text
stringlengths 0
61.5k
|
---|
ಇತ್ತೀಚಿನ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹಲವು ನಟಿಯರು ಬಹಿರಂಗವಾಗಿ ಮಾತನಾಡಿದ್ದು, ತಾವು ಎದುರಿಸಿದ್ದ ಕಷ್ಟಗಳನ್ನ ಹೊರಹಾಕಿದ್ರು. ಬಹುಶಃ ಈ ಸಮಸ್ಯೆ ಬರಿ ಯುವತಿಯರಿಗೆ ಮಾತ್ರ ಎದುರಾಗುತ್ತೆ ಎಂದು ಅಂದುಕೊಂಡಿದ್ದರೇ ತಪ್ಪು. ಇಂತಹ ಸಮಸ್ಯೆಗಳು ಯುವಕರಿಗೂ ಕೂಡ ಎದುರಾಗಿದೆ. |
ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ ಕನ್ನಡ ನಟ-ನಿರೂಪಕ ನಿರಂಜನ್ ದೇಶಪಾಂಡೆ ಅವರಿಗೂ ಇಂತಹ ಅನುಭವ ಆಗಿದ್ದು, ಈ ಬಗ್ಗೆ ಅವರೇ ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ, ನಿರಂಜನ್ ಗೆ ಎದುರಾಗಿದ್ದು ಎಲ್ಲಿ, ಯಾವಾಗ.? ಎಂದು ತಿಳಿಯಲು ಮುಂದೆ ಓದಿ..... |
ಗಂಡ್ಮಕ್ಕಳಿಗೂ ಕಾಸ್ಟಿಂಗ್ ಕೌಚ್ ಎದುರಾಗುತ್ತೆ |
ನಿರಂಜನ್ ಅವರು ಈ ಹಿಂದೆ ಮುಂಬೈನಲ್ಲಿ ಅವಕಾಶಕ್ಕಾಗಿ ಹುಡುಕಿಕೊಂಡು ಹೋದಾಗ, ಅವರ ಮೇಲೆಯೂ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತಂತೆ. ''ಅರಂಭದ ದಿನಗಳಲ್ಲಿ ಒಂದು ಕ್ರೇಜ್ ಇತ್ತು. ಹೈದ್ರಾಬಾದ್, ಮುಂಬೈಗೆ ಹೋದ್ರೆ ಅವಕಾಶ ಹೆಚ್ಚು ಸಿಗುತ್ತೆ ಅಂತ. ಅಲ್ಲಿಗೆ ಒಮ್ಮೆ ಹೋಗಿದ್ದಾಗ ನನ್ನ ಬಳಿಯೂ ಒಬ್ಬರು ಈ ರೀತಿ ಕೇಳಿದ್ರು'' ಎಂದು ನಿರಂಜನ್ ತಿಳಿಸಿದ್ದಾರೆ. |
ಡೈರೆಕ್ಟ್ ಆಗಿ ಕೇಳಿದ್ರಂತೆ |
ಜಾಹೀರಾತು ಒಂದರಲ್ಲಿ ನಿರಂಜನ್ ನಟಿಸುತ್ತಿದ್ದಾಗ, ಅಲ್ಲೊಬ್ಬರು ''ನಿನಗೆ ಏನ್ ಬೇಕು ಕೇಳು ಕೊಡಿಸ್ತೀನಿ, ವಾಚ್, ಗಿಫ್ಟ್ ಎಲ್ಲವೂ ತಗೋ. ಆದ್ರೆ, ನಮಗೆ ಸಹಕಾರ ನೀಡಬೇಕು ಎಂದು ಕೇಳಿದ್ರಂತೆ. ಅದಕ್ಕೆ ನಿರಂಜನ್ ಅವರು ಬಹುಶಃ ನಟನೆಗೆ ಮೆಚ್ಚಿ ಹೀಗೆ ಕೇಳ್ತಿದ್ದಾರೆ ಅಂತ ಸರಿ ಸರ್ ಅಂದ್ರಿದಂತೆ. ಆಮೇಲೆ ನೋಡಿದ್ರೆ ಮೆಸೆಜ್, ಫೋನ್ನನಲ್ಲಿ ಡೈರೆಕ್ಟ್ ಅಲ್ಲಿಗೆ ಬಾ, ಇಲ್ಲಿಗೆ ಬಾ ಅಂತಿದ್ರಂತೆ'' ಎಂದು ನಿರಂಜನ್ ಹೇಳಿಕೊಂಡಿದ್ದಾರೆ. |
ಹೆಸರು ಹೇಳದೆ ನಿರ್ದೇಶಕರ ವಂಚನೆ ಬಾಯ್ಬಿಟ್ಟ 'ಬಂಧು-ಬಳಗ' ಚಿತ್ರದ ನಟಿ |
ಅಲ್ಲಿಂದ ಓಡಿ ಬಂದೆ |
''ಮೊದ ಮೊದಲು ಅವರು ಏನ್ ಹೇಳ್ತಿದ್ದಾರೆ ಎಂಬುದು ನನಗೆ ಗೊತ್ತಾಗ್ಲಿಲ್ಲ. ಆದ್ರೆ, ಡೈರೆಕ್ಟ್ ಆಗಿಯೇ ಹೇಳಿದ್ಮೇಲೆ ಅಲ್ಲಿಂದ ಹೇಳದೆ, ಕೇಳದೆ ಓಡಿ ಬಂದೆ. ಅದೇ ಕೊನೆ, ಮತ್ತೆ ಆ ಕಡೆ ನಾನು ಹೋಗಿಲ್ಲ. ಒಂದಂತೂ ನಿಜ ಕಾಸ್ಟಿಂಗ್ ಕೌಚ್ ಬರಿ ಹೆಣ್ಮಕ್ಳಿಗೆ ಮಾತ್ರವಲ್ಲ, ಗಂಡಸರಿಗೂ ಎದುರಾಗುತ್ತೆ'' ಎಂದು ನಿರಂಜನ್ ಬಹಿರಂಗಪಡಿಸಿದ್ದಾರೆ. |
ಹೆಣ್ಣು-ಗಂಡು-ಮಂಗಳಮುಖಿ ಮೇಲೆಯೂ ದೌರ್ಜನ್ಯ |
ಕಾಸ್ಟಿಂಗ್ ಕೌಚ್ ಎಂಬುದು ಕೇವಲ ಒಂದು ವರ್ಗದವರ ಮೇಲೆ ಮಾತ್ರವಲ್ಲ, ಹೆಣ್ಣು-ಗಂಡು ಎನ್ನುವುದನ್ನ ನೋಡದೇ, ಮಂಗಳಮುಖಿಯೂ ಮೇಲೆ ಕಾಸ್ಟಿಂಗ್ ಕೌಚ್ ದೌರ್ಜನ್ಯ ನಡೆದಿರುವ ಉದಾಹರಣೆಗಳಿವೆ. |
ಎಚ್ಚೆ-ಸ್ಕೆ 81: ನೂರು ಮುಟ್ಟ-ಲೆಂ-ದು ವಿಶ್ವ-ನಾ-ಥ್ ಹಾರೈ-ಕೆ | Hsk birth day - Kannada Oneindia |
ಎಚ್ಚೆ-ಸ್ಕೆ 81: ನೂರು ಮುಟ್ಟ-ಲೆಂ-ದು ವಿಶ್ವ-ನಾ-ಥ್ ಹಾರೈ-ಕೆ |
ಮೈಸೂ-ರು : -ಎ-ಚ್ಚೆ-ಸ್ಕೆ ಎಂದೇ ಪ್ರಸಿ-ದ್ಧ-ರಾ-ದ ಪ್ರಸಿ-ದ್ಧ ಅಂಕ-ಣ-ಕಾ-ರ ಎಚ್.ಎಸ್. ಕೃಷ್ಣ-ಸ್ವಾ-ಮಿ ಅಯ್ಯಂ-ಗಾ-ರ್ ಅವ-ರು -ಶ-ತಾ-ಯು-ಷಿ-ಗ-ಳಾಗ-ಲಿ ಎಂದು ಶಿಕ್ಷ-ಣ ಸಚಿ-ವ ಎಚ್. ವಿಶ್ವ-ನಾ-ಥ್ ಹಾರೈ-ಸಿ-ದ್ದಾ-ರೆ. |
ಅಂಕ-ಣ ಕ್ಷೇತ್ರ-ದ-ಲ್ಲಿ ಎಚ್ಚೆ-ಸ್ಕೆ ಸಲ್ಲಿ-ಸಿ-ದ -ಮಹ-ತ್ತ-ರ ಸೇವೆ-ಯ-ನ್ನು ವಿ-ಶ್ವ-ನಾ-ಥ್ ಸ್ಮರಿ-ಸಿ-ದ-ರು. ಎಚ್ಚೆ-ಸ್ಕೆ ಅವ-ರಿ-ಗೆ 81 ವರ್ಷ ತುಂ-ಬಿ-ದ ಸಂದ-ರ್ಭ-ದ-ಲ್ಲಿ ಚುಟು-ಕು ಸಾಹಿ-ತ್ಯ ಪರಿ-ಷ-ತ್-ನ ಕೇಂದ್ರ ಸಮಿ-ತಿ ಶುಕ್ರ-ವಾ-ರ ಸಂಜೆ ಏರ್ಪ-ಡಿ-ಸಿ-ದ್ದ ಹುಟ್ಟು ಹಬ್ಬ-ದ ಶುಭ ಹಾರೈ-ಕೆ-ಯ ಸಮಾ-ರಂ-ಭ-ದ-ಲ್ಲಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು. ಕಾ-ರ್ಯ-ಕ್ರ-ಮ-ದ-ಲ್ಲಿ ಎಚ್ಚೆ-ಸ್ಕೆ ಅವರ-ನ್ನು ಅಭಿ-ನಂ-ದಿ-ಸಿ ಸನ್ಮಾ-ನಿ-ಸ-ಲಾ-ಯಿ-ತು. |
ಇದೇ -ಸಂ-ದ-ರ್ಭ-ದ-ಲ್ಲಿ ಎಚ್ಚೆ-ಸ್ಕೆ ಅವ-ರ ಅಂಕ-ಣ ಬರ-ಹ-ಗ-ಳ ಸಂಗ್ರ-ಹ ಎಚ್ಚೆ-ಸ್ಕೆ ಆಯ್ದ ಬರ-ಹ-ಗ-ಳು ಪುಸ್ತಕವ-ನ್ನು -ಬಿ-ಡು-ಗ-ಡೆ ಮಾಡ-ಲಾ-ಯಿತು. ಶಾಸ-ಕ ಎ.ಎಸ್. ಗುರು-ಸ್ವಾ-ಮಿ ಪುಸ್ತ-ಕ-ವ-ನ್ನು ಬಿಡು-ಗ-ಡೆ ಮಾಡಿ-ದ-ರು. ಸನ್ಮಾ-ನ-ಕ್ಕೆ ಉತ್ತ-ರಿ-ಸಿ-ದ ಎಚ್ಚೆ-ಸ್ಕೆ ತಮ್ಮ-ಗ-ಳ ಅಭಿ-ಮಾ-ನ-ದಿಂ-ದ ಹೃದ-ಯ ತುಂಬಿ ಬಂದಿ-ದೆ ಎಂದ-ರು. |
ಚಿತ್ರದುರ್ಗ : ಚಿತ್ರದುರ್ಗ ನಗರ ತಾಲೂಕು ಕೇಂದ್ರಗಳಿಗಿಂತ ಕೆಟ್ಟದಾಗಿದೆ. ಹೊಳಲ್ಕೆರೆ, ಚಳ್ಳಕೆರೆ ಚಿತ್ರದುರ್ಗಕ್ಕಿಂತ ಚೆನ್ನಾಗಿದೆ. ಚಿತ್ರದುರ್ಗದ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ಕೂಡ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್ ಹೇಳಿದರು. |
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಭಗತ್ ಸಿಂಗ್ ಜನ್ಮ ದಿನಾಚರಣೆ ಕಾರ್ಯಕ್ರಮದ ನಂತರ ಮಾತನಾಡಿದರು. |
ಕೇಂದ್ರಕ್ಕೆ ಪ್ರಸ್ತಾವ : 'ಐತಿಹಾಸಿಕ ಕೋಟೆಯ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆಯೊಂದನ್ನು ಸಿದ್ದಪಡಿಸ ಲಾಗಿದೆ. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಚಂದ್ರವಳ್ಳಿಯಿಂದ ಕೋಟೆಗೆ ಬರಲು ರೋಪ್ ವೇ, ಕೋಟೆಯಲ್ಲಿ ಪ್ರವಾಸಿಗರಿಗೆ ಶುದ್ದ ಕುಡಿಯುವ ನೀರಿನ ಘಟಕ, ಬಯೋ ಡಿಗ್ರೇಡಬಲ್ ಟಾಯ್ಲೆಟ್, ಅನ್ಯ ರಾಜ್ಯ, ದೇಶಗಳಿಂದ ಬರುವ ಪ್ರವಾಸಿಗರ ಅನುಕೂಲಕ್ಕೆ ಬಹುಭಾಷಾ ಗೈಡ್ಗಳ ನೇಮಕ, ಕೋಟೆಯ ಶಿಥಿಲಗೊಂಡಿರುವ ಭಾಗಗಳ ದುರಸ್ತಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ 60 ರಿಂದ 80 ಕೋಟಿ ಅನುದಾನಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಲಾಗುವುದು' ಎಂದರು. |
ಚಳ್ಳಕೆರೆ ತಾಲೂಕಿನ ಕುದಾಪುರ ಫಾರಂನ 450 ಎಕರೆ ಪ್ರದೇಶದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆ ಸ್ಥಾಪನೆ ಮಾಡಬೇಕು. 'ತೆಂಗು ಅಭಿವೃದ್ಧಿ ಮಂಡಲಿಯ ಬಹಳಷ್ಟು ಯೋಜನೆ, ಅನುದಾನ ಕೇರಳ, ತಮಿಳು ನಾಡು ಪಾಲಾಗಿವೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ತೆಂಗು ಬೆಳೆಯುತ್ತಿದ್ದು 40 ಕೋಟಿ ರೂ ವೆಚ್ಚದಲ್ಲಿ ತೆಂಗು ಸಂಸ್ಕರಣ ಉದ್ಯಮ ಆರಂಭಿಸಲು ಸಚಿವ ಪ್ರಕಾಶ್ ಜಾವಡೆಕರ್ಗೆ ನಿಯೋಗ ಪ್ರಸ್ತಾವನೆ ಸಲ್ಲಿಸಲಿದೆ'ಎಂದು ತಿಳಿಸಿದರು. |
ಬೈಪಾಸ್ ನಿರ್ಮಾಣಕ್ಕೆ ಅನುದಾನ : ಈಗ ನಗರಕ್ಕೆ ಹೊಂದಿಕೊಂಡಿರುವ ಬೈಪಾಸ್ ರಸ್ತೆ ಆಚೆಗೂ ನಗರ ಬೆಳೆದಿರುವುದರಿಂದ ಇದು ಸಂಚಾರ ಸ್ನೇಹಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಹೊಸದಾಗಿ ಯೋಜಿಸಿರುವ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಶೀಘ್ರವೇ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಲಾಗುವುದು ಎಂದರು. |
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರುಳಿ, ರತ್ನಮ್ಮ, ನಾಗರಾಜ್ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರ ಮಂಡಲ ಅಧ್ಯಕ್ಷ ಲೀಲಾಧರ್ ಠಾಕೂರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶಿವಣ್ಣಾಚಾರ್, ಖಜಾಂಚಿ ನರೇಂದ್ರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ್, ಮೋಹನ್, ವೆಂಕಟೇಶ್ಯಾದವ್ ಮತ್ತಿತರರು ಇದ್ದರು. |
- ಕೆ.ಎಸ್.ನವೀನ್, ಬಿಜೆಪಿ ಅಧ್ಯಕ್ಷ |
ಲಾಜಿಸ್ಟಿಕ್ ಹಬ್ಗೆ ಮನವಿ : ಚಿತ್ರದುರ್ಗ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಧಿಸುವ ಜಿಲ್ಲಾ ಕೇಂದ್ರವಾಗಿದೆ. ಇಲ್ಲಿ ದೊಡ್ಡ ಕಂಪನಿಗಳಿಗೆ ಅನುಕೂಲವಾಗುವಂತೆ ಲಾಜಿಸ್ಟಿಕ್ಹಬ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರೆ ಈ ಭಾಗದ ಅಭಿವೃದ್ಧಿಗೆ ಮಹತ್ತರ ಕೊಡುಗೆಯಾಗಲಿದೆ. ಕೊರಿಯರ್ ಕಂಪನಿಗಳು, ಆನ್ಲೈನ್ ಕಾಮರ್ಸ್ ಕಂಪನಿ ಗಳಾದ ಅಮೇಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಹಲವು ಕಂಪನಿಗಳು ನೆಲೆಗೊಳ್ಳಲಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ. ಇದನ್ನು ಕೇಂದ್ರಕ್ಕೆ ಮನವರಿಕೆ ಮಾಡಲಾಗುವುದು ಎಂದರು. |
ದಿನಾ 'ಚಪಾತಿ' ತಿನ್ನುವುದರಿಂದ ಲಾಭವೇನು ಗೊತ್ತಾ.? | BHARATHA EXPRESS |
Home HEALTH ದಿನಾ 'ಚಪಾತಿ' ತಿನ್ನುವುದರಿಂದ ಲಾಭವೇನು ಗೊತ್ತಾ.? |
ಪ್ರತಿ ಮನೆಯಲ್ಲಿಯೂ ಚಪಾತಿಯನ್ನು ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಧುಮೇಹಿಗಳಿದ್ದರೆ ಇದೇ ಫುಡ್. ಯಾಕೆಂದರೆ ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶವಿದ್ದು, ಆರೋಗ್ಯಕ್ಕೆ ಒಳಿತು ಉಂಟು ಮಾಡುತ್ತದೆ. ಚಪಾತಿಯಲ್ಲಿ ವಿಟಮಿನ್ ಬಿ, ಇ, ಸತು, ಅಯೋಡಿನ್, ಸಿಲಿಕಾನ್, ಪೊಟ್ಯಾಷಿಯಮ್, ಕ್ಯಾಲ್ಸಿಯಂ ಮತ್ತು ಇನ್ನಿತರ ಅಂಶಗಳಿವೆ. ಇವು ಮನುಷ್ಯ ಆರೋಗ್ಯದಿಂದಿರಲು ಸಹಕರಿಸುತ್ತದೆ. |
ಹಾಗೇ ಚರ್ಮ ಆರೋಗ್ಯದಿಂದ ಇರಲು ಗೋಧಿ ಬೇಕು. ಇದರಲ್ಲಿರುವ ಸತು ಮತ್ತು ಇನ್ನಿತರ ಅಂಶಗಳು ಸ್ಕಿನ್ ಆರೋಗ್ಯದಿಂದ ಇರಲು ಸಹಕರಿಸುತ್ತದೆ. ಇದರಿಂದ ಸ್ಕಿನ್ ಗ್ಲೋ ಆಗುತ್ತದೆ. ಪ್ರತಿದಿನ ಮುಂಜಾನೆ ಉಳಿದ ಚಪಾತಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬೇಕು. ಇದು ರಕ್ತದೊತ್ತಡವನ್ನು ನಿವಾರಿಸುತ್ತದೆ. ಚಪಾತಿ ಮತ್ತು ಹಾಲು ಸೇವನೆ ಗ್ಯಾಸ್ಟ್ರಿಕ್ಗೆ ಒಳ್ಳೆ ಮದ್ದು. |
#keralanadanfood #brakefast #chapathi |
A post shared by sreekanth (@iamsreekanth_satheesan) on Nov 22, 2019 at 12:16am PST |
ಚಪಾತಿಯ ಪೌಷ್ಟಿಕಾಂಶಗಳು ಫಿಟ್ ಆಗಿರಲು ಸಹಕರಿಸುತ್ತದೆ. ಅಲ್ಲದೆ ಹೆಚ್ಚು ಸುಸ್ತು, ಆಯಾಸ ಉಂಟಾಗುವುದಿಲ್ಲ.ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯದಿಂದಿರಲು ಸಹಕರಿಸುತ್ತದೆ. ಗೋಧಿ ಚಪಾತಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಜೊತೆಗೆ ಕೊಲೆಸ್ಟ್ರಾಲ್ ದೇಹ ಸೇರುವುದಿಲ್ಲ. |
ಮಲ್ಪೆ- ತೀರ್ಥಹಳ್ಳಿ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ: ಸಂಸದೆ ಶೋಭಾ | Udayavani - ಉದಯವಾಣಿ |
ಮಲ್ಪೆ- ತೀರ್ಥಹಳ್ಳಿ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ: ಸಂಸದೆ ಶೋಭಾ |
Team Udayavani, Jul 04, 2018, 3:50 AM IST |
ಕಾರ್ಕಳ: ಮಲ್ಪೆ- ತೀರ್ಥಹಳ್ಳಿ ರಸ್ತೆ ಚತುಷ್ಪಥ ಅಭಿವೃದ್ಧಿಗೆ ಸಂಬಂಧಿಸಿ ಉಡುಪಿಯ ಕರಾವಳಿ ಜಂಕ್ಷನ್ ನಿಂದ ಪರ್ಕಳದವರೆಗಿನ ರಸ್ತೆಗೆ 93 ಕೋ. ರೂ. ಬಿಡುಗಡೆಗೊಂಡಿದ್ದು, ಟೆಂಡರ್ ಆಗಿದೆ. ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಕಾರ್ಕಳದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈಗಾಗಲೇ ಗುರುತಿಸಿದ ಎಲ್ಲ ಹೈವೇಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆದಿದೆ. ಹಿಂದಿನ ರಾಜ್ಯ ಸರಕಾರ ಭೂಸ್ವಾಧೀನ ಪ್ರಕ್ರಿಯೆಗೆ ಮೀನಮೇಷ ಎಣಿಸಿದ್ದರಿಂದ ವಿಳಂಬವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಜಿಲ್ಲಾಧಿಕಾರಿ ಮೂಲಕವೇ ನಡೆಯಬೇಕಾಗಿದೆ. ಕರಾವಳಿ ಜಂಕ್ಷನ್ -ಪರ್ಕಳ, ಪರ್ಕಳ- ಹಿರಿಯಡ್ಕ, ಹಿರಿಯಡ್ಕ-ಸೀತಾನದಿ, ಸೀತಾನದಿ - ಆಗುಂಬೆ ಹೀಗೆ ನಾಲ್ಕು ಹಂತಗಳಲ್ಲಿ ಈ ರಸ್ತೆಯ ಕಾಮಗಾರಿ ನಡೆಯಲಿದೆ ಎಂದರು. |
ಕೇಂದ್ರ ಸರಕಾರದಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ದೊಡ್ಡ ಪ್ರಮಾಣದ ಅನುದಾನ ತರಲಾಗಿದೆ. ಸದ್ಯ CRFನಲ್ಲಿ 93 ಕೋ.ರೂ. ಮೊತ್ತದ ಕೆಲಸ ನಡೆಯುತ್ತಿದೆ. 46 ಕೋ.ರೂ. ಟೆಂಡರ್ ಆಗಬೇಕಿದೆ. ಜಿಲ್ಲೆಯಲ್ಲಿ 1,95,355 ಜನಧನ ಖಾತೆ ತೆರೆಯಲಾಗಿದ್ದು, ಸಕ್ರಿಯವಾಗಿವೆ. ಖಾತೆದಾರರಿಗೆ ಇನ್ಶೂರೆನ್ಸ್ ಕೂಡ ದೊರೆಯುತ್ತಿದೆ ಎಂದರು. |
ಹನಿನೀರಾವರಿಗೆ ಆದ್ಯತೆ |
ಕೃಷಿ ಸಿಂಚನ ಯೋಜನೆ ಜಾರಿ ತರಲಾಗಿದ್ದು, ಹನಿ ನೀರಾವರಿಗೆ ಶೇ.90 ಸಹಾಯಧನ ನೀಡಲಾಗುತ್ತಿದೆ. ಉಜ್ವಲ ಯೋಜನೆಯಡಿ ಅರ್ಹ ಕುಟುಂಬಗಳಿಗೆ ಉಚಿತವಾಗಿ ಸಂಪರ್ಕ ಕಲ್ಪಿಸುವ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಶೇ.90 ಸಂಪರ್ಕ ಕಲ್ಪಿಸಲಾಗಿದ್ದು, ಬಾಕಿ ಇರುವವರಿಗೆ ಪರಿಶೀಲಿಸಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದೆ ಎಂದರು. |
ಜಿಲ್ಲೆಯಲ್ಲಿ 28,500 ಶೌಚಾಲಯ ನಿರ್ಮಾಣ |
ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣಕ್ಕೆ ಪ. ಜಾತಿ ಮತ್ತು ಪ. ಪಂಗಡದ ಕುಟುಂಬಗಳಿಗೆ 15 ಸಾವಿರ ರೂ. ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ 12 ಸಾವಿರ ರೂ. ನೀಡಲಾಗಿದೆ. ಜಿಲ್ಲೆಯಲ್ಲಿ 28,500 ಶೌಚಾಲಯಗಳು ನಿರ್ಮಾಣವಾಗಿವೆ. ಮುದ್ರ ಲೋನ್ ನಲ್ಲಿ ಜಿಲ್ಲೆಯಲ್ಲಿ 286 ಕೋ.ರೂ. ವಿತರಣೆ ಮಾಡಲಾಗಿದೆ ಎಂದರು. |
ಕೇಂದ್ರೀಯ ವಿದ್ಯಾಲಯವನ್ನು ಉಡುಪಿಗೆ ತರಲಾಗಿದೆ. ಸದ್ಯ ಇದು ತಾತ್ಕಾಲಿಕವಾಗಿ ಮಲ್ಪೆಯಲ್ಲಿ ನಡೆಯುತ್ತಿದ್ದು, ಅಲೆವೂರಿನಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಆಗುತ್ತದೆ. ಮೊದಲಬಾರಿಗೆ ಉಡುಪಿಯಲ್ಲಿ ಜೆಮ್ಸ್ ಆ್ಯಂಡ್ ಜುವೆಲ್ಸ್ ಸರ್ಟಿಫಿಕೇಶನ್ ಶಾಲೆ ತೆರೆಯಲಾಗಿದೆ. ಬ್ರಹ್ಮಾವರದಲ್ಲಿ ಪಾಸ್ ಪೋರ್ಟ್ ಕಚೇರಿ, ಜನೌಷಧ ಕೇಂದ್ರಗಳು, ಸಖೀ ಒನ್ ಸ್ಟಾಪ್ ಸೆಂಟರ್ ತರಲಾಗಿದೆ. 6,000 ಸಾವಿರ ಮನೆಗಳಿಗೆ ಪಂ| ದೀನ್ ದಯಾಳ್ ಉಪಾಧ್ಯಾಯ ವಿದ್ಯುದೀಕರಣ ಯೋಜನೆಯಲ್ಲಿ ವಿದ್ಯುತ್ ಕಲ್ಪಿಸಲಾಗಿದೆ ಎಂದರು. ಯೋಜನೆಗಳಲ್ಲಿ ಕಾರ್ಕಳದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. CRFನಲ್ಲಿ ಅತೀ ಹೆಚ್ಚು 87 ಕೋ.ರೂ. ಕಾರ್ಕಳಕ್ಕೆ ನೀಡಲಾಗಿದೆ ಎಂದರು. |
ಸುರಂಗ ಮಾರ್ಗ ಸೂಕ್ತವಲ್ಲ |
ಆಗುಂಬೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಸೂಕ್ತವಲ್ಲ ಎಂದು ಕೇಂದ್ರದ ತಜ್ಞರ ತಂಡ ತಿಳಿಸಿದೆ. ಸುರಂಗ ಮಾರ್ಗಕ್ಕೆ ನನ್ನ ಒತ್ತಾಯ ಇದೆ. ಆದರೆ ಅದರಿಂದ ಅಲ್ಲಿರುವ ಜೀವವೈವಿಧ್ಯಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ಘಾಟಿ ರಸ್ತೆಯನ್ನು ಸ್ವಲ್ಪ ಅಗಲ ಮಾಡಲು ಮಾತ್ರ ಸಾಧ್ಯವಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು. ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಜಿಲ್ಲಾ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಕ್ಷೇತ್ರ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಎಂ.ಕೆ. ಸುವೃತ್ ಕುಮಾರ್ ಉಪಸ್ಥಿತರಿದ್ದರು. |
ಕ್ಷೇತ್ರ ಮರೆತಿದ್ದರೆ ಇಷ್ಟು ಕೆಲಸ ಹೇಗೆ ಸಾಧ್ಯ: ಶೋಭಾ ಪ್ರಶ್ನೆ |
ಕಾರ್ಕಳ: ತನ್ನ ಕ್ಷೇತ್ರವನ್ನು ಮರೆತಿದ್ದರೆ ಇಷ್ಟು ಅಭಿವೃದ್ಧಿ ಕಾರ್ಯಗಳನ್ನು ನಿಭಾಯಿಸಲು ಕೆಲಸ ಹೇಗೆ ಸಾಧ್ಯವಾಯಿತು? 28 ಸಂಸದರ ಪೈಕಿ ಬೇರೆ ಯಾವ ಸಂಸದರ ಕ್ಷೇತ್ರದಲ್ಲಿ ಇಷ್ಟು CRF ನಿಧಿ ಬಂದಿದೆ, ಯಾವ ಸಂಸದರು ದಿಲ್ಲಿಯಲ್ಲಿ ಸಚಿವರ ಜತೆಗೆ ಮಾತನಾಡುತ್ತಾರೆ ಎಂದು ಸರ್ವೆ ಮಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲೆಸೆದರು. |
ಮಾಧ್ಯಮದ ಪ್ರಶ್ನೆಗೆ ಪ್ರಕ್ರಿಯಿಸಿದ ಅವರು, ಬಿಜೆಪಿ ಹೇಳಿದಂತೆ ನಾನು ನಡೆದುಕೊಳ್ಳುತ್ತಿದ್ದೇನೆ ಎಂದರು. ಲೋಕಸಭಾ ಚುನಾವಣೆಯ ಅಭ್ಯರ್ಥಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಕ್ಷ ಯಾರನ್ನು ಘೋಷಿಸುತ್ತದೆಯೋ ಅವರೇ ಅಭ್ಯರ್ಥಿಯಾಗಲಿದ್ದಾರೆ. ಪಕ್ಷ ಬೇಕು ಎಂದರೆ ಸ್ಪರ್ಧಿಸುತ್ತೇನೆ, ಬೇಡ ಅಂದರೆ ಸ್ಪರ್ಧಿಸುವುದಿಲ್ಲ. ನಾನು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರಿಗೆ ತಮ್ಮ ಅಭಿಪ್ರಾಯ ಹೇಳುವ ಅವಕಾಶವಿದೆ ಎಂದರು. |
ಸಿಇಟಿ: ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ | Udayavani – ಉದಯವಾಣಿ |
ಸಿಇಟಿ: ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ |
Team Udayavani, Jul 26, 2017, 7:15 AM IST |
ಬೆಂಗಳೂರು: ಸಿಇಟಿ-2017ರ 2ನೇ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದುಪಡಿಸಿ ಕೊಂಡಿರುವ, ಹೊಸದಾಗಿ ಸೇರಿರುವ ಹಾಗೂ ಉಳಿಕೆಯಾಗಿರುವ ಸೀಟು ಹಂಚಿಕೆ ಮಾಡಲಾಗುತ್ತದೆ. ಎಂಜಿನಿಯರಿಂಗ್, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ತೋಟಗಾರಿಕೆ, ಪಶುಸಂಗೋ ಪನೆ, ಬಿ-ಫಾರ್ಮ ಹಾಗೂ ಆಯುಷ್ ಇತ್ಯಾದಿ ಕೋರ್ಸ್ಗಳ ಸೀಟು ಲಭ್ಯತೆಯ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಈ ಸುತ್ತಿನಲ್ಲಿ ಹೊಸದಾಗಿ ಆಪ್ಷನ್ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ. ಜು.27ರ ಸಂಜೆ 5ರ ತನಕ ಆಪ್ಷನ್ ಎಂಟ್ರಿ ಮಾಡಬಹುದು. ಜು.29ರ ಬೆಳಗ್ಗೆ 11ಕ್ಕೆ ಸೀಟು ಹಂಚಿಕೆ ನಡೆಯಲಿದೆ. |
ಜು.31ರ ಸಂಜೆ 5ರೂಳಗೆ ಶುಲ್ಕ ಪಾವತಿಸಿ, ಸೀಟು ಖಚಿತಪಡಿಸಿಕೊಂಡು ಪ್ರವೇಶ ಪತ್ರ ಡೌನ್ಲೋಡ್ ಮಾಡಿ, ಕಾಲೇಜಿಗೆ ಹಾಜರಾಗಬೇಕು. ಮೊದಲ ಅಥವಾ 2ನೇ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು, ಆ ಸೀಟನ್ನು ರದ್ದುಪಡಿಸಿ, ಎರಡನೇ ಮುಂದು ವರಿದ ಸುತ್ತಿಗೆ ಹೋಗಬೇಕಾದರೆ ಜು.27ರ ಸಂಜೆ 5 ಗಂಟೆಯೊಳಗೆ ಸೀಟು ರದ್ದುಪಡಿಸಬೇಕು. ಅಂಥ ವಿದ್ಯಾರ್ಥಿಗಳು ಪಾವತಿಸಿರುವ ಒಟ್ಟು ಶುಲ್ಕದಲ್ಲಿ 5 ಸಾವಿರ ರೂ.ಗಳನ್ನು ನಿಯಮಾನುಸಾರ ಕಡಿತಗೊಳಿಸಿ, ಮರುಪಾವತಿ ಮಾಡ ಲಾಗುತ್ತದೆ. |
2ನೇ ಮುಂದುವರಿದ ಸುತ್ತಿನಲ್ಲಿ ಸೀಟು ರದ್ದುಪಡಿಸಿಕೊಂಡ ಅಭ್ಯರ್ಥಿಗೆ ಶುಲ್ಕ ಮರುಪಾವತಿ ಮಾಡುವುದಿಲ್ಲ ಎಂದು |
ಪ್ರಾಧಿಕಾರ ಪ್ರಕಟಣೆ ತಿಳಿಸಿದೆ. |
ಶೇ.26 ತೇರ್ಗಡೆ |
ಬೆಂಗಳೂರು: ಮಾರ್ಚ್-ಏಪ್ರಿಲ್ನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ |
ಜೂನ್ ಮತ್ತು ಜುಲೈನಲ್ಲಿ ನಡೆಸಲಾಗಿದ್ದ ಪೂರಕ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಶೇ.26.34 |
ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆಯಲ್ಲಿ ಹಾಜರಾಗಿದ್ದ ಒಟ್ಟು 2,51,781 ಅಭ್ಯರ್ಥಿಗಳಲ್ಲಿ 66,320 |
ಮಂದಿ ಉತ್ತೀರ್ಣರಾಗಿದ್ದಾರೆ. ಕೌನ್ಸೆಲಿಂಗ್ನಲ್ಲಿ ಭಾಗವಹಿಸಬಹುದು ಪೂರಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ |
26,338 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳ ಪೈಕಿ 150001ನಂತರದ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಜು.28ರಿಂದ ದಾಖಲೆ ಪರಿಶೀಲನೆ ನಡೆಯಲಿದೆ. |
ಜು.29ರ ಸಂಜೆ 8ರಿಂದ ಆಪ್ಷನ್ ಎಂಟ್ರಿ ಆರಂಭವಾಗಲಿದೆ. ಆಗಸ್ಟ್ 1ರ ಸಂಜೆ 4ಕ್ಕೆ ಸೀಟು ಹಂಚಿಕೆ ನಡೆಯಲಿದೆ. ಆ.3ರ ಮಧ್ಯಾಹ್ನ 3ರೊಳಗೆ ಸೀಟು ಪಡೆದ ಅಭ್ಯರ್ಥಿಗಳು ಶುಲ್ಕ ಪಾವತಿಸಿ, ಆ.4ರ ಸಂಜೆ 5.30ರೊಳಗೆ ಸಂಬಂಧಿಸಿದ |
ಕಾಫಿ ಬೆಳೆಯತ್ತ ಬೆಳೆಗಾರರ ಚಿತ್ತ | Prajavani |
ಕಾಫಿ ಬೆಳೆಯತ್ತ ಬೆಳೆಗಾರರ ಚಿತ್ತ |
ಮಲೆನಾಡಿನ ವಾಣಿಜ್ಯ ಬೆಳೆ ಅಡಿಕೆಗೆ ರೋಗ, ಭತ್ತಕ್ಕೆ ಸಿಗದ ಬೆಂಬಲ |
ಪ್ರಜಾವಾಣಿ ವಾರ್ತೆ Updated: 10 ಏಪ್ರಿಲ್ 2018, 12:23 IST |
ಶೃಂಗೇರಿ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಎನಿಸಿಕೊಂಡಿರುವ ಅಡಿಕೆಗೆ ಬಂದಿರುವ ರೋಗಗಳಿಂದ ಜನರು ಬೇಸತ್ತಿದ್ದು, ಜನರು ಕಾಫಿ ಬೆಳೆಗೆ ಆಕರ್ಷಿತರಾಗಿದ್ದಾರೆ. ಪ್ರಮುಖ ಸ್ಥಾನ ಪಡೆದುಕೊಂಡಿರುವ ಈ ಬೆಳೆಯ ಕೊಯ್ಲು ಮುಕ್ತಾಯ ಹಂತದಲ್ಲಿದೆ. |
ಡಿಸೆಂಬರ್ನಿಂದ ಆರಂಭಗೊಂಡಿರುವ ಕಾಫಿ ಹಣ್ಣಿನ ಕೊಯ್ಲು ಈಗ ಮತ್ತಷ್ಟು ಚುರುಕುಗೊಂಡಿದ್ದು, ತಾಲ್ಲೂಕಿನಲ್ಲಿ ಎಸ್ಟೇಟ್ನಂತಹ ದೊಡ್ಡ ಪ್ರಮಾಣದ ಬೆಳೆಗಾರರು ಇಲ್ಲವಾದರೂ, ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಳೆ ಸಾಕಷ್ಟು ವಿಸ್ತರಣೆಯಾಗಿದೆ. |
ಅಡಿಕೆ ಸುಲಿಯಲು, ಭತ್ತ ಕಟಾವು ಮಾಡಲು ಯಂತ್ರಗಳು ಬಂದಿದ್ದರೂ, ಕಾಫಿ ಮತ್ತು ಕಾಳು ಮೆಣಸು ಕೊಯ್ಲು ಮಾಡಲು ಕಾರ್ಮಿಕರು ಬೇಕೆ ಬೇಕು. ಅಡಿಕೆ, ಭತ್ತ ಕಟಾವು ಜತೆಗೆ ಕಾಫಿ ಹಣ್ಣಿನ ಕೊಯ್ಲು ಆಗಬೇಕಾಗಿರುವುದರಿಂದ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆ ಉಂಟಾಗಿದೆ. ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರಿಗೆ ದೊರಕುವುದರಿಂದ ಹೆಚ್ಚು ಆಸಕ್ತಿಯಿಂದ ಕೊಯ್ಲು ಮಾಡಲು ಮುಂದಾಗುತ್ತಾರೆ. |
ತಾಲ್ಲೂಕಿನ ಮತ್ತೊಂದು ಬೆಳೆ ಭತ್ತ ಬೆಳೆಯಲು ಕಾರ್ಮಿಕರ ಕೊರತೆ, ಬೆಂಬಲ ಬೆಲೆ ಕಡಿಮೆ ಇದ್ದು, ಕೃಷಿಕರು ಕಾಫಿ ಬೆಳೆ ಬೆಳೆಸುವತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ರೇವತಿ ಮಳೆ ಕಾಫಿ ಬೆಳೆಗೆ ಸೂಕ್ತವಾಗಿದ್ದು ಮಾರ್ಚ್ ತಿಂಗಳಲ್ಲಿ ಕಾಣಿಸಿಕೊಂಡ ಮಳೆಯಿಂದ ಉತ್ತಮ ಫಸಲು ಬರಬಹುದು ಎಂಬ ನಿರೀಕ್ಷೆ ಮಲೆನಾಡಿನ ರೈತರಲ್ಲಿದೆ. ಕಾರ್ಮಿಕರ ಖರ್ಚು ಕಳೆದು ಕಡಿಮೆ ಲಾಭ ಬಂದರೂ ಕೃಷಿಕರು ಈ ಬೆಳೆ ಬೆಳೆಸುವುದು ಅನಿವಾರ್ಯವಾಗಿದೆ. |
ಕಾಫಿ ಅಂತರರಾಷ್ಟ್ರೀಯ ಮಾರುಕಟ್ಟೆ ಹೊಂದಿರುವುದರಿಂದ ಕೊಯ್ಲು ಮತ್ತು ಒಣಗಿಸುವಿಕೆ ಸೂಕ್ಷ್ಮ ಘಟ್ಟ. ದೊಡ್ಡ ರೈತರು ಕಾಫಿ ಒಣಗಿಸಲು ಕಾಂಕ್ರೀಟ್ ಕಣಗಳನ್ನು ನಿರ್ಮಿಸುತ್ತಾರೆ. ಆದರೆ ಸಣ್ಣ ಮತ್ತು ಮಧ್ಯಮವರ್ಗದ ರೈತರು ಟಾರ್ಪಾಲ್ ಅಥವಾ ಮಣ್ಣಿನ ನೆಲದ ಮೇಲೆ ಹರಡುತ್ತಾರೆ. ಆದರೆ ಮಣ್ಣಿನ ಮೇಲೆ ಹರಡಿದ ಕಾಫಿಯ ಗುಣಮಟ್ಟ ಕುಸಿಯುತ್ತದೆ.ಕಾಫಿ ಮಂಡಳಿ ಅಥವಾ ಕೃಷಿ ಇಲಾಖೆ ಸಹಾಯಧನದಲ್ಲಿ ಟಾರ್ಪಲ್ಗಳನ್ನು ಪೂರೈಸಿದರೆ ರೈತರಿಗೆ ಸಹಾಯಕವಾಗಲಿದೆ. |
ಅಧಿಕ ಇಳುವರಿ, ಲಾಭ ಕಡಿಮೆ: 3 ವರ್ಷಗಳ ಹಿಂದೆ ಅಂಗಡಿಗೆ 10 ರಿಂದ 20 ಮೂಟೆ ಕಾಫಿ ಬೀಜ ತಂದು ಹಾಕುತ್ತಿದ್ದ ತಾಲ್ಲೂಕಿನ ರೈತರು. ಈಗ 300 ಮೂಟೆ ತಂದು ಕೊಡುತ್ತಿದ್ದಾರೆ. ಈಗಿನ ಬೆಲೆ 50 ಕೆ.ಜಿಗೆ ₹2,900 ರಿಂದ 3ಸಾವಿರ ತನಕ ಇದೆ. ಇದರಿಂದ ರೈತರಿಗೆ ಅಧಿಕ ಲಾಭವಿಲ್ಲದಿದ್ದರೂ ಕಾಫಿ ಬೆಳೆ ಬೆಳೆಯುವ ಅನಿವಾರ್ಯತೆ ಇದೆ. ಹಾಗಾಗಿ ಬೆಳೆಗಳ ಕುರಿತು ತಂತ್ರಜ್ಞಾನದ ಬಳಕೆಯ ಬಗ್ಗೆ ಅಧ್ಯಯನ ಮಾಡಿದ ಕೃಷಿಕರು ಕಾಫಿ ಬೆಳೆ ಬೆಳೆಸುವತ್ತ ಇಲ್ಲಿನ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಕಾಫಿಪುಡಿ ಅಂಗಡಿಯವರ ಅಭಿಪ್ರಾಯ. |
ಕಾಡು ಪ್ರಾಣಿಗಳ ಕಾಟ: ಕಾಫಿ ಹಣ್ಣಿಗೆ ಮಂಗಗಳ ಕಾಟ ಅತಿ ಹೆಚ್ಚಾಗಿದ್ದು, ಆಹಾರ ಅರಸಿ ಬಂದು ಕಾಫಿ ಹಣ್ಣನ್ನು ತಿನ್ನುತ್ತವೆ. ಗಿಡದ ಮಧ್ಯ ಭಾಗದಲ್ಲಿ ಕುಳಿತು ರೆಂಬೆಗಳನ್ನು ಎಳೆದು ಹಣ್ಣು ತಿನ್ನುವ ಮಂಗಗಳು ಫಸಲಿನ ರೆಂಬೆಯನ್ನು ಹಾಳು ಮಾಡುತ್ತವೆ. ಇದಲ್ಲದೇ ಇನ್ನಿತರ ಕಾಡು ಪ್ರಾಣಿಗಳು ಅಲ್ಪ ಪ್ರಮಾಣದ ಹಾನಿ ಉಂಟು ಮಾಡುತ್ತವೆ. ಮಂಗಗಳ ನಿಯಂತ್ರಣ ಮಾಡುವುದು ರೈತರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಕೊಯ್ಲು ಮಾಡುವ ಕಾರ್ಮಿಕರಿಗೆ ಹಣ್ಣಿನೊಡನೆ ಇರುವ ಇರುವೆಗಳು ಸಾಕಷ್ಟು ತೊಂದರೆ ಕೊಡುತ್ತದೆ. |
ಕಾಫಿ ಬೆಳೆ ಉತ್ತಮವಾಗಿರಲು ಹವಾಮಾನವನ್ನು ನೆಚ್ಚಿಕೊಂಡಿರುವ ರೈತರ ಸಂಖ್ಯೆ ಹೆಚ್ಚು. ಮಾರ್ಚ್-ಏಪ್ರಿಲ್ನಲ್ಲಿ ಉತ್ತಮ ಮಳೆಯಾದರೆ ಮಾತ್ರ ಕಾಫಿ ಉತ್ತಮ ಫಸಲು ಬರುತ್ತದೆ. ಪ್ರತಿ ವರ್ಷ ಉತ್ತಮ ಮಳೆಯಾಗದೆ ಪೈರಿನ ಮೇಲೆ ಸಾಕಷ್ಟು ಹೊಡೆತ ನೀಡುತ್ತಿದೆ.ಆದರೂ ಹೊಸ ಜಾಗದಲ್ಲಿ ಕಾಫಿ ವಿಸ್ತರಣೆ ಮುಂದುವರೆದಿದೆ. |
ಸಾಂಪ್ರಾದಾಯಿಕ ಕಾಫಿ ತಳಿಗೆ ಒತ್ತು: ಬ್ರಿಟಿಷರ ಕಾಲದಿಂದ ಇದ್ದ ಕಾಫಿ ಬೆಳೆ ಹೆಚ್ಚು ಆದಾಯ ನೀಡದೆ ಇರುವುದರಿಂದ ಮನೆ ಖರ್ಚಿಗಾಗಿ ಮಾತ್ರ ಅದನ್ನು ಬೆಳೆಸಲಾಗುತ್ತಿತ್ತು. ಆದರೆ ಪ್ರಸ್ತುತ ತಾಲ್ಲೂಕಿನಲ್ಲಿ ಅಡಿಕೆ ಬೆಳೆ ಶೇ 75ರಷ್ಟು ಭಾಗ ಹಳದಿ ಎಲೆ ರೋಗದಿಂದ ನಾಶವಾಗಿವೆ. ಈ ಕಾರಣದಿಂದ 25 ವರ್ಷಗಳಿಂದ ನಾಶವಾದ ಅಡಿಕೆ ತೋಟದಲ್ಲಿ ಕಾಫಿ ಗಿಡ ನೆಡಲಾಗುತ್ತಿದೆ. ಮಲೆನಾಡಿನ ಸಾಂಪ್ರದಾಯಿಕ ಗಿಡವಾದ ರೊಬೊಸ್ಟಾ ಕಾಫಿ ಗಿಡಗಳನ್ನು ನೆಡಲಾಗುತ್ತಿದೆ. ಇದು ದೀರ್ಘಾವಧಿ ಬೆಳೆಯಾಗಿದ್ದು, ಈ ತಳಿಗೆ ಉಷ್ಟಾಂಶ ಹಾಗೂ ತೇವಾಂಶಗಳನ್ನು ತಡೆಯುವ ಶಕ್ತಿ ಇದೆ. ಕೊಳೆರೋಗ ಕಾಡುವ ಭೀತಿ ಕಡಿಮೆ. ಅರೇಬಿಕಾ, ಚಂದ್ರಗಿರಿ, ಕಾವೇರಿ ತಳಿಗಳನ್ನು ಬೆಳೆಸಲಾಗುತ್ತಿದೆ. ಆದರೆ ಈ ತಳಿಗಳಿಗೆ ಅಧಿಕ ಮಳೆ ಬಂದರೆ ಕೊಳೆರೋಗ ಕಾಡುತ್ತವೆ. |
ಕಾಫಿಗೆ ಕೆಲಸ ಜಾಸ್ತಿ ಇದ್ದು, ಕಸಿ ಮಾಡಲು ಮಾತ್ರ ನುರಿತ ಕಾರ್ಮಿಕರು ಬೇಕು. ಈಗಿನ ದರ ಕಡಿಮೆ ಇದ್ದು, ಕನಿಷ್ಠ ಚೀಲವೊಂದಕ್ಕೆ ₹4,500 ಬರಬೇಕು – ಶ್ರೀನಿವಾಸ್ ಗೌಡ ಕೂಳೆಗದ್ದೆ ಕೃಷಿಕರು. |
ಅಡಿಕೆಗೆ ಪರ್ಯಾಯವಾಗಿ ಬೆಳೆಯುತ್ತಿರುವ ಕಾಫಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಕಾಫಿ ಮಂಡಳಿ ಸುಲಭ ನಿಯಮಗಳ ಮೂಲಕ ರೈತರಿಗೆ ಸೌಲಭ್ಯ ನೀಡಬೇಕು – ಕಾನೋಳ್ಳಿ ಚಂದ್ರಶೇಖರ್, ಅಧ್ಯಕ್ಷರು ರೈತ ಸಂಘ ಶೃಂಗೇರಿ. |
'); $('#div-gpt-ad-537534-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-537534'); }); googletag.cmd.push(function() { googletag.display('gpt-text-700x20-ad2-537534'); }); },300); var x1 = $('#node-537534 .field-name-body .field-items div.field-item > p'); if(x1 != null && x1.length != 0) { $('#node-537534 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-537534').addClass('inartprocessed'); } else $('#in-article-537534').hide(); } else { // Text ad googletag.cmd.push(function() { googletag.display('gpt-text-300x20-ad-537534'); }); googletag.cmd.push(function() { googletag.display('gpt-text-300x20-ad2-537534'); }); // Remove current Outbrain $('#dk-art-outbrain-537534').remove(); //ad before trending $('#mob_rhs1_537534').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-537534 .field-name-body .field-items div.field-item > p'); if(x1 != null && x1.length != 0) { $('#node-537534 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-537534').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-537534','#dk-art-outbrain-687246','#dk-art-outbrain-686688','#dk-art-outbrain-686514','#dk-art-outbrain-686513']; var obMobile = ['#mob-art-outbrain-537534','#mob-art-outbrain-687246','#mob-art-outbrain-686688','#mob-art-outbrain-686514','#mob-art-outbrain-686513']; var obMobile_below = ['#mob-art-outbrain-below-537534','#mob-art-outbrain-below-687246','#mob-art-outbrain-below-686688','#mob-art-outbrain-below-686514','#mob-art-outbrain-below-686513']; var in_art = ['#in-article-537534','#in-article-687246','#in-article-686688','#in-article-686514','#in-article-686513']; var twids = ['#twblock_537534','#twblock_687246','#twblock_686688','#twblock_686514','#twblock_686513']; var twdataids = ['#twdatablk_537534','#twdatablk_687246','#twdatablk_686688','#twdatablk_686514','#twdatablk_686513']; var obURLs = ['https://www.prajavani.net/news/article/2018/04/10/565011.html','https://www.prajavani.net/district/chikkamagaluru/congress-strike-687246.html','https://www.prajavani.net/district/chikkamagaluru/dattamala-dharane-ritual-686688.html','https://www.prajavani.net/district/chikkamagaluru/abvp-protest-686514.html','https://www.prajavani.net/district/chikkamagaluru/dc-office-meeting-686513.html']; var vuukleIds = ['#vuukle-comments-537534','#vuukle-comments-687246','#vuukle-comments-686688','#vuukle-comments-686514','#vuukle-comments-686513']; // var nids = [537534,687246,686688,686514,686513]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html(' |
ಹೋಟೆಲ್ ಕಾರ್ಮಿಕರು ಬಂದರೂ ಕೆಲಸವಿಲ್ಲ ! | Udayavani – ಉದಯವಾಣಿ |
Tuesday, 07 Dec 2021 | UPDATED: 01:47 AM IST |
ಹೋಟೆಲ್ ಕಾರ್ಮಿಕರು ಬಂದರೂ ಕೆಲಸವಿಲ್ಲ ! |
Team Udayavani, Jun 13, 2020, 5:25 AM IST |
ಬೆಂಗಳೂರು: ಕಾರ್ಮಿಕರಿದ್ದಾರೆ, ಕೆಲಸವಿಲ್ಲ, ಕೆಲಸವಿದೆ ಕಾರ್ಮಿಕರಿಲ್ಲ. ಇದು ಸದ್ಯ ಹೋಟೆಲ್ ಗಳು ಎದುರಿಸುತ್ತಿರುವ ಸ್ಥಿತಿ. ಅಗತ್ಯ ಸುರಕ್ಷತಾ ನಿಯಮಗಳೊಂದಿಗೆ ಜೂ. 8ರಿಂದ ಹೋಟೆಲ್ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹಾಗೆಯೇ ಬಹುತೇಕ ಹೋಟೆಲ್ ಸೇವೆ ಆರಂಭಿಸಿವೆ. ಆದರೆ, ಹೋಟೆಲ್ಗಳಿಗೆ ಬರುವ ಗ್ರಾಹಕರ ಸಂಖ್ಯೆ ತೀರ ಕಡಿಮೆಯಿದೆ. ಹೀಗಾಗಿ ಕೆಲವೊಂದು ಹೋಟೆಲ್ಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಜ್ಯದ ಕಾರ್ಮಿಕರು ವಾಪಾಸ್ ಆಗಿದ್ದಾರೆ. |
ಆದರೆ, ಅವರಿಗೆ ನೀಡಲು ಹೋಟೆಲ್ ನಲ್ಲಿ ಮೊದಲಿದಷ್ಟು ಕೆಲಸ ಇಲ್ಲ. ಇನ್ನು ಕೆಲವು ಹೋಟೆಲ್ ಗಳಲ್ಲಿ (ಹೊರ ರಾಜ್ಯದ ಕಾರ್ಮಿಕರನ್ನು ಅವಲಂಬಿಸಿಕೊಂಡಿದ್ದ ಹೋಟೆಲ್ಗಳು) ಕೆಲಸವಿದೆ. ಆದರೆ, ಹಿಂದೆ ಅನುಭವ ಹೊಂದಿದ್ದ ಕಾರ್ಮಿಕರು ಈಗ ಸಿಗುತ್ತಿಲ್ಲ ಎಂಬುದು ಹೋಟೆಲ್ ಉದ್ಯಮಿಗಳೇ ಹೇಳುತ್ತಿದ್ದಾರೆ. ಬೆಂಗಳೂರಿನ ಹೋಟೆಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಮಾರು 3 ಲಕ್ಷ ಕಾರ್ಮಿಕರು ಸಹಿತ ರಾಜ್ಯದಲ್ಲಿ 15 ಸಾವಿರ ಹೋಟೆಲ್ ಕಾರ್ಮಿಕರಿದ್ದಾರೆ. |
ಆದರೆ, ಬೆಂಗಳೂರಿಗೆ ಮಂಡ್ಯ, ಮೈಸೂರು ಮೊದಲಾದ ಜಿಲ್ಲೆಗಳಿಂದ ಕಾರ್ಮಿಕರು ಬಂದಿದ್ದಾರೆ. ಆದರೆ, ಉಳಿದ ಜಿಲ್ಲೆಗಳಿಂದ ಹೋಟೆಲ್ ಕಾರ್ಮಿಕರು ಬರಲು ಸಿದರಿದ್ದಾರೆ. ಆದರೆ, ಕೆಲಸವೇ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಮಾಲೀಕರೇ ಕರೆಸಿಕೊಳ್ಳಲು ಹಿಂದೇಟುಹಾಕುತ್ತಿದ್ದಾರೆ. ಕರೆಸಿಕೊಂಡರೂ ಕೆಲಸ ಕೊಡಲಾಗದ ಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಹೋಟೆಲ್ ಮಾಲೀಕರೊಬ್ಬರು ಮಾಹಿತಿ ನೀಡಿದರು. |
ಪಾರ್ಸೆಲ್ಗೆ ಅವಕಾಶ ನೀಡಿದ್ದ ಸಂದರ್ಭದಲ್ಲಿ ಶೇ.15ರಷ್ಟು ವ್ಯಾಪಾರ ವಹಿವಾಟು ಆಗುತಿತ್ತು. ಈಗ ಶೇ.25ರಿಂದ 30ರಷ್ಟು ವ್ಯಾಪಾರವಾಗುತ್ತಿದೆ. ವ್ಯಾಪಾರ ಕಡಿಮೆ ಇರುವುದರಿಂದ ಹೆಚ್ಚು ಕಾರ್ಮಿಕರ ಅಗತ್ಯವೂ ಇರುವುದಿಲ್ಲ. ಅಲ್ಲದೆ, ಪಾರ್ಸೆಲ್ ಸೇವೆ ಹೆಚ್ಚಾಗಿದೆಯೇ ಹೊರತು, ಹೋಟೆಲ್ನಲ್ಲಿ ಕುಳಿತು ಊಟ, ತಿಂಡಿ ಮಾಡುವುದು ಕಡಿಮೆಯಾಗಿದೆ. ಹೊರ ರಾಜ್ಯದ ಕಾರ್ಮಿಕರು ಬರುವುದೇ ಬೇಡ ಎಂಬ ಸ್ಥಿತಿಯಿದೆ ಎಂದು ಹೋಟೆಲ್ ಉದ್ಯಮಿ ವಿವರಿಸಿದರು. |
ಬೆಂಗಳೂರಿಗೆ ಬಂದು ವಾರ ಕಳೆದಿದೆ. ಸರಿಯಾದ ಕೆಲಸವಿಲ್ಲ. ಹೋಟೆಲ್ಗೆ ಬರುವವರು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಪಾರ್ಸೆಲ್ ಮತ್ತು ಅಡಿಗೆ ತಯಾರಿಸಲು ಐದಾರು ಜನ ಸಾಕಾಗುತ್ತದೆ. ಉಳಿದವರಿಗೆ ಕೆಲಸವೇ ಇಲ್ಲ. ಸುಮ್ಮನೆ ರೂಂನಲ್ಲಿ ಕುಳಿತಿರಬೇಕಾಗಿದೆ. |
-ರಾಜೇಶ್, ಹೋಟೆಲ್ ಕಾರ್ಮಿಕ |
ಹೋಟೆಲ್ನಲ್ಲಿ ಈಗ ವ್ಯಾಪಾರ ತುಂಬ ಕಡಿಮೆಯಿದೆ. ಅಲ್ಲದೆ, ಜನರು ಕೂಡ ಹೋಟೆಲ್ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಾವು ಎಲ್ಲ ರೀತಿಯ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದೇವೆ. ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬರುತ್ತಿಲ್ಲ. ಹೀಗಾಗಿ ಕಾರ್ಮಿಕರನ್ನು ಪೂರ್ಣ ಪ್ರಮಾಣದಲ್ಲಿ ಕರೆಸಿಕೊಂಡಿಲ್ಲ. ಮುಂದೇನು ಎಂಬುದೇ ಚಿಂತೆ. |
-ಸುಬ್ರಹ್ಮಣ್ಯ ಹೆಬ್ಬಾರ್, ಕಾರ್ಯದರ್ಶಿ, ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘ |
ಸರ್ಕಾರ ಹೋಟೆಲ್ ಕಾರ್ಮಿಕರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ. ಯಾವುದೇ ಸೌಲಭ್ಯವನ್ನು ಘೋಷಣೆ ಮಾಡಿಲ್ಲ. ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಗ್ರಾಹಕರ ಸಂಖ್ಯೆಯು ಕಡಿಮೆ ಇರುವುದರಿಂದ ಕಾರ್ಮಿಕರಿಗೆ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ. ಹೋಟೆಲ್ ಉದ್ಯಮ ಈಗ ಸಂಪೂರ್ಣ ನೆಲಕಚ್ಚಿದೆ. ಸರ್ಕಾರವೇ ಅಗತ್ಯ ಸೌಲಭ್ಯ ನೀಡಬೇಕಿದೆ. ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. |
ಜೆಪ್ಪು ವಾರ್ಡ್ನಲ್ಲಿ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಲಾಕರ್ನ ನೊಂದಾವಣೆ ಶಿಬಿರ | News13 |
News13 > ಸುದ್ದಿಗಳು > ರಾಜ್ಯ > ಪ್ರಾದೇಶಿಕ > ಮಂಗಳೂರು > ಜೆಪ್ಪು ವಾರ್ಡ್ನಲ್ಲಿ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಲಾಕರ್ನ ನೊಂದಾವಣೆ ಶಿಬಿರ |
ಜೆಪ್ಪು ವಾರ್ಡ್ನಲ್ಲಿ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಲಾಕರ್ನ ನೊಂದಾವಣೆ ಶಿಬಿರ |
ಮಂಗಳೂರು : 59 – ಜೆಪ್ಪು ವಾರ್ಡ್ನ ಜಪ್ಪು-ಕುಡ್ಪಾಡಿಯ ಅಂಗನವಾಡಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಲಾಕರ್ನ ನೊಂದಾವಣೆ ಶಿಬಿರ – ಕಾರ್ಯಕ್ರಮವು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗು ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರ ನಿರ್ದೇಶನದಲ್ಲಿ ಮತ್ತು ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಡಿ.ವೇದವ್ಯಾಸ್ ಕಾಮತ್ರವರ ಮೇಲು ಉಸ್ತುವಾರಿಯಲ್ಲಿ ಮತ್ತು ಜಪ್ಪು ವಾರ್ಡ್ನ ಬಿ.ಜೆ.ಪಿ ಅಧ್ಯಕ್ಷರಾದ ಭರತ್ ಕುಮಾರ್ ಎಸ್ ರವರ ನೇತೃತ್ವದಲ್ಲಿ ತಾ:09.04.2017 ಮತ್ತು 10.04.2017ರಂದು ಜರುಗಿತು. |
ಪ್ರಧಾನಿ ಶ್ರೀ ನರೇಂದ್ರ ಮೋದಿರವರ ಡಿಜಿಟಲ್ ಇಂಡಿಯಾದ ಪರಿಕಲ್ಪನೆ ಹಾಗು ಪಾರದರ್ಶಕ ಮತ್ತು ಕಾಗದರಹಿತ ಆಡಳಿತವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಡಿಜಿಟಲ್ ಲಾಕರ್ಗೆ ಹೆಸರು ನೊಂದಾಯಿಸಿ, ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಶಿಬಿರದಲ್ಲಿ ಸಾರ್ವಜನಿಕರು ಬಲು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹೆಸರುಗಳನ್ನು ನೊಂದಾಯಿಸಿ ಶ್ರೀ ನರೇಂದ್ರ ಮೋದಿಯರವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಉತ್ತಮ ಬೆಂಬಲವನ್ನು ವ್ಯಕ್ತಪಡಿಸಿದರು. |
ದೇಶದಲ್ಲಿ ಪ್ರಸ್ತುತ ಎಲ್ಲರೂ ನಗದು ರಹಿತ ವ್ಯವಹಾರ, ಇ-ಪೇಮೆಂಟ್ಸ್ ಮತ್ತು ಡಿಜಟಲೀಕರಣದ ಕಡೆಗೆ ಒಲವು ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸುವಲ್ಲಿ ಡಿಜಿಟಲ್ ಲಾಕರ್ ಪ್ರಮುಖ ಪಾತ್ರವನ್ನು ವಹಿಸಲಿದೆ. ಪಾನ್ ಕಾರ್ಡ್, ಪಾಸ್ಪೋರ್ಟ್, ಜನ್ಮ ದಾಖಲೆ, ಭೂ ದಾಖಲೆ, ಮತದಾನ ಗುರುತಿನ ಚೀಟಿ, ಶೈಕ್ಷಣಿಕ ಪ್ರಮಾಣ ಪತ್ರ, ಚಾಲನಾ ಪರಾವನಿಗೆ ಮುಂತಾದ ಸರಕಾರ ನೀಡಿರುವ ಎಲ್ಲಾ ದಾಖಲೆಗಳನ್ನು ಈ ವ್ಯವಸ್ಥೆಯಡಿಯಲ್ಲಿ ಸಂರಕ್ಷಿಸಿಡಬಹುದಾಗಿದೆ. ಇದರಿಂದ ಮಹತ್ವದ ದಾಖಲೆಗಳು ಕಳೆದು ಹೋಗುವ, ಹಾನಿಗೊಳಗಾಗುವ ಭೀತಿಯಿರದೆ ಬೇಕಾದಾಗ ಪಡೆಯಬಹುದಲ್ಲದೆ, ಯಾವುದೇ ಸರಕಾರಿ ಸೇವೆಯನ್ನು ಕಡಿಮೆ ಅವಧಿಯಲ್ಲಿ ಸುಲಭವಾಗಿ ಪಡೆಯಬಹುದಾಗಿದೆ. |
Subsets and Splits
No community queries yet
The top public SQL queries from the community will appear here once available.