಿಸ್ ಗ್ರೀವ್ಸ್ ಓಲಿ ಹೇರ್ಸ್ ಜ್ಯಾಕ್ ಜಾರ್ವಿಸ್ ಮೈಕೆಲ್ ಲೀಸ್ಕ್ ಗವಿನ್ ಮೇನ್ ಬ್ರ್ಯಾಂಡನ್ ಮೆಕ್ಮಲ್ಲೇನ್ ಜಾರ್ಜ್ ಮುನ್ಸಿ ಸಫ್ಯಾನ್ ಷರೀಫ್ ಕ್ರಿಸ್ ಸೋಲ್ ಹಮ್ಜಾ ತಾಹಿರ್ ಚಾರ್ಲಿ ಟಿಯರ್ (wk) ಆಂಡ್ರ್ಯೂ ಉಮೀದ್ ಮಾರ್ಕ್ ವ್ಯಾಟ್ ಪಂದ್ಯಗಳು 1st T20I 2nd T20I 3rd T20I ಟಿಪ್ಪಣಿಗಳು ಉಲ್ಲೇಖಗಳು ಬಾಹ್ಯ ಕೊಂಡಿಗಳು Series home at ESPNcricinfo (CWCL2) Series home at ESPNcricinfo (T20I series)
ಮಾಧವೇಂದ್ರ ಬ್ಯಾನರ್ಜಿ
https://kn.wikipedia.org/wiki/ಮಾಧವೇಂದ್ರ_ಬ್ಯಾನರ್ಜಿ
ಮಾಧವೇಂದ್ರ ಬ್ಯಾನರ್ಜಿ (೪ ಜನವರಿ ೧೯೩೪ - ೧೭ ನವೆಂಬರ್ ೨೦೧೯) ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿ. ಇವರು ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಶೌರ್ಯ ಪ್ರಶಸ್ತಿ ಮತ್ತು ವಾಯು ಸೇನಾ ಪದಕ ಪಡೆದಿದ್ದಾರೆ. ಆರಂಭಿಕ ಜೀವನ ಮಾಧವೇಂದ್ರ ಬ್ಯಾನರ್ಜಿಯವರು ೧೯೩೪ ರ ಜನವರಿ ೪ ರಂದು ಕೊಲ್ಕತ್ತಾದಲ್ಲಿ ಶ್ರೀ ಟಿ. ಕೆ. ಬ್ಯಾನರ್ಜಿಯವರ ಮಗನಾಗಿ ಜನಿಸಿದರು. ಮಿಲಿಟರಿ ವೃತ್ತಿಜೀವನ ೧೯೫೫ ರ ಏಪ್ರಿಲ್ ೧೬ ರಂದು ಬ್ಯಾನರ್ಜಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದರು. ಅವರು ೧೯೬೫ ಮತ್ತು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಕಾರ್ಯಪ್ರವೃತ್ತರಾಗಿದ್ದರು. ೧೯೭೧ರ ಯುದ್ಧದ ಸಮಯದಲ್ಲಿ, ಸುಖೋಯ್ ಸು-೩ ವಿಮಾನಗಳನ್ನು ಹೊಂದಿದ ಫೈಟರ್ ಬಾಂಬರ್ ಸ್ಕ್ವಾಡ್ರನ್, ೧೦೧ ನೇ ಸ್ಕ್ವಾಡ್ರನ್ನಲ್ಲಿ ಸ್ಕ್ವಾಡ್ರನ್ನ ನಾಯಕ ಮತ್ತು ಹಿರಿಯ ಪೈಲಟ್ ಆಗಿ, ಅವರು ಶತ್ರುಗಳ ವಿರುದ್ಧ ಹಲವಾರು ಕಾರ್ಯಾಚರಣೆಗಳನ್ನು ಮುನ್ನಡೆಸಿದರು. ಅವುಗಳಲ್ಲಿ ಹೆಚ್ಚಿನವು ಛಾಂಬ್ ಯುದ್ಧಗಳಲ್ಲಿ ಸೇನಾ ಕಾರ್ಯಾಚರಣೆಗಳನ್ನು ಬೆಂಬಲಿಸಿದವು. ಈ ಕಾರ್ಯಾಚರಣೆಗಳ ಸಂದರ್ಭದಲ್ಲಿ, ಶತ್ರುಗಳ ಟ್ಯಾಂಕರ್‌ ಹಾಗೂ ಬಂದೂಕುಗಳನ್ನು ನಾಶಪಡಿಸಿದರು. ಅವರು ಶತ್ರುಗಳ ಮೇಲಿನ ದಾಳಿಗೆ ವೈಯಕ್ತಿಕವಾಗಿ ಜವಬ್ದಾರಿವಹಿಸಿದರು ಮತ್ತು ದಾಳಿಯ ಸಂದರ್ಭದಲ್ಲಿ ಪದೇ ಪದೇ ಯುದ್ಧಕ್ಕೆ ಮರಳುವ ಮೂಲಕ ಶೌರ್ಯ ಮತ್ತು ಕೌಶಲ್ಯವನ್ನು ತೋರಿಸಿದರು. ಇದು ಭಾರತೀಯ ನೆಲದ ಪಡೆಗಳ ಮೇಲೆ ಒತ್ತಡವನ್ನು ನಿವಾರಿಸಿತು ಮತ್ತು ಅವರ ಕಾರ್ಯಾಚರಣೆಗಳನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿತು. ಯುದ್ಧ ಕಾರ್ಯಾಚರಣೆಗಳಲ್ಲಿ ಪ್ರದರ್ಶಿಸಿದ ಶೌರ್ಯ ಮತ್ತು ನಾಯಕತ್ವಕ್ಕಾಗಿ, ಮಾಧವೇಂದ್ರ ಬ್ಯಾನರ್ಜಿ ಅವರಿಗೆ ಮಹಾವೀರ ಚಕ್ರ ನೀಡಲಾಯಿತು. ನಂತರ ಅವರು ನಿವೃತ್ತರಾಗುವ ಮೊದಲು ಏರ್ ವೈಸ್ ಮಾರ್ಷಲ್ ಹುದ್ದೆಗೆ ಏರಿದರು. ಅವರು ತಮ್ಮ ೮೫ ನೇ ವಯಸ್ಸಿನಲ್ಲಿ ೨೦೧೯ ರ ನವೆಂಬರ್ ೧೭ ರಂದು ನಿಧನರಾದರು. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಜ್ಯಾಮಿತಿ
https://kn.wikipedia.org/wiki/ಜ್ಯಾಮಿತಿ
redirect ರೇಖಾಗಣಿತ
ಅಗಸ್ಟ್ ಫರ್ಡಿನಾಂಟ್ ಮೋಬಿಯಸ್
https://kn.wikipedia.org/wiki/ಅಗಸ್ಟ್_ಫರ್ಡಿನಾಂಟ್_ಮೋಬಿಯಸ್
thumb ಅಗಸ್ಟ್ ಫರ್ಡಿನಾಂಟ್ ಮೋಬಿಯಸ್ (1790-1868) ಜರ್ಮನಿಯ ಒಬ್ಬ ಗಣಿತವಿದ, ಸೈದ್ಧಾಂತಿಕ ಖಗೋಳವಿಜ್ಞಾನಿ. ಜನನ, ವಿದ್ಯಾಭ್ಯಾಸ ಜರ್ಮನಿಯ ನಾಮ್‌ಬರ್ಗ್ ಪಟ್ಟಣದ ಸಮೀಪ ಷೂಲ್ಪ್‌ಫೋರ್ಟ ಎಂಬಲ್ಲಿ ಜನನ (17 ನವೆಂಬರ್ 1790). ತಂದೆ ಯೋಹಾನ್ ಹೈನ್ರಿಕ್ ಮೋಬಿಯಸ್; ಷೂಲ್ಪ್‌ಫೋರ್ಟದಲ್ಲಿ ನಾಟ್ಯಾಚಾರ್ಯ. ತಾಯಿ ಯೋಹಾನ್ ಕ್ಯಾತರೀನ್ ಕ್ರಿಸ್ಟಿಯಾನಿ ಕೀಲ್; ಜರ್ಮನಿಯ ದೇವತಾಶಾಸ್ತ್ರಜ್ಞನಾಗಿದ್ದ ಮಾರ್ಟಿನ್ ಲೂಥರ್ ವಂಶಸ್ಥಳು. ಇವರ ಏಕಮಾತ್ರ ಪುತ್ರ ಮೋಬಿಯಸ್. ಇವನ ತಂದೆ 1793ರಲ್ಲಿ ತೀರಿಕೊಂಡ. ಈ ಘಟನೆ ಜರುಗಿದ ಬಳಿಕ ಹೈನ್ರಿಕ್ ಮೋಬಿಯಸ್‌ನ ಅವಿವಾಹಿತ ಸಹೋದರ ನಾಟ್ಯಾಚಾರ್ಯ ವೃತ್ತಿಯನ್ನು ಆತುಕೊಂಡ. ಸಂಸಾರದ ನಿರ್ವಹಣೆಯ ಹೊಣೆಗಾರಿಕೆಯೂ ಇವನ ಮೇಲೆ ಬಿತ್ತು. ವಿಧಿವಶಾತ್ ಈತನೂ 1804ರಲ್ಲಿ ಕಾಲವಾದ. ಮೋಬಿಯಸ್‌ನ 13ನೆಯ ವಯಸ್ಸಿನ ತನಕದ ವಿದ್ಯಾಭ್ಯಾಸವೆಲ್ಲ ಮನೆಯಲ್ಲೇ ನಡೆಯಿತು. ಆ ವೇಳೆಗಾಗಲೇ ಗಣಿತದಲ್ಲಿ ಅಪಾರ ಆಸಕ್ತಿ, ಶ್ರದ್ಧೆಯನ್ನು ಮೋಬಿಯಸ್ ಪ್ರದರ್ಶಿಸಿದ. ಈತ ತನ್ನ ಸಾಂಪ್ರದಾಯಿಕ ವಿದ್ಯಾಭ್ಯಾಸವನ್ನು 1803 ರಿಂದ 1809ರ ತನಕ ಷೂಲ್ಪ್‌ಫೋರ್ಟದಲ್ಲೇ ಮುಂದುವರಿಸಬೇಕಾಯಿತು. ಈ ಸಮಯದಲ್ಲಿ ಇವನಿಗೆ ಮಾರ್ಗದರ್ಶನ ಮಾಡಿದವನೆಂದರೆ ಜರ್ಮನಿಯ ಉಪಜ್ಞೆಕಾರ ಯೋಹಾನ್ ಗಾಟ್ಲೀಬ್ ಷ್ಮಿಟ್. ನ್ಯಾಯ ವಿಷಯವನ್ನು ಕುರಿತಂತೆ ಅಧ್ಯಯನ ಮಾಡುವ ಇಚ್ಛೆಯುಳ್ಳವನಾಗಿ ಮೋಬಿಯಸ್ ಲೀಪ್‌ಜಿಗ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ (1809). ಆದರೆ ಗಣಿತದಲ್ಲಿ ಈತನಿಗಿದ್ದ ಆಸಕ್ತಿ ಇವನ ಮೂಲಆಸಕ್ತಿಯನ್ನು ಮೆಟ್ಟಿ ನಿಂತಿತು. ತತ್ಪರಿಣಾಮವಾಗಿ ಈತ ಮೋರಿಟ್ಸ್ ಫಾನ್ ಪ್ರಾಸೆ ಎಂಬವನ ನೇತೃತ್ವದಲ್ಲಿ ಗಣಿತವನ್ನೂ, ಲಡ್ವಿಗ್ ವಿಲ್‌ಹೆಲ್ಮ್ ಗಿಲ್ಬರ್ಟ್ ಎಂಬವನ ನೇತೃತ್ವದಲ್ಲಿ ಭೌತವಿಜ್ಞಾನವನ್ನೂ ಅಭ್ಯಸಿಸಿದ. ಮೋಲ್‍ವೀಡೆ ಎಂಬವನ ಕೈಕೆಳಗೆ ಖಗೋಳವಿಜ್ಞಾನವನ್ನು ಅಭ್ಯಾಸಮಾಡಿ ಬಳಿಕ ಅವನ ಸಹಾಯಕನೇ ಆದ.August Ferdinand Möbius, The MacTutor History of Mathematics archive. History.mcs.st-andrews.ac.uk. Retrieved on 2017-04-26. ಪ್ರವಾಸಮಾಡುವ ಸಲುವಾಗಿಯೇ ಇವನಿಗೆ ಲಭಿಸಿದ ಗೌರವವೇತನದ ದೆಸೆಯಿಂದ ಮೋಬಿಯಸ್ ಲೀಪ್‌ಜಿಗ್ಗನ್ನು ಬಿಟ್ಟು ಹೊರಟ. ಅಲ್ಲಿಂದ ಗಾಟೆಂಗೆನ್ನಿಗೆ ಬಂದು ಅಲ್ಲಿ ಸೈದ್ಧಾಂತಿಕ ಖಗೋಳವಿಜ್ಞಾನವನ್ನು ಅಧ್ಯಯಮಾಡಿ ಆಗಿನ ಕಾಲಕ್ಕೆ ಪ್ರಸಿದ್ಧನೆನಿಸಿದ್ದ ಜರ್ಮನಿಯ ಖಗೋಳವಿಜ್ಞಾನಿ ಹಾಗೂ ಗಣಿತವಿದ ಕಾರ್ಲ್ ಗೌಸ್‌ನ ಮೈತ್ರಿ ಗಳಿಸಿದ. ಅನಂತರ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ಯೋಹಾನ್ ಫ್ರೆಡರಿಕ್ ಪ್ಯಾಫ್ ಎಂಬವನೊಡಗೂಡಿ ಹಾಲೆ ಎಂಬ ಸ್ಥಳಕ್ಕೆ ಹೋದ. ಇವನ ಗಣಿತಾಚಾರ್ಯ ಪ್ರಾಸೆ 1814ರಲ್ಲಿ ನಿಧನನಾದಾಗ ಮೋಲ್‌ವೀಡೆಗೆ ಬಳಿಕ ಗಣಿತದ ಪ್ರಾಧ್ಯಾಪಕನ ಹುದ್ದೆ ಲಭಿಸಿತು. ಅನಂತರ ಈ ಹುದ್ದೆ ಮೋಬಿಯಸ್ಸನ ಪಾಲಿಗೆ ಬಂತು. ಇವನಿಗೆ 1814ರಲ್ಲಿ ಲೀಪ್‌ಜಿಗ್ ವಿಶ್ವವಿದ್ಯಾಲಯ ಡಾಕ್ಟೋರೇಟ್ ಪದವಿ ನೀಡಿತು. ಹೀಗಾಗಿ ಗಣಿತಶಾಸ್ತ್ರ ಬೋಧನೆಗೆ ಈತ ಅರ್ಹತೆ ಗಳಿಸಿದ. ಇದೇ ವರ್ಷ ತಾನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದ್ದ, ಗ್ರಹಗಳಿಗೆ ಸಂಬಂಧಿಸಿದಂತೆ ಇರುವ ಗ್ರಹಣ ವಿಚಾರವಾಗಿ ಸಿದ್ಧಪಡಿಸಿದ ನಿಬಂಧವನ್ನು ಪ್ರಕಟಿಸಿದ. ವೃತ್ತಿಜೀವನ, ಸಾಧನೆಗಳು 1816ರ ವಸಂತದಲ್ಲಿ ಈತನನ್ನು ಲೀಪ್‌ಜಿಗ್ಗಿನ ವಿಶ್ವವಿದ್ಯಾಲಯದಲ್ಲಿ ಖಗೋಳವಿಜ್ಞಾನದ ವಿಶಿಷ್ಟ ಪ್ರಾಧ್ಯಾಪಕನನ್ನಾಗಿ ಮಾಡಲಾಯಿತು. ಅಲ್ಲಿಯ ಖಗೋಳವಿಜ್ಞಾನ ವೀಕ್ಷಣಾಲಯದ ಖಗೋಳವೀಕ್ಷಕನಾಗಿಯೂ ನೇಮಕಗೊಂಡ. ಈ ವೃತ್ತಿಗಳೆರಡರ ಸಲುವಾಗಿ ಜರ್ಮನಿಯ ಪ್ರಖ್ಯಾತ ಖಗೋಳ ವೀಕ್ಷಣಾಲಯಗಳಿಗೆ ಭೇಟಿ ನೀಡುವುದು ಇವನಿಗೆ ಸಾಧ್ಯವಾಯಿತು. ಹೀಗಾಗಿ ಲೀಪ್‌ಜಿಗ್ಗಿನ ಖಗೋಳ ವೀಕ್ಷಣಾಲಯದ ಪುನರ್ ವ್ಯವಸ್ಥೆ ಹಾಗೂ ನವೀಕರಣಕ್ಕಾಗಿ ಅನೇಕ ಶಿಫಾರಸ್ಸುಗಳನ್ನು ಮಾಡಿದ. ಇವನ್ನು 1821ರಲ್ಲಿ ಕಾರ್ಯರೂಪಕ್ಕೆ ತರಲಾಯಿತು. ಅಲ್ಲಿಗೆ ಬೇರೆ ಬೇರೆ ಉಪಕರಣಗಳನ್ನು ಸೇರ್ಪಡೆ ಮಾಡಲಾಯಿತು. ಅವುಗಳ ಪೈಕಿ 6 ಅಡಿ ಉದ್ದದ ಫ್ರಾನ್‌ಹಾಫರ್ ರಿಫ್ರ್ಯಾಕ್ಟರ್ ಮಾದರಿಯ ದೂರದರ್ಶಕವೂ ಒಂದು. ಮೋಬಿಯಸ್‍ನೊಂದಿಗೆ ವಾಸಮಾಡಲು ಬಂದ ಇವನ ತಾಯಿ 1820ರಲ್ಲಿ ತೀರಿಕೊಂಡಳು. ಅನಂತರ ಈತ ಡೊರೋತೀಯ ಕ್ರಿಸ್ಟಿಯಾನಿ ಯೊಹಾನ ರೋತಿ ಎಂಬವಳನ್ನು ಮದುವೆಯಾದ. ಈಕೆಗೆ ಮುಂದೆ ದೃಷ್ಟಿ ನಷ್ಟವಾಯಿತು. ಈ ದಂಪತಿಗಳಿಗೆ ಒಂದು ಹೆಣ್ಣು ಮಗು (ಎಮಿಲಿ) ಮತ್ತು ಇಬ್ಬರು ಗಂಡು ಮಕ್ಕಳು ಆದುವು. ತಿಯೊಡೋರ್ ಮತ್ತು ಪಾಲ್ ಹೈನ್ರಿಕ್ ಎಂಬ ಹುಡುಗರು ಮುಂದೆ ಪ್ರತಿಭಾವಂತ ಸಾಹಿತಿಗಳಾದರು. ಮೋಬಿಯಸ್‍ನಿಗೆ ಗ್ರೀಫ್‌ಸ್ವಾಲ್ಡ್‌ನಲ್ಲಿ ಖಗೋಳವಿಜ್ಞಾನಿಯ ಹುದ್ದೆಯನ್ನೂ (1816) ಡಾರ್‌ಪತ್‌ನಲ್ಲಿ ಗಣಿತವಿಜ್ಞಾನಿಯ ಹುದ್ದೆಯನ್ನೂ (1819) ವಹಿಸಿಕೊಳ್ಳುವಂತೆ ಆದೇಶಗಳು ಬಂದರೂ ಲೀಪ್‌ಜಿಗ್‌ನಲ್ಲಿರಲೆಂದೇ ಅವನ್ನು ಈತ ತಿರಸ್ಕರಿಸಿದ. ಈತನನ್ನು 1829ರಲ್ಲಿ ಬರ್ಲಿನ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನನ್ನಾಗಿ ಮಾಡಲಾಯಿತು. ಇದು 1844ರ ತನಕವೂ ಇದ್ದು ಆ ಬಳಿಕ ಇವನನ್ನು ಜೇನದಲ್ಲಿ ಇದ್ದ ಜೆ. ಎಫ್. ಫ್ರೈಸ್ ಎಂಬವನ ಸ್ಥಾನವನ್ನು ಹೊಂದಲು ಆಹ್ವಾನಿಸಲಾಯಿತು. ಆ ವೇಳೆಗೆ ಇವನಿಗೆ ಲೀಪ್‌ಜಿಗ್ ವಿಶ್ವವಿದ್ಯಾಲಯದಲ್ಲಿ ಖಗೋಳವಿಜ್ಞಾನ ಮತ್ತು ಉಚ್ಚತರ ಬಲವಿಜ್ಞಾನಗಳ ಪ್ರಾಧ್ಯಾಪಕನ ಹುದ್ದೆಗೆ ಬಡ್ತಿ ಒದಗಿ ಬಂತು. ಈತ 1848 ರಲ್ಲಿ ಅಲ್ಲಿಯ ವೀಕ್ಷಣಾಲಯದ ನಿರ್ದೇಶಕನಾದ. ಇವನ ಅಳಿಯ ದ. ಅರೆಸ್ಟ್ ಎಂಬವನಿಗೆ ಖಗೋಳ ವಿಕ್ಷಕನ ಹುದ್ದೆ ಲಭಿಸಿತು. ಮೋಬಿಯಸ್ ಪ್ರವಾಸ ಮಾಡುತ್ತಿದ್ದುದು ಬಲು ವಿರಳ. ತನ್ನ ಎಲ್ಲ ಗಮನವನ್ನು ತನ್ನ ಅಧ್ಯಯನ, ಖಗೋಳ ವೀಕ್ಷಣಾಲಯ ಮತ್ತು ತನ್ನ ಸಂಸಾರದ ಬಗ್ಗೆಯೇ ಹರಿಸಿದ್ದ. ಇವನ ಬರೆವಣಿಗೆ ಪೂರ್ಣವಾಗಿ ಪಕ್ವವೂ ಸೋಪಜ್ಞವೂ ಆಗಿತ್ತು. ಆಗಿನ ಕಾಲದ ಗಣಿತ ಸಾಹಿತ್ಯವನ್ನು ಈತ ಅಷ್ಟೇನೂ ಅಧ್ಯಯನ ಮಾಡದಿದ್ದರಿಂದ ಈತನ ಬರೆವಣಿಗೆಗಳಲ್ಲಿ ಉಲ್ಲೇಖಿತವಾದಂಥ ಕೆಲವೊಂದು ವಿಚಾರಗಳನ್ನು ಬೇರೆಯವರು ಆ ವೇಳೆಗಾಗಲೇ ಕಂಡುಕೊಂಡಿದ್ದನ್ನು ತಾನೇ ಗಮನಿಸಿಕೊಂಡ. ಇವನ ತನಿಖೆಗಳು ಹೊಸ ಹೊಸ ಫಲಿತಾಂಶಗಳನ್ನು ನೀಡದಿದ್ದರೂ ಆಗಿನ ಪ್ರಚಲಿತ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೆಚ್ಚು ಪರಿಣಾಮಕಾರಿ ಹಾಗೂ ಸರಳ ವಿಧಾನಗಳನ್ನು ರೂಪಿಸುವ ಧ್ಯೇಯವುಳ್ಳವಾಗಿದ್ದವು. ತನ್ನ 77 ನೆಯ ಹುಟ್ಟುಹಬ್ಬವನ್ನು ಆಚರಿಸಿದ (1868) ಕೆಲವೇ ದಿವಸಗಳಲ್ಲಿ ಈತ ಲೀಪ್‌ಜಿಗ್ಗಿನಲ್ಲೇ ತೀರಿಕೊಂಡ (26 ಸೆಪ್ಟೆಂಬರ್ 1868). ಇದಾದ ಒಂಭತ್ತು ವರ್ಷಗಳ ಅನಂತರ ಈತನ ಹೆಂಡತಿಯೂ ತೀರಿಹೋದಳು. ಕೊಡುಗೆಗಳು ಮೋಬಿಯಸ್ ಗಣಿತ ಮತ್ತು ಖಗೋಳವಿಜ್ಞಾನಗಳಿಗೆ ಸಂಬಂಧಿಸಿದ ಹಲವಾರು ಕೃತಿಗಳನ್ನು ಪ್ರಕಟಿಸಿದ. ಗ್ರಹಗಳಿಗೆ ಸಂಬಂಧಿಸಿದಂತೆ ಗ್ರಹಣಗಳನ್ನು ಕುರಿತ ಗ್ರಂಥವನ್ನು 1815 ರಲ್ಲೂ, ಖಗೋಳವಿಜ್ಞಾನದ ಮೂಲತತ್ತ್ವಗಳು ಎಂಬ ವಿಷಯವನ್ನು ಕುರಿತಂತೆ ಒಂದು ಗ್ರಂಥವನ್ನು 1836 ರಲ್ಲೂ, ಖಗೋಳೀಯ ಬಲವಿಜ್ಞಾನದ ಮೂಲಾಧಾರಗಳನ್ನೂ ಕುರಿತಂತೆ ಒಂದು ಗ್ರಂಥವನ್ನು 1843 ರಲ್ಲೂ ಪ್ರಕಟಿಸಿದ. ಗಣಿತದಲ್ಲಿ ಅದರಲ್ಲೂ ಮುಖ್ಯವಾಗಿ ಜ್ಯಾಮಿತಿ ಮತ್ತು ಟಾಪಾಲಜಿ ಕ್ಷೇತ್ರ ಮತ್ತು ಅಂಕಗಣಿತದಲ್ಲಿ ಗಮನಾರ್ಹವಾದ ಸಂಶೋಧನೆಗಳನ್ನು ಮೋಬಿಯಸ್ ನಡೆಸಿದ. ಈತನ ಕೃತಿಗಳನ್ನು 1828-58 ರ ಕ್ರೆಲ್ಲೆ ಎಂಬವನ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. 1827 ರಲ್ಲಿ ಪ್ರಕಟವಾದ ಗುರುತ್ವಕೇಂದ್ರಗಳ ಗಣನಾವಿನ್ಯಾಸ ಎಂಬ ವಿಷಯ ಕುರಿತ ಗ್ರಂಥದಲ್ಲಿ ಸಮಘಾತೀಯ ನಿರ್ದೇಶಾಂಕ ಮತ್ತು ಜ್ಯಾಮಿತೀಯ ಪರಿವರ್ತನೆಗಳ ವಿಚಾರ ಜ್ಯಾಮಿತಿಯ ಅಡಿಯಲ್ಲಿ ಅಳವಡಿಸಲಾಗಿದೆ.August Ferdinand Möbius: Der barycentrische Calcul, Verlag von Johann Ambrosius Barth, Leipzig, 1827. ಮೋಬಿಯಸ್ ಜಾಲ ಎಂಬ ಹೆಸರಿನ ವಿಶೇಷಾಕೃತಿಯೊಂದರ ವಿಚಾರ ವಿಕ್ಷೇಪಣಾ ಜ್ಯಾಮಿತಿಯ ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ. 1837 ರಲ್ಲಿ ಪ್ರಕಟವಾದ ಸ್ಥಿತಿ ವಿಜ್ಞಾನವನ್ನು ಕುರಿತ ಗ್ರಂಥದಲ್ಲಿ ಜ್ಯಾಮಿತಿಯ ನಿರೂಪಣೆಯಿಂದ ಶೂನ್ಯ ಬಿಂದು ಮತ್ತು ಶೂನ್ಯ ಸಮತಲಗಳನ್ನು, ಆಕಾಶದಲ್ಲಿಯ ರೇಖಾ ವ್ಯವಸ್ಥೆಗಳನ್ನೂ ಕುರಿತಾದ ಪ್ರೌಢ ಪ್ರತಿಪಾದನೆ ಇದೆ. ಟಾಪಾಲಜಿ ಕ್ಷೇತ್ರದಲ್ಲೂ ಈತ ಮೂಲಭೂತ ಸಂಶೋಧನೆಗಳನ್ನು ನಡೆಸಿದ. ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಗೆ ನೀಡಿದ ಲೇಖನವೊಂದರಲ್ಲಿ ಈತ ಪ್ರತಿಪಾದಿಸಿದ್ದ ಏಕಪಾರ್ಶ್ವೀಯ ಮೇಲ್ಮೈಯ ವಿಚಾರ ಈತನ ಮರಣಾನಂತರ ಬೆಳಕಿಗೆ ಬಂತು. ಇದೇ ಮೇಲ್ಮೈಯನ್ನು ಮೋಬಿಯಸ್ ಪಟ್ಟಿ (ಮೋಬಿಯಸ್ ಸ್ಟ್ರಿಪ್) ಎಂದು ಕರೆಯುವುದಿದೆ. ಆಯತಾಕಾರದ ಪಟ್ಟಿಯೊಂದರ ತುದಿಗಳನ್ನು ಅರ್ಧ ತಿರುಚಿ ಆ ತುದಿಗಳನ್ನು ಪರಸ್ಪರ ಅಂಟಿಸಿದರೆ ಈ ಪಟ್ಟಿ ಲಭಿಸುತ್ತದೆ. ಇದಕ್ಕೆ ಒಂದೇ ಪಾರ್ಶ್ವವಿರುತ್ತದೆ. ಹಾಗೂ ಇದನ್ನು ಉದ್ದಕ್ಕೂ ನಡುವೆ ಕತ್ತರಿಸುತ್ತ ಹೋದರೆ ಇದು ಎರಡು ಭಾಗಗಳಾಗದೆ, ಒಂದೇ ಭಾಗವಾಗಿ ಉಳಿಯುವುದು ಇದರ ಇನ್ನೊಂದು ಗುಣವಿಶೇಷ. ಉಲ್ಲೇಖಗಳು ಹೊರಗಿನ ಕೊಂಡಿಗಳು August Ferdinand Möbius - Œuvres complètes Gallica-Math A beautiful visualization of Möbius Transformations, created by mathematicians at the University of Minnesota is viewable at https://www.youtube.com/watch?v=JX3VmDgiFnY ವರ್ಗ:ಗಣಿತಜ್ಞರು ವರ್ಗ:ಖಗೋಳ ಶಾಸ್ತ್ರಜ್ಞರು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ನೈಜ್ಯ ಸಂಖ್ಯೆ
https://kn.wikipedia.org/wiki/ನೈಜ್ಯ_ಸಂಖ್ಯೆ
REDIRECT ನೈಜ ಸಂಖ್ಯೆ
ಸಾದ್ ಬಿನ್ ಜಫರ್
https://kn.wikipedia.org/wiki/ಸಾದ್_ಬಿನ್_ಜಫರ್
ಸಾದ್ ಬಿನ್ ಜಫರ್ (ಜನನ 10 ನವೆಂಬರ್ 1986) ಒಬ್ಬ ಪಾಕಿಸ್ತಾನಿ-ಕೆನಡಾದ ಅಂತರಾಷ್ಟ್ರೀಯ ಕ್ರಿಕೆಟಿಗ, ಇವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆನಡಾವನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರಸ್ತುತ ಪುರುಷರ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ. ಸಾದ್ ಎಡಗೈ ಆಲ್ ರೌಂಡರ್ . "Saad Bin Zafar". ESPNcricinfo. Retrieved 10 April 2019. ಪುರುಷರ T20I ಪಂದ್ಯದಲ್ಲಿ ಒಂದು ರನ್ ಬಿಟ್ಟುಕೊಡದೆ ತನ್ನ ಗರಿಷ್ಠ ಕೋಟಾ ಓವರ್‌ಗಳನ್ನು (20-ಓವರ್‌ಗಳ ಪಂದ್ಯದಲ್ಲಿ 4 ಓವರ್‌ಗಳು) ಪೂರ್ಣಗೊಳಿಸಿದ್ದಕ್ಕಾಗಿ ಸಾದ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ ಮತ್ತು T20I ವೃತ್ತಿಜೀವನದಲ್ಲಿ 7 ನೇ ಅತಿ ಹೆಚ್ಚು ಮೊದಲ ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಸಾದ್ ಪ್ರಸ್ತುತ T20I ಇನ್ನಿಂಗ್ಸ್‌ನಲ್ಲಿ 414.28 ರ 3 ನೇ ಅತ್ಯಧಿಕ ಸ್ಟ್ರೈಕ್ ರೇಟ್‌ನ ದಾಖಲೆಯನ್ನು ಹೊಂದಿದ್ದಾರೆ. https://stats.espncricinfo.com/ci/content/records/284190.html ಉಲ್ಲೇಖಗಳು
ಮೋಬಿಯಸ್ ಉತ್ಪನ್ನ
https://kn.wikipedia.org/wiki/ಮೋಬಿಯಸ್_ಉತ್ಪನ್ನ
ಮೋಬಿಯಸ್ ಉತ್ಪನ್ನವು ಒಂದು ಅಂಕೋತ್ಪನ್ನ.Möbius function. Encyclopedia of Mathematics. URL: http://encyclopediaofmath.org/index.php?title=M%C3%B6bius_function&oldid=54235 ಈ ಅಂಕೋತ್ಪನ್ನ (ಅರಿತ್‌ಮೆಟಿಕಲ್ ಫಂಕ್ಷನ್)  ಎಂಬುದು ಅಂಕಗಣಿತಕ್ಕೆ ಮೋಬಿಯಸ್ ನೀಡಿದ ಉತ್ತಮ ಕೊಡುಗೆ. ಇಲ್ಲಿ x = ಚರ. ಇದು ಒಂದು ನೈಸರ್ಗಿಕ ಸಂಖ್ಯೆ. ಎಂದರೆ  ಎಂಬುದು ಎಲ್ಲ ನೈಸರ್ಗಿಕ ಸಂಖ್ಯೆಗಳ ಗಣವಾದರೆ, x ಇದರಲ್ಲಿ ಯಾವ ಸಂಖ್ಯೆಯಾದರೂ ಆಗಿರಬಹುದು. ಅರ್ಥಾತ್  ಉತ್ಪನ್ನದ ಪ್ರಾಂತ್ಯ (domain) N ಎಂದಾಗುತ್ತದೆ. N ಪ್ರಾಂತ್ಯವಾಗಿರುವ ಉತ್ಪನ್ನಗಳನ್ನು ಅಂಕೋತ್ಪನ್ನ ಎಂದು ಕರೆಯುವುದಿದೆ. ಈಗ  ಆಗಿದ್ದು ಅದು ಯಾವ ನೈಸರ್ಗಿಕ ಸಂಖ್ಯೆಯೇ ಆಗಲಿ, ಅದನ್ನು ಕೆಲವು ಅವಿಭಾಜ್ಯ ಸಂಖ್ಯೆಗಳ ಗುಣಲಬ್ಧವಾಗಿ ಅನುವರ್ತಿಸುವುದು. ಇಂಥ ಅಪವರ್ತನವು (factor) ಏಕೈಕ ಮಾತ್ರ. ಇದರಲ್ಲಿ ಕೆಲವು ಅವಿಭಾಜ್ಯಗಳು (ಪ್ರೈಮ್ಸ್) ಒಂದಕ್ಕಿಂತ ಹೆಚ್ಚು ಸಲ ಬಂದಿರಬಹುದು. ಉದಾಹರಣೆ (1): 12 = 2 x 2 x 3. ಇಲ್ಲಿ ಅವಿಭಾಜ್ಯ 2. ಇದು ಎರಡು ಬಾರಿ ಬಂದಿದೆ. ಉದಾಹರಣೆ (2): 15 = 3 x 5. ಇದು ಎರಡು ಪರಸ್ಪರ ಭಿನ್ನವಾದ ಅವಿಭಾಜ್ಯಗಳಾದ 3 ಮತ್ತು 5 ರ ಗುಣಲಬ್ಧ. ಮೋಬಿಯಸ್ ಉತ್ಪನ್ನದ ವ್ಯಾಖ್ಯಾನ ಈ ಹಿನ್ನೆಲೆಯಲ್ಲಿ ಮೋಬಿಯಸ್ ಉತ್ಪನ್ನ  ವನ್ನು ಹೀಗೆ ವ್ಯಾಖ್ಯಾನಿಸಲಾಗುತ್ತದೆ: ವ್ಯಾಖ್ಯೆ 1:  ಮತ್ತು ಆದಾಗ x ಎಂಬುದು n ಪರಸ್ಪರ ಭಿನ್ನ ಅವಿಭಾಜ್ಯಗಳ ಗುಣಲಬ್ಧವಾಗಿದ್ದರೆ  ಎಂದಾಗುತ್ತದೆ. ಹಾಗಲ್ಲದೆ x ನ ಅವಿಭಾಜ್ಯ ಅಪವರ್ತನೀಕರಣದಲ್ಲಿ ಯಾವುದೇ ಅವಿಭಾಜ್ಯ ಅಪವರ್ತನ ಒಂದಕ್ಕಿಂತ ಹೆಚ್ಚುಸಲ ಪುನರಾವರ್ತಿಸಿದ್ದರೆ, ಎಂದು ವ್ಯಾಖ್ಯಾನಿಸಲಾಗುವುದು. ಉದಾಹರಣೆ (1):  ಮತ್ತು ವ್ಯಾಖ್ಯೆ 2:  ಯಾವುದೇ ನೈಜಸಂಖ್ಯೆಯಾಗಿರಲಿ. ಈಗ  ಆಗುವಂಥ ಕನಿಷ್ಠತಮ ಪೂರ್ಣಾಂಕ (whole number) n ಏಕೈಕವಾಗಿ ಅಸ್ತಿತ್ವದಲ್ಲಿರುತ್ತದೆ. ಈ n ನನ್ನು  ನ ಪೂರ್ಣಭಾಗ ಎಂದು ಕರೆಯಲಾಗುತ್ತದೆ. ಇದನ್ನು  ಎಂದು ಸಾಂಕೇತಿಕವಾಗಿ ಬರೆಯಲಾಗುವುದು. ಪ್ರಮೇಯಗಳು ಈ ವ್ಯಾಖ್ಯೆಗಳ ಹಿನ್ನೆಲೆಯಲ್ಲಿ  ಉತ್ಪನ್ನದ ಕೆಲವು ಮುಖ್ಯ ಗುಣ ವಿಶೇಷಗಳನ್ನು ಮುಂದಿನ ಪ್ರಮೇಯಗಳಲ್ಲಿ ಸೂಚಿಸಲಾಗಿದೆ. ಪ್ರಮೇಯ 1: a ಯಾವುದೇ ನೈಸರ್ಗಿಕ ಸಂಖ್ಯೆಯಾದರೂ ಆದಾಗ ಇಲ್ಲಿ d ಯು a ಯ ಅಪವರ್ತನಗಳನ್ನು ಸೂಚಿಸುತ್ತದೆ. Σ ಎಂಬ ಪ್ರತೀಕವಾದರೊ Σ ಸಂಕಲನ a ಯ ಎಲ್ಲ ಅಪವರ್ತನ d ಗಳ ಮೇಲೆ ಸಾಗಿದೆ ಎಂದು ತಿಳಿಸುತ್ತದೆ. ಪ್ರಮೇಯ 2: ; ; j=1 ಪ್ರಮೇಯ 3: m > 1 ಆದರೆ,  ಪ್ರಮೇಯ 4: P ಯಾವುದೇ ಅಂಕೋತ್ಪನವಾದರೂ  ಆಗಿದ್ದರೆ, ಇದರ ವಿಲೋಮ ಸಂಬಂಧ ಪರಿಪಾಲಿತವಾಗುತ್ತದೆ. ಇದು ಪ್ರಸಿದ್ಧವಾದ ಮೋಬಿಯಸ್ ವಿಲೋಮಸೂತ್ರ. ಉಲ್ಲೇಖಗಳು ಮೂಲಗಳು ಹೊರಗಿನ ಕೊಂಡಿಗಳು ವರ್ಗ:ಗಣಿತ ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಮುಹಮ್ಮದ್ ವಸೀಮ್
https://kn.wikipedia.org/wiki/ಮುಹಮ್ಮದ್_ವಸೀಮ್
ಮುಹಮ್ಮದ್ ವಸೀಮ್ (ಜನನ ೧೨ ಫೆಬ್ರವರಿ ೧೯೯೬) ಒಬ್ಬ ಪಾಕಿಸ್ತಾನಿ ಮೂಲದ ಕ್ರಿಕೆಟಿಗ, ಇವರು ಸಂಯುಕ್ತ ಅರಬ್ ಸಂಸ್ಥಾನ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ. ಅಂತರರಾಷ್ಟ್ರೀಯ ವೃತ್ತಿಜೀವನ ಅಕ್ಟೋಬರ್ 2021 ರಲ್ಲಿ, 2021 ರ ಬೇಸಿಗೆ T20 ಬ್ಯಾಷ್ ಪಂದ್ಯಾವಳಿಗಾಗಿ ಯು.ಎ.ಇ ಯ ಟ್ವೆಂಟಿ೨೦ ಇಂಟರ್ನ್ಯಾಷನಲ್ (T20I) ತಂಡದಲ್ಲಿ ವಸೀಮ್ ಅವರನ್ನು ಹೆಸರಿಸಲಾಯಿತು. ಅವರು ನಮೀಬಿಯ ವಿರುದ್ಧ ಯು.ಎ.ಇ ಗಾಗಿ 5 ಅಕ್ಟೋಬರ್ 2021 ರಂದು ತಮ್ಮ T20I ಚೊಚ್ಚಲ ಪಂದ್ಯವನ್ನು ಮಾಡಿದರು. ಐದು ದಿನಗಳ ನಂತರ, ಐರ್ಲೆಂಡ್ ವಿರುದ್ಧದ ಯು.ಎ.ಇ ಪಂದ್ಯದಲ್ಲಿ, ವಸೀಮ್ T20I ಕ್ರಿಕೆಟ್‌ನಲ್ಲಿ ತನ್ನ ಮೊದಲ ಶತಕವನ್ನು ಗಳಿಸಿದರು, 62 ಎಸೆತಗಳಲ್ಲಿ 107 ಔಟಾಗದೆ. ನವೆಂಬರ್ 2021 ರಲ್ಲಿ, ಅವರು 2021 ನಮೀಬಿಯ ತ್ರಿ-ರಾಷ್ಟ್ರ ಸರಣಿಗಾಗಿ ಯು.ಎ.ಇ ಯ ಏಕದಿನ ಅಂತಾರಾಷ್ಟ್ರೀಯ (ODI) ತಂಡದಲ್ಲಿ ಹೆಸರಿಸಲ್ಪಟ್ಟರು. ಫೆಬ್ರವರಿ 2022 ರಲ್ಲಿ, ಓಮನ್ ವಿರುದ್ಧದ ಅವರ ಸರಣಿಗಾಗಿ ಯು.ಎ.ಇ ಯ ODI ತಂಡದಲ್ಲಿಯೂ ಸಹ ಅವರನ್ನು ಹೆಸರಿಸಲಾಯಿತು. ಅವರು 5 ಫೆಬ್ರವರಿ 2022 ರಂದು ಒಮಾನ್ ವಿರುದ್ಧ ತಮ್ಮ ODI ಚೊಚ್ಚಲ ಪಂದ್ಯವನ್ನು ಮಾಡಿದರು. ಮಾರ್ಚ್ 2023 ರಲ್ಲಿ ಸಿ.ಪಿ ರಿಜ್ವಾನ್ ಬದಲಿಗೆ ವಸೀಮ್ ಅವರನ್ನು ಯುಎಇ ನಾಯಕರನ್ನಾಗಿ ನೇಮಿಸಲಾಯಿತು. ಉಲ್ಲೇಖಗಳು
ಚಾಂದ್ರಮಾನ ಹೊಸ ವರ್ಷ
https://kn.wikipedia.org/wiki/ಚಾಂದ್ರಮಾನ_ಹೊಸ_ವರ್ಷ
ಚಾಂದ್ರಮಾನದ ಹೊಸ ವರ್ಷ ಚಂದ್ರನ ಪಂಚಾಂಗಗಳನ್ನು ಆಧರಿಸಿದ ಹೊಸ ವರ್ಷ ಪ್ರಾರಂಭವಾಗಿದೆ. ಚಂದ್ರನ ಪಂಚಾಂಗಗಳು ಚಂದ್ರನ ಹಂತವನ್ನು ಅನುಸರಿಸಿದರೆ ಚಂದ್ರಸೌರ ಪಂಚಾಂಗಗಳು ಚಂದ್ರ ಮತ್ತು ಸೌರ ವರ್ಷದ ಸಮಯ ಎರಡನ್ನೂ ಅನುಸರಿಸುತ್ತವೆ. ಈ ಆಚರಣೆಯನ್ನು ಹಲವಾರು ಸಂಸ್ಕೃತಿಗಳು ವಿವಿಧ ದಿನಾಂಕಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಅತ್ಯಂತ ಪ್ರಸಿದ್ಧವಾದ ಆಚರಣೆಗಳಲ್ಲಿ (ಲುನಿಸೋಲಾರ್ ಚೀನೀ ಕ್ಯಾಲೆಂಡರ್ ಮತ್ತು ಪೂರ್ವ ಏಷ್ಯಾ ಟಿಬೆಟಿಯನ್ ಕ್ಯಾಲೆಂಡರ್ ಆಗ್ನೇಯ ಮತ್ತು ದಕ್ಷಿಣ ಏಷ್ಯಾ ಬೌದ್ಧ ಮತ್ತು ಹಿಂದೂ ಕ್ಯಾಲೆಂಡರ್ಗಳು ಮತ್ತು ಮಧ್ಯಪ್ರಾಚ್ಯದಲ್ಲಿ ಹುಟ್ಟಿದ ಇಸ್ಲಾಮಿಕ್ ಕ್ಯಾಲೆಂಡರ್ ಹಾಗೂ (ಚಂದ್ರಸೌರ) ಯಹೂದಿ ಕ್ಯಾಲೆಂಡರ್ ಆಧಾರಿತ ಹೊಸ ವರ್ಷಗಳು ಸೇರಿವೆ. ಹೊಸ ಚಂದ್ರ ಅಥವಾ ಚಂದ್ರನ ವರ್ಷದ ಮೊದಲ ತಿಂಗಳ ನಿರ್ಧಾರವು ಆಯಾ ಸಂಸ್ಕೃತಿ ಆಚರಣೆಯಿಂದ ಬದಲಾಗುತ್ತದೆ. ವ್ಯಾಖ್ಯಾನ ಚಂದ್ರನ ಹೊಸ ವರ್ಷವು ತಮ್ಮ ಪಂಚಾಂಗದ ಮೊದಲ ಅಮಾವಾಸ್ಯೆಯಂದು ವಿಶ್ವದಾದ್ಯಂತ ಶತಕೋಟಿ ಜನರು ಆಚರಿಸುವ ಒಂದು ಸಂದರ್ಭವಾಗಿದೆ. ಇದನ್ನು ಇಂಗ್ಲಿಷಿನಲ್ಲಿ "ಲೂನಾರ್ ನ್ಯೂ ಇಯರ್" ಎಂದು ಉಲ್ಲೇಖಿಸಲಾಗಿದೆ. ಇದು ಚಂದ್ರನ ಪಂಚಾಂಗ ಮತ್ತು ಚಂದ್ರಸೂರ್ಯ ಪ್ರಂಚಾಂಗ ಆಧಾರಿತ ಆಚರಣೆಗಳನ್ನು ಸೂಚಿಸುವ ಹೆಸರಾಗಿದೆ. ಇಸ್ಲಾಮಿಕ್ ಹೊಸ ವರ್ಷ (ಹಿಜ್ರಿ ಹೊಸ ವರ್ಷ ಅಥವಾ 1 ಮುಹರ್ರಂ ಎಂದೂ ಕರೆಯುತ್ತಾರೆ) ಇಸ್ಲಾಮಿಕ್ ಕ್ಯಾಲೆಂಡರ್ ನಿರ್ಧರಿಸಲಾಗುತ್ತದೆ. ಇದು ಚಂದ್ರನ ಕ್ಯಾಲೆಂಡರ್‌ಗಳನ್ನು ಮರುಹೊಂದಿಸಲು ಬಳಸುವ ಸೌರ ಚಕ್ರವನ್ನು ನಿರ್ಲಕ್ಷಿಸುವ ಸಂಪೂರ್ಣ ಚಂದ್ರನ ಪಂಚಾಂಗವಾಗಿದೆ.  ಪೂರ್ವ ಮತ್ತು ಮಧ್ಯ ಏಷ್ಯಾದಲ್ಲಿ ಚೀನೀ ಹೊಸ ವರ್ಷ ಚಂದ್ರನ ಹೊಸ ವರ್ಷದ ಆಚರಣೆಗಳು ಚಂದ್ರಸೌರ ಪಂಚಾಂಗವನ್ನು ಆಧರಿಸಿವೆ. ಚೀನೀ ಹೊಸ ವರ್ಷವು ಸಾಮಾನ್ಯವಾಗಿ ಚಳಿಗಾಲದ ಅಯನ ಸಂಕ್ರಾಂತಿಯ ನಂತರ ಎರಡನೇ ಅಮಾವಾಸ್ಯೆಯಂದು ಬರುತ್ತದೆ (ಒಂದು ಅಂತರ ಮಾಸಿಕ ಮಧ್ಯಂತರದಲ್ಲಿ ಅಪರೂಪವಾಗಿ ಮೂರನೇ ತಿಂಗಳು ಬರುತ್ತದೆ). ಕೊರಿಯಾ ಮತ್ತು ವಿಯೆಟ್ನಾಂನಂನಲ್ಲಿ ಚಂದ್ರನ ಹೊಸ ವರ್ಷದ ಆಚರಣೆಗಳು ಸಾಮಾನ್ಯವಾಗಿ ಚೀನೀ ಕ್ಯಾಲೆಂಡರ್ ಅಥವಾ ಅದರ ವ್ಯತ್ಯಾಸವನ್ನು ಆಧರಿಸಿರುವುದರಿಂದ ಜನವರಿ ಅಥವಾ ಫೆಬ್ರವರಿಯಲ್ಲಿ ಚೀನೀ ಆಚರಣೆಯ ಅದೇ ದಿನದಂದು ಬರುತ್ತವೆ. ಆದಾಗ್ಯೂ, ಆಚರಣೆಯ ಪದ್ಧತಿಗಳು ಮತ್ತು ರಜಾದಿನದ ಅವಧಿಗಳು ಭಿನ್ನವಾಗಿರಬಹುದು. ಬರ್ಮೀಸ್, ಕಾಂಬೋಡಿಯನ್, ಲಾವೊ, ಶ್ರೀಲಂಕಾ ಮತ್ತು ಥಾಯ್ ಜನರಂತಹ ಇತರ ಸಂಸ್ಕೃತಿಗಳ ಲುನಿಸೋಲಾರ್ ಹೊಸ ವರ್ಷದ ಆಚರಣೆಗಳು ಬೌದ್ಧ ಪಂಚಾಂಗ ಆಧರಿಸಿವೆ ಮತ್ತು ಏಪ್ರಿಲ್ ಮಧ್ಯದಲ್ಲಿ ನಡೆಯುತ್ತವೆ. Galdan Namchot: Ladakh Losoong: Sikkim Losar: Arunachal Pradesh (Monpas) Gyalpo Lhosar: Sherpas Tamu Lhosar: Gurungs Sonam Lhosar: Tamangs ಭಾರತ ಭಾರತದಾದ್ಯಂತ ಸಾಂಪ್ರದಾಯಿಕ ಮತ್ತು ಧಾರ್ಮಿಕ ಜೀವನದಲ್ಲಿ ವಿವಿಧ ಚಂದ್ರನನ್ನು ಆಧರಿಸಿದ ಪಂಚಾಂಗಗಳನ್ನು ಬಳಸಲಾಗುತ್ತಿದೆ. ಆದಾಗ್ಯೂ, ಅವು ಪೂರ್ವ ಏಷ್ಯಾದಲ್ಲಿ ಬಳಸಲಾಗುವ ಚೀನೀ ಚಂದ್ರನ ಸೌರ ಪಂಚಾಂಗಕ್ಕಿಂತ ಭಿನ್ನವಾಗಿವೆ. ಭಾರತದಲ್ಲಿ ಚಂದ್ರನ ಹೊಸ ವರ್ಷದ ಎರಡು ಸಾಮಾನ್ಯ ಆಚರಣೆಗಳೆಂದರೆ ದೀಪಾವಳಿ ಮತ್ತು ಗುಡಿ ಪಡ್ವಾ/ಯುಗಾದಿ/ಪುಥಂಡು. ದೀಪಾವಳಿ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬರುತ್ತದೆ. ಗುಡಿ ಪಡ್ವಾ/ಯುಗಾದಿ/ಪುಥಾಂಡು ಸಾಮಾನ್ಯವಾಗಿ ಎಪ್ರಿಲ್ ತಿಂಗಳಲ್ಲಿ ಬರುತ್ತದೆ. ಆಗ್ನೇಯ ಏಷ್ಯಾ ಮುಂದಿನ ಆಗ್ನೇಯ ಏಷ್ಯಾ ಚಂದ್ರನ ಹೊಸ ವರ್ಷದ ಆಚರಣೆಯನ್ನು ಸ್ಥಳೀಯ ಚಂದ್ರನ ಸೌರ ಪಂಚಾಂಗದ ಪ್ರಕಾರ ಆಚರಿಸಲಾಗುತ್ತದೆ. ಇದು ಭಾರತೀಯ ಹಿಂದೂ ಸಂಪ್ರದಾಯಗಳಿಂದ ಪ್ರಭಾವಿತವಾಗಿದೆ. ನೈಪಿ (ಬಾಲಿ ಹೊಸ ವರ್ಷ) : ಬಾಲಿ, ಇಂಡೋನೇಷ್ಯಾ ರಿಜಾ ನುಕಾನ್ (ಚಾಮ್ ಹೊಸ ವರ್ಷ): ಚಾಮ್ಸ್ ಕೆಳಗಿನ ಆಗ್ನೇಯ ಏಷ್ಯಾದ ಚಂದ್ರನ ಹೊಸ ವರ್ಷದ ಆಚರಣೆಯನ್ನು ಸ್ಥಳೀಯ ಚಂದ್ರನ ಸೌರ ಪಂಚಾಂಗದ ಪ್ರಕಾರ ಆಚರಿಸಲಾಗುತ್ತದೆ ಮತ್ತು ಇದು ಇಸ್ಲಾಮಿಕ್ ಸಂಪ್ರದಾಯಗಳಿಂದ ಪ್ರಭಾವಿತವಾಗಿದೆ. ಸಾತು ಸುರೊ (ಜಾವನೀಸ್ ಹೊಸಾತು ಸುರೋ): ಜಾವನೀಸ್ ಕ್ಯಾಲೆಂಡರ್ 12 ತಿಂಗಳುಗಳ ಸಂಪೂರ್ಣ ಚಂದ್ರನ ಕ್ಯಾಲೆಂಡರ್ ಅನ್ನು ಅನುಸರಿಸುತ್ತದೆ. ಇದು ಗ್ರೆಗೋರಿಯನ್ ಮತ್ತು ಜೂಲಿಯನ್ ಕ್ಯಾಲೆಂಡರ್ ವರ್ಷಗಳನ್ನು ಹಿಮ್ಮೆಟ್ಟಿಸುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ನಲ್ಲಿರುವಂತೆ, ಜಾವನೀಸ್ ಹೊಸ ವರ್ಷದ ದಿನವು ಕ್ಯಾಲೆಂಡರ್‌ನಲ್ಲಿ ಯಾವುದೇ ಋತುವಿನಲ್ಲಿ ಬರಬಹುದು. ಮಲೇಷ್ಯಾ ಮಲೇಷ್ಯಾ ಬಹುಸಂಸ್ಕೃತಿಯ ದೇಶವಾಗಿದೆ. ಮಲೇಷ್ಯಾದಲ್ಲಿ ಮೂರು ಪ್ರಬಲ ಜನಾಂಗೀಯ ಗುಂಪುಗಳೆಂದರೆ ಮಲಯರು, ಚೀನೀಯರು ಮತ್ತು ಭಾರತೀಯರು. ಪ್ರತಿಯೊಂದು ಗುಂಪು ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಹಬ್ಬಗಳನ್ನು ಹೊಂದಿದೆ. ಮಲಯರು, ಚೀನೀಯರು ಮತ್ತು ಭಾರತೀಯರು ಆಚರಿಸುವ ಮೂರು ಪ್ರಮುಖ ಹಬ್ಬಗಳಾದ ಹರಿ ರಾಯಾ ಪೂಸಾ, ಚೀನೀಯ ಹೊಸ ವರ್ಷ ಮತ್ತು ಭಾರತೀಯರ ದೀಪಾವಳಿ ಹಬ್ಬಗಳಿಗೆ ಸಾರ್ವಜನಿಕ ರಜಾದಿನಗಳನ್ನು ಘೋಷಿಸಲಾಗುತ್ತದೆ. ಸಿಂಗಾಪುರ್ ಚಂದ್ರನ ಹೊಸ ವರ್ಷವನ್ನು ಸಿಂಗಾಪುರದಲ್ಲಿ ಅಧಿಕೃತವಾಗಿ "ಚೀನೀ ಹೊಸ ವರ್ಷ" ಎಂದು ಕರೆಯಲಾಗುತ್ತದೆ. ಇದನ್ನು ಸಿಂಗಾಪುರದಲ್ಲಿ ಮುಖ್ಯವಾಗಿ ಚೀನಾದ ವಲಸಿಗರು, ಪೆರಾನಾಕನ್ನರು ಮತ್ತು ಅವರ ವಂಶಸ್ಥರು ಆಚರಿಸುತ್ತಾರೆ. ಅವರು ಅಲ್ಲಿನ ಜನಸಂಖ್ಯೆಯ ಮುಕ್ಕಾಲು ಭಾಗವನ್ನು ಹೊಂದಿದ್ದಾರೆ. ಅವರಲ್ಲಿ ಆಗ್ನೇಯ ಚೀನಾದ ಹೊಕೀನ್, ಕ್ಯಾಂಟನೀಸ್ ಮತ್ತು ಟಿಯೋಚೆವ್, ಚೀನಾದಾದ್ಯಂತ ಹರಡಿರುವ ದ್ವೀಪ ಪ್ರಾಂತ್ಯದ ಹೈನಾನ್ ಹಕ್ಕಾದವರು ಸೇರಿದ್ದಾರೆ. ಪೇರನಕನ್ನರು ಈ ಪ್ರದೇಶದಲ್ಲಿ 400 ವರ್ಷಗಳಿಂದ ಇದ್ದಾರೆ. ಮಿಶ್ರ ಮಲಯ ಮತ್ತು ಯುರೋಪಿಯನ್ ವಂಶಾವಳಿಯನ್ನು ಹೊಂದಿದ್ದಾರೆ. ಪ್ರತಿಯೊಂದು ಜನಾಂಗೀಯ ಗುಂಪು ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿವೆ. ಜೊತೆಗೆ ಮಲಯರು ಮತ್ತು ಭಾರತೀಯರಂತಹ ಇತರ ಸಂಸ್ಕೃತಿಗಳ ಅಂಶಗಳನ್ನು ಒಳಗೊಂಡ ಹೊಸ ಸಂಪ್ರದಾಯಗಳನ್ನು ಸೃಷ್ಟಿಸುತ್ತದೆ. ವಿಯೆಟ್ನಾಂ thumb|ವಿಯೆಟ್ನಾಂ 2022 ಉಲ್ಲೇಖಗಳು ಗ್ರಂಥಸೂಚಿ ಬಾಹ್ಯ ಸಂಪರ್ಕಗಳು
ಲಿಲಿಯಂ ಕಾಂಕೋಲರ್
https://kn.wikipedia.org/wiki/ಲಿಲಿಯಂ_ಕಾಂಕೋಲರ್
ಲಿಲಿಯಂ ಕಾನ್ಕೋಲರ್ (ಮಾರ್ನಿಂಗ್ ಸ್ಟಾರ್ ಲಿಲಿ ಎಂದೂ ಕರೆಯಲ್ಪಡುತ್ತದೆ) ಲಿಲಿ ಕುಟುಂಬ ಹೂಬಿಡುವ ಸಸ್ಯದ ಒಂದು ಜಾತಿಯಾಗಿದ್ದು, ಇದು ಚೀನಾ, ಜಪಾನ್, ಕೊರಿಯಾ ಮತ್ತು ರಷ್ಯಾಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ.Lilium Asiatic Section A-C. ಇತರ ಪ್ರಭೇದಗಳೊಂದಿಗೆ ಇದರ ಸಂಬಂಧವು ಸ್ಪಷ್ಟವಾಗಿಲ್ಲ, ಆದ ಇದು ಲಿಲಿಯಂ ಪ್ಯೂಮಿಲಮ್ ಕೆಲವು ಹೋಲಿಕೆಗಳನ್ನು ಹೊಂದಿದೆ.Haw, Stephen. ಇತಿಹಾಸ ಲಿಲಿಯಂ ಕಾಂಕಲರ್ ಅನ್ನು ಮೊದಲು ೧೭೯೦ರಲ್ಲಿ ಚಾರ್ಲ್ಸ್ ಫ್ರಾನ್ಸಿಸ್ ಗ್ರೆವಿಲ್ಲೆ ಅವರು ಚೀನಾದ ಗುವಾಂಗ್ಝೌ ನಿಂದ ತಂದು ಬ್ರಿಟನ್ ಗೆ ಪರಿಚಯಿಸಿದರು. ಅವರು ಪ್ಯಾಡಿಂಗ್ಟನ್ ನಲ್ಲಿ ತಮ್ಮ ತೋಟದಲ್ಲಿ ಈ ಸಸ್ಯವನ್ನು ಬೆಳೆಸಿದರು. ೧೮೪೦ರ ದಶಕದಲ್ಲಿ, ಇದನ್ನು ಶಾಂಘೈ ರಾಬರ್ಟ್ ಫಾರ್ಚೂನ್ ಪರಿಚಯಿಸಿದರು.Haw, Stephen. ವಿವರಣೆ ಲಿಲಿಯಂ ಕಾಂಕಲರ್ ಎಂಬುದು ದೀರ್ಘಕಾಲಿಕ ಲಿಲಿ ಆಗಿದ್ದು, ಇದು ಸಮುದ್ರ ಮಟ್ಟದಿಂದ ೩೫೦-೨೦೦೦ ಮೀಟರ್ಗಳಷ್ಟು ಎತ್ತರದಲ್ಲಿ ಕಂಡುಬರುತ್ತದೆ.Haw, Stephen. ಇದು ಕಾಂಡದಿಂದ ಅಬಿವೃದ್ಧಿ ಪಡಿಸುವ ಸಸ್ಯವಾಗಿದ್ದು, ಇದರ ಬೇರನ್ನು ಕಾಂಡದ ಉದ್ದಕ್ಕೂ ಗಂಟುಗಳಲ್ಲಿ ಬರಿಸಬಹುದಾಗಿದೆ. ಅಂದರೆ ಇದು ಅದರ ಬಲ್ಬ್ಗಳ ಮೇಲೆ ಮತ್ತು ಕಾಂಡಗಳ ಉದ್ದಕ್ಕೂ ಬೇರುಗಳನ್ನು ಬೆಳೆಯಬಹುದು.Morning Star Lily. ಇದರ ಕಾಂಡಗಳು ಟೆರೆಟ್ (ಸಿಲಿಂಡರಾಕಾರದ) ಸುಮಾರು ಹೊಳಪುಳ್ಳದ್ದಾಗಿದ್ದು ನಯವಾಗಿರುತ್ತವೆ.Ohwi, Jisaburo. ಅವು ಕೆಂಪು-ಹಸಿರು ಬಣ್ಣವನ್ನು ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ಪ್ರತಿ ಕಾಂಡಕ್ಕೆ ೧ ರಿಂದ ೫ ಹೂವುಗಳೊಂದಿಗೆ ಸೆಂ. ಮೀ. ಎತ್ತರ ಬೆಳೆಯುತ್ತವೆ.  ಕಾಂಡದ ತಳದ ಬಳಿ ನೇರಳೆ ಬಣ್ಣದ ವರ್ಣದ್ರವ್ಯವಿದೆ. ಎಲೆಗಳು ಹಸಿರು, ಚದುರಿದ ಮತ್ತು ಅಂಚುಗಳಲ್ಲಿ ಮತ್ತು ಕೆಳಭಾಗದಲ್ಲಿ ಸಣ್ಣ ಕೂದಲನ್ನು ಹೊಂದಿರುವ ಈಟಿ ಆಕಾರಕ್ಕೆ ರೇಖಾತ್ಮಕವಾಗಿರುತ್ತವೆ. ಅವು ಸಾಮಾನ್ಯವಾಗಿ ೩.೫-೭ ಸೆಂ. ಮೀ. ಉದ್ದ ಮತ್ತು ೩-೬ ಮಿಮೀ ಅಗಲವಿರುತ್ತವೆ. ಗದ್ದೆ ಅಂಡಾಕಾರದ (ಮೊಟ್ಟೆಯ ಆಕಾರದ) ಮತ್ತು ೨-೩.೫ ಸೆಂ. ಮೀ. ಎತ್ತರ ಮತ್ತು Haw, Stephen. ಅವುಗಳ ಗಾತ್ರವು ಲಿಲಿಯಮ್ ಬ್ರೌನಿಗಿಂತ ಚಿಕ್ಕದಾಗಿದೆ.F. Porter, Smith. ಒಂದು ಪ್ರತ್ಯೇಕ ಗಡ್ಡೆ ಕೆಲವು ವರ್ಷಗಳವರೆಗೆ ಬೆಳೆಯಬಹುದು ಮತ್ತು ಹೂಬಿಡಬಹುದು.[1] ಹೂವುಗಳು ಆಕರ್ಷಕ, ನಕ್ಷತ್ರದ ಆಕಾರದಲ್ಲಿರುತ್ತವೆ ಮತ್ತು ಕಿತ್ತಳೆ-ಹಳದಿನಿಂದ ಕಡುಗೆಂಪು ಬಣ್ಣವನ್ನು ಹೊಂದಿರುತ್ತವೆ, ಆದರೂ ಹಳದಿ ಬಣ್ಣವು ಅಪರೂಪವಾಗಿ ಕಂಡುಬರುತ್ತದೆ. ಅವು ಮೇಲ್ಮುಖವಾಗಿ ಮುಖ ಮಾಡುತ್ತವೆ ಮತ್ತು ರೇಸೆಮೆ ಅಥವಾ ಹೊಕ್ಕುಳಿನ ರೂಪದಲ್ಲಿ ೧೦ ರವರೆಗಿನ ಸಮೂಹಗಳಲ್ಲಿ ಬರುತ್ತವೆ. Haw, Stephen. Morning Star Lily. Ohwi, Jisaburo. ಅವು ಅಹಿತಕರ ಪರಿಮಳವನ್ನು ಹೊಂದಿರುತ್ತವೆ ಮತ್ತು ಅಲ್ಪಕಾಲಿಕವಾಗಿರುತ್ತವೆ (ಪ್ರತಿ ಹೂವುಗಳು ಕೆಲವೇ ದಿನಗಳವರೆಗೆ ಮಾತ್ರ ಇರುತ್ತದೆ).Lilium Asiatic Section A-C. ಅವು ಹರ್ಮಾಫ್ರೊಡೈಟ್ ಆಗಿದ್ದು ಜೇನುನೊಣಗಳಿಂದ ಪರಾಗಸ್ಪರ್ಶ ಹೊಂದುತ್ತವೆ .Lilium concolor. ಅವು ಸಣ್ಣ ಬೀಜಗಳನ್ನು ಉತ್ಪಾದಿಸುತ್ತವೆ. ತೆಪ್ಪಗಳು ೩ರಿಂದ ೪ಸೆಂ. ಮೀ. ಉದ್ದವಿರುವ ಹೊರಭಾಗದಲ್ಲಿ ಸ್ವಲ್ಪ ಉಣ್ಣೆಗಳಿಂದ ಕೂಡಿರುತ್ತವೆ, ಮತ್ತು ಮಸುಕಾಗಿರುತ್ತದೆ.[3]  ಈ ಪುಷ್ಪ ಶಲಾಕವು ಅಂಡಾಶಯಕ್ಕಿಂತ ಚಿಕ್ಕದಾಗಿದೆ ಮತ್ತು ಕೇಸರಗಳು ಮಧ್ಯದ ಕಡೆಗೆ ಒಮ್ಮುಖವಾಗುತ್ತವೆ, ಟೆಪಲ್ನಂತೆಯೇ ಬಣ್ಣವನ್ನು ಹೊಂದಿರುತ್ತವೆ. ದಂಡಾಕಾರದ ಅಂಡಾಶಯದ ಮೇಲೆ ನಿಂತಿರುವ ಹೆಣ್ಣುದಳದ ತುದಿ ಸ್ವಲ್ಪ ಊದಿಕೊಂಡಿದೆ. ಪೆರಿಯಂಥ್ ಭಾಗಗಳು ೨.೨-೩.೫ ಸೆಂ. ಮೀ. ಉದ್ದವಿರುತ್ತವೆ. Haw, Stephen. Ohwi, Jisaburo.   ವೈವಿಧ್ಯಗಳು ಲಿಲಿಯಂ ಕಾಂಕಲರ್ನ ವಿವಿಧ ಪ್ರಭೇದಗಳಿವೆ, ಅವುಗಳಲ್ಲಿ ಕೆಲವು ಬಹಳ ವಿಶಿಷ್ಟವಾದ ಗುಣಲಕ್ಷಣಗಳನ್ನು ಹೊಂದಿವೆ. ಲಿಲಿಯಂ ಕಾನ್ಕಲರ್ ವರ್. ಕೊರಿಡಿಯನ್-ಈ ವಿಧವು ಕಂದು ಬಣ್ಣದ ಚುಕ್ಕೆಗಳೊಂದಿಗೆ ಹಳದಿ ಹೂವುಗಳನ್ನು ಹೊಂದಿರುತ್ತದೆ.  ಇತರ ಪ್ರಭೇದಗಳಿಗೆ ಹೋಲಿಸಿದರೆ ಇದರ ಟೇಪಲ್ಗಳು ದೊಡ್ಡದಾಗಿರುತ್ತವೆ. ಹೂವುಗಳು ಮೇಲ್ಮುಖವಾಗಿ ಅಥವಾ ಬಾಹ್ಯವಾಗಿ ಮುಖ ಮಾಡಬಹುದು ಮತ್ತು ಎರಡೂ ರೂಪಗಳನ್ನು ಒಂದೇ ಕಾಂಡದ ಮೇಲೆ ಕಾಣಬಹುದು. ಲಿಲಿಯಂ ಕಾನ್ಕಲರ್ ವರ್. ಪಾರ್ಥೆನಿಯನ್-ಈ ಪ್ರಭೇದವು ಕೆಂಪು ಹೂವುಗಳನ್ನು ಹಸಿರು ಮತ್ತು ಹಳದಿ ಗೆರೆಗಳು ಮತ್ತು ಕಪ್ಪು ಕಲೆಗಳನ್ನು ಹೊಂದಿರುತ್ತದೆ.Lilium Asiatic Section A-C.  ಇದು ಸಣ್ಣ, ಅಂಡಾಕಾರದ ಬಲ್ಬ್ಗಳನ್ನು ಹೊಂದಿದ್ದು, ಕೆಲವು ಮಾಪಕಗಳನ್ನು ಹೊಂದಿದೆ. .Ohwi, Jisaburo. ಲಿಲಿಯಂ ಕಾನ್ಕಲರ್ ವರ್. ಪುಲ್ಚೆಲ್ಲಮ್-ಈ ಪ್ರಭೇದವು ಕೆಂಪು-ಕಿತ್ತಳೆ ಹೂವುಗಳನ್ನು ಹೊಂದಿದ್ದು ಯಾವುದೇ ಕಲೆಗಳಿಲ್ಲ, ಆದರೂ ಕೆಲವೊಮ್ಮೆ ಇದು ತಿಳಿ ಮತ್ತು ಸೂಕ್ಷ್ಮ ಕಡುಗೆಂಪು ಬಣ್ಣದ ಕಲೆಗಳನ್ನು ಹೊಂದಿರಬಹುದು.  ಇದು ವರ್ ನಂತೆಯೇ ವಿಶಾಲವಾದ ಟೆಪಲ್ಸ್ಗಗಳನ್ನು ಹೊಂದಿದೆ. ವರ್. ಕೊರಿಡಿಯನ್ [1] ಇದು ಸಮುದ್ರ ಮಟ್ಟದಿಂದ ೬೦೦-೨೧೭೦ ಮೀಟರ್ ಎತ್ತರದಲ್ಲಿ ಬೆಳೆಯುತ್ತದೆ ಮತ್ತು ಚೀನಾದ ಕೆಲವು ಪ್ರದೇಶಗಳ ಜೊತೆಗೆ ಕೊರಿಯಾ ಮತ್ತು ರಷ್ಯಾ ಕಂಡುಬರುತ್ತದೆ.Haw, Stephen. ಲಿಲಿಯಂ ಕಾನ್ಕಲರ್ ವರ್. ಸ್ಟ್ರಿಕ್ಟಮ್-ಈ ಪ್ರಭೇದ ಮತ್ತು ವಿಧದ ಪ್ರಭೇದಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ ಇದು ಕಪ್ಪು ಕಲೆಗಳೊಂದಿಗೆ ಕಡುಗೆಂಪು ಹೂವುಗಳನ್ನು ಹೊಂದಿರುತ್ತದೆ.[1]  ಲಿಲಿಯಂ ಕಾನ್ಕಲರ್ ವರ್. ಮೆಗಾಲಾಂಥಮ್-ಈ ಪ್ರಭೇದವು ತುಲನಾತ್ಮಕವಾಗಿ ಅಗಲವಾದ ಎಲೆಗಳನ್ನು ಹೊಂದಿದ್ದು, ಅವು ೫-೧೦ ಮಿಮೀ ಅಗಲವಾಗಿದ್ದು, ಸಮುದ್ರ ಮಟ್ಟದಿಂದ ೫೦೦ ಮೀಟರ್ ಎತ್ತರದಲ್ಲಿ ಬೆಳೆಯುತ್ತವೆ.[3]   ವಿತರಣೆ ಲಿಲಿಯಂ ಕಾಂಕಲರ್ ಪೂರ್ವ ಏಷ್ಯಾ, ವಿಶೇಷವಾಗಿ ಚೀನಾ ದೇಶಗಳಿಗೆ ಸ್ಥಳೀಯವಾಗಿದೆ. ಇದು ಒಳ ಮಂಗೋಲಿಯಾ, ಹೀಲಾಂಗ್ಜಿಯಾಂಗ್, ಜಿಲಿನ್, ಲಿಯಾವೋನಿಂಗ್, ಹೆಬೀ, ಶಾಂಕ್ಸಿ, ಶಾಂಕ್ಸಿ ಮತ್ತು ಹೆನಾನ್ ಸೇರಿದಂತೆ ಚೀನಾದ ೧೧ ಪ್ರಾಂತ್ಯಗಳಲ್ಲಿ ಕಂಡುಬರುತ್ತದೆ.Flora of China Vol. ಇದರ ಪರಿಣಾಮವಾಗಿ ಈ ಪ್ರದೇಶಗಳಲ್ಲಿ ಕಂಡುಬರುವ ಇತರ ಜಾತಿಯ ಲಿಲ್ಲಿಗಳಿಗೆ ಹೋಲಿಸಿದರೆ ಇದು ದೊಡ್ಡ ವಿತರಣಾ ವ್ಯಾಪ್ತಿಯನ್ನು ಹೊಂದಿದೆ. ಈ ಸಸ್ಯವು ಚೀನಾದ ಉತ್ತರದಲ್ಲಿ ಹುಲ್ಲುಗಾವಲು, ಪರ್ವತ ಇಳಿಜಾರುಗಳಲ್ಲಿ, ಕಲ್ಲಿನ ಇಳಿಜಾರುಗಳ ಮೇಲೆ ಪೊದೆಗಳು, ಕಾಡುಗಳಲ್ಲಿ ಅಥವಾ ಕಾಡುಪ್ರದೇಶಗಳ ಅಂಚುಗಳಲ್ಲಿ ಬೆಳೆಯುತ್ತದೆ. ಇದು ಶಾಂಡೊಂಗ್ ಪ್ರಾಂತ್ಯದ ತೈ ಶಾನ್ ಶಿಖರದ ಉತ್ತರಕ್ಕೆ ೧೫೩೨ ಮೀಟರ್ ಎತ್ತರದಲ್ಲಿ, ವಿಶೇಷವಾಗಿ ತೆರೆದ ಹುಲ್ಲುಗಾವಲು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ರೋಡೋಡೆಂಡ್ರಾನ್ ಮೈಕ್ರಾಂಥಮ್ ಮತ್ತು ಸ್ಪೈರಿಯಾ ಪಬ್ಸೆಸೆನ್ಗಳ ಕಡಿಮೆ ಪೊದೆಗಳಲ್ಲಿ ಚದುರಿ ಹೋಗಿರುವುದು ಕಂಡುಬರುತ್ತದೆ. ಇದರ ಜೊತೆಗೆ ಇದು ಜಪಾನ್, ಕೊರಿಯಾ ಮತ್ತು ಪೂರ್ವ ರಷ್ಯಾ (ಅಮುರ್ ಕ್ರೈ, ಪ್ರಿಮೊರೀ, ಖಬರೋವ್ಸ್ಕ್, ಮತ್ತು ಜಬೈಕಾಲ್ಸ್ಕಿ ಕ್ರೈ) ದಲ್ಲಿ ಕಂಡುಬರುತ್ತದೆ."Lilium concolor". World Checklist of Selected Plant Families. Royal Botanic Gardens, Kew. Retrieved 2015-04-15.Haw, Stephen. ಈ ಪ್ರಭೇದವು ಬೆಳೆಯುವ ಹೆಚ್ಚುನ ಪರಿಸರಗಳಲ್ಲಿ ಭಾರೀ ಸುಣ್ಣದ ಮಣ್ಣು, ಕಾರ್ಬನಿಫೆರಸ್ ಸುಣ್ಣದ ಕಲ್ಲುಗಳ ಮೇಲಿನ ಹ್ಯೂಮಸ್, ಹುಲ್ಲುಗಾವಲುಗಳು, ಬಿಸಿಲಿನ ಹುಲ್ಲುಗಾವಲಿಗಳು ಮತ್ತು ಕಾಡುಗಳಲ್ಲಿ ತೇವಾಂಶವುಳ್ಳ ಸ್ಥಳಗಳು, ದಟ್ಟ ಮತ್ತು ಹುಲ್ಲುಗಾವಲಿನ ಪ್ರದೇಶಗಳು ಸೇರಿವೆ.Lilium concolor. ಉಪಯೋಗಗಳು ಆಹಾರ ಮತ್ತು ಪಾನೀಯಗಳು ಲಿಲಿಯಂ ಕಾಂಕಲರ್ ಅನ್ನು ಜಪಾನಿನಲ್ಲಿ ಆಹಾರ ಸಸ್ಯವಾಗಿ ಬೆಳೆಸಲಾಗುತ್ತದೆ.U. P., Hedrick. ಹೂವುಗಳು, ಎಲೆಗಳು, ಗಡ್ಡೆಗಳು ಮತ್ತು ಬೇರುಗಳು ತಿನ್ನಬಹುದಾದವು. ಇದರ ಗಡ್ಡೆ ಸಿಹಿಯಾಗಿರುತ್ತದೆ ಮತ್ತು ತಂಪಾಗಿರುತ್ತದೆ. ಇದು ಪಿಷ್ಟವನ್ನು ಹೊಂದಿರುತ್ತದೆ ಮತ್ತು ಇದನ್ನು ಆಲೂಗಡ್ಡೆಯನ್ನು ಹೋಲುವ ತರಕಾರಿಯಾಗಿ ಬೇಯಿಸಿ ತಿನ್ನಬಹುದು ಅಥವಾ ವೈನ್ ತಯಾರಿಸಲು ಬಳಸಬಹುದು. Haw, Stephen. F. Porter, Smith. Lilium concolor. ಔಷಧ ಬಲ್ಬ್ ಕಾರ್ಮಿನೇಟಿವ್, ಕಫ ನಿವಾರಕ, ನಿದ್ರಾಜನಕ, ಆಂಟಿಟ್ಯೂಸಿವ್, ಪೆಕ್ಟೋರಲ್ ಮತ್ತು ಟಾನಿಕ್ ಗುಣಗಳನ್ನು ಹೊಂದಿದೆ. ಇದನ್ನು ಶ್ವಾಸನಾಳದ ಸಮಸ್ಯೆಗಳ ಜೊತೆಗೆ ಗರ್ಭಾಶಯದ ಹರಿವುಗಳು, ನರವ್ಯಾದಿ ಸಂಬಂಧಗಳು, ಹುಣ್ಣುಗಳು ಮತ್ತು ಊತಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಹೂವುಗಳು ರಕ್ತವನ್ನು ಉತ್ತೇಜಿಸುತ್ತವೆ ಮತ್ತು ನೋವು, ಮತ್ತು ಫೌಲ್ ಹುಣ್ಣುಗಳನ್ನು ಗುಣಪಡಿಸಲು ಪೌಲ್ಟಿಸ್ ಆಗಿ ಬಳಸಲಾಗುತ್ತದೆ. Haw, Stephen. F. Porter, Smith. Lilium concolor. ತೋಟಗಾರಿಕೆ ಲಿಲಿಯಂ ಕಾಂಕಲರ್ ಹೂವುಗಳು ಜೂನ್ ನಿಂದ ಜುಲೈ ವರೆಗೆ ಅರಳುತ್ತವೆ ಮತ್ತು ಅದರ ಬೀಜಗಳು ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ಮಾಗುತ್ತವೆ.Lilium concolor. ಇತರ ಲಿಲ್ಲಿಗಳಂತೆಯೇ, ಇದು ಪೂರ್ಣ ಸೂರ್ಯ ಬೆಳಕು, ಕೊಳೆತ ಸಾವಯವ ಪದಾರ್ಥ ಮತ್ತು ಶೀತ ಅವಧಿಯೊಂದಿಗೆ ಚೆನ್ನಾಗಿ ಬಸಿದುಹೋದ ಸ್ಥಳವನ್ನು ಆದ್ಯತೆ ನೀಡುತ್ತದೆ. ಇದಕ್ಕೆ ಸಾಮಾನ್ಯವಾಗಿ ಬೆಳೆಯುವ ಋತುವಿನಲ್ಲಿ ಮಧ್ಯಮದಿಂದ ಕಡಿಮೆ ಪ್ರಮಾಣದ ತೇವಾಂಶ ಬೇಕಾಗುತ್ತದೆ.Haw, Stephen. ಈ ಸಸ್ಯವು ೪.೫ ರಿಂದ ೭ pH ವ್ಯಾಪ್ತಿಯನ್ನು ಆದ್ಯತೆ ನೀಡುತ್ತದೆ (ಬಹುತೇಕ ಆಮ್ಲೀಯ) ಆದರೂ ಇದು ಆಮ್ಲೀಯ ಅಥವಾ ಮೂಲಭೂತ ಪರಿಸ್ಥಿತಿಗಳಲ್ಲಿ ಬೆಳೆಯಬಹುದು ಎಂದು ದಾಖಲೆಗಳಿವೆ.Morning Star Lily. ಉದಾಹರಣೆಗೆ ಇದು ಚೀನಾದ ಎರಡು ಪ್ರದೇಶಗಳಲ್ಲಿ ವಿಭಿನ್ನ ಮಣ್ಣಿನ ಆಮ್ಲೀಯತೆಯೊಂದಿಗೆ ಬೆಳೆಯುತ್ತದೆ. ತೈ ಶಾನ್ ಗ್ರಾನೈಟಿಕ್ ಆಗಿದ್ದರೆ ಲಾವೊ ಶಾನ್ ಖನಿಜ ನೀರಿನ ಬುಗ್ಗೆಗಳೊಂದಿಗೆ ಕರಗುವ ಸುಣ್ಣದ ಕಲ್ಲುಗಳನ್ನು ಹೊಂದಿದೆ.Haw, Stephen. ಈ ಸಸ್ಯಕ್ಕೆ ಸಂಪೂರ್ಣ ಸೂರ್ಯನ ಬೆಳಕು ಬೇಕಾಗುತ್ತದೆ ಮತ್ತು ಛಾಯೆಗಳಲ್ಲಿ ಬೆಳೆಯಲು ಸಾಧ್ಯವಿಲ್ಲ. .[1]Lilium concolor. ಚಳಿಗಾಲದಲ್ಲಿ ಬಿತ್ತುವ ಬೀಜಗಳನ್ನು ತಂಪಾದ ಚೌಕಟ್ಟಿನಲ್ಲಿ ಅಥವಾ ಬಿಸಿಯಾಗದ ಹಸಿರುಮನೆಗಳಲ್ಲಿ ಇರಿಸಲಾಗಿರುವ ಧಾರಕಗಳಲ್ಲಿ ಬೆಳೆಯಬಹುದು. ಒಳಾಂಗಣದಲ್ಲಿ ಬಿತ್ತನೆಯಾದರೆ ಕೊನೆಯ ಹಿಮದ ಮೊದಲು ಅವುಗಳನ್ನು ಶ್ರೇಣೀಕರಿಸಬೇಕು. ದಾಸ್ತಾನು ನಿರ್ವಹಿಸಲು ಪ್ರತಿ ವರ್ಷ ಬೀಜಗಳನ್ನು ಬಿತ್ತಬೇಕು. ಕೋಳಿ ಗೊಬ್ಬರವು ರಸಗೊಬ್ಬರವಾಗಿ ಪರಿಣಾಮಕಾರಿಯಾಗಿದೆ .[2] ಇತರರು ಈ ಹೂವು ಸಾರ ತೈಲಗಳನ್ನು ಹೊಂದಿದ್ದು, ಸುಗಂಧ ದ್ರವ್ಯವನ್ನು ತಯಾರಿಸಲು ಬಳಸಬಹುದು .Haw, Stephen. ಉಲ್ಲೇಖಗಳು ವರ್ಗ:Pages with unreviewed translations ವರ್ಗ:ಸಸ್ಯಗಳು
ಪರ್ಗತ್ ಸಿಂಗ್
https://kn.wikipedia.org/wiki/ಪರ್ಗತ್_ಸಿಂಗ್
ಪರ್ಗತ್ ಸಿಂಗ್ (ಜನನ 13 ಏಪ್ರಿಲ್ 1992) ಕೆನಡಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುವ ಕೆನಡಾದ ಕ್ರಿಕೆಟಿಗ . ಅವರು 2015-16 ರ ರಣಜಿ ಟ್ರೋಫಿಯಲ್ಲಿ 22 ಅಕ್ಟೋಬರ್ 2015 ರಂದು ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಅವರು 2015-16 ರ ವಿಜಯ್ ಹಜಾರೆ ಟ್ರೋಫಿಯಲ್ಲಿ 10 ಡಿಸೆಂಬರ್ 2015 ರಂದು ತಮ್ಮ ಲಿಸ್ಟ್ A ಗೆ ಪಾದಾರ್ಪಣೆ ಮಾಡಿದರು. ಅವರು 2015-16 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 2 ಜನವರಿ 2016 ರಂದು ತಮ್ಮ ಟ್ವೆಂಟಿ 20 ಚೊಚ್ಚಲ ಪಂದ್ಯವನ್ನು ಮಾಡಿದರು. ನವೆಂಬರ್ ೨೦೨೨ ರಲ್ಲಿ, ಅವರು ೨೦೨೨ ರ ಡೆಸರ್ಟ್ ಕಪ್ T20I ಸರಣಿಗಾಗಿ ಕೆನಡಾದ T20I ತಂಡದಲ್ಲಿ ಹೆಸರಿಸಲ್ಪಟ್ಟರು. ಅವರು ೧೪ ನವೆಂಬರ್ ೨೦೨೨ ರಂದು ಬಹ್ರೇನ್ ವಿರುದ್ಧ ತಮ್ಮ T20I ಚೊಚ್ಚಲ ಪಂದ್ಯವನ್ನು ಮಾಡಿದರು. ಮಾರ್ಚ್ ೨೦೨೩ ರಲ್ಲಿ, ಅವರು ೨೦೨೩ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪ್ಲೇ-ಆಫ್‌ಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು. ಆ ಪಂದ್ಯಾವಳಿಯಲ್ಲಿ ಜರ್ಸಿ ವಿರುದ್ಧ ಕೆನಡಾ ಪರ ೨೭ ಮಾರ್ಚ್ ೨೦೨೩ ರಂದು ಅವರು ತಮ್ಮ ಏಕದಿನ ಅಂತರಾಷ್ಟ್ರೀಯ (ODI) ಚೊಚ್ಚಲ ಪಂದ್ಯವನ್ನು ಮಾಡಿದರು. ಅವರು ೧ ಏಪ್ರಿಲ್ ೨೦೨೩ ರಂದು ಸಂಯುಕ್ತ ಅರಬ್ ಸಂಸ್ಥಾನ ವಿರುದ್ಧ ODI ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಗಳಿಸಿದರು. ಉಲ್ಲೇಖಗಳು
ರಿಚಿ ಬೆರಿಂಗ್ಟನ್
https://kn.wikipedia.org/wiki/ರಿಚಿ_ಬೆರಿಂಗ್ಟನ್
ರಿಚರ್ಡ್ ಡಗ್ಲಸ್ ಬೆರಿಂಗ್ಟನ್ (ಜನನ ೩ ಏಪ್ರಿಲ್ ೧೯೮೭) ಒಬ್ಬ ಸ್ಕಾಟಿಷ್ ಕ್ರಿಕೆಟಿಗ. ಅವರು ಸ್ಕಾಟ್ಲೆಂಡ್ ತಂಡದ ಪ್ರಸ್ತುತ ನಾಯಕರಾಗಿದ್ದಾರೆ, ಅವರು ೨೦೦೬ ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂಡರ್-೧೯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ಗಾಗಿ ಆಡಿದರು ಮತ್ತು ಅಂದಿನಿಂದ ಸ್ಕಾಟ್‌ಲ್ಯಾಂಡ್‌ಗಾಗಿ ಪ್ರಥಮ ದರ್ಜೆ, ಏಕದಿನ ಅಂತರರಾಷ್ಟ್ರೀಯ, ಟ್ವೆಂಟಿ೨೦ ಅಂತಾರಾಷ್ಟ್ರೀಯ ಮತ್ತು ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದಾರೆ. ಜೂನ್ ೨೦೨೨ ರಲ್ಲಿ, ಕೈಲ್ ಕೋಟ್ಜರ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಬೆರಿಂಗ್ಟನ್ ಅವರನ್ನು ರಾಷ್ಟ್ರೀಯ ತಂಡದ ನಾಯಕರನ್ನಾಗಿ ಹೆಸರಿಸಲಾಯಿತು. ಉಲ್ಲೇಖಗಳು
ಬಾನಾಕ್ ಟಾರ್ಸ್ಕಿ ವಿರೋಧಾಭಾಸ
https://kn.wikipedia.org/wiki/ಬಾನಾಕ್_ಟಾರ್ಸ್ಕಿ_ವಿರೋಧಾಭಾಸ
ಬಾನಾಕ್ ಟಾರ್ಸ್ಕಿ ವಿರೋಧಾಭಾಸ ಎನ್ನುವುದು ಗಣಸಿದ್ಧಾಂತದ ಮೂಲಾಧಾರಗಳ ಸೂಕ್ಷ್ಮ ಅಧ್ಯಯನದ ವೇಳೆ ತಲೆದೋರಿರುವ ಒಂದು ವಿರೋಧಾಭಾಸ. ಇದನ್ನು ಪ್ರಕಟಿಸಿದವರು (1924) ಬಾನಾಕ್ ಮತ್ತು ಟಾರ್ಸ್ಕಿ ಎಂಬ ಗಣಿತವಿದರು. ಆಂಶಿಕ ಮತ್ತು ಸಂಪೂರ್ಣ ಕ್ರಮಸಂಬಂಧ ಕ್ರಮಸಂಬಂಧ (ಆರ್ಡರ್ ರಿಲೇಶನ್): S ಒಂದು ಅಶೂನ್ಯ ಗಣವಾಗಿರಲಿ. ಎಂದರೆ . ಇದರಲ್ಲಿ  (ಚಿಕ್ಕದು ಅಥವಾ ಸಮ) ಎಂಬ ದ್ವಿಗುಣ ಸಂಬಂಧ ವ್ಯಾಖ್ಯಿತವಾಗಿದ್ದು ಅದು ಮುಂದೆ ಉಲ್ಲೇಖಿಸಿರುವ ಅಭಿಗೃಹೀತಗಳನ್ನು (ಪಾಸ್ಟ್ಯುಲೇಟ್ಸ್) ಪಾಲಿಸುತ್ತಿರಲಿ: ಮತ್ತು  ಅಂದರೆ x = y ಆಗಲೇಬೇಕು ಮತ್ತು  ಆದಾಗಲೆಲ್ಲ  ಆಗಲೇಬೇಕು ಹೀಗಿದ್ದರೆ ಮೇಲಿನ ಸಂಬಂಧ ವನ್ನು S ಮೇಲೆ ವ್ಯಾಖ್ಯಿಸಿದ ಒಂದು ಆಂಶಿಕ ಕ್ರಮ ಸಂಬಂಧ (ಪಾರ್ಶಿಯಲ್ ಆರ್ಡರ್) ಎಂದು ಕರೆಯುತ್ತೇವೆ ಮತ್ತು S ಅಂಶಿಕ ಕ್ರಮಸಂಬಂಧಯುಕ್ತವಾಗಿದೆ ಎಂದು ಹೇಳುತ್ತೇವೆ. ಇಷ್ಟರ ಮೇಲೆ S ಗೆ ಸೇರಿದ ಯಾವ ಎರಡು ಧಾತು x,y ಗಳಿಗೂ  ಅಥವಾ  ಎನ್ನುವ ಸಂಬಂಧದಲ್ಲಿ ನಿಲ್ಲುವಂತಿದ್ದರೆ ವನ್ನು S ಮೇಲೆ ವ್ಯಾಖ್ಯಿಸಿದ ಒಂದು ಸಂಪೂರ್ಣ ಕ್ರಮಸಂಬಂಧ ಎಂದು ಕರೆಯುತ್ತೇವೆ. ಸುವ್ಯವಸ್ಥಿತ ಕ್ರಮ ಪ್ರಮೇಯ ಮತ್ತು ಆಯ್ಕೆ ಆದ್ಯುಕ್ತಿ ಈ. ಜೆರ್ಮಲೋ ಎಂಬ ಜರ್ಮನ್ ಗಣಿತವಿದ 1904ರಲ್ಲಿ ಈಗ ಸುವ್ಯವಸ್ಥಿತ ಕ್ರಮ ಪ್ರಮೇಯ (ದ ವೆಲ್ ಆರ್ಡರಿಂಗ್ ತೀಯರಮ್) ಎಂದು ಪ್ರಸಿದ್ಧವಾಗಿರುವ ಫಲಿತಾಂಶ ಸಾಧಿಸಿದ: S ಯಾವುದೇ ಅಶೂನ್ಯ ಗಣವಾಗಿದ್ದರೂ ಅದರಲ್ಲಿ ಒಂದು ಸಂಪೂರ್ಣ ಕ್ರಮಸಂಬಂಧ ವನ್ನು ಯುಕ್ತ ರೀತಿಯಲ್ಲಿ ವ್ಯಾಖ್ಯಿಸಬಹುದು. ಇದರಿಂದ ಸಂಪೂರ್ಣ ಕ್ರಮಸಂಬಂಧ ಪಡೆದ ಪ್ರತಿಯೊಂದು ಗಣದ ಒಂದೊಂದು ಉಪಗಣದಲ್ಲೂ ಅದರದರ ಪ್ರಥಮ (ಎಂದರೆ ಅತಿ ಚಿಕ್ಕ) ಧಾತು ಇರುತ್ತದೆ ಎಂದು ತೋರಿಸಿಕೊಡಬಹುದು. ಈ ಬಗೆಯ ಸಂಶೋಧನೆಗಳ ಪ್ರಕಟಣೆ ಗಣಿತವಿದರಲ್ಲಿ ತೀವ್ರ ಪ್ರತಿಕ್ರಿಯೆ ಉಂಟು ಮಾಡಿತು. ಇಂಥ ಪ್ರಮೇಯವನ್ನು ಒಪ್ಪುವುದೇ ಅವರಿಗೆ ಕಷ್ಟಸಾಧ್ಯವಾಯಿತು. ಉದಾಹರಣೆಗೆ  ಗಣದಲ್ಲಿ ಸ್ವಾಭಾವಿಕ ಕ್ರಮ ಒಂದು ಸಂಪೂರ್ಣ ಕ್ರಮಸಂಬಂಧ. ಆದರೆ ಇದರ ಉಪಗಣವಾದ  ರಲ್ಲಿ ಪ್ರಥಮ ಅರ್ಥಾತ್ ಅತಿ ಚಿಕ್ಕ ಧಾತು ಇರುವುದಿಲ್ಲ. ಏಕೆಂದರೆ r > 0 ಇಂಥ ಅತಿ ಚಿಕ್ಕ ಧಾತುವಾದರೆ   ಮತ್ತು r ಗಿಂತ ಚಿಕ್ಕ ಧಾತುವಾಗಿದ್ದು ಪೂರ್ವ ಪಕ್ಷವನ್ನು ವಿರೋಧಿಸುತ್ತದೆ. ಆದ್ದರಿಂದ ಅವರು ಮೇಲಿನ ಫಲಿತಾಂಶಗಳ ಸಾಧನೆಯಲ್ಲಿ ಎಲ್ಲೊ ಲೋಪದೋಷ ನುಸುಳಿರಬಹುದೆಂದು ಸೂಕ್ಷ್ಮ ಪರಿಶೀಲನೆ ಮಾಡಿದರು. ಈ ಪ್ರಯತ್ನಗಳಲ್ಲಿ ಫ್ರಾನ್ಸಿನ ಈ. ಬೊರೆಲ್ ಎಂಬಾತ ಜೆರ್ಮೆಲೋ ತನ್ನ ಸುವ್ಯವಸ್ಥಿತ ಕ್ರಮ ಪ್ರಮೇಯದ ಸಾಧನೆಯಲ್ಲಿ ಒಂದು ಆದ್ಯುಕ್ತಿ (axiom) ಉಪಯೋಗಿಸಿರುವುದನ್ನು ಗೊತ್ತು ಹಚ್ಚಿದ. ಇದಕ್ಕೆ ಈಗ ಜೆರ್ಮೆಲೋನ ಆಯ್ಕೆ ಆದ್ಯುಕ್ತಿ (ಆ್ಯಕ್ಸಿಯಮ್ ಆಫ್ ಚಾಯ್ಸ್) ಎಂದು ಹೆಸರು.. ಇದರ ಒಕ್ಕಣೆ ಹೀಗಿದೆ: ಒಂದು ಗಣ S ನ್ನು ಪರಸ್ಪರ ಬೇರ್ಪಟ್ಟ ಉಪಗಣ A, B, C, ... ಗಳಾಗಿ ವಿಭಾಗಿಸಿದರೆ ಈ A, B, C, ... ಗಳಲ್ಲಿ ಪ್ರತಿಯೊಂದರಿಂದಲೂ ಒಂದೊಂದೇ ಧಾತು ಪಡೆದಿರುವಂಥ ಕನಿಷ್ಠ ಪಕ್ಷ ಒಂದು ಗಣ R ನ್ನು ರಚಿಸಬಹುದು. ಇದರಿಂದ A ಯಿಂದ ಒಂದು ಧಾತುವನ್ನೂ, B ಯಿಂದ ಒಂದು ಧಾತುವನ್ನೂ, C ಯಿಂದ ಒಂದು ಧಾತುವನ್ನೂ ಹೀಗೆ ಒಂದೊಂದೇ ಧಾತುವನ್ನು ಆಯಬಹುದು ಎಂದು ಸ್ಪಷ್ಟವಾಯಿತು. ಎಂದೇ ಈ ಮೇಲಿನ ಆದ್ಯುಕ್ತಿಗೆ ಆಯ್ಕೆ ಆದ್ಯುಕ್ತಿ ಎಂಬ ಹೆಸರು. ಬಾನಾಕ್ ಮತ್ತು ಟಾರ್ಸ್ಕಿ ಪ್ರಮೇಯ ಮೇಲ್ನೋಟಕೆ ಅತಿ ಸರಳವಾಗಿ ತೋರುವ ಇದು ಕ್ಲಿಷ್ಟವೂ, ನಂಬಲು ಅಸಾಧ್ಯವೂ ಆದ ವಿರೋಧಾಭಾಸಗಳಿಗೆ ಎಡೆಕೊಟ್ಟಿದೆ. ಇದರ ಅನ್ವಯದಿಂದ 1924ರಲ್ಲಿ ಬಾನಾಕ್ ಮತ್ತು ಟಾರ್ಸ್ಕಿ ಒಂದು ಪ್ರಮೇಯ ಸಾಧಿಸಿದರು; ಆಯಾಮ n > 2 ಆಗಿರುವ ಯೂಕ್ಲಿಡೀಯ ಆಕಾಶ En ಗಳಲ್ಲಿ ಅಂತರ್ಬಿಂದುಗಳನ್ನು ಹೊಂದಿರುವ ಯಾವ ಎರಡು ಸೀಮಿತ ಗಣಗಳೇ ಆಗಲಿ ಪರ್ಯಾಪ್ತ ವಿಭಜನೆಯಿಂದ ಪರಸ್ಪರ ಸಮಾನತ್ವದಲ್ಲಿರುತ್ತವೆ. ಈ ಪ್ರಮೇಯದ ಕ್ಲಿಷ್ಟಪೂರ್ಣ ಸಾಧನೆಯ ವಿವರಗಳನ್ನು ಪಂಡಿತರಿಗೆ ಬಿಟ್ಟು ಇಲ್ಲಿ ಇದರ ಒಂದು ಪ್ರಯುಕ್ತಿಯನ್ನು ವಿವರಿಸೋಣ. ಆಯಾಮ ಮೂರರ ಯೂಕ್ಲಿಡೀಯ ಸಮಷ್ಟಿ E3 ರಲ್ಲಿ ಎರಡು ಗೋಳಗಳನ್ನು ತೆಗೆದುಕೊಳ್ಳೋಣ. ಒಂದು ಕಡಲೆಕಾಳು ಗಾತ್ರದ್ದು, ಇನ್ನೊಂದು ಸೂರ್ಯ ಗಾತ್ರದ್ದು. ಇವೆರಡೂ ಸೀಮಿತ ಹಾಗೂ ಅಂತರ್ಬಿಂದುಯುತ ಎಂಬುದು ಸ್ಪಷ್ಟ. ಹೀಗಾಗಿ ಬಾನಾಕ್-ಟಾರ್ಸ್ಕಿ ಪ್ರಮೇಯದ ಅನ್ವಯಕ್ಕೆ ಯೋಗ್ಯವಾಗಿವೆ. ಪ್ರಮೇಯದ ಪ್ರಕಾರ P ಯನ್ನು P1, P2, ..., Pn ಉಪಗಣಗಳಾಗಿಯೂ S ನ್ನು S1, S2, ..., Sn ಉಪಗಣಗಳಾಗಿಯೂ ವಿಂಗಡಿಬಹುದು. ಮೇಲಾಗಿ ಈ ವಿಂಗಡಣೆಯಲ್ಲಿ ಈ ಮುಂದಿನ ನಿರ್ಬಂಧಗಳು ನಿಲ್ಲುವಂತೆ ವ್ಯವಸ್ಥಿಸಬಹುದು: ಎಂದರೆ P ಯು P1, ...., Pn ಗಳ ಸಂಯೋಗ, ಎಂದರೆ S ಎಂಬುದು S1, ...., Sn ಗಳ ಸಂಯೋಗ, ಆದರೆ  ಎಂದರೆ P1, ...., Pn ಗಳು ಪರಸ್ಪರ ಬೇರ್ಪಟ್ಟಿವೆ. ಮತ್ತು ಎಂದರೆ S1, ...., Sn ಗಳು ಪರಸ್ಪರ ಬೇರ್ಪಟ್ಟಿವೆ. ಇಷ್ಟರಮೇಲೆ  ಎಂದರೆ ಪ್ರತಿ Pi ಅದರ ಸಂವಾದಿ Si ಗೆ ಸಮಾನತ್ವದಲ್ಲಿದೆ. ಈಗ ಯೂಕ್ಲಿಡೀಯ ಆಕಾಶಗಳಲ್ಲಿ ಸಮಾನತ್ವವೆಂದರೆ (equivalence) ಸಾಮಾನ್ಯವಾಗಿ ಸರ್ವಸಮತ್ವ, ಎಂದರೆ ಕೇವಲ ಆವರ್ತನೆಗಳು ಮತ್ತು ಸರಳ ಚಲನೆಗಳು. ಇವುಗಳಿಂದಲೇ ಒಂದು ಆಕೃತಿಯನ್ನು ಒಂದೆಡೆಯಿMದ ಮತ್ತೊಂದೆಡೆಗೆ ಒಯ್ಯಬಹುದು ಎಂದು ಅರ್ಥ. ಈ ದೃಷ್ಟಿಯಲ್ಲಿ ಮೇಲಿನ ಪ್ರಯುಕ್ತಿಯನ್ನು ನಂಬುವುದಾದರೂ ಎಂತು? ಸೂರ್ಯನ ಗಾತ್ರದ ದೊಡ್ಡ ಗೋಳದ ಭಾಗಗಳು ಕಡಲೆಗಾತ್ರದ ಗೋಳದ ಭಾಗಗಳಿಗೆ ಪರಸ್ಪರ ಸಮಾನತ್ವದಲ್ಲಿವೆಯೆಂದೂ S ಮತ್ತು P ಗಳು ಅವುಗಳ ಪರಸ್ಪರ ಸಮಾಹಾರಗಳೆಂದೂ ಒಪ್ಪಿಕೊಳ್ಳುವುದು ಯಾವ ಊಹೆಗೂ ನಿಲುಕದ ವಿಷಯವೇ ಸರಿ. ಇಂಥ ವಿರೋಧ ಪರಿಸ್ಥಿತಿಗಳಿಗೆ ಎಡೆ ಮಾಡಿಕೊಡುವ ಮೇಲಿನ ಪ್ರಮೇಯವನ್ನು ಬಾನಾಕ್-ಟಾರ್ಸ್ಕಿ ವಿರೋಧಾಭಾಸವೆಂದು ಕರೆಯುವುದು ಔಚಿತ್ಯಪೂರ್ಣ ಅನ್ವರ್ಥವೇ ಸರಿ. ಉಲ್ಲೇಖಗಳು ಹೊರಗಿನ ಕೊಂಡಿಗಳು The Banach-Tarski Paradox by Stan Wagon (Macalester College), the Wolfram Demonstrations Project. Irregular Webcomic! #2339 by David Morgan-Mar provides a non-technical explanation of the paradox. It includes a step-by-step demonstration of how to create two spheres from one. gives an overview on the fundamental basics of the paradox. Banach-Tarski and the Paradox of Infinite Cloning ವರ್ಗ:ರೇಖಾಗಣಿತ ವರ್ಗ:ಗಣಸಿದ್ಧಾಂತ ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ರಿಚಿ ಬೆರ್ರಿಂಗ್ಟನ್
https://kn.wikipedia.org/wiki/ರಿಚಿ_ಬೆರ್ರಿಂಗ್ಟನ್
REDIRECT ರಿಚಿ ಬೆರಿಂಗ್ಟನ್
ಆರನ್ ಜಾನ್ಸನ್
https://kn.wikipedia.org/wiki/ಆರನ್_ಜಾನ್ಸನ್
ಆರನ್ ಒರ್ಲ್ಯಾಂಡೊ ಜಾನ್ಸನ್ ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಜಮೈಕಾ ಮೂಲದ ಕ್ರಿಕೆಟಿಗ . ಅವರು ೨೦೨೨ ರಲ್ಲಿ ಕೆನಡಾಕ್ಕಾಗಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯ ಆಡಿದರು. ಅವರು ಬಲಗೈ ದಾಂಡಿಗ . ದೇಶೀಯ ಮತ್ತು ಫ್ರ್ಯಾಂಚೈಸ್ ವೃತ್ತಿ ಜಾನ್ಸನ್ ೨೦೨೨ ರಾಷ್ಟ್ರೀಯ ಟ್ವೆಂಟಿ20 ಚಾಂಪಿಯನ್‌ಶಿಪ್‌ನಲ್ಲಿ ಬ್ರಿಟಿಷ್ ಕೊಲಂಬಿಯಾವನ್ನು ಪ್ರತಿನಿಧಿಸಿದರು. ೨೦೨೩ ರ ಗ್ಲೋಬಲ್ ಟಿ೨೦ ಕೆನಡಾ ಪಂದ್ಯಾವಳಿಗಾಗಿ ಅವರು ಬ್ರಾಂಪ್ಟನ್ ವುಲ್ವ್ಸ್ಗಾಗಿ ಆಡಲು ಆಯ್ಕೆಯಾದರು. ಅಂತಾರಾಷ್ಟ್ರೀಯ ವೃತ್ತಿಜೀವನ ಜುಲೈ ೨೦೨೨ ರಲ್ಲಿ ನೇಪಾಳ ವಿರುದ್ಧದ ೫೦-ಓವರ್‌ಗಳ ಸರಣಿಯಲ್ಲಿ ಜಾನ್ಸನ್ ಕೆನಡಾಕ್ಕಾಗಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು."National T20 Championships – Maple Leaf Cricket Clu, King City Ontario – Day 5". Cricket Canada. 19 July 2022. Retrieved 17 July 2023. ಅವರು ಒಮಾನ್ನಲ್ಲಿ ೨೦೨೨ ರ ಡೆಸರ್ಟ್ ಕಪ್ ಟಿ೨೦ಐ ಸರಣಿಯಲ್ಲಿ ಬಹ್ರೇನ್ ವಿರುದ್ಧ ತಮ್ಮ ಟ್ವೆಂಟಿ೨೦ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಎರಡು ಪಂದ್ಯಗಳ ನಂತರ ಅವರು ತಮ್ಮ ಚೊಚ್ಚಲ ಟಿ೨೦ಐ ಶತಕವನ್ನು ದಾಖಲಿಸಿದರು, ಒಮಾನ್ ವಿರುದ್ಧ ೬೯ ಎಸೆತಗಳಲ್ಲಿ ಔಟಾಗದೆ ೧೦೯ ರನ್ ಗಳಿಸಿದರು. ಇದು ಟಿ೨೦ಐ ಕ್ರಿಕೆಟ್‌ನಲ್ಲಿ ಕೆನಡಾದ ಬ್ಯಾಟ್ಸ್‌ಮನ್‌ಗಳ ಗರಿಷ್ಠ ಸ್ಕೋರ್‌ಗೆ ಹೊಸ ದಾಖಲೆಯನ್ನು ನಿರ್ಮಿಸಿತು. ೨೭ ಮಾರ್ಚ್ ೨೦೨೩ ರಂದು, ಜಾನ್ಸನ್ ಜಿಂಬಾಬ್ವೆಯಲ್ಲಿ ೨೦೨೩ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಜರ್ಸಿ ವಿರುದ್ಧ ತನ್ನ ಏಕದಿನ ಅಂತಾರಾಷ್ಟ್ರೀಯ (ODI) ಚೊಚ್ಚಲ ಪಂದ್ಯವನ್ನು ಮಾಡಿದರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು
ಡಿಲ್ಲನ್ ಹೇಲಿಗರ್
https://kn.wikipedia.org/wiki/ಡಿಲ್ಲನ್_ಹೇಲಿಗರ್
ಡಿಲ್ಲನ್ ಹೇಲಿಗರ್ (ಜನನ ೨೧ ಅಕ್ಟೋಬರ್ ೧೯೮೯) ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುವ ಒಬ್ಬ ಗಯಾನ ಮೂಲದ ಕೆನಡಾದ ಕ್ರಿಕೆಟಿಗ. ದೇಶೀಯ ಮತ್ತು ಫ್ರ್ಯಾಂಚೈಸ್ ವೃತ್ತಿ ಹೇಲಿಗರ್ ೧೫ ಮತ್ತು ೧೯ ವರ್ಷದೊಳಗಿನ ಕ್ರಿಕೆಟ್‌ನಲ್ಲಿ ಗಯಾನಾವನ್ನು ಪ್ರತಿನಿಧಿಸಿದರು. ಅವರು ೨೦೧೧ ರ ಕೆರಿಬಿಯನ್ ಟ್ವೆಂಟಿ೨೦ ಗೆ ಗಯಾನಾ ತಂಡದಲ್ಲಿ ಆಯ್ಕೆಯಾದರು. ಹೇಲಿಗರ್ ಅವರು ಆಂಟಿಗುವಾ, ಟ್ರಿನಿಡಾಡ್ ಮತ್ತು ಇಂಗ್ಲೆಂಡ್‌ನಲ್ಲಿ ಕ್ಲಬ್ ಕ್ರಿಕೆಟ್ ಆಡಿದರು, ಹ್ಯಾಂಪ್‌ಶೈರ್ ಲೀಗ್‌ನಲ್ಲಿ ಬೇಸಿಂಗ್‌ಸ್ಟೋಕ್ ಮತ್ತು ಮಿಡ್ಲ್‌ಸೆಕ್ಸ್ ಕೌಂಟಿ ಕ್ರಿಕೆಟ್ ಲೀಗ್‌ನಲ್ಲಿ ಉಕ್ಸ್‌ಬ್ರಿಡ್ಜ್‌ಗಾಗಿ ಕಾಣಿಸಿಕೊಂಡರು. ಹೇಲಿಗರ್ ೨೦೧೪ ರಲ್ಲಿ ಕೆನಡಾಕ್ಕೆ ತೆರಳಿದರು. ಅವರು ಟೊರೊಂಟೊ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಐಲ್ಯಾಂಡರ್ಸ್‌ಗಾಗಿ ಆಡಲು ಪ್ರಾರಂಭಿಸಿದರು ಮತ್ತು ೨೦೧೫ ರಲ್ಲಿ ವೈಕಿಂಗ್ಸ್‌ಗೆ ಬದಲಾಯಿಸಿದರು. 3 ಜೂನ್ ೨೦೧೮ ರಂದು, ಗ್ಲೋಬಲ್ ಟಿ೨೦ ಕೆನಡಾ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯ ಆಟಗಾರರ ಡ್ರಾಫ್ಟ್‌ನಲ್ಲಿ ಮಾಂಟ್ರಿಯಲ್ ಟೈಗರ್ಸ್‌ಗಾಗಿ ಆಡಲು ಅವರನ್ನು ಆಯ್ಕೆ ಮಾಡಲಾಯಿತು. ಅಂತಾರಾಷ್ಟ್ರೀಯ ವೃತ್ತಿಜೀವನ ಹೇಲಿಗರ್ ಅವರು ೮ ಫೆಬ್ರವರಿ ೨೦೧೮ ರಂದು ೨೧೦೮ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್ ಟೂರ್ನಮೆಂಟ್‌ನಲ್ಲಿ ಕೆನಡಾಕ್ಕಾಗಿ ತಮ್ಮ ಲಿಸ್ಟ್ ಏ ಚೊಚ್ಚಲ ಪಂದ್ಯವನ್ನು ಮಾಡಿದರು. ಆಗಸ್ಟ್ ೨೦೧೯ ರಲ್ಲಿ, ಅವರು ೨೦೧೮-೧೯ ICC ಟಿ೨೦ ವರ್ಲ್ಡ್ ಕಪ್ ಅಮೇರಿಕಾಸ್ ಕ್ವಾಲಿಫೈಯರ್ ಪಂದ್ಯಾವಳಿಯ ಪ್ರಾದೇಶಿಕ ಫೈನಲ್‌ಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು. ಅವರು ೧೮ ಆಗಸ್ಟ್ ೨೦೧೯ ರಂದು ಕೇಮನ್ ದ್ವೀಪಗಳ ವಿರುದ್ಧ ಕೆನಡಾಕ್ಕಾಗಿ ತಮ್ಮ ಟ್ವೆಂಟಿ೨೦ ಅಂತರರಾಷ್ಟ್ರೀಯ (T20I) ಚೊಚ್ಚಲ ಪ್ರವೇಶ ಮಾಡಿದರು. ೪ ಏಪ್ರಿಲ್ ೨೦೨೩ ರಂದು, ಅವರು ೨೦೨೩ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪ್ಲೇ-ಆಫ್‌ನಲ್ಲಿ ನಮೀಬಿಯ ವಿರುದ್ಧ ತಮ್ಮ ಏಕದಿನ ಅಂತರರಾಷ್ಟ್ರೀಯ (ODI) ಚೊಚ್ಚಲ ಪಂದ್ಯವನ್ನು ಮಾಡಿದರು. ಉಲ್ಲೇಖಗಳು
ಹರ್ಷ್ ಠಾಕರ್
https://kn.wikipedia.org/wiki/ಹರ್ಷ್_ಠಾಕರ್
ಹರ್ಷ್ ತುಷಾರ್ಭಾಯ್ ಠಾಕರ್ (ಜನನ ೨೪ ಅಕ್ಟೋಬರ್ ೧೯೯೭) ಕೆನಡಾದ ಕ್ರಿಕೆಟ್ ಆಟಗಾರ. ಅವರು 2018 ರಲ್ಲಿ ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ತಮ್ಮ ಹಿರಿಯ ಚೊಚ್ಚಲ ಪ್ರವೇಶ ಮಾಡಿದರು. ಠಾಕರ್ ಒಬ್ಬ ಆಲ್-ರೌಂಡರ್, ಬಲಗೈ ಬ್ಯಾಟಿಂಗ್ ಮತ್ತು ಬಲಗೈ ಬೌಲಿಂಗ್ ಆಫ್ ಸ್ಪಿನ್ ಮಾಡುತ್ತಾರೆ. ದೇಶೀಯ ವೃತ್ತಿಜೀವನ ಇವರು ೩ ಅಕ್ಟೋಬರ್ ೨೦೧೮ ರಂದು ೨೦೧೮-೧೯ ಪ್ರಾದೇಶಿಕ ಸೂಪರ್50 ಪಂದ್ಯಾವಳಿಯಲ್ಲಿ ಕೆನಡಾಕ್ಕಾಗಿ ತಮ್ಮ ಲಿಸ್ಟ್ ಏ ಗೆ ಪಾದಾರ್ಪಣೆ ಮಾಡಿದರು. ಜೂನ್ ೨೦೧೯ ರಲ್ಲಿ, ಅವರು ೨೦೧೯ ಗ್ಲೋಬಲ್ T20 ಕೆನಡಾ ಪಂದ್ಯಾವಳಿಯಲ್ಲಿ ವ್ಯಾಂಕೋವರ್ ನೈಟ್ಸ್ ತಂಡಕ್ಕೆ ಆಡಲು ಆಯ್ಕೆಯಾದರು. ಅಂತಾರಾಷ್ಟ್ರೀಯ ವೃತ್ತಿಜೀವನ ಬಾಂಗ್ಲಾದೇಶದಲ್ಲಿ ನಡೆದ ೨೦೧೬ ಅಂಡರ್-೧೯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಥಾಕರ್ ಕೆನಡಾವನ್ನು ಪ್ರತಿನಿಧಿಸಿದ್ದರು.ಇವರು ೨೦೧೬ ಅಂಡರ್-೧೯ ಕ್ರಿಕೆಟ್ ವಿಶ್ವಕಪ್‌ಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು. ಠಾಕರ್ ೨೫ ಆಗಸ್ಟ್ ೨೦೧೯ ರಂದು ಅಮೇರಿಕ ಸಂಯುಕ್ತ ಸಂಸ್ಥಾನ ವಿರುದ್ಧ ಕೆನಡಾಕ್ಕಾಗಿ ತಮ್ಮ ಟ್ವೆಂಟಿ೨೦ ಅಂತರರಾಷ್ಟ್ರೀಯ (T20I) ಚೊಚ್ಚಲ ಪ್ರವೇಶ ಮಾಡಿದರು. ಇವರು ೨೦೨೩ ಕ್ರಿಕೆಟ್ ವರ್ಲ್ಡ್ ಕಪ್ ಕ್ವಾಲಿಫೈಯರ್ ಪ್ಲೇಆಫ್‌ನಲ್ಲಿ ಜರ್ಸಿ ವಿರುದ್ಧ ಕೆನಡಾಕ್ಕಾಗಿ ೨೭ ಮಾರ್ಚ್ ೨೦೨೩ ರಂದು ತಮ್ಮ ಏಕದಿನ ಅಂತರರಾಷ್ಟ್ರೀಯ (ODI) ಚೊಚ್ಚಲ ಪ್ರವೇಶ ಮಾಡಿದರು. ಉಲ್ಲೇಖಗಳು
ನಿಕೋಲಸ್ ಕರ್ಟನ್
https://kn.wikipedia.org/wiki/ನಿಕೋಲಸ್_ಕರ್ಟನ್
ನಿಕೋಲಸ್ ಕರ್ಟನ್ (ಜನನ ೬ ಮೇ ೧೯೯೮) ಒಬ್ಬ ಬಾರ್ಬಡಿಯನ್-ಕೆನಡಿಯನ್ ಕ್ರಿಕೆಟಿಗ . ಅವರು ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಕೆನಡಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಾರೆ. ಅವರು ವೆಸ್ಟ್ ಇಂಡಿಯನ್ ದೇಶೀಯ ಕ್ರಿಕೆಟ್‌ನಲ್ಲಿ ಬಾರ್ಬಡೋಸ್ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಾರೆ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಮೈಕಾ ತಲ್ಲವಾಸ್‌ಗಾಗಿ ಆಡಿದ್ದಾರೆ. ಅವರು ಎಡಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಡುತ್ತಾರೆ. ದೇಶೀಯ ಕ್ರಿಕೆಟ್ ವೃತ್ತಿಜೀವನ ಜೂನ್ ೨೦೧೮ ರಲ್ಲಿ, ಗ್ಲೋಬಲ್ T20 ಕೆನಡಾ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯ ಆಟಗಾರರ ಡ್ರಾಫ್ಟ್‌ನಲ್ಲಿ ಮಾಂಟ್ರಿಯಲ್ ಟೈಗರ್ಸ್‌ಗಾಗಿ ಆಡಲು ಕರ್ಟನ್ ಆಯ್ಕೆಯಾದರು. ಅವರು ೧೭ ಜನವರಿ ೨೦೧೯ ರಂದು ೨೦೧೮-೧೯ ಪ್ರಾದೇಶಿಕ ನಾಲ್ಕು ದಿನದ ಸ್ಪರ್ಧೆಯಲ್ಲಿ ಬಾರ್ಬಡೋಸ್‌ಗಾಗಿ ತಮ್ಮ ಪ್ರಥಮ-ದರ್ಜೆಯ ಚೊಚ್ಚಲ ಪ್ರವೇಶ ಮಾಡಿದರು. ಅಕ್ಟೋಬರ್ ೨೦೧೯ ರಲ್ಲಿ, ಅವರು ೨೦೧೯-೨೦ ಪ್ರಾದೇಶಿಕ ಸೂಪರ್50 ಪಂದ್ಯಾವಳಿಯಲ್ಲಿ ಬಾರ್ಬಡೋಸ್‌ಗಾಗಿ ಆಡಲು ಆಯ್ಕೆಯಾದರು. ಜುಲೈ ೨೦೨೦ ರಲ್ಲಿ, ಅವರು ೨೦೨೦ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಜಮೈಕಾ ತಲ್ಲಾವಾಸ್ ತಂಡದಲ್ಲಿ ಹೆಸರಿಸಲ್ಪಟ್ಟರು. ಅಂತರರಾಷ್ಟ್ರೀಯ ವೃತ್ತಿಜೀವನ ಕರ್ಟನ್ ೮ ಫೆಬ್ರವರಿ ೨೦೧೮ ರಂದು ೨೦೧೮ ICC ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್ ಟೂರ್ನಮೆಂಟ್‌ನಲ್ಲಿ ಕೆನಡಾಕ್ಕಾಗಿ ತನ್ನ ಚೊಚ್ಚಲ ಲಿಸ್ಟ್ ಏ ಪಂದ್ಯ ಆಡಿದರು. ಅವರು ೨೦ ಅಕ್ಟೋಬರ್ ೨೦೧೯ ರಂದು ಜರ್ಸಿ ವಿರುದ್ಧ ಕೆನಡಾಕ್ಕಾಗಿ ತಮ್ಮ ಟ್ವೆಂಟಿ೨೦ ಅಂತರರಾಷ್ಟ್ರೀಯ (T20I) ಚೊಚ್ಚಲ ಪ್ರವೇಶ ಮಾಡಿದರು. ಮಾರ್ಚ್ ೨೦೨೩ ರಲ್ಲಿ, ಅವರು ೨೦೨೩ ರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪ್ಲೇ-ಆಫ್‌ಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು. ಅವರು ೨೭ ಮಾರ್ಚ್ ೨೦೨೩ ರಂದು ಕೆನಡಾ ಪರ ಆ ಪಂದ್ಯಾವಳಿಯಲ್ಲಿ ಜರ್ಸಿ ವಿರುದ್ಧ ತಮ್ಮ ಏಕದಿನ ಅಂತಾರಾಷ್ಟ್ರೀಯ (ODI) ಚೊಚ್ಚಲ ಪಂದ್ಯವನ್ನು ಆಡಿದರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು
ಕಲೀಮ್ ಸನಾ
https://kn.wikipedia.org/wiki/ಕಲೀಮ್_ಸನಾ
ಕಲೀಮ್ ಸನಾ (ಜನನ ೧ ಜನವರಿ ೧೯೯೪) ಪಾಕಿಸ್ತಾನ ಮೂಲದ ಕೆನಡಾದ ಕ್ರಿಕೆಟಿಗ, ಇವರು ಕೆನಡಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ವೇಗದ ಬೌಲರ್ ಆಗಿ ಆಡುತ್ತಾರೆ. ವೃತ್ತಿಜೀವನ ಅವರು ೯ ಜನವರಿ ೨೦೦೯ ರಂದು ೨೦೦೮-೦೯ ಕ್ವೈಡ್-ಎ-ಅಜಮ್ ಟ್ರೋಫಿಯಲ್ಲಿ ಪಾಕಿಸ್ತಾನದ ಕಸ್ಟಮ್ಸ್‌ಗಾಗಿ ತಮ್ಮ ಪ್ರಥಮ-ದರ್ಜೆಯ ಚೊಚ್ಚಲ ಪಂದ್ಯವನ್ನು ಆಡಿದರು, ಅವರು ೧೨ ಮಾರ್ಚ್ ೨೦೧೨ ರಂದು ೨೦೧೧-೧೨ ರಾಷ್ಟ್ರೀಯ ಏಕದಿನ ಚಾಂಪಿಯನ್‌ಶಿಪ್‌ನಲ್ಲಿ ರಾವಲ್ಪಿಂಡಿ ರಾಮ್ಸ್‌ಗಾಗಿ ತಮ್ಮ ಚೊಚ್ಚಲ ಲಿಸ್ಟ್ ಏ ಪಂದ್ಯವನ್ನು ಆಡಿದರು. ಅಕ್ಟೋಬರ್ ೨೦೨೧ ರಲ್ಲಿ, ಆಂಟಿಗುವಾದಲ್ಲಿ ನಡೆದ ೨೦೨೧ ICC ಪುರುಷರ T20 ವಿಶ್ವಕಪ್ ಅಮೆರಿಕಸ್ ಕ್ವಾಲಿಫೈಯರ್ ಪಂದ್ಯಾವಳಿಗಾಗಿ ಕೆನಡಾದ ಟ್ವೆಂಟಿ೨೦ ಇಂಟರ್ನ್ಯಾಷನಲ್ (T20I) ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಫೆಬ್ರವರಿ ೨೦೨೨ ರಲ್ಲಿ, ಒಮಾನ್‌ನಲ್ಲಿ ನಡೆದ ೨೦೨೨ ಐಸಿಸಿ ಪುರುಷರ T20 ವಿಶ್ವಕಪ್ ಗ್ಲೋಬಲ್ ಕ್ವಾಲಿಫೈಯರ್ ಏ ಪಂದ್ಯಾವಳಿಗಾಗಿ ಕೆನಡಾದ T20I ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಅವರು ೧೮ ಫೆಬ್ರವರಿ ೨೦೨೨ ರಂದು ಫಿಲಿಪ್ಪೀನ್ಸ್ ವಿರುದ್ಧ ಕೆನಡಾಕ್ಕಾಗಿ ತಮ್ಮ T20I ಚೊಚ್ಚಲ ಪಂದ್ಯವನ್ನು ಆಡಿದರು. ಮಾರ್ಚ್ ೨೦೨೩ ರಲ್ಲಿ, ಅವರು ೨೦೨೩ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪ್ಲೇ-ಆಫ್‌ಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು. ಅವರು ೨೭ ಮಾರ್ಚ್ ೨೦೨೩ ರಂದು ಕೆನಡಾ ಪರವಾಗಿ ಆ ಪಂದ್ಯಾವಳಿಯಲ್ಲಿ ಜರ್ಸಿ ವಿರುದ್ಧ ತಮ್ಮ ಏಕದಿನ ಅಂತಾರಾಷ್ಟ್ರೀಯ (ODI) ಚೊಚ್ಚಲ ಪಂದ್ಯವನ್ನು ಮಾಡಿದರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು
ಕಾರ್ಲ್ ಪಿಯರ್ಸನ್
https://kn.wikipedia.org/wiki/ಕಾರ್ಲ್_ಪಿಯರ್ಸನ್
thumb|1912ರಲ್ಲಿ ಪಿಯರ್ಸನ್ ಕಾರ್ಲ್ ಪಿಯರ್ಸನ್ (1857-1936) ಇಂಗ್ಲೆಂಡಿನ ಒಬ್ಬ ಅನ್ವಿತ ಗಣಿತಶಾಸ್ತ್ರವಿದ, ಜೀವಮಾಪನ ತಜ್ಞ ಹಾಗೂ ಸಂಖ್ಯಾಕಲನಶಾಸ್ತ್ರವಿದ. ಇಪ್ಪತ್ತನೆಯ ಶತಮಾನದ, ಅಂದರೆ ಆಧುನಿಕ ಸಂಖ್ಯಾಕಲನವಿಜ್ಞಾನದ (ಸ್ಟ್ಯಾಟಿಸ್ಟಿಕ್ಸ್) ಮೂಲಪುರುಷನಿವ. ಜನನ, ವಿದ್ಯಾಭ್ಯಾಸ 1857 ಮಾರ್ಚ್ 27 ರಂದು ಲಂಡನ್ನಿನಲ್ಲಿ ಜನನ. ಕೇಂಬ್ರಿಜಿನ ಕಿಂಗ್ಸ್ ಕಾಲೇಜಿನಲ್ಲಿ ಗಣಿತವನ್ನು ಅಭ್ಯಸಿಸಿ 1879 ರಲ್ಲಿ ರ‍್ಯಾಂಗ್ಲರ್ ಪದವಿ ಪಡೆದ. ಇವನದು ಬಹುಮುಖ ಪ್ರತಿಭೆ. ಜರ್ಮನಿಯಲ್ಲಿ ತತ್ವಶಾಸ್ತ್ರ ಮತ್ತು ರೋಮನರ ಕಾಯಿದೆ ಕಲಿತ. ಕಾರ್ಲ್ ಮಾರ್ಕ್ಸ್‌ನ (1818-1883) ಬರಹಗಳಿಂದ ಪ್ರಭಾವಿತನಾಗಿ ಮುಕ್ತ ಸಮಾಜ, ಮುಕ್ತ ವಿಚಾರಗಳನ್ನು ಪ್ರತಿಪಾದಿಸಿ ಪುಸ್ತಕ ಬರೆದ. ವೃತ್ತಿಜೀವನ, ಸಾಧನೆಗಳು 1884 ರಲ್ಲಿ (ವಯಸ್ಸು 27) ಅನ್ವಿತ ಗಣಿತ ಮತ್ತು ಬಲವಿಜ್ಞಾನ (ಅಪ್ಲೈಡ್ ಮ್ಯಾತ್‌ಮ್ಯಾಟಿಕ್ಸ್ ಆಂಡ್ ಮೆಕ್ಯಾನಿಕ್ಸ್) ವಿಷಯದ ಪ್ರಾಚಾರ್ಯನಾಗಿ ಯುನಿವರ್ಸಿಟಿ ಕಾಲೇಜಿನಲ್ಲಿ (ಲಂಡನ್) ನೇಮಕಗೊಂಡ. ಆದರೂ ತತ್ವಶಾಸ್ತ್ರ, ವಿಜ್ಞಾನ, ಲಲಿತ ಕಲೆ ಮುಂತಾದ ವಿವಿಧ ವಿಷಯಗಳ ಬಗ್ಗೆ ಲೇಖನ ಬರೆದ. ಲೆನಿನ್ ಕೂಡ ತನ್ನ ಬರಹಗಳಲ್ಲಿ ಪಿಯರ್ಸನ್‍ನನ್ನು ಉಲ್ಲೇಖಿಸಿದ್ದಾನೆ. 1890 ರಲ್ಲಿ ಗಾಲ್ಟನ್, ವೆಲ್ಡನ್ ಇವರುಗಳಿಂದ ಪ್ರಭಾವಿತನಾದ ಪಿಯರ್ಸನ್‍ನ ಒಲವು ಜೀವಶಾಸ್ತ್ರದತ್ತ ತಿರುಗಿತು. ವಸ್ತುಗಳ ಮತ್ತು ಪ್ರಾಣಿಗಳ ವಿವಿಧ ಅಂಗ ಮತ್ತು ಗುಣಗಳ ಅಳತೆಗಳಿಗೆ ಹೊಂದುವಂತೆ ಸಂಖ್ಯಾಕಲನಾತ್ಮಕ ವಿತರಣೆಗಳನ್ನು ಶೋಧಿಸಲು ತೊಡಗಿದ. ಯಾವ ನ್ಯಾಸಕ್ಕೆ ಯಾವ ಗಣಿತ ರೇಖೆಯನ್ನು ಪೊರ್ದಿಸಬೇಕೆಂಬುದರ ಬಗ್ಗೆ ಲೇಖನಗಳನ್ನು ಬರೆದ. ಈ ರೇಖೆಗಳ ಪರಿವಾರಕ್ಕೆ ಪಿಯರ್ಸನ್ನನ ವ್ಯವಸ್ಥೆ (ಸಿಸ್ಟಮ್) ಎಂಬ ಹೆಸರಿದೆ. ದತ್ತನ್ಯಾಸವನ್ನು ಪ್ರತಿನಿಧಿಸಲು ಯಾವ ಗಣಿತ ರೇಖೆಯನ್ನು ಉಪಯೋಗಿಸಬೇಕೆಂದು ನಿರ್ಧರಿಸಲು (ಕೈವರ್ಗ) ಎಂಬ ಹೊಂದಾಣಿಕೆ ಮಾಪನವನ್ನು (ಗುಡ್‌ನೆಸ್ ಆಫ್ ಫಿಟ್) ಉಪಜ್ಞಿಸಿದ. ಈ ಮಾಪನವನ್ನು ಈಗ ಜೀವಶಾಸ್ತ್ರ, ಸಮಾಜಶಾಸ್ತ್ರ, ಭೌತಶಾಸ್ತ್ರಗಳಲ್ಲಿಯೂ ಹೊಂದಾಣಿಕೆ ಮಾಪನವಾಗಿ ಉಪಯೋಗಿಸಲಾಗುವುದು. ದತ್ತನ್ಯಾಸ ಒಂದು ನಿರ್ದಿಷ್ಟ ವಿತರಣೆಯಿಂದ ಆಯಲ್ಪಟ್ಟದ್ದೇ, ಎರಡು ಅಥವಾ ಹೆಚ್ಚು ವಿಶೇಷಣಗಳು (ಅಟ್ರಿಬ್ಯೂಟ್ಸ್) ಪರಸ್ಪರ ಸ್ವತಂತ್ರಗಳಾಗಿರುವುವೇ ಮುಂತಾದವನ್ನು ನಿರ್ಧರಿಸುವುದಕ್ಕೂ ನ್ನು ಉಪಯೋಗಿಸುವರು. 1893 ರಿಂದ 1900 ತನಕ ಪಿಯರ್ಸನ್ ಮಾನವ ವಿಕಾಸದ ಬಗ್ಗೆ ಲೇಖನ ಸರಣಿಯನ್ನು ಬರೆದ. ತಳಿವಿಜ್ಞಾನವನ್ನೂ ಅನುವಂಶಿಕತೆಯನ್ನೂ ಗಣಿತಶಾಸ್ತ್ರದ ಭದ್ರ ತಳಹದಿಯ ಮೇಲೆ ನಿಲ್ಲಿಸಿದ. ಜೀವಮಾಪನದ (ಬಯೊಮೆಟ್ರಿ) ಲೇಖನಗಳಿಗೆ ಮೀಸಲಾದ ಬಯೋಮೆಟ್ರಿಕ ಎಂಬ ನಿಯತಕಾಲಿಕವನ್ನು ಪ್ರಕಾಶಿಸಲು ಆರಂಭಿಸಿದ (1902). ತಲೆಬುರುಡೆ, ಇತರ ಎಲುಬುಗಳು ಮತ್ತು ಅಂಗಗಳನ್ನು ಅಳೆದು ಅಭ್ಯಸಿಸುವ, ಮೆಂಡೆಲನ ಗುಣಗಳನ್ನು ಶೋಧಿಸುವ, ಬುದ್ಧಿವಂತಿಕೆ ಸೂಚ್ಯಂಕವನ್ನು (ಇಂಟಲಿಜನ್ಸ್ ಕೋಶಂಟ್) ಅಳೆಯುವ ಬಗ್ಗೆ ಲೇಖನಗಳನ್ನು ಇದರಲ್ಲಿ ಪ್ರಕಟಿಸಲಾಗುತ್ತಿತ್ತು. ದತ್ತನ್ಯಾಸಕ್ಕೆ ವಿವಿಧ ರೇಖೆಗಳನ್ನು ಪೊರ್ದಿಸಲು ಅನುಕೂಲವಾಗುವ ಗಣಿತಸಾರಣಿಗಳನ್ನು (ಟೇಬಲ್ಸ್) ಇದರಲ್ಲಿ ಪ್ರಕಟಿಸುತ್ತಿದ್ದ. ಎರಡು ಅಥವಾ ಹೆಚ್ಚು ಗುಣಗಳ ಸಹಸಂಬಂಧವನ್ನು ಅಳೆಯುವ ಸಹಸಂಬಂಧ ಸೂಚ್ಯಂಕಗಳನ್ನು ಬಳಕೆಗೆ ತಂದ. ಪಿಯರ್ಸನ್ ಪ್ರತಿಪಾದಿಸಿದ ತತ್ತ್ವಗಳಲ್ಲಿ ಕೆಲವೊಂದು ಲೋಪದೋಷಗಳು ಇತ್ತೀಚೆಗೆ ಕಂಡುಬಂದರೂ ಅವನು ಅನುಸರಿಸಿದ ಸಂಖ್ಯಾಕಲನಾತ್ಮಕ ವಿಧಾನಗಳು, ಜೀವಸಂಖ್ಯಾಕಲನಾತ್ಮಕ ಅಧ್ಯಯನದಲ್ಲಿ ಮಾತ್ರವಲ್ಲದೆ, ಔಷಧಶಾಸ್ತ್ರ (ಫಾರ್ಮಕಾಲಜಿ), ತಂತ್ರವಿದ್ಯೆ (ಟೆಕ್ನಾಲಜಿ) ಮತ್ತಿತರ ಶಾಸ್ತ್ರಾಧ್ಯಯನಗಳಲ್ಲಿಯೂ ಯಶಸ್ವಿಯಾಗಿ ಉಪಯೋಗಿಸಲ್ಪಡುತ್ತಿವೆ. 1911 ರಲ್ಲಿ ಪಿಯರ್ಸನ್ ಯೂನಿವರ್ಸಿಟಿ ಕಾಲೇಜಿನ ಸುಜನನ ವಿಜ್ಞಾನದ (ಯೂಜೆನಿಕ್ಸ್) ಪ್ರಾಚಾರ್ಯನಾಗಿ ನೇಮಕಗೊಂಡುBlaney, Tom (2011). The Chief Sea Lion's Inheritance: Eugenics and the Darwins. Troubador Pub., p. 108. Also see Pearson, Roger (1991). Race, Intelligence and Bias in Academe. Scott-Townsend Publishers. 1933 ರ ತನಕ ಮಾನವ ಜೀವಶಾಸ್ತ್ರದ ಅಧ್ಯಯನಕ್ಕೆ ಅಮೋಘ ಕೊಡುಗೆ ಸಲ್ಲಿಸಿದ. ನಿಧನ 1936 ರ ಏಪ್ರಿಲ್ 27 ರಂದು ಕಾರ್ಯನಿರತನಾಗಿದ್ದಾಗಲೇ ಮರಣ ಹೊಂದಿದ. ಉಲ್ಲೇಖಗಳು ಹೊರಗಿನ ಕೊಂಡಿಗಳು Karl Pearson Papers held at University College London John Aldrich's Karl Pearson: a Reader's Guide Title page and Contents at the University of Southampton (contains many useful links to further sources of information). Encyclopædia Britannica Karl Pearson Gavan Tredoux's Francis Galton website, galton.org, contains Pearson's biography of Francis Galton, and several other papers – in addition to nearly all of Galton's own published works. ವರ್ಗ:ಸಂಖ್ಯಾಶಾಸ್ತ್ರಜ್ಞರು ವರ್ಗ:ಗಣಿತಜ್ಞರು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಶ್ರೇಯಸ್ ಮೊವ್ವ
https://kn.wikipedia.org/wiki/ಶ್ರೇಯಸ್_ಮೊವ್ವ
ಶ್ರೇಯಸ್ ವಾಸುದೇವರೆಡ್ಡಿ ಮೊವ್ವ (ಜನನ ೪ ಸೆಪ್ಟೆಂಬರ್ ೧೯೯೩) ಒಬ್ಬ ಭಾರತೀಯ ಮೂಲದ ಕೆನಡಾದ ಕ್ರಿಕೆಟಿಗ . ಅಕ್ಟೋಬರ್ ೨೦೧೯ ರಲ್ಲಿ, ವೆಸ್ಟ್ ಇಂಡೀಸ್‌ನಲ್ಲಿ ೨೦೧೯-೨೦ ಪ್ರಾದೇಶಿಕ ಸೂಪರ್50 ಪಂದ್ಯಾವಳಿಗೆ ಕೆನಡಾದ ತಂಡದ ಉಪನಾಯಕನಾಗಿ ಅವರನ್ನು ಹೆಸರಿಸಲಾಯಿತು. ಅವರು ೮ ನವೆಂಬರ್ ೨೦೧೯ ರಂದು, ಪ್ರಾದೇಶಿಕ ಸೂಪರ್50 ಪಂದ್ಯಾವಳಿಯಲ್ಲಿ ಲೀವರ್ಡ್ ದ್ವೀಪಗಳ ವಿರುದ್ಧ ಕೆನಡಾಕ್ಕಾಗಿ ತಮ್ಮ ಲಿಸ್ಟ್ ಏ ಗೆ ಪಾದಾರ್ಪಣೆ ಮಾಡಿದರು. ಅಕ್ಟೋಬರ್ ೨೦೨೧ ರಲ್ಲಿ, ಆಂಟಿಗುವಾದಲ್ಲಿ ೨೦೨೧ ರ ICC ಪುರುಷರ T20 ವಿಶ್ವಕಪ್ ಅಮೆರಿಕಸ್ ಕ್ವಾಲಿಫೈಯರ್ ಪಂದ್ಯಾವಳಿಗಾಗಿ ಕೆನಡಾದ ಟ್ವೆಂಟಿ೨೦ ಇಂಟರ್ನ್ಯಾಷನಲ್ (T20I) ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಅವರು ೧೪ ನವೆಂಬರ್ ೨೦೨೧ ರಂದು ೨೦೨೧ ಐಸಿಸಿ ಪುರುಷರ T20 ವರ್ಲ್ಡ್ ಕಪ್ ಅಮೇರಿಕಾಸ್ ಕ್ವಾಲಿಫೈಯರ್ ಪಂದ್ಯಾವಳಿಯ ಪ್ರಾದೇಶಿಕ ಫೈನಲ್‌ನಲ್ಲಿ ಪನಾಮ ವಿರುದ್ಧ ಕೆನಡಾಕ್ಕಾಗಿ ಟ್ವೆಂಟಿ20 ಇಂಟರ್ನ್ಯಾಷನಲ್ (T20I) ಚೊಚ್ಚಲ ಪ್ರವೇಶ ಮಾಡಿದರು ಫೆಬ್ರವರಿ 2022 ರಲ್ಲಿ, ಒಮಾನ್‌ನಲ್ಲಿ ನಡೆದ ೨೦೨೨ ICC ಪುರುಷರ T20 ವಿಶ್ವಕಪ್ ಗ್ಲೋಬಲ್ ಕ್ವಾಲಿಫೈಯರ್ ಏ ಪಂದ್ಯಾವಳಿಗಾಗಿ ಕೆನಡಾದ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು
ಉದಯ್ ಭಗವಾನ್
https://kn.wikipedia.org/wiki/ಉದಯ್_ಭಗವಾನ್
ಉದಯ್ ಭಗವಾನ್ (ಜನನ ೩೦ ನವೆಂಬರ್ ೨೦೦೧) ಒಬ್ಬ ಕೆನಡಾದ ಕ್ರಿಕೆಟಿಗ. ಅವರು ಪ್ರಾಥಮಿಕವಾಗಿ ಬೌಲರ್ ಆಗಿ ಆಡುತ್ತಾರೆ. ಅಂತರರಾಷ್ಟ್ರೀಯ ವೃತ್ತಿಜೀವನ ಫೆಬ್ರವರಿ ೨೦೨೪ ರಲ್ಲಿ ನೇಪಾಳ ವಿರುದ್ಧದ ಅವರ ಏಕದಿನ​ ಸರಣಿಗಾಗಿ ಕೆನಡಾದ ತಂಡವನ್ನು ಹೆಸರಿಸಲಾಯಿತು. ಅವರು ೮ ಫೆಬ್ರವರಿ ೨೦೨೪ ರಂದು ನೇಪಾಳದ ವಿರುದ್ಧ ಕೆನಡಾಕ್ಕಾಗಿ ತಮ್ಮ ಏಕದಿನ ಅಂತಾರಾಷ್ಟ್ರೀಯ (ODI) ಚೊಚ್ಚಲ ಪಂದ್ಯವನ್ನು ಆಡಿದರು ಏಪ್ರಿಲ್ ೨೦೨೪ ರಲ್ಲಿ, ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಅವರ T20I ಸರಣಿಗಾಗಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಹೆಸರಿಸಲಾಯಿತು. ಅವರು ೭ ಏಪ್ರಿಲ್ ೨೦೨೪ ರಂದು ಅಮೇರಿಕ ಸಂಯುಕ್ತ ಸಂಸ್ಥಾನ ವಿರುದ್ಧ ಟ್ವೆಂಟಿ೨೦ ಅಂತರಾಷ್ಟ್ರೀಯ (T20I) ಚೊಚ್ಚಲ ಪಂದ್ಯವನ್ನು ಆಡಿದರು ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:೨೦೦೧ ಜನನ
ಅಮ್ಮರ್ ಖಾಲಿದ್
https://kn.wikipedia.org/wiki/ಅಮ್ಮರ್_ಖಾಲಿದ್
ಅಮ್ಮರ್ ಖಾಲಿದ್ (ಜನನ ೨೯ ಜೂನ್ ೧೯೮೭) ಕೆನಡಾದ ಕ್ರಿಕೆಟಿಗ, ಇವರು ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ. ಅವರು ಬಲಗೈ ಬ್ಯಾಟಿಂಗ್ ಮತ್ತು ಬಲಗೈ ಮಧ್ಯಮ ವೇಗದ ಬೌಲಿಂಗ್ ಮಾಡುವ ಆಲ್ ರೌಂಡರ್ ಆಗಿದ್ದಾರೆ. ೨೦೧೯-೨೦೨೨ ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಲೆಂಜ್ ಲೀಗ್‌ನ ಭಾಗವಾಗಿರುವ 2022 ಕೆನಡಾ ಕ್ರಿಕೆಟ್ ವಿಶ್ವಕಪ್ ಚಾಲೆಂಜ್ ಲೀಗ್ ಏ ನಲ್ಲಿ ಡೆನ್ಮಾರ್ಕ್ ವಿರುದ್ಧ ೨೭ ಜುಲೈ ೨೦೨೨ ರಂದು ಅವರು ತಮ್ಮ ಲಿಸ್ಟ್ ಏ ಗೆ ಪಾದಾರ್ಪಣೆ ಮಾಡಿದರು. ಅಂತರರಾಷ್ಟ್ರೀಯ ವೃತ್ತಿಜೀವನ ಜುಲೈ ೨೦೨೨ ರಲ್ಲಿ, ೨೦೨೨ ಕೆನಡಾ ಕ್ರಿಕೆಟ್ ವರ್ಲ್ಡ್ ಕಪ್ ಚಾಲೆಂಜ್ ಲೀಗ್ ಏ ಗೆ ಕೆನಡಾದ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಅವರು ೨೭ ಜುಲೈ ೨೦೨೨ ರಂದು ಡೆನ್ಮಾರ್ಕ್ ವಿರುದ್ಧ ತಮ್ಮ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನು ಮಾಡಿದರು. ನವೆಂಬರ್ ೨೦೨೨ ರಲ್ಲಿ, ಅವರು ೨೦೨೨ ಡೆಸರ್ಟ್ ಕಪ್ T20I ಸರಣಿಗಾಗಿ ಕೆನಡಾದ T20I ತಂಡದಲ್ಲಿ ಹೆಸರಿಸಲ್ಪಟ್ಟರು. ಅವರು ೧೪ ನವೆಂಬರ್ ೨೦೨೨ ರಂದು ಬಹ್ರೇನ್ ವಿರುದ್ಧ ತಮ್ಮ ಟ್ವೆಂಟಿ೨೦ ಅಂತರಾಷ್ಟ್ರೀಯ (T20I) ಚೊಚ್ಚಲ ಪಂದ್ಯವನ್ನು ಮಾಡಿದರು. ಅವರು ಪಂದ್ಯಾವಳಿಯಲ್ಲಿ ೧೨ ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು. ಫೆಬ್ರವರಿ ೨೦೧೪ ರಲ್ಲಿ, ಅವರು ೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨ ರ ಭಾಗವಾಗಿದ್ದ ೨೦೧೪ ಯುನೈಟೆಡ್ ಅರಬ್ ಎಮಿರೇಟ್ಸ್ ತ್ರಿ-ರಾಷ್ಟ್ರ ಸರಣಿಗಾಗಿ ಕೆನಡಾದ ತಂಡದ ಭಾಗವಾಗಿ ಹೆಸರಿಸಲ್ಪಟ್ಟರು. ಅವರು ೨೮ ಫೆಬ್ರವರಿ ೨೦೧೪ ರಂದು ಸಂಯುಕ್ತ ಅರಬ್ ಸಂಸ್ಥಾನ ವಿರುದ್ಧ ತಮ್ಮ ಅಂತಾರಾಷ್ಟ್ರೀಯ ಏಕದಿನ ಚೊಚ್ಚಲ ಪಂದ್ಯವನ್ನು ಮಾಡಿದರು. ಉಲ್ಲೇಖಗಳು
ಶ್ರೀಮಂತ ವಿಜೆರತ್ನೆ
https://kn.wikipedia.org/wiki/ಶ್ರೀಮಂತ_ವಿಜೆರತ್ನೆ
ಶ್ರೀಮಂತ ವಿಜೆರತ್ನೆ (ಜನನ ೩ ಜೂನ್ ೧೯೮೯) ಶ್ರೀಲಂಕಾ ಮೂಲದ ಕೆನಡಾದ ಕ್ರಿಕೆಟಿಗ . ಅವರು ೨೦೧೫ ರಿಂದ ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು ಬಲಗೈ ವಿಕೆಟ್ ಕೀಪರ್ / ಬ್ಯಾಟ್ಸ್‌ಮನ್ ಆಗಿ ಆಡುತ್ತಾರೆ. ಅಂತರರಾಷ್ಟ್ರೀಯ ವೃತ್ತಿಜೀವನ ೨೦೦೭ ರಲ್ಲಿ, ವಿಜೆರತ್ನೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಶ್ರೀಲಂಕಾ ರಾಷ್ಟ್ರೀಯ ಅಂಡರ್-19 ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು, ಲಹಿರು ತಿರಿಮನ್ನೆ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದರು. ೧೭ ಜನವರಿ ೨೦೧೫ ರಂದು ನೆದರ್ಲ್ಯಾಂಡ್ಸ್ ವಿರುದ್ಧ ೨೦೧೫ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್ ಎರಡು ಪಂದ್ಯಾವಳಿಯಲ್ಲಿ ವಿಜೆರತ್ನೆ ತಮ್ಮ ಲಿಸ್ಟ್ ಏ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಅವರು ೨೦೧೮ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ ಎರಡು ಪಂದ್ಯಾವಳಿಗಾಗಿ ಕೆನಡಾದ ತಂಡದಲ್ಲಿದ್ದರು. ಅಕ್ಟೋಬರ್ ೨೦೧೯ ರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ೨೦೧೯ ಐಸಿಸಿ ಟಿ 20 ವಿಶ್ವಕಪ್ ಅರ್ಹತಾ ಪಂದ್ಯಾವಳಿಗಾಗಿ ಕೆನಡಾದ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಅವರು ೨೫ ಅಕ್ಟೋಬರ್ ೨೦೧೯ ರಂದು ಒಮಾನ್ ವಿರುದ್ಧ ಕೆನಡಾಕ್ಕಾಗಿ ತಮ್ಮ ಟ್ವೆಂಟಿ೨೦ ಅಂತರರಾಷ್ಟ್ರೀಯ (T20I) ಚೊಚ್ಚಲ ಪಂದ್ಯವನ್ನು ಮಾಡಿದರು ಮಾರ್ಚ್ ೨೦೨೩ ರಲ್ಲಿ, ಅವರು ೨೦೨೩ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪ್ಲೇ-ಆಫ್‌ಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು. ಅವರು ೨೭ ಮಾರ್ಚ್ ೨೦೨೩ ರಂದು ಕೆನಡಾ ಪರವಾಗಿ ಆ ಪಂದ್ಯಾವಳಿಯಲ್ಲಿ ಜರ್ಸಿ ವಿರುದ್ಧ ತಮ್ಮ ಏಕದಿನ ಅಂತಾರಾಷ್ಟ್ರೀಯ (ODI) ಚೊಚ್ಚಲ ಪಂದ್ಯವನ್ನು ಮಾಡಿದರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:೧೯೮೯ ಜನನ
ನವನೀತ್ ಧಲಿವಾಲ್
https://kn.wikipedia.org/wiki/ನವನೀತ್_ಧಲಿವಾಲ್
ನವನೀತ್ ಧಲಿವಾಲ್ (ಜನನ ೧೦ ಅಕ್ಟೋಬರ್ ೧೯೮೮) ಒಬ್ಬ ಭಾರತೀಯ ಮೂಲದ ಕೆನಡಾದ ಕ್ರಿಕೆಟಿಗ, ಇವರು ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದರು. ವೃತ್ತಿಜೀವನ ಅವರು ೧೭ ಜನವರಿ ೨೦೧೫ ರಂದು ನೆದರ್ಲ್ಯಾಂಡ್ಸ್ ವಿರುದ್ಧ ಕೆನಡಾಕ್ಕಾಗಿ ೨೦೧೫ ICC ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ ಎರಡು ಪಂದ್ಯಾವಳಿಯಲ್ಲಿ ತಮ್ಮ ಲಿಸ್ಟ್ ಏ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಜನವರಿ ೨೦೧೮ ರಲ್ಲಿ, ಅವರು ೨೦೧೮ ರ ICC ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ ಎರಡು ಪಂದ್ಯಾವಳಿಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು. ಸೆಪ್ಟೆಂಬರ್ ೨೦೧೮ ರಲ್ಲಿ, ಅವರು ೨೦೧೮-೧೯ ಐಸಿಸಿ ವಿಶ್ವ ಟ್ವೆಂಟಿ೨೦ ಅಮೇರಿಕಾಸ್ ಕ್ವಾಲಿಫೈಯರ್ ಪಂದ್ಯಾವಳಿಗಾಗಿ ಕೆನಡಾದ ತಂಡದಲ್ಲಿ ಹೆಸರಿಸಲ್ಪಟ್ಟರು. ಅವರು ಆರು ಪಂದ್ಯಗಳಲ್ಲಿ ೮೩ ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಕೆನಡಾದ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದರು. ಜೂನ್ ೨೦೧೯ ರಲ್ಲಿ, ಅವರು ೨೦೧೯ ರ ಗ್ಲೋಬಲ್ T20 ಕೆನಡಾ ಪಂದ್ಯಾವಳಿಯಲ್ಲಿ ಎಡ್ಮಂಟನ್ ರಾಯಲ್ಸ್ ಫ್ರಾಂಚೈಸ್ ತಂಡಕ್ಕೆ ಆಡಲು ಆಯ್ಕೆಯಾದರು. ಆಗಸ್ಟ್ ೨೦೧೯ ರಲ್ಲಿ, ಅವರು ೨೦೧೮-೧೯ ಐಸಿಸಿ T20 ವಿಶ್ವಕಪ್ ಅಮೆರಿಕಸ್ ಕ್ವಾಲಿಫೈಯರ್ ಪಂದ್ಯಾವಳಿಯ ಪ್ರಾದೇಶಿಕ ಫೈನಲ್‌ಗಾಗಿ ಕೆನಡಾದ ತಂಡದ ನಾಯಕರಾಗಿ ಹೆಸರಿಸಲ್ಪಟ್ಟರು. ಅವರು ೧೮ ಆಗಸ್ಟ್ ೨೦೧೯ ರಂದು ಕೇಮನ್ ದ್ವೀಪಗಳ ವಿರುದ್ಧ ಕೆನಡಾಕ್ಕಾಗಿ ತಮ್ಮ ಟ್ವೆಂಟಿ20 ಅಂತರಾಷ್ಟ್ರೀಯ (T20I) ಚೊಚ್ಚಲ ಪಂದ್ಯವನ್ನು ಆಡಿದರು. ಅವರು ಆರು ಪಂದ್ಯಗಳಲ್ಲಿ 190 ರನ್‌ಗಳೊಂದಿಗೆ ಪ್ರಮುಖ ರನ್-ಸ್ಕೋರರ್ ಆಗಿ ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು. ಸೆಪ್ಟೆಂಬರ್ ೨೦೧೯ ರಲ್ಲಿ, ಅವರು ೨೦೧೯ ರ ಮಲೇಷ್ಯಾ ಕ್ರಿಕೆಟ್ ವಿಶ್ವಕಪ್ ಚಾಲೆಂಜ್ ಲೀಗ್ ಎ ಪಂದ್ಯಾವಳಿಗೆ ಕೆನಡಾದ ತಂಡದ ನಾಯಕರಾಗಿ ಹೆಸರಿಸಲ್ಪಟ್ಟರು. ೧೯ ಸೆಪ್ಟೆಂಬರ್ ೨೦೧೯ ರಂದು, ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ, ಅವರು ೯೪ ಎಸೆತಗಳಲ್ಲಿ ೧೪೦ ರನ್ ಗಳಿಸಿದರು, ಕೆನಡಾ ತನ್ನ ೫೦ ಓವರ್‌ಗಳಲ್ಲಿ ೪೦೮/೭ ಗಳಿಸಿತು. ಅವರು ಮೂರು ಪಂದ್ಯಗಳಲ್ಲಿ ೨೫೦ ರನ್‌ಗಳೊಂದಿಗೆ ಕೆನಡಾದ ಪ್ರಮುಖ ರನ್-ಸ್ಕೋರರ್ ಆಗಿ ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು. ಅಕ್ಟೋಬರ್ ೨೦೧೯ ರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ೨೦೧೯ ರ ಐಸಿಸಿ ಟಿ೨೦ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿಗೆ ಕೆನಡಾದ ತಂಡದ ನಾಯಕರಾಗಿ ಅವರನ್ನು ಹೆಸರಿಸಲಾಯಿತು. ಪಂದ್ಯಾವಳಿಗೆ ಮುಂಚಿತವಾಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅವರನ್ನು ಕೆನಡಾದ ತಂಡದಲ್ಲಿ ಪ್ರಮುಖ ಆಟಗಾರ ಎಂದು ಹೆಸರಿಸಿತು. ಅಕ್ಟೋಬರ್ ೨೦೨೧ ರಲ್ಲಿ, ಆಂಟಿಗುವಾದಲ್ಲಿ ೨೦೨೧ ರ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಅಮೆರಿಕಸ್ ಕ್ವಾಲಿಫೈಯರ್ ಪಂದ್ಯಾವಳಿಗೆ ಕೆನಡಾದ ತಂಡದ ನಾಯಕರಾಗಿ ಅವರನ್ನು ಹೆಸರಿಸಲಾಯಿತು. ಫೆಬ್ರವರಿ ೨೦೨೨ ರಲ್ಲಿ, ಅವರು ಒಮಾನ್‌ನಲ್ಲಿ ೨೦೨೨ ರ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಗ್ಲೋಬಲ್ ಕ್ವಾಲಿಫೈಯರ್ ಏ ಪಂದ್ಯಾವಳಿಗೆ ರಾಷ್ಟ್ರೀಯ ತಂಡದ ನಾಯಕರಾಗಿ ಮತ್ತೊಮ್ಮೆ ಹೆಸರಿಸಲ್ಪಟ್ಟರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು
ಹುಂಡಿ
https://kn.wikipedia.org/wiki/ಹುಂಡಿ
right|thumb|ಬಾಂಬೆ ಪ್ರಾಂತ್ಯದಲ್ಲಿ ಮುಂಚಿತವಾಗಿ ಮುದ್ರಿಸಲಾದ 2500 ರೂಪಾಯಿಗಳ ಒಂದು ಹುಂಡಿ, ಕಂದಾಯ ಅಂಚೆ ಚೀಟಿಯೊಂದಿಗೆ 1951ರಲ್ಲಿ ಮುದ್ರೆ ಹಾಕಲ್ಪಟ್ಟಿತು. ಹುಂಡಿ ಎಂಬುದು ಮಧ್ಯಕಾಲೀನ ಭಾರತದಲ್ಲಿ ವ್ಯಾಪಾರ ಮತ್ತು ಸಾಲದ ವಹಿವಾಟುಗಳ ಬಳಕೆಗಾಗಿ ಅಭಿವೃದ್ಧಿಪಡಿಸಲಾದ ಹಣಕಾಸು ಸಾಧನ. ಹುಂಡಿಗಳನ್ನು ಹಣ ವರ್ಗಾಯಿಸಲು, ಹಣ ರವಾನೆ ಸಾಧನವಾಗಿ, ಸಾಲದ ಸಾಧನವಾಗಿ, ಐ. ಓ. ಯು. ನ ರೂಪದಲ್ಲಿ ಹಣವನ್ನು ಎರವಲು ಪಡೆಯಲು ಮತ್ತು ವ್ಯಾಪಾರ ವಹಿವಾಟುಗಳಲ್ಲಿ ವಿನಿಮಯ ಪತ್ರವಾಗಿ ಬಳಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಹುಂಡಿಯನ್ನು " ನಿರ್ದಿಷ್ಟ ಮೊತ್ತದ ಹಣವನ್ನು ಆದೇಶದಲ್ಲಿ ಹೆಸರಿಸಲಾದ ವ್ಯಕ್ತಿಗೆ ಪಾವತಿಸುವಂತೆ, ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ನಿರ್ದೇಶನ ನೀಡುವ ಲಿಖಿತ ಆದೇಶ" ಎಂದು ವಿವರಿಸುತ್ತದೆ.Hundies, Reserve Bank of India, 2013. Retrieved 26 November 2013. right|thumb|ಹುಂಡಿಯ ನಕಲಿಗಳನ್ನು ತಡೆಗಟ್ಟಲು ಸರ್ಕಾರವು ಬಿಡುಗಡೆ ಮಾಡಿದ ಜಲಚಿಹ್ನೆಯನ್ನು ಹುಂಡಿಗಳಲ್ಲಿ ಸೇರಿಸಲಾಗಿತ್ತು. ಭಾರತದಲ್ಲಿ ಹುಂಡಿಗಳಿಗೆ ಬಹಳ ಸುದೀರ್ಘ ಕಾಲದ ಇತಿಹಾಸವಿದೆ. ಲಿಖಿತ ದಾಖಲೆಗಳು ಹನ್ನೆರಡನೆಯ ಶತಮಾನದಷ್ಟು ಹಿಂದೆಯೇ ಅವುಗಳ ಬಳಕೆಯನ್ನು ತೋರಿಸುತ್ತವೆ. 1586ರಲ್ಲಿ ಜನಿಸಿದ ಬನಾರಸಿ ದಾಸ್ ಎಂಬ ವ್ಯಾಪಾರಿ, ತನ್ನ ತಂದೆಯಿಂದ 200 ರೂಪಾಯಿಗಳಿಗೆ ಹುಂಡಿಯನ್ನು ಪಡೆದಿದ್ದನು. ಈ ರೀತಿ ವ್ಯಾಪಾರವನ್ನು ಪ್ರಾರಂಭಿಸಲು ಹಣವನ್ನು ಪಡೆಯಲು ಸಾಧ್ಯವಾಯಿತು. ವಸಾಹತುಶಾಹಿ ಯುಗದಲ್ಲಿ, ಬ್ರಿಟಿಷ್ ಸರ್ಕಾರವು ಹುಂಡಿ ವ್ಯವಸ್ಥೆಯನ್ನು ಸ್ಥಳೀಯ ಅಥವಾ ಸಾಂಪ್ರದಾಯಿಕವೆಂದು ಪರಿಗಣಿಸಿತು. ಆದರೆ ಬ್ರಿಟಿಷ್ ಸರ್ಕಾರವು ಹುಂಡಿ ವ್ಯವಸ್ಥೆಯನ್ನು ಅನೌಪಚಾರಿಕವಲ್ಲವೆಂದು ಪರಿಗಣಿಸಲ್ಲಿಲ್ಲ. ಇದು ಭಾರತೀಯ ಆರ್ಥಿಕತೆಯ ಪ್ರಮುಖ ಭಾಗವಾಗಿರುವುದರಿಂದ ಅದರಲ್ಲಿ ಹಸ್ತಕ್ಷೇಪ ಮಾಡಲು ಬ್ರಿಟಿಷರು ಹಿಂಜರಿಯುತ್ತಿದ್ದರು. ಆರ್ಥಿಕ ವ್ಯವಸ್ಥೆಯಲ್ಲಿ ನಡೆಯುವ ವಹಿವಾಟುಗಳಿಗೆ ತೆರಿಗೆ ವಿಧಿಸುವ ಇಚ್ಚೆಯು ಈ ಹಿಂಜರಿಕೆಯ ಇನ್ನೊಂದು ಕಾರಣವಾಗಿತ್ತು.Between informality and formality: Hundi/Hawala in India, Marina Martin, London School of Economics India Blog, 16 January 2013. Retrieved 26 November 2013. ಅಧಿಕೃತ ಹುಂಡಿ ರೂಪದ ಕಂದಾಯ ಅಂಚೆಚೀಟಿಗಳು ರಾಣಿ ವಿಕ್ಟೋರಿಯಾ ಸೇರಿದಂತೆ ಬ್ರಿಟಿಷ್ ರಾಜರ ಚಿತ್ರದೊಂದಿಗೆ ತಯಾರಿಸಲಾಯಿತು. ವ್ಯಾಪಾರಿಗಳ ನಡುವಿನ ವಿವಾದಗಳು ಆಗಾಗ್ಗೆ ನ್ಯಾಯಾಲಯ ವ್ಯವಸ್ಥೆಯನ್ನು ಪ್ರವೇಶಿಸಿದವು. ಸಾಮಾನ್ಯ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸುಗಮವಾಗಿ ನಡೆಯಲ್ಲಿಲ್ಲ. ಆದ್ದರಿಂದ ಯಾವುದೇ ರೀತಿಯಲ್ಲಿ ಈ ವ್ಯವಸ್ಥೆಯು ಭದ್ರವಾಗಿ ನೆಲೆಯೂರಲಿಲ್ಲ.Habib, Irfan; The system of bills of exchange (hundis) in the Mughal Empire; Proceedings of the Indian History Congress, 33rd Session, Muzatarppur, 1972, S. 290–303. New Delhi ಹುಂಡಿಯ ವಿಧಗಳು ನಾಮ್-ಜೋಗ್ ಹುಂಡಿ: ಈ ಹುಂಡಿಯನ್ನು ಯಾರ ಹೆಸರನ್ನು ಹುಂಡಿಯಲ್ಲಿ ಉಲ್ಲೇಖಿಸಲಾಗಿದೆಯೋ ಆ ವ್ಯಕ್ತಿಗೆ ಮಾತ್ರ ಪಾವತಿಸಲಾಗುತ್ತದೆ. ಅಂತಹ ಹುಂಡಿಯನ್ನು ಬೇರೆ ಯಾವುದೇ ವ್ಯಕ್ತಿಯ ಪರವಾಗಿ ಅನುಮೋದಿಸಲಾಗುವುದಿಲ್ಲ. ಇದು ನಿರ್ಬಂಧಿತ ಅನುಮೋದನೆಯನ್ನು ಮಾಡಲಾದ ಮಸೂದೆಯನ್ನು ಹೋಲುತ್ತದೆ. ಫರ್ಮಾನ್-ಜೋಗ್ ಹುಂಡಿ: ಈ ಹುಂಡಿಯನ್ನು ಹುಂಡಿಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಗೆ ಅಥವಾ ಅವನು ಆದೇಶಿಸಿದ ಯಾವುದೇ ವ್ಯಕ್ತಿಗೆ ಪಾವತಿಸಬಹುದು. ಈ ರೀತಿಯ ಹುಂಡಿಯು ಆದೇಶದ ಮೇರೆಗೆ ಪಾವತಿಸಬೇಕಾದ ಚೆಕ್ ಅನ್ನು ಹೋಲುತ್ತದೆ. ಇಂತಹ ಹುಂಡಿಯ ಮೇಲೆ ಯಾವುದೇ ಅನುಮೋದನೆಯ ಅಗತ್ಯವಿಲ್ಲ. ಧಾನಿ-ಜೋಗ್ ಹುಂಡಿ: ಹುಂಡಿಯನ್ನು ಕೊಂಡುಕೊಳ್ಳುವವರಿಗೆ ಅಥವಾ ಧಾರಕರಿಗೆ ಪಾವತಿಸಿದಾಗ, ಅದನ್ನು ಧಾನಿ ಜೋಗ್ ಹುಂಡಿ ಎಂದು ಕರೆಯಲಾಗುತ್ತದೆ. ಇದು ಧಾರಕನಿಗೆ ಪಾವತಿಸಬೇಕಾದ ಸಾಧನವನ್ನು ಹೋಲುತ್ತದೆ. ಜೋಕಿಮ್-ಹುಂಡಿ: ಸಾಮಾನ್ಯವಾಗಿ ಹುಂಡಿಯಲ್ಲಿ ಷರತ್ತುಗಳಿರುವುದಿಲ್ಲ. ಆದರೆ ಜೋಕಿಮ್ ಹುಂಡಿ ಷರತ್ತುಬದ್ಧವಾಗಿರುತ್ತದೆ, ಅಂದರೆ ಡ್ರಾಯರ್ ಒಂದು ನಿರ್ದಿಷ್ಟ ಷರತ್ತಿನ ಮೇಲೆ ಮಾತ್ರ ಹುಂಡಿ ಮೊತ್ತವನ್ನು ಪಾವತಿಸುವ ಭರವಸೆ ನೀಡುತ್ತಾರೆ. ಅಂತಹ ಹುಂಡಿಗಳನ್ನು ಬದಲಾಯಿಸಲಾಗುವುದಿಲ್ಲ, ಮತ್ತು ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಅಂತಹ ಹುಂಡಿಗಳ ಬಳಕೆಯನ್ನು ಸ್ವೀಕರಿಸಲು ನಿರಾಕರಿಸುವುದರಿಂದ ಅಂತಹ ಹುಂಡಿಗಳು ಪ್ರಸ್ತುತ ದಿನಗಳಲ್ಲಿ ಬಹಳ ಅಪರೂಪವಾಗಿವೆ. ಜವಾಬಿ ಹುಂಡಿ: ಹಣವು ಹುಂಡಿಯ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾದರೆ ಮತ್ತು ಪಾವತಿಯನ್ನು ಸ್ವೀಕರಿಸುವ ವ್ಯಕ್ತಿಯು ತನ್ನ ಸ್ವೀಕೃತಿ(ಜವಾಬ್)ಯನ್ನು ನೀಡಿದರೆ, ಅಂತಹ ಹುಂಡಿಯನ್ನು ಜವಾಬಿ ಹುಂಡಿಯೆಂದು ಕರೆಯಲಾಗುತ್ತದೆ. ಖಾಕಾ ಹುಂಡಿ: ಈಗಾಗಲೇ ಪಾವತಿಯನ್ನು ಮಾಡಲಾಗಿರುವ ಹುಂಡಿಯನ್ನು ಖಾಕಾ ಹುಂಡಿಯೆಂದು ಕರೆಯಲಾಗುತ್ತದೆ. ಖೋತಿ ಹುಂಡಿ: ಒಂದು ವೇಳೆ ಹುಂಡಿಯನ್ನು ನಕಲಿ ಮಾಡಿದ್ದರೆ ಅಥವಾ ಹುಂಡಿಯಲ್ಲಿ ಯಾವುದೇ ರೀತಿಯ ದೋಷವಿದ್ದರೆ, ಅಂತಹ ಹುಂಡಿಯನ್ನು ಖೋತಿ ಹುಂಡಿಯೆಂದು ಕರೆಯಲಾಗುತ್ತದೆ. ಹುಂಡಿಯಲ್ಲಿಇನ್ನೂ ಕೆಲವು ವಿದಗಳಿವೆ. ನಾಮ-ಜೋಗ್ ಹುಂಡಿ, ಧಾನಿ-ಜೋಗ್ ಹುಂಡಿ, ಜವಾಬೀ ಹುಂಡಿ, ಜೋಖಮಿ ಹುಂಡಿ, ಫರ್ಮನ್-ಜೋಗ್ ಹುಂಡಿ ಇತ್ಯಾದಿ.Marina Martin; Hundi/Hawala: The Problem of Definition; Modern Asian Studies, Vol. 43, No. 4 (Jul., 2009), S. 909–937 ಸಹಯೋಗ್ ಹುಂಡಿ: ಈ ಹುಂಡಿಯ ಪ್ರಕಾರ ಒಬ್ಬ ವ್ಯಾಪಾರಿಯು ಮತ್ತೊಬ್ಬ ವ್ಯಾಪಾರಿಗೆ ಮೂರನೇಯ ವ್ಯಕ್ತಿಗೆ ಮೊತ್ತವನ್ನು ಪಾವತಿಸುವಂತೆ ಆದೇಶಿಸುತ್ತಾನೆ. ಯಾವ ವ್ಯಕ್ತಿಯ ಪರವಾಗಿ ಹುಂಡಿಯನ್ನು ಬಳಸಲಾಗಿದೆಯೋ ಆ ವ್ಯಕ್ತಿ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿಗೆ 'ಸಾಲದ ಅರ್ಹತೆ' ಯನ್ನು ಹೊಂದಿರುದರಿಂದ ಮಾರುಕಟ್ಟೆಯಲ್ಲಿ ಪರಿಚಿತನಾಗಿರುತ್ತಾನೆ. ಒಂದು ಸಹಯೋಗ ಹುಂಡಿ ಒಬ್ಬರಿಂದ ಮತ್ತೊಂಬರ ಕೈಗೆ ಹಾದುಹೋಗುತ್ತದೆ, ಅದು ಅಂತಿಮವಾಗಿ ಸ್ವೀಕರಿಸುವವರನ್ನು ತಲುಪುವವರೆಗೆ ಪಾವತಿಯನ್ನು ಸ್ವೀಕರಿಸಲು ಸಮಂಜಸವಾದ ವಿಚಾರಣೆಗಳು ನಡೆಯುತ್ತವೆ. ವ್ಯಾಪಾರಿಗಳ ಪ್ರಧಾನ ಭಾಷೆಯಾದ ಹಿಂದಿಯಲ್ಲಿಮತ್ತು ಗುಜರಾತಿಯಲ್ಲಿ ಸಹಯೋಗ ಎಂದರೆ ಸಹಕಾರ ಎಂದರ್ಥ .Indian Encyclopaedia, Volume 1 - The Indian Encyclopaedia: Biographical, Historical, Religious, Administrative, Ethnological, Commercial and Scientific. Subodh Kapoor. Cosmo Publications 2002. 318 pag. ISBN 8177552570, ISBN 9788177552577 ಹುಂಡಿಯಲ್ಲಿ ಅಪಾಯವನ್ನು ಸ್ವೀಕರಿಸಲು ಮತ್ತು ಪಾವತಿಸಲು ಬಹು ಪಕ್ಷಗಳ ಸಹಕಾರದ ಅಗತ್ಯವಿದೆ. ಈ ಕಾರಣದಿಂದಾಗಿ ಹುಂಡಿಗೆ ಈ ಹೆಸರನ್ನು ನೀಡಲಾಗಿದೆ.Hundies at Reserve Bank of India ದರ್ಶನಿ ಹುಂಡಿ: ಇದು ಕಣ್ಣಿಗೆ ಕಾಣಿಸುವ ಹಣ. ಈ ಹುಂಡಿಯನ್ನು ಹೊಂದಿರುವವರು ಸ್ವೀಕರಿಸಿದ ನಂತರ ನಿರ್ದಿಷ್ಟ ಸಮಯದೊಳಗೆ ಪಾವತಿಗಾಗಿ ಅದನ್ನು ಪ್ರಸ್ತುತಪಡಿಸಬೇಕು. ಆದ್ದರಿಂದ, ಇದು ಬೇಡಿಕೆ ಮಸೂದೆಯನ್ನು ಹೋಲುತ್ತದೆ .[1] ಮುದ್ದತಿ ಹುಂಡಿ: ಮುದ್ದತಿ ಅಥವಾ ಮಿಯಾದಿ ಹುಂಡಿಯನ್ನು ನಿರ್ದಿಷ್ಟ ಅವಧಿಯ ನಂತರ ಪಾವತಿಸಲಾಗುತ್ತದೆ. ಇದು ಸಮಯದ ಮಸೂದೆಯನ್ನು ಹೋಲುತ್ತದೆ. ಹಣ ರವಾನೆ ರಾಷ್ಟ್ರಗಳ ರವಾನೆಯ ಜಾಗತಿಕ ಶ್ರೇಯಾಂಕ ಭಾರತಕ್ಕೆ ಹಣ ರವಾನೆ ಹವಾಲಾ ಅನೌಪಚಾರಿಕ ಮೌಲ್ಯ ವರ್ಗಾವಣೆ ವ್ಯವಸ್ಥೆ ಹಣಕಾಸು ಕ್ರಿಯಾ ಕಾರ್ಯಪಡೆ ಭಾರತದ ಆರ್ಥಿಕತೆ ಭಾರತದ ಆರ್ಥಿಕತೆ ಭಾರತದ ಆರ್ಥಿಕ ಇತಿಹಾಸ ಭಾರತಕ್ಕೆ ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ ಭಾರತದ ವಿದೇಶಿ ವ್ಯಾಪಾರ ಭಾರತದ ರಫ್ತುಗಳ ಪಟ್ಟಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರ ಪಟ್ಟಿ ಭಾರತಕ್ಕೆ ರವಾನೆಯಾಗುವ ಹಣದ ಮೇಲೆ ಪ್ರಭಾವ ಬೀರುವ ಅಂಶಗಳು ಭಾರತೀಯ ವಲಸಿಗರು ಗ್ರೇಟರ್ ಇಂಡಿಯಾ ಇಂಡೊಸ್ಫಿಯರ್ ಇತರರು ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881 ವರದಿಗಾರನ ಖಾತೆ ಉಲ್ಲೇಖಗಳು ಮುಂದೆ ಓದಿ ಹುಂಡಿಯ ಆರ್ಥಿಕ ಇತಿಹಾಸ, 1858-1978. ಪಿಎಚ್ಡಿ ಪ್ರಬಂಧ, ಮರೀನಾ ಮಾರ್ಟಿನ್, 2012, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್. ಇಲ್ಲಿ ಆರ್ಕೈವ್ ಮಾಡಲಾಗಿದೆ. ಹುಂಡಿ ಬಳಕೆಯ ಕೇಸ್ ಸ್ಟಡಿಯೊಂದಿಗೆ ನಾಗರತ್ತಾರರ ವ್ಯವಹಾರ ಇತಿಹಾಸ.
ಆಮೇ (ಚಲನಚಿತ್ರ)
https://kn.wikipedia.org/wiki/ಆಮೇ_(ಚಲನಚಿತ್ರ)
ಆಮೇ ಎಂಬುದು ತೆಲುಗು ಭಾಷೆಯ ನಾಟಕೀಯ ಚಲನಚಿತ್ರ. 'ಅವಳು' ಎಂಬುದು ತೆಲುಗು ಪದ 'ಆಮೇ'ಯ ಕನ್ನಡ ರೂಪ. ಆಮೇ ಚಲನಚಿತ್ರವನ್ನು ಇ. ವಿ. ವಿ. ಸತ್ಯನಾರಾಯಣ್ರವರು 1994ರಲ್ಲಿ ನಿರ್ದೇಶಿಸಿದರು. ಈ ಚಲನಚಿತ್ರದಲ್ಲಿ ಶ್ರೀಕಾಂತ್, ಊಹಾ ಮತ್ತು ನರೇಶ್ ನಟಿಸಿದ್ದಾರೆ. ಈ ಚಿತ್ರವನ್ನು ಕನ್ನಡದಲ್ಲಿ ತಾಳಿಯ ಸೌಭಾಗ್ಯ (1995) ಮತ್ತು ತಮಿಳಿನಲ್ಲಿ ಥಾಲಿ ಪುಧುಸು (1997) ಎಂದು ಮರುನಿರ್ಮಿಸಲಾಯಿತು. ಈ ಚಿತ್ರವು ಎರಡು ನಂದಿ ಪ್ರಶಸ್ತಿ ಮತ್ತು ಒಂದು ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆಮೇ ಚಿತ್ರವು ಶ್ರೀಕಾಂತ್ ಮತ್ತು ಊಹಾ ಜೊತೆಗೆ ತೆರೆಯಲ್ಲಿ ಕಾಣಿಸಿಕೊಂಡ ಮೊದಲ ಚಿತ್ರವಾಗಿದೆ. ಕಥಾವಸ್ತು ಈ ಚಲನಚಿತ್ರವು ಪುರುಷ ಕೋಮುವಾದಿಗಳು ಹೇಗೆ ಮಹಿಳೆಯ ಜೀವನವನ್ನು ಹಾಳುಮಾಡುತ್ತಾರೆ ಎಂಬುದನ್ನು ತೋರಿಸುತ್ತದೆ. ಪಾತ್ರಗಳು   ಆಂಜನೇಯುಲು ಪಾತ್ರದಲ್ಲಿ ಶ್ರೀಕಾಂತ್ ಓಹಾ ಪಾತ್ರದಲ್ಲಿ ಓಹಾ ವಿಕ್ರಮ್ ಪಾತ್ರದಲ್ಲಿ ನರೇಶ್ ಸುಬ್ರಹ್ಮಣ್ಯಂ ಪಾತ್ರದಲ್ಲಿ ಚಂದ್ರಮೋಹನ್ ಪಟ್ಟಾಭಿಯಾಗಿ ತಣಿಕೆಲ್ಲ ಭರಣಿ ಶ್ರೀನಿವಾಸ ರಾವ್ ಪಾತ್ರದಲ್ಲಿ ಕೋಟಾ ಶ್ರೀನಿವಾಸರಾವ್ ಪೂಜಾರಿ ಪಾತ್ರದಲ್ಲಿ ಬ್ರಹ್ಮಾನಂದಂ ಚಲಪತಿ ರಾವ್ AVS ಓಹಾ ಅವರ ತಾಯಿಯಾಗಿ ಪಾತ್ರದಲ್ಲಿ ಸಂಗೀತಾ ಆಂಜನೇಯುಲು ಅವರ ತಾಯಿಯಾಗಿ ಸುಧಾ ಧ್ವನಿಮುದ್ರಿಕೆ   ಈ ಚಲನಚಿತ್ರದ ಸಂಗೀತವನ್ನು ವಿದ್ಯಾಸಾಗರ್ ಸಂಯೋಜಿಸಿದ್ದಾರೆ. ಈ ಸಂಗೀತವು ಆದಿತ್ಯ ಮ್ಯೂಸಿಕ್ ಕಂಪನಿಯಲ್ಲಿ ಬಿಡುಗಡೆಯಾಯಿತು.   ಪ್ರಶಸ್ತಿಗಳು ನಂದಿ ಪ್ರಶಸ್ತಿಗಳು-1994 (in Telugu) ಅತ್ಯುತ್ತಮ ನಟಿ - ಊಹಾ. ವಿಶೇಷ ತೀರ್ಪುಗಾರರ ಪ್ರಶಸ್ತಿ-ಐ. ಮೋಹನ್ ರಾವ್ (ಲೇಖನ) ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ ಅತ್ಯುತ್ತಮ ಚಲನಚಿತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ-ತೆಲುಗು-ಮುಲ್ಲಪುಡಿ ಬ್ರಹ್ಮಾನಂದಂ (ಚಲನಚಿತ್ರ ನಿರ್ಮಾಪಕ) ಬಾಹ್ಯ ಸಂಪರ್ಕಗಳು ಉಲ್ಲೇಖಗಳು
ಸಂಯುಕ್ತ ಅರಬ್ ಸಂಸ್ಥಾನ ಕ್ರಿಕೆಟ್ ತಂಡ
https://kn.wikipedia.org/wiki/ಸಂಯುಕ್ತ_ಅರಬ್_ಸಂಸ್ಥಾನ_ಕ್ರಿಕೆಟ್_ತಂಡ
ಸಂಯುಕ್ತ ಅರಬ್ ಸಂಸ್ಥಾನ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಂಯುಕ್ತ ಅರಬ್ ಸಂಸ್ಥಾನ ಅನ್ನು ಪ್ರತಿನಿಧಿಸುವ ತಂಡವಾಗಿದೆ. ತಂಡದ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯಿಂದ (ECB) ಆಡಳಿತ ನಡೆಸುತ್ತಾರೆ, ಇದು ೧೯೮೯ ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ ಅಂಗ ಸದಸ್ಯರಾದರು ಮತ್ತು ಮುಂದಿನ ವರ್ಷ ಸಹಾಯಕ ಸದಸ್ಯರಾದರು . The team is composed mainly of Indian and Pakistani expatriates working in UAE. ೨೦೦೫ ರಿಂದ, ಐಸಿಸಿಯ ಪ್ರಧಾನ ಕಛೇರಿಯು ದುಬೈನಲ್ಲಿದೆ. ಏಕದಿನ ಅಂತಾರಾಷ್ಟ್ರೀಯ (ODI) ತಂಡಗಳ ಪೈಕಿ ಉದಯೋನ್ಮುಖ ತಂಡವಾಗಿರುವ ಯು. ಏ. ಇ, Encyclopedia of World Cricket by Roy Morgan, Sportsbooks Publishing, 2007 ೨೦೦೦ ಮತ್ತು ೨೦೦೬ ರ ನಡುವೆ ಸತತ ನಾಲ್ಕು ಸಂದರ್ಭಗಳಲ್ಲಿ ACC ಟ್ರೋಫಿಯನ್ನು ಗೆದ್ದುಕೊಂಡಿತು ಮತ್ತು ೧೯೯೬, ೧೯೯೮ The team is composed mainly of Indian and Pakistani expatriates working in UAE. ನಲ್ಲಿ ಮೂರು ಸಂದರ್ಭಗಳಲ್ಲಿ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಆಗಿತ್ತು. Scorecard of Hong Kong v UAE, 3 August 2008 at CricketArchive ಅವರು ೧೯೯೪ ರಲ್ಲಿ ICC ಟ್ರೋಫಿಯನ್ನು ಗೆದ್ದರು ಮತ್ತು ಅದೇ ವರ್ಷ ತಮ್ಮ ಮೊದಲ ODIಗಳನ್ನು ಆಡಿದರು, ನಂತರ ೧೯೯೬ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಡಿದರು. ೨೦೧೪ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ, ಯು . ಏ . ಇ ಸ್ಕಾಟ್‌ಲ್ಯಾಂಡ್‌ನ ನಂತರ ಎರಡನೇ ಸ್ಥಾನವನ್ನು ಗಳಿಸಿತು, ೨೦೧೫ ವಿಶ್ವಕಪ್‌ಗೆ ಅರ್ಹತೆ ಗಳಿಸಿತು ಮತ್ತು ೨೦೧೮ ರವರೆಗೆ ಏಕದಿನ ಅಂತಾರಾಷ್ಟ್ರೀಯ ದರ್ಜೆಯನ್ನು ಪಡೆಯಿತು ಯು. ಏ .ಇ ೨೦೧೪ ಐಸಿಸಿ ವಿಶ್ವ ಟ್ವೆಂಟಿ20 ಮತ್ತು ೨೦೨೨ ಐಸಿಸಿ ಪುರುಷರ ಟಿ೨೦ ವಿಶ್ವಕಪ್‌ನ ಗುಂಪು ಹಂತವನ್ನು ತಲುಪಿತ್ತು. ತಂಡವು ೨೦೧೯ ಐಸಿಸಿ ಟಿ೨೦ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಆತಿಥೇಯರಾಗಿ ಅರ್ಹತೆ ಪಡೆದಿತ್ತು. ೨೦೨೩ ರ ಟಿ೨೦ ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ನಿಂದ ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಗೆ ಅರ್ಹತೆ ಪಡೆಯಲು ವಿಫಲರಾದರು. ಉಲ್ಲೇಖಗಳು
ಸ್ವಪನ್ ಚೌಧರಿ
https://kn.wikipedia.org/wiki/ಸ್ವಪನ್_ಚೌಧರಿ
ಪಂಡಿತ್ ಸ್ವಪನ್ ಚೌಧುರಿ (ಜನನ ೩೦ ಮಾರ್ಚ್ ೧೯೪೫), ಒಬ್ಬ ಭಾರತೀಯ ತಬಲಾ ವಾದಕರು. ಅವರು ಪಂಡಿತ್ ರವಿಶಂಕರ್, ಉಸ್ತಾದ್ ಅಲಿ ಅಕ್ಬರ್ ಖಾನ್, ಉಸ್ತಾದ್ ವಿಲಾಯತ್ ಖಾನ್, ಪಂಡಿತ್ ಭೀಮಸೇನ್ ಜೋಷಿ, ಪಂಡಿತ್ ಜಸ್ರಾಜ್, ಉಸ್ತಾದ್ ಅಮ್ಜದ್ ಅಲಿ ಖಾನ್ ಸೇರಿದಂತೆ ಭಾರತೀಯ ಶಾಸ್ತ್ರೀಯ ಸಂಗೀತದ ಹಲವಾರು ಸಂಗೀತ ವಿದ್ವಾನರ ಜೊತೆಗಾರರು. , . ತಮ್ಮ ಮಗನಾದ ಗುರು- ಸಂತೋಷ್ ಬಿಸ್ವಾಸ್ (ಲಕ್ನೋ ಘರಾನಾ) ನಿಗೂ ಸಹ ತಬಲಾ ಕಲಿಸಿದರು. ಪ್ರಶಸ್ತಿಗಳು ಅವರು ಅಮೇರಿಕನ್ ಅಕಾಡೆಮಿ ಆಫ್ ಆರ್ಟಿಸ್ಟ್ಸ್ ಪ್ರಶಸ್ತಿಯನ್ನು ಪಡೆದರು ಮತ್ತು ಪರ್ಕ್ಯುಸಿವ್ ಆರ್ಟ್ಸ್ ಸೊಸೈಟಿ ಹಾಲ್ ಆಫ್ ಫೇಮ್ಗೆ ನಾಮನಿರ್ದೇಶನಗೊಂಡರು. ೧೯೯೬ ರಲ್ಲಿ, ಸ್ವಪನ್ ಚೌಧುರಿ ಅವರು ಭಾರತದ ರಾಷ್ಟ್ರಪತಿಗಳಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು, ಇದು ಭಾರತದಲ್ಲಿ ಶಾಸ್ತ್ರೀಯ ಸಂಗೀತಕ್ಕಾಗಿ ಅತ್ಯುನ್ನತ ಪ್ರಶಸ್ತಿಯಾಗಿದೆ. ೨೦೧೯ ರಲ್ಲಿ, ಅವರು ಭಾರತ ಸರ್ಕಾರದಿಂದ ಭಾರತದ ಅತ್ಯುನ್ನತ ಗೌರವವಾದ ಪದ್ಮಶ್ರೀಯನ್ನು ಪಡೆದರು. ಸಹ ನೋಡಿ ಜಾಕಿರ್ ಹುಸೇನ್ ಶಂಕರ ಘೋಷ್ ಚಂದ್ರನಾಥ ಶಾಸ್ತ್ರಿ ಅನಿಂದೋ ಚಟರ್ಜಿ ಕುಮಾರ್ ಬೋಸ್ ಯೋಗೇಶ್ ಸಂಸಿ ರವಿ ಶಂಕರ್ ಉಲ್ಲೇಖಗಳು ಬಾಹ್ಯ ಕೊಂಡಿಗಳು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್‌ನಲ್ಲಿ ಅಧ್ಯಾಪಕರ ವೆಬ್‌ಪುಟ ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ನಿಖಿಲ್ ದತ್ತ
https://kn.wikipedia.org/wiki/ನಿಖಿಲ್_ದತ್ತ
ನಿಖಿಲ್ ದತ್ತ (ಜನನ ೧೩ ಅಕ್ಟೋಬರ್ ೧೯೯೪) ಒಬ್ಬ ಕೆನಡಾದ ಕ್ರಿಕೆಟಿಗ. ಇವರು ಬಲಗೈ ಆಫ್ ಸ್ಪಿನ್ ಬೌಲರ್ ಆಗಿ ೨೦೧೩ ರಿಂದ ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರು ಕೆರಿಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮತ್ತು ಗ್ಲೋಬಲ್ ಟಿ 20 ಕೆನಡಾದಲ್ಲಿ ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ. ಉಲ್ಲೇಖಗಳು
ಬಾನಾಕ್ ಆಕಾಶ
https://kn.wikipedia.org/wiki/ಬಾನಾಕ್_ಆಕಾಶ
ಬಾನಾಕ್ ಆಕಾಶ ಎನ್ನುವುದು ಪೋಲಿಷ್ ಗಣಿತವಿದ ಸ್ಟೀಫನ್ ಬಾನಾಕ್ (1892-1945) 1932ರಲ್ಲಿ ಪ್ರಕಟಿಸಿದ ಗ್ರಂಥ ‘ಸರಳ ಪರಿಕರ್ಮಗಳ ಸಿದ್ಧಾಂತ’ದಲ್ಲಿ ಮಂಡಿಸಿದ ನೂತನ ಗಣಿತ ಪರಿಕಲ್ಪನೆ (ಬಾನಾಕ್ ಸ್ಪೇಸಸ್). ಗಣಿತದಲ್ಲಿ ಅನೇಕ ವಿಶಿಷ್ಟ ಪರಿಸ್ಥಿತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗುಣವಿಶೇಷಗಳನ್ನು ಗಮನಿಸಿ ಅವೆಲ್ಲ ಪರಿಸ್ಥಿತಿಗಳಿಗೂ ಹೊಂದಿಕೊಳ್ಳುವಂಥ ಅಮೂರ್ತ ಭಾವನೆಗಳನ್ನು ಪರಿಕಲ್ಪಿಸಿ ಈ ಬಗೆಯ ಆಕಾಶಗಳನ್ನು ಈತ ನಿರ್ಮಿಸಿದ. ಸರಳ ಆಕಾಶಗಳು (ಲೀನಿಯರ್ ಸ್ಪೇಸಸ್) V ಒಂದು ಅಶೂನ್ಯ ಗಣವಾಗಿದ್ದು ಅದರಲ್ಲಿ + (ಸಂಕಲನ) ಒಂದು ದ್ವಿಗುಣ ಪರಿಕರ್ಮವಾಗಿರಲು, ಇದಕ್ಕೆ ಅನುಸಾರವಾಗಿ V ಒಂದು ಅಬೆಲಿಯನ್ ಸಂಕುಲವಾಗಿರಲು (ಅಬೆಲಿಯನ್ ಗ್ರೂಪ್), ಎಂದರೆ   (V ಗೆ ಸೇರಿದ ಎಲ್ಲ ಧಾತು x, y, z ಗಳಿಗೂ) ಈ ಮುಂದೆ ಕೊಟ್ಟಿರುವ ಐದು ಗುಣಗಳಿರಲಿ: x + y Ԑ V (x+y) + z = x + (y+z) x + y = y + z V ಯಲ್ಲಿರುವ ಎಲ್ಲ x ಗೂ ಅನ್ವಯಿಸುವಂತೆ ಮತ್ತು O + x = x ಆಗುವಂತೆ ಇರುವ ಒಂದು ಧಾತು O ಯು V ಯಲ್ಲಿರಬೇಕು. V ಯಲ್ಲಿರುವ ಪ್ರತಿಯೊಂದು ಧಾತು x ಗೂ ತಕ್ಕ ಧಾತು –x ಎಂಬುದು –x + x = O ಆಗುವಂತಿರಬೇಕು. ಹೀಗಿದ್ದರೆ V ಯನ್ನು ಒಂದು ಅಬೆಲಿಯನ್ ಅಥವಾ ವ್ಯತ್ಯಯ (ಕಾಮ್ಯುಟೇಟಿವ್) ಸಂಕುಲವೆನ್ನುತ್ತೇವೆ. ಸಾಮಾನ್ಯವಾಗಿ V ಯ ಧಾತುಗಳನ್ನು ಸದಿಶಗಳು ಇಲ್ಲವೇ ಬಿಂದುಗಳು ಎಂದು ಸಂದರ್ಭೋಚಿತವಾಗಿ ಕರೆಯುವುದು ವಾಡಿಕೆ. ಇದರ ಜೊತೆಗೆ F ಒಂದು ಕ್ಷೇತ್ರವಾಗಿರಲಿ (field). ಇದರ ಧಾತುಗಳನ್ನು ಅದಿಶಗಳು ಎನ್ನುತ್ತೇವೆ. ಈಗ  ಮತ್ತು  ಗಳಿಗೂ V ಯಲ್ಲಿ ಒಂದು ಸದಿಶ αx ಹೊಂದಿಕೆಯಾಗುವಂತಿರಲಿ. ಮೇಲಾಗಿ ಇಂಥ ಹೊಂದಾಣಿಕೆ ಈ ಮುಂದಿನ ನಾಲ್ಕು ಅಭಿಗೃಹೀತಗಳನ್ನು (ಪಾಸ್ಟ್ಯುಲೇಟ್ಸ್) ಪಾಲಿಸುವಂತಿರಲಿ: ಮತ್ತು α(x+y) = αx + αy (α+β)x = αx + βx α(βx) = (αβ)x 1x = x ಇಲ್ಲಿ 1 ಎಂಬುದು F ನ ಏಕಾಂಶ. ಹೀಗಿದ್ದರೆ V ಯನ್ನು F ನ ಮೇಲೆ ರಚಿತವಾದ (ಸಂಕ್ಷೇಪವಾಗಿ F ಮೇಲಿನ) ಒಂದು ಸರಳ ಆಕಾಶ (ಲೀನಿಯರ್ ಸ್ಪೇಸ್) ಅಥವಾ ಸದಿಶ ಆಕಾಶ (ವೆಕ್ಟರ್ ಸ್ಪೇಸ್) ಎಂದು ಹೇಳುತ್ತೇವೆ. ಮಾನಕಯುಕ್ತ ಸರಳ ಆಕಾಶಗಳು (ನಾರ್ಮ್ಡ್ ಲೀನಿಯರ್ ಸ್ಪೇಸಸ್) F ಎಲ್ಲ ವಾಸ್ತವ ಸಂಖ್ಯೆಗಳ ಕ್ಷೇತ್ರ R ಅಥವಾ ಎಲ್ಲ ಮಿಶ್ರಸಂಖ್ಯೆಗಳ ಕ್ಷೇತ್ರ C ಯನ್ನು ನಿರೂಪಿಸಲಿ. L ಎಂಬುದು F ಮೇಲೆ ರಚಿತವಾದ ಒಂದು ಸರಳ ಸಮಷ್ಟಿಯಾಗಿರಲಿ. ಈಗ ಈ ಮುಂದಿನ ಮೂರು ಅಭಿಗೃಹೀತಗಳನ್ನು ಪಾಲಿಸುವ ಒಂದು ಉತ್ಪನ್ನ  ನ್ನು L ನಿಂದ R ನೊಳಕ್ಕೆ ವ್ಯಾಖ್ಯಿಸಿದ್ದೇವೆಂದು ಭಾವಿಸೋಣ. ಎಂದರೆ L ನ ಪ್ರತಿಯೊಂದು x ಗೂ ಒಂದು ವಾಸ್ತವ ಸಂಖ್ಯೆ  ಅನ್ವಯಯಾಗುತ್ತದೆ: ಮತ್ತು  ಗಳಿಗೂ ಮತ್ತು ಈ ಉತ್ಪನ್ನಕ್ಕೆ ಮಾನಕ ಉತ್ಪನ್ನ (ನಾರ್ಮ್ ಫಂಕ್ಷನ್) ಅಥವಾ, ಸರಳವಾಗಿ, ಮಾನಕ ಎಂದು ಹೆಸರು.  ನ್ನು x ನ ಮಾನಕವೆಂದೂ, ಇಂಥ ಒಂದು ಸರಳ ಆಕಾಶ L ಗೆ ಮಾನಕಯುಕ್ತ ಸರಳ ಆಕಾಶ ಎಂದೂ ಹೇಳುತ್ತೇವೆ. ಈ ಮಾನಕ ಉತ್ಪನ್ನವನ್ನು ಉಪಯೋಗಿಸಿಕೊಂಡು L ನ್ನು ಒಂದು ದೂರಾತ್ಮಕ ಆಕಾಶವಾಗಿ (ಮೆಟ್ರಿಕ್ ಸ್ಪೇಸ್) ಮಾಡಬಹುದು. ಗಳಿಗೂ ಎಂದು ವ್ಯಾಖ್ಯಿಸೋಣ. ಹೀಗೆ ದೊರೆತ ಉತ್ಪನ್ನ (x, y) → d(x, y) ಎಂಬುದು ದೂರ ಉತ್ಪನ್ನದ (distance function) ಎಲ್ಲ ಅಭಿಗೃಹಿತಗಳನ್ನೂ ಪಾಲಿಸುತ್ತದೆ: d(x, y) ≥ 0, = ⇔ x=y d(x, y) = d(y, z) d(x, y) ≥ d(x, x) + d(x, y) ಹೀಗಾಗಿ ಮಾನಕಯುಕ್ತ ಸರಳ ಆಕಾಶಗಳೆಲ್ಲ ದೂರಾತ್ಮಕ ಆಕಾಶಗಳೂ ಆಗಿರುತ್ತವೆ. ಸಂಪೂರ್ಣತೆ(ಕಂಪ್ಲೀಟ್‌ನೆಸ್) ಆದ್ದರಿಂದ ಮಾನಕಯುಕ್ತ ಸರಳ ಆಕಾಶಗಳಲ್ಲಿ ಶ್ರೇಣಿಗಳ ಅಭಿಸರಣೆ ಮುಂತಾದ ಪರಿಕಲ್ಪನೆಗಳನ್ನು ವ್ಯಾಖ್ಯಿಸಬಹುದು. ಈಗ {xi | i = 1, 2, 3……} ಎಂಬುದು L ನ ಬಿಂದುಗಳ ಒಂದು ಶ್ರೇಣಿ ಅಗಿರಲಿ. Є > 0 ಎಷ್ಟೇ ಅಲ್ಲ ವಾಸ್ತವ ಸಂಖ್ಯೆಯಾಗಿದ್ದರೂ ಇದಕ್ಕೆ ಹೊಂದಿಕೊಂಡು ಆಗುವಂತಿರುವ ಧನ ಪೂರ್ಣಾಂಕ n0 ಅಸ್ತಿತ್ವದಲ್ಲಿರುವುದಾದರೆ ಅಂಥ ಶ್ರೇಣಿ {xi} ಯು ಇದರಲ್ಲಿಯ ಒಂದು ಕೌಷೀ ಶ್ರೇಣಿ ಎಂದು ಕರೆಯುತ್ತೇವೆ. ವ್ಯಾಖ್ಯೆ ದೂರಾತ್ಮಕ ಆಕಾಶವೊಂದರಲ್ಲಿ ಪ್ರತಿಯೊಂದು ಕೌಷೀ ಶ್ರೇಣಿಯೂ ಅಭಿಸರಣೀಯವಾಗಿದ್ದರೆ ಆ ಆಕಾಶಕ್ಕೆ ಸಂಪೂರ್ಣ ದೂರಾತ್ಮಕ ಆಕಾಶ ಎಂದು ಹೆಸರು. ಎಂದರೆ {xi} ಯು ಇದರಲ್ಲಿಯ ಒಂದು ಕೌಷೀ ಶ್ರೇಣಿಯಾಗಿದ್ದರೆ ಅದು ಇದೇ ಆಕಾಶದಲ್ಲಿರುವ ಒಂದು ಬಿಂದು x ಗೆ ಅಭಿಸರಿಸುತ್ತದೆ (xi→x). ಹೀಗೆಂದರೆ Є>0 ಎಷ್ಟೇ ಅಲ್ಪವಾಗಿದ್ದರೂ ಅದಕ್ಕೆ ಅನುಸಾರವಾಗಿ ಆಗುವಂತೆ ಒಂದು ಧನ ಪೂರ್ಣಾಂಕ n0 ಅಸ್ತಿತ್ವದಲ್ಲಿದೆಯೆಂದು ಅರ್ಥ. ಈವರೆಗೆ ವಿವರಿಸಿದ ಕೆಲವು ಪಾರಿಭಾಷಿಕ ಪದಗಳನ್ನು ಬಳಸಿ ಬಾನಾಕ್ ಆಕಾಶಗಳನ್ನು ಈಗ ವ್ಯಾಖ್ಯಿಸುತ್ತೇವೆ. ಯಾವುದೇ ಸಂಪೂರ್ಣ ಮಾನಕಾತ್ಮಕ ಸರಳ ಆಕಾಶಕ್ಕೆ (complete normed vector space) ಬಾನಾಕ್ ಆಕಾಶ ಎಂದು ಹೆಸರು.see Theorem 1.3.9, p. 20 in . ಉದಾಹರಣೆಗಳು: 1. ಎಲ್ಲ ವಾಸ್ತವ ಸಂಖ್ಯೆಗಳ ಗಣ ನ್ನು ಮೇಲೆ ರಚಿತವಾದ ಒಂದು ಸರಳ ಆಕಾಶ ಎಂದು ಭಾವಿಸಬಹುದು. ಇದರಲ್ಲಿ  ಎಂದು ವ್ಯಾಖ್ಯಿಸಿದರೆ ಇದು ಒಂದು ಬಾನಾಕ್ ಆಕಾಶ. ಹಾಗೆಯೇ ಎಲ್ಲ ಮಿಶ್ರ ಸಂಖ್ಯೆಗಳ ಗಣ ಯು ಮೇಲಾಗಲಿ ಮೇಲಾಗಲಿ ರಚಿಸಿದ ಒಂದು ಸರಳ ಅಕಾಶ. ಇದರಲ್ಲಿ  ಎಂದು ವ್ಯಾಖ್ಯಿಸಲಾಗಿ ಒಂದು ಬಾನಾಕ್ ಆಕಾಶವಾಗುತ್ತದೆ. 2. ಇದನ್ನೇ ಸಾರ್ವತ್ರೀಕರಿಸಿ F= ಅಥವಾ ಆಗಿದ್ದರೆ Fn = {(z1,z2,…..,zn) | z1,z2,….,zn Є F} ಎಂಬ ಆಯಾಮದ ಸರಳ ಆಕಾಶ ತೆಗೆದುಕೊಳ್ಳೋಣ. ಇದರಲ್ಲಿ ||z1,z2,…..,zn) ||1 = ಎಂದು ವ್ಯಾಖ್ಯಿಸಿದರೆ ಈ ಬಗೆಯ ಮಾನಕದಲ್ಲೂ Fn ಒಂದು ಬಾನಾಕ್ ಆಕಾಶವಾಗುತ್ತದೆ. 3. ಮೇಲೆ ಹೇಳಿದ Fn ನ್ನು ಮತ್ತೊಂದು ರೀತಿಯಲ್ಲಿಯೂ ಬಾನಾಕ್ ಆಕಾಶ ಆಗಿಸಬಹುದು: 1≤ p<∞ ಇರುವಂತೆ ವಾಸ್ತವ ಸಂಖ್ಯೆ p ಯನ್ನು ತೆಗೆದುಕೊಂಡು, ಎಂದು ವ್ಯಾಖ್ಯಿಸಿದರೆ ಈ ಬಗೆಯ ಮಾನಕದಲ್ಲೂ Fn ಒಂದು ಬಾನಾಕ್ ಆಕಾಶ ಆಗುತ್ತದೆ.  ಇದನ್ನು ಎಂಬ ಪ್ರತೀಕದಿಂದ ನಿರೂಪಿಸುವುದು ವಾಡಿಕೆ. 4. Fn ನ್ನು ಇನ್ನೂ ಒಂದು ರೀತಿಯಲ್ಲಿ ಬಾನಾಕ್ ಆಕಾಶವಾಗಿ ಮಾಡಬಹುದು: ||(z1,……….,zn)|| = ಗರಿಷ್ಠ {|z1| ,….., |zn|} ಎಂದರೆ |z1|,…..,|zn| ಗಳಲ್ಲಿ ಗರಿಷ್ಠತಮವಾದುದು ಎಂದು ವ್ಯಾಖ್ಯಿಸಿದರೆ ಇನ್ನೊಂದು ಬಾನಾಕ್ ಅಕಾಶ ದೊರೆಯುತ್ತದೆ. ಇದನ್ನು ಎಂದು ಸೂಚಿಸುತ್ತೇವೆ. 5. X ಒಂದು ಸಂಸ್ಥಿತೀಯ ಆಕಾಶ (ಟಾಪಾಲಾಜಿಕಲ್ ಸ್ಪೇಸ್) ಆಗಿರಲಿ. ಎಂದಿನಂತೆ F ಎಲ್ಲ ಮಿಶ್ರಸಂಖ್ಯೆಗಳ (ಅಥವಾ ಎಲ್ಲ ವಾಸ್ತವ ಸಂಖ್ಯೆಗಳ) ಕ್ಷೇತ್ರವಾಗಿರಲಿ. X ನಿಂದ F ನೊಳಕ್ಕೆ ವ್ಯಾಖ್ಯಿಸಿದ ಎಲ್ಲ ಪರಿಬಂಧಿತ (ಬೌಂಡೆಡ್) ಅವಿಚ್ಫಿನ್ನ ಉತ್ಪನ್ನ (continuous function) f :X→F ಗಳ ಗಣವನ್ನು C(X) ಎಂದು ಕರೆಯೋಣ. ಈಗ C(X) ಎಂಬುದು F ಮೇಲೆ ರಚಿತವಾದ ಒಂದು ಆಕಾಶ ಆಗುವುದು. ಇದರಲ್ಲಿ  ಮಾನಕವನ್ನು ||f|| = ಗರಿಷ್ಠ ಪರಮಾವಧಿ (ಸುಪ್ರಿಮಮ್) { | f(x) | ∀ f Є C(X)  ಎಂದು ವ್ಯಾಖ್ಯಿಸೋಣ. ಇದು C(X) ನ್ನು ಒಂದು ಬಾನಾಕ್ ಆಕಾಶವಾಗಿ ಮಾಡುತ್ತದೆ. ಉಲ್ಲೇಖಗಳು ಹೊರಗಿನ ಕೊಂಡಿಗಳು ವರ್ಗ:ಬೀಜಗಣಿತ ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಮ್ಯಾಥ್ಯೂ ಕ್ರಾಸ್
https://kn.wikipedia.org/wiki/ಮ್ಯಾಥ್ಯೂ_ಕ್ರಾಸ್
ಮ್ಯಾಥ್ಯೂ ಹೆನ್ರಿ ಕ್ರಾಸ್ (ಜನನ ೧೫ ಅಕ್ಟೋಬರ್ ೧೯೯೨) ಒಬ್ಬ ಸ್ಕಾಟಿಷ್ ಕ್ರಿಕೆಟಿಗ, ಇವರು ಸ್ಕಾಟ್ಲೆಂಡ್ ಪರ ಬಲಗೈ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡುತ್ತಾರೆ. ಕ್ರಾಸ್ ೨೩ ಜನವರಿ ೨೦೧೪ ರಂದು ಕೆನಡಾ ವಿರುದ್ಧ ಸ್ಕಾಟ್ಲೆಂಡ್‌ಗಾಗಿ ತನ್ನ ಏಕದಿನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು ವೃತ್ತಿಜೀವನ ಮ್ಯಾಥ್ಯೂ ಕ್ರಾಸ್ ೨೦೧೧ ಅಂಡರ್ -೧೯ ವಿಶ್ವಕಪ್ ಸಮಯದಲ್ಲಿ ಸ್ಕಾಟ್ಲೆಂಡ್ ತಂಡದ ಉಪನಾಯಕನಾಗಿ ಸೇವೆ ಸಲ್ಲಿಸಿದರು. ಅವರು ಲೌಬರೋ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಮ್ಯಾಥ್ಯೂ ಒಂಬತ್ತನೇ ವಯಸ್ಸಿನಲ್ಲಿ ಅಬರ್ಡೀನ್‌ಶೈರ್ ಸಿ.ಸಿ ಯ ಸದಸ್ಯರಾದರು. ಮ್ಯಾಥ್ಯೂ ಅವರು ೨೦೧೩ ರಲ್ಲಿ ಸ್ಕಾಟ್ಲೆಂಡ್ ಹಿರಿಯರ ತಂಡಕ್ಕೆ ಆಯ್ಕೆಯಾದರು, ಅದರ ನಂತರ ಯು.ಎ.ಇಯಲ್ಲಿ ೨೦೧೩ ರ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲು ಟಿ೨೦ ತಂಡಕ್ಕೆ ಆಯ್ಕೆಯಾದರು. ಜೂನ್ ೨೦೧೯ ರಲ್ಲಿ, ಅವರು ೨೦೧೯ ರ ಗ್ಲೋಬಲ್ ಟಿ೨೦ ಕೆನಡಾ ಪಂದ್ಯಾವಳಿಯಲ್ಲಿ ಮಾಂಟ್ರಿಯಲ್ ಟೈಗರ್ಸ್ ಫ್ರಾಂಚೈಸ್ ತಂಡಕ್ಕಾಗಿ ಆಡಲು ಆಯ್ಕೆಯಾದರು. ಅವರು ಸಂಯುಕ್ತ ಅರಬ್ ಸಂಸ್ಥಾನಡಲ್ಲಿ ನಡೆದ ೨೦೧೯ ರ ಐಸಿಸಿ ಟಿ೨೦ ವಿಶ್ವಕಪ್ ಅರ್ಹತಾ ಪಂದ್ಯಾವಳಿಗಾಗಿ ಸ್ಕಾಟ್ಲೆಂಡ್‌ನ ತಂಡದಲ್ಲಿದ್ದರು. ಸೆಪ್ಟೆಂಬರ್ ೨೦೨೧ ರಲ್ಲಿ, ೨೦೨೧ ರ ICC ಪುರುಷರ ಟಿ೨೦ ವಿಶ್ವಕಪ್‌ಗಾಗಿ ಸ್ಕಾಟ್‌ಲ್ಯಾಂಡ್‌ನ ತಾತ್ಕಾಲಿಕ ತಂಡದಲ್ಲಿ ಕ್ರಾಸ್ ರವರನ್ನು ಹೆಸರಿಸಲಾಯಿತು. ಉಲ್ಲೇಖಗಳು
ಶಾಂತಿ ದವೆ
https://kn.wikipedia.org/wiki/ಶಾಂತಿ_ದವೆ
ಶಾಂತಿ ದವೆ (ಜನನ ೨೫ ಸೆಪ್ಟೆಂಬರ್ ೧೯೩೧) ಒಬ್ಬ ಭಾರತೀಯ ವರ್ಣಚಿತ್ರಕಾರ ಮತ್ತು ಶಿಲ್ಪಿ, ಇಪ್ಪತ್ತನೇ ಶತಮಾನದ ಪ್ರಮುಖ ಭಾರತೀಯ ಕಲಾವಿದರಲ್ಲಿ ಒಬ್ಬರೆಂದು ಅನೇಕರು ಪರಿಗಣಿಸಲ್ಪಟ್ಟಿದ್ದಾರೆ. ಅವರು ಲಲಿತ ಕಲಾ ಅಕಾಡೆಮಿ ಮತ್ತು ಸಾಹಿತ್ಯ ಕಲಾ ಪರಿಷತ್ತಿನ ಮಾಜಿ ಸದಸ್ಯರಾಗಿದ್ದಾರೆ. ಭಾರತ ಸರ್ಕಾರವು ೧೯೮೫ ರಲ್ಲಿ ಅವರಿಗೆ ಪದ್ಮಶ್ರೀಯ ಗೌರವವನ್ನು ನೀಡಿತು ಜೀವನಚರಿತ್ರೆ ದವೆ, ೨೫ ಸೆಪ್ಟೆಂಬರ್ ೧೯೩೧ ರಂದು ಉತ್ತರ ಗುಜರಾತ್ ಗ್ರಾಮವಾದ ಬಾದ್ಪುರದಲ್ಲಿ ಒಂದು ಸಾಧಾರಣ ಕುಟುಂಬದ ನಾಲ್ಕು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಅವರು 1951 ರಲ್ಲಿ ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯದಿಂದ ತಮ್ಮ ಶಿಕ್ಷಣವನ್ನು ಪಡೆದರು, ಅಲ್ಲಿಂದ ಅವರು ಫೈನ್ ಆರ್ಟ್ಸ್ ಫ್ಯಾಕಲ್ಟಿಯಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದರು. ಅವರು ಬ್ಯಾನರ್‌ಗಳು ಮತ್ತು ಸೈನ್ ಬೋರ್ಡ್‌ಗಳನ್ನು ಮಾಡುವ ವಾಣಿಜ್ಯ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಆದರೆ ನಿಧಾನವಾಗಿ ವರ್ಣಚಿತ್ರಕಾರರಾಗಿ ತಮ್ಮ ಛಾಪು ಮೂಡಿಸಿದರು. ಇವರ ಚಿತ್ರಕೃತಿಗಳು ನ್ಯೂಯಾರ್ಕ್ ನ ಜೆ.ಎಫ಼್. ಕೆ ವಿಮಾನ ನಿಲ್ದಾಣದ ವಿ.ಐ.ಪಿ ಲಾಂಜ್‌ಗಳಲ್ಲಿ, ನ್ಯೂಯಾರ್ಕ್ ನ ಏರ್ ಇಂಡಿಯಾ ಬುಕಿಂಗ್ ಕಚೇರಿಗಳಲ್ಲಿ, ಲಾಸ್ ಏಂಜಲೀಸ್, ರೋಮ್, ಸಿಡ್ನಿ ಮತ್ತು ಪರ್ತ್ ನಲ್ಲಿ ರಾರಾಜಿಸಿತ್ತಿವೆ. Gargi Gupta, "Distress sale?", Business Standard, January 24, 2013 ವಿಮಾನ ನಿಲ್ದಾಣದಲ್ಲಿನ ಇವರ ಭಿತ್ತಿಚಿತ್ರ ವನ್ನು ನ್ಯೂಯಾರ್ಕ್ ಟೈಮ್ಸ್ ತನ್ನ ಮುಖಪುಟದಲ್ಲಿ ೫ ಫೆಬ್ರವರಿ ೧೯೬೪ ರಂದು ಲಿಟಲ್ ಗುಜರಾತ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿತು. ದವೆ ಅವರ ಚಿತ್ರಕೃತಿಗಳು ಅಮೂರ್ತವಾಗಿರುತ್ತವೆ, ಅಲಂಕಾರ ಲಿಪಿ(ಕ್ಯಾಲಿಗ್ರಫಿ), ತೈಲ ವರ್ಣ, ಎನ್ಕಾಸ್ಟಿಕ್ (ಬಿಸಿ ಮೇಣದ ಚಿತ್ರಕಲೆ) ತಂತ್ರಗಳನ್ನು ಬಳಸುತ್ತಾರೆ. ಅವರು ಮರದ ಬ್ಲಾಕ್ ಪೇಂಟಿಂಗ್, ಕಲ್ಲಿನ ಕೆತ್ತನೆ ಮತ್ತು ನೇಯ್ಗೆಯನ್ನು ಒಳಗೊಂಡಿರುವ ದೊಡ್ಡ ಪ್ರಮಾಣದ ಹಲವಾರು ಭಿತ್ತಿಚಿತ್ರಗಳನ್ನು ಮಾಡಿದ್ದಾರೆ. ಅವರು ೧೯೫೭ ರಲ್ಲಿ ತಮ್ಮ ಮೊದಲ ವೈಯಕ್ತಿಕ ಪ್ರದರ್ಶನವನ್ನು ಮಾಡಿದರು. ಪ್ರಪಂಚದ ಅನೇಕ ಭಾಗಗಳಲ್ಲಿ ಫಿಲಿಪೈನ್ಸ್, ಸ್ವಿಟ್ಜರ್ಲೆಂಡ್, ಲಂಡನ್, ಜಪಾನ್, ಫ್ರಾನ್ಸ್, ಪೂರ್ವ ಯುರೋಪ್ ಮತ್ತು ಮಧ್ಯಪ್ರಾಚ್ಯದಂತಹ ಸ್ಥಳಗಳಲ್ಲಿ ಚಿತ್ರಪ್ರದರ್ಶನಗಳನ್ನು ಮಾಡಿದ್ದಾರೆ. ಅವರ ರಚನೆಗಳನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನವದೆಹಲಿ ಮತ್ತು ಅನೇಕ ಸಾರ್ವಜನಿಕ ಸ್ಥಳಗಳಂತಹ ಆರ್ಟ್ ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗುತ್ತದೆ. ಅವರ ವರ್ಣಚಿತ್ರಗಳನ್ನು ಕ್ರಿಸ್ಟೀಸ್ "Christie's profile". ಸೋಥೆಬಿಸ್ ಮತ್ತು ಬೋನ್‌ಹಾಮ್ಸ್‌ನಂತಹ ಪ್ರತಿಷ್ಠಿತ ಪ್ರದರ್ಶನ ಮಳಿಗೆಗಳಲ್ಲಿ ಮಾರಾಟವಾಗಿದೆ. ದವೆ ಅವರು ಸಾಹಿತ್ಯ ಕಲಾ ಪರಿಷತ್ತಿನ ಮಾಜಿ ಸದಸ್ಯರಾಗಿದ್ದಾರೆ ಮತ್ತು ಲಲಿತ ಕಲಾ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಶಸ್ತಿಗಳು ಮತ್ತು ಮನ್ನಣೆ ದವೆ ಅವರು ೧೯೫೬ ರಿಂದ ೧೯೫೮ ರವರೆಗೆ ಸತತವಾಗಿ ಮೂರು ವರ್ಷಗಳ ಕಾಲ ಲಲಿತ ಕಲಾ ಅಕಾಡೆಮಿಯನ್ನು ಗೆದ್ದಿದ್ದಾರೆ ಭಾರತ ಸರ್ಕಾರವು ಅವರಿಗೆ 1985 ರಲ್ಲಿ ಪದ್ಮಶ್ರೀ ಎಂಬ ನಾಗರಿಕ ಗೌರವವನ್ನು ನೀಡಿತು ಇದನ್ನುನೋಡಿ ಎನ್ಕಾಸ್ಟಿಕ್ ಪೇಂಟಿಂಗ್ ಉಲ್ಲೇಖಗಳು ಬಾಹ್ಯ ಕೊಂಡಿಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:೧೯೩೧ ಜನನ ವರ್ಗ:ಭಾರತ ಕಲೆ ವರ್ಗ:ಚಿತ್ರಕಾರರು ವರ್ಗ:ಗುಜರಾತಿ ವರ್ಗ:ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಕಾರ್ಲ್ ವಯರ್‌ಸ್ಟ್ರಾಸ್
https://kn.wikipedia.org/wiki/ಕಾರ್ಲ್_ವಯರ್‌ಸ್ಟ್ರಾಸ್
thumb ಕಾರ್ಲ್ ತಿಯೊಡೊರ್ ವಿಲ್‍ಹೆಲ್ಮ್ ವಯರ್‌ಸ್ಟ್ರಾಸ್ (1815-97) ಒಬ್ಬ ಜರ್ಮನ್ ಗಣಿತವಿದ. ಜೀವನ ಗಣಿತೋಪಾಧ್ಯಾಯ ವೃತ್ತಿಯಿಂದ ತೊಡಗಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾದ (1856).Weierstrass, Karl Theodor Wilhelm. (2018). In Helicon (Ed.), The Hutchinson unabridged encyclopedia with atlas and weather guide. [Online]. Abington: Helicon. Available from: http://libezproxy.open.ac.uk/login?url= Link Accessed 8 July 2018. ಮುಂದೆ ಗಣಿತ ಪ್ರಾಧ್ಯಾಪಕತ್ವಕ್ಕೆ ಬಡ್ತಿ ಕೂಡ ಪಡೆದ (1864). ಈತ ವಿಶ್ಲೇಷಣ ಗಣಿತವಿಭಾಗದಲ್ಲಿ ಮೂಲಭೂತ ಸಂಶೋಧನೆ ಮಾಡಿದ. ಮಿಶ್ರ ಚರದ ವಿಶ್ಲೇಷಕ ಫಲನಗಳನ್ನು (ಅನಲಿಟಿಕ್ ಫಂಕ್ಷನ್ಸ್ ಆಫ್ ಎ ಕಾಂಪ್ಲೆಕ್ಸ್ ವೇರಿಯೆಬಲ್) ಘಾತಶ್ರೇಣಿಯ (ಪವರ್ ಸೀರಿಸ್) ಮೂಲಕ ವೃದ್ಧಿಸಿದ. ಮುಖ್ಯವಾಗಿ ನೈಜಸಂಖ್ಯಾವ್ಯವಸ್ಥೆಯ ಅವಿಚ್ಛಿನ್ನತೆ, ನೈಜ ಮತ್ತು ಮಿಶ್ರ-ಚರ ಸಿದ್ಧಾಂತ, ಅಬೆಲಿಯನ್ ಮತ್ತು ಎಲ್ಲಿಪ್ಟಿಕ್ ಫಲನಗಳು ಮತ್ತು ವ್ಯತ್ಯಯನಗಳ ಕಲನಶಾಸ್ತ್ರ (ಕ್ಯಾಲ್ಕುಲಸ್ ಆಫ್ ವೇರಿಯೆಶನ್ಸ್) ಇವುಗಳಲ್ಲಿಯ ಚಿಂತನೆಗಳಿಗೆ ತನ್ನ ಕೊಡುಗೆಗಳನ್ನು ಸಲ್ಲಿಸಿದ್ದಾನೆ ಎಂದೇ ಈತನನ್ನು ಸುವಿಖ್ಯಾತ ವಿಶ್ಲೇಷಣತಜ್ಞ ಎಂದು ಪರಿಗಣಿಸಲಾಗಿದೆ. ಗಣಿತದಲ್ಲಿ ನಿಖರ ಮತ್ತು ತಾರ್ಕಿಕ ಸಾಧನೆಯ ಆವಶ್ಯಕತೆಯನ್ನು ಈತ ಬೇಗನೆ ಮನಗಂಡ. ಗಣಿತದ ಅಂಕಗಣಿತೀಕರಣ (ಅರಿತ್ಮೆಟೈಸೇಶನ್) ಎಂದು ಫೆಲಿಕ್ಸ್ ಕ್ಲೈನ್ (1849-1925) ಹೆಸರಿಸಿರುವ ಈ ಬೆಳೆವಣಿಗೆಯ ಮೂಲಪುರುಷ ವಯರ್‌ಸ್ಟ್ರಾಸ್ ಎಂದು ಪರಿಗಣಿಸಲಾಗಿದೆ. ಅಪರಿಮೇಯ ಸಂಖ್ಯೆಗಳನ್ನು ಕುರಿತ ಈತನ ಸಿದ್ಧಾಂತ ಈ ಸಂಖ್ಯೆಗಳ ಆಧುನಿಕ ಸಿದ್ಧಾಂತದಲ್ಲಿ ಬಲು ಮುಖ್ಯ ಪಾತ್ರ ಪಡೆದಿದೆ. ಉಲ್ಲೇಖಗಳು ಹೊರಗಿನ ಕೊಂಡಿಗಳು Digitalized versions of Weierstrass's original publications are freely available online from the library of the Berlin Brandenburgische Akademie der Wissenschaften. ವರ್ಗ:ಗಣಿತಜ್ಞರು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಬ್ರಾಡ್ ಕರ್ರಿ
https://kn.wikipedia.org/wiki/ಬ್ರಾಡ್_ಕರ್ರಿ
ಬ್ರಾಡ್ಲಿ ಜೇಮ್ಸ್ ಕರ್ರಿ (ಜನನ ೮ ನವೆಂಬರ್ ೧೯೯೮) ಒಬ್ಬ ಇಂಗ್ಲೆಂಡ್ ಮೂಲದ ಸ್ಕಾಟ್ಲೆಂಡ್ ಕ್ರಿಕೆಟಿಗ . ಮೇ ೨೦೨೨ ರಲ್ಲಿ, ಅವರು ೨೦೨೨ ಅಮೇರಿಕ ಸಂಯುಕ್ತ ಸಂಸ್ಥಾನ ತ್ರಿ-ರಾಷ್ಟ್ರ ಸರಣಿಗಾಗಿ ಟ್ರಾವೆಲಿಂಗ್ ರಿಸರ್ವ್ ಆಟಗಾರರಾಗಿ ಸ್ಕಾಟ್ಲೆಂಡ್‌ನ ತಂಡದಲ್ಲಿ ಹೆಸರಿಸಲ್ಪಟ್ಟರು. ವೃತ್ತಿಜೀವನ ೨೦೨೨ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಸೆಕ್ಸ್‌ಗಾಗಿ ೧೯ ಜುಲೈ ೨೦೨೨ ರಂದು ಕ್ಯೂರಿ ತನ್ನ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಮಾಡಿದರು, ಲಾರ್ಡ್ಸ್‌ನಲ್ಲಿ ಅವರ ಚೊಚ್ಚಲ ಬೌಲಿಂಗ್ ಅಂಕಿಅಂಶಗಳನ್ನು 6/93 ಗಳಿಸಿದರು. ಅವರು ೨೦೨೨ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಸಸೆಕ್ಸ್‌ಗಾಗಿ ೨ ಆಗಸ್ಟ್ ೨೦೨೨ ರಂದು ತಮ್ಮ ಲಿಸ್ಟ್ ಏ ಗೆ ಪಾದಾರ್ಪಣೆ ಮಾಡಿದರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು
ಸ್ಕಾಟ್ ಕರ್ರಿ
https://kn.wikipedia.org/wiki/ಸ್ಕಾಟ್_ಕರ್ರಿ
ಸ್ಕಾಟ್ ವಿಲಿಯಂ ಕರ್ರಿ (ಜನನ ೨ ಮೇ ೨೦೦೧) ಒಬ್ಬ ಇಂಗ್ಲೆಂಡ್ ಮೂಲದ ಸ್ಕಾಟಿಷ್ ಕ್ರಿಕೆಟಿಗ. ಅವರು ೨೭ ಆಗಸ್ಟ್ ೨೦೨೦ ರಂದು ಹ್ಯಾಂಪ್‌ಶೈರ್‌ಗಾಗಿ ೨೦೨೦ ಟಿ೨೦ ಬ್ಲಾಸ್ಟ್‌ನಲ್ಲಿ ತಮ್ಮ ಟ್ವೆಂಟಿ 20 ಚೊಚ್ಚಲ ಪಂದ್ಯವನ್ನು ಆಡಿದರು. ಅವರ ಟಿ೨೦ ಚೊಚ್ಚಲ ಮೊದಲು, ಅವರು ೨೦೨೦ ಅಂಡರ್-19 ಕ್ರಿಕೆಟ್ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ನ ತಂಡದಲ್ಲಿ ಹೆಸರಿಸಲ್ಪಟ್ಟರು. ಅವರು ೨೦೨೦ ಬಾಬ್ ವಿಲ್ಲೀಸ್ ಟ್ರೋಫಿಯಲ್ಲಿ ಹ್ಯಾಂಪ್‌ಶೈರ್‌ಗಾಗಿ ೬ ಸೆಪ್ಟೆಂಬರ್ ೨೦೨೦ ರಂದು ತಮ್ಮ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಅವರು ೨೦೨೧ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಹ್ಯಾಂಪ್‌ಶೈರ್‌ಗಾಗಿ ೨೨ ಜುಲೈ ೨೦೨೧ ರಂದು ತಮ್ಮ ಲಿಸ್ಟ್ ಏ ಗೆ ಪಾದಾರ್ಪಣೆ ಮಾಡಿದರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:೨೦೦೧ ಜನನ
ಬಹುಫಲಕ
https://kn.wikipedia.org/wiki/ಬಹುಫಲಕ
ಬಹುಫಲಕಗಳ ಉದಾಹರಣೆಗಳು120x120px ಸಮ ಚತುಷ್ಫಲಕ ಪ್ಲೇಟಾನಿಕ್ ಕಾಯ127x127px ಚಿಕ್ಕ ನಕ್ಷತ್ರಾಕಾರದ ದ್ವಾದಶಫಲಕ ಕೆಪ್ಲರ್-ಪಾಯ್ನ್‌ಸಾಟ್ ಘನ120x120px ಐಕೊಸಿಡೊಡೆಕಾಹೀಡ್ರನ್ ಆರ್ಕಿಮಿಡಿಯನ್ ಘನ120x120px ಮಹಾ ಕ್ಯುಬಿಕ್ಯುಬೋಕ್ಟಾಹೀಡ್ರನ್ ಏಕರೂಪದ ನಕ್ಷತ್ರ ಬಹುಫಲಕ120x120px ರಾಂಬಿಕ್ ಟ್ರಯಾಕೊಂಟಾಹೀಡ್ರನ್ ಕ್ಯಾಟಲಾನ್ ಘನ120x120px ಒಂದು ಉಬಉರುಳೆಯಾಕಾರದ ಬಹುಫಲಕ ಬಹುಫಲಕ ಎನ್ನುವುದು ಸಮತಲ ಬಹುಭುಜಗಳಿಂದ (ಪ್ಲೇನ್ ಪಾಲಿಗನ್ಸ್) ಆವೃತವಾದ ಗಣಿತೀಯ ಘನಾಕೃತಿ (ಪಾಲಿಹೀಡ್ರನ್). ಇದನ್ನು ಆವರಿಸಿರುವ ಬಹುಭುಜಗಳೇ ಫಲಕಗಳು (ಫೇಸಸ್),.. ಇವುಗಳ ಅಡ್ಡಛೇದನೆಗಳು (ಇಂಟರ್‌ಸೆಕ್ಷನ್ಸ್) ಅಂಚುಗಳು (ಎಜ್ಜಸ್);. ಮೂರು ಅಥವಾ ಹೆಚ್ಚಿನ ಅಂಚುಗಳು ಅಡ್ಡಛೇದಿಸುವ ಬಿಂದುಗಳು ಶೃಂಗಗಳು (ವರ್ಟಿಸೀಸ್). ಬಹುಫಲಕದ ಪಾರ್ಶ್ವಫಲಕಗಳಿಂದ (ಲ್ಯಾಟರಲ್ ಫೇಸಸ್) ಶೃಂಗ ಬಹುಫಲಕೀಯ ಕೋನ (ಪಾಲಿಹೀಡ್ರಲ್ ಆ್ಯಂಗಲ್) ಸಂಧಿಸುವ ನಾಲ್ಕು ಫಲಕಗಳುಳ್ಳ ಫನಾಕೃತಿ ಚತುಷ್ಛಲಕ (ಟೆಟ್ರಹೀಡ್ರನ್), ಆರು ಫಲಕಗಳುಳ್ಳದ್ದು ಷಟ್ಛಲಕ (ಹೆಕ್ಸಾಹೀಡ್ರನ್), ಎಂಟು ಫಲಕಗಳುಳ್ಳದ್ದು ಅಷ್ಟಫಲಕ (ಆಕ್ಟಾಹೀಡ್ರನ್), ಹನ್ನೆರಡು ಫಲಕಗಳುಳ್ಳದ್ದು ದ್ವಾದಶಫಲಕ (ಡೋಡೆಕಹೀಡ್ರನ್) ಮತ್ತು ಇಪ್ಪತ್ತು ಫಲಕಗಳುಳ್ಳದ್ದು ವಿಂಶತಿಫಲಕ (ಐಕೊಸಹೀಡ್ರನ್). ಬಹುಫಲಕಗಳ ಇತರ ಬಗೆಗಳು ತನ್ನ ಫಲಕಗಳ ಪೈಕಿ ಒಂದರ ಕಡೆಗೆ ಸಂಪೂರ್ಣವಾಗಿ ಇರುವಂಥದು ಪೀನ ಬಹುಫಲಕ (ಕಾನ್ವೆಕ್ಸ್ ಪಾಲಿಹೀಡ್ರನ್). ಇಲ್ಲಿ ಫನಾಕೃತಿಯ ಸಮತಲಛೇದ ಪೀನ ಬಹುಭುಜವಾಗಿರುತ್ತದೆ. ಮೇಲಿನ ಪ್ರಕಾರಕ್ಕೆ ವಿರುದ್ಧವಾದದ್ದು ನಿಮ್ನ ಬಹುಫಲಕ (ಕಾನ್‌ಕೇವ್ ಪಾಲಿಹೀಡ್ರನ್). ಈ ಬಗೆಯದರಲ್ಲಿ ಅದರ ಫಲಕಗಳ ಪೈಕಿ ಒಂದನ್ನು ಹೊಂದಿರುವ, ಕನಿಷ್ಠಪಕ್ಷ ಒಂದಾದರೂ ಸಮತಲ ಇರುತ್ತದೆ. ಇದಲ್ಲದೆ ಬಹುಫಲಕದ ಪ್ರತಿಯೊಂದು ಭಾಗದಲ್ಲೂ ಫನಾಕೃತಿಯ ಒಂದು ಭಾಗ ಇದ್ದೇ ಇರುತ್ತವೆ. ಸಂಸ್ಥಿತಿ ವಿಜ್ಞಾನದ (ಟಾಪಾಲಜಿ) ರೀತ್ಯ ಗೋಳಕ್ಕೆ ಸಂವಾದಿಯಾಗಿರುವಂಥದು ಸರಳ ಬಹುಫಲಕ (ಸಿಂಪಲ್ ಪಾಲಿಹೀಡ್ರನ್). ಇದರಲ್ಲಿ ಯಾವ ವಿವರಗಳೂ (ಹೋಲ್ಸ್) ಇರುವುದಿಲ್ಲ. ಸರ್ವಸಮ (ಕಾನ್‌ಗ್ರುಯಂಟ್) ಸಮ ಬಹುಭುಜಗಳಿರುವ ಹಾಗೂ ಬಹುಫಲಕೀಯ ಕೋನಗಳು ಸರ್ವಸಮವಾಗಿರುವ ಫನಾಕೃತಿ ಸಮಬಹುಫಲಕ (ರೆಗ್ಯುಲರ್ ಪಾಲಿಹೀಡ್ರನ್). ಇಂಥವು ಸಂಖ್ಯೆಯಲ್ಲಿ ಐದು: ಸಮಚತುಷ್ಛಲಕ, ಸಮಾಷ್ಟಫಲಕ, ಸಮಷಟ್ಛಲಕ, ಸಮದ್ವಾದಶಫಲಕ ಮತ್ತು ಸಮವಿಂಶತಿಫಲಕ. ಆಯ್ಲರ್‌ನ ಸಮೀಕರಣ ಸ್ವಿಟ್ಸರ್ಲೆಂಡಿನ ಗಣಿತವಿಜ್ಞಾನಿ ಲೇಯಾನ್‌ಹಾರ್ಟ್ ಆಯ್ಲರನ (1707-83) ಪ್ರಮೇಯದ ರೀತ್ಯ ಸರಳ ಬಹುಫಲಕಕ್ಕೆ ಸಂಬಂಧಿಸಿದ ಸಮೀಕರಣ V - E + F = 2. ಇಲ್ಲಿ ಅನುಕ್ರಮವಾಗಿ V ಬಹುಫಲಕದ ಶೃಂಗಸಂಖ್ಯೆ, E ಅಂಚುಗಳ ಸಂಖ್ಯೆ ಮತ್ತು F ಫಲಕಗಳ ಸಂಖ್ಯೆ. ಉಲ್ಲೇಖಗಳು ಹೊರಗಿನ ಕೊಂಡಿಗಳು Polyhedra Pages Uniform Solution for Uniform Polyhedra by Dr. Zvi Har'El Symmetry, Crystals and Polyhedra ವರ್ಗ:ರೇಖಾಗಣಿತ ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಗ್ರಹ ಭೇದಂ
https://kn.wikipedia.org/wiki/ಗ್ರಹ_ಭೇದಂ
ಕರ್ನಾಟಕ ಸಂಗೀತದಲ್ಲಿಗ್ರಹ ಭೇದಂ ಎಂದರೆ ರಾಗದಲ್ಲಿನ ಮತ್ತೊಂದು ಸ್ವರಕ್ಕೆ ನಾದದ ಸ್ವರವನ್ನು ಬದಲಾಯಿಸುವ ಮತ್ತು ಬೇರೆ ರಾಗವನ್ನು ತಲುಪುವ ಪ್ರಕ್ರಿಯೆಯ ಫಲಿತಾಂಶವಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಇದಕ್ಕೆ ಸಮಾನವಾದುದನ್ನು ಮುರ್ಚನ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಗೀತ ಸಿದ್ಧಾಂತ ಪರಿಭಾಷೆಯಲ್ಲಿ ವ್ಯಕ್ತಪಡಿಸಿದರೆ, ಇದು ಕೀಲಿಯಲ್ಲಿರುವ ಮತ್ತೊಂದು ವಿಧಾನಕ್ಕೆ ಬದಲಾಗುವ ಮೂಲಕ ವಿಭಿನ್ನ ಮಟ್ಟಕ್ಕೆ ತಲುಪುವ ಪ್ರಕ್ರಿಯೆಯಾಗಿದೆ. ಗ್ರಹ ಎಂದರೆ ಅಕ್ಷರಶಃ ಸ್ಥಾನ ಮತ್ತು ಭೇದ ಎಂದರೆ ಬದಲಾವಣೆ ಎಂದರ್ಥ. ಶ್ರುತಿ ಸ್ಥಾನವನ್ನು ಬದಲಾಯಿಸಲಾಗಿರುವುದರಿಂದ (ಮೂಲ ಸ್ವರ ಅಥವಾ ಡ್ರೋನ್ ಪಿಚ್) ಇದನ್ನು ಕೆಲವೊಮ್ಮೆ ಸ್ವರ ಭೇದಂ ಅಥವಾ ಶ್ರುತಿ ಭೇದಂ ಎಂದೂ ಕರೆಯಲಾಗುತ್ತದೆ, ಆದರೂ ಶ್ರುತಿ ಭೇದಂ ಮತ್ತು ಗ್ರಹ ಭೇದಂ ಕೆಲವು ತಾಂತ್ರಿಕ ವ್ಯತ್ಯಾಸಗಳನ್ನು ಹೊಂದಿವೆ.Lecture Demonstration on Graha bhedam ವ್ಯಾಖ್ಯಾನ ಸ್ವರವನ್ನು ರಾಗದ ಉನ್ನತ ಸ್ವರಕ್ಕೆ ಸ್ವರಸ್ಥಾನಗಳನ್ನು ಉಳಿಸಿಕೊಂಡು ಬದಲಾಯಿಸಿದಾಗ ಹೊಸ ರಾಗವೊಂದು ದೊರೆಯುತ್ತದೆ. ಇದನ್ನು ಗ್ರಹ ಭೇದಂ ಎಂದು ಕರೆಯಲಾಗುತ್ತದೆ. ಪ್ರಾಯೋಗಿಕ ಪ್ರದರ್ಶನ ಗ್ರಹ ಭೇದಂ ಸರಳ ಪ್ರಾಯೋಗಿಕ ಪ್ರದರ್ಶನವನ್ನು ರಾಗದ ರಚನೆಯನ್ನು ಸಾ (ಷಡ್ಜಮ್) ಗೆ ಹೊಂದಿಸಲಾದ ಝೇಂಕಾರ ನುಡಿಸುವ ಮೂಲಕ ಕೈಗೊಳ್ಳಬಹುದು. ನಂತರ ನಾವು ಅದೇ ಕೀಲಿಗಳನ್ನು/ಸ್ವರಗಳನ್ನು ನುಡಿಸುತ್ತಾ, ಹೊಸ ಶ್ರುತಿ/ನಾದದ ಸ್ವರವನ್ನು ರೂಪಿಸಲು, ರಾಗದಲ್ಲಿನ ಮತ್ತೊಂದು ಸ್ವರಕ್ಕೆ ಝೇಂಕಾರವನ್ನು ಬದಲಾಯಿಸುವಾಗ, ಫಲಿತಾಂಶವು ಬೇರೆ ರಾಗವಾಗಿರುತ್ತದೆ. ಉದಾಹರಣೆ ವಿವರಣೆ ಶಂಕರಭಾರಣಂ ರಾಗದ ಸ್ವರಗಳ ಮೇಲೆ ಗ್ರಹ ಭೇದಂ ಅನ್ವಯಿಸಿದಾಗ, ಅದು ಕಲ್ಯಾಣಿ, ಹನುಮತೋಡಿ, ನಟಭೈರವಿ, ಖರಹರಪ್ರಿಯ ಮತ್ತು ಹರಿಕಂಭೋಜಿ ಎಂಬ ಇತರ ೫ ಪ್ರಮುಖ ಮೇಳಕರ್ತ ರಾಗಗಳನ್ನು ನೀಡುತ್ತದೆ.ರಾಗಂಮೇಳ #ಶ್ರುತಿ ಟಾನಿಕ್ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಶಂಕರಭಾರಣಂ29ಸಿ.ಎಸ್.ಆರ್2ಜಿ3ಎಂ1ಪಿ.ಡಿ2ಎನ್3ಎಸ್ 'ಆರ್2 'ಜಿ3 'ಎಂ1 'ಪಿ 'ಡಿ2 'N3 'ಎಸ್ "ಕರಹರಪ್ರಿಯ22ಡಿ.ಎಸ್.ಆರ್2ಜಿ2ಎಂ1ಪಿ.ಡಿ2ಎನ್2ಎಸ್ 'ಹನುಮತೋಡಿ08ಇ.ಎಸ್.ಆರ್1ಜಿ2ಎಂ1ಪಿ.ಡಿ1ಎನ್2ಎಸ್ 'ಕಲ್ಯಾಣಿ65ಎಫ್.ಎಸ್.ಆರ್2ಜಿ3ಎಂ2ಪಿ.ಡಿ2ಎನ್3ಎಸ್ 'ಹರಿಕಂಭೋಜಿ28ಜಿ.ಎಸ್.ಆರ್2ಜಿ3ಎಂ1ಪಿ.ಡಿ2ಎನ್2ಎಸ್ 'ನಟಭೈರವಿ20ಎ.ಎಸ್.ಆರ್2ಜಿ2ಎಂ1ಪಿ.ಡಿ1ಎನ್2ಎಸ್ 'ಅಮಾನ್ಯವಾದ ಮೆಲಕಾರ್ತಾ - ಎಂದುಬಿ.ಎಸ್.ಆರ್1ಜಿ2ಎಂ1ಎಂ2ಡಿ1ಎನ್2ಎಸ್ 'ಶಂಕರಭಾರಣಂ29ಸಿ.ಎಸ್.ಆರ್2ಜಿ3ಎಂ1ಪಿ.ಡಿ2ಎನ್3ಎಸ್ 'ಆರ್2 'ಜಿ3 'ಎಂ1 'ಪಿ 'ಡಿ2 'N3 'ಎಸ್ "ಮೇಲಿನ ಕೋಷ್ಟಕದಲ್ಲಿರುವ ಟಿಪ್ಪಣಿಗಳು ಕರ್ನಾಟಕ ಸಂಗೀತವು ಕಟ್ಟುನಿಟ್ಟಾದ ಆವರ್ತನ/ಸ್ವರಶ್ರೇಣಿಯ ರಚನೆಯನ್ನು ಜಾರಿಗೊಳಿಸದ ಕಾರಣ, ಮೇಲಿನ ವಿವರಣೆಗಾಗಿ ಶಂಶಂಕರಭಾರಣಂ ಆಧಾರವಾಗಿರುವ ಸಿ ಅನ್ನು ಆಯ್ಕೆ ಮಾಡಲಾಗಿದೆ. ಗಾಯಕನು ಶಡ್ಜಮ್ಅನ್ನು ಗಾಯನದ ವ್ಯಾಪ್ತಿ ಅಥವಾ ವಾದ್ಯದ ನಾದದ ಸ್ವರಕ್ಕೆ ಅನುಗುಣವಾಗಿ ನಿಗದಿಪಡಿಸುತ್ತಾನೆ. ಇತರ ಎಲ್ಲಾ ಸ್ವರಗಳು ಈ ಷಡ್ಜಂಗೆ ಸಂಬಂಧಿಸಿವೆ, ಇದು ಜ್ಯಾಮಿತೀಯ ಪ್ರಗತಿಯಂತಹ ಆವರ್ತನ ಮಾದರಿಯಲ್ಲಿ ಬರುತ್ತದೆ. ಈ ಪುಟದಲ್ಲಿ ಕೆಳಗೆ ವಿವರಿಸಿರುವ ಎಲ್ಲಾ ಕೋಷ್ಟಕಗಳಿಗೂ ಈ ಟಿಪ್ಪಣಿ ಅನ್ವಯಿಸುತ್ತದೆ. ಶಂಕರಭರಣದ 6ನೇ ಗ್ಗ್ರಹ ಭೇದಂ ಮಧ್ಯಮಗಳನ್ನು ಹೊಂದಿದೆ (ಮಾ ಮತ್ತು ಪಂಚಮಮ್ ಇಲ್ಲ (ಪಾ) ಮತ್ತು ಆದ್ದರಿಂದ ಎಲ್ಲಾ 7 ಸ್ವರಗಳನಶಂಕರಭಾರಣಂ ಮತ್ತು ಪ್ರತಿಯೊಂದರಲ್ಲೂ ಕೇವಲ 1 ಮಾತ್ರ ಹೊಂದಿರುವ ಮಾನ್ಯ ಮೇಲಕರ್ತ ಎಂದು ಪರಿಗಣಿಸಲಾಗುವುದಿಲ್ಲ. ಇದು ಮೇಳಕರ್ತಕ್ಕೆ ಸಂಬಂಧಿಸಿದಂತೆ ಕೇವಲ ವರ್ಗೀಕರಣದ ಸಮಸ್ಯೆಯಾಗಿದೆ, ಆದರೆ ಈ ರಚನೆಯನ್ನು ಸೈದ್ಧಾಂತಿಕವಾಗಿ ಉತ್ತಮ ಸಂಗೀತವನ್ನು ರಚಿಸಲು ಚೆನ್ನಾಗಿ ಬಳಸಬಹುದು. ಹಿಂದೂಸ್ತಾನಿ ಶಾಸ್ತ್ರೀಯ ರಾಗ ಲಲಿತವು 2 ಮಾ ಮತ್ತು ಪಾ ಇಲ್ಲ, ಆದಾಗ್ಯೂ ಇದು ಈ ರಚನೆಗಿಂತ ಭಿನ್ನವಾದ ಗಾ ಮತ್ತು ನಿ ಅನ್ನು ಹೊಂದಿದೆ. ಮೇಲಿನ ಕೋಷ್ಟಕದಲ್ಲಿನ ಅಂತರಗಳು ಈ ರಾಗಗಳಲ್ಲಿನ ಕಾಣೆಯಾದ ಸ್ವರ ಸ್ಥಾನಗಳಿಗೆ ಸಂಬಂಧಿಸಿವೆ, ಇದು ಪಾಶ್ಚಿಮಾತ್ಯ ಸಂಗೀತದ ತೀಕ್ಷ್ಣ/ಸಮತಟ್ಟಾದ ಸ್ವರಗಳಾಗಿವೆ. ಮೇಲಿನ ಕೋಷ್ಟಕದಲ್ಲಿರುವ ಗ್ರಹ ಭೇದದಲ್ಲಿನ 6 ಮೇಳಕರ್ತ ರಾಗಗಳು ಪಶ್ಚಿಮದ ಮೇಜರ್ ಸ್ಕೇಲ್ಗೆ ಸಮಾನವಾಗಿವೆ (ಅಯೋನಿಯನ್ ಮೋಡ್) ಮತ್ತು ಇದು 7 ನೇ ಮೋಡ್ (ಲೋಕ್ರಿಯನ್) ಹೊರತುಪಡಿಸಿ 5 ಪರಿಣಾಮಕಾರಿ ಮೋಡ್ಗಳನ್ನು ಹೊಂದಿದೆ ಏಕೆಂದರೆ ಇದು ಯಾವುದೇ ಮಾನ್ಯ ಮೇಳಕರ್ತ ರಾಗಕ್ಕೆ ಹೊಂದಿಕೆಯಾಗುವುದಿಲ್ಲ. ಮೇಳಕರ್ತ ರಾಗಗಳು ಇತರ ಮೇಳಕರ್ತ ರಾಗಗಳನ್ನು ಪಡೆಯಲು ಹೆಚ್ಚಿನ ಮೇಳಕರ್ತ ರಾಗಗಳ ಮೇಲೆ ಗ್ರಹ ಭೇದಂ ಅನ್ವಯಿಸಬಹುದು (72ರಲ್ಲಿ 16 ರಾಗಗಳು ಯಾವುದೇ ಮಾನ್ಯವಾದ ಮೇಳಕರ್ತ ಸ್ಕೇಲ್ ಅನ್ನು ನೀಡುವುದಿಲ್ಲ. ನಾದದ ಸ್ವರದ ಅಂತಹ ಮಾದರಿ ಬದಲಾವಣೆಯನ್ನು ಅನ್ವಯಿಸುವಾಗ, ಕೆಲವು ಫಲಿತಾಂಶಗಳು ಮಾನ್ಯವಾದ ಮೇಳಕರ್ತ ರಾಗಗಳಾಗಿರುವುದಿಲ್ಲ (ಮೇಳಕರ್ತದ ವ್ಯಾಖ್ಯಾನದ ನಿಯಮಗಳು ಉಲ್ಲಂಘಿಸಲ್ಪಡುತ್ತವೆ. ಉದಾಹರಣೆಗೆ, ಪಂಚಮ (ಪಾ) ಅಥವಾ ಎರಡು ನಿರ್ದಿಷ್ಟ ಸ್ವರದ (ಋಷಭಮ್ (ರಿಷಭಂ) (ಮಧ್ಯಮಮ್ (ಮಾ) ಅಥವಾ ನಿಷಾದಮ್ (ನಿಷಾಧ) ಕಾಣೆಯಾಗಿದೆ. ಶಂಕರಭಾರಣಂ ಹಿಂದಿನ ವಿಭಾಗದಲ್ಲಿ ಉದಾಹರಣೆ ವಿವರಣೆ ನೋಡಿ. ಕನಕಾಂಗಿ ಕನಕಾಂಗಿಯ ಗ್ರಹ ಭೇದಂ ವ್ಯುತ್ಪನ್ನವು ಕಾಮವರ್ಧಿನಿ..ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಕನಕಗಿರಿ01ಎಸ್.ಆರ್1ಜಿ1ಎಂ1ಪಿ.ಡಿ1ಎನ್1ಎಸ್ 'ಆರ್1 'ಜಿ1 'ಕಾಮವರ್ಧನಿ51ಎಸ್.ಆರ್1ಜಿ3ಎಂ2ಪಿ.ಡಿ1ಎನ್3ಎಸ್ ' ಮಾಯಾಮಾಳಾವ ಗೌಳ ಮಾಯಾಮಾಳವಗೌಳದಿಂದ ವ್ಯುತ್ಪನ್ನವಾದ ಗ್ರಹ ಭೇದಂ ರಾಗಗಳು ರಸಿಕಪ್ರಿಯ ಮತ್ತು ಸಿಂಹೇಂದ್ರಮಧ್ಯಮಮ್.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಮಾಯಾಮಾಲವಗೌಲಾ15ಎಸ್.ಆರ್1ಜಿ3ಎಂ1ಪಿ.ಡಿ1ಎನ್3ಎಸ್ 'ಆರ್1 'ಜಿ3 'ಎಂ1 'ರಸಿಕಪ್ರಿಯ72ಎಸ್.ಆರ್3ಜಿ3ಎಂ2ಪಿ.ಡಿ3ಎನ್3ಎಸ್ 'ಸಿಂಧ್ರಮಧ್ಯಮಂ57ಎಸ್.ಆರ್2ಜಿ2ಎಂ2ಪಿ.ಡಿ1ಎನ್3ಎಸ್ ' ರಾಗವರ್ಧನಿ ರಾಗವರ್ಧನಿ ಯ ಗ್ರಹ ಭೇದಂ ವ್ಯುತ್ಪತಿ ವರುಣಪ್ರಿಯ .ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ರಾಗವರ್ಧನಿ32ಎಸ್.ಆರ್3ಜಿ3ಎಂ1ಪಿ.ಡಿ1ಎನ್2ಎಸ್ 'ಆರ್3 'ಜಿ3 'ಎಂ1 'ವರುಣಪ್ರಿಯ24ಎಸ್.ಆರ್2ಜಿ2ಎಂ1ಪಿ.ಡಿ3ಎನ್3ಎಸ್ ' ವಾಚಸ್ಪತಿ ವಾಚಸ್ಪತಿ ಗ್ಗ್ರಹ ಭೇದಂ ವ್ಯುತ್ಪನ್ನಗಳು ಚಾರುಕೇಸಿ, ಗೌರಿಮನೋಹರಿ ಮತ್ತು ನಾಟಕಪ್ರಿಯ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಜಿ.ಎ.ವಾಚಸ್ಪತಿ64ಎಸ್.ಆರ್2ಜಿ3ಎಂ2ಪಿ.ಡಿ2ಎನ್2ಎಸ್ 'ಆರ್2 'ಜಿ3 'ಎಂ2 'ಪಿ 'ಡಿ2 'ಚಾರುಕೇಸಿ26ಎಸ್.ಆರ್2ಜಿ3ಎಂ1ಪಿ.ಡಿ1ಎನ್2ಎಸ್ 'ಗೌರಿಮನೋಹರಿ23ಎಸ್.ಆರ್2ಜಿ2ಎಂ1ಪಿ.ಡಿ2ಎನ್3ಎಸ್ 'ನಾಟಕಪ್ರಿಯ10ಎಸ್.ಆರ್1ಜಿ2ಎಂ1ಪಿ.ಡಿ2ಎನ್2ಎಸ್ ' ಷಣ್ಮುಖಪ್ರಿಯ ಷಣ್ಮುಖಪ್ರಿಯ ಗ್ಗ್ರಹ ಭೇದಂ ವ್ಯುತ್ಪನ್ನಗಳೆಂದರೆ ಶೂಲಿನಿ, ಧೆನುಕಾ ಮತ್ತು ಚಿತ್ರಾಂಬರಿ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಜಿ.ಎ.ಷಣ್ಮುಖಪ್ರಿಯ56ಎಸ್.ಆರ್2ಜಿ2ಎಂ2ಪಿ.ಡಿ1ಎನ್2ಎಸ್ 'ಆರ್2 'ಜಿ2 'ಎಂ2 'ಪಿ 'ಡಿ1 'ಶೂಲಿನಿ35ಎಸ್.ಆರ್3ಜಿ3ಎಂ1ಪಿ.ಡಿ2ಎನ್3ಎಸ್ 'ಧೆನುಕಾ09ಎಸ್.ಆರ್1ಜಿ2ಎಂ1ಪಿ.ಡಿ1ಎನ್3ಎಸ್ 'ಚಿತ್ರಂಬರಿ66ಎಸ್.ಆರ್2ಜಿ3ಎಂ2ಪಿ.ಡಿ3ಎನ್3ಎಸ್ ' ಕೀರವಾಣಿ ಹೇಮಾವತಿ, ವಕುಲಾಭರಣಮ್ ಮತ್ತು ಕೋಸಲಮ್ ರಾಗಗಳು ಕೀರವಾಣಿ ಯ ಗ್ರಹ ಭೇದಂ ವ್ಯುತ್ಪನ್ನಗಳಾಗಿವೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಜಿ.ಎ.ಕೀರವಾಣಿ21ಎಸ್.ಆರ್2ಜಿ2ಎಂ1ಪಿ.ಡಿ1ಎನ್3ಎಸ್ 'ಆರ್2 'ಜಿ2 'ಎಂ1 'ಪಿ 'ಡಿ1 'ಹೇಮಾವತಿ58ಎಸ್.ಆರ್2ಜಿ2ಎಂ2ಪಿ.ಡಿ2ಎನ್2ಎಸ್ 'ವಕುಲಭರಣಮ್14ಎಸ್.ಆರ್1ಜಿ3ಎಂ1ಪಿ.ಡಿ1ಎನ್2ಎಸ್ 'ಕೋಸಲಮ್71ಎಸ್.ಆರ್3ಜಿ3ಎಂ2ಪಿ.ಡಿ2ಎನ್3ಎಸ್ ' ರತ್ನಾಂಗಿ ರತ್ನಾಂಗಿಯ ಗ್ರಹ ಭೇದಂ ವ್ಯುತ್ಪನ್ನಗಳು ಗಮನಾಶ್ರಮ ಮತ್ತು ಝಂಕರಾಧ್ವನಿ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ರತ್ನಂಗಿ02ಎಸ್.ಆರ್1ಜಿ1ಎಂ1ಪಿ.ಡಿ1ಎನ್2ಎಸ್ 'ಆರ್1 'ಜಿ1 'ಎಂ1 'ಗಮನಾಶ್ರಮ್53ಎಸ್.ಆರ್1ಜಿ3ಎಂ2ಪಿ.ಡಿ2ಎನ್3ಎಸ್ 'ಝಂಕಾರಧ್ವನಿ19ಎಸ್.ಆರ್2ಜಿ2ಎಂ1ಪಿ.ಡಿ1ಎನ್1ಎಸ್ ' ಗಾನಮೂರ್ತಿ ಗಾನಮೂರ್ತಿ ರಾಗದ ಗ್ರಹ ಭೇದಂ ವ್ಯುತ್ಪನ್ನಗಳು ವಿಶ್ವಂಭರಿ ಮತ್ತು ಶಾಮಲಾಂಗಿ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಗಣಮೂರ್ತಿ03ಎಸ್.ಆರ್1ಜಿ1ಎಂ1ಪಿ.ಡಿ1ಎನ್3ಎಸ್ 'ಆರ್1 'ಜಿ1 'ಎಂ1 'ವಿಶ್ವಂಭರಿ54ಎಸ್.ಆರ್1ಜಿ3ಎಂ2ಪಿ.ಡಿ3ಎನ್3ಎಸ್ 'ಶಾಮಲಂಜಿ55ಎಸ್.ಆರ್2ಜಿ2ಎಂ2ಪಿ.ಡಿ1ಎನ್1ಎಸ್ ' ವನಸ್ಪತಿ ವನಸ್ಪತಿ ಗ್ರಹ ಭೇದಂ ವ್ಯುತ್ಪತ್ತಿಯು ಮಾರರಂಜನಿ ಮತ್ತು ಇದಕ್ಕೆ ಪ್ರತಿಕ್ರಮವಾಗಿದೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ವನಸ್ಪತಿ04ಎಸ್.ಆರ್1ಜಿ1ಎಂ1ಪಿ.ಡಿ2ಎನ್2ಎಸ್ 'ಆರ್1 'ಜಿ1 'ಎಂ1 'ಮಾರರಂಜನಿ25ಎಸ್.ಆರ್2ಜಿ3ಎಂ1ಪಿ.ಡಿ1ಎನ್1ಎಸ್ ' ಮಾನವತಿ ಮಾನವತಿ ರಾಗದ ಗ್ರಹ ಭೇದಂ ಕಾಂತಮಣಿ ಮತ್ತು ಇದಕ್ಕೆ ತದ್ವಿರುದ್ಧವಾಗಿದೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಮಾನವತ05ಎಸ್.ಆರ್1ಜಿ1ಎಂ1ಪಿ.ಡಿ2ಎನ್3ಎಸ್ 'ಆರ್1 'ಜಿ1 'ಎಂ1 'ಕಾಂತಮಣಿ61ಎಸ್.ಆರ್2ಜಿ3ಎಂ2ಪಿ.ಡಿ1ಎನ್1ಎಸ್ ' ಸೂರ್ಯಕಾಂತಂ ಸೂರ್ಯಕಾಂತದ ಗ್ರಹ ಭೇದಂ ವ್ಯುತ್ಪನ್ನಗಳು ಸೇನಾವತಿ ಮತ್ತು ಲತಾಂಗಿ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಸೂರ್ಯಕಾಂತಂ17ಎಸ್.ಆರ್1ಜಿ3ಎಂ1ಪಿ.ಡಿ2ಎನ್3ಎಸ್ 'ಆರ್1 'ಜಿ3 'ಎಂ1 'ಸೇನವತಿ07ಎಸ್.ಆರ್1ಜಿ2ಎಂ1ಪಿ.ಡಿ1ಎನ್1ಎಸ್ 'ಲತಾ.63ಎಸ್.ಆರ್2ಜಿ3ಎಂ2ಪಿ.ಡಿ1ಎನ್3ಎಸ್ ' ಕೋಕಿಲಪ್ರಿಯಾ ಕೋಕಿಲಪ್ರಿಯದ ಗ್ರಹ ಭೇದಂ ಋಷಭಪ್ರಿಯ ಮತ್ತು ಇದಕ್ಕೆ ತದ್ವಿರುದ್ಧವಾಗಿದೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಕೋಕಿಲಾಪ್ರಿಯಾ11ಎಸ್.ಆರ್1ಜಿ2ಎಂ1ಪಿ.ಡಿ2ಎನ್3ಎಸ್ 'ಆರ್1 'ಜಿ2 'ಎಂ1 'ಋಷಭಪ್ರಿಯ62ಎಸ್.ಆರ್2ಜಿ3ಎಂ2ಪಿ.ಡಿ1ಎನ್2ಎಸ್ ' ಗಾಯಕಪ್ರಿಯ ಗಾಯಕಪ್ರಿಯ ರಾಗದ ಗ್ರಹ ಭೇದಂ ಧಾತುವರ್ದನಿ ಮತ್ತು ಇದಕ್ಕೆ ತದ್ವಿರುದ್ಧವಾಗಿದೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಗಾಯಕಾಪ್ರಿಯ13ಎಸ್.ಆರ್1ಜಿ3ಎಂ1ಪಿ.ಡಿ1ಎನ್1ಎಸ್ 'ಆರ್1 'ಧತುವರ್ದಾನಿ69ಎಸ್.ಆರ್3ಜಿ3ಎಂ2ಪಿ.ಡಿ1ಎನ್3ಎಸ್ ' ಧರ್ಮಾವತಿ ಧರ್ಮಾವತಿಯ ಗ್ರಹ ಭೇದಂ ವ್ಯುತ್ಪನ್ನಗಳು ಚಕ್ರವಾಕಂ ಮತ್ತು ಸರಸಾಂಗಿ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಜಿ.ಧರ್ಮಾವತಿ59ಎಸ್.ಆರ್2ಜಿ2ಎಂ2ಪಿ.ಡಿ2ಎನ್3ಎಸ್ 'ಆರ್2 'ಜಿ2 'ಎಂ2 'ಪಿ 'ಚಕ್ರವಾಕಮ್16ಎಸ್.ಆರ್1ಜಿ3ಎಂ1ಪಿ.ಡಿ2ಎನ್2ಎಸ್ 'ಸರಸಂಗಿ27ಎಸ್.ಆರ್2ಜಿ3ಎಂ1ಪಿ.ಡಿ1ಎನ್3ಎಸ್ ' ಹಟಕಾಂಬರಿ ಹಟಕಾಂಬರಿ ಗ್ರಹ ಭೇದಂ ವ್ಯುತ್ಪತ್ತಿಯು ಗವಾಂಭೋದಿ ಮತ್ತು ಇದಕ್ಕೆ ತದ್ವಿರುದ್ಧವಾಗಿದೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಹಟಕಂಬರಿ18ಎಸ್.ಆರ್1ಜಿ3ಎಂ1ಪಿ.ಡಿ3ಎನ್3ಎಸ್ 'ಆರ್1 'ಜಿ3 'ಎಂ1 'ಗವಂಭೋಡಿ43ಎಸ್.ಆರ್1ಜಿ2ಎಂ2ಪಿ.ಡಿ1ಎನ್1ಎಸ್ ' ನಾಗನಂದಿನಿ ಭವಪ್ರಿಯ ಮತ್ತು ವಾಗಧೀಶ್ವರಿ ನಾಗನಂದಿನಿ ಗ್ಗ್ರಹ ಭೇದಂ ವ್ಯುತ್ಪನ್ನಗಳಾಗಿವೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಜಿ.ನಾಗಾನಂದಿನಿ30ಎಸ್.ಆರ್2ಜಿ3ಎಂ1ಪಿ.ಡಿ3ಎನ್3ಎಸ್ 'ಆರ್2 'ಜಿ3 'ಎಂ1 'ಪಿ 'ಭವಪ್ರಿಯ44ಎಸ್.ಆರ್1ಜಿ2ಎಂ2ಪಿ.ಡಿ1ಎನ್2ಎಸ್ 'ವಾಗಧೀಶ್ವರಿ34ಎಸ್.ಆರ್3ಜಿ3ಎಂ1ಪಿ.ಡಿ2ಎನ್2ಎಸ್ ' ಗಾಂಗೇಯಭೂಷಣ ಗಾಂಗೇಯಭೂಷಣ ಗ್ರಹ ಭೇದಂ ನೀತಿಮತಿ ಮತ್ತು ಇದಕ್ಕೆ ತದ್ವಿರುದ್ಧವಾಗಿದೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಗಂಗೆಯಭೂಷಣ33ಎಸ್.ಆರ್3ಜಿ3ಎಂ1ಪಿ.ಡಿ1ಎನ್3ಎಸ್ 'ಆರ್3 'ಜಿ3 'ಎಂ1 'ನೀತಿಮತಿ60ಎಸ್.ಆರ್2ಜಿ2ಎಂ2ಪಿ.ಡಿ3ಎನ್3ಎಸ್ ' ಚಲನಾಟ ಚಲನಾಟದ ಗ್ರಹ ಭೇದಂ ವ್ಯುತ್ಪನ್ನವು ಶುಭಪಂತುವರಾಳಿ ಮತ್ತು ಇದಕ್ಕೆ ವಿರುದ್ಧವಾಗಿದೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಚಲಾನಾಟಾ36ಎಸ್.ಆರ್3ಜಿ3ಎಂ1ಪಿ.ಡಿ3ಎನ್3ಎಸ್ 'ಆರ್3 'ಜಿ3 'ಶುಭಪಂತುವಾರಳಿ45ಎಸ್.ಆರ್1ಜಿ2ಎಂ2ಪಿ.ಡಿ1ಎನ್3ಎಸ್ ' ಶಾದ್ವಿದಮಾರ್ಗಿಣಿ ಶಾದ್ವಿದಮಾರ್ಗಿಣಿ ಗ್ರಹ ಭೇದಂ ನಾಸಿಕಭೂಷಣ ಮತ್ತು ಇದಕ್ಕೆ ವಿರುದ್ಧವಾಗಿದೆ.ರಾಗಂಮೇಳ #ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಶಾದ್ವಿದಮಾರ್ಗಿನಿ46ಎಸ್.ಆರ್1ಜಿ2ಎಂ2ಪಿ.ಡಿ2ಎನ್2ಎಸ್ 'ಆರ್1 'ಜಿ2 'ನಾಸಿಕಭೂಷಣ70ಎಸ್.ಆರ್3ಜಿ3ಎಂ2ಪಿ.ಡಿ2ಎನ್2ಎಸ್ ' ಜನ್ಯ ರಾಗಗಳು ಗ್ಗ್ರಹ ಭೇದಂ ಕೆಲವು ಜನ್ಯ ರಾಗಗಳಿಗೆ ಅನ್ವಯಿಸಿ ಇತರ ಜನ್ಯ ರಾಗಗಳನ್ನು ಪಡೆಯಬಹುದು. ಮೇಳಕರ್ತ ರಾಗಗಳಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಲಾಗುತ್ತದೆ, ಆದರೆ ಜನ್ಯ ರಾಗಗಲ್ಲಿ ಯಾವ ಸ್ವರಗಳನ್ನು ಆಯ್ಕೆ ಮಾಡಬಹುದು. ಜನ್ಯ ರಾಗಗಳು ಅಂತಹ ನಿಯಮಗಳನ್ನು ಹೊಂದಿರುವುದಿಲ್ಲ. ಆದ್ದರಿಂದ, ನಾದದ ಸ್ವರದ ಅಂತಹ ಮಾದರಿ ಬದಲಾವಣೆಯು ಎಲ್ಲಾ ಸ್ವರಗಳ ಮೇಲೆ ಮಾನ್ಯವಾಗಿರುತ್ತದೆ, ಆದರೆ ಪ್ರಯೋಗಿಸಿದ, ವಿವರಿಸಿದ ಮತ್ತು ಸಂಯೋಜಿಸಿದ ರಾಗವಾಗಿ ಆಯ್ಕೆ ಮಾಡದಿರಬಹುದು. ಆದ್ದರಿಂದ ಅವು ಇನ್ನೂ ಪತ್ತೆಯಾಗದ ಸೈದ್ಧಾಂತಿಕ ರಾಗಗಳಾಗಿ ಉಳಿದಿವೆ (ಸ್ವರಗಳ ಎಲ್ಲಾ ಸಂಯೋಜನೆಗಳು ಅಸ್ತಿತ್ವದಲ್ಲಿವೆ, ಆದರೆ ಅದನ್ನು ಎಂದಿಗೂ ಬಳಸಿಲ್ಲ ಅಥವಾ ಜಗತ್ತಿಗೆ ಬಹಿರಂಗಪಡಿಸಿಲ್ಲ) ಮೋಹನಂ ಮೋಹನಮ್ ರಾಗಂ ಮತ್ತು ಅದರ ಗ್ಗ್ರಹ ಭೇದಂ ವ್ಯುತ್ಪನ್ನಗಳು ಪ್ರಪಂಚದಾದ್ಯಂತ, ವಿಶೇಷವಾಗಿ ಪೂರ್ವ ಮತ್ತು ದಕ್ಷಿಣ ಏಷ್ಯಾದಲ್ಲಿ ಬಳಕೆಯಲ್ಲಿರುವ ಪ್ರಮುಖ ಮಾನದಂಡಗಳಲ್ಲಿ ಒಂದಾಗಿದೆ. ಇತರ ನಾಲ್ಕು ವ್ಯುತ್ಪನ್ನಗಳೆಂದರೆ ಹಿಂದೋಳ, ಶುದ್ಧ ಸಾವೇರಿ, ಶುದ್ಧ ಧನ್ಯಾಸಿ ಮತ್ತು ಮಧ್ಯಮಾವತಿ.ರಾಗಂಶ್ರುತಿ ಟಾನಿಕ್ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಮೋಹನಂಸಿ.ಎಸ್.ಆರ್2ಜಿ3ಪಿ.ಡಿ2ಎಸ್ 'ಆರ್2 'ಜಿ3 'ಪಿ 'ಡಿ2 'ಎಸ್ "ಮಧ್ಯಮಾವತಿಡಿ.ಎಸ್.ಆರ್2ಎಂ1ಪಿ.ಎನ್2ಎಸ್ 'ಹಿಂದೋಲಮ್ಇ.ಎಸ್.ಜಿ2ಎಂ1ಡಿ1ಎನ್2ಎಸ್ 'ಶುದ್ಧ ಸವೇರಿಜಿ.ಎಸ್.ಆರ್2ಎಂ1ಪಿ.ಡಿ2ಎಸ್ 'ಶುದ್ಧ ಧನ್ಯಾಸಿಎ.ಎಸ್.ಜಿ2ಎಂ1ಪಿ.ಎನ್2ಎಸ್ 'ಮೋಹನಂಸಿ.ಎಸ್.ಆರ್2ಜಿ3ಪಿ.ಡಿ2ಎಸ್ 'ಮೇಲಿನ ಕೋಷ್ಟಕದಲ್ಲಿರುವ ಟಿಪ್ಪಣಿಗಳು ಕರ್ನಾಟಕ ಸಂಗೀತವು ಕಟ್ಟುನಿಟ್ಟಾದ ಆವರ್ತನ/ಸ್ವರ ರಚನೆಯನ್ನು ಜಾರಿಗೊಳಿಸದ ಕಾರಣ, ಮೋಹನಂ ಆಧಾರವಾಗಿರುವ ಸಿ ಅನ್ನು ಮೇಲಿನ ವಿವರಣೆಗಾಗಿ ಅನುಕೂಲಕ್ಕಾಗಿ ಮಾತ್ರ ಆಯ್ಕೆ ಮಾಡಲಾಗಿದೆ. ಗಾಯಕನು ಶಡ್ಜಮ್ಅನ್ನು ಗಾಯನದ ವ್ಯಾಪ್ತಿ ಅಥವಾ ವಾದ್ಯದ ನಾದದ ಸ್ವರಕ್ಕೆ ಅನುಗುಣವಾಗಿ ನಿಗದಿಪಡಿಸುತ್ತಾನೆ. ಇತರ ಎಲ್ಲಾ ಸ್ವರಗಳು ಈ ಷಡ್ಜಂಗೆ ಸಂಬಂಧಿಸಿವೆ, ಇದು ಜ್ಯಾಮಿತೀಯ ಪ್ರಗತಿಯಂತಹ ಆವರ್ತನ ಮಾದರಿಯಲ್ಲಿ ಬರುತ್ತದೆ. ಈ ಟಿಪ್ಪಣಿ ಕೆಳಗೆ ವಿವರಿಸಿರುವ ಎಲ್ಲಾ ಕೋಷ್ಟಕಗಳಿಗೂ ಅನ್ವಯಿಸುತ್ತದೆ. ಮೇಲಿನ ಕೋಷ್ಟಕದಲ್ಲಿನ ಅಂತರಗಳು ಈ ರಾಗಗಳಲ್ಲಿನ ಕಾಣೆಯಾದ ಸ್ವರ ಸ್ಥಾನಗಳಿಗೆ ಸಂಬಂಧಿಸಿವೆ, ಇದು ಪಾಶ್ಚಿಮಾತ್ಯ ಸಂಗೀತದಲ್ಲಿ ಎಫ್ ಮತ್ತು ಬಿ ಸ್ವರಗಳ ಜೊತೆಗೆ ತೀಕ್ಷ್ಣ ಮತ್ತು ಸಮತಟ್ಟಾದ ಸ್ವರಗಳಾಗಿರುತ್ತವೆ. ಒಂದು ಚೂಪಾದ/ಫ್ಲಾಟ್ ಕೀಲಿಯನ್ನು ನಾದದ ಸ್ವರವಾಗಿ ಆಯ್ಕೆ ಮಾಡಿ ಮತ್ತು ಪಿಯಾನೋ/ಆರ್ಗನ್/ಕೀಬೋರ್ಡ್/ಹಾರ್ಮೋನಿಯಂನಲ್ಲಿ ಕೇವಲ ಕಪ್ಪು ಕೀಲಿಗಳನ್ನು ಮಾತ್ರ ನುಡಿಸಿದರೆ, ಈ 5 ರಾಗಗಳನ್ನು ಅನುಕ್ರಮವಾಗಿ ನುಡಿಸಲಾಗುತ್ತದೆ. ಅಂದರೆ, ನಿಮ್ಮ ಬಳಿ ಸಿ #ನಿಂದ ಟಾನಿಕ್ ನೋಟ್ ಇರುವ ಕಪ್ಪು ಕೀಲಿಗಳನ್ನು ಮಾತ್ರ ಹೊಂದಿದ್ದರೆ, ಅದು ಶುದ್ಧ ಸವೇರಿ. ಡಿ #ನಿಂದ ಇದು ಉದಯರವಿಚಂದ್ರಿಕಾ, ಎಫ್ #ನಿಂದ ಇದು ಮೋಹನಮ್, ಎ-ಫ್ಲಾಟ್ನಿಂದ ಇದು ಮಧ್ಯಮೋಹನಂ ಮತ್ತು ಬಿ-ಫ್ಲಾಟ್ ನಿಂದ ಇದು ಹಿಂದೋಲಮ್ ಆಗಿದೆ. ಈ ಹೇಳಿಕೆಯು ಸರಳೀಕೃತ ರಾಗ ರಚನೆಗೆ ಮಾತ್ರ ಅನ್ವಯಿಸುತ್ತದೆ. ರಾಗಗಳು ಹೆಚ್ಚು ಸಂಕೀರ್ಣವಾಗಿದ್ದರೂ, ಅವುಗಳಲ್ಲಿ ಬಳಸಬೇಕಾದ ನುಡಿಗಟ್ಟುಗಳು ಮತ್ತು ತಪ್ಪಿಸಲು ನುಡಿಗಟ್ಟುಗಳಿವೆ, ಗಮಕಗಳು, ಸ್ವರಗಳ ಉದ್ದ, ಹಾಡುವ/ನುಡಿಸುವಾಗ ಪ್ರಚೋದಿಸಬೇಕಾದ ನಿರ್ದಿಷ್ಟ ಮನಸ್ಥಿತಿ/ಭಾವ/ರಸ ಇತ್ಯಾದಿ. ಇವುಗಳನ್ನು ವೈಜ್ಞಾನಿಕ ಸಂಕೇತಗಳಲ್ಲಿ ಚೆನ್ನಾಗಿ ಸೆರೆಹಿಡಿಯಲಾಗುವುದಿಲ್ಲ. ಶಿವರಂಜನಿ ಶಿವರಂಜನಿ ರಾಗ ಮತ್ತು ಅದರ ಗ್ಗ್ರಹ ಭೇದಂ ವ್ಯುತ್ಪನ್ನಗಳು ರೇವತಿ ಮತ್ತು ಸುನಾದವಿನೋದಿನಿ.ರಾಗಂಶ್ರುತಿ ಟಾನಿಕ್ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಶಿವರಂಜನಿಸಿ.ಎಸ್.ಆರ್2ಜಿ2ಪಿ.ಡಿ2ಎಸ್ 'ಆರ್2 'ಜಿ2 'ರೇವತಿಡಿ.ಎಸ್.ಆರ್1ಎಂ1ಪಿ.ಎನ್2ಎಸ್ 'ಸುನದವಿನೋದಿನಿಡಿ #ಎಸ್.ಜಿ3ಎಂ2ಡಿ2ಎನ್3ಎಸ್ 'ಮೇಲಿನ ಕೋಷ್ಟಕದಲ್ಲಿರುವ ಟಿಪ್ಪಣಿಗಳು ಈ ಸೆಟ್ ಮತ್ತು ಅದರ ಮೇಲೆ ತೋರಿಸಿರುವ ಮೋಹನಮ್ ಸೆಟ್ ನಡುವಿನ ವ್ಯತ್ಯಾಸವೆಂದರೆ, 3 ನೇ ಟಿಪ್ಪಣಿ ಇ ಮತ್ತು ಡಿ # (ಉಲ್ಲೇಖ ಟಿಪ್ಪಣಿ ಉದ್ದೇಶ ಮಾತ್ರ) ನಡುವೆ ಭಿನ್ನವಾಗಿದೆ. ಆದ್ದರಿಂದ, ಶಿವರಂಜನಿ ಮೋಹನಮ್ನಿಂದ ಒಂದು ಟಿಪ್ಪಣಿಯಿಂದ ಭಿನ್ನವಾಗಿದೆ-ಜಿ 3 ರ ಸ್ಥಳದಲ್ಲಿ ಜಿ 2, ರೇವತಿ ಒಂದು ಟಿಪ್ಪಣಿಯಿಂದ ಮಧ್ಯಮಾವತಿ ಭಿನ್ನವಾಗಿದೆ-ಆರ್ 2 ರ ಸ್ಥಳದಲ್ಲಿ ಆರ್ 1, ಆದರೆ ಸುನದವಿನೋದಿನಿ ಎಸ್ ಹೊರತುಪಡಿಸಿ ಎಲ್ಲಾ ಟಿಪ್ಪಣಿಗಳಲ್ಲಿ ಹಿಂದೋಲಮ್ ಭಿನ್ನವಾಗಿದೆ (ಆ ಹಂತವು ಹಿಂದೋಲಮ್ ಎಲ್ಲಾ ಇತರ ಟಿಪ್ಪಣಿಗಳನ್ನು ಉಳಿಸಿಕೊಂಡು ಒಂದು ಟಿಪ್ಪಣಿ, ಸಾ, ಅನ್ನು ಕೆಳಕ್ಕೆ ಬದಲಾಯಿಸುವುದಕ್ಕೆ ಸಮಾನವಾಗಿದೆ. ಹಂಸಧ್ವನಿ ಹಂಸಧ್ವನಿ ರಾಗ ಮತ್ತು ಅದರ ಗ್ರಹ ಭೇದಂ ವ್ಯುತ್ಪನ್ನವು ನಾಗಸ್ವರಾವಳಿ.ರಾಗಂಶ್ರುತಿ ಟಾನಿಕ್ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಜಿ.ಹಂಸಧ್ವನಿಸಿ.ಎಸ್.ಆರ್2ಜಿ3ಪಿ.ಎನ್3ಎಸ್ 'ಆರ್2 'ಜಿ3 'ಪಿ 'ನಾಗಸ್ವರಾವಳಿಜಿ.ಎಸ್.ಜಿ3ಎಂ1ಪಿ.ಡಿ2ಎಸ್ ' ಅಭೋಗಿ ಅಭೋಗಿ ರಾಗ ಮತ್ತು ಅದರ ಗ್ರಹ ಭೇದಂ ವ್ಯುತ್ಪನ್ನವು ವಾಲಾಜಿ ಆಗಿದೆ.ರಾಗಂಶ್ರುತಿ ಟಾನಿಕ್ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಅಭೋಗಿಸಿ.ಎಸ್.ಆರ್2ಜಿ2ಎಂ1ಡಿ2ಎಸ್ 'ಆರ್2 'ಜಿ2 'ಎಂ1 'ಕಲಾಸಾವೇರಿಡಿ.ಎಸ್.ಆರ್1ಜಿ2ಪಿ.ಎನ್2ಎಸ್ 'ಆರ್1 'ಜಿ2 'ವಾಲಾಜಿಎಫ್.ಎಸ್.ಜಿ3ಪಿ.ಡಿ2ಎನ್2ಎಸ್ ' ಅಮೃತವರ್ಷಿಣಿ ಅಮೃತವರ್ಷಿಣಿ ರಾಗ ಮತ್ತು ಅದರ ಗ್ರಹ ಭೇದಂ ವ್ಯುತ್ಪನ್ನವಾದದ್ದು ಕರ್ನಾಟಕ ಶುದ್ಧ ಸಾವೇರಿ.ರಾಗಂಶ್ರುತಿ ಟಾನಿಕ್ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಕರ್ನಾಟಕ ಶುದ್ಧ ಸವೇರಿಸಿ.ಎಸ್.ಆರ್1ಎಂ1ಪಿ.ಡಿ1ಎಸ್ 'ಆರ್1 'ಎಂ1 'ಅಮೃತವರ್ಷಿನಿಸಿ #ಎಸ್.ಜಿ3ಎಂ2ಪಿ.ಎನ್3ಎಸ್ 'ಜಿ3 ' ಗಂಭೀರನಾಟಾ ಗಂಭೀರನಾಟಾ ರಾಗ ಮತ್ತು ಅದರ ಗ್ರಹ ಭೇದಂ ವ್ಯುತ್ಪನ್ನವೆಂದರೆ ಭೂಪಾಲಂ.ರಾಗಂಶ್ರುತಿ ಟಾನಿಕ್ಸಿ.ಡಿ.ಇ.ಎಫ್.ಜಿ.ಎ.ಬಿ.ಸಿ.ಡಿ.ಇ.ಎಫ್.ಗಂಭೀರಾನಾಟಾಸಿ.ಎಸ್.ಜಿ3ಎಂ1ಪಿ.ಎನ್3ಎಸ್ 'ಜಿ3 'ಎಂ1 'ಭೂಪಾಲಂಇ.ಎಸ್.ಆರ್1ಜಿ2ಪಿ.ಡಿ1ಎಸ್1ಆರ್1 'ಹಂಸನಾದಮ್ಎಫ್.ಎಸ್.ಆರ್2ಎಂ2ಪಿ.ಎನ್3ಎಸ್. ಇದನ್ನೂ ನೋಡಿ ಮೇಳಕರ್ತ  ಉಲ್ಲೇಖಗಳು ವರ್ಗ:ಕರ್ನಾಟಕ ಸಂಗೀತ
ರಾಘವನ್ (ನಟ)
https://kn.wikipedia.org/wiki/ರಾಘವನ್_(ನಟ)
ರಾಘವನ್ (ಮಲಯಾಳಂ: ರಾಘವನ್; ಜನನ 12 ಡಿಸೆಂಬರ್ 1941)  ಒಬ್ಬ ಭಾರತೀಯ ನಟ, ಇವರು ತೆಲುಗು ಮತ್ತು ಕನ್ನಡ ಚಲನಚಿತ್ರಗಳು ಸೇರಿದಂತೆ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2000 ರ ದಶಕದ ಆರಂಭದಿಂದ ಅವರು ಮಲಯಾಳಂ ಮತ್ತು ತಮಿಳು ದೂರದರ್ಶನ ಧಾರಾವಾಹಿಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.  ಅವರು ಕಿಲಿಪ್ಪಾಟ್ಟು (1987) ನಲ್ಲಿ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಅವರು ಕೇರಳ ರಾಜ್ಯ ದೂರದರ್ಶನ ಪ್ರಶಸ್ತಿಗಳು ಮತ್ತು ಏಷ್ಯಾನೆಟ್ ಟೆಲಿವಿಷನ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಚಿತ್ರಕಥೆ ದೂರದರ್ಶನ ಧಾರಾವಾಹಿಗಳು ವರ್ಷಶೀರ್ಷಿಕೆಚಾನಲ್ಟಿಪ್ಪಣಿಗಳು2001ವಾಕಚರ್ತುದೂರದರ್ಶನಚೊಚ್ಚಲ ಧಾರಾವಾಹಿ2001ಶಮನಾಥಲಮ್ಏಷ್ಯಾನೆಟ್2002ವಸುಂದರಾ ಮೆಡಿಕಲ್ಸ್ಏಷ್ಯಾನೆಟ್2003ಶ್ರೀರಾಮನ್ ಶ್ರೀದೇವಿಏಷ್ಯಾನೆಟ್2004ಮುಹೂರ್ತಮ್ಏಷ್ಯಾನೆಟ್2004ಕಡಮತ್ತತ್ ಕಥನಾರ್ಏಷ್ಯಾನೆಟ್2004-2009ಮಿನ್ನುಕೆಟ್ಟುಸೂರ್ಯ ಟಿ.ವಿ2005ಕೃಷ್ಣಕೃಪಾಸಾಗರಮ್ಅಮೃತ ಟಿವಿ2006ಸ್ನೇಹಮ್ಸೂರ್ಯ ಟಿ.ವಿ2007ಸೇಂಟ್ ಆಂಟನಿಸೂರ್ಯ ಟಿ.ವಿ2008ಶ್ರೀಗುರುವಾಯೂರಪ್ಪನ್ಸೂರ್ಯ ಟಿ.ವಿ2008ವೆಲಂಕಣಿ ಮಾತಾವುಸೂರ್ಯ ಟಿ.ವಿ2009ಸ್ವಾಮಿಯೇ ಶರಣಂ ಆಯಪ್ಪಾಸೂರ್ಯ ಟಿ.ವಿ2010ರಹಸ್ಯಮ್ಏಷ್ಯಾನೆಟ್2010ಇಂದ್ರನೀಲಂಸೂರ್ಯ ಟಿ.ವಿ2012-2013ಆಕಾಶದೂತ್ತುಸೂರ್ಯ ಟಿ.ವಿ2012ಸ್ನೇಹಕೂಡುಸೂರ್ಯ ಟಿ.ವಿ2014-2016ಭಾಗ್ಯಲಕ್ಷ್ಮಿಸೂರ್ಯ ಟಿ.ವಿ2016ಅಮ್ಮೆ ಮಹಾಮಾಯೆಸೂರ್ಯ ಟಿ.ವಿ2017ಮೂನ್ನುಮಣಿಹೂಗಳು2017-2019ವನಂಬಾಡಿಏಷ್ಯಾನೆಟ್2017–2020ಕಸ್ತೂರಿಮಾನ್ಏಷ್ಯಾನೆಟ್2019ಮೌನ ರಾಗಂಸ್ಟಾರ್ ವಿಜಯ್ತಮಿಳು ಧಾರಾವಾಹಿ 2021–ಇಂದಿನವರೆಗೆಕಲಿವೀಡುಸೂರ್ಯ ಟಿ.ವಿ ನಿರ್ದೇಶಕರಾಗಿ ವರ್ಷಚಲನಚಿತ್ರದ ಹೆಸರುRef1987ಕಿಳಿಪ್ಪಾಟ್ಟು1988ಸಾಕ್ಷಿ ಚಿತ್ರಕಥೆಗಾರನಾಗಿ ವರ್ಷಚಲನಚಿತ್ರದ ಹೆಸರುRef1987ಕಿಳಿಪ್ಪಾಟ್ಟು ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು +ವರ್ಷಪ್ರಶಸ್ತಿಶೀರ್ಷಿಕೆಕೆಲಸಫಲಿತಾಂಶRef2018ಏಷ್ಯಾನೆಟ್ ಟೆಲಿವಿಷನ್ ಪ್ರಶಸ್ತಿಗಳುಜೀವಮಾನದ ಸಾಧನೆಕಸ್ತೂರಿಮಾನ್ 2018ತರಂಗಿಣಿ ದೂರದರ್ಶನ ಪ್ರಶಸ್ತಿಗಳುಜೀವಮಾನದ ಸಾಧನೆವನಂಬಾಡಿ 2018ಜನ್ಮಭೂಮಿ ಪ್ರಶಸ್ತಿಗಳುಅತ್ಯುತ್ತಮ ಪಾತ್ರ ನಟಕಸ್ತೂರಿಮಾನ್ 2019ಕೇರಳ ರಾಜ್ಯ ದೂರದರ್ಶನ ಪ್ರಶಸ್ತಿಗಳುಅತ್ಯುತ್ತಮ ನಟದೇಹಾಂತ್ರಮ್ 2019ತೊಪ್ಪಿಲ್ ಭಾಸಿ ಪ್ರಶಸ್ತಿಜೀವಮಾನದ ಸಾಧನೆ -2024ಪಿ ಭಾಸ್ಕರನ್ ಜನ್ಮ ಶತಮಾನೋತ್ಸವ ಪ್ರಶಸ್ತಿ - - ಉಲ್ಲೇಖಗಳು ಬಾಹ್ಯ ಕೊಂಡಿಗಳು ವರ್ಗ:ಜೀವಂತ ವ್ಯಕ್ತಿಗಳು
ಕ್ರಿಸ್ ಗ್ರೀವ್ಸ್
https://kn.wikipedia.org/wiki/ಕ್ರಿಸ್_ಗ್ರೀವ್ಸ್
ಕ್ರಿಸ್ಟೋಫರ್ ನಿಕೋಲಸ್ ಗ್ರೀವ್ಸ್ (ಜನನ ೧೨ ಅಕ್ಟೋಬರ್ ೧೯೯೦) ಒಬ್ಬ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ, ಇವರು ಸ್ಕಾಟ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ. ಅವರು ೨೦೨೧ ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು ಮತ್ತು ಬಲಗೈ ಲೆಗ್ ಸ್ಪಿನ್ ಬೌಲರ್ ಆಗಿ ಆಡುತ್ತಾರೆ. ದೇಶೀಯ ವೃತ್ತಿಜೀವನ ಗ್ರೀವ್ಸ್ ದಕ್ಷಿಣ ಆಫ್ರಿಕಾದ ರಾಂಡ್‌ಬರ್ಗ್‌ನಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಾ ಬೆಳೆದರು. ಸ್ಕಾಟ್ಲೆಂಡ್‌ಗೆ ತೆರಳಿದ ನಂತರ ಅವರು ಗ್ಲೆನ್‌ರೋಥೆಸ್ ಕ್ರಿಕೆಟ್ ಕ್ಲಬ್ ಮತ್ತು ಫಾರ್ಫರ್‌ಶೈರ್ ಕ್ರಿಕೆಟ್ ಕ್ಲಬ್‌ಗಾಗಿ ಆಡಿದರು. ಅವರು 2019 ರಲ್ಲಿ ಇಂಗ್ಲೆಂಡ್‌ನ ಎರಡನೇ XI ಚಾಂಪಿಯನ್‌ಶಿಪ್‌ನಲ್ಲಿ ಗ್ಲೌಸೆಸ್ಟರ್‌ಶೈರ್‌ಗಾಗಿ ಆಡಿದರು ಅಂತರರಾಷ್ಟ್ರೀಯ ವೃತ್ತಿಜೀವನ ಗ್ರೀವ್ಸ್ ಅವರನ್ನು ೨೦೧೮ ರಲ್ಲಿ ವಿಸ್ತೃತ ಸ್ಕಾಟಿಷ್ ರಾಷ್ಟ್ರೀಯ ತಂಡದಲ್ಲಿ ಸೇರಿಸಲಾಯಿತು ಮತ್ತು ಅವರು ಆಟವನ್ನು ಆಡದಿದ್ದರೂ ೨೦೧೯ ಓಮನ್ ಚತುರ್ಭುಜ ಸರಣಿಯ ತಂಡದಲ್ಲಿ ಹೆಸರಿಸಲಾಯಿತು. "Greaves targets return after success in South Africa". Cricket Scotland. 15 March 2021. Retrieved 27 June 2023. ಜೂನ್ ೨೦೧೯ ರಲ್ಲಿ, ಅವರು ಐರ್ಲೆಂಡ್ ವೋಲ್ವ್ಸ್ ವಿರುಧ್ಧ ಆಡಲು ಐರ್ಲೆಂಡ್ ಪ್ರವಾಸದಲ್ಲಿ ಸ್ಕಾಟ್ಲೆಂಡ್ ಏ ಅನ್ನು ಪ್ರತಿನಿಧಿಸಲು ಆಯ್ಕೆಯಾದರು. ಅವರು ೬ ಜೂನ್ ೨೦೧೯ ರಂದು ಐರ್ಲೆಂಡ್ ವುಲ್ವ್ಸ್ ವಿರುದ್ಧ ಸ್ಕಾಟ್ಲೆಂಡ್ ಏ ಗಾಗಿ ತಮ್ಮ ಲಿಸ್ಟ್ ಏ ಚೊಚ್ಚಲ ಪಂದ್ಯವನ್ನು ಆಡಿದರು ಅವರು ೯ ಜೂನ್ ೨೦೧೯ ರಂದು ಐರ್ಲೆಂಡ್ ವುಲ್ವ್ಸ್ ವಿರುದ್ಧ ಸ್ಕಾಟ್ಲೆಂಡ್ ಏ ಗಾಗಿ ತಮ್ಮ ಟ್ವೆಂಟಿ೨೦ ಚೊಚ್ಚಲ ಪಂದ್ಯವನ್ನು ಆಡಿದರು ಸೆಪ್ಟೆಂಬರ್ ೨೦೨೧ ರಲ್ಲಿ, ಜಿಂಬಾಬ್ವೆ ವಿರುದ್ಧದ ಅವರ ಸರಣಿಗಾಗಿ ಸ್ಕಾಟ್ಲೆಂಡ್‌ನ ಟ್ವೆಂಟಿ೨೦ ಇಂಟರ್ನ್ಯಾಷನಲ್ (T20I) ತಂಡದಲ್ಲಿ ಗ್ರೀವ್ಸ್ ಅವರನ್ನು ಹೆಸರಿಸಲಾಯಿತು, ಮತ್ತು ೨೦೨೧ ಬೇಸಿಗೆ T20 ಬ್ಯಾಷ್ ಮತ್ತು ೨೦೨೧ ಐಸಿಸಿ ಪುರುಷರ ಟಿ೨೦ ವಿಶ್ವಕಪ್‌ಗಾಗಿ ಸ್ಕಾಟ್ಲೆಂಡ್‌ನ ತಂಡಗಳಲ್ಲಿ ಹೆಸರಿಸಲಾಯಿತು. ಅವರು ೮ ಅಕ್ಟೋಬರ್ ೨೦೨೧ ರಂದು ಪಪುವಾ ನ್ಯೂಗಿನಿ ವಿರುದ್ಧ ಸ್ಕಾಟ್ಲೆಂಡ್‌ಗಾಗಿ ತಮ್ಮ ಟಿ೨೦ಐ ಚೊಚ್ಚಲ ಪಂದ್ಯವನ್ನು ಮಾಡಿದರು. ೨೦೨೧ ಐಸಿಸಿ ಪುರುಷರ ಟಿ೨೦ ವಿಶ್ವಕಪ್‌ನ ಸ್ಕಾಟ್ಲೆಂಡ್‌ನ ಆರಂಭಿಕ ಪಂದ್ಯದಲ್ಲಿ, ಗ್ರೀವ್ಸ್ ಬಾಂಗ್ಲಾದೇಶದ ವಿರುದ್ಧ ಪಂದ್ಯಶ್ರೇಷ್ಠ ಪ್ರದರ್ಶನವನ್ನು ಹೊಂದಿದ್ದರು. ಮೇ ೨೦೨೨ ರಲ್ಲಿ, ೨೦೨೨ ಅಮೇರಿಕ ಸಂಯುಕ್ತ ಸಂಸ್ಥಾನ ತ್ರಿ-ರಾಷ್ಟ್ರ ಸರಣಿಗಾಗಿ ಸ್ಕಾಟ್ಲೆಂಡ್‌ನ ಏಕದಿನ ಅಂತರರಾಷ್ಟ್ರೀಯ (ODI) ತಂಡದಲ್ಲಿ ಗ್ರೀವ್ಸ್ ಹೆಸರಿಸಲಾಯಿತು. ಅವರು ೨೯ ಮೇ ೨೦೨೨ ರಂದು ಅಮೇರಿಕ ಸಂಯುಕ್ತ ಸಂಸ್ಥಾನ ವಿರುದ್ಧ ಸ್ಕಾಟ್ಲೆಂಡ್‌ಗಾಗಿ ತಮ್ಮ ODI ಚೊಚ್ಚಲ ಪಂದ್ಯವನ್ನು ಮಾಡಿದರು. ಉಲ್ಲೇಖಗಳು ವರ್ಗ:ಜೀವಂತ ವ್ಯಕ್ತಿಗಳು ವರ್ಗ:೧೯೯೦ ಜನನ
ಕಾಡುಹೊಗೆಸೊಪ್ಪು
https://kn.wikipedia.org/wiki/ಕಾಡುಹೊಗೆಸೊಪ್ಪು
ಕಾಡುಹೊಗೆಸೊಪ್ಪು ಎಂಬುದು ಹೂಬಿಡುವ ಸಸ್ಯಗಳ ಒಂದು ಜಾತಿಯಾಗಿದ್ದು, ಇದು ಮುಖ್ಯವಾಗಿ ಭಾರತ ಮತ್ತು ಶ್ರೀಲಂಕಾ ಹರಡಿದೆ. ಎಲೆಗಳು ತಂಬಾಕು ಎಲೆಗಳನ್ನು ಹೋಲುವುದರಿಂದ ಇದನ್ನು ಸಾಮಾನ್ಯವಾಗಿ ಕಾಡು ತಂಬಾಕು ಎಂದು ಕರೆಯಲಾಗುತ್ತದೆ. ಇದು ವಿಷಕಾರಿ ಸಸ್ಯವಾಗಿದೆ. ಇದರ ಸಸ್ಯ ಶಾಸ್ತ್ರೀಯ ಹೆಸರು ಲೋಬೆಲಿಯಾ ನಿಕೋಟಿಯಾನಿಫೋಲಿಯಾ ಎಂದಾಗಿದೆ. ಹೂಬಿಡುವಿಕೆ. ಡಿಸೆಂಬರ್. ಔಷಧೀಯ ಉಪಯೋಗಗಳು ಬ್ರಾಂಕೈಟಿಸ್, ಆಸ್ತಮಾ ಮತ್ತು ಕೀಟಗಳು ಮತ್ತು ಚೇಳುಗಳ ಕಡಿತಕ್ಕೆ ಚಿಕಿತ್ಸೆ ನೀಡಲು ಮತ್ತು ವಾಕರಿಕೆ ಮತ್ತು ವಾಂತಿಯನ್ನು ಉತ್ತೇಜಿಸಲು ಲೋಬೆಲಿಯಾ ನಿಕೋಟಿಯಾನಿಫೋಲಿಯಾ ವನ್ನು ಭಾರತದಲ್ಲಿ ಬಳಸಲಾಗುತ್ತದೆ. ಸಾಮಾನ್ಯ ಹೆಸರುಗಳು ಇಂಗ್ಲಿಷ್ಃ ವೈಲ್ಡ್ ತಂಬಾಕು ಹಿಂದಿಃ ಧವಲ್ ಧವಲ್, ನರಸಲ್ ನರಸಲಾ ಮರಾಠಿಃ ಧವಲ್, ರಾನ್ ತಂಬಾಕು ರಾನ್ ತಂಬಾಕು Tತಮಿಳು: ಅಪ್ಪರಿಚೇದಿ, ಕಟ್ಟುಪುಕೈಯಿಲೇ ಕಟ್ಟು-ಪಿ-ಪುಕೈಯಿಲೇ ಮಲಯಾಳಂಃ ಕಟ್ಟುಪೋಕಲಾ, ಕಾಟಕಿಲ್ ಕಾಟ್ ಪುಕಾಯಿಲ ತೆಲುಗುಃ ಆದಿಪೋಗಕು ಕನ್ನಡಃ ಕಡಹೋಗೆಸೋಪ್ಪು, ಕಡಬ ಕಾಡು ತಂಬಾಕು ಬೆಂಗಾಲಿಃ ಬದನಾಲ ಗುಜರಾತಿಃ ನಳಿ ಸಿಂಹಳಃ ವಾಲ್ ಡಂಕೋಲಾ ಕೊಂಕಣಿಃ ಬಕ್ನಲ್ ಸಂಸ್ಕೃತಃ ಮೃತ್ಯುಪುಷ್ಪ, ಮೃದುಮಧು, ಮಹಾನಾಲ, ಸೂರದ್ರುಮ, ಸುರದ್ರುಮ ಬೆಂಗಾಲಿಃ ನಾಲ್ ನಾಲಾ, ಬದನಾಲ್ ಮಿಜೋಃ ಬೇರಾವ್ಚಲ್ ಉಲ್ಲೇಖಗಳು http://www.flowersofindia.net/catalog/slides/Wild%20Tobacco.html http://indiabiodiversity.org/species/show/230301 http://www.theplantlist.org/tpl/record/kew-353650 http://dh-web.org/place.names/bot2sinhala.html#L http://www.indianaturewatch.net/displayimage.php?id=299787 ವರ್ಗ:ಸಸ್ಯಗಳು
ಬಾಬಾ ಯೋಗೇಂದ್ರ
https://kn.wikipedia.org/wiki/ಬಾಬಾ_ಯೋಗೇಂದ್ರ
ಬಾಬಾ ಯೋಗೇಂದ್ರ (೭ ಜನವರಿ ೧೯೨೪ - ೧೦ ಜೂನ್ ೨೦೨೨) ಒಬ್ಬ ಭಾರತೀಯ ಕಲಾವಿದ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದ ಪ್ರಚಾರಕ್ (ಪ್ರಚಾರಕ) ಮತ್ತು ಸಂಸ್ಕಾರ ಭಾರತಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರಿಗೆ ೨೦೧೮ ರಲ್ಲಿ ಕಲಾ ಕ್ಷೇತ್ರದ ವಿಭಾಗದಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಆರಂಭಿಕ ಜೀವನ ಬಾಬಾ ಯೋಗೇಂದ್ರ ಅವರು ೭ ಜನವರಿ ೧೯೨೪ ರಂದು ಬ್ರಿಟಿಷ್ ಇಂಡಿಯಾದ ಯುನೈಟೆಡ್ ಪ್ರಾವಿನ್ಸ್‌ನ, ಬಸ್ತಿ ಜಿಲ್ಲೆಯ ಗಾಂಧಿನಗರದಲ್ಲಿ (ಈಗಿನ ಉತ್ತರ ಪ್ರದೇಶದಲ್ಲಿ ) ಜನಿಸಿದರು. ಅವರು ಗೋರಖ್‌ಪುರದಲ್ಲಿ ಶಿಕ್ಷಣ ಪಡೆದರು. ಸಂಸ್ಕಾರ ಭಾರತಿ ಜೊತೆಗಿನ ಒಡನಾಟ ಯೋಗೇಂದ್ರ ಗೋರಖ್‌ಪುರ, ಅಲಹಾಬಾದ್, ಬರೇಲಿ, ಬುದೌನ್ ಮತ್ತು ಸೀತಾಪುರ್‌ನಲ್ಲಿ ಆರ್‌ಎಸ್‌ಎಸ್ ನಲ್ಲಿ ಪ್ರಚಾರಕರಾಗಿ ಕೆಲಸ ಮಾಡಿದರು. ೧೯೮೧ ರಲ್ಲಿ ಆರ್‌ಎಸ್‌ಎಸ್ ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಸಂಸ್ಕಾರ ಭಾರತಿ ಎಂಬ ಘಟಕವನ್ನು ರಚಿಸಿತು. ಯೋಗೇಂದ್ರ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಅವರು ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರಲ್ಲಿ (ಪ್ರಚಾರಕರು) ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೂಂಡರು. ಪ್ರಶಸ್ತಿಗಳು ೨೦೧೮ ರಲ್ಲಿ, ಭಾರತ ಸರ್ಕಾರವು ಅವರಿಗೆ ಕಲೆಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು, ಇದು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಸಾವು ೧೧ ಮೇ ೨೦೨೨ ರಂದು, ಯೋಗೇಂದ್ರ ಅವರು ಗೋರಖ್‌ಪುರದಲ್ಲಿದ್ದಾಗ ಅವರ ಹೃದಯ ಸ್ತಂಭನಕ್ಕೆ ಒಳಗಾಯಿತು. ಮರುದಿನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಯಿತು. ಮೇ ೨೭ ರಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಜೂನ್ ೧೦ ರಂದು ಅವರು ಆಸ್ಪತ್ರೆಯಲ್ಲಿ ನಿಧನರಾದರು. ಉಲ್ಲೇಖಗಳು ವರ್ಗ:ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಚಾರಕರು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಅಸ್ಗರಿ ಬಾಯಿ
https://kn.wikipedia.org/wiki/ಅಸ್ಗರಿ_ಬಾಯಿ
ಅಸ್ಗರಿ ಬಾಯಿ (೨೫ ಆಗಸ್ಟ್ ೧೯೧೮ – ೯ ಆಗಸ್ಟ್ ೨೦೦೬) ಒಬ್ಬ ಭಾರತೀಯ ದ್ರುಪದ್ ಗಾಯಕಿ. ಅವರು ಪದ್ಮಶ್ರೀ, ತಾನ್ಸೇನ್ ಸಮ್ಮಾನ್, ಅಕಾಡೆಮಿ ಸಮ್ಮಾನ್ ಮತ್ತು ಶಿಖರ್ ಸಮ್ಮಾನ್ ಪುರಸ್ಕೃತರಾಗಿದ್ದರು. ಅಸ್ಗರಿ ಬಾಯಿ ಛತ್ತರ್‌ಪುರದ ಬಿಜಾವರ್‌ನಲ್ಲಿ ಜನಿಸಿದರು. ಇವರು ತನ್ನ ತಾಯಿ ನಜೀರಾ ಬೇಗಂ ಜೊತೆ ಟೀಕಾಮ್‌ಗಢಕ್ಕೆ ಬಂದಿದ್ದಳು. ಅವರು ೯ ಆಗಸ್ಟ್ ೨೦೦೬ ರಂದು ನಿಧನರಾದರು. ಪ್ರೀತಿ ಚಂದ್ರಿಯಾನಿ ಮತ್ತು ಬ್ರಹ್ಮಾನಂದ್ ಎಸ್. ಸಿಂಗ್ ನಿರ್ದೇಶಿಸಿದ ಅಶ್ಗರಿ ಬಾಯಿ (೧೯೯೮) ಎಂಬ ಭಾರತೀಯ ಸಾಕ್ಷ್ಯಚಿತ್ರವು ದ್ರುಪದ್‌ ಕಲೆಯ ಪ್ರತಿಪಾದಕನಾಗಿ ಇವರ ಜೀವನವನ್ನು ಅನ್ವೇಷಿಸುತ್ತದೆ. ಉಲ್ಲೇಖಗಳು ಮೂಲಗಳು ಬುಂದೇಲಖಂಡ ದರ್ಶನ್ ಡಾಟ್ ಕಾಮ್ - ಬುಂದೇಲಖಂಡ್ ಕಿ ವಿಸ್ತೃತ ಜಾನಕರಿ ದ್ರುಪದ್ ಗಾಯಕಿ ಅಸ್ಗರಿ ಬಾಯಿ ನಿಧನ ದ್ರುಪದ ಕಲಾವಿದೆ ಅಸ್ಗರಿ ಬಾಯಿ ಆಸ್ಪತ್ರೆಗೆ ದಾಖಲು ಮಗನ ಭಯದಿಂದ ಪ್ರಶಸ್ತಿ ವಾಪಸು ವರ್ಗ:೨೦೦೬ ನಿಧನ ವರ್ಗ:೧೯೧೮ ಜನನ ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಅಬ್ದುಲ್ ಗಫುರ್ ಖತ್ರಿ
https://kn.wikipedia.org/wiki/ಅಬ್ದುಲ್_ಗಫುರ್_ಖತ್ರಿ
ಮಾಸ್ಟರ್, ಅಬ್ದುಲ್ ಗಫೂರ್ ಖತ್ರಿ ಭಾರತದ ಗುಜರಾತ್‌ನ ಕಚ್ ಜಿಲ್ಲೆಯ ನಿರೋನಾ ಗ್ರಾಮದ ರೋಗನ್ ಕಲಾವಿದ. ಜೀವನಚರಿತ್ರೆ ಅಬ್ದುಲ್ಗಫುರ್ ಖತ್ರಿ ಅವರು ಕಚ್‌ನ ನಿರೋನಾ ಗ್ರಾಮದ ರೋಗನ್ ಕಲಾವಿದರ ಕುಟುಂಬದಲ್ಲಿ ಜನಿಸಿದರು. ಇವರದು ರೋಗನ್ ಕಲಾವಿದರ ಕೊನೆಯ ಕುಟುಂಬವಾಗಿತ್ತು. ೧೯೮೦ ರ ದಶಕದಲ್ಲಿ, ಅಬ್ದುಲ್ಗಫುರ್ ಖತ್ರಿ ನಿರೋನಾ ಗ್ರಾಮವನ್ನು ತೊರೆದು ಅಹಮದಾಬಾದ್ ಮತ್ತು ನಂತರ ಮುಂಬೈಗೆ ಉದ್ಯೋಗಕ್ಕಾಗಿ ತೆರಳಿದರು. ಎರಡು ವರ್ಷಗಳ ನಂತರ, ಅವರು ಹಿಂದಿರುಗಿ ತನ್ನ ತಂದೆ ಮತ್ತು ಅಜ್ಜನಿಂದ ರೋಗನ್ ಕಲೆಯನ್ನು ಕಲಿತರು . ಇವರ ಪ್ರಯತ್ನದಿಂದಾಗಿ ರೋಗನ್ ಚಿತ್ರಕಲೆ ಪುನರುತ್ಥಾನ ಕಂಡಿತು. ಇದರ ಜೊತೆಗೆ, ಅಬ್ದುಲ್ಗಫುರ್ ಖತ್ರಿ ಮತ್ತು ಅವರ ಕುಟುಂಬವು ಈ ಹಿಂದೆ ಪುರುಷರಿಂದ ಮಾತ್ರ ಅಭ್ಯಾಸ ಮಾಡುತ್ತಿದ್ದ ಕಲೆಯನ್ನು ಮಹಿಳೆಯರಿಗೂ ಸಹ ತರಬೇತಿ ನೀಡಲು ಪ್ರಾರಂಭಿಸಿದರು. ೨೦೧೪ ರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾದ ಶ್ವೇತಭವನಕ್ಕೆ ಭೇಟಿ ನೀಡಿದ್ದಾಗ ಅಧ್ಯಕ್ಷ ಒಬಾಮಾ ಅವರಿಗೆ ಎರಡು ರೋಗನ್ ಪೇಂಟಿಂಗ್‌ಗಳನ್ನು ನೀಡಿದರು. ಅದರಲ್ಲಿ ಟ್ರೀ ಆಫ್ ಲೈಫ್ ಸೇರಿದಂತೆ, ಅಬ್ದುಲ್‌ಗಫೂರ್ ಖತ್ರಿ ಮತ್ತು ಅವರ ಕಿರಿಯ ಸಹೋದರ ಸುಮರ್ ಖತ್ರಿ ಅವರು ಚಿತ್ರಿಸಿದ್ದಾಗಿತ್ತು. ಪ್ರಶಸ್ತಿಗಳು ಅಬ್ದುಲ್ಗಫುರ್ ಖತ್ರಿ ಅವರಿಗೆ ೧೯೮೮ ರಲ್ಲಿ ನ್ಯಾಷನಲ್ ಮೆರಿಟ್ ಸರ್ಟಿಫಿಕೇಟ್ , ೧೯೮೯ ರಲ್ಲಿ ರಾಜ್ಯ ಪ್ರಶಸ್ತಿ, ೧೯೯೭ ರಲ್ಲಿ ರಾಷ್ಟ್ರೀಯ ಪ್ರಶಸ್ತಿ, Sharma, Ritu (4 February 2019). "The 6 Padma". The Indian Express. Retrieved 19 April 2019. ಮತ್ತು ೨೦೧೩ ರಲ್ಲಿ ಗುಜರಾತಿನ ಮುಖ್ಯಮಂತ್ರಿ ಅವರಿಂದ ರಾಜ್ಯ ಪ್ರಮಾಣಪತ್ರವನ್ನು ನೀಡಲಾಯಿತು. ಅವರಿಗೆ ೨೦೧೯ ರಲ್ಲಿ ಭಾರತ ಸರ್ಕಾರದಿಂದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ, ಮತ್ತು ೨೦೨೧ ರಲ್ಲಿ ಗುಜರಾತ್ ಪ್ರವಾಸೋದ್ಯಮ ಮತ್ತು ಟ್ರಾವೆಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಯಿತು. ಉಲ್ಲೇಖಗಳು ಬಾಹ್ಯ ಕೊಂಡಿಗಳು ಅಬ್ದುಲ್ ಗಫೂರ್ ಖತ್ರಿ ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಆಸ್ಟ್ರೇಲಿಯಾದಲ್ಲಿ ಹವಾಮಾನ ಬದಲಾವಣೆ
https://kn.wikipedia.org/wiki/ಆಸ್ಟ್ರೇಲಿಯಾದಲ್ಲಿ_ಹವಾಮಾನ_ಬದಲಾವಣೆ
thumb|503x503px|ಹವಾಮಾನ ಬದಲಾವಣೆಯು ಕಾಡ್ಗಿಚ್ಚುಗಳ ಆವರ್ತನ ಮತ್ತು ಗಾತ್ರವನ್ನು ಹೆಚ್ಚಿಸುತ್ತಿದೆ. ಇದು 2019-20 ಆಸ್ಟ್ರೇಲಿಯನ್ ಕಾಡ್ಗಿಚ್ಚುಗಳ ಋತುವಿನಿಂದ ಸಾಕ್ಷಿಯಾಗಿದೆ. 21 ನೇ ಶತಮಾನದ ಆರಂಭದಿಂದಲೂ ಆಸ್ಟ್ರೇಲಿಯಾದಲ್ಲಿ ಹವಾಮಾನ ಬದಲಾವಣೆ ಒಂದು ನಿರ್ಣಾಯಕ ಸಮಸ್ಯೆಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಆಸ್ಟ್ರೇಲಿಯಾದಲ್ಲಿ ಹೆಚ್ಚು ಬಿಸಿಯ ವಾತಾವರಣ, ತೀವ್ರವಾದ ಶಾಖ, ಕಾಡ್ಗಿಚ್ಚು, ಬರಗಾಲ ಮತ್ತು ಪ್ರವಾಹವನ್ನು ಒಳಗೊಂಡಿದೆ. ಹವಾಮಾನ ಸಮಸ್ಯೆಗಳಲ್ಲಿ ಕಾಡ್ಗಿಚ್ಚು, ಶಾಖದ ಅಲೆಗಳು, ಚಂಡಮಾರುತ, ಏರುತ್ತಿರುವ ಸಮುದ್ರ ಮಟ್ಟ ಹಾಗೂ ಸವೆತವನ್ನು ಒಳಗೊಂಡಿದೆ. 20ನೇ ಶತಮಾನದ ಆರಂಭದಿಂದಲೂ, ಆಸ್ಟ್ರೇಲಿಯಾದಲ್ಲಿ ಸರಾಸರಿ ವಾರ್ಷಿಕ ತಾಪಮಾನದಲ್ಲಿ 1.4°C ಹೆಚ್ಚಳವನ್ನು ಕಂಡಿದೆ. ಕಳೆದ 5ವರ್ಷಗಳಿಗೆ ಹೋಲಿಸಿದರೆ ತಾಪಮಾನವು ಎರಡು ಪಟ್ಟು ಹೆಚ್ಚಾಗಿದೆ.  ಆಸ್ಟೇಲಿಯಾದಲ್ಲಿ ಕಂಡು ಬಂದ ಹವಾಮಾನ ಬದಲಾವಣೆಯ ಪರಿಣಾಮಗಳು ನೇರವಾಗಿ ಸರ್ಕಾರ ಮತ್ತು ಸಾರ್ವಜನಿಕರ ಗಮನವನ್ನು ಕೇಂದ್ರೀಕರಿಸಿವೆ ನೈಋತ್ಯ ಆಸ್ಟ್ರೇಲಿಯಾದಲ್ಲಿ 1970ರ ದಶಕದಿಂದ ಮಳೆ ಪ್ರಮಾಣವು ಶೇಕಡಾ 10 ರಿಂದ 20ರಷ್ಟುಕಡಿಮೆಯಾಗಿದೆ, ಆದರೆ ಆಗ್ನೇಯ ಆಸ್ಟ್ರೇಲಿಯಾವು 1990ರ ದಶಕದಿಂದ ಮಧ್ಯಮ ಪ್ರಮಾಣದ ಕುಸಿತವನ್ನು ಅನುಭವಿಸಿದೆ . ಮಳೆ ಹೆಚ್ಚು ಮತ್ತು ವಿರಳವಾಗುವ ನಿರೀಕ್ಷೆಯ ಜೊತೆಗೆ ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಆಸ್ಟ್ರೇಲಿಯಾದ ವಾರ್ಷಿಕ ಸರಾಸರಿ ತಾಪಮಾನವು 2030ರ ವೇಳೆಗೆ 1990ರ ಮಟ್ಟಕ್ಕಿಂತ 0.4–2.0 ಡಿಗ್ರಿ ಸೆಲ್ಸಿಯಸ್ ಮತ್ತು 2070ರ ವೇಳೆಗೆ 1ರಿಂದ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ನಿರೀಕ್ಷೆಯಿದೆ.  ಈ ಸಮಯದಲ್ಲಿ ನೈಋತ್ಯ ಮತ್ತು ಆಗ್ನೇಯ ಆಸ್ಟ್ರೇಲಿಯಾದಲ್ಲಿ ಸರಾಸರಿ ಮಳೆಯು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ ಹಾಗೂ ವಾಯುವ್ಯ ಪ್ರದೇಶಗಳು ಮಳೆಯ ಹೆಚ್ಚಳವನ್ನು ಅನುಭವಿಸುವ ನೀರೀಕ್ಷೆಯಿದೆ. ಹವಾಮಾನ ಬದಲಾವಣೆಯು ಖಂಡದ ಪರಿಸರ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದೆ. ವ್ಯಾಪಕವಾದ ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳು ಮತ್ತು ಈಗಾಗಲೇ ಬೆಚ್ಚಗಿನ ಹವಾಮಾನ, ಹೆಚ್ಚಿನ ವಾರ್ಷಿಕ ಮಳೆಯ ವ್ಯತ್ಯಾಸದಿಂದಾಗಿ ಮುಂದಿನ 50 ರಿಂದ 100 ವರ್ಷಗಳವರೆಗೆ ಯೋಜಿಸಲಾದ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳಿಗೆ ಆಸ್ಟ್ರೇಲಿಯಾ ಗುರಿಯಾಗುತ್ತದೆ. ಖಂಡದ ಹೆಚ್ಚಿನ ಬೆಂಕಿಯ ಅಪಾಯವು ತಾಪಮಾನ ಮತ್ತು ಹವಾಮಾನದಲ್ಲಿನ ಬದಲಾವಣೆಗಳಿಗೆ ಈ ಒಳಗಾಗುವಿಕೆಯನ್ನು ಹೆಚ್ಚಿಸುತ್ತದೆ. ಏತನ್ಮಧ್ಯೆ, ಆಸ್ಟ್ರೇಲಿಯಾದ ಕರಾವಳಿ ಪ್ರದೇಶಗಳು ಜಾಗತಿಕ ಸಮುದ್ರ ಮಟ್ಟದಲ್ಲಿನ ಅಂದಾಜು 8-88 ಸೆಂ. ಮೀ. ಹೆಚ್ಚಳದಿಂದ ಸವೆತ ಮತ್ತು ಪ್ರವಾಹವನ್ನು ಅನುಭವಿಸುತ್ತವೆ.  ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಮತ್ತು ಅನೇಕ ಪ್ರಾಣಿ ಪ್ರಭೇದಗಳಂತಹ ಪರಿಸರ ವ್ಯವಸ್ಥೆಗಳು ಸಹ ಅಪಾಯದಲ್ಲಿದೆ.. ಹವಾಮಾನ ಬದಲಾವಣೆಯು ಆಸ್ಟ್ರೇಲಿಯಾದ ಆರ್ಥಿಕತೆ, ಕೃಷಿ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ. ನಿರೀಕ್ಷಿತ ಪರಿಣಾಮಗಳಲ್ಲಿ ಹೆಚ್ಚು ತೀವ್ರವಾದ ಪ್ರವಾಹಗಳು, ಬರಗಾಲಗಳು ಮತ್ತು ಚಂಡಮಾರುತಗಳು ಸೇರಿವೆ. ಇದಲ್ಲದೆ, ಹೆಚ್ಚುತ್ತಿರುವ ಸಮುದ್ರ ಮಟ್ಟದ ಅಪಾಯದಲ್ಲಿರುವ ಕರಾವಳಿ ಪ್ರದೇಶಗಳಲ್ಲಿ ಆಸ್ಟ್ರೇಲಿಯಾದ ಜನಸಂಖ್ಯೆಯು ಹೆಚ್ಚು ಕೇಂದ್ರೀಕೃತವಾಗಿದೆ ಮತ್ತು ನೀರಿನ ಪೂರೈಕೆ ಮೇಲೆ ಅಸ್ತಿತ್ವದಲ್ಲಿರುವ ಒತ್ತಡಗಳು ಉಲ್ಬಣಗೊಳ್ಳುತ್ತವೆ. ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಸ್ಥಳೀಯ ಆಸ್ಟ್ರೇಲಿಯನ್ನರು ಒಡ್ಡಿಕೊಳ್ಳುವುದು ವಸಾಹತುಶಾಹಿ ಮತ್ತು ವಸಾಹತುಶಾಸಿ ನಂತರದ ಅಂಚಿನಲ್ಲಿರುವ ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ ಅನನುಕೂಲಗಳಿಂದ ಉಲ್ಬಣಗೊಂಡಿದೆ. ಹವಾಮಾನ ಬದಲಾವಣೆಗಳಿಂದ ಹೆಚ್ಚು ಬಾಧಿತವಾದ ಸಮುದಾಯಗಳು ಉತ್ತರದಲ್ಲಿರುವ ಸಮುದಾಯಗಳಾಗಿವೆ, ಅಲ್ಲಿ ಮೂಲನಿವಾಸಿಗಳು ಮತ್ತು ಟೊರೆಸ್ ಜಲಸಂಧಿ ದ್ವೀಪವಾಸಿಗಳು ಜನಸಂಖ್ಯೆಯ 30% ರಷ್ಟಿದ್ದಾರೆ.Zander, Kerstin K.; Petheram, Lisa; Garnett, Stephen T. (1 June 2013). "Stay or leave? Potential climate change adaptation strategies among Aboriginal people in coastal communities in northern Australia". Natural Hazards. 67 (2): 591–609. Bibcode:2013NatHa..67..591Z. doi:10.1007/s11069-013-0591-4. ISSN 1573-0840. S2CID 128543022. ಕರಾವಳಿ ಉತ್ತರದಲ್ಲಿರುವ ಮೂಲನಿವಾಸಿಗಳು ಮತ್ತು ಟೊರೆಸ್ ಜಲಸಂಧಿ ದ್ವೀಪವಾಸಿ ಸಮುದಾಯಗಳು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಮತ್ತು ಆಹಾರ, ಸಂಸ್ಕೃತಿ ಮತ್ತು ಆರೋಗ್ಯಕ್ಕಾಗಿ ಸಾಂಪ್ರದಾಯಿಕ ಭೂಮಿಯನ್ನು ಅವಲಂಬಿಸಿರುವುದರಿಂದ ಅತ್ಯಂತ ಅನನುಕೂಲತೆಯನ್ನು ಅನುಭವಿಸುತ್ತಿವೆ. ಇದು ಈ ಪ್ರದೇಶಗಳಲ್ಲಿನ ಅನೇಕ ಸಮುದಾಯದ ಸದಸ್ಯರಿಗೆ, "ನಾವು ಅಲ್ಲಿಯೇ ಉಳಿಯಬೇಕೇ ಅಥವಾ ದೂರ ಹೋಗಬೇಕೇ?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.[4] ಹವಾಮಾನ ಬದಲಾವಣೆಗೆ ಆಸ್ಟ್ರೇಲಿಯಾ ಸಹ ಕೊಡುಗೆ ನೀಡುತ್ತಿದ್ದು, ಅದರ ತಲಾ ಹಸಿರುಮನೆ ಅನಿಲ ಹೊರಸೂಸುವಿಕೆ ವಿಶ್ವದ ಸರಾಸರಿಗಿಂತ ಹೆಚ್ಚಾಗಿದೆ. ದೇಶವು ಕಲ್ಲಿದ್ದಲು ಮತ್ತು ಇತರ ಪಳೆಯುಳಿಕೆ ಇಂಧನಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಆದಾಗ್ಯೂ ನವೀಕರಿಸಬಹುದಾದ ಇಂಧನ ವ್ಯಾಪ್ತಿಯು ಹೆಚ್ಚುತ್ತಿದೆ. ರಾಷ್ಟ್ರೀಯ ತಗ್ಗಿಸುವಿಕೆ ಪ್ರಯತ್ನಗಳು ಪ್ಯಾರಿಸ್ ಒಪ್ಪಂದ ಅಡಿಯಲ್ಲಿ 2050 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಬದ್ಧತೆಯನ್ನು ಒಳಗೊಂಡಿವೆ, ಆದಾಗ್ಯೂ ಆಸ್ಟ್ರೇಲಿಯಾ ತನ್ನ ಹವಾಮಾನ ಗುರಿಗಳು ಮತ್ತು ಅನುಷ್ಠಾನಕ್ಕಾಗಿ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ ಮತ್ತು ಇತರ ಅಂತರರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಪದೇ ಪದೇ ಕಳಪೆ ಸ್ಥಾನದಲ್ಲಿದೆ. ಅಳವಡಿಕೆಯನ್ನು ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಮಾಡಬಹುದು ಮತ್ತು 2007ರ ಗಾರ್ನಾಟ್ ವಿಮರ್ಶೆ ಆಸ್ಟ್ರೇಲಿಯಾದ ಆದ್ಯತೆಯೆಂದು ಗುರುತಿಸಲಾಗಿದೆ. 2000ದ ದಶಕದಿಂದ ಆಸ್ಟ್ರೇಲಿಯಾದ ರಾಜಕೀಯ ಹವಾಮಾನ ಬದಲಾವಣೆಯು ವಿಭಜನೆಯ ಅಥವಾ ರಾಜಕೀಯಗೊಳಿಸಲಾದ ಸಮಸ್ಯೆಯಾಗಿದ್ದು, ಇಂಗಾಲದ ಬೆಲೆಯಂತಹ ತಗ್ಗಿಸುವ ನೀತಿಗಳನ್ನು ಜಾರಿಗೆ ತರಲು ಮತ್ತು ರದ್ದುಗೊಳಿಸಲು ಸತತ ಸರ್ಕಾರಗಳಿಗೆ ಕೊಡುಗೆ ನೀಡುತ್ತಿದೆ. ಆಸ್ಟ್ರೇಲಿಯಾದ ಕೆಲವು ಮಾಧ್ಯಮಗಳು ಹವಾಮಾನದ ಬಗ್ಗೆ ತಪ್ಪು ಮಾಹಿತಿ ಪ್ರಚಾರ ಮಾಡಿವೆ. ಈ ವಿಷಯವು ಆಸ್ಟ್ರೇಲಿಯಾದ ಇತಿಹಾಸದ ಕೆಲವು ಅತಿದೊಡ್ಡ ಪ್ರದರ್ಶನಗಳನ್ನು ಒಳಗೊಂಡಂತೆ ಹವಾಮಾನ ಬದಲಾವಣೆ ನೀತಿಗಳನ್ನು ಬೆಂಬಲಿಸಿ ಪ್ರತಿಭಟನೆ ಹುಟ್ಟುಹಾಕಿದೆ. ಹಸಿರುಮನೆ ಅನಿಲ ಹೊರಸೂಸುವಿಕೆ ತಾಪಮಾನ ಮತ್ತು ಹವಾಮಾನ ಬದಲಾವಣೆಗಳು 1885ರಿಂದ ಇಂದಿನವರೆಗೂ ಆಸ್ಟ್ರೇಲಿಯಾದ ವಾದ್ಯಗಳ ದಾಖಲೆಯು ಈ ಕೆಳಗಿನ ವಿಶಾಲ ಚಿತ್ರಣವನ್ನು ತೋರಿಸುತ್ತದೆಃ 1885ರಿಂದ 1898ರವರೆಗಿನ ಪರಿಸ್ಥಿತಿಗಳು ಸಾಮಾನ್ಯವಾಗಿ ಸಾಕಷ್ಟು ತೇವಾಂಶದಿಂದ ಕೂಡಿದ್ದವು, ಆದರೆ 1968ರ ನಂತರದ ಅವಧಿಗಿಂತ ಕಡಿಮೆ ಇದ್ದವು. ಈ ಯುಗದಲ್ಲಿ 1888 ಮತ್ತು 1897 ಮಾತ್ರ ಗಮನಾರ್ಹವಾಗಿ ಒಣ ವರ್ಷಗಳು. ಕೆಲವು ಹವಳದ ಕೋರ್ ದತ್ತಾಂಶಗಳು 1887 ಮತ್ತು 1890 ರೊಂದಿಗೆ, 1974 ರೊಂದಿಗೆ, ವಸಾಹತು ನಂತರ ಖಂಡದಾದ್ಯಂತದ ಅತ್ಯಂತ ಆರ್ದ್ರ ವರ್ಷಗಳು ಎಂದು ಸೂಚಿಸುತ್ತವೆಯಾದರೂ, ಆಲಿಸ್ ಸ್ಪ್ರಿಂಗ್ಸ್ ಮಳೆಯ ದತ್ತಾಂಶವು, ನಂತರ ಉತ್ತರ ಪ್ರಾಂತ್ಯ ಮತ್ತು ಪಶ್ಚಿಮ ಆಸ್ಟ್ರೇಲಿಯಾದ ಒಳಭಾಗವನ್ನು ಒಳಗೊಂಡಿರುವ ಏಕೈಕ ಪ್ರಮುಖ ನಿಲ್ದಾಣವಾಗಿದೆ, 1887 ಮತ್ತು 1890 ಒಟ್ಟಾರೆಯಾಗಿ 1974 ಅಥವಾ 2000 ರಂತೆ ತೇವವಾಗಿರಲಿಲ್ಲ ಎಂದು ಬಲವಾಗಿ ಸೂಚಿಸುತ್ತದೆ. ಆದಾಗ್ಯೂ, ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್ಲ್ಯಾಂಡ್ನಲ್ಲಿ, ವರ್ಷಗಳು 1886-1887 ಮತ್ತು 1889-1894 ನಿಜಕ್ಕೂ ಅಸಾಧಾರಣವಾಗಿ ತೇವವಾಗಿದ್ದವು. ಈ ಅವಧಿಯಲ್ಲಿನ ಭಾರೀ ಮಳೆಯು ಕುರಿಗಳ ಜನಸಂಖ್ಯೆಯ ಪ್ರಮುಖ ವಿಸ್ತರಣೆಯೊಂದಿಗೆ ಸಂಬಂಧಿಸಿದೆ ಮತ್ತು ಫೆಬ್ರವರಿ 1893ರಲ್ಲಿ ಸಂಭವಿಸಿದ ವಿನಾಶಕಾರಿ 1893ರ ಬ್ರಿಸ್ಬೇನ್ ಪ್ರವಾಹಕ್ಕೆ ಸಾಕ್ಷಿಯಾಯಿತು.Foley, J.C.; Droughts in Australia: review of records from earliest years of settlement to 1955; published 1957 by Australian Bureau of Meteorology 1899ರಿಂದ 1921ರವರೆಗೆ ಹವಾಮಾನದ ಒಣಗುವಿಕೆಯು ನಡೆಯಿತು, ಆದಾಗ್ಯೂ ಆರ್ದ್ರ ಎಲ್ ನಿನೊ ವರ್ಷಗಳ ಕೆಲವು ಅಡೆತಡೆಗಳೊಂದಿಗೆ, ವಿಶೇಷವಾಗಿ 1915ರಿಂದ 1918ರ ಆರಂಭದ ನಡುವೆ ಮತ್ತು [ID1] ರಲ್ಲಿ, ದಕ್ಷಿಣ ಒಳನಾಡಿನ ಗೋಧಿ ವಲಯವು ದಾಖಲೆಯಲ್ಲಿನ ಅತಿ ಹೆಚ್ಚು ಚಳಿಗಾಲದ ಮಳೆಯಿಂದ ತೇವಗೊಂಡಿತ್ತು. 1902 ಮತ್ತು 1905ರ ಎರಡು ಪ್ರಮುಖ ಎಲ್ ನಿನೊ ಘಟನೆಗಳು ಇಡೀ ಖಂಡದಾದ್ಯಂತ ಎರಡು ಅತ್ಯಂತ ಒಣ ವರ್ಷಗಳನ್ನು ಸೃಷ್ಟಿಸಿದವು, ಆದರೆ 1919ರಲ್ಲೂ ಗಿಪ್ಸ್ಲ್ಯಾಂಡ್ ಹೊರತುಪಡಿಸಿ ಪೂರ್ವದ ರಾಜ್ಯಗಳಲ್ಲಿ ಇದೇ ರೀತಿ ಒಣಗಿತ್ತು. 1922ರಿಂದ 1938ರ ಅವಧಿಯು ಅಸಾಧಾರಣವಾಗಿ ಶುಷ್ಕವಾಗಿತ್ತು, ಕೇವಲ 1930ರಲ್ಲಿ ಆಸ್ಟ್ರೇಲಿಯಾದಾದ್ಯಂತದ ಮಳೆಯು ದೀರ್ಘಾವಧಿಯ ಸರಾಸರಿಗಿಂತ ಹೆಚ್ಚಾಗಿತ್ತು ಮತ್ತು ಈ ಹದಿನೇಳು ವರ್ಷಗಳಲ್ಲಿ ಆಸ್ಟ್ರೇಲಿಯಾದಾದ್ಯಂತ ಸರಾಸರಿ ಮಳೆಯು 1885ರ ನಂತರದ ಇತರ ಅವಧಿಗಳಿಗಿಂತ 15ರಿಂದ 20 ಪ್ರತಿಶತದಷ್ಟು ಕಡಿಮೆಯಾಗಿತ್ತು. ಈ ಶುಷ್ಕ ಅವಧಿಯು ಕೆಲವು ಮೂಲಗಳಲ್ಲಿ ದಕ್ಷಿಣದ ಆಂದೋಲನ ದುರ್ಬಲಗೊಳ್ಳಲು ಮತ್ತು ಇತರರಲ್ಲಿ ಸಮುದ್ರದ ಮೇಲ್ಮೈ ತಾಪಮಾನ ಕಡಿಮೆಯಾಗಲು ಕಾರಣವಾಗಿದೆ. ಈ ಮೂರು ಅವಧಿಗಳಲ್ಲಿನ ತಾಪಮಾನವು ಸಾಮಾನ್ಯವಾಗಿ ಪ್ರಸ್ತುತಕ್ಕಿಂತಲೂ ತಂಪಾಗಿತ್ತು, 1925ರಲ್ಲಿ 1910ರ ನಂತರದ ಯಾವುದೇ ವರ್ಷದ ಅತ್ಯಂತ ತಂಪಾದ ಕನಿಷ್ಠ ತಾಪಮಾನವನ್ನು ಹೊಂದಿತ್ತು. ಆದಾಗ್ಯೂ, 1920 ಮತ್ತು 1930ರ ಒಣ ವರ್ಷಗಳು ಸಹ ಆಗಾಗ್ಗೆ ಸಾಕಷ್ಟು ಬೆಚ್ಚಗಿದ್ದವು, 1928 ಮತ್ತು 1938ರಲ್ಲಿ ನಿರ್ದಿಷ್ಟವಾಗಿ ಹೆಚ್ಚಿನ ಗರಿಷ್ಠ ಮಟ್ಟವನ್ನು ಹೊಂದಿದ್ದವು. 1939ರಿಂದ 1967ರ ಅವಧಿಯು ಮಳೆಯ ಹೆಚ್ಚಳದೊಂದಿಗೆ ಪ್ರಾರಂಭವಾಯಿತುಃ 1939,1941 ಮತ್ತು 1942,1921ರ ನಂತರ ಸಾಪೇಕ್ಷವಾಗಿ ಒಟ್ಟಿಗೆ ವರ್ಷಗಳನ್ನು ಕಳೆದ ಮೊದಲ ಗುಂಪುಗಳಾಗಿವೆ. 1943ರಿಂದ 1946ರವರೆಗೆ, ಸಾಮಾನ್ಯವಾಗಿ ಒಣ ಪರಿಸ್ಥಿತಿಗಳು ಮರಳಿ ಬಂದವು ಮತ್ತು 1947ರ ನಂತರದ ಎರಡು ದಶಕಗಳಲ್ಲಿ ಮಳೆಯ ಏರಿಳಿತಗಳು ಕಂಡುಬಂದವು. 1950, 1955 ಮತ್ತು 1956 ಹೊರತುಪಡಿಸಿ ಪಶ್ಚಿಮ ಆಸ್ಟ್ರೇಲಿಯಾದ ಶುಷ್ಕ ಮತ್ತು ಗೋಧಿ ಬೆಲ್ಟ್ ಪ್ರದೇಶಗಳಲ್ಲಿ 1950,1955 ಮತ್ತು 1956 ಅಸಾಧಾರಣವಾಗಿ ತೇವವಾಗಿತ್ತು. 1950ರಲ್ಲಿ ಮಧ್ಯ ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್ಲ್ಯಾಂಡ್ ಹೆಚ್ಚಿನ ಭಾಗಗಳಲ್ಲಿ ಅಸಾಧಾರಣ ಮಳೆಯನ್ನು ಕಂಡಿತುಃ 1950ರಲ್ಲಿ ಡಬ್ಬೊ ಸುರಿದ 1,329 ಮಿಮೀ ಮಳೆಯು 350ರಿಂದ 400 ವರ್ಷಗಳ ನಡುವಿನ ಅವಧಿಯನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ, ಆದರೆ ಐರ್ ಸರೋವರವು ಮೂವತ್ತು ವರ್ಷಗಳಲ್ಲಿ ಮೊದಲ ಬಾರಿಗೆ ತುಂಬಿತು. ಇದಕ್ಕೆ ವ್ಯತಿರಿಕ್ತವಾಗಿ, 1951,1961 ಮತ್ತು 1965ರಲ್ಲಿ ಬಹಳ ಒಣಗಿದ್ದವು, 1961 ಮತ್ತು 1965ರಲ್ಲಿ ಸಂಪೂರ್ಣ ಮುಂಗಾರು ವೈಫಲ್ಯ ಮತ್ತು ಒಳನಾಡಿನಲ್ಲಿ ತೀವ್ರ ಬರಗಾಲವಿತ್ತು. ಈ ಅವಧಿಯಲ್ಲಿನ ತಾಪಮಾನವು ಆರಂಭದಲ್ಲಿ 20ನೇ ಶತಮಾನದ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿಯಿತು, 1949 ಮತ್ತು 1956 ವಿಶೇಷವಾಗಿ ತಂಪಾಗಿತ್ತು, ಆದರೆ ನಂತರ ಏರುತ್ತಿರುವ ಪ್ರವೃತ್ತಿಯು ಪ್ರಾರಂಭವಾಯಿತು, ಅದು ಇಂದಿನವರೆಗೂ ಕೆಲವು ಅಡೆತಡೆಗಳೊಂದಿಗೆ ಮುಂದುವರೆದಿದೆ. 1968ರಿಂದ ಆಸ್ಟ್ರೇಲಿಯಾದಲ್ಲಿ 1885ರಿಂದ 1967ರ ನಡುವಿನ ಮಳೆಗಿಂತ ಶೇಕಡ 15ರಷ್ಟು ಹೆಚ್ಚು ಮಳೆಯಾಗಿದೆ. 1973ರಿಂದ 1975ರವರೆಗಿನ ಮತ್ತು 1998ರಿಂದ 2001ರವರೆಗಿನ ಅತ್ಯಂತ ತೇವಾಂಶವುಳ್ಳ ಅವಧಿಗಳು, 1885ರಿಂದ ಖಂಡದ ಹದಿಮೂರು ತೇವಾಂಶಭರಿತ ವರ್ಷಗಳಲ್ಲಿ ಏಳು ವರ್ಷಗಳನ್ನು ಒಳಗೊಂಡಿವೆ. ರಾತ್ರಿಯ ಕನಿಷ್ಠ ತಾಪಮಾನವು, ವಿಶೇಷವಾಗಿ ಚಳಿಗಾಲದಲ್ಲಿ, 1960ರ ದಶಕಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ, 1973,1980,1988,1991,1998 ಮತ್ತು 2005 ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿವೆ. ಆಸ್ಟ್ರೇಲಿಯಾದಾದ್ಯಂತ ಹಿಮದ ಆವರ್ತನದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. .Fewer frosts. Bureau of Meteorology. ಬ್ಯೂರೋ ಆಫ್ ಮೆಟಿಯೊರಾಲಜಿಯ ಪ್ರಕಾರ, 2009ರಲ್ಲಿ ಆಸ್ಟ್ರೇಲಿಯಾದ ವಾರ್ಷಿಕ ಸರಾಸರಿ ಉಷ್ಣಾಂಶವು ಸರಾಸರಿಗಿಂತ 0.9°C ಹೆಚ್ಚಾಗಿದ್ದು, 1910ರಲ್ಲಿ ಉತ್ತಮ-ಗುಣಮಟ್ಟದ ದಾಖಲೆಗಳು ಪ್ರಾರಂಭವಾದಾಗಿನಿಂದ ಇದು ರಾಷ್ಟ್ರದ ಎರಡನೇ ಅತಿ ಹೆಚ್ಚು ಉಷ್ಣಾಂಶದ ವರ್ಷವಾಗಿದೆ.  ಬ್ಯೂರೋ ಆಫ್ ಮೆಟಿಯೊರೊಲಜಿಯ 2011ರ ಆಸ್ಟ್ರೇಲಿಯನ್ ಕ್ಲೈಮೇಟ್ ಸ್ಟೇಟ್ಮೆಂಟ್ ಪ್ರಕಾರ, ಲಾ ನಿನಾ ಹವಾಮಾನ ಮಾದರಿಯ ಪರಿಣಾಮವಾಗಿ 2011ರಲ್ಲಿ ಆಸ್ಟ್ರೇಲಿಯಾದ ಸರಾಸರಿ ಉಷ್ಣಾಂಶಕ್ಕಿಂತ ಕಡಿಮೆ ತಾಪಮಾನವನ್ನು ಹೊಂದಿತ್ತು, ಆದಾಗ್ಯೂ, "ದೇಶದ 10 ವರ್ಷಗಳ ಸರಾಸರಿ ಉಷ್ಣಾಂಶದಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಪ್ರದರ್ಶಿಸುತ್ತಲೇ ಇದೆ, ಆಸ್ಟ್ರೇಲಿಯಾದ ದಾಖಲೆಯ ಮೇಲಿನ ಎರಡು ಬೆಚ್ಚಗಿನ 10 ವರ್ಷಗಳ ಅವಧಿಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ, ಇದು ದೀರ್ಘಾವಧಿಯ ಸರಾಸರಿಗಿಂತ °F) ಹೆಚ್ಚಾಗಿದೆ". ಇದಲ್ಲದೆ, 1910 ರಲ್ಲಿ ರಾಷ್ಟ್ರೀಯ ತಾಪಮಾನ ಅವಲೋಕನಗಳು ಪ್ರಾರಂಭವಾದಾಗಿನಿಂದ 2014 ಆಸ್ಟ್ರೇಲಿಯಾದ ಮೂರನೇ ಬೆಚ್ಚಗಿನ ವರ್ಷವಾಗಿದೆ. ಸಮುದ್ರ ಮಟ್ಟವು 1 ಮೀಟರ್ ಎತ್ತರಕ್ಕೆ ಏರಿದಿರುವುದರಿಂದ 247,600 ಮನೆಗಳು ಪ್ರವಾಹದಿಂದ ಅಪಾಯಕ್ಕೆ ಸಿಲುಕಿವೆ ಎಂದು ಆಸ್ಟ್ರೇಲಿಯಾದ ಸರ್ಕಾರವು ವರದಿಯನ್ನು ಬಿಡುಗಡೆ ಮಾಡಿದೆ. ಸಮುದ್ರ ಮಟ್ಟ ಏರಿಕೆಯಿಂದಾಗಿ ವೇಗವಾಗಿ ಸವೆತದ ಅಪಾಯವನ್ನು ಎದುರಿಸುತ್ತಿರುವ, 'ಮೃದು' ಸವೆತಕ್ಕೆ ಒಳಗಾಗುವ ತೀರರೇಖೆಗಳ 110 ಮೀಟರ್ಗಳೊಳಗೆ 39,000 ಕಟ್ಟಡಗಳು ನೆಲೆಗೊಂಡಿವೆ.DCC (2009), Climate Change Risks to Australia's coasts, Canberra. ಈ ನಿರ್ದಿಷ್ಟ ಹವಾಮಾನ ಬದಲಾವಣೆಯ ಬೆದರಿಕೆಗೆ ಹೊಂದಾಣಿಕೆಯ ಪ್ರತಿಕ್ರಿಯೆಗಳನ್ನು ಕರಾವಳಿ ಯೋಜನಾ ನೀತಿಗಳು ಮತ್ತು ರಾಜ್ಯ ಮಟ್ಟದಲ್ಲಿ ಶಿಫಾರಸುಗಳಲ್ಲಿ ಹೆಚ್ಚಾಗಿ ಸೇರಿಸಲಾಗುತ್ತದೆ. ಉದಾಹರಣೆಗೆ, ಪಶ್ಚಿಮ ಆಸ್ಟ್ರೇಲಿಯಾ ರಾಜ್ಯ ಕರಾವಳಿ ಯೋಜನಾ ನೀತಿಯು 100 ವರ್ಷಗಳ ಅವಧಿಯಲ್ಲಿ ಸಮಸ್ಯೆಯನ್ನು ಪರಿಹರಿಸುವ ಉಪಕ್ರಮಗಳಿಗೆ ಸಮುದ್ರ ಮಟ್ಟ ಏರಿಕೆಯ ಮಾನದಂಡವನ್ನು ಸ್ಥಾಪಿಸಿತು.[2] ಈ ಶತಮಾನದ ಅಂತ್ಯದ ವೇಳೆಗೆ ಸಮುದ್ರ ಮಟ್ಟವು 40ರಿಂದ 90 ಸೆಂಟಿಮೀಟರ್ಗಳಷ್ಟು ಹೆಚ್ಚಾಗುತ್ತದೆ ಎಂದು ಕಡಿಮೆ ಅಂದಾಜುಗಳು ಸೂಚಿಸುತ್ತವೆ ನೀರು (ಬರ ಮತ್ತು ಪ್ರವಾಹಗಳು) 1860 ರ ದಶಕದಿಂದಲೂ ಹವಾಮಾನಶಾಸ್ತ್ರದ ಬ್ಯೂರೋ ದಾಖಲೆಗಳು ಆಸ್ಟ್ರೇಲಿಯಾದಲ್ಲಿ ಸರಾಸರಿ 18 ವರ್ಷಗಳಿಗೊಮ್ಮೆ 'ತೀವ್ರ' ಬರ ಸಂಭವಿಸಿದೆ ಎಂದು ತೋರಿಸುತ್ತದೆ. ಆಸ್ಟ್ರೇಲಿಯಾ ಈಗಾಗಲೇ ವಿಶ್ವದ ಅತ್ಯಂತ ಒಣ ಜನಸಂಖ್ಯೆ ಹೊಂದಿರುವ ಖಂಡವಾಗಿದೆ. ಆಸ್ಟ್ರೇಲಿಯಾ ಈಗಾಗಲೇ ವಿಶ್ವದ ಅತ್ಯಂತ ಒಣ ಜನಸಂಖ್ಯೆ ಹೊಂದಿರುವ ಖಂಡವಾಗಿದೆ. ನೈಋತ್ಯ ಆಸ್ಟ್ರೇಲಿಯಾದಲ್ಲಿ 1970 ರ ದಶಕದಿಂದ 10-20% ರಷ್ಟು ಮಳೆಯು ಕಡಿಮೆಯಾಗಿದೆ, ಆದರೆ ಆಗ್ನೇಯ ಆಸ್ಟ್ರೇಲಿಯಾವು 1990 ರ ದಶಕದಿಂದ ಮಧ್ಯಮ ಕುಸಿತವನ್ನು ಅನುಭವಿಸಿದೆ. ಮಳೆಯು ಭಾರೀ ಮತ್ತು ಹೆಚ್ಚು ವಿರಳವಾಗಿರುವ ನಿರೀಕ್ಷೆಯಿದೆ, ಜೊತೆಗೆ ಚಳಿಗಾಲಕ್ಕಿಂತ ಹೆಚ್ಚಾಗಿ ಬೇಸಿಗೆಯಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಜೂನ್ 2008ರಲ್ಲಿ, ತಜ್ಞರ ಸಮಿತಿಯು, ಆ ವರ್ಷದ ಅಕ್ಟೋಬರ್ ವೇಳೆಗೆ ಸಾಕಷ್ಟು ನೀರನ್ನು ಪಡೆಯದಿದ್ದರೆ, ಇಡೀ ಮುರ್ರೆ-ಡಾರ್ಲಿಂಗ್ ಜಲಾನಯನ ಪ್ರದೇಶ ದೀರ್ಘಕಾಲೀನ, ಬಹುಶಃ ಬದಲಾಯಿಸಲಾಗದ, ತೀವ್ರ ಪರಿಸರ ಹಾನಿಯ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.Australian rivers 'face disaster', BBC News 2008ರ ಬರಗಾಲ ಉಂಟಾದ ದೀರ್ಘಕಾಲದ ಕೊರತೆಗೆ ಪ್ರತಿಕ್ರಿಯೆಯಾಗಿ ಆಸ್ಟ್ರೇಲಿಯಾದ ಅನೇಕ ಪ್ರದೇಶಗಳು ಮತ್ತು ನಗರಗಳಲ್ಲಿ ನೀರಿನ ನಿರ್ಬಂಧಗಳು ಜಾರಿಯಲ್ಲಿದ್ದವು.Saving Australia's water, BBC News 2004ರಲ್ಲಿ ಪ್ಯಾಲೆಯಂಟಾಲಜಿಸ್ಟ್ ಟಿಮ್ ಫ್ಲಾನರಿ, ಇದು ತೀವ್ರ ಬದಲಾವಣೆಗಳನ್ನು ಮಾಡದಿದ್ದರೆ, ಪಶ್ಚಿಮ ಆಸ್ಟ್ರೇಲಿಯಾದ ಪರ್ತ್ ನಗರವು ವಿಶ್ವದ ಮೊದಲ ಪ್ರೇತ ಮಹಾನಗರ ಎಂದು ಭವಿಷ್ಯ ನುಡಿದಿದ್ದರು-ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಹೆಚ್ಚು ನೀರಿಲ್ಲದ ಪರಿತ್ಯಕ್ತ ನಗರ.Metropolis strives to meet its thirst, BBC News 2019ರಲ್ಲಿ ಆಸ್ಟ್ರೇಲಿಯಾದ ಬರ ಮತ್ತು ಜಲ ಸಂಪನ್ಮೂಲ ಸಚಿವರಾದ ಡೇವಿಡ್ ಲಿಟ್ಲ್ಪ್ರೌಡ್, ಆಸ್ಟ್ರೇಲಿಯಾದಲ್ಲಿ ಹವಾಮಾನ ಬದಲಾವಣೆ ಮತ್ತು ಬರಗಳ ನಡುವಿನ ಸಂಬಂಧವನ್ನು ತಾನು "ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ" ಏಕೆಂದರೆ ತಾನು ಅದನ್ನು "ಬದುಕುತ್ತಿದ್ದೇನೆ" ಎಂದು ಹೇಳಿದರು. ಆಸ್ಟ್ರೇಲಿಯಾದಲ್ಲಿ ಬರಗಾಲವು ಈಗಾಗಲೇ ಎಂಟು ವರ್ಷಗಳಷ್ಟು ಉದ್ದವಾಗಿದೆ ಎಂದು ಅವರು ಹೇಳುತ್ತಾರೆ. ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ನವೀಕರಿಸಬಹುದಾದ ಇಂಧನವನ್ನು ಬೃಹತ್ ಪ್ರಮಾಣದಲ್ಲಿ ಅಳವಡಿಸಲು ಅವರು ಕರೆ ನೀಡಿದರು. ರಾಷ್ಟ್ರೀಯವಾದಿಗಳ ಮಾಜಿ ನಾಯಕ ಬರ್ನಾಬಿ ಜಾಯ್ಸ್, ಬರವು ತೀವ್ರವಾಗಿದ್ದರೆ ಮತ್ತು ಅಣೆಕಟ್ಟುಗಳನ್ನು ನಿರ್ಮಿಸದಿದ್ದರೆ, ಒಕ್ಕೂಟವು "ರಾಜಕೀಯ ವಿನಾಶ" ದ ಅಪಾಯವನ್ನು ಎದುರಿಸುತ್ತದೆ ಎಂದು ಹೇಳಿದರು. 2022ರ ಐಪಿಸಿಸಿ ವರದಿಯ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರವಾಹದ ಪ್ರಸಂಗಗಳು ಮತ್ತು ಇತರ ದುರಂತ ಹವಾಮಾನ ಘಟನೆಗಳು ಹೆಚ್ಚಾಗಿದೆ. ಈ ಅಸಾಮಾನ್ಯ ಹವಾಮಾನ ಬದಲಾವಣೆಗಳಲ್ಲಿ ಉತ್ತರದಲ್ಲಿ ಮಳೆ ಮತ್ತು ದಕ್ಷಿಣದಲ್ಲಿ ತೀವ್ರ ಬರಗಾಲಗಳು ಸೇರಿವೆ. ಕಡಿಮೆ ಮಳೆ ಎಂದರೆ ಪ್ರಮುಖ ನಗರಗಳಿಗೆ ನೀರಿನ ಹರಿವು ಕಡಿಮೆಯಾಗುತ್ತದೆ. ಸುಸ್ಥಿರ ಅಭಿವೃದ್ಧಿಗಾಗಿ ಹವಾಮಾನ ಬದಲಾವಣೆಯ ತೀವ್ರ ಪರಿಣಾಮಗಳನ್ನು ಮುಂದುವರಿಸಲು ನಮ್ಮ ವ್ಯವಸ್ಥೆಗಳಲ್ಲಿ ನಮ್ಮ ಹೊಂದಾಣಿಕೆ ಮತ್ತು ಹಣಕಾಸು ನೀತಿಗಳಿಗೆ ಒಂದು ಹೆಜ್ಜೆ ಮುಂದಿಡಲು ಐಪಿಸಿಸಿ ಶಿಫಾರಸು ಮಾಡುತ್ತದೆ. ಜಲ ಸಂಪನ್ಮೂಲಗಳು 12-25% ಮುರ್ರೆ ನದಿ ಮತ್ತು ಡಾರ್ಲಿಂಗ್ ನದಿ ಜಲಾನಯನ ಪ್ರದೇಶದಲ್ಲಿ ಒಳಹರಿವಿನ ಕಡಿತ Arnell, N.W. (1999) Climate change and global water resources. Global Environmental Change 9, S31–S46. 7-35% ಮೆಲ್ಬರ್ನ್ ನ ನೀರಿನ ಪೂರೈಕೆಯಲ್ಲಿ ಕಡಿತ.Howe, C., Jones, R.N., Maheepala, S., and Rhodes, B. (2005) Implications of Climate Change for Melbourne's Water Resources. Melbourne Water, Melbourne, 26 pp. alt=A bushfire by an Adelaide River roadside in 2010.|thumb|ಹೆಚ್ಚುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಬರ ಪರಿಸ್ಥಿತಿಗಳಿಂದಾಗಿ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚುಗಳು ಉಲ್ಬಣಗೊಳ್ಳುತ್ತವೆ. ಇತ್ತೀಚಿನ ದಶಕಗಳಲ್ಲಿ ಆಸ್ಟ್ರೇಲಿಯಾದಲ್ಲಿ ಬೆಂಕಿಯ ಚಟುವಟಿಕೆ ಹೆಚ್ಚಾಗಿದೆ. ಕಾರಣಗಳು "ಹೆಚ್ಚು ಅಪಾಯಕಾರಿ ಬೆಂಕಿಯ ಹವಾಮಾನ ಪರಿಸ್ಥಿತಿಗಳು, ಬೆಂಕಿಯಿಂದ ಉಂಟಾಗುವ ಗುಡುಗು ಸಹಿತ ಪೈರೋ ಕಾನ್ವೆಕ್ಷನ್ಗೆ ಸಂಬಂಧಿಸಿದ ಹೆಚ್ಚಿನ ಅಪಾಯಕಾರಿ ಅಂಶಗಳು ಮತ್ತು ಒಣ ಮಿಂಚುಗಳಿಂದ ಹೆಚ್ಚಿದ ಬೆಂಕಿ ಹೊತ್ತಿಸುವಿಕೆಗಳು, ಇವೆಲ್ಲವೂ ಮಾನವಜನ್ಯ ಹವಾಮಾನ ಬದಲಾವಣೆಯೊಂದಿಗೆ ವಿವಿಧ ಹಂತಗಳಿಗೆ ಸಂಬಂಧಿಸಿವೆ". ಹವಾಮಾನ ಬದಲಾವಣೆಯ ಪರಿಣಾಮಗಳು "ಕಡಿಮೆ ಜಾಗತಿಕ ತಾಪಮಾನ ಏರಿಕೆ" ಸನ್ನಿವೇಶದಲ್ಲಿ ಕಾಡ್ಗಿಚ್ಚುಗಳ ಆವರ್ತನ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತವೆ ಎಂದು ಅಗ್ನಿಶಾಮಕ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸಿಎಸ್ಐಆರ್ಒ ಸಾಗರ ಮತ್ತು ವಾಯುಮಂಡಲದ ಸಂಶೋಧನೆ, ಬುಷ್ಫೈರ್ ಸಿಆರ್ಸಿ, ಮತ್ತು ಆಸ್ಟ್ರೇಲಿಯನ್ ಬ್ಯೂರೋ ಆಫ್ ಮೆಟಿಯೋರಾಲಜಿ 2006ರಲ್ಲಿ ಸಿದ್ಧಪಡಿಸಿದ ವರದಿಯು ಆಗ್ನೇಯ ಆಸ್ಟ್ರೇಲಿಯಾವನ್ನು ವಿಶ್ವದ ಮೂರು ಅತ್ಯಂತ ಬೆಂಕಿ ಪೀಡಿತ ಪ್ರದೇಶಗಳಲ್ಲಿ ಒಂದೆಂದು ಗುರುತಿಸಿದೆ, ಮತ್ತು ಮ್ಯಾಕ್ಆರ್ಥರ್ ಅರಣ್ಯ ಬೆಂಕಿ ಅಪಾಯ ಸೂಚ್ಯಂಕ ರೇಟಿಂಗ್ ತುಂಬಾ ಹೆಚ್ಚಿರುವ ಅಥವಾ ತೀವ್ರವಾಗಿರುವ ದಿನಗಳ ಸರಾಸರಿ ಸಂಖ್ಯೆಯನ್ನು ಒಳಗೊಂಡಂತೆ ಮುಂದಿನ ಹಲವಾರು ದಶಕಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಬೆಂಕಿ-ಹವಾಮಾನದ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತೀರ್ಮಾನಿಸಿದೆ. ಅತಿ ಹೆಚ್ಚಿನ ಮತ್ತು ತೀವ್ರ ಎಫ್. ಎಫ್. ಡಿ. ಐ. ರೇಟಿಂಗ್ಗಳನ್ನು ಹೊಂದಿರುವ ದಿನಗಳ ಸಂಯೋಜಿತ ಆವರ್ತನಗಳು 2020ರ ವೇಳೆಗೆ ಐಡಿ2 ಮತ್ತು 2050ರ ವೇಳೆಗೆ ಐ. ಡಿ1 ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಬೆಂಕಿಯ-ಹವಾಮಾನದ ಅಪಾಯದ ಹೆಚ್ಚಳವು ಸಾಮಾನ್ಯವಾಗಿ ಒಳನಾಡಿನ ಅತಿದೊಡ್ಡ ಅಪಾಯವಾಗಿದೆ ಎಂದು ಅದು ಕಂಡುಹಿಡಿದಿದೆ. ಆಸ್ಟ್ರೇಲಿಯನ್ ಗ್ರೀನ್ಸ್ ನಾಯಕ ಬಾಬ್ ಬ್ರೌನ್, "ಈ ರಾಷ್ಟ್ರ ಮತ್ತು ಇಡೀ ಜಗತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಅಗತ್ಯವನ್ನು ಆದ್ಯತೆ ನೀಡುವ ಅಗತ್ಯವನ್ನು ಬೆಂಕಿಯು ನೆನಪಿಸುತ್ತದೆ" ಎಂದು ಹೇಳಿದರು. ಬ್ಲ್ಯಾಕ್ ಸ್ಯಾಟರ್ಡೇ ರಾಯಲ್ ಕಮಿಷನ್ "ಪ್ರತಿ ವರ್ಷ ಸಾರ್ವಜನಿಕ ಭೂಮಿಯಲ್ಲಿ ಮಾಡುವ ಇಂಧನ-ಕಡಿತ ಸುಡುವಿಕೆಯ ಪ್ರಮಾಣವನ್ನು ದ್ವಿಗುಣಗೊಳಿಸಬೇಕು" ಎಂದು ಶಿಫಾರಸು ಮಾಡಿದೆ. 2018 ರಲ್ಲಿ, ಆಸ್ಟ್ರೇಲಿಯಾದಲ್ಲಿ ಬೆಂಕಿಯ ಋತುವು ಚಳಿಗಾಲದಲ್ಲಿ ಪ್ರಾರಂಭವಾಯಿತು. ಆಗಸ್ಟ್ 2018 ಸರಾಸರಿಗಿಂತ ಹೆಚ್ಚು ಬಿಸಿಯಾಗಿರುತ್ತದೆ ಮತ್ತು ಗಾಳಿಯಿಂದ ಕೂಡಿತ್ತು. ಆ ಹವಾಮಾನ ಪರಿಸ್ಥಿತಿಗಳು ನ್ಯೂ ಸೌತ್ ವೇಲ್ಸ್‌ನಲ್ಲಿ ಬರಗಾಲಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರವು ಈಗಾಗಲೇ ರೈತರಿಗೆ ಸಹಾಯ ಮಾಡಲು 1 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಹಣವನ್ನು ನೀಡಿದೆ. ಬಿಸಿಯಾದ ಮತ್ತು ಒಣ ಹವಾಮಾನವು ಹೆಚ್ಚಿನ ಬೆಂಕಿಗೆ ಕಾರಣವಾಯಿತು. ಆಸ್ಟ್ರೇಲಿಯಾದಲ್ಲಿ ಬೆಂಕಿಯ ಋತುಗಳು ಹೆಚ್ಚಾಗುತ್ತಿವೆ ಮತ್ತು ಇತ್ತೀಚಿನ 30 ವರ್ಷಗಳಲ್ಲಿ ಬೆಂಕಿಯ ಘಟನೆಗಳು ಹೆಚ್ಚು ಆಗಾಗ್ಗೆ ಆಗುತ್ತಿವೆ. ಈ ಪ್ರವೃತ್ತಿಗಳು ಬಹುಶಃ ಹವಾಮಾನ ಬದಲಾವಣೆಯೊಂದಿಗೆ ಸಂಬಂಧ ಹೊಂದಿವೆ. . 2019–20 ಆಸ್ಟ್ರೇಲಿಯನ್ ಕಾಡ್ಗಿಚ್ಚು ಋತುವು ಕೆಲವು ಕ್ರಮಗಳ ಪ್ರಕಾರ ಅತ್ಯಂತ ಕೆಟ್ಟ ಕಾಡ್ಗಿಚ್ಚು ಎಂದು ದಾಖಲಾಗಿದೆ. ನ್ಯೂ ಸೌತ್ ವೇಲ್ಸ್‌ನಲ್ಲಿ, ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಯಾವುದೇ ಬೆಂಕಿಗಿಂತ ಹೆಚ್ಚಿನ ಭೂಮಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ, ಜೊತೆಗೆ ರಾಜ್ಯದ ಅತ್ಯಂತ ಕೆಟ್ಟ ಬುಷ್‌ಫೈರ್ ಸೀಸನ್ ದಾಖಲೆಯಾಗಿದೆ. ನ್ಯೂ ಸೌತ್ ವೇಲ್ಸ್ನಲ್ಲಿ, ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಯಾವುದೇ ಬೆಂಕಿ ಅವಘಡಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ, ಜೊತೆಗೆ ಇದು ರಾಜ್ಯದ ದಾಖಲೆಯಲ್ಲಿನ ಅತ್ಯಂತ ಕೆಟ್ಟ ಕಾಡ್ಗಿಚ್ಚು ಕಾಲವಾಗಿದೆ. ಆಸ್ಟ್ರೇಲಿಯಾದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ನಿರಂತರವಾಗಿ ಉರಿಯುತ್ತಿರುವ ಕಾಡ್ಗಿಚ್ಚು ಸಂಕೀರ್ಣವನ್ನು ಸಹ ಎನ್ಎಸ್ಡಬ್ಲ್ಯೂ ಅನುಭವಿಸಿತು, ಇದು 70-ಮೀಟರ್-ಎತ್ತರದ (230 ಅಡಿ) ಜ್ವಾಲೆಗಳೊಂದಿಗೆ ದಶಲಕ್ಷ ಹೆಕ್ಟೇರ್ (ಐಡಿ1) ಎಕರೆಗಳಿಗಿಂತ ಹೆಚ್ಚು ಸುಟ್ಟುಹೋಗಿದೆ. ಸುಮಾರು 3 ಶತಕೋಟಿ ಪ್ರಾಣಿಗಳು ಕಾಡ್ಗಿಚ್ಚಿನಿಂದ ಕೊಲ್ಲಲ್ಪಟ್ಟವು ಅಥವಾ ಸ್ಥಳಾಂತರಗೊಂಡವು ಮತ್ತು ಇದು ದಾಖಲಿತ ಇತಿಹಾಸದಲ್ಲಿ ಅತ್ಯಂತ ಕೆಟ್ಟ ನೈಸರ್ಗಿಕ ವಿಕೋಪಗಳಲ್ಲಿ ಒಂದಾಯಿತು. ಬೆಂಕಿಯನ್ನು ಉತ್ತೇಜಿಸುವ ಹವಾಮಾನ ಪರಿಸ್ಥಿತಿಗಳನ್ನು ತಲುಪುವ ಅವಕಾಶವು 1900 ರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ ಮತ್ತು ತಾಪಮಾನವು ಕೈಗಾರಿಕಾ ಪೂರ್ವ ಮಟ್ಟದಿಂದ 2 ಡಿಗ್ರಿಗಳಷ್ಟು ಹೆಚ್ಚಾದರೆ ಸಂಭವಿಸುವ ಸಾಧ್ಯತೆ ಎಂಟು ಪಟ್ಟು ಹೆಚ್ಚಾಗುತ್ತದೆ. ದಾಖಲೆಯ ತಾಪಮಾನ ಮತ್ತು ದೀರ್ಘಕಾಲದ ಬರಗಾಲ ಕಾಡ್ಗಿಚ್ಚುಗಳನ್ನು ಉಲ್ಬಣಗೊಳಿಸಿದ ನಂತರ 2019ರ ಡಿಸೆಂಬರ್ನಲ್ಲಿ ನ್ಯೂ ಸೌತ್ ವೇಲ್ಸ್ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತು. 2019 ರಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಾಡ್ಗಿಚ್ಚುಗಳು ನ್ಯೂ ಸೌತ್ ವೇಲ್ಸ್ನ ಅನೇಕ ಪ್ರದೇಶಗಳಲ್ಲಿ ಅಪಾಯಕಾರಿ ಮಟ್ಟಕ್ಕಿಂತ 11 ಪಟ್ಟು ಹೆಚ್ಚು ವಾಯುಮಾಲಿನ್ಯವನ್ನು ಸೃಷ್ಟಿಸಿದವು. ಅನೇಕ ವೈದ್ಯಕೀಯ ಗುಂಪುಗಳು ಜನರನ್ನು "ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ" ಯಿಂದ ರಕ್ಷಿಸಲು ಮತ್ತು ಪಳೆಯುಳಿಕೆ ಇಂಧನಗಳಿಂದ ದೂರವಿರಲು ಕರೆ ನೀಡಿದವು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಪ್ರಕಾರ, ಆಸ್ಟ್ರೇಲಿಯಾದಲ್ಲಿನ ಮೆಗಾಫೈರ್ಗಳು ಬಹುಶಃ ಹವಾಮಾನ ಬದಲಾವಣೆಯೊಂದಿಗೆ ಸಂಬಂಧ ಹೊಂದಿದ್ದು, ಇದು ಅಸಾಮಾನ್ಯವಾಗಿ ಶುಷ್ಕ ಮತ್ತು ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಸೃಷ್ಟಿಸಿದೆ. ಇದು ಜಾಗತಿಕ ಪ್ರವೃತ್ತಿಯ ಭಾಗವಾಗಿದೆ. ಬ್ರೆಜಿಲ್, ಯುನೈಟೆಡ್ ಸ್ಟೇಟ್ಸ್, ರಷ್ಯನ್ ಫೆಡರೇಶನ್ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಜನವರಿ ಎರಡನೇ ವಾರದ ಹೊತ್ತಿಗೆ, ಬೆಂಕಿಯು ಇಂಗ್ಲೆಂಡಿನ ಭೂಪ್ರದೇಶಕ್ಕೆ ಹತ್ತಿರವಿರುವ ಸುಮಾರು 100,000 ಚದರ ಕಿಲೋಮೀಟರ್ ಪ್ರದೇಶವನ್ನು ಸುಟ್ಟುಹಾಕಿತು, ಒಂದು ಶತಕೋಟಿ ಪ್ರಾಣಿಗಳನ್ನು ಕೊಂದಿತು ಮತ್ತು ದೊಡ್ಡ ಆರ್ಥಿಕ ಹಾನಿಯನ್ನು ಉಂಟುಮಾಡಿತು. ಹವಾಮಾನ ಬದಲಾವಣೆಯ ಪರಿಣಾಮಗಳಿಲ್ಲದೆ 2019-2020 ನಲ್ಲಿ ಅಸಾಧಾರಣವಾದ ಬಲವಾದ ಕಾಡ್ಗಿಚ್ಚುಗಳು ಅಸಾಧ್ಯವೆಂದು ಸಂಶೋಧಕರು ಹೇಳುತ್ತಾರೆ. ಆಸ್ಟ್ರೇಲಿಯಾದ ಐದನೇ ಒಂದು ಭಾಗದಷ್ಟು ಕಾಡುಗಳು ಒಂದೇ ಋತುವಿನಲ್ಲಿ ಸುಟ್ಟುಹೋದವು, ಇದು ಸಂಪೂರ್ಣವಾಗಿ ಅಭೂತಪೂರ್ವವಾಗಿತ್ತು. ಅವರು ಹೇಳುತ್ತಾರೆಃ "ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ಘಟನೆಗಳ ಸಂದರ್ಭದಲ್ಲಿ, ಮಾನವಜನ್ಯ ಪ್ರಭಾವವಿಲ್ಲದೆ ಕಳೆದ ವರ್ಷದ ದಾಖಲೆಯ ತಾಪಮಾನವು ಸಾಧ್ಯವಾಗುವುದಿಲ್ಲ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಮತ್ತು ಹೊರಸೂಸುವಿಕೆಯು ಬೆಳೆಯುತ್ತಿರುವ ಸನ್ನಿವೇಶದಲ್ಲಿ, ಅಂತಹ ವರ್ಷವು 2040 ರ ವೇಳೆಗೆ ಸರಾಸರಿ ಮತ್ತು 2060 ರ ವೇಳೆಗೆ ಅಸಾಧಾರಣವಾಗಿ ತಂಪಾಗಿರುತ್ತದೆ". ಸರಾಸರಿ, ಆಸ್ಟ್ರೇಲಿಯಾದ ಕಾಡುಗಳ ವಾರ್ಷಿಕವಾಗಿ 2% ಕ್ಕಿಂತ ಕಡಿಮೆ ಸುಡುತ್ತದೆ. ಹವಾಮಾನ ಬದಲಾವಣೆಯು [ID1] ನಲ್ಲಿ ಕಾಡ್ಗಿಚ್ಚುಗಳ ಸಾಧ್ಯತೆಯನ್ನು ಕನಿಷ್ಠ 30% ರಷ್ಟು ಹೆಚ್ಚಿಸಿದೆ, ಆದರೆ ಫಲಿತಾಂಶವು ಬಹುಶಃ ಸಂಪ್ರದಾಯಶೀಲವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ವಿಪರೀತ ಹವಾಮಾನ ಘಟನೆಗಳು thumb|1910ರಿಂದ ಆಸ್ಟ್ರೇಲಿಯಾದ ಭೂ ತಾಪಮಾನ ವೈಪರೀತ್ಯಗಳ ಉಷ್ಣಚಿತ್ರ ಮಳೆಯ ಮಾದರಿಗಳು ಮತ್ತು ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಬರಗಾಲ ಮತ್ತು ಬಿರುಗಾಳಿಗಳ ಮಟ್ಟವು ಪರಿಣಾಮ ಬೀರುವ ಸಾಧ್ಯತೆಯಿದೆ. ಆಸ್ಟ್ರೇಲಿಯಾದ ಖಂಡದಲ್ಲಿ 2 ಮತ್ತು 3 °C ನಡುವಿನ ತಾಪಮಾನದ ಏರಿಕೆಯು ಪ್ರಮಾಣಿತ [ಸ್ಪಷ್ಟೀಕರಣದ ಅಗತ್ಯವಿದೆ] ಮಾದರಿಗಳ ಜೊತೆಗೆ ಈ ಕೆಳಗಿನ ಕೆಲವು ವಿಪರೀತ ಹವಾಮಾನ ಘಟನೆಗಳನ್ನು ಉಂಟುಮಾಡಬಹುದು ಎಂದು CSIRO ಊಹಿಸುತ್ತದೆಃ  ಉಷ್ಣವಲಯದ ಚಂಡಮಾರುತಗಳ ಗಾಳಿಯ ವೇಗವು 5 ರಿಂದ 10% ರಷ್ಟು ತೀವ್ರಗೊಳ್ಳಬಹುದು.McInnes, K.L., Walsh, K.J.E., Hubbert, G.D., and Beer, T. (2003) Impact of sea-level rise and storm surges on a coastal community. Natural Hazards 30, 187–207 100 ವರ್ಷಗಳಲ್ಲಿ, ಪೂರ್ವ ವಿಕ್ಟೋರಿಯಾದ ಕರಾವಳಿಯಲ್ಲಿ ಬಲವಾದ ಅಲೆಗಳು [ID1] ಹೆಚ್ಚಾಗಲಿವೆ.McInnes, K.L., Macadam, I., Hubbert, G.D., Abbs, D.J., and Bathols, J. (2005) Climate Change in Eastern Victoria, Stage 2 Report: The Effect of Climate Change on Storm Surges. A consultancy report undertaken for the Gippsland Coastal Board by the Climate Impacts Group, CSIRO Atmospheric Research ನ್ಯೂ ಸೌತ್ ವೇಲ್ಸ್ ಮತ್ತು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಅಪಾಯದ ಸೂಚ್ಯಂಕಗಳು 10% ರಷ್ಟು ಬೆಳೆಯುತ್ತವೆ ಮತ್ತು ದಕ್ಷಿಣ, ಮಧ್ಯ ಮತ್ತು ಈಶಾನ್ಯ ಆಸ್ಟ್ರೇಲಿಯಾದಲ್ಲಿ ಅರಣ್ಯ ಬೆಂಕಿಯ ಅಪಾಯದ ಸೂಚಿಯಾಂಕಗಳು 10% ಕ್ಕಿಂತ ಹೆಚ್ಚಾಗುತ್ತವೆ.Williams, A.A., Karoly, D.J., and Tapper, N. (2001) The sensitivity of Australian fire danger to climate change. Climatic Change 49, 171–191Cary, G.J. (2002) Importance of changing climate for fire regimes in Australia. In: R.A. Bradstock, J.E. Williams and A.M. Gill (eds), Flammable Australia: The Fire Regimes and Biodiversity of A Continent, Cambridge University Press, Cambridge UK, pp. 26–46. ಉಲ್ಲೇಖಗಳು
ಪ್ರವೀಣ್ ಬಕ್ಷಿ
https://kn.wikipedia.org/wiki/ಪ್ರವೀಣ್_ಬಕ್ಷಿ
ಲೋಲಿತಾ ರಾಯ್
https://kn.wikipedia.org/wiki/ಲೋಲಿತಾ_ರಾಯ್
thumb|1911 ರ ಮಹಿಳಾ ಪಟ್ಟಾಭಿಷೇಕ ಮೆರವಣಿಗೆ ಎಡಭಾಗದಲ್ಲಿ ಲೋಲಿತಾ ರಾಯ್ ಸೇರಿದಂತೆ ಭಾರತೀಯ ಮತದಾರರು. ಶ್ರೀಮತಿ ಪಿ. ಎಲ್. ರಾಯ್ ಎಂದೂ ಕರೆಯಲ್ಪಡುವ ಲೋಲಿತಾ ರಾಯ್ 1865 ರಲ್ಲಿ ಜನಿಸಿದ್ದರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020 ಇವರು ಒಬ್ಬ ಭಾರತೀಯ ಸಮಾಜ ಸುಧಾರಕಿ, ಲಂಡನ್ ನಲ್ಲಿ ಭಾರತೀಯರ ಸಾಮಾಜಿಕ ಜೀವನದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು, ಜೊತೆಗೆ ಬ್ರಿಟನ್ ಮತ್ತು ಭಾರತದಲ್ಲಿ ಮಹಿಳಾ ಮತದಾನದ ಹಕ್ಕಿಗಾಗಿ ಅಭಿಯಾನಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020 1911ರಲ್ಲಿ ದಿ ವೋಟ್ ಪತ್ರಿಕೆಯಲ್ಲಿ ಆಕೆಯನ್ನು 'ಅತ್ಯಂತ ವಿಮೋಚನೆಗೊಂಡ ಭಾರತೀಯ ಮಹಿಳೆಯರಲ್ಲಿ ಒಬ್ಬರು' ಎಂದು ವರ್ಣಿಸಲಾಗಿದೆ.Hoque, Nikhat (3 February 2019). "Meet 7 Indian Suffragettes Of The British Suffrage Movement". Feminism In India. Retrieved 12 November 2020. ಜೀವನ ಲೋಲಿತಾ ರಾಯ್ ಅವರು 1865ರಲ್ಲಿ ಭಾರತದ ಕೊಲ್ಕತ್ತಾ ದಲ್ಲಿ ಜನಿಸಿದ್ದರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020 ಅವರು 1886ರಲ್ಲಿ ಕೊಲ್ಕತ್ತಾದಲ್ಲಿ ಬ್ಯಾರಿಸ್ಟರ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಷನ್ಗಳ ನಿರ್ದೇಶಕರಾದ ಪಿಯೇರಾ ಲಾಲ್ ರಾಯ್ ಅವರನ್ನು ವಿವಾಹವಾದರು "Bloomsbury Collections - Suffrage and the Arts - Visual Culture, Politics and Enterprise". www.bloomsburycollections.com. Retrieved 12 November 2020.ಮತ್ತು ದಂಪತಿಗೆ ಲೀಲಾವತಿ, ಮಿರಾವತಿ, ಪರೇಶ್ ಲಾಲ್, ಹಿರಾವತಿ, ಇಂದ್ರ ಲಾಲ್ ಮತ್ತು ಲೋಲಿತ್ ಕುಮಾರ್ ಎಂಬ ಆರು ಮಕ್ಕಳಿದ್ದರು. 1900ರ ಹೊತ್ತಿಗೆ, ರಾಯ್ ಮತ್ತು ಆಕೆಯ ಮಕ್ಕಳು ಪಶ್ಚಿಮ ಲಂಡನ್ ವಾಸಿಸುತ್ತಿದ್ದರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020. ಲಂಡನ್ನಲ್ಲಿ, ರಾಯ್ ಅವರು ಲಂಡನ್ ಇಂಡಿಯನ್ ಯೂನಿಯನ್ ಸೊಸೈಟಿಯ ಅಧ್ಯಕ್ಷರಾಗಿ ಮತ್ತು ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಸಮಿತಿಯ ಸದಸ್ಯರಾಗಿ (1870 ರಲ್ಲಿ ಮೇರಿ ಕಾರ್ಪೆಂಟರ್ ಸ್ಥಾಪಿಸಿದ್ದು) ಸೇರಿದಂತೆ ಭಾರತೀಯರಿಗಾಗಿ ಅನೇಕ ಸಾಮಾಜಿಕ ಮತ್ತು ಕಾರ್ಯಕರ್ತ ಸಂಘಗಳಲ್ಲಿ ಸಕ್ರಿಯರಾಗಿದ್ದರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020. ಲಂಡನ್ ಯೂನಿಯನ್ ಸೊಸೈಟಿಯು ಲಂಡನ್ನಲ್ಲಿರುವ ಭಾರತೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು , ಸರಿ ಸುಮಾರು 700 ವಿದ್ಯಾರ್ಥಿಗಳು ಬೆಂಬಲಿಸಲು ಸಹಾಯ ಮಾಡಿತು . 1909 ರಲ್ಲಿ, ಭಾರತೀಯ ಮಹಿಳಾ ಶಿಕ್ಷಣ ಸಂಘವನ್ನು ಸ್ಥಾಪಿಸಲು ಅವರು ಸಹಾಯ ಮಾಡಿದರು, ಇದು ಭಾರತೀಯ ಮಹಿಳೆಯರನ್ನು ಶಿಕ್ಷಕರಾಗಿ ತರಬೇತಿ ನೀಡಲು ಬ್ರಿಟನ್ಗೆ ಕರೆತರಲು ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿತು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020. 1911ರ ಜೂನ್ 17ರಂದು, ಮಹಿಳಾ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟ "Lolita Roy and Indian Suffragettes, Coronation Procession - Museum of London". Google Arts & Culture. Retrieved 12 November 2020.ಮತದಾನದ ಬೇಡಿಕೆಯನ್ನು ಮುಂದಿಟ್ಟುಕೊಂಡು, ಕಿಂಗ್ ಜಾರ್ಜ್ V ರವರ ಪಟ್ಟಾಭಿಷೇಕವನ್ನು ಬಳಸಿಕೊಂಡು "Black History Month: Diversity and the British female Suffrage movement". Fawcett Society. Retrieved 12 November 2020.ಮಹಿಳಾ ಪಟ್ಟಾಭಿಷೇಕದ ಮೆರವಣಿಗೆಯನ್ನು ಆಯೋಜಿಸಿತು. ಜೇನ್ ಕಾಬ್ಡೆನ್ ಮತ್ತು ರಾಯ್ ಮೆರವಣಿಗೆಯ ಮುಂಚಿತವಾಗಿ ಒಂದು ಸಣ್ಣ ಭಾರತೀಯ ತುಕಡಿಯನ್ನು ಒಟ್ಟುಗೂಡಿಸಿದ್ದರು,"Suffrage Stories: Black And Minority Ethnic Women: Is There A 'Hidden History'?". Woman and her Sphere. 24 July 2017. Retrieved 12 November 2020. 'ಸಾಮ್ರಾಜ್ಯಶಾಹಿ ತುಕಡಿಯ' ಭಾಗವಾಗಿ ಮತ್ತು ಸಾಮ್ರಾಜ್ಯದಾದ್ಯಂತ ಮಹಿಳಾ ಮತದಾನದ ಹಕ್ಕನ್ನು ಬೆಂಬಲಿಸುವ ಶಕ್ತಿಯನ್ನು ತೋರಿಸಲು ಉದ್ದೇಶಿಸಿದ್ದರು."Lolita Roy and Indian Suffragettes, Coronation Procession - Museum of London". Google Arts & Culture. Retrieved 12 November 2020. ಮೆರವಣಿಗೆಯ ಛಾಯಾಚಿತ್ರದಲ್ಲಿ ರಾಯ್, ಶ್ರೀಮತಿ ಭಗವತಿ ಭೋಲಾ ನೌತ್ ಮತ್ತು ಶ್ರೀಮತಿ ಲೀಲಾವತಿ ಮುಖರ್ಜಿಯಾ (ರಾಯ್ ಅವರ ಮಗಳು) ಸೇರಿದ್ದಾರೆ. "Bloomsbury Collections - Suffrage and the Arts - Visual Culture, Politics and Enterprise". www.bloomsburycollections.com. Retrieved 12 November 2020.ಅನೇಕ ವರ್ಷಗಳ ನಂತರ ಮೆರವಣಿಗೆಯಲ್ಲಿ ಅವರ ಉಪಸ್ಥಿತಿಯ ಬಗ್ಗೆ ಬರೆಯುತ್ತಾ, ಭಾರತೀಯ ರಾಜಕಾರಣಿ ಸುಷಮಾ ಸೇನ್ ಹೀಗೆ ನೆನಪಿಸಿಕೊಂಡರು. "ಈ ಸಮಯದಲ್ಲಿ ತಮ್ಮ ಮತಗಳಿಗಾಗಿ ಹೋರಾಡುತ್ತಿದ್ದ ಮಹಿಳಾ ಸಫ್ರಾಗೆಟ್ ಚಳುವಳಿಯು ಉತ್ತುಂಗದಲ್ಲಿತ್ತು. ಆ ದಿನಗಳಲ್ಲಿ ಲಂಡನ್ನಲ್ಲಿ ಭಾರತೀಯ ಮಹಿಳೆಯರು ಕಡಿಮೆ ಇದ್ದರು. ನನ್ನ ಬಗ್ಗೆ ಕೇಳಿ ಅವರು ಪಿಕಾಡಿಲ್ಲಿ ಸರ್ಕಸ್ನಲ್ಲಿ ತಮ್ಮ ಪ್ರದರ್ಶನದಲ್ಲಿ ಸೇರಲು ಮತ್ತು ಶ್ರೀಮತಿ ಪ್ಯಾನ್ಖರ್ಸ್ಟ್ ಅವರ ನೇತೃತ್ವದಲ್ಲಿ ಸಂಸತ್ ಭವನಕ್ಕೆ ಮೆರವಣಿಗೆ ಮಾಡಲು ನನಗೆ ಆಹ್ವಾನವನ್ನು ಕಳುಹಿಸಿದರು. ಇದು ನನಗೆ ಒಂದು ದೊಡ್ಡ ಅನುಭವವಾಗಿತ್ತು, ಅದೇ ಸಮಯದಲ್ಲಿ ಮೆರವಣಿಗೆಯ ನಡುವೆ ಒಬ್ಬ ಭಾರತೀಯ ಮಹಿಳೆಗೆ ಇದು ಒಂದು ಹೊಸ ದೃಶ್ಯವಾಗಿತ್ತು, ಮತ್ತು ನಾನು ಸಾರ್ವಜನಿಕ ನೋಟದ ವಿಷಯವಾಗಿತ್ತು". ಕಾರ್ಯಕರ್ತೆ ಮತ್ತು ತತ್ವಜ್ಞಾನಿ ಅನ್ನಿ ಬೆಸೆಂಟ್ ಕೂಡ ಭಾರತೀಯ ಮತದಾರರ ಜೊತೆ ಮೆರವಣಿಗೆ ನಡೆಸಿದರು."Lolita Roy and Indian Suffragettes, Coronation Procession - Museum of London". Google Arts & Culture. Retrieved 12 November 2020. 1912 ಮತ್ತು 1913ರಲ್ಲಿ, ಲಂಡನ್ ಮತ್ತು ಕೇಂಬ್ರಿಡ್ಜ್ ಹಲವಾರು ಭಾರತೀಯ ನಾಟಕಗಳ ನಿರ್ಮಾಣದಲ್ಲಿ ರಾಯ್ ಸಹಾಯ ಮಾಡಿದರು, ಸಲಹೆಗಳನ್ನು ನೀಡಿದರು ಮತ್ತು ಸಾಂಪ್ರದಾಯಿಕ ಉಡುಪುಗಳಾದ ಪೇಟಗಳು ಮತ್ತು ಸೀರೆಗಳನ್ನು ಧರಿಸಿದ ಕಲಾವಿದರಿಗೆ ಸಹಾಯ ಮಾಡಿದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ, ರಾಯ್ ಅವರ ಇಬ್ಬರು ಪುತ್ರರು ಸಕ್ರಿಯ ಕರ್ತವ್ಯವನ್ನು ನೋಡಿದರು. ಆಕೆಯ ಹಿರಿಯ, ಪರೇಶ್ ಲಾಲ್ ರಾಯ್ ಅವರು ಯುದ್ಧದ ಅವಧಿಯಲ್ಲಿ ಗೌರವಾನ್ವಿತ ಫಿರಂಗಿ ಕಂಪನಿ ಸೇವೆ ಸಲ್ಲಿಸಿದರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020. 1920ರ ದಶಕದಲ್ಲಿ ಭಾರತಕ್ಕೆ ಮರಳಿದ ನಂತರ, ಅವರು ಬಾಕ್ಸಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020. ಆಕೆಯ ಮಧ್ಯದ ಮಗ ಇಂದ್ರ ಲಾಲ್ ರಾಯ್ ರಾಯಲ್ ಫ್ಲೈಯಿಂಗ್ ಕಾರ್ಪ್ಸ್ ಸೇರಿದರು ಮತ್ತು ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020. ಭಾರತೀಯ ಸೈನಿಕರಿಗೆ ಬಟ್ಟೆ, ಆಹಾರ ಮತ್ತು ಇತರ ವಸ್ತುಗಳನ್ನು ಒದಗಿಸುವ ಮೂಲಕ ಭಾರತೀಯ ಸೈನಿಕರ ನಿಧಿಗೆ ಹಣವನ್ನು ಸಂಗ್ರಹಿಸಲು ಸ್ಥಾಪಿಸಲಾದ ಈಸ್ಟರ್ನ್ ಲೀಗ್ನ ಗೌರವಾನ್ವಿತ ಕಾರ್ಯದರ್ಶಿಯಾಗಿ ಲೋಲಿತಾ ರಾಯ್ ಸೇವೆ ಸಲ್ಲಿಸಿದರು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020. 1916ರಲ್ಲಿ, ಇತರ ಮತದಾರರ ಜೊತೆಗೆ, ರಾಯ್ ಅವರು 'ಮಹಿಳಾ ದಿನ' ವನ್ನು ಆಯೋಜಿಸಲು ಸಹಾಯ ಮಾಡಿದರು, ಅಲ್ಲಿ ಈ ಉದ್ದೇಶಕ್ಕಾಗಿ ಹಣವನ್ನು ಸಂಗ್ರಹಿಸಲು ಲಂಡನ್ನ ಹೇಮಾರ್ಕೆಟ್ನಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಯಿತು.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020. ಬ್ರಿಟನ್ನಲ್ಲಿ ಮತದಾನದ ಹಕ್ಕುಗಾಗಿ ಮಾಡಿದ ಕೆಲಸದ ಜೊತೆಗೆ, ರಾಯ್ ಭಾರತದಲ್ಲಿ ಮಹಿಳೆಯರ ಮತದಾನದ ಹಕ್ಕುಗಳಿಗಾಗಿ ಸಕ್ರಿಯವಾಗಿ ಕೆಲಸ ಮಾಡಿದರು. ಇದರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಮನವಿ ಸಲ್ಲಿಸುವುದು, ಭಾರತದ ರಾಜ್ಯ ಕಾರ್ಯದರ್ಶಿಗೆ ನಿಯೋಗದಲ್ಲಿ ಭಾಗವಹಿಸುವುದು, ಹೌಸ್ ಆಫ್ ಕಾಮನ್ಸ್ ನಡೆದ ಸಭೆಯಲ್ಲಿ ಭಾಗವಹಿಸುವುದು ಮತ್ತು ಭಾರತೀಯ ಮಹಿಳಾ ಮತದಾನದ ಹಕ್ಕನ್ನು ಬೆಂಬಲಿಸಿ ಸಾರ್ವಜನಿಕವಾಗಿ ಮಾತನಾಡುವುದು ಸೇರಿತ್ತು. 1920ರ ದಶಕದುದ್ದಕ್ಕೂ ಅವರು ಅಖಿಲ ಭಾರತ ಮಹಿಳಾ ಸಮ್ಮೇಳನ ಸೇರಿದಂತೆ ಭಾರತದಲ್ಲಿ ಮತದಾನದ ಹಕ್ಕುಗಾಗಿ ಕೆಲಸ ಮಾಡುವುದನ್ನು ಮುಂದುವರೆಸಿದರು.ಲೋಲಿತಾ ರಾಯ್ ಅವರ ಸಾವಿನ ದಿನಾಂಕ ತಿಳಿದಿಲ್ಲ.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020.ಪತ್ರಕರ್ತ ಮತ್ತು ಮಾಧ್ಯಮ ಉದ್ಯಮಿ ಪ್ರಣಯ್ ರಾಯ್ ಅವರ ಮರಿಮೊಮ್ಮಗ. ಪರಂಪರೆ ಇತ್ತೀಚಿನ ವರ್ಷಗಳಲ್ಲಿ, ಬ್ರಿಟಿಷ್ ಇತಿಹಾಸಕಾರರು ಮತ್ತು ಕಾರ್ಯಕರ್ತರು ಬ್ರಿಟಿಷ್ ಮತದಾರರ ಚಳವಳಿಯಲ್ಲಿ ಲೋಲಿತಾ ರಾಯ್ ಸೇರಿದಂತೆ ವಿದೇಶಿ ಮೂಲದ ಜನರ ಕೊಡುಗೆಗಳಿಗೆ ಹೆಚ್ಚಿನ ಮನ್ನಣೆ ನೀಡಲು ಪ್ರಯತ್ನಿಸಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯ ಮತ್ತು ಭಾರತೀಯ ಉಪಖಂಡದ ಇತಿಹಾಸಕಾರರಾದ ಡಾ. ಸುಮಿತಾ ಮುಖರ್ಜಿ ಅವರು, '2018ರಲ್ಲಿ ನಡೆದ ಜನರ ಪ್ರಾತಿನಿಧ್ಯ ಕಾಯ್ದೆಯ ಶತಮಾನೋತ್ಸವದ ಸಾರ್ವಜನಿಕ ಸ್ಮರಣಾರ್ಥವಾಗಿ ಮತದಾನದ ಹಕ್ಕು ಆಂದೋಲನದ ಸುತ್ತಲೂ ಮೊದಲೇ ಅಸ್ತಿತ್ವದಲ್ಲಿದ್ದ ವಿಚಾರಗಳನ್ನು ಪ್ರಶ್ನಿಸಲು ಪ್ರಯತ್ನಿಸಿದ್ದಾರೆ, ಇದು 1918ರಲ್ಲಿ ಕೆಲವು ಮಹಿಳೆಯರಿಗೆ ಯುಕೆಯಲ್ಲಿ ಮತದಾನದ ಹಕ್ಕನ್ನು ನೀಡಿತು'. 'ಪಾಶ್ಚಿಮಾತ್ಯ ಜನಪ್ರಿಯ ನಂಬಿಕೆಗಳು ಈ ಬದಲಾವಣೆಯನ್ನು ತರುವಲ್ಲಿ ಬಣ್ಣದ ಮಹಿಳೆಯರ ಪಾತ್ರವನ್ನು ಹೆಚ್ಚಾಗಿ ನಿರ್ಲಕ್ಷಿಸಿವೆ' ಎಂದು ಅವರು ವಾದಿಸುತ್ತಾರೆ. Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020 ಮುಖರ್ಜಿಯವರ ಸಂಶೋಧನೆಯು ಭಾರತೀಯ ಮತದಾರರ ಪ್ರಚಾರಕರ ಪಾತ್ರದ ಮೇಲೆ ಕೇಂದ್ರೀಕರಿಸಿದೆ, 'ಭಾರತೀಯ ಉಪಖಂಡದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತದಾನದ ಹಕ್ಕು ಚಳುವಳಿ ಇತ್ತು ಮತ್ತು ಈ ಮಹಿಳೆಯರು ಇತರ ಮತದಾನದ ಹಕ್ಕು ಪ್ರಚಾರಕರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಜಾಲಗಳನ್ನು ರೂಪಿಸಿದ್ದಾರೆ' ಎಂದು ಬಹಿರಂಗಪಡಿಸಿದ್ದಾರೆ.Mukherjee, Sumita (2019). "Roy, Lolita [known as Mrs P. L. Roy] (b. 1865), social reformer and suffragist". Oxford Dictionary of National Biography. doi:10.1093/odnb/9780198614128.013.369120. ISBN 978-0-19-861412-8. Retrieved 12 November 2020 ಏಪ್ರಿಲ್ 2018 ರಲ್ಲಿ, ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿರುವ ಮಿಲಿಸೆಂಟ್ ಫಾಸೆಟ್ ಪ್ರತಿಮೆಯ ಕೆಳಗೆ ಒಂದು ಪೀಠವನ್ನು ಸ್ಥಾಪಿಸಲಾಯಿತು, ಇದರಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರ ಚಿತ್ರಗಳು ಇದ್ದವುಃ ರಾಣಿ ವಿಕ್ಟೋರಿಯಾ ನಾರ್ಫೋಕ್ ಮೂಲದ ದೇವ ಮಗಳು, ಸೋಫಿಯಾ ದುಲೀಪ್ ಸಿಂಗ್ ಮತ್ತು ಲೋಲಿತಾ ರಾಯ್. ಅದೇ ವರ್ಷದಲ್ಲಿ, ಮತದಾನದ ಹಕ್ಕು ಚಳವಳಿಯಲ್ಲಿ ರಾಯ್ ಅವರ ಕೆಲಸವನ್ನು ಆಚರಿಸುವ ಕಲಾಕೃತಿಯನ್ನು ಒಳಗೊಂಡ ಪ್ರದರ್ಶನವನ್ನು ಹ್ಯಾಮರ್ಸ್ಮಿತ್ ಟೌನ್ ಹಾಲ್ ನಡೆಸಲಾಯಿತು. ಏಪ್ರಿಲ್ 2018 ರಲ್ಲಿ, ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿರುವ ಮಿಲಿಸೆಂಟ್ ಫಾಸೆಟ್ ಪ್ರತಿಮೆಯ ಕೆಳಗೆ ಒಂದು ಪೀಠವನ್ನು ಸ್ಥಾಪಿಸಲಾಯಿತು, ಇದರಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರ ಚಿತ್ರಗಳು ಇದ್ದವುಃ ರಾಣಿ ವಿಕ್ಟೋರಿಯಾ ನಾರ್ಫೋಕ್ ಮೂಲದ ದೇವ ಮಗಳು "Suffrage Stories: Black And Minority Ethnic Women: Is There A 'Hidden History'?". Woman and her Sphere. 24 July 2017. Retrieved 12 November 2020., Indian Suffragettes: Changing Public Understanding of Suffrage Histories". University of Bristol.ಸೋಫಿಯಾ ದುಲೀಪ್ ಸಿಂಗ್ ಮತ್ತು ಲೋಲಿತಾ ರಾಯ್. ಅದೇ ವರ್ಷದಲ್ಲಿ, ಮತದಾನದ ಹಕ್ಕು ಚಳವಳಿಯಲ್ಲಿ ರಾಯ್ ಅವರ ಕೆಲಸವನ್ನು ಆಚರಿಸುವ ಕಲಾಕೃತಿಯನ್ನು ಒಳಗೊಂಡ ಪ್ರದರ್ಶನವನ್ನು ಹ್ಯಾಮರ್ಸ್ಮಿತ್ ಟೌನ್ ಹಾಲ್ ನಡೆಸಲಾಯಿತು.New town hall exhibition celebrates a pioneering Indian suffragette from Hammersmith". LBHF. 17 October 2018. Retrieved 12 November 2020."Visit LDN WMN: a series of free public artworks". London City Hall. 3 October 2018. Retrieved 12 November 2020. ಬಾಹ್ಯ ಸಂಪರ್ಕಗಳು ಫ್ಲಿಕರ್ ಲೋಲಿತಾ ರಾಯ್ ಪ್ರದರ್ಶನ https://www.flickr.com/photos/hammersmithandfulham/albu ಬ್ರಿಟಿಷ್ ಗ್ರಂಥಾಲಯದಲ್ಲಿ ಮಹಿಳೆಯರ ಪಟ್ಟಾಭಿಷೇಕದ ಮೆರವಣಿಗೆಯಲ್ಲಿ ಭಾರತೀಯ ಸಫ್ಫ್ರಾಗೆಟ್ಗಳುಬ್ರಿಟಿಷ್ ಲೈಬ್ರರಿ https://www.bl.uk/collection-items/photograph-of-indian-suffragettes-on-the-womens-coronation-procession ಉಲ್ಲೇಖಗಳು
ಶ್ಯಾಮ್ ಬಿಹಾರಿ ಪ್ರಸಾದ್ ಸಿನ್ಹಾ
https://kn.wikipedia.org/wiki/ಶ್ಯಾಮ್_ಬಿಹಾರಿ_ಪ್ರಸಾದ್_ಸಿನ್ಹಾ
ಏರ್ ಮಾರ್ಷಲ್ ಶ್ಯಾಮ್ ಬಿಹಾರಿ ಪ್ರಸಾದ್ ಸಿನ್ಹಾ, PVSM, AVSM, VM, ADC ಅವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದರು. ಅವರು ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (AOC-in-C), ಸೆಂಟ್ರಲ್ ಏರ್ ಕಮಾಂಡ್ ೧ ಜನವರಿ ೨೦೧೬ ರಿಂದ ೩೧ ಡಿಸೆಂಬರ್ ೨೦೧೮ ವರೆಗೆ ಸೇವೆ ಸಲ್ಲಿಸಿದ್ದಾರೆ. ಅವರು ಏರ್ ಮಾರ್ಷಲ್ ಕುಲವಂತ್ ಸಿಂಗ್ ಗಿಲ್ ಅವರಿಂದ ಅಧಿಕಾರ ವಹಿಸಿಕೊಂಡರು ಮತ್ತು ನಂತರ ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡರು. AVSM, VM. ಆರಂಭಿಕ ಜೀವನ ಮತ್ತು ಶಿಕ್ಷಣ ಸಿನ್ಹಾರವರು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ವಿದ್ಯಾರ್ಥಿ. ಅವರು ಫ್ರಾನ್ಸ್‌ನಲ್ಲಿ ಆಪರೇಷನಲ್ ಎಲೆಕ್ಟ್ರಾನಿಕ್ ವಾರ್‌ಫೇರ್ ಕೋರ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೆಕ್ಯುರಿಟಿ ಸ್ಟಡೀಸ್‌ನ ಕಾರ್ಯನಿರ್ವಾಹಕ ಕೋರ್ಸ್ ಅನ್ನು ಸಹ ಮಾಡಿಕೂಂಡಿದ್ದಾರೆ. ವೃತ್ತಿ ಸಿನ್ಹಾರವರು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ೧೫ ಜೂನ್ ೧೯೮೦ ರಂದು ನಿಯೋಜಿಸಲ್ಪಟ್ಟರು. ಅವರು ೩೭೦೦ ಗಂಟೆಗಳ ಕಾಲ ಹಾರಾಟವನ್ನು ಮಾಡಿದ್ದಾರೆ. ಹಲವಾರು ರೀತಿಯ ಹೋರಾಟಗಳಲ್ಲಿ ಭಾಗವಹಿಸಿದ ಅನುಭವವನ್ನು ಪಡೆದಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಅವರು ಈ ಕೆಳಗಿನ ಜವಾಬ್ದಾರಿ ಗಳನ್ನು ನಿಭಾಯಿಸಿದ್ದಾರೆ. ಎಲೆಕ್ಟ್ರಾನಿಕ್ ವಾರ್‌ಫೇರ್ ರೇಂಜ್‌ನ ಕಮಾಂಡೆಂಟ್ ಇಸ್ರೇಲ್‌ನಲ್ಲಿ AWACS ಪ್ರಾಜೆಕ್ಟ್ ತಂಡದ ಟೀಮ್ ಲೀಡರ್ ಫ್ರಂಟ್ ಲೈನ್ Su-30 MKI ಬೇಸ್‌ನ ಏರ್ ಆಫೀಸರ್ ಕಮಾಂಡಿಂಗ್ ವಾಯುಪಡೆಯ ಸಹಾಯಕ ಮುಖ್ಯಸ್ಥ (ಯೋಜನೆಗಳು) ಪ್ರಧಾನ ನಿರ್ದೇಶಕ ಯೋಜನೆಗಳು ಪ್ರಧಾನ ನಿರ್ದೇಶಕ C4ISR ಪ್ರಧಾನ ನಿರ್ದೇಶಕ ಸ್ವಾಧೀನಗಳು ಕಾರ್ಯಾಚರಣೆಯ ಉಪ ನಿರ್ದೇಶಕರು (ಎಲೆಕ್ಟ್ರಾನಿಕ್ ವಾರ್‌ಫೇರ್) ಬೇಸಿಕ್ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್‌ನ ಮುಖ್ಯ ಫ್ಲೈಯಿಂಗ್ ಬೋಧಕರಾಗಿ ಏರ್‌ಕ್ರೂ ಪರೀಕ್ಷಾ ಮಂಡಳಿಯಲ್ಲಿ ಏರ್ ಫೋರ್ಸ್ ಎಕ್ಸಾಮಿನರಾಗಿ ವಾಯುಪಡೆಯ ಉಪ ಮುಖ್ಯಸ್ಥ (೩೦ ಏಪ್ರಿಲ್ ೨೦೧೪ - ೩೧ ಡಿಸೆಂಬರ್ ೨೦೧೫) ಇದಲ್ಲದೆ ಅವರು 'ಎ' ವರ್ಗದ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್, ಇನ್‌ಸ್ಟ್ರುಮೆಂಟ್ ರೇಟಿಂಗ್ ಬೋಧಕ ಮತ್ತು ಪರೀಕ್ಷಕರಾಗಿದ್ದಾರು. ಅವರು ನಂ ೭ನೇ ಸ್ಕ್ವಾಡ್ರನ್‌ನ ಕಮೋಡೋರ್ ಕಮಾಂಡೆಂಟ್ ಆಗಿದ್ದರು. ಪ್ರಶಸ್ತಿಗಳು ಮತ್ತು ಪದಕಗಳು ಅವರ ವೃತ್ತಿಜೀವನದ ೩೮ ವರ್ಷಗಳ ಅವಧಿಯಲ್ಲಿ, ಅವರಿಗೆ ಹಲವಾರು ಪದಕಗಳನ್ನು ನೀಡಲಾಗಿದೆ: ಎರಡು ರಾಷ್ಟ್ರಪತಿ ಪದಕಗಳು, ಅತಿ ವಿಶಿಷ್ಟ ಸೇವಾ ಪದಕ (ಜನವರಿ ೨೦೧೧), ವಾಯು ಸೇನಾ ಪದಕ . ಮತ್ತು ಪರಮ ವಿಶಿಷ್ಟ ಸೇವಾ ಪದಕ (ಜನವರಿ ೨೦೧೮). ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ವಾಯು ಸೇನಾ ಪದಕ ಸಾಮಾನ್ಯ ಸೇವಾ ಪದಕ - ನಾಗಾ ಹಿಲ್ಸ್ ಸೇವೆ ಸಾಮಾನ್ಯ ಸೇವಾ ಪದಕ ವಿಶೇಷ ಸೇವಾ ಪದಕ ಆಪರೇಷನ್ ಪರಾಕ್ರಮ್ ಪದಕ ಸೈನ್ಯ ಸೇವಾ ಪದಕ ಹೈ ಆಲ್ಟಿಟ್ಯೂಡ್ ಸೇವಾ ಪದಕ ವಿದೇಶ್ ಸೇವಾ ಪದಕ ಸ್ವಾತಂತ್ರ್ಯ ಪದಕದ ೫೦ ನೇ ವಾರ್ಷಿಕೋತ್ಸವ ೦ವರ್ಷಗಳ ಸುದೀರ್ಘ ಸೇವಾ ಪದಕ ೦ವರ್ಷಗಳ ಸುದೀರ್ಘ ಸೇವಾ ಪದಕ ೯ ವರ್ಷಗಳ ಸುದೀರ್ಘ ಸೇವಾ ಪದಕ ವೈಯಕ್ತಿಕ ಜೀವನ ಅಲ್ಪನಾ ಸಿನ್ಹಾ ಇವರ ಧರ್ಮಪತ್ನಿ. ಇವರಿಗೆ ಒಬ್ಬ ಮಗನಿದ್ದಾನೆ. ಅವರ ಸಹೋದರ ಬಿಬಿಪಿ ಸಿನ್ಹಾ ಕೂಡ ಭಾರತೀಯ ವಾಯುಪಡೆಯಲ್ಲಿ ಏರ್ ಮಾರ್ಷಲ್ ಆಗಿದ್ದರು. "Air Marshal Sinha to be CAC chief - Times of India". The Times of India. Retrieved 12 October 2017. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಬಿಮಲ್ ವರ್ಮಾ
https://kn.wikipedia.org/wiki/ಬಿಮಲ್_ವರ್ಮಾ
ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಇವರು ಭಾರತೀಯ ನೌಕಾಪಡೆಯಲ್ಲಿ ನಿವೃತ್ತ ಫ್ಲ್ಯಾಗ್ ಆಫಿಸರ್ ಆಗಿದ್ದಾರೆ. ಇವರು ಅತಿ ವಿಶಿಷ್ಟ ಸೇವಾ ಪದಕ ಪುರಸ್ಕೃತರು ಹಾಗೂ ಡಿ-ಕ್ಯಾಂಪ್‌ನ ಸಹಾಯಕರಾಗಿದ್ದರು. ಇವರು ೧೩ ನೇ ಕಮಾಂಡರ್-ಇನ್-ಚೀಫ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಆಗಿ ೨೯ ಫೆಬ್ರವರಿ ೨೦೧೬ ರಿಂದ ೧ ಡಿಸೆಂಬರ್ ೨೦೧೯ ರವರೆಗೆ ಸೇವೆ ಸಲ್ಲಿಸಿದರು. ಆರಂಭಿಕ ಜೀವನ ಮತ್ತು ಶಿಕ್ಷಣ ಬಿಮಲ್ ವರ್ಮಾ ಡೆಹ್ರಾಡೂನ್‌ನ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜಿನಲ್ಲಿ (ಆರ್ ಐ ಎಂ ಸಿ), ವ್ಯಾಸಂಗ ಮಾಡಿದರು.  ನಂತರ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಭಾಗವಹಿಸಿದರು, ಇದರಲ್ಲಿ ಅವರು ಅತ್ಯುತ್ತಮ ನೌಕಾ ಕೆಡೆಟ್ ಎಂದು ಪ್ರಶಸ್ತಿ ಪಡೆದರು. ಅವರ ಹಿರಿಯ ಸಹೋದರ, ನಿರ್ಮಲ್ ಕುಮಾರ್ ವರ್ಮಾ ಕೂಡ ನೌಕಾಪಡೆಗೆ ಸೇರಿಕೊಂಡರು ಮತ್ತು ನೌಕಾಪಡೆಯ ೨೦ ನೇ ಮುಖ್ಯಸ್ಥರಾದರು. ವೃತ್ತಿ ವರ್ಮಾ ಅವರನ್ನು ೧ ಜನವರಿ ೧೯೮೦ ರಂದು ನೌಕಾಪಡೆಗೆ ನಿಯೋಜಿಸಲಾಯಿತು. ಅವರು ಸಂವಹನ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಉಭಯಚರ ಯುದ್ಧನೌಕೆಗಳಾದ ಐಎನ್ಎಸ್ ಶಾರ್ದೂಲ್ ಮತ್ತು ಐಎನ್ಎಸ್ ಮಗರ್, ವಿಧ್ವಂಸಕ ಐಎನ್ಎಸ್ ರಂಜಿತ್ ಮತ್ತು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ಮೈಸೂರುಗಳಿಗೆ ಕಮಾಂಡರ್ ಆಗಿದ್ದಾರೆ. ಭಾರತದ ರಾಯಭಾರ ಕಚೇರಿಯಲ್ಲಿ ಅವರು ಪ್ರಧಾನ ನೌಕಾ ನಿರ್ದೇಶಕರಾಗಿ ಮತ್ತು ಇರಾನ್‌ನ ಟೆಹ್ರಾನ್‌ನ ಭಾರತದ ರಾಯಭಾರ ಕಚೇರಿಯಲ್ಲಿ ನೌಕಾ ಅಟ್ಯಾಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಫ್ಲ್ಯಾಗ್ ಆಫೀಸರ್ ಆಗಿ, ಇವರು ಫ್ಲಾಗ್ ಆಫೀಸರ್ ಕಮಾಂಡಿಂಗ್ ಮಹಾರಾಷ್ಟ್ರ ಮತ್ತು ಗುಜರಾತ್ ನೇವಲ್ ಏರಿಯಾ, ಇನ್ಫಾರ್ಮಶನ್ ವಾರ್-ಫೇರ್ & ಆಪರೇಷನ್ ನಲ್ಲಿ ಅಸಿಸ್ಟೆಂಟ್ ಚೀಫ್ ಆಫ್ ನೇವಲ್ ಸ್ಟಾಫ್ ಕಾರ್ಯಾಚರಣೆಗಳಿಗೆ ಸೇವೆ ಸಲ್ಲಿಸಿದರು. ೧ ನವೆಂಬರ್ ೨೦೧೨ ರಂದು ವೈಸ್ ಅಡ್ಮಿರಲ್ ಹುದ್ದೆಗೆ ಬಡ್ತಿ ಪಡೆದ ನಂತರ, ಅವರು ಈಸ್ಟರ್ನ್ ನೇವಲ್ ಕಮಾಂಡ್‌ನ ಮುಖ್ಯಸ್ಥರಾಗಿ ನೇಮಕಗೊಂಡರು. ಅಲ್ಲಿ ಅವರು ಇಂಟರ್ನ್ಯಾಷನಲ್ ಫ್ಲೀಟ್ ರಿವ್ಯೂ ೨೦೧೬ ಅನ್ನು ಸಂಯೋಜಿಸಿದರು. ಪ್ರಶಸ್ತಿಗಳು ಅತಿ ವಿಶಿಷ್ಟ ಸೇವಾ ಪದಕ ಆಪರೇಷನ್ ಪರಾಕ್ರಮ್ ಪದಕ ಸೈನ್ಯ ಸೇವಾ ಪದಕ ವಿದೇಶ್ ಸೇವಾ ಪದಕ ಸ್ವಾತಂತ್ರ್ಯ ಪದಕದ ೫೦ ನೇ ವಾರ್ಷಿಕೋತ್ಸವ ೩೦ ವರ್ಷಗಳ ಸುದೀರ್ಘ ಸೇವಾ ಪದಕ ೨೦ ವರ್ಷಗಳ ಸುದೀರ್ಘ ಸೇವಾ ಪದಕ ೯ ವರ್ಷಗಳ ಸುದೀರ್ಘ ಸೇವಾ ಪದಕ ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಬೆಂಗಳೂರು ಜಿಲ್ಲೆ
https://kn.wikipedia.org/wiki/ಬೆಂಗಳೂರು_ಜಿಲ್ಲೆ
ಬೆಂಗಳೂರು ಜಿಲ್ಲೆ ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು. ಬೆಂಗಳೂರು ತಾಲೂಕು ೮೯೦ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ೧೯೫೬ರಲ್ಲಿ ಬೆಂಗಳೂರು ೧೦ ತಾಲ್ಲೂಕುಗಳನ್ನು ಹೊಂದಿದ್ದು, ಬೆಂಗಳೂರು, ಆನೇಕಲ್, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ತಾಲೂಕುಗಳನ್ನು ಒಳಗೊಂಡಿತ್ತು. ಬೆಂಗಳೂರು ಜಿಲ್ಲೆಯನ್ನು ೩ ಭಾಗಗಳಾಗಿ ವಿಂಗಡಿಸಿ ಬೆಂಗಳೂರು ನಗರ (ಬೆಂಗಳೂರು) ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ (ದೊಡ್ಡಬಳ್ಳಾಪುರ) ಜಿಲ್ಲೆ ಹಾಗೂ ನವ ಬೆಂಗಳೂರು (ರಾಮನಗರ) ಜಿಲ್ಲೆಯಾಗಿ ವಿಭಜಿಸಿ ರಚನೆ ಮಾಡಲಾಗಿದೆ. ನಂತರ ೧೯೮೪ರಲ್ಲಿ ಬೆಂಗಳೂರು ಜಿಲ್ಲೆಯನ್ನು ೨ ಭಾಗಗಳಾಗಿ ವಿಂಗಡಿಸಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿ ವಿಭಜಿಸಲಾಯಿತು, ಬೆಂಗಳೂರು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ಹೊಸದಾಗಿ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲೂಕು ರಚನೆ ಮಾಡಿ ಅನೇಕಲ್ ತಾಲೂಕು ಸೇರಿಸಿ ಬೆಂಗಳೂರು ನಗರ ಜಿಲ್ಲೆ ರಚನೆಯಾಯಿತು, ಬೆಂಗಳೂರು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚನೆಯಾಯಿತು. ನಂತರ ೨೦೦೭ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ೨ ಭಾಗಗಳಾಗಿ ವಿಂಗಡಿಸಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಾಗಿ ವಿಭಜಿಸಲಾಯಿತು, ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚನೆಯಾಯಿತು. ರಾಮನಗರ ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲೂಕುಗಳನ್ನು ಸೇರಿಸಿ ನವ ಬೆಂಗಳೂರು (ರಾಮನಗರ) ಜಿಲ್ಲೆ ರಚನೆಯಾಯಿತು. ೨೦೨೦ರಲ್ಲಿ ಬೆಂಗಳೂರು ೫ ತಾಲ್ಲೂಕು ಹೊಂದಿದ್ದು, ಬೆಂಗಳೂರು ತಾಲೂಕುನ್ನು ವಿಭಜಸಿ ಯಲಹಂಕ ತಾಲೂಕು ರಚನೆ, ಬೆಂಗಳೂರು ದಕ್ಷಿಣ ತಾಲೂಕನ್ನು ಕೆಂಗೇರಿ ಎಂದು ಮರು ನಾಮಕರಣ ಮಾಡಲಾಗಿದೆ, ಕೆಂಗೇರಿ ತಾಲ್ಲೂಕು ವಿಭಜಸಿ ಕೃಷ್ಣರಾಜಪುರ ತಾಲೂಕು ರಚನೆ ಮಾಡಲಾಗಿದೆ, ಮತ್ತು ಆನೇಕಲ್ ತಾಲೂಕು ಹೊಂದಿದೆ. ಆಡಳಿತದ ಅನುಕೂಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಯನ್ನು ತಾಲೂಕುವಾರು ರಚನೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ರಚನೆ ಮಾಡಲಾಗುವುದು. 01.ಬೆಂಗಳೂರು ಮಹಾನಗರ ಪಾಲಿಕೆ 02.ಕೆಂಗೇರಿ ಮಹಾನಗರ ಪಾಲಿಕೆ 03.ಕೃಷ್ಣರಾಜ ಪುರ ಮಹಾನಗರ ಪಾಲಿಕೆ 04.ಯಲಹಂಕ ಮಹಾನಗರ ಪಾಲಿಕೆ ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ) ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಬೆಂಗಳೂರು ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣ ಜಿಲ್ಲೆ ತಾಲೂಕುವಿಸ್ತೀರ್ಣ 01.ಬೆಂಗಳೂರು (1956 ಜನಗಣತಿ ಪ್ರಕಾರ) (1986 ಜನಗಣತಿ ಪ್ರಕಾರ) (2007 ಜನಗಣತಿ ಪ್ರಕಾರ) 01.ಬೆಂಗಳೂರು 393 ಚ.ಕಿ.ಮೀ 02.ಆನೇಕಲ್ 530 ಚ.ಕಿ.ಮೀ ೦3.ಕೆಂಗೇರಿ 540 ಚ.ಕಿ.ಮೀ 04.ಕೃಷ್ಣರಾಜ ಪುರ 329 ಚ.ಕಿ.ಮೀ 05.ಯಲಹಂಕ 401 ಚ.ಕಿ.ಮೀ ಒಟ್ಟು ಜಿಲ್ಲೆಯ ವಿಸ್ತೀರ್ಣ 2196 ಚ.ಕಿ.ಮೀ 02.ದೊಡ್ಡಬಳ್ಳಾಪುರ 01.ದೊಡ್ಡಬಳ್ಳಾಪುರ 791 ಚ.ಕಿ.ಮೀ 02.ದೇವನಹಳ್ಳಿ 449 ಚ.ಕಿ.ಮೀ 03.ಹೊಸಕೋಟೆ 548 ಚ.ಕಿ.ಮೀ 04.ನೆಲಮಂಗಲ 510 ಚ.ಕಿ.ಮೀ 05.ದಾಬಸ್ ಪೇಟೆ 000 ಚ.ಕಿ.ಮೀ ಒಟ್ಟು ಜಿಲ್ಲೆಯ ವಿಸ್ತೀರ್ಣ 2298 ಚ.ಕಿ.ಮೀ 03.ರಾಮನಗರ 01.ರಾಮನಗರ 630 ಚ.ಕಿ.ಮೀ 02.ಚನ್ನಪಟ್ಟಣ 530 ಚ.ಕಿ.ಮೀ ೦3.ಮಾಗಡಿ 540 ಚ.ಕಿ.ಮೀ 04.ಕನಕಪುರ 329 ಚ.ಕಿ.ಮೀ 05.ಹಾರೋಹಳ್ಳಿ 401 ಚ.ಕಿ.ಮೀ ಒಟ್ಟು ಜಿಲ್ಲೆಯ ವಿಸ್ತೀರ್ಣ 2196 ಚ.ಕಿ.ಮೀ
ಸಾರ್ಜೆಂಟ್
https://kn.wikipedia.org/wiki/ಸಾರ್ಜೆಂಟ್
ಸಾರ್ಜೆಂಟ್ (ಸಾರ್ಜೆಂಟ್) ಎಂಬುದು ಅನೇಕ ದೇಶಗಳ ಸಶಸ್ತ್ರ ಪಡೆಗಳಿಂದ ಬಳಕೆಯಲ್ಲಿರುವ ಶ್ರೇಣಿಯಾಗಿದೆ. ಇದು ಪೊಲೀಸ್ ಸೇವೆಗಳಲ್ಲಿ ಶ್ರೇಣಿಯಾಗಿದೆ. ಸಾರ್ಜೆಂಟ್ ಅನ್ನು ದಿ ರೈಫಲ್ಸ್ ಮತ್ತು ಬ್ರಿಟಿಷ್ ಲೈಟ್ ಪದಾತಿದಳದಿಂದ ತಮ್ಮ ಪರಂಪರೆಯನ್ನು ಸೆಳೆಯುವ ಇತರ ಘಟಕಗಳಲ್ಲಿ ಬಳಸಲಾಗುತ್ತದೆ. ಇದರ ಮೂಲವು ಲ್ಯಾಟಿನ್ ಸರ್ವಿಯೆನ್ಸ್, 'ಒಂದು ಸೇವೆ ಮಾಡುವವನು', ಇದು ಹಳೆಯ ಫ್ರೆಂಚ್ ಪದ ಸಾರ್ಜಂಟ್. ಸಾರ್ಜೆಂಟ್ ಎಂಬ ಪದವು ಕಾರ್ಪೋರಲ್‌ನ ಶ್ರೇಣಿಗಿಂತ ಮೇಲಿರುವ ನಿಯೋಜಿತ ಅಧಿಕಾರಿಯನ್ನು ಸೂಚಿಸುತ್ತದೆ ಮತ್ತು ಅಮೆರಿಕ ದಲ್ಲಿ ಲೆಫ್ಟಿನೆಂಟ್‌ಗಿಂತ ಕೆಳಗಿನ ಪೊಲೀಸ್ ಅಧಿಕಾರಿ ಮತ್ತು ಯು.ಕೆ ಯಲ್ಲಿ ಇನ್ಸ್‌ಪೆಕ್ಟರ್‌ಗಿಂತ ಕೆಳಗಿರುತ್ತದೆ. ಹೆಚ್ಚಿನ ಸೈನ್ಯಗಳಲ್ಲಿ, ಸಾರ್ಜೆಂಟ್‌ನ ಶ್ರೇಣಿಯು ಸ್ಕ್ವಾಡ್‌ನ (ಅಥವಾ ವಿಭಾಗ)ಗೆ ಅನುರೂಪವಾಗಿದೆ. ಕಾಮನ್‌ವೆಲ್ತ್ ಸೈನ್ಯಗಳಲ್ಲಿ, ಇದು ಹೆಚ್ಚು ಹಿರಿಯ ಶ್ರೇಣಿಯಾಗಿದ್ದು, ಸ್ಥೂಲವಾಗಿ ಎರಡನೇ-ಕಮಾಂಡ್‌ಗೆ ಅನುಗುಣವಾಗಿರುತ್ತದೆ. ಯುನೈಟೆಡ್ ಸ್ಟೇಟ್ಸ್ ಸೈನ್ಯದಲ್ಲಿ, ಸಾರ್ಜೆಂಟ್ ಹೆಚ್ಚು ಕಿರಿಯ ಶ್ರೇಣಿಯಾಗಿದ್ದು, ಸ್ಕ್ವಾಡ್- (೧೨ ವ್ಯಕ್ತಿ) ಅಥವಾ ಪ್ಲಟೂನ್- (೩೬ ವ್ಯಕ್ತಿ) ನಾಯಕನಿಗೆ ಅನುಗುಣವಾಗಿರುತ್ತಾನೆ. ಹೆಚ್ಚಿನ ಹಿರಿಯ ನಿಯೋಜಿಸದ ಶ್ರೇಣಿಗಳು ಸಾಮಾನ್ಯವಾಗಿ ಸಾರ್ಜೆಂಟ್‌ನಲ್ಲಿ ಬದಲಾವಣೆಗಳಾಗಿವೆ, ಉದಾಹರಣೆಗೆ ಸಿಬ್ಬಂದಿ ಸಾರ್ಜೆಂಟ್, ಗನ್ನರಿ ಸಾರ್ಜೆಂಟ್, ಮಾಸ್ಟರ್ ಸಾರ್ಜೆಂಟ್, ಮೊದಲ ಸಾರ್ಜೆಂಟ್ ಮತ್ತು ಸಾರ್ಜೆಂಟ್ ಮೇಜರ್. ಅನೇಕ ರಾಷ್ಟ್ರಗಳು ಮತ್ತು ಸೇವೆಗಳಲ್ಲಿ, ಸಾರ್ಜೆಂಟ್‌ನ ಶ್ರೇಣಿಯ ಚಿಹ್ನೆಯು ಸಾಮಾನ್ಯವಾಗಿ ಮೂರು ಚೆವ್ರಾನ್‌ಗಳನ್ನು ಹೊಂದಿರುತ್ತದೆ. ಉಲ್ಲೆಖಗಳು
ಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳು
https://kn.wikipedia.org/wiki/ಮಿಲಿಟರಿ_ಪ್ರಶಸ್ತಿಗಳು_ಮತ್ತು_ಬಿರುದುಗಳು
thumb| ಫ್ರೆಂಚ್ ಫಾರಿನ್ ಲೀಜನ್ ಮ್ಯೂಸಿಯಂನಲ್ಲಿ ಪದಕಗಳ ಗೋಡೆ ಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳು ಅರ್ಹ ಮಿಲಿಟರಿ ಯೋಧರಿಗೆ ಅವರ ಅತ್ಯುತ್ತಮ ಸೇವೆ ಅಥವಾ ಸಾಧನೆಗಾಗಿ ಗೌರವ ಸೂಚಕವಾಗಿ ನೀಡಲಾಗುವ ಪ್ರಶಸ್ತಿಗಳಾಗಿವೆ.DoD Manual 1348.33, 2010, Vol. 3. ಈ ಪದಕಗಳು ಸಾಮಾನ್ಯವಾಗಿ ರಿಬ್ಬನ್ ಮತ್ತು ಬಿಲ್ಲೆಯನ್ನು ಒಳಗೊಂಡಿರುತ್ತವೆ. ಯೋಧರಿಗೆ ನೀಡಲಾಗುವ ನಾಗರಿಕ ಬಿರುದುಗಳನ್ನು ಮಿಲಿಟರಿ ಅಲಂಕಾರಗಳೆಂದು ಪರಿಗಣಿಸಬಾರದು. ಆದಾಗ್ಯೂ ಕೆಲವು ಅಶ್ವದಳಗಳು ನಾಗರಿಕ ಮತ್ತು ಮಿಲಿಟರಿ ವಿಭಾಗಗಳನ್ನು ಹೊಂದಿವೆ. ಪೋಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ವೀಕರಿಸಿದ ಪದಕಗಳನ್ನು ಕೆಲವೊಮ್ಮೆ ಮಿಲಿಟರಿ ಪದಕಗಳೆಂದು ಪರಿಗಣಿಸಬಹುದು ಆದರೆ ಅವುಗಳು ಕಟ್ಟುನಿಟ್ಟಾಗಿ ಮಿಲಿಟರಿ ಪ್ರಶಸ್ತಿಗಳಲ್ಲ ಅದರ ಮಾದರಿ ಎಂದು ಪರಿಗಣಿಸಬಹುದು. ಇತಿಹಾಸ thumb| ೧೯೪೧ ರಿಂದ ಮ್ಯಾನರ್‌ಹೈಮ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ದಿ ಕ್ರಾಸ್ ಆಫ್ ಲಿಬರ್ಟಿಯ I ವರ್ಗ ಬಿರುದುಗಳು ಪ್ರಾಚೀನ ಕಾಲದಿಂದಲೂ ಬಂದಿದೆ. ಈಜಿಪ್ಟಿನ ಒಂದು ಹಳೆಯ ಸಾಮ್ರಾಜ್ಯ ದಲ್ಲಿಆರ್ಡರ್ ಆಫ್ ದಿ ಗೋಲ್ಡನ್ ಕಾಲರ್ ಎಂಬ ಬಿರುದಿತ್ತು. ಆದರೆ ಅದರ ನಂತರ ಬಂದ ಹೊಸ ರಾಜ್ಯವು ಆರ್ಡರ್ ಆಫ್ ದಿ ಗೋಲ್ಡನ್ ಫ್ಲೈ ಎಂದು ಹೊಸ ಬಿರುದನ್ನು ನೀಡಿತು. ಸೆಲ್ಟ್ಸ್ ಮತ್ತು ರೋಮನ್ನರು ಟಾರ್ಕ್ ಎಂಬ ಲೋಹದ ಉಂಗುರವನ್ನು ಕುತ್ತಿಗೆಯಲ್ಲಿ ಧರಿಸುತ್ತಿದ್ದರು. ಹಸ್ತ ಪುರ, ಎಂಬ ಇನ್ನೊಂದು ಪದಕ ಮತ್ತು ತುದಿ ಇಲ್ಲದ ಈಟಿಯಂತಹ ಇತರ ಮಿಲಿಟರಿ ಪದಕಗಳನ್ನು ಪಡೆಯುತ್ತಿದ್ದರು. ದಯಾಕ್‌ಗಳು ಎನ್ನುವ ಒಂದು ಪಂಗಡ ಹಚ್ಚೆಗಳನ್ನು ಧರಿಸುತ್ತಾರೆ. ನೆಕ್ಲೇಸ್‌ಗಳು ಮತ್ತು ಕಡಗಗಳನ್ನು ಆರಂಭಿಕ ಮಧ್ಯಯುಗದಲ್ಲಿ ನೀಡಲಾಯಿತು, ಇದು ದೊಡ್ಡದಾದ, ಸಮೃದ್ಧವಾದ ಆಭರಣದ ನೆಕ್ಲೇಸ್‌ಗಳಾಗಿ ವಿಕಸನಗೊಂಡಿತು. ಆಗಾಗ್ಗೆ ಪೆಂಡೆಂಟ್‌ಗಳನ್ನು (ಸಾಮಾನ್ಯವಾಗಿ ಪದಕ ) ಲಗತ್ತಿಸಲಾಗಿದೆ. ಇನ್ನೂ ಬಳಕೆಯಲ್ಲಿರುವ ಅತ್ಯಂತ ಹಳೆಯ ಮಿಲಿಟರಿ ಅಲಂಕಾರಗಳೆಂದರೆ ಸ್ವೀಡನ್‌ನ ಫೋರ್ ಟ್ಯಾಪರ್‌ಹೆಟ್ ಐ ಫಾಲ್ಟ್ ('ಫೀಲ್ಡ್‌ನಲ್ಲಿ ಶೌರ್ಯಕ್ಕಾಗಿ') ಮತ್ತು ಫೋರ್ ಟ್ಯಾಪರ್‌ಹೆಟ್ ಟು ಸ್ಜೋಸ್ ('ಫಾರ್ ವೆಲರ್ ಅಟ್ ಸೀ') ಅನ್ನು ಸ್ವೀಡಿಷ್ ಸಶಸ್ತ್ರ ಪಡೆಗಳ ಅಧಿಕಾರಿಗಳು ಮತ್ತು ಸೈನಿಕರಿಗೆ ನೀಡಲಾಗುತ್ತದೆ. ಪದಕಗಳು ಶೌರ್ಯವನ್ನು ಸೂಚಿಸುತ್ತವೆ - ಯುದ್ಧಕಾಲದಲ್ಲಿ ಮೈದಾನದಲ್ಲಿ ಅಥವಾ ಸಮುದ್ರದಲ್ಲಿ ಮಾಡಿದ ಶೌರ್ಯ. ಈ ಪದಕವನ್ನು ಸ್ವೀಡಿಷ್ ರಾಜ ಗುಸ್ತಾವ್ III ರಷ್ಯಾ ವಿರುದ್ಧದ ಯುದ್ಧದ ಸಮಯದಲ್ಲಿ ೨೮ ಮೇ ೧೭೮೯ ರಂದು ಕೊಡುತ್ತಿದ್ದರು. ತಾಂತ್ರಿಕವಾಗಿ ಇದು ಇನ್ನೂ ಸಕ್ರಿಯವಾಗಿದ್ದರೂ, ಪ್ರಾಯೋಗಿಕ ಉದ್ದೇಶಗಳಿಗಾಗಿ ಇದು ಇಂದು ಅನುಪಯೋಗವಾಗಿದೆ. ೧೯೧೫ ರಿಂದ ನೀಡಲಾಗಿಲ್ಲ. ಮತ್ತೂಂದು ಅತ್ಯಂತ ಹಳೆಯದು ಆಸ್ಟ್ರೋ-ಹಂಗೇರಿಯನ್ ಟ್ಯಾಪ್‌ಫರ್‌ಕೀಟ್ಸ್ ಮೆಡೈಲ್ ಗೌರವ ಪದಕ ೧೭೮೯-೧೭೯೨ ಶೌರ್ಯಕ್ಕಾಗಿ ಕೊಡುತ್ತಿದ್ದರು. ಈ ಪದಕವನ್ನು ಎರಡನೇ ಚಕ್ರವರ್ತಿ ಜೋಸೆಫ್ ರಿಂದ ೧೯ ಜುಲೈ ೧೭೮೯ ರಂದು ಸ್ಥಾಪಿಸಲಾಯಿತು. ಇನ್ನೂ ಬಳಕೆಯಲ್ಲಿರುವ ಮತ್ತೊಂದು ಹಳೆಯ ಮಿಲಿಟರಿ ಅಲಂಕಾರವೆಂದರೆ ಪೋಲೆಂಡ್‌ನ ವಾರ್ ಆರ್ಡರ್ ಆಫ್ ವರ್ತುಟಿ ಮಿಲಿಟರಿ ಇದನ್ನು ಮೊದಲು ೧೭೯೨ ರಲ್ಲಿ ನೀಡಲಾಯಿತು. ನಕಲು ಪದಕಗಳು ಪದಕವನ್ನು ಹೆಚ್ಚು ಮೌಲ್ಯಯುತವಾಗಿ ಕಾಣುವಂತೆ ಅಥವಾ ಹೆಚ್ಚು ಅಲಂಕರಿಸಿದ ಸೈನಿಕನಂತೆ ಕಾಣುವಂತೆ ಅನೇಕ ಜನರು ಪದಕಗಳನ್ನು ನಕಲಿ ಮಾಡಿದ್ದಾರೆ. ಮೆಡಲ್ ಫೋರ್ಜರಿಗಳಲ್ಲಿ : ಬಾರ್‌ಗಳನ್ನು ಸೇರಿಸುವುದು, ಅದರ ಮೇಲೆ ಪ್ರಸಿದ್ಧ ಸೈನಿಕನ ಹೆಸರನ್ನು ಕೆತ್ತಿಸುವುದು ಅಥವಾ ಸಂಪೂರ್ಣ ಹೊಸ ಪದಕವನ್ನು ರಚಿಸುವುದು ಉಂಟು. ಮೆಡಲ್ ಫೋರ್ಜರಿ ಹೆಚ್ಚಿನ ದೇಶಗಳಲ್ಲಿ ಕಾನೂನು ಬಾಹಿರವಾಗಿದೆ ಮತ್ತು ಜೈಲು ಶಿಕ್ಷೆಗೆ ಗುರಿಪಡಿಸಬಹುದು. ಸಮಕಾಲೀನ ಬಳಕೆ ಇಂದಿನ ಮಿಲಿಟರಿ ಅಲಂಕಾರಗಳೆಂದರೆ: ಆರ್ಡರ್  ಆಫ್ ಮೆರಿಟ್ ಶೌರ್ಯ ಪ್ರಶಸ್ತಿಗಳು, ರಿಬ್ಬನ್‌ನಲ್ಲಿ ಶಿಲುಬೆ, ನಕ್ಷತ್ರ ಅಥವಾ ಪದಕದ ರೂಪದಲ್ಲಿ ವಿಶಿಷ್ಟ ಸೇವಾ ಪ್ರಶಸ್ತಿಗಳು, ರಿಬ್ಬನ್‌ನಲ್ಲಿ ಶಿಲುಬೆ, ನಕ್ಷತ್ರ ಅಥವಾ ಪದಕದ ರೂಪದಲ್ಲಿ ರಿಬ್ಬನ್ ಮೇಲೆ ಧರಿಸಿರುವ ಕ್ಯಾಂಪೈನ್ ಮೇಡಲ್ಸ್ ರಿಬ್ಬನ್ ಮೇಲೆ ಧರಿಸಿರುವ ಸರ್ವಿಸ್ ಮೆಡಲ್ (ಸೇವಾ ಪದಕಗಳು) ಯುದ್ಧದ ಗೌರವಗಳು, ಕ್ಯಾಂಪೈನ್ ಸ್ಟ್ರೀಮರ್‌ಗಳು, ಫೋರ್‌ರೇಜ್‌ಗಳು ಅಥವಾ ಯೂನಿಟ್ ಸೈಟೇಷನ್ ರೂಪದಲ್ಲಿ ಸಂಪೂರ್ಣ ಘಟಕಗಳಿಗೆ ಪ್ರಶಸ್ತಿಗಳು. ಹೆಚ್ಚಿನ ನ್ಯಾಟೋ ಮಿಲಿಟರಿಗಳಲ್ಲಿ, ಸೇವೆಯ ರಿಬ್ಬನ್‌ಗಳನ್ನು ಸಾಮಾನ್ಯವಾಗಿ ದೈನಂದಿನ ಸಂದರ್ಭಗಳಲ್ಲಿ (ನಿಜವಾದ ಪದಕಗಳಿಗೆ ವಿರುದ್ಧವಾಗಿ) ಧರಿಸಲಾಗುತ್ತದೆ. ಸಹ ನೋಡಿ ಮಿಲಿಟರಿ ಅಲಂಕಾರಗಳ ಪಟ್ಟಿ ದೇಶದ ಅತ್ಯುನ್ನತ ಮಿಲಿಟರಿ ಅಲಂಕಾರಗಳ ಪಟ್ಟಿ ನಾಗರಿಕ ಅಲಂಕಾರ ರಾಜ್ಯ ಅಲಂಕಾರ ಕತ್ತಿನ ಅಲಂಕಾರ ಕಾಮನ್ವೆಲ್ತ್ ರಿಯಲ್ಮ್ಸ್ ಆದೇಶಗಳು ಮತ್ತು ಅಲಂಕಾರಗಳು ಯುನೈಟೆಡ್ ಸ್ಟೇಟ್ಸ್ ಮಿಲಿಟರಿಯ ಪ್ರಶಸ್ತಿಗಳು ಮತ್ತು ಅಲಂಕಾರಗಳು ರಷ್ಯಾದ ಒಕ್ಕೂಟದ ಪ್ರಶಸ್ತಿಗಳು ಮತ್ತು ಅಲಂಕಾರಗಳು ಸೋವಿಯತ್ ಒಕ್ಕೂಟದ ಪ್ರಶಸ್ತಿಗಳು ಮತ್ತು ಅಲಂಕಾರಗಳು ಇಸ್ರೇಲಿ ಮಿಲಿಟರಿ ಅಲಂಕಾರಗಳು ಆದೇಶಗಳು, ಅಲಂಕಾರಗಳು ಮತ್ತು ಸ್ಪೇನ್‌ನ ಪದಕಗಳು ಬೆಲ್ಜಿಯಂನ ಆದೇಶಗಳು, ಅಲಂಕಾರಗಳು ಮತ್ತು ಪದಕಗಳು ಜರ್ಮನ್ ಸಶಸ್ತ್ರ ಪಡೆಗಳ ಪ್ರಶಸ್ತಿಗಳು ಮತ್ತು ಅಲಂಕಾರಗಳು ಯುನೈಟೆಡ್ ಕಿಂಗ್‌ಡಮ್‌ನ ಆದೇಶಗಳು, ಅಲಂಕಾರಗಳು ಮತ್ತು ಪದಕಗಳು ಪದಕ ಹಣದುಬ್ಬರ ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ದೇವ್ ರಾಜ್ ಸಿಂಗ್ ಠಾಕೂರ್
https://kn.wikipedia.org/wiki/ದೇವ್_ರಾಜ್_ಸಿಂಗ್_ಠಾಕೂರ್
ಸಾರ್ಜೆಂಟ್ ದೇವ್ ರಾಜ್ ಸಿಂಗ್ ಠಾಕೂರ್, ಕೀರ್ತಿ ಚಕ್ರ (ಮರಣ ಮೇ ೧೯೮೭), ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸಾರ್ಜೆಂಟ್ ಆಗಿದ್ದರು. ನಾಥೂರಾಂ ಗೋಡ್ಸೆಯನ್ನು ಬೆನ್ನಟ್ಟಿ ಹಿಡಿದು ಬಂಧಿಸಿದ್ದಕ್ಕಾಗಿ ಇವರು ಪ್ರಾಮುಖ್ಯತೆ ಪಡೆದರು. ೧೯೫೨ ರಲ್ಲಿ ಭಾರತದ ಸಮಕಾಲೀನ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಅವರು ಗೋಡ್ಸೆಯನ್ನು ಬಂಧಿಸಿದ್ದಕ್ಕಾಗಿ ಅವರಿಗೆ ಕೀರ್ತಿ ಚಕ್ರ ಶೌರ್ಯ ಪ್ರಶಸ್ತಿಯನ್ನು ನೀಡಲಾಯಿತು ಮುಂದೆ ಅವರು ವಾರಂಟ್ ಅಧಿಕಾರಿಯಾಗಿ ಬಡ್ತಿ ಪಡೆದರು. ವೈಯಕ್ತಿಕ ವಿವರಗಳು ಇವರಿಗೆ ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದರು. ಭಾರತೀಯ ವಾಯುಪಡೆಯಲ್ಲಿ ಸೇವೆಯಲ್ಲಿದ್ದಾಗ, ಅವರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡರು. ನಂತರ ಅವರನ್ನು ನಿವೃತ್ತಿಯ ಮೇಲೆ ಕಳುಹಿಸಲಾಯಿತು. ಅವರು ಅಮೃತಸರದಲ್ಲಿ ೧೪ ವರ್ಷಗಳ ಕಾಲ ಮಾನಸಿಕ ಆರೋಗ್ಯ ಕೇಂದ್ರದಲ್ಲಿದ್ದರು. ಅವನ ಮಾನಸಿಕ ಅಸಮತೋಲನಕ್ಕೆ ಕಾರಣಗಳು ತಿಳಿದಿಲ್ಲ. ಬಹುಶಃ ನಾಥುರಾಮ್ ಗೋಡ್ಸೆಯನ್ನು ಬಂಧಿಸಿದಿಂದ ಆಗಿರಬಹುದು. ಗೋಡ್ಸೆ ಮೋಹನ್ ದಾಸ್ ಗಾಂಧಿಯನ್ನು ಕೊಂದ ವ್ಯಕ್ತಿ. ಇವರು ಸಾಯುವವರೆಗೂ ಭಾರತ ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯುತ್ತಿದ್ದರು (ಮೇ ೧೯೮೭ ರವರಗೆ) ಪ್ರಶಸ್ತಿಗಳು 1952 ರಲ್ಲಿ ಅಶೋಕ ಚಕ್ರ ಪ್ರಶಸ್ತಿ (ವರ್ಗ II). ಉಲ್ಲೇಖಗಳು ಬಡತನವು ಗೋಡ್ಸೆ ಗ್ರಾಬರ್ ಕುಟುಂಬವನ್ನು ಹಿಂಬಾಲಿಸುತ್ತದೆ, ಹಿಂದೂಸ್ತಾನ್ ಟೈಮ್ಸ್ ಲೇಖನವನ್ನು ಯುಸಿಎಎನ್ ಇಂಡಿಯಾದಲ್ಲಿ ನಕಲಿಸಲಾಗಿದೆ. 64 ವರ್ಷಗಳ ನಂತರ, ಗಾಂಧಿಯ ಹಂತಕನನ್ನು ಶಿಕ್ಷೆಗೆ ಒಳಪಡಿಸಿದ ವ್ಯಕ್ತಿಯ ಕುಟುಂಬ ದೇವ್ ರಾಜ್ ಠಾಕೂರ್ ಜೀ ನ್ಯೂಸ್ ವರ್ಗ:ಮಹಾತ್ಮ ಗಾಂಧಿ ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
ಸಂತಾರಾ ರಾಜವಂಶ
https://kn.wikipedia.org/wiki/ಸಂತಾರಾ_ರಾಜವಂಶ
thumb| ಕಾರ್ಕಳದಲ್ಲಿ ಬಾಹುಬಲಿಯ ಏಕಶಿಲೆಯನ್ನು ೧೪೩೨ ಸಿಇ, ರಲ್ಲಿ ಸಂತರ-ಭೈರರಸ ರಾಜವಂಶದ ದೊರೆ ಸ್ಥಾಪಿಸಿದರು. ಸಂತಾರ ಅಥವಾ ಭೈರರಸ Alternate forms of the dynasty's name include Santha, Santa, Santhara. The kings of the dynasty also attached titles like Pandya and Odeya to their names. ಭಾರತದ ಕರ್ನಾಟಕದ ಮಧ್ಯಕಾಲೀನ ಆಡಳಿತ ರಾಜವಂಶವಾಗಿತ್ತು. Chavan, Shakuntala Prakash (2005). Jainism in Southern Karnataka Up to AD 1565. D.K. Printworld. pp. 181–183. ISBN 9788124603154. Retrieved 24 February 2018. ಅವರ ಸಾಮ್ರಾಜ್ಯದ ವ್ಯಾಪ್ತಿ ಪ್ರದೇಶವು ಮಲೆನಾಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳನ್ನು ಒಳಗೊಂಡಿತ್ತು. ಇವರ ರಾಜ್ಯವು ಎರಡು ರಾಜಧಾನಿಗಳನ್ನು ಹೊಂದಿತ್ತು. ಕರಾವಳಿಯ ಬಯಲು ಸೀಮೆಯಲ್ಲಿ ಕಾರ್ಕಳ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಳಸ . ಆದ್ದರಿಂದ ಅವರು ಆಳಿದ ಪ್ರದೇಶವನ್ನು ಕಳಸ-ಕಾರ್ಕಳ ಸಾಮ್ರಾಜ್ಯ ಎಂದೂ ಕರೆಯುತ್ತಾರೆ. ಸಂತರು ಜೈನ ಮತದವರಾಗಿದ್ದರು ಮತ್ತು ಶೈವ ಅಲುಪಾ ರಾಜಮನೆತನದೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದರು. ವಿಜಯನಗರ ಸಾಮ್ರಾಜ್ಯದ ಉದಯದ ನಂತರ ಸಂತರು ಅದರ ಸಾಮಂತರಾದರು. ಈ ಅವಧಿಯಲ್ಲಿ, ಸಾಂತರ ದೊರೆ ವೀರ ಪಾಂಡ್ಯ ಭೈರರಸ ಕಾರ್ಕಳದಲ್ಲಿ ಬಾಹುಬಲಿಯ ಏಕಶಿಲೆಯನ್ನು ಸ್ಥಾಪಿಸಿದನು. ವಿಜಯನಗರದ ಅಳಿವಿನ ನಂತರ ಕೆಳದಿಯ ನಾಯಕರ ಆಕ್ರಮಣಗಳು ಮತ್ತು ನಂತರ ಬಂದ ಹೈದರ್ ಅಲಿಯಿಂದ ರಾಜವಂಶವು ವಿನಾಶಕ್ಕೆ ಒಳಗಾಯಿತು. ಮೂಲಗಳು ಉತ್ತರ ಭಾರತದ ಮಥುರಾದ ಜೈನ ರಾಜಕುಮಾರ ಜಿನದತ್ತ ರಾಯ ಅಥವಾ ಜಿಂದುತ್ ರಾಯ್ ಈ ವಂಶದ ಸ್ಥಾಪಕ ಎಂದು ಭಾವಿಸಲಾಗಿದೆ. ಹುಮ್ಚಾದಲ್ಲಿ ಸಾಮ್ರಾಜ್ಯದ ಅಡಿಪಾಯವನ್ನು ಹಾಕುವ ಜೈನ ದೇವತೆ ಪದ್ಮಾವತಿಯ ವಿಗ್ರಹದೊಂದಿಗೆ ಅವನು ಹುಮ್ಚಾ ಪಟ್ಟಣಕ್ಕೆ ವಲಸೆ ಬಂದನೆಂದು ಹೇಳಲಾಗುತ್ತದೆ. ಇವರು ಹಮ್ಚಾ ಜೈನ ದೇವಾಲಯಗಳನ್ನು ಸಹ ನಿರ್ಮಿಸಿದರು. ಜಿನದತ್ತನಿಂದ ಸ್ಥಾಪಿಸಲ್ಪಟ್ಟ ರಾಜವಂಶವು ೧೨ ನೇ ಶತಮಾನದಲ್ಲಿ ಎರಡು ಶಾಖೆಗಳಾಗಿ ವಿಭಜಿಸಲ್ಪಟ್ಟಿತು, ಒಂದು ಶಾಖೆಯು ಕಳಸದಲ್ಲಿ ಮತ್ತು ಇನ್ನೊಂದು ಶಿವಮೊಗ್ಗ ಜಿಲ್ಲೆಯ ಹೊಸಗುಂದದಲ್ಲಿ ನೆಲೆಗೊಂಡಿದೆ. ಕ್ರಮೇಣ ಈ ಶಾಖೆಗಳು ಹಳೆಯ ದಕ್ಷಿಣ ಕೆನರಾ ಜಿಲ್ಲೆಯ ಕೆರವಶೆ ಮತ್ತು ಕಾರ್ಕಳಕ್ಕೆ ತಮ್ಮ ರಾಜಧಾನಿಗಳನ್ನು ಬದಲಾಯಿಸಿದವು. ಸಂತರವರು ಹಲವಾರು ಜೈನ ಸ್ಮಾರಕಗಳನ್ನು ನಿರ್ಮಿಸಿದರು ಮತ್ತು ಕರ್ನಾಟಕ, ತುಳುನಾಡು ಮತ್ತು ಮಲೆನಾಡು ಪ್ರದೇಶದಲ್ಲಿ ಜೈನ ಧರ್ಮದ ಹರಡುವಿಕೆಗೆ ಕಾರಣರಾಗಿದ್ದರು. ಅವರು ಶಿವಮೊಗ್ಗ ಜಿಲ್ಲೆಯ ನಗರ ತಾಲ್ಲೂಕಿನ ಪಂಚಕೂಟ ಬಸದಿಯ ಜೈನ ಸನ್ಯಾಸಿಗಳ ನಿರ್ವಹಣೆಗಾಗಿ ಎರಡು ಗ್ರಾಮಗಳನ್ನು ದಾನ ಮಾಡಿದರು. ಟಿಪ್ಪಣಿಗಳು ಈ ರಾಜವಂಶಕ್ಕೆ ಸಾಂತಾ, ಸಂತಾರಾ ಎಂದು ಸಹ ಕರೆಯುತ್ತಾರೆ. ಈ ರಾಜರುಗಳು ತಮ್ಮ ಹೆಸರಿಗೆ ಪಾಂಡ್ಯ ಮತ್ತು ಒಡೆಯ ಎಂಬ ಬಿರುದುಗಳನ್ನು ಜೋಡಿಸಿದ್ದಾರೆ. ಉಲ್ಲೇಖಗಳು ಮೂಲಗಳು ವರ್ಗ:ಜೈನ ಧಮ‍ದ ಪುಣ್ಯ ಕ್ಷೇತ್ರಗಳು ವರ್ಗ:ಭಾರತದ ರಾಜವಂಶಜರು ವರ್ಗ:Pages with unreviewed translations
ಕಂಪ್ಲಿ ಸಂಸ್ಥಾನ
https://kn.wikipedia.org/wiki/ಕಂಪ್ಲಿ_ಸಂಸ್ಥಾನ
REDIRECT ಕಂಪಿಲಿ ಸಾಮ್ರಾಜ್ಯ
ಆಡುಜೀವಿತಂ (ಚಲನಚಿತ್ರ)
https://kn.wikipedia.org/wiki/ಆಡುಜೀವಿತಂ_(ಚಲನಚಿತ್ರ)
ಆಡುಜೀವಿತಂ - ದಿ ಗೋಟ್ ಲೈಫ್ 2024 ರ ಮಲಯಾಳಂ-ಭಾಷೆಯ ಸರ್ವೈವಲ್ ನಾಟಕ ಚಲನಚಿತ್ರವಾಗಿದೆ, ಬರೆದು ನಿರ್ದೇಶಿಸಿದ, ಮತ್ತು ಬ್ಲೆಸಿ ಸಹ-ನಿರ್ಮಾಣ ಮಾಡಿದ್ದಾರೆ. ಈ ಚಲನಚಿತ್ರವು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಕಂಪನಿಗಳನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಸಹ-ನಿರ್ಮಾಣ ಆಗಿದೆ. ಇದು ಬೆನ್ಯಾಮಿನ್ ರವರ 2008 ರ ಅತಿ ಹೆಚ್ಚು ಮಾರಾಟವಾದ ಮಲಯಾಳಂ ಕಾದಂಬರಿ ಆಡುಜೀವಿತಂ ನ ರೂಪಾಂತರವಾಗಿದೆ, ಇದು ಮಲಯಾಳಿ ವಲಸಿಗ ಕಾರ್ಮಿಕ, ಸ್ಥಳೀಯ ಅರಬ್ಬರು ಮರುಭೂಮಿಯಲ್ಲಿನ ಏಕಾಂತ ಫಾರ್ಮ್‌ಗಳಲ್ಲಿ ಸೌದಿ ಅರೇಬಿಯಾದಲ್ಲಿ ಗುಲಾಮಗಿರಿಗೆ ಬಲವಂತವಾಗಿ ಭಾರತೀಯರು ಒಬ್ಬರು. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಿಮ್ಮಿ ಜೀನ್-ಲೂಯಿಸ್ ಮತ್ತು K. R ಗೋಕುಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ತಾಲಿಬ್ ಅಲ್ ಬಲೂಶಿ, ರಿಕ್ ಅಬಿ, ಅಮಲಾ ಪೌಲ್ ಮತ್ತು ಶೋಭಾ ಮೋಹನ್ ಅವರು ಪೋಷಕರಾಗಿದ್ದಾರೆ. ಪಾತ್ರಗಳು. ಯುಎಇ ಹೊರತುಪಡಿಸಿ ಖಲೀಜಿ ರಾಷ್ಟ್ರಗಳಲ್ಲಿ ಚಲನಚಿತ್ರವನ್ನು ನಿಷೇಧಿಸಲಾಗಿದೆ.https://english.janamtv.com/entertainment/100618/blessys-film-aadujeevitham-faces-ban-in-gulf-countries-limited-release-in-uae/ ಈ ಹಿಂದೆ ಅದೇ ದೇಶಗಳಲ್ಲಿ ಕಾದಂಬರಿಯನ್ನು ನಿಷೇಧಿಸಲಾಗಿತ್ತು. ಬ್ಲೆಸ್ಸಿ ಅವರು 2008 ರಲ್ಲಿ ಕಾದಂಬರಿಯನ್ನು ಓದಿದಾಗಿನಿಂದ "ಆಡುಜೀವಿತಂ" ಅನ್ನು ಅಳವಡಿಸಿಕೊಳ್ಳಲು ಬಯಸಿದ್ದರು ಮತ್ತು ಪೃಥ್ವಿರಾಜ್ ಅವರನ್ನು ನಾಯಕನನ್ನಾಗಿ ಮಾಡಿದ್ದಾರೆ. ಮುಂದಿನ ವರ್ಷ, ಅವರು ಬೆನ್ಯಾಮಿನ್‌ನಿಂದ ಹಕ್ಕುಗಳನ್ನು ಖರೀದಿಸಿದರು ಮತ್ತು ಚಿತ್ರಕಥೆಯನ್ನು ಬರೆಯಲು ಪ್ರಾರಂಭಿಸಿದರು. ಆದಾಗ್ಯೂ, ಗಣನೀಯ ಪ್ರಗತಿಯನ್ನು ತಡೆಯುವ ಬಜೆಟ್ ನಿರ್ಬಂಧಗಳಿಂದಾಗಿ, ಚಲನಚಿತ್ರವು ಅಭಿವೃದ್ಧಿ ನರಕ ಕ್ಕೆ ಹೋಯಿತು. ಬ್ಲೆಸ್ಸಿ ನಿರ್ಮಾಪಕರನ್ನು ಹುಡುಕುತ್ತಾ ವರ್ಷಗಳ ಕಾಲ ಕಳೆದರು, ಅಂತಿಮವಾಗಿ 2015 ರಲ್ಲಿ ಒಂದನ್ನು ಕಂಡುಕೊಂಡರು, ಯೋಜನೆಯು ವೇಗವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು. ಜಿಮ್ಮಿ ಜೀನ್-ಲೂಯಿಸ್ ಮತ್ತು ಸ್ಟೀವನ್ ಆಡಮ್ಸ್ ಸಹ-ನಿರ್ಮಾಪಕರಾಗಿ ಬ್ಲೆಸ್ಸಿಯನ್ನು ಸೇರಿಕೊಂಡರು. ಎ. R. ರೆಹಮಾನ್ ಚಿತ್ರದ ಮೂಲ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ಪ್ರಧಾನ ಛಾಯಾಗ್ರಹಣ ಮಾರ್ಚ್ 2018 ಮತ್ತು ಜುಲೈ 2022 ರ ನಡುವೆ ವಾಡಿ ರಮ್, ಜೋರ್ಡಾನ್ ಮತ್ತು ಅಲ್ಜೀರಿಯಾ n ಮರುಭೂಮಿಯಲ್ಲಿ [[ಸಹಾರಾ] ಮರುಭೂಮಿಗಳಲ್ಲಿ ಆರು ವೇಳಾಪಟ್ಟಿಗಳ ಮೂಲಕ ಹಂತಗಳಲ್ಲಿ ನಡೆಯಿತು. ] ಭಾರತದ ಕೇರಳ ನಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. COVID-19 ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ 2020 ರ ಮಾರ್ಚ್‌ನಿಂದ ಮೇ ವರೆಗೆ 70 ದಿನಗಳ ಕಾಲ ಸಿಬ್ಬಂದಿ ಜೋರ್ಡಾನ್‌ನಲ್ಲಿ ಸಿಲುಕಿಕೊಂಡರು. ಭಾರತ ಸರ್ಕಾರ ಅವರ ಸ್ಥಳಾಂತರಿಸುವ ಕಾರ್ಯಕ್ರಮ, ವಂದೇ ಭಾರತ್ ಮಿಷನ್ ಮೂಲಕ ಅವರನ್ನು ಅಂತಿಮವಾಗಿ ಭಾರತಕ್ಕೆ ಹಿಂತಿರುಗಿಸಲಾಯಿತು. ಚಿತ್ರೀಕರಣವು 14 ಜುಲೈ 2022 ರಂದು ಮುಕ್ತಾಯವಾಯಿತು. ಚಲನಚಿತ್ರವು 28 ಮಾರ್ಚ್ 2024 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು ಮತ್ತು ಇಲ್ಲಿಯವರೆಗೆ ಕ್ಕಿಂತ ಹೆಚ್ಚು ಗಳಿಸಿದೆ. ಆಡು ಲೈಫ್ ಸಾರ್ವಕಾಲಿಕ 3 ನೇ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಲನಚಿತ್ರ, 2024 ರ 2 ನೇ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಲನಚಿತ್ರ ಹಾಗೆಯೇ 2024 ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ. ಕಥಾವಸ್ತು ಸೌದಿ ಅರೇಬಿಯಾ ನಲ್ಲಿ, ನಜೀಬ್ ಮುಹಮ್ಮದ್ ಮತ್ತು ಹಕೀಮ್, ಇಬ್ಬರು ಮಲಯಾಳಿ ವಲಸಿಗರು, ತಮ್ಮ ಪರಿಚಯಸ್ಥ ಶ್ರೀಕುಮಾರ್ ವ್ಯವಸ್ಥೆಗೊಳಿಸಿದ ವೀಸಾಗಳೊಂದಿಗೆ ಉತ್ತಮ ಜೀವನವನ್ನು ಬಯಸಿ ಆಗಮಿಸುತ್ತಾರೆ. ವಿಮಾನ ನಿಲ್ದಾಣದಲ್ಲಿ ತಮ್ಮ ಉದ್ಯೋಗದಾತರಿಗೆ ತಿಳಿಯದೆ, ಅವರನ್ನು ಸ್ಥಳೀಯ ಅರಬ್ ಅವರು ತಮ್ಮ ಬಾಸ್ ಎಂದು ತಪ್ಪಾಗಿ ಭಾವಿಸುತ್ತಾರೆ. ದೀರ್ಘ ಪ್ರಯಾಣದ ನಂತರ, ಅವರು ಬೇರ್ಪಟ್ಟರು, ನಜೀಬ್ ದೂರದ ಮರುಭೂಮಿ ಮೇಕೆ ಹಿಂಡಿನಲ್ಲಿ ಕೆಲಸ ಮಾಡಲು ಬಿಟ್ಟರು. ಕಠಿಣ ಪರಿಸ್ಥಿತಿಗಳು ಮತ್ತು ಪ್ರತ್ಯೇಕತೆಯನ್ನು ಸಹಿಸುತ್ತಾ, ನಜೀಬ್ ತನ್ನ ಸ್ವಂತ ಪರಿಸ್ಥಿತಿಯ ಅಪಾಯವನ್ನು ಅರಿತುಕೊಂಡು ಸಹ ಮೇಕೆ ಮೇಯಿಸುವವನು ನಿಧನಕ್ಕೆ ಸಾಕ್ಷಿಯಾಗುತ್ತಾನೆ. ವರ್ಷಗಳ ಸಂಕಟದ ನಂತರ, ಅವನು ಹಕೀಮ್‌ನೊಂದಿಗೆ ಮತ್ತೆ ಸೇರಿಕೊಂಡನು, ಅವನು ತಪ್ಪಿಸಿಕೊಳ್ಳುವ ಮಾರ್ಗಗಳ ಜ್ಞಾನವನ್ನು ಹೊಂದಿರುವ ಸೋಮಾಲಿಯಾನ ಮೇಕೆ ಇಬ್ರಾಹಿಂ ಖಾದಿರಿಗೆ ಪರಿಚಯಿಸುತ್ತಾನೆ. ಅವರು ಖಫೀಲ್ ಅವರ ಮಗಳ ಮದುವೆಯ ಸಮಯದಲ್ಲಿ ಅವಕಾಶವನ್ನು ಬಳಸಿಕೊಳ್ಳುತ್ತಾರೆ, ಮರುಭೂಮಿಗೆ ಓಡಿಹೋಗುತ್ತಾರೆ. ಜೀವನಾಂಶ ಮತ್ತು ದಿಕ್ಕನ್ನು ಹುಡುಕಲು ಅವರು ಹೆಣಗಾಡುತ್ತಿರುವಾಗ ಅವರ ಪ್ರಯಾಣವು ಅಪಾಯಕಾರಿಯಾಗಿದೆ, ಇದು ಹಕೀಮ್‌ನ ಸಾವು ಮತ್ತು ನಜೀಬ್‌ನ ಮರಣದ ಸಮೀಪದಲ್ಲಿದೆ. ಕೊನೆಗೆ ಖಾದರಿಯೂ ನಾಪತ್ತೆಯಾಗುತ್ತಾನೆ. ಮರುಭೂಮಿಯಲ್ಲಿ ಏಕಾಂಗಿಯಾಗಿ, ನಜೀಬ್ ಅಂತಿಮವಾಗಿ ಹಾದುಹೋಗುವ ಅರಬ್‌ನ ಸಹಾಯದಿಂದ ನಾಗರಿಕತೆಯನ್ನು ತಲುಪುತ್ತಾನೆ ಮತ್ತು ಕುಂಜಿಕ್ಕನ ಮಾಲೀಕತ್ವದ ಸ್ಥಳೀಯ ಮಲಯಾಳಿ ರೆಸ್ಟೋರೆಂಟ್ ಅನ್ನು ಕಂಡುಕೊಳ್ಳುತ್ತಾನೆ, ಅವನು ಅವನನ್ನು ಆರೋಗ್ಯಕ್ಕೆ ಮರಳಿ ಶುಶ್ರೂಷೆ ಮಾಡುತ್ತಾನೆ. ಆದರೆ, ನಜೀಬ್ ಅವರ ಸಂಕಷ್ಟ ದೂರವಾಗಿಲ್ಲ. ಖಫೀಲ್‌ನನ್ನು ಭೇಟಿಯಾಗುವ ತನ್ನದೇ ಆದ ದಾಖಲಾತಿ ಸಮಸ್ಯೆಗಳಿಂದಾಗಿ ಅವನು ಜೈಲುವಾಸವನ್ನು ಎದುರಿಸುತ್ತಾನೆ, ಅವನು ತನ್ನ ಅಧಿಕೃತ ಪ್ರಾಯೋಜಕನಲ್ಲದ ಕಾರಣ ಅವನನ್ನು ಬಿಟ್ಟುಬಿಡುತ್ತಾನೆ ಮತ್ತು ಅವನನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಈ ಹಿನ್ನಡೆಯ ಹೊರತಾಗಿಯೂ, ನಜೀಬ್ ಅಂತಿಮವಾಗಿ ಮನೆಗೆ ಹಿಂದಿರುಗುತ್ತಾನೆ. ಎರಕಹೊಯ್ದ ಪೃಥ್ವಿರಾಜ್ ಸುಕುಮಾರನ್ ನಜೀಬ್ ಮುಹಮ್ಮದ್ ಆಗಿ ಹಕೀಮ್ ಪಾತ್ರದಲ್ಲಿ ಕೆ ಆರ್ ಗೋಕುಲ್ ಅಮಲಾ ಪೌಲ್ ನಜೀಬ್ ಅವರ ಪತ್ನಿ ಸೈನು ಪಾತ್ರದಲ್ಲಿ ಜಿಮ್ಮಿ ಜೀನ್-ಲೂಯಿಸ್ ಇಬ್ರಾಹಿಂ ಖಾದಿರಿಯಾಗಿ ಶೋಭಾ ಮೋಹನ್ ಉಮ್ಮಾ, ನಜೀಬ್ ಅವರ ತಾಯಿ ಕಫೀಲ್ ಆಗಿ ತಾಲಿಬ್ ಅಲ್ ಬಲೂಶಿ ರಿಕ್ ಅಬಿ ಜಾಸರ್ ಆಗಿ ಕುಂಜಿಕ್ಕನಾಗಿ ನಾಸರ್ ಕರುತೇನಿ ರಾಬಿನ್ ದಾಸ್ ಹಿಂದಿವಾಲಾ ಆಗಿ ಕರುವತ್ತ ಶ್ರೀಕುಮಾರ್ ಪಾತ್ರದಲ್ಲಿ ಬಾಬುರಾಜ್ ತಿರುವಲ್ಲಾ ರೋಲ್ಸ್ ರಾಯ್ಸ್‌ನಲ್ಲಿ ಅಕೇಫ್ ನಜೆಮ್ ಶ್ರೀಮಂತನಾಗಿ ಉಲ್ಲೇಖಗಳು
ನವಿಲಗೋಣು
https://kn.wikipedia.org/wiki/ನವಿಲಗೋಣು
ನವಿಲಗೋಣು ಭಾರತ ದೇಶದ, ಕರ್ನಾಟಕ ರಾಜ್ಯದ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ  ತಾಲ್ಲೂಕಿನ ಒಂದು ಹಳ್ಳಿಯಾಗಿದೆ. ಹಲವಾರು ಪ್ರಸಿದ್ಧ ಭಾರತೀಯರು ನವಿಲಗೋಣು ಮೂಲದವರಾಗಿದ್ದಾರೆ. ಇದು ಅನೇಕ ಕಲಾವಿದರು ಇರುವ ಸ್ಥಳವೂ ಆಗಿದೆ. ಈ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಇಲ್ಲಿನ ಪ್ರಮುಖ ಜೀವನ ವಿಧಾನವೆಂದರೆ ಕೃಷಿ. ಅಡಿಕೆ, ತೆಂಗಿನಕಾಯಿ, ಭತ್ತ ಮತ್ತು ಗೋಡಂಬಿ ಪ್ರಮುಖ ಬೆಳೆಗಳಾಗಿವೆ. ಉಲ್ಲೇಖ ವರ್ಗ:ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳು
ಆದಮ್ ಜಂಪಾ
https://kn.wikipedia.org/wiki/ಆದಮ್_ಜಂಪಾ
REDIRECT ಆಡಮ್ ಜಂಪಾ
ಅವತಾರ ಪುರುಷ (೨೦೨೧ರ ಚಲನಚಿತ್ರ)
https://kn.wikipedia.org/wiki/ಅವತಾರ_ಪುರುಷ_(೨೦೨೧ರ_ಚಲನಚಿತ್ರ)
REDIRECT ಅವತಾರ ಪುರುಷ (೨೦೨೨ರ ಚಲನಚಿತ್ರ)
ಎಸ್. ಕೃಷ್ಣ
https://kn.wikipedia.org/wiki/ಎಸ್._ಕೃಷ್ಣ
ಎಸ್. ಕೃಷ್ಣ ಒಬ್ಬ ಭಾರತೀಯ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ದೇಶಕರಾಗಿದ್ದು, ಅವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ.Rendezvous with S Krishna ಅವರು ಮುಂಗಾರು ಮಳೆಯಲ್ಲಿನ ತಮ್ಮ ದೃಶ್ಯಗಳ ಮೂಲಕ ಛಾಯಾಗ್ರಹಣಕ್ಕೆ ಹೊಸ ಆಯಾಮವನ್ನು ನೀಡಿದರು.'Mungaru Male' is perfect answer – S. Krishna ಇವರು ಬೆಂಗಳೂರಿನ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ವೃತ್ತಿ left|thumb|ಸೌತ್ ಸ್ಕೋಪ್ ಅವಾರ್ಡ್ಸ್ 2009ರಲ್ಲಿ ಕೃಷ್ಣ ಕೃಷ್ಣ ಅವರ ಛಾಯಾಗ್ರಹಣವು ಜನರನ್ನು ಮತ್ತು ವಿಮರ್ಶಕರನ್ನು ಮೆಚ್ಚಿಸಿತು, ಆದರೆ ಮುಂಗಾರು ಮಳೆ ಮಾಡುವವರೆಗೆ ಅವರು ತಮ್ಮ ಸ್ವಂತಿಕೆಗೆ ಬರಲಿಲ್ಲ. ಚಿತ್ರವನ್ನು 80% ನೈಸರ್ಗಿಕ ಮಳೆಯಲ್ಲಿ ಚಿತ್ರೀಕರಿಸಲಾಗಿದೆ, ಇದು ಸಾಮಾನ್ಯವಾಗಿ ಛಾಯಾಗ್ರಹಣ ಸ್ನೇಹಿಯಲ್ಲ. ಜೋಗ್ ಫಾಲ್ಸ್‌ನ ಅಪಾಯಕಾರಿ, ಕಲ್ಲಿನ ಮೇಲ್ಭಾಗದಂತಹ ಇತರ ಅನಿಶ್ಚಿತ ಪರಿಸ್ಥಿತಿಗಳಲ್ಲಿ ಇದನ್ನು ಚಿತ್ರೀಕರಿಸುವ ಅಗತ್ಯವಿತ್ತು. ಕೃಷ್ಣ ಆ ಸವಾಲನ್ನು ಸ್ವೀಕರಿಸಿ ಆ ಕೆಲಸವನ್ನು ಮೆಚ್ಚುವಂತೆ ಮಾಡಿದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು ಮತ್ತು ಅದರ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿದ್ದು ಕೃಷ್ಣ ಅವರ ಛಾಯಾಗ್ರಹಣ. ಕರ್ನಾಟಕ ರಾಜ್ಯ ಸರ್ಕಾರವು ಅವರನ್ನು 2006 ರ ಅತ್ಯುತ್ತಮ ಸಿನಿಮಾಟೋಗ್ರಾಫರ್ ಎಂದು ಗುರುತಿಸಲಾಯಿತು. ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಅವರ ಪ್ರಕಾರ, ಎಲ್ಲಾ ಅಪಾಯಕಾರಿ ಮತ್ತು "ಮೂರ್ಖತನ"ದ ಪ್ರತಿಪಾದನೆಗಳಿಗೆ ಸಿನಿಮಾಟೋಗ್ರಾಫರ್ ಅವರು ಪಾಲುದಾರರಾಗಿದ್ದರು. ತಮಗೆ ಇಷ್ಟವಾದಂತೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದ್ದುದರಿಂದ, ಅವರು ತಮ್ಮ ಅತ್ಯುತ್ತಮವಾದ ಕರ್ತವ್ಯ ನೀಡಿದರೆಂದು ಕೃಷ್ಣ ಸಮರ್ಥಿಸಿಕೊಳ್ಳುತ್ತಾರೆ. ಮುಂಗಾರು ಮಳೆ ನಂತರ. ಗೆಳೆಯ ಚಿತ್ರಕ್ಕೆ ಸಿನಿಮಾಟೋಗ್ರಾಫಿಯಲ್ಲಿ ಪ್ರಯೋಗಕ್ಕೆ ಹೆಚ್ಚಿನ ಅವಕಾಶವಿರಲಿಲ್ಲ, ಆದರೆ ಸ್ಲೋ ಮೋಷನ್‌ನಲ್ಲಿ ಚಿತ್ರೀಕರಿಸಲಾದ ಚಿತ್ರದ ಅತ್ಯಂತ ಜನಪ್ರಿಯ ಟ್ರ್ಯಾಕ್ (ಈ ಸಂಜೆ ಯಾಕಾಗಿದೆ) ಚಿತ್ರದ ಹೈಲೈಟ್ ಆಗಿತ್ತು. ಮುಂಗಾರು ಮಳೆ ಚಿತ್ರದ ಪ್ರಮುಖ ಸಹಯೋಗಿಗಳಲ್ಲಿ ಒಬ್ಬರಾದ ಪ್ರೀತಂ ಗುಬ್ಬಿಗಾಗಿ ಕೃಷ್ಣ ಮುಂದೆ "ಹಾಗೇ ಸುಮ್ಮನೆ" ಮಾಡಿದರು. ಅಂದಿನಿಂದ, ಪ್ರೀತಂ ಗುಬ್ಬಿ ಅವರ ಎಲ್ಲಾ ಚಿತ್ರಗಳಿಗೆ ಅವರು ಆಗಾಗ್ಗೆ ಸಹಯೋಗಿಯಾಗಿದ್ದಾರೆ. ಪ್ರೇಮ್ ನಿರ್ದೇಶನದ ಮತ್ತು ಪುನೀತ್ ರಾಜಕುಮಾರ್ ನಟಿಸಿದ ರಾಜ್ ದಿ ಶೋಮ್ಯಾನ್ ಚಿತ್ರದ ಛಾಯಾಗ್ರಾಹಕರಾಗಿಯೂ ಸೇವೆ ಸಲ್ಲಿಸಿದರು.. ಎಲ್ಲರೂ ಕೃಷ್ಣ ಅವರ ಕೆಲಸವನ್ನು ಶ್ಲಾಘಿಸಿದರು. ನಂತರ ತಮಿಳು ಬ್ಲಾಕ್ಬಸ್ಟರ್ ಚಿತ್ರ ಸಿಂಗಂನ ಕನ್ನಡ ರಿಮೇಕ್ ಕೆಂಪೇಗೌಡದಲ್ಲಿ ಕೆಲಸ ಮಾಡಿದರು, ಇದರಲ್ಲಿ ಸುದೀಪ್ ನಾಯಕನಾಗಿ ನಟಿಸಿ ಸ್ವತಃ ನಿರ್ದೇಶಿಸಿದರು. ರಂಗ ಎಸ್ ಎಸ್ ಎಸ್‌ ಎಲ್‌ ಸಿ ಚಿತ್ರದ ನಂತರ ಕೃಷ್ಣ ಅವರು ಎರಡನೇ ಬಾರಿಗೆ ಸುದೀಪ್ ಅವರೊಂದಿಗೆ ಕೆಲಸ ಮಾಡಿದ್ದರು. ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿ ತಾಂತ್ರಿಕತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಕೃಷ್ಣ ಅವರ ಸುಪ್ತ ಪ್ರತಿಭೆಯನ್ನು ಈ ಚಿತ್ರವು ತೋರಿಸಿತು. 'ಸೂಪರ್ಗುಡ್ ಮೂವೀಸ್' ಅವರು ಈ ಕೆಲಸವನ್ನು ಹೀಗೆ ಶ್ಲಾಘಿಸಿದರು: "ತಾಂತ್ರಿಕ ವಿಭಾಗದಲ್ಲಿ ಕ್ಯಾಮರಾ ಕೆಲಸವು ಎದ್ದು ಕಾಣುತ್ತದೆ. ಮೃದುವಾದ ಪ್ರೇಮಕಥೆಗಳಿಗೆ ಕ್ಯಾಮರಾ ಬಳಸುವ ಕೃಷ್ಣ ಈ ಸಾಹಸ ಚಿತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಬದಲಾವಣೆಗಾಗಿ, ಸುರಕ್ಷತಾ ಹಗ್ಗಗಳನ್ನು ಬಳಸುವ ಪಂದ್ಯಗಳು ನೈಜವಾಗಿ ಕಾಣುತ್ತವೆ. ಕೃಷ್ಣ ಹಾಡಿನ ದೃಶ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಾರೆ". ಕೃಷ್ಣ ಅವರು ಯೋಗರಾಜ್ ಭಟ್ ಅವರೊಂದಿಗೆ ಪುನೀತ್ ರಾಜ್ ಕುಮಾರ್ ಅಭಿನಯದ ಲಗೋರಿ ಚಿತ್ರದಲ್ಲಿ ಕೆಲಸ ಮಾಡಬೇಕಿತ್ತು, ಆದರೆ ಈ ಯೋಜನೆಯನ್ನು ಕೈಬಿಡಲಾಯಿತು. 2012ರಲ್ಲಿ, ಯಶ್ ಮತ್ತು ರಾಧಿಕಾ ಪಂಡಿತ್ ನಟಿಸಿದ ಡ್ರಾಮಾ (ಚಲನಚಿತ್ರ) ದಲ್ಲಿ ಅವರು ಒಟ್ಟಾಗಿ ಕೆಲಸ ಮಾಡಿದರು. ಸ್ವಾಭಾವಿಕವಾಗಿ, ಯೋಗರಾಜ್ ಭಟ್ ಅವರೊಂದಿಗೆ ಮುಂಗಾರು ಮಳೆ ಯ ಮ್ಯಾಜಿಕ್ ಅನ್ನು ಮರುಸೃಷ್ಟಿಸುವ ನಿರೀಕ್ಷೆಯಲ್ಲಿ ಇಡೀ ಚಲನಚಿತ್ರೋದ್ಯಮದ ಕಣ್ಣುಗಳು ಅವರ ಮೇಲೆ ಇದ್ದವು. ಡ್ರಾಮಾ ನವೆಂಬರ್‌ನಲ್ಲಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅತ್ಯಂತ ಸಕಾರಾತ್ಮಕ ವಿಮರ್ಶೆಗಳೊಂದಿಗೆ ಬಿಡುಗಡೆಯಾಯಿತು. ಈ ಚಲನಚಿತ್ರವು 2012 ರ ಬ್ಲಾಕ್ಬಸ್ಟರ್ ಆಯಿತು ಮತ್ತು ಇದು ಕೃಷ್ಣ ಅವರ ಕೆಲಸಕ್ಕಾಗಿ ದೇಶಾದ್ಯಂತ ಉತ್ತಮ ವಿಮರ್ಶೆಗಳನ್ನು ಗಳಿಸಿತು. ಐಬಿಎನ್‌ ಲೈವ್ 'Drama' Review: This Kannada film is an entertaining drama ಅವರ ಕೆಲಸವನ್ನು‌ ಹೀಗೆ ಶ್ಲಾಘಿಸಿದೆ: "ದೇಶದ ಛಾಯಾಗ್ರಹಣದ ಉನ್ನತ ನಿರ್ದೇಶಕರಲ್ಲಿ ಒಬ್ಬರು ಎಂದು ಹೇಳಬಹುದಾದ ಎಸ್ ಕೃಷ್ಣ ಅವರ ಗಮನಾರ್ಹ ಕ್ಯಾಮರಾ ವರ್ಕ್ ಚಿತ್ರದ ಹೈಲೈಟ್ ಆಗಿದೆ. ಇಂಡಿಯಾಗ್ಲಿಟ್ಜ್ Drama – Good Pack for Familyಹೀಗೆ ಹೇಳಿದೆ: "ಯೋಗರಾಜ್ ಭಟ್ ನಿರ್ದೇಶನದಲ್ಲಿ 'ಮುಂಗಾರು ಮಳೆ' ನಂತರ ಅವರ ಪುನರಾಗಮನದಲ್ಲಿ "ಎಸ್ ಕೃಷ್ಣ" ಅವರ ಕೆಲಸದಲ್ಲಿ. ಯಾವುದೇ ನ್ಯೂನತೆಗಳಿಲ್ಲ." ನಂತರ ಅವರು ಶಿವರಾಜ್‌ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಕಡ್ಡಿಪುಡಿಗಾಗಿ ದುನಿಯಾ ಸೂರಿ ಅವರೊಂದಿಗೆ ಕಾರ್ಯ‌ ನಿರ್ವಹಿಸಿದರು. ಗಜಕೇಸರಿ ಮತ್ತು ನಂತರ ಸಿನಿಮಾಟೋಗ್ರಾಫರ್ ಆಗಿ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಅವರು ಸ್ವತಃ ನಿರ್ದೇಶಕರಾಗಲು ಸವಾಲು ಹಾಕಿಕೊಂಡರು. ಅವರು ಯಶ್ ಅಭಿನಯದ ಗಜಕೇಸರಿ ಚಿತ್ರವನ್ನು ನಿರ್ದೇಶಿಸಿದರು, ಇದು ಯಶ್ ಅವರ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಆ ಮೂಲಕ ಕನ್ನಡ ಚಲನಚಿತ್ರೋದ್ಯಮದ ಮುಂದಿನ ದೊಡ್ಡ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗಜಕೇಸರಿ 2014 ರ ವರ್ಷದ ಅತ್ಯುತ್ತಮ ಮನರಂಜನಾ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇದಾದ ನಂತರ ಗಜಕೇಸರಿ ಕೃಷ್ಣ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಹೆಬ್ಬುಲಿಯಲ್ಲಿ ಕೆಲಸ ಮಾಡಲು ವಿರಾಮ ತೆಗೆದುಕೊಂಡರು. ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ ಮುಂತಾದ ಉದ್ಯಮದ ಅನೇಕ ದೊಡ್ಡ ಹೆಸರುಗಳನ್ನು ಈ ಯೋಜನೆಗೆ ಪರಿಗಣಿಸಲಾಗಿತ್ತು. ಸುದೀಪ್ ಅವರು ಸ್ಕ್ರಿಪ್ಟ್ ಅನ್ನು ತುಂಬಾ ಇಷ್ಟಪಟ್ಟರು ಮತ್ತು ಅವರು ಯೋಜನೆಯಲ್ಲಿ ಕೆಲಸ ಮಾಡಲು ಒಪ್ಪಿಗೆ ನೀಡಿದರು. ಹೆಬ್ಬುಲಿಯು ಮಾಣಿಕ್ಯ ನಂತರ, ರವಿಚಂದ್ರನ್ ಮತ್ತು ಸುದೀಪ್ ಅವರ ಯಶಸ್ವಿ ಜೋಡಿಯನ್ನು ಮರಳಿ ತರುತ್ತದೆ. ಹೀಗಾಗಿ ಹೆಬ್ಬುಲಿ ಮೇಲೆ ನಿರೀಕ್ಷೆ ಹೆಚ್ಚಿತ್ತು. ಕೆ.ಎಸ್.ರವಿಕುಮಾರ್ ಅವರ ಮುಂದಿನ ಚಿತ್ರೀಕರಣವನ್ನು ಸುದೀಪ್ ಪೂರ್ಣಗೊಳಿಸಿದ ನಂತರ ಈ ಚಿತ್ರ ಪ್ರಾರಂಭವಾಯಿತು. ದ್ವಾರಕೀಶ್ ಅವರ 50 ನೇ ನಿರ್ಮಾಣದ ಚೌಕ ಚಿತ್ರಕ್ಕಾಗಿ ಛಾಯಾಗ್ರಾಹಕರಾಗಿ ಕೃಷ್ಣ ಚಿತ್ರೀಕರಣದ ಭಾಗವನ್ನು ಪೂರ್ಣಗೊಳಿಸಿದರು. ಖ್ಯಾತ ನಿರ್ದೇಶಕ ನಂದ ಕಿಶೋರ್ ಅವರ ಸಹೋದರ ತರುಣ್ ಸುಧೀರ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಇವರು 5 ಛಾಯಾಗ್ರಾಹಕರಲ್ಲಿ ಒಬ್ಬರು. ಹೆಬ್ಬುಲಿ 23 ಫೆಬ್ರವರಿ 2017 ರಂದು ಬಿಡುಗಡೆಯಾಯಿತು. ಇದು ಸುದೀಪ್ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಓಪನಿಂಗ್ ಗಳಿಸಿತು. ಕೃಷ್ಣ ಅವರ ಪ್ರತಿಭೆಯಿಂದ ಪ್ರಭಾವಿತರಾದ ಸುದೀಪ್, ಇವರ ಜೊತೆ ಇನ್ನೊಂದು ಪ್ರಾಜೆಕ್ಟ್ ಮಾಡಲು ಒಪ್ಪಿಕೊಂಡರು. ಈ ಯೋಜನೆಗೆ ಪೈಲ್ವಾನ್ ಎಂದು ಹೆಸರಿಸಲಾಯಿತು. ಇದನ್ನು ನಿರ್ದೇಶಕರು ಅವರ ಹೋಮ್ ಪ್ರೊಡಕ್ಷನ್ ಹೌಸ್ ಆರ್ಆರ್ಆರ್ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಪೈಲ್ವಾನ್ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಹು ಭಾಷೆಗಳಲ್ಲಿ ಬಿಡುಗಡೆಯಾಯಿತು. ಇದು ಸುದೀಪ್ ಅವರ ವೃತ್ತಿಜೀವನದಲ್ಲಿ ಅತಿ ದೊಡ್ಡ ಬಿಡುಗಡೆಯಾಗಿದೆ. ಆದರೆ ಪೈರಸಿಯಿಂದಾಗಿ ಕಲೆಕ್ಷನ್ ಮೇಲೆ ಭಾರಿ ಪರಿಣಾಮ ಬೀರಿತು. ಇದನ್ನು ಸೂಪರ್ ಹಿಟ್ ಎಂದು ಘೋಷಿಸಲಾಯಿತು. ಇದೀಗ ಪೈಲ್ವಾನ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಕೃಷ್ಣ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಯೋಜನೆಯು ಸದ್ಯಕ್ಕೆ ಹೆಸರಿಸಲಾಗಿಲ್ಲ ಮತ್ತು COVID-19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿದೆ. ವೈಯಕ್ತಿಕ ಜೀವನ ಕೃಷ್ಣ ಅವರು ಕನ್ನಡದ ಪ್ರಸಿದ್ಧ ಕಿರುತೆರೆ ನಟಿ ಸ್ವಪ್ನಾ ಅವರನ್ನು ವಿವಾಹವಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಪ್ರಶಸ್ತಿಗಳು 2006 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ( ಮುಂಗಾರು ಮಳೆ ) 2008 ರಲ್ಲಿ ಹೇಗೇ ಸುಮ್ಮನೆ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ Filmfare Award for Best Cinematographer – South 2009 ರಲ್ಲಿ ಸೌತ್ ಸ್ಕೋಪ್ ಪ್ರಶಸ್ತಿ ಉಲ್ಲೇಖಗಳು ಬಾಹ್ಯ ಕೊಂಡಿಗಳು ಗೆಳೆಯ – ಈ ಸಂಜೆ ಯಾಕಾಗಿದೆ ವಿಡಿಯೋ ಹಾಡು https://www.youtube.com/watch?v=-1TEJkzEgYc ಅದೃಷ್ಟ - ಹೂವಿನ ವಿಡಿಯೋ ಹಾಡು https://www.youtube.com/watch?v=fyv1r9Pki68 ಎಸ್ ಕೃಷ್ಣ ಜೊತೆಗಿನ ಸಂಧಿ ‘ಮುಂಗಾರು ಮಳೆ’ ಪರಿಪೂರ್ಣ ಉತ್ತರ – ಎಸ್.ಕೃಷ್ಣ 'ನಾಟಕ' ವಿಮರ್ಶೆ: ಈ ಕನ್ನಡ ಚಿತ್ರ ಮನರಂಜನೆಯ ನಾಟಕ https://twitter.com/krisshdop ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು ವರ್ಗ:ಚಲನಚಿತ್ರ ಛಾಯಾಗ್ರಾಹಕರು ವರ್ಗ:ಜೀವಂತ ವ್ಯಕ್ತಿಗಳು ವರ್ಗ:Pages with unreviewed translations