text
stringlengths
34
185k
timestamp
unknown
url
stringlengths
17
2.27k
ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು? Paytm may lead $15 million funding round in B2B food delivery startup Hungerbox - Kannada Gizbot ಡಿಜಿಟಲ್‌ ಹಣಪಾವತಿ ಮಾಡಬೇಕಾಗಿ ಬಂದಾಗ ಸಾಮಾನ್ಯವಾಗಿ ಮೊದಲು ನೆನಪಿಗೆ ಬರುವುದೇ ಪೇಟಿಎಮ್‌. ಹೀಗೆ ಎಲ್ಲರಿಗೂ ಚಿರಪರಿಚಿತವಾಗಿರುವ ಪೇಟಿಎಮ್‌ ಆಪ್‌ ಇತ್ತೀಚಿಗೆ ಪೇಟಿಎಮ್‌ ಸಂಸ್ಥೆಯು ಪೇಟಿಎಮ್‌ ಮಾಲ್‌ ಹೆಸರಿನಲ್ಲಿ ಆನ್‌ಲೈನ್‌ ಶಾಪಿಂಗ್‌ ಪರಿಚಯಿಸಿದೆ. ಇದೀಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿರುವ ಪೇಟಿಎಮ್‌ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಹೌದು, ಸದ್ಯ ಟ್ರೆಂಡ್‌ನಲ್ಲಿದೆ ಫುಡ್‌ ಡೆಲಿವರಿ ವಲಯಕ್ಕೂ (B2B) ಪೇಟಿಎಮ್‌ ಕಾಲಿಡಲು ಮುಂದಾಗಿದ್ದು, ಈ ಮೂಲಕ ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಹಂಗರ್‌ಬಾಕ್ಸ್‌ ಡೆಲಿವರಿ ಸ್ಟಾರ್ಟ್‌ಅಪ್‌ ಕಂಪನಿ ಮೂಲಕ ಈ ಸೇವೆಯನ್ನು ಯಶಸ್ವಿಗೊಳಿಸಲು ಯೋಜಿಸಿದೆ. ಈ ಹೊಸ ಪ್ರಯತ್ನಕ್ಕೆ ಸುಮಾರು 15 ಮಿಲಯನ್‌ ಬಂಡವಾಳ ಹಾಕಲು ಕಂಪಮನಿಯು ಸಿದ್ಧವಾಗಿದೆ ಎನ್ನುತ್ತಿವೆ ವರದಿಗಳು. ಪೇಟಿಎಮ್‌ನ ಆನ್‌ಲೈನ್‌ ಫುಡ್‌ ಡೆಲಿವರಿಯ ಹೊಸ ಸೇವೆಯು ಹಂಗರ್‌ಬಾಕ್ಸ ಆಪ್‌ ನೊಂದಿಗೆ ಅಥವಾ ಪೇಟಿಎಮ್‌ನಲ್ಲಿಯೇ ಒಂದು ಆಯ್ಕೆ ರೂಪದಲ್ಲಿ ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗುತ್ತಿದೆ. ಹಾಗಾದರೇ ಪೇಟಿಎಮ್‌ ಹಂಗರ್‌ಬಾಕ್ಸ್‌ ಫುಡ್‌ ಡೆಲಿವರಿ ಸರ್ವೀಸ್‌ನ ವಿಶೇಷತೆಗಳೆನು ಮತ್ತು ಇತರೆ ಫುಡ್‌ ಡೆಲಿವರಿ ಕಂಪನಿಗಳಿಗೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ. ಹಂಗರ್‌ ಬಾಕ್ಸ್‌ ಹಂಗರ್‌ ಬಾಕ್ಸ್ ಟೆಕ್‌ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ಫುಡ್‌ ಡೆಲಿವರಿ ಮತ್ತು ಸಲ್ಯೂಶನ್‌ ಸೇವೆ ಮಾಡುತ್ತದೆ. ಇದೀಗ ಪೇಟಿಎಮ್‌ ಕಂಪನಿಯು ಈ ಹಂಗರ್ ಬಾಕ್ಸ್‌‌ ಸ್ಟಾರ್ಟ್‌ಅಪ್‌ ಕಂಪನಿಯೊಂದಿಗೆ ಕೈ ಜೋಡಿಸಲು ಸಿದ್ಧಗೊಂಡಿದೆ. ಈ ಮೂಲಕ ಫುಡ್‌ ಡೆಲಿವರಿ ಬಿ2ಬಿ ಸೇವೆಯಲ್ಲಿ ತನ್ನನು ಜನಪ್ರಿಯಗೊಳಿಸಲು ಮುಂದಾಗಿದೆ. ಪೇಟಿಎಮ್‌ B2B ಫುಡ್‌ ಸೇವೆಯನ್ನು ನೀಡುವ ಉದ್ದೇಶಕ್ಕಾಗಿ ಹಂಗರ್‌ ಬಾಕ್ಸ್‌ ಕಂಪನಿಯಲ್ಲಿ ಸುಮಾರು 15 ಮಿಲಿಯನ್‌ ಹಣವನ್ನು ಹೂಡಿಕೆ ಮಾಡಲು ತಯಾರಾಗಿದೆ. ಹಾಗೆಯೇ ಈ ಕಂಪನಿಗೆ ಈಗಾಗಲೇ ಸಿಂಗಪೂರ್‌ ಲಯನ್‌ರಾಕ್‌ ಕ್ಯಾಪಿಟಲ್‌, ದಕ್ಷಣ ಕೋರಿಯಾದ ಮತ್ತು ಇತರೆ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಪೈಪೋಟಿ ನೀಡಲಿದೆ ಭಾರತೀಯ ಫುಡ್‌ ಡೆಲಿವರಿ ವಲಯದಲ್ಲಿ ಈಗಾಗಲೇ ಜೊಮೊಟೊ ಮತ್ತು ಸ್ವಿಗ್ಗಿ ಕಂಪನಿಗಳು ತಮ್ಮ ಸೇವೆಯಿಂದ ಜನಪ್ರಿಯ ಗಳಿಸಿವೆ. ಈ ಕ್ಷೇತ್ರಕ್ಕಿಗ ಪೇಟಿಎಮ್‌ ಹಂಗರ್‌ ಬಾಕ್ಸ್‌ ಸಹಯೋಗದೊಂದಿಗೆ ಎಂಟ್ರಿ ಕೊಡಲಿದ್ದು, ಕಾರ್ಪೊರೇಟ್‌ ವಲಯವನ್ನು ಆಕರ್ಷಿಸಲಿದೆ ಎನ್ನಲಾಗಿದೆ. ಒಟ್ಟಾರೇ ಮಾರುಕಟ್ಟೆಯಲ್ಲಿ ಜೊಮೊಟೊ ಮತ್ತು ಸ್ವಿಗ್ಗಿಗಳೊಂದಿಗೆ ತೀವ್ರ ಸ್ಪರ್ಧೆ ಏರ್ಪಡಲಿದೆ. ಕಾರ್ಪೊರೇಟ್‌ ವಲಯ ಪೇಟಿಎಮ್‌ ಫುಡ್‌ ಡೆಲಿವರಿ ಸೇವೆ ಕ್ಲಿಕ್ಕ್‌ ಆಗಲು ಕಾರ್ಪೊರೇಟ್‌ ವಲಯದತ್ತ ಕಣ್ಣು ನೆಟ್ಟಿದ್ದು, ಕಾರ್ಪೊರೇಟ್‌ ಉದ್ಯೋಗಿಗಳನ್ನು ತನ್ನತ್ತ ಸೆಳೆಯಲು ಯೋಜನೆಯನ್ನು ಹೊಂದಿದೆ. ಹಂಗರ್‌ ಬಾಕ್ಸ್‌ ಆಪ್‌ ಮೈಕ್ರೋಸಾಫ್ಟ್‌, ಕ್ವಾಲ್ಕಮ್‌, ಅಕಸ್ಸೆಂಚರ್‌ ಮತ್ತು ಮ್ಯಾಕ್‌ಕಿನೆಸ್‌ ನಂತಹ ದೊಡ್ಡ ಕಂಪನಿಗಳ ಉದ್ಯೋಗಿಗಳನ್ನು ಗ್ರಾಹಕರನ್ನಾಗಿ ಹೊಂದಲಿದೆ. ಆರ್ಡರ್‌ ಹೇಗೆ ಪ್ರತ್ಯೇಕ ಹಂಗರ್‌ ಬಾಕ್ಸ್ ಆಪ್‌ ಸೇವೆ ಆರಂಭವಾಗಬಹುದು ಅಥವಾ ಹಂಗರ್‌ ಬಾಕ್ಸ್ ಆಪ್‌ ಪೇಟಿಎಮ್‌ ಆಪ್‌ನೊಂದಿಗೆ ಸಂಯೋಜಿತವಾಗಬಹುದು. ಗ್ರಾಹಕರು ಹಂಗರ್‌ ವಾಕ್ಸ್ ಆಪ್‌ನಲ್ಲಿ ಲಾಗ್‌ ಇನ್‌ ಆಗಿ ಫುಡ್‌ ಆರ್ಡರ್‌ ಮಾಡಬಹುದಾಗಿದ್ದು, ಲಭ್ಯವಿರುವ ಪ್ರಮುಖ ರೆಸ್ಟೋರೆಂಟ್‌ಗಳು ಈ ಆಪ್‌ನಲ್ಲಿ ಸೇರಿರಲಿವೆ ಎನ್ನಲಾಗಿದೆ. Paytm is planning to gain entry into the segment by making an investment in Hungerbox. to know more visit to kannada.gizbot.com
"2020-01-26T18:26:42"
https://kannada.gizbot.com/news/paytm-may-investing-hungerbox-b2b-food-deliver-020884.html?utm_medium=Desktop&utm_source=GZ-KN&utm_campaign=Deep-Links
3 ಕೋಟಿ ಫೇಸ್ ಬುಕ್ ಬಳಕೆದಾರರ ಖಾತೆಗಳು ಹ್ಯಾಕ್ | Vartha Bharati- ವಾರ್ತಾ ಭಾರತಿ ಮೆಕ್ಕೆಜೋಳ, ಹಣ್ಣು, ಹೂವು ಬೆಳೆಗಾರರಿಗೆ ಪರಿಹಾರ ವಿತರಣೆಗೆ 666 ಕೋಟಿ ರೂ.ಹಣ ಬಿಡುಗಡೆ ವೈಯಕ್ತಿಕ ಮಾಹಿತಿಗಳಿಗೆ ಕನ್ನ ಹಾಕಿದ ಹ್ಯಾಕರ್ ಗಳು ವಾರ್ತಾ ಭಾರತಿ Oct 13, 2018, 1:10 PM IST ನ್ಯೂಯಾರ್ಕ್, ಅ.13: ಫೇಸ್ ಬುಕ್‍ ಬಳಕೆದಾರರ ಸುಮಾರು 3 ಕೋಟಿ ಖಾತೆಗಳನ್ನು ಹ್ಯಾಕರ್ ಗಳನ್ನು ಹ್ಯಾಕ್ ಮಾಡಿದ್ದು, 2.9 ಕೋಟಿ ಖಾತೆಗಳಿಗೆ ಸಂಬಂಧಿಸಿದಂತೆ ಹೆಸರುಗಳು ಹಾಗೂ ಸಂಪರ್ಕ ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಫೇಸ್ ಬುಕ್ ದೃಢ ಪಡಿಸಿದೆ. ಹಲವು ಫೇಸ್ ಬುಕ್ ಬಳಕೆದಾರರ ಖಾತೆಗಳು ಹ್ಯಾಕ್ ಆಗಿವೆ ಎಂದು ಕಳೆದ ತಿಂಗಳು ಸಂಸ್ಥೆ ಹೇಳಿದ್ದು ಇದೀಗ ಅದನ್ನು ದೃಢಪಡಿಸಿದೆ. ಸೆಪ್ಟೆಂಬರ್ ತಿಂಗಳ ಕೊನೆಯ ಭಾಗದಲ್ಲಿ ಹ್ಯಾಕರುಗಳು ಡಿಜಿಟಲ್ ಲಾಗಿನ್ ಕೋಡ್ ಗಳನ್ನು ಹ್ಯಾಕ್ ಮಾಡಿದ್ದು, ಇದರಿಂದ ಸುಮಾರು 5 ಕೋಟಿ ಖಾತೆದಾರರು ಬಾಧಿತರಾಗಿದ್ದಾರೆಂದು ಫೇಸ್ ಬುಕ್ ಹೇಳಿತ್ತು. ಆದರೆ ಮಾಹಿತಿ ಸೋರಿಕೆಯಾಗಿತ್ತೇ ಎಂಬುದನ್ನು ಆಗ ಸಂಸ್ಥೆ ದೃಢಪಡಿಸಿರಲಿಲ್ಲ. ಫೇಸ್ ಬುಕ್‍ನ ಒಟ್ಟು 1.5 ಕೋಟಿ ಬಳಕೆದಾರರ ಹೆಸರು, ಸಂಪರ್ಕ ಮಾಹಿತಿ, ಫೋನ್ ಸಂಖ್ಯೆ ಹಾಗೂ ಇಮೇಲ್ ಹ್ಯಾಕ್ ಮಾಡಲಾಗಿದೆ ಎಂದು ಈಗ ಸಂಸ್ಥೆ ತಿಳಿಸಿದೆ. ಉಳಿದ 1.4 ಖಾತೆದಾರರ ಯೂಸರ್ ನೇಮ್, ಲಿಂಗ, ಭಾಷೆ, ಅವರ ರಿಲೇಷನ್‍ ಶಿಪ್ ಸ್ಟೇಟಸ್, ಧರ್ಮ, ಊರು, ಈಗಿನ ನಗರ, ಹುಟ್ಟಿದ ದಿನಾಂಕ, ಫೇಸ್‍ಬುಕ್ ಖಾತೆ ಲಾಗಿನ್ ಗೆ ಅವರು ಬಳಸುವ ಸಾಧನ, ಅವರು ಭೇಟಿ ನೀಡಿದ ಕೊನೆಯ ಹತ್ತು ಸ್ಥಳಗಳು ಹಾಗೂ ಅವರು ಟ್ಯಾಗ್ ಮಾಡಲ್ಪಟ್ಟ ಪೋಸ್ಟ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿಯಿದೆ. ``ನಾವು ಎಫ್‍ಬಿಐ ತನಿಖೆಗೆ ಸಹಕರಿಸುತ್ತಿದ್ದೇವೆ, ಈ ಸೈಬರ್ ದಾಳಿಯ ಹಿಂದೆ ಯಾರಿದ್ದಾರೆಂದು ಚರ್ಚಿಸದಂತೆ ನಮಗೆ ಹೇಳಲಾಗಿದೆ'' ಎಂದು ಫೇಸ್‍ಬುಕ್ ಬ್ಲಾಗ್ ಪೋಸ್ಟ್ ಒಂದರಲ್ಲಿ ತಿಳಿಸಿದೆ. ಶ್ರೀಲಂಕಾ: ಮುಸ್ಲಿಮ್ ವಿರೋಧಿ ಹಿಂಸಾಚಾರದಲ್ಲಿ ವಹಿಸಿದ ಪಾತ್ರಕ್ಕಾಗಿ ಕ್ಷಮೆ ಕೋರಿದ ಫೇಸ್‌ಬುಕ್ ಫೇಸ್ ಬುಕ್ "ಸುಪ್ರೀಂ ಕೋರ್ಟ್''ನಲ್ಲಿ ನೋಬೆಲ್ ಪುರಸ್ಕೃತೆ ತವಕ್ಕಲ್ ಕರ್ಮನ್ ಯುಎಇ: ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರವನ್ನು ಫೇಸ್‌ಬುಕ್‌ನಲ್ಲಿ ನೋಡಿದ ಹೆತ್ತವರು ತಬ್ಲೀಗಿ ಜಮಾಅತ್ ಕುರಿತು ಸುಳ್ಳು ಫೇಸ್‌ಬುಕ್ ಪೋಸ್ಟ್: ಹರ್ಯಾಣ ಪೊಲೀಸರಿಂದ ಆರೋಪಿಯ ಬಂಧನ
"2020-06-02T12:51:55"
http://www.varthabharati.in/article/e-jagathu/158112
ಐಆರ್‌ಸಿಟಿಸಿ ಷೇರು: ಭಾರಿ ಗಳಿಕೆ | Prajavani ಒಂದೇ ದಿನ ಶೇ 129ರಷ್ಟು ಜಿಗಿತ: ಪ್ರತಿ ಷೇರಿನ ಬೆಲೆ ₹ 728.60 ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಷೇರುಗಳು ಸೋಮವಾರ ಭರ್ಜರಿ ವಹಿವಾಟು ಕಂಡವು. ಪ್ರತಿ ಷೇರಿಗೆ ನೀಡಿಕೆ ಬೆಲೆ ₹ 320 ನಿಗದಿಪಡಿಸಲಾಗಿತ್ತು. ಆದರೆ ಅದಕ್ಕಿಂತಲೂ ಶೇ 127ರಷ್ಟು ಹೆಚ್ಚು ಅಂದರೆ ಪ್ರತಿ ಷೇರು ₹ 728.60ರಂತೆ ಮಾರಾಟವಾಯಿತು. ಇದರಿಂದ ಷೇರು ವಿಕ್ರಯಕ್ಕೆ ಉತ್ತೇಜನ ದೊರೆತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ವಹಿವಾಟಿಗೆ ಪ್ರವೇಶಿಸಿದ ಮೊದಲ ದಿನವೇ ಷೇರುಗಳ ಬೆಲೆಯಲ್ಲಿ ಗರಿಷ್ಠ ಏರಿಕೆ ಕಂಡ ಎರಡನೇ ಕಂಪನಿ ಎನ್ನುವ ಹೆಗ್ಗಳಿಕೆಯನ್ನೂ ಐಆರ್‌ಸಿಟಿಸಿ ತನ್ನದಾಗಿಸಿಕೊಂಡಿದೆ. ಐಆರ್‌ಸಿಟಿಸಿನ ಮಾರುಕಟ್ಟೆ ಮೌಲ್ಯ ಈಗ ₹ 11,657.60 ಕೋಟಿಗಳಿಗೆ ತಲುಪಿದೆ. 2017ರ ಜುಲೈನಲ್ಲಿ ಸಾಲ್ಸರ್‌ ಎಂಜಿನಿಯರಿಂಗ್‌ ಷೇರುಗಳು ಶೇ 142ರಷ್ಟು ಜಿಗಿತ ಕಂಡಿದ್ದವು. ಇದೊಂದು ಐತಿಹಾಸಿಕ ಕ್ಷಣ. ನೋಂದಣಿ ಆಗದ ದಿನವೇ ಈ ರೀತಿಯ ಯಶಸ್ಸು ಸಾಧಿಸಿದ ಮೊದಲ ಕೇಂದ್ರೋದ್ಯಮವಾಗಿದೆ - ಎಂ.ಪಿ. ಮಲ್ಲ, ಐಆರ್‌ಸಿಟಿಸಿ ಅಧ್ಯಕ್ಷ ಗುಣಮಟ್ಟದ ಸೇವೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ - ಪಿ.ಎಸ್‌.ಮಿಶ್ರಾ, ರೈಲ್ವೆ ಮಂಡಳಿ ಸದಸ್ಯ
"2019-11-13T15:37:06"
https://www.prajavani.net/business/commerce-news/irctc-share-673806.html
'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' | Kranthiveera Sangolli Raayanna | Audio Rights Sold | Rs 64 Lakhs | ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ | ಆಡಿಯೋ ರೈಟ್ಸ್ | ರು.64 ಲಕ್ಷ - Kannada Filmibeat » 'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' 'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ' Published: Wednesday, February 29, 2012, 17:13 [IST] ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಆರಂಭದಿಂದಲೂ ಸದ್ದಿನ ಮೇಲೆ ಸದ್ದು ಮಾಡುತ್ತಲೇ ಇದೆ. ಭಾರಿ ಬಜೆಟ್‍ ಚಿತ್ರ ಎಂಬ ಕಾರಣಕ್ಕೆ ಚಿತ್ರದ ಮೇಲೆ ಭರವಸೆಗಳೂ ಬೆಟ್ಟದಷ್ಟಿವೆ. ಚಿತ್ರದ ಆಡಿಯೋ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಮಾರಾಟವಾಗಿರುವುದು ಈಗ ಇನ್ನೊಂದು ವಿಶೇಷ ಸುದ್ದಿ. ಚಿತ್ರದ ಆಡಿಯೋ ರೈಟ್ಸ್‌ನ್ನು ಅಶ್ವಿನಿ ಆಡಿಯೋ ಸಂಸ್ಥೆ ಭರ್ಜರಿ ಬೆಲೆಗೆ ಖರೀದಿಸಿದೆ. ರು.64 ಲಕ್ಷ ದಾಖಲೆ ಬೆಲೆಗೆ ಕ್ರಾಂ.ವೀ.ಸಂ ಆಡಿಯೋ ರೈಟ್ಸ್ ಮಾರಾಟವಾಗಿವೆ ಎನ್ನುತ್ತವೆ ಮೂಲಗಳು. ಪುನೀತ್ ರಾಜ್ ಕುಮಾರ್ ಅಭಿನಯದ 'ಪರಮಾತ್ಮ' ಆಡಿಯೋ ರೈಟ್ಸ್ ರು.57 ಲಕ್ಷಕ್ಕೆ ಮಾರಾಟವಾಗಿತ್ತು. ಈಗ ಆ ದಾಖಲೆಯನ್ನು 'ಕ್ರಾಂ.ವೀ.ಸಂ' ಚಿತ್ರ ಮುರಿದಿದೆ. ಚಿತ್ರದ ಟಿವಿ ರೈಟ್ಸ್‌ ಬಗ್ಗೆ ಮಾತುಕತೆ ನಡೆಯುತ್ತಿದೆ. ಚಿತ್ರದ ಬಜೆಟ್‌ನ ಶೇ.25ರಷ್ಟನ್ನು ಅಂದರೆ ರು.7 ಕೋಟಿ ಬೇಡಿಕೆಯನ್ನು ನಿರ್ಮಾಪಕರು ಮುಂದಿಟ್ಟಿದ್ದಾರೆ. 'ಕ್ರಾ.ವೀ.ಸಂ' ಚಿತ್ರದ ಟಿವಿ ರೈಟ್ಸ್‌ ಉದಯ ವಾಹಿನಿ ಕೈ ಸೇರುವ ಸಾಧ್ಯತೆಗಳಿವೆ. ಯಶೋವರ್ಧನ್ ಸಂಗೀತ ನೀಡಿರುವ ಚಿತ್ರದ ಆಡಿಯೋ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್) Read more about: ದರ್ಶನ್ ನಿಖಿತಾ ತುಕ್ರಲ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ darshan nikita thukral kranthiveera sangolli raayanna Challenging Star Darshan's forthcoming filmkranthiveera sangolli raayanna audio rights were sold for ahwini media networks for a highest price of 64 lakhs. This indeed is a good price for a Sandalwood film. Yashovardhan composed the tunes for the film. Story first published: Wednesday, February 29, 2012, 17:13 [IST]
"2018-08-18T21:57:00"
https://kannada.filmibeat.com/music/29-kranthiveera-sangolli-raayanna-audio-rights-sold-aid0052.html
ನೈಜ ಘಟನೆ ಆಧಾರಿತ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ – PopcornKannada ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್‌ ಕುಮಾರಸ್ವಾಮಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, ರಿಯಲ್‌ ಕಥೆಗೆ ನಿಖಿಲ್‌ ಹೀರೋ ಆಗಲಿದ್ದಾರೆ. ಪೈಲ್ವಾನ್‌ ಸಿನಿಮಾದ ಯಶಸ್ಸಿನ ನಂತರ ಕೃಷ್ಣ ಅವರು ನಿಖಿಲ್‌ಗೆ ನಿರ್ದೇಶನ ಮಾಡಲಿದ್ದಾರೆ. ಅವರು ಈ ರಿಯಲ್‌ ಕಥೆಗೆ ಚಿತ್ರಕಥೆ ಬರೆಯುತ್ತಿದ್ದು, ನೈಜ ಘಟನೆಗಳನ್ನು ಆಧರಿಸಿದೆಯಂತೆ. ಈಗಾಗಲೇ ಚೆನ್ನೈನಲ್ಲಿ ಕುಳಿತು ಕಥೆಯನ್ನು ಫೈನಲ್ ಮಾಡುತ್ತಿರುವ ಕೃಷ್ಣ ಈ ಚಿತ್ರದಲ್ಲಿ ನಿಖಿಲ್‌ ಅವರನ್ನು ಡಿಫ್ರೆಂಟ್ ಆಗಿ ತೋರಿಸಲಿದ್ದಾರೆ. ವಿಶೇಷ ಎಂದರೆ ನಿಖಿಲ್‌ ಸಹ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದು, ಡಿಫ್ರೆಂಟ್‌ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರಂತೆ . ಸದ್ಯಕ್ಕೆ ಉಳಿದ ತಾರಾಗಣ, ತಂತ್ರಜ್ಞರು ಯಾರು ಎಂಬುದು ಇನ್ನೂ ಡಿಸೈಡ್‌ ಆಗಿಲ್ಲ. ಆದರೆ ಒಂದೊಳ್ಳೆ ಕಥೆಯ ಮೂಲಕ ತಮ್ಮ ಮೂರನೇ ಚಿತ್ರದಲ್ಲಿ ನಟಿಸಲಿದ್ದಾರೆ ನಿಖಿಲ್‌. Related Topics:cinemakannadamovienikhil kumarswamys krishna
"2020-08-13T14:14:35"
http://popcornkannada.com/nikhil-to-star-in-a-real-incident-based-film/
ಭಾವಸ್ರಾವ: September 2011 Posted by Subrahmanya Hegde at 11:02:00 pm No comments: Posted by Subrahmanya Hegde at 8:55:00 am 2 comments: Labels: kannada, kavana, nenpu(ನೆನಪು), ಒಲವು, ಕವನ, ನಿನಗೆ, ನೋವು, ಭಾವ ಹೌದು! ಒಂದು ವಾರದ ಹಿಂದೆ ಇದನ್ನು ಪ್ರಕಟಿಸಿದ್ದರೆ ಸಂದರ್ಭಕ್ಕೆ ಸೂಕ್ತವಾಗಿರುತ್ತಿತ್ತು, ಆದರೆ ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗದೇ ಹೀಗೆ ಒಂದು ವಾರದ ಮುಂದೂಡಿಕೆಗೆ ಕ್ಷಮೆ ಕೇಳಿಕೊಂಡು ಈ ಅಂಕಣವನ್ನು ಬರೆಯುತ್ತಿದ್ದೇನೆ. ಅಕ್ಷರವೊಂದನ್ನು ಕಲಿಸಿದಾತನೂ ಗುರು ಎಂಬ ಕವಿವಾಣಿಯೇ ಹೇಳುವಂತೆ ಗುರು ಎಂಬ ಶಬ್ದದ ವ್ಯಾಪ್ತಿ, ಅದರ ಕೀರ್ತಿ ದೊಡ್ಡದು. ಎಲ್ಲರಿಂದಲೂ ಒಂದಿಲ್ಲೊಂದು ರೀತಿಯಲ್ಲಿ ನಾವು ಏನನ್ನಾದರೂ ಕಲಿಯುವುದರಿಂದ ಎಲ್ಲರೂ ಗುರುಮಾನ್ಯರೇ. ಹಾಗಿರುವಾಗ ಜೀವನದಲ್ಲಿ ಮರೆಯದಂತಹ ಶಿಕ್ಷಕರಾಗಿ, ಬದುಕನ್ನು ಕಲಿಸಿಕೊಟ್ಟ ಒಂದಿಷ್ಟು ಜನ ಶಿಕ್ಷಕರ ಬಗ್ಗೆ ಕೃತಜ್ಞತೆಯ ಎರಡು ಮಾತನಾಡುವುದಷ್ಟು ಸಾಧ್ಯವಾದರೆ ನಾನು ಧನ್ಯ. ನಾವು ಕಾಲೇಜು ಜೀವನದಲ್ಲಿ ಬರುವ ಶಿಕ್ಷಕರನ್ನು ತೆಗಳಬಹುದು, ಅವರ ಭಂಗಿಗಳನ್ನು ಆಡಿಕೊಂಡು ನಗಾಡಬಹುದು, ಆದರೆ ಪ್ರೈಮರಿ ಸ್ಕೂಲಿನಲ್ಲಿ ಪಾಠ ಮಾಡಿದ ಗುರುಗಳನ್ನು ಹೀಗೆ ಆಡಿಕೊಳ್ಳುವವರನ್ನು ನಾನಂತೂ ನೋಡಿಲ್ಲ. ಅದು ಆ ಶಿಕ್ಷಕರು ಉ(ಬೆ)ಳೆಸಿಕೊಂಡು ಬಂದಿರುವ ಗೌರವ. ಅದು ಒಬ್ಬ ಗುರುವಿನ ನಿಸ್ವಾರ್ಥ ದುಡಿಮೆಗೆ ಕೊಡಲ್ಪಡುವ ಒಂದು ಚಿಕ್ಕ ಮರ್ಯಾದೆ. ಸುಖಾ ಸುಮ್ಮನೇ ಮಗ್ಗಿ ಬರೆಯಲು ಹೇಳಿ, ಪೇಪರ್ ಅಡ್ಡ ಹಿಡಿದುಕೊಂಡು ಕ್ಲಾಸಿನಲ್ಲಿಯೇ ನಿದ್ದೆ ಮಾಡುತ್ತಿದ್ದ XYZ ಸರ್ ಬಗ್ಗಾಗಲೀ, ತಮ್ಮ ಮಗನಿಗೆ ಹೆಚ್ಚು ಮಾರ್ಕ್ಸ್ ಬರುವಂತೆ ಪರೀಕ್ಷಾ ಪತ್ರಿಕೆಯನ್ನು ಸೆಟ್ ಮಾಡುತ್ತಿದ್ದ ABC ಮೇಡಮ್ ಬಗ್ಗೆ ಆಗಲೀ ಆಗ ಕೋಪ ಸ್ವಲ್ಪ ಬರುತ್ತಿತ್ತೇನೋ ಈಗಂತೂ ಮೂಡುವುದು ಕೇವಲ ಅನಾಲೋಚಿತ ಗೌರವವಷ್ಟೇ. ಹಾಗೆ ನೋಡಿದರೆ ಅವರು ಹಾಗೆ ಮಾಡಿದ್ದರಿಂದಲೇ ನನ್ನ ಜೀವನದಲ್ಲಿ ಎಷ್ಟೋ ಬದಲಾವಣೆಯಾಗಿದೆ ಎಂದು ಎನಿಸುತ್ತದೆ, ಇಂದಿಗೂ ನನ್ನ ಕೈಬರಹ ಓದುವ ಮಟ್ಟಿಗೆ ಎಂದರೆ ಅದು XYZರಿಂದಲೇ, ಹಾಗೆ ABC ಮಾಡದೇ ಹೋಗಿದ್ದರೆ ನನಗೆ ಗಣಿತದ ಬಗ್ಗೆ ಹಾಗೆ ಕೆಚ್ಚು ಬಂದು ಅದು ಒಂದು ಪ್ರೀತಿಯಾಗಿ ಬದಲಾಗುತ್ತಿರಲೇ ಇಲ್ಲವೇನೋ? ಯಾರಿಗೆ ಗೊತ್ತು. ಅಪ್ಪ ಅಮ್ಮನೇ ಶಾಲೆಯಲ್ಲೂ ಶಿಕ್ಷಕರಾಗಿ ನೋಡುವ ಭಾಗ್ಯ ನನ್ನ ಪಾಲಿಗಿದ್ದುದರಿಂದ ಮತ್ತೊಂದು ಸಲ ಅವರನ್ನು ನೆನಪಿಸಿಕೊಂಡು ಪ್ರೌಢ ಶಾಲೆಯ ಕಡೆ ಹೊರಳುತ್ತೇನೆ. ವಿಶ್ವದಲ್ಲಿ ಇರುವ ಎಲ್ಲಾ ಉತ್ತಮ ಶಿಕ್ಷಕರನ್ನೂ ಸೇರಿಸಿ ಒಂದು ಗ್ರುಪ್ ಮಾಡಿ ಒಂದು ಶಾಲೆಗೆ ಕಳುಹಿಸಿದರೆ ಹೇಗಿರುತ್ತದೆಯೋ ಹಾಗಿತ್ತು ನಮ್ಮ ಹೈಸ್ಕೂಲು. ಸುಬ್ಬುವಿನ ಅಧಿಕಪ್ರಸಂಗಿತನವನ್ನು ವೈಜ್ಞಾನಿಕ ಕುತೂಹಲವಾಗಿ ಬದಲಾಯಿಸಿದ ಶೈಲಾ ಮೇಡಮ್, ಕನಿಷ್ಟ ಎರಡು ಸಾವಿರ ಪೇಜ್ ಗಳಷ್ಟಾದರೂ ನೋಟ್ಸ್ ಬರೆಸಿ ೧೦ನೇ ಕ್ಲಾಸಿನಲ್ಲಿ ೯೯ ಅಂಕ ಬರುವಂತೆ ಮಾಡಿದ KN ಮಿಸ್, ಜೀವನದಲ್ಲಿ ಮೊದಲ ಬಾರಿಗೆ ಇಂಗ್ಲೀಷ್ ಎಂಬ ಭಾಷೆಯ ಮಹತ್ವವನ್ನು ಹೇಳಿಕೊಟ್ಟ RV ಹೆಗಡೆ ಸರ್, ಕನ್ನಡದ ಕಿಚ್ಚನ್ನು ಎಲ್ಲರ ಎದೆಯೊಳಗೂ ಹಚ್ಚುವಂತೆ ಪಾಠ ಮಾಡುತ್ತಿದ್ದ ರೇಣುಕಾ ಮೇಡಮ್, ಇದಿಷ್ಟೇ ಜೀವನ ಅಲ್ಲವೆಂಬಂತೆ ಮಳೆಯಲ್ಲಿ ಆಡುವ ಕ್ರಿಕೆಟ್ ನ ಮಜವನ್ನು ತೋರಿಸಿಕೊಟ್ಟ ಸ್ವಾಮಿ ಸರ್,ಹೀಗೆ ಇವರನ್ನೆಲ್ಲಾ ಗುರುಗಳಾಗಿ ಹೊಂದಲು ನಾವೆಷ್ಟು ಅದೃಷ್ಟವಂತರು ಎನಿಸುತ್ತದೆ. ಹಾಗೆ ಹೈಸ್ಕೂಲ್ ಕಾಲವನ್ನು ಸುವರ್ಣಯುಗವಾಗಿ ಮಾಡುವಲ್ಲಿ ಇವರೆಲ್ಲರ ಪಾತ್ರ ಹಿರಿದು. Posted by Subrahmanya Hegde at 2:19:00 pm No comments: Labels: kannada, ಗುರು, ದೇವರು, ಭಾವ, ಶಿಕ್ಷಕ, ಶಿಕ್ಷಕರ ದಿನ Posted by Subrahmanya Hegde at 3:37:00 pm No comments:
"2018-07-22T21:52:03"
http://subrahmanyahegde.blogspot.com/2011/09/
ಬೆಂಗಳೂರು: ದೇವನಹಳ್ಳಿಯ ಕಟ್ಟುಗೊಲ್ಲನ ಹಳ್ಳಿ ಬಳಿ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಬೈಕ್‌ ನಡುವೆ ಭೀಕರ ಅಪಘಾತ...
"2018-10-24T06:04:36"
https://www.udayavani.com/kannada/news/rajangana/292209/imran-khan-is-a-model-for-politicians-of-karnataka?qt-photo_gallery=6
ಗೌರಿಪೂರ್ ವಿಸ್ತರಿಸಲಾಗಿದೆ ಹವಾಮಾನ ಮುನ್ಸೂಚನೆ: 15 ದಿನಗಳ ಧೂಬ್ರಿ ಗೌರಿಪೂರ್ ಮುನ್ಸೂಚನೆ Satellite Images METEOSAT METEOSAT Images Live Lightning & Thunderstorm Monsoon In India Advertise With Us ಕನ್ನಡ English हिन्दी मराठी ગુજરાતી বাংলা ਪੰਜਾਬੀ ਦੇ தமிழ் తెలుగు മലയാള °F°C Follow us on Now, get the accurate weather forecast for each & every city & village in India ಹವಾಮಾನ ವಾರದ ಮುನ್ಸೂಚನೆ ಹವಾಮಾನ ಗ್ಯಾಲರಿ ಹವಾಮಾನ ಎಫ್ಎಕ್ಯೂಗಳು ಇನ್ಫೋಗ್ರಫಿಕ್ಸ್ ದೆಹಲಿಯಲ್ಲಿ ವಾಯುಮಾಲಿನ್ಯ ದೆಹಲಿಯಲ್ಲಿ ಮಂಜು ವಿಮಾನನಿಲ್ದಾಣಗಳ ಫಾಗ್ ಅಪ್ಡೇಟ್ಗಳು ರೈಲುಗಳು ಫಾಗ್ ಅಪ್ಡೇಟ್ International News 5 Most Earthquake Prone Cities in India 10 Earthquake Prone Countries in the World Dos and Don'ts During A Cyclone What is the difference between Monsoon and Pre-Monsoon rain ನಕ್ಷೆಗಳು ಉಪಗ್ರಹ ಚಿತ್ರಗಳು ಕಳೆದ ಇನ್ಸಾಟ್ ಉಪಗ್ರಹದ ಚಿತ್ರ ಕಳೆದ ಮೆಟಿಯೋಸ್ಯಾಟ್ ಉಪಗ್ರಹದ ಚಿತ್ರ ಭಾರತದಲ್ಲಿ ಪ್ರಸ್ತುತ ಹವಾಮಾನ ಲೈವ್ ಮಿಂಚಿನ ಮತ್ತು ಚಂಡಮಾರುತಗಳು ಹವಾಮಾನ ಸುದ್ದಿ ಹವಾಮಾನ ಸುದ್ದಿ ಮತ್ತು ವಿಶ್ಲೇಷಣೆ ಹವಾಮಾನ ಮತ್ತು ಆಹಾರ ಕೃಷಿ ಮತ್ತು ಆರ್ಥಿಕತೆ ಹವಾಮಾನ ಬದಲಾವಣೆ ಭೂಮಿ ಮತ್ತು ಪರಿಸರ ಜೀವನಶೈಲಿ ಮತ್ತು ಸಂಸ್ಕೃತಿ ಕ್ರೀಡೆ ಮತ್ತು ಹವಾಮಾನ ಜಾಗತಿಕ ಸುದ್ದಿ Cherrapunji bids adieu to April with record breaking rainsWeather Alerts For India on April 30[Hindi] पूर्वी भारत में काल बैसाखी, बिहार, झारखंड में बादलों की गड़गड़ाहट के साथ बारिशBengaluru to witness another rainy evening ವೀಡಿಯೋಗಳು ರಾಷ್ಟ್ರೀಯ ವೀಡಿಯೋ ಜೀವನಶೈಲಿ ವೀಡಿಯೋ Weather Forecast for April 30: Rain in Delhi, Kolkata, Bengaluru; dust storm in UP, MPWeather Forecast for April 29: Rain in Bengaluru, Kolkata; thunderstorm in Delhi, Rajasthan, PunjabWeather Forecast for April 28: Rain, Dust storm in Delhi, Punjab, Rajasthan, Bengaluru, WB, KolkataWeather Forecast for April 27: Rain, thunderstorm in Delhi, Punjab, Rajasthan, UP, Bengaluru ಪ್ರಯಾಣ ಕಾರ್ಪೊರೇಟ್ Home > India > Assam > Gauripur ಗೌರಿಪೂರ್, ಧೂಬ್ರಿ ಹವಾಮಾನ Gauripur at dist. of 1 km 2272°cf 15 ಡೇಸ್ ಗೌರಿಪೂರ್, ಧೂಬ್ರಿ ಹವಾಮಾನ ಮುನ್ಸೂಚನೆ 65 % | 95 % ಮಳೆ 69 % | 91 % ಮಳೆ 85 % | 22 mm ಹಿತಕರ 59 % | 95 % ಮಳೆ 85 % | 10 mm ಹಿತಕರ 85 % | 13 mm ಹಿತಕರ ಗೌರಿಪೂರ್, ಧೂಬ್ರಿ ಹವಾಮಾನ ಪ್ರವೃತ್ತಿ ಹವಾಮಾನ ಗೌರಿಪೂರ್, ಧೂಬ್ರಿ ಬಳಿ ಮುನ್ಸೂಚನೆ ದಿನಾಂಕದ ಪ್ರಕಾರ ಫಿಲ್ಟರ್ ಮಾಡಿ | ಇನ್ಸಾಟ್ ಭಾರತ ಮತ್ತು ಹವಾಮಾನವನ್ನು ಉಪಗ್ರಹ ನೋಟ 06:00 ದಿನಾಂಕದ ಪ್ರಕಾರ ಫಿಲ್ಟರ್ ಮಾಡಿ | ಮೆಟಿಯೋಸ್ಯಾಟ್ ಭಾರತ ಮತ್ತು ಹವಾಮಾನವನ್ನು ಉಪಗ್ರಹ ನೋಟ ಹವಾಮಾನ ಗ್ಯಾಲರಿ
"2017-05-01T01:01:14"
https://www.skymetweather.com/kn/forecast/weather/india/assam/dhubri/gauripur/extended-forecast
ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ | Prajavani ಕಸ ಸಂಗ್ರಹ: 2ನೇ ದಿನ ಸುಧಾರಿಸಿದ ನಾಗರಿಕರ ಸ್ಪಂದನ Published: 03 ಅಕ್ಟೋಬರ್ 2012, 00:40 IST Updated: 03 ಅಕ್ಟೋಬರ್ 2012, 00:40 IST ಬೆಂಗಳೂರು: ನಗರದಲ್ಲಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪೂರೈಸಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಯತ್ನಕ್ಕೆ ನಾಗರಿಕರಿಂದ ಎರಡನೇ ದಿನ ಸ್ವಲ್ಪಮಟ್ಟಿಗೆ ಉತ್ತಮ ಸ್ಪಂದನೆ ದೊರೆತಿದೆ. ಆದರೆ, ವಾಣಿಜ್ಯ ಸಂಕೀರ್ಣಗಳು ಹಾಗೂ ಹೋಟೆಲ್, ಮಾಲ್‌ಗಳು ಒಣ ಕಸವನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ರಸ್ತೆ ಬದಿ ಎಸೆದಿರುವುದರಿಂದ ನಗರದ ಹೃದಯ ಭಾಗದಲ್ಲಿರುವ ಎಂ.ಜಿ. ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಂತಹ ಕಡೆಗಳಲ್ಲಿ ಕಸದ ರಾಶಿ ಎದ್ದು ಕಂಡಿತು. ಈ ನಡುವೆ, ಮೇಯರ್ ಡಿ.ವೆಂಕಟೇಶಮೂರ್ತಿ, ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಮಂಗಳವಾರ ಕತ್ರಿಗುತ್ತೆ ಆಸುಪಾಸಿನ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕಸ ವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮೂಲದಿಂದಲೇ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸುವ ನೀತಿ ಅನುಷ್ಠಾನಗೊಂಡಿದ್ದು ಪಾಲಿಕೆಯ ಸ್ಪಷ್ಟ ಸೂಚನೆಯ ಮೇರೆಗೆ ಪೌರ ಕಾರ್ಮಿಕರು ಕೇವಲ ಹಸಿ ತ್ಯಾಜ್ಯವನ್ನು ಮನೆಗಳಿಂದ ಸಂಗ್ರಹಿಸುತ್ತಿದ್ದಾರೆ. ಆದರೆ, ನಾಗರಿಕರು ಒಣ ತ್ಯಾಜ್ಯವನ್ನು ಮನೆಯಲ್ಲಿಯೇ ಇರಿಸಿಕೊಳ್ಳಲಾಗದೇ ಕಸವನ್ನು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ನಗರದ ಅನೇಕ ಕಡೆ ರಸ್ತೆ ಬದಿಗಳಲ್ಲಿ ಕಸದ ರಾಶಿ ಮಂಗಳವಾರ ಕಂಡು ಬಂದಿತು. `ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಕಸ ವಿಂಗಡಣೆಗೆ ಸೋಮವಾರದಿಂದ ಚಾಲನೆ ದೊರಕಿತ್ತು. ಮೊದಲ ದಿನ ನಗರದಾದ್ಯಂತ ಸರಾಸರಿ ಶೇ.20 ರಷ್ಟು ಕಸವನ್ನು ವಿಂಗಡಿಸಿ ಸಂಗ್ರಹಿಸಲಾಗಿತ್ತು. ಮಂಗಳವಾರ ಕೂಡ ಕಸ ವಿಂಗಡಿಸಿ ಸಂಗ್ರಹಿಸುವ ಕಾರ್ಯ ಮುಂದುವರೆದಿದ್ದು, ಶೇ 30 ರಷ್ಟು ಹಸಿ ತ್ಯಾಜ್ಯ ಸಂಗ್ರಹವಾಗಿದೆ~ ಎಂದು ಪಾಲಿಕೆಯ ಆಯುಕ್ತ ಡಾ. ರಜನೀಶ್ ಗೋಯಲ್ ತಿಳಿಸಿದರು. `ಬುಧವಾರದಿಂದ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವುದರ ಮೂಲಕ ಕಸ ವಿಂಗಡಣೆಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು. ಸಂಗ್ರಹಿಸಿದ ಹಸಿ ಕಸ ವಿಲೇವಾರಿಗೆ ಯಾವುದೇ ರೀತಿಯ ಸಮಸ್ಯೆ ಉದ್ಭವಿಸಲಾರದು. ತಕ್ಷಣ ರೈತರಿಂದ ಸಾಕಷ್ಟು ಬೇಡಿಕೆ ಬಂದಿರುವುದರಿಂದ ಅದನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು~ ಎಂದು ಅವರು ತಿಳಿಸಿದರು. ಯಲಹಂಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ : ಈ ನಡುವೆ, ಯಲಹಂಕ ವಲಯದ 11 ವಾರ್ಡ್‌ಗಳಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಶೇ 100ರಷ್ಟು ಕಸ ಸಂಗ್ರಹಿಸಲಾಗಿದೆ. ಇಲ್ಲಿ 35 ಟನ್‌ಗಳಷ್ಟು ಹಸಿ ಕಸ ಸಂಗ್ರಹಿಸಲಾಗಿದೆ. 500 ಕೆ.ಜಿ.ಗಳಷ್ಟು ಒಣ ಕಸ, 55 ಕೆ.ಜಿ.ಯಷ್ಟು ಸ್ಯಾನಿಟರಿ ವೇಸ್ಟ್ (ಬಯೋಮೆಡಿಕಲ್ ತ್ಯಾಜ್ಯ) ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ರಾಮ್ಕಿ ಸಂಸ್ಥೆಯ ಮುಖಾಂತರ ವೈಜ್ಞಾನಿಕವಾಗಿ ವಿಲೇವಾರಿಗಾಗಿ ಕಳುಹಿಸಲಾಗಿದೆ. 500 ಕೆ.ಜಿ.ಗಳಷ್ಟು ಸಂಗ್ರಹಿಸಲಾದ ಒಣ ಕಸವನ್ನು ಕಸ ವಿಂಗಡಣೆ ಘಟಕದಲ್ಲಿ ಹಾಕಲಾಗಿದೆ. ಯಲಹಂಕ ವಲಯದ ಎಲ್ಲ 11 ವಾರ್ಡ್‌ಗಳಿಂದ ಸಂಗ್ರಹಿಸಲಾದ 35 ಟನ್‌ಗಳಷ್ಟು ಹಸಿ ಕಸವನ್ನು ಗುತ್ತಿಗೆದಾರರು 5,000 ರೂಪಾಯಿಗೆ ರೈತರಿಗೆ ಮಾರಿದ್ದಾರೆ. ಬಿಬಿಎಂಪಿಯಿಂದ ಸಂಗ್ರಹಿಸಲಾದ ಹಸಿ ಕಸಕ್ಕೆ ರೈತರಿಂದ ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ ಎಂದು ಯಲಹಂಕ ವಲಯದ ಜಂಟಿ ಆಯುಕ್ತ ರಾಮಚಂದ್ರಮೂರ್ತಿ ತಿಳಿಸಿದ್ದಾರೆ. ಈ ನಡುವೆ, ಬೇರ್ಪಡಿಸಿದ ಒಣ ಹಾಗೂ ಹಸಿ ತ್ಯಾಜ್ಯವನ್ನು ಸ್ವೀಕರಿಸುವ ಕುರಿತು ಪೌರ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡದ ಹಿನ್ನೆಲೆಯಲ್ಲಿ ಗೊಂದಲ ಮುಂದುವರಿದಿದೆ. ಸಾರ್ವಜನಿಕ ಅಭಿಪ್ರಾಯಗಳು ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸುತ್ತಿದ್ದೇವೆ. ಆದರೆ ವಾರಕ್ಕೊಮ್ಮೆ ಒಣ ತ್ಯಾಜ್ಯವನ್ನು ಪೌರಕಾರ್ಮಿಕರು ಸಂಗ್ರಹಿಸಲು ಸೂಚನೆ ನೀಡಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಒಣ ತ್ಯಾಜ್ಯವನ್ನು ಮನೆಯಲ್ಲಿಯೇ ಶೇಖರಿಸಿಡಲು ಸಾಧ್ಯವಿಲ್ಲ. ಇದನ್ನು ಏನು ಮಾಡುವುದೆಂಬುದೇ ತಿಳಿಯುತ್ತಿಲ್ಲ. -ವಿಶಾಲಾಕ್ಷಿ, ಜರಗನಹಳ್ಳಿ ಪಾಲಿಕೆ ತ್ಯಾಜ್ಯ ವಿಂಗಡಿಸಿ ನೀಡಿ ಎಂದು ಸೂಚನೆ ನೀಡಿದೆ. ಆದರೆ ಅದರಲ್ಲೂ ವಾರಕ್ಕೊಮ್ಮೆ ಒಣತ್ಯಾಜ್ಯವನ್ನು ಸಂಗ್ರಹಿಸುವುದಿರಿಂದ ನಮಗೆಲ್ಲ ಪರದಾಡುವಂತಾಗಿದೆ. ಚಿಕ್ಕ ಮನೆಯಾದರೂ ಎರಡು ಬಿನ್‌ಗಳನ್ನು ಇಟ್ಟುಕೊಂಡಿದ್ದೇವೆ. ಹಸಿ ತ್ಯಾಜ್ಯವನ್ನು ಕೊಂಡೊಯ್ಯುತ್ತಿದ್ದಾರೆ. ಏಳು ದಿನದ ತ್ಯಾಜ್ಯಕ್ಕೆ ಒಂದೇ ಬಿನ್ ಸಾಲುತ್ತದೆಯೇ ಎಂಬ ಚಿಂತೆಯಾಗಿದೆ. - ಜಲಜಾ, ಯಲಚೇನಹಳ್ಳಿ ಮೂಲದಿಂದಲೇ ತ್ಯಾಜ್ಯ ವಿಂಗಡಣೆ ಮತ್ತು ಅದರ ಸಮರ್ಪಕ ವಿಲೇವಾರಿಯಾದಾಗ ಮಾತ್ರ ನಗರದಲ್ಲಿ ತ್ಯಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪಾಲಿಕೆ ಕಸ ವಿಂಗಡಣೆಗೆ ಒತ್ತು ನೀಡಿದಂತೆ ಅದರ ವಿಲೇವಾರಿಯತ್ತ ಹೆಚ್ಚಿನ ಗಮನ ಹರಿಸಬೇಕು. - ರಾಜಮ್ಮ, ಜೆ.ಪಿ.ನಗರ ಬಿಬಿಎಂಪಿ ಏಕಾಏಕಿ ಈ ನೀತಿಯನ್ನು ತರುವ ಬದಲು ಹಂತ ಹಂತವಾಗಿ ಜಾರಿಗೊಳಿಸಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಕಸ ಸಂಗ್ರಹ ಮತ್ತು ವಿಲೇವಾರಿಯ ಬಗ್ಗೆ ನಾಗರಿಕರಿಗೆ ಸಮಗ್ರವಾಗಿ ಮಾಹಿತಿ ದೊರೆತಾಗ ಮಾತ್ರ ಇನ್ನಷ್ಟು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನೀತಿ ಬಂದ ಮೇಲೂ ರಾಜಧಾನಿಯಲ್ಲಿ ಕಸ ಬಿದ್ದರೆ ಪಾಲಿಕೆಗೆ ಅವಮಾನವಾದಂತೆ - ರಾಮಪ್ಪ , ಅಂಗಡಿ ಮಾಲೀಕ, ಕೋಣನ ಕುಂಟೆ ಕ್ರಾಸ್ ಪಾಲಿಕೆ ದಿನಕ್ಕೊಂದು ನೀತಿ ರೂಪಿಸುತ್ತಿದೆ. ಆದರೆ, ಯಾವುದೂ ವ್ಯವಸ್ಥಿತವಾಗಿ ಇರುವುದಿಲ್ಲ. ಎರಡು ದಿನಕ್ಕೇ ಒಣ ಕಸದ ಬಿನ್ ತುಂಬಿ ಹೋಗಿದೆ. ಇನ್ನೂ ಒಂದು ವಾರ ಕಾಲ ಈ ಬಿನ್ ತುಂಬದೇ ಇರುತ್ತದೆಯೇ? ಕೆಲವರಂತೂ ಇದನ್ನು ಮನೆಯ ಮುಂದೆಯೇ ಸುರಿಯುತ್ತಿದ್ದಾರೆ. ಹೀಗಾದರೆ ಹೊಸ ನೀತಿಯ ಉಪಯೋಗವೇನು? -ಮೀನಾಕ್ಷಿ, ಗೋವಿಂದ ಬಡಾವಣೆ
"2019-01-24T09:22:35"
https://www.prajavani.net/article/%E0%B2%95%E0%B2%B8-%E0%B2%B8%E0%B2%82%E0%B2%97%E0%B3%8D%E0%B2%B0%E0%B2%B9-2%E0%B2%A8%E0%B3%87-%E0%B2%A6%E0%B2%BF%E0%B2%A8-%E0%B2%B8%E0%B3%81%E0%B2%A7%E0%B2%BE%E0%B2%B0%E0%B2%BF%E0%B2%B8%E0%B2%BF%E0%B2%A6-%E0%B2%A8%E0%B2%BE%E0%B2%97%E0%B2%B0%E0%B2%BF%E0%B2%95%E0%B2%B0-%E0%B2%B8%E0%B3%8D%E0%B2%AA%E0%B2%82%E0%B2%A6%E0%B2%A8
ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು | Economic and Political Weekly Home » Journal » Vol. 53, Issue No. 44, 03 Nov, 2018 » ಕಾಶ್ಮೀರದಲ್ಲಿ ಕಿರಿದಾಗುತ್ತಿರುವ ಚುನಾವಣಾ ಅವಕಾಶಗಳು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಮುಖ್ಯಧಾರೆ ರಾಜಕೀಯ ಪಕ್ಷಗಳಿಗೆ ಶುಭ ಸೂಚನೆಯನ್ನೇನೂ ನೀಡುತ್ತಿಲ್ಲ. ರೇಖಾ ಚೌಧರಿ ಬರೆಯುತ್ತಾರೆ: ಜಮ್ಮು-ಕಾಶ್ಮೀರದ ನಗರ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳು ಕಾಶ್ಮೀರ ಕಣಿವೆಯಲ್ಲಿ ಪ್ರಜಾತಂತ್ರದ ಅವಕಾಶಗಳು ಕಿರಿದಾಗುತ್ತಿರುವುದನ್ನು ಸ್ಪಷ್ಟವಾಗಿ ಬಯಲುಗೊಳಿಸಿದೆ. ೨೦೦೨ರ ಶಾಸನಸಭಾ ಚುನಾವಣೆಗಳನಂತರ ಅಲ್ಲಿ ತೆರೆದುಕೊಂಡಿದ್ದ ಸಕ್ರಿಯ ಚುನಾವಣಾ ಪ್ರಜಾತಂತ್ರದ ಅವಕಾಶಗಳು ಕಳೆದ ಕೆಲವು ವರ್ಷಗಳಿಂದ ಕಿರಿದಾಗುತ್ತಾ ಸಾಗಿವೆ. ಶ್ರೀನಗರ ಮತ್ತು ಜಮ್ಮುವಿನ ೭೧ ಮುನಿಸಿಪಲ್ ಕಾರ್ಪೊರೇಷನ್‌ಗಳನ್ನೂ ಒಳಗೊಂಡಂತೆ ೭೯ ನಗರ ಸ್ಥಳೀಯ ಸಂಸ್ಥೆಗಳಿಗೂ, ಆರು ಮುನಿಸಿಪಲ್ ಕೌನ್ಸಿಲ್ ಮತ್ತು ೭೧ ಮುನಿಸಿಪಲ್ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಶೇ.೩೫ರಷ್ಟು ಮತದಾನವಾಗಿದೆ. ಮತದಾನದ ಪ್ರಮಾಣ ಇಷ್ಟಾದರೂ ಅಗಲೂ ಪ್ರಮುಖ ಕಾರಣವೆಂದರೆ ಜಮ್ಮು ಮತ್ತು ಲಡಖ್ ಪ್ರದೇಶದಲ್ಲಿ ಅತಿಹೆಚ್ಚು ಮತದಾನವಾಗಿದ್ದು. ಆದರೆ ಕಾಶ್ಮೀರ ಕಣಿವೆಯಲ್ಲಿ ಈ ಚುನಾವಣಾ ಕಸರತ್ತನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದರು. ಚುನಾವಣೆಯ ಮೊದಲ ಹಂತದಲ್ಲಿ ಆದ ಶೇ.೮.೩ರಷ್ಟು ಮತದಾನವೇ ಕಣಿವೆಯಲ್ಲಾದ ಅತಿ ಹೆಚ್ಚು ಮತದಾನವಾಗಿತ್ತು. ಮತದಾನದ ನಂತರದ ಹಂತದಲ್ಲಿ ಈ ಪ್ರಮಾಣ ಇನ್ನೂ ಕುಸಿಯಿತು. ಎರಡನೇ ಹಂತದಲ್ಲಿ ಮತದಾನದ ಪ್ರಮಾಣ ಶೇ.೩.೪ಕ್ಕೆ ಕುಸಿದರೆ, ಮೂರನೇ ಹಂತದಲ್ಲಿ ಶೇ.೩.೪೯ ಮತ್ತು ನಾಲ್ಕನೇ ಹಂತದಲ್ಲಿ ಶೇ. ೪ರಷ್ಟು ಮಾತ್ರ ಮತದಾನವಾಯಿತು. ಜನರು ಈ ಚುನಾವಣಾ ಕಸರತ್ತನ್ನು ತಿರಸ್ಕರಿಸಲಿದ್ದಾರೆಂಬುದು ಮತದಾನದ ದಿನಗಳಿಗೆ ಮುನ್ನವೇ ಸಾಬೀತಾಗಿತ್ತು. ಏಕೆಂದರೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿದ್ದರೂ ನಾಮಪತ್ರವನ್ನು ಸಲ್ಲಿಸಲು ಸ್ಪರ್ಧಿಗಳೇ ಮುಂದೆ ಬಂದಿರಲಿಲ್ಲ. ಬಹಳಷ್ಟು ವಾರ್ಡುಗಳಲ್ಲಿ ಒಂದೋ ಒಬ್ಬ ಸ್ಪರ್ಧಿಯೂ ಇರಲಿಲ್ಲಾ ಅಥವಾ ಒಬ್ಬರೇ ಒಬ್ಬ ಸ್ಪರ್ಧಿಯಿದ್ದರು. ಹೀಗಾಗಿ ಕಾಶ್ಮೀರದ ಒಟ್ಟು ೫೯೮ ವಾರ್ಡುಗಳಲ್ಲಿ ಕೇವಲ ೧೮೬ ವಾರ್ಡುಗಳಲ್ಲಿ ಮಾತ್ರ ಮತದಾನವು ನಡೆಯಿತು. ಅಲ್ಲದೆ ಏಕೈಕ ಸ್ಪರ್ದಿಯಿದ್ದ ೨೩೧ ವಾರ್ಡುಗಳಲ್ಲಿ ಸ್ಪರ್ಧಿಗಳು ಅವಿರೋಧವಾಗಿ ಆಯ್ಕೆಯಾದರೆ, ೧೮೧ ವಾರ್ಡುಗಳಲ್ಲಿ ಒಬ್ಬ ಸ್ಪರ್ಧಿಯೂ ಇರಲಿಲ್ಲ. ಹೀಗಾಗಿ ಅಂತಿಮವಾಗಿ ೪೧೨ರಷ್ಟು ವಾರ್ಡುಗಳಲ್ಲಿ ಮತದಾನವೇ ನಡೆಯಲಿಲ್ಲ. ಪ್ರತ್ಯೇಕತಾವಾದಿಗಳು ಮತ್ತು ಮಿಲಿಟೆಂಟ್ ಸಂಘಟನೆಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದರಿಂದ ಪರಿಸ್ಥಿಯು ಎಷ್ಟು ಕೆಟ್ಟದಾಗಿತ್ತೆಂದರೆ ಮತದಾನವು ನಡೆದ ವಾರ್ಡುಗಳಲ್ಲಿ ಯಾವುದೇ ಪ್ರಚಾರ ನಡೆದಿರಲಿಲ್ಲ. ಇನ್ನೂ ಎಷ್ಟೋ ವಾರ್ಡುಗಳಲ್ಲಿ ಭದ್ರತೆಯ ಕಾರಣದಿಂದ ಸ್ಪರ್ಧಾಳುಗಳ ಹೆಸರನ್ನು ಕೊನೆ ನಿಮಿಷದವರೆಗೆ ರಹಸ್ಯವಾಗಿಟ್ಟಿದ್ದರಿಂದ ಸ್ಪರ್ಧಿಗಳು ಯಾರೆಂಬುದೇ ಮತದಾರರಿಗೆ ಗೊತ್ತಾಗಲಿಲ್ಲ. ಈ ಚುನಾವಣಾ ಸನ್ನಿವೇಶವು ೧೯೮೯ರ ನಂತರದ ಮಿಲಿಟೆನ್ಸಿ ಪ್ರಬಲಗೊಂಡ ಕಾಲಾವಧಿಯನ್ನು ನೆನಪಿಸುವಂತಿತ್ತು. ಆ ದಿನಗಳಲ್ಲಿ ಪ್ರಧಾನಧಾರೆ ರಾಜಕಾರಣವು ಸಂಪೂರ್ಣವಾಗಿ ಕುಸಿದಿತ್ತಲ್ಲದೆ ಚುನಾವಣಾ ರಾಜಕಾರಣವು ಸಂಪೂರ್ಣವಾಗಿ ಅಮಾನ್ಯಗೊಂಡಿತ್ತು. ಉದಾಹರಣೆಗೆ ೧೯೮೯ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕೇವಲ ಶೇ.೫ರಷ್ಟು ಮಾತ್ರ ಮತದಾನವಾಗಿತ್ತು ಮತ್ತು ಆ ಚುನಾವಣೆಯನ್ನು ಮೋಸಪೂರಿತ ಚುನಾವಣೆಯೆಂದು ಬಣ್ಣಿಸಲಾಗಿತ್ತು. ೧೯೯೬ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾದರೂ ಮತದಾರರ ನಡುವೆ ಅಪಾರವಾದ ಸೇನಾ ತುಕಡಿಗಳ ಮತ್ತು ದ್ರೋಹಿ ಮಿಲಿಟೆಂಟುಗಳ ಓಡಾಟಗಳು ವಿಸ್ತೃತವಾಗಿ ಇದ್ದಿದ್ದರಿಂದ ಅದು ಬಲವಂತದ ಮತದಾನವೆಂದು ಪರಿಗಣಿತವಾಗಿ ಮಾನ್ಯತೆಯನ್ನು ಗಳಿಸಲಾಗಲಿಲ್ಲ. ೨೦೦೧ರಲ್ಲಿ ನಡೆದ ಪಂಚಾಯತಿ ಚುನಾವಣೆಗಳು ಸಹ ವಿವಾದಕ್ಕೀಡಾಗಿದ್ದವು. ಏಕೆಂದರೆ ಬಹಳಷ್ಟು ಕ್ಷೇತ್ರಗಳಲ್ಲಿ ಯಾವೊಬ್ಬ ಸ್ಪರ್ಧಿಯೂ ನಾಮಪತ್ರವನ್ನು ಸಲ್ಲಿಸಿರಲಿಲ್ಲ. ಆದರೆ ೨೦೦೨ರ ವಿಧಾನಸಭಾ ಚುನಾವಣೆಗಳನಂತರ ಚುನಾವಣಾ ಪ್ರಕ್ರಿಯೆಗಳಮಾನ್ಯತೆಯು ಹೆಚ್ಚುತ್ತಾ ಹೋಯಿತು. ಪ್ರತ್ಯೇಕತವಾದಿಗಳ ಪ್ರಭಾವು ಒಂದೆಡೆ ದಟ್ಟವಾಗಿಯೇ ಇದ್ದರೂ, ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫೆರೆನ್ಸ್ ಮತ್ತು ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿ (ಪಿಡಿಪಿ)ಗಳ ನಡುವಿನ ತುರುಸಿನ ಸ್ಪರ್ಧೆಯು ಚುನಾವಣಾ ರಾಜಕೀಯದ ಬಗೆಗಿನ ಹಿತಾಸಕ್ತಿಯನ್ನು ಮತ್ತು ಜನರ ಪಾಲ್ಗೊಳ್ಳುವಿಕೆಯನ್ನೂ ಹೆಚ್ಚಿಸಿತು. ಒಂದು ನಿರ್ದಿಷ್ಟ ಮಾದರಿಯಲ್ಲಿ ನಂತರದ ಪ್ರತಿ ಚುನಾವಣೆಗಳಲ್ಲೂ ಮತದಾನದ ಪ್ರಮಾಣ ವೇಗವಾಗಿ ಹೆಚ್ಚುತ್ತಾ ಹೋಯಿತು. ಚುನಾವಣೆಯು ಹೆಚ್ಚು ಸ್ಥಳೀಯವಾದಷ್ಟೂ ಮತದಾನದ ಪ್ರಮಾಣವೂ ಹೆಚ್ಚಾಗುತ್ತಿತ್ತು. ಹೀಗಾಗಿ ಲೋಕಸಭಾ ಚುನಾವಣೆಗಳಿಗಿಂತ ರಾಜ್ಯ ವಿಧಾನಸಭಾ ಚುನಾವಣೆಗಳ ಬಗ್ಗೆ ಜರಲ್ಲಿ ಹೆಚ್ಚಿನ ಉತ್ಸಾಹ ವ್ಯಕ್ತವಾಗುತ್ತಿತ್ತು. ವಿಧಾನಸಭಾ ಚುನಾವಣೆಗಳಿಗಿಂತ ಪಂಚಾಯತ್ ಚುನಾವಣೆಗಳು ಜನರಲ್ಲಿ ಇನ್ನೂ ಹೆಚ್ಚಿನ ಉತ್ಸಾಹವನ್ನು ಮೂಡಿಸಿತ್ತು. ೨೦೧೧ರ ಪಂಚಾಯತ್ ಚುನಾವಣೆಯಲ್ಲಂತೂ ಶೇ.೮೦ರಷ್ಟು ಮತದಾನವಾಗಿತ್ತು. ಈ ಇಡೀ ಅವಧಿಯಲ್ಲಿ ಪ್ರತ್ಯೇಕತವಾದಿಗಳು ಮತ್ತು ಮಿಲಿಟೆಂಟ್ ಸಂಘಟನೆಗಳು ಚುನಾವಣೆಗಳನ್ನು ಬಹಿಷ್ಕರಿಸಲು ಕೊಟ್ಟ ಕರೆಯನ್ನು ಜನರು ತಿರಸ್ಕರಿಸಿದರು. ಅಮರನಾಥ ಭೂಮಿ ವಿವಾದದ ಸಂದರ್ಭದಲ್ಲಿ ೨೦೦೮ರಲ್ಲಿ ಮತ್ತೊಮ್ಮೆ ಬೃಹತ್ ಪ್ರತ್ಯೇಕತವಾದಿ ಬಂಡಾಯವು ಹುಟ್ಟಿಕೊಂಡ ಸನ್ನಿವೇಶದಲ್ಲೂ ಕೆಲವೇ ತಿಂಗಳನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಶೇ. ೫೨ರಷ್ಟು ಮತದಾನವಾಗಿತ್ತು (ಕನಿಷ್ಟ ನಾಲ್ಕು ಜಿಲ್ಲೆಗಳಲ್ಲಿ ಶೇ.೬೦ರಷ್ಟು ಮತದಾನವಾಗಿತ್ತು). ಅದೇ ರೀತಿ ೨೦೧೦ರಲ್ಲಿ ಭುಗಿಲೆದ್ದ ಮತ್ತೊಂದು ಸುತ್ತಿನ ಪ್ರತ್ಯೇಕತವಾದಿ ಬಂಡಾಯವು ೫ ತಿಂಗಳಕಾಲ ನಿರಂತರವಾಗಿ ಮುಂದುವರೆದರೂ, ೨೦೧೧ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಕಾಶ್ಮೀರದ ಜನ ಉತ್ಸಾಹದಿಂದಲೇ ಭಾಗವಹಿಸಿದರು. ಈ ಸಜೀವ-ಸಕ್ರಿಯ ಚುನಾವಣಾ ಪ್ರಕ್ರಿಯೆಗಳು ೨೦೧೪ರ ವಿಧಾನಸಭಾ ಚುನಾವಣೆಗಳಲ್ಲೂ ಮುಂದುವರೆದವು. ಚುನಾವಣಾ ಪಕ್ಷಗಳು ಈ ಪ್ರಕ್ರಿಯೆಗಳಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರಲ್ಲದೆ ಮತದಾನಕ್ಕೆ ಮುನ್ನ ಬಿರುಸಾದ ಚುನಾವಣಾ ಪ್ರಚಾರಗಳೂ ನಡೆದಿದ್ದವು. ಕಾಶ್ಮೀರ ಪ್ರದೇಶದಲ್ಲಿರುವ ೪೬ ವಿಧಾನಸಭಾ ಕ್ಷೇತ್ರಗಳಲ್ಲಿ ೨೩ ಕ್ಷೇತ್ರಗಳಲ್ಲಿ ಶೇ.೬೦ರಷ್ಟು ಮತದಾನವಾಗಿತ್ತು. ಅದರಲ್ಲಿ ೧೩ ಕ್ಷೇತ್ರಗಳಲ್ಲಿ ಶೇ.೭೦ಕ್ಕಿಂತ ಹೆಚ್ಚು ಮತದಾನವಾಗಿದ್ದರೆ ೫ ಕ್ಷೇತ್ರಗಳಲ್ಲಿ ಶೇ.೮೦ಕ್ಕಿಂತ ಹೆಚ್ಚು ಮತದಾನವಾಗಿತ್ತು. ಚುನವಣಾ ಪ್ರಕ್ರಿಯೆಗಳು ಸಜೀವವಾಗಿದ್ದ ಈ ಇಡೀ ಅವಧಿಯಲ್ಲಿ ಕಾಶ್ಮೀರಿಗಳು ಆಡಳಿತದ ರಾಜಕಾರಣ (ಮುಖ್ಯಧಾರೆ ರಾಜಕಾರಣ) ಮತ್ತು ಸಂಘರ್ಷ ಪರಿಹಾರ ರಾಜಕಾರಣ (ಪ್ರತ್ಯೇಕತವಾದಿ ರಾಜಕೀಯ)ಗಳನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಮಾಡಿಕೊಂಡಿದ್ದರು. ಹೀಗಾಗಿ ಪ್ರತ್ಯೇಕತಾವಾದಿ ರಾಜಕಾರಣ ಸಜೀವವಾಗಿದ್ದರೂ ಪ್ರಜಾತಾಂತ್ರಿಕ ರಾಜಕಾರಣವೂ ಕೂಡಾ ಸಕ್ರಿಯವಾಗಿತ್ತು. ಪ್ರತ್ಯೇಕತಾವಾದಿ ಮನೋಭಾವನೆಯನ್ನು ಉಳಿಸಿಕೊಂಡು ಸಹ ತಮ್ಮ ದಿನನಿತ್ಯದ ಅಗತ್ಯಗಳಾದ ನೀರು, ರಸ್ತೆ, ವಿದ್ಯುತ್ ಗಳಂಥಾ ವಿಷಯಗಳಿಗೆ ಚುನಾವಣಾ ರಾಜಕಾರಣವು ಅಗತ್ಯವೆಂಬುದು ಕಾಶ್ಮೀರಿಗಳಿಗೆ ಮನವರಿಕೆಯಾಗಿತ್ತು. ಈ ಕಾರಣದಿಂದಾಗಿಯೇ ಪ್ರತ್ಯೇಕತಾವಾದಿ ರಾಜಕಾರಣವೂ ಭುಗಿಲೆದ್ದು ನಿಂತಾಗಲೂ ಕಾಶ್ಮೀರಿಗಳು ಚುನಾವಣಾ ರಾಜಕಾರಣಕ್ಕೆ ಮತ್ತು ಆಡಳಿತದ ರಾಜಕೀಯಕ್ಕೆ ಮಾನ್ಯತೆಯನ್ನು ನೀಡುತ್ತಾ ಬಂದಿದ್ದರು. ಈ ಬಗೆಯಲ್ಲಿ ಆಡಳಿತದ ರಾಜಕೀಯ ಮತ್ತು ಸಂಘರ್ಷ ಪರಿಹಾರದ ರಾಜಕೀಯವು ಏಕಕಾಲದಲ್ಲಿ ಪರ್ಯಾಯವಾಗಿ ಸಹಅಸ್ಥಿತ್ವ ಪಡೆದಿದ್ದ ಹಂತವು ಈಗ ಮುಗಿದಂತೆ ಕಾಣುತ್ತಿದೆ. ೨೦೧೪ರಲ್ಲಿ ಯಶಸ್ವಿಯಾದ ಚುನಾವಣಾ ಪ್ರಕ್ರಿಯೆಗಳು ನಡೆದ ನಂತರದದ ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ೨೦೧೬ರ ಪ್ರತ್ಯೇಕತಾವಾದಿ ಬಂಡಾಯವು ಭುಗಿಲೆದ್ದ ನಂತರದಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿಗಳು ಗುಣಾತ್ಮಕವಾಗಿ ಬದಲಾಗಿದೆ. ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ೨೦೧೭ರಲ್ಲಿ ನಡೆದ ಉಪಚುನಾವಣೆಯಲ್ಲೇ ಈ ವಿದ್ಯಮಾನ ಬೆಳಕಿಗೆ ಬಂದಿತ್ತು. ಆ ಚುನಾವಣೆಯಲ್ಲಿ ಸಾಕಷ್ಟು ಹಿಂಸಾಚಾರಗಳು ಮತ್ತು ಬೃಹತ್ ಪ್ರತಿಭಟನೆಗಳು ನqದಿದ್ದವಲ್ಲದೆ ಕೇವಲ ಶೇ.೮ರಷ್ಟು ಮಾತ್ರ ಮತದಾನವಾಗಿತ್ತು. ಕಾಶ್ಮೀರದ ಪ್ರಧಾನಧಾರೆ ಚುನಾವಣಾ ಪಕ್ಷಗಳು ತೀವ್ರ ಸ್ವರೂಪದ ಸವಾಲನ್ನೆದುರಿಸುತ್ತಿದ್ದಾರೆ. ಇದು ನ್ಯಾಷನಲ್ ಕಾನ್ಫೆರೆನ್ಸ್ ಮತ್ತು ಪಿಡಿಪಿ ಪಕ್ಷಗಳು ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಬಹಿಷ್ಕರಿಸಿದ್ದರಲ್ಲೇ ಸ್ಪಷ್ಟವಾಗಿ ವ್ಯಕ್ತವಾಗಿದೆ. ಸಂವಿಧಾನದ ೩೫ಎ ಕಲಮಿನ ಸಿಂಧುತ್ವವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿರುವುದರಿಂದ ಉಂಟಾಗಿರುವ ರಾಜಕೀಯ ಅತಂತ್ರತೆಯ ಕಾರಣದಿಂದ ಈ ಎರಡೂ ಪಕ್ಷಗಳೂ ಚುನಾವಣಾ ಪ್ರಕ್ರಿಯೆಗಳಿಂದ ದೂರ ಉಳಿಯಬೇಕಾಯಿತು ಎಂದು ಹೇಳಿಕೊಳ್ಳುತ್ತಿದ್ದರೂ ಅಸಲಿ ಕಾರಣವೆಂದರೆ ಕಾಶ್ಮೀರದಲ್ಲಿನ ಪರಿಸ್ಥಿತಿ ಪ್ರಧಾನಧಾರೆ ರಾಜಕೀಯಕ್ಕೆ ಪೂರಕವಾಗಿಲ್ಲ ಎಂಬುದೇ ಆಗಿದೆ.
"2020-04-08T16:54:58"
https://www.epw.in/kn/journal/2018/44/comment/kashmirs-shrinking-electoral-space.html
ಉಷೆ ಉದಯ: February 2012 Posted by ರಮೇಶ್ ಹಿರೇಜಂಬೂರು at 8:04 AM No comments: Links to this post
"2018-03-21T16:23:59"
http://usheudaya.blogspot.com/2012/02/
ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ – ಮೈಸೂರು ಟುಡೆ Home/ ಕ್ರೀಡೆ/ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ CT BUREAU August 12, 2019 ಪೋರ್ಟ್ ಆಫ್ ಸ್ಪೇನ್,ಆ.12-ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಡಕ್‌ವರ್ತ್ –ಲೂಯಿಸ್ ನಿಯಮದಡಿ 59 ರನ್‌ಗಳ ಅಂತರದಿಂದ ಜಯಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 125 ಎಸೆತಗಳಲ್ಲಿ 120 ರನ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕ (71) ನೆರವಿನಿಂದ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು. ಪಂದ್ಯಕ್ಕೆ ಎರಡನೇ ಬಾರಿ ಮಳೆ ಅಡ್ಡಿಪಡಿಸಿದ ಕಾರಣ ಡಕ್‌ವರ್ತ್ –ಲೂಯಿಸ್ ನಿಯಮದಡಿ ವಿಂಡೀಸ್ ಗೆಲುವಿಗೆ 46 ಓವರ್‌ಗಳಲ್ಲಿ 270 ರನ್ ಪರಿಷ್ಕೃತ ಗುರಿ ಪಡೆಯಿತು. ಈ ಗುರಿ ಬೆನ್ನತ್ತಿದ ವಿಂಡೀಸ್ 42 ಓವರ್‌ಗಳಲ್ಲಿ ಕೇವಲ 210 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆತಿಥೇಯ ತಂಡ ಒಂದು ಹಂತದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 148 ರನ್ ಗಳಿಸಿತು. ಆದರೆ, ದಿಢೀರ್ ಕುಸಿತು ಕಂಡು 62 ರನ್‌ಗೆ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡು 210 ರನ್‌ ಗಳಿಸುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಭಾರತದ ಪರ ಭುವನೇಶ್ವರ ಕುಮಾರ್ 4, ಮುಹಮ್ಮದ್ ಶಮಿ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಎವಿನ್ ಲೂಯಿಸ್(65) ಮೊದಲ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿ ಉತ್ತಮ ಆರಂಭವನ್ನು ನೀಡಿದ ಗೇಲ್ 24 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿದರು. (ಎಂ.ಎನ್) ಅಮ್ಮನ ಆರೋಗ್ಯ ಮೊದಲಿಗಿಂತ ಉತ್ತಮವಾಗಿದೆ: ಶಿಖರ್ ಧವನ್ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಕರಂಜ್ಯೋತಿಗೆ ಕಂಚು ಧೋನಿಗೆ 37ನೇ ಹುಟ್ಟುಹಬ್ಬದ ಸಂಭ್ರಮ: `ಓಂ ಫಿನಿಶಾಯ ನಮಃ’ ಎಂದು ಟ್ವಿಟ್ ಮಾಡಿದ ಸೆಹ್ವಾಗ್ ರಾಹುಲ್ ದ್ರಾವಿಡ್ ಎಡಗೈ ಬ್ಯಾಟ್ಸ್‌ಮನ್? ಟೀಕೆಗೆ ಗುರಿಯಾದ ಐಸಿಸಿ ಎಡವಟ್ಟು
"2019-10-22T07:17:04"
https://kannada.citytoday.news/259085/
ದೀಪಿಕಾ-ಪ್ರಿಯಾಂಕ ಇಬ್ಬರಲ್ಲಿ ಒಬ್ಬರಿಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ರಸೆಲ್ ಮ್ಯೂಜಿಕ್ ಆಲ್ಬಂನಲ್ಲಿ ಚಾನ್ಸ್ ! | JustKannada - Online Kannada News Portal Home FrontPage ದೀಪಿಕಾ-ಪ್ರಿಯಾಂಕ ಇಬ್ಬರಲ್ಲಿ ಒಬ್ಬರಿಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ರಸೆಲ್ ಮ್ಯೂಜಿಕ್ ಆಲ್ಬಂನಲ್ಲಿ ಚಾನ್ಸ್ ! ದೀಪಿಕಾ-ಪ್ರಿಯಾಂಕ ಇಬ್ಬರಲ್ಲಿ ಒಬ್ಬರಿಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ರಸೆಲ್ ಮ್ಯೂಜಿಕ್ ಆಲ್ಬಂನಲ್ಲಿ ಚಾನ್ಸ್ ! ನವದೆಹಲಿ, ಏಪ್ರಿಲ್ 15 (www.justkannada.in): ಉದ್ದೀಪನ ಮದ್ದು ಸೇವಿಸಿದ್ದಕ್ಕೆ ಒಂದು ವರ್ಷ ಕ್ರಿಕೆಟ್​ನಿಂದ ನಿಷೇಧ ಶಿಕ್ಷೆಗೆ ಒಳಗಾಗಿರುವ, ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ವೆಸ್ಟ್ ಇಂಡೀಸ್ ಆಟಗಾರ ಆಂಡ್ರೆ ರಸೆಲ್ ಸಂಗೀತ ಕ್ಷೇತ್ರದಲ್ಲಿ ಮಿಂಚು ಹರಿಸಲು ಸಿದ್ಧರಾಗುತ್ತಿದ್ದಾರೆ. ‘ಹಾಡುಗಾರನಾಗಿ ಸಂಗೀತ ಕ್ಷೇತ್ರ ಪ್ರವೇಶಿಸುತ್ತಿರುವುದು ನಿಜ. ಕ್ರಿಕೆಟ್​ಗೆ ಅಲ್ಪ ವಿರಾಮ ಬಿದ್ದಿರುವುದರಿಂದ ಈ ಸಮಯ ಮತ್ತು ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು 28 ವರ್ಷದ ಜಮೈಕಾದ ಆಟಗಾರ ಹೇಳಿದ್ದಾರೆ. ಎಂದೆಂದಿಗೂ ಕ್ರಿಕೆಟ್​ಗೆ ನನ್ನ ಮೊದಲ ಆದ್ಯತೆ. ಇದರ ಜೊತೆಗೆ ನೃತ್ಯ ಮತ್ತು ಹಾಡುಗಾರಿಕೆಯೂ ನನಗೆ ಇಷ್ಟ. ಸಂಗೀತ ನಮ್ಮ ರಕ್ತದಲ್ಲೇ ಇದೆ. ಸಂಗೀತಕ್ಕೆ ಸಂಬಂಧಿಸಿದಂತೆ ವೆಸ್ಟ್ ತಂಡದ ಸಹ ಆಟಗಾರ ಡ್ವೇನ್ ಬ್ರಾವೊ ಅವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ ರಸೆಲ್. ಇದೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದು, ನನ್ನ ಮೊದಲ ವಿಡಿಯೊ ಆಲ್ಬಂ ಒಂದರಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಅಥವಾ ಪ್ರಿಯಾಂಕಾ ಚೋಪ್ರಾ ಅವರನ್ನು ತೋರಿಸಲು ಇಚ್ಛಿಸಿದ್ದು, ಅವರ ಜೊತೆ ಮಾತುಕತೆ ನಡೆಸಲಿದ್ದೇನೆ’ ಎಂದು ಹೇಳಿದ್ದಾರೆ. deepika-padukone-or-priyanaka Previous articleಉದ್ಯಾನ ನಗರಿಯ ಹಲವು ಉದ್ಯಾನ ಕಾರ್ಮಿಕರ ವಾಸಸ್ತಾನ.. Next articleಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪ; ಬೆಂಗಳೂರಿನಲ್ಲಿ ಖಾಸಗಿ ಸುದ್ದಿವಾಹಿನಿಯ ಸಿಇಓ ಬಂಧನ…. ಸಿಎಂ ತವರು ಮೈಸೂರು ಜಿಲ್ಲೆಯಲ್ಲಿ ಕೈ ಪಕ್ಷಕ್ಕೆ ಮುನ್ನಡೆ ಜನರನ್ನು ಸಾಯಿಸಲು ವಿನಯ್ ಕುಲಕರ್ಣಿ ಉಸ್ತುವಾರಿ ಸಚಿವನಾದ್ನಾ?ಪರಮೇಶ್ವರ್ ಗೆ ಮನುಷ್ಯತ್ವವೇ ಇಲ್ಲ;ಮೈಸೂರಿನಲ್ಲಿ ಹೆಚ್ಡಿಕೆ ಕಿಡಿ
"2017-08-19T05:24:36"
http://www.justkannada.in/deepika-padukone-or-priyanaka-play-role-in-west-indied-cricketer-music-album/
ಹರಿಹರ: Latest ಹರಿಹರ News & Updates, Photos & Images, Videos | Vijaya Karnataka - Page 8 October,22,2019, 19:39:48 ಕರೆಂಟ್‌ ಕಟ್‌ಗೆ ನೀರಿಲ್ಲದೆ ಒಣಗಿದ ಭತ್ತ ಬೆಳೆ! ನದಿ ದಡದಲ್ಲಿದ್ದರೂ ವಿದ್ಯುತ್‌ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗದೆ ಇಬ್ಬರು ಸಹೋದರರ 7 ಎಕರೆ ಭತ್ತದ ಬೆಳೆ ಒಣಗಿರುವ ಘಟನೆ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ವರ್ಷವೂ ಟೇಕಾಫ್‌ ಆಗದ ಬ್ಯಾರೇಜ್‌! ಕುಡಿವ ನೀರಿನ ಸಮಸ್ಯೆ ನೀಗಿಸಲು ನದಿಗೆ ನಿರ್ಮಿಸಲು ಉದ್ದೇಶಿಸಿದ್ದ ಬ್ಯಾರೇಜ್‌ ಕಾಮಗಾರಿ ಈ ವರ್ಷವೂ ಟೇಕಾಫ್‌ ಆಗಲಿಲ್ಲ. ಈಗ ಮಳೆಗಾಲ ಕಾಲಿಟ್ಟಿದ್ದು ನದಿ ಹರಿವು ಶುರುವಾಗುವುದರಿಂದ ಈ ಕಾಮಗಾರಿ ಮತ್ತೆ ಒಂದು ವರ್ಷ ಮುಂದಕ್ಕೆ ಹೋಗಲಿದೆ. ಇದರ ಜತೆ ನಗರ ಕುಡಿವ ನೀರಿನ ಸಮಸ್ಯೆಯೂ ಮತ್ತೆ ಕ್ಯಾರಿ ಆನ್‌ ಆದಂತಾಗಿದೆ.
"2019-10-22T14:09:49"
https://vijaykarnataka.com/topics/%E0%B2%B9%E0%B2%B0%E0%B2%BF%E0%B2%B9%E0%B2%B0/8
ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ | Aa Ondu Dina movie is producing by Uttara Kannada formar - Kannada Filmibeat » ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಈಗ ಕನ್ನಡ ಚಿತ್ರ ನಿರ್ಮಾಪಕ Updated: Wednesday, January 24, 2018, 12:50 [IST] ಒಂದು ಸಿನಿಮಾ ನಿರ್ಮಾಣ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ಇಂತಹ ಸಾಹಸವನ್ನು ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ ಒಬ್ಬರು ಮಾಡಿದ್ದಾರೆ. ಮೂಲತಃ ಕೃಷಿಕರಾಗಿದ್ದ ರವೀಂದ್ರ ಗೌಡ ಪಾಟೀಲ್ 'ಆ ಒಂದು ದಿನ' ಎಂಬ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ದೇಶಕ್ಕೆ ಏನಾದರೂ ಮಾಡಬೇಕು ಎಂಬ ಆಸೆ ಹೊಂದಿದ್ದ ಇವರು ಒಂದು ಸಿನಿಮಾ ಮಾಡಿ ಅದರ ಮೂಲಕ ಒಂದು ಒಳ್ಳೆಯ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆ ಹಾಳಾಗಿದೆ, ಪ್ರಜಾಪ್ರಭುತ್ವವನ್ನು ಪ್ರಜೆಗಳೆ ಸರಿ ಮಾಡಬೇಕು ಎನ್ನುವ ಇವರು ತಮ್ಮ 'ಆ ಒಂದು ದಿನ' ಸಿನಿಮಾ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ. ದೇಶದ ಅಭಿವೃದ್ಧಿಗೆ ಬದಲಾವಣೆ ಮುಖ್ಯ ಎನ್ನುವ ಕಾರಣದಿಂದ ಈ ಚಿತ್ರವನ್ನು ಅವರು ಮಾಡಿದ್ದಾರೆ. 'ಆ ಒಂದು ದಿನ' ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರು ಕೂಡ ಹೊಸಬರೇ. ಹಳ್ಳಿಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದು, ಆ ಹಳ್ಳಿಯ ಜನರೇ ಚಿತ್ರದಲ್ಲಿ ನಟಿಸಿದ್ದಾರೆ. ಸಿಮ್ರಾನ್ ಚಿತ್ರದ ನಾಯಕಿ ಆಗಿದ್ದಾರೆ. ಧಾರವಾಡದ ಹುಡುಗಿ ಆಗಿರುವ ಸಿಮ್ರಾನ್ ಮುಂಬೈನಲ್ಲಿ ನೆಲೆಸಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾ. ಶ್ರೀ ಹರ್ಷಎಂಬುವವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾದ ಒಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದು, ಆ ಹಾಡು ಅದ್ಬುತವಾಗಿದೆ. ಸಂಜಯ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'Aa Ondu Dina' kannada new movie songs released. The movie is producing by Uttara Kannada formar Ravindra Gowda Patil.
"2018-10-16T22:42:56"
https://kannada.filmibeat.com/news/aa-ondu-dina-movie-is-producing-by-uttara-kannada-formar-029134.html
ಬ್ರಹ್ಮಪುತ್ರ - ವಿಕಿಪೀಡಿಯ (ಬ್ರಹ್ಮಪುತ್ರ ನದಿ ಇಂದ ಪುನರ್ನಿರ್ದೇಶಿತ) ಬ್ರಹ್ಮಪುತ್ರ ನದಿಯ ನಕಾಶೆ ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು. ನೈಋತ್ಯ ಟಿಬೆಟ್ ನ ಮಾನಸಸರೋವರದ"ಚೆಮಯಂಗ್ ಡಂಗ್" ಬಳಿ ಉಗಮಿಸುವ ಈ ನದಿ ಅಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಯಾಂಗ್ ಎಂದು ಕರೆಸಿಕೊಳ್ಳುವುದು. ಆ ನಂತರ ಹಿಮಾಲಯವನ್ನು ದಾಟಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ನೈಋತ್ಯಾಭಿಮುಖವಾಗಿ ಹರಿಯುವುದು. ೧ ಬ್ರಹ್ಮಪುತ್ರ ನದಿಯ ವಿಶೇಷತೆ ೨ ನದಿಯ ಹರಿವಿನ ಪಾತ್ರ ೨.೧ ಟಿಬೆಟ್ ನಲ್ಲಿ ೩ ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ ೩.೧ ಭಾರತದಲ್ಲಿ ಬ್ರಹ್ಮಪುತ್ರ ೩.೨ ಬಾಂಗ್ಲಾದೇಶದಲ್ಲಿ ಜಮುನಾ ೪ ಸಾಗಾಣಿಕೆ ಮತ್ತು ನೌಕಾಯಾನ ಬ್ರಹ್ಮಪುತ್ರ ನದಿಯ ವಿಶೇಷತೆಸಂಪಾದಿಸಿ ಟಿಬೆಟ್ ನಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ನದಿ. ಗುವಾಹಾಟಿಯ ಸುಕ್ಲೇಶ್ವರ್ ಸ್ನಾನಘಟ್ಟದಲ್ಲಿ ಬ್ರಹ್ಮಪುತ್ರ ನದಿಯ ಒಂದು ನೋಟ. ಭಾರತದಲ್ಲಿ ಇದರ ಹೆಸರು ಬ್ರಹ್ಮಪುತ್ರ. ಮುಂದೆ ಬಾಂಗ್ಲಾದೇಶವನ್ನು ಪ್ರವೇಶಿಸುವ ಈ ಮಹಾನದಿ ಅಲ್ಲಿ ಜಮುನಾ ಎಂಬ ಹೆಸರಿನಿಂದ ಗುರುತಿಸಲ್ಪಡುವುದು. ಬಾಂಗ್ಲಾದೇಶದ ಸರಿಸುಮಾರು ಮಧ್ಯಭಾಗದಲ್ಲಿ ಈ ನದಿಯು ಗಂಗಾ ನದಿಯನ್ನು ( ಬಾಂಗ್ಲಾದೇಶದಲ್ಲಿ ಗಂಗಾ ನದಿಗೆ ಪದ್ಮಾ ಎಂಬ ಹೆಸರು) ಕೂಡಿಕೊಳ್ಳುವುದು. ಈ ಸಂಗಮವು ಆ ಪ್ರದೇಶದಲ್ಲಿ ಭಾರೀ ವಿಸ್ತಾರದ ಮುಖಜಭೂಮಿಯನ್ನು ಸೃಷ್ಟಿಸಿದೆ. ಸುಮಾರು ೧೮೦೦ ಮೈಲಿ (೨೯೦೦ ಕಿ.ಮೀ.) ಉದ್ದನಾದ ಈ ನದಿಯು ಕೃಷಿ ಮತ್ತು ಒಳನಾಡ ನೌಕಾಯಾನಕ್ಕೆ ಮುಖ್ಯ ಆಧಾರ. ೧೮೮೪ ರವರೆಗೆ ಈ ನದಿಯ ಭಾರತದ ಹೊರಗಿನ ಹರಿವಿನ ಪಾತ್ರವು ತಿಳಿದಿರಲಿಲ್ಲ. ಈ ನದಿಯನ್ನು ಟ್ಸಾಂಗ್ಪೋ-ಬ್ರಹ್ಮಪುತ್ರ ಎಂದು ಸಹ ಕರೆಯಲಾಗುತ್ತದೆ. ಭಾರತ ಮತ್ತು ಬಾಂಗ್ಲಾದೇಶದ ಹೆಚ್ಚಿನ ನದಿಗಳಿಗೆ ಸ್ತ್ರೀ ನಾಮಧೇಯಗಳಿದ್ದರೆ ಈ ನದಿಗೆ ಮಾತ್ರ ಪುರುಷ ನಾಮಧೇಯ. ಸಂಸ್ಕೃತ ಭಾಷೆಯಲ್ಲಿ ಬ್ರಹ್ಮಪುತ್ರ ಎಂದರೆ ಬ್ರಹ್ಮನ ಮಗ.[೧] ಬ್ರಹ್ಮಪುತ್ರ ನದಿಯ ಹೆಚ್ಚಿನ ಭಾಗದಲ್ಲಿ ನೌಕಾಯಾನ ಸಾಧ್ಯ. ಭಾರತದಲ್ಲಿ ಬ್ರಹ್ಮಪುತ್ರ ಒಂದು ಪವಿತ್ರ ನದಿಯಾಗಿ ಮಾನ್ಯತೆ ಪಡೆದಿದೆ. ಹಿಮಾಲಯದಲ್ಲಿ ಹಿಮ ಕರಗುವ ಕಾಲದಲ್ಲಿ ಬ್ರಹ್ಮಪುತ್ರ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗುತ್ತದೆ. ಈ ವಿದ್ಯಮಾನ ಸಾಮಾನ್ಯ. ಅಲ್ಲದೇ ಕೆಲವೊಮ್ಮೆ ಈ ನದಿಯಲ್ಲಿ ಪ್ರಳಯಸದೃಶ ಅಲೆಗಳು ಸಹ ಏಳುವುದುಂಟು. ವಿಶ್ವದ ಕೆಲವೇ ಮಹಾನದಿಗಳಲ್ಲಿ ಇಂತಹ ವಿದ್ಯಮಾನ ಘಟಿಸುತ್ತದೆ.ಈ ನದಿ ಗೆ ದೇಶದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ದಿನಾಂಕ ೨೫ ಡಿಸೆಂಬರ್ ೨೦೧೮ ರಂದು ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಇದರ ಉದ್ದ ೪.೯ ಕಿ.ಮೀ. ಇದರ ವೆಚ್ಚ ೫೯೦೦ ಕೋಟಿ. ಇದನ್ನು ೧೯೯೭ ರಲ್ಲಿ ದೇವೇಗೌಡರು ಪ್ರಧಾನಿ ಆಗಿದ್ದಾಗ ಅಡಿಗಲ್ಲು ಹಾಕಲಾಗಿತ್ತು. ನದಿಯ ಹರಿವಿನ ಪಾತ್ರಸಂಪಾದಿಸಿ ಟಿಬೆಟ್ ನಲ್ಲಿಸಂಪಾದಿಸಿ ಯಾರ್ಲುಂಗ್ ಟ್ಸಾಂಗ್ಪೋ ( ಬ್ರಹ್ಮಪುತ್ರ ) ಉತ್ತರ ಹಿಮಾಲಯದ ಕೈಲಾಸಪರ್ವತದ ಬಳಿ ಜೀಮಾ ಯಾಂಗ್ಜಾಂಗ್ ಹಿಮನದಿಯಲ್ಲಿ ಉಗಮಿಸುತ್ತದೆ. ಅಲ್ಲಿಂದ ಸುಮಾರು ೧೭೦೦ ಕಿ.ಮೀ. ವರೆಗೆ ಈ ನದಿಯು ಟಿಬೆಟ್ ನಲ್ಲಿ ಪೂರ್ವಾಭಿಮುಖವಾಗಿ ಹರಿಯುವುದು. ಇಲ್ಲಿ ಇದು ಸರಾಸರಿ ಸಮುದ್ರಮಟ್ಟದಿಂದ ಸುಮಾರು ೪೦೦೦ ಮೀ. ಎತ್ತರದಲ್ಲಿ ಹರಿಯುವುದು. ಹೀಗೆ ಬ್ರಹ್ಮಪುತ್ರ ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ಹರಿಯುವ ಮಹಾನದಿಯಾಗಿದೆ. ತನ್ನ ಪಾತ್ರದ ಅತ್ಯಂತ ಪೂರ್ವದ ಅಂಚಿನಲ್ಲಿ ಈ ನದಿಯು ನಮ್ಚಾ ಬರ್ವಾ ಪರ್ವತವನ್ನು ಬಳಸಿ ಮುಂದೆ ಯಾರ್ಲುಂಗ್ ಟ್ಸಾಂಗ್ಪೋ ಕೊಳ್ಳವನ್ನು ಸೃಷ್ಟಿಸಿದೆ. ಈ ಕೊಳ್ಳವು ಜಗತ್ತಿನ ಅತಿ ಆಳದ ಕೊಳ್ಳವೆನ್ನಲಾಗುತ್ತದೆ. ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆಸಂಪಾದಿಸಿ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ಉಪ ನದಿಗೆ ಅಡ್ಡಲಾಗಿ ಚೀನಾವು ಅಣೆಕಟ್ಟೆ ನಿರ್ಮಿಸಿ ಭಾರಿ ವೆಚ್ಚದ ಜಲ ವಿದ್ಯುತ್‌ ಯೋಜನೆ ಕಾರ್ಯಗತ ಮಾಡುತ್ತಿರುವುದರಿಂದ ನೀರಿನ ಹರಿವು ಕಡಿಮೆ ಆಗಲಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. ಯಾರ್ಲುಂಗ್ ಝಾಂಗ್ಬೊ (ಬ್ರಹ್ಮಪುತ್ರ ನದಿಗೆ ಟಿಬೇಟ್ ಹೆಸರು) ನದಿಯ ಉಪ ನದಿಯಾದ ಕ್ಸಿಯಾಬ್ಕುಗೆ ಟಿಬೇಟಿನ ಕ್ಸಿಗಝೆ ಎಂಬಲ್ಲಿ ಜಲ ವಿದ್ಯುತ್ ಯೋಜನೆಯನ್ನು ಚೀನಾ ಆರಂಭಿಸಿದೆ. ಇದಕ್ಕೆ ರೂ.೪೯೦೦ ಕೋಟಿ ವೆಚ್ಚವಾಗುವ ಅಂದಾಜು ಇದೆ ಎಂದು ಯೋಜನೆಯ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥ ಝಾಂಗ್ ಯೂನಬಾವೊ ತಿಳಿಸಿದ್ದಾರೆ. ಕ್ಸಿಗಝೆಯು ಸಿಕ್ಕಿಂಗೆ ಸನಿಹದಲ್ಲಿದೆ. ಕ್ಸಿಗಝೆಯಿಂದ ಬ್ರಹ್ಮಪುತ್ರಾ ನದಿಯು ಅರುಣಾಚಲ ಪ್ರದೇಶಕ್ಕೆ ಹರಿಯುತ್ತದೆ. ಭಾರೀ ವೆಚ್ಚದ ಲಾಲ್ಹೊ ಜಲವಿದ್ಯುತ್‌ ಯೋಜನೆ ೨೦೧೪ರ ಜೂನ್‌ ನಲ್ಲಿ ಆರಂಭಗೊಂಡಿದ್ದು ೨೦೧೯ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.[೨] ಕಳೆದ ವರ್ಷ ಚೀನಾವು ಟಿಬೆಟ್‌ನ ಅತ್ಯಂತ ದೊಡ್ಡ ಝಾಮ್‌ ಜಲವಿದ್ಯುತ್‌ ಯೋಜನೆಯನ್ನು ಬ್ರಹ್ಮಪುತ್ರ ನದಿ ಮೂಲಕ ಕಾರ್ಯಾರಂಭಗೊಳಿಸಿತ್ತು. ಈ ಯೋಜನೆಗೆ ರೂ.೯೯೦೦ ಕೋಟಿ ವೆಚ್ಚ ತಗುಲಿದೆ ಎನ್ನಲಾಗಿದೆ. ಭಾರತದ ಆತಂಕವನ್ನು ನಿರಾಕರಿಸಿರುವ ಚೀನಾ, ನೀರಿನ ಹರಿವಿಗೆ ಅಡ್ಡಿಯಾಗದ ರೀತಿಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದೆ.[೩] ಭಾರತದಲ್ಲಿ ಬ್ರಹ್ಮಪುತ್ರಸಂಪಾದಿಸಿ ಬ್ರಹ್ಮಪುತ್ರ ಭಾರತವನ್ನು ಅರುಣಾಚಲ ಪ್ರದೇಶದಲ್ಲಿ ಪ್ರವೇಶಿಸುತ್ತದೆ. ಅಲ್ಲಿ ಈ ನದಿಗೆ ಸಿಯಾಂಗ್ ಎಂಬ ಹೆಸರು. ಟಿಬೆಟ್ ನಲ್ಲಿ ಅತಿ ಎತ್ತರದಲ್ಲಿ ಹರಿಯುವ ಈ ನದಿ ಅರುಣಾಚಲ ಪ್ರದೇಶದಲ್ಲಿ ಕೆಳ ಮಟ್ಟಕ್ಕೆ ತೀವ್ರ ಗತಿಯಲ್ಲಿ ಇಳಿಯಲಾರಂಭಿಸಿ ಕೊನೆಗೆ ಬಯಲು ಪ್ರದೇಶವನ್ನು ತಲುಪುವುದು. ಈ ಪ್ರದೇಶದಲ್ಲಿ ನದಿಗೆ ಡಿಹಾಂಗ್ ಎಂಬ ಹೆಸರು. ಸುಮಾರು ೩೫ ಕಿ.ಮೀ. ಹರಿದ ನಂತರ ಡಿಬಾಂಗ್ ಮತ್ತು ಲೋಹಿತ್ ಎಂಬೆರಡು ದೊಡ್ಡ ನದಿಗಳು ಈ ನದಿಯನ್ನು ಕೂಡಿಕೊಳ್ಳುತ್ತವೆ. ಈ ಸಂಗಮ ಸ್ಥಾನದಿಂದ ಮುಂದೆ ನದಿಯ ಅಗಲವು ಅಗಾಧವಾಗಿ ಹೆಚ್ಚಿ ಬ್ರಹ್ಮಪುತ್ರ ಎಂದು ಕರೆಯಿಸಿಕೊಳ್ಳುವುದು. ಅಸ್ಸಾಮಿನ ಸೋನಿತ್ ಪುರದ ಬಳಿ ಬ್ರಹ್ಮಪುತ್ರವನ್ನು ಜಿಯಾ ಭೊರೇಲಿ (ಕಾಮೆಂಗ್) ನದಿ ಸೇರಿಕೊಳ್ಳುತ್ತದೆ. ಅಸ್ಸಾಮ್ ರಾಜ್ಯದುದ್ದಕ್ಕೂ ಹರಿಯುವ ಈ ಮಹಾನದಿಯ ಅಗಲ ಕೆಲವು ಕಡೆ ೧೦ ಕಿ.ಮೀ. ಗೂ ಹೆಚ್ಚು. ಡಿಬ್ರೂಗಢದಿಂದ ಮುಂದಕ್ಕೆ ಬ್ರಹ್ಮಪುತ್ರ ಎರಡು ಕವಲುಗಳಾಗಿ ಒಡೆಯುವುದು. ಇವೆಂದರೆ ಉತ್ತರದ ಖೇರ್ಕುಟಿಯಾ ಕವಲು ಮತ್ತು ದಕ್ಷಿಣದ ಬ್ರಹ್ಮಪುತ್ರ ಕವಲು. ೧೦೦ ಕಿ.ಮೀ. ಮುಂದೆ ಈ ಕವಲುಗಳೆರಡೂ ಮತ್ತೆ ಒಂದುಗೂಡುತ್ತವೆ. ಗುವಾಹಾಟಿಯ ಬಳಿ ಹಾಜೋ ಎಂಬಲ್ಲಿ ಬ್ರಹ್ಮಪುತ್ರ ಷಿಲ್ಲಾಂಗ್ ಪ್ರಸ್ಥಭೂಮಿಯ ಶಿಲಾಪದರಗಳನ್ನು ಭೇಧಿಸುತ್ತದೆ. ಈ ಸ್ಥಳದಲ್ಲಿ ನದಿಯ ಅಗಲ ಕೇವಲ ೧ ಕಿ.ಮೀ. ಸಮೀಪದ ಸರಾಯ್ ಘಾಟ್ ಬಳಿ ಬ್ರಹ್ಮಪುತ್ರ ನದಿಗೆ ಮೊತ್ತ ಮೊದಲ ರೈಲು-ರಸ್ತೆ ಸೇತುವೆ ನಿರ್ಮಿಸಲಾಗಿ ೧೯೬೨ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು. ಬ್ರಹ್ಮಪುತ್ರ ನದಿಯ ಪ್ರಾಚೀನ ಸಂಸ್ಕೃತ ಹೆಸರು ಲೌಹಿತ್ಯ. ಅಸ್ಸಾಮಿನ ಸ್ಥಳೀಯ ಹೆಅಸು ಲೂಯಿತ್. ಅಸ್ಸಾಮಿನ ಮೂಲನಿವಾಸಿಗಳಾದ ಬೋಡೋ ಜನರು ಇದನ್ನು ಭುಲ್ಲಮ್-ಬುಥೂರ್ ಎಂದು ಕರೆದರು. ಭಾರತದ ಇತರ ಪ್ರಮುಖ ನದಿಗಳಿಗೆ ಹೋಲಿಸಿದರೆ ಬ್ರಹ್ಮಪುತ್ರ ಹೆಚ್ಚು ಕಲುಷಿತವಾಗಿಲ್ಲ. ಆದರೆ ಈ ನದಿಯು ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪೆಟ್ರೋಲಿಯಮ್ ಸಂಸ್ಕರಣಾ ಘಟಕಗಳು ದೊಡ್ಡ ಪ್ರಮಾಣದಲ್ಲಿ ನದಿಯನ್ನು ಮಲಿನಗೊಳಿಸುತ್ತಿವೆ. ನದಿಯ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಪದೇ ಪದೇ ಉಂಟಾಗುವ ಪ್ರವಾಹ. ಅರಣ್ಯನಾಶವು ಹೆಚ್ಚುತ್ತಿದ್ದಂತೆ ನದಿಯಲ್ಲಿ ಪ್ರವಾಹದ ಸಾಧ್ಯತೆಯೂ ಹೆಚ್ಚುತ್ತಿದೆ. ಬಾಂಗ್ಲಾದೇಶದಲ್ಲಿ ಜಮುನಾಸಂಪಾದಿಸಿ ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ಎರಡು ಶಾಖೆಗಳಾಗಿ ಒಡೆದು ಹಿರಿದಾದ ಶಾಖೆಯು ಜಮುನಾ ಎಂಬ ಹೆಸರನ್ನು ಹೊಂದಿ ನೇರ ದಕ್ಷಿಣಕ್ಕೆ ಹರಿದು ಮುಂದೆ ಗಂಗಾ ನದಿಯನ್ನು ಕೂಡುತ್ತದೆ. ಕಿರಿಯ ಶಾಖೆಯು ಬ್ರಹ್ಮಪುತ್ರ ಎಂಬ ಹೆಸರಿನಿಂದ ಆಗ್ನೇಯಕ್ಕೆ ಹರಿದು ಮೇಘನಾ ನದಿಯನ್ನು ಸೇರುತ್ತದೆ. ಮುಂದೆ ಚಾಂದ್ ಪುರದ ಬಳಿ ಈ ಎರಡೂ ಒಗ್ಗೂಡಿ ಬಂಗಾಳ ಆಖಾತವನ್ನು ತಲುಪುತ್ತವೆ. ಹೀಗೆ ಹಲವು ನದಿಗಳ ಸಂಗಮಗಳುಂಟಾಗಿ ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ವಿಶ್ವದಲ್ಲಿ ಅತಿ ಹಿರಿದಾದ ಮುಖಜಭೂಮಿ ಸೃಷ್ಟಿಯಾಗಿದೆ. ಇದಕ್ಕೆ ಗಂಗಾ ಡೆಲ್ಟಾ ಎಂಬ ಹೆಸರು. ಸಾಗಾಣಿಕೆ ಮತ್ತು ನೌಕಾಯಾನಸಂಪಾದಿಸಿ The BrahMos missile, developed jointly by India and Russia, is partly named after the Brahmaputra river.>> ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಭಾಗಶಃ ಬ್ರಹ್ಮಪುತ್ರ ನದಿಯ ಹೆಸರಿಡಲಾಗಿದೆ. ಬ್ರಿಟಿಷರ ಕಾಲದಲ್ಲಿ ಬ್ರಹ್ಮಪುತ್ರ ನದಿಯು ಪ್ರಮುಖ ಒಳನಾಡ ಜಲಮಾರ್ಗವಾಗಿ ಬಳಕೆಯಾಗುತ್ತಿತ್ತು. ೧೯೯೦ರ ದಶಕದಲ್ಲಿ ಅಸ್ಸಾಮಿನ ಸದಿಯಾ ಮತ್ತು ಧುಬ್ರಿಗಳ ನಡಿವಿನ ಬ್ರಹ್ಮಪುತ್ರ ನದಿಯ ಪಾತ್ರವನ್ನು ರಾಷ್ಟ್ರೀಯ ಜಲಮಾರ್ಗವೆಂದು ಘೋಷಿಸಲಾಯಿತು. ಇಲ್ಲಿ ಸರಕು ಸಾಗಾಣಿಕೆಗೆ ವಿಪುಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಚೆಗೆ ನದಿಯಲ್ಲಿ ವಿಹಾರಯಾನ ಕೂಡ ಜನಪ್ರಿಯಗೊಳ್ಳುತ್ತಿದೆ. ಒಂದು ವಿಹಾರನೌಕೆಯು ನದಿಯಲ್ಲಿ ಸಂಚಾರ ಆರಂಭಿಸಿದೆ. ↑ "Brahmaputra - Meaning in sanskrit - Shabdkosh". www.shabdkosh.com. Retrieved 11 January 2020. ↑ "ಬ್ರಹ್ಮಪುತ್ರಾ ಉಪನದಿಗೆ ಅಣೆಕಟ್ಟು ನಿರ್ಮಾಣ ಭಾರತಕ್ಕೆ ತೊಂದರೆಯಿಲ್ಲ: ಚೀನಾ". Varthabharati. Retrieved 11 January 2020. ↑ ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ: ಭಾರತ ಆತಂಕ "https://kn.wikipedia.org/w/index.php?title=ಬ್ರಹ್ಮಪುತ್ರ&oldid=967021" ಇಂದ ಪಡೆಯಲ್ಪಟ್ಟಿದೆ Last edited on ೧೨ ಜನವರಿ ೨೦೨೦, at ೦೮:೩೬ ಈ ಪುಟವನ್ನು ೧೨ ಜನವರಿ ೨೦೨೦, ೦೮:೩೬ ರಂದು ಕೊನೆಯಾಗಿ ಸಂಪಾದಿಸಲಾಯಿತು.
"2020-08-08T07:27:21"
https://kn.m.wikipedia.org/wiki/%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%AA%E0%B3%81%E0%B2%A4%E0%B3%8D%E0%B2%B0_%E0%B2%A8%E0%B2%A6%E0%B2%BF
ಪೆಗದಪಲ್ಲಿದಲ್ಲಿ ಪ್ರಸ್ತುತ ಹವಾಮಾನ: ಪೆಗದಪಲ್ಲಿ, ಕರೀಂನಗರ್ಕ್ಕಾಗಿ ವಾರದ ಮುನ್ಸೂಚನೆ Satellite Images METEOSAT METEOSAT Images Live Lightning & Thunderstorm Monsoon In India Advertise With Us ಕನ್ನಡ English हिन्दी मराठी ગુજરાતી বাংলা ਪੰਜਾਬੀ ਦੇ தமிழ் తెలుగు മലയാള °F°C Follow us on Now, get the accurate weather forecast for each & every city & village in India ಹವಾಮಾನ ವಾರದ ಮುನ್ಸೂಚನೆ ಹವಾಮಾನ ಗ್ಯಾಲರಿ ಹವಾಮಾನ ಎಫ್ಎಕ್ಯೂಗಳು ಇನ್ಫೋಗ್ರಫಿಕ್ಸ್ ದೆಹಲಿಯಲ್ಲಿ ವಾಯುಮಾಲಿನ್ಯ ದೆಹಲಿಯಲ್ಲಿ ಮಂಜು ವಿಮಾನನಿಲ್ದಾಣಗಳ ಫಾಗ್ ಅಪ್ಡೇಟ್ಗಳು ರೈಲುಗಳು ಫಾಗ್ ಅಪ್ಡೇಟ್ International News 5 Most Earthquake Prone Cities in India 10 Earthquake Prone Countries in the World Dos and Don'ts During A Cyclone What is the difference between Monsoon and Pre-Monsoon rain ನಕ್ಷೆಗಳು ಉಪಗ್ರಹ ಚಿತ್ರಗಳು ಕಳೆದ ಇನ್ಸಾಟ್ ಉಪಗ್ರಹದ ಚಿತ್ರ ಕಳೆದ ಮೆಟಿಯೋಸ್ಯಾಟ್ ಉಪಗ್ರಹದ ಚಿತ್ರ ಭಾರತದಲ್ಲಿ ಪ್ರಸ್ತುತ ಹವಾಮಾನ ಲೈವ್ ಮಿಂಚಿನ ಮತ್ತು ಚಂಡಮಾರುತಗಳು ಹವಾಮಾನ ಸುದ್ದಿ ಹವಾಮಾನ ಸುದ್ದಿ ಮತ್ತು ವಿಶ್ಲೇಷಣೆ ಹವಾಮಾನ ಮತ್ತು ಆಹಾರ ಕೃಷಿ ಮತ್ತು ಆರ್ಥಿಕತೆ ಹವಾಮಾನ ಬದಲಾವಣೆ ಭೂಮಿ ಮತ್ತು ಪರಿಸರ ಜೀವನಶೈಲಿ ಮತ್ತು ಸಂಸ್ಕೃತಿ ಕ್ರೀಡೆ ಮತ್ತು ಹವಾಮಾನ ಜಾಗತಿಕ ಸುದ್ದಿ [Hindi] वैष्णो धाम में सप्ताह के अंत में बारिश के साथ सुहावना मौसम[Hindi] गया, पटना, रांची में 30 अप्रैल और 1 मई को होगी बारिशPerfect rainy weekend to visit hills of North IndiaWeather Alerts For India on April 28 ವೀಡಿಯೋಗಳು ರಾಷ್ಟ್ರೀಯ ವೀಡಿಯೋ ಜೀವನಶೈಲಿ ವೀಡಿಯೋ Weather Forecast for April 29: Rain in Bengaluru, Kolkata; thunderstorm in Delhi, Rajasthan, PunjabWeather Forecast for April 28: Rain, Dust storm in Delhi, Punjab, Rajasthan, Bengaluru, WB, KolkataWeather Forecast for April 27: Rain, thunderstorm in Delhi, Punjab, Rajasthan, UP, Bengaluru27 अप्रैल के लिए मौसम पूर्वानुमान: दिल्ली, पंजाब, हरियाणा, राजस्थान, उत्तर प्रदेश, बंगलुरु में प्री-मॉनसून वर्षा ಪ್ರಯಾಣ ಕಾರ್ಪೊರೇಟ್ Home > India > Telangana > Pegadapalli ಪೆಗದಪಲ್ಲಿ, ಕರೀಂನಗರ್ ಹವಾಮಾನ 7 ಡೇಸ್ ಪೆಗದಪಲ್ಲಿ, ಕರೀಂನಗರ್ ಹವಾಮಾನ ಮುನ್ಸೂಚನೆ ಪೆಗದಪಲ್ಲಿ, ಕರೀಂನಗರ್ ಹವಾಮಾನ ಪ್ರವೃತ್ತಿ ಹವಾಮಾನ ಪೆಗದಪಲ್ಲಿ, ಕರೀಂನಗರ್ ಬಳಿ ಮುನ್ಸೂಚನೆ
"2017-04-29T05:31:19"
https://www.skymetweather.com/kn/forecast/weather/india/telangana/karimnagar/pegadapalli
ಬಗ್ಗೆ ALPPM - ಏಷ್ಯನ್ ಮುಂಚೂಣಿ ಪಿವಿಸಿ / ಪಿಇಟಿ / ಪಿಪಿ ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆ ಏಷ್ಯನ್ ಮುಂಚೂಣಿ ಪಿವಿಸಿ / ಪಿಇಟಿ / ಪಿಪಿ ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆ ALPPM (ಏಷ್ಯನ್ ಪ್ರಮುಖ ಪ್ಲಾಸ್ಟಿಕ್ ಉತ್ಪನ್ನ ತಯಾರಕರು) ಶಾಂಘೈ, ಚೀನಾ ಇದೆ, 2001 ರಲ್ಲಿ ಸ್ಥಾಪಿಸಲಾಯಿತು. 2005 ಹಾಗೂ ಅನೇಕ ತಪಾಸಣೆ ವರದಿಗಳು ಮತ್ತು ತಪಾಸಣೆ ಪ್ರಮಾಣಪತ್ರಗಳನ್ನು: ನಾವು ನಮ್ಮ ಕಾರ್ಖಾನೆಯ, ಜರ್ಮನಿ ಹೈಡೆಲ್ಬರ್ಗ್ ಆರು ಬಣ್ಣ ಯುವಿ ಮುದ್ರಣ ಯಂತ್ರಗಳು ಆಮದು ಮತ್ತು ISO9001 ಅಂಗೀಕರಿಸಿದ್ದು ಹೊಂದಿವೆ. ನಮ್ಮ ಸಾಮರ್ಥ್ಯಗಳನ್ನು ಆದರೆ ಸೀಮಿತವಾಗಿಲ್ಲ ಸೇರಿವೆ ಪ್ಲಾಸ್ಟಿಕ್ ಚೌಕದ ಉಡುಗೊರೆಯಾಗಿ ಬಾಕ್ಸ್, ಕಾಸ್ಮೆಟಿಕ್ ಪ್ಯಾಕಿಂಗ್, ದೇಶ ಪ್ಯಾಕೇಜಿಂಗ್, ವಿದ್ಯುನ್ಮಾನ ಪ್ಯಾಕೇಜಿಂಗ್, ಆಹಾರ & ಕೇಕ್ ಪ್ಯಾಕೇಜಿಂಗ್, ಮಾತೃತ್ವ & ಬೇಬಿ ಉತ್ಪನ್ನ ಪ್ಯಾಕೇಜಿಂಗ್, ಲೇಖನ ಎಂದು ಸ್ಪಷ್ಟ ಉತ್ತಮ ಗುಣಮಟ್ಟದ ಕಸ್ಟಮ್ ಪಿವಿಸಿ / ಪಿಇಟಿ / PP ಪ್ಲಾಸ್ಟಿಕ್ ಪ್ಯಾಕಿಂಗ್ ಉತ್ಪನ್ನಗಳು, ತಯಾರಿಸಲು ಪ್ಯಾಕೇಜಿಂಗ್, ಯಂತ್ರಾಂಶ & ಉಪಕರಣಗಳು ಪ್ಯಾಕೇಜಿಂಗ್, ಬಟ್ಟೆ ಮತ್ತು ಭಾಗಗಳು ಪ್ಯಾಕಿಂಗ್ಗಳು, ಚೀಲಗಳು / ಟ್ಯೂಬ್ಗಳು / ಫೋಲ್ಡರ್ಗಳನ್ನು / ಬೊಕ್ಕೆಗಳು ಪ್ಯಾಕೇಜಿಂಗ್ ಹೀಗೆ. ನಾವು OEM & ODM ಮತ್ತು ಸ್ವಯಂ ಲಾಕ್ ಕೆಳಗೆ ಬಾಕ್ಸ್ನಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯ ದಿನ ಮತ್ತು ಸಾಮಾನ್ಯ ಕೆಳಗೆ ಬಾಕ್ಸ್ನಲ್ಲಿ 100,000 ದಿನಕ್ಕೆ ಪ್ರತಿ 50,000 ಆಗಿದೆ ಸ್ವೀಕರಿಸಲು. ನಾವು ಯಾವಾಗಲೂ ಸ್ಪರ್ಧಾತ್ಮಕ ಬೆಲೆ ಮತ್ತು ಉತ್ತಮ ಗುಣಮಟ್ಟದಲ್ಲಿ ಉತ್ಪನ್ನಗಳ ಖಾತರಿ ಮತ್ತು ನಮ್ಮ ಉತ್ಪನ್ನಗಳು ದೇಶೀಯ ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ಒಂದು ಮಹಾನ್ ಮಾರಾಟ ಹೊಂದಿವೆ. ನಾವು ಹಲವಾರು ಜಗತ್ಪ್ರಸಿದ್ಧ ಬ್ರಾಂಡ್ಗಳು, ಜೊತೆಗೆ ದೀರ್ಘಕಾಲದ ವ್ಯಾಪಾರ ಸಂಬಂಧ ಲಾಕ್ ಮತ್ತು ಲಾಕ್, Durex, ಎಂ & ಜಿ, Nivea, JINS, ಸೋನಿ, miffy, ಬೆಲ್ಕಿನ್, BOSIDENG, ಸ್ಟಾರ್ಬಕ್ಸ್, LOREAL , ಮತ್ತು ಪ್ರತಿ ಕ್ಲೈಂಟ್ ತೃಪ್ತಿ ಮಾಡಲು ನಮ್ಮ ಉದ್ದೇಶವಾಗಿದೆ. ಪ್ಲಾಸ್ಟಿಕ್ ಬಾಕ್ಸ್ ವರ್ಗಗಳು 1.Order ದೃಢೀಕರಣ 5.The ಕಟ್
"2019-03-23T04:39:16"
https://www.alppm.com/kn/about/
ಅಲಂಕಾರಿಕ ಶ್ರವಣಾತೀತ ಏರ್ ಆರ್ದ್ರಕ ಎಲ್ಇಡಿ ಲೈಟ್ಸ್ ಎಲೆಕ್ಟ್ರಿಕ್ ಅರೋಮಾಥೆರಪಿ ಎಸೆನ್ಶಿಯಲ್ ಆಯಿಲ್ ಪರಿಮಳ ಡಿಫ್ಯೂಸರ್ - ಅತ್ಯುತ್ತಮ ವಿನ್ಯಾಸ & ಕಂ ತಯಾರಿಸಲು, ಲಿಮಿಟೆಡ್ ಅಲಂಕಾರಿಕ ಶ್ರವಣಾತೀತ ಏರ್ ಆರ್ದ್ರಕ ಎಲ್ಇಡಿ ಲೈಟ್ಸ್ ಎಲೆಕ್ಟ್ರಿಕ್ ಅರೋಮಾಥೆರಪಿ ಎಸೆನ್ಶಿಯಲ್ ಆಯಿಲ್ ಪರಿಮಳ ಡಿಫ್ಯೂಸರ್ ಐಟಂ ಯಾವುದೇ.:ODMF16-092808 ಬಾಕ್ಸ್ ಗಾತ್ರ: L14.8 * W14.8 * H22.5CM ತೂಕ: 0.6ಕೆಜಿ ನೀರಿನ:60ಮಿಲಿ ವಿದ್ಯುತ್: 7ವಾಟ್ ಇನ್ಪುಟ್ ವೋಲ್ಟೇಜ್:100-240V,50ಹರ್ಟ್ಝ್ / 60Hz,0.ವಿ5ಒಂದು ಔಟ್ಪುಟ್ ವೋಲ್ಟೇಜ್:24V-0.35ಒಂದು ಇನ್ಕ್ಲೂಡಿಂಗ್: 1ಪಿಸಿ ಸೆರಾಮಿಕ್ ಆಕಾರವನ್ನು (D13.5 * H13.5cm) ಅಮೃತಶಿಲೆ ಪರಿಷ್ಕರಿಸಿದ,1ಪಿಸಿ ಅಡಾಪ್ಟರ್, 1ಪಿಸಿ ಅಳತೆ ಕಪ್, 1ಪಿಸಿ A4 ಗಾತ್ರದ ಸೂಚನಾ ಹಾಳೆ. ಪ್ಯಾಕೇಜ್: 3 ಪದರವನ್ನು ಕಾಗದವನ್ನು ಸುಕ್ಕುಗಟ್ಟಿದ ಬಾಕ್ಸ್ ಸೇರಿಸಲು 6PCS / CTN / 47 * 32 * 24.5CM / 0.0368CBM ಎನ್ ಡಬ್ಲು ಫ್ರಂಟೀಯರ್ ಪ್ರೊವಿನ್ಸ್:/GW ಗಳಷ್ಟಿತ್ತು.:3.6ಕೆಜಿ / 4.6kg MOQ:1000 ಹೊಂದಿಸುತ್ತದೆ ಮೋಸಮಾಡು ಶಾಂಘೈ USD14.50 / ಸೆಟ್ OEM ಸೇವೆಯನ್ನು ಕ್ಯಾನ್ ಎಂದು ಕಸ್ಟಮೈಸ್ ಶಿಪ್ಪಿಂಗ್ UPS / DHL / ಇಎಮ್ಎಸ್ / ಟಿಎನ್ಟಿ / ಫೆಡ್ಎಕ್ಸ್, ಮೂಲಕ ಸೆ ... ಐಟಂ ಯಾವುದೇ.:ODMF16-092808 ಬಾಕ್ಸ್ ಗಾತ್ರ:L14.8 * W14.8 * H22.5CM ಕ್ರಿಸ್ಮಸ್ ಗಾಜಿನ ಸುವಾಸಿತ ಮೇಣದ ಬತ್ತಿಗಳು ಸುಗಂಧ ಕಾರ್ ಡಿಫ್ಯೂಸರ್ ಬಲ್ಬ್ ಜೊತೆಗೆ ಆಯಿಲ್ ಬರ್ನರ್
"2019-09-19T19:14:06"
https://www.outstandingdm.com/kn/decorative-ultrasonic-air-humidifier-led-lights-electric-aromatherapy-essential-oil-aroma-diffuser-508.html
ಪೌರಕಾರ್ಮಿಕರೊಂದಿಗೆ ಉಪಾಹಾರ ಸೇವಿಸಿ ಗೌರವ ಸೂಚಿಸಿದ ಶಾಸಕ | Prajavani ಪ್ರಜಾವಾಣಿ ವಾರ್ತೆ Updated: 26 ಮೇ 2020, 13:04 IST ಬೆಳಗಾವಿ: ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಕೊರೊನಾ ಭೀತಿಯ ನಡುವೆಯೂ ಕೆಲಸ ಮಾಡುತ್ತಿರುವ ಪೌರಕಾರ್ಮಿಕರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿ, ಅವರಿಗೆ ದಿನಸಿ ಕಿಟ್ ವಿತರಿಸಿ ಗೌರವ ಸೂಚಿಸಿದರು. ಹಿಂದವಾಡಿಯ ಮಹಾವೀರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಪೌರಕಾರ್ಮಿಕರು ಕೊರೊನಾ ಯೋಧರೆ ಸರಿ. ನಗರವನ್ನು ಸ್ವಚ್ಛವಾಗಿಡುವ ಮೂಲಕ ಹೆಚ್ಚಿನ ರೀತಿಯಲ್ಲಿ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳುವಲ್ಲಿ ಪಾತ್ರ ವಹಿಸಿದ್ದಾರೆ. ಅವರಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯವಾಗಿದೆ' ಎಂದರು. ಕಾರ್ಮಿಕ ಇಲಾಖೆಯಿಂದ ಕ್ಷೇತ್ರದಲ್ಲಿನ ಕಟ್ಟಡ ಕಾರ್ಮಿಕರಿಗಾಗಿ 5,000 ಆಹಾರಧಾನ್ಯದ ಕಿಟ್‌ಗಳು ಮಂಜೂರಾಗಿವೆ. ಮೂರ್ನಾಲ್ಕು ದಿನಗಳಲ್ಲಿ ಅವುಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು. 600 ಪೌರಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು. '); $('#div-gpt-ad-730906-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-730906'); }); googletag.cmd.push(function() { googletag.display('gpt-text-700x20-ad2-730906'); }); },300); var x1 = $('#node-730906 .field-name-body .field-items div.field-item > p'); if(x1 != null && x1.length != 0) { $('#node-730906 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-730906').addClass('inartprocessed'); } else $('#in-article-730906').hide(); } else { _taboola.push({article:'auto', url:'https://www.prajavani.net/district/belagavi/food-kits-distribution-in-belagavi-730906.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-730906', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-730906'); }); googletag.cmd.push(function() { googletag.display('gpt-text-300x20-ad2-730906'); }); // Remove current Outbrain //$('#dk-art-outbrain-730906').remove(); //ad before trending $('#mob_rhs1_730906').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-730906 .field-name-body .field-items div.field-item > p'); if(x1 != null && x1.length != 0) { $('#node-730906 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-730906 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-730906'); }); } else { $('#in-article-mob-730906').hide(); $('#in-article-mob-3rd-730906').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-730906','#in-article-742189','#in-article-742154','#in-article-741916','#in-article-741909']; var twids = ['#twblock_730906','#twblock_742189','#twblock_742154','#twblock_741916','#twblock_741909']; var twdataids = ['#twdatablk_730906','#twdatablk_742189','#twdatablk_742154','#twdatablk_741916','#twdatablk_741909']; var obURLs = ['https://www.prajavani.net/district/belagavi/food-kits-distribution-in-belagavi-730906.html','https://www.prajavani.net/district/belagavi/incluing-police-soldier-women-27-people-affected-from-covid-742189.html','https://www.prajavani.net/district/belagavi/kle-convocation-live-telecast-social-media-742154.html','https://www.prajavani.net/district/belagavi/covida-19-including-nurse-theft-accused-total-13-persons-found-positive-741916.html','https://www.prajavani.net/district/belagavi/they-give-bottle-to-patient-741909.html']; var vuukleIds = ['#vuukle-comments-730906','#vuukle-comments-742189','#vuukle-comments-742154','#vuukle-comments-741916','#vuukle-comments-741909']; // var nids = [730906,742189,742154,741916,741909]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-07-04T19:22:42"
https://www.prajavani.net/district/belagavi/food-kits-distribution-in-belagavi-730906.html
ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ 11, May 2018, 6:35 PM IST ‘ಪ್ರತ್ಯಕ್ಷವಾಗಿ ಕಂಡರೂ, ಪ್ರಾಮಾಣಿಸಿ ನೋಡು’ ಎನ್ನುವ ಮಾತು ಈ ಚಿತ್ರಕ್ಕೆ ಹೆಚ್ಚು ಅನ್ವಯ. ಯಾಕಂದ್ರೆ,‘ಮಾಮಾ’ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ. ‘ಮಾಮಾ’ ಅಂದ್ರೆ ಲೋಕರೂಢಿಯಾಗಿ ಈಗಿರುವ ಅರ್ಥ ಕೆಟ್ಟದ್ದೇ. ಅಂಥದ್ದೇ ಆರೋಪಕ್ಕೆ ಸಿಲುಕಿದ ಒಬ್ಬ ವ್ಯಕ್ತಿಯ ಸುತ್ತಲ ಚಿತ್ರಣವೇ ‘ಹಲೋ ಮಾಮಾ ’ಚಿತ್ರ. ಆದ್ರೆ, ಈ ಚಿತ್ರ ನಿಜಕ್ಕೂ ಹೇಳ ಹೊರಟಿದ್ದೇನು ಅನ್ನೋದು ಕ್ಲೖಮ್ಯಾಕ್ಸ್. ಮಾಮಾ ಅಂತಲೇ ತನ್ನ ಬಾಸ್‌ಗೆ ಹಲವು ‘ಕಾಲ್‌ಗರ್ಲ್ಸ್ ’ಹುಡುಗಿಯರನ್ನು ಕರೆತಂದು ಆತನ ಕತ್ತಲ ಕೋಣೆಗೆ ತಳ್ಳಿದ, ಆ ಕಥಾ ನಾಯಕ ಆರಂಭದಲ್ಲಿ ಖಳನಾಯಕ, ಕೊನೆಯಲ್ಲಿ ಹೀರೋ. ಅದು ಹೇಗೆ ಅನ್ನೋದು ಚಿತ್ರದ ಕಥಾ ಹಂದರ. ಶೀರ್ಶಿಕೆಗೆ ತಕ್ಕಂತೆ ಇದೊಂದು ಹಾಸ್ಯಮಯ ಚಿತ್ರ. ನಟ, ನಿರ್ದೇಶಕ ಮೋಹನ್, ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ತಾವೇ ಸ್ಟೃಸಿದ ಕತೆಯಲ್ಲಿ ಅವರೇ ಹೀರೋ ಅನ್ನೋದು ಈ ಚಿತ್ರದ ಇನ್ನೊಂದು ವಿಶೇಷ. ಕಥಾ ನಾಯಕ ವಿಜಯ್, ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಪಿಆರ್‌ಒ. ಮನೆ ನೋಡಲು ಬರುವ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡುವುದು ಆತನ ಕೆಲಸ. ಆದ್ರೆ, ಆತನ ಬಾಸ್‌ಗೆ ಕಾಲ್‌ಗರ್ಲ್ಸ್ ಹುಡುಗಿಯರ ಹುಚ್ಚು. ಅವರನ್ನು ಆತನ ಗೆಸ್ಟ್‌ಹೌಸ್‌ಗೆ ಕರೆತಂದು ಬಿಡುವ ಕೆಲಸ ವಿಜಯ್‌ಗೆ ಸೇರಿದ್ದು.ಅದು ಅವನಿಗೆ ಇಷ್ಟವಿಲ್ಲದ ಕೆಲಸ. ಸಮಾಜದ ದ್ಟೃಷ್ಟಿಯಲ್ಲಿ ತಾನು ಕೆಟ್ಟವನಾಗುವ ಭಯ. ಆದ್ರೆ, ಆ ಮಾಮಾಗಿರಿ ಕೆಲಸವನ್ನು ಆತ ಮಾಡಲೇಬೇಕು. ಅನಿವಾರ್ಯ, ಯಾಕಂದ್ರೆ ಅದು ಸಾಲದ ಬಾಧೆ! 22, Sep 2018, 7:54 PM IST 22, Sep 2018, 7:40 PM IST 22, Sep 2018, 6:41 PM IST 22, Sep 2018, 6:31 PM IST 22, Sep 2018, 6:15 PM IST 22, Sep 2018, 5:58 PM IST 22, Sep 2018, 5:45 PM IST 22, Sep 2018, 5:24 PM IST 22, Sep 2018, 4:45 PM IST 22, Sep 2018, 4:37 PM IST 22, Sep 2018, 4:30 PM IST 22, Sep 2018, 4:03 PM IST 22, Sep 2018, 3:51 PM IST 22, Sep 2018, 3:48 PM IST 22, Sep 2018, 3:10 PM IST 22, Sep 2018, 1:52 PM IST
"2018-09-22T14:36:18"
https://kannada.asianetnews.com/entertainment/sandalwood-movie-hello-mama-hit-the-theatre-p8kf0t
ಜುಲೈ 4, 1862 - ಬ್ರಿಟಿಷ್ ರಾಯಲ್ ಹವಾಮಾನ ಸೊಸೈಟಿಯ ಜರ್ನಲ್ ಮಂದ ವಿವರಿಸುತ್ತಾರೆ ದಿನ. ಆದಾಗ್ಯೂ, ಚಾರ್ಲ್ಸ್ ಡಾಡ್ಜ್ಸನ್ ಮತ್ತು ತನ್ನ ಪುಟ್ಟ ಸ್ನೇಹಿತರು: ಲಾರಾ ತಂದೆಯ, ಎಡಿತ್ ಮತ್ತು ಆಲಿಸ್ ಲಿಡೆಲ್ - ಅವರು ಜೀವನದಲ್ಲಿ ಬಿಸಿಲಿನ ಒಂದಾಯಿತು. ಕ್ಯಾರೋಲ್ ಹುಡುಗಿಯರು ದೋಣಿ ಕೈಗೊಂಡರೆ ಥೇಮ್ಸ್ ಹೋಗಿ ಸಲಹೆ. ಕೈಗಂಬಿಯ ಮೇಲೆ ಕುಳಿತಿದ್ದ ಆಲಿಸ್ ಲಿಡ್ಡೆಲ್, ಬೇಸರ ಮತ್ತು ತಕ್ಷಣ ಡಾಡ್ಜ್ಸನ್ ಕಥೆ ಹೇಳಿದರು ಬೇಡಿಕೆ, ಮತ್ತು ಇದು ಎಷ್ಟು ಅಸಂಬದ್ಧ ಇರಬೇಕು. ಚಾರ್ಲ್ಸ್ ತನ್ನ ನೆಚ್ಚಿನ ತಿರಸ್ಕರಿಸಬಹುದು ಸಾಧ್ಯವಿಲ್ಲ, ಮತ್ತು ಹೊಸ ಕಥೆ ಆವಿಷ್ಕಾರ ಒಂದು ಹತಾಶ ಪ್ರಯತ್ನದಲ್ಲಿ, ಅವರು ಅಂತ್ಯವಿಲ್ಲದ ಮೊಲದ ಕುಳಿಯ ಪ್ರಯಾಣ ನಾಯಕಿ ಕಳುಹಿಸಲು ನಿರ್ಧರಿಸಿದರು. ಹೀಗಾಗಿ ರಂದು ವಿಶ್ವದಾದ್ಯಂತ ಅಭಿಮಾನಿಗಳು ಮತ್ತು ವಿಶ್ವಾದ್ಯಂತ ಮಕ್ಕಳಿಗೆ ಮತ್ತು ವಯಸ್ಕರಿಗೆ ಮರಳಿ ಓದಲು ಕಾಲ್ಪನಿಕ ಕಥೆಗಳ ಜಗತ್ತಿನಲ್ಲಿ ಮಹಾನ್ ವ್ಯಕ್ತಿ ಜನಿಸಿದರು. ಆದಾಗ್ಯೂ ಜೀವನಚರಿತ್ರೆ ಲೆವಿಸ್ ಕ್ಯಾರೋಲ್ ಅವರ ಕೃತಿಗಳು ಹೆಚ್ಚು ಕಡಿಮೆ ಆಸಕ್ತಿಯನ್ನು. ಈ ವಿಧಿಯ ನಿರ್ದಿಷ್ಟವಾದ ವಿಷಯ. Charz ಡಾಡ್ಜ್ಸನ್: ಮುಂಚಿನ ವರ್ಷಗಳು Charlz Dodzhson ಚೆಶೈರ್ ನಲ್ಲಿ, 1832 ರಲ್ಲಿ, Daresbury ಹಳ್ಳಿಯಲ್ಲಿ ಜನಿಸಿದರು. ಪಾಲಕರು ಭವಿಷ್ಯದ ಗಣಿತಜ್ಞ ಮತ್ತು ಬರಹಗಾರ, ಪಾದ್ರಿ ಚಾರ್ಲ್ಸ್ ಲಟ್ವಿಜ್ Dzhodzhson ಮತ್ತು ಫ್ರಾನ್ಸಿಸ್ ಆಯಿತು. ಚಾರ್ಲ್ಸ್ ಪೋಷಕರು ಹೆಸರುಗಳು ಗೌರವಾರ್ಥವಾಗಿ ಕಲ್ಪಿತ ತೆಗೆದುಕೊಂಡಿತು. ಲ್ಯಾಟಿನ್ Charlz Lyutvidzh carlus Lyudovikus ರೀತಿಯಲ್ಲಿ ಧ್ವನಿಸುತ್ತದೆ. ನೀವು ಕೆಲವು ಸ್ಥಳಗಳಲ್ಲಿ ಪದಗಳನ್ನು ಬದಲಾಯಿಸಲು ಮತ್ತು ವೇಳೆ, ಇಂಗ್ಲೀಷ್ ಮರುಪ್ರವೇಶಕ್ಕೆ ಅನುವಾದ ತಿನ್ನುವೆ Lyuis Kerroll - ನಮ್ಮ ಸಮಯದಲ್ಲಿ ಎಲ್ಲರಿಗೂ ಪರಿಚಿತವಾಗಿರುವ ಹೆಸರು. ಬಾಲ್ಯದಿಂದಲೂ, ಚಾರ್ಲಿ ಗಣಿತ ಆಕರ್ಷಿತನಾದನು. ಮಾತ್ರ ಆಕ್ಸ್ಫರ್ಡ್ ಗಣಿತಶಾಸ್ತ್ರದ ಫ್ಯಾಕಲ್ಟಿ: ಇದು ವೃತ್ತಿಯಾಗಿ ಆಯ್ಕೆ ಬಂದ ನಂತರ, ಯಾವುದೇ ಸಂದೇಹವಿರಲಿಲ್ಲ. ಪದವಿಯ ನಂತರ ಡಾಡ್ಜ್ಸನ್ ಒಂದು ಉಪನ್ಯಾಸಕನಾಗಿ ವಿಶ್ವವಿದ್ಯಾನಿಲಯದಲ್ಲಿ ಉಳಿಯಿತು. ಆಕ್ಸ್ಫರ್ಡ್ ಆಕರ್ಷಣೆಯಾಗಿದೆ ಹೊಸ ಸ್ಥಿತಿ ಪಡೆದ ನಂತರ ಡಾಡ್ಜ್ಸನ್ ಗೋಪುರಗಳುಳ್ಳ ಸ್ನೇಹಶೀಲ ಮನೆಯಲ್ಲಿ ನೆಲೆಸಿದರು. ಯಂಗ್ ಶಿಕ್ಷಕ ತ್ವರಿತವಾಗಿ ಗೋಚರತೆಯನ್ನು ವಿಚಿತ್ರ ಏಕೆಂದರೆ, ಆಕ್ಸ್ಫರ್ಡ್ ಆಕರ್ಷಣೆಗಳಲ್ಲಿ ಒಂದಾಯಿತು: ಸ್ವಲ್ಪ ಅಸಮ್ಮಿತ ಮುಖ, ತುಟಿ ಒಂದು ಮೂಲೆ, ಇತರ ಕಡಿಮೆ ಏರಿಸಲಾಗುತ್ತದೆ. ಜೊತೆಗೆ, ಇದು ಸಾಕಷ್ಟು ತೊದಲುತ್ತಿದ್ದರು ಇದೆ. ಬಹುಶಃ ಅವರು ಡೇಟಿಂಗ್ ಮತ್ತು ಆಕ್ಸ್ಫರ್ಡ್ ಹೊರವಲಯದಲ್ಲಿರುವ ವಾಕಿಂಗ್ ದೀರ್ಘ ಗಂಟೆಗಳ ತಪ್ಪಿಸಲು ಪ್ರಯತ್ನಿಸಿದರು ಏಕೆ ಪ್ರೊಫೆಸರ್ ಆದ್ದರಿಂದ ಒಂಟಿಯಾಗಿ ಇಲ್ಲಿದೆ. ಲೆಕ್ಚರ್ಸ್ ಡಾಡ್ಜ್ಸನ್ ವಿದ್ಯಾರ್ಥಿಗಳು ನೀರಸ ಹೇಗೆ: ಇದು ಒಣ ನಿರ್ಜೀವ ಧ್ವನಿ ಪಾಠ ಹೆಚ್ಚು ಆಸಕ್ತಿಕರ ಮಾಡಲು ಪ್ರಯತ್ನಿಸುವ ಇಲ್ಲದೆ, ನಿಮ್ಮ ವಸ್ತುಗಳ ಓದಲು. ಛಾಯಾಗ್ರಹಣ ಉತ್ಸಾಹ ಲೂಯಿಸ್ ಕೆರೋಲ್ ಬಯಾಗ್ರಫಿ ಸ್ವಲ್ಪ ವಿಭಿನ್ನವಾಗಿ ಔಟ್ ತಿರುಗಿದ್ದಾರೆ. ಅವರ ಯೌವನದಲ್ಲಿ, ಡಾಡ್ಜ್ಸನ್ ಕಲಾವಿದ ಕನಸನ್ನು ಕಂಡಿದ್ದರು: ಅವರು ಸೆಳೆಯಿತು, ಮತ್ತು ಅವರು ಅವರ ಸಣ್ಣ ಕಥೆಗಳ ಸಚಿತ್ರ. ಡಾಡ್ಜ್ಸನ್ ಒಮ್ಮೆ ಸಹ "ಟೈಮ್" ಪತ್ರಿಕೆ ತನ್ನ ಚಿತ್ರಗಳ ಕಳುಹಿಸಲಾಗಿದೆ. ಟ್ರೂ, ಸಂಪಾದಕರು ಪ್ರಕಟಿಸಲು ಸಾಕಷ್ಟು ತಮ್ಮ ವೃತ್ತಿಪರ ಪರಿಗಣಿಸಲಿಲ್ಲ. ಚಾರ್ಲ್ಸ್ ಮುಖ್ಯ ಹವ್ಯಾಸ ಛಾಯಾಗ್ರಹಣ ಆಗಿತ್ತು. ಕ್ಲಾಯ್ಡೆಲ್ ಪರಿಹಾರ ಆವರಿಸಿದ ವಿಶೇಷ ಗಾಜಿನ ಫಲಕಗಳ ಮೇಲೆ ಛಾಯಾಚಿತ್ರಗಳಲ್ಲಿ: XIX ಶತಮಾನದಲ್ಲಿ ಹವ್ಯಾಸಿ ಛಾಯಾಗ್ರಾಹಕರು ಚಿತ್ರಗಳನ್ನು ಪಡೆಯಲು ಶ್ರಮವನ್ನು ಮಾಡಬೇಕಾಯಿತು. ಆದಾಗ್ಯೂ, ಈ ತೊಂದರೆಗಳನ್ನು ಡಾಡ್ಜ್ಸನ್ ನಿಲ್ಲಿಸಲಾಗಲಿಲ್ಲ: ಅವರು ಅದ್ಭುತ ಭಾವಚಿತ್ರಗಳು ಹಕ್ಸ್ಲೆ ಟೆನ್ನಿಸನ್, ಫ್ಯಾರಡೆ ಮಾಡಲು ಸಾಧ್ಯವಾಯಿತು. ಆದಾಗ್ಯೂ, ನಂಬಿರುವ ಅವರ ಅತ್ಯುತ್ತಮ ಡಾಡ್ಜ್ಸನ್ ಮೀಸಲಾದ ಆಲಿಸ್ ಲಿಡ್ಡೆಲ್ - ಮಗಳ ದಿ ರೆಕ್ಟರ್ ಆಫ್ ದಿ ಯುನಿವರ್ಸಿಟಿ ಆಫ್ ಆಕ್ಸ್ಫರ್ಡ್. ಆಲಿಸ್ ಲಿಡ್ಡೆಲ್ ಏಪ್ರಿಲ್ 1856 ರಲ್ಲಿ ಡಾಡ್ಜ್ಸನ್ ಆಕ್ಸ್ಫರ್ಡ್ ರೆಕ್ಟರ್ ಒಂದು ಆಕರ್ಷಕ ಮಗಳು ಭೇಟಿಯಾದರು. ಮತ್ತು ಧನ್ಯವಾದಗಳು ಈ ಸಭೆಯ, ಲೆವಿಸ್ ಕ್ಯಾರೋಲ್ ಜೀವನಚರಿತ್ರೆ ತೀಕ್ಷ್ಣವಾದ ತಿರುವು ಮಾಡಿದ. ಆಲಿಸ್ ಲಿಡ್ಡೆಲ್ ನಿಜವಾದ ಮ್ಯೂಸ್ ಸೇರದ ಗಣಿತ: ಇದು ತನ್ನ ಅವರು ಅತ್ಯಂತ ವ್ಯಾಪಕವಾಗಿ ಓದಲ್ಪಟ್ಟ ಪ್ರಕಟಿಸಿದನು ಒಂದು ಇದು ಅವನ ಪುಸ್ತಕ, ಸಮರ್ಪಿಸಿದ ಮತ್ತು ವಿಶ್ವದ ಉಲ್ಲೇಖಿಸಲಾಗಿದೆ. ಆಲಿಸ್ ಲಿಡ್ಡೆಲ್ ಹಲವಾರು ಭಾವಚಿತ್ರವು ಉಳಿಯಲಿಲ್ಲ: ವಿಮರ್ಶಕರು ಅವರ ನಿಸ್ಸಂದೇಹವಾದ ಕಲಾತ್ಮಕ ಮೌಲ್ಯವನ್ನು ಸೂಚಿಸುತ್ತಾರೆ. ಆದಾಗ್ಯೂ, ಸ್ನೇಹ ಕೆಲವೇ ವರ್ಷಗಳಲ್ಲಿ ಕೊನೆಯಾಯಿತು. ಮ್ಯೂಸ್ ಅಗಲುವಿಕೆ ಆಲಿಸ್ 12 ವರ್ಷದವನಿದ್ದಾಗ, Charlz Dodzhson ಆಕ್ಸ್ಫರ್ಡ್ ರೆಕ್ಟರ್ ಮನೆಯಲ್ಲಿ ಒಂದು ಅಪರೂಪದ ಅತಿಥಿ ಆಯಿತು. ಜೀವನಚರಿತ್ರೆಕಾರ ಇನ್ನೂ ಚರ್ಚಿಸಿದ್ದು ಈ ಹೊರಗಿಡುವ ಕಾರಣ ಏನು. ವದಂತಿ ಡಾಡ್ಜ್ಸನ್ ಆಲಿಸ್ ಪ್ರೀತಿಸುತ್ತಿದ್ದೆ, ಮತ್ತು ತನ್ನ ಮದುವೆ ಪ್ರಸ್ತಾಪವನ್ನು ಮಾಡಿದ ಮಾಡಿಕೊಡುತ್ತಾನೆ. ಕೆಲವು ಗಣಿತ ಹುಡುಗಿ ವ್ಯವಹರಿಸುವಾಗ ಸಭ್ಯತೆಯ ಮಿತಿಗಳನ್ನು ಜಾರಿಗೆ ವಾದಿಸುತ್ತಾರೆ. ನಂತರದ ನಿಜವಾದ ಸಂಭಾವ್ಯವಲ್ಲ: ಎಲ್ಲಾ ಸಭೆಗಳು ಮತ್ತು Dzhodzhsona ಲಿಡ್ಡೆಲ್ ಸಹೋದರಿಯರು ವಯಸ್ಕರಿಗೆ ಉಪಸ್ಥಿತಿಯಲ್ಲಿ ನಡೆಯಿತು. ಆದಾಗ್ಯೂ, ಕ್ಯಾರೋಲ್ ಡೈರಿ ಪುಟಗಳು, ಒಂದು ಕಾಲ್ಪನಿಕ ಸಮಯವನ್ನು ಬಗ್ಗೆ ಹೇಳುವ, ಹರಿದ, ನಾಶವಾಗುತ್ತವೆ. ಆದ್ದರಿಂದ, ಅನೇಕ ಗಮನ ಸೆಳೆಯುತ್ತದೆ ಇಂಗ್ಲೀಷ್ ನಲ್ಲಿ ಲೆವಿಸ್ ಕ್ಯಾರೋಲ್ ಜೀವನಚರಿತ್ರೆ ಹುಡುಗಿಯರಲ್ಲಿ ಸ್ನೇಹಿ ಆಸಕ್ತಿಯನ್ನು ಹೊಂದಿದ್ದ ನಂಬುವುದಿಲ್ಲ. ಜೊತೆಗೆ, ಆಲಿಸ್ಳ ತಾಯಿ ಡಾಡ್ಜ್ಸನ್ ತೆಗೆದ ಚಿತ್ರಗಳ ಮಗಳು ಅತ್ಯಂತ ನಾಶ, ಮತ್ತು ಅಕ್ಷರದ ಹುಡುಗಿ ಉದ್ದೇಶಿಸಿ ದಹನ ಮಾಡಿತು. ಆದಾಗ್ಯೂ, ಮೇ ಮಾಹಿತಿ, ಡಾಡ್ಜ್ಸನ್ ಆಲಿಸ್ ಲಿಡ್ಡೆಲ್ ಅಮರತ್ವದ ನೀಡಲು ನಿರ್ವಹಿಸುತ್ತಿತ್ತು ಎಂದು: ". ಲೆವಿಸ್ ಕ್ಯಾರೋಲ್ ಕಥೆಯಿಂದ ಆಲಿಸ್" ಸಹ ತನ್ನ ಟೂಂಬ್ಸ್ಟೋನ್ ಬರೆಯಲಾಗಿದೆ, ಶಾಶ್ವತ ಮಗು ಅವರು Lyuis Kerroll (ಜೀವನಚರಿತ್ರೆ ಈ ಲೇಖನದಲ್ಲಿ ಅರ್ಥಗರ್ಭಿತವಾಗಿ) ಬಾಲ್ಯ ತನ್ನ ಜೀವನ ಉಳಿಸಿಕೊಳ್ಳಲು ನಿರ್ವಹಿಸಿದ್ದಾರೆ ಹೇಳುತ್ತಾರೆ. ತನ್ನ ಸ್ನೇಹಿತರು ಗಣಿತ ಅವರಿಗೆ ಗಮನಾರ್ಹವಾಗಿ ಕಿರಿಯರು ಏಕೆ ಬಹುಶಃ ಈ ವಿವರಿಸುತ್ತದೆ. ಮಕ್ಕಳ ಕಂಪನಿ ಡಾಡ್ಜ್ಸನ್ ಉಗ್ಗು ನಿಲ್ಲಿಸಿತು ರಲ್ಲಿ ತಮ್ಮ ಮಾತು ಅವನು ಬೇರೆ ವ್ಯಕ್ತಿ ತಿರುಗಿ ವೇಳೆ ಜೀವಿತಕಾಲದಲ್ಲಿ ಆಯಿತು. ಆದಾಗ್ಯೂ, ಅವರು ಹಳೆಯ ಬೆಳೆಯಲು ತಮ್ಮ ಸ್ನೇಹಿತರು ಡಾಡ್ಜ್ಸನ್ ಕ್ರಮೇಣ ಅವುಗಳನ್ನು ಆಸಕ್ತಿಯನ್ನು ಕಳೆದುಕೊಂಡನು. ಮಕ್ಕಳ ಸೃಜನಶೀಲತೆಗೆ ಸ್ಪೂರ್ತಿಪಡೆದ ಅವರು ಗಣಿತ ತನ್ನ ಪುಟ್ಟ ಸ್ನೇಹಿತರು ಬರೆದ ಪತ್ರಗಳನ್ನು ಓದಿ ಅಗತ್ಯ, ಅವರು ಕೆರೋಲ್ ಮುಖ್ಯ ಉತ್ಪನ್ನ ಗಿಂತ ಕಡಿಮೆ ಆಸಕ್ತಿಯಾಗಿವೆ. ಜನಪ್ರಿಯತೆಯ ರಹಸ್ಯ ಇದು ಕ್ಯಾರೊಲ್ ಕಥೆ ಆದ್ದರಿಂದ ಜನಪ್ರಿಯ ಮಾಡಿದ ಹೇಳುವುದು ಕಷ್ಟ. ಬಹುಶಃ ಭಾಷೆಯನ್ನು ಹಲವಾರು ಪ್ರಯೋಗಗಳಲ್ಲಿ ಇಡೀ ವಿಷಯ: ಉದಾಹರಣೆಗೆ ಸ್ವಾತಂತ್ರ್ಯಗಳ ಮಾತ್ರ ಮಕ್ಕಳಲ್ಲಿ ಮಾತನಾಡಬಹುದು. ಈ ಪ್ರೀತಿ ಮಕ್ಕಳು ಆದರೆ ವಯಸ್ಕರು ಮಾತ್ರ ಕಥೆ ವಾಸ್ತವವಾಗಿ: ಇದು ಕಥೆ ಸೂಕ್ಷ್ಮ ತಾತ್ವಿಕ ಮತ್ತು ತಾರ್ಕಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಸಹಾಯ ಮಾಡುತ್ತದೆ ಸಾಧ್ಯ. ಹಾಸ್ಯ, ತರ್ಕ, ಗಣಿತಶಾಸ್ತ್ರ, ಮತ್ತು ಉತ್ತಮ ಕಥೆ: ಜೊತೆಗೆ, ಲೆವಿಸ್ ಕ್ಯಾರೋಲ್ ಮಕ್ಕಳ ಜೀವನಚರಿತ್ರೆ ಈ ವ್ಯಕ್ತಿ ತೋರುವ ವಿರುದ್ಧ ವಿಷಯಗಳನ್ನು ಸಂಪರ್ಕ ಸಾಧ್ಯವಾಯಿತು ಎಂದು ಸಾಬಿತು. ವಾಸ್ತವವಾಗಿ, ಅನೇಕ ವಿರೋಧಾಭಾಸದ ಕ್ಯಾರೋಲ್ ಸಾಹಿತ್ಯದ ಜನಕ ಆಗಿದೆ ಎಂದು, ಪ್ರತಿ ಹೆಜ್ಜೆಯಲ್ಲೂ ತರ್ಕ ಉಲ್ಲಂಘಿಸುವ ಪಾತ್ರಗಳು ನಂಬುತ್ತಾರೆ. ಆದಾಗ್ಯೂ, ಇದು ಅಲ್ಲ. ವಿಚಿತ್ರವಾಗಿ ಸಾಕಷ್ಟು, "ಇನ್ ವಂಡರ್ಲ್ಯಾಂಡ್" ಮತ್ತು "ಇನ್ ವಂಡರ್ಲ್ಯಾಂಡ್" ಪಾತ್ರಗಳನ್ನು ಯಾವಾಗಲೂ ತರ್ಕ, ಆದಾಗ್ಯೂ, ಅನುಸರಿಸಿ ಒಂದು ಅಸಂಬದ್ಧ ಅದೇ ಸಮಯದಲ್ಲಿ ತರಲು. ಏಕೆ Lyuis Kerroll ಒಂದು ಸಣ್ಣ ಜೀವನಚರಿತ್ರೆ ಮೇಲೆ ಇಂಗ್ಲೀಷ್ ಮನುಕುಲದ ಮಹಾನ್ ಕಥೆಹೇಳುವವರ ಒಂದು ಸ್ಥಿತಿಯನ್ನು ಪಡೆಯಲು ಸಾಧ್ಯವಾಯಿತು ಯಾರಿಗೂ ಕುತೂಹಲಕಾರಿ ಎಂದು. ಒಂದು ಪ್ರತಿಭಾವಂತ ಎರಡು ಬದಿ Charlz Dodzhson ಮಾತ್ರ ಇದೊಂದು ಮೂಲ ವಿಕ್ಟೋರಿಯನ್ ವಿಲಕ್ಷಣ ವಿಜ್ಞಾನಿ ಎಲ್ಲಾ ಲಕ್ಷಣಗಳು ಸಾಕಾರಗೊಳಿಸಿದ ವೇಳೆ, ಕಾಲ್ಪನಿಕ ಕಥೆಗಳ ಜಗತ್ತಿನಲ್ಲಿ ಮಹಾನ್ ವ್ಯಕ್ತಿ ಸೃಷ್ಟಿಸಿಲ್ಲ. ಸೇರದ ಮತ್ತು ಮಿತಭಾಷಿ ಗಣಿತಜ್ಞ ಯಾವಾಗಲೂ ಉನ್ನತ ಟೋಪಿ ಮತ್ತು ಕೈಗವಸುಗಳನ್ನು ಧರಿಸಿದ್ದನು. ಅವರು ವಿರಳವಾಗಿ ಮೋಜಿನ ಮತ್ತು ಬಹುತೇಕ ತಪಸ್ವಿ ಬದುಕು ನಡೆಸಿದರು. ಅವರ ಕೃತಿಗಳು ತಾರ್ಕಿಕವಾಗಿ ಗಣಿತ ಶಾಸ್ತ್ರೀಯ ಪರಿಗಣಿಸಲಾಗಿದೆ. ಆದಾಗ್ಯೂ, ಈ ವ್ಯಕ್ತಿ ಮತ್ತು ಬಿಸಿಲಿನಿಂದ. ಲೂಯಿಸ್ ಕೆರೋಲ್ ಬಯಾಗ್ರಫಿ ಅವರು, ಯಾವುದೇ ಮಗು ನಗುವುದು ಎಂದು ಉತ್ತಮ ಕಥೆಗಳು ಮತ್ತು ಅಕ್ಷರಗಳು, ಉತ್ಸಾಹದಿಂದ ರೇಖಾಚಿತ್ರ ಮತ್ತು ಹಾಸ್ಯಮಯ ಕಥೆಗಳನ್ನು ಬರೆಯಲು ಬರೆದರು ಹೇಳುತ್ತಾರೆ. ಹೊಂದಾಣಿಕೆಯಾಗದ ಒಂದಾಗುವ ಸಾಮರ್ಥ್ಯವನ್ನು - ಯಾರು, ಬಹುಶಃ ಪ್ರತಿಭೆ ಗೊತ್ತು? ಹಾಗಿದ್ದಲ್ಲಿ, ಚಾರ್ಲ್ಸ್ ಡಾಡ್ಜ್ಸನ್, ಉತ್ತಮ ಪರಿಚಿತ ಎಂದು Lyuis Kerroll, ಕ್ಯಾನ್ ಬಿ ಕರೆಯಲಾಗುತ್ತದೆ ಒಂದು ದಿ ಮಹಾನ್ ಪ್ರತಿಭೆಗಳ ಮಾನವಕುಲದ. Lyuis Kerroll, ಇದು ಅಚ್ಚರಿ ಎನಿಸುತ್ತದೆ ಮಕ್ಕಳಿಗೆ ಒಂದು ಶಾರ್ಟ್ ಬಯೋಗ್ರಫಿ, ಗಣಿತ, ಅಕ್ಷರಗಳನ್ನು ಮತ್ತು ಕಥೆಗಳು ಅನೇಕ ಕೃತಿಗಳನ್ನು ಬಿಟ್ಟು. ಆದಾಗ್ಯೂ, ವೈಭವ ಅವರು ಆಲಿಸ್ ಲಿಡ್ಡೆಲ್ ಬಗ್ಗೆ ಎರಡು ಪುಸ್ತಕಗಳು ತಂದರು. ಓದಿ "ಇನ್ ವಂಡರ್ಲ್ಯಾಂಡ್" ಮತ್ತು "ಆಲಿಸ್" ಯೋಗ್ಯವಾಗಿದೆ ಪ್ರತಿ ಒಂದು: ಇಂತಹ, ಉತ್ತಮ ಪ್ರಕಾಶಮಾನವಾದ ಮತ್ತು ಅದ್ಭುತ ಪುಸ್ತಕಗಳು ಬಹಳ ಕಡಿಮೆ ಬರೆಯಲಾಗಿದೆ. ಏನು ಸಮುದ್ರದ ರಷ್ಯಾ ಮೇಲೆ? ಸಾರಾಂಶ ಪೊಟ್ಯಾಸಿಯಮ್ ವೈಶಿಷ್ಟ್ಯಗಳನ್ನು. ಪೊಟ್ಯಾಸಿಯಮ್ ರಚನೆ. ಸಂಯುಕ್ತಗಳು ಪೊಟ್ಯಾಸಿಯಮ್ ನದಿಯ ಒಂದು ಭಾಗ. ಒಂದು ನದಿ ಮುಖಜ ಆಗಿದೆ. ನದಿಯ ಕೆಳಭಾಗಕ್ಕೆ ಮುಟ್ಟಿ ಗಲ್ಫ್ ನಿಂದೆ - ಏನಿದು? ಮೌಲ್ಯ. ಸಮಾನಾರ್ಥಕ. ಬಳಕೆಯ ಪರಿಸ್ಥಿತಿಯನ್ನು ಹೇಗೆ ಮನೆಬಳಕೆಗೆ ಗ್ಯಾಸೊಲಿನ್ ಪರ್ಯಾಯಕ ಜನರೇಟರ್ ಆಯ್ಕೆ? ಬರವಣಿಗೆ 9 ನೇ ತರಗತಿಯಲ್ಲಿದ್ದಾಗ, "18 ನೇ ಶತಮಾನದ ಸಾಹಿತ್ಯ ಆಧುನಿಕ ಓದುಗರಿಗೆ ಗ್ರಹಿಕೆಯಲ್ಲಿ" ವಿಶ್ವ ಸರಣಿ: ನಿಗೂಢ ವಿದೇಶಿ ಧಾರಾವಾಹಿಗಳಲ್ಲಿ. ಉತ್ತಮ ಪಟ್ಟಿಯನ್ನು Minx (ಹಸ್ತಾಲಂಕಾರ ಮಾಡು) - ಒಬ್ಬರ ಬೆರಳ ಸಮಗ್ರತೆಗೆ ಯುಗಪ್ರವರ್ತಕ ಕೆಲಸ - "ಶಾಂತಿಯುತ ಡಾನ್". ನಟರ ಮತ್ತು ಪಾತ್ರಗಳನ್ನು ಅಣ್ಣಾ Andrusenko: ಖಾಸಗಿ ಜೀವನ ಮತ್ತು ಚಿತ್ರ ವೃತ್ತಿಜೀವನವನ್ನು ಪ್ರಸರಣ ಸಿವಿಟಿ - ಇದು ಏನು? ಆಟೋಮೋಟಿವ್ ರವಾನೆ - ಸಿವಿಟಿ ಸೋಚಿ Jeeping: ಇಲ್ಲಿ ಅತಿ ಉಳಿದ ಅಭಿಮಾನಿಗಳಿಗೆ ನಿರ್ವಹಿಸಲು "ಹಂಚ್ಬ್ಯಾಕ್" ಕೊನನ್ ಡೋಯ್ಲ್: ಮುಖ್ಯ ಪಾತ್ರಗಳು ಸಾರಾಂಶ ಗಾಮಾ-ಇಂಟರ್ಫೆರಾನ್: ಮಾನವ ದೇಹದಲ್ಲಿ ಪಾತ್ರ ಮತ್ತು ಪ್ರಾಮುಖ್ಯತೆ ಕಾರಿನಲ್ಲಿ ಸ್ಪೀಕರ್ಗಳನ್ನು ಪೋಡಿಯಮ್
"2020-07-09T18:59:09"
https://kn.unansea.com/%E0%B2%95%E0%B3%8D%E0%B2%B0%E0%B2%BF%E0%B2%AF%E0%B3%86%E0%B2%9F%E0%B2%BF%E0%B2%B5%E0%B2%BF%E0%B2%9F%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%81/
ಪ್ರಶಾಂತವನ: July 2015 ಕುಂದ್ಲಳ್ಳಿ ಕೆರೆ ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನೋದು ಉದ್ಯಾನನಗರಿ ಅನ್ನುವಂತೆಯೇ ಕೆರೆಗಳ ನಗರವೂ ಆಗಿತ್ತಂತೆ. ಈಗ ಕೆರೆಯಿದ್ದೆಡೆಯೆಲ್ಲಾ ಅಪಾರ್ಟುಮೆಂಟುಗಳೋ, ಸ್ಟೇಡಿಯಮ್ಮುಗಳೋ ತಲೆಯೆತ್ತಿ ಬೇಸಿಗೆ ಬರೋದ್ರೊಳಗೇ ನೀರಿಗೆ ಹಾಹಾಕಾರ. ಸಾವಿರ ಅಡಿ ಕೊರೆದ್ರೂ ಬೋರಲ್ಲಿ ನೀರಿಲ್ಲ ಅನ್ನೋ ಸಮಸ್ಯೆ ಒಂದೆಡೆಯಾದ್ರೆ ಇರೋ ಕೆರೆಗಳ ನೀರಿಗೂ ವಿಪರೀತ ಪ್ರಮಾಣದ ರಾಸಾಯನಿಕಗಳ ಸುರುವಿ ಅದನ್ನೂ ಹಾಲಾಹಲವಾಗಿಸುತ್ತಿರುವ ಸಮಸ್ಯೆ ಇನ್ನೊಂದೆಡೆ. ವೈಟ್ ಫೀಲ್ಡೆಂಬ ಏರಿಯಾವನ್ನೇ ತಗೊಂಡ್ರೆ ಸುತ್ತಲ ಏಳೆಂಟು ಕೆರೆಗಳಿದ್ದಿದ್ದನ್ನ ಕಾಣಬಹುದು(ಚಿತ್ರ:lakes around whitefield).ಇದ್ದಿದ್ದು ಅಂತ್ಯಾಕೇ ಹೇಳ್ತಿದೀನಾ ? ಇನ್ನೂ ಇಲ್ವಾ ಆ ಕೆರೆಗಳು ಅಂತ ಅಂದ್ರಾ ? ನಕಾಶೆಯಲ್ಲಿ ಅಷ್ಟು ದೊಡ್ಡ ಕಾಣೋ ಆ ಕೆರೆಗಳ ನಿಜಸ್ಥಿತಿ ಅರಿಯೋಕೆ ಅವಿದ್ದ ಜಾಗಕ್ಕೇ ಹೋಗಬೇಕು. ಗ್ರಾಫೈಟ್ ಇಂಡಿಯಾ ಸಿಗ್ನಲ್ ಹತ್ತಿರ ಇರೋ ಪೆಟ್ರೋಲ್ ಬಂಕಿನಿಂದ ಗೋಪಾಲನ್ ಇಂಟರ್ ನ್ಯಾಷನಲ್ ಸ್ಕೂಲ್ ಕಡೆ ಹೋಗೋ ರಸ್ತೆಯಲ್ಲಿ ಸಿಗೋ ವೈಟ್ ಫೀಲ್ಡ್ ಕೆರೆ, ಎಸ್.ಎ.ಪಿ, ಆರ್.ಎಂಜೆಡ್ ಕಟ್ಟಡಗಳ ಹಿಂಬದಿಯಲ್ಲಿರೋ ನೆಲ್ಲೂರಳ್ಳಿ ಕೆರೆ ಮುಂತಾದವುಗಳು ಕಳೆ,ಪಾಚಿಗಳಿಂದ ತುಂಬಿಯೋ, ಅರ್ಧಕ್ಕರ್ಧ ಒಣಗಿಯೋ ಉಳಿಸಲಾರೆಯಾ ನೀಯೆನ್ನ,ನಿನ್ನುಳಿಸಿದ ನೀರಸೆಲೆಯ ಅಂತ ದೀನವಾಗಿ ಬೇಡುತ್ತಿರುವಂತೆ ಭಾಸವಾಗುತ್ತದೆ. Lakes around white field bengaluru ಆ ಕೆರೆಗಳ ಮಧ್ಯೆ ಆಕಾರದಲ್ಲಿ ತೀರಾ ದೊಡ್ಡದಲ್ಲದಿದ್ದರೂ ಈಗಲೂ ಒಂಚೂರು ಸ್ವಚ್ಛತೆಯನ್ನು ಉಳಿಸಿಕೊಂಡು ದೊಡ್ಡ ಮತ್ತು ಸಣ್ಣ ಜಾತಿಯ ಕಾರ್ಮೋರೆಂಟ್, ಕೊಕ್ಕರೆಗಳಲ್ಲದೇ ಊರ ಹಕ್ಕಿಗಳಾದ ಗೂಬೆ, ಕಾಗೆ, ಗುಬ್ಬಚ್ಚಿಗಳಿಗೆ ಆಸರೆಯಿತ್ತು, ತನ್ನ ಸುತ್ತಲಿನ ಹಸಿರ ಸಸ್ಯಗಳಲ್ಲಿ ಹಲವು ಜಾತಿಯ ಚಿಟ್ಟೆಗಳಿಗೆ ಆಸರೆಯಿತ್ತು ನೋಡುಗರ ಕಣ್ಣಿಗೆ ಒಂಚೂರು ಖುಷಿ ಕೊಡುತ್ತಿರುವುದು ಕುಂದ್ಲಳ್ಳಿ ಕೆರೆ. ಇದನ್ನ ಸ್ಯಾಂಕಿ ಟ್ಯಾಂಕಿನ ತರವೋ, ಹಲಸೂರ ಕೆರೆಯ ತರವೋ ಬೇಲಿ ಹಾಕಿ ಅಭಿವೃದ್ಧಿ ಪಡಿಸಿಲ್ಲ ಅಂದ್ರೆ ಈ ಕೆರೆಯೂ ಸುತ್ತಲಿನ ಜನರ ದುರಾಸೆಗೆ ಸತ್ತೇಹೋಗಬೇಕಿತ್ತಲ್ಲ, ಇನ್ನೂ ಬದುಕಿದ್ದು ಪವಾಡ ಅನ್ನುತ್ತಿರೇನೋ ನೀವು . ಅದಕ್ಕೆ ಕಾರಣ ಅದಿರೋ ಪರಿಸರ. ಇದರ ಒಂದು ಮೂಲೆಯಲ್ಲಿರೋದು ಕುಂದಲಹಳ್ಳಿಯಲ್ಲೇ ತಲೆತಲಾಂತರಗಳಿಂದ ವಾಸವಾಗಿರೋ ಜನರು ಮತ್ತು ಬೇರೆ ರಾಜ್ಯಗಳಿಂದ ಇಲ್ಲಿ ಬಂದಿರೋ ಒಂದಿಷ್ಟು ಬಡಬಗ್ಗರ ಜೋಪಡಿಗಳು. ಮತ್ತುಳಿದ ಮೂಲೆಗಳಲ್ಲೆಲ್ಲಾ ಇದನ್ನು ಸುತ್ತುವರಿದಿರೋದು ರಸ್ತೆ. ಆ ರಸ್ತೆಯಾಚೆ ಮತ್ತೆ ಕಸ ಸುರಿಯೋ ಜಾಗವೋ ಐಟಿ ಕಟ್ಟಡಗಳೋ ಇರೋದರಿಂದ ಯಾರೋ ಬಂದು ಕೆರೆಯನ್ನು ಒತ್ತುವರಿ ಮಾಡೋ ಸಮಸ್ಯೆ ಇಲ್ಲಿಯವರೆಗೂ ಎದುರಾಗಿಲ್ಲ. ಈ ಕೆರೆಯಲ್ಲೇ ಸ್ನಾನ ಮಾಡೋ, ಬಟ್ಟೆ ತೊಳೆಯೋ, ಆಗಾಗ ದೋಣಿಯಲ್ಲಿ ಬಲೆ ಬೀಸಿ ಮೀನು ಹಿಡಿಯೋ ಜನರಿಂದಲೋ, ಟ್ಯಾಂಕರುಗಳ ತಂದು ನಿಲ್ಲಿಸಿ ನೀರು ತುಂಬಿಕೊಂಡು ಹೋಗೋ ಜನರಿಂದಲೋ ಅಪಾಯವಿಲ್ಲ ಈ ಕೆರೆಗೆ. ಆದ್ರೆ ಅಪಾಯವಿರೋದು ಇದರ ಸುತ್ತಲಿರೋ ಟೆಕ್ ಪಾರ್ಕುಗಳಿಂದ ! ಇದಕ್ಕೆ ಬೇಲಿಯಿಲ್ಲ, ಕಾಯೋ ಕಾನೂನಿಲ್ಲವೆಂಬ ಕಾರಣಕ್ಕೆ ಈಗಲೂ ಇದರ ಸುತ್ತಮುತ್ತಲಿನ ಕಟ್ಟಡಗಳ ದ್ರವ ತ್ಯಾಜ್ಯ ಇದಕ್ಕೆ ಬಂದು ಸೇರೋದುಂಟು ! ಕೊಳಕು ನೀರು, ಪ್ಲಾಸ್ಟಿಕ್ಕು, ತೇಲೋ ಬೆಂಡಿನ ತುಂಡುಗಳನ್ನ ಜನರ್ಯಾಕೆ ತಂದು ಕೆರೆಗೆ ಸುರೀತಾರೆ ? ಕುಡಿಯೋಕೆ ಮಾತ್ರ ಸ್ವಚ್ಛ ನೀರೇ ಬೇಕು, ಆದ್ರೆ ಅದೇ ನೀರನ್ನ ಸ್ವಚ್ಛವಾಗಿ ಕಾಪಿಡಬೇಕೆಂಬ ಕನಿಷ್ಟಪ್ರಜ್ಞೆಯೂ ಏಕೆ ಬೇಡವೆಂಬ ಪ್ರಶ್ನೆ ಮತ್ತೆ ಮತ್ತೆ ಕಾಡುವಂತೆ ಮಾಡುತ್ತೆ ಈ ಕುಂದಲಳ್ಳಿ ಕೆರೆ. ವರ್ತೂರು ಕೆರೆಯಲ್ಲಿ ಹಾಲಾಹಲದ ನೊರೆಯೇ ಹರಿದು ರಸ್ತೆ ಮೇಲೆ ಬರುತ್ತಿದ್ದ ನಾಗರೀಕರ ಮೈಮೇಲೂ ಹಾರಿದ್ದು ಆ ಕೆರೆಯಲ್ಲಿ ಮನುಷ್ಯರ ಬಗ್ಗೆ ಇರಬಹುದ ರೋಷವನ್ನು ತೋರಿಸಿರಬಹುದು ! ಬೆಳ್ಳಂದೂರು ಹತ್ತಿರದ ಕೆರೆಯಲ್ಲಿನ ನೊರೆಗೆ ಬೆಂಕಿ ಹತ್ತಿ ಉರಿದ ಸುದ್ದಿಯನ್ನೂ ನೀವು ಓದಿರಬಹುದು. ಕೆಂಗೇರಿಯಲ್ಲಿ ಹರಿಯುತ್ತಿದ್ದ ಹೊಳೆ ಹೋಗಿ ಕೆಟ್ಟ ಕೊಳೆ ಎನ್ನೋದಕ್ಕೆ ಕೆಂಗೇರಿ ಮೋರಿ ಅಂತ ಕರೆಯೋ ಪರಿಸ್ಥಿತಿ ಬಂದಿದೆ ಅಂದ್ರೆ ಬೆಂಗಳೂರಲ್ಲಿನ ಜಲ ಮಾಲಿನ್ಯ ಮುಟ್ಟಿರೋ ಅಪಾಯಕಾರಿ ಮಟ್ಟವನ್ನು ಊಹಿಸಬಹುದೇನೋ. ಬೇಲಿ ಸಿಕ್ಕಿರೋ, ಬೋಟಿಂಗು ಇತ್ಯಾದಿ ಪ್ರವಾಸಿ ಚಟುವಟಿಕೆಗಳನ್ನ ಕಾಣುತ್ತಿರೋ ಕೆಲವೇ ಕೆಲವು ಕೆರೆಗಳನ್ನು ಬಿಟ್ಟರೆ ಉಳಿದೆಲ್ಲಾ ಕೆರೆಗಳದ್ದೂ ಮೂಕ ರೋದನ. ಅರಸೀಕೆರೆಯ ಮೇಲಿಂದ ಬೆಂಗಳೂರಿನ ಕಡೆ ಬರುವವರು ಬಸ್ಟಾಂಡಿನ ಪಕ್ಕದಲ್ಲೇ ಇರೋ ಅಲ್ಲಿನ ಕೆರೆಗಳನ್ನ ನೊಡಿರಬಹುದು. ಕೆಲ ವರ್ಷಗಳ ಹಿಂದೆ ಸಾಯೋ ಹಾಗಿದ್ದ ಆ ಕೆರೆಯ ಹೂಳೆತ್ತಿ, ಸುತ್ತಲೊಂದು ರಕ್ಷಣಾ ಬೇಲಿ ನಿರ್ಮಿಸಿ ಬೇಸಿಗೆಯಲ್ಲೂ ಊರ ನೀರಡಿಕೆ ಇಂಗಿಸುವಷ್ಟರ ಮಟ್ಟಿಗೆ ತಂದು ನಿಲ್ಲಿಸಿರುವುದನ್ನ ನೋಡೋಕೆ ಖುಷಿಯಾಗುತ್ತೆ.ಅದೇ ತರಹ ಉಳ್ಳಾಲ ಉಪನಗರದ ಕೆರೆ ಪುನರ್ಜೀವ ಕೊಟ್ಟ ಪರಿಯೂ ನೋಡೋಕೆ ಖುಷಿ ಕೊಡುತ್ತೆ. ಆ ಪರಿಯ ರಕ್ಷಣೆ ಸಿಕ್ಕದಿದ್ದರೂ ಕುಂದಲಹಳ್ಳಿಯ ಕೆರೆಯ ಸುತ್ತಮುತ್ತಲಿನ ಕೆಲ ಜಾಗ ಈ ಕುಂದಲಹಳ್ಳಿ ಗ್ರಾಮಸ್ಥರಿಗೆ ಸೇರಿದ ಸ್ಮಶಾನ ಅನ್ನೋದೊಂದೇ ಈ ಕೆರೆಗೆ ಸದ್ಯಕ್ಕಿರುವ ಶ್ರೀ ರಕ್ಷೆ. ಇದೇ ಈ ತ್ಯಾಜ್ಯಗಳ ತಂದು ಸುರಿದು ಇದನ್ನೂ ಮತ್ತೊಂದು ಅಪಾರ್ಟ್ ಮೆಂಟುಗಳ ಸೈಟಾಗಿಸದಂತೆ ಕಾದಿದೆ ಅಂದರೆ ತಪ್ಪಾಗಲಾರದೇನೋ. ಸುತ್ತಲಿನ ಕಂಪೆನಿಗಳಿಗೆ ಹೋಗೋಕೆ ಅತೀ ಹತ್ತಿರದ ದಾರಿ ಅಂತ ಅದೆಷ್ಟೊ ಜನ ಕೆರೆಯ ಮೇಲಿನ ಹಾದಿಯಲ್ಲಿ ನಡೆದು ಹೋಗೋದಿದೆ. ಕೆರೆಯ ಮತ್ತೊಂದು ಬದಿಯ ಸ್ವಲ್ಪ ಸುತ್ತಾದ ಹಾದಿಯಿಂದ ಬೈಕಲ್ಲಿ ಹೋಗೋರೂ ಇದ್ದಾರೆ. ಹೊಗೆಯುಗುಳೋ ಟ್ರಾಫಿಕ್ಕಿನಲ್ಲಿ ಗಂಟೆಗಟ್ಟಲೇ ಕಳೆಯೋ ಗೋಳ್ಯಾರಿಗೆ ಬೇಕು ಅನ್ನೋದ್ರ ಜೊತೆಗೆ ದಿನಾ ಎರಡು-ಮೂರು ಕಿ.ಮೀ ನಡೆದ್ರೆ ಆರೋಗ್ಯವೂ ಸುಧಾರಿಸುತ್ತೆ ಅನ್ನೋದು ಇನ್ನೊಂದು ಕಾರಣ. ಕೆರೆಯಲ್ಲಿ ತೇಲಿ ಮುಳುಗುತ್ತಾ ನೀರಾಳದಿಂದ ಕೊಕ್ಕಲ್ಲಿ ಮೀನು ಕಚ್ಚಿಕೊಂಡು ಮೇಲೇಳೋ ಕ್ಯಾರಾಮೌಂಟುಗಳ ನೋಡೋದೇ ಒಂದು ಚಂದ. ಆಗಾಗ ಹಾರಿಬರೋ ಗಿಳಿಗಳ ಸಾಲು, , ಮರದ ಮೇಲೆ ಮಲ್ಲಿಗೆ ಚೆಲ್ಲಿದಂತೆ ಕಾಣೋ ಬೆಳ್ಳಕ್ಕಿಗಳ ಹಿಂಡು ನೋಡೋದು ಇನ್ನೊಂದು ಖುಷಿ. ನೀರಿಗೆ ಸಮಾನಾಂತರವಾಗಿ ಹಾರೋ ಹಕ್ಕಿಗಳು ಎಲ್ಲಿ ನೀರಿಗೆ ಬಿದ್ದಾವೋ ಎನ್ನುವಷ್ಟರಲ್ಲಿ ಎಲ್ಲೋ ಮುಳುಗಿ ಮತ್ತೆಲ್ಲೋ ಮೀನು ಕಚ್ಚಿ ಮೇಲೋಳೋ ಅವುಗಳ ಚಾಕಚಕ್ಯತೆ ಗಮನಸೆಳೆಯುತ್ತೆ. ಆಚೆ ದಡದ ಕಟ್ಟಡಗಳ, ಸಾಗುತ್ತಿರೋ ಚಾಲಕರ ಪ್ರತಿಬಿಂಬಗಳನ್ನ ಕೆರೆಯ ನಿಂತ ನೀರಿನ ಶಾಂತಿಯಲ್ಲಿ ನೋಡೋ ಆನಂದವನ್ನೆಂತೂ ಅಲ್ಲಿ ಬಂದೇ ಸವಿಯಬೇಕು. ಕೆರೆಯ ಮೇಲೆ ಕೂರಲು ಕಟ್ಟೆಗಳಿರದಿದ್ದರೂ ಕೆರೆಯ ಸುತ್ತು ಹಾಕಿ ಬರೋಕೆ ತೆಗೆದುಕೊಳ್ಳೋ ಸಮಯ ಅನೇಕ ಪ್ರೇಮಿಗಳ ಪಾಲಿನ ರಸ ಸಮಯ. ಆಫೀಸಲ್ಲಿನ ಯಾರ ಮೇಲಿನ ಸಿಟ್ಟನ್ನೋ, ಹೇಳಲಾಗದ ಮಾತುಗಳನ್ನು ನಡೆದಾಟಕ್ಕೆ ಜೊತೆಯಾಗೋ ತಂಗಾಳಿ ಬಗೆಹರಿಸುತ್ತೆ.. ಈ ಕೆರೆಯ ಮೇಲೆ ಖುಷಿಖುಷಿಯಾಗಿ,ಲವಲವಿಕೆಯಿಂದ ಮಾತಾಡುತ್ತಾ ಸಾಗೋ ಸಹೋದ್ಯೋಗಿಗಳ ಗುಂಪುಗಳನ್ನ ನೋಡಿದ ಯಾರಿಗಾದರೂ ತಮ್ಮ ಹೈಸ್ಕೂಲ, ಕಾಲೇಜಿನ ಗ್ಯಾಂಗು ನೆನಪಾದರೆ ಅಚ್ಚರಿಯಿಲ್ಲ ! ಟಾರ ರಸ್ತೆಯಿಲ್ಲ, ಬರೀ ಕಲ್ಲಿನ ರಸ್ತೆಯಲ್ಲಿ ಸಾಗಿ ಸ್ಲಮ್ಮಿನಂತಹ ಜಾಗದ ಮೂಲಕ ಹೊರಬರಬೇಕು, ರಾತ್ರೆಯಾದರೆ ಲೈಟಿಲ್ಲ ಅಂತ ಗೊಣಗೋ ಜನರ ಮಧ್ಯೆಯೂ ಹಗಲ ಹೊತ್ತಲ್ಲಿ ಈ ರಸ್ತೆಯಲ್ಲೇ ಸಾಗೋ ಟೆಕ್ಕಿಗಳ ಸಂಖ್ಯೆ ಕಡಿಮೆಯಿಲ್ಲ. ಸಂಜೆ ಎಂಟು, ಒಂಭತ್ತರ ಹೊತ್ತಿಗೂ ಒಬ್ಬೊಬ್ಬರೇ ಈ ಕೆರೆಯ ಹಾದು ಬರೋ ಹುಡುಗಿಯರಿಗೆ ಹಿಂದೆ ಬರುತ್ತಿರೋ ಮತ್ಯಾವುದೋ ಗುಂಪು ಟ್ರಾಫಿಕ್ಕಿನಿಂದ ತುಂಬಿರೋ ರಸ್ತೆಗಿಂತ ಸುರಕ್ಷಾ ಭಾವ ಮೂಡಿಸಿರುತ್ತೆ. ರಾತ್ರಿಯ ಕಟ್ಟಡಗಳ ದೀಪಗಳು ಕೆರೆಯ ನೀರಲ್ಲಿ ಪ್ರತಿಬಿಂಬಿಸುವುದನ್ನು ನೋಡೋದು ಮತ್ತೊಂದು ಪರಿಯ ಖುಷಿ. ನೀರಿನ ಅಲೆಗಳಲ್ಲಿ ಮೂಡಿದ ಪ್ರತಿಬಿಂಬವೂ ಚಲಿಸಿ ಬೆಳಕು ನೀರಲ್ಲಿ ಹೊಯ್ದಾಡೋ ಪರಿಯನ್ನು , ಅದರ ಮೇಲೆ ಹಾಯ್ದ ತಂಗಾಳಿಯ ಸವಿಯಲೆಂದೇ ಇಲ್ಲಿನ ಸುತ್ತಮುತ್ತಲ ಪೀಜಿಗಳಲ್ಲಿನ ಕೆಲ ಹುಡುಗರು ಫೋನ ನೆಪದಲ್ಲಿ ಟೆರೇಸ್ ಮೇಲೇ ಇರುತ್ತಾರೆ. ಬಿರುಬೇಸಿಗೆಗಳಲ್ಲೆಂತೂ ಕೆರೆಯ ತಂಗಾಳಿಯ ಕಾರಣಕ್ಕೆ ಟಾರಸಿಯ ಮೇಲೇ ಚಾಪೆ ಹಾಸಿ ಮಲಗುವವರೂ ಉಂಟು! ಈ ಕೆರೆಯ ಹಾದಿಯಲ್ಲಿ ನಡೆದಾಡುವವರ ಬಹುಮುಖ್ಯ ಕಂಪ್ಲೇಂಟು ಅಂದ್ರೆ ಇಲ್ಲಿನ ಜನರಿಗೆ ಇಲ್ಲದ ಸ್ವಚ್ಛತೆಯ ಪರಿಕಲ್ಪನೆ ಬಗ್ಗೆ. ಬೆಳಿಗ್ಗೆ ಹತ್ತೂವರೆ ಹನ್ನೊಂದು ಘಂಟೆ ಹೊತ್ತಿಗೆ ಈ ಹಾದಿಯಲ್ಲಿ ಬಂದ್ರೂ ಹಾದಿ ಬದಿಯಲ್ಲೋ, ಪೊದೆಗಳ ಸಂದಿಯಲ್ಲೋ ಶೌಚಕ್ಕೆ ಕೂತ ಜನ ಕಾಣಿಸುತ್ತಾರೆ ! ರಸ್ತೆಗಳ ಬದಿಯಲ್ಲೇ ಮಲವಿಸರ್ಜನೆ ಮಾಡೋ ಜನರ ಮನೆಗಳಲ್ಲಿ ಶೌಚಾಲಯ ಇರೋಲ್ವಾ ಅನ್ನೋದು ಇವರಲ್ಲಿ ಕೆಲವರ ಪ್ರಶ್ನೆ. ಆ ಭಾಗ್ಯ, ಈ ಭಾಗ್ಯವೆಂದು ಬಡಜನರ ಕಲ್ಯಾಣಕ್ಕಾಗಿ ದುಡಿಯುತ್ತಿರೋ ಸರ್ಕಾರದ ಕೃಪಾ ಕಟಾಕ್ಷ ಇನ್ನೂ ಇವರ ಮೇಲೆ ಬಿದ್ದಂತಿಲ್ಲ. ಶೌಚಾಲಯ ಭಾಗ್ಯ ದಕ್ಕದ ಜನತೆ ನೈಸರ್ಗಿಕ ಕರೆಗೆ ಹೋಗೋದಾದರೂ ಎಲ್ಲಿಗೆ ? ಒಂದೆಡೆ ಬಹುಮಹಡಿ ಕಟ್ಟಡಗಳು, ಮತ್ತೊಂದೆಡೆ ಬಯಲಿನಲ್ಲೇ ಶೌಚಕ್ಕೆ ತೆರಳಬೇಕಾದ ದುಸ್ಥಿತಿಯಲ್ಲಿರೋ ಜೋಪಡಿಗಳು !. ಸಾಮಾಜಿಕ ನ್ಯಾಯದ ಕೂಗಾಟ, ಧಿಕ್ಕಾರಗಳಿಗೂ ತಮಗೂ ಸಂಬಂಧವಿಲ್ಲದಂತೆ ತಣ್ಣಗಿದ್ದಾರೆ ಇಲ್ಲಿನ ಜನ. ಇಲ್ಲಿನ ಮಕ್ಕಳು ಬೆಳಗ್ಗೆ ಮುಂಚೆಯಾದ್ರೆ ಇದೇ ಕೆರೆಯಲ್ಲಿ ಮಿಂದೇಳುತ್ತಿರುತ್ತವೆ, ಸ್ವಲ್ಪ ಹೊತ್ತಿನ ನಂತರ ನೋಡಿದ್ರೆ ಸಮವಸ್ತ್ರ ಧರಿಸಿ ಸಮೀಪದಲ್ಲಿರೋ ಶಾಲೆಗೆ ತೆರಳುತ್ತಿರುತ್ತೆ. ಮಕ್ಕಳನ್ನು ಓದಿಸಬೇಕು, ಸಮಾಜದಲ್ಲೊಂದು ಒಳ್ಳೆಯ ಸ್ಥಾನಕ್ಕೆ ತೆರಳಬೇಕೆಂಬ ಕನಸುಗಳಿವೆ ಇಲ್ಲಿನ ಹರಕು ಬಟ್ಟೆಯಲ್ಲಿ ಕೆರೆಯ ಬಳಿಯಲ್ಲಿ ಬಟ್ಟೆಯೊಗೆಯುತ್ತಿರುವ ಅಮ್ಮಂದಿರಲ್ಲಿ. ಆದರೇನು ಮಾಡೋದು ? ಮರ್ಯಾದೆ ಪ್ರಶ್ನೆಯಾದರೂ ನೈಸರ್ಗಿಕ ಕರೆಗೆ ಕೆರೆದಡವೇ ಗತಿ. ಮನೆಗೊಂದು ಶೌಚಾಲಯದ ಯೋಜನೆಗಳು ಇಲ್ಲಿನ ಜೋಪಡಿಗಳಿಗೂ ತಲುಪುವಂತಾದರೆ ಕೆರೆಯ ಕಳೆಯೂ, ಅದರ ಸುತ್ತಮುತ್ತಲಿನ ವಾಸನೆಗಳ ಕಲೆಯೂ ಮಾಯವಾದೀತು. ಸುತ್ತಲಿನ ಜನರ ಆತ್ಮಗೌರವದ ಜೊತೆಗೆ ಕೆರೆಯ ಸೌಂದರ್ಯವೂ ಇನ್ನೊಂದಿಷ್ಟು ಕಳೆಗಟ್ಟೀತು. Reactions: No comments:
"2017-05-25T08:38:13"
http://prashasti-prashantavanam.blogspot.in/2015/07/
ಕಾರವಾರ: ನೌಕಾನೆಲೆಗೂ ತಟ್ಟಿದ ಜಲಕ್ಷಾಮದ ಬಿಸಿ, ಯುದ್ಧನೌಕೆಗಳ ಸ್ಥಳಾಂತರಕ್ಕೆ ಅಧಿಕಾರಿಗಳು ಮುಂದು- Kannada Prabha ರಾಜ್ಯಾದ್ಯಂತದ ಜಲಕ್ಷಾಮ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಬರಗಾಲದ ಪರಿಣಾಮ ಏಷ್ಯಾದಲ್ಲೇ ಮೂರನೇ ಅತಿದೊಡ್ಡ ನೌಕಾನೆಲೆ ಎಂಬ ಕೀರ್ತಿಗೆ ಪಾತ್ರವಾಗಿರುವ.... Published: 05th June 2019 12:00 PM | Last Updated: 05th June 2019 12:19 PM | A+A A- KarwarINS Kadamba Naval baseIndian NavyWater crisisಕಾರವಾರಐಎನ್ಎಸ್ ಕದಂಬ ನೌಕಾನೆಲೆಭಾರತೀಯ ನೌಕಾದಳನೀರಿನ ಬಿಕ್ಕಟ್ಟು
"2019-10-14T01:46:57"
https://www.kannadaprabha.com/karnataka/2019/jun/05/karwar-water-crisis-may-force-ins-officials-to-shift-warships-to-mumbai-339449.html
ಕೊಡುಗೆ ಕೊಡೋದಲ್ಲ, ಇದ್ದಿದ್ದನ್ನೂ ಕಿತ್ಕೊಂಡ್ರು! | Udayavani – ಉದಯವಾಣಿ Tuesday, 11 Aug 2020 | UPDATED: 11:47 PM IST ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಶಿರಾ ಘಟಕ, ಸರ್ಕಾರಿ ಕಾಲೇಜು ಸ್ಥಳಾಂತರ ಮಾಡಿದ್ದೇ ಸಾಧನೆ Team Udayavani, Jul 1, 2019, 12:15 PM IST ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಿದ್ದು, ಮಧ್ಯ ಕರ್ನಾಟಕದ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಬದಲಾಗಿ ಜಿಲ್ಲೆಯಲ್ಲಿದ್ದ ಪ್ರಮುಖ ಎರಡು ಮಹತ್ವದ ಯೋಜನೆಗಳನ್ನ ಕಿತ್ತುಕೊಂಡು ಹಳೆ ಮೈಸೂರು ಭಾಗದ ಜೆಡಿಎಸ್‌ ಬಲಿಷ್ಠವಾಗಿರುವ ಎರಡು ಜಿಲ್ಲೆಗಳಿಗೆ ಹಂಚಿಕೆ ಮಾಡುವ ಮೂಲಕ ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗೀಯ ಕಚೇರಿಯಲ್ಲಿದ್ದ ಶಿರಾ ಘಟಕವನ್ನು ತುಮಕೂರು ಜಿಲ್ಲೆಗೆ, ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರ ಮಾಡುವ ಮೂಲಕ ಹಿಂದುಳಿದ ಜಿಲ್ಲೆಯ ಜನರ ಗಾಯದ ಮೇಲೆ ಬರೆ ಎಳೆದಿದೆ. ಜಿಲ್ಲೆಗೆ ದಕ್ಕಬೇಕಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಗಗನಕುಸುಮವಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಿಂದ ಹಿಡಿದು ಸಮ್ಮಿಶ್ರ ಸರ್ಕಾರದವರೆಗೂ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ವೈದ್ಯಕೀಯ ಕಾಲೇಜನ್ನು ಆರಂಭ ಮಾಡುತ್ತಿಲ್ಲ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಒಂದಿಂಚೂ ಮುಂದೆ ಸಾಗದೆ ಇದ್ದಲ್ಲೇ ಇದೆ. ಈ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡುತ್ತಿಲ್ಲ, ಅನುದಾನವನ್ನೂ ನೀಡುತ್ತಿಲ್ಲ. ಹಾಗಾಗಿ ರೈಲು ಹಳಿ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ ತಾಲೂಕುಗಳಿಗೆ ತುಂಗಭದ್ರಾ ಹಿನ್ನೀರು ಯೋಜನೆಗೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ 2800 ಕೋಟಿ ರೂ.ಗಳು ಮಂಜೂರಾಗಿದ್ದು ಆಮೆಗತಿಯಲ್ಲಿ ಸಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗದಲ್ಲಿದ್ದ ಶಿರಾ ಘಟಕವನ್ನು ವಾಪಸ್‌ ತುಮಕೂರು ಜಿಲ್ಲೆಗೆ ಮರು ಸೇರ್ಪಡೆ ಮಾಡುವ ಮೂಲಕ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ ಜವನಗೊಂಡಹಳ್ಳಿ ಹೋಬಳಿ ಕೇಂದ್ರದಲ್ಲಿದ್ದ ಸರ್ಕಾರಿ ಪದವಿ ಕಾಲೇಜ್‌ ಅನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸುವ ಮೂಲಕ ಶೈಕ್ಷಣಿಕವಾಗಿಯೂ ತಾರತಮ್ಯ ಮಾಡಲಾಗಿದೆ. ಮುಂದುವರೆದ ಕಾಮಗಾರಿ ಪಟ್ಟಿಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಸದ್ಯಕ್ಕೆ ಅನುದಾನ ಕೊರತೆ ಕಾಣುತ್ತಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ 700 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಆಗಿದೆ. ಆ ಮೊತ್ತದಲ್ಲಿ 657.28 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಈ ಅನುದಾನವನ್ನು ಹೊರತು ಪಡಿಸಿದರೆ ಯಾವುದೇ ರೀತಿಯ ಹೆಚ್ಚುವರಿ ಅನುದಾನ ಜಿಲ್ಲೆಗೆ ಸಿಕ್ಕಿಲ್ಲ. ಆದರೆ ಲೋಕೋಪಯೋಗಿ ಇಲಾಖೆ ಈ ಮಾತಿಗೆ ಅಪವಾದ. ಏಕೆಂದರೆ ಜಿಲ್ಲೆಯಾದ್ಯಂತ 150 ಮುಂದುವರೆದ ಕಾಮಗಾರಿಗಳಿದ್ದು 6.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 3 ಕೋಟಿ ರೂ. ಖರ್ಚಾಗಿದ್ದು ಕಾಮಗಾರಿಗಳು ವೇಗದಲ್ಲಿ ಸಾಗುತ್ತಿವೆ. ಇದಲ್ಲದೆ ಎಸ್ಸಿಪಿ, ಟಿಎಸ್ಪಿ ಅನುದಾನದಡಿಯಲ್ಲಿ 162 ಮುಂದುವರೆದ ಕಾಮಗಾರಿಗಳು ನಡೆಯುತ್ತಿದ್ದು 12.46 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಪೈಕಿ 1.83 ಕೋಟಿ ರೂ.ಗಳು ಖರ್ಚಾಗಿದ್ದು ಎಲ್ಲ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಲೋಕೋಪಯೋಗಿ ಇಲಾಖೆಗೆ ಜಿಲ್ಲೆಯ ಆರು ತಾಲೂಕುಗಳಿಂದ ಹೊಸದಾಗಿ 109.70 ಕೋಟಿ ರೂ.ಗಳಲ್ಲಿ 51 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು ಮಂಜೂರಾತಿ, ಸರ್ವೆ, ಡಿಪಿಆರ್‌, ಹಂತದಲ್ಲಿವೆ. ಒಂದೆರಡು ತಿಂಗಳಲ್ಲಿ ಇಷ್ಟು ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಆರಂಭವಾಗಲಿವೆ. ಇದೇ ಮಾತನ್ನು ಬೇರೆ ಇಲಾಖೆಗೆ ಹೇಳುವಂತಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಆರು ತಾಲೂಕುಗಳಲ್ಲಿ 84 ಕಾಮಗಾರಿಗಳನ್ನು ವಿವಿಧ ಹೆಡ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು 34.80 ಕೋಟಿ ರೂ.ಗಳ ಮಂಜೂರಾತಿ ನೀಡಿ ಕಾಮಗಾರಿ ಆರಂಭಿಸಲಾಗಿದೆ. ಹೊಸ ಕೆರೆ ನಿರ್ಮಾಣಕ್ಕಾಗಿ 50 ಲಕ್ಷ, ಕೆರೆಗಳ ಆಧುನೀಕರಣಕ್ಕಾಗಿ 6.38 ಕೋಟಿ, ಅಣೆಕಟ್ಟು ಮತ್ತು ಪಿಕಪ್‌ 12.89 ಕೋಟಿ, ಚೆಕ್‌ ಡ್ಯಾಂ ನಿರ್ಮಾಣಕ್ಕಾಗಿ 1.45 ಕೋಟಿ, ಕೊಳವೆ ಬಾವಿ ಕಾಮಗಾರಿಗಳಿಗೆ 5.55 ಕೋಟಿ, ನಬಾರ್ಡ್‌ ಅನುದಾನದಡಿ ಹೊಸ ಕೆರೆಗಳ ನಿರ್ಮಾಣಕ್ಕಾಗಿ 1.50 ಕೋಟಿ, ಕೆರೆಗಳ ಆಧುನೀಕರಣ 2.49 ಕೋಟಿ, ಅಣೆಕಟ್ಟು ಮತ್ತು ಪಿಕಪ್‌ 4.04 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವೇ ಕೆಲವು ಇಲಾಖೆಗಳಿಗೆ ಹೆಚ್ಚಿನ ಅನುದಾನ ಮಂಜೂರಾಗಿದ್ದು ಬಿಟ್ಟರೆ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಸಾಧನೆ ನಿರಾಶಾದಾಯಕವಾಗಿದೆ. ಇನ್ನುಳಿದ ನಾಲ್ಕು ವರ್ಷಗಳಲ್ಲಾದರೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಮನಸ್ಸು ಮಾಡಬೇಕಿದೆ. ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆ ತೃಪ್ತಿ ತಂದಿದೆ. ತುಂಗಭದ್ರಾ ಹಿನ್ನೀರು ಯೋಜನೆ ಕೂಡ್ಲಗಿ ತಾಲೂಕಿನಲ್ಲಿ ಆರಂಭವಾಗಿದೆ. ಹೊಸದಾಗಿ ಮಂಜೂರಾಗಿರುವ ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ. ಉಳಿದ ನಾಲ್ಕು ವರ್ಷದಲ್ಲಿ ಜಿಲ್ಲೆಯ ಎಲ್ಲ ಯೋಜನೆಗಳೂ ಆರಂಭವಾಗಲಿವೆ. •ವೆಂಕಟರಮಣಪ್ಪ, ಜಿಲ್ಲಾ ಉಸ್ತುವಾರಿ ಸಚಿವರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಾ ಘಟಕ : Shira unit of State Road Transport Corporation
"2020-08-11T18:18:42"
https://www.udayavani.com/district-news/chitradurga-shira-unit-of-state-road-transport-corporation
ಸೋಂಪುರದಲ್ಲಿ ಪರಿಷೆ | Prajavani ಸೋಂಪುರದಲ್ಲಿ ಪರಿಷೆ ಕೆಂಗೇರಿ ಸಮೀಪದ ಸೋಂಪುರದಲ್ಲಿ ಸಂಕ್ರಾಂತಿ ಹಬ್ಬವನ್ನು ಗ್ರಾಮದ ಸುತ್ತಮುತ್ತಲಿನ ಜನರೆಲ್ಲ ಸೇರಿಕೊಂಡು ಆಚರಿಸುವುದು ವಿಶೇಷ. ಸೋಂಪುರದ ನಂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಊರ ಹಬ್ಬದ ರೀತಿಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ವರ್ಷವೂ ಜ.15ರಂದು ಸಂಕ್ರಾಂತಿ ಹಬ್ಬ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ರೈತರು ತಾವು ಬೆಳೆದ ದವಸ ದಾನ್ಯಗಳು, ತರಕಾರಿಗಳನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಸೋಂಪುರ ಬಳಿಯ ಚನ್ನವೀರಯ್ಯನ ಪಾಳ್ಯದಲ್ಲಿರುವ ನಂದಿ ಬಸವೇಶ್ವರಸ್ವಾಮಿ ದೇವಸ್ಥಾನವು ಚೋಳರ ಕಾಲದ್ದು. 2006ರಲ್ಲಿ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದು ಹೊಸ ರೂಪ ನೀಡಲಾಯಿತು. ಇದರ ನೇತೃತ್ವ ವಹಿಸಿದ್ದ ಸ್ಥಳೀಯ ಮುಖಂಡ ಎಂ.ರುದ್ರೇಶ್‍ ದೇವಸ್ಥಾನಕ್ಕೆ ಸಂಪರ್ಕ ವ್ಯವಸ್ಥೆಯನ್ನೂ ಕಲ್ಪಿಸಿದರು. ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಆಚರಣೆಗೆ ಇಲ್ಲಿ ವಿಶೇಷ ಮಹತ್ವ. ನಂದಿ ಬಸವೇಶ್ವರ ದೇವರ ಉತ್ಸವ, ಜಾತ್ರಾ ಮಹೋತ್ಸವ ಜರುಗಲಿದ್ದು ಹೆಮ್ಮಿಗೆಪುರದ ಮಾರಮ್ಮ, ಗಟ್ಟಿಗೆರೆ ಪಾಳ್ಯ, ಕಬ್ಬಾಳಮ್ಮ, ಚನ್ನವೀರಯ್ಯನಪಾಳ್ಯ, ಮಾರಮ್ಮ, ಎಚ್.ಗೊಲ್ಲಹಳ್ಳಿ ಕಬ್ಬಾಳಮ್ಮ ಸೇರಿದಂತೆ ವಿವಿಧ ದೇವರುಗಳ ಮೆರವಣಿಗೆ ನಡೆಯುತ್ತದೆ. ಡಂಕಣಿಕೋಟೆ, ತಳಿ, ಧರ್ಮಪುರಿ, ಪಾವಗಡ, ಗೌರಿಬಿದನೂರು, ಕನಕಪುರ, ಮಾಗಡಿಯಿಂದ ಬರುವ ರೈತರು ತಲಾ ಎರಡು ಲೀಟರ್ ಕಡಲೇಕಾಯಿ ಹಾಗೂ ಒಂದು ಜೊತೆ ಕಬ್ಬನ್ನು ಉಚಿತವಾಗಿ ವಿತರಿಸುವ ಮೂಲಕ ಕಡಲೇಕಾಯಿ ಪರಿಷೆಯನ್ನೇ ನಡೆಸುವುದು ಈ ಊರಿನ ಸಂಕ್ರಾಂತಿ ಹಬ್ಬದ ವಿಶೇಷ. ಕಡಲೆಕಾಯಿ ಪರಿಷೆ ಶುರುವಾಗಿದ್ದು ಈ ದೇವಸ್ಥಾನದಲ್ಲಿಯೇ ಎಂಬುದು ಸೋಂಪುರದ ಹಿರಿಯರ ಅಭಿಪ್ರಾಯ. ಈ ಬಾರಿಯ ಸಂಕ್ರಾಂತಿ ಉತ್ಸವದಲ್ಲಿ ಗ್ರಾಮದ, 60 ವರ್ಷ ತುಂಬಿದ ಹಿರಿಯ ರೈತರನ್ನು ಗೌರವಿಸುವ ‘ಮಾತೃಪಿತೃ ದೇವೋಭವ’ ಎಂಬ ವಿಶಿಷ್ಟ ಕಾರ್ಯಕ್ರಮವೂ ಇದೆ. ಉತ್ಸವಕ್ಕೆ ಧರ್ಮದ ಬೇಲಿ ಇಲ್ಲದಿರುವುದು ಮತ್ತೊಂದು ವಿಶೇಷ. ಮುಸಲ್ಮಾನ ಮತ್ತು ಕ್ರೈಸ್ತ ಜನಾಂಗದ ರೈತರೂ ಉತ್ಸವದಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನೈಸ್ ಜಂಕ್ಷನ್ ಸೋಂಪುರ ಬಳಿಯ ಚನ್ನವೀರಯ್ಯನಪಾಳ್ಯದಲ್ಲಿ ನಡೆಯುವ ಈ ಜಾತ್ರೆಯು ರಾತ್ರಿ 8 ಗಂಟೆವರೆಗೆ ನಡೆಯಲಿದೆ. ಪೂಜಾ ಕುಣಿತ, ಪಟದ ಕುಣಿತ, ಡೊಳ್ಳು ಕುಣಿತ, ನಂದಿಧ್ವಜ, ಗೊರವನ ಕುಣಿತ, ವೀರಭದ್ರನ ಕುಣಿತ, ನಗಾರಿವಾದ್ಯ ಮಹಿಳೆಯರಿಂದ ವೀರಗಾಸೆ, ಕಂಸಾಳೆ, ಕರಡಿಕುಣಿತ ಸೇರಿದಂತೆ ಹಲವಾರು ಜಾನಪದ ಕಲೆಗಳ ಪ್ರದರ್ಶನವೂ ಇರುತ್ತದೆ. ಮಲ್ಲಗಂಬ ಏರುವುದು, ಗುಂಡುಕಲ್ಲು ಎತ್ತುವ ಸ್ಪರ್ಧೆ, ಮಡಕೆ ಒಡೆಯುವುದು, ಹಾಲು ಕರೆಯುವ ಮತ್ತು ರಂಗೋಲಿ ಬಿಡಿಸುವ ಸ್ಪರ್ಧೆಗಳು ನಡೆಯಲಿವೆ. ಸಂಜೆ 6ಕ್ಕೆ ನಡೆಯುವ ಹಸುಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ಜಾತ್ರೆಯ ವಿಶೇಷ ಆಕರ್ಷಣೆ.
"2018-12-14T21:59:56"
https://www.prajavani.net/news/article/2018/01/14/547312.html
 ವಿಮೆಯ ಆರೋಗ್ಯ ವಿಚಾರಿಸ್ಕೊಳ್ಳಿ ಹೊಸ ನಿಯಮ ಏನು ಬಂದಿದೆ ಗೊತ್ತಾ? | Udayavani - ಉದಯವಾಣಿ ಸರ್ಕಾರದ ಆರೋಗ್ಯ ಯೋಜನೆಗಳೆಲ್ಲವೂ ನಿರೀಕ್ಷಿತ ಫ‌ಲ ನೀಡದ ಕಾರಣ ಬಳಕೆದಾರರು ತಮ್ಮ ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ ವಿಮೆ ಪಾಲಿಸಿ ಪಡೆದು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವಿಮೆ ಕಂಪನಿಗಳು ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಮಧ್ಯವರ್ತಿಗಳು ಥರ್ಡ್‌ ಪಾರ್ಟಿ ಅಡ್ಮಿನಿಸ್ಟ್ರೇಟರ್ ಕೈಜೋಡಿಸಿ, ಪಾಲಿಸಿದಾರರಿಗೆ ಸೇವೆ ನೀಡುವ ಬದಲು ಸಂಕಷ್ಟಗಳನ್ನೇ ನೀಡುತ್ತಾ ಬಂದಿದ್ದಾರೆ. ಗ್ರಾಹಕ ವೇದಿಕೆಗಳಲ್ಲಿ ಆರೋಗ್ಯ ವಿಮೆಗೆ ಸಂಬಂಧಿಸಿದ ದೂರುಗಳನ್ನು ಗಮನಿಸಿದರೆ, ಬಳಕೆದಾರರ ಎದುರಿಸುತ್ತಿರುವ ಸಮಸ್ಯೆಗಳು ತಿಳಿಯುತ್ತದೆ. ವಿಮೆ ಪಾಲಿಸಿ ಮಾರಾಟ ಮಾಡುವಾಗ ಕಂಪನಿಗಳು ಬಳಕೆದಾರರ ಬಗ್ಗೆ ತೋರುವ ಕಾಳಜಿ ಆನಂತರ ಇರುವುದಿಲ್ಲ. ಚಿಕಿತ್ಸೆ ಪಡೆದು, ತಮ್ಮ ಕೈನಿಂದ ಹಣ ನೀಡಿ, ಅದರ ಮರುಪಾವತಿಗೆ ಅರ್ಜಿ ಸಲ್ಲಿಸಿದಾಗಲೇ ನಿಜವಾದ ಸಮಸ್ಯೆ ಗೋಚರಿಸುವುದು. ಆರೋಗ್ಯ ವಿಮೆ ಪಾಲಿಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವ ಭಾರತೀಯ ವಿಮೆ ಅಭಿವೃದ್ಧಿ ಮತ್ತು ನಿಯಂತ್ರಣ ಪಾಧಿಕಾರ ಐಆರ್‌ಡಿಎಐ ಕಳೆದ ಜುಲೈ ತಿಂಗಳಲ್ಲಿ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಇದರಲ್ಲಿ ವಿಮೆ ಉದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರೂ, ಕೆಲವೊಂದು ಅಂಶಗಳು ಬಳಕೆದಾರರಿಗೂ ಅನುಕೂಲ ತರಲಿದೆ. ಆರೋಗ್ಯ ವಿಮೆಯ ಆಧಾರದ ಮೇಲೆ ಬಳಕೆದಾರರು ಸಾಲ ಪಡೆಯಬಹುದಾಗಿದೆ. ಆರೋಗ್ಯ ಮತ್ತು ಜೀವ ವಿಮಾ ಕಂಪನಿಗಳು ಈ ರೀತಿಯ ಪಾಲಿಸಿಗಳನ್ನು ಮಾರಾಟ ಮಾಡಬಹುದಾಗಿದೆ. ಪಾಲಿಸಿಯ ವಾಯ್ದೆಯನ್ನು ಐದು ವರ್ಷಕ್ಕೆ ವಿಸ್ತರಿಸಲಾಗಿದೆ. ಪಾಲಿಸಿದಾರರು ಸಾಲ ಪಡೆದಿದ್ದು, ಅನಾರೋಗ್ಯದ ಕಾರಣ ಅದನ್ನು ತೀರಿಸಲಾಗದಿದ್ದರೆ, ವಿಮೆ ಕಂಪನಿಯು, ಪಾಲಿಸಿ ಆಧಾರದ ಮೇಲೆ ಆ ಸಾಲವನ್ನು ತೀರುಸುತ್ತದೆ. ಈ ಹಿಂದೆ ಜೀವ ವಿಮಾ ಕಂಪನಿಗಳು ಮಾತ್ರ ಈ ರೀತಿ ಪಾಲಿಸಿಗಳನ್ನು ಮಾರಾಟಮಾಡುತ್ತಿದ್ದವು. ಇನ್ನು ಮುಂದೆ ವಿಮಾ ಕಂಪನಿಗಳು ಆರೋಗ್ಯ ಪಾಲಿಸಿಗಳನ್ನು ಮಾರಾಟಮಾಡುವಂತಿಲ್ಲ. ಈಗಾಗಲೆ ಚಾಲ್ತಿಯಲ್ಲಿರುವ ಪಾಲಿಸಿಗಳನ್ನು ಅದರ ವಾಯ್ದೆ ಮುಗಿದ ಕೂಡಲೆ ನಿಲ್ಲಿಸಬೇಕಾಗುತ್ತದೆ. ಅದನ್ನು ಮತ್ತೆ ಪರಿಷ್ಕರಿಸುವಂತಿಲ್ಲ. ಜೊತೆಗೆ, ಇನ್ನು ಮೂರು ತಿಂಗಳಲ್ಲಿ ಆ ಮಾದರಿ ಪಾಲಿಸಿಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ಆರೋಗ್ಯ ವಿಮೆ ಖರೀದಿಸುವವರಿಗೆ ಇನ್ನು ಮುಂದೆ ಅನೇಕ ರಿಯಾಯಿತಿ ದೊರೆಯಲಿದೆ. ಐಆರ್‌ಟಿಎಐ ನಿಯಮದ ಪ್ರಕಾರ ಆರೋಗ್ಯ ವಿಮೆ ಕಂಪನಿಗಳು ಪಾಲಿಸಿದಾರರಿಗೆ ಹೊಸ ಪ್ರೋತ್ಸಾಹ ಯೋಜನೆಗಳನ್ನು ನೀಡಬಹುದು. ವಿಶೇಷವಾಗಿ ಯುವಜನಾಂಗಕ್ಕೆ ಪಾಲಿಸಿ ಮಾರಾಟಮಾಡುವ ಸಮಯದಲ್ಲಿ ಕಂಪನಿಗಳು ತಮ್ಮದೆ ಆದ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಬಹುದಾಗಿದೆ. ಹೊಸ ಪಾಲಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಷಯದಲ್ಲಿ ಜೀವ ವಿಮೆಅಲ್ಲದ ವಿಮಾ ಕಂಪನಿಗಳಿಗಳಿಗೆ ಕೆಲವೊಂದು ವಿನಾಯಿತಿ ಅಥವಾ ಸ್ವಾತಂತ್ರ ನೀಡಲಾಗಿದೆ. ಜೀವ ವಿಮಾ ಕಂಪನಿಗಳು ಒಂದು ವರ್ಷದಿಂದ ಐದು ವರ್ಷದವರೆಗಿನ ಪಾಲಿಸಿಗಳನ್ನು ನೀಡಬಹುದಾಗಿದೆ. ಈ ಅವಧಿಯನ್ನು ವಿಮೆ ಕಂಪನಿಗಳು ಮಾರುಕಟ್ಟೆಗೆ ಅನುಗುಣವಾಗಿ ಬದಲಾವಣೆ, ಸುಧಾರಣೆ ಮಾಡಬಹುದು. ನಿಯಮದ ಪ್ರಕಾರ ವಿಮೆ ಕಂಪನಿಗಳು ಐದು ವರ್ಷ ಅವಧಿಯ ಪಾಲಿಸಿ ಮಾರಾಟ ಮಾಡಬಹುದು. ಒಂದು ವೇಳೆ ಆ ಪಾಲಿಸಿ ಸರಿಯಿಲ್ಲವೆಂದು ತೋರಿದಲ್ಲಿ, ಐದು ವರ್ಷದ ನಂತರ ಅದನ್ನು ನಿಲ್ಲಿಸಬಹುದು ಅಥವಾ ಹಿಂದಕ್ಕೆ ಪಡೆಯಬಹುದು. ವಿಮೆ ಬಗ್ಗೆ ಕಂಪನಿಗಳು ನೀಡುವ ಮಾಹಿತಿ ವಿಷಯದಲ್ಲೂ ಕೆಲವೊಂದು ನಿಯಮ ಜಾರಿಗೆ ಬಂದಿದೆ. ಇದು ಬಳಕೆದಾರರಿಗೆ ನೇರವಾಗಿ ಉಪಯೋಗ ಆಗದಿದ್ದರೂ, ವಿಮಾ ಉದ್ಯಮದಲ್ಲಿ ಪಾರದರ್ಶಕತೆ ತರಲಿದೆ. ಆರೊಗ್ಯ ವಿಮೆ ಪಾಲಿಸಿಯ ವಿಷಯದಲ್ಲಿ ವಿಮೆ ಕಂಪನಿಗಳು ಎರಡು ರೀತಿಯ ಕ್ರಮ ಕೈಗೊಳ್ಳುತ್ತದೆ, ಒಂದು ಪಾಲಿಸಿದಾರರ ಕ್ಲೈಮ್‌ಅನ್ನು ನಿರಾಕರಿಸುವುದು. ಮತ್ತೂಂದು ಕ್ಲೈಮ್‌ಅನ್ನು ಕ್ಲೋಸ್‌ ಮಾಡುವುದು ಅಥವಾ ಮುಕ್ತಾಯಗೊಳಿಸುವುದು. ಪಾಲಿಸಿದಾರರು ಪ್ರೀಮಿಯಮ್‌ ಪಾವತಿಸದಿದ್ದಲ್ಲಿ, ಪಾಲಿಸಿ ಕೊನೆಗೊಳ್ಳುತ್ತದೆ ಅಥವಾ ಸರಿಯಾದ ದಾಖಲೆ ಇಲ್ಲದಿದ್ದಲ್ಲಿ ಪಾಲಿಸಿ ಕೊನೆಗೊಳ್ಳುತ್ತದೆ. ಪ್ರಸ್ತುತ ವಿಮೆ ಕಂಪನಿಗಳು ಇವೆರಡನ್ನೂ ಒಟ್ಟಾಗಿಸಿ, ಮಾಹಿತಿ ನೀಡುವಂತಿಲ್ಲ. ಹೊಸ ನಿಯಮದ ಪ್ರಕಾರ ಕ್ಲೈಮ್‌ಅನ್ನು ಪಾಲಿಸಿ ಮುಕ್ತಾಯವಾಗಿದೆ ಎಂದು ಪರಿಗಣಿಸುವಂತಿಲ್ಲ. ತೀವೃ ಅನಾರೋಗ್ಯ ಮತ್ತು ಅಪಘಾತ ಎರಡೂ ಒಟ್ಟಿಗೆ ಸೇರಿರುವ ವಿಮೆ ಪಾಲಿಸಿಯನ್ನು ನೀಡುವ ನಿಯಮ ಜಾರಿಗೆ ಬರಲಿದೆ. ಪಾಲಿಸದಾರರು ಯಾವುದಾದರು ಅನಾರೋಗ್ಯಕ್ಕೆ ಪಾಲಿಸಿ ಪಡೆದಿದ್ದಲ್ಲಿ, ಆ ಅನಾರೋಗ್ಯದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪಡೆಯಬಹುದು. ಅಲ್ಲದೆ ಪಾಲಿಸಿದಾರರು ಯಾವುದಾದರು ಅಪಘಾತಕ್ಕೀಡಾದಲ್ಲಿ, ಅದರ ಚಿಕಿತ್ಸೆಗೆ ತಗಲುವ ವೆಚ್ಚವನ್ನೂ ಪಡೆಯಬಹುದಾಗಿದೆ. ಒಟ್ಟಾರೆ, ಐಆರ್‌ಡಿಎಐ ಸ್ಥಾಪನೆಗೊಂಡಾಗಿನಿಂದ ಸತತವಾಗಿ ಬಳಕೆದಾರರಿಗೆ ಅನುಕೂಲವಾಗುವ ನಿ¿ನಿಯಮಗಳನ್ನು ತರುತ್ತಿದೆ. ಜೊತೆಗೆ, ವಿಮೆ ಉದ್ಯಮಕ್ಕೂ ಉತ್ತೇಜನ ನೀಡುತ್ತಿದೆ. ಗ್ರಾಹಕ ಸಂರಕ್ಷಣೆಯಲ್ಲಿ ತೊಡಗಿರುವ ಸಂಘ/ಸಂಸ್ಥೆಗಳು ವಿಮಾ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಸೇರಿಸಿಕೊಳ್ಳಬೇಕಿದೆ. ವೈ.ಜಿ.ಮುರಳೀಧರನ್‌, ಸದಸ್ಯರು: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು, ಭಾರತ ಸರ್ಕಾರ ಖಾಸಗಿ ವಿಮೆ ಕಂಪನಿ ಮೈಮೇಲ್‌ ಮಣ್ಣು ಕೆಳಗೂ ಮಣ್ಣು!
"2019-02-20T16:04:39"
https://www.udayavani.com/kannada/news/%E0%B2%90%E0%B2%B8%E0%B2%BF%E0%B2%B0%E0%B2%BF/172995/%E0%B2%B5%E0%B2%BF%E0%B2%AE%E0%B3%86%E0%B2%AF-%E0%B2%86%E0%B2%B0%E0%B3%8B%E0%B2%97%E0%B3%8D%E0%B2%AF-%E0%B2%B5%E0%B2%BF%E0%B2%9A%E0%B2%BE%E0%B2%B0%E0%B2%BF%E0%B2%B8%E0%B3%8D%E0%B2%95%E0%B3%8A%E0%B2%B3%E0%B3%8D%E0%B2%B3%E0%B2%BF-%E0%B2%B9%E0%B3%8A%E0%B2%B8-%E0%B2%A8%E0%B2%BF%E0%B2%AF%E0%B2%AE-%E0%B2%8F%E0%B2%A8%E0%B3%81-%E0%B2%AC%E0%B2%82%E0%B2%A6%E0%B2%BF%E0%B2%A6%E0%B3%86-%E0%B2%97%E0%B3%86%E0%B3%82%E0%B2%A4%E0%B3%8D%E0%B2%A4%E0%B2%BE
ಎಸ್‌.ಕೆ ಶಾಮಸುಂದರ | Areca........Areca! - Kannada Oneindia 55 min ago ಇಟಲಿ ರಕ್ತದವರು ಭಾರತ ದೇಶವನ್ನಾಳಬಾರದು: ಅನಂತ್‌ಕುಮಾರ್ ಹೆಗಡೆ 55 min ago ಮಂಗಳೂರಿನಲ್ಲಿ ಅನಾವರಣಗೊಂಡಿದೆ 'ನಮೋ ಕಿರು ಜಗತ್ತು' ಎಸ್‌.ಕೆ ಶಾಮಸುಂದರ | Published: Wednesday, September 27, 2006, 23:00 [IST] ಷೇರು ಬೆಲೆ ಥರ ಅಡಕೆ ಬೆಲೆ ಇನ್ನೂ ಏರತ್ತೆ, ಇನ್ನೂ ಜಿಗಿಯತ್ತೆ ಆಮೇಲೆ ಕೊಡೋಣ ಅಂದುಕೊಳ್ಳುತ್ತಾ ನೀವು ಕಾಯುವುದು ಬೇಡ. ಬೆಲೆ ಸಿಕ್ಕಾಗ ಮೂಟೆಗಳನ್ನು ಮಾರುಕಟ್ಟೆಗೆ ಹಾಕಿ, ಗಾಳಿ ಬಂದಾಗ ತೂರಿಕೊಳ್ಳಿ. ಮುಂದಿನ ವರ್ಷ ಮತ್ತೆ ಗೊನೆ ತೂಗುವುವವರೆಗೆ ಕಾಯೋಣಂತೆ! ಏಳು ಬೀಳಿನ ಆಟಕ್ಕೆ ಸದಾ ಗುರಿಯಾಗುವ ತೋಟದ ಬೆಳೆಗಳಲ್ಲಿ ಅಡಕೆ ಅಗ್ರಗಣ್ಯ. ಪಾಪಿಯೂ ಇವನೇ, ಪುಣ್ಯವಂತನೂ ಇವನೇ. ಅಡಕೆಯೆಂಬ ಮಾಯಗಾರನ ಬೆಲೆ ಸೆಪ್ಟೆಂಬರ್‌ 26ರ ಮಂಗಳವಾರ ಇದ್ದಕ್ಕಿದ್ದಂತೆ ಗಗನಕ್ಕೆ ಏರಿ ಬೆಳೆಯುವವನನ್ನೂ, ದಳ್ಳಾಳಿಯನ್ನೂ, ಪಾನ್‌ಪರಾಗ್‌ ಉದ್ಯಮವನ್ನೂ, ತಾಂಬೂಲ ಜಗಿಯುವವರನ್ನೂ ಏಕಕಾಲಕ್ಕೆ ಚಕಿತಗೊಳಿಸಿದೆ. ಒಮ್ಮೆ ನಗು ಮಗದೊಮ್ಮೆ ಅಳು ತರಿಸುವ ಅಡಕೆಯ ಬೆಲೆಯ ಈ ಏರಿಕೆಯಿಂದ ಕೆಲವರಾದರೂ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿದ್ದರೆ ಅಚ್ಚರಿಯಿಲ್ಲ. ನಿಮಗೇನನ್ನಿಸಿತೊ? ಅಡಕೆ, ಕಾಫಿ ಸಮಾಚಾರ ಬಿಟ್ಟು ಬಹಳ ವರ್ಷವಾಯ್ತು ಮಾರಾಯ್ರೆ, ಈಗ ನಾವೆಲ್ಲ ವೆನಿಲಾ ಜನ ಅಂತೀರಾ? ಅಡಕೆ ಕೇವಲ ಒಂದು ಬೆಳೆಯಲ್ಲ. ಅಪ್ಪ ಹಾಕಿದ ಗಿಡಗಳಿಂದ ಉದುರುವ ಕಾಂಚಾಣವೂ ಅಲ್ಲ. ಅದೊಂದು ಜೀವನ ಮಾರ್ಗ. ಸಂಪತ್ತು ಮತ್ತು ಆಪತ್ತುಗಳನ್ನು ಯಾವಾಗ ಬೇಕಾದರೂ ತಂದೊಡ್ಡಬಲ್ಲ ಸಾಧನ. ಅಡಕೆಯ ಜತೆಯೇ ಬೆಳೆದವರಾಗಿದ್ದರೆ ನೀವು ಎಲ್ಲೋ ಒಂದು ಕಡೆ ತತ್ವಜ್ಞಾನಿಗಳಾಗಿರುತ್ತೀರ ಖಂಡಿತ. ಅಡಕೆಯನ್ನು ಬೆಳೆದವರಿಗೆ ಅದರ ಸಂಕಷ್ಟಗಳ ನಿಕಟ ಪರಿಚಯ ಇರುತ್ತದೆ. ಮೊದಲು ಕೆಲಸಗಾರರು ಸಿಗುವುದಿಲ್ಲ. ಬೇಕಾಬಿಟ್ಟಿ ಕೂಲಿ ಕೊಟ್ಟರೂ ಈ ಕಾಲದ ಕೆಲಸಗಾರರು ಮಾಡುವ ಕೆಲಸವೂ ಬೇಕಾಬಿಟ್ಟಿ. ಕೆಲಸ-ಸಂಬಳ-ಯಜಮಾನ ಯಾರಿಗೂ ಗೌರವ ಕೊಡದ ಈ ಕಾಲದಲ್ಲಿ ಕೆಲಸಗಾರರನ್ನು ನಂಬಿ ತೋಟ ಸಿಂಗಾರ ಮಾಡುವುದು ತುಂಬಾ ಕಷ್ಟ. ಕೆಲಸಗಾರರಷ್ಟೇ ಅಲ್ಲ, ಮನೆಯಲ್ಲೂ ಕೂಡ ಯಾರಿಗೂ ತೋಟದ ಉಸಾಬರಿ ಬೇಡ. ಅಣ್ಣ ತಮ್ಮಂದಿರು ಉನ್ನತ ವ್ಯಾಸಂಗ ಮಾಡಿ ಊರು ಬಿಡುತ್ತಾರೆ. ಕೆಲವರು ದೇಶವನ್ನೇ ತೊರೆಯುತ್ತಾರೆ. ಆದರೆ, ಮನೆಯಲ್ಲೇ ಮಾರು ಕಂಡುಕೊಳ್ಳಲು ತೀರ್ಮಾನಿಸಿದ ಶೀನನಿಗೆ ಮಾತ್ರ ಬದುಕು ಗೋಜಲಾಗಿರುತ್ತದೆ. ಅಡಕೆ ಮಾರಿ ದುಡ್ಡು ಬಂದಾಗ ಹೆಣ್ಣು ಮಕ್ಕಳಿಗೆ ಚಿನ್ನ, ಗಂಡು ಮಕ್ಕಳಿಗೆ ಹೊಸ ಜೀಪು, ತಂದೆಗೆ ಸಮಾಧಾನ ಮಾಡುವುದಕ್ಕಾಗಿ ರುದ್ರ ಹೋಮ ಮಾಡುವುದರ ಮೂಲಕ ಎಲ್ಲರನ್ನೂ ಸಂತುಷ್ಟಗೊಳಿಸಬೇಕು. ಎಸ್‌ಎಸ್‌ಎಲ್‌ಸಿ ಆದ ನಂತರ ಮನೆಯಲ್ಲೇ ಉಳಿದುಕೊಂಡು ಕಳ್ಳಕಾಕರ ಮಧ್ಯೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಶೀನನ ಹೆಣ ಮಾತ್ರ ಆಗಾಗ ಬಿದ್ದು ಹೋಗುತ್ತಿರುತ್ತದೆ. ಖರ್ಜೂರದ ಗಿಡಗಳನ್ನು ಮಾತ್ರ ಒಡಲಲ್ಲಿ ತುಂಬಿಕೊಡ ಒಮಾನ್‌ ದೇಶದಲ್ಲಿ ಒಂದು ಗಾದೆ ಮಾತಿದೆ. ‘ಆತನೆತ್ತರವೋ ಖರ್ಜೂರದ ಗಿಡದಷ್ಟು, ಬುದ್ದಿ ಮಾತ್ರ ಅದರ ಬೀಜದಷ್ಟು’ : ಈ ಮಾತು ಕರ್ನಾಟಕದಲ್ಲಿ ಅಡಕೆ ಬೆಳೆಯುವವರಿಗೂ ಅನ್ವಯಿಸತ್ತೆ. ಬುದ್ಧಿವಂತರಾದರೆ ಬೆಳೆಗಾರರು ಬದುಕುತ್ತಾರೆ. ಬುದ್ದಿವಂತರು ಬಹಳಿಲ್ಲ. ಬೆಲೆ ಏರಿದಾಗ ಅಡಕೆ ಮಾರಿ ಆಪತ್ತಿನ ಕಾಲಕ್ಕೆ ದುಡ್ಡು ಕೂಡಿಟ್ಟವನೇ ಜಾಣ. ನಾಳೆ ಹೇಗೋ ಏನೋ ಎನ್ನುವ ಭಯ ಇಲ್ಲದಿದ್ದರೆ ಹೋಗುವುದು ಅಡಕೆಯ ಮಾನವಲ್ಲ, ಮನೆತನದ ಮರ್ಯಾದೆ! ಶಿವಮೊಗ್ಗದ ಮಾರುಕಟ್ಟೆಯಲ್ಲಿ ನಿನ್ನೆ ಅಡಕೆಯ ಬೆಲೆ 25.000 ರೂ. ತಲುಪಿತ್ತು. ಇದೊಂದು ಐತಿಹಾಸಿಕ ಬೆಲೆ ಎನ್ನುತ್ತಾರೆ ಬೆಳೆಗಾರರು ಮತ್ತು ದಳ್ಳಾಳಿಗಳು. ಆದರೆ ಬೆಟ್ಟೆ ಅಡಕೆ ಬೆಲೆ 19.500 ರೂ.ಗೆ ನಿಂತರೆ ಆಪಿ ಅಡಕೆ ಧಾರಣೆ 20.000 ರೂ. ದಾಟಿತ್ತು. ಶಿರಸಿ ಮಾರುಕಟ್ಟೆಯಲ್ಲಿ ಜಾಲಿ ಅಡಕೆಯ ಬೆಲೆಯೂ ದಿಢೀರ್‌ ಏರಿದ್ದರಿಂದ ಅಡಕೆ ಸಂಸ್ಕೃತಿಯಲ್ಲಿ ಜೀವಿಸುವವರೆಲ್ಲ ಚಕಿತರಾಗಿದ್ದಾರೆ. ಬೆಂಗಳೂರಿನಲ್ಲಿ ಸುಮ್ಮನೆ ಟೈಂ ವೇಸ್ಟ್‌ ಮಾಡಿಕೊಂಡಿದ್ದ ಸೂರ್ಯನಾರಾಯಣ ಐತಾಳರು ಬೆಲೆ ಏರಿಕೆ ಸುದ್ದಿ ಕೇಳಿದಾಕ್ಷಣ ತೀರ್ಥಹಳ್ಳಿಗೆ ಅರ್ಜೆಂಟಾಗಿ ವಾಪಸ್ಸು ಹೋಗಿದ್ದಾರೆ, ನಿನ್ನೆ ರಾತ್ರಿ. ಷೇರು ಬೆಲೆ ಥರ ಅಡಕೆ ಬೆಲೆ ಇನ್ನೂ ಏರತ್ತೆ , ಇನ್ನೂ ಜಿಗಿಯತ್ತೆ ಆಮೇಲೆ ಕೊಡೋಣ ಅಂದುಕೊಳ್ಳುತ್ತಾ ನೀವು ಕಾಯುವುದು ಬೇಡ. ಬೆಲೆ ಸಿಕ್ಕಾಗ ಮೂಟೆಗಳನ್ನು ಮಾರುಕಟ್ಟೆಗೆ ಹಾಕಿ, ಗಾಳಿ ಬಂದಾಗ ತೂರಿಕೊಳ್ಳಿ. ಮುಂದಿನ ವರ್ಷ ಮತ್ತೆ ಗೊನೆ ತೂಗುವುವವರೆಗೆ ಕಾಯೋಣಂತೆ ! ಅಡಕೆ ದರದಲ್ಲಿ ಭಾರೀ ಹೆಚ್ಚಳ : ಮಲೆನಾಡಿನಲ್ಲಿ ಸಂತಸ Story first published: Wednesday, September 27, 2006, 23:00 [IST]
"2019-02-23T14:19:45"
https://kannada.oneindia.com/column/sham/2006/270906areca.html
ಸೋಮನ ಕುಣಿತವು ಶಕ್ತಿ ಸಂಪ್ರದಾಯಕ್ಕೆ ಸೇರಿದ ಬಹು ರಂಜನೀಯವಾದ ಮುಖವಾಡದ ಕುಣಿತ. ಸಾಮಾನ್ಯವಾಗಿ ಸೋಮನ ಮುಖವಾಡಗಳನ್ನು ದೇವ ಬೂತಾಳೆ ಇಲ್ಲವೆ ರಕ್ತ ಬೂತಾಳೆ ಮರದಿಂದ ತಯಾರಿಸುತ್ತಾರೆ. ಹೀಗೆ ತಯಾರಿಸುವಾಗ ನಿರ್ದಿಷ್ಟ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ. ಅಗಲವಾದ ಹಣೆ, ವಿಶಾಲವಾದ ಕಿವಿ ಕಣ್ಣುಗಳು, ದೊಡ್ಡ ಮೂಗು ಇರುವಂತೆ ಮುಖವಾಡವನ್ನು ಕೆತ್ತಿ ನಯಗೊಳಿಸುತ್ತಾರೆ. ಮನುಷ್ಯನ ತಲೆಬುರುಡೆಗಿಂತ ಸಾಕಷ್ಟು ದೊಡ್ಡದಿರುವ ಮುಖವಾಡದ ಹಿಂಭಾಗಕ್ಕೆ ಬಿದಿರಿನ ಬೆತ್ತವನ್ನು ಕಮಾನಿನ ಆಕೃತಿಯಲ್ಲಿ ಬಗ್ಗಿಸಿ `ಬಂಗ'ವನ್ನು ರಚಿಸುತ್ತಾರೆ. ಪ್ರಭಾವಳಿಯಂತೆ ಕಾಣಲು ಬಣ್ಣಬಣ್ಣದ ಬಟ್ಟೆಗಳಿಂದ ಅಲಂಕರಿಸುತ್ತಾರೆ. ಗ್ರಾಮದೇವತೆಗೆ ಹರಕೆಯಾಗಿ ಬಂದ ವಿವಿಧ ಬಣ್ಣಗಳ ಸೀರೆಗಳನ್ನು ಕಮಾನಿನ ಆಕೃತಿಯ ಪ್ರಭಾವಳಿಯಂತಿರುವ ಬಂಗದಿಂದ ಕೆಳಕ್ಕೆ ಇಳಿಬಿಡುತ್ತಾರೆ. ಸೋಮನ ಮುಖವಾಡದೊಳಗೆ ತಲೆಯನ್ನು ತೂರಿಸಿ ಹೊತ್ತು ಕುಣಿಯುವ ಕಲಾವಿದನಿಗೆ ಹೊರಗಿನ ಪರಿಸರ ಕಾಣಲು ಅನುಕೂಲವಾಗುವಂತೆ ಮುಖವಾಡದ ಮೂಗಿನ ಹೊಳ್ಳೆಗಳಿಗೂ ಹೊತ್ತು ಕುಣಿಯುವ ಕಲಾವಿದನ ಕಣ್ಣಿಗೂ ನೇರ ಹೊಂದಿಕೆಯಾಗುವಂಥ ದೃಷ್ಟಿಗೋಚರ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಮುಖವಾಡದ ರೂಪಗಳು ಭಯ-ಭಕ್ತಿಗಳ ಪ್ರತೀಕವಾಗಿರುವಂತೆ ಕೆಂಪು, ಹಳದಿ, ಕಪ್ಪು ಬಣ್ಣಗಳನ್ನು ಬಳಿಯುತ್ತಾರೆ. ಸೋಮಗಳನ್ನು ಗ್ರಾಮದೇವತೆಯ ಬಂಟರು, ಅಂಗರಕ್ಷಕರು ಎಂದು ಗ್ರಾಮೀಣ ಜನ ಸಮುದಾಯ ನಂಬಿದೆ. ಸಾಮಾನ್ಯವಾಗಿ ಒಂದು ಊರಿನ ಗ್ರಾಮದೇವತೆಗೆ ಎರಡು ಸೋಮಗಳಿರುತ್ತವೆ. ಒಂದು ಹಳದಿ ಸೋಮನಾದರೆ, ಮತ್ತೊಂದು ಕೆಂಪು ಸೋಮ. ಹಳದಿ ಬಣ್ಣದ ಸೋಮನನ್ನು ಕೆಂಚರಾಯ ಇಲ್ಲವೆ ಈರಣ್ಣನೆಂದು, ಕೆಂಪು ಸೋಮನನ್ನು ಭೂತರಾಯನೆಂದು ಕರೆಯುತ್ತಾರೆ. ಅಪರೂಪಕ್ಕೆ ಕಪ್ಪು ಬಣ್ಣದ ಸೋಮನೂ ಇರುವುದುಂಟು. ಸೋಮಗಳ ಬಣ್ಣಗಳೇ ಅವುಗಳ ಸ್ವರೂಪವನ್ನು ತಿಳಿಸಿಕೊಡುತ್ತವೆ. ಕೆಂಚರಾಯ ಸಾತ್ವಿಕ ಮೂರ್ತಿ. ಹಣೆಗೆ ನಾಮ ಇಲ್ಲವೆ ವಿಭೂತಿಯಷ್ಟೇ ಆತನ ತೊಡಿಗೆ. ಆದರೆ ಭೂತರಾಯ ರೌದ್ರ ಮೂರ್ತಿ. ಹಣೆಗೆ ನಾಮ, ಕೋರೆಹಲ್ಲು, ಉದ್ದನೆಯ ಕೊಂಕುಮೀಸೆ, ದಪ್ಪ ಕಣ್ಣು ಹಾಗೂ ಹುಬ್ಬುಗಳಿದ್ದು, ಗಲ್ಲದ ಮೇಲೆ ಚಿಕ್ಕ ಚುಕ್ಕಿ ಚಿತ್ತಾರಗಳಿರುತ್ತವೆ. ಸೋಮಗಳನ್ನು ಹೊತ್ತು ಕುಣಿಯುವವರು ಸೊಂಟಕ್ಕೆ ಹರಕೆಯ ಸೀರೆಯುಟ್ಟು, ನೆತ್ತಿಗೂ ಹರಕೆಯ ಸೀರೆಯನ್ನೇ ಸಿಂಬಿ ಸುತ್ತಿಕೊಳ್ಳುತ್ತಾರೆ. ಕೊರಳಿಗೆ ದೇವರ ತಾಳಿ ಧರಿಸಿರುತ್ತಾರೆ. ಪ್ರಭಾವಳಿಗೆ ಇಳಿಬಿಟ್ಟ ವಿವಿಧ ಬಣ್ಣದ ಸೀರೆಗಳು ಸೋಮನನ್ನು ಹೊತ್ತವನ ಕಾಲುಗಳವರೆಗೆ ಎರಡೂ ಭುಜಗಳ ಒಕ್ಕಳಲ್ಲಿ ಇಳಿಬಿದ್ದಿರುತ್ತವೆ. ಕಾಲಿಗೆ ಗೆಜ್ಜೆ, ಕೈಗಳಿಗೆ ಬೆಳ್ಳಿ ಕಡಗ, ಒಂದು ಕೈಯಲ್ಲಿ ಬೆಳ್ಳಿ ಕಟ್ಟಿನ ನೀಳವಾದ ಬೆತ್ತವನ್ನು ಹಿಡಿದು ಕುಣಿಯುತ್ತಾರೆ. ಹರೆ, ದೋಣು, ತಮಟೆ, ನಗಾರಿ, ಮುಖವೀಣೆಗಳ ಗತ್ತು ಹಾಗೂ ಹೊಗಳಿಕೆ ಪದಗಳ ಹಿನ್ನೆಲೆಯಲ್ಲಿ ಹಳದಿ-ಕೆಂಪು ಸೋಮಗಳು ಗೆಜ್ಜೆ ಹಾಕುತ್ತಾ ಅಭಿನಯಪೂರ್ವಕವಾಗಿ ಕುಣಿಯಲಾರಂಭಿಸುತ್ತವೆ. ಸೋಮನ ಕುಣಿತದ ಶೈಲಿಯೇ ವಿಶಿಷ್ಟವಾದುದು. ಮುಖವಾಡಗಳ ನೋಟವು ರುದ್ರ ಗಂಭೀರ. ಪದಗತಿಗೆ ಅನುಗುಣವಾಗಿ ಕುಣಿಯುವ ಕುಣಿತವಂತೂ ಅತ್ಯಂತ ಆಕರ್ಷಕ. ಸೋಮನ ಕುಣಿತವು ಮಂಡ್ಯ, ತುಮಕೂರು, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಮೀಡಿಯಾ ಮೇನಿಯಾ:’ರಾಜಿನಾಮೆ ಬೇಡ. ಒಬ್ಬ ಮನುಷ್ಯನಿಗೆ ಎಲ್ಲವೂ ಬೇಕು...ಬ್ಲೂ ಫಿಲಂ ನೋಡಿದರೇನಂತೆ? ಟಿವಿಯಲ್ಲಿ ಸ್ವಾಮಿಗಳ ’ಜಂಬೋಕುಸ್ತಿ’ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟಗಳಿಂದ ಕನ್ನಡದ ನ್ಯೂಸ್ ಚಾನಲ್ಲುಗಳಿಗೆ ಸುದ್ದಿಗಳ ಕೊರತೆಯಾಗಿಲ್ಲ. ಸದನದಲ್ಲಿ ಬ್ಲೂ ಚಿತ್ರ ನೋಡಿ ಭಾರತೀಯ ಜನತಾ ಪಕ್ಷದ ಸರ್ಕಾರದ ಸಚಿವ ಸಂಪುಟದಲ್ಲಿ ರಾರಾಜಿಸುತ್ತಿದ್ದ ಅಳಿದುಳಿದ ಮುತ್ತುರತ್ನಗಳಂತಿದ್ದ ಯಡಿಯೂರಪ್ಪನವರ ಶಿಷ್ಯರಾದಂತ ಮೂರು ರತ್ನಗಳು ರಾಜೀನಾಮೆ ನೀಡಿ ಹೊರಬಂದಿವೆ. ಈ ಮೂರೂ ಸಚಿವರ ರಾಜಿನಾಮೆ ಸಲ್ಲಿಕೆಯಾದ ನಂತರ ’ತಮ್ಮ’ ಜನರ ಸಚಿವರುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಚಿಂತಾಕ್ರಾಂತರಾಗಿದ್ದ ಆ ಜನಾಂಗದ ಕೆಲವು ಸ್ವಾಮೀಜಿಗಳನ್ನೂ, ಅವರ ವಿರೋಧಿಗಳನ್ನೂ ’ಜಂಬೋ ಕುಸ್ತಿ’ ಕಾರ್ಯಕ್ರಮಕ್ಕೆ ಮಾತಿನ ಕುಸ್ತಿಗಾಗಿ ಆಹ್ವಾನಿಸಲಾಯಿತು. ರಾಜಕಾರಣಿಗಳು ಟಿವಿ ಕಾರ್ಯಕ್ರಮಗಳಿಗೆ ಬರುವಾಗ ಗರಿಗರಿ ಇಸ್ತ್ರಿಯಾದ ಖಾದಿ ಬಟ್ಟೆ ತೊಟ್ಟು ಬರುವಂತೆ ಈ ಸ್ವಾಮಿಗಳೂ ಖಾವಿ ಬಣ್ಣದ ಮಿರಮಿರ ರೇಶ್ಮೆ ವಸ್ತ್ರ ತೊಟ್ಟು ಬಂದಿದ್ದರು. ಒಬ್ಬರ ತಲೆ ನುಣ್ಣಗೆ ಬೋಳಾಗಿದ್ದು ಸ್ಟುಡಿಯೋ ಲೈಟಿನ ಬೆಳಕು ಅವರ ತಲೆ ಮೇಲೆ ಬಿದ್ದು ಅದು ರಿಫ್ಲೆಕ್ಟರ್ ಥರ ಹೊಳೆಯತೊಡಗಿತ್ತು. ಮತ್ತೊಬ್ಬ ಸ್ವಾಮಿಗಳು ತಮ್ಮ ಕಮಂಡಲವನ್ನು ಬಿಡದೆ ಇರುತ್ತಿದ್ದು ತಮ್ಮ ಜತೆಗೆ ತಂದದ್ದರಿಂದ ಅದನ್ನು ತಮ್ಮ ಸೀಟಿನ ಮುಂದೆಯೇ ಇರಿಸಿಕೊಂಡು ಪ್ರತಿಷ್ಠಾಪಿತರಾದರು. ಮತ್ತೊಬ್ಬ ಸ್ವಾಮಿ ಕೈಲಿದ್ದ ರುದ್ರಾಕ್ಷಿ ಮಾಲೆಯ ಮಣಿಗಳನ್ನು ಬೆರಳುಗಳಲ್ಲಿ ಎಣಿಸುತ್ತಲೇ ತಮ್ಮ ಖುರ್ಚಿಯಲ್ಲಿ ವಿರಾಜಮಾನರಾಗಿದ್ದರು. ಇತ್ತೀಚಿನ ಸರ್ಕಾರದಿಂದ ಕಿಂಚಿತ್ತೂ ಹಣ ಸಹಾಯವಾಗದೇ ಅಸಮಾಧಾನಗೊಂಡಿದ್ದ ಒಂದು ಮಠದ ಗಡ್ಡಧಾರೀ ಕ್ರಾಂತಿಕಾರಿ ಸ್ವಾಮಿಗಳೂ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಇವರ ಜೊತೆಯಲ್ಲಿ ಈ ಎಲ್ಲ ಸ್ವಾಮೀಜಿಗಳ ಬೆಂಬಲಿಗರೂ ಸಾಕಷ್ಟು ಸಂಖ್ಯೆಯಲ್ಲಿ ಸ್ಟುಡಿಯೋದಲ್ಲಿ ಸೇರಿದ್ದರು. ಕ್ರಾಂತಿಕಾರಿ ಸ್ವಾಮಿಗಳೂ ಬಂದು ಅವರನ್ನು ಬೆಂಬಲಿಸುವ ಸುಮಾರು ಕ್ರಾಂತಿಕಾರಿ ಯುವಕರೂ ಬರುವುದರಿಂದ ಅವರಲ್ಲಿ ನಮಗೆ ’ವಾಂಟೆಡ್’ ಆಗಿರುವ ಕೆಲ ಕ್ರಾಂತಿಕಾರಿಗಳಾದರೂ ಸಿಗಬಹುದೆಂಬ ಆಸೆಗಣ್ಣಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಮಫ್ತಿಯಲ್ಲಿದ್ದ ಪೋಲೀಸರೂ ಈ ಕಾರ್ಯಕ್ರಮಕ್ಕೆ ಬಂದಿದ್ದರೆಂಬುದನ್ನೂ ತಿಳಿಸುತ್ತಾ ಕಾರ್ಯಕ್ರಮದ ವರದಿಯನ್ನು ನಿಮಗೆ ನೀಡುತ್ತಿದ್ದೇವೆ...ಭಕ್ತಿ ಪರವಶರರಾಗಿ ಓದುವವರಾಗಿ... ಕಾರ್ಯಕ್ರಮವನ್ನು ಆರಂಭಿಸಿದ ಫೇಮಸ್ ನಿರೂಪಕ ಪುಂಗಿರಂಗರು ’ಪ್ರಿಯ ವೀಕ್ಷಕರೇ ನಮ್ಮ ಇಂದಿನ ಕಾರ್ಯಕ್ರಮ ಬಹಳ ವಿಶಿಷ್ಟವಾದುದು. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಡಿನ ಅನೇಕ ಮಠಗಳ ಸ್ವಾಮಿಗಳು ಇಂದು ನಮ್ಮೊಂದಿಗಿದ್ದಾರೆ. ಅಲ್ಲದೆ ಕೆಲವು ಹೊಸಯೋಚನೆಯ ವಿಚಾರವಾದಿಗಳೂ, ಕ್ರಾಂತಿಕಾರಿ ಸ್ವಾಮಿಗಳೆಂದು ಕರೆಸಿಕೊಂಡಿರುವವರೂ ಸಹ ಬಂದಿದ್ದಾರೆ. ನಮ್ಮ ಇಂದಿನ ಕಾರ್ಯಕ್ರಮದ ವಿಚಾರ ಅಶ್ಲೀಲ ಚಲನಚಿತ್ರಕ್ಕೆ ಸಂಬಂಧಿಸಿದ್ದು...ನಮ್ಮ ಮೂರು ಜನ ಸಚಿವರು ಅಶ್ಲೀಲ ಸಿನಿಮಾವನ್ನು ನೋಡಿ, ಪರಿಣಾಮವಾಗಿ ಈಗಾಗಲೇ ರಾಜಿನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ...ಇದರ ಬಗ್ಗೆ ಮೊಟ್ಟಮೊದಲು ನಮ್ಮ ಬೋಳುಮಠದ ಸ್ವಾಮಿಗಳು ಏನು ಹೇಳುತ್ತಾರೆಂಬುದನ್ನು ಕೇಳೋಣ ಬನ್ನಿ’ ಎಂದವರೇ ಮಿರಮಿರನೆ ಮಿಂಚುತ್ತಿದ್ದ ಬೋಳುತಲೆಯ ಬೋಳುವಾರ್ತ ಸ್ವಾಮಿಗಳತ್ತ ತಿರುಗಿದರು. ಬೋಳುಮಠದ ಹೆಸರನ್ನು ಮೊದಲು ಹೇಳಿದ್ದರಿಂದ ಸಂಪ್ರೀತರಾದ ಬೋಳುವಾರ್ತ ಸ್ವಾಮಿಗಳು ತಮ್ಮ ಬೋಳುತಲೆಯನ್ನೊಮ್ಮೆ ಎಡಗೈನಿಂದ ಒಂದೆರಡು ಬಾರಿ ಆಪ್ತವಾಗಿ ಸವರಿಕೊಂಡವರೇ ’ಓಂ’ ಎಂದು ಇಷ್ಟದೇವರನ್ನು ಧ್ಯಾನಿಸಿ ನೆರೆದಿದ್ದ ಪ್ರೇಕ್ಷಕರತ್ತ ನೋಡಿ, ತಮ್ಮ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬಂದಿರುವುದನ್ನು ಖಾತರಿಪಡಿಸಿಕೊಂಡು ಖುಶಿಯಾಗಿ ’ನೋಡಿ, ನಾವು ಸ್ವಾಮಿಗಳು. ನಾವು ಅಶ್ಲೀಲ ಚಿತ್ರಗಳ ಬಗ್ಗೆ ಬಹಿರಂಗವಾಗಿ ಮಾತನಾಡುವಂತಿಲ್ಲ. ಅದು ನಮಗೆ ನಿಶಿದ್ಧ. ಅದರೂ ನಾವು ಹೇಳುವುದೆಂದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಎಲ್ಲವೂ ಬೇಕು. ಅಶ್ಲೀಲ ಸಿನಿಮಾ ನೋಡಿದ ಒಂದಿಬ್ಬರು ಸಚಿವರು ನಮ್ಮ ಮಠದ ಭಕ್ತರೇ. ಅವರನ್ನು ನಾವು ಹತ್ತಿರದಿಂದ ಕಂಡಿದ್ದೇವೆ. ಅವರು ಮಾಡಿರುವುದರಲ್ಲಿ ನಮಗೆ ಮಹಾಪರಾಧ ಕಾಣಿಸುತ್ತಿಲ್ಲ. ಈ ಕಾರಣವಾಗಿ ಅವರಿಂದ ರಾಜಿನಾಮೆ ಪಡೆದಿದ್ದು ತಪ್ಪು. ತಿದ್ದಿಕೊಳ್ಳಲು ಅವರಿಗೆ ಒಂದು ಅವಕಾಶ ಕೊಡಬೇಕಾಗಿತ್ತು. ಆದ್ದರಿಂದ ಮುಖ್ಯಮಂತ್ರಿಗಳು ಈ ಕೂಡಲೇ ಅವರ ರಾಜಿನಾಮೆಯನ್ನು ತಿರಸ್ಕರಿಸಿ ಅವರನ್ನು ಮತ್ತೆ ಮಂತ್ರಿಗಳನ್ನಾಗಿ ಮುಂದುವರೆಸಬೇಕೆಂದು ನಾವು ಆಗ್ರಹಿಸುತ್ತೇವೆ...ಅವರು ನಮ್ಮ ಜನಾಂಗದವರು, ನಮ್ಮ ಭಕ್ತರು. ಮಂತ್ರಿಮಂಡಲದಲ್ಲಿ ನಮ್ಮವರ ಸಂಖ್ಯೆ ಕಡಿಮೆಯಾಗಿರುವುದರಿಂದ ನಮ್ಮ ಮಠಗಳಿಗೆ ಹಣ ಕೊಡುವವರಾದರೂ ಯಾರು? ನಮ್ಮವರನ್ನು ಪೋಷಿಸುವವರು ಯಾರು? ಇಂಥವರಿಲ್ಲದಿದ್ದರೆ ನಮ್ಮ ಮಠಗಳು ಹೇಗೆ ಇರುತ್ತವೆ? ನಾವೂ ಪ್ರಜೆಗಳಲ್ಲವೇ? ಆ ಆತಂಕದಿಂದ ನಾವು ಈ ಮಾತುಗಳನ್ನು ಹೇಳುತ್ತಿದ್ದೇವೆ’ ಎಂದವರೇ ಮತ್ತೊಮ್ಮೆ ತಮ್ಮ ಬೋಳುತಲೆಯನ್ನೊಮ್ಮೆ ಸವರಿಕೊಂಡು ಹೇಗೆ ಮಾತನಾಡಿದೆನೆಂಬಂತೆ ತನ್ನ ಭಕ್ತರನ್ನು ನೋಡಿದರು. ’ಅವರ ಜನದವರೇ’ ಆದ ಮತ್ತಿಬ್ಬರು ಸ್ವಾಮಿಗಳು ಅವರ ಮಾತಿಗೆ ತಲೆದೂಗಿದರು. ’ಓಕೆ, ವೆರಿ ನೈಸ್, ವೆರಿ ನೈಸ್...ಸೋ...ನೀವು ಬಹಳ ಓಪನ್ ಆಗಿ ಅವರ ರಾಜಿನಾಮೆಯನ್ನು ವಿರೋಧಿಸುತ್ತೀರಾ’ ಎಂದ ನಿರೂಪಕ ಪುಂಗಿರಂಗರು, ಕ್ರಾಂತಿಕಾರಿ ಸ್ವಾಮಿಯತ್ತ ತಿರುಗಿದವರೇ ’ಏನು ಸ್ವಾಮಿಗಳೇ, ಬೋಳುಮಠದ ಸ್ವಾಮಿಗಳು ಬ್ಲೂ ಫಿಲ್ಮ್ ನೋಡಿದ ಸಚಿವರನ್ನು ಸಮರ್ಥಿಸಿಕೊಂಡರಲ್ಲಾ ನೀವೇನು ಹೇಳ್ತೀರಿ’ ಅಂದರು. ಕ್ರಾಂತಿಕಾರಿ ಸ್ವಾಮಿಗಳು ತಮ್ಮ ಗಡ್ಡವನ್ನು ನೀಟಾಗಿ ಸವರಿದವರೇ ತಮ್ಮ ಬೆಂಕಿಯುಗುಳುವಂತಿದ್ದ ಕಣ್ಣುಗಳಿಂದ ಬೋಳುಮಠದ ಸ್ವಾಮಿಗಳನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಅವರ ದಿಟ್ಟಿಸುವಿಕೆ ಕಂಡು ಬೆವರಿದ ಬೋಳುಮಠದ ಸ್ವಾಮಿ ಈತನನ್ನು ಯಾಕಪ್ಪಾ ಇಲ್ಲಿ ಕರೆಸಿದ್ದು...ಈತ ನಮ್ಮನ್ನೆಲ್ಲಾ ಬಾಯಿಗೆ ಬಂದಂತೆ ಬೈಯ್ಯುವುದು ಗ್ಯಾರಂಟಿ ಎಂದುಕೊಂಡು ಕ್ರಾಂತಿಕಾರಿ ಸ್ವಾಮಿಯ ದೃಷ್ಟಿಯನ್ನೆದುರಿಸಲಾಗದೆ ಬೇರೆಲ್ಲೋ ನೋಡಿದರು. ಇದರಿಂದ ಹುರಿಗೊಂಡ ಕ್ರಾಂತಿಕಾರಿ ಸ್ವಾಮಿ ’ನೋಡಿ ಪುಂಗಿರಂಗರೇ, ಇವತ್ತು ಈ ದೇಶ ಈ ಸ್ಥಿತಿಗೆ ಬರಲು ಇಂತಹ ಸ್ವಾಮೀಜಿಗಳೇ ಕಾರಣ’ ಎಂದು ನೇರವಾಗಿ ಬೋಳುವಾರ್ತ ಸ್ವಾಮಿಯನ್ನೇ ಟಾರ್ಗೆಟ್ ಮಾಡಿಕೊಂಡರು. ’ಇವರು ಅಶ್ಲೀಲ ಚಲನಚಿತ್ರಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲವಂತೆ! ಅಂದರೆ ಇವರು ಆಂತರಿಕವಾಗಿ ಅದರ ಬಗ್ಗೆ ಚಿಂತಿಸುತ್ತಾರೆಂದ ಹಾಗಾಯ್ತು!! ಆ ಸಚಿವರು ಬ್ಲೂ ಫಿಲ್ಮ್ ನೋಡಿರುವುದು ಪ್ರಜಾಪ್ರಭುತ್ವದ ದೇಗುಲದಂತಿರುವ ವಿಧಾನಸೌದದಲ್ಲಿ. ಅವರನ್ನು ಮೊದಲು ಬಂಧಿಸಿ ಜೈಲಿಗಟ್ಟಬೇಕಿತ್ತು. ಯಾವುದೋ ಸಿನಿಮಾಹಾಲಿನಲ್ಲಿ ಬ್ಲೂ ಫಿಲಂ ನೋಡಿದರೆ ನೋಡಿದವರನ್ನೆಲ್ಲಾ ಜೈಲಿಗೆ ಹಾಕುತ್ತಾರಲ್ಲವೇ? ಹಾಗೇ...ಮೊದಲು ಈ ಮಂತ್ರಿಗಳನ್ನು ಜೈಲಿಗೆ ಕಳಿಸಬೇಕಿತ್ತು. ಅದುಬಿಟ್ಟು ಜನಾಂಗದವರು ಅಂತ ಅವರನ್ನು ಸಮರ್ಥಿಸಿಕೊಳ್ಳುತ್ತಾರಲ್ಲಾ ಇವರಿಗೆ ಮರ್ಯಾದೆ ಏನಾದ್ರೂ ಇದೆಯಾ’ ಎಂದು ಉಗ್ರರಾಗಿ ತಮ್ಮ ಮಾತನ್ನು ಮುಂದುವರೆಸುತ್ತಿರುವಂತೆಯೇ... ಕಮಂಡಲವನ್ನು ಹಿಡಿದಿದ್ದ ಕಮಂಡಲೀಸ್ವಾಮಿ ತೀವ್ರ ಆಕ್ಷೇಪಣೆಯಿಂದ ’ಏನು ನೀವು ಹೇಳೋದು? ನಮ್ಮ ಜನಾಂಗದವರನ್ನೆಲ್ಲಾ ಒಂದಲ್ಲ ಒಂದು ಕಾರಣಕ್ಕೆ ಜೈಲಿಗೆ ಕಳಿಸಿಬಿಟ್ಟರೆ ನಮ್ಮ ಕಷ್ಟ ಸುಖ ಕೇಳುವವರ್ಯಾರು? ಈಗಾಗಲೇ ನಮ್ಮ ಮುಖ್ಯಮಂತ್ರಿಗಳೂ ಜೈಲಿಗೆ ಹೋಗಿ ಬಂದಿದ್ದಾರೆ. ನಾವು ಅವರನ್ನು ನೋಡಲು ಜೈಲಿಗೆ ಹೋಗಿದ್ದಾಗ ಗಳಗಳನೇ ಅತ್ತುಬಿಟ್ಟರು ಗೊತ್ತಾ! ಮುಖ್ಯಮಂತ್ರಿಗಳು ಅಳುವುದು ಅಂದ್ರೆ ಸಾಮಾನ್ಯವಾ? ನಮಗೆ ತುಂಬಾ ದುಖಃವಾಯಿತು...ಇದೆಲ್ಲಾ ನಮ್ಮನ್ನು ದುರ್ಬಲ ಮಾಡಿಬಿಡುವ ಪ್ರಯತ್ನ’ ಎಂದು ಕಣ್ಣೊರೆಸಿಕೊಂಡು ಕೂತರು. ಕ್ರಾಂತಿಕಾರಿ ಸ್ವಾಮಿಗಳು ಮಾತಾಡುವಾಗ ಅದನ್ನು ಅರ್ಧಕ್ಕೇ ಕತ್ತರಿಸಿದ್ದರಿಂದ ಸಿಟ್ಟಾದ, ಕಾರ್ಯಕ್ರಮದ ಹಾಲಿನಲ್ಲಿದ್ದ ಕ್ರಾಂತಿಕಾರಿ ಸ್ವಾಮಿಯ ಬೆಂಬಲಿಗರು ಒಟ್ಟಿಗೇ ಎದ್ದು ನಿಂತವರೇ ’ಯೋ, ತರಕಲಾಂಡಿ ಸ್ವಾಮಿ, ಅ------ ಕುತ್ಕಳಯ್ಯಾ, ನಿಮ್ಮ ಸಿಎಮ್ಮು ತಿನ್ನಬಾರದ್ದನ್ನೆಲ್ಲಾ ತಿಂದ, ಮಾಡಬಾರದ್ದನ್ನೆಲ್ಲಾ ಮಾಡ್ದಾ, ಅದುಕ್ಕೇ ಜೈಲಿಗೋದ, ಇಡೀ ಇಂಡಿಯಾಲೇ ನಮ್ಮ ರಾಜ್ಯದ ಬಗ್ಗೆ ಕೆಟ್ಟ ಹೆಸರು ಬರುವಂತೆ ಮಾಡ್ಬುಟ್ಟ, ನಿಮ್ಗೂ ಅವನು ಏನೇನೋ ತಿನ್ಸೌನೆ ಅದಕ್ಕೇ ಅವ್ನ ಪರ್ವಾಗಿ ಮಾತಾಡ್ತಿದ್ದೀಯಾ...ಅವುನ್ನ ಬಿಟ್ರೆ ನಿಮ್ ಜನಾಂಗ್ದಲ್ಲಿ ಬೇರೆ ಗಂಡಸು ರಾಜಕಾರಣಿನೇ ಇಲ್ವೇನಯ್ಯಾ, ನಿಮ್ ಸಚಿವರು ಅಸೆಂಬ್ಲೀಲಿ ಬ್ಲೂ ಫಿಲಂ ನೋಡಿ ನಾವು ಕನ್ನಡಿಗರೆಲ್ಲಾ ತಲೆತಗ್ಗಿಸುವಂತೆ ಮಾಡುದ್ರಲ್ಲಯ್ಯಾ, ಬೇಕಿದ್ರೆ ನಿನ್ ಮಠಕ್ಕೆ ಕರ್ಕಂಡು ಹೋಗಿ ಅವ್ರಿಗೆ ಬ್ಲೂ ಫಿಲಂ ತೋರಿಸ್ಕಂಡ್ ಕೂತ್ಕೋ’ ಎಂದು ಕಮಂಡಲೀಸ್ವಾಮಿಯನ್ನು ಹೆದರಿಸುವಂತೆ ಅವರತ್ತ ಎದ್ದರು. ಕ್ಯಾಮೆರಾ ಮ್ಯಾನ್ ಸಿಕ್ಕ ಸ್ಕೂಪ್ ಅನ್ನು ಎಡೆಬಿದದೆ ಶೂಟ್ ಮಾಡತೊಡಗಿದ. ಹೀಗೆ ಕೂಗಾಡುವಿಕೆಯಿಮ್ದ ಗಾಬರಿಯಾದ ನಿರೂಪಕ ಪುಂಗಿರಂಗರು ತಕ್ಷಣ ಮಧ್ಯ ಪ್ರವೇಶಿಸಿ ಜನರನ್ನು ಸಮಾಧಾನ ಪಡಿಸಿದರು. ಕ್ರಾಂತಿಕಾರಿ ಸ್ವಾಮಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದನ್ನು ಕಂಡು ಗಾಬರಿಯಾದ ಬೋಳುಮಠದ ಬೋಳುವಾರ್ತ ಸ್ವಾಮಿ ಇನ್ನು ಮುಂದೆ ತಾವು ಹುಶಾರಾಗಿ ಮಾತನಾಡುವುದು ಒಳ್ಳೆಯದೆಂದುಕೊಂಡರು. ಈ ಸ್ವಾಮಿ ಬರುತ್ತಾನೆಂದು ಗೊತ್ತಿದ್ದರೆ ನಾನು ಈ ಕಾರ್ಯಕ್ರಮಕ್ಕೆ ಬರುತ್ತಲೇ ಇರಲಿಲ್ಲ...ಈಗ ಬಂದು ಹೇಳುವುದನ್ನೂ ಹೇಳಲಾಗದೆ ಒದ್ದಾಡುವಂತಾಯ್ತಲ್ಲಾ ಎಂದು ಪೇಚಾಡಿಕೊಂಡರು. ಅಷ್ಟರಲ್ಲಾಗಲೇ ಕ್ರಾಂತಿಕಾರಿ ಸ್ವಾಮಿಯ ಬೆಂಬಲಿಗರು ಇತರೆ ಸ್ವಾಮಿಗಳ ಬೆಂಬಲಿಗರನ್ನು ಗುರಾಯಿಸತೊಡಗಿದ್ದರಿಂದ ಬೆಂಬಲಿಗರಲ್ಲೂ ಕಾವೇರತೊಡಗಿತ್ತು. ಇದನ್ನು ಕಂಡ ಪುಂಗಿರಂಗರು ’ಪ್ರಿಯ ವೀಕ್ಷಕರೇ ನಮ್ಮ ಚರ್ಚೆ ಇದೀಗ ಸ್ವಾರಸ್ಯಕರ ಹಂತ ತಲುಪಿದೆ...ಒಂದು ಸಣ್ಣ ಬ್ರೇಕ್ ನಂತರ ಈ ಕಾರ್ಯಕ್ರಮ ಮುಂದುವರೆಯುವುದು’ ಎಂದು ಬ್ರೇಕ್ ನೀಡಿದರು. ಬ್ರೇಕ್ ಕೊಟ್ಟ ಪುಂಗಿರಂಗರೆಂಬ ನಿರೂಪಕರು ತಲೆಕೆಡಿಸಿಕೊಳ್ಳತೊಡಗಿದರು. ಅವರಿಗೆ ಈ ಕಾರ್ಯಕ್ರಮದಲ್ಲಿ ಬೋಳುಮಠದ ಬೋಳುವಾರ್ತ ಸ್ವಾಮೀಜಿ ಹಾಗೂ ಅವರ ಶಿಷ್ಯರೆನಿಸಿಕೊಂಡಿದ್ದ ಇತರ ಕಿರಿ ಮಠದ ಸ್ವಾಮೀಜಿಗಳನ್ನ ಕೂರಿಸಿ, ಒಂದಷ್ಟು ಮಾತಾಡಿಸಿ, ತಾವೂ ಸಿಕ್ಕಷ್ಟು ಗುಂಜಿಕೊಳ್ಳಬೇಕೆಂಬುದು ಅವರ ಉದ್ದೇಶವಾಗಿತ್ತು. ಬೋಳುಮಠದ ಸ್ವಾಮಿಗಳು ನಡೆಸುತ್ತಿದ್ದ ಮೆಡಿಕಲ್ ಕಾಲೇಜಿಗೆ ಎಲ್ಲಿಲ್ಲದ ಡಿಮ್ಯಾಂಡ್. ಆ ಕಾಲೇಜಿನಲ್ಲಿ ತಾನೂ ಒಂದೆರಡು ಸೀಟುಗಳನ್ನು ಕಡಿಮೆ ಬೆಲೆಗೆ ಗಿಟ್ಟಿಸಿಕೊಂಡು, ಅದನ್ನು ಎನ್ ಆರ್ ಐ ಗಳಿಗೆ ಮಾರಿಕೊಂಡು ಒಂದಷ್ಟು ಲಾಭ ಕಮಾಯಿಸಿಕೊಳ್ಳಬೇಕೆಂದುಕೊಂಡಿದ್ದರು. ಆದರೆ ಈ ಕಾರ್ಯಕ್ರಮದ ಬಗ್ಗೆ ತನ್ನ ಚಾನೆಲಿನಲ್ಲಿ ಒಂದೆರಡು ದಿನಗಳ ಹಿಂದಿನಿಂದಲೆ ಜಾಹಿರಾತು ಬರುವುದನ್ನು ಗಮನಿಸಿದ್ದ ಕೆಲವು ಕ್ರಾಂತಿಕಾರಿಗಳು ತಮ್ಮ ಹೊಸಮಠದ ಕ್ರಾಂತಿಕಾರಿ ಸ್ವಾಮಿಗಳನ್ನು ಕರೆದುಕೊಂಡು ನೇರವಾಗಿ ಸ್ಟುಡಿಯೋಗೇ ಬಂದಿದ್ದರು. ಆ ಬೆಂಬಲಿಗರ ಅವತಾರಗಳನ್ನು ಹಾಗೂ ಆ ಕ್ರಾಂತಿಕಾರಿ ಸ್ವಾಮೀಜಿಯನ್ನು ನೋಡಿದ ಪುಂಗಿರಂಗರಿಗೆ ಇವರನ್ನು ಸೇರಿಸಿಕೊಳ್ಲದಿದ್ದರೆ ನಡೆಯುಬುದಿಲ್ಲ ಎಂದು ಗೊತ್ತಾಗಿತ್ತು. ಅವರೂ ಆಗಾಗ್ಗೆ ಸಮಯಕ್ಕನುಸಾರವಾಗಿ ಕ್ರಾಂತಿಕಾರಿಯಂತೆ ಮಾತಾಡುತ್ತಿದ್ದರಿಂದ ವೈಯುಕ್ತಿಕ ಇಕ್ಕಟ್ಟಿಗೆ ಸಿಲುಕಿ ಕ್ರಾಂತಿಕಾರಿ ಸ್ವಾಮಿ ಹಾಗೂ ಆತರ ಶಿಷ್ಯರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕೆ ಅನುವು ಮಾಡಿಕೊಟ್ಟು ತನ್ನಲ್ಲೇ ಕೊರಗಿದ್ದರು. ಇತ್ತ ಪುಂಗಿರಂಗರಿಗೆ ಕೊಡಬೇಕಾಗಿದ್ದ ಕಾಣಿಕೆಯನ್ನು ಮೊದಲೇ ಕೊಟ್ಟು ಬಂದಿದ್ದ ಬೋಳುಮಠದ ಸ್ವಾಮೀಜಿ ಹಾಗೂ ಅವರ ಸಹಚರರಾಗಿ ಬಂದಿದ್ದ ಇತರೆ ಸ್ವಾಮೀಜಿಗಳು ಬ್ರೇಕಿನಲ್ಲಿ ತಕರಾರು ತೆಗೆದು, ಅವರನ್ನು ತಮ್ಮ ಬಳೆ ಕರೆದು ’ಅಲ್ರೀ ನೀವು ನಮ್ಮನ್ನಷ್ಟೇ ಅಲ್ವಾ ಕರೆದಿದ್ದು ಇದೀಗ ನೋಡಿದ್ರೆ ಆ ದರಿದ್ರ ಕ್ರಾಂತಿಕಾರಿ ಎನಿಸಿಕೊಂಡವನನ್ನೂ ಕರೆದಿದ್ದೀರಲ್ರೀ ಇದೇನಾ ನೀವು ನಮಗೆ ಮರ್ಯಾದೆ ಕೊಟ್ಟಿದ್ದು’ ಎಂದವರೇ ತಾವು ಪುಂಗಿರಂಗರಿಗೆ ಕೊಟ್ಟಿದ್ದರ ಲೆಕ್ಕಾಚಾರವನ್ನು ಹಾಕತೊಡಗಿದರು. ಸ್ವಾಮಿಗಳು ಹಾಗೆ ಲೆಕ್ಕಾಚಾರಕ್ಕೆ ತೊಡಗಿದ್ದನ್ನು ಕಂಡು ನಡುಗಿದ ಪುಂಗಿರಂಗರು ’ಅಡ್ಡಬಿದ್ದೆ ಸ್ವಾಮೀಜೀ, ಅಡ್ಡಬಿದ್ದೆ, ದಯವಿಟ್ಟು ತಪ್ಪು ತಿಳೀಬೇಡಿ. ಆ ಕ್ರಾಂತಿಕಾರಿ ಸ್ವಾಮಿಯನ್ನು ನನ್ನ ತಾಯಾಣೆಗೂ ನಾನು ಕರೆದಿಲ್ಲ. ವಿಷಯ ತಿಳಿದು ಆತನೇ ತನ್ನ ಕ್ರಾಂತಿಕಾರಿ ಶಿಷ್ಯರೊಂದಿಗೆ ಬಂದಿದ್ದಾನೆ. ಆತನನ್ನು ನಾನು ಮಾತಲ್ಲೇ ಸರಿಯಾಗಿ ಬೆಂಡೆತ್ತುತ್ತೀನಿ, ನೀವು ಹೆದರದೇ ಮಾತಾಡಿ’ ಎಂದು ಅವರಿಗೆ ಧೈರ್ಯ ತುಂಬಿದರು. ಬ್ರೇಕ್ ಮುಗಿದ ನಂತರ ತನ್ನ ಸೂಟನ್ನು ಸರಿಪಡಿಸಿಕೊಂಡು ಕೂತ ನಿರೂಪಕ ಪುಂಗಿರಂಗರು ’ಪ್ರಿಯ ವೀಕ್ಷಕರೇ, ಮತ್ತೊಮ್ಮೆ ನಿಮಗೆ ಸ್ವಾಗತ’ ಎಂದು ಮತ್ತೆ ಬೋಳುಮಠದ ಬೋಳುವಾರ್ತ ಸ್ವಾಮಿಯತ್ತ ತಿರುಗಿ ’ಸ್ವಾಮೀಜಿ, ಈಗ ನೀವು ನಮ್ಮ ರಾಜ್ಯದಲ್ಲಿ ನಮ್ಮ ಸಚಿವರುಗಳು ಈ ರೀತಿ ಬ್ಲೂ ಫಿಲಂ ನೋಡುವುದರ ಬಗ್ಗೆ ಹೇಗೆ ನಿಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೀರಿ’ ಎಂದರು. ಪರವಾಗಿಲ್ಲ ಕಾಣಿಕೆ ಕೆಲಸ ಮಾಡುತ್ತಿದೆ. ಈತ ನನಗೇ ಹೆಚ್ಚು ಮಾತನಾಡಲು ಅವಕಾಶ ನೀಡುತ್ತಿದ್ದಾನೆಂದುಕೊಂಡು ’ನೋಡಿ, ನಾವು ಸ್ವಾಮೀಜಿಗಳು. ಅಂದರೆ ಸರ್ವಸಂಗ ಪರಿತ್ಯಾಗಿಗಳು. ನಾವು ಎಲ್ಲವನ್ನೂ ಬಿಟ್ಟವರು. ನಾವೇನನ್ನೂ ಬಹಿರಂಗವಾಗಿ ಮಾಡುವುದಿಲ್ಲ. ಬಾಹ್ಯ ನಮಗೆ ಬೇಡ. ನಮ್ಮದೇನಿದ್ದರೂ ಅಂತರಂಗಕ್ಕೆ ಸಂಬಂಧಿಸಿದ್ದು. ಆದರೆ ನಮ್ಮ ಶಿಷ್ಯರೂ ಹಾಗೇ ಇರಬೇಕೆಂಬ ನಿಯಮವೇನೂ ಇಲ್ಲ...ಎಲ್ಲರೂ ಹಾಗಿದ್ದಿದ್ದರೆ ಎಲ್ಲರೂ ಸ್ವಾಮಿಗಳಾಗುತ್ತಿದ್ದರಲ್ಲವೇ? ಅದಕ್ಕೆ ನಾವು ಅಂಥವರಿಗೆ ಗುರುಗಳಾಗಿ ಮಾರ್ಗದರ್ಶನ ಮಾಡುವುದು...ನಾವು ಹೇಳುವುದೇನೆಂದರೆ ನೀವು ಏನೇ ಕೆಲಸ ಮಾಡಿದರೂ ನಿಮ್ಮ ಅಂತರಂಗದಲ್ಲಿ ಮಾಡಿ ಎಂದು. ಏನೋ...ದುರಾದೃಷ್ಟ. ನಮ್ಮ ಶಿಷ್ಯರು ಯಾವುದೋ ಮಾಯೆಗೆ ಸಿಲುಕಿ ಸ್ವಲ್ಪ ಬಹಿರಂಗವಾಗಿ ಅದೇನೋ ಅಶ್ಲೀಲ ಚಿತ್ರ ನೋಡಿದ್ದಾರೆ...ಆದರೆ ನಿಮ್ಮ ಟಿವಿಗಳವರು ಅದನ್ನೇ ದೊಡ್ಡದು ಮಾಡಿದ್ದೀರಿ. ಅದಕ್ಕೆ ನಮ್ಮ ತೀವ್ರ ಆಕ್ಷೇಪಣೆಯಿದೆ...’ ಬೋಳುಮಠದ ಸ್ವಾಮಿಗಳು ಮಾತು ಮುಂದುವರಿಸಿದರು...’ ನಾವು ಎಲ್ಲವನ್ನೂ ಬಹಿರಂಗವಾಗಿ ಮಾತಾಡಲಾಗುವುದಿಲ್ಲ. ಆದರೆ ಒಂದು ನಿಜ. ಇಂದು ನಮ್ಮ ಜನರ ಸಚಿವರುಗಳನ್ನು ಇಕ್ಕಟಿಗೆ ಸಿಲುಕಿಸಬೇಕೆಂದು ವಿರೋಧ ಪಕ್ಷದ ನಾಯಕರುಗಳು ಸಂಚು ಮಾಡಿದ್ದಾರೆ...ಏನೂ ಆಸಕ್ತಿಕರ ವಿಷಯವೇ ಇರದಿರುವ ಸದನದಲ್ಲಿ ಬೇಸರವಾಗಿ ನಿದ್ದೆ ಬರುವಂತಾಗಿದ್ದರಿಂದ ಏನೋ ಕೆಲವು ನೃತ್ಯಗಳನ್ನು ನೋಡಿದ್ದೇ ಮಹಾಪರಾಧವೆಂಬಂತೆ ಟಿವಿಯವರು ಮಾತಾಡುತ್ತಿದ್ದಾರೆ, ಇದು ಖಂಡನೀಯ. ಹಿಂದಿನ ಕಾಲದಿಂದಲೂ ರಾಜರು-ಆಸ್ಥಾನದವರೂ ನೃತ್ಯನೋಡುತ್ತಿದ್ದರಲ್ಲವೇ?!’ ಎಂದು ಸಮರ್ಥನೆ ಕೊಡುವಾಗ ಅಲ್ಲಿ ನೆರೆದಿದ್ದ ಕ್ರಾಂತಿಕಾರಿ ಸ್ವಾಮಿಯ ಕ್ರಾಂತಿಕಾರಿ ಯುವಶಿಷ್ಯಂದಿರು ಮತ್ತೆ ತಮ್ಮ ತಮ್ಮ ಖುರ್ಚಿಯಿಂದ ಮೇಲೆದ್ದು ರೋಷಾವೇಷವನ್ನು ತೋರಿಸಲು ಶುರು ಮಾಡಿ ಸ್ವಾಮಿಗಳು ಕೂತಿದ್ದ ಜಾಗಕ್ಕೇ ಹೆಜ್ಜೆ ಹಾಕಿದರು. ಅವರ ಆವೇಶವನ್ನು ಕಂಡು ಕಂಗಾಲಾದ ಬೋಳು ಸ್ವಾಮಿ ನಾವು ತಕ್ಷಣ ಪೇಶಾಬಿಗೆ ಹೋಗಬೇಕೆಂದು ಪುಂಗಿರಂಗರಿಗೆ ಟೇಬಲ್ ಪಕ್ಕದಿಂದ ತಮ್ಮ ಕಿರುಬೆರಳನ್ನು ಎತ್ತಿ ತೋರಿಸಿ ಸ್ಟುಡಿಯೋ ಸೆಟ್ಟಿಂಗ್ ನಿಂದ ನಿರ್ಗಮಿಸಿದರು. ಪುಂಗಿರಂಗರು ಮತ್ತೆ ಪೀಕಲಾಟಕ್ಕೆ ಸಿಲುಕಿದವರಂತೆ ಒದ್ದಾಡಿ ’ ಓಕೆ, ಓಕೆ, ಪ್ರಿಯ ವೀಕ್ಷಕರೇ, ನಮ್ಮ ಬೋಳುಮಠದ ಸ್ವಾಮಿಗಳ ಅಮೃತ ವಾಕ್ಯ ಕೇಳಲು ನೀವು ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. ಅಲ್ಲಿವರೆಗೆ ನಮ್ಮ ಕಮಂಡಲೀಸ್ವಾಮಿಗಳು ಸ್ವಲ್ಪ ಮಾತನಾಡುತ್ತಾರೆ’ ಅಂದರು. ಕಮಂಡಲವನ್ನು ಮುಟ್ಟಿ ಗಂಟಲು ಸರಿಮಾಡಿಕೊಂಡ ಕಮಂಡಲೀಸ್ವಾಮಿಯವರು ಸುತ್ತಮುತ್ತ ನೋಡಿ ಕ್ರಾಂತಿಕಾರಿ ಸ್ವಾಮಿಯ ಶಿಷ್ಯರೇ ಅಧಿಕ ಸಂಖ್ಯೆಯಲ್ಲಿ ನೆರೆದಿರುವುದನ್ನು ಮತ್ತೆ ಖಚಿತಪಡಿಸಿಕೊಂಡು ಬೋಳುಮಠದ ಸ್ವಾಮಿ ಇವರ ಕಾಟಕ್ಕೆ ಹೆದರಿಯೇ ಹೊರ ಹೋಗಿರುವುದು ಎಂದು ಮನವರಿಕೆ ಮಾಡಿಕೊಂಡವರು, ನಾನ್ಯಾಕೆ ಸುಮ್ಮಸುಮ್ಮನೆ ಮಾತಾಡಿ ಈ ಗಲಾಟೆ ಶಿಷ್ಯರ ಕೋಪಕ್ಕೆ ಸಿಕ್ಕಲಿ ಎಂದುಕೊಳ್ಳುತ್ತಾ... ತಮ್ಮ ಶಲ್ಯವನ್ನು ನೀವಿಕೊಳ್ಳುತ್ತಾ ಬೋಳುಮಠದ ಸ್ವಾಮಿ ಬರುವಷ್ಟರಲ್ಲಿ ಈ ಕ್ರಾಂತಿಕಾರಿಗಳನ್ನು ಸಮಾಧಾನಪಡಿಸಿ ಅವರ ಸಿಟ್ಟಿನಿಂದ ನಾನಾದರೂ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ ’ನಮಗೆ ಮಾನ ಮರ್ಯಾದೆ ಎಂಬುದು ಬಹಳ ಮುಖ್ಯ ಸಂಗತಿ. ಆದರೆ...’ ಎಂದು ತಮ್ಮ ಮಾತನ್ನು ಮುಂದುವರೆಸುವಷ್ಟರಲ್ಲೇ ಅವರ ಮಾತನ್ನು ತುಂಡರಿಸಿದ ಕ್ರಾಂಕಿಕಾರಿ ಸ್ವಾಮಿಯ ಶಿಷ್ಯರು ’ರೀ ನೀವೆಲ್ಲಾ ಒಂದೇ ಕಣ್ರೀ, ನಿಮ್ಮ ಜನಾಂಗದ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿದಿದ್ದಕ್ಕೆ ಅವರ ಪರವಾಗಿ ಕೂಗಾಡಿದ್ರಿ. ಈಗ ನಿಮ್ಮ ಜನಾಂಗದವರೇ ಆದ ಬ್ಲೂ ಫಿಲಂ ನೋಡಿದ ಸಚಿವರನ್ನೂ ಸಮರ್ಥಿಸಿಕೊಳ್ಳುತ್ತೀರೆಂಬುದೂ ನಮಗೆ ಗೊತ್ತು. ನೀವು ಒಂದೈದು ನಿಮಿಷ ಸುಮ್ನೆ ಕೂತ್ಕಳಿ, ನಮ್ಮ ಸ್ವಾಮಿಗಳು ಮಾತಾಡ್ಲಿ’ ಎಂದು ಅಬ್ಬರಿಸತೊಡಗಿದರು. ಅವರ ಅಬ್ಬರಕ್ಕೆ ಕಂಗಾಲಾದ ಕಮಂಡಲೀಸ್ವಾಮಿ ’ನಾವು ಏನು ಹೇಳ್ತಾ ಇದ್ದೀವಿ ಅಂದ್ರೆ...,’ ಎಂದು ಮಾತನ್ನು ಮುಂದುವರೆಸುವಾಗಲೇ ಮಧ್ಯೆ ಪ್ರವೇಶಿಸಿದ ಪುಂಗಿರಂಗರು ಮತ್ತೆ ಯಡವಟ್ಟಾದರೆ ಕಷ್ಟವೆಂದುಕೊಂಡು ’ಪ್ರಿಯ ವೀಕ್ಷಕರೇ ಈಗೊಂದು ಸಣ್ಣ ಬ್ರೇಕ್’ ಅಂದರು. (ಮುಂದಿನ ಸಂಚಿಕೆಯಲ್ಲಿ ’ಸ್ವಾಮೀಜಿಗಳಿಗೆಲ್ಲಾ ನರ ಕಟ್ಟುಮಾಡಬೇಕು’ ಎಂದರಾ ಕ್ರಾಂತಿಕಾರಿ ಸ್ವಾಮಿ!) ಸಹನಾ ಅಪ್ಡೇಟ್: ಹೊಸ ಸಂವತ್ಸರದಲ್ಲಿ ಈ ಹಳಸಿದ ಗಾನಕ್ಕೆ ಅಂತ್ಯವುಂಟೇ?! ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಉಳಿಯುತ್ತಾ? ಯಾರಾದರೂ ಸಜ್ಜನ ಕನ್ನಡಿಗನನ್ನು ಕೇಳಿ ನೋಡಿ. ’ಥತ್! ಸಾಕಾಯ್ತು ಸ್ವಾಮಿ...ಅದ್ಯಾವ ಸೀಮೆ ಫೆವಿಕಾಲ್ ಹಾಕಿಕೊಂಡಿದ್ದಾರೋ ಗೊತ್ತಿಲ್ಲ...ಅಂಟಿಕೊಂಡು ನೇತಾಡ್ತಿದ್ದರೂ ಕೆಳಗೆ ಬಿದ್ದು ಪುಣ್ಯ ಕಟ್ಟಿಕೊಳ್ತಿಲ್ಲ’ ಎನ್ನುತ್ತಾರೆ. ಸಂಕ್ರಾಂತಿ ಬಂತು...ಇನ್ನೇನು ಕ್ರಾಂತಿಮಾಡುತ್ತೇನೆಂದು ಸುಮ್ಮನಾದರು. ಶಿವರಾತ್ರಿ ಬಂತು...ತಣ್ಣಗೇ ಕಳಿಸಿಬಿಟ್ರು. ಈಗ ಯುಗಾದಿ...ಹೊಸ ಸಂವತ್ಸರದಲ್ಲೇನಾದರೂ ಈ ಹಳೇ ಗಾನಕ್ಕೆ ಅಂತ್ಯವುಂಟಾ ನೋಡಬೇಕು. ಕರ್ನಾಟಕದ ರಾಜಕೀಯ ಜನಗಳಿಗೆ ಒಳಿತನ್ನು ಮಾಡುತ್ತಿರುವುದರ ಬದಲು ವೃಕ್ಷವಾಸಿಗಳ ದೊಂಬರಾಟ ಆಗಿಹೋಗಿದೆ. ಇದೇ ಮುಂದಿನ ಮೇ ತಿಂಗಳಿಗೆ ನಾಲ್ಕು ವರ್ಷ ಪೂರೈಸುವ ಈ ಸರ್ಕಾರ ಇಷ್ಟೂ ದಿನ ಮಾಡಿದ್ದೆಲ್ಲ ರಾಜ್ಯದ ಇತಿಹಾಸ ಪುಟಗಳಲ್ಲಿ ದಾಖಲೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗಲಾಟೆಯಿಲ್ಲದೆ ಅಧಿಕಾರ ನಡೆದೇ ಇಲ್ಲ. ಆರಂಭದ ದಿನಗಳಲ್ಲಿ ಅಲ್ಪಮತದ ಸರಕಾರವನ್ನ ಬಹುಮತ ಸರ್ಕಾರ ಎನ್ನಿಸಿಕೊಳ್ಳುವ ಸಲುವಾಗಿ ನಡೆಸಿದ 'ಆಪರೇಶನ್ ಕಮಲ' ಎಂಬ ಕಾರ್ಯಾಚರಣೆ ಚನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತದ್ದಾಗಿ ಪ್ರಜಾಪ್ರಭುತ್ವದ ಚುನಾಯಿತ ವ್ಯವಸ್ಥೆಯಲ್ಲಿ ಏನೆಲ್ಲಾ ನಡೆಯಬಹುದು ಎನ್ನುವುದಕ್ಕೆ ಕಳೆದ ಮೂರುವರ್ಷ ಹನ್ನೊಂದು ತಿಂಗಳ ರಾಜ್ಯಭಾರವನ್ನ ನೋಡಿದರೆ ಸಾಕು. ಒಂದರಹಿಂದೊಂದರಂತೆ ತನ್ನ ಗುಂಡಿಯನ್ನ ತಾನೇ ತೋಡಿಕೊಂಡು ಬಂದ ಬಿಜೆಪಿ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಅಧಿಕಾರಕ್ಕೆ ಬರುವಾಗ ಏನೆಲ್ಲಾ ಕನಸುಗಳನ್ನ ಬಿತ್ತಿ ಬಂದ ಸರ್ಕಾರ ಇದೇನಾ? ಪ್ರಶ್ನೆ ಈಗ ಜನಗಳದ್ದು ಮಾತ್ರ ಅಲ್ಲ, ಸ್ವತಃ ಬಿಜೆಪಿ ಕಾರ್ಯಕರ್ತರು ಬೆಂಬಲಿಗರದ್ದು. ತಮ್ಮ ಅಧಿಕಾರದ ಅವಧಿಯ ತುಂಬೆಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರೋಪಯೋಗದಂತಹ ಹಗರಣಗಳ ಜೊತೆಗೆ ಸರ್ಕಾರ ನಡೆಸಿಕೊಂಡು ಬಂದ ಯಡಿಯೂರಪ್ಪ ಪಕ್ಷದಲ್ಲಿ ತಮ್ಮ ಸರ್ವಾಧಿಕಾರಿ ಧೋರಣೆ ಬೆಳೆಸಿಕೊಂಡು ಬಂದರೇ ಹೊರತು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಮಾದರಿ ಆಡಳಿತ ಕೊಡುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅದು ಅವರಿಗೆ ಬೇಕಾಗಿರಲಿಲ್ಲ. ಎಲ್ಲಾ ಮಾತುಗಳಲ್ಲಿ ಮಾತ್ರ. ಆರಂಭ ದಿನದಿಂದಲೇ ಅವರ ಲೆಕ್ಕಾಚಾರ ಇದ್ದದ್ದು ಗಣಿಧಣಿಗಳಿಗೆ ಪರ್ಯಾಯವಾಗಿ ಹಣ ಮಾಡಬೇಕು, ಮತ್ತೊಂದು ಅವಧಿಗೆ ರೆಡ್ಡಿ ಧಣಿಗಳ ಕೃಪಾಕಟಾಕ್ಷವಿಲ್ಲದೆ ನಾನು ಚುನಾವಣೆ ಎದುರಿಸುವಂತ ತಾಕತ್ತು ಬೆಳಿಸಿಕೊಳ್ಳಬೇಕು ಎಂದು. ಹಣದ ಮೂಲ ಯಾವುದಾದರೇನು ಒಟ್ಟಾರೆ ಹಣ ಮಾಡುವುದನ್ನೇ ಯಡಿಯೂರಪ್ಪ ಮತ್ತವರ ಕುಟುಂಬ ಡಾಣಾಡಂಗುರವಾಗಿ ಶುರುಹಚ್ಚಿಕೊಂಡು ತಮ್ಮ ಅಧಿಕಾರಕ್ಕೆ ಒಂದೊಂದೇ ಮೊಳೆ ಹೊಡುಕೊಳ್ಳುತ್ತಾ ಕಟಕಟೆ ಮೆಟ್ಟಿಲೇರಬೇಕಾಗಿ ಬಂತು. ಪೂರಕವಾಗಿ ಅವರ ಸಚಿವ ಸಂಪುಟದವರೂ ಕೂಡ ಕೈಜೋಡಿಸಿ ತಾವೂ ತಿಂದು ಯಡಿಯೂರಪ್ಪನವರ ಕುಟುಂಬಕ್ಕೂ ಸವರಿದ್ದು ಈಗ ಹಳೇ ಸುದ್ದಿ. ಯಡ್ಡಿ ಸಂಪುಟದ ೩೪ ಸಂಪುಟ ಸದಸ್ಯರ ಪೈಕಿ ಬೆರಳೆಣಿಕೆ ಮಂದಿ ಮಾತ್ರ ತಮ್ಮ ಸಚಿವಸ್ಥಾನದ ಘನತೆ, ಗಾಂಭೀರ್ಯಗಳನ್ನು ಕಾಪಾಡಿಕೊಂಡವರು. ಪಾಪ! ಹಾಗೆ ನೋಡಿದರೆ ಅವರಿಗೆಲ್ಲ ಕೊಟ್ಟದ್ದು ಕೆಲಸಕ್ಕೆ ಬಾರದ ಖಾತೆಯನ್ನು! ಮೂರು ವರ್ಷ ಸವೆಸುವ ವೇಳೆಗೆ ಹಾಲಪ್ಪ ಅತ್ಯಾಚಾರ ಹಗರಣ, ರೇಣುಕಾಚಾರ್ಯ-ಜಯಲಕ್ಷ್ಮಿ ಪ್ರಕರಣ, ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೆಗೌಡ, ಕೃಷ್ಣಯ್ಯ, ಕಟ್ಟಾ ಸುಬ್ರಮಣ್ಯನಾಯ್ಡು, ರೆಡ್ಡಿ ಸಾಲು ಸಾಲಾಗಿ ಸರ್ಕಾರದ ಇಮೇಜನ್ನು ಹರಾಜು ಹಾಕಿ, ಅಷ್ಟೊತ್ತಿಗೆ ಯಡಿಯೂರಪ್ಪ ಅವರನ್ನು ಹಿಂಬಾಲಿಸುವ ಸ್ಥಿತಿಗೆ ಬಂದಿದ್ದರು...ಆಗ ಹೈಕಮಾಂಡ್ ಗೆ ತಿರುಗಿಬಿದ್ದಿದ್ದ ಯಡ್ಡಿ ತಮ್ಮ ಆಪ್ತರಂತಿದ್ದ ಸದಾನಂದಗೌಡರಿಗೆ ಪಟ್ಟಾಭಿಷೇಕ ಮಾಡುವ ಮೂಲಕ ನಿಟ್ಟುಸಿರು ಬಿಟ್ಟಿದ್ದರು. ಅಲ್ಲಿಗೆ ಯಡಿಯೂರಪ್ಪ ಆಡಳಿತದ ಒಂದು ಪರ್ವ ಮುಗಿದಿತ್ತು. ಆತ ಸೂತ್ರದಾರನಾಗಿ ಆಟವಾಡುವ ನಿರ್ಧಾರ ಮಾಡಿದ್ದರು. ಅಲ್ಲೇ ಅವರ ಲೆಕ್ಕಾಚಾರ ತಪ್ಪಾಗಿದ್ದು! ಇದಿಷ್ಟು ಪೂರ್ವಾರ್ಧ! ಯಡಿಯೂರಪ್ಪನವರ ಅಣತಿಯಂತೆ ಸದಾನಂದಗೌಡ ನಡೆದುಕೊಂಡಿದ್ದರೆ ಬಹುಃಶ ಯಡಿಯೂರಪ್ಪ ಗುಂಪು ತಿರುಗಿ ಬೀಳುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಆದ ತಕ್ಷಣ ಯಡಿಯೂರಪ್ಪ ಅವರ ಹೆಬ್ಬೆಟ್ಟಿನಂತೆ ನಡೆದುಕೊಳ್ಳಲು ಸದಾನಂದಗೌಡ ಒಪ್ಪದಿದ್ದುದು ಯಡಿಯೂರಪ್ಪ ಸೇರಿದಂತೆ ಅವರ ಬೆಂಬಲಿಗರಲ್ಲಿ ಅತೃಪ್ತಿ ಅಸಮಾಧಾನ ಹೆಚ್ಚಿತ್ತು. ಅವರ ಗುಂಪಿನ ವಿಶೇಷ ವ್ಯವಹಾರಿಕ ಫೈಲುಗಳಿಗೆ ಸದಾನಂದಗೌಡ ಆಸಕ್ತಿ ತೋರದೆ ಪ್ರತಿಯೊಂದಕ್ಕೂ ಕಾನೂನು ಇಲಾಖೆ ಒಪ್ಪಿಗೆ ಪಡೆಯಲು ಮುಂದಾಗಿದ್ದು ಯಡಿಯೂರಪ್ಪ ಬಣಕ್ಕೆ ನುಂಗಲಾರದ ತುತ್ತಾಗಿಬಿಟ್ಟಿತು. ಅಲ್ಲದೆ ಯಡಿಯೂರಪ್ಪನವರ ಪರಮವೈರಿ ಈಶ್ವರಪ್ಪ ಜೊತೆ ಸದಾನಂದಗೌಡರ ಸಖ್ಯ ಹೆಚ್ಚಿದ್ದು, ಐಎಎಸ್, ಐಪಿಎಸ್ ಸೇರಿದಂತೆ ಹಿರಿಯ ಅಧಿಕಾರಿಗಳ ವರ್ಗಾವಣೆ ಯಡಿಯೂರಪ್ಪನವರ ಒಪ್ಪಿಗೆ ಪಡೆಯದೇ ನಡೆದದ್ದು ಪರಿಸ್ತಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಹೀಗೆ ಪ್ರತಿಯೊಂದರಲ್ಲೂ ಹಿನ್ನೆಡೆ ಅನುಭವಿಸುತ್ತಿದ್ದೇನೆ ಎಂಬ ಸಂಕಟ ಹೆಚ್ಚಿದಂತೆ ಯಡಿಯೂರಪ್ಪ ಸದಾನಂದಗೌಡರ ವಿರುದ್ಧ ಬಹಿರಂಗವಾಗೇ ಗುಟುರು ಹಾಕತೊಡಗಿದ್ದರು. ಸದಾನಂದಗೌಡರ ಪದಚುತಿಗೆ ಬಲೆ ಹೆಣೆಯತೊಡಗಿ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲರನ್ನು ಕೂಡಿಹಾಕುವಲ್ಲಿ ಯಶಸ್ವಿಯಾಗುವ ವೇಳೆಗೆ, ಹೈಕೋರ್ಟ್ ಲೋಕಾಯುಕ್ತರನ್ನ ವಜಾಗೊಳಿಸಿದ್ದು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಗಾದಿಗೇರುವ ಹೋರಾಟಕ್ಕೆ ನಾಂದಿ ಹಾಡಿ ಬಿಜೆಪಿ ವರಿಷ್ಟರಿಗೆ ನುಂಗಲಾರದ ತುತ್ತಾಗಿದ್ದರೆ. ೨೦೧೨-೧೩ರ ಬಜೆಟ್ ಅಧಿವೇಶನದ ಮೊದಲ ದಿನವೇ ಸದನಕ್ಕೆ ಬಹಿಷ್ಕಾರ ಹಾಕುವ ಮೂಲಕ ಸೆಡ್ಡು ಹೊಡೆದ ಯಡಿಯೂರಪ್ಪ, ಆಡಳಿತ ಪಕ್ಷದ ಸಾಕಷ್ಟು ಸದಸ್ಯರೆ ಸದನಕ್ಕೆ ಗೈರು ಹಾಜರಾಗುವಂತೆ ಮಾಡಿ ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಮತ್ತೊಂದು ಹೊಸ ಇತಿಹಾಸ ಸೃಷ್ಟಿದ್ದಾರೆ. ಇದು ರಾಷ್ಟ್ರೀಯ ಪಕ್ಷವೊಂದರ ತಾತ್ವಿಕ ದಿವಾಳಿತನವಲ್ಲದೆ ಬೇರೇನೂ ಅಲ್ಲ. ಶಿಸ್ತುಬದ್ಧ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ರಾಷ್ಟ್ರೀಯ ನಾಯಕರು ಯಡಿಯೂರಪ್ಪನವರ ಅಡ್ಡಾದಿಡ್ಡಿ ಆಟದ ಮುಂದೆ ಮಾಸಿದಂತೆ ಕಾಣುತ್ತಿದ್ದಾರೆ. ಆರೆಸೆಸ್ ಘಟಾನುಘಟಿಗಳೆಲ್ಲ ಯಡಿಯೂರಪ್ಪನವರ ಭ್ರಷ್ಟಾಚಾರದಲ್ಲಿ ರುಚಿ ನೋಡಿರುವುದರಿಂದಲೋ ಏನೋ ಬಹಳ ಸಂಕಟ ಅನುಭವಿಸುತ್ತಿರುವುದು ಕಾಣಬರುತ್ತಿದೆ. ಈ ಬಾರಿಯ ಬಜೆಟ್ ಅನ್ನು ಸದಾನಂದಗೌಡರು ಮಂಡಿಸಿಯಾಗಿದೆ. ಹಾಗಾಗಿ ಯಡಿಯೂರಪ್ಪ ಬಣ ನಡೆಸಿದ ರೆಸಾರ್ಟ್ ರಾಜಕಾರಣ ಸಕ್ಸಸ್ ಆಗಿಲ್ಲ. ಏನೋ ಆಶ್ವಾಸನೆ ಮೇಲೆ ಯಡಿಯೂರಪ್ಪ ಬಣ ಮತ್ತೆ ಸದನಕ್ಕೆ ಬಂದು ಕುಳಿತುಕೊಳ್ಳುವ ನಿರ್ಧಾರ ಮಾಡಿದ್ದರೂ...ಅದು ಕೇವಲ ತಾತ್ಕಾಲಿಕ! ಯಡಿಯೂರಪ್ಪನವರೀಗ ಅಧಿಕಾರ ಬಿಟ್ಟು ಕೈಕಟ್ಟಿಕೊಳ್ಳಲು ಯಾವ ಕಾರಣಕ್ಕೂ ಸಿದ್ಧರಿಲ್ಲ. ಅವರು ನರಮಾಂಸದ ರುಚಿ ಕಂಡ ಹುಲಿಯ ತರ ಅಧಿಕಾರದ ರುಚಿ ಹಿಡಿದು ಕೂತಿದ್ದಾರೆ. ತಾವು ನಿರಪರಾಧಿ ಎಂದು ಕೋರ್ಟ್ ಆತನ ಮೇಲಿನ ದೂರನ್ನು ವಜಾ ಮಾಡಿದ ಮೇಲೆ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ. ಅವರ ಬೆಂಬಲಿಗರೂ ಅವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಕೂರಲು ಬಿಡುವುದಿಲ್ಲ! ಆದ್ದರಿಂದ ಉಳಿದಿರುವ ಇನ್ನು ಹದಿಮೂರು ತಿಂಗಳು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತದೆಯಾ ಎನ್ನುವುದು ಈಗ ಬಿಜೆಪಿ ಶಾಸಕರಿಗೇ ಗೊತ್ತಿಲ್ಲ. ಹಾಗೊಂದು ಪಕ್ಷ ಸರ್ಕಾರ ಉಳಿದರೆ, ಸದಾನಂದಗೌಡರೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರ ಅಥವಾ ಮೂರನೇ ಮುಖ್ಯಮಂತ್ರಿಯ ಆಯ್ಕೆ ನಡೆಯುತ್ತದಾ ಅಥವಾ ಮತ್ತೊಮ್ಮೆ ಯಡಿಯೂರಪ್ಪನೇ ಮತ್ತೆ ಮುಖ್ಯಮಂತ್ರಿ ಆಗುತ್ತಾರಾ ಎನ್ನುವುದೇ ಈಗ ಚರ್ಚೆ. ಸಚಿವರಾದ ಬಸವರಾಜ ಬೊಮ್ಮಾಯಿ, ಉದಾಸಿ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ರೇಣುಕಾಚಾರ್ಯ, ಸೋಮಣ್ಣ, ನಿರಾಣಿ, ರಾಜುಗೌಡ, ಉಮೇಶ್ ಕತ್ತಿ ಸೇರಿದಂತೆ ಯಡಿಯೂರಪ್ಪ ಬೆಂಬಲಿಗರು ಶತಾಯಗತಾಯ ಯಡಿಯೂರಪ್ಪ ಅವರನ್ನೇ ಸಿಎಂ ಗಾದಿಗೆ ಕೂರಿಸಲು ಪಣ ತೊಟ್ಟಿದ್ದಾರೆ. ಅದರಲ್ಲಿ ಜಗದೀಶ್ ಶೆಟ್ಟರ್ ಮಾತ್ರ ಸ್ವತಃ ಸಿಎಂ ಕನಸು ಕಾಣುತ್ತಲೇ ಯಡಿಯೂರಪ್ಪ ಜೊತೆ ಕೈಜೋಡಿಸಿದ್ದಾರೆ! ಬಿಜೆಪಿ ಹೈಕಮಾಂಡ್ ತಮಗೆ ಒಪ್ಪುವ ನಿರ್ಧಾರ ಕೈಗೊಳ್ಳದಿದ್ದರೆ ಯಡಿಯೂರಪ್ಪ ತಮ್ಮ ದಾರಿ ತಾವು ನೋಡಿಕೊಳ್ಳುವುದು ನಿಜ. ಅದನ್ನು ಬಿಜೆಪಿ ಹಾಗೂ ಅರೆಸೆಸ್ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಮುಂದಿನ ಚಾಲೆಂಜ್. ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್, ಮಧ್ಯಪ್ರದೇಶದಲ್ಲಿ ಉಮಾಭಾರತಿ, ದೆಹಲಿಯಲ್ಲಿ ಖುರಾನ ಹಾಗೂ ರಾಜಸ್ತಾನದಲ್ಲಿ ವಸುಂಧರ ರಾಜೆ ಅವರಿಗೆ ಪಾಠ ಕಲಿಸಿದಷ್ಟು ಸುಲಭ ಪರಿಸ್ಥಿತಿ ಕರ್ನಾಟಕದಲ್ಲಿ ಇಲ್ಲ. ಯಡಿಯೂರಪ್ಪನವರ ಬಳಿ ಈಗ ಹಣದ ಜೊತೆಗೆ ಜಾತಿ ಎಂಬ ಭಯಂಕರ ಶಕ್ತಿ ಹೆಗಲು ಕೊಟ್ಟು ನಿಂತಂತೆ ವೈಭವೀಕರಿಸಲಾಗುತ್ತಿದೆ. ಸ್ವಲ್ಪ ಎಡವಟ್ಟು ಮಾಡಿಕೊಂಡರು ಕರ್ನಾಟಕದಲ್ಲಿ ಬಿಜೆಪಿ ೨೦ ವರ್ಷಗಳ ಹಿಂದಕ್ಕೆ ಹೋಗುತ್ತದೆಂಬ ಭಯ ಬಿಜೆಪಿಯನ್ನು ಆವರಿಸಿಕೊಂಡಿದೆ. ಇವತ್ತು ಬಿಜೆಪಿ ವರಿಷ್ಟರಿಗೆ ಯಡಿಯೂರಪ್ಪ ನುಂಗಲಾರದ ತುತ್ತು. ಒಂದು ಪಕ್ಷ ಹೈಕಮಾಂಡ್ ಯಡಿಯೂರಪ್ಪನವರನ್ನು ಪರಿಗಣಿಸದೇ ಇದ್ದರೆ ರಾಜ್ಯದಲ್ಲಿ ಬಿಜೆಪಿ ಚಿಂದಿಯಾಗುವುದು ಖಚಿತ. ಈ ಎಲ್ಲಾ ಸಾಧಕ-ಬಾಧಕಗಳನ್ನು ಅಳೆದು ಹೈಕಮಾಂಡ್ ಒಂದುಪಕ್ಷ ಯಡಿಯೂರಪ್ಪನವರನ್ನೇ ಕರ್ನಾಟಕ ಬಿಜೆಪಿಯ ಅಧ್ಯಕ್ಷಗಾದಿಯಲ್ಲಿ ಕೂರಿಸಿದರೂ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆಂಬ ಗ್ಯಾರಂಟಿ ಇಲ್ಲ. ಆಗ ಯಡಿಯೂರಪ್ಪ ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಸಚಿವರನ್ನು ತಮ್ಮ ಮನೆ ಬಾಗಿಲಿಗೆ ಪೆರೇಡ್ ಮಾಡಿಸಿ ತಮ್ಮ ವಿರೋಧಿಗಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಪ್ರೇತದಾಟ ಆಡಿಸುವುದು ನಿಜ. ಸದಾನಂದಗೌಡ ಅವರು ಬಹುಪಾಲು ಚುನಾವಣೆ ಬಜೆಟ್ ಅನ್ನೇ ಮಂಡಿಸಿರುವುದರಿಂದ ಈ ವರ್ಷವೇ ಚುನಾವಣೆ ಎದುರಾದರು ಅಚ್ಚರಿ ಪಡಬೇಕಿಲ್ಲ. ಅದಕ್ಕೆ ಕಾಂಗ್ರೆಸ್ ಕೂಡ ಹುಮ್ಮಸ್ಸಿನಲ್ಲಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಮುಖಭಂಗವಾದರೆ ಕಾಂಗ್ರೆಸ್ ಗೆ ಟಾನಿಕ್ ಸಿಕ್ಕಂತಾಗಿದೆ. ಅದರಲ್ಲೂ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಶಾಸಕರಿದ್ದರು. ಬಿಜೆಪಿ ಭದ್ರ ಕೋಟೆ ಎಂದು ಗುರುತಿಸಿಕೊಂಡಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಜನ ಬಿಜೆಪಿ ಕಡೆ ಒಲವು ಕಳೆದು ಕೊಂಡಿದ್ದಾರೆ ಎನ್ನಲು ಪೂರಕವಾಗಿದೆ. ಇದರಿಂದ ಸ್ವತಃ ಮುಖ್ಯಮಂತ್ರಿ ಸದಾನಂದಗೌಡರಿಗೂ ಹಿನ್ನೆಡೆ ಆಗಿದೆ. ಯಡಿಯೂರಪ್ಪನವರನ್ನು ಬಿಟ್ಟು ಚುನಾವಣೆ ಎದುರಿಸಲು ಕಷ್ಟ ಎನ್ನುವ ವಾತಾವರಣವನ್ನು ಯಡಿಯೂರಪ್ಪ ಬೆಂಬಲಿಗರು ಈಗಾಗಲೇ ಸೃಷ್ಟಿಸಿದ್ದಾರೆ. ಜೊತೆಗೆ ಯಡ್ಡಿವರ ಬಣ ಬಿಜೆಪಿಯ ಅಭ್ಯರ್ತಿ ವಿರುದ್ದ ಕೆಲಸ ಮಾಡಿದ್ದಾರೆಂಬ ದೂರು ಕೂಡ ಕೇಳಿ ಬರುತ್ತಿದೆ. ಇದು ಹೀಗೇ ನಡೆದಲ್ಲಿ ಬಿಜೆಪಿ ಅನಿವಾರ್ಯವಾಗಿ ಚುನಾವಣೆಗೆ ದಾರಿಮಾಡಿಕೊಡಬೇಕು. ಆದಳಿತಾರೂಢ ಪಕ್ಷ ಒಂದೇ ಸಮನೆ ರಾಜಕೀಯ ದೊಂಬರಾಟ ನಡೆಸುತ್ತಿರಲು ಸಾಧ್ಯವಿಲ್ಲ. ಅದಕೊಂದು ಕೊನೆಯಿರಲೇ ಬೇಕು. ಅದಕ್ಕೀಗ ಕಾಲ ಕೂಡಿ ಬಂದಿದೇಯೋ ನೋಡಬೇಕು. ಕರ್ನಾಟಕಕ್ಕೀಗ ಬದಲಾವಣೆ ಬೇಕೇ ಬೇಕು. ರಾಜಕೀಯದಾಟಗಳು ನೂರಾರು ನಡೆದರೂ ಕಡೆಯಲ್ಲಿ ಓಟು ಕೇಳಿ ಜನರ ಮನೆಬಾಗಿಲಿಗೇ ಬರುವ ಈ ಮಹಾಪುರುಷರ ದೊಂಬರಾಟಗಳನ್ನು ಜನ ನೆನಪಿನಲ್ಲಿಟ್ಟುಕೊಂಡು ಅವರಿಗೆ ಸರಿಯಾದ ಮರ್ಯಾದೆ ಮಾಡುವಂತೆ ಆದರೆ ಮಾತ್ರ ಕರ್ನಾಟಕ ಸೇಫ್!
"2018-08-17T14:37:33"
http://www.aayaama.com/ed25/%E0%B2%87%E0%B2%A8%E0%B2%BF%E0%B2%A4%E0%B3%86%E0%B2%A8%E0%B3%86.php
ತಾಂತ್ರಿಕ ಜೀವನಚರಿತ್ರೆ - ರಾಕ್ ಬ್ಯಾಂಡ್ ತಾಂತ್ರಿಕದ ವಿವರ ಸಂಗೀತ ರಾಕ್ ತಾಂತ್ರಿಕ ಜೀವನಚರಿತ್ರೆ ಮತ್ತು ವಿವರ by ಟಿಮ್ ಗ್ರಿಜರ್ಸನ್ ತಾಂತ್ರಿಕ ಅವಲೋಕನ: ಟ್ಯಾಂಟ್ರಿಕ್ ಅವರ ಅಚ್ಚುಕಟ್ಟಾದ ಹಾರ್ಡ್ ರಾಕ್ಗಾಗಿ ಅಲೈಸ್ ಇನ್ ಚೈನ್ಸ್ ಮತ್ತು ಕ್ರೀಡ್ನಿಂದ ಸ್ಫೂರ್ತಿಯನ್ನು ಪಡೆದರು. ಯಶಸ್ವಿ ಗುಂಪಿನ ಚಿತಾಭಸ್ಮದಿಂದ ಡೇಸ್ ಆಫ್ ದಿ ನ್ಯೂ, ತಾಂತ್ರಿಕ್ ಸದಸ್ಯರು ಆರಂಭದಲ್ಲಿ 2000 ರ ದಶಕದ ಆರಂಭದಲ್ಲಿ ದೊಡ್ಡ ವಾಣಿಜ್ಯ ಪ್ರೇಕ್ಷಕರನ್ನು ಕಂಡುಕೊಂಡರು, ಆದರೆ ದಶಕದಲ್ಲಿ ಧರಿಸಿದ್ದರಿಂದ, ಆಂತರಿಕ ಉದ್ವಿಗ್ನತೆಗಳು ಮತ್ತು ಸಾಧಾರಣ ಆಲ್ಬಂಗಳು ತಮ್ಮ ಮುಂದುವರಿದ ಕಾರ್ಯಸಾಧ್ಯತೆಯನ್ನು ಕಡಿಮೆ ಮಾಡಲು ಸಂಚು ಮಾಡಿತು. ಅನಾರೋಗ್ಯದಿಂದ, ತಾಂತ್ರಿಕತೆ 2009 ರಲ್ಲಿ ಹೊಸ ಆಲ್ಬಂ ಮೈಂಡ್ ಕಂಟ್ರೋಲ್ನೊಂದಿಗೆ ಹಿಂದಿರುಗಿತು. ತಾಂತ್ರಿಕ ಮೂಲಗಳು: ಥಾಂಟ್ರಿಕ್ ಗಿಟಾರ್ ವಾದಕ ಟಾಡ್ ವೈಟ್ನ್ನರ್, ಡ್ರಮ್ಮರ್ ಮ್ಯಾಟ್ ಟೌಲ್ ಮತ್ತು ಬಾಸ್ ವಾದಕ ಜೆಸ್ಸೆ ವೆಸ್ಟ್ರ ಮೂವರು ಸದಸ್ಯರು, ನ್ಯೂಸ್ -90 ರ ದಶಕದ ಕೊನೆಯಲ್ಲಿ ಡೇಸ್ ಆಫ್ ದ ನ್ಯೂನ ಭಾಗವಾಗಿದ್ದರು, ಇದು ಮುಖ್ಯವಾಹಿನಿಯ ಜನಪ್ರಿಯತೆಗೆ ಸೌಂಡ್ಗಾರ್ಡನ್ ಮತ್ತು ಆಲಿಸ್ ಇನ್ ಚೈನ್ಸ್ ನಂತಹ ಗ್ರಂಜ್ ಬ್ಯಾಂಡ್ಗಳ ಕೋಟ್ಯಾಲ್ಗಳನ್ನು ಸವಾರಿ ಮಾಡಿತು. ಆದರೆ ಮುಖ್ಯಸ್ಥ ಮತ್ತು ಪ್ರಧಾನ ಗೀತರಚನಾಕಾರ ಟ್ರಾವಿಸ್ ಮೀಕ್ಸ್ರೊಂದಿಗಿನ ಭಿನ್ನಾಭಿಪ್ರಾಯಗಳು ಉಳಿದ ಗುಂಪನ್ನು ತಮ್ಮ ಕೆಲಸದಿಂದ ಹೊರಹಾಕಿ ಅಥವಾ ಬಿಟ್ಟುಬಿಡುವುದಕ್ಕೆ ಕಾರಣವಾಯಿತು. ಮೂರು ಸಂಗೀತಗಾರರು ಹೊಸ ಗುಂಪನ್ನು ರೂಪಿಸಲು ನಿರ್ಧರಿಸಿದರು, ಹ್ಯೂಗೋ ಫೆರೀರಾ ಅವರ ಹೊಸ ಗಾಯಕರಾಗಿ ನೇಮಕಗೊಂಡರು. ಬ್ಯಾಂಡ್ ಮಡೊನ್ನಾಳ ಮಾವೆರಿಕ್ ಲೇಬಲ್ನೊಂದಿಗೆ ಸಹಿ ಹಾಕಿತು ಮತ್ತು ಅವರ ಚೊಚ್ಚಲತೆಯನ್ನು ತಯಾರಿಸಿತು. ಯಶಸ್ವಿ ಪೋಸ್ಟ್-ಗ್ರುಂಜ್ ಪ್ರಥಮ ಪ್ರವೇಶ: ತಾಂತ್ರಿಕರ ಸ್ವಯಂ-ಶೀರ್ಷಿಕೆಯ ಪ್ರಥಮ ಪರಿಚಯ 2001 ರ ಫೆಬ್ರವರಿಯಲ್ಲಿ ಕೈಬಿಟ್ಟಿತು. ಥೆಂಟ್ರಿಕ್ನ ಸಾಮರ್ಥ್ಯದ ಮೇಲೆ, ಅಲಿಸ್ ಇನ್ ಚೈನ್ಸ್ನ ಮೃತ ಮುಖಂಡನಾದ ಲಯ್ನೆ ಸ್ಟಾಲೆಯ್ನ ಭಯಂಕರವಾದ ಗ್ರಹಣವನ್ನು ಅನುಕರಿಸುವ ಸಾಮರ್ಥ್ಯದ ಕಾರಣ ಫೆರೆರಾ ಕನಿಷ್ಠ ಭಾಗಶಃ ನೇಮಕಗೊಂಡಿದ್ದನೆಂದು ಸ್ಪಷ್ಟವಾಯಿತು. ಇದು ಹೊಸ ಮೈದಾನವನ್ನು ಮುರಿಯಲು ಆಸಕ್ತಿಯಿರಲಿಲ್ಲ - ಬದಲಿಗೆ, ಹಿಟ್ ಸಿಂಗಲ್ "ಬ್ರೇಕ್ಡೌನ್" ನಂತಹ ಹಾಡುಗಳಲ್ಲಿ, ಥ್ರಂಟ್ ಗ್ರಂಜ್ ಗ್ರ್ಯಾವಿ ಟ್ರೈನ್ ಅನ್ನು ಕ್ರೀಡ್ ಮತ್ತು ನಂತರ, ನಿಕೆಲ್ಬ್ಯಾಕ್ ಮುಂತಾದ ಗುಂಪುಗಳಿಗೆ ಉತ್ತಮವಾದ ಸವಾರಿ ಮಾಡಬೇಕಾಯಿತು. ತಂತ್ರವು ಗೋಲ್ಡ್ ಆಗಿ ಹೋದರೂ, ನಿರೀಕ್ಷಿತವಾಗಿ ವಿಮರ್ಶೆಗಳು ಕಠಿಣವಾಗಿದ್ದವು. ದಿ ಸೋಫೋಮೋರ್ ಸ್ಲಂಪ್: ಮೂರು ವರ್ಷಗಳ ನಂತರ, ತಾಂತ್ರಿಕ್ ಮಾಂಸ-ಮತ್ತು-ಆಲೂಗಡ್ಡೆ ಹಾರ್ಡ್ ರಾಕ್ನ ಮತ್ತೊಂದು ಚಪ್ಪಡಿಯಾದ ಆಫ್ಟರ್ ವಿ ಗೋ ಜೊತೆ ಮರಳಿದರು. "ಹೇ ನೌ" ನಂತಹ ಸಿಂಗಲ್ಸ್ನಲ್ಲಿ ಅಲೈಸ್ ಇನ್ ಚೈನ್ಸ್ನ ಅತೀಂದ್ರಿಯ / ದೆವ್ವದ ವೈಬ್ ಅನ್ನು ಇನ್ನೂ ಚಾಲಿಸುವುದು, ಬ್ಯಾಂಡ್ನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ , ವಿಥ್ ವಿ ಗೋ ಯೊಂದಿಗೆ ತಾಂತ್ರಿಕ ಯಶಸ್ಸು ಗಳಿಸುವಲ್ಲಿ ವಿಫಲವಾಯಿತು. ಲೈನ್ ಅಪ್ ಬದಲಾವಣೆಗಳು ಮತ್ತು ಲೇಬಲ್ ಸಮಸ್ಯೆಗಳು: ಬ್ಯಾಂಡ್ನ ಮುಂದಿನ ಆಲ್ಬಂನ ಬಿಡುಗಡೆಗೆ ಮುಂಚಿತವಾಗಿ, ಟ್ಯಾಂಟ್ರಿಕ್ ಸರಣಿಯ ಪರಿವರ್ತನೆಗಳ ಸರಣಿಯನ್ನು ಅನುಭವಿಸಿದರು. ಫೆರೀರಾ ಹೊರತುಪಡಿಸಿ, ಗುಂಪಿನ ಸದಸ್ಯರು ವಾದ್ಯವೃಂದವನ್ನು ತೊರೆದರು - ವ್ಯಂಗ್ಯವಾಗಿ, ವ್ಹಿಟೆನರ್, ಟೌಲ್ನಿಂದ ನೇಮಕಗೊಂಡ ಮುಖ್ಯಸ್ಥ ಮತ್ತು ವೆಸ್ಟ್ ಈಗ ಮೂಲ ತಾಂತ್ರಿಕ ಅನುಕ್ರಮದಿಂದ ಬಿಟ್ಟುಹೋದ ಏಕೈಕ ಸದಸ್ಯರಾಗಿದ್ದರು. ಫೆರೀರಾ ಅವರು ಹೊಸ ಸಂಗೀತಗಾರರನ್ನು ನೇಮಕ ಮಾಡಿಕೊಂಡರು ಮತ್ತು ಅವರು ಈಗಾಗಲೇ ತಮ್ಮ ಮೂಲ ಬ್ಯಾಂಡ್ಮೇಟ್ಗಳೊಂದಿಗೆ ಬರೆದ ಹಾಡುಗಳ ಗುಂಪನ್ನು ಕೈಬಿಟ್ಟರು. ಅದೇ ಸಮಯದಲ್ಲಿ, ತಾಂತ್ರಿಕರು ಮಾವೆರಿಕ್ನೊಂದಿಗೆ ಪಾದಾರ್ಪಣೆ ಮಾಡಿದರು, ಇದು 2008 ರ ದಿ ಎಂಡ್ ಬಿಗಿನ್ಸ್ ಅನ್ನು ಬಿಡುಗಡೆ ಮಾಡಲು ಸೈಲೆಂಟ್ ಮೆಜಾರಿಟಿಗೆ ಸಹಿ ಹಾಕಲು ದಾರಿ ಮಾಡಿಕೊಟ್ಟಿತು, ಇದು ತಂಡದ ವಾಣಿಜ್ಯ ಭವಿಷ್ಯವನ್ನು ಹಿಮ್ಮೆಟ್ಟಿಸುವಲ್ಲಿ ವಿಫಲವಾಗಿದೆ. 'ಮನಸ್ಸಿನ ನಿಯಂತ್ರಣ': ಟ್ಯಾಂಟ್ರಿಕ್ ಆಗಸ್ಟ್ 4, 2009 ರಂದು ಹೊಸ ಆಲ್ಬಂ, ಮೈಂಡ್ ಕಂಟ್ರೋಲ್ನೊಂದಿಗೆ ಮರಳಿದರು, ಇದನ್ನು ಹಿಂದಿನ ಕ್ರೀಡ್ ಪ್ರವಾಸದ ವಾದಕ ಮತ್ತು ಮಾಜಿ ಡಾರ್ಕ್ ನ್ಯೂ ಡೇ ಫ್ರಂಟ್ಮ್ಯಾನ್ ಬ್ರೆಟ್ ಹೆಸ್ಟಲಾ ನಿರ್ಮಿಸಿದರು. ಯುಎಸ್ದಾದ್ಯಂತ ಚದುರಿದ ಆಗಿನ ಪ್ರಸ್ತುತ ಬ್ಯಾಂಡ್ನೊಂದಿಗೆ ಹೆಚ್ಚಿನ ಸಿಬ್ಬಂದಿ ಬದಲಾವಣೆಗಳನ್ನು ಮಾಡಿದ ನಂತರ ಸದಸ್ಯರು ತಮ್ಮ ಹಾಡುಗಳನ್ನು ನಿರ್ಮಿಸಲು ಇಮೇಲ್ ಮೂಲಕ ಸಂಗೀತ ಫೈಲ್ಗಳನ್ನು ವ್ಯಾಪಾರ ಮಾಡಿದರು. ಈ ಬ್ಯಾಂಡ್ ನಂತರ ಸ್ಟುಡಿಯೊದಲ್ಲಿ 30 ಗೀತೆಗಳೊಂದಿಗೆ ಒಟ್ಟಾಗಿ ಕೂಡಿತು, ಅಂತಿಮವಾಗಿ ಇಲ್ಲಿಯವರೆಗಿನ ಅವರ ಅತಿಹೆಚ್ಚಿನ ಆಲ್ಬಂನ 12 ಹಾಡುಗಳನ್ನು ರೆಕಾರ್ಡ್ ಮಾಡಲು ಆಯ್ಕೆ ಮಾಡಿತು. '37 ಚಾನೆಲ್ಗಳು ': ಲೀಡ್ ಗಾಯಕ ಹ್ಯೂಗೋ ಫೆರೀರಾ ಅವರು ಫೆಂಟಿರಾ ಸ್ವಯಂ-ನಿರ್ಮಿತವಾದ ಟಾಂಟಿಕಿಯ ಐದನೇ ಆಲ್ಬಂ 37 ಚಾನೆಲ್ಗಳ ರೆಕಾರ್ಡಿಂಗ್ ಸಮಯದಲ್ಲಿ ಬ್ಯಾಂಡ್ನ ಏಕೈಕ ಸದಸ್ಯರಾಗಿದ್ದರು. ಈ ಆಲ್ಬಂನಲ್ಲಿ ಶೂಟರ್ ಜೆನ್ನಿಂಗ್ಸ್ ಮತ್ತು ಹಿಂಡರ್ರ ನಂತರದ ಪ್ರಮುಖ ಗಾಯಕ ಆಸ್ಟಿನ್ ವಿಂಕ್ಲರ್ ಅತಿಥಿ ಗಾಯನವನ್ನು ಮಾಡಿದರು. ಆಲ್ಬಂ ಅಲ್ಬಮ್ ಹಲವಾರು ಅತಿಥಿ ಸಂಗೀತಗಾರರನ್ನು ಒಳಗೊಂಡಿತ್ತು ಮತ್ತು ಫೆರೀರಾ ಆಲ್ಬಂ ಅನ್ನು ಹೊಸ ಪ್ರವಾಸ ತಂಡವನ್ನು ರೂಪಿಸಲು ಪ್ರೋತ್ಸಾಹಿಸಲು ಈಗ ಆಲ್ಬಮ್ನಲ್ಲಿ ಪ್ಲೇ ಮಾಡಲಾಗಿತ್ತು. 'ಬ್ಲೂ ರೂಮ್ ಆರ್ಕೈವ್ಸ್': ಟಾಂಟಿಕನ್ನ ಆರನೇ ಸ್ಟುಡಿಯೋ ಆಲ್ಬಂ ಫೆರೀರಾಗಾಗಿ ಮತ್ತೆ ಸ್ವಯಂ-ನಿರ್ಮಿತ 2014 ರ ಬ್ಲೂ ರೂಂ ಆರ್ಕೈವ್ಸ್ ಇದು ಅವರ ಸಂಪೂರ್ಣ ವೃತ್ತಿಜೀವನದಿಂದ ಹಿಂದೆ ಬಿಡುಗಡೆಯಾಗದ ವಸ್ತುಗಳನ್ನು ಒಳಗೊಂಡಿರುವ ಒಂದು ಸಂಕಲನ ಆಲ್ಬಮ್ ಆಗಿದೆ. ಆಲ್ಬಂನ ಶೀರ್ಷಿಕೆಯು ಬ್ಯಾಂಡ್ನ ಮನೆಯ ಸ್ಟುಡಿಯೊದ ಹೆಸರು "ದಿ ಬ್ಲೂ ರೂಂ" ನಿಂದ ಬಂದಿತು. ಈ ಆಲ್ಬಂನಲ್ಲಿ ಹೊಸದಾಗಿ ರೆಕಾರ್ಡ್ ಮಾಡಿದ ಅಕೌಸ್ಟಿಕ್ ಆವೃತ್ತಿಗಳು ಆರಂಭಿಕ ಹಿಟ್ಸ್ "ಬ್ರೇಕ್ಡೌನ್" ಮತ್ತು "ಮೌರ್ನಿಂಗ್" ಮತ್ತು ನಂತರದ ಹಿಟ್ಸ್ "ಮೈಂಡ್ ಕಂಟ್ರೋಲ್" ಮತ್ತು "ಫಾಲ್ ಟು ದಿ ಗ್ರೌಂಡ್" ನ ಹೊಸ ರೀಮಿಕ್ಸ್ಗಳನ್ನು ಒಳಗೊಂಡಿದೆ. ಪ್ರಸ್ತುತ ತಾಂತ್ರಿಕ ಸಾಲು: ಹ್ಯೂಗೋ ಫೆರೀರಾ - ಗಾಯನ ಸ್ಕಾಟ್ ವಿಲ್ಸನ್ - ಬಾಸ್ ಗಿಟಾರ್ ಟಾಮಿ ಗಿಬ್ಬನ್ಸ್ - ಗಿಟಾರ್ ಅಗತ್ಯ ತಾಂತ್ರಿಕ ಹಾಡುಗಳು: "ವಿಭಜನೆ" "ಆಸ್ಟೌಂಡೆಡ್" "ಹೇ ನೌ" "ಡೌನ್ ಅಂಡ್ ಔಟ್" "ಮನಸ್ಸಿನ ನಿಯಂತ್ರಣ" ತಾಂತ್ರಿಕ ಧ್ವನಿಮುದ್ರಿಕೆ: ತಂತ್ರ (2001) ಆಫ್ಟರ್ ವಿ ಗೋ (2004) ದಿ ಎಂಡ್ ಬಿಗಿನ್ಸ್ (2008) ಮೈಂಡ್ ಕಂಟ್ರೋಲ್ (2009) 37 ಚಾನಲ್ಗಳು (2013) ಬ್ಲೂ ರೂಂ ಆರ್ಕೈವ್ಸ್ (2014) ತಾಂತ್ರಿಕ ಉಲ್ಲೇಖಗಳು: ಹ್ಯೂಗೋ ಫೆರೀರಾ, ಅವರು ತಾಂತ್ರಿಕರಿಗೆ ಹೇಗೆ ಶ್ರೇಣಿಯಲ್ಲಿದ್ದರು ಎಂಬುದರ ಕುರಿತು. "ನಾವು ಒಂದು ಹಂತದಲ್ಲಿ ಅದೇ ಕಂಪೆನಿಯಿಂದ ನಿರ್ವಹಿಸಲ್ಪಟ್ಟಿದ್ದೇವೆ, ನಾನು ವಿಲೀನ ಎಂಬ ಬ್ಯಾಂಡ್ನಲ್ಲಿರುವಾಗ ಅವರು ಡೇಸ್ ಆಫ್ ದಿ ನ್ಯೂನಲ್ಲಿದ್ದರು. ನಾವು ಒಬ್ಬರಿಗೊಬ್ಬರು ತಿಳಿದಿದ್ದೇವೆ ಮತ್ತು ವಾಸ್ತವವಾಗಿ ಸ್ವಲ್ಪಮಟ್ಟಿಗೆ ಪ್ರವಾಸ ಮಾಡಿದ್ದೇವೆ. ನಾನು ಬದಲಾವಣೆಗೆ ಸಿದ್ಧವಾಗಿದೆ, ಮತ್ತು ಅವರು ಹೊಸ ಗಿಗ್ನ ದಿನಗಳಿಂದ ಹೊರಬಂದರು ಮತ್ತು ಹೊಸ ಗಿಗ್ಗಾಗಿ ಹುಡುಕುತ್ತಿದ್ದರು. ನಾನು ಕೆಳಗೆ ಬಂದು ಅವರೊಂದಿಗೆ ಹಾಡಿದ್ದೆ, ಅದು ನೈಸರ್ಗಿಕವಾಗಿತ್ತು. ಎಲ್ಲರೂ ನಿಜವಾಗಿಯೂ ಚೆನ್ನಾಗಿ ಸಿಕ್ಕಿದ್ದರು, ಆದ್ದರಿಂದ ನಾವು ಹಾಗೆ ಇದ್ದೇವೆ, 'ಹೇ, ನಾವು ಬಹುಶಃ ಇದನ್ನು ಏನಾದರೂ ಕರೆಯಬೇಕು.' ನಾವು ಸಿ -14 ಎಂದು ಕರೆಯುತ್ತೇವೆ, ಇದು ಬ್ಯಾಂಡ್ನ ಮೂಲ ಹೆಸರಾಗಿತ್ತು. ಅದರ ನಂತರ ನಾವು ಉತ್ತಮ ಹೆಸರಿನೊಂದಿಗೆ ಬರಲು ನಿರ್ಧರಿಸಿದೆವು. " ಹ್ಯೂಗೋ ಫೆರೀರಾ, ' ಆಫ್ಟರ್ ವಿ ಗೋ' ಹಿನ್ನೆಲೆಯಲ್ಲಿ ಅವರು ಲೇಬಲ್ ಸಮಸ್ಯೆಗಳನ್ನು ಮತ್ತು ಸಿಬ್ಬಂದಿ ಬದಲಾವಣೆಯನ್ನು ಹೇಗೆ ನಿರ್ವಹಿಸಿದ್ದಾರೆ ಎಂಬುದರ ಕುರಿತು . "ಆ ಆರಂಭಿಕ ಆಘಾತವು ಕ್ಷೀಣಿಸಿದ ನಂತರ, ನಾನು ಹೋದೆ ಮತ್ತು ಎಲ್ಲಾ ರೀತಿಯ ಶಕ್ತಿಯನ್ನು ಸಂಗೀತಕ್ಕೆ ಬಿಡುಗಡೆ ಮಾಡಿದೆ. ನನ್ನ ಮನೆಯ ನೆಲಮಾಳಿಗೆಗೆ ನಾನು ಸ್ಟುಡಿಯೋವನ್ನು ನಿರ್ಮಿಸಿದ ಸ್ಥಳದಲ್ಲಿ ಹೋದೆ ಮತ್ತು ನಾನು ಬರೆಯಲು ಪ್ರಾರಂಭಿಸಿದೆ. ಹೋರಾಟಗಳು ಹಾದುಹೋಗುವ ಬಗ್ಗೆ ತಮಾಷೆ ವಿಷಯವೆಂದರೆ ಆ ಹೋರಾಟಗಳು ನಿಮಗೆ ಆಸಕ್ತಿದಾಯಕವಾಗಿದೆ. " ಹ್ಯೂಗೋ ಫೆರೀರಾ ಅವರು ಬ್ಯಾಂಡ್ನಿಂದ ಹೊರಬಂದ ಉಳಿದ ನಂತರ ತಾಂತ್ರಿಕ ಹೆಸರನ್ನು ಇಟ್ಟುಕೊಳ್ಳಲು ಏಕೆ ನಿರ್ಧರಿಸಿದರು ಎಂಬುದನ್ನು ವಿವರಿಸಿದರು. "ಇದು ಖಂಡಿತವಾಗಿಯೂ ನನ್ನ ವೈಯಕ್ತಿಕ ಗುರುತಿಗೆ ಸಂಬಂಧಿಸಿತ್ತು, ಜೊತೆಗೆ ನಾನು ಮೊದಲಿನಿಂದಲೂ ಪ್ರಾರಂಭಿಸಬೇಕಾಗಿಲ್ಲ. ನನ್ನ ತೋಳಿನಲ್ಲಿ ಹಚ್ಚೆ ಹಾಕಿದ ವಿಷಯ ನನಗೆ ಸಿಕ್ಕಿತು. ನಾನು ನೋಡಿದ ರೀತಿಯಲ್ಲಿ ನಾನು ಈ ಬ್ಯಾಂಡ್ ಅನ್ನು ಇದೀಗ ಎಲ್ಲಿ ಇರಿಸಿದೆ ಎಂಬುದರಲ್ಲಿ ಭಾಗವಾಗಿತ್ತು, ಆದ್ದರಿಂದ ನಾನು ಖಂಡಿತವಾಗಿಯೂ ಹೆಸರನ್ನು ಬಳಸಲು ಅರ್ಹನಾಗಿದ್ದನು. ನಾನು ಬ್ಯಾಂಡ್ನಲ್ಲಿ ಹೊರಡಲಿಲ್ಲ, ಎಲ್ಲರೂ ಮಾಡಿದರು. ನಾನು ಇನ್ನೂ ನಂಬುವವನು ನಾನೇ. " ತಾಂತ್ರಿಕ ಟ್ರಿವಿಯ: ನಾವು ನಂತರ ಹೋಗುವಾಗ ಟ್ಯಾಂಟ್ರಿಕ್ ಫ್ಲೀಟ್ವುಡ್ ಮ್ಯಾಕ್ನ "ದಿ ಚೈನ್" ಅನ್ನು ಒಳಗೊಂಡಿದೆ. ಹ್ಯೂಗೋ ಫೆರೀರಾ ಮುಂಚಿತವಾಗಿ '90 ರ ದಶಕದ ಗ್ರೂಪ್ ಎಕ್ಸ್ಟ್ರೀಮ್ನ ಮುಂಚಿನ ನೂನೋ ಬೆಟೆನ್ಕೂರ್ಟ್ ಜೊತೆ ಬೆಳೆದರು. (ಬಾಬ್ ಸ್ಕಲ್ಲೌರಿಂದ ಸಂಪಾದಿತ) ಗನ್ಸ್ ಎನ್ ರೋಸಸ್ ಬಯಾಗ್ರಫಿ ಮತ್ತು ಸ್ವವಿವರ ಜಿಮಿ ಹೆಂಡ್ರಿಕ್ಸ್ ಮತ್ತು ಕರ್ಟ್ ಕೊಬೈನ್ ನಡುವೆ 10 ಗಮನಾರ್ಹವಾದ ಸಾಮ್ಯತೆಗಳು ಚವೆಲ್ಲೆ ಜೀವನಚರಿತ್ರೆ ಮತ್ತು ವಿವರ ರೇಜ್ ಎಗೇನ್ಸ್ಟ್ ದಿ ಮೆಷಿನ್ನ ಪ್ರೊಫೈಲ್ ರಿವ್ಯೂ: ದ ಹೂ 'ಲೈವ್ ಇನ್ ಹೈಡ್ ಪಾರ್ಕ್' 50 ನೇ ವಾರ್ಷಿಕೋತ್ಸವ ಡಿವಿಡಿ ಸ್ಟೈನ್ಡ್ ಬಯಾಗ್ರಫಿ ಮತ್ತು ಪ್ರೊಫೈಲ್ ಬಕ್ಚರಿ ಬಯೋಗ್ರಫಿ ನೀವು ನಿಕಲ್ಬೆಕ್ ಅನ್ನು ಇಷ್ಟಪಟ್ಟರೆ ... ಈ ರಾಕರ್ಸ್ ಅನ್ನು ಪರಿಶೀಲಿಸಿ ಡೆಫ್ಟೋನ್ಸ್ ಜೀವನಚರಿತ್ರೆ ಹಾಲಿವುಡ್ ಶವಗಳ: ಆನ್ ದಿ ಎಡ್ಜ್ ಸಂದರ್ಶನ: ಡಾರ್ಕ್ನೆಸ್ 'ಜಸ್ಟಿನ್ ಹಾಕಿನ್ಸ್ ಸೇಸ್ ನ್ಯೂ ಲುಕ್' ನಾಟ್ ಎ ಡಿಸ್ಗೈಸ್ ' ಜೀವನಚರಿತ್ರೆ ಮತ್ತು ವೆಲ್ವೆಟ್ ರಿವಾಲ್ವರ್ನ ವಿವರ ಗ್ಯಾರೇಜ್ಬ್ಯಾಂಡ್ಗೆ ಪರಿಚಯ ಆರ್ಚಾಂಗೆಲ್ ರಝಿಯೆಲ್ ವಾಲಿಬಾಲ್ ಬ್ಲಾಕ್ ಅನ್ನು ಹೇಗೆ ಮಾಸ್ಟರ್ ಮಾಡುವುದು ಮಿಡ್ಲ್ಬರಿ ಕಾಲೇಜ್ ಅಡ್ಮಿಶನ್ಸ್ ಹಿಟ್ಲರನ ಕುಟುಂಬ ವೃಕ್ಷ ಹೆಡ್ಲೈಟ್ಗಳನ್ನು ಸ್ವಚ್ಛಗೊಳಿಸಲು ಹೇಗೆ ವಯಸ್ಕರ ಶಿಕ್ಷಣವನ್ನು ಕಂಡುಕೊಳ್ಳುವುದು ಮತ್ತು ಓಹಿಯೋದಲ್ಲಿ ನಿಮ್ಮ ಗೆಡ್ ಅನ್ನು ಹೇಗೆ ಪಡೆಯುವುದು ಅಡಲ್ಟ್ ಕಲಿಯುವವರಿಗೆ ಆಡ್ರಿನ್ ಕ್ಲಾರ್ಕ್ಸನ್ ಬಯೋಗ್ರಫಿ ರಿಪಬ್ಲಿಕ್ F-105 ಥಂಡರ್ಚೀಫ್: ವಿಯೆಟ್ನಾಂ ಯುದ್ಧ ವೈಲ್ಡ್ ವೀಸೆಲ್ ಆರ್ಚಾಂಜೆಲ್ ಹನೀಲ್ನನ್ನು ಹೇಗೆ ಗುರುತಿಸುವುದು ಹಿಸ್ಟರಿ ಆಫ್ ದ ಮಿಲ್ಲರೈಟ್ಸ್ ಜಪಾನ್ನ ಜೆನ್ಪಿ ಯುದ್ಧ, 1180 - 1185 ಹಿಟೈಟ್ಸ್ ಮತ್ತು ಹಿಟೈಟ್ ಸಾಮ್ರಾಜ್ಯ ಪೂಜ್ಯ ಬೆಡೆ GMAT ಪರೀಕ್ಷಾ ರಚನೆ, ಸಮಯ ಮತ್ತು ಸ್ಕೋರಿಂಗ್ ಚಿಕ್: ದಿ ಸಾಂಗ್ಸ್ ಅಂಡ್ ಹಿಸ್ಟರಿ ಆಫ್ ಡಿಸ್ಕೋ "ಗ್ರೇಟೆಸ್ಟ್" ಬ್ಯಾಂಡ್ ಸೇಂಟ್ ಜಾನ್ಸ್ ಕಾಲೇಜ್ ಸಾಂಟಾ ಫೆ ಪ್ರವೇಶಾತಿ ಅಸಿರಿಯಾ: ಆನ್ ಇಂಟ್ರೊಡಕ್ಷನ್ ಟು ದಿ ಏನ್ಷಿಯಂಟ್ ಎಂಪೈರ್ ನಿಮ್ಮ ಕಲಿಕೆಯ ಶೈಲಿಯ ಅತ್ಯುತ್ತಮ ಅಧ್ಯಯನ ತಂತ್ರಗಳು ಇಟಾಲಿಯನ್ ಭಾಷೆಯಲ್ಲಿ ಕ್ರಿಯಾಪದ "ಉಸ್ಕೈರ್" ಅನ್ನು ಹೇಗೆ ಸಂಯೋಜಿಸುವುದು ರಷ್ಯಾದ ಕ್ರಾಂತಿಗಳ ಟೈಮ್ಲೈನ್: 1906 - 1913 'ಅಲರ್,' 'ಡೆವೊಯಿರ್,' 'ಫೈರ್' ಮತ್ತು ಇತರ ಫ್ರೆಂಚ್ ಸೆಮಿ-ಆಕ್ಸಿಲಿಯರಿ ಕ್ರಿಯಾಪದಗಳು ಪ್ಯಾರಾಟಾಕ್ಸಿಸ್ (ವ್ಯಾಕರಣ ಮತ್ತು ಗದ್ಯ ಶೈಲಿ) ಆಂಟಿಟಮ್ ಯುದ್ಧ ಏಕೆ ಮತ್ತು ಧ್ಯಾನ ಮಾಡುವುದು ಹೇಗೆ? ಪ್ರಸಿದ್ಧ ಆರ್ಕಿಟೆಕ್ಟ್ಸ್ ಮೂಲಕ ಚೇರ್ಸ್ - ಆರ್ಕಿಟೆಕ್ಚರ್ ನೀವು ಕುಳಿತುಕೊಳ್ಳಬಹುದು ಮೇಜರ್ ಲೀಗ್ ಡಾರ್ಟ್ಸ್ - ಗೇಮ್ನಲ್ಲಿ ಅತಿ ದೊಡ್ಡ ಪಂದ್ಯಾವಳಿಗಳು ಫ್ಲಾಟ್ ಟೈರ್ ಅನ್ನು ಹೇಗೆ ಬದಲಾಯಿಸುವುದು
"2020-08-05T04:44:17"
https://kn.eferrit.com/%E0%B2%A4%E0%B2%BE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%95-%E0%B2%9C%E0%B3%80%E0%B2%B5%E0%B2%A8%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86/
ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು | Prajavani ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಆಮಿಷವೊಡ್ಡಿದ ಆರೋಪ ಬೆಂಗಳೂರು: ಬಿಜೆಪಿಗೆ ಅಗತ್ಯ ಸಂಖ್ಯೆಯ ಶಾಸಕರಿಲ್ಲದಿದ್ದರೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಹಣದ ಆಮಿಷವೊಡ್ಡಿದ್ದರು ಎಂದು ಆರೋಪಿಸಿ ‘ಭ್ರಷ್ಟಾಚಾರ ನಿಗ್ರಹ ದಳ’ಕ್ಕೆ (ಎಸಿಬಿ) ದೂರು ಕೊಡಲಾಗಿದೆ. ರಾಜ್ಯ ಕಾಂಗ್ರೆಸ್‌ ಕಾನೂನು ವಿಭಾಗದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಅವರು ಎಸಿಬಿಗೆ ಕೊಟ್ಟಿರುವ ಮೂರು ಪುಟಗಳ ದೂರಿನಲ್ಲಿ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಬಿ.ವೈ. ವಿಜಯೇಂದ್ರ, ಶಾಸಕರಾದ ಶ್ರೀರಾಮುಲು, ಬಿ.ಜೆ. ಪುಟ್ಟಸ್ವಾಮಿ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನಡೆದ ರಾಜಕೀಯ ಬೆಳವಣಿಗೆಯನ್ನು ದೂರಿನಲ್ಲಿ ವಿವರಿಸಲಾಗಿದೆ. ಈ ಆರೋಪಕ್ಕೆ ಪೂರಕವಾಗಿ ಬಿಜೆಪಿ ನಾಯಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಗಳನ್ನು ಲಗತ್ತಿಸಲಾಗಿದೆ. ಯಡಿಯೂರಪ್ಪ ವಿಧಾನಸಭೆಯಲ್ಲಿ ಮೇ 19ರಂದು ಬಹುಮತ ಸಾಬೀತುಪಡಿಸುವ ಉದ್ದೇಶದಿಂದ ಶಾಸಕರಿಗೆ ಕೊಡುವುದಕ್ಕಾಗಿ ಭಾರಿ ಪ್ರಮಾಣದ ಹಣವನ್ನು ತಮ್ಮ ಪಕ್ಷದ ಮುಖಂಡರಿಗೆ ನೀಡಿದ್ದರು ಎಂದೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ‘ವಿಧಾನಸಭೆಯಲ್ಲಿ ವಿಶ್ವಾಸ ಮತದ ನಿರ್ಣಯ ಮಂಡಿಸಿ ಮಾತನಾಡಿದ ಸಮಯದಲ್ಲಿ, ಕೆಲವು ಶಾಸಕರ ಜೊತೆ ತಾವು ಮಾತನಾಡಿದ್ದು ನಿಜ ಎಂದು ಸ್ವತಃ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯೇ ನಮ್ಮ ಆರೋಪಕ್ಕೆ ಸಾಂದರ್ಭಿಕ ಸಾಕ್ಷ್ಯ ಒದಗಿಸಿದೆ’ ಎಂದು ಸೂರ್ಯ ಮುಕುಂದರಾಜ್‌ ವಿವರಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಪಿತೂರಿ ಹಾಗೂ ಏಕ ಉದ್ದೇಶದಿಂದ ಕೂಟ ಕಟ್ಟಿದ ಆರೋಪದ ಮೇಲೆ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸುವಂತೆ ಹೇಳಲಾಗಿದೆ. ಮೇ 17ರಂದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಮೇ 19ರಂದು ವಿಶ್ವಾಸ ಮತ ಯಾಚಿಸಿ ನಿರ್ಣಯ ಮಂಡಿಸಿದ್ದರು. ಆದರೆ, ಈ ನಿರ್ಣಯವನ್ನು ಮತಕ್ಕೆ ಹಾಕುವ ಮೊದಲೇ ರಾಜೀನಾಮೆ ಪ್ರಕಟಿಸಿದರು.
"2018-07-20T16:48:41"
https://www.prajavani.net/news/article/2018/05/24/574919.html
ಸಂಗೀತ ಆರ್ಕೈವ್ಸ್ — ಪ್ರವಾಸ LEE - ಅಧಿಕೃತ ಜಾಲತಾಣ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಸಂಗೀತ ಹುಕ್: (ದಿಮಿತ್ರಿ) ನನ್ನ ಕಿರೀಟವನ್ನು ಅಲ್ಲಿ ಮುಳ್ಳುಗಳು ಅಭಿಪ್ರಾಯ ನಾನು ದುರ್ಬಲ ಮಾಡುತ್ತೇವೆ ಆದರೆ ನಾನು ಜೀವಂತವಾಗಿ ಮನುಷ್ಯ ಡಾನ್ ತನಕ ಧೂಳಿನಿಂದ ಹೌದು ಸಿಕ್ಕಿದ ಕಾರಣ ನಾನು ಉಳಿದುಕೊಂಡರೆ ಮಾಡುತ್ತೇವೆ ಯಾರೂ ನನಗೆ ಕಸಿದುಕೊಳ್ಳಲು ಸಾಧ್ಯವಿಲ್ಲ ಸಿಕ್ಕಿದ ಕಾರಣ, ಸಿಹಿ ವಿಜಯ ಹೌದು ನಾನೊಬ್ಬ limping ನೋಡಿ , ನಾನು ನನ್ನ limping ನೋಡಿ ಗೊತ್ತು ಈ ಸಿಡಿಗಳು ರಂದು ಹೇಳಲಾರೆ, ಆದರೆ ಬ್ರೋ ನಾನು ಆಳವಾದ ಮೊಣಕಾಲಿನ ಮನುಷ್ಯ ನನ್ನ ದೌರ್ಬಲ್ಯ ದಾಟಿ ಹೋಗಿದ್ದಾರೆ ಬಾಗುತ್ತೇನೆ, ಅವರು ನನಗೆ ಅವಲಂಬಿತವಾಗಬೇಕಾಯಿತು ನಾನು ಮತ್ತೆ ಇಲ್ಲ ಹೇಳಲು ನನ್ನ ಹಲ್ಲುಗಳ ಮೂಲಕ ಸುಳ್ಳು ಎಂದೆನಿಸಿತ್ತು ನಾನು ಈ ಸಾಲುಗಳನ್ನು ಬರೆಯಲು ಸಹ ನಾನು ಕಣ್ಣೀರು ಹತ್ತಿರ ಮನುಷ್ಯ ನನ್ನ ದೇಹದ ಏಳು ವರ್ಷಗಳ ಸರಿಯಾದ ಕೆಲಸ ಇಲ್ಲ ಆದ್ದರಿಂದ ನನಗೆ ತಪ್ಪಿಸುತ್ತವೆ "ನಿಮ್ಮ ಗಲ್ಲದ ಮುಂದುವರಿಸಿಕೊಂಡು ಕಿರುನಗೆ ಪ್ರಯತ್ನಿಸಿ" Bruh ನಾನು ಇಪ್ಪತ್ತಾರು ಮನುಷ್ಯ, ನಾನು ಒಂದು ಮೈಲಿಯಷ್ಟು ಉತ್ತಮ ಭಾವಿಸಬೇಕು ಎಲ್ಲಾ ನಿಮ್ಮ ವೃತ್ತಾಂತಗಳು ಮತ್ತು ಮುದ್ದಾದ ಉಲ್ಲೇಖಗಳು ಇರಿಸಿಕೊಳ್ಳಲು ನಾನು ನಿಜವಾದ ಭರವಸೆಯನ್ನು ಕ್ಲೀಷೆ ಮೇಲೆ ಹಾದು ವಿಲ್, ಅವರು ತುಂಬಾ ಡೋಪ್ ಇಲ್ಲಿದೆ ಕಿಂಗ್ ಟೋಸ್ಟ್, ಸೀಲಿಂಗ್ ನೆರೆದಿದ್ದ ಒಳ್ಳೆಯ ಭಾವನೆ ನಾವು ಗೊನ್ 'ಮುಕ್ತಾಯದ ಅದನ್ನು ಮಾಡಲು ನೀವು ನನಗೆ ಕೇಳಲು, ಹೊಳ್ಳ ನೀವು ನನಗೆ ಭಾವಿಸಿದಾಗ ನಾವು limping ಆದರೂ ನಾವು ಇನ್ನೂ ಸಹ ಚಾಲನೆಯಲ್ಲಿರುವ ನಾವು ಗೆಲ್ಲುವ ಕಾಸ್, ಹೌದು ನೀವು ನಾವು ಗೆಲ್ಲುವ ಗೊತ್ತು ನಾವು ಇನ್ನೂ ನಾವು ಸುಸ್ತಾಗುವ ಕೂಡ ನಾವು ಗೆಲ್ಲುವ ಕಾಸ್, ಹೌದು ನೀವು ನಾವು ಗೆಲ್ಲುವ ಗೊತ್ತು, ಈಗ ನಾವು ವಾಸಿಸುವ ಅವರು ವೇದಿಕೆಯ ಮೇಲೆ ನೋಡಿ, ಅವರು… ಜೇ ವಿವಾಹವಾಗಿದ್ದಾರೆ ಮತ್ತು ತನ್ನ ಹೃದಯ ಆಗಿರಬೇಕು… ಬಾಯ್ ನಾನು ಸಮಾಧಿ ಶುಭೋದಯ ಔಟ್ hopped ನಾನು ತುಂಬಾ ನಾನು ಆಕಳಿಸುವುದು ಬಾಗುತ್ತೇನೆ ಮಲಗಿದ್ದರು ಎಲ್ಲರೂ ನನ್ನನ್ನು ನೋಡಲು ಪ್ರಯತ್ನಿಸುತ್ತಿರುವ ಮಾತನಾಡುವ, ಅಪನಂಬಿಕೆ ಅವರು ಹೇಗೆ ಉಸಿರಾಟದ ಲೈಕ್? ಅವರು ಆರು ಅಡಿ ಆಳವಾದ ನೀವು ಹೇಳುವ ಯಾವ ಹುಡುಗ? ನಿಮ್ಮ ಬಾಯಿ ಮುಚ್ಚಿ ಹೊಂದಿರುತ್ತದೆ ಸತ್ತ ಪುರುಷರ ಮಾಡಬಹುದು ಹೊಳ್ಳ ಅಲ್ಲ, ನೀವು ಪಂದ್ಯದಲ್ಲಿ ಮಾತನಾಡುವ ಏನು? ಇದು ಹೊರ ವಾಕಿಂಗ್ ಇಲ್ಲ ಬಾಗಿಲಿನ ಮೂಲಕ ಒಮ್ಮೆ ಕಾಸ್ ಆದರೆ ನನಗೆ ನೀವು ಈಗ ನನ್ನ ಶವಪೆಟ್ಟಿಗೆಯಲ್ಲಿ ಸಮಯದಲ್ಲಿ ನೋಡೋಣ Ooh ನೀವು ಗಾಳಿಯಲ್ಲಿ ವಾಸನೆ ಗೊತ್ತಿಲ್ಲ ನಾನು ತುಂಬಾ ನಾನು ಪ್ರತಿಜ್ಞೆ ಸಮಾಧಿ ಎಂದು ಕಾಸ್ ನಾನು ಅಳುವುದು ಜನರು ಕಾಣೆಯಾಗಿದೆ ನಾನು, ಸಂತಾಪ ಬರೆಯಲಾಗಿದೆ ನನ್ನ ಮುಖ ತೆಳು, ಏರಿದೆ ಬಗ್ಗೆ ಅವರು ನಿಮ್ಮ ಹುಡುಗ ಹೇಳಲು ಸಾಧ್ಯವಿಲ್ಲ ಶವಪೆಟ್ಟಿಗೆಯಲ್ಲಿ ಮುಚ್ಚಿ, ಬೋಧಕ ಕರೆ, ಅವರು ಹೋದ ಇದು ಯಾರೂ ಅವನನ್ನು ತಲುಪಬಹುದು ಮುಗಿಯುವ, ಬಹಳ ಹೇಳುತ್ತಾರೆ ಆದರೆ ಹಿಡಿದಿಟ್ಟುಕೊಳ್ಳುವುದು, ನೀವು ಅಳಲು ಮತ್ತು ರನ್ ಔಟ್ ಮೊದಲು ನಾನು ಯಾರಾದರೂ ಬರುವ ಕೇಳಿದ, ಎಂದು ಏನೋ ಚೀರುತ್ತಾ ಹಾರಿದಂತೆ, “ಹೊರಗೆ ಬಾ” ಸಮಾಧಿ ಔಟ್ hopped, ಶುಭೋದಯ ಅವರು ಕಪ್ಪು ಸೂಟ್ ನನಗೆ ಸಮಾಧಿ, ಕಪ್ಪು ಕೊರಳ ಪಟ್ಟಿ ನಾನು ಜೀವಂತವಾಗಿ ನಾನು ಮತ್ತು ನಾನು ಹುಡುಕುತ್ತಿರುವ ನೊಣ ಎಚ್ಚರವಾಯಿತು ಆದ್ದರಿಂದ ಈಗಿನಿಂದ ಈಗ ನೀವು ನನಗೆ ಲಜಾರಸ್ ಕರೆಯಬಹುದು ಮೇಲೆ ಲಜಾರಸ್ ವಾಕಿಂಗ್ ಮಾಜಿ ಸತ್ತ ವ್ಯಕ್ತಿ (ಪುನರಾವರ್ತಿಸಿ) ಪದ್ಯ 2: (This'l) ಅವರು ಕಾಣೆಯಾದ ವ್ಯಕ್ತಿಗಳ ವರದಿ ಪಡೆಯಿತು ಮತ್ತು… ನಾವು ಪಡೆಯಲಾಗುತ್ತದೆ… ಓಹ್, ನಾನು ನಿನ್ನನ್ನು ಪ್ರೀತಿಸುತ್ತೇನೆ, ಹೌದು ಯಾವುದೇ, ಹೌದು ನಾನು ನೋಡಿದಾಗ ನೀವು ಬೇಸಿಗೆಯಲ್ಲಿ ಹೊಳೆಯುತ್ತಿರಲು ಕಿರುನಗೆ, ಹೌದು ನೀವು ಅವುಗಳನ್ನು ಪದಗಳನ್ನು ವಿಫಲವಾದಾಗ ಭಾವನೆ ತಿಳಿದಿದೆ ಇದು ನಾನು ಮಾಡಲಿಚ್ಛಿಸುತ್ತೇನೆ ಏನು ಹೇಳಲು ಪದಗಳಲ್ಲಿ ಹೇಳು ಕಷ್ಟ ನನ್ನ ಮಿನಿ, ನನ್ನ ಚಿಕ್ಕ ಮನುಷ್ಯ ಮಾತನಾಡುವ ಮಗುವಿಗಾಗಿ ಚರ್ಚೆ, ನಾನು ನೀವು ಹೇಳುವ ಏನನ್ನು ಗೊತ್ತಿಲ್ಲ ಆದರೆ ಆದರೂ ನನ್ನ ಕಿವಿಗಳು ಸಂಗೀತ ನಿಮ್ಮ ಡ್ಯಾಡಿ ಬೂಮ್ ಬ್ಯಾಪ್ ನಾನು ಬಳಿ ಇರುವಾಗ ಮಮ್ಮಿ ಅವುಗಳನ್ನು ಪೋಲೋವನ್ನು ಮತ್ತು skinnies ನೀವು ಪುಟ್ ಕರ್ಲಿ ಫ್ರೋ ಕಾಡು, ನೀವು ಆದರೂ ಕುಡಿನೋಟ ಹೆಚ್ಚು ಫ್ಲೈಯರ್ ಎಂದು ನೀವು ಅವುಗಳ ಮೇಲೆ ಎಂದು ಮಿಶ್ರ ಮಗು ತೋರಣ ಸಿಕ್ಕಿತು ನಿಮ್ಮ ಮಾಮಾ ಮತ್ತು ಅವುಗಳನ್ನು ನಿಮ್ಮ ತಂದೆ ಕಾಣುವ ನೇರ ಗರ್ಭ ನೀವು ನಿಜವಾದ ತಾಜಾ ನಾನು ತನಕ ನಾನು ಕಣ್ಣೀರು ಬಿಟ್ಟು ಆದ್ದರಿಂದ ಹಾರ್ಡ್ ಕ್ರೈಡ್ ಅಂದಿನಿಂದ ನನ್ನ ಮುಖದ ಮೇಲೆ ಒಂದು ಸ್ಮೈಲ್ ಇರಿಸಿಕೊಳ್ಳಲು ವ್ರೆಸ್ಲಿಂಗ್ ಮತ್ತು ನೃತ್ಯ, ಸ್ಥಳದಲ್ಲಿ ಕಾಡು ನಾನು ನನ್ನ ಹೆಸರನ್ನು ತಿಳಿಯಲು ನೋಡಿ ಆದರೆ ನಾನು ಅವರ ಪ್ರಸಿದ್ಧಿಯ ತನ್ನ ದೇಶ ಧರಿಸಿ ಬಯಸುವ, ನಾನು ನಿನ್ನನ್ನು ಪ್ರೀತಿಸುತ್ತೇನೆ ಓಹ್, ನಾನು ನಿನ್ನನ್ನು ಪ್ರೀತಿಸುತ್ತೇನೆ ನಾನು ನೋಡಿದಾಗ ನೀವು ಬೇಸಿಗೆಯಲ್ಲಿ ಹೊಳೆಯುತ್ತಿರಲು ಕಿರುನಗೆ ನನ್ನ ದೃಷ್ಟಿ ಸ್ಪಷ್ಟವಾಗಿರುತ್ತದೆ ಸಾಧ್ಯವಿಲ್ಲ ಯಾವುದೇ ಯಾವುದೇ ಯಾವುದೇ ನೀವು ಬ್ಯುಟಿಫುಲ್ ಕಾಸ್, ಇದು ಯಾವುದೇ ಅದ್ಭುತ ನಾನು ನಿನ್ನ ಪ್ರೀತಿಸುತ್ತೇನೆ ವಿಶೇಷವೇನು ನಾನು ಗಣಿ ಆರ್ ನಂಬಲು ಸಾಧ್ಯವಿಲ್ಲ, ನಾನು ಗಣಿ ಆರ್ ನಂಬಲು ಸಾಧ್ಯವಿಲ್ಲ ನೀನು ಯಾವಾಗಲೂ ನನ್ನ ಮನಸಿನಲ್ಲಿರುವೆ, ನಾನು ಎಲ್ಲಾ ಗಣಿ ಆರ್ ನಂಬಲು ಸಾಧ್ಯವಿಲ್ಲ (2ಎಕ್ಸ್) ಪೋಸ್ಟ್ ಕೊಕ್ಕೆ: ನಾನು ಸಾಧ್ಯವಿಲ್ಲ… ಪದ್ಯ… ನೀವು ರೀತಿಯಲ್ಲಿ… ನಾನು ಶತ್ರುಗಳನ್ನು ಸಿಕ್ಕಿತು ನಾನು ನೋಡಲು ಸಾಧ್ಯವಿಲ್ಲ ಎಲ್ಲಾ ಆದರೆ… ನಾನು ಒಂದು ಒಂದು ಎಂದು… ನಾವು ಗೊತ್ತಿಲ್ಲ… ನೀವು ಪ್ರೀತಿಸಿದ ನೀವು ತಿಳಿಯುವುದು… ಅವನನ್ನು ಹಾಗೆ ನಿಯಮಕ್ಕೆ,… ಮನಸ್ಸಿನಲ್ಲಿ ಜೊತೆ, ನಾನು ಭೇಟಿ ಮಾಡುವ ಅವಕಾಶ ಅವರಿಗೆ ಅವಳನ್ನು ಈ ನಾನು ಬಹುಷಃ ಪ್ರಶ್ನೆಗಳನ್ನು ಕೆಲವು… ಏಕೆ ಕಳೆದ ವರ್ಷ ನಾನು ಬರೆದ ಆ ಒಳ್ಳೆಯ ಜೀವನ, ಹಿಂದೆ ಸಂದೇಶವನ್ನು ಆಳವಾಗಿ ಹಾರಿ ಒಂದು ಪುಸ್ತಕ ನನ್ನ ದಾಖಲೆ ಅದೇ ಶೀರ್ಷಿಕೆಯ. ನಾನು ಎಂದು ನಾನು ಸ್ವಲ್ಪ ಹೆಚ್ಚು ಪ್ರಯಾಣ ಆಗಲಿಲ್ಲ ಕೊನೆಯ ಪತನದ ಘೋಷಿಸಿತು ಏಕೆ ಇದು ಇಲ್ಲಿದೆ. ನಾನು ನಿಷ್ಠಾವಂತ ಪಾದ್ರಿ ಎಂದು ಹೇಗೆ ತಿಳಿಯಲು ಬಯಸುವ, ಮತ್ತು ಕೇವಲ ನಿಜವಾಗಿಯೂ ಒಂದು ಸ್ಥಳೀಯ ಚರ್ಚ್ ಸಂದರ್ಭದಲ್ಲಿ ಸಂಭವಿಸಬಹುದು. ಆದ್ದರಿಂದ ನಾನು ವಾಷಿಂಗ್ಟನ್ ನನ್ನ ಚರ್ಚ್ ನಲ್ಲಿ ಧಾರ್ಮಿಕ ಪ್ಯಾಸ್ಟರ್ ರಿಂದ ಕಲಿಕೆ ಹೂಡಲು ಸಮಯ ತೆಗೆದುಕೊಳ್ಳುವ ಬಾಗುತ್ತೇನೆ, ಡಿಸಿ. ಲಾರ್ಡ್ ಸಿದ್ಧರಿದ್ದಾರೆ, ನನ್ನ ಚರ್ಚ್ ನಲ್ಲಿ ಸಿಬ್ಬಂದಿ ಮೇಲೆ ಸೇವೆ ಮಾಹಿತಿ, ನಾನು ಮಾಡುತ್ತೇವೆ… ಈ ಸೆಪ್ಟೆಂಬರ್ ನಾವು ಒಂದು ಕಿರುಚಿತ್ರ ಮತ್ತು ಆಲ್ಬಮ್ ಎಂಬ ಬಿಡುಗಡೆ “ಮ್ಯಾನ್ ಅಪ್” ಪುರುಷರು ಎಂದು ಯುವಕರು ಸವಾಲು. ಇಲ್ಲಿ ಒಂದು ಸಂಗೀತ ವಿಡಿಯೋ ಇಲ್ಲಿದೆ “ಮ್ಯಾನ್ ರಾಷ್ಟ್ರಗೀತೆ ಉಡುಪು.” ನೀವು ಕಿರುಚಿತ್ರ ಮತ್ತು ಆಲ್ಬಮ್ ಖರೀದಿಸಬಹುದು ಇಲ್ಲಿ ಸರ್ವೆಂಟ್ಸ್ ಸರ್ಪ ಹೋರಾಟ…
"2020-07-13T12:49:03"
https://builttobrag.com/tag/music/?lang=kn
ಪೊಲೀಸ್‌ ಇಲಾಖೆಯಿಂದ ನಗರದ ಮೂರು: ಕುದುರೆ ಕಟ್ಟುವ ಮನೆಯೇ ವಸತಿಗೃಹ! - a horse-making house lodge | Vijaya Karnataka a horse-making house lodge ಕುದುರೆ ಕಟ್ಟುವ ಮನೆಯೇ ವಸತಿಗೃಹ! ಬಸವರಾಜ ಸರೂರ ರಾಣೇಬೆನ್ನೂರ: ಪೊಲೀಸ್‌ ಇಲಾಖೆಯಿಂದ ನಗರದ ಮೂರು ಕಡೆ ಪೊಲೀಸ್‌ ವಸತಿ ಗೃಹಗಳಿದ್ದು ಆ ಪೈಕಿ ಕಳೆದ ವರ್ಷ ನಿರ್ಮಿಸಲಾದ ವಸತಿ ಗೃಹಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ರೇಲ್ವೆ ಸ್ಟೇಷನ್‌ ರಸ್ತೆಯಲ್ಲಿಬ್ರಿಟಿಷರ ಕಾಲದಲ್ಲಿಕುದುರೆಗಳನ್ನು ಕಟ್ಟಲು ಬಳಸಲಾಗುತ್ತಿದ್ದ ಕಟ್ಟಡಗಳನ್ನೇ ಪೊಲೀಸ್‌ ವಸತಿ ಗೃಹಗಳನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ28 ಮನೆಗಳಿದ್ದರೂ 10 ಮನೆಗಳಲ್ಲಿಮಾತ್ರ ಪೊಲೀಸ್‌ ಕುಟುಂಬ ತಮ್ಮ ಸ್ವಂತ ಖರ್ಚಿನಲ್ಲಿತಕ್ಕಮಟ್ಟಿಗೆ ದುರಸ್ತಿ ಮಾಡಿಸಿಕೊಂಡು ವಾಸವಾಗಿವೆ. 2008-09 ರಲ್ಲಿಒಂದು ಬಾರಿ ಅವುಗಳ ಹೆಂಚುಗಳನ್ನು ರಿಪೇರಿ ಮಾಡಿಸಿದ್ದನ್ನು ಬಿಟ್ಟರೆ ಮತ್ತೆ ರಿಪೇರಿ ಭಾಗ್ಯ ಇಲ್ಲವಾಗಿದೆ. ಈ ಕಾಮಗಾರಿಯೂ ಕಳಪೆಯಾಗಿತ್ತು ಎನ್ನುವುದು ಸಿಬ್ಬಂದಿ ಆರೋಪವಾಗಿದೆ. ನಂತರ ಇಲಾಖೆ ವತಿಯಿಂದ ಅವುಗಳನ್ನು ಕೆಡವಲು ಪತ್ರ ಬರೆಯಲಾಗಿದ್ದರೂ ಲೋಕೋಪಯೋಗಿ ಇಲಾಖೆಯಿಂದ ಪರವಾನಗಿ ಸಿಕ್ಕಿಲ್ಲ. ಇಲ್ಲಿನ ಮನೆಗಳಿಗೆ ಬೋರ್‌ವೆಲ್‌ ನೀರು ಪೂರೈಸಲಾಗುತ್ತಿದ್ದು ನದಿ ನೀರು ಇಲ್ಲವಾಗಿದೆ. ಇನ್ನು ಮಾರುತಿನಗರದಲ್ಲಿ7 ವಸತಿಗೃಹಗಳನ್ನು 2005ರಲ್ಲಿನಿರ್ಮಿಸಲಾಗಿದ್ದು, ಇದ್ದುದರಲ್ಲಿತಕ್ಕಮಟ್ಟಿಗೆ ಯೋಗ್ಯವಾಗಿವೆ. ನದಿ ನೀರು ಪೂರೈಕೆಯಿದೆ. ಆದರೆ ಕೆಲ ಮನೆಗಳು ಮಳೆಗಾಲದಲ್ಲಿಸೋರುತ್ತವೆ. 2018ರಲ್ಲಿನಿರ್ಮಾಣಗೊಂಡ ಶ್ರೀರಾಮನಗರದ ಮನೆಗಳು ಉತ್ತಮವಾಗಿವೆ. ಇಲ್ಲಿಎರಡು ಬೆಡ್‌ರೂಮ್‌, ಹಾಲ್‌, ಅಡುಗೆಮನೆ ಹೊಂದಿರುವ 24 ಮನೆಗಳನ್ನು ಎರಡು ಅಂತಸ್ತುಗಳಲ್ಲಿನಿರ್ಮಿಸಲಾಗಿದೆ. ಇಲ್ಲಿಬೋರ್‌ವೆಲ್‌ ನೀರಿನ ಪೂರೈಕೆಯಿದ್ದು ನದಿ ನೀರಿನ ಪೂರೈಕೆಯಿಲ್ಲ. Web Title a horse making house lodge Keywords:ವಸತಿ ಗೃಹಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ|ರಾಣೇಬೆನ್ನೂರ|ಪೊಲೀಸ್‌ ಇಲಾಖೆಯಿಂದ ನಗರದ ಮೂರು|ಕಡೆ ಪೊಲೀಸ್‌ ವಸತಿ ಗೃಹಗಳಿದ್ದು|ಆ ಪೈಕಿ ಕಳೆದ ವರ್ಷ ನಿರ್ಮಿಸಲಾದ ಕುದುರೆ ಕಟ್ಟುವ ಮನೆಯೇ ವಸತಿಗೃಹ!... ಅಪೌಷ್ಠಿಕತೆ ಅಭಿವೃದ್ಧಿಗೆ ಅಡ್ಡಗಾಲು... ಎಸಿಬಿಯಿಂದ ಸಾರ್ವಜನಿಕ ಕುಂದುಕೊರತೆಗಳ... ಅಕ್ರಮ ಕಲ್ಲುಕ್ವಾರಿ ಬಂದ್‌ ಮಾಡಿಸಿದ ಅರಣ್ಯ ಇಲಾಖೆ... ಹೊಲದಲ್ಲಿ ವಿದ್ಯುತ್‌ ಕಂಬ ಅಳವಡಿಕೆ ರೈತರ ಆಕ್ರೋಶ...
"2019-10-17T08:09:44"
https://vijaykarnataka.com/news/haveri/a-horse-making-house-lodge/articleshow/71136554.cms
ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ಎಸ್ ಎಸ್ ಸಿಯಲ್ಲಿ ಶೇಕಡಾ 100 ಫಲಿತಾಂಶ -ಕಿರಣ್ ವಾರ್ತಾ | Kiran Varta ಮನೆ ಎಸ್ ಎಸ್ ಸಿ ಪ್ರತಿಭಾನ್ವಿತರು ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ಎಸ್ ಎಸ್ ಸಿಯಲ್ಲಿ ಶೇಕಡಾ 100 ಫಲಿತಾಂಶ... ಪುಣೆ ,ಜುಲೈ . 30 : (ಕಿರಣ್ ವಾರ್ತಾ-www.kiranvata.com) ಕನ್ನಡ ಸಂಘ ಪುಣೆ ವತಿಯಿಂದ ನಡೆಸಲ್ಪಡುವ ಡಾ . ಶಾಮರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲಿನಲ್ಲಿ 2019-20 ಸಾಲಿನ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ . ಪರೀಕ್ಷೆಗೆ ಹಾಜರಾದ ಒಟ್ಟು 80 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ,24 ಫರ್ಸ್ಟ್ ಕ್ಲಾಸ್ ,30 ಸೆಕಂಡ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿರುತ್ತಾರೆ. ಖಾಂಡೇರಾವ್ ಭೀಮಣ್ಣ ಬಂಡಾಗರ್ ಶೇಕಡಾ 87 ಅಂಕಗಳನ್ನು ಗಳಿಸಿ ತರಗತಿಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ . ರೋಹಿತ್ ರಜಕ್ ನಾಟಿಕರ್ ಶೇಕಡಾ 84. 2 ಅಂಕ ಳನ್ನು ಪಡೆದು ದ್ವಿತೀಯ ಸ್ಥಾನಿಯಾದರೆ ನಿಖಿಲ್ ಬಾಬು ವಡ್ಡಾರ್ ಶೇಕಡಾ 84 ಅಂಕಗಳನ್ನು ಪಡೆದಿರುತ್ತಾರೆ ಐಶ್ವರ್ಯ ಗುಂಡಪ್ಪ ನಾಟಿಕರ್ ಶೇಕಡಾ 83. 4 ಅಂಕಗಳು ,ಶಿವಕುಮಾರ್ ಸಾದಪ್ಪ ಕೋಲಿ ಶೇಕಡಾ 83,ಅಂಜನಯ್ಯ ಹನುಮಂತ ಕೋಲಿ ಶೇಕಡಾ 81 .4 ,ಸ್ನೇಹಾ ಪರಶುರಾಮ್ ಸಖಾರೆ ಶೇಕಡಾ 80.8 ,ಅಪ್ ಸಾನ್ ಲಾಲ್ ಬಾಷಾ ಮನಿಯಾರ್ ಶೇಕಡಾ 80. 4,ಭೀಮಾಶಂಕರ್ ಹನುಮಂತ್ ಕೋಲಿ ಶೇಕಡಾ 80 .4 ಅಂಕಗಳನ್ನು ಗಳಿಸಿರುತ್ತಾರೆ . ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ,ಉಪಾಧ್ಯಕ್ಷರುಗಳಾದ ಶ್ರೀಮತಿ ಇಂದಿರಾ ಸಾಲಿಯಾನ್ ,ನಾರಾಯಣ ಹೆಗಡೆ , ಕಾರ್ಯದರ್ಶಿ ಮಾಲತಿ ಕಲ್ಮಾಡಿ ,ಕೋಶಾಧಿಕಾರಿ ಶ್ರೀನಿವಾಸ ಆಳ್ವ ,ವಿಶ್ವಸ್ಥರು ,ಕನ್ನಡ ಮಾಧ್ಯಮ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕುಡೆ ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ . ಹಿಂದಿನ ಲೇಖನಪುಣೆ ತ್ರಿಶಾ ಯಶವಂತ್ ಶೆಟ್ಟಿ ಯವರಿಗೆ ಎಸ್ ಎಸ್ ಸಿ ಯಲ್ಲಿ ಶೇಕಡಾ 82 ಅಂಕಗಳು ಮುಂದಿನ ಲೇಖನಪುಣೆ ಅನಿಶ್ ದಯಾನಂದ್ ಶೆಟ್ಟಿ ಯವರಿಗೆ ಎಸ್ ಎಸ್ ಸಿ ಯಲ್ಲಿ ಶೇಕಡಾ 96 ಅಂಕಗಳು – ಕಿರಣ್ ವಾರ್ತಾ ನೀವೂ ಮತದಾರ ನೋಂದಣಿ ಮಾಡಿಸಿದ್ದೀರಾ ?2019 ಮತದಾರ ನೋಂದಣಿಗಾಗಿ ಕೆಲವೇ ತಾಸು ಬಾಕಿ . ಮಹಾರಾಷ್ಟ್ರದ ಗಡ್ ಚಿರೋಳಿಯಲ್ಲಿ ಕೆಂಪು ಉಗ್ರರ ವಿಕೃತ ಅಟ್ಟಹಾಸಕ್ಕೆ 15 ಕಮಾಂಡೋಗಳು ಬಲಿ ಪುಣೆ ಬಂಟರ ಸಂಘದ ಶೈಕ್ಷಣಿಕ ಧನ ಸಹಾಯ,ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ -ಕಿರಣ್...
"2020-08-09T21:01:06"
https://kiranvarta.com/%E0%B2%AA%E0%B3%81%E0%B2%A3%E0%B3%86-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B0%E0%B3%81/%E0%B2%AA%E0%B3%81%E0%B2%A3%E0%B3%86-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%82%E0%B2%98%E0%B2%A6-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%AE%E0%B2%BE%E0%B2%A7/
ಇವಿಎಂ: Latest News, Photos, Videos on ಇವಿಎಂ | kannada.asianetnews.com NEWS10, Aug 2019, 9:50 AM IST ಇವಿಎಂ ಬಿಟ್ಟು ಬ್ಯಾಲಟ್‌ ಪೇಪರ್‌ ಬಳಸುವ ಪ್ರಶ್ನೆ ಇಲ್ಲವೇ ಇಲ್ಲ: ಆಯೋಗ ಸ್ಪಷ್ಟನೆ ಇವಿಎಂ ಬಿಟ್ಟು ಬ್ಯಾಲಟ್‌ ಪೇಪರ್‌ ಬಳಸುವ ಪ್ರಶ್ನೆ ಇಲ್ಲವೇ ಇಲ್ಲ: ಆಯೋಗ| ಕಾಶ್ಮೀರ ಚುನಾವಣೆ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ‘ಕೇಂದ್ರ ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಜೊತೆ ಸಂಪರ್ಕದಲ್ಲಿದ್ದು, ಅವರ ಮಾಹಿತಿಗಾಗಿ ಕಾಯುತ್ತಿದ್ದೇವೆ NEWS3, Jun 2019, 3:52 PM IST ‘ಲೋಕ ಚುನಾವಣೆಯಲ್ಲಿ ಬಿಜೆಪಿಗೆ ಯದ್ವಾತದ್ವಾ ಲೀಡ್; EVM ಹ್ಯಾಕ್ ಶಂಕೆ’ ಲೋಕಸಭೆ ಚುನಾವಣೆ ಬೆನ್ನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುತೇಕ ಕಡೆ ರಾಜ್ಯದ ಮತದಾರರು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಜೈ ಅಂದಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಮತ್ತೆ ಇವಿಎಂ ಮೇಲೆ ರಾಜಕೀಯ ಮುಖಂಡರು ಬೊಟ್ಟು ಮಾಡಲಾರಂಭಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಇಂತಹ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. NEWS2, Jun 2019, 10:02 AM IST ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್‌ಗಳನ್ನು ಹ್ಯಾಕ್ ಮಾಡಲು, ಇಲ್ಲವೇ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸಂಶಯಗಳಿದ್ದರೆ ಯಾವುದೇ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಗೌತಮ ಹೇಳಿದ್ದಾರೆ. Lok Sabha Election News24, May 2019, 5:45 PM IST ಫಲಿತಾಂಶದ ನಂತರ ಇವಿಎಂ ರಹಸ್ಯ ಹೇಳಿದ ಓವೖಸಿ ಲೋಕ ಸಮರ ಫಲಿತಾಂಶ ಪ್ರಕಟವಾಗುವುದಕ್ಕ ಮುನ್ನ ಇವಿಎಂ ಯಂತ್ರಗಳ ಮೇಲೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇವಿಎಂ ಯಂತ್ರಗಳ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದವು. ಆದರೆ ಫಲಿತಾಂಶದ ನಂತರ ಹೈದರಾಬಾದ್ ನಿಂದ ಗೆದ್ದಿರುವ ಅಸಾದುದ್ದೀನ್ ಓವೈಸಿ ಮಾತನಾಡಿದ್ದಾರೆ.
"2019-10-19T06:55:08"
https://kannada.asianetnews.com/topic/%E0%B2%87%E0%B2%B5%E0%B2%BF%E0%B2%8E%E0%B2%82
ಉಡುಪಿ : ಹೆಲ್ಮೆಟ್ ಖರೀದಿ ಮಾಡಲು 10ದಿನಗಳ ಅವಕಾಶ | Helmet rule deadline extended in Udupi - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆಹಲಿ ಚೆನ್ನೈ ಹುಬ್ಬಳ್ಳಿ ಮಡಿಕೇರಿ ಹೈದರಾಬಾದ್ ಮುಂಬೈ ದಾವಣಗೆರೆ ಉಡುಪಿ ಶಿವಮೊಗ್ಗ ಚಾಮರಾಜನಗರ ಮಂಡ್ಯ ಕ್ರಿಕೆಟ್ ಜ್ಯೋತಿಷ್ಯ ನಿತ್ಯಭವಿಷ್ಯ ವಾರಭವಿಷ್ಯ ಮಾಸಭವಿಷ್ಯ ವರ್ಷಭವಿಷ್ಯ ಆಸ್ಟ್ರೋ ಕ್ಯಾಲೆಂಡರ್ ಚಲನಚಿತ್ರ ಸಿನಿ ಸಮಾಚಾರ ಚಿತ್ರವಿಮರ್ಶೆ ಬಾಲಿವುಡ್ ಗಾಸಿಪ್ ಹಾಲಿವುಡ್ ಟಿವಿ ಸಂದರ್ಶನ ಹಾಡು ಕೇಳಿರಿ ಫೋಟೋ ಗ್ಯಾಲರಿ ಚಲನಚಿತ್ರ ಲೈಫ್ ಸ್ಟೈಲ್ ಸೌಂದರ್ಯ ಆರೋಗ್ಯ ಮನೆ ಮತ್ತು ಕೈತೋಟ ತಾಯಿ ಮಗು ಅಡುಗೆಮನೆ ಸಮ್ಮಿಲನ ಸಂಬಂಧ ಆಟೋ ತಾಜಾ ಸುದ್ದಿಗಳು ವಿಮರ್ಶೆ ಹೊಸ ಕಾರು ಆಫ್-ಬೀಟ್ ಫೋಟೋ ಗ್ಯಾಡ್ಜೆಟ್ಸ್ ಮೊಬೈಲ್ ಟ್ಯಾಬ್ಲೆಟ್ / ಕಂಪ್ಯೂಟರ್‌‌ ಗ್ಯಾಡ್ಜೆಟ್‌ ಟೆಕ್‌ ಸಲಹೆ ಅಂಕಣ ಜ್ಯೋತಿಷ್ಯ ಜಂಗಲ್ ಡೈರಿ ಅಂತರ್ಮಥನ ಹಾಸ್ಯ ಕೆಂಡಸಂಪಿಗೆ ಬದುಕು-ಬವಣೆ ಜಯನಗರದ ಹುಡುಗಿ ಯೋಗ ಎನ್‌ಆರ್‌ಐ ಲೇಖನ ಕವನ ಸಣ್ಣಕಥೆ ವಿಶ್ವ ಕನ್ನಡ ಸಮ್ಮೇಳನ ಸಿಂಗಾರ ಸಮ್ಮೇಳನ ವಿಡಿಯೋ Other Languages Auto - DriveSpark Lifestyle - BoldSky Movies - FilmiBeat Money - GoodReturns Travel - NativePlanet Education - CareerIndia Classifieds - Click.in Cricket - ThatsCricket Domains Tech - GizBot Newsletters Android App IOS App ಒನ್ ಇಂಡಿಯಾ » ಕನ್ನಡ » ಸುದ್ದಿಜಾಲ » ಜಿಲ್ಲೆ » ಉಡುಪಿ : ಹೆಲ್ಮೆಟ್ ಖರೀದಿ ಮಾಡಲು 10ದಿನಗಳ ಅವಕಾಶ ಉಡುಪಿ : ಹೆಲ್ಮೆಟ್ ಖರೀದಿ ಮಾಡಲು 10ದಿನಗಳ ಅವಕಾಶ Written by: ಮಂಗಳೂರು ಪ್ರತಿನಿಧಿ Updated: Thursday, January 21, 2016, 15:22 [IST] Subscribe to Oneindia Kannada ಉಡುಪಿ, ಜನವರಿ 21 : ಉಡುಪಿ ಜಿಲ್ಲಾಡಳಿತ ಹೆಲ್ಮೆಟ್ ಖರೀದಿ ಮಾಡಲು ಜನರಿಗೆ 10 ದಿನಗಳ ಕಾಲಾವಕಾಶ ನೀಡಿದೆ. ಫೆಬ್ರವರಿ 1ರಿಂದ ಬೈಕ್ ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.ಉಡುಪಿ ಜಿಲ್ಲೆಯಲ್ಲೂ ಜನವರಿ 20ರಿಂದ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ಬರಬೇಕಿತ್ತು. ಆದರೆ, ಸಾರ್ವಜನಿಕರು ಹೆಲ್ಮೆಟ್ ಖರೀದಿ ಮಾಡಲು ಕಾಲಾವಕಾಶ ನೀಡಿಬೇಕು ಎಂದು ಮನವಿ ಮಾಡಿರುವುದರಿಂದ 10 ದಿನಗಳ ಕಾಲ ಅವಕಾಶ ನೀಡಲಾಗಿದೆ. [ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು]ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ನಮೂದಿಸಿರುವಂತೆ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕರ್ನಾಟಕ ಮೋಟಾರು ವಾಹನ ನಿಯಮ 1989, ನಿಮಯ 230, ಉಪನಿಯಮ 1 ರ ಅನ್ವಯ ಹೆಲ್ಮೆಟ್ ಧರಿಸುವುದನ್ನು ಉಡುಪಿ ಜಿಲ್ಲೆಯಲ್ಲಿಯೂ ಕಡ್ಡಾಯಗೊಳಿಸಲಾಗಿದೆ. [ಅಷ್ಟಕ್ಕೂ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?]ಬೈಕ್ ಸವಾರರಲ್ಲಿ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಹಲ್ಮೆಟ್ ಮಹತ್ವದ ಬಗ್ಗೆ ತಿಳಿಸಲಾಗುತ್ತಿದೆ.ಹೆಲ್ಮೆಟ್ ಕಡ್ಡಾಯ ಸಿದ್ದರಾಮಯ್ಯ ಸ್ಪಷ್ಟನೆಗಳು : ದ್ವಿ-ಚಕ್ರ ವಾಹನ ಸವಾರರ ಜೊತೆಗೆ ಹಿಂಬದಿ ಸವಾರರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬುದು ಕರ್ನಾಟಕ ಸರ್ಕಾರದ ನಿರ್ಧಾರವಲ್ಲ. ಸುಪ್ರೀಂಕೋರ್ಟ್ ಸೂಚನೆಯನ್ನು ಸರ್ಕಾರ ಪಾಲನೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ, ಆರೋಪ ಮತ್ತು ಸರ್ಕಾರದ ವಿರುದ್ಧದ ಟೀಕೆಗಳ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ಸ್ಪಷ್ಟನೆ ನೀಡಿದ್ದಾರೆ. Read more about: udupi, helmet, karnataka government, district news, ಉಡುಪಿ, ಹೆಲ್ಮೆಟ್, ಕರ್ನಾಟಕ, ಜಿಲ್ಲಾಸುದ್ದಿ Story first published: Thursday, January 21, 2016, 15:12 [IST] English summary Udupi district administration has extend compulsory helmet rule by 10 days. The rule will come to effect from February 1, 2015. Other articles published on Jan 21, 2016 Please Wait while comments are loading... ಚಿಕ್ಕಮಗಳೂರು: ಕಾರ್ಮಿಕ ಶೇಷಯ್ಯ ಕೊಲೆ, 11 ಮಂದಿಗೆ ಜೀವಾವಧಿ ಶಿಕ್ಷೆ ಸಮುದ್ರದಂಥ ಕಸವನ್ನು ನೋಡಬೇಕಾದರೆ ವಳವಚ್ಚಿಲ್ ಗೆ ಬರಲೇಬೇಕು ರಜನಿಕಾಂತ್ 'ರಾಜಕೀಯ'ಕ್ಕೆ ಬರುವುದಾದರೆ ಸ್ವಾಗತ: ಅಮಿತ್ ಶಾ Featured Posts ಬೆಂಗಳೂರಿನ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನ Oneindia in Other Languages English বাংলা ગુજરાતી हिन्दी മലയാളം தமிழ் తెలుగు Explore Oneindia ಸುದ್ದಿಜಾಲ ನಗರ ಸುದ್ದಿ ಕರ್ನಾಟಕ ಜ್ಯೋತಿಷ್ಯ ವಿಡಿಯೋ ಅಂಕಣ ಕ್ರಿಕೆಟ್ ಎನ್ಆರ್‌ಐ ಸಾಹಿತ್ಯಲೋಕ ಜೋಕುಜೋಕಾಲಿ Other Greynium Sites Filmibeat Boldsky Drivespark Gizbot Goodreturns Native Planet Careerindia Clickin Download Oneindia App Google Play App Store Follow Oneindia Daily Updates Get Oneindia Alerts Get Push Notifications About Us | Terms of Service | Privacy Policy | Newsletters | Apps | RSS | Advertise with Us | Work for Us | Contact Us | Site Feedback | Sitemap © Greynium Information Technologies Pvt. Ltd. All Rights Reserved. The "ONEINDIA" word mark and logo are owned by Greynium Information Technologies Pvt. Ltd.
"2017-05-27T07:59:15"
http://kannada.oneindia.com/news/karnataka/helmet-rule-deadline-extended-in-udupi-100301.html
ಐಸಿಸಿ ಟೂರ್ನಿ : ಭಾರತ, ಜಹೀರ್‌ ಖಾನ್‌ ಶುಭಾರಂಭ | ICC knock out : India beat kenya - Kannada Oneindia ಐಸಿಸಿ ಟೂರ್ನಿ : ಭಾರತ, ಜಹೀರ್‌ ಖಾನ್‌ ಶುಭಾರಂಭ ನೈರೋಬಿ: ಐಸಿಸಿ ನಾಕ್‌ಔಟ್‌ ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಅತಿಥೇಯ ಕೀನ್ಯಾ ವಿರುದ್ಧ 8 ವಿಕೆಟ್‌ಗಳ ನಿರೀಕ್ಷಿತ ಜಯ ಗಳಿಸಿತು. ಗೆಲ್ಲಲು 50 ಓವರ್‌ಗಳಲ್ಲಿ 209 ರನ್‌ಗಳ ಸವಾಲು ಪಡೆದ ಭಾರತ ಇನ್ನೂ 7.3 ಓವರುಗಳಿರುವಂತೆಯೇ ಕೇವಲ 2 ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟಿತು. ಭಾರತದ ಪರ 68 ರನ್‌ (7 ಬೌಂಡರಿ) ಗಳಿಸಿದ ದ್ರಾವಿಡ್‌ ಔಟಾಗದೆ ಉಳಿದರು. ಉತ್ತಮ ಆರಂಭ ಒದಗಿಸಿಕೊಟ್ಟ ನಾಯಕ ಸೌರವ್‌ ಗಂಗೂಲಿ, ಮಾರಿಸ್‌ ಒಡುಂಬೆ ಬೌಲಿಂಗ್‌ನಲ್ಲಿ ಸ್ಟಂಪ್‌ ಆಗುವ ಮುನ್ನ 66 (7 ಬೌಂಡರಿ, 2 ಸಿಕ್ಸರ್‌) ರನ್‌ಗಳಿಸಿದ್ದರು. 33 ಎಸೆತಗಳಲ್ಲಿ 7 ಬೌಂಡರಿಗಳಿದ್ದ 39 ರನ್‌ ಗಳಿಸಿದ ವಿನೋದ್‌ ಕಾಂಬ್ಳಿ ತಮ್ಮ ಹಳೆಯ ಆಟ ನೆನಪಿಸಿದರು. ಕೀನ್ಯಾ ಪರ ರವಿಂದು ಶಾ (60), ಒಡುಂಬೆ (51) ಹಾಗೂ ಥಾಮಸ್‌ ಒಡೊಯಾ (ಔಟಾಗದೆ 35) ಬಿಟ್ಟರೆ ಉಳಿದವರಾರೂ 20ರ ಗಡಿ ದಾಟಲಿಲ್ಲ. ಭಾರತದ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿದ ವೇಗಿ ಜಹೀರ್‌ ಖಾನ್‌ 10 ಓವರ್‌ಗಳಲ್ಲಿ 48 ರನ್‌ ನೀಡಿ 3 ವಿಕೆಟ್‌ ಗಳಿಸಿದರು. ಉಳಿದಂತೆ ಪ್ರಸಾದ್‌, ಅಗರ್ಕರ್‌ ಹಾಗೂ ಕುಂಬ್ಳೆ ತಲಾ 2 ವಿಕೆಟ್‌ ಗಳಿಸಿದರು. ಕೀನ್ಯಾ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 208ರನ್‌ ಗಳಿಸಿತು.
"2019-07-23T17:02:28"
https://kannada.oneindia.com/news/2000/10/04/cricket.html
ಫಲಾನುಭವಿಗಳ ಸಮಾವೇಶಕ್ಕೆ ಭರದ ಸಿದ್ಧತೆ ವಿಕ ಸುದ್ದಿಲೋಕ | Updated: May 12, 2017, 06:56PM IST ಚಿತ್ರದುರ್ಗ : ನಗರದ ಸರಕಾರಿ ಕಲಾ ಕಾಲೇಜು ಮೈದಾನದಲ್ಲಿ ಮೇ 13ರಂದು ನಡೆಯಲಿರುವ ಫಲಾನುಭವಿಗಳ ಸಮಾವೇಶಕ್ಕೆ ಭರದ ಸಿದ್ಧತೆ ಸಾಗಿದೆ. ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಮೈದಾನದಲ್ಲಿ ಕುಳಿತು ಕೊಳ್ಳಲು ಅನುಕೂಲವಾಗುವಂತೆ ಬೃಹತ್‌ ಪೆಂಡಾಲ್‌ ಅಳವಡಿಸಲಾಗುತ್ತಿದೆ. ಸಮಾವೇಶದ ಜತೆಗೆ ಸರಕಾರದ ಸಾಧನೆ ಬಿಂಬಿಸುವ ನಾನಾ ಯೋಜನೆಗಳ ವಸ್ತು ಪ್ರದರ್ಶನಕ್ಕೂ ಸಿದ್ಧತೆ ನಡೆಯುತ್ತಿದೆ. ಮೇ 8 ರಂದು ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ನಡೆಸಿದರು. ಸಚಿವರೊಂದಿಗೆ ಸಂಸದರಾದ ಬಿ.ಎನ್‌.ಚಂದ್ರಪ್ಪ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಪಂ ಸಿಇಒ ನಿತೇಶ್‌ ಪಾಟೀಲ್‌ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಇದ್ದರು. ಸಮಾವೇಶದಲ್ಲಿ ಬೆಂಗಳೂರು ವಿಭಾಗದ ಒಂಬತ್ತು ಜಿಲ್ಲೆಗಳಿಂದ ಫಲಾನುಭವಿ ಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದು ಸುಮಾರು 50 ಸಾವಿರ ಜನರು ಅಂದು ಸಮಾವೇಶಗೊಳ್ಳುವರು. ಸುಮಾರು 25 ಸಾವಿರ ಜನರಿಗೆ ನಾನಾ ಸವಲತ್ತುಗಳನ್ನು ವಿತರಣೆ ಮಾಡಲಾಗುವುದು. ಇವರೊಂದಿಗೆ ಸುಮಾರು 25 ಸಾವಿರ ಇತರೆ ಸಾರ್ವಜನಿಕರು ಭಾಗವಹಿಸುವರು. ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ ನೆರವೇರಿಸಲಾಗುತ್ತದೆ. ಶುದ್ದಕುಡಿಯುವ ನೀರನ್ನು ಒದಗಿಸಲು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲು ತಿಳಿಸಿದರು. ಮೇ 13 ರಿಂದ 15 ರ ವರೆಗೆ ಕಾರ್ಯಕ್ರಮ ನಡೆಯಲಿದ್ದು ವಸ್ತುಪ್ರದರ್ಶನ, ಮಾಹಿತಿ ಉತ್ಸವ ಕಾರ್ಯಕ್ರಮಗಳು ಹಾಗೂ ಸಂಜೆಯ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆುಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡ ಲಾಗುತ್ತದೆ. ರಾಜ್ಯದ ಖ್ಯಾತ ಸಂಗೀತ ನಿರ್ದೇಶಕರು, ಕಲಾವಿದರು ಭಾಗವಹಿಸುವರು. ಮೇ 13 ರಂದು ಜಿಲ್ಲೆಯಲ್ಲಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಮತ್ತು ಪ್ರಾರಂಭಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸ ಲಾಗುತ್ತದೆ. ಆಯಾ ಇಲಾಖೆಯವರು ಕಾರ್ಯಕ್ರಮದ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿ ಎಲ್ಲಾ ಇಲಾಖೆಗಳಿಂದಲೂ ವಸ್ತುಪ್ರದರ್ಶನ ಮಳಿಗೆಯಲ್ಲಿ ತಮ್ಮ ಇಲಾಖೆ ಸಾಧನೆಯ ಬಗ್ಗೆ ಮಾಹಿತಿ ಉತ್ಸವದಲ್ಲಿ ಭಾಗವಹಿಸಿ ತಿಳಿಸಲು ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಎಸ್ಪಿ ಅರುಣ್‌ ರಂಗರಾಜನ್‌ ಇದ್ದರು. 1ಫಲಾನುಭವಿಗಳ ಸಮಾವೇಶಕ್ಕೆ ಭರದ ಸಿದ್ಧತೆ... 2ಬ್ಯಾಂಕ್‌ ಜಮೀನು ಹರಾಜು ಹಾಕುವಂತಿಲ್ಲ... 3​ ಪ್ರಾಣಿ, ಪಕ್ಷಿಗಳ ಬಗ್ಗೆಯೂ ಕಾಳಜಿ ಇರಲಿ... 4ಕಾನೂನು ಪಾಲಿಸಿದಿದ್ದರೆ ಬಾಲ ಕಟ್‌... 5ಮೂರು ವರ್ಷದ ಹೆಣ್ಣು ಕೃಷ್ಣಮೃಗ ರಕ್ಷಣೆ... 6ಒತ್ತಡಕ್ಕೆ ನಲುಗಿದ ರಾಜರ ಕಾಲದ ಸೇತುವೆ... 7ಕಾವ್ಯದಲ್ಲಿ ಕೌಟುಂಬಿಕ ಸಂಸ್ಕಾರ ಮೂಡಿಸಿದ ಕೆಎಸ್‌ಎನ್‌... 8​ ಮಳೆಗಾಳಿ ಆರ್ಭಟಕ್ಕೆ ಹಾರಿಹೋದ ಮನೆ ಶೀಟ್‌ಗಳು... 9ನುಂಕೆಮಲೆ ಭೈರವೇಶ್ವರ ರಥೋತ್ಸವ ಅದ್ದೂರಿ... 10ಆಧಾರ್‌ ಲಿಂಕ್‌ ಖಾತೆಗಳಿಗೆ ಪರಿಹಾರ ವಿತರಣೆ...
"2017-09-26T13:12:27"
http://vijaykarnataka.indiatimes.com/district/chitradurga/-/articleshow/58646412.cms
ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! | BJP brings out 2010 incident to attack Rahul Gandhi - Kannada Oneindia » ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! Updated: Tuesday, November 28, 2017, 17:10 [IST] ಬೆಂಗಳೂರಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಕಾರಿಡಾರ್ ನಿರ್ಮಾಣ ಪ್ರಧಾನಿ ಮೋದಿಗೆ ಮಾತಿನ ಮೊನಚಿನಲ್ಲೇ ಚುಚ್ಚಿದ ರಾಹುಲ್ ಗಾಂಧಿ! ಮತ್ತೆ ಮುಖ್ಯಮಂತ್ರಿಯಾಗಲು ದೇವರು ಅವಕಾಶ ನೀಡ್ತಾನೆ : ಯಡಿಯೂರಪ್ಪ ಅದು ಯಾವ ಆತ್ಮವಿಶ್ವಾಸದಿಂದ ಮೋದಿ ಸಂಸತ್ತಿನಲ್ಲಿ ಈ ಮಾತನ್ನು ಹೇಳಿದ್ರು? ರಾಹುಲ್ ಗಾಂಧಿ ತೊಂದರೆಯಲ್ಲಿದ್ದಾರಾ? ಏನಿದು ಬಿಜೆಪಿ ಹೊಸ ಪ್ಲಾನ್ ? | Oneindia Kannada ಅಹ್ಮದಾಬಾದ್, ನವೆಂಬರ್ 28: ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಲಿರುವ ರಾಹುಲ್ ಗಾಂಧಿ, ತಾವೇ ಆಡಿದ ಮಾತುಗಳಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರಾ? ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಆಡಿದ್ದ ಬಾಲಿಶ ಹೇಳಿಕೆಗಳನ್ನೇ ಇದೀಗ ಕೆದಕಿ, ಗುಜರಾತ್ ಚುನಾವಣೆಯ ಹೊತ್ತಲ್ಲಿ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆಯಾ? ಹೌದು, ಗುಜರಾತ್ ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ ಉಭಯ ಪಕ್ಷಗಳೂ ಬಿರುಸಿನ ಪ್ರಚಾರಕ್ಕೆತೊಡಗಿವೆ. ಈ ಮಧ್ಯೆ, ಉಗ್ರ ಹಫೀಜ್ ಸಯೀದ್ ಬಿಡುಗಡೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯ ಎಂಬಂತೆ ಬಿಂಬಿಸಿ, 'hugplomacy'ಗೆ ಸೋಲುಂಟಾಗಿದೆ ಎಂದು ಜರೆದಿರುವ ರಾಹುಲ್ ಗಾಂಧಿ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಹಫೀಸ್ ಸಯೀದ್ ಬಿಡುಗಡೆ: ಮೋದಿಯವರನ್ನು ವ್ಯಂಗ್ಯವಾಡಿದ ರಾಹುಲ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 2010 ರ ಸಮಯದಲ್ಲಿ ಆಡಿದ್ದ ಮಾತುಗಳನ್ನು ಇದೀಗ 'ರಿವೈಂಡ್' ಮಾಡಿರುವ ಬಿಜೆಪಿಯ ಕೇಂದ್ರ ಕಾನೂನು ಸಚಿವ, ಬಿಜೆಪಿಯ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ಯುವರಾಜರನ್ನು ಲೇವಡಿ ಮಾಡಿದ್ದಾರೆ! Narendrabhai, बात नहीं बनी. Terror mastermind is free. President Trump just delinked Pak military funding from LeT. Hugplomacy fail. More hugs urgently needed.https://t.co/U8Bg2vlZqw — Office of RG (@OfficeOfRG) November 25, 2017 ಏನಿದು hugplomacy ಹೇಳಿಕೆ? ಜಾಮತ್ ಉಲ್ ದಾವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ, ಮುಂಬೈ ಸ್ಫೋಟದ ರೂವಾರಿ, ಲಷ್ಕರ್ ಇ ತೊಯ್ಬಾ ಸ್ಥಾಪಕರಲ್ಲೊಬ್ಬನಾದ ಹಫೀಜ್ ಸಯೀದ್ ನನ್ನು ಪಾಕ್ ಸರ್ಕಾರ, 'ಸ್ಪಷ್ಟ ಸಾಕ್ಷ್ಯಾಧಾರವಿಲ್ಲ' ಎಂಬ ಕಾರಣಕ್ಕೆ ಬಿಡುಗಡೆ ಮಾಡಿದೆ. ಇದನ್ನು ಮೋದಿ ಸರ್ಕಾರದ ವೈಫಲ್ಯ ಎಂದಿರುವ ರಾಹುಲ್ ಗಾಂಧಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಮತ್ತು ಅಪ್ಪುಗೆಗಳು ಯಾವುದೇ ಪರಿಣಾಮ ಬೀರಿಲ್ಲ. ಈ ಅಪ್ಪುಗೆ ಶೈಲಿ ವೈಫಲ್ಯವಾಗಿದೆ ಎಂಬುದನ್ನೇ ವಿಭಿನ್ನವಾಗಿ hugplomacy ಎಂದು ಕರೆದು ಟ್ವೀಟ್ ಮಾಡಿದ್ದರು. ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು. 2010 ರಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು? 2010 ರಲ್ಲಿ, ಆಗಿನ ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಭಾರತಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಹಿಲರಿಯವರನ್ನು ಊಟಕ್ಕೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಹಾಜರಿದ್ದ ರಾಹುಲ್ ಗಾಂಧಿ ಅವರನ್ನು ಅಮೆರಿಕ ರಾಯಭಾರಿ ಟೊಮೋಥಿ ರೊಯ್ಮರ್, 'ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು' ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ರಾಹುಲ್, 'ಲಷ್ಕರ್ ವಿಷಯ ಬಿಡಿ, ಭಾರತದಲ್ಲಿ ಅದಕ್ಕಿಂತ ಭಯಾನಕವಾದುದು ಹಿಂದೂ ಭಯೋತ್ಪಾದನೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿಕಿಲೀಕ್ಸ್ ಮೂಲಕ ಲೀಕ್ ಆಗಿತ್ತು! ರಾಹುಲ್ ಗಾಂಧಿ ನೀಡಿದ್ದ ಈ ವಿವಾದಾತ್ಮಕ ಹೇಳಿಕೆ ವಿಕಿಲೀಕ್ಸ್ ಮೂಲಕ ಬಯಲಿಗೆ ಬಂದಿತ್ತು. 'ಭಾರತದಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆಗಿಂತ ಭಯಾನಕವಾಗಿರುವುದು ಹಿಂದೂ ಸಂಘಟನೆ. ಹಿಂದೂ ಮೂಲಭೂತವಾದವೇ ಈ ದೇಶಕ್ಕೆ ಬಹುದೊಡ್ಡ ಅಪಾಯವಾಗಬಹುದು' ಎಂದು ರಾಹುಲ್ ಗಾಂಧಿ ಹೇಳಿದ್ದರು ಎಂದು ಪತ್ರಿಕೆಯೊಂದು ಬರೆದಿತ್ತು. ಈಗೇಕೆ ನೆನಪಾಯ್ತು ಈ ವಿವಾದ? ಈ ವಿವಾದ ಈಗ ನೆನಪಾಗಿರುವ ಹಿಂದೆ ಗುಜರಾತ್ ಚುನಾವಣೆಯಲ್ಲಿ ಜನರಿಗೆ ರಾಹುಲ್ ಗಾಂಧಿಯವರ ಅಪ್ರಬುದ್ಧ ಹೇಳಿಕೆಗಳನ್ನು ನೆನಪಿಸುವ ಉದ್ದೇಶವಿರುವುದು ಸುಳ್ಳಲ್ಲ. ಅದರೊಂದಿಗೆ, ಒಂದಾನೊಂದು ಕಾಲದಲ್ಲಿ ಹಿಂದೂಗಳೇ ಲಷ್ಕರ್ ಭಯೋತ್ಪಾದಕರಿಗಿಂತ ಅಪಾಯಕಾರಿ ಎಂದಿದ್ದ ರಾಹುಲ್, ಇದೀಗ ಹಫೀಜ್ ಬಿಡುಗಡೆಯ ಬಗ್ಗೆ ಮೋದಿ ಸರ್ಕಾರದ ಕಾಲೆಳೆಯುವ ಪ್ರಯತ್ನ ಮಾಡುತ್ತಿರುವುದೇಕೆ ಎಂಬ ಪ್ರಶ್ನೆಯೂ ಇರದೇ ಇಲ್ಲ. ಒಟ್ಟಿನಲ್ಲಿ ತಾವೇ ತೋಡಿದ್ದ ವಿವಾದದ ಹಳ್ಳದಲ್ಲಿ ಇದೀಗ ರಾಹುಲ್ ಗಾಂಧಿ ತಾವೇ ಬೀಳುವಂಥ ಪರಿಸ್ಥಿತಿ ತಂದುಕೊಂಡಿದ್ದಾರೆ. rahul gandhi gujarat gujarat assembly elections 2017 bjp congress narendra modi ರಾಹುಲ್ ಗಾಂಧಿ ಕಾಂಗ್ರೆಸ್ ಬಿಜೆಪಿ ನರೇಂದ್ರ ಮೋದಿ Union Law Minister Ravi Shankar Prasad on Nov 28th raked up a 2010 incident in which Congress Vice President Rahul Gandhi had termed 'Hindu terror' as a threat to the nation instead of Lashkar-e-Taiba (LeT) chief and 2008 Mumbai attack mastermind, Hafiz Saeed. ಲೋಕಸಭೆ ಚುನಾವಣೆ : ಕರ್ನಾಟಕ ಕಾಂಗ್ರೆಸ್‌ ತೆಗೆದುಕೊಂಡ ನಿರ್ಧಾರಗಳು ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಸಂಚು : 700 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಜಿಎಸ್ಟಿ ದರ ಕಡಿತ : ಯಾವ್ಯಾವ ಉತ್ಪನ್ನಗಳು ಸೋವಿಯಾಗಿವೆ
"2018-07-22T13:00:12"
https://kannada.oneindia.com/news/india/bjp-brings-out-2010-incident-to-attack-rahul-gandhi-130052.html
ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ – ಋತುಮಾನ ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ Author ಋತುಮಾನ Date May 26, 2017 ಜಗತ್ತಿನ ಜನಪದವೇ ಋತುಮಾನದ ಹೊಸ ಅಂಕಣ ‘ಜಗಪದ’. ಬೇರೆ ಬೇರೆ ದೇಶಭಾಷೆಗಳ ಅಪರೂಪದ ಜನಪದ ಕತೆಗಳೀಗ ಕನ್ನಡದಲ್ಲಿ. ಮೊದಲಿಗೆ ಸ್ಪೇನ್ ದೇಶದ ಕತೆ ಮಾಯಾ ಕನ್ನಡಿ. ಗ್ರನಾಡದ ರಾಜ ಮದುವೆಯಾಗುತ್ತಾನೆಂಬ ಸುದ್ದಿ ಮೊದಲು ತಲುಪಿದ್ದು ಅಸ್ಥಾನದ ಕ್ಷೌರಿಕನಿಗೆ. ನಂತರ ರಾತ್ರಿ ಪಾಳೆಗಾರನಿಗೆ. ತದ ನಂತರ ಈ ವಿಷಯ ತಲುಪಿದ್ದು ಗ್ರನಾಡದ ಹಣ್ಣು ಹಣ್ಣು ಮುದುಕಿಗೆ. ಕ್ಷೌರಿಕ ತನ್ನಲ್ಲಿ ಬರುವ ಗಿರಾಕಿಗಳಿಗೆಲ್ಲ ಮದುವೆಯ ಸುದ್ದಿ ಹೇಳತೊಡಗಿದ. ಅವರು ಅವರವರ ಗೆಳೆಯರಿಗೆ ಹೇಳಿದರು. ರಾತ್ರಿ ಪಾಳೆಗಾರ , ಆಸ್ಥಾನದ ಕೆಲಸಗಾರರಿಗೆ ಕೇಳಿಸುವಂತೆ ಹೇಳಿದ. ಸುದ್ದಿ ಕೇಳಿದ ಆಳುಗಳು ಅದರ ಯೋಚನೆಯಲ್ಲೇ ಮುಳುಗಿಹೋದರು. ಹಗಲು ರಾತ್ರಿ ಎನ್ನದೆ ವಯಸ್ಸಾದ ಮಹಿಳೆಯರ ಬಾಯಿಂದ ಬಾಯಿಗೆ ರಾಜನ ಮದುವೆಯ ವಿಚಾರ ಹರಡಿ, ಅದು ಎಲ್ಲರಿಗೂ ಮತ್ತೆ ಮತ್ತೆ ನೆನಪಾಯಿತು. ಕೊನೆಗೂ ಒಂದು ದಿನ ಮದುವೆಯ ಸುದ್ದಿ ಹಳತಾಯಿತು. ಆಗ ಪ್ರಶ್ನೆಗಳು ಎದ್ದವು. ” ರಾಜ ಮದುವೆಯಾಗುವುದು ಯಾರನ್ನು?” ಆಗ ಕ್ಷೌರಿಕ ” ರಾಜ ಹೆಣ್ಣನ್ನೇ ಮದುವೆಯಾಗುತ್ತಾನೆ.” ಅಂದ “ಹೆಣ್ಣೇ! ಹೆಣ್ಣಲ್ಲದೆ ಮತ್ಯಾರನ್ನು ಮದುವೆಯಾಗಬೇಕು ಅವರು?” ಅಂದರು ಕೇಳಿದವರು. ” ಎಲ್ಲಾ ಹೆಣ್ಣು ರಾಜನನ್ನು ಮದುವೆಯಾಗಲು ಯೋಗ್ಯ್ರರಲ್ಲ. ಕೆಲವರು ಅಶುದ್ಧರೂ ಇರ್ತಾರೆ” ಕ್ಷೌರಿಕ ಉತ್ತರಿಸಿದ. ” ಅಶುದ್ಧರೇ? ಏನು ನಿನ್ನ ಮಾತಿನ ಅರ್ಥ? ಇಲ್ಲಿ ಈ ಸ್ಪೇನ್ ನೆಲದಲ್ಲಿ ನಮ್ಮ ರಾಜನಿಗೆ ಒಬ್ಬ ಯೋಗ್ಯವಾದ ಹೆಣ್ಣು ಸಿಗುವುದಿಲ್ಲವೇ?” ಕೇಳುಗರ ಪ್ರಶ್ನೆ ಬೆಳೆಯುತ್ತ ಹೋಯಿತು. ” ಸಿಗುತ್ತಾಳೆ. ಸುಲಭವಾಗಿ ಸಿಗುವವರೆಲ್ಲ ನಾವಂದುಕೊಂಡಂತೆ ಇರುವುದಿಲ್ಲ. ಆದರೆ ಯೋಗ್ಯ ರಾಣಿಯನ್ನು ಹುಡುಕುವ ಕಷ್ಟದಲ್ಲೀಗ ನಾನಿದ್ದೇನೆ ” ಎಂದು ಹೇಳಿದ ಕ್ಷೌರಿಕ. ” ಏನು? ನೀನಾ? ರಾಜನಿಗೆ ರಾಣಿಯನ್ನು ಹುಡುಕುವುದಕ್ಕೂ, ನಿನಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯ?” ಎಲ್ಲರೂ ಕೂಗಿಕೊಂಡರು ಆಶ್ಚರ್ಯದಿಂದ. ” ಮರೆಯದಿರಿ. ನಾನೀಗ ರಾಜನ ಅನುಜ್ನೆಗೆ ಒಳಗಾಗಿದ್ದೇನೆ. ಈಗ ರಾಜನ ಚಹರೆಯನ್ನು ಮುಟ್ಟುವ ಅವಕಾಶವಿರುವುದು ನನಗೊಬ್ಬನಿಗೆ. ಅ ಮಾಯಾ ಕನ್ನಡಿ ಇರುವುದು ಕೂಡ ಈಗ ನನ್ನ ಬಳಿ ಮಾತ್ರ. ನಡತೆಯಲ್ಲಾಗಲೀ, ಗುಣದಲ್ಲಾಗಲೀ, ರೂಪದಲ್ಲಾಗಲೀ ಸರಿಯಿಲ್ಲದ ಹೆಣ್ಣು ಆ ಮಾಯಾ ಕನ್ನಡಿಯಲಿ ನೋಡಿದರೆ, ಆಕೆಯ ನಡತೆಯಲ್ಲಿನ ನ್ಯೂನತೆಗಳು ಕನ್ನಡಿಯ ಪ್ರತಿಬಿಂಬದಲ್ಲಿ ಕಲೆಯಾಗಿ ಕಾಣಿಸುತ್ತದೆ.” ” ರಾಜನ ಮದುವೆಗೆ ಇರಬೇಕಾದ ಅರ್ಹತೆಗಳಲ್ಲಿ ಇದೂ ಒಂದು ಅರ್ಹತೆಯೇ?” ಎಲ್ಲರೂ ಕೇಳಿದರು. ” ಇರಬೇಕಾಗಿರುವುದೇ ಕೇವಲ ಇದೊಂದೇ ಅರ್ಹತೆ.” ತನ್ನ ಜಾಣತನವನ್ನು ಮೆರೆಯುತ್ತ ಕ್ಷೌರಿಕ ಹೇಳಿದ. “ಆದರೇ.. ವಯಸ್ಸಿನ ಮಿತಿ ಏನಾದರೂ ಇದೆಯೇ?” ಮತ್ತಷ್ಟು ಕುತೂಹಲದಿಂದ ಕೇಳಿದರು. “ಹದಿನೆಂಟು ವಯಸ್ಸು ಮೇಲ್ಪಟ್ಟಿದ್ದರೆ ಸಾಕು.” ಕನ್ನಡಿಯ ಮಾಲಿಕ ಹೇಳಿದ. “ಹಾಗಾದರೆ ಗ್ರನಾಡದ ಪ್ರತಿಯೊಬ್ಬ ಹೆಣ್ಣೂ ರಾಣಿಯಾಗುವ ಅರ್ಹತೆ ಪಡೆದಿದ್ದಾರೆ!” ಮತ್ತೊಬ್ಬ ಹೇಳಿದ. “ಆದರೇ ಮೊದಲಿಗೆ ಅವರು ರಾಣಿಯಾಗುವ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕು. ಅವರು ಹೇಳಿದ ಮಾತುಗಳನ್ನು ನಾನಂತೂ ನಂಬುವುದಿಲ್ಲ. ಅದಕ್ಕೆ ಅವರು ನನ್ನ ಪಕ್ಕಕ್ಕೆ ನಿಂತು ಕನ್ನಡಿಯೊಳಗೆ ನೋಡಬೇಕು.” ರಾಣಿಯಾಗುವ ಕನಸನ್ನು ಕಂಡವರಿಗೆ ಇರುವ ಏಕೈಕ ಷರತ್ತನ್ನು ತಿಳಿಸಲಾಯಿತು. ಹಲವರು ಈ ಷರತ್ತನ್ನು ಕೇಳಿ ತಮಾಶೆ ಮಾಡಿದರು. ಕೇಳಲು ವಿಚಿತ್ರವೆನಿಸಬಹುದು. ಅದರೆ ಕ್ಷೌರಿಕನ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ನೋಡಲು ಯಾವೊಬ್ಬ ಹೆಣ್ಣೂ ಮುಂದೆ ಬರಲಿಲ್ಲ. ದಿನಗಳು, ವಾರಗಳು ಹಾಗೇ ಕಳೆದು ಹೋದವು. ರಾಜನಿಗೆ ರಾಣಿ ಸಿಗುವ ಯಾವ ಸೂಚನೆಗಳೂ ಸಿಗಲಿಲ್ಲ. ಕೆಲ ಉದಾರ ಮಹಿಳೆಯರು ತಮ್ಮ ಗೆಳತಿಯರಿಗೆ ಈ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಿದರೂ ಯಾರೊಬ್ಬರೂ ಒಪ್ಪಲಿಲ್ಲ. ರಾಜ ಸುಂದರವಾಗಿದ್ದಾನೆ. ಒಳ್ಳೆ ಮನುಷ್ಯನೂ ಹೌದು. ತನ್ನ ಸದ್ಗುಣಗಳಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ. ಅದ್ದರಿಂದ ಯಾರೊಬ್ಬರೂ ರಾಣಿಯಾಗಲು ಮುಂದೆ ಬಾರದಿರುವುದು ತುಂಬಾ ಅಶ್ಚರ್ಯವೆನಿಸಿತು. ಹೀಗೆ ಬಾರದೆ ಇರುವುದಕ್ಕೆ ಸಾಕಷ್ಟು ನೆಪಗಳಂತೂ ಹರಿದು ಬಂದವು. ಕೆಲವರು ಆಗಲೇ ಮದುವೆಯಾಗಿದ್ದಾರೆಂದು ಹೇಳಲಾಯಿತು. ಕೆಲವರು ಕ್ಷೌರಿಕನ ಅಂಗಡಿಯೊಳಗೆ ಕಾಲಿಡಲಾರೆವು ಎಂದರು. ಮತ್ತೆ ಕೆಲವರು ತಾವು ಮದುವೆಯಾಗದೆ ಒಂಟಿಯಾಗಿ ಇರಲು ಬಯಸಿದ್ದೇವೆ ಎಂದರು. ಇದಾದನಂತರದ ನೆಪಗಳು ಮತ್ತಷ್ಟು ಚಾಣಾಕ್ಶತೆಯಿಂದ ಕೂಡಿದ್ದವು. ಪ್ರಜೆಗಳು ರಾಜನ ಮದುವೆಯಾಗುವ ತನಕ ಗ್ರನಾಡದ ಬೇರೆ ಯಾವ ವ್ಯಕ್ತಿಯೂ ಮದುವೆಯಾಗುವ ಬಗ್ಗೆ ಯೋಚನೆ ಕೂಡ ಮಾಡಬಾರದೆಂದು ತಮ್ಮಷ್ಟಕ್ಕೆ ತಾವೆ ಘೊಷಿಸಿಕೊಂಡರು. ನಿಜ ಹೇಳುವುದಾದರೆ ಇದೆಲ್ಲ ನೆಪಗಳು ಆ ಕನ್ನಡಿ ನೋಡುವ ಕರಾರನ್ನು ವಿರೋಧಿಸುವುದಾಗಿತ್ತು. ಮನೆಗಳಲ್ಲಿ ಒಂದು ಕಡೆ ತಂದೆಗೆ ರಾಣಿಯಾಗುವ ಮಗಳ ಆಸೆಯನ್ನು ಕಂಡು ಕಿರಿಕಿರಿ ಅನ್ನಿಸಿದರೆ ಇನ್ನೊಂದು ಕಡೆ ತಾಯಿ ಈ ವಿಷಯದಲ್ಲಿ ಮೌನವಾಗಿರುವುದು ಸಾಮಾನ್ಯವಾಗಿಬಿಟ್ಟಿತ್ತು. ಪ್ರತಿದಿನ ಮುಂಜಾನೆ ರಾಜ ಎದ್ದ ತಕ್ಷಣ ಕೇಳುತ್ತಿದ್ದುದು ಒಂದೇ ಪ್ರಶ್ನೆ. “ಯಾರಾದರೂ ಕನ್ನಡಿಯಲ್ಲಿ ಮುಖ ನೋಡಲು ಒಪ್ಪಿದ್ದಾರೆಯೇ?” ಉತ್ತರವೂ ಯಾವಾಗಲೂ ಒಂದೇ ಇರುತ್ತಿತ್ತು. “ಇಲ್ಲ.” ಹಲವರು ಯಾರಾದರೂ ಕ್ಷೌರಿಕನ ಅಂಗಡಿಯ ಒಳಗೆ ಹೋಗುತ್ತಾರೆಯೇ ಎಂದು ಸದಾ ದಿಟ್ಟಿಸುತ್ತಿರುತ್ತಿದ್ದರೇ ವಿನಹ ಒಳ ಹೋಗುವ ಸಾಹಸಕ್ಕೆ ಯಾರೂ ಕೈ ಹಾಕುತ್ತಿರಲಿಲ್ಲ. ” ಓ ಗ್ರನಾಡ, ಗ್ರನಾಡ.. ನನಗೋಸ್ಕರ ನಿನ್ನ ಮಡಿಲಲ್ಲಿ ಯಾವೊಬ್ಬ ಮಗಳೂ ಇಲ್ಲವೇ? ನನ್ನ ಪೂರ್ವಜರು ತಮ್ಮ ತಮ್ಮ ಹೆಂಡತಿಯರ ಜೊತೆ ಸಂತೋಷದಿಂದ ಕಾಲ ಕಳೆದಿದ್ದಾರೆ. ಅವರ ಸಾಮೀಪ್ಯವನ್ನು ಅನುಭವಿಸಿದ್ದಾರೆ. ನನಗಾ ಭಾಗ್ಯ ಇಲ್ಲದೇ ಹೋಯಿತೆ?” ಎಂದು ರಾಜ ಜೋರಾಗಿ ರೋದಿಸಿದ. ಆಗ ಕ್ಷೌರಿಕ, ” ರಾಜ, ಆ ದಿನಗಳಲ್ಲಿ ಮಾಯಾ ಕನ್ನಡಿ ಅಪರಿಚಿತವಾಗಿತ್ತು. ಅದು ಅಷ್ಟಾಗಿ ಬೇಕಾಗಿಯೂ ಇರಲಿಲ್ಲ. ಪುರುಷರು ಬರೀ ಕಲೆ ಮಾತ್ರ ಓದುತ್ತಿದ್ದರು. ಆದರೀಗ ವಿಜ್ಞಾನ ಕೂಡ ಓದಿನಲ್ಲಿ ಸೇರಿಕೊಂಡಿದೆ” ಅಂದನು. ” ಅಂದರೇ ನಿನ್ನ ಅರ್ಥ ಜ್ನಾನದ ಹೆಚ್ಚಳಿಕೆ ಒಳ್ಳೆಯದನ್ನು ಮಾಡಲಿಲ್ಲವೇ?” ರಾಜ ಪ್ರಶ್ನಿಸಿದ. ” ನನ್ನ ಅರ್ಥ , ಜ್ನಾನದ ಬೆಳವಣಿಗೆಯಿಂದ ಜಾಸ್ತಿ ಒಳ್ಳೆಯದಾಗಿದೆ. ಆದರೆ ಜನ ಮೊದಲಿಗಿಂತ ಕೆಟ್ಟವರಾಗಿದ್ದಾರೆ.” ” ದೇವರು ದೊಡ್ಡವನು . ಈ ಗೋಡೆಗಳು ಹೇಳುವುದು ಅದನ್ನೇ ಅಲ್ಲವೇ? ಅರಿತುಕೊಳ್ಳುವುದೆಂದರೆ ಜಾಣರಾಗುವುದು.” ” ಯಾವಾಗಲೂ ಅಲ್ಲ ರಾಜ. ಬಹುತೇಕ ಬಾರಿ ಜಾಸ್ತಿ ತಿಳಿದುಕೊಂಡ ಪುರುಷರು, ಮಹಿಳೆಯರು ಚತುರರಾಗಿದ್ದಾರೆ, ಆದರೆ ಜಾಣರಲ್ಲ. ಚತುರತೆಗೂ ಜಾಣತನಕ್ಕೂ ತುಂಬಾ ವ್ಯತ್ಯಾಸವಿದೆ; ಸ್ವರ್ಗ ಭೂಮಿಯಷ್ಟು.” ” ಎಲೆ ಕ್ಷೌರಿಕ” ಸಿಟ್ಟಿನಿಂದ ಕೂಗಿದ ರಾಜ. ” ನನಗೆ ನಿನು ಹೆಂಡತಿಯನ್ನು ಹುಡುಕಿ ತರಲೇಬೇಕು. ಅವಳು ಇಬ್ಬನಿಯಷ್ಟು ಪವಿತ್ರ, ಚಿನ್ನದಷ್ಟು ಶುದ್ಧವಾಗಿರಬೇಕು. ಆ ಮಾಯಾ ಕನ್ನಡಿಯಲ್ಲಿ ನೋಡಲು ಕಿಂಚಿತ್ತೂ ಭಯ ಪಡದವಳಾಗಿರಬೇಕು.” ” ರಾಜ, ಕನ್ನಡಿಯಲ್ಲಿ ಇರುವ ಜಾದೂಗಾರಿಕೆಯ ಕೆಲಸ ನಮ್ಮ ಗ್ರನಾಡದ ಮಹಿಳೆಯರ ದುಷ್ಟತನ ತೋರಿಸುವುದು. ಪರ್ವತದ ಆಚೆಗೆ ಸಾಮಾನ್ಯ ಕುರಿ ಕಾಯುವ ಹುಡುಗಿಯೊಬ್ಬಳಿದ್ದಾಳೆ. ಅವಳಿಗೆ ಕನ್ನಡಿಯಲ್ಲಿ ದೃಷ್ಟಿಸುವ ದಿಟ್ಟತನವಿದೆ. ಮುಗ್ದತೆಯ ಅರಿವಿದೆ. ಆದರೆ ಅಂತವಳನ್ನು ನಮ್ಮ ರಾಜ್ಯದ ರಾಣಿಯನ್ನಾಗಿ ಹೇಗೆ ಮಾಡುವುದು? ಅವಳನ್ನು ಹೇಗೆ ಮದುವೆಯಾಗುತ್ತೀರಿ?” “ಅಂತಹವಳೇ ಈ ರಾಜ್ಯದ ರಾಣಿಯಾಗುವುದಕ್ಕೆ ಸೂಕ್ತಳು. ಬೆಲೆ ಕಟ್ಟಲಾಗದ ಮುತ್ತವಳು. ಹೋಗು ಅವಳನ್ನು ನಮ್ಮ ಆಸ್ಥಾನಕ್ಕೆ ಕರೆದುಕೊಂಡು ಬಾ. ನಮ್ಮೆಲ್ಲರ ಮುಂದೆ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಲಿ ಅವಳು.” ಕ್ಷೌರಿಕನಿಗೆ ಸಾಮಾನ್ಯ ಕುರಿಕಾಯುವವಳು ಬಂದು ಕನ್ನಡಿಯಲ್ಲಿ ನೋಡುವುದು ಸರಿ ಅನ್ನಿಸಲೇ ಇಲ್ಲ. ಅವಳನ್ನು ಕರೆಸುವ ಮನಸ್ಸೂ ಬರಲಿಲ್ಲ. ಕುರಿಕಾಯುವವಳ ಪರೀಕ್ಷೆಯ ವಾರ್ತೆ ಬೆಂಕಿಯಂತೆ ಎಲ್ಲೆಡೆ ಹಬ್ಬಿತು. ಆಸ್ಥಾನದ ಮುಖ್ಯ ಕೊಠಡಿ ಬಹುಬೇಗನೆ ರಾಜ ಮನೆತನದವರಿಂದ ತುಂಬಿ ಹೋಯಿತು. ಕುರಿಕಾಯುವವಳು ಆಸ್ಥಾನ ಪ್ರವೇಶಿಸಿದಾಗ, ಆ ವೈಭೋಗದೊಳಗೆ ತಾನಿರುವುದನ್ನು ನೋಡಿ ನಾಚಿಕೊಂಡಳು. ಆಕೆಯನ್ನು ನೋಡಿದವರು ಊಹಿಸಿದ್ದಕ್ಕಿಂತ ಚೆನ್ನಾಗಿದ್ದಾಳೆಂದು ಮಾತನಾಡಿಕೊಂಡರು. ಅವಳ ಸ್ವರೂಪವನ್ನು ರಾಜ ಮೆಚ್ಚಿಕೊಂಡ. ಪ್ರೀತಿಯಿಂದ ಸ್ವಾಗತಿಸಿದ. ಅವಳಿಗೆ ತಾನು ರಾಣಿಯಾಗಲು ಇಷ್ಟಪಟ್ಟಲ್ಲಿ ಕನ್ನಡಿಯೊಳಗೆ ನೋಡಬೇಕು. ಆದರೆ ನಮ್ಮಲ್ಲೇನಾದರೂ ದೋಷಗಳಿದ್ದರೆ , ಮನಸಿನಲ್ಲಿ ನ್ಯೂನತೆಗಳಿದ್ದರೆ ಅವು ಪ್ರತಿಬಿಂಬದಲ್ಲಿ ಕಲೆಯಾಗಿ ಕಾಣುತ್ತವೆ ಎಂದು ರಾಜ ಅವಳಿಗೆ ವಿವರಿಸಿದನು. ” ಸ್ವಾಮಿ, ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಪಾಪಿಗಳೇ. ಆದರೆ ನಾನು ಕುರಿಗಳ ಜೊತೆ ಜೀವಿಸುವ ಬಡ ಕುರಿಕಾಯುವವಳು. ನನಗೆ ಪ್ರೀತಿಸುವುದೇನೆಂದರೆ ಗೊತ್ತು. ಕುರಿಗಳು ಅಪಾಯವನ್ನು ಅರಿತಾಗ ನನ್ನ ಬಳಿ ರಕ್ಷಣೆಗೆ ಬರುತ್ತವೆ. ಕಾಡಿನ ಹೂಗಳೇ ನನಗೆ ಮಾಲೆಯಾಗಿವೆ. ಆಕಾಶ ನನ್ನ ಏಕ ಮಾತ್ರ ಛಾವಣಿ. ದೇವರು ನನ್ನ ವಿಶ್ವಾಸಿ, ಆತ್ಮೀಯ ಸ್ನೇಹಿತ. ಹಾಗಾಗಿ ಕನ್ನಡಿಯಲ್ಲಿ ನೋಡಲು ನಾನು ಹೆದರುವುದಿಲ್ಲ. ಅದಾಗ್ಯೂ ರಾಣಿಯಾಗುವ ಆಸೆಯೂ ನನಗಿಲ್ಲ. ಚೆಂದ ಕಾಣಬೇಕೆಂಬ ಹೆಮ್ಮೆಯ ಕೊರತೆ ಇದೆಯೇ ನನಗೇ?” ಎಂದಳು ಅವಳು. ಇಷ್ಟನ್ನು ಹೇಳಿ ಅವಳು ಕನ್ನಡಿಯತ್ತ ನಡೆದಳು. ಅದರಲ್ಲಿ ದೃಷ್ಟಿಸಿ ನೋಡಿದಳು. ಪರ್ವತ ಪ್ರದೇಶದಲ್ಲಿ ಹರಿಯುವ ಝರಿಗಳಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದಳು. ಈಗ ಕನ್ನಡಿಯಲ್ಲಿ ತನ್ನದೇ ಸೌಂದರ್ಯ ನೋಡಿ ಕೆನ್ನೆ ಕೆಂಪಾದವು. ಆಸ್ಥಾನದ ಮಹಿಳೆಯರು ಅವಳನ್ನು ಸುತ್ತುವರೆದರು. ಮಾಯಾ ಕನ್ನಡಿಯ ಪ್ರತಿಬಿಂಬದಲ್ಲಿ ಯಾವುದೇ ಕಲೆಗಳಿಲ್ಲದ್ದನ್ನು ಕಂಡು ಅವರು ಹೌಹಾರಿದರು. ಒಮ್ಮೆಲೆ ಅವಳಿಂದ ಕನ್ನಡಿಯನ್ನು ಕಸಿದುಕೊಂಡರು. “ಇದರಲ್ಲಿ ಯಾವ ಮಾಯೆಯೂ ಇಲ್ಲ. ನಮಗೆಲ್ಲ ಮೋಸವಾಗಿದೆ” ಎಂದು ಕೂಗಾಡತೊಡಗಿದರು. ರಾಜನು ಶಾಂತಚಿತ್ತದಿಂದ ಹೇಳಿದ. ” ಇಲ್ಲ ಮಹನೀಯರೇ, ನೀವು ನಿಮಗೇ ಧನ್ಯವಾದ ಹೇಳಬೇಕು. ನೀವು ಈ ಕುರಿ ಕಾಯುವ ಹುಡುಗಿಯಷ್ಟು ಮುಗ್ದರಾಗಿದ್ದೀರಾ? ನನ್ನ ರಾಣಿಯಾಗ ಬಯಸುವವರು ಈ ಕನ್ನಡಿಯಲ್ಲಿ ಮುಖ ನೋಡಲು ಇಷ್ಟೊಂದು ಭಯಪಡಬಾರದಿತ್ತು.” ರಾಜನ ವೈಭವದ ವಿವಾಹ ಮುಗಿದ ನಂತರ ಕ್ಷೌರಿಕ ಆಗಾಗ ಹೇಳುತ್ತಿದ್ದನಂತೆ ; ಈಗ ಕನ್ನಡಿಯು ತನ್ನ ಮಾಯೆಯನ್ನು ಕಳೆದುಕೊಂಡಿದೆ. ಆದರೆ ಯಾರಿಗೆ ಗೊತ್ತು ಅದು ಪುನಃ ಗ್ರನಾಡಕ್ಕೆ ಬಂದರೂ ಬರಬಹುದು! ಅನುವಾದ: ಸೀಮಾ ಸಮತಲ ಚಿತ್ರಗಳು: ನಿಹಾರಿಕಾ ಶೆಣೈ ಮತ್ತು ಅಂತರ್ಜಾಲ Posted in ವಿಶೇಷ, ಕಥೆ, ಬರಹ 3 comments to “ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ” ಆನಂದ್ ಸಭಾಪತಿ ಚೆಂದ ಇದೆ ಧನ್ಯವಾದಗಳು ಜನಪದದ ತಾಕತ್ತಿರುವುದೇ ಇಂಥ ನೆಲದ ಒಡಲಲ್ಲಿ ಆಕರ್ಷಕ ಕತೆ. ಅಂದದ ಻ಅನುವಾದ. ಿಇಂಥ ವಿಶೇಷ ವಿದೇಶೀ ಕತೆಗಳನ್ನು ಆಗಾಗ ಕೊಡುತ್ತಾ ಇರಿ. ಶುಭಾಶಯಗಳು.
"2020-06-01T12:17:00"
https://ruthumana.com/2017/05/26/mayakannadi/
ಲಡಾಖ್ ಸಮೀಪ ಪಾಕ್ ನ ಯುದ್ಧ ವಿಮಾನಗಳ ರವಾನೆ; ಭಾರತದ ಕಣ್ಗಾವಲು | Udayavani – ಉದಯವಾಣಿ Team Udayavani, Aug 12, 2019, 1:45 PM IST ನವದೆಹಲಿ/ಇಸ್ಲಾಮಾಬಾದ್:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಏತನ್ಮಧ್ಯೆ ಪಾಕಿಸ್ತಾನ ಲಡಾಖ್ ಸಮೀಪ ಯುದ್ಧೋಪಕರಣಗಳನ್ನು ರವಾನಿಸತೊಡಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿ ತಿಳಿಸಿದೆ. ಕೇಂದ್ರಾಡಳಿತ ಲಡಾಖ್ ನ ಸಮೀಪದ ಸ್ಕರ್ದು ಏರ್ ಬೇಸ್ ಗೆ ಪಾಕಿಸ್ತಾನ ವಾಯುಪಡೆ ಮೂರು ಸಿ 130 ಏರ್ ಕ್ರಾಫ್ಟ್ ಅನ್ನು ಕಳುಹಿಸಿರುವುದಾಗಿ ವರದಿ ವಿವರಿಸಿದೆ. ಪಾಕಿಸ್ತಾನದ ಚಲನವಲನ ಹಾಗೂ ಗಡಿಭಾಗದಲ್ಲಿನ ಬೆಳವಣಿಗೆ ಬಗ್ಗೆ ಭಾರತದ ಗುಪ್ತಚರ ಇಲಾಖೆ ಸೂಕ್ಷ್ಮ ಕಣ್ಗಾವಲು ಇರಿಸಿರುವುದಾಗಿ ಮೂಲಗಳು ತಿಳಿಸಿವೆ ಎಂದು ಎಎನ್ ಐ ವರದಿ ಮಾಡಿದೆ. ಪಾಕಿಸ್ತಾನ ಸರಕಾರ ಸ್ಕರ್ದು ವಾಯು ನೆಲೆಗೆ ಜೆಎಫ್-17 ಯುದ್ಧ ವಿಮಾನವನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ. ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಏರ್ ಬೇಸ್ ನಲ್ಲಿ ಪಾಕ್ ಯುದ್ಧೋಪಕರಣಗಳನ್ನು ರವಾನಿಸುತ್ತಿರುವುದಾಗಿ ಮೂಲಗಳು ಹೇಳಿವೆ ಎಂದು ಎಎನ್ ಐ ವರದಿ ವಿವರಿಸಿದೆ. ಸ್ಕರ್ದು ವಾಯು ನೆಲೆ ಅಬ್ಬರದ ಪ್ರವಾಹ; ಕುಸಿದು ಬಿದ್ದ ಮನೆ, ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ! Watch
"2020-05-27T09:17:05"
https://www.udayavani.com/news-section/national-news/india-keeping-a-close-eye-as-pakistan-moves-to-base-j-17-fighters-at-skardu-near-ladakh
ಪರ್ಯಾಯೋತ್ಸವಕ್ಕೆ ಮೆರುಗು ತಂದ ಕಛೇರಿಗಳು | Udayavani – ಉದಯವಾಣಿ ಪರ್ಯಾಯದ ಸಾಂಸ್ಕೃತಿಕ ಕಾರ್ಯಕ್ರಮಗಳು Team Udayavani, Feb 7, 2020, 5:00 AM IST ಪಂ|ಭೀಮ್‌ಸೇನ್‌ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್‌ ಮಿಶ್ರ ಮಾಂಡ್‌ನ‌ಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು. ಭೈರವಿಯಲ್ಲಿ ನುಡಿಸಿದ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಹೃದ್ಯವಾಗಿದ್ದುವು. ಈ ಬಾರಿಯ ಪರ್ಯಾಯೋತ್ಸವದಲ್ಲಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ‌ ಸಾಧಕರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜ.18ರಂದು ಪದ್ಮಶ್ರೀ ಡಾ| ಎನ್‌.ರಾಜಮ್‌ , ಮಗಳು ಸಂಗೀತಾ ಶಂಕರ್‌ ಹಾಗೂ ಮೊಮ್ಮಕ್ಕಳು ರಾಗಿಣಿ ಶಂಕರ್‌ ಹಾಗೂ ನಂದಿನಿ ಶಂಕರ್‌ ಅವರ ಹಿಂದುಸ್ಥಾನಿ ವಯೊಲಿನ್‌ ವಾದನದ ಕಛೇರಿ ನಡೆಯಿತು. ಟಿ.ಎನ್‌. ಕೃಷ್ಣನ್‌ ಸಹೋದರಿಯಾಗಿರುವ ಡಾ| ರಾಜಮ್‌ ಸಂಪೂರ್ಣವಾಗಿ ಹಿಂದುಸ್ಥಾನಿಯಲ್ಲಿ ತೊಡಗಿಸಿಕೊಂಡವರು. ಮಗಳು ಹಾಗೂ ಮೊಮ್ಮಕ್ಕಳಿಗೆ ತನ್ನ ಜ್ಞಾನವನ್ನು ಸಂಪೂರ್ಣವಾಗಿ ಧಾರೆಯೆರೆದದ್ದು ಕಛೇರಿಯಲ್ಲಿ ಶ್ರುತಪಟ್ಟಿತು. ಗಾಯಕೀ ಅಂಗ್‌ಗೆ ಪ್ರಸಿದ್ಧರಾಗಿರುವ ವಾದಕಿ ಬಾಗೇಶ್ರೀ ರಾಗದಿಂದ ವಾದನವನ್ನು ಆರಂಭಿಸಿದರು. ಈ ನಾಲ್ವರೂ ಬೇರೆ ಬೇರೆಯಾಗಿ ಅವರವರ ಕಲ್ಪನೆಗಳಿಗ‌ನುಗುಣವಾಗಿ ನುಡಿಸಿ ತಾಳದ ಸಮ್‌ ಬರುವಾಗ ಒಟ್ಟಿಗೇ ಸೇರಿ ಒಂದೇ ತೆರನಾಗಿ ನುಡಿಸುತ್ತಿದ್ದರು. ಮುಂದೆ ನುಡಿಸಿದ ದೇಶ್‌ನ ನಂತರ ಕಮಾಚ್‌ನಲ್ಲಿ ಗೋಪಿಯರ ಬಗ್ಗೆ ಹೇಳುವಂತಹ ಸೊಗಸಾದ ಠುಮ್ರಿಯನ್ನು ನುಡಿಸಿದರು. ಪಂ|ಭೀಮ್‌ಸೇನ್‌ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್‌ ಮಿಶ್ರ ಮಾಂಡ್‌ನ‌ಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು. ಭೈರವಿಯಲ್ಲಿ ನುಡಿಸಿದ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಹೃದ್ಯವಾಗಿದ್ದುವು. ತಬಲಾ ಸಾಥಿ ನೀಡಿದ ಸೌರಭ ಕರಿಕರ್‌ಪರಿಣಾಮಕಾರಿ ವಾದನದಿಂದ ಮನ ಗೆದ್ದರು. ಜ.19ರಂದು ರಂಜನಿ -ಗಾಯತ್ರಿ ಸಹೋದರಿಯರ ಹಾಡುಗಾರಿಕೆ ನಡೆಯಿತು. ನಾಟದ ಸ್ವಾಮಿನಾಥ ಪರಿಪಾಲಯಾಶುಮಾಂ ಕೃತಿಗೆ ವಾಮದೇವ ಪಾರ್ವತಿ ಸುಕುಮಾರದಲ್ಲಿ ಕ್ಷಿಪ್ರಗತಿಯಲ್ಲಿ ಹಾಕಿದ ಸ್ವರಪ್ರಸ್ತಾರದಿಂದ ಮೊದಲ್ಗೊಂಡು ಮುಂದೆ ಶೋಭಿಲ್ಲು ಸಪ್ತಸ್ವರ, ಧರರುಕ್ಸಾಮಾದುಲಲೋ ಎಂಬಲ್ಲಿ ಬಹಳ ಕರಾರುವಾಕ್ಕಾದ ನೆರೆವಲ್‌ ಮಾಡಿದರು. ಬೃಂದಾವನಿಯ ರಂಗಪುರವಿಹಾರದ ಬಳಿಕ ಪುರಂದರದಾಸರ ಕೀರ್ತನೆ ಆಡಿದನೋ ರಂಗವನ್ನು ಆರಭಿಯ ವಿಸ್ತಾರವಾದ ರಾಗಾಲಾಪನೆ, ಕಲ್ಪನಾ ಸ್ವರಗಳೊಂದಿಗೆ ವಿಸ್ತರಿಸಿದರು. ಆಮೇಲೆ ವನಜಮುಖೀಯರ ಮನದಿಷ್ಟಾರ್ಥವ ಎಂಬ ಕನಕದಾಸರ ಕೃತಿಯನ್ನು ಕಾನಡ ರಾಗದಲ್ಲಿ ಸಂಯೋಜಿಸಿ ಹಾಡಿದರು. ಅನಂತರ ಷಣ್ಮುಖಪ್ರಿಯ ರಾಗದ ಬೇರೆ ಬೇರೆ ರೀತಿಯ ಸಾಧ್ಯತೆಗಳನ್ನು ತೋರಿಸುವಂತಹ ಉತ್ಕೃಷ್ಟ ಮಟ್ಟದ ರಾಗಾಲಾಪನೆಯನ್ನು ಮಾಡಿ ರಾಗಂ ತಾನಂ ಪಲ್ಲವಿಯನ್ನು ನಿರೂಪಿಸಿ ಭೇಷ್‌ ಎನಿಸಿಕೊಂಡರು. ಭೈರವಿ ರಾಗದ ಮುದ್ರೆಯನ್ನೊತ್ತಿಕೊಡಿರುವ “ಓಡಿ ಬಾರಯ್ನಾ’ವನ್ನು ಪಲ್ಲವಿಗಾಗಿ ಬಳಸಿಕೊಂಡು, ಖಂಡ ಜಾತಿ ತ್ರಿಪುಟ ತಾಳದಲ್ಲಿ ಪ್ರಸ್ತುತಿ ಪಡಿಸಿದರು. ಬೌಳಿ ಹಾಗೂ ಮಾಂಡ್‌ ರಾಗದಲ್ಲಿ ರಾಗಮಾಲಿಕಾ ಸ್ವರಗಳನ್ನು ಹಾಡಿದರು. ಪತ್ರಿ ಸತೀಶ್‌ ಕುಮಾರ್‌ (ಮೃದಂಗ) ಹಾಗೂ ಉಳ್ಳೂರು ಗಿರಿಧರ ಉಡುಪ (ಘಟಂ) ಅವರ ಭರ್ಜರಿ ತನಿ ಆವರ್ತನ ನಡೆಯಿತು. ನಾಥಹರೇ (ಮಧುವಂತಿ) ಉಗಾಭೋಗಗಳೊಂದಿಗೆ ಆಡಿಸಿದಳೆಶೋದ, ಮರಾಠಿ ಅಭಂಗ್‌ನೊಂದಿಗೆ ಕಛೇರಿ ಮುಕ್ತಾಯವಾಯಿತು. ಈ ಕಛೇರಿಗೆ ಎಚ್‌. ಎಮ್‌. ಸ್ಮಿತಾ ಒಳ್ಳೆಯ ವಯೊಲಿನ್‌ ಪಕ್ಕವಾದ್ಯವನ್ನು ನೀಡಿದರು. ಜ.20ರಂದು ಮಹೇಶ್‌ ಕಾಳೆಯವರ ಹಿಂದುಸ್ಥಾನಿ ಗಾಯನವಿತ್ತು. ಮಾರೋ ಬೇಹಾಗ್‌ ರಾಗದ ಸೊಬಗನ್ನು ಕೇಳಿಸುವುದರೊಂದಿಗೆ ಗಾಯನ ಶುರುವಾಯಿತು. ಅಲ್ಲಲ್ಲಿ ಕೇಳುಗರೊಂದಿಗೆ ತನ್ನ ಗಾಯನ ಸರಿಯಾಯಿತೇ? ಕೇಳುಗರು ಖುಷಿ ಪಡುತ್ತಿದ್ದಾರಾ? ಮುಂತಾದ ಪ್ರಶ್ನೆಗಳನ್ನು ಕೇಳುತ್ತಾ ಅವರಿಂದ ಉತ್ತರವನ್ನು ನಿರೀಕ್ಷಿಸುತ್ತಾ ಕೇಳುಗರ ಭಾವನೆಗಳಿಗೆ ಸ್ಪಂದಿಸುತ್ತಾ ಅವರ ಜೊತೆಗೆ ಆನಂದವನ್ನು ಸವಿದ ಒಂದು ವಿಶಿಷ್ಟ ಗಾಯನ ಇದಾಗಿತ್ತು. ಮುಂದೆ ಅವರೇ ಹೇಳಿರುವಂತೆ “Garland on the feet of the god’ ಒಂದು ಹಾರವಾಗಿ ರಾಗ ಮಾಲಿಕೆಯನ್ನು ಹಾಡಿದರು. ಈ ಹಾರ ಬಹಳ ಉದ್ದವಾಗಿಯೇ ಇದ್ದು ಇದರಲ್ಲಿ ಸೋಹನಿ. ಭೂಪ್‌, ಛಾಯಾನಟ್‌, ಬಿಲಾವಲ್‌, ಶಂಕರ, ದೇಶ್‌, ತಿಲಕ್‌ಕಾಮೋದ್‌, ಬಸಂತ್‌, ಶ್ರೀ, ಪೂರಿಯಾ, ಭೈರವ್‌, ಗುರ್ಜರಿ, ಸಾರಂಗ, ಖರಹರಪ್ರಿಯ ಹೀಗೆ ಅನೇಕ ರಾಗಗಳ ಬಳಕೆ ಇತ್ತು. ಒಂದೊಂದು ರಾಗಗಳನ್ನೂ ವಿಸ್ತರಿಸಿಕೊಂಡೇ ಮುಂದಿನ ರಾಗಕ್ಕೆ ಹೋಗುತ್ತಿ¤ದ್ದುದ್ದು ವಿಶೇಷ. ಬಳಿಕ ಯಾರೂ ನಿರೀಕ್ಷಿಸದ ಪರಿಯಲ್ಲಿ ಹಂಸಧ್ವನಿಯ ವಾತಾಪಿಗಣಪತಿಂಭಜೇಯನ್ನು ಕ್ಷಿಪ್ರವಾಗಿ ಹಾಡಿದರು. ಇದು ತಬ್ಲಾ, ಫ‌ಕ್ವಾಜ್‌ ಹಾಗೂ ತಾಳಗಳೊಂದಿಗೆ ಭಜನೆಯಂತೆ ಧ್ವನಿಸಿತು. ಕೆಲ ಭಜನ್‌ ಹಾಗೂ ಅಭಂಗಗಳಿಂದ ರಂಜಿಸಿ, ಕೊನೆಯಲ್ಲಿ ಕಳಲಾ ವಿಠಲಾ ಕಾನಡಾನಾಥಾ ಎಂಬ ಹಾಡಿನಲ್ಲಿ ಸಭಿಕರನ್ನು ವಿಠಲಾ ವಿಠಲಾ ಎಂದು ಹಾಡುವಂತೆ ಮಾಡಿದರು. ಹಾರ್ಮೋನಿಯಂನಲ್ಲಿ ಸತೀಶ್‌ ಕೊಳ್ಳಿ, ತಬಲಾದಲ್ಲಿ ಜಗದೀಶ್‌ ಕುರ್ತುಕೋಟಿ, ಪಕ್ವಾಜ್‌ನಲ್ಲಿ ಸತ್ಯಮೂರ್ತಿ, ತಾಳದಲ್ಲಿ ರಾಜೇಶ್‌ ಪಡಿಯಾರ್‌ ಸಹಕರಿಸಿದರು. ವಿದಾಲಕ್ಷ್ಮೀ ಕಡಿಯಾಳಿ ಅದಮಾರು ಮಠದ ಪರ್ಯಾಯೋತ್ಸವ Adamaru Paryaya ಪಂ|ಭೀಮ್‌ಸೇನ್‌ ಜೋಷಿ ಮಕ್ಕಳ ಅಭಿನಯದಲ್ಲಿ ಕಳೆಗಟ್ಟಿದ ಕಂಸಾಯಣ
"2020-05-29T10:40:14"
https://www.udayavani.com/supplements/art-culture/ultural-programs-of-the-paryaya
ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ್ಯಂತ ಟೆರರ್ ಅಟ್ಯಾಕ್'ಗೆ ನಡೆದಿತ್ತಾ ಸಂಚು..?? - TheNewsism \n Home ಸುದ್ದಿ ರಾಷ್ಟೀಯ ಸುದ್ದಿ ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ್ಯಂತ ಟೆರರ್ ಅಟ್ಯಾಕ್’ಗೆ ನಡೆದಿತ್ತಾ ಸಂಚು..?? ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ್ಯಂತ ಟೆರರ್ ಅಟ್ಯಾಕ್’ಗೆ ನಡೆದಿತ್ತಾ ಸಂಚು..?? ಕೇರಳದ ಕಣ್ಣೂರಿನಲ್ಲಿ ಬಂಧಿತನಾಗಿರುವ ಪಿ.ಎ. ಸಲೀಂ ಅಲಿಯಾಸ್‌ ರೈಸಲ್‌ನಿಂದ ಹಲವು ಸ್ಪೋಟಕ ಮಾಹಿತಿಗಳು ಹೊರ ಬಂದಿವೆ. ಕರ್ನಾಟಕ ಮತ್ತು ದೇಶದ ಹಲವು ಪೊಲೀಸರಿಗೆ ಬೇಕಾಗಿರುವ ಏಳು ಉಗ್ರಗಾಮಿಗಳು ದೇಶಾದ್ಯಂತ ಮತ್ತೆ ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ನಡೆಸಿರುವ ಸ್ಫೋಟಕ ಮಾಹಿತಿ ಸಲೀಂ ಬಾಯ್ಬಿಟ್ಟಿದ್ದಾನೆ. ಉಗ್ರ ಸಲೀಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು..! ಈ ಏಳು ಮಂದಿ ಉಗ್ರರೂ ಹಿಂದೆ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಸಹಕರಿಸಿದವರಾಗಿದ್ದು, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಲ್ಲಿ ಉಗ್ರಗಾಮಿ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಸಿರುವ ಲಷ್ಕರೆ-ಇ-ತೊಯ್ಬಾ ಸಂಘಟನೆ ಕಮಾಂಡರ್‌ ವಲೀ ಅಲಿಯಾಸ್‌ ರೆಹಾನ್‌ ಅಲಿಯಾಸ್‌ ರಷೀದ್‌ ಓಬೇದುಲ್ಲಾ ಮತ್ತು ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಮುಖ್ಯಸ್ಥ ರಿಯಾಜ್‌ ಭಟ್ಕಳ್‌ ಜತೆ ನೇರ ಸಂಪರ್ಕದಲ್ಲಿದ್ದಾರೆ. ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಸಲೀಂ ಕೆಲ ಮಾಹಿತಿ ನೀಡಿದ್ದು, ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಘಟನೆಯನ್ನು ಚುರುಕುಗೊಳಿಸುವ ಜತೆಗೆ ಕೆಲವೆಡೆ ಬಾಂಬ್ ಬ್ಲಾಸ್ಟ್’ಗೆ ಸಿದ್ಧತೆ ನಡೆಸಲು ಎಲ್‌ಇಟಿ ಕಮಾಂಡರ್‌ ವಲೀ ಅಲಿಯಾಸ್‌ ರೆಹಾನ್‌ ಅಲಿಯಾಸ್‌ ರಷೀದ್‌ ಓಬೇದುಲ್ಲ ಸೂಚಿಸಿದ್ದ ಬಗ್ಗೆಯೂ ಸಲೀಂ ಹೇಳಿದ್ದಾನೆ. ಈ ಕೃತ್ಯಕ್ಕೆ ಈಗಾಗಲೇ ಪಾಕಿಸ್ತಾನ ಫೈಸಲಾಬಾದ್‌ ಗುಲಿಸ್ತಾನ್‌ಲ್ಲಿರುವ ಎಲ್‌ಇಟಿ ಕಮಾಂಡರ್‌ ವಲೀ ಜತೆ ಅಲ್ಲೇ ಕೆಲಕಾಲ ತರಬೇತಿ ಪಡೆದಿರುವ ಬಗ್ಗೆ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಜತೆಗೆ, ಅಫ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಕೇರಳದ ಕಣ್ಣೂರಿನ ಮರಕ್ಕಾರಂಡಿ ನಿವಾಸಿ ಅಯೂಬ್‌ ಅಲಿಯಾಸ್‌ ಕೆ.ಪಿ. ಶಾಬೀರ್‌, ಪಾಕಿಸ್ತಾನದ ಕರಾಚಿಯ ಸಲೀಂ ಅಲಿಯಾಸ್‌ ಮುಬಷೀರ್‌ ಶಾಹೀದ್‌ ಅಲಿಯಾಸ್‌ ಯಾಹ್ಯಾ ಜತೆಗೂ ನಿಕಟ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ. ಬಾಂಗ್ಲಾದೇಶದ ಹಮಾರಿಯಾದ ಜಾಹೀದ್‌, ಕೇರಳದ ಪಾಪಿಂಚಿರಿ ಕೊಂಡಂತ್‌ ಶೋಹೇಬ್‌ ಅಲಿಯಾಸ್‌ ಫೈಸಲ್‌ ಅವರೂ ಬಂಧಿತ ಆರೋಪಿಯ ಸಂಪರ್ಕದಲ್ಲಿದ್ದರು ಹಾಗೂ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಲೀಂ, 2008ರ ಜುಲೈ 25ರ ಸರಣಿ ಬಾಂಬ್‌ ಸ್ಫೋಟದ ಬಳಿಕ ಕೆಲ ವರ್ಷಗಳ ಕಾಲ ಗಲ್ಫ್ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ. ಈಗಾಗಲೇ ಬಂಧನಕ್ಕೊಳಗಾಗಿರುವ ಅಬ್ದುಲ್‌ ಜಬ್ಟಾರ್‌ ಅಲಿಯಾಸ್‌ ಸತ್ತಾರ್‌ ವಿಚಾರಣೆ ವೇಳೆ ಆರೋಪಿ ಸಲೀಂ ಮತ್ತೆ ಸಂಘಟನೆಯಲ್ಲಿ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಜತೆಗೆ ಈತನ ಚಟುವಟಿಕೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಮತ್ತು ಕೇಂದ್ರ ಗುಪ್ತಚರ ದಳ ಹಾಗೂ “ರಾ’ ಕಣ್ಣಿಟ್ಟಿದ್ದು, ಅವುಗಳ ಮಾಹಿತಿ ಆಧಾರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಿಸಿಬಿ ಆರೋಪಿಯನ್ನು ಬಂಧಿಸಿದೆ. Previous articleಕರ್ನಾಟಕ ಸರ್ಕಾರದ ಮೈತ್ರಿಯಲ್ಲಿ ಒಂದು ವಿಕೆಟ್ ಪತನ; ಮತೊಮ್ಮೆ ಶುರುವಾಯಿತೇ ಅಪರೇಷನ್ ಕಮಲ?? Next articleದಿನ ಭವಿಷ್ಯ: 13 ಅಕ್ಟೋಬರ್, 2018 !!
"2020-04-02T13:13:59"
http://kannada.thenewsism.com/explosive-news-of-fierce-bomb-blasts-in-kerala-plot-against-terrorists-across-the-country/
ಲ್ಯಾಂಡ್ ರೋವರ್ ರೇಂಜ್‌ ರೋವರ್ evoque ವೈಶಿಷ್ಟ್ಯಗಳು ಹಾಗೂ ವಿವರಗಳು, ಸಂರಚನೆ ಹಾಗೂ ಆಯಾಮಗಳು ರೇಂಜ್‌ ರೋವರ್ evoque emi ಹೋಮ್‌ಹೊಸ ಕಾರುಗಳುLand Rover ಕಾರುಗಳುLand Rover ರೇಂಜ್‌ ರೋವರ್ evoqueವಿಶೇಷಣಗಳು Land Rover ರೇಂಜ್‌ ರೋವರ್ evoque ನ ವಿಶೇಷಣಗಳು Land Rover ರೇಂಜ್‌ ರೋವರ್ evoque 14 ವಿರ್ಮಶೆಗಳುಇದೀಗ ರೇಟ್ ಮಾಡಿ Rs. 52.06 - 69.53 ಲಕ್ಷ* ರೇಂಜ್‌ ರೋವರ್ evoque ಸ್ಪೆಕ್ಸ್, ವೈಶಿಷ್ಟ್ಯಗಳು ಮತ್ತು ಬೆಲೆ The Land Rover Range Rover Evoque has 1 Diesel Engine and 1 Petrol Engine on offer. The Diesel engine is 1999 cc while the Petrol engine is 1997 cc. It is available with the ಸ್ವಯಂಚಾಲಿತ transmission. Depending upon the variant and fuel type the Range Rover Evoque has a mileage of 12.19 to 15.68 kmpl. The Range Rover Evoque is a 4 seater Convertible and has a length of 4370mm, width of 1900mm and a wheelbase of 2660mm. Key Specifications of Land Rover Range Rover Evoque arai ಮೈಲೇಜ್ 12.19 ಕೆಎಂಪಿಎಲ್ ನಗರ ಮೈಲೇಜ್ 9.7 ಕೆಎಂಪಿಎಲ್ max power (bhp@rpm) 237.36bhp@5500-6000rpm boot space (litres) 251 re ಇಂಧನ ಟ್ಯಾಂಕ್ ಸಾಮರ್ಥ್ಯ 68 Key ವೈಶಿಷ್ಟ್ಯಗಳು ಅದರಲ್ಲಿ Land Rover Range Rover Evoque ಲ್ಯಾಂಡ್ ರೋವರ್ ರೇಂಜ್‌ ರೋವರ್ evoque ವಿಶೇಷಣಗಳು ಎಂಜಿನ್ ಪ್ರಕಾರ si4 ಪೆಟ್ರೋಲ್ engine ಫ್ಯುಯೆಲ್ supply system mpfi ಬೋರ್ ಎಕ್ಸ್ ಸ್ಟ್ರೋಕ್ 83 ಎಕ್ಸ್ 92.29mm ಕಂಪ್ರೆಶನ್ ರೇಶಿಯೊ 10.5 ಮೈಲೇಜ್ (ಅರೈ) 12.19 ಫ್ಯುಯೆಲ್ tank capacity (litres) 68 ಹಿಂಭಾಗದ ಅಮಾನತು macpherson strut turning radius (metres) 5.69 metres ವೇಗವರ್ಧನೆ 8.1 seconds ಅಕ್ಲರೇಶನ್ (0-100 ಕೆಎಮ್‌ಪಿಎಚ್) 8.1 seconds ಅಗಲ (mm) 1900 ಎತ್ತರ (mm) 1609 ನೆಲದ ತೆರವುಗೊಳಿಸಲಾಗಿಲ್ಲ unladen (mm) 211 ವೀಲ್ ಬೇಸ್ (mm) 2660 kerb weight (kg) 2013 rear legroom (mm) 866 heated seats front ಐಚ್ಛಿಕ ಹೆಚ್ಚುವರಿ ವೈಶಿಷ್ಟ್ಯಗಳು ಸ್ಪೋರ್ಟ್ಸ್ mode spare ವೀಲ್ temporary steel ಹೆಚ್ಚುವರಿ ವೈಶಿಷ್ಟ್ಯಗಳು windsor ಚರ್ಮದ ವಿತ್‌ perforated mid section 12 way ಎಲೆಕ್ಟ್ರಿಕ್ adjustable seat illuminated ರೇಂಜ್‌ ರೋವರ್ tread plates carpet mats ಪ್ರೀಮಿಯಂ ವಿತ್‌ edging ಲೈಟಿಂಗ್ led headlightscornering, headlights ಟಯರ್ ಗಾತ್ರ 225/65 r18 advance ಸುರಕ್ಷತೆ ವೈಶಿಷ್ಟ್ಯಗಳು roll stability control ಡೈನಾಮಿಕ್‌, stability control all, terrain progress control torque, vectoring by braking ಮತ್ತು terrain response locking, ವೀಲ್ nuts , side curtain airbag row 2 airbag hazard, warning lights under heavy braking , remote double lock, lights on24x7, road side assistance ಹೆಚ್ಚುವರಿ ವೈಶಿಷ್ಟ್ಯಗಳು subwoofer 660 w meridian surround system ವಿತ್‌ am/fm ರೇಡಿಯೋ 10 inch ಹೈ resolution touch screen in control touch ಪ್ರೊ navigation in control ಪ್ರೊ services ಮತ್ತು wi-fi ಬಿಸಿ spot ಲ್ಯಾಂಡ್ ರೋವರ್ ರೇಂಜ್‌ ರೋವರ್ evoque ವೈಶಿಷ್ಟ್ಯಗಳು ಮತ್ತು prices ರೇಂಜ್‌ ರೋವರ್ evoque ಪೆಟ್ರೋಲ್ ಎಸ್ಇCurrently Viewing Rs.52,08,000*ಎಮಿ: Rs. 1,16,343 15.68 ಕೆಎಂಪಿಎಲ್ಸ್ವಯಂಚಾಲಿತ ರೇಂಜ್‌ ರೋವರ್ evoque ಪೆಟ್ರೋಲ್ ಹೆಚ್‌ಎಸ್‌ಇ ಡೈನಾಮಿಕ್‌Currently Viewing Rs.61,94,000*ಎಮಿ: Rs. 1,38,234 ರೇಂಜ್‌ ರೋವರ್ evoque ಕನ್ವರ್ಟಿಬಲ್ ಹೆಚ್‌ಎಸ್‌ಇ ಡೈನಾಮಿಕ್‌Currently Viewing Rs.69,53,000*ಎಮಿ: Rs. 1,55,101 12.19 ಕೆಎಂಪಿಎಲ್ಸ್ವಯಂಚಾಲಿತ ರೇಂಜ್‌ ರೋವರ್ evoque 2.0 ಟಿಡಿ4 ಎಸ್ಇCurrently Viewing Rs.52,06,000*ಎಮಿ: Rs. 1,18,811 ರೇಂಜ್‌ ರೋವರ್ evoque 2.0 td4 ಲ್ಯಾಡ್‌ಮಾರ್ಕ್‌ ಯಡಿಸನ್‌Currently Viewing Rs.53,90,000*ಎಮಿ: Rs. 1,22,980 ರೇಂಜ್‌ ರೋವರ್ evoque 2.0 ಟಿಡಿ4 ಹೆಚ್‌ಎಸ್‌ಇCurrently Viewing Rs.57,43,000*ಎಮಿ: Rs. 1,31,003 ರೇಂಜ್‌ ರೋವರ್ evoque 2.0 ಟಿಡಿ4 ಹೆಚ್‌ಎಸ್‌ಇ ಡೈನಾಮಿಕ್‌Currently Viewing Rs.62,96,000*ಎಮಿ: Rs. 1,43,555 ರೇಂಜ್‌ ರೋವರ್ evoque ರೂಪಾಂತರಗಳು Q. Is this the ಬೆಲೆ ಹೊಸದು ಮಾದರಿ ಮತ್ತು if not when will ಹೊಸದು ಮಾದರಿ coming to India? ಗೆ Q. Does Land Rover Range Rover Evoque has massage seat? ರೇಂಜ್‌ ರೋವರ್ evoque ಮಾಲೀಕತ್ವದ ವೆಚ್ಚ ರೇಂಜ್‌ ರೋವರ್ evoque ಮೈಲೇಜ್ Rs.35919 ರೇಂಜ್‌ ರೋವರ್ evoque ಬಿಡಿ ಭಾಗಗಳು ರೇಂಜ್‌ ರೋವರ್ evoque ಪರ್ಯಾಯಗಳು ನ ವಿವರಣೆಗಳನ್ನು ಹೋಲಿಕೆ ಮಾಡಿ Discovery Sport ವಿಶೇಷಣಗಳು ರೇಂಜ್‌ ರೋವರ್ evoque ವಿಎಸ್ ಡಿಸ್ಕಾವರಿ ಸ್ಪೋರ್ಟ್ಸ್ ಕ್ಯೂ3 ವಿಶೇಷಣಗಳು ರೇಂಜ್‌ ರೋವರ್ evoque ವಿಎಸ್ ಕ್ಯೂ3 ರಂಗ್ಲರ್ ವಿಶೇಷಣಗಳು ರೇಂಜ್‌ ರೋವರ್ evoque ವಿಎಸ್ ರಂಗ್ಲರ್ ಅವಂತಿ ವಿಶೇಷಣಗಳು ರೇಂಜ್‌ ರೋವರ್ evoque ವಿಎಸ್ ಅವಂತಿ xc40 ವಿಶೇಷಣಗಳು ರೇಂಜ್‌ ರೋವರ್ evoque ವಿಎಸ್ xc40 ಕಂಫರ್ಟ್ ಯೂಸರ್ ವಿರ್ಮಶೆಗಳು of ಲ್ಯಾಂಡ್ ರೋವರ್ ರೇಂಜ್‌ ರೋವರ್ evoque ಆಧಾರಿತ14 ಬಳಕೆದಾರರ ವಿಮರ್ಶೆಗಳು Top value for money car in this budget and the most comfortable for city or desert or hilly or sandy or snowy areas. This is the only Indian car which I like the most and...ಮತ್ತಷ್ಟು ಓದು ಇವರಿಂದ vaibhav sapra On: Apr 17, 2019 | 91 Views Loved this beauty. totally blend of comfort and ruggedness. Iconic SUV brand from ages. English made super duper robust machine. Gonna! wait for 2019 update. Looks very f...ಮತ್ತಷ್ಟು ಓದು ಇವರಿಂದ amit shyam Evoque is the best SUV with great Suspension and Comfort. The cabin is also very silent and there is no noise inside. ಇವರಿಂದ sparsh agrawal On: Dec 22, 2018 | 45 Views Land Rover Range Rover Evoque is my favorite car. It is a very comfortable car. One of the best racing car in India. I will buy another car of Land Rover. ಇವರಿಂದ sahil rao It's a good car and a luxury car good comfort and you must see this. ಇವರಿಂದ anurag dwivedi ಎಲ್ಲಾ Range Rover Evoque Comfort ವಿಮರ್ಶೆಗಳು ವೀಕ್ಷಿಸಿ ರೇಂಜ್‌ ರೋವರ್ evoque ಕಂಫರ್ಟ್ ವಿರ್ಮಶೆಗಳು cars between 50 ಲಕ್ಷ ಗೆ 1 ಕೋಟಿ best ಡೀಸಲ್ cars ಅತ್ಯುತ್ತಮ ಮೈಲೇಜ್ cars ರೇಂಜ್‌ ರೋವರ್ evoque ಇಂಟೀರಿಯರ್ ಚಿತ್ರಗಳು
"2020-01-21T00:08:17"
https://kannada.cardekho.com/land-rover/land-rover-range-rover-evoque-specifications.htm
ಇಂದಿರಾ ಕ್ಯಾಂಟೀನ್ ವೆಚ್ಚ ಸರ್ಕಾರವೇ ಭರಿಸಲಿದೆ: ಶೆಟ್ಟರ್ | Prajavani ಇಂದಿರಾ ಕ್ಯಾಂಟೀನ್ ವೆಚ್ಚ ಸರ್ಕಾರವೇ ಭರಿಸಲಿದೆ: ಶೆಟ್ಟರ್ ಸ್ವಚ್ಛ– ಸುಂದರ ವಾರ್ಡ್ ಉದ್ಘಾಟನೆ: Published: 02 ಡಿಸೆಂಬರ್ 2018, 01:55 IST Updated: 02 ಡಿಸೆಂಬರ್ 2018, 01:55 IST ಹುಬ್ಬಳ್ಳಿ: ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪಾಲಿಕೆ ಅನುದಾನ ನೀಡಲಾಗದು ಎಂದು ಸ್ಪಷ್ವಪಡಿಸಲಾಗಿದ್ದು, ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು. ಎಲ್ಲ ರೀತಿಯ ಮೂಲ ಸೌಕರ್ಯ ಹೊಂದಿರುವ ವಾರ್ಡ್ ಸಂಖ್ಯೆ 34 ‘ಸ್ವಚ್ಛ– ಸುಂದರ ವಾರ್ಡ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ವಾರ್ಷಿಕ ₹12 ಕೋಟಿಯನ್ನು ಇಂದಿರಾ ಕ್ಯಾಂಟೀನ್‌ಗೆ ನೀಡಲು ಸಾಧ್ಯವಾಗುವುದಿಲ್ಲ. ಪಿಂಚಣಿ ಹಣವನ್ನು ಸಹ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆದ ವೇಳೆ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 21ರ ಒಳಗೆ ಹಣ ಬಿಡುಗಡೆಯಾಗಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ₹24 ಕೋಟಿ ವೆಚ್ಚದಲ್ಲಿ ಮಲಪ್ರಭಾ ನದಿ ನೀರು ತರುವ ಯೋಜನೆ ಪೂರ್ಣಗೊಂಡ ನಂತರ 3–4 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುವುದು. ಒಟ್ಟು ಎಂಎಲ್‌ಡಿ ನೀರನ್ನು ತರಲಾಗುವುದು. ಈಗ ನಡೆಯುತ್ತಿರುವ ಮುಖ್ಯ ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡ ನಂತರ, ಉಳಿದವುಗಳ ಅಭಿವೃದ್ಧಿಯತ್ತ ಗಮನಹರಿಸಲಾಗುವುದು ಎಂದರು. ವಾಯು ಮಾಲಿನ್ಯ ಪ್ರಮಾಣದ ಬಗ್ಗೆ ಮಾಹಿತಿ ನೀಡುವ, ಟಿ.ವಿ ಪರದೆ ಇರುವ ಹಾಗೂ ವೈಫೈ ಸೌಲಭ್ಯ ಹೊಂದಿರುವ ‘ಗಝೇಬೊ’ವನ್ನು ಸಹ ಉದ್ಘಾಟಿಸಲಾಯಿ. ಪ್ರಮುಖ ರಸ್ತೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ, ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ, ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಹಾಗೂ ಸಮರ್ಪಕ ಕಸ ವಿಲೇವಾರಿ ವ್ಯವಸ್ಥೆ ಈ ವಾರ್ಡ್‌ನಲ್ಲಿದೆ. ಉದ್ಯಾನವನ್ನು ಅಭಿವೃದ್ಧಿಪಡಿಸಿ, ಅಲ್ಲಿ ತೆರೆದ ಜಿಮ್ ಅಳವಡಿಸಿ ಮಾದರಿ ಕಾರ್ಯವನ್ನು ಮಾಡಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ನಾಲೆಯ ಮೇಲೆ ಬೆಡ್ಡಿಂಗ್ ಹಾಕಬೇಕು, ಉದ್ಯಾನದಲ್ಲಿ ಗ್ರಂಥಾಲಯ ಆರಂಭಿಸಬೇಕು ಎಂದು ಕುಂಭಕೋಣಂ ಫ್ಲಾಟ್, ಬೈಲಪ್ಪನವರ ನಗರದ ನಿವಾಸಿಗಳು ಮನವಿ ಮಾಡಿದರು. ಪಾಲಿಕೆ ಸದಸ್ಯೆ ಲಕ್ಷ್ಮಿ ಲಕ್ಷ್ಮಣ ಉಪ್ಪಾರ, ಬಿಜೆಪಿ ಮಹಾನಗರ ಜಿಲ್ಲೆ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮುಖಂಡರಾದ ತಿಪ್ಪಣ್ಣ ಮಜಗಿ, ಗೌತಮ್ ಬೇತಾಳ, ಕಿರಣ ಉಪ್ಪಾರ ಇದ್ದರು.
"2018-12-11T15:59:51"
https://www.prajavani.net/stories/district/state-govt-will-bare-indira-591277.html
ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ | Misthry lost cool asking about Vadra land deal - Kannada Oneindia ವಾದ್ರಾ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹರಿಹಾಯ್ದ ಮಿಸ್ತ್ರಿ | Published: Saturday, November 8, 2014, 10:57 [IST] ಲಕ್ನೋ, ನ. 8: ಕಾಂಗ್ರೆಸ್ ವರಿಷ್ಠೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಮೇಲಿರುವ ಭೂ ಅವ್ಯವಹಾರ ಆರೋಪ ಕುರಿತು ಪ್ರಶ್ನಿಸಿದ ಪತ್ರಕರ್ತರ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಹರಿಹಾಯ್ದಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲಾ ಮುಖಂಡರ ಸಭೆ ನಡೆಸುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದ ಮಿಸ್ತ್ರಿ ರಾಬರ್ಟ್ ವಾದ್ರಾ ಕುರಿತು ಪ್ರಶ್ನಿಸುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು. ಅಲ್ಲದೆ, ಮಾಧ್ಯಮಗಳು ಎನ್‌ಡಿಎ ಸರ್ಕಾರದ ಪರ ಪಕ್ಷಪಾತ ತೋರುತ್ತಿವೆ ಎಂದು ಆರೋಪಿಸಿದರು. ರಾಬರ್ಟ್ ವಾದ್ರಾ ಅವರನ್ನು ಕಾರಣವಿಲ್ಲದೆ ಗುರಿ ಮಾಡಲಾಗುತ್ತಿದೆ. ಗುಜರಾತ್‌ನಲ್ಲಿ ನಡೆದ ಭೂ ಅವ್ಯವಹಾರದ ಕುರಿತು ಪತ್ರಕರ್ತರು ಪ್ರಶ್ನಿಸುತ್ತಿಲ್ಲ. ಆದರೆ, ರಾಬರ್ಟ್ ವಾದ್ರಾ ಕುರಿತು ಮಾತ್ರ ಆರೋಪಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಎದುರು ಚುನಾವಣೆಗೆ ನಿಂತು ಹೀನಾಯ ಸೋಲನುಭವಿಸಿರುವ ಮಧುಸೂದನ ಮಿಸ್ತ್ರಿ, ಅವರ ಹೆಸರನ್ನು ನನ್ನ ಎದುರು ಹೇಳಬೇಡಿ. ಅವರ ಹೆಸರು ಕೇಳಿದರೆ ನನ್ನ ರಕ್ತ ಕುದಿಯುತ್ತದೆ ಎಂದು ಸಿಟ್ಟಿಗೆದ್ದರು. ಪತ್ರಕರ್ತರು ಮತ್ತೆ ರಾಬರ್ಟ್ ವಾದ್ರಾ ಕುರಿತು ಕೇಳುತ್ತಿದ್ದಂತೆ ಮಧುಸೂದನ ಮಿಸ್ತ್ರಿ ಅವರು ಪತ್ರಿಕಾಗೋಷ್ಠಿಯನ್ನು ಅಲ್ಲಿಯೇ ಮೊಟಕುಗೊಳಿಸಿದರು. ಇನ್ನಷ್ಟು land ಸುದ್ದಿಗಳು ಪುತ್ತೂರಿನ ತೆಂಕಿಲ ದರ್ಖಾಸು ಎಂಬಲ್ಲಿ ಬಿರುಕು ಬಿಟ್ಟ ಭೂಮಿ, ಜನರಲ್ಲಿ ಆತಂಕ ತುಮಕೂರು ರಸ್ತೆ, ನೆಲಮಂಗಲದಲ್ಲಿ ಕೈಗೆಟಕುವ ಬೆಲೆಯಲ್ಲಿ ಸೈಟುಗಳು ಲಭ್ಯ ಪೆರಿಫೆರಲ್ ರಸ್ತೆ ಕಾಮಗಾರಿ, ಅಂತಿಮ ಸಮೀಕ್ಷೆ, ಶೀಘ್ರ ಟೆಂಡರ್ land narendra modi haryana ಭೂಮಿ ನರೇಂದ್ರ ಮೋದಿ ಹರ್ಯಾಣ Congress general secretary Madhisudan Misthry lost his cool when he was asked about land deal of Robert Vadra. He accused media for being partial to the NDA government. Story first published: Saturday, November 8, 2014, 10:57 [IST]
"2019-09-19T22:24:26"
https://kannada.oneindia.com/news/india/misthry-lost-cool-asking-about-vadra-land-deal-088911.html
ರೈತರಿಗೆ ಹಲಸಿನ ಮಹತ್ವದ ಅರಿವು ಮೂಡಿಸಿ | Udayavani – ಉದಯವಾಣಿ ಮೌಲ್ಯವರ್ಧಿತ ಹಲಸಿನ ಮೇಳದಲ್ಲಿ ಶಾಸಕ ಡಿ.ಎಸ್‌.ಸುರೇಶ್‌ ಸಲಹೆ Team Udayavani, Jun 26, 2019, 5:08 PM IST ತರೀಕೆರೆ: ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಡೆದ ಮೌಲ್ಯವರ್ಧಿತ ಹಲಸಿನ ಮೇಳವನ್ನು ಶಾಸಕ ಡಿ.ಎಸ್‌.ಸುರೇಶ್‌ ಉದ್ಘಾಟಿಸಿದರು. ತರೀಕೆರೆ: ರೈತರಿಗೆ ಲಾಭದಾಯಕವಾದ, ರೋಗ ನಿರೋಧಕ ಶಕ್ತಿಯುಳ್ಳ ಮತ್ತು ರಾಸಾಯನಿಕವಿಲ್ಲದ, ಕಲಬೆರಕೆರಹಿತ ಹಲಸಿನ ಹಣ್ಣು ನಿರ್ಲಕ್ಷಕ್ಕೆ ಒಳಗಾಗಿದೆ. ರೈತರಿಗೆ ಹಲಸಿನ ಹಣ್ಣಿನ ಮಹತ್ವದ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು. ಪಟ್ಟಣದ ಡಾ| ಅಂಬೇಡ್ಕರ್‌ ಭವನದಲ್ಲಿ ಮಮತಾ ಮಹಿಳಾ ಸಮಾಜ ಮತ್ತು ಕಲಾ ಫಾರಂ ವತಿಯಿಂದ ಹಮ್ಮಿಕೊಂಡಿದ್ದ ಮೌಲ್ಯವರ್ಧಿತ ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಿಂದ ಹೊರ ದೇಶಕ್ಕೆ ಹಲಸಿನ ಹಣ್ಣು ರಫ್ತು ಮಾಡಲಾಗುತ್ತಿದೆ. ಆದರೂ, ರೈತರಲ್ಲಿ ಹಲಸಿನ ಹಣ್ಣು ಬೆಳೆಯ ಬಗ್ಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಹಲವಾರು ತಳಿಗಳನ್ನು ಹೊಂದಿರುವ ಹಲಸು ಅನೇಕ ಕಾಯಿಲೆಗಳಿಗೆ ಮದ್ದಾಗಿದೆ. ಹಲಸಿನ ಕೃಷಿ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದರ ಮಹತ್ವವನ್ನು ಎಲ್ಲರಿಗೂ ತಿಳಿಸುವ ಕೆಲಸವಾಗಬೇಕೆಂದರು. ತಾಲೂಕಿನ ವ್ಯಾಪ್ತಿಯಲ್ಲಿ ಎಲ್ಲಿಯೂ ಕೂಡ ಹಲಸಿನ ಹಣ್ಣಿನ ಫಾರಂ ಇಲ್ಲ. ಹಲಸಿನ ಬಗ್ಗೆ ಎಲ್ಲಾ ರೈತರಿಗೂ ಮಾಹಿತಿ ದೊರೆಯುವಂತಾಗಬೇಕು. ಕಲಾ ಫಾರಂನಲ್ಲಿ ಹಲಸಿನ ಬೆಳೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಕೂಡಲೇ ಏರ್ಪಡಿಸುವಂತೆ ತೋಟಗಾರಿಕಾ ಅಧಿಕಾರಿ ಲಿಂಗರಾಜು ಅವರಿಗೆ ಸೂಚನೆ ನೀಡಿದರು. ಪ್ರಗತಿಪರ ಕೃಷಿಕ ಶಿವಣ್ಣ ಮಾತನಾಡಿ, ಹಲಸಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ವಿದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹಲಸಿನಲ್ಲಿ ಮಧುಮೇಹ, ಹೃದಯಾಘಾತ ಮತ್ತು ರಕ್ತದೊತ್ತಡ ಕಡಿಮೆ ಮಾಡುವ ಶಕ್ತಿ ಇದೆ. ಹಲವಾರು ರೋಗಗಳನ್ನು ಗುಣಪಡಿಸುವ ಗುಣವಿರುವ ಹಲಸಿನ ಹಣ್ಣು, ಕಾಯಿಗಳನ್ನು ಸಮರ್ಪಕವಾಗಿ ಉಪಯೋಗದ ಬಗ್ಗೆ ನಮಗೆ ಸರಿಯಾದ ಅರಿವು ಮೂಡಿಲ್ಲ ಎಂದರು. ಹಲಸಿನ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸಿ ಉಪಯೋಗಿಸಬಹುದು. ಬೀಜದಿಂದಲೂ ಉಪಯೋಗವಿದೆ. ಆಹಾರವಾಗಿಯೂ ಬಳಸಬಹುದು. ಹಲಸು ಬೆಳಸುವುದರಿಂದ ರೈತರಿಗೆ ಹಲವಾರು ಉಪಯೋಗಗಳಿವೆ. ಮರದಿಂದ ಬೀಳುವ ಎಲೆಗಳಿಂದ ಗೊಬ್ಬರವಾಗುತ್ತದೆ. ಬೆಳೆದು ನಿಂತ ಮರ ತೇವಾಂಶವನ್ನು ಭೂಮಿಗೆ ನೀಡುತ್ತದೆ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಸಿವಿನಿಂದ ಬಳಲುವವರಿಗೆ ಹಲಸು ಆಹಾರವಾಗುತ್ತದೆ ಎಂದರು. ಹಲಸನ್ನು ನವ ಕಲ್ಪವೃಕ್ಷ ಎಂದು ಕರೆಯಲಾಗುತ್ತಿದೆ. ಹಲಸಿನ ಬೆಳೆಯನ್ನು ಮಾರುಕಟ್ಟೆ ಮಾಡುವುದನ್ನು ರೈತರು ಕಲಿತುಕೊಳ್ಳಬೇಕು. ಹಣ್ಣುಗಳ ಮೌಲ್ಯವರ್ಧನೆ ಮಾಡಿಕೊಳ್ಳಬೇಕು. ಅವುಗಳನ್ನು ಪ್ಯಾಕ್‌ ಮಾಡಿ ಮಾರುಕಟ್ಟೆಗೆ ತಲುಪಿಸುವ ಕೆಲಸ ಮಾಡಿದರೆ ಲಾಭ ಗಳಿಸಬಹುದಾಗಿದೆ. ಒಂದು ಮರದಿಂದ ಲಕ್ಷ ರೂ.ಆದಾಯ ಪಡೆಯಬಹುದು ಎಂದರು. ತೋಟಗಾರಿಕಾ ಇಲಾಖೆಯ ಲಿಂಗರಾಜು, ಪ್ರಗತಿಪರ ಕೃಷಿಕ ವೀರಣ್ಣ, ಜನಾರ್ದನ್‌, ಶೋಭಾ ಮಹೇಂದ್ರ, ಮಮತಾ ಮಹಿಳಾ ಸಮಾಜದ ಅದ್ಯಕ್ಷೆ ಸೌಭಾಗ್ಯ ಶ್ರೀರಂಗಪ್ಪ ಮಾತನಾಡಿದರು. ಹಲಸಿನ ಖಾದ್ಯ ಮೇಳ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹಲಸಿನ ಹಣ್ಣಿನಿಂದ ವಿವಿಧ ಬಗೆಯ ಖಾದ್ಯಗಳನ್ನು ಸ್ಥಳದಲ್ಲಿಯೇ ತಯಾರಿಸಿ ಮಾರಾಟ ಮಾಡಲಾಯಿತು. ಹಲಸಿನ ಮಿಲ್ಕಶೇಕ್‌, ಬೋಂಡಾ, ಕಬಾಬ್‌, ಹಲಸಿನ ಹೋಳಿಗೆ, ಬನ್‌, ದೋಸೆ, ಬಿಳಿ ಹೋಳಿಗೆ ಆಹಾರ ಪ್ರಿಯರ ಮೆಚ್ಚುಗೆಗೆ ಪಾತ್ರವಾದವು.
"2019-07-16T21:28:03"
https://www.udayavani.com/district-news/tarikere-jackfruit-mela
ತೆರದ ಮನಸಿನ ಪುಟಗಳು: ಬಿಸಿಲ್ಗುದುರೆ! ಆ ಬಿಸಿಲ್ಗುದುರೆ ಕಣ್ಣೆದುರು ಸುಳಿದಾಗ ಮೋಹದ ಸುಳಿಯಲ್ಲಿ ನಾ ಸಿಲುಕಿದೆನೇನೋ.. ವಿವೇಚನೆ ಅತ್ತ ಬದಿಗೆ ಸರಿಯಿತೇನೋ ಅದನಪ್ಪಿ ಮಾಯಾಲೋಕದಲ್ಲೆ ಸುತ್ತಿದೆನೋ. ಮತ್ತು ತಲೆಗೇರಿತ್ತೇನೋ.. ತಪ್ಪುಗಳಿಗೆಲ್ಲಾ ತೇಪ ಹಚ್ಚಿತು ಮೋಹಕೆ ಬಲಿಯಾದ ಮನಸು ಹಾದಿ ತಪ್ಪಿಸಿತು. ದೊಪ್ಪನೆ ನೆಲಕೆ ಬಿಸುಟು ಮಾಯವಾಯಿತೇ ಒಮ್ಮೆಗೆ ಧೂಳು ಆವರಿಸಿ ಅಮಲೆಲ್ಲಾ ಇಳಿದು ಭ್ರಮೆಯ ಪರದೆ ಸರಿಯಿತು ವಾಸ್ತವವ ಒಪ್ಪಲು ಮನ ನಿರಾಕರಿಸಿತು ವಿಧಿಯ ಅಟ್ಟಹಾಸ ಕಿವಿಗಪ್ಪಳಿಸಿತು.
"2018-05-27T17:46:31"
http://teredamanasinaputagalu.blogspot.com/2013/06/blog-post_844.html
ಧರ್ಮ ಮತ್ತು ರಾಜಕಾರಣದ ನಡುವೆ… | Udayavani – ಉದಯವಾಣಿ Wednesday, 08 Apr 2020 | UPDATED: 02:15 AM IST Team Udayavani, Jan 20, 2020, 6:45 AM IST ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ. ಬದುಕೊಂದು ಹಾದಿಗಳು ನೂರಾರು. ಅದರಲ್ಲೂ ಪ್ರಮುಖವಾಗಿ ಎರಡು ಮಾರ್ಗಗಳು. ಸಂಸಾರ ಮತ್ತು ಸನ್ಯಾಸ. ಪ್ರತಿಶತ 95% ಜನರು ಸಾಂಸಾರಿಕ ಮಾರ್ಗವನ್ನು ಅನುಸರಿಸುತ್ತಾರೆ. ಕೇವಲ 5% ಜನರು ಸನ್ಯಾಸವನ್ನು ಅನುಭವಿಸುತ್ತಾರೆ. ಬಡತನ, ಅಸಹಾಯಕತೆ, ಪರಿಸ್ಥಿತಿಯ ಒತ್ತಡದಿಂದಾಗಿ ಕೆಲವರು ಸನ್ಯಾಸದ ಕಡೆಗೆ ವಾಲುವಂತಾದರೆ, ಗುರುಕುಲ ಮಾದರಿ ಶಿಕ್ಷಣದಿಂದಾಗಿ ಕೆಲವರು ಆ ಹಾದಿಯನ್ನು ಅನುಸರಿಸುತ್ತಾರೆ. ಆಗಾಗ ಕೆಲವರು ಎಲ್ಲವನ್ನು ತೊರೆಯಲು ನಾನೇನು ಸನ್ಯಾಸಿಯೇ? ಎಂದು ಗೇಲಿ ಮಾಡುತ್ತಾರೆ. ಸನ್ಯಾಸ ಜೀವನದಲ್ಲು ಸವಾಲುಗಳು ಇವೆಯೆಂಬುದು ಕೆಲವರಿಗೆ ತಿಳಿದಿಲ್ಲವೆಂದು ಕಾಣುತ್ತದೆ. ಗೆಡ್ಡೆ- ಗೆಣಸು ಸ್ವೀಕರಿಸುತ್ತ, ಊರಿಂದೂರಿಗೆ ಸಂಚರಿಸುತ್ತ, ಒಮ್ಮೊಮ್ಮೆ ಭಿಕ್ಷೆ ಬೇಡುತ್ತ ತನ್ನ ವ್ರತ-ನಿಯಮಾದಿಗಳನ್ನು ಪಾಲಿಸುವವರು ಸನ್ಯಾಸಿಗಳೆಂದು ಕರೆಸಿಕೊಳ್ಳುತ್ತಾರೆ. ಸನ್ಯಾಸಿಗಳು ಒಂದೇ ಕಡೆ ಜಪ-ತಪ ಆಚರಿಸಲು ಅವಕಾಶವಿದೆ; ಅದರಂತೆ ಪರ್ಯಟನೆ ಮಾಡುತ್ತ ಜೀವನ ನಡೆಸಬಹುದಾಗಿರುತ್ತದೆ. ಇವರಿಗೆ ಒಮ್ಮೊಮ್ಮೆ ಕುಡಿಯಲು ನೀರು ಸಹ ಸಿಗುವುದಿಲ್ಲ. ಎಲ್ಲರಿಗೂ ಬದುಕಿನ ನಿರ್ವಹಣೆ ಬೃಹತ್‌ ಸಮಸ್ಯೆಯಾಗಿ ಕಾಡುತ್ತದೆ. ಕಾಡು-ಮೇಡಿನಲ್ಲಿ ವಾಸಿಸುವ ಸನ್ಯಾಸಿಗಳು ದುಡಿಯುವುದಿಲ್ಲವಾದರೂ, ಜೀವನ ನಿರ್ವಹಣೆ ಅವರವರದೇ ಆಗಿರುತ್ತದೆ. ಬದ್ಧತೆಗೆ ಒಳಗಾಗುವವರನ್ನು ಸ್ವಾಮಿಗಳೆಂದು ಗುರುತಿಸಬಹುದು. ಬದ್ಧತೆಯೆಂದರೆ ಸಾಮಾಜಿಕ ಹೊಣೆಗಾರಿಕೆ. ಸಂಘ-ಸಂಸ್ಥೆಗಳ ಜವಾಬ್ದಾರಿ. ಒಂದು ಮಠ-ಪೀಠವನ್ನು ನಡೆಸಿಕೊಂಡು ಹೋಗುವುದು ಸುಲಭವೇನಲ್ಲ! ಸಮಸ್ಯೆಗಳು ಇರತಕ್ಕವೆ. ಹೆಜ್ಜೆ ಹೆಜ್ಜೆಗೆ ಕಾಡುವವರು ಇರುತ್ತಾರೆ. ಇವರ ಕಣ್ಣು ಎಲ್ಲರ ಮೇಲಿದ್ದರೆ, ಎಲ್ಲರ ಕಣ್ಣು ಇವರ ಮೇಲಿರುತ್ತದೆ. ಅನೇಕರ ಅನುಮಾನಗಳ ನಡುವೆ ಒಬ್ಬ ಸ್ವಾಮಿಯು ಜೀವನ ನಡೆಸಬೇಕಾಗುತ್ತದೆ. ಅನುಮಾನವು ಅವಮಾನಕ್ಕೆ ಕಾರಣ ಆಗುತ್ತದೆ. ಸಾಮಾಜಿಕ ಬದ್ಧತೆಗೆ ಒಳಗಾಗಿ, ಸಂಘ-ಸಂಸ್ಥೆ ಸ್ಥಾಪಿಸುವವರದು ಸ್ವಾಮಿತ್ವ; ಅಲೆಮಾರಿ ಜೀವನ ನಡೆಸುತ್ತ ಕಂದಮೂಲಾದಿಗಳನ್ನು ಸೇವಿಸುತ್ತ ಜೀವನ ನಡೆಸುವುದು ಸನ್ಯಾಸತ್ವ. ಸಂನ್ಯಾಸತ್ವದಲ್ಲಿ ಏಕವ್ಯಕ್ತಿ ಸುಖ; ಸ್ವಾಮಿತ್ವದಲ್ಲಿ ಬಹುಮುಖೀ ಸೇವಾಸುಖ. ಸನ್ಯಾಸಿಗೆ ಯಾವ ಕಟ್ಟುಪಾಡುಗಳು ಇರುವುದಿಲ್ಲ; ಸ್ವಾಮಿತ್ವಕ್ಕೆ ಹಲವಾರು ಕಟ್ಟುಪಾಡುಗಳಿರುತ್ತವೆ. ಬಾಯಾರಿಕೆಯಾದರೆ ಎಲ್ಲರಂತೆ ಅವನು ನೀರು ಕುಡಿಯುವಂತಿಲ್ಲ. ಧ್ಯಾನಾದಿಗಳನ್ನು (ಪೂಜೆ) ಮಾಡಿಯೇ ಪ್ರಸಾದ ಸ್ವೀಕರಿಸಬೇಕೆಂಬ ವ್ರತಾಚರಣೆ. ನೀರು ಕುಡಿಯುವ ಸ್ವಾತಂತ್ರÂವೂ ಅವನಿಗೆ ಇರುವುದಿಲ್ಲ. ಅಕಸ್ಮಾ ತ್ತಾಗಿ ಬಹಿರಂಗ ಸಭೆಯಲ್ಲಿ ನೀರು ಕುಡಿದರೆ ಅದನ್ನು ಚಿತ್ರೀಕರಣ ಮಾಡಿಕೊಂಡು ಕೆಲವರು ಸೋಷಿಯಲ್‌ ಮೀಡಿಯಾಗಳಿಗೆ ರವಾನಿಸುತ್ತಾರೆ. ಒಂದು ಅಪರಾಧ ಎಂಬಂತೆ ಬಿಂಬಿಸಲಾಗುತ್ತದೆ. ಸಭೆ-ಸಮಾರಂಭ ಇತ್ಯಾದಿಗಳಲ್ಲಿ ನಿರತರಾದಾಗ ವೇಳೆಗೆ ಸರಿಯಾಗಿ ಪ್ರಸಾದ (ಭೋಜನ) ಸ್ವೀಕರಿಸಲು ಆಗುವುದಿಲ್ಲ. ನಮ್ಮ ಶ್ರೀಮಠದಲ್ಲಿ ವೇಳೆಗೆ ಸರಿಯಾಗಿ ಪ್ರಸಾದ ಸ್ವೀಕರಿಸುವವರೆಂದರೆ ವಿದ್ಯಾರ್ಥಿಗಳು/ಮಕ್ಕಳು ಮತ್ತು ಬರುವ ಭಕ್ತಾದಿಗಳು. ಕೊನೆಯಲ್ಲಿ ಭೋಜನ ಸ್ವೀಕರಿಸುವವನು ನಾನಾಗಿರುತ್ತೇನೆ. ಮಧ್ಯಾಹ್ನ 3 ಗಂಟೆ ಅಥವಾ 4 ಗಂಟೆ, ರಾತ್ರಿ 10 ಅಥವಾ 11 ಗಂಟೆಗೆ ಪ್ರಸಾದ ಸ್ವೀಕರಿಸ ಬೇಕಾದ ಅನಿವಾರ್ಯತೆ. ದಿನವೂ ಈ ಪದ್ಧತಿ ಮುಂದುವರಿದರೆ ಅಸಿಡಿಟಿ, ಅಲ್ಸರ್‌, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮೂತ್ರಕೋಶದ ತೊಂದರೆಗಳು ಎದುರಾಗುತ್ತವೆ. ಬಹಳ ಜನ ಸ್ವಾಮಿಗಳು ಮೂತ್ರಕೋಶದ ತೊಂದರೆ ಅನುಭವಿಸುತ್ತಾರೆ (ವೇಳೆಗೆ ಸರಿಯಾಗಿ ನೀರು ಕುಡಿಯದೆ ಇರುವುದರಿಂದ). ಇದನ್ನೆಲ್ಲ ಗಮನಿಸಿದ ಕೆಲವರು ಧೈರ್ಯವಾಗಿ ಇತ್ತೀಚೆಗೆ ಬಹಿರಂಗವಾಗಿ ನೀರು ಕುಡಿಯುವುದನ್ನು ಆರಂಭಿಸಿದ್ದಾರೆ. ಮಠಾಧೀಶರ ಮತ್ತೂಂದು ಜಟಿಲವಾದ ಸಮಸ್ಯೆಯೆಂದರೆ ಮಧುಮೇಹ. ಈ ಕಾಯಿಲೆಯು ಅತಿಯಾದ ಒತ್ತಡ (ಖಠಿrಛಿss)ದಿಂದ ಎದುರಾಗುತ್ತದೆಂದು ವೈದ್ಯಕೀಯ ಲೋಕದ ಅಂಬೋಣ. ಮಲಬದ್ಧತೆಯಿಂದಲೂ ಬಳಲುವ ಸಂಭವ. ಮಠಾಧೀಶರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಮಯದ ಒತ್ತಡ, ಕಾರ್ಯಬಾಹುಳ್ಯದ ಒತ್ತಡ, ಲೋಕಾಪವಾದದ ಒತ್ತಡ ಇತ್ಯಾದಿ. ಸಮಾಜದ ಒಳಿತಿಗಾಗಿಯೂ ತನ್ನ ಬದುಕಿನ ಉದ್ಧಾರ ಕ್ಕಾಗಿಯೂ ಒಬ್ಬ ಸ್ವಾಮಿ ಮನೆ ಮ ತ್ತು ಹೆತ್ತವರನ್ನು ತೊರೆದು – ಸಮಾಜವೇ ನೀನೇ ನನಗೆ ಗತಿ ಮತಿ ಯೆಂದು ಭಾವಿಸಿ, ಕ ಟ್ಟಿಕೊಂಡಿದ್ದ ಉಡು ದಾರವನ್ನು ಹರಿದು ಬರುತ್ತಾನೆ. ಉಡು ದಾರ ಸಂಸಾರದ ಸಂಕೇತ; ಶಿವದಾರ ಮತ್ತು ಜನಿವಾರ ಪರಮಾರ್ಥ ಸಾಧನೆಯ ಸಂಕೇತ. ಆ ದಿಶೆಯಲ್ಲಿ ಸ್ವಾಮಿಗಳು, ಶರಣರು, ಮಠಾಧೀಶರು ತ್ಯಾಗಮೂರ್ತಿಗಳು. ಸ್ವಾಮಿತ್ವದಲ್ಲಿ ತ್ಯಾಗತ್ವ ಇದೆ. ಸಾರ್ವಜನಿಕರಿಂದ ಪೂಜೆಗೊಳ್ಳುವುದು ಸ್ವಾಮಿಗಳಿಗಿರುವ ಅವಕಾಶ. ತ್ಯಾಗಮಯವಾದ ಬದುಕಿಗೆ ಗೌರವ-ಘನತೆ ಮತ್ತು ಪೂಜ್ಯತೆ. ಆ ಸ್ಥಾನದ ಪೂಜ್ಯತೆ ಮತ್ತು ಘನತೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಪೂಜ್ಯತೆ ಹೆಚ್ಚದಿದ್ದರು ತೊಂದರೆಯಿಲ್ಲ ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. ಸಿಂಹಾಸನ ಇರಬಹುದು, ಮತ್ಯಾವ ಅಧಿಕಾರದ ಗದ್ದುಗೆ ಹಿಡಿದವರೇ ಇರಬಹುದು, ಅವರೆಲ್ಲ ಸದಾ ಸಿಂಹಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ. ತನ್ಮೂಲಕ ತಪ್ಪು-ಒಪ್ಪುಗಳ ಪರಾಮರ್ಶೆ. ಬದುಕಿನಲ್ಲಿ ಧ್ಯಾನ, ಮೌನ ಮತ್ತು ಸುಜ್ಞಾನದ ಮೂಲಕ ಅಂತರೀಕ್ಷಣೆ ಮಾಡಿಕೊಳ್ಳದಿದ್ದಲ್ಲಿ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಪಟ್ಟಾಧಿಕಾರವೆಂದರೆ ಕೆಲವರು ಮಠಾಧಿಕಾರವೆಂದು ಭ್ರಮಿಸಿದಂತಿದೆ. ಭ್ರಮೆಗೆ ಒಳಗಾದಲ್ಲಿ ಕಣ್ಣು ಕುರುಡಾಗುತ್ತವೆ; ನೆತ್ತಿಗೇರುತ್ತವೆ. ಇಂದ್ರಿಯ ನಿಯಂತ್ರಣ ಬಹುಮುಖ್ಯ. ಬುದ್ಧಿ ಹೇಳಿದಂತೆ ಅವು ಕೇಳಿದರೆ ಚೆನ್ನ. ಅವು ಹೇಳಿದಂತೆ ಬುದ್ಧಿ ಕೇಳಬಾರದು. ಮಠಗಳು ಮತ ಬ್ಯಾಂಕ್‌ ಆಗುತ್ತಿವೆ ಎಂಬ ಸಂದೇಹವು ಇತ್ತೀಚೆಗೆ ವ್ಯಾಪಕವಾಗಿದೆ. ಮಠಗಳು ಶ್ರದ್ಧಾಕೇಂದ್ರಗಳು, ಸಾಂತ್ವನ ಕೇಂದ್ರಗಳು. ಅವು ಶ್ರದ್ಧಾಕೇಂದ್ರ ಮತ್ತು ಸಾಂತ್ವನ ಕೇಂದ್ರಗಳಾದರೆ ಯಾವ ತೊಂದರೆ ಇಲ್ಲ. ಅವು ಶಕ್ತಿ ಕೇಂದ್ರಗಳಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣ ಆಗುತ್ತಿದೆ. ಮಠಾಧೀಶನ ಮೇಲೆ ಆ ಜನಾಂಗದ ಭಕ್ತಿ-ಶ್ರದ್ಧೆ ಇದ್ದೇ ಇರುತ್ತದೆ. ಜನರು ಜಮಾಯಿಸುತ್ತಲೆ ಗದ್ದುಗೆ ಮೇಲೆ ಕುಳಿತವರ ಪಿತ್ತ ನೆತ್ತಿಗೇರಿ ಸಮತೋಲನ ಕಳೆದುಹೋಗುತ್ತದೆ. ಜನಬಲದೊಟ್ಟಿಗೆ ಧನಬಲ ಸೇರಿಬಿಟ್ಟರೆ, ಅಂಥವರನ್ನು ಮಾತನಾಡಿಸುವುದು ಎಲ್ಲಿಲ್ಲದ ಕಷ್ಟ. ತಮ್ಮ ಜನಾಂಗದ ಬಗೆಗೆ ಒಲವು ಇರಲಿ; ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಮಾಡಲಿ. ಆದರೆ ಅದು ದರ್ಪ ಆಗಬಾರದು ತಮ್ಮ ಸಮುದಾಯದ ಬೇಡಿಕೆಗಳನ್ನು ಅಧಿಕಾರಸ್ಥರಿಗೆ ಸಾತ್ವಿಕವಾಗಿ ಹೇಳಿಕೊಳ್ಳಬಹುದು. ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ. ದರ್ಪ ತೋರಿಸಿದವರಿಗಿಂತಲೂ ಅವರನ್ನು ಪ್ರಚೋದಿಸಿದವರು ಹೆಚ್ಚು ಹೊಣೆಗಾರರಾಗುತ್ತಾರೆ. ಇಂಥ ಶಕ್ತಿಗಳ ಬಗೆಗೆ ಧಾರ್ಮಿಕರು ಸದಾ ಜಾಗರೂಕರಾಗಿ ಇರಬೇಕಾಗುತ್ತದೆ. ಮಠಾಧೀಶರು ಮಾತನಾಡಿ ನಿಷ್ಠುರರಾಗಿಬಿಡುತ್ತಾರೆ. ಅಂಥವರ ಅಮಾಯಕ ಸ್ಥಿತಿಗೆ ಮರುಕ ಪಡಬೇಕಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗೆ ಮಠಾಧೀಶರು ಒಳಗಾದರೆ ಏನೆಲ್ಲ ಅನಾಹುತಕ್ಕೆ ಆಮಂತ್ರಣ ನೀಡಿದಂತಾಗುತ್ತದೆ. ಮಠಗಳು ಮತಬ್ಯಾಂಕ್‌ ಆಗುವುದರಿಂದ ಆಗುವ ದುಷ್ಪರಿಣಾಮಗಳನ್ನು ತಪ್ಪಿಸುವ ದಿಸೆಯಲ್ಲಿ ರಾಜಕಾರಣ ಮತ್ತು ಧರ್ಮದ ನಡುವೆ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.. – ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಪರಿಣಾಮ ಬೀರದ ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳು
"2020-04-07T20:45:49"
https://www.udayavani.com/articles/chinthane/religion-and-politics
ಹರಭಜನ್ ಪಡೆಗೆ ಅಲ್ಪ ಮೊತ್ತದ ಗುರಿ | Prajavani ಹರಭಜನ್ ಪಡೆಗೆ ಅಲ್ಪ ಮೊತ್ತದ ಗುರಿ ಬೆಂಗಳೂರು: ನಿರೀಕ್ಷೆ ಹುಸಿಯಾಗಲಿಲ್ಲ. ಮುಂಬೈ ಇಂಡಿಯನ್ಸ್ ತಂಡದ ಕರಾರುವಾಕ್ಕಾದ ಬೌಲಿಂಗ್ ದಾಳಿ ಎದುರು ಟ್ರಿನಿಡಾಡ್ ಅಂಡ್ ಟೊಬಾಗೊ ತಂಡದ `ಆಟ~ ನಡೆಯಲಿಲ್ಲ. ಇದಕ್ಕೆ ಕಾರಣ ಹರಭಜನ್ ಸಿಂಗ್ ಹಾಗೂ ವೇಗಿ ಲಸಿತ್ ಮಾಲಿಂಗ. ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಉತ್ತಮ ಆರಂಭ ಪಡೆದ ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ ಆರಂಭದಲ್ಲಿ ಉತ್ತಮ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಮೊದಲ ಆರು ಓವರುಗಳಾಗುವಷ್ಟರಲ್ಲಿ ಡರೆನ್ ಗಂಗಾ ಪಡೆ 57 ರನ್ ಗಳಿಸಿತ್ತು. ಆದರೆ ಈ ತಂಡದ ರನ್‌ಗಳ ಓಟಕ್ಕೆ ಕಡಿವಾಣ ಹಾಕಿದ್ದು ನಾಯಕ ಭಜ್ಜಿ. ಈ ಪರಿಣಾಮವಾಗಿ ಟ್ರಿನಿಡಾಡ್ ತಂಡ 16.2 ಓವರ್‌ಗಳಲ್ಲಿ ಗಳಿಸಿದ್ದು ಕೇವಲ 98 ರನ್. ಈ ತಂಡ ಚಾಂಪಿಯನ್ಸ್ ಲೀಗ್‌ನಲ್ಲಿ 100 ರನ್ ಒಳಗೆ ಆಲ್ ಔಟ್ ನಾಲ್ಕನೇ ತಂಡ ಎನಿಸಿಕೊಂಡಿತು. ಕೊನೆಯ 34 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿತು. ಈ ಮೊತ್ತ ಬೆನ್ನು ಹತ್ತಿರುವ ಮುಂಬೈ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ 6 ಓವರ್‌ಗಳಲ್ಲಿ 25 ರನ್ ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರವಿ ರಾಂಪಾಲ್ ಮೂರು ವಿಕೆಟ್ ಪಡೆದು ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸುವ ಯತ್ನ ಮಾಡಿದರು. ಇದು ಈ ಸಲದ ಚಾಂಪಿಯನ್ ಲೀಗ್‌ನಲ್ಲಿ ದಾಖಲಾದ ತಂಡದ ಒಟ್ಟು ಕನಿಷ್ಠ ಮೊತ್ತವೆನಿಸಿತು. ಕಳೆದ ವರ್ಷದ ಟೂರ್ನಿಯಲ್ಲಿ ಸೆಂಟ್ರೆಲ್ ಡಿಸ್ಟಿಕ್ಟ್ ತಂಡ ವೈಯಾಂಬ ಎದುರು ಕೇವಲ 70 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಇದಾದ ನಂತರ ಕೇಪ್ ಕೋಬ್ರಾಸ್ (84, ದೆಹಲಿ ವಿರುದ್ಧದ ಪಂದ್ಯ) ಗಳಿಸಿತ್ತು. ದಿನೇಶ್ ರಾಮ್ದಿನ್, ಕೂಪರ್, ರಾಂಪಾಲ್ ಹಾಗೂ ಬದ್ರೆ ಅವರಿಗಂತೂ ರನ್ ಖಾತೆ ತೆರೆಯಲು ಮುಂಬೈ ಬೌಲರ್‌ಗಳು ಅವಕಾಶ ನೀಡಲಿಲ್ಲ. ಜೇಸನ್ ಮೊಹಮ್ಮದ್ (23, 27ಎಸೆತ, 1ಬೌಂಡರಿ ಹಾಗೂ 1 ಸಿಕ್ಸರ್) ಗಳಿಸಿ ಟ್ರಿನಿಡಾಡ್ ಎದುರು ಗರಿಷ್ಠ ಮೊತ್ತ ಗಳಿಸಿದ ಆಟಗಾರ ಎನಿಸಿಕೊಂಡರು. ಭಜ್ಜಿ `ಕೈ~ ಚಳಕ: ಕಳೆದ ಪಂದ್ಯದ `ಹೀರೊ~ ಲಸಿತ್ ಮಾಲಿಂಗ ಮೊದಲ ಓವರ್‌ನಲ್ಲಿ 10 ರನ್ ನೀಡಿ ಅಭಿಮಾನಿಗಳ ಬೇಸರಕ್ಕೆ ಕಾರಣರಾದರು. ನಂತರ ಭಜ್ಜಿ ಅಮೂಲ್ಯ ಮೂರು ವಿಕೆಟ್ ಗಳಿಸಿದರು. ಭಜ್ಜಿಗೆ ಸಾಥ್ ನೀಡಿದ ಮಾಲಿಂಗ `ಯಾರ್ಕರ್~ ಮೂಲಕ ಇನ್ನುಳಿದ ಮೂರು ಓವರ್‌ಗಳಲ್ಲಿ ಕೇವಲ 12 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಗಾಯದ ಸಮಸ್ಯೆ: ಮುಂಬೈ ಇಂಡಿಯನ್ಸ್ ತಂಡವನ್ನು ಬಲವಾಗಿ ಕಾಡುತ್ತಿರುವ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಈ ಸಮಸ್ಯೆಯಿಂದ ತೆಂಡೂಲ್ಕರ್ ಈಗಾಗಲೇ ಚಾಂಪಿಯನ್ಸ್ ಲೀಗ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ರೋಹಿತ್ ಶರ್ಮ ಹಾಗೂ ಮುನಾಫ್ ಪಟೇಲ್ ಅವರ ಗೈರು ಹಾಜರಿ ಕಾಡುತ್ತಿದೆ. ಈ ಮಧ್ಯೆ ಮತ್ತೊಬ್ಬ ಆಟಗಾರ ಡೇವ್ ಜಾಕೊಬ್ಸ್ ಟೂರ್ನಿಯಿಂದ `ಔಟ್~ ಆಗಿದ್ದಾರೆ. ಭಾನುವಾರ ಅಭ್ಯಾಸ ನಡೆಸುವ ವೇಳೆ ಗೊಂಡಿದ್ದಾರೆ. ಈ ಆಟಗಾರನ ಬದಲು ಜೇಮ್ಸ ಫ್ರಾಂಕ್ಲಿನ್ ಆಡಿದರು. ಟ್ರಿನಿಡಾಡ್ ಅಂಡ್ ಟೊಬಾಗೊ: 16.2 ಓವರ್‌ಗಳಲ್ಲಿ 98 ಲೆಂಡ್ಲ್ ಸಿಮಾನ್ಸ್ ರನ್ ಔಟ್ (ಫ್ರಾಂಕ್ಲಿನ್/ರಾಯುಡು) 21 ಅಡ್ರಿಯಾನ್ ಭರತ್ ಬಿ ಲಸಿತ್ ಮಾಲಿಂಗ 11 ಡರೆನ್ ಬ್ರಾವೊ ಬಿ ಹರಭಜನ್ ಸಿಂಗ್ 18 ಡರೆನ್ ಗಂಗಾ ಸಿ ಸತೀಶ್ ಬಿ ಫ್ರಾಂಕ್ಲಿನ್ 05 ದಿನೇಶ್ ರಾಮ್ದಿನ್ ಸಿ ಮತ್ತು ಬಿ ಹರಭಜನ್ ಸಿಂಗ್ 00 ಜೇಸನ್ ಮೊಹಮ್ಮದ್ ಚಿ ರಾಯುಡು ಬಿ ಪೊಲಾರ್ಡ್ 23 ಶರ್ವಿನಾ ಗಂಗಾ ಎಲ್‌ಬಿಡಬ್ಲ್ಯು ಬಿ ಹರಭಜನ್ ಸಿಂಗ್ 02 ಕೆವೊನ್ ಕೂಪರ್ ಎಲ್‌ಬಿಡಬ್ಲ್ಯು ಬಿ ಮಾಲಿಂಗ 00 ರವಿ ರಾಂಪಾಲ್ ರನ್ ಔಟ್ (ಬ್ಲೀಜರ್ಡ್/ರಾಯುಡು) 00 ಸುನಿಲ್ ನರೇನ್ ಸಿ ಯಜುವೇಂದ್ರ ಸಿಂಗ್ ಬಿ ನಾಚಿಮ್ 11 ಸ್ಯಾಮುಯೆಲ್ ಬದ್ರಿ ಔಟಾಗದೆ 00 ಇತರೆ: (ವೈಡ್-7) 07 ವಿಕೆಟ್ ಪತನ: 1-21 (ಭರತ್; 2.6), 2-41 (ಸಿಮಾನ್ಸ್; 4.5), 3-57 (ಡರೆನ್ ಗಂಗಾ; 6.6), 4-57 (ರಾಮ್ದಿನ್; 7.1), 5-64 (ಬ್ರಾವೊ; 9.2), 6-78 (ಶರ್ವಿನಾ ಗಂಗಾ 11.3), 7-83 (ಕೂಪರ್; 12.4), 8-83 (ರಾಂಪಾಲ್; 12.5), 9-95 (ಜೇಸನ್; 15.4), 10-98 (ನರೇನ್; 16.2). ಬೌಲಿಂಗ್ ವಿವರ: ಲಸಿತ್ ಮಾಲಿಂಗ 4-0-22-2, ಅಬು ನಾಚಿ ಅಹ್ಮದ್ 2.2-0-17-1, ಯಜುವೇಂದ್ರ ಸಿಂಗ್ ಚಹಾಲ್ 1-0-13-0, ಹರಭಜನ್ ಸಿಂಗ್ 4-0-22-3, ಜೇಮ್ಸ ಫ್ರಾಂಕ್ಲಿನ್ 3-0-15-1, ಕೀರನ್ ಪೊಲಾರ್ಡ್ 2-0-9-1.
"2018-11-13T20:25:42"
https://www.prajavani.net/article/%E0%B2%B9%E0%B2%B0%E0%B2%AD%E0%B2%9C%E0%B2%A8%E0%B3%8D-%E0%B2%AA%E0%B2%A1%E0%B3%86%E0%B2%97%E0%B3%86-%E0%B2%85%E0%B2%B2%E0%B3%8D%E0%B2%AA-%E0%B2%AE%E0%B3%8A%E0%B2%A4%E0%B3%8D%E0%B2%A4%E0%B2%A6-%E0%B2%97%E0%B3%81%E0%B2%B0%E0%B2%BF
ಜಿಯೊ: ತಿಂಗಳ ದರ ₹ 50 ಕಡಿತ | Prajavani ಜಿಯೊ: ತಿಂಗಳ ದರ ₹ 50 ಕಡಿತ ಪಿಟಿಐ Updated: 06 ಜನವರಿ 2018, 01:00 IST ನವದೆಹಲಿ: ಮೊಬೈಲ್‌ ಸೇವಾ ಸಂಸ್ಥೆ ರಿಲಯನ್ಸ್‌ ಜಿಯೊ, ತನ್ನ ಎಲ್ಲ ತಿಂಗಳ ಯೋಜನೆಗಳ ದರಗಳಲ್ಲಿ ₹ 50 ಕಡಿತ ಮಾಡಿದೆ. ₹ 199, ₹ 399, ₹ 459 ಮತ್ತು ₹ 499 ಯೋಜನೆಗಳ ದರಗಳು ₹ 50 ರಷ್ಟು ಕಡಿಮೆಯಾಗಲಿವೆ. ಹೊಸ ಯೋಜನೆಯಡಿ ಗ್ರಾಹಕರು ಪ್ರತಿ ದಿನ 1 ಜಿಬಿ ಡೇಟಾ ಪಡೆಯಲಿದ್ದಾರೆ. ಆಯ್ದ ಯೋಜನೆಗಳಡಿ ಡೇಟಾ ಮಿತಿಯನ್ನು 1.5 ಜಿಬಿಗೆ ಹೆಚ್ಚಿಸಲಾಗಿದೆ. ಒಂದು ದಿನದ 1 ಜಿಬಿ ಡೇಟಾ ದರವನ್ನು ₹ 4ಕ್ಕೆ ಇಳಿಸಿದೆ. ಹೊಸ ವರ್ಷದ ಕೊಡುಗೆಯಡಿ ₹ 399 ಯೋಜನೆ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ ಎರಡು ವಾರಗಳ ಹೆಚ್ಚುವರಿ ಕಾಲಾವಧಿ ವಿಸ್ತರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. '); $('#div-gpt-ad-519336-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-519336'); }); googletag.cmd.push(function() { googletag.display('gpt-text-700x20-ad2-519336'); }); },300); var x1 = $('#node-519336 .field-name-body .field-items div.field-item > p'); if(x1 != null && x1.length != 0) { $('#node-519336 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-519336').addClass('inartprocessed'); } else $('#in-article-519336').hide(); } else { _taboola.push({article:'auto', url:'https://www.prajavani.net/news/article/2018/01/05/545288.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-519336', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-519336'); }); googletag.cmd.push(function() { googletag.display('gpt-text-300x20-ad2-519336'); }); // Remove current Outbrain //$('#dk-art-outbrain-519336').remove(); //ad before trending $('#mob_rhs1_519336').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-519336 .field-name-body .field-items div.field-item > p'); if(x1 != null && x1.length != 0) { $('#node-519336 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-519336 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-519336'); }); } else { $('#in-article-mob-519336').hide(); $('#in-article-mob-3rd-519336').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-519336','#in-article-737802','#in-article-724323','#in-article-720199','#in-article-716724']; var twids = ['#twblock_519336','#twblock_737802','#twblock_724323','#twblock_720199','#twblock_716724']; var twdataids = ['#twdatablk_519336','#twdatablk_737802','#twdatablk_724323','#twdatablk_720199','#twdatablk_716724']; var obURLs = ['https://www.prajavani.net/news/article/2018/01/05/545288.html','https://www.prajavani.net/business/commerce-nifty-737802.html','https://www.prajavani.net/business/crediwatchs-analysis-724323.html','https://www.prajavani.net/business/health-and-motor-insurance-policies-renewal-extended-720199.html','https://www.prajavani.net/business/govt-promulgates-ordinance-to-extend-deadline-for-filing-income-tax-returns-716724.html']; var vuukleIds = ['#vuukle-comments-519336','#vuukle-comments-737802','#vuukle-comments-724323','#vuukle-comments-720199','#vuukle-comments-716724']; // var nids = [519336,737802,724323,720199,716724]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-07-11T08:57:57"
https://www.prajavani.net/news/article/2018/01/05/545288.html
ಬೋಗಸ್ ಕಾರ್ಡ್ ಮಾಫಿಯಾಗೆ ಬ್ರೇಕ್ ಕಷ್ಟದ ಕೆಲಸ: ಗುಂಡೂರಾವ್- Kannada Prabha ಮುಖಪುಟ ಜಿಲ್ಲಾ ಸುದ್ದಿ ಬೋಗಸ್ ಕಾರ್ಡ್ ಮಾಫಿಯಾಗೆ ಬ್ರೇಕ್ ಕಷ್ಟದ ಕೆಲಸ: ಗುಂಡೂರಾವ್ ರಾಜ್ಯದಲ್ಲಿ ನಕಲಿ ಪಡಿತರ ಚೀಟಿಗಳು ಚಲಾವಣೆಯಲ್ಲಿರುವುದನ್ನು ಒಪ್ಪಿಕೊಂಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ... Published: 22nd September 2015 02:00 AM | Last Updated: 22nd September 2015 11:48 AM | A+A A- ಬೆಂಗಳೂರು: ರಾಜ್ಯದಲ್ಲಿ ನಕಲಿ ಪಡಿತರ ಚೀಟಿಗಳು ಚಲಾವಣೆಯಲ್ಲಿರುವುದನ್ನು ಒಪ್ಪಿಕೊಂಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅವರು ಈ ಮಾಫಿಯಾವನ್ನು ನಿಯಂತ್ರಣಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಬೋಗಸ್ ರೇಷನ್ ಕಾರ್ಡ್ ಮಾಫಿಯಾ ಹಾಗೂ ಅನ್ನ-ಭಾಗ್ಯಕ್ಕೆ ಕನ್ನ ಹಾಕುವ ಗೋದಾಮು ಮಾಫಿಯಾದ ಕರಾಳ ಮುಖಗಳನ್ನು ಖಾಸಗಿ ಚಾನಲ್ ತಂಡ ರಹಸ್ಯ ಕಾರ್ಯಾಚರಣೆ ಮಾಡಿ ಬಯಲು ಮಾಡಿತ್ತು. ಈ ಮಾಫಿಯಾದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳೇ ನೇರವಾಗಿ ಭಾಗಿಯಾಗಿರು-ವುದನ್ನು ದಾಖಲೆ ಸಮೇತ ಸಾಬೀತುಪಡಿಸಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ರಾಜ್ಯಾದ್ಯಂತ ತಲ್ಲಣವುಂಟು ಮಾಡಿತ್ತು. ಅಲ್ಲದೆ ಪ್ರತಿಪಕ್ಷ ನಾಯಕರು ಈ ಹಗರಣದ ತನಿಖೆ ಒತ್ತಾಯ ಮಾಡಿದ್ದರು. ಹಗರಣದ ಬಗ್ಗೆ ಯಾವ ಪ್ರತಿಕ್ರಿಯೇ ನೀಡದೆ ಮೌನಕ್ಕೆ ಶರಣಾಗಿದ್ದ ಸಚಿವರು ಸೋಮವಾರ ಮೌನಮುರಿದಿದ್ದಾರೆ. ತಮ್ಮ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಇದೆ. ಇದರಿಂದ ಬೋಗಸ್ ಕಾರ್ಡ್ ಮಾಫಿಯಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬೋಗಸ್ ಕಾರ್ಡ್‍ಗಳಿರುವುದರಿಂದಲೇ ಗೋದಾಮುಗಳಲ್ಲಿ ಪಡಿತರ ಪದಾರ್ಥ ಕಾಳ ಸಂತೆ ಸೇರುತ್ತಿದೆ ಅನ್ನುವುದು ಸತ್ಯ. ತಾವು ಈಗಾಗಲೇ 11 ಸಾವಿರ ಬೋಗಸ್ ಕಾರ್ಡಗಳನ್ನು ರದ್ದು ಮಾಡಿದ್ದು, ಪ್ರತಿ ನಿತ್ಯ ಮೂರು ಸಾವಿರಕ್ಕೂ ಹೆಚ್ಚು ಕಾರ್ಡ್‍ಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದರು. ಅಧಿಕಾರಗಳ ಅಮಾನತು: ಇನ್ನು ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ದಾವಣಗೆರೆ ಹಾಗೂ ಹರಿಹರ ಆಹಾರ ನಾಗರಿಕ ಸರಬರಾಜು ನಿಗಮದ ಗೋದಾ ಮಿನ ಭ್ರಷ್ಟ ಅಧಿಕಾರಿಗಳಾದ ರಮೇಶ್ ಹಾಗೂ ಮಹೇಶ ಎಂಬ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು. Stay up to date on all the latest ಜಿಲ್ಲಾ ಸುದ್ದಿ news with The Kannadaprabha App. Download now Dinesh Gunduraoduplicate Ration CardMafiyaದಿನೇಶ್ ಗುಂಡೂರಾವ್ಬೋಗಸ್ ಪಡಿತರ ಚೀಟಿಮಾಫಿಯಾ
"2019-12-11T22:38:46"
https://www.kannadaprabha.com/district-news/2015/sep/22/curbing-duplicate-ration-card-mafia-is-a-difficult-task-says-dinesh-gundurao-258579.html
ಐಷಾರಾಮಿ ಕಾರಿನಲ್ಲಿ ಅಕ್ರಮ ದನ ಸಾಗಾಟ ಪತ್ತೆ ಬೆಳ್ತಂಗಡಿ ಜೂನ್ 7: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಅಪಘಾತಕ್ಕೀಡಾದ ಐಷಾರಾಮಿ ಕಾರಿನಲ್ಲಿ ಅಕ್ರಮ ಹಸು ಸಾಗಾಟ ಪತ್ತೆಯಾಗಿದೆ. ಅಕ್ರಮವಾಗಿ... ಬೆಳ್ತಂಗಡಿಯಲ್ಲಿ ಐಟಿಐ ಉಪನ್ಯಾಸಕ ಬರ್ಬರ ಹತ್ಯೆ ಬೆಳ್ತಂಗಡಿ ಮೇ 28: ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕರೊಬ್ಬರನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಕಡಿದು ಹತ್ಯೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಮಾಲಾಡಿ ಸರಕಾರಿ ಐಟಿಐ... ಬೆಳಲು ಅನಂತಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭ ಕಾಣಿಸಿಕೊಂಡ ನಾಗರಹಾವು ಬೆಳ್ತಂಗಡಿ ಮೇ 16: ಸುಮಾರು 600 ವರ್ಷಗಳ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಲು ಅನಂತ ಪದ್ಮನಾಭ ದೇವಸ್ಥಾನದಲ್ಲೊಂದು ಪವಾಡ ನಡೆದಿದೆ. ದೇವರ... ಮೈತ್ರಿಗಾಗಿ ಸೀಟು ತ್ಯಾಗ ಮಾಡಿದ್ದೇನೆ, ಈ ವಿಚಾರದಲ್ಲಿ ನಯಾ ಪೈಸೆಯನ್ನು ಯಾರಿಂದಲೂ ಪಡೆದಿಲ್ಲ- ತುಮಕೂರು ಸಂಸದ ಮುದ್ದೆಹನುಮೇಗೌಡ ಸ್ಪಷ್ಟನೆ ಬೆಳ್ತಂಗಡಿ,ಮೇ 02:ನಾಮಪತ್ರ ಹಿಂಪಡೆಯುವುದಕ್ಕಾಗಲೀ, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಯಾ ಪೈಸೆ ಪಡೆದಿಲ್ಲ ಎಂದು ತುಮಕೂರು ಸಂಸದ... ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕೈ ಮುಖಂಡನ ಅಕ್ರಮ ಮರಳುಗಾರಿಕೆ ದಂಧೆ ಹಿಂದೆ ಉಸ್ತುವಾರಿ ಸಚಿವರ ಕೈವಾಡ ? ಬೆಳ್ತಂಗಡಿ,ಎಪ್ರಿಲ್ 29: ಕಾಂಗ್ರೆಸ್ ನಾಯಕ ಯುಟಿ ಖಾದರ್ ರ ಪ್ರಭಾವ ಬಳಸಿ ಸ್ಥಳೀಯ ಕೈ ಮುಖಂಡನೊಬ್ಬ ಅಕ್ರಮ ಮರಳುಗಾರಿಕೆ... ಕೈಗಳೇ ಇಲ್ಲದಿದ್ದರೂ ಮತ ಚಲಾಯಿಸಿ ಇತರರಿಗೆ ಮಾದರಿಯಾದ ದಿವ್ಯಾಂಗ ಸಬಿತಾ ಮೋನಿಶ್ ಮಂಗಳೂರು ಎಪ್ರಿಲ್ 18: ಮತದಾನದ ಬಗ್ಗೆ ಜಾಗೃತಿ ಮೂಡಿಸಿದರೂ ಕುಂಟು ನೆಪ ಹೇಳಿ ಮತದಾನದಿಂದ ತಪ್ಪಿಸಿಕೊಳ್ಳುವವರು ತುಂಬಾ ಜನ ಇದ್ದಾರೆ. ಮತದಾನಕ್ಕಾಗಿ ರಜೆ... ಬೆಳ್ತಂಗಡಿ ಬಿಜೆಪಿ ಯುವ ಮುಖಂಡ ಕಾಂಗ್ರೇಸ್ ಸೇರ್ಪಡೆ ಬೆಳ್ತಂಗಡಿ ಮಾರ್ಚ್ 30: ಬಿಜೆಪಿ ಯುವ ಮುಖಂಡ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ರಂಜನ್ ಜಿ. ಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೇಸ್ ಸಮಾವೇಶದಲ್ಲಿ... ಧರ್ಮಸ್ಥಳ ಬಾಹುಬಲಿಗೆ ಮಸ್ತಕಾಭಿಷೇಕ ಹೆಗ್ಗಡೆ ಕುಟುಂಬಸ್ಥರಿಂದ 1008 ಕಲಶಗಳ ಮಸ್ತಕಾಭಿಷೇಕ ಬೆಳ್ತಂಗಡಿ ಫೆಬ್ರವರಿ 16: ಧರ್ಮಸ್ಥಳದ ರತ್ನಗಿರಿಯಲ್ಲಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ಇಂದು ಬೆಳಿಗ್ಗೆ 8.45ರ ಮೀನ ಲಗ್ನದಲ್ಲಿ ಆರಂಭವಾಯಿತು. ಆರಂಭದಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ... ಧರ್ಮಸ್ಥಳ ಮಹಾಮಸ್ತಕಾಭಿಷೇಕ ಮಹಾವೈಭವದ ಪೆಂಡಾಲ್ ಕುಸಿತ – ಹಲವರಿಗೆ ಗಾಯ ಧರ್ಮಸ್ಥಳ ಫೆಬ್ರವರಿ 14: ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಯುತ್ತಿರುವ ಧರ್ಮಸ್ಥಳದಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ. ಭಗವಾನ್‌ ಬಾಹುಬಲಿ ಮಹಾವೈಭವದ ರೂಪಕಕ್ಕಾಗಿ ನಿರ್ಮಿಸಲಾಗಿದ್ದ ಭಾರೀ ಗಾತ್ರದ ಪೆಂಡಾಲ್...
"2020-07-14T04:30:34"
https://themangaloremirror.in/category/belthangadi/page/5/
ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ನೀಡಿದ ದುಬಾರಿ ಗಿಫ್ಟ್‌ಗಳೇನು ಗೊತ್ತಾ? | Raj Kundras expensive gifts for Shilpa shetty First Published 9, Jun 2020, 6:17 PM ತಮ್ಮ 45ನೇ ಹುಟ್ಟುಹಬ್ಬವನ್ನು (ಜೂನ್ 8) ಆಚರಿಸಿಕೊಂಡ ಬಾಲಿವುಡ್‌ನ ಫಿಟ್‌ ನಟಿ ಶಿಲ್ವಾ ಶೆಟ್ಟಿಗೆ ಈ ವರ್ಷದ ಬರ್ಥ್‌ಡೇ ಸ್ಪೆಷಲ್‌ ಕಾರಣ ಮಗಳು ಸಮಿಷಾ. ಶಿಲ್ಪಾ ಶೆಟ್ಟಿ ತನ್ನ 45ನೇ ಹುಟ್ಟುಹಬ್ಬವನ್ನು ಹಿಂದಿನ ದಿನವೇ ಆಚರಿಸಿದರು. ಮಗಳು ಸಮಿಷಾ ಜೊತೆ ಆಚರಿಸಿರುವ ನಟಿಯ ಫಸ್ಟ್‌ ಹುಟ್ಟಿದ ಹಬ್ಬವಾಗಿದೆ. ಈ ಸೆಲೆಬ್ರೆಷನ್‌ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಶಿಲ್ಪಾ ಶೆಟ್ಟಿ ತಮ್ಮ ಜನ್ಮದಿನಾಚರಣೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಪತಿ ರಾಜ್ ಕುಂದ್ರಾ ಮತ್ತು ಇಬ್ಬರು ಮಕ್ಕಳು ಇದ್ದಾರೆ ಜೊತೆಗೆ. ಲಾಕ್‌ಡೌನ್‌ನಲ್ಲಿ, ಮನೆಯಲ್ಲಿ ಕುಟುಂಬದೊಂದಿಗೆ ಆಚರಿಸಿದ ಬರ್ತ್‌ಡೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಗ ವಿಯಾನ್ ಮಮ್ಮಿಯ ಹುಟ್ಟುಹಬ್ಬದ ಕೇಕ್ ಕಟ್‌ ಮಾಡುತ್ತಿದ್ದಾನೆ ಹಾಗೂ ಶಿಲ್ಪಾ ಹಂಚಿಕೊಂಡ ಎರಡನೇ ಫೋಟೋದಲ್ಲಿ, ತಂಗಿ ಶಮಿತಾ ಶೆಟ್ಟಿ ಸೇರಿದಂತೆ ತನ್ನ ಇಡೀ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದಾಳೆ ಶಿಲ್ಪಾ. ಬಾಲಿವುಡ್‌ನ ಆಡೋರಬಲ್‌ ದಂಪತಿಗಳಲ್ಲಿ ಶಿಲ್ಪಾ ಮತ್ತು ರಾಜ್ ಕುಂದ್ರಾ ಒಬ್ಬರು. ಮದುವೆಯಾದಾಗಿನಿಂದಲೂ ತನ್ನ ಲೇಡಿಲವ್‌ಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಲೇ ಇದ್ದಾರೆ ಉದ್ಯಮಿ ರಾಜ್ ಕುಂದ್ರಾ. ರಾಜ್‌ ಹೆಂಡತಿಗೆ ನೀಡಿದ ಕೆಲವು ದುಬಾರಿ ಉಡುಗೊರೆಗಳ ಬಗ್ಗೆ ಕೇಳಿದರೆ ದಂಗಾಗುವುದು ಗ್ಯಾರಂಟಿ. 20 ಕ್ಯಾರೆಟ್ ಡೈಮಂಡ್ ರಿಂಗ್ ರಾಜ್ ನೀಡಿದ ಮೊದಲ ದುಬಾರಿ ಉಡುಗೊರೆ. ಶಿಲ್ಪಾಗೆ ಎಂಗೇಜ್ಮೆಂಟ್‌ಗೆ 3 ಕೋಟಿ ರೂ.ಗಳ ಮೌಲ್ಯದ 20 ಕ್ಯಾರೆಟ್ ಹೃದಯ ಆಕಾರದ ನೈಸರ್ಗಿಕ ಬಿಳಿ ವಜ್ರದ ಉಂಗುರ ತೋಡಿಸಿದ್ದ ರಾಜ್‌. ರಾಜ್‌ ತನ್ನ ಮಡದಿಗೆ ಆ್ಯನಿವರ್ಸರಿಗೆ ನೀಡಿದ ಬುರ್ಜ್ ಖಲೀಫಾದಲ್ಲಿನ ಅಪಾರ್ಟ್ಮೆಂಟ್ ಬಾಲಿವುಡ್ ಇತಿಹಾಸದಲ್ಲಿನ ಅತ್ಯಂತ ದುಬಾರಿ ಉಡುಗೊರೆ. ವಿಶ್ವದ ಅತಿ ಎತ್ತರದ ಗೋಪುರ ದುಬೈನ ಬುರ್ಜ್ ಖಲೀಫಾದ, 19ನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಚನ್ನು 2016ರಲ್ಲಿ ಗಿಫ್ಟ್‌ ಆಗಿ ಪಡೆದಿದ್ದರು ಶಿಲ್ಪಾ ಶೆಟ್ಟಿ. ಆದರೆ ತಮ್ಮ ಕುಟುಂಬಕ್ಕೆ ತುಂಬಾ ಚಿಕ್ಕದಾಗಿದ್ದರಿಂದ ಆಸ್ತಿಯನ್ನು ಮಾರಿದರು. ಯುಕೆಯ 7 ಬೆಡ್ ರೂಮ್ ವಿಲ್ಲಾ - ಯುನೈಟೆಡ್ ಕಿಂಗ್ಡಮ್‌ನ ವೇಬ್ರಿಡ್ಜ್‌ನಲ್ಲಿರುವ 'ರಾಜ್ ಮಹಲ್' ಎಂಬ ಭವ್ಯವಾದ 7 ಬೆಡ್ ರೂಮ್ ಬಂಗ್ಲೆ ರಾಜ್ ತನ್ನ ಹೆಂಡತಿಗಾಗಿ ಖರೀದಿಸಿದ ಮತ್ತೊಂದು ದುಬಾರಿ ಆಸ್ತಿ. ಮುಂಬೈನಲ್ಲಿ ಸೀ ಫೇಸಿಂಗ್‌ ವಿಲ್ಲಾ ಹೊಂದುವುದು ಶಿಲ್ಪಾಳ ಕನಸಾಗಿತ್ತು. ಸಮುದ್ರದ ಕಡೆ ಮುಖ ಮಾಡಿರುವ ವಿಲ್ಲಾ ಕಿನಾರಾವನ್ನು ಖರೀದಿಸುವ ಮೂಲಕ ನಟಿಯ ಆಸೆಯನ್ನು ಪೂರೈಸಿದ್ದಾರೆ ಹಬ್ಬಿ. ಕುಟುಂಬವು ತಮ್ಮ ಹೆಚ್ಚಿನ ಸಮಯವನ್ನು ಕಳೆಯುವುದು ಈ ಬಂಗ್ಲೆಯಲ್ಲೇ. BMW Z4 ಸೇರಿದಂತೆ ಅನೇಕ ಐಷಾರಾಮಿ ಕಾರುಗಳನ್ನು ಶಿಲ್ಪಾಗೆ ಉಡುಗೊರೆಯಾಗಿ ನೀಡಿದ್ದಾರೆ ಆದರೆ ಆಕೆಯ ನೀಲಿ ಲಂಬೋರ್ಘಿನಿ ಕಾರು ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡಿತ್ತು.
"2020-07-10T08:05:23"
https://kannada.asianetnews.com/gallery/cine-world/raj-kundras-expensive-gifts-for-shilpa-shetty-qbnsvm
ದಾಬೋಲ್ಕರ್‌, ಕಲಬುರ್ಗಿ, ಗೌರಿ ಕೊಂದ ಗುಂಪಿಗೆ ಸನಾತನ ಸಂಸ್ಥೆ ಜತೆಗಿನ ನಂಟು ಖಚಿತ ವಿಚಾರವಾದಿಗಳ ಹತ್ಯೆಗೂ ಸನಾತನ ಸಂಸ್ಥೆಗೂ ನಂಟಿರುವುದನ್ನು ಮಹಾರಾಷ್ಟ್ರ ಪೊಲೀಸರು ಖಚಿತ ಪಡಿಸಿದ್ದಾರೆ. 16 Sep, 2018 at 11:57 AM ನರೇಂದ್ರ ದಾಬೋಲ್ಕರ್‌, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಅವರ ಹತ್ಯೆಯ ಹಿಂದೆ ಒಂದೇ ಗುಂಪು ಕೆಲಸ ಮಾಡಿದ್ದು, ಈ ಗುಂಪಿನ ಸದಸ್ಯರಿಗೂ ಸನಾತನ ಸಂಸ್ಥೆಗೂ ನಂಟಿದೆ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. “ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹತ್ಯೆ ಮಾಡಿರುವುದು ಒಂದೇ ಗುಂಪಿಗೆ ಸೇರಿದವರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಗುಂಪಿನ ಬಹುತೇಕ ಎಲ್ಲಾ ಸದಸ್ಯರೂ ಸನಾತನ ಸಂಸ್ಥೆ ಮತ್ತು ಹಿಂದು ಜನಜಾಗೃತಿ ಸಮಿತಿ ಜತೆಗೆ ನಂಟು ಹೊಂದಿರುವುದು ಖಚಿತವಾಗಿದೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. “ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹಿಂದು ಧರ್ಮದ ವಿರುದ್ಧವಾಗಿದ್ದಾರೆ ಎಂಬ ಕಾರಣಕ್ಕೆ ಇವರನ್ನು ಈ ಗುಂಪಿನ ಸದಸ್ಯರು ಹತ್ಯೆ ಮಾಡಿದ್ದಾರೆ. ಸ್ಫೋಟಕ ಸಾಮಗ್ರಿ ಸಂಗ್ರಹಣೆಯ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿರುವ ಆರೋಪಿಗಳಿಗೂ ಈ ಹತ್ಯೆಗಳಿಗೂ ನಂಟಿರುವುದು ಗೊತ್ತಾಗಿದೆ” ಎಂದು ತನಿಖಾಧಿಕಾರಿ ಹೇಳಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ನಾಲಾಸೊಪಾರ ಪ್ರದೇಶದ ಮನೆಯಲ್ಲಿ ಸ್ಫೋಟಕ ಸಾಮಗ್ರಿ ಸಂಗ್ರಹಣೆಯ ಆರೋಪದ ಮೇಲೆ ‘ಹಿಂದೂ ಗೋವಂಶ ರಕ್ಷಾ ಸಮಿತಿ’ ಸದಸ್ಯ ವೈಭವ್ ರಾವತ್ ಹಾಗೂ ಇತರರನ್ನು ಎಟಿಎಸ್ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು. ಈ ಆರೋಪಿಗಳು ಸನಾತನ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಆದರೆ, ಸನಾತನ ಸಂಸ್ಥೆಯು ಬಂಧಿತರಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿತ್ತು. ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹತ್ಯೆಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈ ಹತ್ಯೆಗಳ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡವಿರುವುದನ್ನು ಖಚಿತ ಪಡಿಸಿದ್ದಾರೆ. ಆದರೆ, ಗೋವಿಂದ ಪಾನ್ಸಾರೆ ಹತ್ಯೆ ಪ್ರಕರಣದಲ್ಲಿ ಈವರೆಗೂ ಸರಿಯಾದ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪಾನ್ಸಾರೆ ಹತ್ಯೆಯಲ್ಲಿ ಹಿಂದುತ್ವ ಸಂಘಟನೆಗಳ ಪಾತ್ರ ಇದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಿರುವ ಪೊಲೀಸರಿಗೆ ಆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪಾನ್ಸಾರೆ ಅವರನ್ನು ಯಾರು ಕೊಂದರು, ಯಾಕೆ ಕೊಂದರು ಎಂಬ ಪ್ರಶ್ನೆ ಮುಂದುವರಿದಿದೆ. ಗೌರಿ ಲಂಕೇಶ್Gauri LankeshNarendra Dabholkarನರೇಂದ್ರ ದಾಬೋಲ್ಕರ್Sanatan Sansthaಸನಾತನ ಸಂಸ್ಥೆMM Kalaburgiಎಂಎಂ ಕಲಬುರ್ಗಿ
"2019-04-24T00:00:08"
https://www.samachara.com/news-in-brief/2018/09/16/dabholkar-kalburgi-gauri-lankesh-murder-linked-to-sanatan-sanstha
ಬಾದಾಮಿ : ಹಣ್ಣು, ಬಿಸ್ಕತ್ತು ಸವಿದ ವಾನರ ಪಡೆ! | Prajavani ಕರ್ಫ್ಯೂ ಮಧ್ಯೆಯೂ ಕೋತಿಗಳಿಗೆ ಎರಡನೇ ದಿನ ಆಹಾರ ವಿತರಣೆ ಎಸ್.ಎಂ.ಹಿರೇಮಠ Updated: 24 ಮಾರ್ಚ್ 2020, 16:16 IST ಬಾದಾಮಿ: ಇಲ್ಲಿನ ಪುರಾತತ್ವ ಸ್ಮಾರಕಗಳ ಪರಿಸರದಲ್ಲಿ ವಾಸಿಸುವ ಕೋತಿಗಳಿಗೆ ಭಾನುವಾರ ಎರಡನೇ ದಿನ ಕೃಷಿ ಇಲಾಖೆಯಿಂದ ಒಂದು ಕ್ವಿಂಟಲ್ ಬಾಳೆಹಣ್ಣು ಮತ್ತು ಮೂರು ಡಬ್ಬಿ ಬಿಸ್ಕತ್ತು ಹಂಚಲಾಯಿತು. ತಹಶೀಲ್ದಾರ್ ಸುಹಾಸ್ ಇಂಗಳೆ , ಕೃಷಿ ಇಲಾಖೆಯ ಅಧಿಕಾರಿಗಳಾದ ಎಂ.ಆರ್. ನಾಗನೂರ, ಎಂ.ಎಸ್. ಚಂದಾವರಿ ಮತ್ತು ಸಿಬ್ಬಂದಿ ಮೇಣಬಸದಿ ಮತ್ತು ಮ್ಯೂಸಿಯಂ ಸಮೀಪದಲ್ಲಿನ ನೂರಾರು ಕೋತಿಗಳಿಗೆ ಆಹಾರ ವಿತರಿಸಿದರು. ಬಾಳೆಹಣ್ಣು ಮತ್ತು ಬಿಸ್ಕತ್ತುಗಳನ್ನು ಸವಿಯುತ್ತ ಕೋತಿಗಳು ಸಂತಸದಿಂದ ಬೆಟ್ಟದ ಕಡೆಗೆ ನೆರಳಿನ ಆಶ್ರಯಕ್ಕೆ ತೆರಳಿದವು. ನೆರಳಿಗೆ ಹೋದ ನಂತರ ಆಹಾರ ಕೊಟ್ಟವರನ್ನು ದೂರದಿಂದ ವೀಕ್ಷಿಸಿದವು. ಸ್ಮಾರಕಗಳ ಸಮೀಪದ ಕೋತಿಗಳಿಗೆ ಪ್ರವಾಸಿಗರು ಆಹಾರ ಕೊಡುತ್ತಿದ್ದರು. ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಸ್ಮಾರಕಗಳ ಪ್ರವೇಶ ನಿರ್ಬಂಧಿಸಲಾಗಿದೆ. ಈಗಾಗಿ ಕೋತಿಗಳು ಆಹಾರಕ್ಕಾಗಿ ಪರ ದಾಡುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು. ಆಹಾರ ಕೊಡುವವರು ಸಂಪರ್ಕಿಸಿ ಸಂಘ ಸಂಸ್ಥೆ , ಬೇಕರಿಗಳ ಮಾಲೀಕರು, ಕಿರಾಣಿ ಮತ್ತು ತರಕಾರಿ ವರ್ತಕರು ಕೋತಿಗಳಿಗೆ ಆಹಾರ ವಿತರಿಸಲು ಸಹಕರಿಸಬೇಕು ಎಂದು ತಹಶೀಲ್ದಾರ್ ಸುಹಾಸ್ ಇಂಗಳೆ ವಿನಂತಿಸಿಕೊಂಡಿದ್ದಾರೆ. ಕೋತಿಗಳಿಗೆ ಆಹಾರ ಕೊಡುವವರು ತಮ್ಮನ್ನು ಸಂಪರ್ಕಿಸಲು ತಹಶೀಲ್ದಾರ್ ಮನವಿ ಮಾಡಿದರು. '); $('#div-gpt-ad-714371-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-714371'); }); googletag.cmd.push(function() { googletag.display('gpt-text-700x20-ad2-714371'); }); },300); var x1 = $('#node-714371 .field-name-body .field-items div.field-item > p'); if(x1 != null && x1.length != 0) { $('#node-714371 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-714371').addClass('inartprocessed'); } else $('#in-article-714371').hide(); } else { // Text ad googletag.cmd.push(function() { googletag.display('gpt-text-300x20-ad-714371'); }); googletag.cmd.push(function() { googletag.display('gpt-text-300x20-ad2-714371'); }); // Remove current Outbrain //$('#dk-art-outbrain-714371').remove(); //ad before trending $('#mob_rhs1_714371').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-714371 .field-name-body .field-items div.field-item > p'); if(x1 != null && x1.length != 0) { $('#node-714371 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-714371 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-714371'); }); } else { $('#in-article-mob-714371').hide(); $('#in-article-mob-3rd-714371').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } //var obDesktop = []; //var obMobile = []; //var obMobile_below = []; var in_art = ['#in-article-714371','#in-article-716421','#in-article-716343','#in-article-715980','#in-article-715979']; var twids = ['#twblock_714371','#twblock_716421','#twblock_716343','#twblock_715980','#twblock_715979']; var twdataids = ['#twdatablk_714371','#twdatablk_716421','#twdatablk_716343','#twdatablk_715980','#twdatablk_715979']; var obURLs = ['https://www.prajavani.net/district/bagalkot/monkeys-eat-biscuit-714371.html','https://www.prajavani.net/district/bagalkot/break-lockdown-order-16-men-arrest-716421.html','https://www.prajavani.net/district/bagalkot/bagalkot-1-695-people-from-outer-states-and-districts-716343.html','https://www.prajavani.net/district/bagalkot/bagalkot-police-humanity-715980.html','https://www.prajavani.net/district/bagalkot/bagalkot-immigrants-715979.html']; var vuukleIds = ['#vuukle-comments-714371','#vuukle-comments-716421','#vuukle-comments-716343','#vuukle-comments-715980','#vuukle-comments-715979']; // var nids = [714371,716421,716343,715980,715979]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ /*if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2020-03-31T12:23:33"
https://www.prajavani.net/district/bagalkot/monkeys-eat-biscuit-714371.html
ಮುಖಪುಟ ಹೊಂದಿಸುವುದು ಹೇಗೆ | Firefox Help ಮುಖಪುಟ ಹೊಂದಿಸುವುದು ಹೇಗೆ Table of Contents1 ನಿಮ್ಮ ಮುಖಪುಟ ಹೊಂದಿಸಿ ಅಥವಾ ಬದಲಿಸಿ2 ನಿಮ್ಮ ಪೂರ್ವನಿಯೋಜಿತ ಮುಖಪುಟ ಮರುಹೊಂದಿಸಿ3 ತೊಂದರೆಗಳು ಎದುರಾಗುತ್ತಿವೆಯೇ? ನಿಮ್ಮ ಮುಖಪುಟ ಹೊಂದಿಸಿ ಅಥವಾ ಬದಲಿಸಿ ಸಲಹೆ: More home page settings are available in the OptionsPreferences ನಿಮ್ಮ ಪೂರ್ವನಿಯೋಜಿತ ಮುಖಪುಟ ಮರುಹೊಂದಿಸಿ ನೀವು ನಿಮ್ಮ ಮುಖಪುಟದ ಅಗತ್ಯಾನುಗುಣಗಳನ್ನು ಅಳಿಸಬೇಕು ಎಂದಿದ್ದಲ್ಲಿ, ನೀವು ಅದನ್ನು ಹೀಗೆ ಮಾಡಬಹುದು: ಆಯ್ಕೆ ಮಾಡಿ General ಪ್ಯಾನೆಲ್. ಸ್ಟಾರ್ಟಪ್ ಬಾಕ್ಸ್‌ನಲ್ಲಿ, Restore to Default ಕ್ಲಿಕ್ ಮಾಡಿ. Click OK to close the Options window.Click Close to close the Preferences window.Close the Preferences window. ತೊಂದರೆಗಳು ಎದುರಾಗುತ್ತಿವೆಯೇ? ನಾವು ಉತ್ತರಗಳನ್ನು ಹೊಂದಿದ್ದೇವೆ: Share this article: http://mzl.la/1KV39v8 These fine people helped write this article: omshivaprakash. You can help too - find out how. Portions of this content are ©1998–2015 by individual mozilla.org contributors. Content available under a Creative Commons license. Contact Us
"2015-10-04T13:02:55"
https://support.mozilla.org/kn/kb/%E0%B2%AE%E0%B3%81%E0%B2%96%E0%B2%AA%E0%B3%81%E0%B2%9F%20%E0%B2%B9%E0%B3%8A%E0%B2%82%E0%B2%A6%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81%20%E0%B2%B9%E0%B3%87%E0%B2%97%E0%B3%86?redirectlocale=en-US&redirectslug=How+to+set+the+home+page
ಕುಟುಂಬ ಸದಸ್ಯರು@kuṭumba sadasyaru - ಕನ್ನಡ / ಪಂಜಾಬಿ ಕನ್ನಡ » ಪಂಜಾಬಿ ಕುಟುಂಬ ಸದಸ್ಯರು 2 [Dō] ತಾತ ਦਾ-- / ਨ--- d---/ n--ā ਦਾਦਾ / ਨਾਨਾ ಅಜ್ಜಿ ਦਾ-- / ਨ--- d---/ n--ī ਦਾਦੀ / ਨਾਨੀ ಅವನು ಮತ್ತು ಅವಳು ਉਹ ਅ-- ਉ- ತಂದೆ ਪਿ-- p--ā ਪਿਤਾ ತಾಯಿ ਮਾ-- / ਮ-- m---/ m-ṁ ਮਾਤਾ / ਮਾਂ ಮಗ ਪੁ--- p----a ਪੁੱਤਰ ಮಗಳು ਧੀ d-ī ਧੀ ಸಹೋದರ ਭਰ- b---ā ਭਰਾ ಸಹೋದರಿ ਭੈ- b----a ਭੈਣ ಚಿಕ್ಕಪ್ಪ /ದೊಡ್ಡಪ್ಪ ਚਾ-- / ਮ--- c---/ m--ā ਚਾਚਾ / ਮਾਮਾ ಚಿಕ್ಕಮ್ಮ /ದೊಡ್ದಮ್ಮ ਚਾ-- / ਮ--- c---/ m--ī ਚਾਚੀ / ਮਾਮੀ ನಾವು ಒಂದೇ ಸಂಸಾರದವರು. ਅਸ-- ਇ-- ਪ----- ਹ--- a--- i-- p------- h--. ਅਸੀਂ ਇੱਕ ਪਰਿਵਾਰ ਹਾਂ। ಈ ಸಂಸಾರ ಚಿಕ್ಕದಲ್ಲ. ਪਰ---- ਛ--- ਨ--- ਹ-- P------- c---- n---- h--. ਪਰਿਵਾਰ ਛੋਟਾ ਨਹੀਂ ਹੈ। ಈ ಕುಟುಂಬ ದೊಡ್ಡದು. ਪਰ---- ਵ--- ਹ-- P------- v--- h--. ਪਰਿਵਾਰ ਵੱਡਾ ਹੈ। MP3 ಕನ್ನಡ + ಪಂಜಾಬಿ (1-10)
"2019-12-06T11:43:29"
https://www.50languages.com/phrasebook/lesson/kn/pa/2/
ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ | Bangalore to chitradurga by car - Kannada Nativeplanet »ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ Updated: Monday, December 22, 2014, 11:44 [IST] News ಬೆಂಗಳೂರಲ್ಲಿ 209 ಪ್ರದೇಶಗಳು ಪ್ರವಾಹ ಭೀತಿಯಲ್ಲಿವೆ: ಬಿಬಿಎಂಪಿ ಬೆಂಗಳೂರು ದಕ್ಷಿಣ ಭಾರತದ ಒಂದು ಮಹಾನಗರವಾಗಿದ್ದು ಈ ಭಾಗದ ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳೊಂದಿಗೆ ಸುಲಲಿತವಾದ ಸಂಪರ್ಕವನ್ನು ಹೊಂದಿದೆ. ರಸ್ತೆಯಿಂದಾಗಲಿ, ರೈಲಿನಲ್ಲಾಗಲಿ ಇಲ್ಲವೆ ವಿಮಾನಗಳಿಂದಾಗಲಿ ಮೂರೂ ಪ್ರಮುಖ ಸಂಚಾರಿ ಮಾಧ್ಯಮಗಳು ಬೆಂಗಳೂರಿನಿಂದ ನಿರಾಯಾಸವಾಗಿ ಲಭಿಸುತ್ತವೆ. ಶುಭ ಶುಕ್ರವಾರ : ಪ್ರವಾಸ ಹಾಗೂ ವಿಮಾನ ಹಾರಾಟ ದರಗಳ ಮೇಲೆ 50% ರ ವರೆಗೆ ಕಡಿತ! ಬೆಂಗಳೂರಿನಿಂದ ಪ್ರವಾಸ ಹೊರಡಲು ಸಾಕಷ್ಟು ಆಯ್ಕೆಗಳು ಲಭ್ಯವಿರುವಾಗ ಅದನ್ನು ಸದುಪಯೋಗ ಪಡಿಸಿಕೊಳ್ಳುವುದೂ ಕೂಡ ಪ್ರವಾಸಿಗರ ಕರ್ತವ್ಯವೆಂದೇ ಹೇಳಬಹುದು. ನಿಮಗೆ ಬೆಂಗಳೂರಿನಿಂದ ಮೈಸೂರು, ಮಂಡ್ಯ, ಹಾಸನ, ನಂದಿ ಬೆಟ್ಟ, ಸಂಗಮ, ತಲಕಾಡು ಮುಂತಾದ ಸ್ಥಳಗಳಿಗೆ ಹೋಗಿ ಹೋಗಿ ಬೇಸರ ಮೂಡಿದ್ದರೆ, ಮತ್ತೊಂದು ವಿಶಿಷ್ಟ ಪ್ರವಾಸ ಮಾಡಬೇಕೆಂದಿದ್ದರೆ ಚಿತ್ರದುರ್ಗಕ್ಕೊಮ್ಮೆ ಭೇಟಿ ನೀಡಿ. ವಿಶೇಷ ಲೇಖನ : ಕ್ಯಾಸಲ್ ರಾಕ್‍ ನಿಂದ ದೂಧ್ ಸಾಗರ್ ಟ್ರೆಕ್ ಸಾಂದರ್ಭಿಕ ಚಿತ್ರ, ತುಮಕೂರು ಬಳಿಯ ಒಂದು ರಸ್ತೆ ಚಿತ್ರಕೃಪೆ: Subramanya Prasad ಚಿತ್ರದುರ್ಗವು ಬೆಂಗಳೂರಿನ ವಾಯವ್ಯಕ್ಕೆ ಸುಮಾರು 205 ಕಿ.ಮೀ ಗಳಷ್ಟು ದೂರದಲ್ಲಿದ್ದು ರಾಷ್ಟ್ರಿಯ ಹೆದ್ದಾರಿ ಸಂಖ್ಯೆ ನಾಲ್ಕರ ಮೇಲೆ ನೇರ ಸಂಪರ್ಕ ಹೊಂದಿದೆ. ಇನ್ನು ಈ ಹೆದ್ದಾರಿಯು ನಾಲ್ಕು ಪಥಗಳ ಅಗಲವಾದ ಹೆದ್ದಾರಿಯಾಗಿದ್ದು ವಾಹನಗಳನ್ನು ತಕ್ಕ ಮಟ್ಟಿಗೆ ವೇಗವಾಗಿಯೂ ಓಡಿಸಬಹುದು. ಘಂಟೆಗೆ 60 ಕಿ.ಮೀ ವೇಗವೆಂದರೂ ಸುಮಾರು ಮೂರುವರೆ ಘಂಟೆಗಳಲ್ಲಿ ನೀವು ಚಿತ್ರದುರ್ಗ ತಲುಪಬಹುದು. ಹೀಗಾಗಿ ಬೇಕಾದರೆ ಒಂದೇ ಒಂದು ದಿನದಲ್ಲಿ ನೀವು ಈ ಶೀಘ್ರ ಪ್ರವಾಸ ಮಾಡಿ ಆನಂದಿಸಬಹುದು. ಚಿತ್ರದುರ್ಗದಲ್ಲಿ ಕೇವಲ ಕೋಟೆಯಲ್ಲದೆ ಇತರೆ ಅನೇಕ ವಿಶೇಷತೆಗಳನ್ನು ಕಾಣಬಹುದು. ವಿಶೇಷ ಲೇಖನ : ರಸ್ತೆಯಿಂದ ಕೊಡಚಾದ್ರಿಗೆ ಹೀಗೂ ಪ್ರಯಾಣಿಸಿ ಚಿತ್ರದುರ್ಗದ ಭವ್ಯ ಕೋಟೆ ಚಿತ್ರಕೃಪೆ: veeresh.dandur ಚಿತ್ರದುರ್ಗದ ಕೋಟೆಯು ರಾಷ್ಟ್ರೀಯ ಮಹತ್ವ ಪಡೆದ ಕೋಟೆಯಾಗಿದ್ದು ಇಲ್ಲಿನ ಪರಿಸರವು ಒಂದು ರೀತಿಯ ವಿನೂತನ ಅನುಭವವನ್ನು ಕರುಣಿಸುತ್ತದೆ. ನಗರದ ಗೌಜು ಗದ್ದಲಗಳಿಗೆ ಸಲಾಂ ಹೇಳಿ ತಂಪಾದ ರಭಸಮಯ ಗಾಳಿಯ ನಡುವೆ ಸಮಯ ಕಳೆಯುವುದು ಹೆಚ್ಚಿನ ಹುಮ್ಮಸ್ಸನ್ನು ಕರುಣಿಸುತ್ತದೆ. ಇಲ್ಲಿ ಕೇವಲ ಕೋಟೆ ನೋಡಬೇಕೆಂದೇನಿಲ್ಲ. ಅದರ ಪ್ರಾಂಗಣದಲ್ಲಿರುವ ವಿವಿಧ ರಚನೆಗಳನ್ನು ನೋಡಬಹುದು, ಇವುಗಳು ಅಂದಿನ ಸಮಯದಲ್ಲಿ ತಮ್ಮದೆ ಆದ ವೈಶಿಷ್ಟ್ಯವನ್ನು ಹೊಂದಿದ್ದವು. ಇವುಗಳ ಕುರಿತು ತಿಳಿಯುವುದರಿಂದ ನಿಮ್ಮ ಜ್ಞಾನವೂ ಸಹ ವೃದ್ಧಿಯಾಗುತ್ತದೆ. ವಿಶೇಷ ಲೇಖನ : ಬೆಂಗಳೂರಿನಿಂದ ವರ್ಕಲಾ ಹೇಗೆ ಪ್ರಯಾಣ? ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ನೀವು ಬೆಂಗಳೂರಿನ ಯಾವುದೆ ಭಾಗದಿಂದ ಹೊರಟರೂ ಸಹ ಮೊದಲಿಗೆ ತುಮಕೂರಿನೆಡೆ ಹೋಗುವ ರಸ್ತೆ ಹಿಡಿದು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ತಲುಪಬೇಕು. ಇಲ್ಲಿಂದ ಯಾವುದೆ ಅಡಚಣೆಗಳಿಲ್ಲದೆ ಹಾಯಾಗಿ ವಾಹನ ಚಲಾಯಿಸುತ್ತ ಹೊರಡಬಹುದು. ಅಲ್ಲಲ್ಲಿ ಟೊಲ್ ಗೇಟುಗಳಿವೆ. ನೆಲಮಂಗಲ, ತುಮಕೂರು ಹಾಗೂ ಹಿರಿಯೂರು ಮಾರ್ಗವಾಗಿ ಸುಮಾರು 200 ಕಿ.ಮೀ ಗಳಷ್ಟು ಕ್ರಮಿಸಿ ಚಿತ್ರದುರ್ಗವನ್ನು ತಲುಪಬಹುದು. ಮೊದಲು ನೆಲಮಂಗಲ ಮೂಲಕ ತುಮಕೂರಿನೆಡೆ ಸಾಗುವಾಗ ತುಮಕೂರು ಬಳಿಯಿರುವ ಕ್ಯಾತಸಂದ್ರಕ್ಕೆ ಭೇಟಿ ನೀಡಲು ಮರೆಯದಿರಿ. ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ತಟ್ಟೆ ಇಡ್ಲಿ ಚಿತ್ರಕೃಪೆ: Girionthenet ಕ್ಯಾತಸಂದ್ರವು ಬೆಂಗಳೂರಿಗರ ಅಥವಾ ಇಂದು ಬೆಂಗಳೂರಿನಲ್ಲಿ ನೆಲೆಸಿರುವ ಇತರೆ ಜನರ ನೆಚ್ಚಿನ ತಿಂಡಿಯಾದ ತಟ್ಟೆ ಇಡ್ಲಿಗಳ ಆವಿಷ್ಕಾರದ ಗ್ರಾಮವಾಗಿದೆ. ಹೌದು ಇಲ್ಲಿಂದಲೆ ಪ್ರವರ್ಧಮಾನಕ್ಕೆ ಬಂದ ತಟ್ಟೆ ಇಡ್ಲಿಯು ಸಾಕಷ್ಟು ಜನಪ್ರೀಯವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನೆಲ್ಲೆಡೆ ತಟ್ಟೆ ಇಡ್ಲಿಗಳು ಲಭ್ಯವಿದ್ದರೂ ಕ್ಯಾತಸಂದ್ರದ ಇಡ್ಲಿಗಳಿಗೆ ವಿಶೇಷವಾದ ರುಚಿಯೇ ಇದೆ ಎಂದು ಹೇಳಬಹುದು. ನಿಮಗಿಷ್ಟವಿದ್ದಲ್ಲಿ ಕ್ಯಾತಸಂದ್ರದ ತಟ್ಟೆ ಇಡ್ಲಿ ಹಾಗೂ ಬಿಸಿ ಬಿಸಿ ಉದ್ದಿನ ವಡೆಗಳ ರುಚಿಯನ್ನು ಸವಿದು ಹಿರಿಯೂರಿನೆಡೆ ಧಾವಿಸಬಹುದು. ತುಮಕೂರಿನಿಂದ ಹಿರಿಯೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ 90 ಕಿ.ಮೀ ಗಳಷ್ಟು ದೂರದಲ್ಲಿದೆ. ಮಾರಿ ಕಣಿವೆ ಜಲಾಶಯ ಒಂದೊಮ್ಮೆ ಹಿರಿಯೂರು ತಲುಪಿದಾಗ ಮತ್ತೊಂದು ಚಿಕ್ಕ ಪ್ರಯಾಣವನ್ನು ನಿಮಗಿಷ್ಟವಿದ್ದಲ್ಲಿ ಮಾಡಬಹುದು. ಅದಕ್ಕಾಗಿ ನೀವು ಹಿರಿಯೂರಿನಿಂದ ತುಸು ಮುಂದೆ ಬಂದು ಎಡ ತಿರುವು ಪಡೆದು ಟಿ.ಹೆಚ್ ರಸ್ತೆಯ ಮೇಲೆ ಸುಮಾರು 30 ಕಿ.ಮೀ ಪ್ರಯಾಣಿಸಿ ಮಾರಿ ಕಣಿವೆಯನ್ನು ತಲುಪಬಹುದು. ವಾಣಿ ವಿಲಾಸ ಸಾಗರ ಎಂತಲೂ ಕರೆಯಲಾಗುವ ಈ ಜಲಾಶಯವು ರಾಜ್ಯದ ಅತಿ ಪುರಾತನ ಆಣೆಕಟ್ಟುಗಳ ಪೈಕಿ ಒಂದಾಗಿದೆ. ಸ್ವಾತಂತ್ರ್ಯಕ್ಕೂ ಮುಂಚೆ ಮೈಸೂರು ಅರಸರಿಂದ ಈ ಆಣಕಟ್ಟನ್ನು ವೇದವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದು ಚಿತ್ರದುರ್ಗ ಹಾಗೂ ಹಿರಿಯೂರಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಗೋಪಾಲ ಸ್ವಾಮಿ ಹೊಂಡ ಜಲಾಶಯದ ಸುಂದರ ಅಂಗಳದಲ್ಲಿ ಸ್ವಲ್ಪ ಸಮಯ ಕಳೆದು ಮತ್ತೆ ಅದೇ ಮಾರ್ಗವಾಗಿ ಹಿಂತಿರುಗಿ ರಾಷ್ಟ್ರೀಯ ಹೆದ್ದಾರಿ ತಲುಪಿ ಅಲ್ಲಿಂದ ನಿಮ್ಮ ಪ್ರಯಾಣವನ್ನು ಚಿತ್ರದುರ್ಗದೆಡೆ ಮುಂದುವರೆಸಬಹುದು. ಚಿತ್ರದುರ್ಗವು ಹಿರಿಯೂರಿನಿಂದ ಕೇವಲ 44 ಕಿ.ಮೀ ಗಳಷ್ಟು ದೂರದಲ್ಲಿದೆ. ಒಂದೊಮ್ಮೆ ಚಿತ್ರದುರ್ಗ ಪ್ರವೇಶಿಸಿದರೆ ಅಲ್ಲಿಂದ ನೇರವಾಗಿ ಕೋಟೆಯ ತಾಣಕ್ಕೆ ಧಾವಿಸಬಹುದು. ಇದು ರಾಷ್ಟ್ರೀಯ ಸಂರಕ್ಷಿಸಲ್ಪಟ್ಟ ಸ್ಮಾರಕವಾಗಿದ್ದು ಒಳ ಪ್ರವೇಶಿಸಲು ಸರ್ಕಾರದಿಂದ ನಿಗದಿಪಡಿಸಲಾದ ನಿರ್ದಿಷ್ಟ ಶುಲ್ಕವನ್ನು ಪಾವತಿಸಿ ಒಳ ನಡೆಯಬಹುದು. ಅಕ್ಕ ತಂಗಿಯರ ಹೊಂಡ ಏಳು ಸುತ್ತಿನ ಈ ಕೋಟೆಯಲ್ಲಿ ಹಲವಾರು ರಚನೆಗಳು, ಹೊಂಡಗಳು, ದೇವಾಲಯಗಳನ್ನು ಕಾಣಬಹುದಾಗಿದೆ. ಇಂದು ಕೇಳುತ್ತಿರುವ ಮಳೆ ನೀರಿನ ಕೊಯ್ಲು ಪದ್ಧತಿಯನ್ನು ಅಂದೆ ಕೋಟೆಯ ನೀರ್ಮಾಣದ ಸಮಯದಲ್ಲಿ ಅಳವಡಿಸಲಾಗಿತ್ತು ಎಂದರೆ ತಿಳಿಯಬಹುದು ಅಂದಿನ ಜನರ ಮುಂದಾಲೋಚನೆ ಹಾಗೂ ಜಾಣ್ಮೆಯನ್ನು. ಇಲ್ಲಿ ಸಂತೆ ಹೊಂಡ, ಸಿಹಿನೀರಿನ ಹೊಂಡ, ಗೋಪಾಲ ಸ್ವಾಮಿ ಹೊಂಡ, ತುಪ್ಪದ ಕೊಳ, ಅಕ್ಕ ತಂಗಿ ಹೊಂಡ ಹೀಗೆ ವಿವಿಧ ನೀರಿನ ಸಂಗ್ರಹಣಾ ಕೊಳಗಳನ್ನು ಕಾಣಬಹುದು. ವಿಶೇಷ ಲೇಖನ : ದುರ್ಗದ ಕೋಟೆಗೆ ಯಾವುದು ಸಾಟಿ? ಹಿಡಿಂಬೇಶ್ವರ ದೇವಸ್ಥಾನ, ಹಿಡಿಂಬಾ ವಾಸವಿದ್ದಳಂತಿಲ್ಲಿ! ಅಲ್ಲದೆ ಕೋಟೆಯ ಪರಿಸರದಲ್ಲಿ ಹಿಡಿಂಬೇಶ್ವರ ದೇವಸ್ಥಾನವನ್ನೂ ಸಹ ಕಾಣಬಹುದಾಗಿದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ಹಿಡಿಂಬಾಸುರನು ಒಬ್ಬ ದೈತ್ಯನಾಗಿದ್ದನು. ಈ ದೇವಸ್ಥಾನದಲ್ಲಿ ಹಿಡಿಂಬನ ದಂತವನ್ನು ಕಾಣಬಹುದಾಗಿದೆ. ಅಲ್ಲದೆ ಸಂಪಿಗೆ ಸಿದ್ದೇಶ್ವರ, ಏಕನಾಥಮ್ಮ, ಹಣುಮಂತ, ಸುಬ್ಬರಾಯ, ಗೋಪಾಲ ಕೃಷ್ಣ, ನಂದಿಯ ದೇವಾಲಯಗಳನ್ನು ನೋಡಬಹುದು. ಅಲ್ಲದೆ ಐತಿಹಾಸಿಕವಾಗಿ ಒಂದು ರೋಚಕ ಘಟನೆಯಾದ ಒನಕೆ ಒಬವ್ವನ ಖಿಂಡಿಯನ್ನೂ ಸಹ ಇಲ್ಲಿ ಕಾಣಬಹುದು. ಒಬವ್ವಳು ಈ ಖಿಂಡಿಯಿಂದ ತೂರಿ ಬರುತ್ತಿದ್ದ ಶತ್ರು ಸೈನಿಕರನ್ನು ತನ್ನ ಒನಕೆಯಿಂದ ಸೆದೆ ಬಡಿದಿದ್ದಳು. Read more about: bangalore chitradurga hiriyur karnataka road trip ರಸ್ತೆ ಪ್ರವಾಸ ಬೆಂಗಳೂರು ಚಿತ್ರದುರ್ಗ ಹಿರಿಯೂರು ಕರ್ನಾಟಕ
"2020-08-08T08:49:21"
https://kannada.nativeplanet.com/travel-guide/bangalore-chitradurga-car-000303.html
ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! | Does Milk Help In Straightening Your Hair? - Kannada BoldSky » ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! ಸಿಂಪಲ್ ಹೇರ್ ಪ್ಯಾಕ್: ಈಗ ಮನೆಯಲ್ಲಿಯೇ ಕೂದಲನ್ನು ನೇರಗೊಳಿಸಿ! Updated: Wednesday, June 6, 2018, 12:42 [IST] ನೇರವಾಗಿರುವ ಕೂದಲು ಅಂದ್ರೆ ಈಗಿನವರಿಗೆ ಒಂದು ಟ್ರೆಂಡ್. ಹಾಗಾಗಿ ಅದೆಷ್ಟೋ ಮಂದಿ ದುಬಾರಿ ಚಿಕಿತ್ಸೆಗಳ ಮೊರೆ ಹೋಗಿ ಕೂದಲನ್ನು ನೇರವಾಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಸಾಕಷ್ಟು ಪ್ರೊಡಕ್ಟ್ ಇಂದಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಲಭ್ಯವಿದ್ದು, ಅವುಗಳು ನಿಮ್ಮ ಕೂದಲಿನ ಸ್ವರೂಪದ ಬದಲಾವಣೆಯನ್ನು ಭಾರೀ ಮಟ್ಟದಲ್ಲಿ ಮಾಡುತ್ತವೆ ಎಂದು ಹೇಳಲಾಗುತ್ತೆ ಇಂತಹ ಪ್ರೊಡಕ್ಟ್ ಗಳ ಒಂದು ದೊಡ್ಡ ಸಮಸ್ಯೆಯೆಂದರೆ ಅವುಗಳಲ್ಲಿ ಅತಿಯಾಗಿ ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿದ್ದು ಅವು ನಿಮ್ಮ ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಕೆಲವೇ ದಿನದಲ್ಲಿ ನೀವು ಸಲೂನ್ ನಲ್ಲಿ ಸ್ಟ್ರೈಟ್ ಮಾಡಿಸಿಕೊಂಡ ಕೂದಲು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗೆ ಕೂದಲನ್ನು ನೇರವಾಗಿಸಲು ಕೆಲವು ರಾಸಾಯನಿಕ ರಹಿತ ನೈಸರ್ಗಿಕ ಮಾರ್ಗಗಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವಾ? ಎಸ್ , ಇಂತಹ ಕೆಲವು ಮಾರ್ಗಗಳಿವೆ.... ಹಾಲು ... ಹಾಲು ಕೂದಲನ್ನು ಮೃದುವಾಗಿ ಮತ್ತು ಗಂಟುಗಂಟಾಗದಂತೆ ನೋಡಿಕೊಳ್ಳುತ್ತೆ. ಯಾಕೆಂದರೆ ಇದರಲ್ಲಿ ಪ್ರೋಟೀನ್ ಅಂಶವಿರುತ್ತೆ. ಇದು ನಿಮ್ಮ ಕರ್ಲಿ ಹೇರನ್ನು ನೇರವಾಗಿಸಲು ಸಹಾಯ ಮಾಡುತ್ತೆ. 1. ಒಂದು ಕಪ್ ಹಾಲು ಮತ್ತು ನೀರನ್ನು ಮಿಕ್ಸ್ ಮಾಡಿಕೊಳ್ಳಿ. ಒಂದು ಸ್ಪ್ರೇ ಬಾಟಲ್ ನಲ್ಲಿ ಅದನ್ನು ಸ್ಟೋರ್ ಮಾಡಿ. ಇದನ್ನು ಅಪ್ಲೈ ಮಾಡಿಕೊಳ್ಳುವ ಮುನ್ನ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ ಮತ್ತು ಸಿಕ್ಕುಗಳಿದ್ದಲ್ಲಿ ಬಿಡಿಸಿಕೊಳ್ಳಿ. ನಂತರ ನಿಮ್ಮ ಕೂದಲಿಗೆ ಅಪ್ಲೈ ಮಾಡಿ..ಮತ್ತೆ ಕೂದಲನ್ನು ಬಾಚಿಕೊಳ್ಳಿ 2. 30 ನಿಮಿಷ ಹಾಗೆಯೇ ಬಿಡಿ. ಹಾಲನ್ನು ನಿಮ್ಮ ಕೂದಲು ಹೀರಿಕೊಳ್ಳಲಿ. ನಂತರ ಕೂದಲನ್ನು ಶಾಂಪೂ ಮತ್ತು ಕಂಡೀಷನರ್ ಬಳಸಿ ವಾಷ್ ಮಾಡಿ. 2-3 ಟೇಬಲ್ ಸ್ಪೂನ್ ಜೇನುತುಪ್ಪ 2-3 ಟೇಬಲ್ ಸ್ಪೂನ್ ಬಾಳೆಹಣ್ಣು ಇದನ್ನು ಬಳಸುವ ವಿಧಾನ ಹೇಗೆ ? 1. ಒಂದು ಕಪ್ ನಷ್ಟು ಹಾಲಿಗೆ ಜೇನುತುಪ್ಪವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. 2. ಅದಕ್ಕೆ ಬಾಳೆಹಣ್ಣನ್ನು ಸೇರಿಸಿ ಮತ್ತಷ್ಟು ಗಟ್ಟಿ ಪೇಸ್ಟ್ ತಯಾರಿಸಿ. ಬಾಳೆಹಣ್ಣು ಕೂದಲಿಗೆ ಉತ್ತಮ ಮಾಯ್ಚಿರೈಸರ್ ಆಗಬಲ್ಲವು 3. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಒಂದು ಗಂಟೆ ಇಲ್ಲವೇ ಅದಕ್ಕಿಂತ ಹೆಚ್ಚು ಸಮಯ ಕೂದಲಿನಲ್ಲೇ ಬಿಡಿ. ಸರಿಯಾಗಿ ಒಣಗುವ ವರೆಗೆ ಕಾಯಿರಿ. 4. ನಂತರ ಶಾಂಪೂ ಬಳಸಿ ವಾಷ್ ಮಾಡಿ. ಆಲಿವ್ ಆಯಿಲ್ ಮತ್ತು ಮೊಟ್ಟೆ ಆಲಿವ್ ಆಯಿಲ್ ಕೂದಲನ್ನು ಮಾಯ್ಚಿರೈಸ್ ಆಗಿರುವಂತೆ ನೋಡಿಕೊಳ್ಳುತ್ತೆ ಮತ್ತು ಮೊಟ್ಟೆಯು ನಿಮ್ಮ ಕೂದಲನ್ನು ಸ್ಟ್ರಾಂಗ್ ಆಗಿ ಮತ್ತು ಹೊಳೆಯುವಂತೆ ಮಾಡಲು ನೆರವಾಗುತ್ತೆ. ಎರಡು ಮೊಟ್ಟೆಗಳು 4 ಟೇಬಲ್ ಸ್ಪೂನ್ ಆಲಿವ್ ಆಯಿಲ್ 1. ಎರಡು ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ ಅದನ್ನು ಆಲಿವ್ ಆಯಿಲ್ ನೊಂದಿಗೆ ಮಿಕ್ಸ್ ಮಾಡಿ 2. ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ, ನಂತರ ನಿಮ್ಮ ಕೂದಲನ್ನು ಬಾಚಿಕೊಳ್ಳಿ 3. ನಂತರ ಶವರ್ ಕ್ಯಾಪ್ ಧರಿಸಿ. ಸುಮಾರು 30 ರಿಂದ 45 ನಿಮಿಷ ಹಾಗೆಯೇ ಇರಲಿ. ನಂತರ ಕೂದಲನ್ನು ಮೃದುವಾದ ಶಾಂಪೂ ಬಳಸಿ ತೊಳೆಯಿರಿ ಮಾಡುವ ವಿಧಾನ ಹೇಗೆ ಗೊತ್ತಾ? 1. ಒಂದು ಕಪ್ ಮುಲ್ತಾನಿ ಮಿಟ್ಟಿ,ಒಂದು ಮೊಟ್ಟೆಯ ಬಿಳಿಭಾಗ ಮತ್ತು ಎರಡು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಗಟ್ಟಿ ಪೇಸ್ಟ್ ನಂತಾಗಲು ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ 2. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ ಮತ್ತು ನಂತರ ದಪ್ಪ ಹಲ್ಲಿನ ಬಾಚಣಿಗೆ ಬಳಸಿ ಕೂದಲನ್ನು ಬಾಚಿಕೊಳ್ಳಿ 3. ಒಂದು ಗಂಟೆ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯರಿ.ನಂತರ ಹಾಲನ್ನು ನಿಮ್ಮ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ. 4. 15 ನಿಮಿಷ ಹಾಗೆಯೇ ಬಿಟ್ಟು ನಂತರ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ. ಹಾಟ್ ಆಯಿಲ್ ಮಸಾಜ್ ಹೇಗೆ ಬಳಸುವುದು ಗೊತ್ತಾ? 1. ಸ್ವಲ್ಪ ಹದ ಬೆಚ್ಚಗಿರುವ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನೀವು ಯಾವುದೇ ನಿಮ್ಮ ಇಚ್ಛೆಯ ಎಣ್ಣೆಯನ್ನು ಆಯ್ದುಕೊಳ್ಳಬಹುದು. 2. ಎಣ್ಣೆಯು ಪ್ರತಿ ಕೂದಲಿನ ಬುಡಕ್ಕೂ ಸಮನಾಗಿ ಹಂಚಿಕೆಯಾಗಬೇಕು ಎಂದರೆ ನೀವು ದಪ್ಪ ಹಲ್ಲಿನ ಬಾಚಣಿಗೆ ತೆಗೆದುಕೊಂಡು ಕೂದಲನ್ನು ಬಾಚಿಕೊಳ್ಳಬೇಕು. ಇದು ನೀವು ಕೂದಲು ತೊಳೆಯುವಾಗ ಆಗುವ ಬ್ರೇಕೇಜನ್ನು ಕೂಡ ನಿವಾರಿಸುತ್ತೆ. 3. ನಂತ್ರ ಬಿಸಿಯಾದ, ಮತ್ತು ಒದ್ದೆಯಾದ ಟವೆಲ್ ನಿಂದ 30 ರಿಂದ 40 ನಿಮಿಷ ನಿಮ್ಮ ಕೂದಲನ್ನು ಸುತ್ತಿಕೊಳ್ಳಿ. 4. 40 ನಿಮಿಷದ ನಂತರ ಕೂದಲನ್ನು ಮೃದುವಾದ ಶಾಂಪೂ ಬಳಸಿ ವಾಷ್ ಮಾಡಿ. ನಂತರ ನಿಮ್ಮ ಕೂದಲನ್ನು ಒದ್ದೆ ಇರುವಾಗಲೇ ಬಾಚಿಕೊಳ್ಳಿ.ನಂತರ ಡ್ರೈ ಆಗಲು ಬಿಡಿ. ಹರಳೆಣ್ಣೆಯು ನಿಮ್ಮ ಕೂದಲನ್ನು ಸ್ಟ್ರೈಟ್ ಮಾಡುವಲ್ಲಿ ಭಾರೀ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೆ. 1. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ನಿಮ್ಮ ಕೂದಲಿಗೆ ಅದರಿಂದ ಮಸಾಜ್ ಮಾಡಿ. 2. ಸ್ವಲ್ಪ ಬಿಸಿಯಾಗಿರುವ ಟಬೆಲ್ ಬಳಸಿ ಕೂದಲನ್ನು ಕವರ್ ಮಾಡಿ ಮುಚ್ಚಿಕೊಳ್ಳಿ. ಸುಮಾರು 30 ನಿಮಿಷ ಹಾಗೆಯೇ ಇರಲಿ 3. ನಂತರ, ಕೂದಲನ್ನು ಮೃದುವಾದ ಶಾಂಪೂ ಬಳಸಿ ತೊಳೆಯಿರಿ. 4. ಇದನ್ನು ನೀವು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಉತ್ತಮವಾದ ಮತ್ತು ವೇಗವಾದ ಫಲಿತಾಂಶ ಪಡೆಯಲು ಸಾಧ್ಯವಿದೆ. ವಿನೆಗರ್ ನಿಮ್ಮ ಕೂದಲಿಗೆ ರೇಷ್ಮೆಯಂತ ಕಾಂತಿ ಮತ್ತು ಹೊಳಪು ನೀಡಲು ನೆರವಾಗುತ್ತೆ 1. ಕೂದಲಿಗೆ ಶಾಂಪೂ, ಕಂಡೀಷನರ್ ಹಾಕಿ ಮೊದಲು ತೊಳೆದು ತೆಗೆಯಿರಿ 2. ಕೊನೆಯಲ್ಲಿ ಒಂದು ಚೊಂಬು ನೀರಿಗೆ ಒಂದಷ್ಟು ಹನಿ ವಿನೆಗರ್ ನ್ನು ಸೇರಿಸಿ. ಅದರಿಂದ ನಿಮ್ಮ ಕೂದಲನ್ನು ಕೊನೆಯ ಬಾರಿ ತೊಳೆಯಿರಿ, ಬಾಳೆಹಣ್ಣು ಮತ್ತು ಜೇನುತುಪ್ಪ ಈ ಮಿಶ್ರಣದ ಹೇರ್ ಮಾಸ್ಕ್ ಕೇವಲ ನಿಮ್ಮ ಕೂದಲನ್ನು ಸ್ಟ್ರೈಟ್ ಮಾಡುವುದು ಮಾತ್ರವಲ್ಲ ಬದಲಾಗಿ ಸ್ಕಾಲ್ಪ್ ಭಾಗವನ್ನು ಹೈಡ್ರೇಟ್ ಮಾಡುವಂತೆಯೂ ನೋಡಿಕೊಳ್ಳುತ್ತೆ. 2 ಟೇಬಲ್ ಸ್ಪೂನ್ ಜೇನು ತುಪ್ಪ 2 ಟೇಬಲ್ ಸ್ಪೂನ್ ಮೊಸರು 2 ಟೇಬಲ್ ಸ್ಪೂನ್ ಆಲಿವ್ ಆಯಿಲ್ 1. ಎರಡು ಸಿಪ್ಪೆ ತೆಗೆದ ಬಾಳೆಹಣ್ಣನ್ನು ತೆಗೆದುಕೊಳ್ಳಿ. ಅದಕ್ಕೆ ಎರಡು ಟೇಬಲ್ ಸ್ಪೂನ್ ಹನಿಯನ್ನು ಸೇರಿಸಿ, ಆಲಿವ್ ಆಯಿಲ್ ಮತ್ತು ಮೊಸರನ್ನೂ ಸೇರಿಸಿ.. ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. 2. ಇದನ್ನು ನಿಮ್ಮ ಕೂದಲಿಗೆ ಹಚ್ಚಿ ಮಾಸ್ಕ್ ಮಾಡಿ. ಶವರ್ ಕ್ಯಾಪ್ ಬಳಸಿ ಸೋರದಂತೆ ಜಾಗೃತೆ ವಹಿಸಬಹುದು. 3. ಅರ್ಧ ಗಂಟೆ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆಯಿರಿ. Straight hair has always been a trend. Nowadays, people go for expensive treatments to straighten their hair. Also, there are many products available today that could change the texture of your hair to a great extent. People who are not blessed with naturally straight hair often turn to chemical treatments to get rid of unruly waves and curls. there are some natural ways to straighten your hair without undergoing the harsh effects of chemical treatments. Let us see what they are.
"2018-10-23T07:41:32"
https://kannada.boldsky.com/beauty/hair-care/2018/does-milk-help-straightening-your-hair-017486.html
ಬೆಳ್ಳಿ ಬಾಚಿಕೊಂಡ ಬಿಲ್ಲುಗಾರ್ತಿ ದೀಪಿಕಾ | Vartha Bharati- ವಾರ್ತಾ ಭಾರತಿ ಟೋಕಿಯೊ ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ವಾರ್ತಾ ಭಾರತಿ Jul 18, 2019, 12:23 AM IST ಟೋಕಿಯೊ, ಜು.17: ಭಾರತದ ಅಗ್ರ-ರ್ಯಾಂಕಿನ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ನಡೆದ 2020ರ ಟೋಕಿಯೋ ಒಲಿಂಪಿಕ್ ಗೇಮ್ಸ್ ಟೆಸ್ಟ್ ಇವೆಂಟ್‌ನಲ್ಲಿ ಕೊರಿಯಾದ ಅನ್ ಸ್ಯಾನ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಬೆಳ್ಳಿ ಪದಕವನ್ನು ಬಾಚಿಕೊಂಡರು. ಕ್ವಾಲಿಫಿಕೇಶನ್ ರೌಂಡ್‌ನಲ್ಲಿ ನಾಲ್ಕನೇ ರ್ಯಾಂಕಿನಲ್ಲಿದ್ದ ದೀಪಿಕಾ ಎರಡನೇ ಶ್ರೇಯಾಂಕದ ಸ್ಯಾನ್ ವಿರುದ್ಧ ಕಠಿಣ ಸವಾಲು ಎದುರಿಸಿದರೂ ಅಂತಿಮವಾಗಿ 6-0 ಅಂತರದಿಂದ ಪಂದ್ಯವನ್ನು ಜಯಿಸಿದರು. ‘‘ಇತ್ತೀಚೆಗಷ್ಟೇ ನಾನು ನನ್ನ ಟೆಕ್ನಿಕ್‌ನ್ನು ಬದಲಿಸಿಕೊಂಡಿದ್ದೇನೆ. ನಾನು ಇಲ್ಲಿ ಸಾಕಷ್ಟು ಕಲಿತಿದ್ದೇನೆ. ಇದೀಗ ಪ್ರಗತಿಯಾಗಿರುವೆ.ಪಂದ್ಯ ಸೋತ ಸಂದರ್ಭದಲ್ಲಿ ನಾನು ನನ್ನ ಶೂಟಿಂಗ್‌ನ್ನು ಸಂಪೂರ್ಣವಾಗಿ ಮರೆಯುವೆ.ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತೇನೆ’’ ಎಂದು ದೀಪಿಕಾ ಹೇಳಿದರು. ಭಾರತೀಯ ಮಹಿಳಾ ಆರ್ಚರಿ ತಂಡ ಇನ್ನಷ್ಟೇ ಮುಂದಿನವರ್ಷದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾಗಿದೆ. 2018ರ ಜೂನ್‌ನಲ್ಲಿ ಸಾಲ್ಟ್‌ಲೇಕ್ ಸಿಟಿಯಲ್ಲಿ ನಡೆದ ಮೂರನೇ ಹಂತದ ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿದ ಬಳಿಕ ಇದೇ ಮೊದಲ ಬಾರಿ ದೀಪಿಕಾ ವಿಶ್ವಮಟ್ಟದ ಸ್ಪರ್ಧೆಯಲ್ಲಿ ವೈಯಕ್ತಿಕ ಪದಕ ಜಯಿಸಿದರು. ಟೋಕಿಯೋ ಗೇಮ್ಸ್‌ಗೆ ಒಲಿಂಪಿಕ್ಸ್ ಕೋಟಾದಿಂದ ವಂಚಿತವಾಗಿರುವ ಭಾರತೀಯ ಮಹಿಳಾ ಆರ್ಚರಿ ತಂಡಕ್ಕೆ ದೀಪಿಕಾ ಅವರ ಬೆಳ್ಳಿ ಪದಕದ ಸಾಧನೆ ನೈತಿಕ ಸ್ಥೈರ್ಯ ತುಂಬಿದೆ.
"2019-08-25T06:46:45"
http://www.varthabharati.in/article/kreede/200986
ಲಂಗ್ ೮೪ಬ್೯೮೦ಟ್ ೨೧೩ಸಿಮ್ 84 ಇಂಚ್ ಉಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಇತ್ತೀಚಿನ ಬೆಲೆಗೆ Aug 09, 2018ರಂದು ಪಡೆಯಲಾಯಿತು
"2018-10-16T06:26:37"
https://www.pricedekho.com/kn/televisions/lg-84ub980t-213cm-84-inch-uhd-4k-led-tv-black-price-prEBj3.html
ಮೌನಿ....: 2011 31 ಡಿಸೆಂಬರ್ 2011 ಅವಲೋಕನದ ಕಾಲ ಇದು. . . ಒಂದಿಡೀ ವರ್ಷ ಕಳೆದುಹೋಯಿತು. ಹೆಜ್ಜೆ ಇಡುತ್ತಾ ಬಹುದೂರ ಸಾಗಿಯಾಗಿ ಈಗ ಇನ್ನೊಂದು ಕಾಲಘಟ್ಟದಲ್ಲಿದ್ದೇವೆ. ಈಗ ಕುಂತು ಹಿಂದೆ ತಿರುಗಿ ನೋಡಬೇಕು.ಅಂತ ಅನಿಸುತ್ತೆ. ನಮಗೆ ಪ್ರತೀ ದಿನವೂ ಕೂಡಾ ಹೊಸದೇ.ಹಾಗೆಂದು ಪ್ರತಿ ದಿನವೂ ಬದಲಾವಣೆ ಇದ್ದೇ ಇರುತ್ತೆ. ಅದು ನಮಗೆ ಮಾತ್ರವಲ್ಲ ಈ ಪ್ರಕೃತಿಗೂ ಅನ್ವಯಿಸುತ್ತೆ. ಹಾಗಾಗಿ ಹಿಂದಿನ ಅನುಭವಗಳು , ಮುಂದಿನ ದಾರಿಯನ್ನು ಸುಲಭಗೊಳಿಸಬಹುದು. ಹಾಗಾಗಿ ಅವಲೋಕನ ಬೇಕು. ಅದಕ್ಕೆಂದೇ ಒಂದು ದಿನ ಅಂತ ಬೇಡ. ಆದರೆ ಇದೊಂದು ಮುಖ್ಯ ಘಟ್ಟ. ಏಕೆಂದರೆ 11 ಕಳೆದ 12 ಬರುವ ಹೊಸಕಾಲ ಇದು. ಅದರ ಜೊತೆ ಜೊತೆಗೇ ನಮ್ಮ ಸಾಧನೆಯ ಹಿಂದೆ ಅದ್ಯಾರದ್ದೋ ಸಹಕಾರ , ಪ್ರೋತ್ಸಾಹವೂ ಇರಬಹುದು , ಅದನ್ನೆಲ್ಲಾ ಒಮ್ಮೆ ನೆನಯಲೇ ಬೇಕಲ್ಲ. ಹಾಗೆ ನೆನೆಯುತ್ತಾ ಹೋದಾಗ , ಕುಂತು ಯೋಚಿಸುತ್ತಾ ಕುಳಿತಾಗ ,2011 ನನಗೇನು ದೊಡ್ಡ ಸಾಧನೆಯ ವರ್ಷವಲ್ಲ. ಆದರೆ ಖುಷಿಯ ವರ್ಷ. ಏಕೆಂದರೆ ಒಬ್ಬ ಪಾಪು ನಮ್ಮ ಮನೆಗೆ ಪ್ರವೇಶಿಸಿದ್ದಾನೆ.ಇಂದಿಗೆ ಆತನಿಗೆ 9 ತಿಂಗಳು ಕಳೆದು 10 ತಿಂಗಳ ಪ್ರಾಯ. ಇನ್ನು ಸಹೋದರಿಯ ವಿವಾಹ ಇದೆಲ್ಲಾ ಪ್ರಮುಖವಾದ ಖುಷಿಯ ಸಂಗತಿಗಳು. ಆದರೆ ಅತ್ತ ಕಡೆ ನೋಡಿದರೆ , ಮಾರ್ಚ್ ನಂತರ ನಾನೀಗ ಸುದ್ದಿ ಮಾಡುತ್ತಿರುವ ಪತ್ರಿಕೆ ಹೊಸದಿಂಗಂತಕ್ಕೆ ಪುತ್ತೂರಿನಿಂದ ಅವಕಾಶ ಸಿಕ್ಕಿದ್ದು ಅನಿರೀಕ್ಷಿತ ಬೆಳವಣಿಗೆಯಲ್ಲಿ.ಒಂದು ಹಂತದಲ್ಲಿ ಮಾಧ್ಯಮ ರಂಗದಿಂದ ದೂರವಿದ್ದು ಕೃಷಿ ಕ್ಷೇತ್ರದಲ್ಲೇ ಮುಂದುವರಿಯುವ ಒಲವು ಹೊಂದಿದ್ದರೂ ಅನಿರಿಕ್ಷಿತವಾಗಿ ಮತ್ತೆ ಆ ಕಡೆ ಸೆಳೆಯಿತು.ಮತ್ತೆ ಮತ್ತೆ ಅಲ್ಲೇ ಅವಕಾಶಗಳು ಸಿಗುತ್ತಿದೆ. ಆದರೆ ಪ್ರತೀದಿನದ ಒಂದು ಸ್ವಲ್ಪ ಭಾಗ ಕೃಷಿಯ ಕಡೆಗೆ ಗಮನಹರಿಸದೇ ಇರುವುದಿಲ್ಲ. ಆದರೆ ನನ್ನ ಪ್ರತೀದಿನದ ಆಗುಹೋಗುಗಳಲ್ಲಿ ನನ್ನ ಮಿತ್ರರ ಸಹಕಾರ ಇದ್ದೇ ಇದೆ.ಏಕೆಂದರೆ ನನ್ನೊಬ್ಬನಿಂದಲೇ ಏನನ್ನೂ ಮಾಡಲು ಸಾಧ್ಯವಿಲ್ಲ. ಅಂತಹ ಅಹಂಕಾರವೂ ನನಗಿಲ್ಲ. ಆದರೆ ಆತ್ಮವಿಶ್ವಾಸ ಇದೆ , ಯಾವುದೇ ಕೆಲಸವನ್ನು ಮಾಡಬಲ್ಲೆನೆಂಬ ವಿಶ್ವಾಸ ಇದೆ ಆದರೆ ಅದಕ್ಕೆ ಮಿತ್ರರ ಸಹಕಾರ ಬೇಕೇ ಬೇಕು. ಇದೆಲ್ಲಾ ಹಿಂದಿನ ಕತೆಯಾಯಿತು. ಆದರೆ ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಳ್ಳಲು ಬರುವುದಿಲ್ಲ. ಕೆಲವನ್ನು ಮನದಲ್ಲೇ ನೆನೆಸಿಕೊಂಡು ಅವುಗಳಿಗೆ ಕೃತಜ್ಞತೆ , ತಪ್ಪುಗಳಾಗಿದ್ದರೆ ಮಂಥನ ನಡೆಸುತ್ತಲೇ ಇದ್ದೇನೆ. ಇವುಗಳನ್ನೆಲ್ಲಾ ನೆನಪಿಸಿಕೊಂಡು 2012 ಹೇಗಿರಬೇಕು ?, ಇಲ್ಲ ತುಂಬಾ ನಿರೀಕ್ಷೆಗಳಿಲ್ಲ , ಬದುಕನ್ನು ಬಂದ ಹಾಗೆ ಸ್ವೀಕರಿಸುವುದು , ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಇದೆರಡು ಪ್ರಮುಖವಾಗಿದೆ. ಕಳೆದ ಒಂದೆರಡು ವರ್ಷಗಳಲ್ಲಿ ನನ್ನದೇ ಕೆಲವು ಸಿದ್ದಾಂತಗಳಿಗೆ ಗಂಟುಬಿದ್ದು ಕೊಂಚ ಹಿನ್ನಡೆಯಾಗಿದೆ.ಏಕೆಂದರೆ ನಂಬಿದ ಸಿದ್ದಾಂತಗಳು ಕೆಲವೊಮ್ಮೆ ನಮಗೇ ರಿವರ್ಸ್ ಹೊಡೆದಿದೆ.ಅವಕಾಶಗಳು ತಪ್ಪಿ ಹೋಗಿವೆ. ಹಾಗಾಗಿ ಈ ವರ್ಷ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು , ಸಿದ್ದಾಂತಗಳಿಗೆ ಗಂಟುಬೀಳದೆ. ಇನ್ನೊಂದು ಬಹುಮುಖ್ಯವಾದ್ದು ಈ ಬಾರಿ ಸೋಲನ್ನು ಒಪ್ಪಿಕೊಳ್ಳಬೇಕು. ಒಂದು ವೇಳೆ ಸೋಲು ಅಂತ ಕಂಡರೆ ಅದರ ಸಮರ್ಥನೆ ಮಾಡದೆ ಆ ಸೋಲನ್ನು ಒಪ್ಪಿಕೊಂಡು ಬಿಡುವುದು. ಏಕೆಂದರೆ ಸೋಲು ಅಂದರೆ ರಾಜಿಯಾಗುವುದು ಅಷ್ಟೇ, ಇದು ಬಹುಮುಖ್ಯ ಅಂತ ಅನಿಸಿದೆ. Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 8:59 ಅಪರಾಹ್ನ 17 ಡಿಸೆಂಬರ್ 2011 ಕಾನನದೊಳಗಿನ ಮೌನದ ನಡುವೆ ಕಲ್ಲಿನ ಸದ್ದು. .! ಅದು ದೊಡ್ಡ ಕಾಡು.ಸುತ್ತಲೂ ಮೌನ ಆವರಿಸಿದೆ.ಹಕ್ಕಿಗಳ ಕಲರವ, ಜೀರುಂಡೆಗಳ ಸದ್ದು ,ನೀರಿನ ಜುಳು ಜುಳು ಬಿಟ್ಟರೆ ಬೇರಾವ ಸದ್ದೂ ಅಲ್ಲಿಲ್ಲ. ಇಂತಹ ಸುಂದರ ಕಾಡಿನ ನಡುವೆ ಈಗ ಕೇಳಿರುವುದು , ಕೇಳುತ್ತಿರುವುದು ಕಲ್ಲು ಒಡೆಯುವ ಸದ್ದು!.ನಿಜ ನಂಬಲೇ ಬೇಕು.ಅದು ಹರಳು ಕಲ್ಲು ದಂಧೆ. .!.ಬಿಸಲೆ ರಕಿತಾರಣ್ಯದ ಒಳಗೆ ಈಗ ಇದು ಸಣ್ಣ ಸದ್ದು. .!. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನ ಗಡಿಭಾಗದ ಯಸಳೂರು ಅರಣ್ಯ ವಲಯ ವ್ಯಾಪ್ತಿಯ ಹೊಂಗಡಹಳ್ಳ ಹಾಗೂ ಜಗಟ ಸಮೀಪದ ಬಿಸಿಲೆ ರಕ್ಷಿತಾರಣ್ಯದೊಳಗಡೆ ಒಂದು ರೀತಿಯ ಹಸಿರು ಮಿಶ್ರಿತ ಕೆಂಪು ಬಣ್ಣದ ಹರಳು ಕಲ್ಲು ದಂಧೆ ನಡೆಯುತ್ತಿದೆ.ಕಳೆದ ಕೆಲವಾರು ವರ್ಷಗಳಿಂದ ಈ ಂಧೆ ನಡೆಯುತ್ತಿದೆ ಎಂಬ ಅನುಮಾನ ಈಗ ದಟ್ಟವಾಗುತ್ಗೀಗ ಸುಮಾರು 6 ರಿಂದ 8 ಎಕ್ರೆ ಪ್ರದೇಶದಲ್ಲಿ ಈ ಕಲ್ಲು ದಂಧೆ ನಡೆಯುತ್ತಿದೆ.ಹೀಗಾಗಿ ಬಿಸಲೆಯ ಈ ಪ್ರದೇಶದಲ್ಲಿ ಅರಣ್ಯ ನಾಶವಾದರೂ ಅಚ್ಚರಿ ಇಲ್ಲ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲಾ ಗಡಿ ಪ್ರದೇಶದ ಕೂಜಿಮಲೆ, ಸುಟ್ಟತ್‌ಮಲೆ , ಸೂಳೆಕೇರಿ ಪ್ರದೇಶಗಳಲ್ಲಿ ಭೂಮಿಯಡಿಯಲ್ಲಿ ದೊರಕುವ ನಸು ಕೆಂಪು ಹರಳುಕಲ್ಲುಗಳು ರಾಜ್ಯದಲ್ಲಿ ಪ್ರಸಿದ್ದಿಯಾಗಿತ್ತು.ಇತ್ತೀಚೆಗಿನವರೆಗೂ ಈ ದಂಧೆ ನಡೆಯುತ್ತಲೇ ಇತ್ತು.ಈಗ ಇದೇ ಮಾದರಿಯಲ್ಲಿ ಬಿಸಲೆಯಲ್ಲೂ ಇಂತಹದ್ದೇ ದಂಧೆ ನಡೆಯುತ್ತಿದೆ. ಇಲ್ಲಿ ಹೇಗೆ ನಡೆಯುತ್ತಿದೆ ? : ಬಿಸಿಲೆ ಪ್ರದೇಶದ ರಕ್ಷಿತಾರಣ್ಯವು ಪಶ್ಚಿಮ ಘಟ್ಟದ ಅಪರೂಪದ ಪ್ರದೇಶ.ಈ ಪ್ರದೇಶದಲ್ಲಿ ಸನೇಕ ಬಗೆಯ ಪ್ರಾಣಿಗಳು, ಪಕ್ಷಿಗಳು , ಜೀವಸಂಕುಲಗಳು, ವಿವಿಧ ಜಾತಿಯ ಗಿಡ ಮರಗಳು ಇವೆ.ಆದರೆ ಈಗ ಈ ದಂಧೆಕೋರರ ಧಾಳಿಯಿಂದಾಗಿ ಈ ಪ್ರದೇಶವು ಹಾನಿಯಾಗುತ್ತಿದೆ.ಲಭ್ಯ ಮಾಹಿತಿ ಪ್ರಕಾರ ಈ ದಂದೆಕೋರರು ಹರಳುಕಲ್ಲು ಸಿಗುವ ಜಾಗದಲ್ಲಿ ಒಂದು ವಾರಗಳ ಕಾಲ ಟೆಂಟ್ ಹಾಕುತ್ತಾರೆ.ಬೇಕಾದಷ್ಟು ಕಲ್ಲು ತೆಗೆದ ಬಳಿಕ ಅಲ್ಲೆ ಆಸುಪಾಸಿನಲ್ಲಿ ಮೊಬೈಲ್ ಸಿಗುವ ಕಾರಣ ವ್ಯಾಪಾರಿಗಳಿಗೆ ಹೇಳಿ ಬಿಸಲೆ ರಸ್ತೆ ಬಳಿಗೆ ಬಂದು ಅಲ್ಲೇ ವ್ಯಾಪಾರ ಕುದುರಿಸಿ ಹಣದೊಂದಿಗೆ ಊರಿಗೆ ಹಿಂತಿರುಗುತ್ತಾರೆ ಎಂಬ ಮಾಹಿತಿ ಇದೆ.ಈಗಾಗಲ ಇಲ್ಲಿ ಹರಳುಕಲ್ಲಿಗಾಗಿ ಅಗೆದು ಸುಮಾರು 3 ಮೀಟರ್ ಚೌಕಾಕಾರದ ಗುಂಡಿ ತೋಡಲಾಗಿದೆ.ಇದರ ಜೊತೆಗೆ ಕಾಡಿನಲ್ಲಿರುವ ಕಲ್ಲುಗಳು ಅನೇಕ ಹುಡಿಯಾಗಿದೆ.ಕೆಲವು ಕಲ್ಲುಗಳು ಭೂಮಿಯ ಮೇಲೆಯೇ ಸಿಗುವುದರಿಂದ ಕಲುಗಳನ್ನು ಹುಡಿಮಾಡಿದ ಕುರುಹುಗಳಿವೆ. ಇದೆಲ್ಲಾ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಗೋಚರಿಸುತ್ತದೆ. ಇದರ ಜೊತೆಗೆ ಇಲ್ಲಿ ಚೌಕಾಕಾರದ ಗುಂಡಿಯಿಂದ ಮಣ್ಣು ತೆಗೆಯಲು ಬೆತ್ತದಿಂದ ತಯಾರಿಸಿದ ರಾಟೆ , ತಿಂಡಿ ತಿನಿಸುಗಳ ಪೊಟ್ಟಣ, ಬಟ್ಟೆ ,ಗುದ್ದಲಿಗಳು ಕೂಡಾ ಇರುವುದು ದಂಧೆಕೋರರ ಇರುವಿಕೆಯನ್ನು ಸೂಚಿಸುತ್ತದೆ. ಮೂಲಗಳ ಪ್ರಕಾರ ಇಲ್ಲಿ ದೊರಕುವ ಹರಳುಕಲ್ಲಿಗೆ ಪ್ರತೀ ಕೆಜಿಗೆ ಸುಮಾರು 2500 ರಿಂದ 5000 ರೂಪಾಯಿವರೆಗೂ ರೇಟು ಇದೆ ಎಂಬ ಮಾಹಿತಿ ಸಿಗುತ್ತದೆ. ಇಲಾಖೆಗೆ ಗೊತ್ತಿಲ್ಲವೇ ? ಬಿಸಲೆಯ ಈ ಪ್ರದೇಶದಲ್ಲಿ ಆರಂಭವಾಗಿರುವ ಈ ಹರಳು ಕಲ್ಲು ದಂಧೆಯ ಬಗ್ಗೆ ನಮ್ಮ ಕಾಡು ಇಲಾಖೆಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.ಹೊರಜಗತ್ತಿಗೆ ಗೊತ್ತಾಗದ ರೀತಿಯಲ್ಲಿ ಈ ದಂಧೆ ನಡೆಯುವುದಾದರೂ ಹೇಗೆ ?. ಇಲ್ಲಿ ಬಹುವಿಸ್ತಾರವಾದ ಈ ಅರಣ್ಯದಲ್ಲಿ ಅದೂ ರಸ್ತೆಯಿಂದ ಸುಮಾರು 7 ರಿಂದ 8 ಕಿಮೀ ದೂರ ನಡೆದುಕೊಂಡು ಹೋಗಿ ಈ ಕೆಲಸ ಮಾಡುವಾಗಲೂ ನಮ್ಮ ಇಲಾಖೆಗೆ ಗೊತ್ತಿಲ್ಲ.ಏಕೆಂದರೆ ಇಲ್ಲಿ ಕಾಡಿನೊಳಗೆ ಇಲಾಖೆಯವರ ಪ್ರವೇಶವೇ ಕಡಿಮೆ ಎನ್ನುವುದು ಇಲ್ಲಿ ತಿಳಿಯುತ್ತದೆ.ಇದನ್ನೇ ದಂಧೆಕೋರರು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಅಷ್ಟೇ.ಇದರ ಜೊತೆಗೆ ಇಲಾಖೆಯೊಂದಿನ ಒಳ ಒಪ್ಪಂದವೂ ಇದಕ್ಕೆ ಕಾರಣ ಇರಬಹುದು ಎಂಬ ಮಾತುಗಳು ಪರಿಸರ ಪ್ರೇಮಿಗಳಿಂದ ಕೇಳಿಬಂದಿದೆ.ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಈ ಪ್ರದೇಶವೂ ಕೂಡಾ ಕೂಜಿಮಲೆಯಂತೆ ವ್ಯಾಪಕವಾಗಿ ಅರಣ್ಯ ನಾಶವಾಗುವುದು ಖಚಿತ ಎಂದು ಪರಿಸರ ಪ್ರೆಮಿಗಳು ಎಚ್ಚರಿಸಿದ್ದಾರೆ. ಒಂದು ಕಡೆ ಪುಷ್ಟಗಿರಿ ವನ್ಯಧಾಮದ ಬಗ್ಗೆ ಆಸಕ್ತವಾಗಿರುವ ಅರಣ್ಯ ಇಲಾಖೆಗಳು, ಜನರಿಗೆ ಸರಿಯಾದ ಮಾಹಿತಿ ನೀಡದೆ ಇದ್ದರೆ ಇನ್ನೊಂದು ಕಡೆ ಸನಿಜವಾದ ಕಾಡುಗಳು ಈಗ ಯಾವುದಿದೆ ಅದರ ರಕ್ಷಣೆಗೆ ಮುಂದಾಗದೇ ಇರುವುದು ಇನ್ನೊಂದು ದೊಡ್ಡ ವಿಪರ್ಯಾಸ.ಇರುವ ಕಾಡನ್ನೇ ರಕ್ಷಿಸಲಾಗದೆ ಇನ್ನಷ್ಟು ಕಾಡನ್ನು ಸೇರ್ಪಡೆಗೊಳಿಸಿ ಅದೆಲ್ಲವೂ ವಿನಾಶದಂಚಿಗೆ ತರುವುದಕ್ಕೆ ಮುನ್ನ ಇಂತಹ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ. Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 8:56 ಅಪರಾಹ್ನ Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 9:23 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 10:07 ಅಪರಾಹ್ನ ಕಾಮೆಂಟ್‌ಗಳಿಲ್ಲ: 17 ಜೂನ್ 2011 ಇವರಿಗೆ ಮಳೆಯೇ ಛಾವಣಿ . . . ! ಇದು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ದೇಶ . ಆದರೂ ಎಲ್ಲೋ ಒಂದು ಕಡೆ ಮಾತ್ರಾ ಅಭಿವೃದ್ಧಿ ಪಥ ಇದೆ ಅನಿಸುತ್ತಾ ಇದೆ.ಸಮಗ್ರ ಅಭಿವೃದ್ದಿಯ ದಾರಿ ಇಂದಿಗೂ ಆಗಿಲ್ಲ ಅಂತ ಅನ್ನೋದು ಕಾಣ್ತಾ ಇದೆ. ಗ್ರಾಮೀಣ ಭಾರತ ಇನ್ನೂ ಕೂಡಾ ಪ್ರಕಾಶಿಸುತ್ತಿಲ್ಲ ಅಂತ ಈಗೀಗ ಅನಿಸುತ್ತಿದೆ. ಅದಕ್ಕೆ ಕಾರಣಗಳೂ , ಉದಾಹರಣೆಗಳೂ , ಉಪಮೆಗಳೂ ಸಾಕಷ್ಟು ಕಾಣುತ್ತಿದೆ. ಅಂತಹದ್ದೊಂದು ಪುರಾವೆ ಇಲ್ಲಿ ಕಂಡಿದ್ದೇನೆ. ನೀವು ನಂಬುತ್ತೀರೋ ಬಿಡುತ್ತೀರೋ ಇದುವರೆಗೆ ಇವರು ಓಟು ಹಾಕಿಲ್ಲ , ಗುರುತಪತ್ರ ಇಲ್ಲವೇ ಇಲ್ಲ. ಹೆಚ್ಚೇಕೆ ಒಂದು ವಿಳಾಸವೂ ಇವರಿಗಿಲ್ಲ. ಹಾಕಿದ್ದರೂ ಇವರು ಭಾರತೀಯರು. . .!. ಇದು ಇವರ ಸ್ಟೋರಿ . . , ಈ ಕೊರಗ ಕುಟುಂಬಗಳಿಗೆ ವಾಸಕ್ಕೊಂದು ತೀರಾ ಗುಡಿಸಲು. ಆದರೆ ಈ ಗುಡಿಸಲಿಗೆ ಆಗಸವೇ ಛಾವಣಿ , ಮಳೆ ಬಂದರೆ ಇಡೀ ರಾತ್ರಿ ಜಾಗರಣೆ. ಮಳೆ ಜೋರು ಸುರಿದರೆ ಕೊಡೆಯೇ ಛಾವಣಿ. ಆದರೂ ಅನಿವಾರ್ಯ, ಅಲ್ಲೇ ವಾಸ. ಇಂತಹ ಸಂಕಷ್ಠದ ಬದುಕಿನಲ್ಲಿರೋ ಜನ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೇರೋಳ್ತಡ್ಕದಲ್ಲಿ ವಾಸ ಮಾಡ್ತಾ ಇದ್ದಾರೆ ಅಂದರೆ ನಂಬುತ್ತೀರಾ. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆರೋಳ್ತಡ್ಕ ಎಂಬಲ್ಲಿ ಈಗ ಒಟ್ಟು 3 ಕೊರಗ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಇದೇ ಪ್ರದೇಶದಲ್ಲಿ 5 ಕೊರಗ ಕುಟುಂಬಗಳು ವಾಸಿಸುತ್ತಿತ್ತು. ಆದರೆ ಇಲ್ಲಿನ ಸಮಸ್ಯೆ ನೋಡಿ ಆ ಕುಟುಂಬ ಇಲ್ಲಿಂದ ವಲಸೆ ಹೋಗಿದೆ.ಈಗಿರುವ ಕೊರಗ ಕುಟುಂಬವೂ ಇದೇ ಯೋಚನೆಯಲ್ಲಿದೆ. ಆದರೆ ಏನೋ ಸವಲತ್ತು ಸಿಗುತ್ತದೆ , ಸೂರಿನ ವ್ಯವಸ್ಥೆ ಆಗುತ್ತದೆ ಎಂಬ ಆಶಾ ಭಾವನೆಯಲ್ಲಿದೆ. ಇಲ್ಲಿಗೆ 4 ವರ್ಷದ ಹಿಂದೆ ಧೂಮಡ್ಕ ಪ್ರದೇಶದಿಂದ ವಲಸೆ ಬಂದು ಸುಂದರ , ಕಲ್ಯಾಣಿ ಹಾಗೂ ಕಮಲ ಅವರ ಕುಟುಂಬ ಈಗಿನ ಪ್ರದೇಶದಲ್ಲಿ ನೆಲೆಸಿತ್ತು. ಇವರು ಸದ್ಯ ಇರುವ ಸ್ಥಳ ಸಾಮಾಜಿಕ ಅರಣ್ಯ ಪ್ರದೇಶದ ಜಾಗವಾಗಿದೆ. ಇಲ್ಲಿಗೆ ಬಂದು ನೆಲೆಸಿದ ಮೇಲೆ ಈ ಕುಟುಂಬ ಸ್ಥಳೀಯ ಪಂಚಾಯತ್ ಹಾಗೂ ವಿವಿದ ಇಲಾಖೆಗಳಿಗೆ ಮನವಿ ನೀಡಿ ನಿವೇಶನ ಹಾಗೂ ಮೂಲಸೌಕರ್ಯ ಸೇರಿದಂತೆ ಮನೆ ನೀಡುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ವಿವಿದ ಕಾರಣಗಿಂದಾಗಿ ಈ ಬೇಡಿಕೆ ಈಡೇರಿಕೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಳೆದ 4 ವರ್ಷಗಳಿಂದ ಗುಡಿಸಲೇ ಇವರ ಮನೆಯಾಯಿತು. ಬೇಸಗೆಯಲ್ಲಾದರೆ ಪರವಾಗಿಲ್ಲ , ಮಳೆಗಾಲದಲ್ಲಿ ಈ ಕುಟುಂಬಗಳಿಗೆ ತೀರಾ ಸಂಕಷ್ಠದ ಪರಿಸ್ಥಿತಿ. ಹೀಗೇ, ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಠದ ಬದುಕು ಸಾಗಿಸುತ್ತಿದ್ದಾರೆ. ಬದುಕು ನಿರ್ವಹಣೆಗಾಗಿ ಬುಟ್ಟಿ ಹೆಣೆಯುವುದು ಇವರ ಕಾಯಕ. ಅದೂ ಒಂದು ಬುಟ್ಟಿಗೆ 20 ರಿಂದ 30 ರೂಪಾಯಿ. ಮಳೆಗಾಲ ಇದೂ ಕಷ್ಟ ಎನ್ನುತ್ತಾರೆ ಸುಂದರ. ಊಟಕ್ಕೆಂದು ಈಗ ಸದ್ಯದ ಮಟ್ಟಿಗೆ ಸರಕಾರದಿಂದ ಸಿಗುವ ರೇಶನ್ ಅಕ್ಕಿ , ಸೀಮೆಣ್ಣೆ ಪಡೆಯಲು ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದಿಂದ ನೀಡಿದ ಒಂದು ಪತ್ರ ಇದೆ. ಅದು ಬಿಟ್ಟು ಇವರಲ್ಲಿ ಇನ್ಯಾವುದೇ ದಾಖಲೆಗಳು ಇಲ್ಲ. ಈಗಂತೂ ಮನೆ ಇಲ್ಲದೆ ಈ ಕುಟುಂಬಗಳು ಮಳೆಯಡಿಯಲ್ಲೆ ಮಲಗಬೇಕಾಗ ಪರಿಸ್ಥಿತಿ ಬಂದಿದೆ.ಇರುವ ಗುಡಿಸಲು ಮಳೆಗೆ ಸೋರುತ್ತಿದೆ. ಮಳೆ ಬಂದರೆ ಸಾಕು ಮನೆಯವರಿಗೆ ಹಗಲಾದರೆ ಕೊಡೆ ಹಿಡಿದು ಜೀವನ ರಾತ್ರಿಯಾದರೆ ಇಡೀ ಜಾಗರಣೆ. ಈಗ ಇರುವ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದರೂ ನೀರು ಗುಡಿಸಲೊಳಗೆ ಸರಾಗ ಹರಿದು ಬರುತ್ತಿದೆ. ಇನ್ನು ಮನೆಯೊಳಗೆ ಸರಿಯಾಗಿ ಒಬ್ಬರಿಗೆ ನಿಂತುಕೊಳ್ಳಲಾಗದ ಪರಿಸ್ಥಿತಿ ಈ ಮನೆಯೊಳಗಿದೆ. ಬಾಗಿಲುಗಳು ಇಲ್ಲವೇ ಇಲ್ಲ. ಶೌಚಾಲಯ , ಸ್ನಾನಗೃಹದ ಮಾತೇ ಇಲ್ಲ. ಮನೆ ಇಲ್ಲದ ಮೇಲೆ ಈ ಮಾತು ಎಲ್ಲಿಂದ ಎನ್ನುವುದು ಈ ಕೊರಗ ಕುಟುಂಬದ ಪ್ರಶ್ನೆ. ರಾತ್ರಿಯಾದ ಮೇಲೆ ಅಲ್ಲೇ ದೂರದಲ್ಲೇ ಎಲ್ಲಾದರೂ ಸ್ನಾನ ಮಾಡುವುದು ಎನ್ನುತ್ತಾರೆ ಕಲ್ಯಾಣಿ.ಇನ್ನು ಆರೋಗ್ಯ ಕೆಟ್ಟರೆ ಕೆಲವೊಮ್ಮೆ ಔಷಧಿಗೆ ಹೋಗಲು ಕೂಡಾ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಕಮಲ. ನಮ್ಮ ದುಸ್ಥಿತಿಯ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡಿದ್ದೇವೆ ಆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ , ನಮಗೆ ಓಟು ಇಲ್ಲ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆಯೋ ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ ಸುಂದರ. ಪ್ರತೀ ಬಾರಿ ವಿವಿದ ಇಲಾಖೆಯವರು , ಅಧಿಕಾರಿಗಳು ಬರುತ್ತಾರೆ ನಮ್ಮ ಲೆಕ್ಕ ತೆಗೆದು ಹೋಗುತ್ತಾರೆ , ಇದುವರೆಗೆ ಏನೂ ಆಗಿಲ್ಲ ಎನ್ನುವ ಅವರು ಮನೆಯೊಂದು ಸಿಕ್ಕರೆ ನೆಮ್ಮದಿಯಿಂದ ನಾವು ಬದುಕಬಹುದು ಎಂದು ಈ ಕೊರಗ ಕುಟುಂಬ ಹೇಳುತ್ತದೆ. ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ೫ ದಶಕಗಳೇ ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಗುಡಿಸಲು ಇಲ್ಲದ ಮಂದಿ ಇರುವುದು ನಮ್ಮ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲೂ ಮತದಾನ ಮಾಡದ ಮಂದಿ , ಮತದಾನದ ಗುರುತಿನ ಪತ್ರ ಕೂಡಾ ಇಲ್ಲದೇ ಇರುವುದು ಇನ್ನೂ ದುರಂತವೇ ಸರಿ.ಇದಕ್ಕೆಲ್ಲಾ ಏನು ಕಾರಣ ? ಇಷ್ಟಲ್ಲಾ ಇಲಾಖೆಗಳಿದ್ದರೂ ಯಾರು ಹೊಣೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಭಾರತವೂ ಬೆಳಗಬೇಕಿದೆ. ಅದಕ್ಕಾಗಿ ಇಂತಹ ಬಡಕುಟುಂಬಗಳ ಮೂಲಭೂತ ಸೌಕರ್ಯವಾದ ಮನೆಯ ಕನಸುಗಳಿಗೆ ಬೆಳಕು ಬೇಕಿದೆ ಅನ್ನೋದು ನನ್ನ ಆಸೆ. Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 8:15 ಅಪರಾಹ್ನ ಕಾಮೆಂಟ್‌ಗಳಿಲ್ಲ: 09 ಜೂನ್ 2011 ಕಾಡು ಬಿಟ್ಟು ನಾಡಿಗೆ ಬರೋ ಗಜಪಡೆ . . ಕಾಡಾನೆ ಕಾಟ ಗ್ರಾಮೀಣ ಭಾಗದ ರೈತರಿಗೆ ಅನೇಕ ವರ್ಷಗಳಿಂದ ತಲೆನೋವಾಗಿ ಪರಿಣಮಿಸಿತ್ತು.ಆದರೆ ಈಗ ರೈತರಿಗೆ ಮಾತ್ರವಲ್ಲ ನಗರಕ್ಕೂ ಬಿಸಿ ಮುಟ್ಟಿಸುವ ವಾತಾವರಣ ಉಂಟಾಗಿದೆ.ಶಾಲೆಗೂ ರಜೆ ನೀಡಬೇಕಾದ ಪರಿಸ್ಥಿತಿ ಬುಧವಾರದಂದು ಮೈಸೂರಿನಲ್ಲಿ ಸೃಷ್ಠಿಯಾಗಿತ್ತು.ಈಗಲಾದರೂ ಎಚ್ಚರವಾದೀತೇ? . ನಾನಂತೂ ಅನೇಕ ಬಾರಿ ಈ ಸುದ್ದಿಯನ್ನು ಓದಿದ್ದೆ, ಸ್ವತ: ಸುದ್ದಿ ಮಾಡಿದ್ದೆ ಕೂಡಾ. ಅದೆಲ್ಲೂ ಮೂಲೆಯಲ್ಲಿ ಬಂದು ಸುದ್ದಿ ಸದ್ದಿಲ್ಲದೇ ಆರಿ ಹೋಗುತ್ತಿತ್ತು. ಪ್ರತೀ ಬಾರಿಯೂ ಆನೆ ದಾಳಿಯಾದಾಗ ಅಲ್ಲಿನ ಜನ ದೂರವಾಣಿ ಮೂಲಕ ತಿಳಿಸುತ್ತಾರೆ. ಅಂದರೆ ಅದು ರಾತ್ರಿ ವೇಳೆ ಆನೆಗಳ ಹಿಂಡು ಕೃಷಿ ಭೂಮಿಗೆ ನುಗ್ಗಿ ಕೃಷಿಯನ್ನು ನಾಶ ಮಾಡಿ ಬಿಡುತ್ತವೆ. ಮರುದಿನ ಬೆಳಗ್ಗೆ ದೂರವಾಣಿ ಮೂಲಕ ತಮ್ಮ ವೇದನೆಯನ್ನು ರೈತರು ಹೇಳಿಕೊಳ್ಳುತ್ತಾರೆ. ನಮ್ಮ ಕ್ಯಾಮಾರಾದೊಂದಿಗೆ ಇಡೀ ನಮ್ಮ ತಂಡ ಹೋಗಿ ಇಡೀ ಚಿತ್ರಣ ಸಂಗ್ರಹಿಸಿ ಬರುತ್ತದೆ. ಅದೆಲ್ಲೂ ಸುದ್ದಿಯಾಗುತ್ತದೆ. ಆದರೆ ಆನೆಗಳಿಗೆ ಅದು ಗೊತ್ತಾ ? ಅಂದು ರಾತ್ರಿಯೂ ಹಾಗೇ . . ಇಂದಿಗೂ ಹಾಗೆಯೇ. ನಾವು ಹೋದ ಸಂದರ್ಭದಲ್ಲಿ ಅದೆಷ್ಟೂ ರೈತರು ಕಣ್ಣೀರು ಹಾಕಿದ್ದೂ ಇದೆ. ಕಷ್ಟ ಪಟ್ಟು ಆರೇಳು ವರ್ಷ ಬೆಳೆದ ತೆಂಗು , ಅಡಿಕೆ , ಬಾಳೆ ಎಲ್ಲವೂ ನೆಲಕಚ್ಚಿ ಬಿಡುತ್ತದೆ. ಆದರೆ ಪರಿಹಾರ ಅಂತ ಹೋದರೆ ಸಿಗೋದು ಜುಜುಬಿ. ಅದು ಇಡೀ ಊರೂರು ತಿರುಗಾಡಿದ್ದಕ್ಕೆ ಸಾಲದು. ಹಾಗಾಗಿ ರೈತರು ಅದೆಲ್ಲಾ ಗೊಡವೆಗೇ ಹೋಗಲ್ಲ. ಕೃಷಿ ರಕ್ಷಣೆಗೆ ಬೇಲಿ ಹಾಕಿದರೆ ಅದು ಲೆಕ್ಕಕ್ಕೇ ಇಲ್ಲ. ಅದಕ್ಕೆ ಉದಾಹರಣೆ ಮೊನ್ನೆ ಮೈಸೂರಲ್ಲೇ ಕಂಡಾಯಿತು. ಎಷ್ಟೆತ್ತರ ಆನೆ ಜಿಗಿದಿದೆ ಮತ್ತು ಏನೆಲ್ಲಾ ರಂಪಾಟ ಮಾಡಿದೆ ಅಂತ. ಇನ್ನೂ ಒಂದು ಸಂಗತಿ ಅಂದು ಆ ರೈತರು ಹೇಳಿದ್ದರು, ಇಲ್ಲ ನಾವಿನ್ನು ಇಲ್ಲಿಂದ ಬಿಟ್ಟು ಬೇರೆಡೆ ಹೋಗಬೇಕಷ್ಟೆ ಅಂತಲೂ ಹೇಳಿಕೊಂಡಿದ್ದರು. ಆದರೂ ಹುಟ್ಟಿದ ಮಣ್ಣಿನ ನಂಟು. ಏನೇ ಹೋರಾಟ ಮಾಡಿಯಾದರೂ ಅಲ್ಲೇ ಬದುಕು.ಅದೇ ಭಯಾನಕ ಆನೆಗಳ ಜೊತೆಗೆ. ಅದೇ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಅಂದರೆ ಸುಳ್ಯ ತಾಲೂಕಿನ ಬಾಳುಗೋಡು , ಹರಿಹರ , ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ , ಪುತ್ತೂರು ತಾಲೂಕಿನ ಗುಂಡ್ಯ ಪ್ರದೇಶಗಳಲ್ಲಿ ಇಂದು ನಿನ್ನೆಯದಲ್ಲ.ಕಳೆದ ಅನೇಕ ವರ್ಷಗಳಿಂದ ಇಲ್ಲಿ ಆನೆಗಳ ಕಾಟ ನಿರಂತರ.ಇನ್ನು ಹಾಸನ ಕಡೆಗೆ ಹೋದರಂತೂ ಇನ್ನೂ ವಿಪರೀತ.ಇತ್ತೀಚೆಗಂತೂ ತೀವ್ರ ಬೆಳೆಹಾನಿಯಿಂದಾಗಿ ರೈತರ “ಶಾಪ”ಕ್ಕೆ ಆನೆಗಳ ಸಾವು ಕೂಡಾ ಸಂಭವಿಸಿತ್ತು. ಕಳೆದ ವರ್ಷ ಚಾರ್ಮಾಡಿಯಲ್ಲಿ ಒಬ್ಬ ವ್ಯಕ್ತಿ ಆನೆ ಧಾಳಿಗೆ ಮೃತನಾದರೆ ಇತ್ತ ಗುಂಡ್ಯದಲ್ಲೂ ಇನ್ನೊಬ್ಬರು ಮೃತರಾಗಿದ್ದಾರೆ.ಬೆಳೆ ಹಾನಿಗೆ ಲೆಕ್ಕವೇ ಇಲ್ಲ. ಬಾಳೆ, ತೆಂಗು , ಅಡಿಕೆ ಮರಗಳು ಅದೆಷ್ಟೋ ನೆಲ ಕಚ್ಚಿವೆ. ಇನ್ನೂ ಕೆಲವು ಕಡೆ ಪಂಪ್‌ಶೆಡ್‌ಗಳು , ಇನ್ನೂ ಕೆಲವು ಕಡೆ ಮನೆಗಳಿಗೂ ಹಾನಿ ಮಾಡಿದ ನಿದರ್ಶನಗಳೂ ಇವೆ. ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆಯೇ ಆನೆಗಳ ಕಾಟ ಇದ್ದೇ ಇದೆ. ಶಾಲಾ ಮಕ್ಕಳು ಸಂಜೆ ವೇಳೆ ಮನೆಗೆ ಬರುವಾಗ ಭಯಬೀತರಾಗಿಯೇ ಬರಬೇಕಾದ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಪ್ರತಿನಿತ್ಯ ಮನೆಯಿಂದ ಮಕ್ಕಳನು ಕರೆದುಕೊಂಡು ಹೋಗಲು ದಾರಿಬದಿಗೆ ಬರುವುದು ಇಲ್ಲಿ ಸಾಮಾನ್ಯ. ಸಂಜೆಯಾಗುತ್ತಲೇ ಇಲ್ಲೂ ಡಾಮರು ರಸ್ತೆ ಬದಿಗೆ ಕಾಡಾನೆಗಳು ಬಂದದ್ದು ಅದೆಷ್ಟೋ ಬಾರಿ. ಕೆಲವರಂತೂ ಬೈಕ್ ಬಿಟ್ಟು ಓಡಿದ್ದೂ ಇದೆ. ಮಳೆಗಾಲದ ಹೊತ್ತಿಗಂತೂ ಇದು ಇನ್ನೂ ಹೆಚ್ಚು. ಇನ್ನು ಕೃಷಿಕರು ತಮ್ಮ ಬೆಳೆ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಕಡೆ ರಾತ್ರಿ ವೇಳೆಗೆ ಆನಗೆ ತೋಟಕ್ಕೆ ನುಗ್ಗದಂತೆ ಚಿಮಣಿ ದೀಪವನ್ನು ತೋಟದ ಅಂಚಿನಲ್ಲಿಟ್ಟು ಆನೆಯ ದಾರಿ ತಪ್ಪಿಸುತ್ತಿದ್ದರೆ ಇನ್ನೂ ಕೆಲವರು ಆನೆ ಬರುವ ದಾರಿಯಲ್ಲಿ ಮೆಣಸಿನ ಹುಡಿ ಹಾಕಿ ಆನೆ ದಾರಿ ತಪ್ಪಿಸುವುದೂ ಇದೆ. ಹೀಗಿದ್ದರೂ ಆನೆಗಳ ಹಿಂಡು ಒಮ್ಮೊಮ್ಮೆ ತೋಟಕ್ಕೆ ನುಗ್ಗಿದರೆ ಎಲ್ಲವ ಸರ್ವನಾಶ. ಇದು ಇಲ್ಲಿಯ ಪರಿಸ್ಥಿತಿಯಾದರೆ ಕಳೆದ ವರ್ಷ ಗುಂಡ್ಯದಲ್ಲಿ ಡಾಮರು ಹಾಕುತ್ತಿರುವ ಕಾರ್ಮಿಕರು ರಾತ್ರಿ ಮಲಗಿದ್ದ ವೇಳೆ ಅವರನ್ನೇ ಓಡಿಸಿದೆ. ಅತ್ತ ಚಾರ್ಮಾಡಿಯಲ್ಲೂ ಅದೇ ಪರಿಸ್ಥಿತಿ , ಬೆಳೆದ ಕೃಷಿ ರಕ್ಷಣೆಗೆ ರೈತರ ಹರಸಾಹಸ. ಇತ್ತೀಚೆಗೆ ಆಗುತ್ತಿರುವ ಕಾಡು ನಾಶ , ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಬೃಹತ್ ವಿದ್ಯುತ್ ಯೋಜನೆಗಳಂತಹ ಕಾಮಗಾರಿಗಳಿಂದಾಗಿ ಆನೆಗಳಿಗೆ ತೀರಾ ತೊಂದರೆಯಾಗಿ ನಾಡಿಗೆ ಬರುವ ಸ್ಥಿತಿಯಾಗಿದೆ. ಈ ಯೋಜನೆಗಳಿಂದಾಗಿ ಕಾಡಿನಲ್ಲಿ ಉಂಟಾಗುವ ಬೃಹತ್ ಸದ್ದುಗಳು ಕೂಡಾ ಆನೆಗಳು ಸೇರಿದಂತೆ ಎಲ್ಲಾ ಕಾಡು ಪ್ರಾಣಿಗಳಿಗೆ ಡಿಸ್ಟರ್ಬ್ ಆಗಿದ್ದಂತೂ ಸತ್ಯ. ಪ್ರಶಾಂತವಾದ ಆ ಕಾಡಿನಲ್ಲಿ ಇಂತಹ ಅಶಾಂತಿಗಳು ಉಂಟಾಗುತ್ತಿರುವ ಕಾರಣದಿಂದಾಗಿಯೇ ಇಂದು ನಾಡಿನಲ್ಲಿ ಅಶಾಂತಿಗಳಾಗುತ್ತಿವೆ. ರೈತರು ಇತ್ತೀಚೆಗಿನ ಕೆಲ ವರ್ಷಗಳಿಂದ ನಿದ್ದೆ ಕೆಡುವಂತಾಗಿದೆ. ಹೀಗಾಗಿ ಕಾಡಿನೊಳಗಿನ ಅಶಾಂತಿ ನಿಲ್ಲಿಸಲು ಸರಿಯಾದ ಕ್ರಮ ಇಂದು ಅನಿವಾರ್ಯವಾಗಿದೆ.ಆಗ ನಾಡಿನಲ್ಲೂ ಶಾಂತಿ ಸ್ಥಾಪನೆ ಸಾಧ್ಯ. Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 6:31 ಅಪರಾಹ್ನ ಕಾಮೆಂಟ್‌ಗಳಿಲ್ಲ: 11 ಫೆಬ್ರವರಿ 2011 ಭೂಮಿ ಈಗ ರಜಸ್ವಲೆ. . ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ವಿವಿದ ರೂಪದಲ್ಲಿ ಕಂಡವರು ನಮ್ಮ ಪೂರ್ವಜರು.ಇದಕ್ಕೂ ಕಾರಣವಿದೆ, ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ. ಇರಲೇಬೇಕು.ಈ ಪ್ರಕೃತಿ, ಭೂಮಿಯೂ ಕೂಡಾ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಮತ್ತು ಈ ಪ್ರಕೃತಿ ಬೇಕೇ ಬೇಕು.ಇಂತಹ ಸೃಷ್ಠಿಯಾಗುವುದಕ್ಕೆ ಮೊದಲು ಅವಳು ಪ್ರಬುದ್ದಳಾಗಬೇಕು , ರಜಸ್ವಲೆಯಾಗಬೇಕು.ಇದು ಪ್ರಕೃತಿ ನಿಯಮವೂ ಹೌದು. ಅದರಂತೆ ಈಗ ಭೂದೇವಿಯು ರಜಸ್ವಲೆಯಾಗಿದ್ದಾಳೆ. ಸೃಷ್ಠಿಗೆ ತಯಾರಾಗಿದ್ದಾಳೆ. ಹಾಗಾಗಿ ಎಲ್ಲೆಡೆ ಮೌನ ಆವರಿಸಿದೆ. ಭೂಮಿಗೆ ಕಾಲಿಡುವುದಕ್ಕೂ ಈಗ ಹಿಂಜರಿಕೆ.ಎಲ್ಲಿ ಅವಳಿಗೆ ನೋವಾಗುತ್ತದೋ ಅನ್ನೋ ಭಾವ.ಎಂತಹ ಪ್ರೀತಿಯ ಭಾವ ಅದು !. ಈಗ ಭೂಮಿಯ ಕಡೆಗೆ ಒಮ್ಮೆ ನೋಡಿ. ಮೊನ್ನೆ ಮೊನ್ನೆ ಬರಡು ಬರಡಾಗಿದ್ದ ಮರಗಳೆಲ್ಲಾ ಮತ್ತೆ ಚಿಗುರಿ ನಿಂತಿದೆ.ಮಾಮರವೆಲ್ಲಾ ಹೂ ಬಿಟ್ಟು ಕಾಯಿ ಕಟ್ಟಿಕೊಳ್ಳುವುದಕ್ಕೆ ಸಿದ್ದವಾಗುತ್ತಿದೆ , ಅಂದರೆ ಗರ್ಭವತಿಯಾಗುವುದಕ್ಕೆ ಅಣಿಯಾಗುತ್ತಿದೆ , ಇತ್ತ ಕೃಷಿಯೂ ಹಾಗೇ ಅಡಿಕೆಯಲ್ಲಾದರೆ ಹಿಂಗಾರ ಬಿಟ್ಟು ಸುವಾಸನೆ ಬೀರುತ್ತಿದೆ , ದುಂಬಿಗಳನ್ನು ಪರಾಗಸ್ಪರ್ಶಕ್ಕೆ ಆಕರ್ಷಿಸುತ್ತಿದೆ , ಇಲ್ಲಿ ಗದ್ದೆ ನೋಡಿ ಎಲ್ಲವೂ ಸಿದ್ದವಾಗಿದೆ ಕಟಾವಾಗುವುದಕ್ಕೆ ಕಾದುನಿಂತಿದೆ, ಇದೆಲ್ಲದರ ಜೊತೆಗೆ ಚಳಿಯೂ ಸಾತ್ ನೀಡುತ್ತದೆ. ಈ ನಡುವೆ ಬೀಸುವ ತಂಗಾಳಿ. ಇದನ್ನು ನಮ್ಮೂರ ಜನ ಫಲ ಗಾಳಿ ಅಂತಾನೇ ಕರೀತಾರೆ.ಯಾಕಂದ್ರೆ ಇದರಿಂದಾಗಿಯೇ ಕಾಯಿ ಕಟ್ಟುವುದೂ ಇದೆ.ಹೀಗೇ ಭುವಿಯ ಒಡಲೊಳಗೆ ಅದರದ್ದೇ ಆದ ಸೃಷ್ಠಿಯ ತತ್ವಗಳು ಕಾಣಿಸುತ್ತವೆ. ಆದರೆ ಮಾನವರಾದ ನಾವು ಈ ಪ್ರಕೃತಿಯೊಂದಿಗೆ ಎಷ್ಟೇ ಬಡಿದಾಡಿದರೂ ಅವಳು ಮಾತ್ರಾ ಸಹಿಸಿಕೊಂಡಾದ್ದಾಳೆ. ಯಾಕೆಂದರೆ ಅವಳು ಮಾತೆ. .!. ಈ ಮಾತೆಯೊಂದಿಗೆ ಜಗಳವಾಡುವುದನ್ನು ಕೆಲ ದಿನವಾದರೂ ನಿಲ್ಲಿಸಬೇಡವೇ.ಹಾಗಾದರೆ ಯಾವಾಗ. ಅವಳು ರಜಸ್ವಲೆಯಾದ ದಿನ. ಈಗ ಅವಳು ರಜಸ್ವಲೆ. ತಿಂಗಳ ಮುಟ್ಟು. ಹಾಗಾಗಿ ಅವಳಿಗೆ ವಿಶ್ರಾಂತಿ ಬೇಕು.ನಾವು ಜಗಳವನ್ನು ಈ 3 ದಿನ ನಿಲ್ಲಿಸಲೇಬೇಕು. ಅದಕ್ಕಾಗಿ ನಮ್ಮೂರಿನ ಜನ ಇದನ್ನು ಕೆಡ್ಡಾಸ ಎಂಬ ಆಚರಣೆಯ ಮೂಲಕ ಮೂರು ದಿನ ಭೂಮಾತೆಯ ಪೂಜೆ ಮಾಡುತ್ತಾರೆ.ಯಾವೊಂದು ಕೆಲಸವೂ ಮಾಡುವುದಿಲ್ಲ. ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆಯೇ ಈ ಕೆಡ್ಡಾಸ.ಈ ತುಳುನಾಡು ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತ್ತು ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗಳನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದಿದೆ. ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.ಈ ದಿನಗಳಲ್ಲಿ ಭೂಮಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು. ಕೆಡ್ಡಸದ 3 ಅಥವಾ 4ನೇ ದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ 7 ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ. ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುವಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆ ಹಸಿರು ಜೀವ. ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ. ಇದರ ಜೊತೆ ಜೊತೆಗೇ ಈ ಬಾರಿ ಕೃಷಿ ಬಜೆಟ್ ಕೂಡಾ ಇದೆಯಂತೆ. ಹಾಗಾಗಿ ಈ ಬಾರಿ ಭುವಿಗೆ ಗರ್ಭಪಾತವಾಗುತ್ತೋ , ಗಂಡು ಮಗುವಾಗುತ್ತೋ , ಹೆಣ್ಣು ಮಗುವಾಗುತ್ತೋ ಅಥವಾ ಬಂಜೆಯಾಗುತ್ತೋ ನೋಡಬೇಕು. Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 9:57 ಅಪರಾಹ್ನ ಕಾಮೆಂಟ್‌ಗಳಿಲ್ಲ: 04 ಫೆಬ್ರವರಿ 2011 ಪವರ್ ಫುಲ್ ಕರ್ನಾಟಕ ಗ್ರಾಮೀಣ ಕರ್ನಾಟಕ ಈಗ “ಪವರ್” ಫುಲ್.. !, ಆದರೆ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಶಕ್ತಿ ಹೇಗೆ ಬಂತು ಅಂತ ಗ್ರಾಮೀಣ ಜನ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಗ್ರಾಮೀಣ ಕರ್ನಾಟಕ ಹೇಗೆ ಪವರ್ ಫುಲ್ ಅಂತೀರಾ. ಇಲ್ಲಿ ಈಗ ನಿರಂತರ ಪವರ್ ಇದೆ. ಹಳ್ಳಿ ಜನರಿಗೆ ಖುಷಿ ಇದೆ. ಗ್ರಾಮೀಣ ಕರ್ನಾಟಕದಲ್ಲಿ ಒಂದು ಕಾಲವಿತ್ತು. ಬೆಳಗ್ಗೆ ಹೋದ ಪವರ್ ಬರೋದೇ ಸಂಜೆ ಇನ್ನೆಷ್ಟೊತ್ತಿಗೋ. ಶಾಲಾ ಮಕ್ಕಳಿಗೆ , ಗೃಹಿಣಿಯರಿಗೆ ತಲೆನೋವೇ ತಲೆ ನೋವು.ಆದ್ರೆ ಹೇಳೋದು ಯಾರಲ್ಲಿ. ಒಂದಷ್ಟು ಪತ್ರಿಕೆಗಳಲ್ಲಿ ವರದಿಗಳೂ , ಇನ್ನೊಂದಿಷ್ಟು ಪ್ರತಿಭಟನೆಗಳು ನಡೆದರೆ ಮುಗೀತು.ಪವರ್ ಪ್ರೋಬ್ಲೆಮ್ ಮುಗೀಲೇ ಇಲ್ಲ. ಅದಕ್ಕಿಂತಲೂ ಹೆಚ್ಚು ಕೃಷಿಕರು ಪಡೋ ಸಂಕಷ್ಠ ಒಂದಲ್ಲ ಹಲವಾರು. ತೋಟಕ್ಕೆ ನೀರುಣಿಸಲು ರಾತ್ರಿ ಹಗಲು ಶ್ರಮ ಪಡಬೇಕು. ಪವರ್ ಬಂದರೂ ಪಂಪ್ ಚಾಲೂ ಆಗೋದಿಲ್ಲ.ಆದರೂ ವಿಧಿಯಿಲ್ಲ ಕಾದು ಕುಳಿತಾದರೂ ಚಾಲೂ ಮಾಡಲೇ ಬೇಕು.ಅಲ್ಲೂ ಕಾಂಪಿಟೀಶನ್ ಇರ್‍ತಿತ್ತು. ಪವರ್ ಬಂದಾಗಲೇ ಪಂಪ್ ಚಾಲೂ ಆದರೆ ಮುಗೀತು . ಇಲ್ಲಾಂದ್ರೆ ವೋಲ್ಟೇಜ್ ಪ್ರಾಬ್ಲಂನಿಂದಾಗಿ ಚಾಲೂ ಆಗೋದಿಲ್ಲ. ತುಂಬಾ ವೋಲ್ಟೇಜ್ ಕಡಿಮೆ ಆದ್ರೆ ಲೈನ್ ಟ್ರಿಪ್ ಆಗುತ್ತೆ. ಮತ್ತೆ ಐದೋ ಹತ್ತೋ ನಿಮಿಷ ಕಳೆದು ಪವರ್ ಬರೋದು. ಆಗಲೂ ಇದೇ ಸಮಸ್ಯೆ. ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆ ಗ್ರಾಮೀಣ ಕರ್ನಾಟಕದಲ್ಲಿ. ಆದರೆ ಈ ಬಾರಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತೆ. ಯಾಕೆಂದರೆ ಅಂದೆಲ್ಲಾ ನವೆಂಬರ್ ಅಂತ್ಯ , ಡಿಸೆಂಬರ್‌ನಲ್ಲಿಯೇ ಪವರ್ ಕಟ್ ಶುರುವಾಗುತ್ತಿತ್ತು. ಹೀಗಾಗಿ ಮಾರ್ಚ್ ವೇಳೆಗೆ ಪರಿಸ್ಥಿತಿ ತೀರಾ ಕಠಿಣವಾಗುತ್ತಿತ್ತು.ಆದರೆ ಈ ಬಾರಿ ಹಾಗೆ ಕಾಣುತ್ತಿಲ್ಲ. ಫೆಬ್ರವರಿ ಆರಂಭವಾದರೂ ದಿನ ಪೂರ್ತಿ ಪವರ್ ಇದೆ. ಅದರಲ್ಲಿ 12 ಗಂಟೆ ಕೃಷಿಕರಿಗಾಗಿ ತ್ರೀ ಫೇಸ್ ಇದೆ. ಉಳಿದಂತೆ 12 ಗಂಟೆ ಮನೆ ಬಳಕೆಗೆ ಪವರ್ ಇದೆ. ಹೀಗಾಗಿ ನಿರಂತರ 24 ಗಂಟೆ ಮನೆಗೆ ಪವರ್ ಇದ್ದೇ ಇದೆ. ಆದರೆ ಇದು ಎಷ್ಟು ದಿನ ಅಂತ ಗೊತ್ತಿಲ್ಲ. ಒಂದಂತೂ ಸತ್ಯ ಇಷ್ಟು ದಿನ ಪವರ್ ನೀಡಿದ್ದಾರಲ್ಲಾ ಮುಂದಿನ ಬಾರಿ ಇನ್ನೂ ಸರಿಯಾಗಬಹುದು ಅನ್ನೋ ಆಶಾವಾದ ಗ್ರಾಮೀಣರಲ್ಲಿದೆ.ಅಂತೂ ಯಾವುದೇ ತೊಂದರೆ ಇಲ್ಲದೆ ಈಗ , ಇದುವರೆಗೆ ಪವರ್ ನೀಡಿದ್ದಾರಲ್ಲಾ ಅಂತ ಕೃಷಿಕರೆಲ್ಲಾ ಈಗ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಉಚಿತ ವಿದ್ಯುತ್ ಕೂಡಾ ಕೊಟ್ಟಿದ್ದಾರಲ್ಲಾ ಅದು ಇನ್ನಷ್ಡು ಖುಷಿ. ಆವತ್ತು ಮಾತನಾಡಿಕೊಳ್ಳುತ್ತಿದ್ದರು , ಹೇಗೂ ಫ್ರೀ ಕರೆಂಟ್ ಅಲ್ವಾ ಬರುವ ವರ್ಷದಿಂದ ಪವರೇ ಇರಲಿಕ್ಕಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ನಿಲುವಿನಿಂದ ಬದಲಾಗಿದ್ದಾರೆ ಗ್ರಾಮೀಣ ಜನ. ಹೀಗೇ ಮುಂದುವರಿಯಲಿ ಅನ್ನೋದೇ ಕೃಷಿಕರ ಒತ್ತಾಸೆ. Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 9:01 ಅಪರಾಹ್ನ ಕಾಮೆಂಟ್‌ಗಳಿಲ್ಲ: ಕಾಡುವ ಜಾತ್ರೆ. . ! ಕನ್ನಡ ಹಬ್ಬ ಈಗ ಆರಂಭವಾಗತೊಡಗಿದೆ.ಪ್ರತೀ ತಾಲೂಕುಗಳಲ್ಲೂ ಕನ್ನಡದ ಜಾತ್ರೆ ನಡೆದಿದೆ , ನಡೆಯುತ್ತಿದೆ. ಈಗ ನಾಡಿನ ದೊಡ್ಡ ಹಬ್ಬಕ್ಕೆ ಸಿದ್ದತೆ ನಡೆಯುತ್ತಲೇ ಇದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡದ ಜಾತ್ರೆಯ ವೇಳೆಗೆ ಏನಾದರೊಂದು ಅವಸ್ವರ ಇದ್ದೇ ಇರುತ್ತದೆ ಎಂದು ಮೊನ್ನೆ ನಾವು ಮಾತನಾಡುತ್ತಿದ್ದೆವು. ಇದುವರೆಗಿನ ಒಂದೇ ಒಂದು ಕನ್ನಡ ಜಾತ್ರೆಯಲ್ಲಿ ನೆಗೆಟಿವ್ ಅಂಶಗಳು ಹೆಚ್ಚು ಹೈಲೈಟ್ ಆಗದೇ ಇದ್ದದ್ದು ಇದೆಯಾ?. ಬಹುಶ: ಇಲ್ಲ. ಇದ್ಯಾಕೆ ಹೀಗೆ?. ಯಾಕೆ ಅದೇ ಅಂಶಗಳು ಹೆಚ್ಚು ಫೋಕಸ್ ಆಗುತ್ತೆ?. ಬಹುಶ: ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಅನ್ನೋ ದಾರಿಯ ಕಡೆಗೆ ಕೊನೆಗೆ ಹೆಜ್ಜೆ ಹಾಕಿದೆವು. ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ. ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ. ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್‍ಯಾರು ಬಂಡಾಯ ಏಳೂತ್ತಾರೋ , ಯಾರ್‍ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು. ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ. ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ. Posted by:-puchhappady@gmail.com, ಮಹೇಶ್ ಪುಚ್ಚಪ್ಪಾಡಿ at 8:32 ಅಪರಾಹ್ನ ಕಾಮೆಂಟ್‌ಗಳಿಲ್ಲ:
"2019-01-21T13:30:55"
http://newsullia.blogspot.com/2011/
ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು | Prajavani ಕನಿಷ್ಠ ವೇತನಕ್ಕಾಗಿ ಬೀದಿಗಿಳಿದ ಕಾರ್ಮಿಕರು ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ವಕೀಲರ ಪ್ರತಿಭಟನೆ: ಮನವಿ ಸ್ವೀಕರಿಸದ ರಾಜ್ಯಪಾಲ ನಿಗಮ ಮಂಡಳಿಗಳಿಗೆ ಸಚಿವರೇ ಅಧ್ಯಕ್ಷರು! ಶಿರಾಡಿ ಘಾಟ್‍: 45 ಕಡೆ ಮಣ್ಣುಕುಸಿತ ಕೊಡಗು: ಕಣ್ಮರೆಯಾದ ಮನೆಗಳಿಗೆ ಹುಡುಕಾಟ! ಕಸಾಪ ಅಧ್ಯಕ್ಷರ ಅವಧಿ ವಿಸ್ತರಣೆಗೆ ನಕಾರ ಯುವಕರ ಸಾಹಸ: 80 ಮಂದಿ ರಕ್ಷಣೆ ಕೊಡಗು, ದ.ಕ.ಜಿಲ್ಲೆಯಲ್ಲಿ ಮಹಾಪೂರ, ಉ.ಕರ್ನಾಟಕದಲ್ಲಿ ಕುಡಿಯುವ ನೀರಿಗೂ ತತ್ವಾರ ಮುಖಪುಟ » ಸುದ್ದಿ » ಜಿಲ್ಲೆ » ತುಮಕೂರು Published: 15 ಫೆಬ್ರವರಿ 2011, 16:05 IST Updated: 15 ಫೆಬ್ರವರಿ 2011, 16:05 IST ಮಧುಗಿರಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸ ಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ತಾಲ್ಲೂಕು ಕಚೇರಿ ಮುಂದೆ ಸಮಾವೇಶಗೊಂಡರು. ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್.ಡಿ ಪಾರ್ವತಮ್ಮ, ದಿನಬಳಕೆ ವಸ್ತುಗಳನ್ನು ರಿಯಾ ಯಿತಿ ದರದಲ್ಲಿ ಪಡಿತರ ಅಂಗಡಿಗಳ ಮೂಲಕ ವಿತರಣೆ ಆಗಬೇಕು ಎಂದು ಆಗ್ರಹಿಸಿದರು. ಕಾರ್ಯದರ್ಶಿ ಮಲ್ಲಮ್ಮ ಮಾತನಾಡಿ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಜೀವವಿಮೆ ಆಧಾರಿತ ಪಿಂಚಣಿ ಜಾರಿ ಮಾಡುವಂತೆ ಒತ್ತಾಯಿಸಿದರು. ಎಲ್.ಎಸ್.ಸುಕನ್ಯಾ, ಜಯಲಕ್ಷ್ಮಿ, ಶಕುಂತಲಾ, ಶೋಭ, ತಾಯಿಮುದ್ದಮ್ಮ, ಜಿ.ಕಮಲಮ್ಮ, ಲಕ್ಷ್ಮಿನರಸಮ್ಮ, ಪುಟ್ಟರಂಗಮ್ಮ, ಸರೋಜಾ, ಗಂಗಮ್ಮ, ನಾಗಲಕ್ಷ್ಮಿ, ಗಂಗಾದೇವಿ, ಬಿ.ಎನ್,ಪಾರ್ವತಮ್ಮ ನೇತೃತ್ವ ವಹಿಸಿದ್ದರು. ಕೊರಟಗೆರೆ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ಕೂಲಿ, ಹಮಾಲಿ ನೌಕರರ ಸೇವಾಶಾಸನ ಹಾಗೂ ಕಲ್ಯಾಣಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸುವಂತೆ ಕಾರ್ಮಿಕರು ಒತ್ತಾಯಿಸಿದರು. ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಂಘಟನೆಗೊಂಡ ಕಾರ್ಮಿಕರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ, ತಾಲ್ಲೂಕು ಕಚೇರಿ ಎದರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ನೌಷಾದ್ ಶೆವಾಗನ್, ಆದಿಲಕ್ಷ್ಮಿ, ಮಹಮದ್ ಭಾಷಾ, ಲಲಿತಮ್ಮ, ವಿಜಯಲಕ್ಷ್ಮಿ, ತಿಮ್ಮಕ್ಕ, ಷಡಾಕ್ಷರರಾಧ್ಯ, ಪಾಂಡು, ನಾಗಭೂಷಣ್ ಮತ್ತಿತರರು ಭಾಗವಹಿಸಿದ್ದರು ತುರುವೇಕೆರೆ ವರದಿ: ಪಟ್ಟಣದಲ್ಲಿ ಸೋಮ ವಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ನಡೆಸಿದ ಪ್ರತಿಭಟನೆ ನಡೆಸಿದರು. ಸಂಘಟನೆಯ ಮುಖಂಡರಾದ ಸತೀಶ್, ಸಿಐಟಿಸಿ ತಾಲ್ಲೂಕು ಸಮಿತಿಯ ಅಧ್ಯಕ್ಷೆ ವಸಂತಮ್ಮ, ಶೋಭಾ, ಕೆಂಪದೇವಮ್ಮ, ರಂಗ ಲಕ್ಷ್ಮೀ, ತುಂಗಭದ್ರಮ್ಮ, ರಂಗನಾಥ್ ಮೊದಲಾದವರು ನೇತೃತ್ವ ವಹಿಸಿದ್ದರು. ಒಂದು ದಿನದ ವೇತನ ನೀಡಿದ ಕಂದಾಯ ಇಲಾಖೆ ನೌಕರರು ಮಕ್ಕಳು ಶಿಕ್ಷಣ ವಂಚಿತರಾಗದಿರಲಿ ಕೊನೆ ದಿನ ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು
"2018-08-21T06:51:46"
https://www.prajavani.net/article/%E0%B2%95%E0%B2%A8%E0%B2%BF%E0%B2%B7%E0%B3%8D%E0%B2%A0-%E0%B2%B5%E0%B3%87%E0%B2%A4%E0%B2%A8%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%AC%E0%B3%80%E0%B2%A6%E0%B2%BF%E0%B2%97%E0%B2%BF%E0%B2%B3%E0%B2%BF%E0%B2%A6-%E0%B2%95%E0%B2%BE%E0%B2%B0%E0%B3%8D%E0%B2%AE%E0%B2%BF%E0%B2%95%E0%B2%B0%E0%B3%81
ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ | Prajavani ತಮಿಳುನಾಡಿಗೆ ಕಾವೇರಿ ನೀರು: ಪ್ರತಿಭಟನೆ ಬಸವನಬಾಗೇವಾಡಿ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆಯಲ್ಲಿ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಮಹಾ ದೇವಪ್ಪ ಮುರಗಿ ಅವರಿಗೆ ಮನವಿ ಸಲ್ಲಿಸಿದರು. ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪು ಗಬ್ಬೂರ ಮಾತನಾಡಿ, ಕಾವೇರಿ ನದಿ ನೀರು ತಮಿಳುನಾಡಿಗೆ ಬಿಟ್ಟಿರುವ ಕ್ರಮವನ್ನು ಸಂಘಟನೆ ಖಂಡಿಸುತ್ತದೆ. ಕಾವೇರಿ ನೀರು ಬಿಡುವುದನ್ನು ತಕ್ಷಣವೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಬರಗಾಲ ಬಿದ್ದಿರುವುದರಿಂದ ರಾಜ್ಯದ ರೈತರು ತೊಂದರೆ ಅನುಭವಿ ಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಿಗೆ ನೀರು ಬಿಡುವುದು ಸರಿಯಲ್ಲ. ಶೀಘ್ರವೇ ಕಾವೇರಿ ನೀರು ಬಿಡುವುದನ್ನು ನಿಲ್ಲಿಸದೇ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮಂಜು ಗಬ್ಬೂರ, ದಾದಾಗೌಡ ಬಿರಾದಾರ, ಪ್ರವೀಣ ಚಿಕ್ಕೊಂಡ, ಬಿ.ಬಿ.ಇಂಗಳಗಿ, ಪರಶು ರಾಮ ಗಂಜಾಳ, ಬಸು ಕಂಚ್ಯಾಣಿ, ಸುರೇಶ ರಾಯಗೊಂಡ, ಶಂಕರಗೌಡ ಪಾಟೀಲ, ಶಾಂತಗೌಡ ಸಾಸನೂರ, ವಿಕಾಸ ಜೋಗಿ, ಸಿದ್ಧನಗೌಡ ಪಾಟೀಲ, ಶರಣು ಹೂಗಾರ ಮುಂತಾದವರು ಭಾಗವಹಿಸಿದ್ದರು.
"2019-01-23T07:31:56"
https://www.prajavani.net/article/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%97%E0%B3%86-%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF-%E0%B2%A8%E0%B3%80%E0%B2%B0%E0%B3%81-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86-0
ನಡುವೆ ಸಭೆಯಲ್ಲಿ ಹಿರಿಯ ನಡುವೆ ಸಭೆಯಲ್ಲಿ ಹಿರಿಯ ಏಕೆ ನಡುವೆ ಸಭೆಯಲ್ಲಿ ಹಿರಿಯ ನಾಗರಿಕರಿಗೆ: ಇದು ಏನು ಎಂದು ಸೆಟ್ ನಮಗೆ ಹೊರತುಪಡಿಸಿ ಇತರ ಡೇಟಿಂಗ್ ಸೈಟ್ಗಳು? ನಡುವೆ ಸಭೆಯಲ್ಲಿ ಹಿರಿಯ ಔಟ್ ನಿಂತಿದೆ ಮೂಲಕ ತನ್ನ ವ್ಯವಸ್ಥೆ ಸಭೆಯಲ್ಲಿ, ಕೇವಲ ಪೂರೈಸಲು ಸಾಹಸ, ಆದರೆ ನೀವು ಒಂದು ಸ್ನೇಹಿತ (ಇ) ಎಸ್. ಏಕೆಂದರೆ ಮಹಾನ್ ಪ್ರೀತಿ ಕಥೆಗಳು ಪ್ರಾರಂಭಿಸಿದ ಒಂದು ಸುಂದರ ಕಥೆ ಸ್ನೇಹ!’ ನೀವು ಮಾಡಬಹುದು: — ನೋಡಿ ಪ್ರೊಫೈಲ್ ವಿರುದ್ಧ ಲೈಂಗಿಕ, ಆದರೆ ಅದೇ ಲಿಂಗದ. ನಡುವೆ ಹಿರಿಯ ನಾಗರಿಕರಿಗೆ ವಿಸ್ತರಿಸಿತು ನಿಮ್ಮ ಪದರುಗಳು, ಮತ್ತು ಮಾಡಲು ಅನುಮತಿಸುತ್ತದೆ ಸಭೆಗಳು ಯುರೋಪಿಯನ್ ಯೂನಿಯನ್ — ಮಾಡಲು ಬಯಸುವ ಒಂದು ಟ್ರಿಪ್, ಆದರೆ ನೀವು ಕೊರತೆ ಪ್ರೇರಣೆ ಮಾತ್ರ ಅದನ್ನು (ಇ)? ಹೇಗೆ ಒಬ್ಬ ವ್ಯಕ್ತಿ ಷೇರುಗಳನ್ನು ಅದೇ ಆಸಕ್ತಿಗಳು ನಿಮ್ಮದೇ! ರಚಿಸಲು ನಿಮ್ಮ ಬ್ಲಾಗ್: ನೀವು ನಿಮ್ಮ ಜಾಹೀರಾತುಗಳು ನಿರ್ವಹಿಸಿ, ಪಾಲು, ನಿಮ್ಮ ಭಾವನೆಗಳನ್ನು ರಚಿಸುವ ಮೂಲಕ ನಿಮ್ಮ ಸ್ವಂತ ಬ್ಲಾಗ್! ನಡುವೆ ಸಭೆಯಲ್ಲಿ ಹಿರಿಯ ಹೋಗುತ್ತದೆ ಮತ್ತಷ್ಟು! ಇದು ಅನುಮತಿಸುತ್ತದೆ ವಿಸ್ತರಿಸಲು ನಿಮ್ಮ ವ್ಯಾಪ್ತಿ ಅವಕಾಶ, ನೀವು ನಿಮ್ಮನ್ನು ವ್ಯಕ್ತಪಡಿಸಲು ಮೀರಿ ಒಂದು ಸರಳ ‘ನನ್ನ ಬಗ್ಗೆ’! — ಬರೆಯಲು ಒಂದು ವಿಷಯವನ್ನು ನಿಮ್ಮ ಭಾವನೆಗಳನ್ನು ಉದಾ: ನನ್ನ ಪ್ರಯಾಣ, ನನ್ನ ಕಲಾಕೃತಿಗಳನ್ನು, ನನ್ನ ಪ್ರವಾಸ. ಸಹಾಯಕ ನಿಮ್ಮ ವಿಷಯವನ್ನು ಫೋಟೋಗಳನ್ನು ಖಾಸಗಿ, ಏಕ (ರು) ನಿಮ್ಮ ಸ್ನೇಹಿತ (ಗಳು) ಸಂಪರ್ಕಿಸಿ ಇರಬಹುದು, ಅಥವಾ ಇದು ಸಾರ್ವಜನಿಕ ಮತ್ತು ಹಂಚಿಕೊಳ್ಳಲು ಆಯ್ಕೆ ಅವುಗಳನ್ನು ಎಲ್ಲಾ ಸದಸ್ಯರು. ನಿರ್ಲಕ್ಷಿಸದಿರಿ ಈ ಶಕ್ತಿಶಾಲಿ ಸಾಧನ — ಬ್ಲಾಗ್ ಬರೆಯುವ ಬೆಳವಣಿಗೆ ಮೇಲೆ ನಿಮ್ಮ ಪ್ರೊಫೈಲ್ ಮತ್ತು ಮಹತ್ತರವಾಗಿ ಯಶಸ್ಸಿನ ನಿಮ್ಮ ಅವಕಾಶಗಳನ್ನು ಹೆಚ್ಚಿಸುವ. ಒಂದು ಬ್ಲಾಗ್ ನಿರ್ವಹಿಸಲು ಅನುಮತಿಸುತ್ತದೆ ನಿಮ್ಮ ಸ್ನೇಹಿ ಸಂಬಂಧಗಳು, ಆದರೆ ಅವಕಾಶ ನಿಮ್ಮ ಸಂಪರ್ಕಗಳನ್ನು ನೋಡಿ ‘ನಿಮ್ಮ ಪರಿಸರ’. ಪರಿಸರವನ್ನು ಇದು ಮೂಲಕ, ಮೋಡಿ ಆಗಿದೆ ಅನುಮತಿಸುತ್ತದೆ ಏಕೆಂದರೆ ನೀವು ಬಹಿರಂಗಪಡಿಸಲು ಒಂದು ಭಾಗ, ನಿಮ್ಮ ‘ಸೀಕ್ರೆಟ್ ಗಾರ್ಡನ್’. ಇತರ ಸದಸ್ಯರು ಓದಬಹುದು ಬರಹಗಳು, ನಿಮ್ಮ ಬ್ಲಾಗ್ ಮತ್ತು ಭಾಗವಹಿಸಲು ಕಾಮೆಂಟ್ ಅಥವಾ ವ್ಯಕ್ತಪಡಿಸಿ ತಮ್ಮ ಸ್ವಂತ ಅಭಿಪ್ರಾಯಗಳನ್ನು ವಿಷಯದ ಮೇಲೆ, ಪ್ರೇರೇಪಿಸಿತು ಸಾಮಾನ್ಯವಾಗಿ ಬಿಸಿ ಚರ್ಚೆಗಳು. ಇದು ನಿಮ್ಮ ಸ್ವಂತ ಮಿನಿ ವೇದಿಕೆ ಅಲ್ಲಿ ನೀವು ಪೂರ್ಣ ನಿಯಂತ್ರಣ ನಿಮ್ಮ ವಿಷಯಗಳ ಸೇರಿದಂತೆ, ಮಿತವಾಗಿ, ಅಳಿಸಲಾಗುತ್ತಿದೆ ಕಾಮೆಂಟ್ಗಳನ್ನು ಸೂಕ್ತವಲ್ಲದ. ನಡುವೆ ಸಭೆಯಲ್ಲಿ ಹಿರಿಯ ನಾಗರಿಕರು, ವಾಸ್ತವವಾಗಿ ಸಹ ನೀವು: ಸಂವಹನ ಇಲ್ಲದೆ ಮಿತವಾಗಿ ಮತ್ತು ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಮೂಲಕ ಚಾಟ್ ಸಮಗ್ರ ಮತ್ತು ಅರ್ಥಗರ್ಭಿತ! — ನಿಮ್ಮ ಸ್ವಂತ ರಚಿಸಲು ಸಲೊನ್ಸ್ನಲ್ಲಿನ, ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ ನಿಮ್ಮ ಸ್ನೇಹಿತರ ಗುಂಪು (ಇ) ಎಸ್. ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಯಾವುದೇ ಮಿತಿಗಳನ್ನು ರಚಿಸಿ ಮತ್ತು ಪ್ರಕಟಣೆಗಳು ಕಳುಹಿಸಲು ಪ್ರಸಾರ ಸಂಪರ್ಕ ಸದಸ್ಯರು ಅಥವಾ ಪ್ರಕಾರ ಪಟ್ಟಿ, ನೀವು ಹೊಂದಿರುವ ಈ ಹಿಂದೆ ಆಯ್ಕೆ ಮಾಡಲಾದ! ಭದ್ರತೆ: ನಾವು ಬಯಸುವ ಎಂದು, ನೀವು ಸಂಪೂರ್ಣವಾಗಿ ಆನಂದಿಸಿ ನಿಮ್ಮ ಅನುಭವವನ್ನು ನಮ್ಮ ಸೈಟ್ನಲ್ಲಿ ನಡುವೆ ಸಭೆಯಲ್ಲಿ ಹಿರಿಯ. ಈ ಏಕೆ ನಾವು ಒಂದು ನೀತಿಸಂಹಿತೆಗಳನ್ನು ಮತ್ತು ಪ್ರೋತ್ಸಾಹಿಸಲು ಎಲ್ಲಾ ನಮ್ಮ ಸದಸ್ಯರು ಗೌರವ ಇದು. ನಡುವೆ ಸಭೆಯಲ್ಲಿ ಹಿರಿಯ ಸುರಕ್ಷಿತ ವಾತಾವರಣವನ್ನು ಒದಗಿಸುತ್ತದೆ ಮತ್ತು ಮಧ್ಯಮ ಲೈವ್ ಪ್ರತಿ ನೋಂದಣಿ ಮೌಲ್ಯಾಂಕನ ನಮ್ಮ ತಂಡವು ಮೊದಲು ತಲುಪಬಹುದಾಗಿದೆ ಆನ್ಲೈನ್! ಹಾಗೆಯೇ ಫೋಟೋಗಳನ್ನು, ಬ್ಲಾಗ್, ಕಾಮೆಂಟ್ಗಳನ್ನು. ‘ ← ವೀಡಿಯೊ ಡೇಟಿಂಗ್ - ರೂಲೆಟ್ ಸೈಟ್ಗಳು ಚಾಟ್
"2019-07-17T09:11:43"
https://kn.videochat.cafe/%E0%B2%A8%E0%B2%A1%E0%B3%81%E0%B2%B5%E0%B3%86-%E0%B2%B8%E0%B2%AD%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%A8%E0%B2%A1%E0%B3%81
ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್‍ಗೆ ಜೋಡಿಯಿಲ್ಲದ ಒಂಟಿ ಜೀವಿಗಳೇ ಸ್ಟ್ರಾಂಗ್ ಕಣ್ರೀ | Being single has many health benefits Bangalore, First Published 14, Feb 2020, 3:31 PM ಪ್ರೇಮಿಗಳ ದಿನದಂದು ಒಂಟಿ ಒಂಟಿಯಾಗಿರೋದು ಬೋರೋ ಬೋರೋ ಎಂದು ಹಾಡುತ್ತ,ಜಂಟಿ ಖಾತೆ ಒಪನ್ ಮಾಡ್ತಿರೋ ಸ್ನೇಹಿತರನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿರುವ ಒಂಟಿ ಜೀವ ನೀವಾಗಿದ್ರೆ, ಖುಷಿಪಡಲು ಇಲ್ಲೊಂದು ಕಾರಣವಿದೆ. ಸಿಂಗಲ್ ಆಗಿರೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಕಣ್ರೀ ಎನ್ನುತ್ತೆ ಮನೋವಿಜ್ಞಾನ. ಎಷ್ಟ್ ಕಾಳ್ ಹಾಕಿದ್ರೂ ಒಂದ್ ಹಕ್ಕಿನೂ ಬುಟ್ಟಿಗೆ ಬಿದ್ದಿಲ್ಲ ಎಂದು ನೊಂದುಕೊಳ್ಳುತ್ತ, ವ್ಯಾಲೆಂಟೆನ್ಸ್ ಡೇ ಮತ್ತಿನಲ್ಲಿ ತೇಲಾಡುತ್ತಿರುವ ಸಿಂಗಲ್‍ನಿಂದ ಡಬಲ್‍ಗೆ ಪ್ರಮೋಷನ್ ಪಡೆದ ಸ್ನೇಹಿತರನ್ನು ನೋಡಿ ಹೊಟ್ಟೆಯುರಿ ಪಟ್ಟುಕೊಳ್ಳುತ್ತಿದ್ದೀರಾ? ಡೋಂಟ್ ವರಿ, ಬಿಟ್ಹಾಕಿ.ಒಂಟಿಯಾಗಿರೋದು ಬೋರ್ ಆದ್ರೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತೆ ವೈದ್ಯವಿಜ್ಞಾನ. ಅರೇ,ಒಂಟಿಯಾಗಿರುವುದಕ್ಕೂ,ಆರೋಗ್ಯಕ್ಕೂ ಏನ್ ಸಂಬಂಧ ಅಂತೀರಾ? ಸಂಬಂಧವಿದೆ ಎನ್ನುತ್ತಾರೆ ತಜ್ಞರು.ಸಿಂಗಲ್ ಆಗಿರೋದ್ರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆಯಂತೆ. ಕೆಲವರು ಬಟ್ಟೆ ಬದಲಾಯಿಸಿದಷ್ಟೇ ಸುಲಭವಾಗಿ ಸಂಗಾತಿಯನ್ನು ಬದಲಾಯಿಸುತ್ತ ಪ್ರತಿ ವ್ಯಾಲೆಂಟೆನ್ಸ್ ಡೇಯನ್ನು ಹೊಸ ಪ್ರೇಮಿಯೊಂದಿಗೆ ಸಂಭ್ರಮಿಸುತ್ತಾರೆ.ಇವರು ಒಂದು ದಿನವೂ ಒಂಟಿಯಾಗಿ ಇರುವುದಿಲ್ಲ.ಇಂಥವರನ್ನು ರಸಿಕರ ರಾಜ,ರೊಮ್ಯಾಂಟಿಕ್ ಹೀರೋ, ಫ್ಲರ್ಟ್ ಎಂದೆಲ್ಲ ಕರೆಯುತ್ತೇವೆ. ಅಷ್ಟೇ ಅಲ್ಲ,ಈ ರೀತಿ ಹೊಸ ಹೊಸ ಹಕ್ಕಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಇವರ ಟ್ಯಾಲೆಂಟ್ ನೋಡಿ ಹೊಟ್ಟೆಕಿಚ್ಚು ಪಡುತ್ತೇವೆ. ಆದರೆ,ಮನೋತಜ್ಞರ ಪ್ರಕಾರ ಇಂಥವರ ಹಕೀಕತ್ ಬೇರೆಯೇ ಇದೆ.ಇವರಿಗೆ ಒಂಟಿ ಒಂಟಿ ಆಗಿರುವುದು ಬೋರ್ ಮಾತ್ರವಲ್ಲ,ಸಿಕ್ಕಾಪಟ್ಟೆ ಭಯ ಹುಟ್ಟಿಸುವ ಸಂಗತಿಯೂ ಆಗಿದೆಯಂತೆ. ಒಂಟಿಯಾಗಿರುವುದು ತಮ್ಮ ಜೀವನದ ಅತ್ಯಂತ ಕೆಟ್ಟ ಘಳಿಗೆಯೆಂದೇ ಭಾವಿಸುವ ಇವರು, ಸದಾ ಸಂಗಾತಿಯೊಂದಿಗಿರಲು ಬಯಸುತ್ತಾರೆ. ಸಂಗಾತಿ ಜೊತೆಗಿದ್ರೇನೆ ಇಂಥವರ ಮನಸ್ಸಿಗೆ ನೆಮ್ಮದಿ.ಇದೇ ಕಾರಣಕ್ಕೆ ಇವರು ಮಕರಂಧ ಹೀರಲು ಹೂವಿನಿಂದ ಹೂವಿಗೆ ಹಾರುವ ದುಂಬಿಯಂತೆ ಒಂದು ಸಂಬಂಧದಿಂದ ಮತ್ತೊಂದು ಸಂಬಂಧಕ್ಕೆ ಜಂಪ್ ಮಾಡುತ್ತಲೇ ಇರುತ್ತಾರೆ.ಇವರಿಗೆ ಯಾರಾದರೂ ನನ್ನನ್ನು ಬಯಸಬೇಕು,ನನಗಾಗಿಯೇ ಅವರ ಹೃದಯ ಮಿಡಿಯುತ್ತಿರಬೇಕು ಎಂಬ ಬಯಕೆ. ಇವರು ಸಂಗಾತಿ ದಿನದ 24 ಗಂಟೆಯೂ ತನ್ನನ್ನು ಪ್ರೀತಿಸುವ ಜೊತೆಗೆ ಇಷ್ಟಕಷ್ಟಕ್ಕೆ ಗಮನ ನೀಡಬೇಕು ಎಂದು ಆಶಿಸುತ್ತಾರೆ.ಇಂಥ ಆಲೋಚನೆ, ವರ್ತನೆ ಮನೋವಿಜ್ಞಾನದ ಪ್ರಕಾರ ಅತ್ಯಂತ ಅಪಾಯಕಾರಿ.ಇಂಥ ಮನಸ್ಥಿತಿಯಿಂದಾಗಿ ವ್ಯಕ್ತಿ ತನ್ನ ಅಭಿರುಚಿಗೆ ಹೊಂದದ ರಾಂಗ್ ಪರ್ಸನ್ ಜೊತೆಗೆ ಸಂಬಂಧ ಬೆಳೆಸುವ ಸಾಧ್ಯತೆಯಿದೆ.ಇನ್ನು ಇಂಥ ವ್ಯಕ್ತಿಗಳ ಈ ವೀಕ್‍ನೆಸ್ ಅನ್ನೇ ಕೆಲವರು ಬಂಡವಾಳ ಮಾಡಿಕೊಂಡು ಅವರ ಭಾವನೆಗಳ ಜೊತೆಗೆ ಆಟವಾಡಬಹುದು.ಇಕ್ಕಟ್ಟಿಗೆ ಅಥವಾ ತೊಂದರೆಗೆ ಸಿಲುಕಿಸುವ ಸಾಧ್ಯತೆಯೂ ಇದೆ. ಇಂಥ ವ್ಯಕ್ತಿಗಳಿಗೆ ತಾವು ಮಾಡುವ ಪ್ರತಿ ಕೆಲಸಕ್ಕೂ ಸಂಗಾತಿಯ ಸಮ್ಮತಿ ಮುದ್ರೆ ಅಗತ್ಯ. ಅವರು ಧರಿಸುವ ಬಟ್ಟೆಯಿಂದ ಹಿಡಿದು ಸಿದ್ಧಪಡಿಸುವ ಅಡುಗೆ ತನಕ ಪ್ರತಿಯೊಂದನ್ನು ಸಂಗಾತಿ ಹಾಡಿ ಹೊಗಳಿದರೇನೆ ಇವರಿಗೆ ನೆಮ್ಮದಿ. ಇಂದು ಯಾವ ಡ್ರೆಸ್ ಹಾಕೋದು ಎಂಬಲ್ಲಿಂದ ಹಿಡಿದು ಹೋಟೆಲ್‍ನಲ್ಲಿ ಫುಡ್ ಆರ್ಡರ್ ಮಾಡುವ ತನಕ ಪ್ರತಿ ವಿಷಯಕ್ಕೂ ಇವರು ಸಂಗಾತಿಯನ್ನು ಅವಲಂಬಿಸುತ್ತಾರೆ. ಈ ರೀತಿ ಚಿಕ್ಕಪುಟ್ಟ ವಿಷಯಗಳಿಗೆ ಸಂಬಂಧಿಸಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇನ್ನೊಬ್ಬರ ಸಮ್ಮತಿಯನ್ನು ನಿರೀಕ್ಷಿಸುವ ಗುಣ ಅತ್ಯಂತ ಅಪಾಯಕಾರಿ ಎನ್ನುತ್ತಾರೆ ಮನೋವೈದ್ಯರು. ಇಂಥ ಪರಾವಲಂಬನೆ ಗುಣದ ಕಾರಣಕ್ಕೇ ಸಂಗಾತಿ ತೊರೆದು ಹೋಗಬಹುದು.ಅಲ್ಲದೆ, ಒಂದು ಸಂಬಂಧವನ್ನು ಅತಿಯಾಗಿ ಅವಲಂಬಿಸುವುದರಿಂದ ಸಂಗಾತಿ ಬಿಟ್ಟು ದೂರವಾದ ತಕ್ಷಣ ಸ್ವತಂತ್ರವಾಗಿ ಬದುಕಲು ಕಷ್ಟವಾಗಬಹುದು. ಬದುಕಿನಲ್ಲಿ ಸದಾ ಜೋಡಿಯೊಂದನ್ನು ಬಯಸುವ ವ್ಯಕ್ತಿಗಳಿಗೆ ಎಷ್ಟೆಲ್ಲ ತಾಪತ್ರಯಗಳು ಎದುರಾಗಬಹುದು ಎಂಬುದು ಗೊತ್ತಾಯ್ತಲ್ಲ. ಅದೇ ಸಿಂಗಲ್ ಆಗಿದ್ರೆ ಇಂಥ ಯಾವುದೇ ತಲೆನೋವು ಇಲ್ಲ ಎನ್ನುತ್ತಾರೆ ಮನೋತಜ್ಞರು.ಸಿಂಗಲ್ ಆಗಿರೋದ್ರಿಂದ ಎಲ್ಲ ಕೆಲಸಗಳನ್ನು ಅವರೇ ಸ್ವತಂತ್ರವಾಗಿ ಮಾಡುತ್ತಾರೆ.ನಿರ್ಧಾರಗಳನ್ನು ಕೈಗೊಳ್ಳುವಾಗಲು ಸ್ವತಂತ್ರವಾಗಿ ಯೋಚಿಸಿ ಮುಂದುವರಿಯುತ್ತಾರೆ.ಇದರಿಂದ ಸಹಜವಾಗಿಯೇ ಇವರಲ್ಲಿ ಪ್ರೌಢಿಮೆ,ಆತ್ಮವಿಶ್ವಾಸ,ಛಲ ಎಲ್ಲವೂ ಬೆಳೆಯುತ್ತದೆ.ಜೀವನದಲ್ಲಿ ಕಷ್ಟಗಳು ಎದುರಾದಾಗ ಹೇಗೆ ಫೇಸ್ ಮಾಡ್ಬೇಕು ಎಂಬುದು ಇವರಿಗೆ ತಿಳಿದಿರುತ್ತದೆ. ಒಟ್ಟಾರೆ ಹೇಳೋದಾದ್ರೆ ಇವರು ಭಾವನಾತ್ಮಕವಾಗಿ ಸ್ವತಂತ್ರರು ಹಾಗೂ ಬಲಿಷ್ಠರೂ ಆಗಿರುತ್ತಾರೆ. ಅಷ್ಟೇ ಅಲ್ಲ, ಸಿಂಗಲ್ ಆಗಿರೋದ್ರಿಂದ ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೆಚುರಿಟಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯ ಸಂಗಾತಿಯನ್ನು ಆರಿಸಿಕೊಳ್ಳಲು ನೆರವು ನೀಡುತ್ತದೆ. ನಿಮ್ಮನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಾಗ ಮಾತ್ರ ಇನ್ನೊಬ್ಬರನ್ನು ಸಮರ್ಥವಾಗಿ ಜಡ್ಜ್ ಮಾಡಲು ಸಾಧ್ಯವಾಗುತ್ತದೆ.ನಿಮ್ಮ ಅಗತ್ಯ ಹಾಗೂ ನಿರೀಕ್ಷೆಗಳ ಬಗ್ಗೆ ನಿಮಗೆ ಸ್ಪಷ್ಟತೆಯಿದ್ದಾಗ ಇನ್ನೊಬ್ಬ ವ್ಯಕ್ತಿಯನ್ನು,ಆತನ ವರ್ತನೆಯ ಹಿಂದಿನ ಕಾರಣವನ್ನು ನೀವು ಸರಿಯಾಗಿ ಗ್ರಹಿಸುತ್ತೀರಿ. ಸೋ, ಸಿಂಗಲ್ ಆಗಿರುವ ಜೀವಗಳೇ, ವ್ಯಾಲೆಂಟೆನ್ಸ್ ಡೇ ಸಂಭ್ರಮಾಚರಣೆಗೆ ಜೋಡಿಹಕ್ಕಿಯಿಲ್ಲವೆಂದು ರೋಧಿಸಬೇಡಿ,ಭವಿಷ್ಯದಲ್ಲಿ ನಿಮ್ಮ ಯೋಗ್ಯತೆ ತಕ್ಕ ಹಕ್ಕಿಯೊಂದು ಗೂಡು ಸೇರುತ್ತದೆ.ಆ ಭರವಸೆಯಲ್ಲೇ ಸಿಂಗಲ್ ಆದ್ರೂ ಎಲ್ಲರೊಂದಿಗೂ ಮಿಂಗಲ್ ಆಗಿ ಪ್ರೇಮಿಗಳ ದಿನ ಆಚರಿಸಿ. Last Updated 14, Feb 2020, 3:31 PM
"2020-07-15T10:58:35"
https://kannada.asianetnews.com/relationship/benefits-of-being-single-in-life-q5orth
ಮೂಕ ವೇದನೆ; ತಾಳಲಾರೆ ಯಾತನೆ | Prajavani ಮೂಕ ವೇದನೆ; ತಾಳಲಾರೆ ಯಾತನೆ Published: 05 ಫೆಬ್ರವರಿ 2011, 15:40 IST Updated: 05 ಫೆಬ್ರವರಿ 2011, 15:40 IST ಶಿವಮೊಗ್ಗ: ‘ಅಬ್ಬಾ ಅಸಾಧ್ಯ ನೋವು, ತಾಳಲಾರೆ. ಕುಳಿತಕೊಳ್ಳಲು ಆಗುತ್ತಿಲ್ಲ, ನಿಲ್ಲಲು ಆಗುತ್ತಿಲ್ಲ, ನಾನೇನು ಮಾಡ್ಲಿ?’ ‘ನಾನ್ಯಾರು ಗೊತ್ತೆ? ನನ್ನ ಹೆಸರು ‘ಕಾವೇರಿ’. ಸಕ್ರೆಬೈಲು ಆನೆ ಬಿಡಾರದ ಹಿರಿಯರಲ್ಲಿ ನಾನೂ ಒಬ್ಬಳು. ನನಗೀಗ 75 ವರ್ಷ. ಇಲ್ಲಿಗೆ ಬಂದಿದ್ದು, ಸರಿಯಾಗಿ ನೆನಪಿಲ್ಲ. ಆದರೆ, 1968ರಲ್ಲಿ ನಾನು ಕಾಕನಕೋಟೆಯಲ್ಲಿ ಮನುಷ್ಯರ ಕೈಗೆ ಸಿಕ್ಕಿಬಿದ್ದೆ. ಅಂದಿನಿಂದ ದುಬಾರೆ ಅರಣ್ಯಕ್ಕೆ ಹೋಗಿ, ನಂತರ ಸಕ್ರೆಬೈಲಿಗೆ ಬಂದಿದ್ದೇನೆ’. ‘ಈಗ ನನಗಾದ ಗಾಯದ ಬಗ್ಗೆ ಹೇಳುತ್ತೇನೆ’ ‘ಎಂದಿನಂತೆ ಬುಧವಾರವೂ ಮಾವುತರು ನಮ್ಮನ್ನು ಮೇಯಲು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಿಟ್ಟು ಹೋದರು. ಹಗಲೆಲ್ಲಾ ಮೇಯ್ದು ರಾತ್ರಿಯಾಗಿತ್ತು. ಒಬ್ಬಳೇ ಬಳ್ಳಾರಿ ಕೆರೆ ಬಳಿ ನಿಂತಿದ್ದೆ. ಅಲ್ಲಿದ್ದ ಪುಂಡ (ಅವನೂ ಗೊತ್ತಿದ್ದವನೆ) ನನ್ನೊಂದಿಗೆ ಸ್ನೇಹಕ್ಕೆ ಹಾತೊರೆದ. ವಯಸ್ಸಾಗಿದೆ; ನನ್ನನ್ನು ಬಿಟ್ಟುಬಿಡಪ್ಪ ಎಂದರೂ ಬಿಡಲಿಲ್ಲ. ಮೈಮೇಲೆ ಎರಗಿದ. ನಾನು ಆಯತಪ್ಪಿ ಕೆಳಗೆ ಬಿದ್ದೆ. ಬಿದ್ದವನ ಮೇಲೆ ಆ ಪುಂಡ ದಂತದಿಂದ ಮೈಮೇಲೆ ಚುಚ್ಚಿದ. ಪ್ರತಿಭಟಿಸಿದೆ; ನಂತರ, ಕುತ್ತಿಗೆಗೆ ಬಲವಾಗಿ ಗುದ್ದಿದ. ನನಗೆ ಜೀವಹೋದ ಹಾಗಾಯಿತು. ಅಲ್ಲೇ ಬಿದ್ದೆ. ಅವನು, ಅಲ್ಲಿಂದ ಕಾಲ್ಕಿತ್ತ’. ‘ಬೆಳಿಗ್ಗೆವರೆಗೂ ನೋವಿನಲ್ಲೇ ಒದ್ದಾಡಿದೆ. ಗುರುವಾರ ಮುಂಜಾನೆ ಮಾವುತರು ನಮ್ಮನ್ನೆಲ್ಲಾ ಕರೆಯಲು ಬಂದರು. ನನಗೆ ಒಂದು ಹೆಜ್ಜೆ ಇಡುವುದಕ್ಕೂ ಆಗಲಿಲ್ಲ. ಹತ್ತಿರ ಬಂದ ಮಾವುತರು ಮೈಮೇಲಿನ ಗಾಯಗಳನ್ನು ಕಂಡು ಬೆಚ್ಚಿಬಿದ್ದರು; ಪ್ರೀತಿಯಿಂದ ಮೈದಡಿವಿದರು. ನಿಧಾನಕ್ಕೆ ಸ್ವಲ್ಪ ದೂರಕ್ಕೆ ಹಾಗೇ ಕರೆದು ತಂದರು’. ಅಷ್ಟು ಹೊತ್ತಿಗೆ ಮೇಲಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು ಅಂತ ಕಾಣುತ್ತೆ, ಡಾಕ್ಟರ್ ಜತೆ ಅವರೂ ಬಂದರು. ನಮ್ಮ ಮಾಮೂಲಿ ಡಾಕ್ಟರ್ ಕಾಣಲಿಲ್ಲ; ಬೇರೆ ಯಾರೋ ಇಂಜೆಕ್ಷನ್ ಚುಚ್ಚಿದರು. ಬೆಳಿಗ್ಗೆ ಅನ್ನುವಷ್ಟರಲ್ಲಿ ನನ್ನ ಇಡೀ ಮೈ ಊದಿಕೊಂಡಿತ್ತು. ಮಾವುತರಿಗೇ ಗುರುತು ಸಿಗದಷ್ಟು ಬದಲಾಗಿದ್ದೆ. ಕಣ್ಣುಮುಚ್ಚಿ ಹೋಗಿದ್ದವು. ವಿಪರೀತ ನೋವು; ಆಯಾಸ. ಔಷಧಿ ಹಚ್ಚುತ್ತಿದ್ದಂತೆ ಸ್ವಲ್ಪ ಆರಾಮ ಅನಿಸಿತು. ಅನ್ನ ಹಾಕಿ ಕೊಟ್ಟರು, ಸ್ವಲ್ಪ ತಿಂದೆ. ಮಧ್ಯೆ, ಮಧ್ಯೆ ಮಾವುತರು ಔಷಧಿ ಹಚ್ಚುತ್ತಿದ್ದರು. ಇಡೀ ರಾತ್ರಿ ನಿಂತೇ ಕಾಲ ಕಳೆದೆ. ಶುಕ್ರವಾರ ಊದಿಕೊಂಡಿದ್ದ ಮೈ, ಸ್ವಲ್ಪವೇ ಸ್ವಲ್ಪ ಇಳಿದಿತ್ತು. ಆದರೆ, ಗಾಯ ಆದ ಕಡೆಯಲೆಲ್ಲ ಅಸಾಧ್ಯದ ಉರಿ. ನೋವು ತಡೆದುಕೊಳ್ಳಲಾರದೆ ಡಾಕ್ಟರ್ ಬರುವ ತನಕ ಗಾಯದ ಮೇಲೆ ಮಣ್ಣು ಎರಚಿಕೊಳ್ಳುತ್ತಲೇ ಇದ್ದೆ. ಮಾವುತರು ಬಾಳೆ ದಿಂಡು, ಅನ್ನ ತಂದುಕೊಟ್ಟರು, ಹಸಿವು ಆಗಿತ್ತು. ಸ್ವಲ್ಪ ತಿಂದೆ. ಬೆಳಿಗ್ಗೆನೇ ಮಾಧ್ಯಮದ ಗುಂಪೇ ನೆರೆದಿತ್ತು. ಹಲವರು ತಮಗೆ ತೋಚಿದಂತೆ ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ನನಗೆ ನೋವಿನಲ್ಲೂ ನಗು ಬರುತ್ತಿತ್ತು. ಕೆಲವರು ನನ್ನ ಸುತ್ತಸುಮಾರು ಒಂದು ಗಂಟೆ ಕ್ಯಾಮೆರಾಇಟ್ಟು ಪದೇ ಪದೇ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಅಧಿಕಾರಿಗಳು, ಡಾಕ್ಟರ್ ಬಂದರು. ಡಾಕ್ಟರ್, ಔಷಧಿ ಹಚ್ಚಿ, ಇಂಜೆಕ್ಷನ್ ನೀಡಿದರು. ತಕ್ಷಣಕ್ಕೆ ಸ್ವಲ್ಪ ಆರಾಮ ಅನಿಸಿತು. ಆದರೆ, ನೋವು ಇದೆ. ಉಸಿರಾಟ ಕಷ್ಟವಾಗುತ್ತಿದೆ. ನನ್ನ ಮುಂದೆ ನಿಂತ ಡಾಕ್ಟರ್, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು. ನನ್ನ ಕಣ್ಣು ಮಂಜಾಯಿತು. ಸಕ್ರೆಬೈಲು ಸಾಕಾನೆ ಮೇಲೆ ಕಾಡಾನೆ ದಾಳಿ ಶಿವಮೊಗ್ಗ: ಸಕ್ರೆಬೈಲು ಬಿಡಾರದ ಆನೆಯ ಮೇಲೆ ಕಾಡಾನೆಯೊಂದು ಬುಧವಾರ ರಾತ್ರಿ ತೀವ್ರವಾಗಿ ದಾಳಿ ಮಾಡಿದ್ದು, ಸಾಕಾನೆಯ ಸ್ಥಿತಿ ಚಿಂತಾಜನಕವಾಗಿದೆ. ಸಕ್ರೆಬೈಲು ಬಿಡಾರದ 75 ವರ್ಷದ ಕಾವೇರಿ ಕಾಡಾನೆ ದಾಳಿಗೆ ಒಳಗಾಗಿದ್ದು, ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿರುವ ಗಂಡಾನೆ ತನ್ನ ದಂತದಿಂದ ದಾಳಿ ನಡೆಸಿದೆ. ಪ್ರತಿ ನಿತ್ಯದಂತೆ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಸಕ್ರೆಬೈಲಿನ ಆನೆಗಳನ್ನು ಮೇಯಲು ಬಿಟ್ಟಾಗ ಅಲ್ಲಿಗೆ ಬಂದ ಕಾಡಾನೆ, ಕಾವೇರಿ ಮೇಲೆ ಎರಗಿ ತೀವ್ರತರವಾದ ಗಾಯಗಳನ್ನು ಮಾಡಿದೆ. ಈ ವಿಷಯ ಮರುದಿನ ಮಾವುತರಿಗೆ ಆನೆಗಳನ್ನು ಹಿಂದಕ್ಕೆ ತರುವ ವೇಳೆ ತಿಳಿದಿದ್ದು, ಕಾವೇರಿಗೆ ಈಗ ಹಗಲು-ರಾತ್ರಿ ಕಾಡಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ‘ಮೇಯಲು ಬಿಟ್ಟಾಗ ಕಾಡಾನೆ ಜತೆ ಹೊಂದಾಣಿಕೆ ಬರದಿದ್ದಾಗ ಈ ದಾಳಿ ನಡೆದಿರಬಹುದು. ಕಾವೇರಿಗೆ ಕುತ್ತಿಗೆ ಬಳಿ ಬಲವಾದ ಗಾಯವಾಗಿದ್ದು, ಉಸಿರಾಟಕ್ಕೆ ತೊಂದರೆಯಾಗಿದೆ. ಈ ಹಿಂದೆ ಕೂಡ ಸಕ್ರೆಬೈಲು ಆನೆಗಳ ಮೇಲೆ ಸಣ್ಣಪುಟ್ಟ ದಾಳಿಗಳು ನಡೆದಿದ್ದವು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಟಿ.ಜೆ. ರವಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.‘ನೋವಿನಿಂದ ಆನೆಗೆ ಬಾವು ಬಂದಿದೆ. ಉಸಿರಾಟದ ನಾಳಕ್ಕೆ ತೀವ್ರ ಏಟು ಬಿದ್ದಿರುವುದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಚಿಕಿತ್ಸೆ ನೀಡಿದ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಆದರೂ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಆನೆಗೆ ಚಿಕಿತ್ಸೆ ನೀಡಿದ ಪಶುವೈದ್ಯಕೀಯ ಕಾಲೇಜಿನ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಸುದರ್ಶನ್, ವಲಯ ಅರಣ್ಯಾಧಿಕಾರಿ ಹರೀಶ್, ಇಲಾಖೆ ವೈದ್ಯ ಸಂಕದ್ ಉಪಸ್ಥಿತರಿದ್ದರು.
"2018-08-19T20:18:27"
https://www.prajavani.net/article/%E0%B2%AE%E0%B3%82%E0%B2%95-%E0%B2%B5%E0%B3%87%E0%B2%A6%E0%B2%A8%E0%B3%86-%E0%B2%A4%E0%B2%BE%E0%B2%B3%E0%B2%B2%E0%B2%BE%E0%B2%B0%E0%B3%86-%E0%B2%AF%E0%B2%BE%E0%B2%A4%E0%B2%A8%E0%B3%86
ದುನಿಯಾ ವಿಜಯ್ ಕುರಿತು ಜೂನಿಯರ್ ಎನ್ ಟಿ ಆರ್ ಮೆಚ್ಚುಗೆ | Simply Cinema Kannada ದುನಿಯಾ ವಿಜಯ್ ಕುರಿತು ಜೂನಿಯರ್ ಎನ್ ಟಿ ಆರ್ ಮೆಚ್ಚುಗೆ April 11, 2017 April 11, 2017 admin 303 Comments ಬೆಂಗಳೂರು: ತಮ್ಮ ವೃತ್ತಿಯ ಬಗ್ಗೆ ಧೃಢ ನಂಬಿಕೆ ಮತ್ತು ಶ್ರಮ ನಟ ದುನಿಯಾ ವಿಜಯ್ ಅವರನ್ನು ಎತ್ತರಕ್ಕೆ ಕೊಂಡೊಯ್ದಿದೆ. ಈಗ ಪಕ್ಕದ ಸಿನೆಮಾರಂಗದಿಂದಲೂ ಪ್ರಶಂಸೆಯನ್ನು ಗಳಿಸಿದ್ದಾರೆ ನಟ. ಈಗ ದುನಿಯಾ ವಿಜಯ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವವರು ತೆಲುಗಿನ ಖ್ಯಾತ ನಟ ಜೂನಿಯರ್ ಎನ್ ಟಿ ಆರ್. ಕನ್ನಡ ನಟನ ಅತಿ ದೊಡ್ಡ ಅಭಿಮಾನಿ ಅವರು ಮತ್ತು ವಿಜಯ್ ಅವರನ್ನು ಶಕ್ತಿಯುತ ನಟನಾಗಿ ಅವರು ಪರಿಗಣಿಸಿದ್ದಾರೆ ಎಂದು ತಿಳಿದುಬಂದಿದೆ. ಇದೆ ವಿಷಯಕ್ಕೆ, ಎನ್ ಟಿ ಆರ್ ತಮ್ಮ ಮುಂದಿನ ಸಿನೆಮಾ ‘ಜೈ ಲವ ಕುಶ’ ಸಿನೆಮಾದಲ್ಲಿ ದುನಿಯಾ ವಿಜಯ್ ಅವರನ್ನು ತೊಡಗಿಸಿಕೊಳ್ಳಲು ಆಸಕ್ತಿ ತೋರಿದ್ದಾರಂತೆ. ಇದರಲ್ಲಿ ವಿಜಯ್ ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ. ವಿಜಯ್ ನಿಕಟವರ್ತಿಯೊಬ್ಬರು ಹೇಳುವಂತೆ “ಮೊದಲಿಗೆ ತೆಲುಗು ಸಿನೆಮಾದಲ್ಲಿ ನಟಿಸಲು ವಿಜಯ್ ಅವರಿಗೆ ಆಸಕ್ತಿ ಇರಲಿಲ್ಲ ಆದರೆ ಎನ್ ಟಿ ಆರ್ ವೈಯಕ್ತಿಕವಾಗಿ ಕರೆ ಮಾಡಿ, ಅವರ ದಕ್ಷತೆಯನ್ನು ಪ್ರಶಂಸಿಸಿ ತಮ್ಮ ಜೊತೆ ನಟಿಸಬೇಕು ಎಂದು ಕೇಳಿಕೊಂಡಾಗ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ವಿಜಯ್ ೧೫ ದಿನಗಳ ಸಮಯ ನೀಡಿದ್ದು, ಎರಡು ಮುಖ್ಯ ಆಕ್ಷನ್ ದೃಶ್ಯಗಳ ಭಾಗವಾಗಲಿದ್ದಾರೆ” ಎನ್ನುತ್ತಾರೆ. ಎನ್ ಟಿ ಆರ್ ವೈಯಕ್ತಿಕವಾಗಿ ವಿಜಯ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲವಾದರೂ, ಅವರ ದಾಯಾದಿಯೊಬ್ಬರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ. “ವಿಜಯ್ ಅವರ ಇತ್ತೀಚಿನ ಚಿತ್ರಗಳಾದ ‘ಮಾಸ್ತಿ ಗುಡಿ’ ಮತ್ತು ‘ಕನಕ’ದ ಕೆಲವು ಸ್ಟಿಲ್ ಗಳನ್ನು ಎನ್ ಟಿ ಆರ್ ನೋಡಿದ್ದಾರೆ ಮತ್ತು ನಟನ ಸಿಕ್ಸ್ ಪ್ಯಾಕ್ ದೇಹ ಅವರನ್ನು ಆಕರ್ಷಿಸಿದೆ ಮತ್ತು ಕೆಲವು ದೃಶ್ಯಗಳಿಗೆ ಅವರೇ ಸೂಕ್ತ ಎಂಬುದು ಎನ್ ಟಿ ಆರ್ ಅಭಿಮತ” ಎಂದು ತಿಳಿಸುತ್ತವೆ ಮೂಲಗಳು. ← ಬಾಲಿವುಡ್ ನತ್ತ ಹಾರಿದ ಐಂದ್ರಿತಾ-ಕಮ್ಮಿಂಗ್ ಬ್ಯಾಕ್ ಎನ್ನುತ್ತಿದ್ದಾರೆ.. ಶಿವಮೊಗ್ಗ ಜೈಲಿನಲ್ಲಿ ‘ದ ವಿಲನ್’ ಚಿತ್ರೀಕರಣ ಪ್ರಾರಂಭ → 303 thoughts on “ದುನಿಯಾ ವಿಜಯ್ ಕುರಿತು ಜೂನಿಯರ್ ಎನ್ ಟಿ ಆರ್ ಮೆಚ್ಚುಗೆ” I just want to say I am just beginner to blogs and honestly loved this blog. Most likely I’m going to bookmark your website . You actually come with excellent articles and reviews. Appreciate it for sharing with us your web-site. November 4, 2017 at 11:26 I was excited to find this website. I want to to thank you for your time for this particularly fantastic read!! I definitely appreciated every little bit of it and I have you bookmarked to see new information on your blog. November 6, 2017 at 19:41 Hello here, just started to be conscious of your wordpress bog through Search engine, and discovered that it’s genuinely entertaining. I will appreciate if you retain these. Just desire to say your article is as surprising. The clarity in your post is simply great and i could assume you are an expert on this subject. Fine with your permission let me to grab your RSS feed to keep updated with forthcoming post. Thanks a million and please carry on the rewarding work. I just want to advise you that I am new to blog posting and pretty much loved your work. Very possible I am going to remember your blog post . You indeed have extraordinary article material. Love it for swapping with us your current internet site webpage IMSCSEO is a singapore SEO Agency constructed by Mike Koosher. The function of IMSCSEO.com is to offer you SEO services and help SG agencies with their Search Engine Optimization to aid them ascend the positions of Google and yahoo. click here at imscsseo.com November 7, 2017 at 05:40 November 7, 2017 at 19:41 Thanks for any other informative web site. The place else may just I get that type of info written in such a perfect approach? I’ve a project that I am just now operating on, and I’ve been at the look out for such information. My wife and i have been now relieved when Jordan could finish up his homework from your precious recommendations he grabbed through your web page. It is now and again perplexing to just always be making a gift of points which usually many others may have been selling. We really fully grasp we need the blog owner to be grateful to for that. The type of explanations you’ve made, the straightforward blog navigation, the relationships you can assist to promote – it is mostly impressive, and it’s letting our son and our family imagine that this subject is satisfying, which is certainly exceedingly essential. Thank you for everything! I do believe all the concepts you have presented for your post. They are very convincing and can certainly work. Nonetheless, the posts are very short for novices. Could you please prolong them a little from next time? Thanks for the post. I simply hope to reveal to you that I am new to blogging and undeniably valued your webpage. Most likely I am probably to save your blog post . You seriously have stunning article material. Appreciate it for discussing with us your current site information IMSCSEO is a singapore SEO Provider created by Mike Koosher. The function of IMSCSEO.com is to produce SEO services and help Singapore merchants with their Search Engine Optimization to assist them progress the positions of Google. Visit us @ imscsseo.com I really desire to share it with you that I am new to online blogging and completely liked your information. Likely I am likely to bookmark your blog post . You undoubtedly have extraordinary article materials. Be Thankful For it for discussing with us your own internet information I and my guys have been reviewing the best tricks located on your web site then the sudden developed an awful suspicion I had not expressed respect to the website owner for those tips. All of the boys happened to be consequently joyful to read through all of them and have in effect sincerely been making the most of those things. I appreciate you for actually being very kind and also for figuring out variety of superb guides most people are really wanting to learn about. My very own sincere regret for not expressing gratitude to you earlier. I think this is one of the so much significant info for me. And i am satisfied reading your article. But wanna observation on some general things, The web site taste is wonderful, the articles is really great : D. Good process, cheers November 9, 2017 at 01:58 Attractive component of content. I just stumbled upon your site and in accession capital to claim that I acquire actually enjoyed account your blog posts. Any way I will be subscribing on your augment or even I achievement you get admission to persistently fast. I would like to express thanks to you for bailing me out of such a matter. As a result of searching throughout the the net and coming across methods which were not beneficial, I figured my entire life was done. Living without the presence of answers to the problems you have solved by way of this write-up is a critical case, as well as the kind which may have negatively damaged my career if I hadn’t come across your web blog. Your personal understanding and kindness in playing with a lot of stuff was precious. I’m not sure what I would’ve done if I hadn’t discovered such a subject like this. It’s possible to now relish my future. Thanks for your time so much for your reliable and sensible guide. I will not hesitate to refer your blog to any individual who needs to have guidelines about this subject. Hiya, I’m really glad I’ve found this information. Today bloggers publish only about gossips and internet and this is really frustrating. A good site with interesting content, this is what I need. Thanks for keeping this site, I’ll be visiting it. Do you do newsletters? Can’t find it. Hiya, I’m really glad I’ve found this information. Nowadays bloggers publish just about gossips and internet and this is actually frustrating. A good web site with interesting content, this is what I need. Thanks for keeping this website, I will be visiting it. Do you do newsletters? Can not find it. What i don’t understood is in fact how you are now not really a lot more smartly-preferred than you may be right now. You’re so intelligent. You already know thus considerably with regards to this subject, produced me individually believe it from a lot of numerous angles. Its like women and men don’t seem to be involved except it is one thing to accomplish with Woman gaga! Your personal stuffs excellent. Always care for it up! hello!,I love your writing very a lot! share we communicate more approximately your article on AOL? I need an expert in this space to solve my problem. Maybe that is you! Looking forward to peer you. I simply couldn’t go away your web site before suggesting that I extremely loved the standard info a person provide in your visitors? Is going to be back often to investigate cross-check new posts Someone essentially assist to make significantly articles I would state. That is the very first time I frequented your web page and to this point? I surprised with the analysis you made to create this actual post amazing. Wonderful job! I¡¦m now not sure the place you’re getting your info, however good topic. I must spend a while studying more or working out more. Thanks for magnificent info I was on the lookout for this information for my mission. I am no longer positive where you are getting your information, but good topic. I must spend some time learning much more or working out more. Thank you for fantastic information I was searching for this information for my mission. I am not certain where you’re getting your information, however good topic. I must spend some time finding out much more or understanding more. Thanks for excellent information I used to be on the lookout for this information for my mission. November 14, 2017 at 06:33 Pretty portion of content. I just stumbled upon your weblog and in accession capital to assert that I acquire actually loved account your blog posts. Anyway I’ll be subscribing on your feeds and even I fulfillment you access consistently quickly. November 17, 2017 at 16:38 I have been exploring for a little bit for any high-quality articles or weblog posts in this sort of space . Exploring in Yahoo I eventually stumbled upon this site. Reading this info So i¡¦m glad to convey that I have an incredibly just right uncanny feeling I came upon exactly what I needed. I so much definitely will make sure to do not overlook this site and give it a glance on a relentless basis. November 18, 2017 at 16:41 I wanted to develop a quick word to thank you for these fantastic solutions you are giving out on this site. My rather long internet investigation has at the end been paid with good quality information to write about with my pals. I ‘d repeat that most of us website visitors are really blessed to exist in a decent network with so many awesome professionals with insightful pointers. I feel truly blessed to have encountered your web site and look forward to really more awesome minutes reading here. Thank you once more for everything. November 18, 2017 at 19:07 November 19, 2017 at 15:59 November 20, 2017 at 13:05 I have to express thanks to you for rescuing me from such a matter. Right after searching throughout the the net and obtaining tricks which are not powerful, I believed my entire life was well over. Living without the solutions to the difficulties you’ve solved by means of your post is a serious case, and ones that might have in a negative way affected my career if I had not come across your web page. Your own competence and kindness in playing with a lot of things was excellent. I’m not sure what I would’ve done if I hadn’t discovered such a subject like this. I can also at this time relish my future. Thanks so much for the specialized and amazing guide. I won’t hesitate to recommend the blog to any person who needs counselling on this subject. Great work! This is the type of information that are supposed to be shared across the internet. Shame on Google for now not positioning this post higher! Come on over and visit my site . Thank you =) I have been surfing online greater than 3 hours these days, but I by no means found any attention-grabbing article like yours. It is pretty value sufficient for me. In my view, if all web owners and bloggers made good content material as you probably did, the net will probably be much more useful than ever before. hi!,I like your writing so so much! percentage we keep up a correspondence more about your post on AOL? I require a specialist on this house to solve my problem. Maybe that is you! Taking a look forward to see you. November 27, 2017 at 05:19 excellent points altogether, you simply received a new reader. What may you recommend about your put up that you made some days ago? Any certain? Hello there! Quick question that’s totally off topic. Do you know how to make your site mobile friendly? My website looks weird when viewing from my iphone. I’m trying to find a theme or plugin that might be able to fix this problem. If you have any recommendations, please share. With thanks! Howdy! This article couldn’t be written much better! Going through this article reminds me of my previous roommate! He always kept talking about this. I am going to forward this article to him. Pretty sure he will have a great read. I appreciate you for sharing! Thanks , I have recently been looking for information about this subject for a while and yours is the greatest I have came upon so far. But, what about the bottom line? Are you positive about the supply? Greetings! Quick question that’s completely off topic. Do you know how to make your site mobile friendly? My site looks weird when browsing from my iphone. I’m trying to find a theme or plugin that might be able to fix this issue. If you have any recommendations, please share. Thank you! I¡¦ve learn several excellent stuff here. Certainly price bookmarking for revisiting. I surprise how a lot effort you place to create this sort of great informative website. December 4, 2017 at 07:41 Hello! Quick question that’s completely off topic. Do you know how to make your site mobile friendly? My website looks weird when viewing from my iphone. I’m trying to find a theme or plugin that might be able to fix this problem. If you have any suggestions, please share. Appreciate it! hey there and thank you for your info – I’ve certainly picked up something new from right here. I did however expertise several technical issues using this site, since I experienced to reload the web site a lot of times previous to I could get it to load correctly. I had been wondering if your web hosting is OK? Not that I’m complaining, but sluggish loading instances times will sometimes affect your placement in google and can damage your quality score if advertising and marketing with Adwords. Well I’m adding this RSS to my email and could look out for much more of your respective fascinating content. Make sure you update this again soon.. You actually make it appear really easy along with your presentation however I to find this topic to be actually one thing which I believe I might by no means understand. It seems too complex and extremely large for me. I am taking a look forward in your next publish, I will try to get the hold of it! I used to be suggested this web site via my cousin. I’m no longer sure whether this publish is written by means of him as no one else recognise such distinctive about my problem. You’re incredible! Thanks! I believe this is one of the so much important information for me. And i am happy reading your article. But should statement on few common issues, The website style is ideal, the articles is in reality nice : D. Good process, cheers December 8, 2017 at 07:05 I¡¦m no longer certain where you’re getting your info, but good topic. I must spend a while finding out more or working out more. Thank you for excellent information I used to be in search of this info for my mission. December 12, 2017 at 21:52 December 12, 2017 at 23:47 An impressive share! I’ve just forwarded this onto a co-worker who had been doing a little research on this. And he actually ordered me breakfast simply because I stumbled upon it for him… lol. So let me reword this…. Thanks for the meal!! But yeah, thanx for spending the time to talk about this matter here on your blog. December 13, 2017 at 01:31 I absolutely love your blog and find almost all of your post’s to be precisely what I’m looking for. Does one offer guest writers to write content in your case? I wouldn’t mind creating a post or elaborating on a number of the subjects you write concerning here. Again, awesome website! An impressive share! I’ve just forwarded this onto a friend who was doing a little research on this. And he actually ordered me dinner because I discovered it for him… lol. So allow me to reword this…. Thanks for the meal!! But yeah, thanks for spending some time to talk about this topic here on your blog. December 14, 2017 at 04:46 I have to convey my affection for your kind-heartedness for those people that should have help on that situation. Your real dedication to getting the message up and down became exceedingly useful and have continuously made girls just like me to attain their dreams. Your amazing valuable tutorial denotes this much to me and further more to my office colleagues. Regards; from each one of us. I’m also commenting to let you understand what a terrific encounter my child undergone browsing the blog. She came to find a lot of details, including how it is like to have an incredible teaching style to let many more smoothly have an understanding of a number of problematic topics. You undoubtedly surpassed my desires. I appreciate you for displaying the essential, healthy, informative as well as unique guidance on the topic to Emily. December 16, 2017 at 05:12 I like the helpful info you supply to your articles. I’ll bookmark your weblog and check again here frequently. I’m slightly sure I’ll learn many new stuff proper here! Good luck for the next! Thank you so much for providing individuals with such a pleasant chance to discover important secrets from here. It is always so kind and also full of fun for me and my office fellow workers to search your blog at the least three times a week to read through the new guidance you have got. And of course, I’m usually pleased for the perfect things served by you. Some 4 areas in this article are ultimately the very best we’ve had. I have been surfing on-line more than three hours these days, but I never discovered any interesting article like yours. It is pretty value sufficient for me. In my opinion, if all website owners and bloggers made excellent content material as you probably did, the internet will be a lot more useful than ever before. Hello there, I do believe your site could possibly be having web browser compatibility issues. When I take a look at your web site in Safari, it looks fine however, when opening in Internet Explorer, it has some overlapping issues. I just wanted to provide you with a quick heads up! Aside from that, wonderful blog! you’re in point of fact a just right webmaster. The site loading speed is incredible. It sort of feels that you’re doing any distinctive trick. Furthermore, The contents are masterpiece. you have performed a magnificent task in this matter! What i do not realize is in reality how you are now not really much more well-liked than you may be now. You are very intelligent. You understand therefore considerably when it comes to this subject, produced me in my view consider it from a lot of various angles. Its like women and men aren’t interested until it is one thing to do with Lady gaga! Your individual stuffs nice. Always take care of it up! December 21, 2017 at 06:56 I’m writing to let you understand of the extraordinary encounter my princess developed studying your site. She even learned a lot of pieces, with the inclusion of what it is like to possess a wonderful coaching character to have folks with no trouble learn selected grueling subject areas. You actually surpassed my expectations. Thanks for showing these good, safe, edifying not to mention fun tips about that topic to Tanya. Hi there very nice web site!! Guy .. Excellent .. Superb .. I’ll bookmark your site and take the feeds additionally¡KI am glad to seek out a lot of helpful information right here within the post, we want work out extra techniques in this regard, thanks for sharing. . . . . . Thanks for every other informative web site. Where else may I am getting that type of information written in such a perfect way? I have a venture that I’m simply now operating on, and I’ve been at the look out for such information. Oh my goodness! Amazing article dude! Many thanks, However I am experiencing issues with your RSS. I don’t understand the reason why I am unable to subscribe to it. Is there anybody having the same RSS problems? Anyone who knows the answer can you kindly respond? Thanx!! January 4, 2018 at 15:13 Hi there! I understand this is somewhat off-topic however I had to ask. Does running a well-established blog like yours take a lot of work? I am completely new to blogging however I do write in my journal on a daily basis. I’d like to start a blog so I can share my own experience and thoughts online. Please let me know if you have any kind of ideas or tips for brand new aspiring bloggers. Appreciate it! I don’t even know the way I finished up here, however I thought this post used to be great. I don’t understand who you might be but definitely you are going to a well-known blogger should you aren’t already. Cheers! I intended to send you one very little note in order to give many thanks again relating to the stunning knowledge you’ve documented here. It is really particularly generous with you to grant easily exactly what some people could possibly have supplied for an e-book to help with making some bucks for themselves, most importantly given that you could possibly have done it in the event you wanted. These principles likewise served to become a good way to fully grasp some people have similar passion like my own to grasp good deal more with reference to this matter. I am certain there are some more enjoyable instances up front for folks who see your site. Howdy would you mind letting me know which web host you’re utilizing? I’ve loaded your blog in 3 completely different web browsers and I must say this blog loads a lot faster then most. Can you recommend a good web hosting provider at a fair price? Thank you, I appreciate it! Its like you read my mind! You seem to understand a lot approximately this, such as you wrote the guide in it or something. I think that you just can do with a few p.c. to drive the message house a little bit, however other than that, that is excellent blog. An excellent read. I will certainly be back. I don’t even understand how I finished up here, however I believed this post used to be good. I don’t know who you might be however certainly you are going to a well-known blogger should you are not already. Cheers! great issues altogether, you just gained a emblem new reader. What would you suggest about your post that you just made some days in the past? Any certain? I do not even know the way I finished up right here, but I assumed this post was good. I do not realize who you are but definitely you are going to a well-known blogger if you are not already. Cheers! Its like you learn my thoughts! You seem to grasp a lot approximately this, like you wrote the e book in it or something. I think that you simply can do with a few percent to drive the message house a little bit, but other than that, this is excellent blog. A great read. I’ll certainly be back. Oh my goodness! Awesome article dude! Thank you, However I am experiencing problems with your RSS. I don’t know why I cannot subscribe to it. Is there anybody getting similar RSS problems? Anyone that knows the solution can you kindly respond? Thanks!! Oh my goodness! Impressive article dude! Thanks, However I am encountering difficulties with your RSS. I don’t know the reason why I am unable to join it. Is there anyone else getting identical RSS problems? Anyone who knows the solution will you kindly respond? Thanx!! Somebody essentially lend a hand to make severely articles I’d state. This is the first time I frequented your web page and so far? I surprised with the research you made to create this particular publish amazing. Excellent process! Howdy! Someone in my Myspace group shared this site with us so I came to take a look. I’m definitely loving the information. I’m book-marking and will be tweeting this to my followers! Wonderful blog and superb design and style. January 16, 2018 at 07:16 January 18, 2018 at 03:23 Hey! Someone in my Myspace group shared this website with us so I came to give it a look. I’m definitely enjoying the information. I’m book-marking and will be tweeting this to my followers! Superb blog and wonderful style and design. Thanks , I’ve recently been looking for information about this topic for a long time and yours is the greatest I’ve came upon till now. However, what concerning the bottom line? Are you sure in regards to the supply? After checking out a number of the blog articles on your web site, I really appreciate your technique of writing a blog. I bookmarked it to my bookmark webpage list and will be checking back in the near future. Take a look at my web site as well and let me know how you feel. Howdy! Someone in my Facebook group shared this website with us so I came to look it over. I’m definitely loving the information. I’m bookmarking and will be tweeting this to my followers! Superb blog and brilliant style and design. I do not know whether it’s just me or if everyone else experiencing problems with your blog. It looks like some of the text within your content are running off the screen. Can somebody else please provide feedback and let me know if this is happening to them as well? This may be a issue with my web browser because I’ve had this happen before. Kudos Hi there just wanted to give you a quick heads up. The text in your content seem to be running off the screen in Ie. I’m not sure if this is a formatting issue or something to do with browser compatibility but I figured I’d post to let you know. The design look great though! Hope you get the problem solved soon. Thanks I do not know if it’s just me or if perhaps everybody else experiencing problems with your blog. It appears like some of the written text in your content are running off the screen. Can someone else please comment and let me know if this is happening to them as well? This could be a problem with my internet browser because I’ve had this happen previously. Thanks I just could not leave your web site prior to suggesting that I really enjoyed the usual info a person supply to your visitors? Is gonna be back steadily in order to inspect new posts Hey! Someone in my Facebook group shared this site with us so I came to give it a look. I’m definitely enjoying the information. I’m bookmarking and will be tweeting this to my followers! Outstanding blog and superb design and style. January 25, 2018 at 23:03 Hi there! Someone in my Facebook group shared this website with us so I came to check it out. I’m definitely enjoying the information. I’m book-marking and will be tweeting this to my followers! Exceptional blog and fantastic design. January 27, 2018 at 03:18 I do not know if it’s just me or if perhaps everyone else encountering problems with your website. It seems like some of the text in your content are running off the screen. Can someone else please provide feedback and let me know if this is happening to them as well? This may be a issue with my browser because I’ve had this happen previously. Cheers Hmm it seems like your site ate my first comment (it was super long) so I guess I’ll just sum it up what I had written and say, I’m thoroughly enjoying your blog. I as well am an aspiring blog writer but I’m still new to the whole thing. Do you have any recommendations for novice blog writers? I’d definitely appreciate it. I just want to say I am new to blogging and site-building and definitely enjoyed this page. Almost certainly I’m likely to bookmark your blog post . You surely have really good articles. Thank you for sharing with us your web-site. February 3, 2018 at 10:04 I don’t know if it’s just me or if perhaps everyone else experiencing problems with your website. It seems like some of the written text on your posts are running off the screen. Can somebody else please comment and let me know if this is happening to them too? This could be a problem with my web browser because I’ve had this happen previously. Thanks February 3, 2018 at 16:44 you are truly a excellent webmaster. The website loading pace is incredible. It seems that you are doing any unique trick. Moreover, The contents are masterwork. you have performed a excellent activity on this topic! With thanks for being the advisor on this area. I really liked the article so much and most of all I appreciated reading the method that you worked on the problems I considered to be dubious. You are generally pretty kind to readers take delight in me and facilitate me into my living. Thank you very much. Hi! Someone in my Myspace group shared this site with us so I came to take a look. I’m definitely enjoying the information. I’m book-marking and will be tweeting this to my followers! Exceptional blog and amazing design and style. you’re in point of fact a good webmaster. The website loading pace is amazing. It sort of feels that you are doing any distinctive trick. In addition, The contents are masterpiece. you’ve done a fantastic process on this matter! you are in reality a just right webmaster. The web site loading speed is amazing. It kind of feels that you’re doing any unique trick. In addition, The contents are masterpiece. you’ve performed a great job on this matter! I¡¦ve learn some excellent stuff here. Definitely price bookmarking for revisiting. I wonder how much effort you set to create this type of excellent informative web site. You really make it appear really easy together with your presentation however I in finding this topic to be actually something that I believe I’d never understand. It seems too complicated and very vast for me. I am taking a look ahead for your next post, I will try to get the grasp of it! You actually make it appear really easy together with your presentation but I find this topic to be really something that I believe I would by no means understand. It kind of feels too complicated and extremely large for me. I’m looking ahead on your subsequent publish, I’ll attempt to get the hold of it! Hi there! Someone in my Facebook group shared this site with us so I came to check it out. I’m definitely loving the information. I’m book-marking and will be tweeting this to my followers! Outstanding blog and brilliant design and style. February 12, 2018 at 00:55 Thank you for another informative website. Where else could I get that kind of info written in such an ideal means? I’ve a undertaking that I am simply now running on, and I have been at the look out for such information. Hello, Neat post. There’s an issue together with your site in internet explorer, could check this¡K IE nonetheless is the marketplace chief and a big portion of people will leave out your wonderful writing due to this problem. I’ve been browsing on-line more than 3 hours nowadays, yet I by no means discovered any fascinating article like yours. It is pretty value enough for me. In my view, if all webmasters and bloggers made good content material as you did, the internet will be a lot more useful than ever before. Thanks for the marvelous posting! I genuinely enjoyed reading it, you can be a great author. I will remember to bookmark your blog and will often come back sometime soon. I want to encourage you to continue your great work, have a nice day! Thank you so much for being the master for this part. I loved the article so much and most of all I loved reading the way you taken care of the problems I widely known as dubious. You are usually fairly kind to viewer take delight in me and facilitate me at my living. Many thanks. hello!,I really like your writing so so much! proportion we keep in touch extra about your post on AOL? I require a specialist in this house to solve my problem. Maybe that’s you! Having a look forward to peer you. February 16, 2018 at 23:41 Its such as you read my thoughts! You seem to understand so much approximately this, such as you wrote the e book in it or something. I think that you can do with a few percent to power the message house a little bit, but other than that, that is magnificent blog. A great read. I will definitely be back. Hi there! This article could not be written any better! Going through this post reminds me of my previous roommate! He constantly kept preaching about this. I’ll send this article to him. Fairly certain he’ll have a good read. I appreciate you for sharing! Hi there! This post couldn’t be written much better! Reading through this article reminds me of my previous roommate! He continually kept talking about this. I’ll send this post to him. Pretty sure he’ll have a very good read. Thanks for sharing! February 20, 2018 at 05:22
"2018-02-20T17:03:19"
http://kannada.simplycinema.in/news/%E0%B2%A6%E0%B3%81%E0%B2%A8%E0%B2%BF%E0%B2%AF%E0%B2%BE-%E0%B2%B5%E0%B2%BF%E0%B2%9C%E0%B2%AF%E0%B3%8D-%E0%B2%95%E0%B3%81%E0%B2%B0%E0%B2%BF%E0%B2%A4%E0%B3%81-%E0%B2%9C%E0%B3%82%E0%B2%A8%E0%B2%BF/
ಪ್ರಯಾಣಿಕ: Latest ಪ್ರಯಾಣಿಕ News & Updates, Photos & Images, Videos | Vijaya Karnataka August,18,2019, 05:46:36 ಕೆಎಸ್ಸಾರ್ಟಿಸಿ ಸಿಬ್ಬಂದಿ ಪ್ರಯಾಣಿಕರ ಪ್ರೀತಿ ಗಳಿಸಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸಾರ್ವಜನಿಕರಲ್ಲಿ ಪ್ರೀತಿಯಿಂದ ವರ್ತಿಸಬೇಕು. ಕರ್ತವ್ಯದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಂಡಲ್ಲಿ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್‌ ಮುಖ್ಯಾಧಿಕಾರಿ ಶೃತಿ ಹೇಳಿದರು. ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಮಾರ್ಗ ಸಾಮಾನ್ಯ ರೈಲು ಸಂಚಾರ ಆರಂಭ Jul 26, 2019, 04.07 PM ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಮಾರ್ಗದಲ್ಲಿ ಕುಸಿಯುವ ಹಂತದಲ್ಲಿರುವ ಬಂಡೆ ಹಾಗೂ ಮಣ್ಣು ತೆರವು ಕಾರ‍್ಯ ಗುರುವಾರ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ಸ್ಥಗಿತಗೊಂಡಿರುವ ಸಾಮಾನ್ಯ ಪ್ರಯಾಣಿಕ ರೈಲು ಸೇವೆಗಳು ಮತ್ತೆ ಆರಂಭವಾಗಿದೆ ಕಣ್ಣೂರು ವಿಮಾನ ನಿಲ್ದಾಣದಿಂದ 2.8 ಕೆಜಿ ಚಿನ್ನ ವಶ ಕತ್ತಾರ್‌ನಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನೊಬ್ಬನಿಂದ 2.8 ಕೆಜಿ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಟೋರಿಕ್ಷಾಕ್ಕಾಗಿ ಮೊಬೈಲ್‌ ಫೋನ್‌ ಆಪ್ಲಿಕೇಶನ್‌ ಇನ್ನು ಆಟೋರಿಕ್ಷಾ ಲಭಿಸಲು ಪರದಾಟಬೆಕಾಗಿಲ್ಲ. ಮೊಬೈಲ್‌ ಫೋನ್‌ನಲ್ಲಿ ಒಂದೇ ಕ್ಲಿಕ್‌ ಮೂಲಕ ಆಟೋರಿಕ್ಷಾ ಗ್ರಾಹಕರ ಮುಂದಿರುತ್ತದೆ. ಅಪಘಾತದಿಂದ ಎಚ್ಚೆತ್ತ ಸಾರಿಗೆ ಅಧಿಕಾರಿಗಳು ಮುರಗಮಲ್ಲ ರಸ್ತೆಯ ಬಾರ್ಲಹಳ್ಳಿ ಗೇಟ್‌ ಬಳಿ ನಡೆದ ಭೀಕರ ಅಪಘಾತದಿಂದ 11 ಜನ ಮೃತಪಟ್ಟ ಘಟನೆ ನಡೆಯುತ್ತಿದಂತೆ ಎಚ್ಚೆತ್ತುಕೊಂಡ ಸಾರಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ನಾಲ್ಕು ತಂಡ ರಚಿಸಿಕೊಂಡು ತಾಲೂಕಿನಾದ್ಯಂತ ಪರವಾನಗಿ ಇಲ್ಲದೆ ಸಂಚರಿಸುತ್ತಿದ್ದ ಖಾಸಗಿ ಬಸ್‌ ಮತ್ತು ಶೇರಿಂಗ್‌ ಆಟೋ, ಟಾಟಾ ಏಸ್‌ ವಾಹನಗಳನ್ನು ತಪಾಸಣೆಗೆ ಮುಂದಾಗಿದ್ದಾರೆ.
"2019-08-18T00:16:37"
https://vijaykarnataka.indiatimes.com/topics/%E0%B2%AA%E0%B3%8D%E0%B2%B0%E0%B2%AF%E0%B2%BE%E0%B2%A3%E0%B2%BF%E0%B2%95
ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? | Digital Kannada Home ಸುದ್ದಿಸಂತೆ ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? ಜನವರಿಯಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್, ಸಚಿವ ಸಂಪುಟದಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳೇನು? ಬಡವರು ಮತ್ತು ದುಡಿಯುವ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಉಪಹಾರ ಹಾಗೂ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಮಹತ್ವಾಕಾಂಕ್ಷಿ ಯೋಜನೆಯನ್ನು ಹೊಸ ವರ್ಷದ ದಿನದಿಂದ ಇಡೀ ರಾಜ್ಯಾದ್ಯಂತ ಆರಂಭಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಹೇಳಿದಿಷ್ಟು… ‘ರಾಜ್ಯದ ಎಲ್ಲಾ ಜಿಲ್ಲಾ ತಾಲ್ಲೂಕು ಕೇಂದ್ರಗಳ ಆಸ್ಪತ್ರೆ, ಬಸ್ ನಿಲ್ದಾಣಗಳ ಸಮೀಪ ಇಂದಿರಾ ಕ್ಯಾಂಟೀನ್‍ಗಳನ್ನು ಆರಂಭಿಸಲು ₹ 185 ಕೋಟಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 171 ಪ್ರದೇಶಗಳ 246 ಕೇಂದ್ರಗಳಲ್ಲಿ ಜನವರಿ 1, 2018ರಿಂದಲೇ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. ಕ್ಯಾಂಟೀನ್ ಮೂಲಕ ಪ್ರತಿನಿತ್ಯ ಒಂದು ಲಕ್ಷ ಮಂದಿ ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ, ಇದಕ್ಕಾಗಿ ಸರ್ಕಾರ ಮಾಸಿಕ ₹ 9 ಕೋಟಿ ವೆಚ್ಚ ಮಾಡಲಿದೆ. ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಾಪಿಸಲು ನವೆಂಬರ್ 17 ರೊಳಗೆ ಸ್ಥಳ ಗುರುತಿಸಬೇಕು. ಡಿಸೆಂಬರ್ 17 ರೊಳಗೆ ಕಟ್ಟಡ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.’ ಉಳಿದಂತೆ ಸಚಿವ ಸಂಪುಟಸಭೆಯಲ್ಲಿ ತೆಗೆದುಕೊಂಡ ಇತರೆ ಪ್ರಮುಖ ನಿರ್ಧಾರಗಳ ಬಗ್ಗೆ ಸಚಿವರು ಹೇಳಿದಿಷ್ಟು ಹೀಗಿವೆ… ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ನವೆಂಬರ್ 13ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ವಿಧಾನಸೌಧದ ವಜ್ರ ಮಹೋತ್ಸವ ಆಚರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 25 ರಂದು ವಿಶೇಷ ಅಧಿವೇಶನ ನಡೆಸಲಾಗುವುದು. ಈ ಸಂಬಂಧ ವಿಧಾನಮಂಡಲದ ಕಾರ್ಯಾಲಯದಿಂದ ಮಾಹಿತಿ ಬಂದ ನಂತರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಅಧಿವೇಶನ ಕರೆಯುವ ತೀರ್ಮಾನ ಕೈಗೊಳ್ಳಲಾಗುವುದು. ಡಿಸೆಂಬರ್ ತಿಂಗಳಿನಿಂದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಉಚಿತವಾಗಿ ಎರಡು ಗ್ಯಾಸ್ ಸಿಲಿಂಡರ್, ಸ್ಟೌ, ಎರಡು ರೀಫಿಲ್ ಹಾಗೂ ಎರಡು ಬರ್ನರ್ ಗಳನ್ನು ಒದಗಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ 1137 ಕೋಟಿ ರೂ ವೆಚ್ಚವಾಗಲಿದೆ. ರಾಜ್ಯದಲ್ಲಿ ಅನಿಲ ಸಂಪರ್ಕ ಪಡೆಯದ ಕುಟುಂಬಗಳ ಸಂಖ್ಯೆ 28 ಲಕ್ಷವಿದೆ ಎಂದು ಅಂದಾಜಿಸಲಾಗಿದ್ದು ಈ ಪೈಕಿ ಎಂಟು ಲಕ್ಷ ಕುಟುಂಬಗಳು ಕೇಂದ್ರದ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳನ್ನು ಪಡೆಯಲಿವೆ. ಅವುಗಳನ್ನು ಹೊರತುಪಡಿಸಿ ಇಪ್ಪತ್ತು ಲಕ್ಷ ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ. ಮುಂಬರುವ ಮಾರ್ಚ್ ಒಳಗಾಗಿ ಹತ್ತು ಲಕ್ಷ ಕುಟುಂಬಗಳಿಗೆ ಯೋಜನೆಯ ಅನುಕೂಲ ಮಾಡಿಕೊಡಲಾಗುವುದು ಎಂದರು. ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಲೀಟರ್ ಸೀಮೆಎಣ್ಣೆ ಪಡೆಯುತ್ತಿರುವವರು ಆ ಸೌಲಭ್ಯವನ್ನು ಹಿಂತಿರುಗಿಸಿದರೆ ಅವರಿಗೆ ಪುನರ್ ಬೆಳಕು ಯೋಜನೆಯಡಿ ಎಲ್‍ಇಡಿ ಬಲ್ಬ್ ನೀಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು 10 ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಪ್ಲೊಮಾ ಇನ್ ನ್ಯಾಷನಲ್ ಬೋರ್ಡ್ ಕೋರ್ಸ್‍ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಚಿತ್ರದುರ್ಗ, ಕೋಲಾರ, ತುಮಕೂರು, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಕಲಬುರಗಿ ಹಾಗೂ ವಿಜಯಪುರ ಜಿಲ್ಲಾಸ್ಪತ್ರೆಗಳಲ್ಲಿ ಮತ್ತು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಬಿ.ಬಿ.ಎಸ್. ವೈದ್ಯರಿಗೆ ಡಿ.ಎನ್.ಬಿ (ಡಿಪ್ಲೋಮಾ ಇನ್ ನ್ಯಾಷನಲ್ ಬೋರ್ಡ್) ಕೋರ್ಸ್‍ಗಳನ್ನು ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಆರೋಗ್ಯ ಕವಚ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ 108 ಅಂಬುಲೆನ್ಸ್ ಗಳು ಸುಸ್ಥಿತಿಯಲ್ಲಿಲ್ಲದೇ ಇರುವುದರಿಂದ 95 ವೆಂಟಿಲೇಟರ್ ಸೌಲಭ್ಯ ಇರುವ ಅಂಬುಲೆನ್ಸ್‍ಗಳು ಹಾಗೂ 276 ಜೀವರಕ್ಷಕ ಆಂಬುಲೆನ್ಸ್ ಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸುಮಾರು ₹ 61 ಕೋಟಿ ವೆಚ್ಚ ಮಾಡಲಾಗುವುದು, ಆ ಮೂಲಕ 108 ಸೇವೆಯನ್ನು ಉತ್ತಮಪಡಿಸಲಾಗುವುದು ಎಂದರು. Previous articleಜಾರ್ಜ್ ಅವರೇ ಮಳೆಗೆ ಕೊಡೆ ಹಿಡಿಬೇಡಿ… ರಸ್ತೆ ಗುಂಡಿ ಮುಚ್ಚಿ ಪ್ರಾಣ ಉಳಿಸಿ ಸಾಕು Next articleದೀಪಾವಳಿ ಪ್ರಯುಕ್ತ ಜಿಯೋನಿಂದ ಗ್ರಾಯಕರಿಗೆ ಮತ್ತೆ ಧನ್ ಧನಾ ಧನ್! ಏನಿದು ಹೊಸ ಆಫರ್?
"2018-03-21T22:37:48"
https://digitalkannada.com/2017/10/11/indira-canteen-all-districts-and-cabinet-meeting-decisions/
2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿ ಪ್ರಕಟಣೆ - MadGuy The Government Job App Home Kannada - Current Affairs International News 2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿ ಪ್ರಕಟಣೆ 2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿ ಪ್ರಕಟಣೆ ಡಬ್ಲ್ಯೂಎಚ್‌ಒ ಬಿಡುಗಡೆ ಮಾಡಿದ 20 ನಗರಗಳಲ್ಲಿ ಭಾರತದ 14 ನಗರಗಳ ಹೆಸರು ಪಟ್ಟಿಯಲ್ಲಿರುವುದು ಆತಂಕಕ್ಕೀಡುಮಾಡಿದ್ದು, ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು ಹೇಳಿದೆ. ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಯು 2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ರಾಷ್ಟ್ರ ರಾಜಧಾನಿ ದೆಹಲಿ, ವಾರಾಣಾಸಿ ನಗರಗಳ ಹೆಸರು ಸೇರಿದೆ. ಡಬ್ಲ್ಯೂಎಚ್‌ಒ ಬಿಡುಗಡೆ ಮಾಡಿದ 20 ನಗರಗಳಲ್ಲಿ ಭಾರತದ 14 ನಗರಗಳ ಹೆಸರು ಪಟ್ಟಿಯಲ್ಲಿರುವುದು ಆತಂಕಕ್ಕೀಡುಮಾಡಿದ್ದು, 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ (particulate matter) ಪ್ರಮಾಣ ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿದೆ. ಮೊದಲ ಸ್ಥಾನದಲ್ಲಿ ದೆಹಲಿ, ಕೈರೋ, ಢಾಕಾ, ಮುಂಬೈ, ಬೀಜಿಂಗ್ ಕ್ರಮವಾಗಿ ಐದು ಸ್ಥಾನಗಳನ್ನು ಪಡೆದಿದೆ. ಭಾರತದ ಕಾನ್ಪುರ, ಫರಿದಾಬಾದ್, ಗಯಾ, ಪಟ್ನಾ, ಆಗ್ರಾ, ಮುಜಾಫರ್‌ನಗರ, ಶ್ರೀನಗರ, ಗುರುಗ್ರಾಮ, ಜೈಪುರ, ಪಟಿಯಾಲ, ಜೋಧ್‌ಪುರ, ಕುವೈತಿನ ಅಲಿಸುಬಾಹ್–ಅಲಿ ಸಲೀಮ್ ಹಾಗೂ ಚೀನಾ, ಮಂಗೋಲಿಯಾದ ಕೆಲವು ನಗರಗಳು ಹೆಚ್ಚು ಮಾಲಿನ್ಯ ನಗರಗಳು ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಈ ಎಲ್ಲಾ ನಗರಗಳ ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಿದೆ. 2016 ವರದಿಯ ಪ್ರಕಾರ ಭಾರತದ ಒಟ್ಟು 13 ನಗರಗಳಲ್ಲಿ ವಿಷಾನಿಲ ಕಣಗಳ ಮಟ್ಟ 10ಕ್ಕೂ ಹೆಚ್ಚಿದೆ. ಪ್ರಪಂಚದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರತಿವರ್ಷ 70 ಲಕ್ಷ ಮಂದಿ ಶ್ವಾಸಕೋಶ ಕ್ಯಾನ್ಸರ್, ಪಾರ್ಶ್ವಾವಾಯು, ಹೃದಯಾಘಾತ ಹೀಗೆ ಅನೇಕ ಕಾಯಿಲೆಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದೆ. ವಾಯುಮಾಲಿನ್ಯ ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿರುವವ ಪ್ರಮಾಣ ಕೆಳ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಲ್ಲಿ ಹೆಚ್ಚಾಗಿವೆ. ಅದರಲ್ಲೂ ಏಷ್ಯಾದಲ್ಲಿನ ಭಾರತ, ಆಫ್ರಿಕಾ ರಾಷ್ಟ್ರಗಳು ವಾಯುಮಾಲಿನ್ಯದ ದುಷ್ಪಪರಿಣಾಮಗಳನ್ನು ಎದುರಿಸುತ್ತಿವೆ ಎಂದು ವರದಿಯಲ್ಲಿದೆ.
"2019-06-17T03:59:51"
https://blog.madguy.co/2016%E0%B2%B0-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%A6-%E0%B2%AE%E0%B2%BE%E0%B2%B2%E0%B2%BF%E0%B2%A8%E0%B3%8D%E0%B2%AF-%E0%B2%A8%E0%B2%97%E0%B2%B0%E0%B2%97%E0%B2%B3-%E0%B2%AA%E0%B2%9F/
ರೈತರು-ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ ಸಸ್ಯ ಸಂತೆ | Udayavani – ಉದಯವಾಣಿ ರೈತರು-ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ ಸಸ್ಯ ಸಂತೆ Team Udayavani, Jun 13, 2019, 4:04 PM IST ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸಸ್ಯ ಸಂತೆ. ಕೊಪ್ಪಳ: ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‌ ಆಯೋಜಿಸಿರುವ ಸಸ್ಯ ಸಂತೆ ರೈತರನ್ನು ಹಾಗೂ ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ. ತೋಟಗಾರಿಕೆ ಸಸ್ಯಗಾರಗಳಲ್ಲಿ ವೈಜ್ಞಾನಿಕವಾಗಿ ಉತ್ಪಾದಿಸಿದ ಮತ್ತು ನುರಿತ ಅಧಿಕಾರಿಗಳಿಂದ ದೃಢೀಕರಿಸಿದ ಅನೇಕ ಸಸಿ, ಕಸಿಗಳ-ಹಣ್ಣಿನ ಸಸಿಗಳು, ಹೂವು, ತರಕಾರಿ ಅಷ್ಟೇ ಅಲ್ಲದೇ ಅಲಂಕಾರಿಕ ಸಸಿಗಳು, ತೆಂಗಿನ ಸಸಿಗಳು ಅಲ್ಲದೇ ತೋಟಗಾರಿಕೆಯಲ್ಲಿ ಬಳಸಲ್ಪಡುವ ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರಗಳು ಮತ್ತು ಕೃಷಿ ಸಲಕರಣೆ, ಬೀಜಗಳು, ಇಲಾಖೆಯ ಯೋಗ್ಯ ದರದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಸುವುದು. ಅಲ್ಲದೇ ರೈತರಿಗೆ ತೋಟಗಾರಿಕೆ ಬಗ್ಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಸಸ್ಯಸಂತೆಯನ್ನು ಆಯೋಜಿಸಲಾಗಿದೆ. ಹವ್ಯಾಸಿ ತೋಟಗಾರರಿಗೆ ಮತ್ತು ತೋಟಗಾರಿಕೆಯಲ್ಲಿ ಆಸಕ್ತಿಯುಳ್ಳವರಿಗೆ ಮತ್ತು ವಿಷಮುಕ್ತ ಆಹಾರ ಉತ್ಪಾದಿಸುವ ಬಗ್ಗೆ ಕೈ ತೋಟ, ತಾರಸಿ ತೋಟ ಅಲ್ಲದೇ ತೋಟಗಾರಿಕೆಗೆ ಸಂಬಂಧಿಸಿದ ಉಪಕಸುಬುಗಳಾದ ಜೇನು ಸಾಕಾಣೆ, ಅಣಬೆ ಕೃಷಿಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ತಜ್ಞರಿಂದ ಮಾಹಿತಿ ನೀಡಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನಗಳಾದ ಜಲಕೃಷಿ, ಹನಿ ನೀರಾವರಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪರಿಸರ ಸ್ವಚ್ಛಗೊಳಿಸುವ ಹಾಗೂ ನೀರಿನ ಸದ್ಬಳಕೆ ಮಾಡುವುದರ ಮೂಲಕ ರೋಗಗಳನ್ನು ತಡೆಗಟ್ಟುವ ವಿಧಾನಗಳನ್ನು ಸಸ್ಯ ಸಂತೆಯಲ್ಲಿ ಪ್ರಾತ್ಯಕ್ಷಿತೆ ಮೂಲಕ ತೋರಿಸಲಾಗುತ್ತಿದೆ. ಸಸ್ಯ ಸಂತೆಯಲ್ಲಿ ಹಣ್ಣಿನ ಬೆಳೆಗಳಾದ ವಿವಿಧ ತಳಿ ಮಾವು, ನಿಂಬೆ, ಪೇರಲ, ಅಂಜೂರ, ನೇರಳೆ, ಕರಿಬೇವು, ನುಗ್ಗೆ, ತೆಂಗು ಅಲ್ಲದೇ ಹೂವಿನ ಬೆಳೆಗಳಾದ ಅನೇಕ ಬಣ್ಣ ಬಣ್ಣದ ಗುಲಾಬಿ, ದಾಸವಾಳ, ಮಲ್ಲಿಗೆ, ಪಾರಿಜಾತ ಮತ್ತು ಅಲಂಕಾರಿಕ ಗಿಡಗಳಾದ ಕ್ರೋಟನ್ಸ್‌, ಸೈಪ್ರಸ್‌, ಕ್ಯಾಕ್ಟಸ್‌, ಬೋನ್ಸಾಯ್‌ ಮಾದರಿ ಗಿಡಗಳು ಯೋಗ್ಯ ದರದಲ್ಲಿ ದೊರೆಯುತ್ತವೆ. ಇದಲ್ಲದೇ ಕೊಳವೆ ಬಾವಿ ಜಲ ಮರುಪೂರಣದ ಮಾದರಿ, ನಿರಂತರ ಆದಾಯಕ್ಕೆ ತೋಟಗಾರಿಕೆ ಬಗ್ಗೆ ಮಾಹಿತಿ ಅಲ್ಲದೇ ರೈತರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರೈತರಿಗೆ ತೋಟಗಾರಿಕೆಗೆ ಸಂಬಂಧಿಸಿದ ಅನೇಕ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಸ್ಯ ಸಂತೆಯಲ್ಲಿ 3 ದಿನಗಳಿಂದ 4ರಿಂದ 05 ಲಕ್ಷದಷ್ಟು ವಹಿವಾಟು ಆಗಿದೆ. ತೆಂಗಿನ ಸಸಿಗಳು ಸುಮಾರು 1.50 ಲಕ್ಷದಷ್ಟು ಮಾರಾಟವಾಗಿವೆ. ರೈತರು, ಸಾರ್ವಜನಿಕರು ತಮಗೆ ಬೇಕಾದ ಅನೇಕ ಹಣ್ಣಿನ ಸಸಿಗಳು, ಹೂವಿನ ಸಸಿಗಳು, ಅಲಂಕಾರಿಕ ಗಿಡಗಳನ್ನು ಕಡಿಮೆ ದರದಲ್ಲಿ ಖರೀದಿಸಿರುತ್ತಾರೆ. ಈಗಾಗಲೇ 5 ಲಕ್ಷಕ್ಕೂ ಮೀರಿ ಮುಂಗಡವಾಗಿ ವಿವಿಧ ಸಸಿಗಳನ್ನು ಕಾಯ್ದಿರಿಸಿದ್ದಾರೆ. ಒಟ್ಟು 10 ಲಕ್ಷದಷ್ಟು ತರಕಾರಿ, ಹೂವಿನ ಮತ್ತು ಇತರೆ ಸಸಿಗಳನ್ನು ಉತ್ಪಾದಿಸಿ ಪೂರೈಸಲು ರೈತರು ಮತ್ತು ಗ್ರಾಹಕರು ಬೇಡಿಕೆ ಸಲ್ಲಿಸಿದ್ದು, ಇಲಾಖೆಯು ಅವುಗಳ ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದೆ. ರಾಜಕಾರಣಿ ಮೀರಿಸುತ್ತಿದ್ದಾರೆ ನೌಕರರು
"2019-10-21T16:01:02"
https://www.udayavani.com/district-news/kkoppala-department-of-horticulture
ಕಂಬಳ: ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ | Prajavani ಕಂಬಳ: ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ ನವದೆಹಲಿ: ರಾಜ್ಯದ ಕರಾವಳಿ ಭಾಗದ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆ ಪೆಟಾ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಸೋಮವಾರ ಇತ್ಯರ್ಥಪಡಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣವನ್ನು ಇತ್ಯರ್ಥಪಡಿಸಿ ಆದೇಶ ನೀಡಿತು. ಅಲ್ಲದೆ, ಕಂಬಳಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಸರ್ಕಾರ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದನ್ನೇ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ಇದೆ ಎಂದೂ ನ್ಯಾಯಪೀಠ ತಿಳಿಸಿತು. ಕಂಬಳಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ಕರ್ನಾಟಕ ಪ್ರಾಣಿ ಹಿಂಸೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಷ್ಟ್ರಪತಿ ಅಂಕಿತ ದೊರೆತಿದೆ. ಈ ತಿದ್ದುಪಡಿ ಕಾಯ್ದೆ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಕಂಬಳಕ್ಕೆ ಅವಕಾಶ ನೀಡಿದ್ದ ಸುಗ್ರೀವಾಜ್ಞೆ ಈಗಾಗಲೇ ಅನೂರ್ಜಿತವಾಗಿದ್ದು, ಅದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಮಹತ್ವ ಕಳೆದುಕೊಂಡಿದೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದತ್ತ ಕಾಮತ್ ವಿವರಿಸಿದರು.
"2018-07-23T08:11:45"
https://www.prajavani.net/news/article/2018/03/12/559111.html
ಬರೆಯುವ ತಾಂತ್ರಿಕ ಗ್ರಹಿಕೆ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jul 06, 2019, 8:11 PM IST ಕಲಿಕೆಯೆಂಬ ಪ್ರಕ್ರಿಯೆ - ಭಾಗ-28 ಬರೆಯುವುದು ಒಂದು ತಂತ್ರ ನಡೆಯುವ, ಕೂರುವ, ನಿಲ್ಲುವ, ತೋಟದ ಕೆಲಸ ಮಾಡುವ, ಸೈಕಲ್ ತುಳಿಯುವ; ಹೀಗೆ ಯಾವುದೇ ಕೆಲಸ ಮಾಡುವುದು ತಂತ್ರವಾಗಿರುವಂತೆ ಬರೆಯುವುದು ಕೂಡಾ ಒಂದು ತಂತ್ರವೇ. ನಡೆಯುವುದಕ್ಕೆ ಎಡದ ಕಾಲು ಹಿಂದಕ್ಕಿರುವಾಗ ಬಲದ ಕಾಲು ಮುಂದಕ್ಕೆ ಹೋಗುವುದು, ಅದೇ ಹಿಂದೆ, ಮುಂದೆ ಪುನರಾವರ್ತಿತವಾಗುವಂತೆ ನಡೆಯುವ ಕೆಲಸವಾಗುವುದು. ಅದೊಂದು ತಂತ್ರ. ಬಾಲ್ಯದಲ್ಲಿ ಮಗುವಿಗೆ ಬೇಕಾದಷ್ಟು ಟೆಕ್ನಿಕ್‌ಗಳನ್ನು ಅಥವಾ ತಂತ್ರಗಳನ್ನು ಕಲಿಸಿಕೊಡುತ್ತೇವೆ ಮತ್ತು ಅದೇ ಕಲಿಯುತ್ತದೆ. ಹೀಗೆ ಪ್ರತಿಯೊಂದೂ ತಂತ್ರಾಧಾರಿತವಾಗಿರುವಂತಹ ಕೆಲಸಗಳನ್ನು ಮಕ್ಕಳು ಕಲಿಯುತ್ತಾರೆ. ಅದನ್ನು ಜೀವನ ಪೂರ್ತಿ ಮರೆಯುವುದಿಲ್ಲ. ಜ್ಞಾನ, ವಿಚಾರ ಎಂದು ಏನು ಕರೆಯುತ್ತೇವೆಯೋ ಅದನ್ನು ಆಗ್ಗಿಂದಾಗ್ಗೆ ಬಳಸದಿದ್ದರೆ ನಿಧಾನವಾಗಿ ಮರೆಯುವರು. ಆದರೆ ಕೂರುವುದು, ನಿಲ್ಲುವುದು, ನಡೆಯುವುದು, ಬಟನ್ ಹಾಕುವುದು, ಈಜುವುದು, ಸೈಕಲ್ ತುಳಿಯುವುದು, ತಿನ್ನುವುದು; ಹೀಗೆ ಅನೇಕ ತಂತ್ರಗಳನ್ನು ಎಂದಿಗೂ ಮರೆಯುವುದಿಲ್ಲ. ಬರೆಯುವುದೂ ಕೂಡಾ ಇದೇ ಪ್ರಕಾರ ತಂತ್ರದ ವಿಭಾಗಕ್ಕೆ ಸೇರುತ್ತದೆ. ಹಾಗಾಗಿ ಮಗುವಿಗೆ ಇತರ ತಂತ್ರಗಾರಿಕೆಯನ್ನು ಕಲಿಸುವಂತೆ ಬರೆಯುವುದನ್ನು ಕೂಡಾ ಕಲಿಸಬೇಕಾಗುತ್ತದೆ ಅಥವಾ ತರಬೇತಿ ಕೊಡಬೇಕಾಗುತ್ತದೆ. ತಂತ್ರಗಳನ್ನು ಕಲಿಯುವುದು ಮತ್ತು ಅದರಲ್ಲಿ ನೈಪುಣ್ಯವನ್ನು ಪಡೆಯುವುದು ಸತತವಾಗಿ ಮಾಡುವಂತಹ ಅಭ್ಯಾಸದಿಂದ, ತರಬೇತಿಯನ್ನು ಪಡೆಯುವುದರಿಂದ ಎಂಬುದನ್ನು ಮರೆಯದಿರೋಣ. ಮಕ್ಕಳ ಎಳೆಯ ವಯಸ್ಸಿನಲ್ಲಿ ಬರೆಯುವಂತಹ ತಂತ್ರವನ್ನು ಕಲಿಸಿಕೊಟ್ಟಲ್ಲಿ ಅವರೆಂದಿಗೂ ಅದನ್ನು ಮರೆಯುವುದಿಲ್ಲ. ತಾಂತ್ರಿಕ ಗ್ರಹಿಕೆ: ಮಕ್ಕಳಿಗೆ ಬರೆಯುವ ಸಮಸ್ಯೆ ಇದೆಯೇ ಎಂಬುದನ್ನು ಗುರುತಿಸಲು ಅವರ ಬೇರೆ ವಸ್ತುಗಳನ್ನು ನಿರ್ವಹಿಸುವುದನ್ನು ಕೂಡಾ ಗಮನಿಸಬೇಕಾಗುತ್ತದೆ. ಚಮಚವನ್ನು ಸರಿಯಾಗಿ ಹಿಡಿದುಕೊಂಡು ತಿನ್ನುವನೋ ಇಲ್ಲವೋ, ನಲ್ಲಿಯಿಂದ ನೀರನ್ನು ಸರಿಯಾಗಿ ಲೋಟಕ್ಕೆ ಹಿಡಿದುಕೊಳ್ಳುವನೋ ಇಲ್ಲವೋ, ಡಬ್ಬದ ಮುಚ್ಚಳವನ್ನು ಸರಿಯಾಗಿ ತೆಗೆಯುವುದು, ಹಾಕುವುದು ಮಾಡುವನೋ ಇಲ್ಲವೋ; ಹೀಗೆ ತಂತ್ರಗಳು ಪ್ರಧಾನವಾಗಿರುವಂತಹ ಬೇರೆ ಕೆಲಸಗಳನ್ನು ಕೂಡಾ ಗಮನಿಸಬೇಕು. ಏಕೆಂದರೆ, ಬರೆಯಲು ಸಮಸ್ಯೆ ಇದೆಯೆಂದರೆ, ಅದು ವಿದ್ಯಾಭ್ಯಾಸದ ಸಮಸ್ಯೆ, ಕಲಿಕೆಯ ಅಥವಾ ಗ್ರಹಿಕೆಯ ಸಮಸ್ಯೆ ಅಲ್ಲ. ಅದು ತಾಂತ್ರಿಕ ಸಮಸ್ಯೆ. ಅಚ್ಚುಕಟ್ಟುತನ ಬರುವುದು ಉತ್ತಮ ತರಬೇತಿಯ ನಂತರ. ಬಳಪವನ್ನು, ಪೆನ್ಸಿಲನ್ನು ಅಥವಾ ಪೆನ್ನನ್ನು ಸರಿಯಾಗಿ ಹಿಡಿಯುವುದು, ಹದವಾಗಿ ಒತ್ತುತ್ತಾ ಬರೆಯುತ್ತಾ ಹೋಗುವುದು ಇತ್ಯಾದಿಗಳೆಲ್ಲವೂ ತಂತ್ರವೇ. ಆಮೇಲೆ ತಾನು ಏನು ಬರೆಯುತ್ತಿದ್ದೇನೆ ಎಂಬುದನ್ನು ಅಕ್ಷರ, ಪದ, ವಾಕ್ಯಗಳನ್ನು ತಿಳಿಯುತ್ತಾ ಹೋಗುವುದು ಗ್ರಹಿಕೆಯ ಭಾಗ. ಗ್ರಹಿಕೆಯ ತರಬೇತಿ ಸರಿಯಾಗಿ ಆಗುತ್ತಿದ್ದಂತೆ ಜ್ಞಾನಕ್ಕೆ ಅದು ರೂಪಾಂತರಗೊಳ್ಳುತ್ತಾ ಹೋಗುತ್ತದೆ. ತಂತ್ರ, ತರಬೇತಿ, ಜ್ಞಾನ, ಪ್ರತಿಭೆ; ಇವೆಲ್ಲವೂ ಕಲಿಕೆಯಲ್ಲಿ ರೂಪಾಂತರದ ಪ್ರಕ್ರಿಯೆಗಳೇ. ಮೊದಲಿಗೆ ತಾಂತ್ರಿಕ ಗ್ರಹಿಕೆ ಸಿದ್ಧಿಸಿದರೆ, ಇನ್ನುಳಿದಂತೆ ತರಬೇತಿ ಯಶಸ್ವಿಯಾಗಿ ನಡೆಯುತ್ತದೆ ಮತ್ತು ಜ್ಞಾನವು ದೊರಕುತ್ತದೆ, ಜೊತೆಜೊತೆಗೆ ಪ್ರತಿಭೆಯ ಅನಾವರಣವಾಗುತ್ತಾ ಹೋಗುತ್ತದೆ. ಕೆಲವು ಮಕ್ಕಳು ತಾವು ಹಿಡಿಯುವ ವಸ್ತುಗಳನ್ನು ಪದೇಪದೇ ಬೀಳಿಸುತ್ತಿರುತ್ತಾರೆ. ಸರಿಯಾಗಿ ಹಿಡಿಯಲು ಬರುವುದಿಲ್ಲ. ವಸ್ತುಗಳನ್ನು ಒಂದೆಡೆ ಇಡುವಾಗ ಅವರಿಗೆ ತಾವು ಅದನ್ನು ಪೂರ್ತಿಯಾಗಿ ಇಟ್ಟಿದ್ದೇಮೋ ಇಲ್ಲವೋ ಎಂದೇ ಗೊತ್ತಾಗುವುದಿಲ್ಲ. ಇಡಬೇಕಾಗಿರುವ ಜಾಗ ಮತ್ತು ವಸ್ತುವಿನ ತಳ ಸರಿಯಾಗಿ ತಾಳೆಯಾಗಿ ಕೂರಿತೋ ಇಲ್ಲವೋ ನೋಡುವುದಿಲ್ಲ. ಮೊದಲೇ ಕೈ ಬಿಟ್ಟುಬಿಡುತ್ತಾರೆ. ಅಥವಾ ಇಟ್ಟಾದ ಮೇಲೆಯೂ ಇಟ್ಟ ಭಾವ ಇರದೇ ಇಡುವಂತಹ ಇಡುತ್ತಿರುವಂತಹ ಕೆಲಸವನ್ನು ಮುಂದುವರಿಸುತ್ತಿರುತ್ತಾರೆ. ಅದೇ ರೀತಿಯಲ್ಲಿ ಕೆಲವು ಮಕ್ಕಳಿಗೆ ತಿನ್ನಿಸುವಾಗ ಅವರ ತಾಂತ್ರಿಕ ಗ್ರಹಿಕೆಯ ಮಟ್ಟವನ್ನು ಗುರುತಿಸಬಹುದು. ಚಮಚ ಅಥವಾ ಕೈಯಿಂದ ಆಹಾರದ ತುತ್ತನ್ನು ಮಗುವಿನ ತೆರೆದ ಬಾಯಿಯಲ್ಲಿ ಇಟ್ಟಾಗ, ಕೆಲವು ಮಕ್ಕಳಿಗೆ ಅದನ್ನು ಕೂಡಲೇ ಮುಚ್ಚಬೇಕೆಂದೇ ತಿಳಿಯುವುದಿಲ್ಲ. ಅವರು ಬಾಯನ್ನು ನಿಧಾನವಾಗಿ ಮುಚ್ಚುವುದರಿಂದ, ಬಾಯಲ್ಲಿ ಇಟ್ಟದ್ದು ಹೊರಗೆ ಬೀಳಬಹುದು. ತಾಂತ್ರಿಕ ಗ್ರಹಿಕೆಯು ಚೆನ್ನಾಗಿದ್ದ ಪಕ್ಷದಲ್ಲಿ ಅದು ಆಟೋಮ್ಯಾಟಿಕ್ ಆಗಿ ನಡೆಯುತ್ತದೆ. ಬಾಯಲ್ಲಿ ಇಟ್ಟ ಕೂಡಲೇ ತುಟಿಗಳು ಮುಚ್ಚುವ ಕೆಲಸ ಮಾಡಿ ತಿನ್ನುವ ಕೆಲಸ ಆರಂಭವಾಗುತ್ತದೆ. ಹೀಗೆ ಹಲವಾರು ವಿಷಯಗಳಲ್ಲಿ ನಾವು ಮಕ್ಕಳ ತಾಂತ್ರಿಕ ಗ್ರಹಿಕೆಯು ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಗುರುತಿಸಬಹುದು. ಅದೇ ರೀತಿಯಲ್ಲಿ ತಾಂತ್ರಿಕ ಗ್ರಹಿಕೆಯು ಬರವಣಿಗೆಯಲ್ಲಿ ಹೇಗಿದೆ ಎಂಬುದನ್ನು ಮೊದಲು ನೋಡಬೇಕು. ಬರವಣಿಗೆಯ ತಾಂತ್ರಿಕ ಗ್ರಹಿಕೆಯನ್ನು ಉತ್ತಮಪಡಿಸಲು: ಬರವಣಿಗೆಯಲ್ಲಿ ತಾಂತ್ರಿಕ ಗ್ರಹಿಕೆಯನ್ನು ಉತ್ತಮಪಡಿಸಲು ಹಲವಾರು ತಂತ್ರಗಳಿವೆ. ಅದರಲ್ಲಿ ಮೊದಲಿಗೆ ಅಕ್ಷರಗಳಲ್ಲದ, ಅರ್ಥವಿಲ್ಲದಂತಹ ಗೆರೆಗಳನ್ನು ಅಡ್ಡ ಸಾಲುಗಳಿರುವ ಪುಸ್ತಕದಲ್ಲಿ ಬರೆಸುವುದು. ನೇರ, ಅಡ್ಡ, ಓರೆ, ಅರ್ಧ ವರ್ತುಲ; ಹೀಗೆ ಹಲವಾರು ರೀತಿಯ ಗೆರೆಗಳನ್ನು ಸತತವಾಗಿ ಬರೆಸುವುದು. ಅವುಗಳ ಕಾಂಬಿನೇಷನ್‌ನಲ್ಲಿಯೂ ಕೂಡಾ ಬರೆಸುವುದು. ಉದಾಹರಣೆಗೆ, ಅಡ್ಡ ಮತ್ತ ಅರ್ಧ ವರ್ತುಲದ ಗೆರೆ, ನೇರ ಮತ್ತು ವಕ್ರಗೆರೆ, ಅಲೆ ಅಲೆಯಾಗಿರುವಂತಹ ರೇಖೆಗಳು ಮತ್ತು ವರ್ತುಲ ವರ್ತುಲವಾಗಿರುವಂತಹ ಸಂಪೂರ್ಣ ಆಕೃತಿಗಳನ್ನು ಬರೆಸುವುದು. ಚೌಕ, ವರ್ತುಲ, ತ್ರಿಕೋನ; ಹೀಗೆ ಹಲವು ಬಗೆಯ ಆಕೃತಿಗಳನ್ನು ಬರೆಸುವುದು. ರಂಗವಲ್ಲಿ ಅಥವಾ ರಂಗೋಲಿಗಳನ್ನು ಬರೆಸುವುದು. ಚುಕ್ಕೆ ಚುಕ್ಕೆಗಳನ್ನು ಸೇರಿಸಿ ಬರೆಯುವ ರಂಗೋಲಿ, ಅಥವಾ ಚುಕ್ಕೆಗಳನ್ನು ಬಳಸಿ ವಕ್ರಾಕಾರವಾಗಿ ಹಾದು ಹೋಗುವಂತಹ ರಂಗೋಲಿಯ ಚಿತ್ರಗಳನ್ನು ಬರೆಯುವುದರಿಂದಲೂ ಬರವಣಿಗೆ ತಾಂತ್ರಿಕ ಗ್ರಹಿಕೆಯು ಉತ್ತಮಗೊಳ್ಳುತ್ತದೆ. ರಂಗೋಲಿೆಯು ಚಿತ್ರಕಲೆಯ ಭಾಗವೂ ಆಗಿರುವುದರಿಂದ ಅದು ಮಕ್ಕಳಿಗೆ ಸಂತೋಷವನ್ನೂ ಕೊಡುತ್ತದೆ. ರಂಗೋಲಿಯಲ್ಲಿ ಚುಕ್ಕೆ ಚುಕ್ಕೆಗಳನ್ನು ಸೇರಿಸಿ ಚಿತ್ತಾರವನ್ನು ಮೂಡಿಸುವ ಹಾಗೆ ಅಕ್ಷರಗಳನ್ನು ಬರೆಯುವಾಗಲೂ ಕೂಡಾ ಚುಕ್ಕೆಗಳನ್ನು ಅಕ್ಷರಾಕೃತಿಯಲ್ಲಿ ಮೂಡಿಸಿ ನಂತರ ಅದನ್ನು ತಿದ್ದುವ ಮೂಲಕ ಬರವಣಿಗೆಯ ಅಭ್ಯಾಸ ಮಾಡಿಸಬಹುದು. ಅದೇ ರೀತಿಯಲ್ಲಿ ಒಂದು ಎರಡು ಮೂರು; ಹೀಗೆ ಅಂಕಿಗಳ ಕ್ರಮಾನುಸಾರವಾಗಿರುವ ಚಿತ್ರಗಳನ್ನು ಮೂಡಿಸುವಂತಹ ಚುಕ್ಕೆಗಳನ್ನು ಅಥವಾ ಸಂಖ್ಯೆಗಳನ್ನು ಸೇರಿಸುವ ಅಭ್ಯಾಸವೂ ಕೂಡಾ ಬರವಣಿಗೆಯ ತಾಂತ್ರಿಕ ಗ್ರಹಿಕೆಯ ಭಾಗವೇ ಆಗಿರುತ್ತದೆ. ಮನೆಯಲ್ಲಿ ಮಕ್ಕಳೊಂದಿಗೆ ಪೋಷಕರು ಬರವಣಿಗೆಯ ಬಗ್ಗೆ ಮಾತಾಡಬೇಕು. ಮಗುವು ತಾನು ಬರೆಯುವುದರ ಬಗ್ಗೆ ಯಾವ ಭಾವವನ್ನು ಹೊಂದಿದೆ ಎಂದು ತಿಳಿದುಕೊಳ್ಳಬೇಕು. 1.ಕಷ್ಟ ಎಂದು ತೋರುವುದೋ. 2.ತಾನು ಸರಿಯಾಗಿ ಬರೆಯಲಾರೆ ಎಂಬ ಭಾವ ಇದೆಯೋ. 3.ತನಗೆ ಬರೆಯಲು ಇಷ್ಟವಿಲ್ಲ ಎನಿಸುತ್ತದೆಯೋ. 4.ತಾನು ಏತಕ್ಕೆ ಬರೆಯಬೇಕು ಪ್ರಶ್ನೆ ಇದೆಯೋ. 5.ತಾನು ಇಂತಹದ್ದನ್ನು ಬರೆಯಬೇಕು ಎಂಬ ಇಚ್ಛೆ ಇದೆಯೋ. ಹೀಗೆ ಮಗುವಿಗೆ ಬರವಣಿಗೆಯ ಬಗ್ಗೆ ತನ್ನದೇ ಆದ ಪ್ರಶ್ನೆಯನ್ನೋ, ಕುತೂಹಲವನ್ನೋ, ಆಸಕ್ತಿ ಅಥವಾ ಅನಾಸಕ್ತಿಯನ್ನೋ ಹೊಂದಿರಬಹುದು. ಅದನ್ನು ಗುರುತಿಸಿಕೊಂಡು ಅದಕ್ಕೆ ಸೂಕ್ತವಾದ ಉತ್ತರವನ್ನು ನೀಡುತ್ತಾ ಬರೆಯಲು ಪ್ರೇರೇಪಣೆ ನೀಡಬೇಕು. ಹೇಳದಷ್ಟು ಕೇಳು, ಬರಿ ಅಂದ್ರೆ ಬರಿ ಅಷ್ಟೇ ಎನ್ನುವಂತೆ ವರ್ತಿಸಬಾರದು. ಅದೇ ರೀತಿಯಲ್ಲಿ ಶಾಲೆಯಲ್ಲಿಯೂ ಕೂಡಾ ಶಿಕ್ಷಕರಿಗೆ ಬರವಣಿಗೆಯ ಬಗ್ಗೆ ಗುರುತರವಾದಂತಹ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದೇ ರೀತಿಯಾಗಿ ಬರವಣಿಯು ತಾಂತ್ರಿಕ ಗ್ರಹಿಕೆಯ ಭಾಗವಾಗಿ ಮಾತ್ರವಲ್ಲದೇ ಬರೆಯುವುದು ಸಂಸ್ಕಾರವಾಗಿಯೂ ಮತ್ತು ಸಂಸ್ಕೃತಿಯಾಗಿಯೂ ರೂಪುಗೊಳ್ಳುತ್ತದೆ. ಅದರ ಬಗ್ಗೆ ಮುಂದೆ ವಿವರವಾಗಿ ತಿಳಿಯೋಣ. ಮಕ್ಕಳಿಗೆ ಯೋಗ್ಯ ಸಮಯ ನೀಡುವುದೆಂದರೆ... ಮನುಷ್ಯ ಸಂಬಂಧಗಳು ಸಾಮರಸ್ಯದಿಂದಿರಲು ಕ್ಷಮಾಗುಣ ಅತಿಮುಖ್ಯ: ಯೋಗೇಶ್ ಮಾಸ್ಟರ್ ಯುವ ಸಮುದಾಯದಿಂದ ಹೊಸ ಚಿಂತನೆಗಳು ರೂಪುಗೊಳ್ಳಲಿ: ಯೋಗೇಶ್ ಮಾಸ್ಟರ್ ಪರ್ಯಾಯ ಶಾಲೆಗಳು
"2019-08-19T22:33:46"
http://www.varthabharati.in/article/suggi/199223
ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ: ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿಅಮೂಲಾಗ್ರ ಬದಲಾವಣೆ - a radical change in the education sector of the district | Vijaya Karnataka a radical change in the education sector of the district ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿಅಮೂಲಾಗ್ರ ಬದಲಾವಣೆ ಬೀದರ್‌ ಈಗ ಶೈಕ್ಷಣಿಕ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ. ವಿದೇಶ ಹಾಗೂ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬೀದರ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್‌ ಖದೀರ್‌ ತಿಳಿಸಿದರು. ಬೀದರ್‌ನ ಶಾಹೀನ್‌ ಪಿಯು ವಿಜ್ಞಾನ ಕಾಲೇಜಿನಲ್ಲಿಶನಿವಾರ ಆರಂಭವಾದ ಎರಡು ದಿನಗಳ ಅಂತಾರಾಷ್ಟ್ರೀಯ... ಬೀದರ್‌:ಬೀದರ್‌ ಈಗ ಶೈಕ್ಷಣಿಕ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ. ವಿದೇಶ ಹಾಗೂ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬೀದರ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್‌ ಖದೀರ್‌ ತಿಳಿಸಿದರು. ಶಾಹೀನ್‌ ಪಿಯು ವಿಜ್ಞಾನ ಕಾಲೇಜಿನಲ್ಲಿಆರಂಭವಾದ ಅಂತಾರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿಮಾತನಾಡಿದ ಅವರು, ದಶಕದ ಅವಧಿಯಲ್ಲಿಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿಅಮೂಲಾಗ್ರ ಬದಲಾವಣೆ ಆಗಿದೆ ಎಂದು ಹೇಳಿದರು. 1989ರಲ್ಲಿಒಂದು ಪುಟ್ಟ ಕೋಣೆಯಲ್ಲಿ17 ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಶಾಹೀನ್‌ ಶಿಕ್ಷಣ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿಏಳು ದೇಶ, ಭಾರತದ 23 ರಾಜ್ಯಗಳ 15 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 3,500 ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿದ್ದಾರೆ. ಸಂಸ್ಥೆಯು 8 ರಾಜ್ಯಗಳಲ್ಲಿ45 ಶಾಖೆಗಳನ್ನು ಹೊಂದಿದೆ ಎಂದು ತಿಳಿಸಿದರು. ಸಂಸ್ಥೆಯಲ್ಲಿಎಲ್ಲರಿಗೂ ಒಂದೇ ತೆರನಾದ ಶಿಕ್ಷಣ ಒದಗಿಸಲಾಗುತ್ತಿದೆ. ಶಿಕ್ಷಣದ ಜತೆಗೆ ಸಂಸ್ಕಾರಕ್ಕೂ ಒತ್ತು ಕೊಡಲಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಬೋಧಿಸಲಾಗುತ್ತಿದೆ. ದೇಶಕ್ಕೆ ಆದರ್ಶ ಪ್ರಜೆಗಳನ್ನು ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು. ಶಾಹೀನ್‌ ಸಂಸ್ಥೆ ಸಾಧನೆಗೆ ಪ್ರಶಂಸೆ ಜಿಲ್ಲೆಯಲ್ಲಿಆರಂಭಿಸಿದ ಶಾಹೀನ್‌ ಶಿಕ್ಷಣ ಸಂಸ್ಥೆ ಕರ್ನಾಟಕ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿತನ್ನ ಶಾಖೆಗಳನ್ನು ತೆರೆಯುವ ಮೂಲಕ ಮಾಡಿರುವ ಸಾಧನೆಯನ್ನು ಸಮ್ಮೇಳನದಲ್ಲಿದೇಶ, ವಿದೇಶಗಳ ಶಿಕ್ಷಣ ತಜ್ಞರು ಪ್ರಶಂಶಿಸಿದರು. ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್‌ ಖದೀರ್‌ ಜಿಲ್ಲೆಯಲ್ಲಿಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಇಡೀ ದೇಶವೇ ಬೀದರ್‌ನತ್ತ ಮುಖ ಮಾಡುವಂತೆ ಮಾಡಿದ್ದಾರೆ ಎಂದರು. ಸಂಸ್ಥೆಯು ಮೌಲ್ಯಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದೆ ಎಂದು ಲಕ್ನೋದ ರೆಹಮಾನ್‌ ಫೌಂಡೇಶನ್‌ ಅಧ್ಯಕ್ಷ ಮೌಲಾನಾ ಸಜ್ಜಾದ್‌ ನೊಮಾನಿ, ಪ್ಯಾಲೆಸ್ತೇನ್‌ನ ಡಾ.ವೇಲ್‌ಅಲ್‌ ಭಟ್ಟರ್ಕಿ, ಮಲೇಶಿಯಾದ ಶಿಕ್ಷಣ ಇಲಾಖೆಯ ಸಲಹೆಗಾರ ಡಾ. ಹಸ್ಸಾನಿ ಮುಹಮ್ಮದ್‌ ತಮ್ಮ ಭಾಷಣದಲ್ಲಿಮೆಚ್ಚುಗೆ ವ್ಯಕ್ತಪಡಿಸಿದರು. ನಾನಾ ದೇಶಗಳ ಪ್ರತಿನಿಧಿಗಳು ಭಾಗಿ ಸಮ್ಮೇಳನದಲ್ಲಿವಿವಿಧ ದೇಶಗಳ ಶಿಕ್ಷಣ ತಜ್ಞರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಬೆಳಗ್ಗೆ ಕಾಲೇಜಿಗೆ ಬಂದ ಪ್ರತಿನಿಧಿಗಳನ್ನು ಕಾಲೇಜು ಸಿಬ್ಬಂದಿ ಬರಮಾಡಿಕೊಂಡರು. ಸಮ್ಮೇಳನಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಒದಗಿಸಿದರು. ಜಿಲ್ಲೆಹಾಗೂ ರಾಜ್ಯದ ವಿವಿಧೆಡೆಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕೂಡ ಸಮ್ಮೇಳನದಲ್ಲಿಪಾಲ್ಗೊಂಡು ಶೈಕ್ಷಣಿಕ ಬೆಳವಣಿಗೆಗಳ ಮಾಹಿತಿ ಪಡೆದರು. ಸಮ್ಮೇಳನದಲ್ಲಿಪ್ರತಿನಿಧಿಗಳಿಗೆ ಅಚ್ಚುಕಟ್ಟಾದ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಕಾಲೇಜು, ಖಾಸಗಿ ಹೋಟೆಲ್‌ ಸೇರಿ ವಿವಿಧೆಡೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಸಮ್ಮೇಳನದಲ್ಲಿಮೊದಲ ದಿನ ಭಾರತ ಸೇರಿ ವಿವಿಧ ದೇಶಗಳ ಪ್ರತಿನಿಧಿಗಳು ಪ್ರಬಂಧ ಮಂಡನೆ ಮಾಡಿದರು. ವರ್ಗ ಕೋಣೆಗಳಲ್ಲಿಎಸ್‌ಟಿಇಎಂ ಕಲಿಕೆ ಕಾರ್ಯಾಗಾರ, ಶಿಕ್ಷಕ ಶಿಕ್ಷಣದಲ್ಲಿತಂತ್ರಜ್ಞಾನ, ಶೈಕ್ಷಣಿಕ ಪ್ರಗತಿಯಲ್ಲಿಬುದ್ಧಿಮತ್ತೆಯ ಪರಿಣಾಮ, ಅಲ್ಪಸಂಖ್ಯಾತರ ಶಿಕ್ಷಣದ ವಿಷಯಗಳು ಹಾಗೂ ಸವಾಲುಗಳು, ಬಾಲ್ಯದ ಶಿಕ್ಷಣದ ಹೊಸ ಪರಿಕಲ್ಪನೆಗಳು, ಹೊಸ ಶಿಕ್ಷಣ ನೀತಿಯ ಒಳನೋಟಗಳು, ಮದರಸಾ ಶಿಕ್ಷಣದ ಸುಧಾರಣೆಗಳು, ಕರ್ನಾಟಕದ ಶೈಕ್ಷಣಿಕ ಮಾದರಿ, ದೆಹಲಿ ಸರಕಾರದ ಮಾದರಿ ಶಾಲೆಗಳ ಕುರಿತು ಸಮ್ಮೇಳನದಲ್ಲಿಚರ್ಚೆ ನಡೆಯುತ್ತಿದೆ. Web Title a radical change in the education sector of the district Keywords:ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ|ಅಮೂಲಾಗ್ರ ಬದಲಾವಣೆ|education sector|district|a radical change ಮೈಲಾರ ಮಲ್ಲಣ್ಣ ದೇವರ ಜಾತ್ರಾ ಮಹೋತ್ಸವ...
"2019-12-08T23:29:45"
https://vijaykarnataka.com/news/bidar/a-radical-change-in-the-education-sector-of-the-district/articleshow/72318524.cms
'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' | Siddaramaiah votes in Legislative Council polls - Kannada Oneindia » 'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' 'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ' Updated: Monday, December 28, 2015, 9:53 [IST] ಮೈಸೂರು, ಡಿಸೆಂಬರ್ 28 : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆ ಮೈಸೂರಿನಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಿದರು. ನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಖಾಸಗಿ ಕಾರಿನಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಿದರು. ನಂತರ ಮಾತನಾಡಿದ ಅವರು, 'ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲಿದೆ' ಎಂದು ಹೇಳಿದರು. [ಎಂಎಲ್ಸಿ ಚುನಾವಣೆ ಶೇ 95 ಮತದಾನದ ಅಂದಾಜು] ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ಅವರು, 'ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಚ್ಚು ಸ್ಥಾನ ಪಡೆದರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ ಎಂದು ಸವಾಲು ಹಾಕಿರುವ ಈಶ್ವರಪ್ಪ ಅವರಿಗೆ ಡಿ.30ಕ್ಕೆ ಫಲಿತಾಂಶ ಉತ್ತರ ನೀಡಲಿದ್ದು, ಈಶ್ವರಪ್ಪ ಮಾತಿಗೆ ತಕ್ಕಂತೆ ಸನ್ಯಾಸ ಸ್ವೀಕರಿಸಲು ಸಿದ್ಧರಾಗಿರಲಿ' ಎಂದರು. [18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಜಗದೀಶ್ ಶೆಟ್ಟರ್ ವಿಶ್ವಾಸ] ಸಿದ್ದರಾಮಯ್ಯ ಅವರು ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಕ್ರಮ ನಡೆಯದಂತೆ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಮತದಾನದ ಚಿತ್ರಗಳು ಇಲ್ಲಿವೆ.... ಖಾಸಗಿ ಕಾರಿನಲ್ಲಿ ಬಂದು ಮತ ಹಾಕಿದ ಸಿಎಂ ಮೈಸೂರು ನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಖಾಸಗಿ ಕಾರಿನಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ ಮತದಾನ ಮಾಡಿದರು. ಅವರಿಗೆ ಮಾಹಿತಿ ಕೊರತೆ ಇದೆ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಸಿದ್ದರಾಮಯ್ಯ ಅವರು ಮಾತನಾಡಿದರು. 'ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 'ಯಡಿಯೂರಪ್ಪಗೆ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ಕೊರತೆಯಿದೆ' ಎಂದು ಹೇಳಿ ಮುಂದೆ ನಡೆದರು. ಸಂದೇಶ್ ನಾಗರಾಜ್ ಮತದಾನ ಮೈಸೂರು-ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂದೇಶ್ ನಾಗರಾಜ್, ಕಾಂಗ್ರೆಸ್ ಅಭ್ಯರ್ಥಿ ಆರ್.ಧರ್ಮಸೇನಾ, ಸಚಿವ ಎಚ್.ಸಿ.ಮಹದೇವಪ್ಪ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಮತದಾನ ಮಾಡಿದರು. ಗೋ.ಮಧುಸೂದನ್ ಮತದಾನ ಶಾಸಕರಾದ ಎಂ.ಕೆ.ಸೋಮಶೇಖರ್, ತನ್ವೀರ್ ಸೇಠ್, ವಾಸು, ಚಿಕ್ಕಮಾದು, ಗೋ.ಮಧುಸೂದನ್, ವಿಜಯ್‍ಶಂಕರ್, ಮರಿತಿಬ್ಬೇಗೌಡ, ಮೇಯರ್ ಭೈರಪ್ಪ ಮುಂತಾದವರು ಮತದಾನ ಮಾಡಿದರು. ವಾಟಾಳ್ ನಾಗರಾಜ್ ಮತದಾನ ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಚಾಮರಾಜನಗರದಲ್ಲಿ ಮತ ಚಲಾಯಿಸಿದರು. mysuru, legislative council, siddaramaiah, karnataka, election, mlc, district news, ಸಿದ್ದರಾಮಯ್ಯ, ಮೈಸೂರು, ಚುನಾವಣೆ, ವಿಧಾನಪರಿಷತ್, ಎಂಎಲ್ ಸಿ, ಕರ್ನಾಟಕ, ಜಿಲ್ಲಾಸುದ್ದಿ Karnataka Chief minister Siddaramaiah on Sunday, December 27th cast his vote in the Legislative Council elections at his native Mysuru.
"2017-09-22T17:03:35"
https://kannada.oneindia.com/news/mysore/siddaramaiah-votes-in-legislative-council-polls-099691.html
ಕನ್ನಡ ಜಾನಪದ karnataka folklore: February 2015 ಕರ್ನಾಟಕದ ಆದಿವಾಸಿಗಳ ಆಶಾಕಿರಣದಂತೆ ಬದುಕಿದ ಜಾಜಿ ತಿಮ್ಮಯ್ಯ ತಮ್ಮ ಬದುಕಿನ ಪಯಣವನ್ನು ಮುಗಿಸಿದ್ದಾರೆ. ಹುಣಸೂರು ತಾಲ್ಲೂಕು ಹನಗೋಡು ಕಾಡಿನಲ್ಲಿಯೇ ಬದುಕಿದ್ದರೂ ಆದಿವಾಸಿಗರ ಬದುಕಿನಲ್ಲಿ ಕಿಚ್ಚು ಹಚ್ಚಿದ ಜಾಜಿ ಅವರ ಕನಸು ಇನ್ನೂ ನನಸಾಗಿಲ್ಲ. ಅವರು ಹಚ್ಚಿದ ಕಿಚ್ಚು ಇನ್ನೂ ಆರಿಲ್ಲ. ಇಂದಿರಾ ಗಾಂಧಿ ಅವರಂತೆ ಜಾಜಿ ದೇಶವನ್ನು ಆಳಿದವರಲ್ಲ. ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ಕಿರಣ್‌ ಬೇಡಿ ಅವರಂತೆ ಖಡಕ್‌ ಅಧಿಕಾರಿಯಲ್ಲ. ಮೇಧಾ ಪಾಟ್ಕರ್‌ ಅವರಂತೆ ದೇಶಮಟ್ಟದ ಹೋರಾಟಗಾರರಲ್ಲ. ಅವರು ಅಕ್ಷರ ಲೋಕದ ಗೊಂಬೆಯೂ ಅಲ್ಲ. ಅವರಿಗೆ ಅಕ್ಷರ ಹುಟ್ಟಿನಿಂದ ಬರಲೇ ಇಲ್ಲ. ಆದರೆ ಸಹಸ್ರಾರು ವರ್ಷಗಳಿಂದ ಕಾಡಿನ ಚಿಪ್ಪಿನೊಳಗೇ ಇದ್ದ ಆದಿವಾಸಿಗರ ನೋವಿನ ಪ್ರತಿನಿಧಿಯಾಗಿದ್ದರು ಅವರು. ಅಕ್ಷರ ಇಲ್ಲದಿದ್ದರೂ ಪ್ರಜ್ಞೆಯ ಸೆಲೆಯಲ್ಲಿಯೇ ಬೆಳೆದು ಬಂದ ಕಾಡಿನ ಮಗಳು ಅವರು. ಅಧಿಕಾರದ ಗದ್ದುಗೆಯನ್ನು ಏರಿದರೂ ಅಧಿಕಾರ ಚಲಾಯಿಸಲು ಹೆದರುವ ನಾಡಿನ ಹೆಣ್ಣು ಮಕ್ಕಳಂತೆ ಅಲ್ಲ ಅವರು. ಕಾಡಿನಿಂದ ಬಂದು ನಾಡಿನಲ್ಲಿ ಗರ್ಜಿಸಿದವರು. ಜಾಜಿ ಅವರ ಬದುಕು ಸಂಪೂರ್ಣ ಹೋರಾಟಮಯ. ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಅವರು ರಾಜಕೀಯದಲ್ಲಿಯೂ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಗ್ರಾಮ ಪಂಚಾಯ್ತಿ ರಾಜಕಾರಣದಿಂದ ಆರಂಭಿಸಿ ಜಿಲ್ಲಾ ಪಂಚಾಯ್ತಿ ಮಟ್ಟದವರೆಗೆ ಬೆಳೆದವರು. ಮೈಸೂರು ಜಿಲ್ಲಾ ಪಂಚಾಯ್ತಿಯ ಉಪಾಧ್ಯಕ್ಷೆಯಾಗಿ ತಮ್ಮನ್ನು ನಂಬಿದ ಕಾಡು ಮಂದಿಗೆ ನ್ಯಾಯ ಒದಗಿಸಿದವರು. ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆದ ಮೊದಲ ಆದಿವಾಸಿ ಮಹಿಳೆ ಅವರು. ವಿಧಾನಸಭೆ ಚುನಾವಣೆಗೆ ನಿಂತು ಸೋತಿದ್ದರೂ ಹೋರಾಟದ ಹಾದಿಯನ್ನು ಬಿಟ್ಟವರಲ್ಲ. ದೆಹಲಿಯಲ್ಲಿಯೂ ಚಳವಳಿಯನ್ನು ಮಾಡಿ ರಾಜಕಾರಣಿಗಳನ್ನು ನಡುಗಿಸಿದ ಜಾಜಿ ತಿಮ್ಮಯ್ಯ ತಮ್ಮ ಅಧಿಕಾರದಲ್ಲಿ ಯಾರೂ ತಲೆ ಹಾಕದಂತೆ ಮಾಡಿದ್ದರು. ಅವರು ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದಾಗ ತಮ್ಮ ಪತಿ ಆ ಕಡೆ ಬರದಂತೆ ನೋಡಿಕೊಂಡಿದ್ದರು. ಕಾಡಿನಲ್ಲಿದ್ದ ಜಾಜಿಯನ್ನು ಗುರುತಿಸಿ ಅವರಿಗೆ ಅಕ್ಷರ ಕಲಿಸಿ ಹೋರಾಟದ ಹಾದಿಯನ್ನು ತೋರಿದವರು ಹುಣಸೂರಿನ ಡೀಡ್‌ ಸಂಸ್ಥೆಯ ಶ್ರೀಕಾಂತ್‌, ಆದರೆ ಅಧಿಕಾರ ಬಂದಾಗ ಅವರನ್ನೂ ತಮ್ಮ ಹೆಸರಿನಲ್ಲಿ ಅಧಿಕಾರ ನಡೆಸಲು ಬಿಡಲಿಲ್ಲ. ಆದಿವಾಸಿಗಳ ಅರಣ್ಯ ಹಕ್ಕು, ಭೂಮಿ ಹಕ್ಕು, ಬೆಟ್ಟದ ಕಾಡು, ನಾಗರಹೊಳೆಯಲ್ಲಿ ತಾಜ್‌ ಹೋಟೆಲ್‌ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಜಾಜಿ ತಿಮ್ಮಯ್ಯ ಕಾಡಿನಿಂದ ಹೊರಬಂದ ಆದಿವಾಸಿಗಳಿಗೆ ಭೂಮಿ ಕೊಡಿಸಲು ನಿರಂತರ ಹೋರಾಟ ನಡೆಸಿದ್ದರು. ‘ಕಾಡಿನಿಂದ ಹೊರಬಂದ ನಮಗೆ ಬದುಕಲು ಒಂದಿಷ್ಟು ಭೂಮಿ ಕೊಡಿ ಎಂಬ ಕೂಗು ಸರ್ಕಾರಕ್ಕೆ ಕೇಳುತ್ತಿರಲಿಲ್ಲ. ನಮ್ಮ ಭೂಮಿಯನ್ನು ಅಪಹರಿಸಿದವರಿಂದ ನಾವು ಭೂಮಿಯನ್ನು ಪಡೆದುಕೊಳ್ಳಬೇಕಾಗಿತ್ತು. ಈ ಭೂಮಿ ನಮ್ಮದೇ ಆಗಿತ್ತು. ನಾವು ಈ ಕಾಡನ್ನು ಸಾವಿರಾರು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ನಾವು ಕಾಡಿನಲ್ಲಿ ಇದ್ದಾಗ ಕಾಡು ಸಮೃದ್ಧವಾಗಿತ್ತು. ನಾಡಿನ ಮಂದಿ ಕಾಡಿಗೆ ಬಂದ ಮೇಲೆ ಕಾಡು ಹಾಳಾಯಿತು. ನಮ್ಮನ್ನು ಬಲವಂತವಾಗಿ ಕಾಡಿನಿಂದ ಹೊರಕ್ಕೆ ಹಾಕಿದ ಮೇಲೆ ನಾವು ಭಿಕಾರಿಗಳಂತೆ ನಿಂತುಕೊಂಡಿದ್ದೇವೆ. ನಮ್ಮ ಹಕ್ಕನ್ನು ನಾವು ಮತ್ತೆ ಪಡೆದುಕೊಳ್ಳಲೇ ಬೇಕು. ಅದಕ್ಕಾಗಿ ನಮಗೆ ಅಧಿಕಾರ ಬೇಕಾಗಿತ್ತು. ಅದಕ್ಕಾಗಿಯೇ ನಾನು ರಾಜಕೀಯಕ್ಕೆ ಬಂದೆ’ ಎಂದು ಹೇಳುತ್ತಿದ್ದ ಅವರು ನಿರಂತರವಾಗಿ ಅದರ ಬಗ್ಗೆ ಹೋರಾಟ ನಡೆಸುತ್ತಿದ್ದರು. 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬರಲು ಜಾಜಿ ತಿಮ್ಮಯ್ಯ ಅವರ ಹೋರಾಟದ ಕೊಡುಗೆ ಬಹಳಷ್ಟು ಇದೆ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೆಹಲಿನಲ್ಲಿ ನಡೆದ ಅಖಿಲ ಭಾರತ ಆದಿವಾಸಿಗಳ ಸಮ್ಮೇಳನದಲ್ಲಿ ಭಾಗಿಯಾಗಿ ಜೇನು ಕುರುಬ ಸಮುದಾಯದ ಬಗ್ಗೆ ಭಾಷಣ ಮಾಡಿದ ಜಾಜಿ ಅಲ್ಲಿ ಆಗ ನಡೆಯುತ್ತಿದ್ದ ಅಯೋಡಿನ್‌ ಉಪ್ಪು ವಿರುದ್ಧದ ಚಳವಳಿಯಲ್ಲಿ ಭಾಗಿಯಾಗಿ ದೆಹಲಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. 1999ರಲ್ಲಿ ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ದೆಹಲಿಗೆ ಹೋಗಿದ್ದ ಅವರು ಮತ್ತೊಮ್ಮೆ ದೆಹಲಿಯಲ್ಲಿ ಮಿಂಚಿದ್ದರು. ನಾಗರಹೊಳೆ ಕಾಡಿನಿಂದ ಆದಿವಾಸಿಗರನ್ನು ಶಾಶ್ವತವಾಗಿ ಹೊರ ಹಾಕಲು ಯತ್ನಿಸಿದ ಸರ್ಕಾರದ ವಿರುದ್ಧ ನಡೆಸಿದ ಹೋರಾಟ ಹಾಗೂ ನಾಗರಹೊಳೆಯ ಮೂರ್ಕಲ್‌ನಲ್ಲಿ ತಾಜ್‌ ಹೊಟೇಲ್‌ ನಿರ್ಮಾಣದ ವಿರುದ್ಧ ಜಾಜಿ ನಡೆಸಿದ ಹೋರಾಟ ಅವರ ಬದುಕಿನ ಅತ್ಯಂತ ಮಹತ್ವದ ಕ್ಷಣಗಳಾಗಿದ್ದವು. ‘ನಮ್ಮನ್ನು ಕಾಡಿನಿಂದ ಹೊರಕ್ಕೆ ಅಟ್ಟಿ, ಹಣ ಇದ್ದವರ ಮೋಜು ಮೇಜುವಾನಿಗೆ ಹೊಟೇಲ್‌ ನಿರ್ಮಾಣ ಮಾಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಕರೆ ಕೊಟ್ಟ ಅವರು ನಿರಂತರವಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿದ್ದೇ ಅಲ್ಲದೆ ಸುಪ್ರೀಂಕೋರ್ಟ್‌ವರೆಗೂ ಹೋಗಿ ತಾಜ್‌ ಹೋಟೆಲ್ ಬರುವುದನ್ನು ತಡೆದರು. ತಾಜ್‌ ಹೋಟೆಲ್ ವಿರುದ್ಧ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆಗ ಅರಣ್ಯ ಸಚಿವರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಹೋರಾಟಗಾರರೊಂದಿಗೆ ಸಂಧಾನಕ್ಕೆ ಬಂದಾಗ ‘ಪ್ರವಾಸೋದ್ಯಮದ ದೃಷ್ಟಿಯಿಂದ ತಾಜ್‌ನವರಿಗೆ ಹೋಟೆಲ್ ಮಾಡಲು ಜಾಗ ಕೊಟ್ಟಿದ್ದೇವೆ. ಅದರಿಂದ ಹಣ ಬರುತ್ತದೆ. ಅದನ್ನು ಆದಿವಾಸಿಗಳ ಪುನರ್‌ವಸತಿಗೇ ಬಳಸುತ್ತೇವೆ’ ಎಂದು ಹೇಳಿದರು. ಇದನ್ನು ಕೇಳಿ ಸಿಡಿದೆದ್ದ ಜಾಜಿ ‘ಕಾಡು ನಿಮ್ಮಪ್ಪನ ಆಸ್ತಿಯಲ್ಲ. ಅದು ನಮ್ಮಪ್ಪನ ಆಸ್ತಿ. ನಾವು ಇಲ್ಲಿನ ಮೂಲ ನಿವಾಸಿಗಳು. ನಮ್ಮನ್ನು ಹೊರಕ್ಕೆ ಹಾಕಿ ಅತಂತ್ರರನ್ನಾಗಿ ಮಾಡಿ ತಾಜ್‌ನವರಿಗೆ ಕಾಡು ಕೊಡಲು ಬಿಡಲ್ಲ. ಇಷ್ಟೆಲ್ಲಾ ಮಾತನಾಡುತ್ತೀರಲ್ಲ. ದೇಶ ಸೇವೆ ಮಾಡುವ ನೀವು ನಿಮ್ಮ ಆಸ್ತಿಯನ್ನು ದೇಶಕ್ಕಾಗಿ ಎಷ್ಟು ಬಿಟ್ಟುಕೊಟ್ಟಿದ್ದೀರಿ’ ಎಂದು ಸಚಿವರ ಬೆವರು ಇಳಿಸಿದರು. ಸಂಧಾನ ವಿಫಲವಾಯಿತು. ಹೋರಾಟ ಮುಂದುವರಿಯಿತು. ತಾಜ್‌ ಕಂಬಿ ಕಿತ್ತಿತು. ‘ಆ ಶಿವ ಕೊಟ್ಟಿದ್ದು ನಂಗ ಕಾಡು. ಸರ್ಕಾರ ಕಾಡಿಗೂ ಬೀಜ ನೆಟ್ಟಿಲ್ಲೆ’ ಎಂದು ಕೂಗುತ್ತಿದ್ದ ಜಾಜಿ ತಮ್ಮ ಬದುಕಿನ ಬಹುತೇಕ ಸಮಯವನ್ನು ಕಾಡಿನಲ್ಲಿಯೇ ಕಳೆದವರು. ‘ನಾಡು ನಮ್ಮನ್ನು ಬಾ ಎಂದು ಆತ್ಮೀಯವಾಗಿ ಕರೆಯಬೇಕಿತ್ತು. ಆದರೆ ನಾಡು ನಮ್ಮನ್ನು ಕಾಡಿನಿಂದ ಬಲವಂತವಾಗಿ ದಬ್ಬಿತು. ನೀರಿನಿಂದ ಹೊರ ಬಂದ ಮೀನಿನಂತಾದ ನಾವು ಇನ್ನೂ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೇವೆ’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ‘ಕಾಡಿನಲ್ಲಾದರೆ ನಮಗೆ ಯಾವ ಪ್ರಾಣಿ ಯಾವಾಗ ಹಾಯುತ್ತದೆ. ಯಾವಾಗ ಒದೆಯುತ್ತದೆ ಎನ್ನುವುದು ಗೊತ್ತಿರುತ್ತದೆ. ಆದರೆ ನಾಡಿನ ಪ್ರಾಣಿಯ ಚಲನವಲನ ಗೊತ್ತೇ ಆಗುವುದಿಲ್ಲ’ ಎಂದು ಹೇಳುತ್ತಿದ್ದ ಜಾಜಿ ಅವರಿಗೆ ಕಡೆಗೂ ನಾಡಿನ ಪ್ರಾಣಿಯ ಚಲನೆ ಅರ್ಥವಾಗಲೇ ಇಲ್ಲ. ಮಹಿಳಾ ದೌರ್ಜನ್ಯದ ವಿರುದ್ಧದ ಧ್ವನಿ ಸಂದರ್ಶನ: ರಹಮತ್ ತರೀಕೆರೆ ಎಂ ಡಿ ನಂಜುಂಡಸ್ವಾಮಿ ಅವರ ಜತೆ ನೀವು ದೊಡ್ಡ ಫ್ಯೂಡಲ್ ಕುಟುಂಬದಿಂದ ಬಂದವರು ಅಂತ ಕೇಳಿದ್ದೇನೆ. ನಮ್ಮ ತಂದೆಯವರು ಮಹಾಂತದೇವರು ಅಂತ, ಮೊದಲನೇ ಪೀಳಿಗೆ ವಕೀಲರು. ೨೬ ವರ್ಷ ಶಾಸಕರಾಗಿದ್ದರು ಮೈಸೂರು ಜಿಲ್ಲೆಯಲ್ಲಿ. ಮತ್ತೆ ’ಫ್ಯೂಡಲ್’ ಅಂತ ಶಬ್ದ ಉಪಯೋಗಿಸಿದಿರಲ್ಲ, ಅದು ಕೇವಲ ಆಸ್ತಿಗೆ ಸಂಬಂಧಪಟ್ಟಂತೆ ಅನ್ವಯಿಸುತ್ತೆ. ನಮ್ಮ ತಾತನಿಗೆ ಸಾವಿರ ಎಕರೆ ಮೇಲಿತ್ತು ಭೂಮಿ. ಆ ಕಾರಣ ನಾನು ಹುಟ್ತಾನೇ ಒಬ್ಬ ಶಾಸಕನ ಮಗ ಮತ್ತು ಫ್ಯೂಡಲ್ ಲಾರ್ಡನ ಮೊಮ್ಮಗ(ನಗು). ಆಸ್ತಿ ದೃಷ್ಟಿಯಿಂದ ಫ್ಯೂಡಲ್ ಅಂತ ಕರೀಬಹುದೇ ಹೊರತು, ತಾತನ ವಿಚಾರಗಳು ತಂದೆಯ ವಿಚಾರಗಳು ಈ ಆಧಾರದ ಮೇಲೆ ಫ್ಯೂಡಲ್ ಅಂತ ಕರೆಯಕ್ಕೆ ಸಾಧ್ಯಾನೇ ಇಲ್ಲ. ಕಾರಣ, ನಮ್ಮ ಆ ಭಾಗದ ಜನ ಮೂಲತಃ ಉತ್ತರ ಕರ್ನಾಟಕದಿಂದ ಬಂದವರು. ಕಲ್ಯಾಣಕ್ರಾಂತಿ ಆದನಂತರ ಅಲ್ಲಿ ಗೊಂದಲಗಳಿದ್ದಾಗ ಬಂದವರು ಅಂತ ದಾಖಲೆಗಳಿವೆ. ಬಂದು ಗ್ರಾಮಸ್ಥಾಪನೆ ಮಾಡಿದರು. ಮಾಡರಹಳ್ಳಿ ಅಂತ, ಟಿ. ನರಸೀಪುರ ತಾಲ್ಲೂಕಲ್ಲಿ. ಅದೆಲ್ಲ ಕಪುಮಣ್ಣಿನ ಪ್ರದೇಶ. ಅಲ್ಲೇ ಬಂದು ಗ್ರಾಮಸ್ಥಾಪನೆ ಮಾಡೋಕೆ ಕಾರಣ, ಅವರ ವ್ಯವಸಾಯದ ಅಭ್ಯಾಸಗಳು, ಬೆಳೆ ಪದ್ಧತಿ. ಅವರು ಯಾವ ಮಣ್ಣಿಗೆ ಹೋಗಿದ್ರು ಅವೆಲ್ಲಾನೂ ಸಂಬಂಧ ಉಂಟು. ಉತ್ತರ ಕರ್ನಾಟಕದಲ್ಲಿನ ಬೆಳೆಗಳನ್ನ ನಮ್ಮ ಗ್ರಾಮದಲ್ಲಿ ನೀರಾವರಿ ಆಗಕೂ ಮುಂಚೆ ನಾನೆ ನೋಡಿದೀನಿ. ಅದೇ ಬಿಳಿಜೋಳ, ಕಡ್ಲೆ, ಕುಸುಬಿ, ದನಿಯಾ, ಹತ್ತಿ, ಕಬ್ಬು- ಕಪುಮಣ್ಣಲ್ಲಿ ಏನೇನು ಬೆಳೀತಾರೆ, ಅವನ್ನೆಲ್ಲ ಬೆಳೀತಾಯಿದ್ರು. ನಮ್ಮ ತಾತ ಕಟ್ಟಿದ ಮನೇನೆ ಸುಮಾರು ೨೦೦ ವರ್ಷದ್ದು ಇದೆ ಹಳ್ಳೀಲಿ. ಅದಕ್ಕಿಂತ ಎಷ್ಟು ವರ್ಷ ಹಿಂದೆ ಬಂದವರೋ ಗೊತ್ತಿಲ್ಲ. ಆ ಕಾರಣ ಭೂಮಿ ಯಾರಿಗೆ ಬೇಕಾದರೂ ಲಭ್ಯ ಇತ್ತು. ಆಗ ಭೂಮಿ ಕಷ್ಟದ ಆಸ್ತಿ ಆಗಿರಲಿಲ್ಲ. ಇದು ಒಂದು ದೃಷ್ಟಿಯಿಂದ ಫ್ಯೂಡಲ್ ಅಂತ ಕಾಣಿಸಬಹುದು. ಅಷ್ಟೇ ಹೊರತು, ಅವರು ಯಾವ ರೀತಿ ಜೀವನ ನಡೆಸಿದರು, ಏನು ವಿಚಾರ ಇಟ್ಟುಕೊಂಡಿದ್ರು, ಇದನ್ನೆಲ್ಲ ನೋಡಿದರೆ ಇನ್ನೂ ಶರಣ ಚಳುವಳಿಯ ಅಂಶಗಳು ಅವರಲ್ಲಿದ್ದವು ಅಂತ ಅನಿಸುತ್ತೆ. ಶರಣ ಚಳುವಳಿಯ ಅಂಶಗಳು ಅಂದರೆ? ಅಂದರೆ, ಹಳ್ಳಿ ಒಳಗಿನ ಸಂಬಂಧಗಳು, ಮತ್ತೆ ಜಾತಿ ಪದ್ಧತಿ ಬಗ್ಗೆ ಇದ್ದಂತಹ ಅವರ ಧೋರಣೆಗಳು, ಮತ್ತೆ ಈ ವ್ಯವಸ್ಥೆ ಬಗ್ಗೆ ಇದ್ದಂತಹ ಸಿಟ್ಟುಗಳು, ಹಳ್ಳೀ ಒಳಗೇನೆ ನಡೆಯೋವಂಥ ಕುತಂತ್ರಗಳನ್ನ ನಾಶ ಮಾಡೋವಂಥ ಘಟನೆಗಳು ಇವೆಲ್ಲಾನು. ಇವೆಲ್ಲ ನೈತಿಕ ಉದಾರವಾದಿ ಗುಣಗಳೊ ಅಥವಾ ಚಳುವಳಿಯಿಂದ ಬಂದಂತಹವಾಗಿದ್ದವೋ? ಒಂದು ಚಳುವಳಿಯ ಭಾಗವಾದ ಮೇಲೆ, ವ್ಯಕ್ತಿಯ ಗುಣಗಳು ಚಳುವಳಿಗೆ ವರ್ಗಾವಣೆಯಾಗೋದು, ಚಳುವಳಿಯ ಗುಣಗಳು ವ್ಯಕ್ತಿಗೆ ವರ್ಗಾವಣೆಯಾಗೋದು ನಿರಂತರವಾಗಿ ನಡೀತಾ ಇರ್ತದೆ. ಅದರ ಆಧಾರದ ಮೇಲೆ ಚಳುವಳಿ ಯಶಸ್ಸುಗಳಿಸೋದು ಅಥವಾ ಸೋಲೋದು ಅವಲಂಬಿತವಾಗಿರುತ್ತೆ. ಆ ಕಾರಣಾನೇ ಒಂದು ಚಾರಿತ್ರ್ಯದ ದೃಢತೆ ಚಳುವಳಿಯಲ್ಲಿರೋ ವ್ಯಕ್ತಿಗಳಲ್ಲೂ ಇರೋದು ಬಹಳ ಮುಖ್ಯ. ಅದನ್ನು ಕಳಕೊಂಡಂಥವರ ಸಂಖ್ಯೆ ಹೆಚ್ಚಾದಾಗ ಆ ಚಳುವಳಿ ನಾಶವಾಗಿ ಹೋಗುತ್ತೆ. ತಂದೆಯವರು ಶಾಸಕರಾಗಿದ್ದರು ಅಂದಿರಿ. ಯಾವ ಪಕ್ಷವನ್ನು ಪ್ರತಿನಿದಿsಸ್ತಿದ್ರು? ಸ್ವಾತಂತ್ರ್ಯ ಬರೋಕು ಮುಂಚೆ ಜಸ್ಟೀಸ್ ಪಾರ್ಟಿ ಅಂತ ಒಂದು ರಚನೆ ಆಗಿತ್ತು ತಮಿಳುನಾಡಿನಲ್ಲಿ ಮತ್ತು ಕರ್ನಾಟಕದಲ್ಲಿ. ಈ ನಾನ್ ಬ್ರಾಹ್ಮಿನ್ ಮೂಮೆಂಟ್ ತಮಿಳುನಾಡಲ್ಲೂ ಬಹಳ ಶಕ್ತಿಯುತವಾಗಿ ಸಂಘಟನೆ ಆಗಿತ್ತು. ಸರಕಾರವನ್ನು ರಚನೆ ಮಾಡಿತ್ತು. ಅದೇ ಒಂದು ಚಳುವಳಿ ಕರ್ನಾಟಕದಲ್ಲಿ ಇತ್ತು. ಹಳೇ ಮೈಸೂರಿನಲ್ಲೂ ಮಹಾರಾಜರ ಕಾಲದಲ್ಲಿನಡೀತಾಇತ್ತು. ಆ ಕಾರಣಾನೇ ಸರೆಂವಿಶ್ವೇಶ್ವರಯ್ಯನವರ ಕಾಲದಲ್ಲಿ ಮೊದಲನೇ ಬಾರಿಗೆ ಮೀಸಲಾತಿ ಜಾರಿಗೆ ತಂದಾಗ, ನಮ್ಮ ತಂದೆಯವರು ಆ ಚಳವಳಿಯ ಭಾಗವಾಗಿದ್ದರು. ಮಾಡರಹಳ್ಳಿಯ ಯಾವ ನೆನಪುಗಳು ನಿಮಗೆ ಇವೆ? ಇಲ್ಲ, ನಾನು ಹುಟ್ಟಿದ್ದೇ ಮೈಸೂರು ಸಿಟಿನಲ್ಲಿ. ಅಷ್ಟೊತ್ತಿಗಾಗಲೇ ತಂದೆಯವರು ವಕೀಲರಾಗಿದ್ದರು. ಶಾಸಕರಾಗಿದ್ದರು. ಮೈಸೂರಲ್ಲಿ ವಾಸ ಮಾಡ್ತಾ ಇದ್ದೆವು. ರಜಾ ಬಂದಾಗಲೆಲ್ಲಾ ನಮ್ಮ ತಂದೆ ಹಳ್ಳಿಗೆ ಕರಕೊಂಡು ಹೋಗೋರು. ಜಮೀನೆಲ್ಲಾ ಸುತ್ತಾಡಾದು ಮಾಡ್ತಾ ಇದ್ದೆವು. ಅಷ್ಟೆ ಸಂಪರ್ಕ. ನೀವು ಕಾನೂನುಶಾಸ್ತ್ರ ಓದಿದೀರಿ, ತಂದೆಯವರ ಒತ್ತಡದಿಂದಲಾ? ನಾನು ಮೂಲತಃ ವಿeನದ ವಿದ್ಯಾರ್ಥಿ. ಅದರಲ್ಲೂ ನ್ಯಾಚುರಲ್ ಸೈನ್ಸಸ್ ಏನು ಕರೀತಾರೆ ಅದರ ವಿದ್ಯಾರ್ಥಿ. ನನ್ನ ಮೊದಲನೇ ಡಿಗ್ರಿ ವಿeನಾನೆ. ಆನಂತರ ತಂದೆಯವರ ಆಸೆಗೆ ಸ್ವಲ್ಪ ತಲೆಬಾಗಿ ಲಾ ಓದೋದಕ್ಕೆ ಶುರುಮಾಡಿದ್ದು. ಕಾಲೇಜಲ್ಲಿ ನಿಮ್ಮ ಗುರುಗಳು ಯಾರು? ಅಂಥ ಹೇಳಿಕೊಳ್ಳೋವಂಥ ಪ್ರಿಯವಾದ ಗುರುಗಳು ದುರದೃಷ್ಟವಶಾತ್ ನಮಗೆ ಯಾರೂ ಸಿಗಲಿಲ್ಲ. ಅವರೆಲ್ಲ ಪಕ್ಕದ ಮಹಾರಾಜ ಕಾಲೇಜಲ್ಲಿ ಇದ್ದರು. ಕುವೆಂಪು ಆವಾಗ ಅಸಿಸ್ಟೆಂಟ್ ಪ್ರೊಫೆಸರ್ ಅಲ್ಲಿ. ಆಗಲೇ ದೊಡ್ಡ ಹೆಸರು ಪಡೆದಿದ್ದರು. ಮತ್ತೆ ಅವರ ಸಭೆಗಳಿಗೆ ತಪ್ಪದೇನೇ ಹಾಜರಾಗುತ್ತಿದ್ದೆ. ೧೦೬೦ರ ದಶಕದ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದ ಚಟುವಟಿಕೆಗಳಲ್ಲಿ, ನಿಮ್ಮ ಹೆಸರ ಜತೆ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅಡಿಗರು ಕಡಿದಾಳು ಶಾಮಣ್ಣ ಹೀಗೆ ಅನೇಕ ಹೆಸರುಗಳು ಪ್ರಸ್ತಾಪವಾಗುತ್ತವೆ. ತೇಜಸ್ವಿಯವರ ಜತೆ ನಿಮ್ಮ ಒಡನಾಟ ಬಹಳ ಹೆಚ್ಚು. ಇಬ್ಬರೂ ರೈತರ ಬಗ್ಗೆ ಚಿಂತೆ ಮಾಡಿಕೊಂಡು ಬಂದೋರು. ನೀವು ರೈತಾಪಿ ಚಿಂತನೆಗೆ ಹೊರಳಲು ಏನು ಕಾರಣ? ನನಗೂ ತೇಜಸ್ವಿಗೂ ಪರಿಚಯ ಸುಮಾರು ೧೯೬೦ನೇ ಇಸ್ವಿಯಿಂದ. ಅಷ್ಟೊತ್ತಿಗಾಗಲೇ ನಾನು ಎಲ್‌ಎಲ್‌ಎಂ ಮುಗಿಸಿದ್ದೆ, ಕರ್ನಾಟಕ ಯೂನಿವರ್ಸಿಟಿಯಿಂದ. ಮುಗಿಸಿ ಜರ್ಮನಿ ಹೋಗಿಬಿಟ್ಟೆ ೪ ವರ್ಷ. ಅಲ್ಲಿಂದ ವಾಪಸು ಬರೋವಾಗಲೇನೆ ರೈತ ಸಂಘಟನೆ ಮಾಡಬೇಕು ವ್ಯವಸಾಯನೇ ಮಾಡಬೇಕು ಅಂತಲೇ ತೀರ್ಮಾನ ಮಾಡಿಕೊಂಡು ಬಂದಿದ್ದು. ಅಷ್ಟರಲ್ಲಿ ತೇಜಸ್ವಿಯವರು ವ್ಯವಸಾಯ ಶುರು ಮಾಡಿದ್ದರು. ಮತ್ತೆ ಸುಂದರೇಶ್, ನಮ್ಮ ರೈತಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರಲ್ಲ ಅವರೂ ವ್ಯವಸಾಯ ಶುರುಮಾಡಿದ್ದರು. ೧೬೫ರಲ್ಲಿ ನಾನೂ ವ್ಯವಸಾಯ ಶುರುಮಾಡಿದೆ. ನೀವು ಮೂಲತಃ ಕಾನೂನಿನ ವಿದ್ಯಾರ್ಥಿ. ರೈತಪರ ಚಿಂತನೆಗೆ ಜರ್ಮನಿಯಲ್ಲಿ ಹೇಗೆ ಪ್ರೇರಣೆ ಸಿಕ್ತು? ಕಾನೂನಲ್ಲಿ ನಾನು ಇಂಟರ್‌ನ್ಯಾಶನಲ್ ಲಾ ಅಂಡ್ ಇಂಟರ್‌ನ್ಯಾಶನಲ್ ರಿಲೇಶನ್ಸ್ ಅಧ್ಯಯನ ಮಾಡದೋನು. ಅದರಲ್ಲಿ ಸಾಮ್ರಾಜ್ಯಶಾಹಿ ಮಾಡ್ತಾ ಇರೊ ಜಾಗತಿಕ ಶೋಷಣೆ, ಇವೆಲ್ಲ ಸ್ಪಷ್ಟವಾಗಿ ಗೊತ್ತಾಗಲಿಕ್ಕೆ ಶುರುವಾಯಿತು. ಆಮೇಲೆ ಸ್ವಾತಂತ್ರ್ಯ ಬಂದ ಮೇಲೂ ಯಾವ ರೀತಿ ಕಲೋನಿಯಲಿಜಂ ಮುಂದುವರಿಸೋದರಲ್ಲಿ ಬಿಳೀ ರಾಷ್ಟ್ರಗಳೂ ಯಶಸ್ವಿಯಾಗಿದಾವೆ ಅನ್ನೋದು ಗೊತ್ತಾಯಿತು. ಜರ್ಮನಿ ಕೂಡ ಒಂದು ಬಿಳೀರಾಷ್ಟ್ರವೆ. ಅಲ್ಲಿನ ಪಠ್ಯಕ್ರಮದಲ್ಲಿ ಇವೆಲ್ಲ ಇದ್ದವಾ? ಯುಸೀ, ಇಂಟರ್‌ನ್ಯಾಶನಲ್ ಲಾದಲ್ಲಿ ಜರ್ಮನಿ ಪಠ್ಯಕ್ರಮ ಅಂತ ಏನಿರಲ್ಲ. ಎಲ್ಲಾ ದೇಶದಲ್ಲೂ ಒಂದೇ ಪಠ್ಯಕ್ರಮ ಇರಬೇಕಾಗುತ್ತೆ. ಜತೆಗೆ ನನ್ನ ಸುತ್ತ ಇದ್ದ ವಾತಾವರಣ ಕೂಡ ಇದಕ್ಕೆ ಕಾರಣವಾಯಿತು. ಹೇಳಿದೆನಲ್ಲ, ನಾನು ಬ್ರಾಹ್ಮಣೇತರ ಚಳುವಳಿ ನಡೀತಿದ್ದಂತಹ ವಾತಾವರಣದಲ್ಲಿ ಹುಟ್ಟಿದೆ ಅಂತ. ಆನಂತರ ಸ್ವಾತಂತ್ರ್ಯ ಬಂದ ಮೇಲೆ, ಕಿಸಾನ್ ಮಜದೂರ್ ಪ್ರಜಾಪಾರ್ಟಿ ಸದಸ್ಯರು ನಮ್ಮ ತಂದೆ. ಆನಂತರ ಪ್ರಜಾ ಸೋಶಲಿಸ್ಟ್ ಪಾರ್ಟಿ ಆಯಿತು. ಆಗಲೂ ನಮ್ಮ ತಂದೆ ಆ ಪಾರ್ಟಿ ಸದಸ್ಯರು. ಹಾಗಾಗಿ ಸಮಾಜವಾದಿ ವಾತಾವರಣದಲ್ಲೆ ಬೆಳೆದೆ. ವಿದ್ಯಾಭ್ಯಾಸಕ್ಕೆ ಭಾರತದವರು ಸಾಮಾನ್ಯವಾಗಿ ಇಂಗ್ಲೆಂಡಿಗೆ ಹೋಗ್ತಾರೆ. ನೀವು ಜರ್ಮನಿ ಆರಿಸಿಕೊಂಡಿರಿ! ಇಲ್ಲ. ವಿದ್ಯಾಭ್ಯಾಸಕ್ಕೆ ಅಂತ ಹೋಗಿದ್ದು ಜರ್ಮನಿ, ಫ್ರಾನ್ಸ್ ಮತ್ತು ಹಾಲೆಂಡ್‌ಗೆ. ಬ್ರಿಟಿಷರು ಮಾಡಿದಂಥ ಕೆಲಸಗಳೆಲ್ಲ ಗೊತ್ತಿದ್ದರಿಂದ ನನಗೆ ಇಂಗ್ಲೆಂಡ್ ಹೋಗಲಿಕ್ಕೆ ಮನಸ್ಸೇ ಇರಲಿಲ್ಲ. ಇನ್ನುವರೆಗೂ ನಾನು ಹೋಗಿಲ್ಲ. ಇಂಗ್ಲೆಂಡೂ ನನ್ನನ್ನು ಕರೆಸ್ಕೊಂಡಿಲ್ಲ(ನಗು). ನೀವು ಭಾರತ ಮತ್ತು ಯುರೋಪ್ ಎರಡೂ ಪರಿಸರಗಳಲ್ಲಿ ಕಲಿತಿದ್ದೀರಿ. ಎರಡೂ ಕಡೆ ಶಿಕ್ಷಣದ ವಿಷಯದಲ್ಲಿ ಎದ್ದುಕಾಣೋ ಫರಕು ಯಾವುದು ಅನಸುತ್ತೆ ಸಾರ್? ಮುಖ್ಯವಾಗಿ ಅಧ್ಯಯನದ ವಿಧಾನ, ಮತ್ತೆ ಶಿಕ್ಷಣ ಸ್ವಾತಂತ್ರ್ಯ, ಆ ಒಂದು ವೈಚಾರಿಕ ಮುಕ್ತತೆ, ಅದ್ಯಾವುದೂ ಇಲ್ಲಿ ಕಾಣಲ್ಲ. ಜೊತೆಗೆ ಇದಕ್ಕೆ ಬೇರೆ ಸಾಮಾಜಿಕ ವ್ಯವಸ್ಥೆಗಳು ಕಾರಣ ಆಗ್ತಾವೆ. ಯೂರೋಪಿನಲ್ಲಿ ಈ ವೈಚಾರಿಕ ಸ್ವಾತಂತ್ರ್ಯಕ್ಕೆ ಸಂಪೂರ್ಣ ಪೂರಕವಾದಂಥ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಇದೆ. ಇಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸೇರಿದ ಕೂಡಲೇ ಗುಲಾಮ ಮನೋಭಾವನೆ ಶುರುವಾಗಿಬಿಡುತ್ತೆ. ಮುಂದಿನ ಉದ್ಯೋಗದ ಯೋಚನೆ, ಕರಿಯರ್ ಯೋಚನೆ ಇತ್ಯಾದಿಗಳು ಒಂದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವಾನೇ ವಕ್ರಗೊಳಿಸಿ ಕೊಂಡು ಬಿಡತಾರೆ. ಒಂದು ನಾಗರಿಕ ಸಮಾಜದಲ್ಲಿ ಪ್ರಜೆಗಳಿಗೆ ಇರುವ ಸಾಮಾಜಿಕ ಆರ್ಥಿಕ ಭದ್ರತೆ ಅವರ ವೈಚಾರಿಕ ಸ್ವಾತಂತ್ರ್ಯಕ್ಕೆ ಕಾರಣವಾಗುತ್ತೆ ಅಂತ ಹೇಳತಾ ಇದೀರಾ? ನಿಜವಾಗಲೂ. ನಿಮ್ಮ ಚಿಂತನೆಗಳಿಗೆ ಲೋಹಿಯಾರ ಪ್ರೇರಣೆಯಿದೆ. ಅವರ ಚಿಂತನೆಗಳ ಸಂಪರ್ಕ ನಿಮಗೆ ಯಾವಾಗ ಬಂದಿತು? ತಮಾಷೆ ಹೇಳತೀನಿ. ನಾನು ಯುರೋಪಲ್ಲಿ ನಾಲ್ಕು ವರ್ಷ ಸ್ವತಃ ಚಿಂತನೆ ಮಾಡಿದೆ. ಅಲ್ಲಿಯವರೆಗೂ ನಾನು ಲೋಹಿಯಾನ ಓದಿರಲಿಲ್ಲ. ನರೇಂದ್ರದೇವ ಅವರದೂ ಇವರದೂ ಲಿಟರೇಚರ್ ಮನೆಗೆ ಬರ್ತಾ ಇತ್ತು. ಆದರೆ ನಾನೇನು ಚಿಂತನೆಗಳನ್ನ ನಡಸಿದ್ದೆ, ದೇಶದ ರಾಜಕೀಯ ಬಗ್ಗೆ ಇರಲಿ, ಅಂತರರಾಷ್ಟ್ರೀಯ ರಾಜಕೀಯದ ಬಗ್ಗೆ ಇರಲಿ, ಇಂಡಿಯಾಕ್ಕೆ ಬಂದ ನಂತರ ಎಲ್ಲಾ ರಾಜಕೀಯ ಪಕ್ಷಗಳನ್ನು ನೋಡಿ ಇನ್ನು ಆಯ್ಕೆ ಮಾಡೋ ಸ್ಥಿತಿನಲ್ಲಿ ಇರೋವಾಗಲೇನೆ, ಲೋಹಿಯಾರ ’ಮಾರ್ಕ್ಸ್ ಗಾಂದಿs ಅಂಡ್ ಸೋಶಿಯಲಿಜಂ’ ಪುಸ್ತಕ ನನ್ನ ಕೈಗೆ ಸಿಕ್ತು. ಅದನ್ನು ಓದೋಕೆ ಶುರುಮಾಡದಾಗ, ನಾನೇ ಬರದಂಗೆ ಕಾಣಸ್ತಾ ಇತ್ತು! ನಾನು ಆಲೋಚನೆ ಮಾಡಿದ ವಿಚಾರಗಳೆಲ್ಲಾ ಅಲ್ಲೇ ಇತ್ತು. ಆನಂತರ ಆಯ್ಕೆ ಮಾಡೋ ಸಮಸ್ಯೇನೆ ಬರ್ಲಿಲ್ಲ. ನೇರ ಸಮಾಜವಾದಿ ಪಕ್ಷ ಸೇರಿದ್ದು, ಸಮಾಜವಾದಿ ಯುವಜನ ಸಭಾ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡೋದಿಕ್ಕೆ ಒಪ್ಪಿಗೆ ಕೊಟ್ಟಿದ್ದು, ಎಲ್ಲಾ ನಡೀತಾ ಬಂತು. ಲೋಹಿಯಾ ಚಿಂತನೆಯಲ್ಲಿ ನಿಮಗೆ ಸೆಳೆದ ಮುಖ್ಯ ಸಂಗತಿ ಯಾವುದು? ಅವರು ಉಪಯೋಗಿಸೋ ಭಾಷೆ ಮತ್ತು ಶೈಲಿ. ಅದು ನನ್ನ ಶೈಲೀನೇ. ಆ ಕಾರಣಕ್ಕೆ ಆಕರ್ಷಕ ಆಯ್ತೊ ಏನೋ? ಆ ಶಾರ್ಪ್‌ನೆಸ್ ಇದೆಯಲ್ಲ ದಟ್ಸ್ ವಾಟ್ ಐ ಅಟ್ರಾಕ್ಟೆಡ್ ಮಿ. ಅಂಡ್ ದೆನ್ ಹಿಸ್ ಕನ್‌ಸಿಸ್ಟೆನ್ಸಿ ಇನ್ ಪಾಲಿಟಿಕ್ಸ್. ನಂತರ ಅದೇ ದಿಕ್ಕಿನಲ್ಲಿ ಇನ್ನೂ ಹೆಚ್ಚು ವೈeನಿಕವಾಗಿ ಆಲೋಚನೆ ಮಾಡಿದಂಥ ಏಕೈಕ ಚಿಂತಕ ಇವತ್ತಿಗೂ ಇಂಡಿಯಾದಲ್ಲಿ ಅಥವಾ ಜಗತ್ತಿನಲ್ಲೇ ಗಾಂದಿsಜಿ ಒಬ್ಬರೆ. ಈಗಿನ ಭಾರತದ ಮತ್ತು ಅಂತಾರಾಷ್ಟ್ರೀಯ ಸನ್ನಿವೇಶದಲ್ಲಿ ಲೋಹಿಯಾ ಚಿಂತನೆ ಪ್ರಸ್ತುತ ಅಂತ ಭಾವಿಸ್ತೀರಾ? ಹೇಳ್ತೀನಿ, ಈಗ ೪-೫ ದಿವಸದಲ್ಲಿ ಅವರದೊಂದು ಲೇಖನ ಹುಡುಕ್ತಾ ಇದ್ದೆ. ಸಿಕ್ತು ಕೈಗೆ. ’ಎಕನಾಮಿಕ್ಸ್ ಆಫ್ಟರ್ ಮಾರ್ಕ್ಸ್’ ಅಂತ. ಮತ್ತೆ ಓದೋಣ ಅಂತ ಶುರು ಮಾಡಿದೆ. ಏನಾಗುತ್ತೆ, ಲೋಹಿಯಾ ಬರೆದಿರೋದು, ದಿನನಿತ್ಯ ಓದಬಹುದು ತಾವು. ಒಂದು ಹೊಸದು ಕಾಣ್ತಾ ಇರುತ್ತೆ ಅಲ್ಲಿ. ಇವತ್ತು ಏನು ಜಾಗತೀಕರಣ ಆಗ್ತಾ ಇದೆ, ಅಮೆರಿಕನ್ ಕ್ಯಾಪಿಟಲಿಜಂ ತಾನು ಉಳಿಬೇಕಾದರೆ ಏನನ್ನ ಮಾಡ್ಲೇಬೇಕಾಗಿದೆ, ಅದನ್ನು ಲೋಹಿಯಾ ೧೯೪೨ನೇ ಇಸವಿನಲ್ಲಿ ಬರದಿದಾರೆ. ಅವರು ಆಗ ಏನ್ ಬರದರೋ ಅದನ್ನ ಅಮೆರಿಕ ಈಗ ಮಾಡ್ತಾ ಇದೆ. ಇಷ್ಟೊಂದು ಮುಂಗಾಣ್ಕೆಯುಳ್ಳ ರಾಜಕೀಯ ತತ್ವಶಾಸ್ತ್ರವನ್ನು ಲೋಹಿಯಾ ರಚಿಸಿದರು. ಆದರೆ ಭಾರತದಲ್ಲಿ ಅವರ ಚಿಂತನೆಯನ್ನು ಅನುಸರಿಸುವ ಸಮಾಜವಾದಿ ರಾಜಕಾರಣ ಯಾಕೆ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಲಿಲ್ಲ? (ದೀರ್ಘಾಲೋಚನೆ ಮಾಡಿ) ಸೀ, ಕ್ಯಾರೆಕ್ಟರ್ ಅಂಡ್ ಕಂಡಕ್ಟ್, ನಡತೆ ಮತ್ತು ಗುಣ, ಲೋಹಿಯಾ ಸಿದ್ಧಾಂತದ ಒಂದು ಭಾಗ. ಇವನ್ನು ಲೋಹಿಯಾ ಮೀನ್ಸ್ ಅಂಡ್ ಎಂಡ್ಸ್‌ಗೆ ಲಿಂಕ್ ಮಾಡಿ ಸಿದ್ಧಾಂತ ನಿರೂಪಿಸ್ತಾರೆ. ಅವರ ಜೊತೆ ಕೆಲಸ ಮಾಡ್ತಾ ಇದ್ದವರಲ್ಲಿ ಈ ಅಂಶಗಳನ್ನ ಮೈಗೂಡಿಸಿಕೊಳ್ಳೋದರಲ್ಲಿ ಸೋತೋರೇ ಜಾಸ್ತಿ, ಜಾರ್ಜ್ ಫರ್ನಾಂಡೀಸ್ ಅವರಿಂದ ಹಿಡಿದು ನಮ್ಮ ಕರ್ನಾಟಕದ ಇವತ್ತಿನ ಅನೇಕ ಸಮಾಜವಾದಿ ರಾಜಕಾರಣಿಗಳವರೆಗೆ. ಲೋಹಿಯಾ ಮೀನ್ಸ್ ಅಂಡ್ ಎಂಡ್ಸ್ ಸಂಬಂಧವನ್ನ ಟೈಂ ಬಗ್ಗೆನೂ ಲಿಂಕ್ ಮಾಡ್ತಾ ಇದ್ದರು. ಟೈಂ ಈಸ್ ನಾಟ್ ಜಸ್ಟ್ ಎ ಮೂಮೆಂಟ್. ಇಟ್ ಈಜ್ ಆಲ್ಸೊ ಎಟರ್ನಿಟಿ. ಎವ್ವೆರಿ ಮೂಮೆಂಟ್ ಈಜ್ ಎಟರ್ನಿಟಿ ಅಂದಾಗ, ನೀವು ಇವತ್ತು ಸುಳ್ಳು ಹೇಳಿ ನಾಳೆ ಸತ್ಯಸ್ಥಾಪನೆ ಮಾಡ್ತೀನಿ ಅನ್ನೋಕೆ ಆಗೋಲ್ಲ. ಲೋಹಿಯಾ ಇಂಡಿಯಾದ ಕಮ್ಯುನಿಸ್ಟರ ಮೇಲೆ ಕ್ರಿಟಿಕಲ್ ಆಗಿದ್ದರು. ಇದನ್ನ ನೀವು ಹೇಗೆ ವಿಶ್ಲೇಷಿಸ್ತೀರಿ? ಆಲ್ಸೊ ಅಕಾರ್ಡಿಂಗ್ ಟು ಲೋಹಿಯಾ, ದಿ ಗ್ರೇಟೆಸ್ಟ್ ಮಿಸ್ಟೇಕ್ ಮಾರ್ಕ್ಸ್ ಡಿಡ್ ವಾಜ್, ಅಕ್ಸೆಪ್ಟಿಂಗ್ ದಿ ಕ್ಯಾಪಿಟಿಲಿಸ್ಟ್ ಟೆಕ್ನಿಕ್ಸ್ ಆಫ್ ಪ್ರೊಡಕ್ಷನ್ ಅಂಡ್ ದಿ ಕ್ಯಾಪಿಟಿಲಿಸ್ಟ್ ಮೋಡ್ ಆಫ್ ಪ್ರೊಡಕ್ಷನ್, ಆಜ್ ಆನ್ ಐಡಿಯಲ್ ಮೋಡ್ ಆಫ್ ಪ್ರೊಡಕ್ಷನ್. ಲೋಹಿಯಾ ಅವರು ಹೇಳೋದು, ಇದನ್ನ ಒಪೊಕೆ ಮಾರ್ಕ್ಸ್‌ನ ಮನಸು ಯಾಕೆ ತಯಾರಾಯ್ತು ಅಂದ್ರೆ, ಬಿಕಾಸ್ ಹಿ ವಾಸ್ ಆಲ್ಸೋ ಯುರೋಪಿಯನ್. ಐ ವುಡ್ ಸೇ ದಟ್ ವಾಜ್ ದಿ ಬಿಗ್ಗೆಸ್ಟ್ ವೀಕ್‌ನೆಸ್. ಇವತ್ತು ಜಾಗತೀಕರಣದ ವಿರುದ್ಧ ಯುರೋಪಲ್ಲಿ ಏನು ಜನಾಂದೋಲನಗಳು ನಡೀತಾ ಇವೆ. ಅಲ್ಲೂನು ಇದನ್ನು ಕಾಣಬಹುದು. ದಿ ಸೇಮ್ ಯುರೋಪಿಯನ್ ಮೋಮೆಂಟ್ಸ್ ಹೂ ವರ್ ಅಪೋಸಿಂಗ್ ಗ್ಲೋಬಲೈಜೇಶನ್ ಅಲಾಂಗ್ ವಿತ್ ಅಸ್, ಎಕ್ಸಿಬಿಟ್ಸ್ ದಟ್ ಕೈಂಡ್ ಆಫ್ ವೀಕ್‌ನೆಸ್ ಆಕೇಶನಲಿ. ಅದೇ ಕಾರಣಕ್ಕೆ ಹೈದ್ರಾಬಾದ್‌ನಲ್ಲಿ ಮೊನ್ನೆ ಆಯಿತಲ್ಲ ಏಶಿಯನ್ ಸೋಶಿಯಲ್ ಪೋರಂ, ಅದಕ್ಕೆ ನಾನು ಹೋಗಲಿಲ್ಲ. ಹೋದ ವರ್ಷ ವರ್ಲ್ಡ್ ಸೋಶಿಯಲ್ ಫೋರಂ ಆಯ್ತು ಬ್ರೆಜಿಲ್‌ನಲ್ಲಿ. ಅಲ್ಲೂ ಭಾಷಣ ಮಾಡಬೇಕಿತ್ತು. ನಾನು ಹೋಗಲಿಲ್ಲ. ಅದಕ್ಕೆ ಕಾರಣ ಏನಂತಂದರೆ, ವರ್ಲ್ಡ್ ಸೋಶಿಯಲ್ ಫೋರಮ್‌ಗೆ ಯಾರು ಸಂಚಾಲಕರು ಅಂತ ಇದಾರೆ, ಆ ಸಂಚಾಲಕರು ಕ್ಯೂಬಾದ ಅಧ್ಯಕ್ಷ ಪಿsಡಲ್ ಕ್ಯಾಸ್ಟ್ರೋಗೆ ಬ್ರೆಜಿಲ್ ಸಮಾವೇಶಕ್ಕೆ ಆಹ್ವಾನ ಕೊಡೋದಕ್ಕೆ ವಿರೋಧ ಮಾಡಿದರು. ಅವರು ಹೇಳಿದ್ದು ಕ್ಯಾಸ್ಟ್ರೋಗೆ ಕರೆದರೆ ಜಾಗತೀಕರಣ ವಿರೋದಿs ಚಳುವಳಿಯಲ್ಲಿ ಒಡಕು ಬರುತ್ತೆ. ನಾನಂದೆ - ’ಕರೀದೇ ಇದ್ದರೂ ಒಡಕು ಬರುತ್ತೆ. ಆ ಕಾರಣಕ್ಕೆ ನಾನು ಬರಲ್ಲ’. ಈಗ ಇದೇ ೨೬-೨೭ಕ್ಕೆ ಅಲ್ಲಿ ನಡೀತಾ ಇದೆ. ನಾನು ಇರಬೇಕಿತ್ತಲ್ಲಿ. ನಾನು ಬರಲ್ಲ ಅಂದೆ. ಮುಂದಿನ ವರ್ಷ ಇಂಡಿಯಾದಲ್ಲಿ ವರ್ಲ್ಡ್ ಸೋಶಿಯಲ್ ಫೋರಂ ನಡೀಬೇಕು ಅಂತ ತೀರ್ಮಾನ ಮಾಡಿದಾರೆ. ಇಲ್ಲಿ ನಡೀಬೇಕು ಅನ್ನೋದಾದರೆ, ಇಲ್ಲಿಗೆ ಕ್ಯಾಸ್ಟ್ರೋ ಬಂದು ಉದ್ಭಾಟನೆ ಮಾಡಬೇಕು ಅಂತ ಸಂಚಾಲನಾ ಸಮಿತಿ ತೀರ್ಮಾನ ಮಾಡಿದರೆ, ನಾನು ಬರ್ತೀನಿ ಅಂತ ಹೇಳಿದೀನಿ. ಈ ಒಂದು ನಿರ್ದಿಷ್ಟ ಅಂಶದ ಮೇಲೆ ನೀವು ಯಾಕೆ ಒತ್ತಾಯ ಮಾಡತಾ ಇದೀರಿ? ಸೀ, ಬಿಕಾಸ್ ಆ ಆರ್ಗನೈಜರ್ಸ್ ಏನಿದಾರೆ, ಯುರೋಪಿನ ಕೆಲವು ಸಂಘ-ಸಂಸ್ಥೆಗಳ ಪದಾದಿsಕಾರಿಗಳು, ವರ್ಲ್ಡ್ ಸೋಶಿಯಲ್ ಫೋರಂನ ಸಂಚಾಲಕರು, ಅಮೆರಿಕನ್ ಕ್ಯಾಪಿಟಲಿಜಂ ಬಗ್ಗೆ ಬಹಳ ಒಂದು ಸಾಫ್ಟ್ ಲೈನ್ ತಗೋತಾರೆ. ಈವನ್ ದೆ ಗೋ ಟು ದಿ ಎಕ್ಸ್‌ಟೆಂಟ್ ದಟ್ ಆಂಟಿ ಗ್ಲೋಬಲೈಜೇಶನ್ ಈಜ್ ನಾಟ್ ಆಂಟಿ ಅಮೇರಿಕ. ವಿ ಆರ್ ನಾಟ್ ಆಂಟಿ ಜಾರ್ಜ್‌ಬುಶ್ ಅಂತಾರೆ. ಇಂಥಾವೆಲ್ಲ ಮಾತಾಡೋರ ಜೊತೆಗೆ ಏನೂಂತ ಚಳುವಳಿ ಮಾಡ್ತೀರಿ? ಮಾರ್ಕ್ಸ್‌ವಾದವು ಯೂರೋಪಿನ ಒಂದು ಚಾರಿತ್ರಿಕ ಸಂದರ್ಭದಲ್ಲಿ ಹುಟ್ಟಕೊಂಡಿತು. ಅದರಲ್ಲಿ ಸಹಜವಾಗಿ ಆ ಕಾಲ ದೇಶ ಸನ್ನಿವೇಶಕ್ಕೆ ಅನುಸಾರವಾದ ಕೆಲವು ತತ್ವಗಳಿವೆ. ಅದು ಬೇರೆಬೇರೆ ದೇಶದ ಸಮಾಜಗಳ ಸಂದರ್ಭಗಳ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬೇಕು ಅಂತ ನಿರೀಕ್ಷಿಸೋಕೆ ಸಾಧ್ಯವಿಲ್ಲ. ಯಾವುದೇ ತತ್ವಕ್ಕೂ ಅಂತಹ ಸರ್ವಕಾಲೀನ ಶಕ್ತಿಯಿರೋಲ್ಲ. ವಾಸ್ತವ ಏನಂದರೆ, ಆ ತತ್ವಚಿಂತನೆಯನ್ನು ನಮ್ಮ ಚಾರಿತ್ರಿಕ ಸಂದರ್ಭಕ್ಕೆ ನಾವು ಹೇಗೆ ಪರಿವರ್ತಿಸಿ ಬಳಸ್ತೇವೆ ಹಾಗೂ ಅದನ್ನಿಟ್ಟುಕೊಂಡು ನಮ್ಮ ವರ್ತಮಾನದ ಪರಿಸರವನ್ನ ಮುಖಾಮುಖಿ ಮಾಡುತ್ತೇವೆ ಅನ್ನುವುದು. ಲೋಹಿಯಾ ಸಮಾಜವಾದವು ಮಾರ್ಕ್ಸ್‌ವಾದವನ್ನು ವಿಮರ್ಶೆ ಮಾಡತಾ ಇರುವಾಗ ಎತ್ತುವ ಮುಖ್ಯ ಪ್ರಶ್ನೆ ಯಾವುದು? ಇಂಡಿಯನ್ ಮಾರ್ಕ್ಸಿಸ್ಟ್ ವರ್ ಜಸ್ಟ್ ಇಮಿಟೇಟರ್ಸ್ ಆಫ್ ರಶಿಯನ್ ಕಮ್ಯುನಿಸಂ ಆರ್ ಚೈನೀಸ್ ಕಮ್ಯುನಿಸಂ. ಇವತ್ತಿಗೂನೂ ಈ ಭಾರತದ ಕಮ್ಯೂನಿಸ್ಟ್ ಚಳುವಳಿ ಕೇಂದ್ರೀಕರಣವನ್ನ ವಿರೋಧ ಮಾಡಿಲ್ಲ. ಸೆಂಟ್ರಲೈಜೆಶನ್ಸ್ ಇನ್ ಎವರಿಥಿಂಗ್, ಅದನ್ನ ವಿರೋಧ ಮಾಡಿಲ್ಲ. ಕ್ಯಾಪಿಟಲಿಸ್ಟ್ ಮೋಡ್ ಆಫ್ ಪ್ರೊಡಕ್ಷನನ್ನ ವಿರೋಧ ಮಾಡಿಲ್ಲ. ಸೋಸಿಯಲೈಜೇಶನ್ಸ್ ಆಫ್ ಇಂಡಸ್ಟ್ರೀಸ್ ಬಗ್ಗೆ ಹೋರಾಟ ಮಾಡಿಲ್ಲ. ಇಂಡಿಯನ್ ಕಮ್ಯುನಿಸಂ ಅನ್ನ ನೀವು ಬೀಸುಗ್ರಹಿಕೆಯಲ್ಲಿ ನೋಡತಾ ಇದೀರಾ ಅಂತ ಅನುಮಾನ. ಭಾರತದಲ್ಲಿ ಅನೇಕ ಸೈದ್ಧಾಂತಿಕ ನೆಲೆಯ ಕಮ್ಯೂನಿಸ್ಟ್ ಚಳುವಳಿಗಳಿದಾವೆ. ಅವಕ್ಕೂ ಇದು ಅನ್ವಯಿಸುತ್ತೆ. ಈವನ್ ಫಾರ್ ದಿ ಪೀಪಲ್ಸ್ ವಾರ್‌ಗ್ರೂಪ್. ಆಂಧ್ರಪ್ರದೇಶದಲ್ಲಿ ೧೯೯೨ರಿಂದ ಈಚೆಗೆ ನಾನು ಅವರೇ ಕರೆದ ಬಹಳ ಸಭೆಗೆ ಹೋಗಿದೀನಿ. ಅವರು ಇಂಟ್ರನಲ್ ಕಾಂಟ್ರಡಿಕ್ಷನ್ ಅಂತ ಮಾತಾಡ್ತಾರೆ. ವಾಟ್ ಈಸ್ ದಿ ಸೀರಿಯಸ್ ಮೋಸ್ಟ್ ಕಾಂಟ್ರಡಿಕ್ಷನ್ ನೌ? ಹೂ ಈಜ್ ದಿ ಮೋಸ್ಟ್ ಸೀರಿಯಸ್ ಎನಿಮಿ ನೌ? ನಾನು ಕೇಳಿದೆ. ’ನೀವು ನಮ್ಮ ಪೋಲಿಸ್ ಸ್ಟೇಶನ್ಸ್‌ಗೆ ಬಾಂಬ್ ಹಾಕ್ತೀರಿ. ನಮ್ಮ ತಹಶೀಲ್ದಾರ್ ಕbsರಿಗೆ ಬಾಂಬ್ ಹಾಕ್ತೀರಿ. ವೈ ನಾಟ್ ಯು ಎಕ್ಸ್‌ಪ್ಲೋಡ್ ಮಲ್ಟಿನ್ಯಾಶನಲ್ ಕಾರ್ಪೋರೇಶನ್ಸ್?’ ಎಲ್ಲೋ ಒಂದು ಕೋಕಾ-ಕೋಲಾ ಬಾಟಲಿಂಗ್ ಯೂನಿಟ್ಟನ್ನ ಈಚೆಗೆ ಧ್ವಂಸ ಮಾಡಿದರೆ ಹೊರತು, ದೊಡ್ಡ ದೊಡ್ಡದನ್ನ ಎಕ್ಸ್‌ಫ್ಲೋಡ್ ಮಾಡಿ ಆಮೇಲೆ ಈ ಚಿಲ್ಲರೆ ಇಂಟರ್ನಲ್ ಕಾಂಟ್ರಡಿಕ್ಷನ್ ನಾವು ವಿಚಾರಿಸ್ಕೋಬಹುದು. ಅದನ್ನು ಮಾಡೋಕೆ ತಯಾರಿಲ್ಲ. ಈವನ್ ಸಿಪಿಎಂ ಗೌರ್ನಮೆಂಟ್ ಇನ್ ಕಲ್ಕತ್ತಾ, ಗ್ಲೋಬಲೈಜೇಶನ್ನ ಸಂಪೂರ್ಣ ವಿರೋಧ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಅದರ ಬದಲು ಜ್ಯೋತಿಬಸುಗೆ ಉತ್ತರಾದಿsಕಾರಿ ಅನ್ನೋವಂಥ ಸೋಮನಾಥ ಚಟರ್ಜಿ ಸೀನಿಯರ್ ಮೋಸ್ಟ್ ಮೆಂಬರ್ ಆಫ್ ಪಾರ್ಲಿಮೆಂಟ್, ಅವರನ್ನು ಒಂದು ಕಾರ್ಪೋರೇಷನ್ನಿಗೆ ಅಧ್ಯಕ್ಷ ಮಾಡಿದಾರೆ. ಆ ಕಾರ್ಪೋರೇಷನ್ ಕೆಲಸ ಅಟ್ರಾಕ್ಟಿಂಗ್ ಫಾರೀನ್ ಕ್ಯಾಪಿಟಲ್. ಇಂಥ ಒಂದು ಹಳಿತಪ್ಪಿದ ವಿಚಾರದ ಮೇಲೆ ಕಮ್ಯೂನಿಸ್ಟ್ ಚಳುವಳಿ ನಡೆದಿರೋದು ಇಂಡಿಯಾದಲ್ಲಿ. ಕಮ್ಯೂನಿಸಂ ಕುರಿತ ಲೋಹಿಯಾ ಅವರ ನಿಲುವುಗಳು, ಅವರ ಕಾಲದ ಭಾರತದ ಕಮ್ಯುನಿಸ್ಟರ ನಿಲುವುಗಳನ್ನು ತೀವ್ರವಾಗಿ ವಿರೋದಿsಸುತ್ತ ರೂಪುಗೊಂಡಂತಹವು. ವಾಸ್ತವವಾಗಿ ಅವನ್ನು ಕಮ್ಯುನಿಸಂ ವಿರೋದಿsಯಾದವು ಎಂದು ಕರೆಯಬಾರದು ಎಂಬ ವ್ಯಾಖ್ಯಾನಗಳಿವೆ. ನೋನೋ. ಲೋಹಿಯಾನ ಸರಿಯಾಗಿ ಅರ್ಥಮಾಡಿಕೊಳ್ಳದೇನೆ ಮಾಡಿರುವ ವ್ಯಾಖ್ಯಾನ ವಿದು. ಅವರು ’ಎಕನಾಮಿಕ್ಸ್ ಆಫ್ಟರ್ ಮಾರ್ಕ್ಸ್’ ಅನ್ನೋ ಪ್ರಬಂಧ ಬರೆದಾಗ ಅವರ ಮನಸಲ್ಲಿ ಡಾಂಗೆ, ನಂಬೂದರಿ ಪಾದ್ ಇವರ‍್ಯಾರೂ ಇರಲಿಲ್ಲ. ನೀವು ಸಮಾಜವಾದಿ ಯುವಜನ ಸಭಾ ಶುರುಮಾಡಿದಾಗ ಲೋಹಿಯಾವಾದಕ್ಕೂ ಆಗಿನ ಕರ್ನಾಟಕ ಸಾಮಾಜಿಕ ರಾಜಕೀಯ ಸಂದರ್ಭಕ್ಕೂ ಯಾವ ತರಹ ಸಂಬಂಧ ಇತ್ತು? ನಾವು ಯುವಜನ ಸಭಾ ಪ್ರಾರಂಭ ಮಾಡಿದಾಗ ಲೋಹಿಯಾ ವಿಚಾರಗಳನ್ನು ಯುವ ಜನತೆ ಮತ್ತು ಬುದ್ಧಿಜೀವಿಗಳು ಯಾವ ರೀತಿ ಸ್ವೀಕರಿಸಿದರು ಅಂತ ನೋಡಿದರೆ, ಆಗಲೇ ಕಾಲ ಪಕ್ವವಾಗಿತ್ತು. ಆಕ್ಚುವಲಿ ನಾವು ಚಟುವಟಿಕೆ ಹೆಚ್ಚಿಗೆ ಮಾಡಿದ್ದು ೧೯೬೮ರ ನಂತರ. ಲೋಹಿಯಾ ತೀರಿಕೊಂಡ ಮೇಲೆ. ಆದರೆ ೧೯೬೭ರ ಹೊತ್ತಿಗೆ ಏಳು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳು ತೆಗೆದುಹಾಕಿ ಕಾಂಗ್ರೆಸ್ಸೇತರ ಸರಕಾರಗಳು ರಚನೆಯಾಗಿದ್ದವು. ಲೋಹಿಯಾ ಅವರ ಒಂದು ಸೂಚನೆ ಮೇರೆಗೆ ನಡೀತಾ ಇತ್ತು ಆ ಕೆಲಸ. ಮತ್ತೆ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ಸನ್ನು ತೆಗೆಯುವಂತಹ ಒಂದು ಯೋಜನೆ ಪಕ್ವವಾಗಿತ್ತು. ದುರದೃಷ್ಟವಶಾತ್ ಲೋಹಿಯಾ ೧೯೬೭ರಲ್ಲಿ ತೀರಿಕೊಂಡರು. ಅಷ್ಟೊತ್ತಿಗಾಗಲೇ ದೇಶದ ತುಂಬಾ ’ನಾನ್ ಕಾಂಗ್ರೆಸ್ಸಿಸಂ’ ಒಂದು ವಿಚಾರವಾಗಿ ಸಾರ್ವತ್ರಿಕವಾಗಿ ಸ್ವೀಕಾರವಾಗಿತ್ತು. ಅಂಥ ಕಾಲದಲ್ಲಿ ನಾವು ಕರ್ನಾಟಕದಲ್ಲಿ ಸಮಾಜವಾದಿ ಚಳುವಳಿ ಶುರುಮಾಡಿದ್ದು. ಕರ್ನಾಟಕ ಲೋಹಿಯಾವಾದಿ ರಾಜಕಾರಣಿಗಳು ಸಾಮಾನ್ಯವಾಗಿ ಸಾಹಿತ್ಯಾಸಕ್ತರು. ಕುವೆಂಪು ಅಬಿsಮಾನಿಗಳು. ಕುವೆಂಪು ಕೂಡ ಒಂದು ಬಗೆಯ ಸಮಾಜವಾದಿ ದರ್ಶನವನ್ನು ತಮ್ಮ ಕೃತಿಗಳಲ್ಲಿ ಪ್ರಕಟಿಸುತ್ತಿದ್ದವರು. ಲೋಹಿಯಾ ಹಾಗೂ ಕುವೆಂಪು ಇವರಿಬ್ಬರಲ್ಲಿ ಯಾವ ಬಗೆಯ ಸಾಮ್ಯ ಹಾಗೂ ಬಿsನ್ನತೆ ಕಾಣ್ತೀರಿ? ಅಷ್ಟೊಂದು ವಿವರವಾಗಿ ನಾವು ಹೋಲಿಕೆ ಮಾಡಕೆ ಸಾಧ್ಯ ಇಲ್ಲದಿದ್ದರೂ, ಸ್ಥೂಲವಾಗಿ ನೋಡಿದಾಗ ಹೋಲಿಕೆಗಳು ಜಾಸ್ತಿ ಇವೆ. ಅದರಲ್ಲೂ ಮಾತೃಭಾಷೆ ಬಗ್ಗೆ ಇರಬಹುದು. ಜಾತಿಪದ್ಧತಿ ಬಗ್ಗೆ ಇರಬಹುದು. ರೈತನ ಬಗ್ಗೆ ಅಥವಾ ಆಸ್ತಿವ್ಯವಸ್ಥೆ ಬಗ್ಗೆ ಇರಬಹುದು. ವೈದಿಕಶಾಹಿ ಬಗ್ಗೆ ಇರಬಹುದು. ಕುವೆಂಪು ಲೋಹಿಯಾ ಅವರಷ್ಟು ವಿವರವಾಗಿ ಈ ಸಮಸ್ಯೆಗಳ ಬಗ್ಗೆ ಬರೆಯದಿದ್ದರೂನೂ ಇಬ್ಬರಲ್ಲೂ ಬಹಳ ಹೋಲಿಕೆಗಳೂ ಇದ್ದವು. ನೀವು ತೇಜಸ್ವಿ, ಲಂಕೇಶ್, ಅನಂತಮೂರ್ತಿ, ಸುಂದರೇಶ್, ಕಡಿದಾಳು ಶಾಮಣ್ಣ, ಗೋಪಾಲಗೌಡರು, ಕೋಣಂದೂರು ಲಿಂಗಪ್ಪ ಹೀಗೆ ನಿಮ್ಮ ಗುಂಪನ್ನು ನೆನೆಸಿಕೊಂಡರೆ ಮುಖ್ಯವಾಗಿ ಅದೊಂದು ಬುದ್ಧಿಜೀವಿಗಳ ಗುಂಪಾಗಿತ್ತು. ಬಹುಶ ಅಡಿಗರೂ ಮೊದಲು ಅಲ್ಲಿದ್ದರು ಅಂತ ಕಾಣುತ್ತೆ. ನಿಮ್ಮನ್ನು ಒಂದು ಕೇಂದ್ರಕ್ಕೆ ತಂದಿದ್ದು ನಿಮ್ಮಲ್ಲಿ ಇದ್ದ ಸಾಹಿತ್ಯಾಸಕ್ತಿಯೊ ಅಥವಾ ರಾಜಕೀಯ ವಿಚಾರ ಧಾರೆಯೋ? ವಿಚಾರವೇ ನಮ್ಮನ್ನು ಕೂಡಿಸಿದ್ದು. ಆದರೆ ನಿಜವಾಗಿ ವಿಚಾರ ಆಧಾರದ ಮೇಲೆ ಕೂಡಿದಂಥ ಹೆಸರುಗಳನ್ನ ನೀವು ಪ್ರತ್ಯೇಕಿಸಬಹುದು. ಪ್ರಾಮಾಣಿಕವಾಗಿ ವಿಚಾರದ ಮೇಲೆ ಕೂಡದೇ ಇದ್ದಂತಹ ಅಥವಾ ಕೂಡಿದಹಂಗೆ ತೋರಿಸಿಕೊಂಡ ವ್ಯಕ್ತಿಗಳನ್ನು ಪ್ರತ್ಯೇಕಿಸಬಹುದು. ನೀವು ಹೇಳಿದಿರಿ ಅಡಿಗ, ಅನಂತಮೂರ್ತಿ ಅಂತ. ಪ್ರಜಾಪ್ರಭುತ್ವವನ್ನೇ ವಿರೋಧ ಮಾಡಿದಂತಹ ಅಡಿಗರ ಹಲವಾರು ಲೇಖನಗಳು ಇವೆ. ನಂತರ ಜನಸಂಘದ ಅಭ್ಯರ್ಥಿಯಾದಾಗ, ಅದಕ್ಕೂ ಮುಂಚೆ ಅವರು ಬರೆದಂಥ ಲೇಖನಗಳು ಅಡಿಗರ ನಿಜವಾದ ವ್ಯಕ್ತಿತ್ವ ತೋರಿಸುತ್ತವೆ. ಮತ್ತೆ ಅನಂತಮೂರ್ತಿ ಕಾಲಕಾಲಕ್ಕೆ ಹೊಂದಿಕೊಳ್ಳೋವಂಥ ಹೇಳಿಕೆಗಳನ್ನು ಕೊಟ್ಟಿದ್ದನ್ನು ನೋಡಿದರೆ, ಅವರ ವ್ಯಕ್ತಿತ್ವಾನೂ ಏನೂ ಅಂತ ಗೊತ್ತಾಗುತ್ತೆ. ದಟ್ಸ್‌ವೇರ್, ಲ್ಯಾಕ್ಸ್ ದಿ ಕನ್‌ಸಿಸ್ಟನ್ಸಿ ಇನ್ ಕ್ಯಾರೆಕ್ಟರ್, ವಿಚೀಸ್ ವೆರಿ ಇಂಪಾರ್ಟೆಂಟ್ ಫಾರ್ ಎನಿ ಸೋಷಿಯಲಿಸ್ಟ್ , ಫಾರ್ ಎನಿ ಮೂಮೆಂಟ್, ಆರ್ ಫಾರ್ ಎನಿ ಪರ್ಸನ್ಸ್ ಹೂ ವಾಂಟ್ಸ್ ಎ ಸೋಶಿಯಲ್ ಟ್ರಾನ್ಸ್ ಫರ್ಮೇಶನ್ . ಈ ಲ್ಯಾಕ್ ಆಫ್ ದಿ ಕನ್‌ಸಿಸ್ಟೆನ್ಸಿ ಇನ್ ಕ್ಯಾರಕ್ಟೆರ್ ಗೆ ಕಾರಣಗಳು, ಆ ಕಾಲದ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳಲ್ಲಿ ಇದ್ದವೊ ಅಥವಾ ರಾಜಕೀಯ ಚಿಂತನೆಯಾಗಿ ಲೋಹಿಯಾವಾದದಲ್ಲಿ ಇದ್ದವೊ? ಲೋಹಿಯಾವಾದದಲ್ಲೇ ಇದ್ದವು ಅಂತ ನಾನು ನಂಬಲ್ಲ. ಸೀ, ಎಲ್ಲರೂ ಬಿಟ್ಟು ಹೋದ ಮೇಲೆ ನಮ್ಮ ರೈತ ಚಳುವಳಿ ಪ್ರಾರಂಭವಾಯಿತು. ರೈತ ಚಳುವಳಿಗೂನೂ ಸಮಾಜವಾದಿ ಚಳುವಳಿಗೂನೂ ವ್ಯತ್ಯಾಸ ಇದೆ ಅಂತ ನಾನು ಹೇಳೋಲ್ಲ. ವೈಯಕ್ತಿಕವಾಗಿ ಕೇಳೋದಾದರೆ, ಸಮಾಜವಾದಿ ಯುವಜನಾ ಸಭಾ ಅಂದೋಲನದ ಎರಡನೇ ಅಧ್ಯಾಯ, ಈ ನಮ್ಮ ರೈತ ಚಳುವಳಿ ಅಂತ ಕರೆಯೋನು ನಾನು. ಈ ಚಳುವಳಿ ಬಹಳ ಪ್ರಬಲವಾಗೆ ಸಂಘಟನೆ ಆಯಿತು. ಆಗತಾ ಇದೆ. ಮಧ್ಯೆ ಮಧ್ಯೆ ಎಷ್ಟೇ ತಲೆನೋವು ಬಂದರೂನೂ ಇವತ್ತಿಗೂ ಆಗತಾ ಇದೆ. ಲೋಹಿಯಾ ಪ್ರತಿವಾದಿಸುತ್ತಿದ್ದ ಸರಳತೆ ನೈತಿಕತೆಗಳನ್ನ ಬಹಳ ತೀವ್ರವಾಗಿ ಮೊದಲ ಘಟ್ಟದಲ್ಲಿ ಬದುಕ್ತಾ ಇದ್ದಂತಹ ಗೋಪಾಲಗೌಡರು, ಲೋಹಿಯಾವಾದ ಸೃಷ್ಟಿಸಿದ ಒಳ್ಳೇ ಜನನಾಯಕರಲ್ಲಿ ಒಬ್ಬರು. ಆದರೆ ಅವರು ಕರ್ನಾಟಕದ ರಾಜಕಾರಣದಲ್ಲಿ ಕೊನೆಕೊನೆಗೆ ತಮ್ಮ ಪ್ರಭಾವವನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ. ಸಮಸ್ಯೆ ನಿಜವಾಗಿ ಎಲ್ಲಿತ್ತು? ಇಲ್ಲ. ಗೋಪಾಲಗೌಡ್ರ ಬಗ್ಗೆ ಬಹಳ ಹತ್ತಿರದಿಂದ ಪರಿಚಯ ಇರೋರು, ಅವರ ಬಗ್ಗೆ ಹಲವಾರು ಅಬಿsಪ್ರಾಯಗಳನ್ನು ಇಟ್ಟುಕೊಂಡಿದ್ದಾರೆ. ಒಂದೇ ಒಂದು ದೊಡ್ಡಗುಣ ಅವರಲ್ಲಿದ್ದುದು ಅಂದರೆ, ಒಂದು ಚಳುವಳಿಗೆ ಜೀವನದುದ್ದಕ್ಕೂ ಅಂಟಿಕೊಂಡಿದ್ದು. ಇದರ ಹೊರತು, ಅವರು ಕೊನೇ ಹತ್ತುವರ್ಷ ಕರ್ನಾಟಕದಲ್ಲಿ ಸಂಘಟನೆ ಪ್ರಯತ್ನಗಳನ್ನೇ ಮಾಡಲಿಲ್ಲ. ಹಿ ವಾಸ್ ನಾಟ್ ಎ ಗುಡ್ ಆರ್ಗನೈಜರ್ ಅಟಾಲ್. ಅದಕ್ಕೆ ಅವರ ವೈಯಕ್ತಿಕ ದೌರ್ಬಲ್ಯಗಳು ಕಾರಣ ಇರಬಹುದು. ಆ ಕಾರಣವೇ ’ಗೋಪಾಲಗೌಡರ ಬಗ್ಗೆ ಪುಸ್ತಕ ಪ್ರಕಟಣೆ ಮಾಡ್ತಾ ಇದೀವಿ, ಲೇಖನ ಬರೀರಿ’ ಅಂದ್ರೆ, ನಾನು ಬರೆಯೋಲ್ಲ. ಬರೆದರೆ ಪ್ರಾಮಾಣಿಕವಾಗಿ ಬರೀಬೇಕಾಗುತ್ತೆ. ಅದು ಕಹಿಯಾಗಿರುತ್ತೆ. ಈ ಕಹಿ ಸೇರಸೋದು ಬ್ಯಾಡ ಅಂತ್ಹೇಳಿ ನಾನು ಬರೀಲಿಲ್ಲ. ಸಾಹಿತ್ಯದಲ್ಲಿ ನಿಮ್ಮ ಆಯ್ಕೆ ಕೇಳತೀನಿ. ನಿಮ್ಮ ಪ್ರಿಯವಾದ ಲೇಖಕ ಯಾರು? ಯೋಚನೆ ಮಾಡದೇನೆ ಹೇಳಬಹುದು ಕುವೆಂಪು ಅಂತ. ಕುವೆಂಪು ಮಟ್ಟಕ್ಕೆ ಏರುವಂಥ ಲೇಖಕ ಇನ್ನೂ ಹುಟ್ಟಿಲ್ಲ ಅಂತ ನನಗನಸುತ್ತೆ. ಸಾಹಿತ್ಯ ವಿಮರ್ಶಕರಿಗೆ ಇದೇ ಪ್ರಶ್ನೆ ಕೇಳಿದರೆ, ಅವರದೇ ಆದ ಆಯ್ಕೆ, ಅದಕ್ಕೆ ಅವರದೇ ಆದ ಕಾರಣ ಇರುತ್ತೆ. ಒಬ್ಬ ಚಳುವಳಿಗಾರರಾಗಿ ನಿಮಗೆ ಕುವೆಂಪು ಯಾಕೆ ಮುಖ್ಯ ಅನಿಸ್ತಾರೆ? ಅವರ ಸಾಮಾಜಿಕ ಕಳಕಳಿ, ಅವರ ವೈಚಾರಿಕ ವೈಶಾಲ್ಯ, ಮತ್ತೆ ಸಾಹಿತ್ಯಕ್ಕೂ ಒಂದು ಉದ್ದೇಶ ಅಂತ ಇರುತ್ತಲ್ಲ, ಆ ಉದ್ದೇಶಗಳ ಸ್ಪಷ್ಟತೆ, ಒಬ್ಬ ಸಾಹಿತಿಯ ಸಾಮಾಜಿಕ ಪಾತ್ರ ಅಂತ ಏನಂತೀವಿ ಅದನ್ನೆಲ್ಲ ಸಂಪೂರ್ಣ ಭರ್ತಿ ಮಾಡೋವಂಥ ವ್ಯಕ್ತಿತ್ವ ಅವರದು. ಅದರ್ ವೈಸ್ ಎ ರೈಟರ್ ಬಿಕಮ್ಸ್ ಇರೆಲವಂಟ್. ಸೀ, ಕುವೆಂಪು ಬಿಕಮ್ಸ್ ರಿಲವಂಟ್ ಇವನ್ ಟುಡೆ, ಬಿಕಾಸ್ ಆಫ್ ದೀಸ್ ಫ್ಯಾಕ್ಟರ್ಸ್. ನಿಮ್ಮ ಗೆಳೆಯರಾದಂತಹ ತೇಜಸ್ವಿ ಎಂತಹ ಬರೆಹಗಾರ? ತನ್ನ ಸುತ್ತಮುತ್ತ ಇರೋ ಸಮಸ್ಯೆಗಳ ಬಗ್ಗೆ ಬಹಳ ಸ್ಪಷ್ಟತೆ ಇರೋವಂಥ ಒಬ್ಬ ಲೇಖಕ ಅವರು. ಅದನ್ನು ಹಾಸ್ಯದ ರೂಪದಲ್ಲಿ ಹೇಳಿರಬಹುದು. ಕೆಲವು ಸಾರಿ ಗಂಬಿsರವಾಗಿ ಹೇಳಿರಬಹುದು. ಆದರೆ ಎ ರೈಟರ್ ವಿತ್ ಟೋಟಲ್ ಕ್ಲಾರಿಟಿ ಆನ್ ಇಶ್ಯೂಸ್. ಈಚೆಗೆ ಅವರು ಜಾಗತೀಕರಣ ಬಗ್ಗೆ ಸಡಿಲವಾಗಿ ಕೊಟ್ಟ ಒಂದೆರಡು ಹೇಳಿಕೆ ಬಿಟ್ಟರೆ, ಯಾವುದೇ ವಿಷಯದ ಬಗ್ಗೆ ಸಡಿಲವಾಗಿ ಹೇಳಿಕೆ ಕೊಟ್ಟಿದ್ದು ನನಗೆ ಕಾಣಿಸಲಿಲ್ಲ. ಅವರು ಜಾಗತೀಕರಣದ ಬಗ್ಗೆ ಹೇಳುವಾಗ, ನಡುವೆ ರೈತರ ಬಗ್ಗೆ ಚರ್ಚೆ ಬಂದಾಗ, ಒಂದು ಮಾತು ಹೇಳಿದ್ದರು -’ರೈತ ಯಾಕೆ ಆತ್ಮಹತ್ಯೆ ಮಾಡ್ಕೋಬೇಕು. ಸರಕಾರಗಳೇ ಆತ್ಮಹತ್ಯೆ ಮಾಡ್ಕೋಬೇಕು’ ಅಂತ. ಇನ್‌ಫ್ಯಾಕ್ಟ್ ದಟ್ ಹ್ಯಾಸ್ ಬಿಕಮ್ ದಿ ಸ್ಲೋಗನ್ ಆಫ್ ಅವರ್ ರ‍್ಯಾಲಿ ಟುಮಾರೊ. ಸರಕಾರಗಳು ಅಂತ ಹೇಳಿಲ್ಲ ಅವರು. ಯಾರು ಸಾಲ ಕೊಟ್ಟಿದಾರೋ ಅವರೇ ಆತ್ಮಹತ್ಯೆ ಮಾಡ್ಕೋಬೇಕು ಅಂತ ಹೇಳಿದ್ದಾರೆ. ಅದು ಅತ್ಯಂತ ಸ್ಪಷ್ಟವಾದ ವಿಚಾರ. ತೇಜಸ್ವಿ ಗ್ಲೋಬಲೈಜೇಶನ್ ಬಗ್ಗೆ ಹಗುರವಾಗಿ ಯಾವುದೋ ಒಂದು ಮೂಡಿನಲ್ಲಿ ಹೇಳಿಕೆ ಮಾಡಿದರು ಅಂತ ನನಗೆ ಅನಸ್ತಾ ಇಲ್ಲ. ಅವರನ್ನ ಓದ್ತಾ ಇರೋರಿಗೆ ಜಾಗತೀಕರಣವನ್ನ ಅವರು ಆಧುನಿಕತೆ ಅಂತ ಅರ್ಥ ಮಾಡಿಕೊಳ್ಳುತಿದ್ದಾರಾ ಅಂತ ಸಂಶಯ. ಅದೇ ಬರೋದು ತಾಪತ್ರಯ. ಜಾಗತೀಕರಣಕ್ಕೆ ಕಾರಣ ಆಗಿರೋವಂತಹ ಒಪ್ಪಂದ ಪತ್ರ ಅಥವಾ ಟ್ರೀಟಿನಲ್ಲಿ ಇರೋವಂಥ ಎಲ್ಲ ಅಂಶಗಳನ್ನು ಸಂಪುರ್ಣವಾಗಿ ಅಧ್ಯಯನ ಮಾಡಿದರೇನೇ ಜಾಗತೀಕರಣದ ಬಗ್ಗೆ ಸ್ಪಷ್ಟತೆ ಬರೋದು. ಆ ಕೆಲಸಾನ ನಮ್ಮ ದೇಶದಲ್ಲಿ ಮಾಡಿರೋದು ಬಹಳಾ ಕಡಿಮೆ. ಉದಾಹರಣೆಗೆ ಡಬ್ಲೂಟಿ ಟ್ರೀಟಿ. ಅದು ಸುಮಾರು ೫೬೦ ಪುಟ ಇದೆ. ಇದು ಇಂಗ್ಲಿಷಿನಲ್ಲಿ ಕಬ್ಬಿಣದ ಕಡಲೆ. ವೈದಿಕ ಭಾಷೆ ತರಹ ಅನ್ನಬಹುದು. ಅದನ್ನ ಸಂಪೂರ್ಣ ಅರ್ಥಮಾಡಿಕೊಂಡು ಅಬಿsಪ್ರಾಯ ವ್ಯಕ್ತಪಡಿಸಿರೋರು ಬಹಳ ಕಡಿಮೆ. ಸರಕಾರಿ ಮಟ್ಟದಲ್ಲೂ ನಾವು ಸಂಬಳ ಕೊಟ್ಟು ಇಟ್ಟುಕೊಂಡಿರೊ ಅರ್ಥಶಾಸ್ತ್ರಜ್ಞರೂ ಈ ಕೆಲಸ ಮಾಡಿಲ್ಲ. ಹಾಗಾಗಿ ತಪುಗಳಾಗ್ತವೆ. ನನಗೆ ಅನಿಸೋದು ತೇಜಸ್ವೀನೂ ಓದಿಲ್ಲ ಅಂತ. ಓದಿದ್ದರೆ ಅವರು ಆ ಅಬಿsಪ್ರಾಯ ಹೇಳ್ತಿರಲಿಲ್ಲ. ತೇಜಸ್ವಿ ಲಂಕೇಶ್ ಅನಂತಮೂರ್ತಿ ಮುಂತಾದ ನಮ್ಮ ಲೇಖಕರು ಸಮಾಜಶಾಸ್ತ್ರಜ್ಞರ ಕೆಲಸಾನೂ ಮಾಡಿಕೊಂಡು ಬಂದಿದಾರೆ. ಆದರೆ ಅಂತಾರಾಷ್ಟ್ರೀಯ ರಾಜಕಾರಣದ ವಿಷಯ ಬಂದಾಗ, ಇವರು ಒಂದು ಬಗೆಯ ಅಮಾಯಕ ಹೇಳಿಕೆಗಳನ್ನ ಕೊಡೋದು ಕಾಣ್ತದೆ. ಇದಕ್ಕೆ ಕಾರಣ ಅಧ್ಯಯನದ ಕೊರತೇನಾ? ಅಥವಾ ಚಳುವಳಿಗಳ ಜತೆ ಸಂಪರ್ಕ ಕಡಿಮೆಯಾಗಿರೋದಾ? ನಿಜ, ಚಳುವಳಿಗಳ ಜತೆ ಸಂಬಂಧ ದೂರವಾದಾಗ ಹೀಗಾಗುತ್ತೆ. ಅವರು ಸ್ವತಃ ಅಧ್ಯಯನ ಮಾಡೋಲ್ಲ ಅಥವಾ ಅಧ್ಯಯನ ಮಾಡಿರೋವಂಥ ಚಳುವಳಿಗಳಲ್ಲಿ ಸಂಬಂಧಾನೂ ಇಟ್ಟುಕೊಳ್ಳೋಲ್ಲ. ಅದರಿಂದಾಗುವ ತಪುಗಳು ಇವು. ಒಬ್ಬ ಚಳುವಳಿಗಾರನಾಗಿ ಕನ್ನಡದ ಲೇಖಕರು ಬುದ್ಧಿಜೀವಿಗಳು ಸಮಾಜ ಹಾಗೂ ವ್ಯವಸ್ಥೆಯ ಜತೆ ಇರಿಸಿಕೊಂಡಿರೋ ಸಂಬಂಧವನ್ನು ಹ್ಯಾಗೆ ವಿಶ್ಲೇಷಣೆ ಮಾಡತೀರಿ? ಕರ್ನಾಟಕ ಲೇಖಕರುಗಳಲ್ಲಿ ಒಂದು ಅನ್‌ಡಿಸೈರಬಲ್ ಟ್ರೆಂಡ್ ಅಂತೀವಲ್ಲ, ಅಪೇಕ್ಷಣೀ ಯವಲ್ಲದಂಥ ಒಂದು ನಡತೆ, ಅದು ಕಾಣಿಸಿಕೊಳ್ಳೋದಿಕ್ಕೆ ಶುರುವಾಗಿದೆ. ಚಳುವಳಿಗಳಿಗೂ ಅವರಿಗೂ ನಡುವೆ ಕಂದರ ಪ್ರಾರಂಭವಾಗಿದೆ. ಇದು ಕೆಲವು ಚಳುವಳಿಗಳು ಕ್ಷೀಣ ಆಗಲಿಕ್ಕೂ ಕಾರಣ ಆಗಿದೆ. ಇದಕ್ಕೆ ಮುಖ್ಯ ಕಾರಣ, ವ್ಯವಸ್ಥೆ ಜೊತೆ ಹೊಂದಾಣಿಕೆ. ದಲಿತ ಚಳುವಳಿ ನಾಶವಾಗೋದಕ್ಕೆ ಕಾರಣ ವ್ಯವಸ್ಥೆ ಜೊತೆ ಹೊಂದಾಣಿಕೆ. ಪವರ್ ಪಾಲಿಟಿಕ್ಸ್ ಬಗ್ಗೆ, ರಾಜಕೀಯ ಪಕ್ಷಗಳ ಬಗ್ಗೆ, ಸ್ಪಷ್ಟವಾದಂಥ ಒಂದು ನಿಲುವು ತಾಳದೇ ಇರೋದು ನಮ್ಮ ಬುದ್ಧಿಜೀವಿಗಳು ಮಾಡ್ತಾ ಇರೋ ತಪು. ಬೇರೆ ದೇಶದ ಬುದ್ಧಿಜೀವಿಗಳಿಗೆ ಹೋಲಿಸಿದರೆ, ಜನಾಂದೋಳನಗಳಲ್ಲಿ ಭಾಗವಹಿಸದೇ ಇರೋದು ಕಾಣ್ತಿದೆ. ಒಂದು ಸಾರಿ ಡಾ ಎಚ್ ನರಸಿಂಹಯ್ಯನವರು ಬಹಳ ದೊಡ್ಡ ಭಾಷಣ ಮಾಡಿದರು ಜಾಗತೀಕರಣದ ವಿರುದ್ಧ. ನರಸಿಂಹಯ್ಯ ಗಾಂದಿsವಾದಿ ಅಂತಲೇ ಬರೀತಾರೆ ಇವತ್ತಿಗೂ. ಆನಂತರ ನಾನು ಮಾತಾಡೋ ದಿತ್ತು. ಅವರ ಎದುರಿಗೇನೇ ಹೇಳಿದೆ : ’ಯಾಕೆ ನಮ್ಮ ದೇಶದ ಬುದ್ಧಿಜೀವಿಗಳಿಗೂ, ಬೇರೆ ದೇಶದ ಬುದ್ಧಿಜೀವಿಗಳಿಗೂ ವ್ಯತ್ಯಾಸ ಬರುತ್ತೆ? ಬರ್ಟಂಡ್ ರಸೆಲ್ ಸಾಯೋಕೆ ಮುಂಚೆ ಇಂಗ್ಲೆಂಡಿನ ರಸ್ತೆಗಳಲ್ಲಿ ಚಳುವಳಿ ಮಾಡಿದರು, ವಿಯಟ್ನಾಂ ವಾರ್ ವಿರುದ್ಧ. ನಮ್ಮ ದೇಶದ ಬುದ್ಧಿಜೀವಿಗಳಿಗೆ ಏನಾಗಿದೆ?’ ನರಸಿಂಹಯ್ಯನವರು ಇಷ್ಟೊಂದು ಮಾತಾಡುತ್ತಾರೆ. ಅವರು ಜಾಗತೀಕರಣದ ವಿರುದ್ಧ ನಡೀತಾ ಇರೋ ಚಳುವಳಿಗಳಲ್ಲಿ ಭಾಗವಹಿಸಬೇಕು; ಅದಾದ ಮೇಲೆ ಅವರು ಮತ್ತೆ ಮಾತಾಡಿದರು. ’ಇಲ್ಲ ನನ್ನಿಂದ ಭಾಗವಹಿಸೋಕೆ ಆಗಲ್ಲ.’ ಸೀ, ಈ ಧೋರಣೆಯಿದ್ದಾಗ ಕಂದರ ತನ್ನಿಂದ ತಾನೇ ಸೃಷ್ಟಿಯಾಗುತ್ತೆ. ಆ ತಪು ಮಾಡಬಾರದು ಅಂತ ನಮ್ಮ ಬುದ್ಧಿಜೀವಿಗಳಿಗೆ ವಿನಂತಿ ಮಾಡ್ಕೋಬಹುದೇನೊ ಈ ಸಂದರ್ಭದಲ್ಲಿ. ಕರ್ನಾಟಕದಲ್ಲಿ ೮೦ರ ದಶಕದಲ್ಲಿ ಹುಟ್ಟಿದ ಬಂಡಾಯ ಸಾಹಿತ್ಯ ಚಳುವಳಿ, ದಲಿತ ಚಳುವಳಿ, ಭಾಷಾ ಚಳುವಳಿ, ಆನಂತರ ಬಂದ ರೈತಚಳುವಳಿ ಇವೆಲ್ಲ ಈಗ ೞsದ್ರ ಆಗಿವೆ. ಇದಕ್ಕೆ ಕಾರಣ ಈ ಚಳುವಳಿಯ ತಾತ್ವಿಕ ಸ್ವರೂಪದಲ್ಲಿ ಇದೆಯೋ ಅಥವಾ ದೇಶದ ರಾಜಕೀಯ ಪರಿಸರದಲ್ಲಿದೆಯೊ? ನೀವು ಹೇಳಿದ ಬಂಡಾಯ ಚಳುವಳಿ ಡಿಸಿಂಟಿಟಿಗ್ರೇಟ್ ಆಗಿರಬಹುದು. ದಲಿತ ಚಳುವಳಿ ಡಿಸಿಂಟಿಗ್ರೇಟ್ ಆಗಿರಬಹುದು. ರೈತ ಚಳುವಳಿ ಮಾತ್ರ ಆಗಿಲ್ಲ. ನಾಲ್ಕು ಸಾರಿ ಅದಕ್ಕೆ ಸ್ವಲ್ಪ ತಲೆನೋವುಗಳು ಬಂದರೂನೂ ಡಿಸಿಂಟಿಗ್ರೇಟಂತೂ ಆಗಿಲ್ಲ. ಸಣ್ಣ ಸಣ್ಣ ಗುಂಪುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಆಚೆ ಹೋಗಿವೆ. ಇದು ಪ್ರತಿ ವರ್ಷಕ್ಕೊಮ್ಮೆ ಅದೂ ಚುನಾವಣೆಗೆ ಪೂರ್ವಭಾವಿಯಾಗಿ ಇದಾಗುತ್ತೆ. ಇನ್ನೂ ಎರಡು ವರ್ಷಕ್ಕೆ ಮುಂದಿನ ಚುನಾವಣೆ ವೇಳೆಗೆ, ಐದನೇ ಗುಂಪು ಆಚೆ ಹೋಗಬಹುದು. ಕೆಲವು ವ್ಯಕ್ತಿಗಳು ಆಚೆ ಹೋಗಬಹುದು. ಆದರೆ ರೈತ ಚಳುವಳೀನ ಗಟ್ಟಿಯಾಗಿ ಇಟ್ಟಿರೋದು ಒಳಗೆ ಇರೋವಂಥ ಕಾರ್ಯಕರ್ತರು. ಅವರಿಗೆ ಇರೋವಂಥ ವೈಚಾರಿಕ ಸ್ಪಷ್ಟತೆ, ಸಂಘಟನಾತ್ಮಕ ನಿಲುವು, ನಮ್ಮ ಇವತ್ತಿನ ರಾಜಕೀಯ ಪಕ್ಷಗಳ ಬಗ್ಗೆ ಇರೋವಂಥ ಸ್ಪಷ್ಟ ನಿಲುವು, ಬೇರೆ ನೀವ್ಹೇಳಿದಂಥ ಚಳುವಳಿಗಳಿಗೆ ಇಲ್ಲ. ಬಂಡಾಯ ಸಾಹಿತಿಗಳಿಗೆ ರಾಜಕೀಯ ಪಕ್ಷಗಳ ಬಗ್ಗೆ ಸ್ಪಷ್ಟವಾದ ನಿಲುವು ಇದೆಯಾ? ಒಂದು ಸಂಘಟನೆಯಾಗಿ ದಲಿತ ಚಳುವಳಿಯಲ್ಲಿ ರಾಜಕೀಯ ಪಕ್ಷಗಳ ಬಗ್ಗೆ ಸ್ಪಷ್ಟ ನಿಲುವು ಇದೆಯಾ? ಪವರ್ ಪಾಲಿಟಿಕ್ಸಿನ ಬಗ್ಗೆ ರಾಜಕೀಯ ಪ್ರe ಬೆಳೆಸಿಕೊಳ್ಳೋದು ಬೇರೆ. ಪವರ್ ಪಾಲಿಟಿಕ್ಸಿನಲ್ಲಿ ನೇರವಾಗಿ ದುಮುಕುವುದು ಬೇರೆ. ನೀವು ಚುನಾವಣೆಗೆ ನಿಂತಿದ್ರಿ. ಗೆದ್ರಿ, ಸೋತಿರಿ. ಚಳುವಳಿಗಳು ಜನಾಬಿsಪ್ರಾಯ ರೂಪಿಸುವ ಕೆಲಸವನ್ನು ಮಾಡ್ತಾ ಒತ್ತಡದ ಗುಂಪುಗಳಾಗಿ ಪ್ರಭುತ್ವಗಳನ್ನು ನಿಯಂತ್ರಿಸಬಲ್ಲ ಜನಾಂದೋಲನಗಳಾಗಿ ಇರುವುದು ಈ ಹೊತ್ತಲ್ಲಿ ಹೆಚ್ಚು ಅಗತ್ಯ ಅನಿಸೋದಿಲ್ಲವಾ? ನೋ. ನಾಟ್ ನೆಸೆಸರೀಲಿ. ಯಾವುದೇ ಒಂದು ಆಂದೋಲನ ಆದರೂನೂ ಜನಾಬಿsಪ್ರಾಯ ರೂಪಿಸೋವಂಥ ಒಂದು ಚಳುವಳಿ ನಡೀತಾನೆ ಇರಬೇಕು. ಅದರ ಜೊತೆಗೆ ಅದಿsಕಾರ ಗ್ರಹಣಾನೂ ಒಂದು ಮುಖ್ಯ ಭಾಗ. ಅದಿsಕಾರ ಗ್ರಹಣ ಇಲ್ಲದೆ ಯಾವುದೇ ಚಳುವಳಿ ತನ್ನ ಆಶೋತ್ತರಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳೋದು ಅಸಾಧ್ಯ. ಆದರೆ ಅದಿsಕಾರ ಗ್ರಹಣ ಯಾವ ರೀತಿ ಮಾಡಬೇಕು ಇದು ಮುಖ್ಯ ಪ್ರಶ್ನೆ. ಕನ್ನಡ ಚಳುವಳಿಯವರಿಗೆ ನಾನು ಇದೇ ಮಾತು ಹೇಳಿದ್ದೆ: ’ಕಾಲಕಾಲಕ್ಕೆ ನೀವು ಯಾವುದೇ ಪಕ್ಷದ ಸರಕಾರ ಇದ್ದರೂನೂ ಹೊಂದಾಣಿಕೆ ಮಾಡಿಕೊಳ್ಳೋದು, ಆ ಸರಕಾರದಲ್ಲಿ ಕೆಲವು ಹುದ್ದೆಗಳಿಗೆ ಪ್ರಯತ್ನ ಮಾಡೋದು, ಇದನ್ನು ಎಷ್ಟು ಕಾಲ ಮಾಡ್ತೀರಿ? ಇದನ್ನ ಬಿಟ್ಟು ನೀವೇ ಒಂದು ರಾಜಕೀಯ ಶಕ್ತಿಯಾಗಿ ಉಳಿದಿದ್ದರೆ ಕನ್ನಡದ ಸ್ಥಿತಿ ಬೇರೇನೆ ಆಗ್ತಿತ್ತು.’ ಚಳುವಳಿಗಳು ಸದ್ಯ ಇರುವ ರಾಜಕೀಯ ಸಮೀಕರಣದಲ್ಲಿ ತಮ್ಮ ಆಶಯ ಹೇಗೆ ಈಡೇರಿಸಿಕೊಳ್ಳೋದು ಅಂತ ಯೋಚನೆ ಮಾಡದೆ, ತಾವೇ ಪರ್ಯಾಯ ರಾಜಕೀಯ ಶಕ್ತಿಯಾಗುವುದು ಹೇಗೆ ಎಂಬ ಚಿಂತನೆ ಮುಖ್ಯ ಅಂತಾದರೆ, ಈಗಿರುವ ಚುನಾವಣಾ ರಾಜಕೀಯದ ಮಾದರಿಯನ್ನು ಒಪ್ಪಿಕೊಂಡೇ ಈ ರಾಜಕೀಯ ಪರ್ಯಾಯವನ್ನು ಮಾಡಬೇಕು ಅಂತ ಆಯಿತಲ್ಲವಾ? ಹೌದು. ಮೂಲಭೂತ ಪ್ರಶ್ನೆ, ಪಾರ್ಲಿಮೆಂಟರಿ ಡೆಮಾಕ್ರಸಿಯ ಬಗ್ಗೆ ನಿಮಗೆ ವಿಶ್ವಾಸ ಇದೆಯೋ ಇಲ್ಲವೋ ಅನ್ನೋದು. ಸಂಸದೀಯ ಪ್ರಜಾಪ್ರಭುತ್ವಾನ ಇದೇ ಅತ್ಯುತ್ತಮ ಮಾರ್ಗ ಅಂತ ಒಪ್ಪಿದ ಮೇಲೆ, ಗುಣಾತ್ಮಕವಾಗಿ ಅದನ್ನ ಹ್ಯಾಗೆ ಬದಲಾವಣೆ ಮಾಡಬೇಕು? ಬದಲಾಗಿ ಈ ಸಂಸದೀಯ ಪ್ರಜಾಪ್ರಭುತ್ವಾನ ಹಾಳಗೆಡವತಾ ಇರೋ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಕೊಂಡು ಈ ಚಳುವಳಿಗಳೂ ಹಾಳಾಗ್ತಾ ಇವೆಯೋ ಇಲ್ಲವೋ? ರೈತ ಚಳುವಳಿ ಮಾಡ್ತಾ ಇರೋ ಕೆಲಸಾನೆ ಇದು. ಪ್ರಜಾಪ್ರಭುತ್ವದಲ್ಲಿ ಮತದಾರ ಯಾವ ರೀತಿ ಗುಣಮುಖವಾಗಿ ಪರಿವರ್ತನೆ ಆಗಬೇಕು? ಇದನ್ನ ಪ್ರತಿ ಸಭೇನಲ್ಲಿ ಪ್ರತಿನಿತ್ಯ ನಾವು ಮಾತಾಡ್ತಾ ಇದೀವಿ ಜನರ ಜೊತೆ. ಆ ಮೂಲಕ ನಾವು ಸಂಸದೀಯ ಪ್ರಜಾಪ್ರಭುತ್ವವನ್ನು ಗುಣಾತ್ಮಕವಾಗಿ ಬದಲಾವಣೇನೂ ಮಾಡಬಹುದು. ಜೊತೆಗೆ ಅದಿsಕಾರ ಗ್ರಹಣಾನೂ ಮಾಡಬಹುದು. ರಾಜಕೀಯ ಪರ್ಯಾಯವನ್ನು ಸೃಷ್ಟಿ ಮಾಡೋಕೆ ನೀವು ಹೇಳತಾ ಇರೋ ದಾರಿಯನ್ನು ಒಪೊದಾ ದರೆ, ಈ ಕೆಲಸವನ್ನು ಯಾವುದೋ ಒಂದು ಚಳುವಳಿ, ಉದಾಹರಣೆಗೆ ರೈತ ಚಳುವಳಿ, ಮಾತ್ರ ಮಾಡೋಕಾಗುತ್ತಾ ಅಥವಾ ಎಲ್ಲ ಜನಪರ ಚಳುವಳಿಗಳು ಸೇರಿ ಈ ಕೆಲಸ ಮಾಡುವಂಥದ್ದಾ? ಇಲ್ಲ, ಸಮಾನ ದೃಷ್ಟಿಕೋನ ಇರೋವಂಥ ಜನಾಂದೋಲನಗಳ ಜೊತೆ ಕೈ ಜೋಡಿಸುವ ಮೂಲಕ ಈ ಕೆಲಸ ಸುಲಭ ಅಗುತ್ತೆ. ನಾವು ತಯಾರಿದೀವಿ ಕೈ ಜೋಡಿಸೋದಿಕ್ಕೆ. ಆ ಗುಣಗಳು ಇರೋವಂಥ ಆಂದೋಲನಗಳು ನಮ್ಮ ಮುಂದೆ ಕಾಣಿಸ್ತಾ ಇಲ್ಲ ಕರ್ನಾಟಕದಲ್ಲಿ. ಹೀಗೆ ಸಮಾನ ಮನಸ್ಕ ಆಂದೋಲನಗಳನ್ನ ಒಂದು ಕೇಂದ್ರಕ್ಕೆ ತರೋಕೆ ನಾಯಕತ್ವ ಇರೋ ವ್ಯಕ್ತಿಗಳ ಅಗತ್ಯಾನೂ ಇರುತ್ತೆ. ಅನೇಕ ಸಲ ನಿಮ್ಮ ಹಠಮಾರಿತನದಿಂದ ಇಂತಹ ಕೆಲಸಗಳು ಸಾಧ್ಯವಾಗತಾ ಇಲ್ಲ ಅಂತ ಕೇಳಿದೇನೆ. ಹೌದು ನಾನು ಹಠಮಾರಿ. ಆದರೆ ಚಟಮಾರಿ ಅಲ್ಲ; ಚಟಮಾರಿ ಅಲ್ಲದ ಕಾರಣಕ್ಕೇ ನಾನು ಹಠಮಾರಿ ತರಹ ಕಾಣಿಸ್ತೀನಿ. ಒಬ್ಬ ಚಳುವಳಿಗಾರನಲ್ಲಿ ಇರಬೇಕಾದದ್ದು ಅತ್ಯಂತ ಮುಖ್ಯವಾದ ಗುಣ ಹಠ. ಚಟ ಅಲ್ಲ. ರೈತ ಚಳುವಳಿಯಿಂದ ಚಟವಾದಿಗಳು ಆಚೆ ಹೋಗಿದಾರೆ. ನಾನು ಯಾವ ಚಳುವಳೀನಲ್ಲಿ ಇದೀನೋ, ಅಲ್ಲಿ ಚಟವಾದಿಗಳಿಗೆ ಅವಕಾಶವಿಲ್ಲ. ಹಠವಾದಿಗಳಿಗೆ ಇದೆ. ಆಚೆ ಹೋದವರು ನನ್ನನ್ನು ಹಠವಾದಿ ಅಂತಾರೆ. ಸರ್ವಾದಿsಕಾರಿ ಅಂತಾರೆ. ಹೌದು ನಾನು ಸರ್ವಾದಿsಕಾರಿ. ಯಾವುದರ ಬಗ್ಗೆ? ಶಿಸ್ತಿನ ಬಗ್ಗೆ. ಚಾರಿತ್ರ್ಯದ ಬಗ್ಗೆ. ಈ ಗುಣಗಳು ಇರಬೇಕೊ ಬೇಡವೊ? ನಿಮ್ಮ ಪ್ರಕಾರ ಜನಪರ ಚಳುವಳಿಗಳು ಒಂದು ರಾಜಕೀಯ ಪರ್ಯಾಯದತ್ತ ಹೋಗಬೇಕಾದರೆ ಮಾಡಬೇಕಾದ ಮೊದಲ ಕೆಲಸ ಯಾವುದು? ಮೊದಲು ವೈಚಾರಿಕ ಸ್ಪಷ್ಟತೆ, ವೈಚಾರಿಕ ಹೊಂದಾಣಿಕೆ ಆಗಬೇಕು. ಅನಂತರ ಅದರ ಆಧಾರದ ಮೇಲೆ ಕಾರ್ಯಕ್ರಮಗಳನ್ನ ರೂಪಿಸಬೇಕು. ಎರಡು ಮೂರು ವರ್ಷ ಸತತ ಕೆಲಸ ಮಾಡಿದರೆ, ನಾವು ಕರ್ನಾಟಕದ ಪ್ರಜಾಪ್ರಭುತ್ವಾನ ಗುಣಾತ್ಮಕವಾಗಿ ಬದಲಾವಣೆ ಮಾಡಬಹುದು. ಅಷ್ಟು ಪ್ರಭಾವ ಬೀರಬಲ್ಲಂತಹ ಬುದ್ಧಿಜೀವಿಗಳ ಒಂದು ದೊಡ್ಡ ಸಂಖ್ಯೆ ಕರ್ನಾಟಕದಲ್ಲಿದೆ. ಆದರೆ ಈ ಕೆಲಸಾನ ಅವರು ಕೈಗೆ ತಗೊಂಡಿಲ್ಲ. ಇವತ್ತಿಗೂ ಎಲ್ಲರೂ ಈ ಒಂದು ವೈಚಾರಿಕ ಸ್ಪಷ್ಟತೆಯಿಂದ ಕೈಜೋಡಿಸಿದರೆ, ಆರೋಗ್ಯಕರವಾದಂತಹ ಪರ್ಯಾಯ ವ್ಯವಸ್ಥೆಯನ್ನ ನಾವು ಕರ್ನಾಟಕ್ಕೆ ಕೊಡಬಹುದು. ಆ ವಿಶ್ವಾಸ ನನಗಿದೆ. ಸಮಾನ ಮನಸ್ಕರು ಒಂದು ಕಡೆ ಸೇರೋಕೆ ಕಾಮನ್ ಪ್ರೋಗ್ರಾಂ ಇರುವಂತೆ ಕಾಮನ್ ಎನಿಮಿ ಕೂಡ ಇರಬೇಕಾಗುತ್ತೆ. ಅಂತಹ ಸಮಾನ ಶತ್ರು ಯಾರು? ಈಗಿರೋವಂಥ ರಾಜಕೀಯ ಪಕ್ಷಗಳು. ಅವನ್ನು ಸಾಕ್ತಾ ಇರೋವಂತಹ ಹಿತಾಸಕ್ತಿಗಳು. ಕೆಲವು ವೆಸ್ಟೆಡ್ ಇಂಟರೆಸ್ಟ್‌ಗಳು ಎಲ್ಲ ರಾಜಕೀಯ ಪಕ್ಷಗಳನ್ನು ಸಾಕ್ತಾಯಿವೆ. ಯಾವುದೇ ರಾಜಕೀಯ ಪಕ್ಷಗಳೂ ತಮ್ಮ ಸ್ವತಂತ್ರ ಅಸ್ತಿತ್ವ ಉಳಿಸಿಕೊಂಡಿಲ್ಲ ಇವತ್ತಿಗೂ. ಅವೆಲ್ಲ ಯಾರದೋ ಏಜೆಂಟ್ ಆಗಿ ಕೆಲಸ ಮಾಡೋವಂಥ ಗುಂಪುಗಳಾಗಿವೆ ಹೊರತು, ಒಂದು ರಾಜಕೀಯ ಪಕ್ಷಕ್ಕೆ ಬೇಕಾದಂತಹ ಚೌಕಟ್ಟಿನಲ್ಲಿ ಕೆಲಸ ಮಾಡೋವಂತಹ ಗುಂಪುಗಳಾಗಿ ಉಳಿದಿಲ್ಲ. ಆ ಕಾರಣ ನಮ್ಮ ಶತ್ರುಗಳು ಯಾರು ಅನ್ನೋದು ಸ್ಪಷ್ಟ. ಆದರೆ ಚಳುವಳಿಗಳ ಶಕ್ತಿ ಮುಂದೆ ಆ ಶತ್ರುಗಳು ನಿಲ್ಲಕ್ಕೆ ಸಾಧ್ಯ ಇಲ್ಲ. ಆ ಶಕ್ತಿಗಳ ವಿರುದ್ಧ ಜನಾಬಿsಪ್ರಾಯ ಈಗಾಗಲೇ ಸಿದ್ಧ ಆಗಿದೆ. ಆದರೆ ಈ ಜನಾಬಿsಪ್ರಾಯಕ್ಕೆ ಒಂದು ದಾರಿ ತೋರಿಸೋವಂಥ ಒಂದು ವೇದಿಕೆ ಸೃಷ್ಟಿಯಾಗಿಲ್ಲ ಅಷ್ಟೆ. ರೈತ ಸಂಘವು ರಾಜಕಾರಣದಲ್ಲಿ ಇರಿಸಿಕೊಂಡಿರುವ ಎಚ್ಚರ, ತೋರಿಸುವ ಪ್ರe ಇವೆಲ್ಲ ಜನಪರ ವಾಗಿದೆ. ಬಹಳ ಪ್ರಖರವಾಗಿದೆ, ಸರಿ. ಆದರೆ ನಮ್ಮ ಹಳ್ಳಿಗಾಡಿನ ಜಾತಿ ಸಮಾಜದಲ್ಲಿ, ಭೂರಹಿತ ಕೂಲಿಕಾರ್ಮಿಕರು ಇರೋ ಸಮಾಜದಲ್ಲಿ, ಅವರ ಪಾತ್ರದ ಬಗ್ಗೆ ಈ ಜನಪರತೆ ಅನ್ನೋದು ಕಾಣತಾ ಇಲ್ಲ. ರೈತಸಂಘ ಈಗಲೂ ಊಳಿಗಮಾನ್ಯ ಪದ್ಧತಿಯನ್ನು ಒಪ್ಪಿಕೊಂಡಿರೊ ಭೂಮಾಲೀಕರಿಂದ ತುಂಬಿದೆ ಅಲ್ಲವಾ? ಹಾಗೇನಿಲ್ಲ. ತಾವು ಗಮನಿಸಿಲ್ಲ ಅಂತ ಕಾಣುತ್ತೆ. ನಮ್ಮ ಸಂಘಟನೆ ಯಾವ್ಯಾವ ಗ್ರಾಮದಲ್ಲಿದೆ, ಅಲ್ಲೆಲ್ಲೂ ಕೋಮುಗಲಭೆ ಆಗಿಲ್ಲ. ಕಾರಣ, ಸಣ್ಣಪುಟ್ಟ ಸಮಸ್ಯೆಗಳು ಹಿಂದಿನಿಂದ ಏನು ಉಳಿದುಕೊಂಡು ಬಂದಿವೆ, ಊಳಿಗಮಾನ್ಯ ಪದ್ಧತಿ ಅಂದರಲ್ಲ, ಅದಕ್ಕಿಂತ ದೊಡ್ಡ ದೊಡ್ಡ ಸಮಸ್ಯೆಗಳ ಕಡೆ ಅವರ ಗಮನ ಬಿದ್ದಿದ್ದರಿಂದ ಈ ಸಾಂಪ್ರದಾಯಿಕ ವೈಷಮ್ಯಗಳು ಅಸಮಾನತೆ ತಾರತಮ್ಯ ಇತ್ಯಾದಿ ಹಳ್ಳಿಗಳಲ್ಲಿ ಕಾಣಿಸ್ತವೆ. ಅವು ಕ್ರಮೇಣ ಅದೃಶ್ಯ ಆಗ್ತಾಯಿವೆ. ಹಾಗಾಗಿ ನಮ್ಮ ಸಂಘ ಎಲ್ಲೆಲ್ಲಿದೆಯೊ ಅಲ್ಲಿ ಕೋಮು ಗಲಭೆ ಮಾತ್ರವಲ್ಲ, ಜಾತಿಗಲಭೆಗಳೂ ಆಗಿಲ್ಲ. ಚಳುವಳಿನಲ್ಲಿ ಕಂಡುಬರುವಂಥ ಈ ನಿಲುವು ನಿಧಾನಗತಿಯಲ್ಲೇ ಆಗಬಹುದು. ಅಂತೂ ಆಗ್ತಾ ಇದೆ. ನನ್ನ ಪ್ರಶ್ನೆಯ ಉದ್ದೇಶ ಭೂಹಂಚಿಕೆ ಬಗ್ಗೆ ಸಂಘದ ನಿಲುವು ಏನು ಅಂತ ತಿಳಿಯೋದಾಗಿದೆ ಸಾರ್. ಕರ್ನಾಟಕದಲ್ಲಿ ಕಾಗೋಡು ಸತ್ಯಾಗ್ರಹ ಆಗಿದೆ. ದೇವರಾಜ ಅರಸರು ತಂದ ಭೂಸುಧಾರಣೆ ಆಗಿದೆ. ಆದರೂ ಭೂಹಂಚಿಕೆ ಅನ್ನೋದು ಪೂರ್ಣ ರೀತಿಯಲ್ಲಿ ನಡೆದಿಲ್ಲ. ನಮ್ಮ ದೃಷ್ಟಿಕೋನದ ಪ್ರಕಾರ ಭೂಮಿತಿ ಎಷ್ಟಿರಬೇಕೆಂದರೆ, ಒಂದು ಕುಟುಂಬಕ್ಕೆ ಹೊರಗಿನಿಂದ ಕೂಲಿ ಇಲ್ಲದೆ ಕೆಲಸ ಮಾಡುವಷ್ಟು ಹಿಡುವಳಿ ಇರಬೇಕು. ಇದು ಒಂದು ಕುಟುಂಬದ ಹಿಡುವಳಿಗೆ ನಾವು ಕೊಟ್ಟಿರೋವಂಥ ವಿಶ್ಲೇಷಣೆ. ಆಜ್ ಮಚ್ ಲ್ಯಾಂಡ್ ಆಜ್ ಎ ಫ್ಯಾಮಿಲಿ ನೀಡ್ಸ್, ವಿತೌಟ್ ಹೈರಿಂಗ್ ಎಕ್ಸಟ್ರನಲ್ ಲೇಬರ್. ಇದು ಸಮಾಜವಾದದ ಕೊನೇ ಹಂತ. ನಿಮಗೆ ಒಂದು ಉದಾಹರಣೆ ಹೇಳಬೇಕು ಭೂಮಿ ಬಗ್ಗೆ ನಮ್ಮ ನಿಲುವು ಏನು ಅಂತ. ನಾವು ಚಿಕ್ಕಮಗಳೂರಿನಲ್ಲಿ ಬೆಂಬಲ ಕಳಕೊಂಡೆವು. ಕಾರಣ, ಕಾಪಿs ತೋಟಗಳಿಗೂ ಭೂಸುಧಾರಣೆ ಅನ್ವಯಿಸಬೇಕು ಅಂತ ನಾವು ಘೂಷಣೆ ಹಾಕಿದ್ದು. ಆ ದಿವಸದಿಂದ ಕಾಪಿs ತೋಟದ ರೈತರೆಲ್ಲ ನಮ್ಮನ್ನು ಬಿಟ್ಟು ಹೋಗಿಬಿಟ್ಟರು. ಇವತ್ತಿಗೂ ಅದೇ ನಿಲುವು ನಮ್ಮದು. ಲ್ಯಾಂಡ್ ರಿಫಾರ್ಮ್ಸ್ ಶುಡ್ ಬಿ ಅಪ್ಲೈಡ್ ಟು ಈವನ್ ಪ್ಲಾಂಟೆಷನ್ಸ್ . ಇನ್ನೂ ಭೂಸುಧಾರಣೆ ಆಗಬೇಕು. ಈಗ ಆಗಿರೋದು ಅಂತ ಸಮಪರ್ಕವಾದ ಭೂ ಸುಧಾರಣೆ ಏನಲ್ಲ. ಲ್ಯಾಂಡ್ ಟು ದ ಟಿಲ್ಲರ್ ಅಂತ ಏನಂತೀವಿ, ಆ ಸುಧಾರಣೆ ಇನ್ನೂ ಆಗಿಲ್ಲ. ಕಾಗೋಡು ಸತ್ಯಾಗ್ರಹ, ಅದು ಗೇಣಿದಾರರ ಚಳುವಳಿ ಅಷ್ಟೇ ಹೊರತು, ಉಳುವವನ ಚಳುವಳಿ ಅಲ್ಲ. ಆದಾದ ಮೇಲೆ ಟೆನೆನ್ಸಿ ಆಕ್ಟ್ ಬಂದಿದ್ದು. ದೇವರಾಜ ಅರಸು ಮಾಡಿದ್ದೂನೂ ಅಷ್ಟೇನೆ. ಟೆನೆನ್ಸಿ ಲಾ ಅಂತ ತಂದು ಆಬ್ಸೆಂಟಿವ್ ಲ್ಯಾಂಡ್ ಲಾರ್ಡಿಸಂ ತೆಗೆದುಹಾಕೋ ಪ್ರಯತ್ನ ಆಯ್ತೆ ಹೊರತು, ಲ್ಯಾಂಡ್ ಟು ದಿ ಟಿಲ್ಲರ್ ಆಗಲೇ ಇಲ್ಲ. ಇನ್ನೂ ಆಗಿಲ್ಲ. ನೀವು ಹೇಳಿದಿರಿ, ಗುಣಾತ್ಮಕ ಬದಲಾವಣೆಗೆ ಬೇಕಾದಂಥ ಬುದ್ಧಿಜೀವಿಗಳ ದೊಡ್ಡ ಸಂಖ್ಯೆ ಕರ್ನಾಟಕದಲ್ಲಿದೆ ಅಂತ. ಆದರೆ ಬುದ್ಧಿಜೀವಿ ವರ್ಗದಲ್ಲಿ ಜಾಗತೀಕರಣ ಕುರಿತು ಬಗೆಬಗೆಯ ಅಬಿsಪ್ರಾಯಗಳಿವೆ. ಸೈದ್ಧಾಂತಿಕ ಗೊಂದಲ ಇದೆ. ನೀವು ಇಂಟರ್‌ನ್ಯಾಶನಲ್ ರಿಲೇಶನ್ಸ್ ಅಧ್ಯಯನ ಮಾಡದೋರು. ಪಾಠ ಹೇಳದೋರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರೈತಚಳುವಳಿಗಾರನಾಗಿ ಕೆಲಸ ಮಾಡದೋರು. ಗ್ಲೋಬಲೈಜೇಶನನ್ನ ಹೆಂಗೆ ವಿಶ್ಲೇಷಣೆ ಮಾಡ್ತೀರಿ? ಗೊಂದಲ ಬರೋದಿಕ್ಕೆ ಕಾರಣ, ನಮ್ಮಲ್ಲಿ ಬಹುಪಾಲು ಅರ್ಥಶಾಸ್ತ್ರಜ್ಞರು ಪ್ರಾಮಾಣಿ ಕರಲ್ಲ. ಅವಕಾಶವಾದಿಗಳು. ಜೊತೆಗೆ ಆತ್ಮವಿಶ್ವಾಸ ಇಲ್ಲದವರು. ಜಾಗತೀಕರಣ ಇಟ್ ಹ್ಯಾಸ್ ಬಿಕಮ್ ಎ ರಿಯಾಲಿಟಿ. ವಿ ಕಾಂಟ್ ಗೋ ಎಗೆನೆಸ್ಟ್ ಇಟ್ ಅನ್ನೋ ತೀರ್ಮಾನಕ್ಕೆ ಬಂದ್ಬಿಟ್ಟಿರೋರು. ಇದನ್ನು ಕೆಲವು ಎಕಾನಮಿಸ್ಟ್ ಕೆಟ್ಟ ಭಾಷೆ ಉಪಯೋಗಿಸಿ ಹೇಳೋದುಂಟು. ’ಇಫ್ ಯು ಕಾಂಟ್ ರೆಸಿಸ್ಟ್, ಲೆಡೌನ್ ಅಂಡ್ ಎಂಜಾಯ್ ಇಟ್’ ಅಂತ. ಇದಕ್ಕಿಂತ ಹೇಸಿಗೆ ನಿಲುವು ಏನಾದರೂ ಇದೆಯಾ? ಇಂಥ ಅರ್ಥಶಾಸ್ತ್ರಜ್ಞರು ನಮ್ಮ ಸುತ್ತಮುತ್ತ ಇದಾರೆ ಸ್ವಾಮಿ. ಇದು ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ನನಗೆ ಇನ್ನೂ ವಿಶ್ವಾಸ ಇದೆ. ಇಫ್ ಇಂಡಿಯಾ ಟೇಕ್ಸ್ ದಿ ಲೀಡರ್‌ಶಿಪ್ ಆಫ್ ಥರ್ಡ್‌ವರ್ಲ್ಡ್ ಕಂಟ್ರೀಸ್, ವಿ ಕ್ಯಾನ್ ಡೆಸ್ಟ್ರಾಯ್ ದಿಸ್ ಕೈಂಡ್ ಆಫ್ ಗ್ಲೋಬಲೈಜೇಶನ್. ಇದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಗು ತ್ತೇನೋ. ಒಂದೊಂದು ಸಾರಿ ಧೈರ್ಯವಾಗಿ ಮಾತಾಡೋ ಧ್ವನಿ ಕೇಳ್ತಾ ಇದೆ. ನಮ್ಮ ಸರಕಾರದ ವಕ್ತಾರರಬಾಯಿಂದ,ಯಾರುಅಂತಾರಾಷ್ಟ್ರೀಯ ಸಮಾಲೋಚನೆಗಳಿಗೆ ಹೋಗ್ತಾರೊ ಅವರಿಂದ, ಮತ್ಯಾವುದೋ ಪ್ರೆಶರ್‌ನಿಂದ ಧ್ವನಿ ಕ್ಷೀಣ ಆಗುತ್ತೆ. ಆದರೆ ಇಲ್ಲಿ ಸಮಸ್ಯೆ ಜಾಸ್ತಿ ಜಾಸ್ತಿ ಆಗ್ತಾ, ಜನಾಂದೋಲನದ ಒತ್ತಡಕ್ಕೆ ಅವರೂ ಧೈರ್ಯವಾಗಿ ಮಾತಾಡಲೇ ಬೇಕಾಗುತ್ತೆ. ಸೋ, ಈಗ ಇಂಡಿಯಾ ಮಲೇಶಿಯಾ ಪಾಕಿಸ್ತಾನ ಇವು ಸ್ವಲ್ಪಮಟ್ಟಿಗೆ ನಾಯಕತ್ವ ತಗೊಂಡಿವೆ. ಜಾಗತೀಕರಣದ ಸಮಸ್ಯೆ ಈ ದೇಶಗಳಲ್ಲಿ ಜಾಸ್ತಿ ಆಗ್ತಾ ಆಗ್ತಾ ಇನ್ನೂ ಗಟ್ಟಿ ಧ್ವನಿಯಲ್ಲಿ ಮಾತಾಡ್ಲಿಕ್ಕೆ ಪ್ರಾರಂಭ ಆಗಬಹುದು. ಫೈನಲೀ ಕ್ಯಾಪಿಟಲಿಜಂ ಹ್ಯಾಸ್ ಟು ಕೊಲ್ಯಾಪ್ಸ್; ಅಲಾಂಗ್ ವಿಥ್ ಡಬ್ಲ್ಯೂಟಿಒ ಹ್ಯಾಸ್ ಟು ಕೊಲ್ಯಾಪ್ಸ್. ಆದರೆ ಈ ಕುಸಿತ ಬೇಗ ಆಗೋದಕ್ಕೋಸ್ಕರವಾಗಿ ನಾವು ಮಾಡ್ತಾ ಇರೋ ಚಳುವಳಿಯಿದು. ತಡ ಆದರೆ, ಅವು ಕೊಲ್ಯಾಪ್ಸ್ ಆಗೋಕ್ ಮುಂಚೆ ಸಾಕಷ್ಟು ಹಾನಿ ಮಾಡಿಬಿಡುತ್ವೆ. ಈ ಹಾನಿ ತಪ್ಪಿಸೋಕೋಸ್ಕರ ಈ ಚಳುವಳಿಗಳು. ಈಗ ಅಫಘಾನಿಸ್ಥಾನದ ಮೇಲೆ ಅಮೆರಿಕ ಭಯೋತ್ಪಾದನೆ ನಿವಾರಣೆ ಹೆಸರಲ್ಲಿ ದಾಳಿ ಮಾಡಿತು. ಇದಕ್ಕೂ ಗ್ಲೋಬಲೈಜೇಶನ್ನಿಗೂ ಇರೋ ಸಂಬಂಧ ಎಂಥದ್ದು? ನಾವು ಜಾಗತೀಕರಣವನ್ನ ಕಲೋನಿಯಲಿಜಂನ ಮುಂದುವರಿಕೆ ಅಂತ ಕರೀತಾ ಇರೋದು. ಇಟೀಸ್ ಎ ಪ್ರೊಸೆಸ್ ಆಫ್ ಎ ರಿಕಲೋನೈಜೇಶನ್. ಆಫ್ಟರ್ ದಿ ಫಸ್ಟ್ ಫೇಸ್ ಆಫ್ ಕಲೋನೈಜೇಶನ್, ಇದನ್ನ ನಾವು ಗ್ಲೋಬಲೈಜೇಶನ್ ಅಂತ ಅರ್ಥೈಸಿರೋದು. ಈಗ ಇರಾಕ್ ಮೇಲೆ ಯುದ್ಧ ಮಾಡಬೇಕು ಅನ್ನೋದನ್ನ ನಾವು ಅಮೆರಿಕದ ಪೆಟ್ರೊಟೆರರಿಸಂ ಅಂತ ಮಾತ್ರ ನೋಡೋದು. ಅಂಡ್ ದಿ ಬಿಗ್ಗೆಸ್ಟ್ ಟೆರರಿಸ್ಟ್ ಈಜ್ ಜಾರ್ಜ್‌ಬುಶ್. ಅಂಡ್ ದಟೀಸ್ ದಿ ಟ್ರೂತ್. ಇವತ್ತು ಪ್ರಪಂಚದಲ್ಲಿ ಅತ್ಯಂತ ದೊಡ್ಡ ಭಯೋತ್ಪಾದಕ ಅಂದರೆ ಅಮೇರಿಕಾನೆ. ಇನ್ನು ಮಿಕ್ಕವರ‍್ಯಾರು ಭಯೋತ್ಪಾದಕರಲ್ಲವೇ ಅಲ್ಲ. ಅವರೆಲ್ಲ ಬೇರೆಬೇರೆ ರೂಪದಲ್ಲಿ ಅಮೇರಿಕದ ಭಯೋತ್ಪಾದನೆಯನ್ನ ವಿರೋಧ ಮಾಡ್ತಾ ಇರೋದು. ಅದರಲ್ಲಿ ಸದ್ದಾಂ ಕೂಡ ಒಬ್ಬರು. ಐ ವುಡ್ ಸೇ ಬಿನ್ ಲ್ಯಾಡೆನ್ ಆಲ್ಸೋ. ನಾನು ಒಂದು ರೀತಿ ಅವರ ಸ್ನೇಹಿತ. ಯಾಕಂದರೆ ಅವರು ಏನು ವಿರೋಧ ಮಾಡ್ತಾ ಇದಾರೊ ಅದನ್ನೇ ವಿರೋಧ ಮಾಡೋನು ನಾನು. ನೀವು ಈ ಮೀಟರ್ ಅಳವಡಿಕೆಯಂತಹ ರೈತರ ಸಮಸ್ಯೆ ಬಗ್ಗೆ ಚಳುವಳಿ ಮಾಡತೀರಿ. ಅದೇ ಕಾಲಕ್ಕೆ ಈ ಬಗೆಯ ಅಂತಾರಾಷ್ಟ್ರೀಯ ರಾಜಕೀಯವನ್ನು ಕೂಡ ವಿಶ್ಲೇಷಣೆ ಮಾಡತೀರಿ. ಇವೆರಡಕ್ಕೂ ಇರೋ ಸಂಬಂಧವನ್ನ ರೈತರಿಗೆ ಒಂದು ರಾಜಕೀಯ ಪ್ರeಯಾಗಿ ಕೊಡೋ ವಿಷಯದಲ್ಲಿ ನಿಮ್ಮ ಅನುಭವ ಏನು? ಕರ್ನಾಟಕದಲ್ಲಿ ಈ ಕೆಲಸ ಮಾಡ್ತಾ ಇರೋದು ರೈತ ಚಳುವಳಿ ಒಂದೇ. ಇದರ ಬಗ್ಗೆ ಅಧ್ಯಯನ ಶಿಬಿರಗಳನ್ನ ಇಟ್ಕೋತಾ ಇರೋದು ರೈತ ಚಳುವಳಿ ಒಂದೇ. ಮಿಕ್ಕ ಯಾವ ಸಂಘಟನೇನೂ ಈ ಕೆಲಸ ಮಾಡ್ತಾ ಇಲ್ಲ. ಅಲ್ಲ. ರೈತರಿಗೆ ಇದನ್ನು ಕೊಡೋ ವಿಷಯದಲ್ಲಿರೊ ತೊಡಕುಗಳ ಬಗ್ಗೆ ಕೇಳಿದೆ.... ಜಾಗತೀಕರಣದ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಇರೋವಂಥವರು ಇವತ್ತಿಗೂ ಕರ್ನಾಟಕದ ರೈತರು ಅಂತ ಹೇಳಬಹುದು ತಾವು. ಪ್ರತಿಯೊಬ್ಬನಿಗೂ ಗೊತ್ತು ಏನಾಗ್ತಿದೆ? ಎಲ್ಲಿಂದ ಸಮಸ್ಯೆ ಬರ್ತಿದೆ? ಎಲ್ಲಿಂದ ಏನು ಬಂತು? ನನ್ನ ಮುಸುಕಿನ ಜೋಳ ಬೆಲೆ ಕಡಿಮೆ ಆಗಕೆ ಏನ್ ಕಾರಣ? ಯಾವ ದೇಶದಿಂದ ಎಷ್ಟು ಮುಸುಕಿನ ಜೋಳ ಬಂತು? ಯಾವ ರೇಟಿಗೆ ಬಂತು? ತಾಳೆ ಎಣ್ಣೆ ಯಾವ ರೇಟಿಗೆ ಬಂತು? ಇದು ನಮ್ಮ ದೇಶದ ಬುದ್ಧಿಜೀವಿಗಳಿಗಿಂತ ಹೆಚ್ಚಾಗಿ ರೈತ ಕಾರ್ಯಕರ್ತರಿಗೆ ಹೆಚ್ಚು ಮಾಹಿತಿ ಇದೆ(ನಗು). ಈ ಜಾಗತೀಕರಣದ ಹೊತ್ತಲ್ಲೇ ಭಾರತದಲ್ಲಿ ಮತೀಯವಾದವು ತುಂಬ ಬಿರುಸಾಗಿ ಬೆಳೀತಿದೆ. ದೇರ್ ಈಜ್ ನೋ ಡಿಫರೆನ್ಸ್ ಬಿಟ್ವೀನ್ ವಾಟ್ ಹ್ಯಾನ್ಡ್ ಇನ್ ಗುಜರಾತ್ ಅಂಡ್ ಆಫ್‌ಘಾನಿಸ್ಥಾನ್. ಭಾರತದ ಮತ್ತು ಅಂತರರಾಷ್ಟ್ರೀಯ ಮೇಲ್ವರ್ಗಗಳು ಕೈಜೋಡಿಸಿರೋದು ಅಷ್ಟೆ. ಜಾಗತೀಕರಣದಿಂದ ಈ ಎರಡು ವರ್ಗಗಳಿಗೆ ಮಾತ್ರ ಲಾಭ. ಸೋ ಅದಕ್ಕೆ ಅವರೇನೇನು ತಂತ್ರಗಳನ್ನ ಉಪಯೋಗಿಸಬೇಕೊ ಅವನ್ನೆಲ್ಲ ಉಪಯೋಗಿಸ್ತಿದಾರೆ. ಈವನ್ ಬಾಬ್ರಿ ಮಸೀದಿ ಡಿಮಾಲಿಶ್ ಡಿಸೆಂಬರ್ ೬ನೇ ತಾರೀಕು ಅಂತ ನಿಗದಿ ಆಗಿದ್ದೂನೂ ವಾಷಿಂಗ್ ಟನ್‌ನಲ್ಲಿ. ಡಿಸೆಂಬರ್ ೬ರ ಕಾಲಕ್ಕೆ ಮುಖ್ಯವಾದ ಸಭೆ ಜೀನೇವಾದಲ್ಲಿ ನಡೀತಾ ಇತ್ತು. ದೇಶದ ಗಮನ ಆ ಕಡೆ ಹೋಗಬಾರದು, ಬೇರೆ ಕಡೆ ಬರಬೇಕು ಅನ್ನೊ ದೃಷ್ಟಿಯಿಂದಾನೇ ಡಿಸೆಂಬರ್ ೬ ನಿಗದಿ ಮಾಡಿದ್ದು. ಅಂತಾರಾಷ್ಟ್ರೀಯವಾಗಿ ನಡೆಯೋವಂತಹ ಕುತಂತ್ರಗಳು ಇವೆಲ್ಲ. ಭಾರತದ ಮೇಲ್ವರ್ಗ ಹಾಗೂ ಈ ಅಂತಾರಾಷ್ಟ್ರೀಯ ಮೇಲ್ವರ್ಗಗಳ ನಡುವೆ ನಿಕಟವಾದ ಸಂಕರ್ಪ ಉಂಟು. ಯಾವ್ಯಾವ ದೇಶದಲ್ಲಿ ಯಾವ್ಯಾವ ಸ್ಟ್ರ್ಯಾಟೆಜಿ ಉಪಯೋಗಿಸಬೇಕು? ಉದಾಹರಣೆಗೆ ಆಪಿsಕಾ ದೇಶದಲ್ಲಿ ರೂವಾಂಡಾ ಬುರುಂಡಿಗಳಲ್ಲಿ ಯಾವ ಸ್ಟ್ರ್ಯಾಟೆಜಿ ಉಪಯೋಗಿಸಬೇಕು? ಅಲ್ಲಿ ಹೆಂಗೆ ಜನಾಂಗೀಯ ಕಲಹಗಳನ್ನು ಸೃಷ್ಟಿ ಮಾಡಬೇಕು? ಇದನ್ನೂನು ಅಮೇರಿಕಾದ ತಜ್ಞರು ರೂಪಿಸೋವಂಥ ಕಾರ್ಯಕ್ರಮ. ಅದೇ ರೀತಿ ಭಾರತದಂಥ ದೇಶದಲ್ಲಿ ಯಾವ ರೀತಿ ಕೋಮುವಾದದ ಬೆಂಕಿ ಹಚ್ಚಬೇಕು? ಇದರ ಒಂದು ತಂತ್ರವನ್ನು ರೂಪಿಸೋರು ಅವರೇ. ಇದಕ್ಕೆ ತಯಾರಿ ಇರೋವಂಥ ಒಂದು ವರ್ಗ ಇದೆ ಭಾರತದಲ್ಲಿ. ಭಾರತದ ಜಾತಿಪದ್ಧತಿ ಯಿಂದ ಉದ್ಭವವಾಗಿರೊಂಥ ಆಲೋಚನೆಗಳು ಏನು ಇವೆ, ಅವನ್ನು ಸದ್ವಿನಿಯೋಗ ಪಡಿಸಿಕೊಳ್ಳೋವಂಥ ಮುಂದುವರಿದ ದೇಶಗಳನ್ನ ನಾನು ಅಂತಾರಾಷ್ಟ್ರೀಯ ಬ್ರಾಹ್ಮಣರು ಅಂತ ಕರೆಯೋದು. ಬೇವಿನ ಮೇಲೆ, ಅರಿಶಿನದ ಮೇಲೆ, ಅಮೆರಿಕಾದ ಕಂಪನಿಗಳು ಪೇಟೆಂಟ್ ಮಾಡಿಸಿದವು ಅನ್ನೋ ಮಾತನ್ನ ಕೇಳತೀವಿ. ಜನ ನಮ್ಮದೇನನ್ನೊ ಯಾರೋ ಕದೀತಾ ಇದಾರೆ ಅನ್ನೋ ಆತಂಕವ ವ್ಯಕ್ತಪಡಿಸೋದನ್ನ ಕಾಣತೀವಿ. ವಾಸ್ತವವಾಗಿ ಪೇಟೆಂಟ್ ವಿಷಯದಲ್ಲಿ ನಮ್ಮ ರೈತರಿಗೆ ಯಾವ ತರಹ ಅನ್ಯಾಯವಾಗ್ತಾ ಇದೆ? ನಮ್ಮಲ್ಲಿರೋವಂಥ ನೈಸರ್ಗಿಕ ಸಂಪತ್ತನ್ನು ನಾವೇ ಬಳಸಲಿಕ್ಕೆ ಆಗದಂಥ ವ್ಯವಸ್ಥೆ ತರೋದು ಪೇಟೆಂಟಿನ ಉದ್ದೇಶ. ಉದಾ : ಬೇವು. ಅಮೇರಿಕಾದಲ್ಲಿ ಒಂದು ಕಂಪನಿ ನೀಮ್ ಪೇಟೆಂಟ್ ಯಾವ ರೀತಿ ಮಾಡಿದೆ ಅಂದರೆ, ಆ ಬೇವಿನ ಬೀಜದಿಂದ ಯಾವ್ಯಾವ ಪ್ರಾಸೆಸ್‌ನಿಂದ ಏನೇನು ಮಾಡಬಹುದು, ೪ ಡಿಗ್ರೀಸ್‌ನಲ್ಲಿ ಏನು ಮಾಡಬಹುದು. ೬೦ ಡಿಗ್ರೀಸ್‌ನಲ್ಲಿ ಏನು ಮಾಡಬಹುದು ಇತ್ಯಾದಿ ಎಲ್ಲಾ ಪ್ರಾಸೆಸನ್ನೂ ಪೇಟೆಂಟ್ ಮಾಡಿ ಬಿಟ್ಟಿದೆ. ಒರಿಜಿನಲ್ ಡಾಕ್ಯುಮೆಂಟ್ ನನ್ನ ಕಡೆ ಇದೆ. ಆ ಪೇಟೆಂಟ್ ಚೌಕಟ್ಟಿಗೆ ನೀವು ಒಪ್ಪಿಗೆ ಕೊಟ್ಟರೆ, ನಿಮ್ಮಲ್ಲಿ ಎಷ್ಟೇ ಬೇವಿನ ಬೀಜ ಇರಲಿ, ಅದನ್ನ ತಗೊಂಡು ನೀವು ಪ್ರಾಸೆಸ್ ಮಾಡಕ್ಕೇ ಆಗಲ್ಲ. ಟ್ರೇಡ್ ರಿಲೇಟೆಡ್ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಅಗ್ರಿಮೆಂಟ್ ರುಜು ಹಾಕೋಕೆ ನಮ್ಮ ಸರಕಾರದವರು, ಇನ್ನೂ ಚರ್ಚೆ ಮಾಡ್ತಾ ಇದಾರೆ. ರುಜು ಹಾಕ್ತು ಅಂತಂದ್ರೆ, ರುಜು ಹಾಕಿದ ದೇಶದಲ್ಲಿ ಏನಾದರೂ ರಿಪಿಟೇಶನ್ಸ್ ಆಫ್ ದಿ ಸೇಮ್ ಪ್ರಾಸೆಸ್ ನಡೆದರೆ, ದಂಡ ಕೊಡಬೇಕು. ದಂಡ ಬಹಳ ದೊಡ್ಡ ಪ್ರಮಾಣದ್ದಾದ್ದರಿಂದ, ನಿಮ್ಮ ಸಂಪನ್ಮೂಲವನ್ನ ನೀವೇ ಬಳಸೋಕೆ ಆಗದೇ ಇರೋ ಸ್ಥಿತಿಗೆ ತಲುಪುತ್ತೀರಿ. ಈಗ ಬಿತ್ತನೆ ಬೀಜಗಳೂ ಪೇಟೆಂಟ್ ಆಗಿವೆ. ಜೆನಿಟಿಕಲಿ ಮಾಡಿಫೈಯ್ಡ್ ಅಂತ ಏನು ಹೇಳ್ತೀವಿ, ಈ ಕುಲಾಂತರಿಗಳಿಂದ ಬೇರೆ ತಳಿಗಳಿಗೂ ಪರಾಗ ಮಾಲಿನ್ಯದಿಂದ ಸೋಂಕು ತಗಲುತ್ತೆ. ಮೊನ್ನೆ ಒಂದು ಕೇಸಾಯಿತು ಕೆನಡಾ ದೇಶದಲ್ಲಿ. ಒಬ್ಬ ಆರ್ಗ್ಯಾನಿಕ್ ಫಾರ್ಮರ್. ಮಾನ್ಸಂಟೊ ಕಂಪನಿಯ ಬೀಜ ಉಪಯೋಗಿಸಿಲ್ಲ. ಆದರೆ ಪಕ್ಕದ ಜಮೀನಿನವನು ಆ ಬೀಜ ಉಪಯೋಗಿಸಿದಾನೆ. ಅದು ಪರಾಗ ಮಾಲಿನ್ಯ ಆಗಿ ಇಲ್ಲಿರೋ ಗುಣಗಳು ಅವನ ಬೆಳೆಗೆ ಬಂದ್ ಬಿಟ್ಟಿವೆ. ಕಂಪನಿ ಅವನ ಮೇಲೆ ಕೇಸ್ ಹಾಕ್ತು. ನೀನು ಕದ್ದಿದಿಯಾ ನಮ್ಮ ಬೀಜ ಅಂತ. ಕೋರ್ಟಲ್ಲಿ ಮಾನ್ಸಾಂಟೊ ಕಂಪನಿ ಪರ ತೀರ್ಮಾನ ಆಯಿತು. ಆ ರೈತ ಜುಲ್ಮಾನೆ ಕಟ್ಟಬೇಕಾಯಿತು. ಈಚೆಗೆ ನಡೆದಿದ್ದು ಇದು. ಸೋ, ಅಲ್ಲಿಗೆ ನಾಗುತ್ತೆ? ನಾವು ನಮ್ಮ ಸ್ವಂತ ತಳಿಗಳನ್ನೇ ಉಪಯೋಗಿಸೋಕೆ ಆಗದೇ ಇರೋ ಸ್ಥಿತಿಗೆ ಬಂದ್ ಬಿಡ್ತೀವಿ. ನಿಮ್ಮ ಸಂಪನ್ಮೂಲಗಳನ್ನ ನೀವೇ ಉಪಯೋಗಿಸೋಕಾಗದೇ ಇರೋದು, ನಿಮ್ಮ ಸ್ವಂತ ತಳೀನ ನೀವೇ ಉಪಯೋಗಿಸೋಕಾಗದೇ ಇರೋದಕ್ಕಿಂತ ಅಪಾಯ ಬೇಕೆ? ಇನ್ನೊಂದು ಅಪಾಯ ಇದೆ. ಯು ಸೀ, ಬಿತ್ತನೆಬೀಜ ಮಾರೋವಾಗ ಟೆಕ್ನಾಲಜಿ ಪಿs ಅಂತ ಚಾರ್ಜ್ ಮಾಡ್ತಾರೆ. ರಾಯಲ್ಟಿ ಅಂತ ಚಾರ್ಜ್ ಮಾಡೋಲ್ಲ. ಈಗ ಮಾನ್ಸಾಂಟೊ ಕಂಪನಿ ಬಿಟಿ ಹತ್ತಿ. ೪೫೦ ಗ್ರಾಂಗೆ ೧೬೦೦ ರೂಪಾಯಿ. ಯಾಕೆ ೧೬೦೦ ಅಂದರೆ, ಟೆಕ್ನಾಲಜಿ ಪಿs ಅಂತಾರೆ. ಇಟ್ಸ್ ಆಲ್‌ಮೋಸ್ಟ್ ರಾಯಲ್ಟಿ ಟು ದ ಪೇಟೆಂಟ್. ಹಂಗಾಗಿ ಕೃಷಿ ದುಬಾರಿಯಾಗೋದು ಒಂದು. ಇನ್ನೊಂದು ಕಡೆ ನಿಮ್ಮ ಬಿತ್ತನೆ ಬೀಜ ಬಳಸೋಕಾಗದೇ ಇರೋದು ಮತ್ತೊಂದು. ರೈತ ಸಂಘವು ಕರ್ನಾಟಕದಲ್ಲಿರೊ ಅನೇಕ ಬಹುರಾಷ್ಟ್ರೀಯ ಬೀಜಕಂಪನಿಗಳ ಮೇಲೆ ಆಕ್ರಮಣ ಮಾಡಿದೆ. ಈ ಕಂಪನಿಗಳನ್ನ ಸಂಘ ತನ್ನ ಮುಖ್ಯ ಎದುರಾಳಿಯನ್ನಾಗಿ ಮಾಡಿಕೊಳ್ಳೋಕೆ ತರ್ಕ ಏನು? ಒಂದು ದೇಶದ ಬಿತ್ತನೆ ಬೀಜದ ಮೇಲೆ ಮತ್ತೊಂದು ದೇಶದ ಕಂಪನಿ ಸಂಪೂರ್ಣ ಹತೋಟಿ ಸಾದಿsಸಿದರೆ, ಆ ದೇಶದ ಸ್ವಾತಂತ್ರ್ಯ ಉಳೀತು ಅಂತೀರಿ? ಅಂಡ್ ಸೀಡ್ ಈಸ್ ದ ಫಸ್ಟ್ ಲಿಂಕ್ ಇನ್ ದಿ ಫುಡ್ ಚೈನ್. ಒಂದು ದೇಶದ ಆಹಾರ ವ್ಯವಸ್ಥೇನ ನಿಯಂತ್ರಣ ಮಾಡೋವಂಥ ಒಂದು ಸ್ಥಾನಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಬಂದು ಕೂತರೆ, ಫುಡ್ ಸಾವರನ್‌ಟಿ ಅಂತ ಏನಂತೀವಿ, ಆಹಾರ ಸಾರ್ವಭೌಮತ್ವ, ಅದು ಹೋಯಿತು. ಅದು ಹೋಯಿತು ಅಂದರೆ ದೇಶದ ಸಾವರನ್‌ಟಿ ಹೋಯಿತು ಅಂತ. ಅದು ಅಪಾಯ ಇರೋದು. ಈ ಫುಡ್ ಸಾವರನ್‌ಟಿ ಜತೆಗೆ ಆಹಾರ ವೈವಿಧ್ಯ ಕೂಡ ಈ ಜಾಗತೀಕರಣದಿಂದ ನಾಶವಾಗ್ತಾ ಇರೋ ಹಾಗಿದೆ. ಹೌದು. ಯಾವ ಪ್ರದೇಶದಲ್ಲಿ ಜೈವಿಕ ವೈವಿಧ್ಯತೆ ಇದೆ, ಅಂಥ ದೇಶಗಳಲ್ಲಿ ಈ ಕಂಪನಿಗಳು ಹೆಚ್ಚು ಗಮನ ಕೊಟ್ಟು ಕೆಲಸ ಮಾಡ್ತಿವೆ. ಚಾರಿತ್ರಿಕ ಕಾರಣಕ್ಕೆ ಬಯೋಡೈವರ್ಸಿಟಿ ಇರೋದು ಗ್ಲೋಬಿನ ಕೆಳಭಾಗದಲ್ಲಿ ಮಾತ್ರ. ಅದಕ್ಕೆ ಕಾರಣ ಗ್ಲೋಬಿನ ಮೇಲ್ಭಾಗಕ್ಕೆ ಹಿಮಯುಗದಲ್ಲಿ ಬಯೋಡೈವರ್ಸಿಟಿ ಎಲ್ಲ ನಾಶವಾಗಿ ಹೋಯಿತು. ಸೋ, ಆಪಿsಕಾ ಏಶ್ಯಾ ಲ್ಯಾಟಿನ್ ಅಮೇರಿಕಾ ಇಲ್ಲೇ ಅವರ ಚಟುವಟಿಕೆ ನಡೀತಾ ಇರೋದು. ಇಲ್ಲೇ ವಿರೋಧಗಳು ಈಗ ವ್ಯಕ್ತ ಆಗ್ತಾ ಇವೆ. ಉದಾಹರಣೆಗೆ ಮೆಕ್ಸಿಕೋದಲ್ಲಿ. ಅದು ಮುಸುಕಿನ ಜೋಳದ ತೌರು. ನಮ್ಮಲ್ಲಿ ಏನು ೧೬೦೦೦ ಭತ್ತದ ತಳಿಗಳು ಇವೆ, ಇನ್ನೂ ಹೆಚ್ಚಿದ್ದವು.. ಅದೇ ರೀತಿ ಒಂದೊಂದು ಪ್ರದೇಶದಲ್ಲೂ ಸಮೀಕ್ಷೆ ನಡೀತಾ ಇತ್ತು- ಮಲ್ಟಿನ್ಯಾಶನಲ್ ಕಂಪನಿಗಳ ಜೆನಿಟಿಕಲಿ ಮಾಡಿಫೈಡ್ ಸೀಡ್ಸ್ ನಿಂದ. ಅದನ್ನು ರೈತರು ವಿರೋಧ ಮಾಡ್ತಾ ಇದಾರೆ. ಈ ವಿರೋಧ ಸಾಕಷ್ಟು ಯಶಸ್ವಿ ಆಗ್ತಾ ಇದೆ. ಇದು ಆಪಿsಕಾ ದೇಶಗಳಲ್ಲೂ ಪ್ರಾರಂಭ ಆಗಿದೆ. ಮೊನ್ನೆಮೊನ್ನೆ ಜಾಂಬಿಯಾ ದೇಶ, Pಮ ಬಂದಿದ್ದರೂನೂ, ಅಮೇರಿಕಾ ಜೆನಿಟಿಕಲಿ ಮಾಡಿಫೈಡ್ ಫುಡ್ ಕಳಿಸಿದಾಗ ರಿಜೆಕ್ಟ್ ಮಾಡ್ತು. ನಾವು ಉಪವಾಸ ಇರ್ತೀವಿ ಆ ವಿಷ ತಿನ್ನಲ್ಲ ಅಂತು. ಈ ಬೀಜ ವೈವಿಧ್ಯದ ಪರವಾಗಿ, ಆಹಾರ ವೈವಿಧ್ಯದ ಪರವಾಗಿ ಕೆಲಸ ಮಾಡೊ ಜನತೆಯ ವಿeನಿಗಳು ಇದಾರಾ? ಬಹಳ ಕಡಿಮೆ ಸಂಖ್ಯೆಯಲ್ಲಿ ಇದಾರೆ. ಆದರೆ ರೈತರು ದೊಡ್ಡ ಸಂಖ್ಯೆಯಲ್ಲಿ ಬೆಳೀತಿದಾರೆ. ನಮ್ಮ ಸ್ಥಳೀಯ ತಳಿಗಳನ್ನೇ ಉಪಯೋಗಿಸಿ ಅತ್ಯಂತ ಹೆಚ್ಚಿಗೆ ಉತ್ಪಾದನೆ ಮಾಡೋಕೆ ಪ್ರಯತ್ನ ಪಡ್ತಾ ಇರೋ ಕೃಷಿಕರ ಸಂಖ್ಯೆ ದಿನೇದಿನೇ ಜಾಸ್ತಿ ಆಗ್ತಾ ಇದೆ. ಆದಕಾರಣ ನಮ್ಮ ದೃಷ್ಟಿಯಲ್ಲಿ ಕೃಷಿಕರೆ ಮೊದಲನೇ ವಿeನಿಗಳು. ಅವರು ಸಾವಿರಾರು ವರ್ಷದಿಂದ ಪ್ರಯೋಗ ಮಾಡಿಕೊಂಡು ಬಂದಿರೋವಂಥ ವಿeನಿಗಳು. ಆ ಕಾರಣಾನೆ ಈವನ್ ಇನ್ ದಿ ಕನ್ವೆನ್‌ಶನಲ್ ಬಯಲಾಜಿಕಲ್ ಡೈವರ್ಸಿಟಿ, ಸಿಬಿಡಿ ಅಂತ ಏನ್ ಕರೀತೀವಿ ಅದು, ಟ್ರೆಡಿಶನಲ್ ನಾಲೆಜ್ ಸಿಸ್ಟಮ್ಸ್ ಆರ್ ನಾಟ್ ಇನ್‌ಪಿsರಿಯರ್ ಟು ಮಾಡರ್ನ್ ಸೈಂಟಿಪಿsಕ್ ಸಿಸ್ಟಮ್ಸ್. ದೇ ಶುಡ್ ಬಿ ಗೀವನ್ ಆನ್ ಈಕ್ವಲ್ ಸ್ಟೇಟಸ್. ಜಾಗತೀಕರಣ ಜೀವವೈವಿಧ್ಯವನ್ನ ನಾಶಮಾಡುವಂತಹದ್ದು ಅನ್ನೊ ತರಹಾನೇ, ಪ್ರಾದೇಶಿಕ ಭಾಷೆಗಳ ಮೇಲೆ ಕೂಡ ಕೆಟ್ಟ ಪ್ರಭಾವ ಮಾಡ್ತಿದೆ. ಅಂತನ್ನೋ ಆತಂಕವಿದೆ. ನಾವು ಸುಮ್ಮನೆ ಕೂತರೆ ಭಾಷೆ ಕೂಡಾ ನಾಶವಾಗಿ ಹೋಗುತ್ತೆ. ಅದರಲ್ಲಿ ಅನುಮಾನ ಇಲ್ಲ. ಸಂಸ್ಕೃತಿಯ ಬೇರೆ ಬೇರೆ ಮುಖಗಳು ಏನಿವೆ, ಆವಕ್ಕೆಲ್ಲ ಭಾಷೇನೇ ಒಂದು ದೊಡ್ಡ ಅಡಿಗಲ್ಲು. ಅದರ ಜೊತೆಗೆ ಕೃಷೀನೂ ಸಂಸ್ಕೃತಿಯ ಒಂದು ಭಾಗ. ಅದರ ಜೊತೆಗೆ ಆಹಾರದ ಸಂಸ್ಕೃತಿ. ಫುಡ್ ಕಲ್ಚರ್ ಈಜ್ ಆಲ್ ಸೋ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ಫುಡ್ ಕಲ್ಚರ್ ಗೆಟ್ಸ್ ಡಿಸ್ಟ್ರಾಯಿಡ್, ದಿ ಕನೆಕ್ಟೆಡ್ ಕ್ರಾಪ್ ಕಲ್ಚರ್ ಆಲ್ಸೋ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ದಿ ಕ್ರಾಪ್ ಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್, ದಿ ಅಗ್ರಿಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ಅಗ್ರಿಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್, ಬಯೋ ಡೈವರ್ಸಿಟಿ ಗೆಟ್ಸ್ ಡಿಸ್ಟ್ರಾಯ್ಡ್. ಜೈವಿಕ ವೈವಿಧ್ಯತೆ ಸಂಪೂರ್ಣ ನಾಶ ಆಗಿ ಹೋಗಿಬಿಡುತೆ. ಅಗೇನಾಗುತ್ತೆ, ಈ ಗ್ಲೋಬಲ್ ಮಾನೊ ಕಲ್ಚರಿಗೆ ನಾವು ಸೇರ್ಕೊಂಡು ಬಿಡ್ತೀವಿ. ಅಂಡ್ ಗ್ಲೊಬಲ್ ಮಾನೊಕಲ್ಚರ್ ಈಜ್ ಕಂಟ್ರೋಲ್ಡ್ ಬೈ ಮಲ್ಟಿನ್ಯಾಶನಲ್ ಕಾರ್ಫೋರೇಷನ್ಸ್ ! ವೆನ್ ಯು ಬಿಕಮ್ ಎ ಪಾರ್ಟ್ ಆಫ್ ಮಾನೊಕಲ್ಚರ್ ಕಂಟ್ರೊಲ್ಡ್ ಬೈ ಮಲ್ಟಿನ್ಯಾಶನಲ್ ಕಾರ್ಫೋರೇಷನ್ಸ್ , ಯು ಸೀಜಡ್ ಟು ಬಿ ಎ ನೇಶನ್ ಅಟಾಲ್. ಇವೆಲ್ಲ ಒಂದಕ್ಕೊಂದು ಸಂಬಂಧ ಇರೋವಂಥ ಬೆಳವಣಿಗೆಗಳು. ಇದರ ಪ್ರeನೆ ಇಲ್ಲ ನಮ್ಮ ದೇಶದ ಬುದ್ಧಿಜೀವಿಗಳಿಗೆ. ಎಲ್ಲಾ ವಿಷಯಾನೂ ಲಘುವಾಗಿ ತಗೊಳ್ಳೋದು. ಅಮೆರಿಕಾದ ಬಗ್ಗೆ ಆಕರ್ಷಣೆ ಮತ್ತು ದೌರ್ಬಲ್ಯ. ಅದರ ಒಂದು ಭಾಗ ಆಗೋದಿಕ್ಕೆ ಆಸೆ. ಇಂತಹ ಮನಸ್ಸು ಇರೋವಾಗ ತಡಿಯೋದು ಹ್ಯಾಗೆ? ನಮ್ಮ ಬೀಜಪದ್ಧತಿಯನ್ನ ಭಾಷೆಯನ್ನ ಸಂಸ್ಕೃತಿಯನ್ನ ಯಾರೋ ಹೊರಗಿನವರು ಬಂದು ಹಾಳುಮಾಡ್ತಾ ಇದಾರೆ ಅನ್ನೋ ಆತಂಕ, ಯಾವಾಗಲೂ ನಮ್ಮನ್ನ ರಕ್ಷಣಾತ್ಮಕ ಮನಸ್ಥಿತಿಯಲ್ಲೇ ಇಡುತ್ತೆ. ಇದು ಒಂದು ಬಗೆಯಲ್ಲಿ ನಮ್ಮ ಸಂಪ್ರದಾಯಗಳ ಬಗ್ಗೆ ಸ್ವವಿಮರ್ಶೆಯಿಲ್ಲದ ಸ್ಥಿತಿಗೆ ಹಾಗೂ ಆಧುನಿಕತೆಯನ್ನು ಕುರುಡಾಗಿ ವಿರೋದಿsಸುವ ಸ್ಥಿತಿಗೆ ಕರೆದುಕೊಂಡು ಹೋಗೋ ಸಾಧ್ಯತೆ ಇದೆ. ಆಧುನಿಕತೆ ಅನ್ನೋದರ ಬಗ್ಗೆ ಸ್ಪಷ್ಟ ಕಲ್ಪನೆ ಬರಬೇಕು. ಈಗ ಏನು ಆಧುನಿಕತೆ ಅಂತೀವಿ, ಅದು ನಿಜವಾಗಲೂ ಆಧುನಿಕವೇ? ಉದಾಹರಣೆಗೆ ಆಧುನಿಕ ಕೃಷಿ ಪದ್ಧತಿ. ಮೊದಲನೇ ಹಸಿರುಕ್ರಾಂತಿ ಅಂತ ಏನು ಕರೀತೀವಿ, ಇದನ್ನ ಸುಮಾರು ೫೦ ವರ್ಷ ಬಳಿಸಿದೀವಿ. ಇದು ನಿಜವಾಗಲೂನೂ ಆಧುನಿಕ ಪದ್ಧತಿನೋ? ಇದು ನಿಸರ್ಗಕ್ಕೆ ವಿರೋಧವಾದಂಥ ಅತ್ಯಂತ ಅವೈeನಿಕವಾದ ಪದ್ಧತಿ ಅನ್ನೋದು ಈಗ ಸ್ಪಷ್ಟ ಆಗ್ತಾ ಇದೆ. ನಾವು ರಾಸಾಯನಿಕಗಳ ಆಧಾರದ ಮೇಲೆ ಹಸಿರುಕ್ರಾಂತಿ ಅನ್ನೋ ಹೆಸರಲ್ಲಿ ಕೃಷಿ ಮಾಡಿದೆವು. ಅದರಿಂದ ಏನೇನು ಕೆಟ್ಟ ಪರಿಣಾಮಗಳು ಆದವು? ಎಷ್ಟು ಪ್ರಮಾಣದಲ್ಲಿ ನಾವು ಮಣ್ಣಿನ ಫಲವತ್ತತೆಯನ್ನ ಹಾಳು ಮಾಡಿದೆವು? ಮಣ್ಣಲ್ಲಿರೋ ಅಮೂಲ್ಯವಾಗಿರತಕ್ಕಂತಹ ಕ್ರಿಮಿಗಳನ್ನ ಹಾಳು ಮಾಡಿದೆವು. ಪಕ್ಷಿಗಳನ್ನ ನಾಶಮಾಡಿದೆವು. ದುಂಬಿಗಳನ್ನ ಹಾಳುಮಾಡಿದೆವು. ಚಿಟ್ಟೆಗಳನ್ನ ಹಾಳು ಮಾಡಿದೆವು. ಜೇನು ಹಾಳುಮಾಡಿದೆವು. ಕೃಷಿಗೆ ಅತ್ಯಂತ ಅವಶ್ಯಕವಾದಂಥ ಕೀಟ ವೈವಿಧ್ಯತೆ, ಇನ್‌ಸೆಕ್ಟ್ ಡೈವರ್ಸಿಟಿ, ಹಾಳು ಮಾಡಿದೀವಿ. ಇದೆಲ್ಲ ಮನವರಿಕೆಯಾಗಿ, ಮತ್ತೆ ಇದ್ಯಾವುದೂ ಹಾಳಾಗದೇ ಇರೋವಂಥ ಪದ್ಧತಿ ಯಾವುದು ಅಂತ ಹುಡುಕಿ ಹುಡುಕಿ, ಈಗ ಮತ್ತೆ ’ಸಸ್ಟೈನಬಲ್ ಅಗ್ರಿಕಲ್ಚರ್’ ಅಂತ ಹೊಸಹೆಸರಲ್ಲಿ ಎಲ್ಲ ದೇಶಗಳು ಪ್ರಾರಂಭ ಮಾಡಿವೆ. ಸಸ್ಟೈನಬಲ್ ಅಗ್ರಿಕಲ್ಚರ್ ಅಂದರೆ ಬೇರೆ ಏನೂ ಅಲ್ಲ. ನಮ್ಮ ದೇಶದಲ್ಲಿ ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತಹ ಕೃಷೀನೆ! ಸಮಸ್ಯೆ ಇರೋದು ಇಲ್ಲೆ. ’ನಮ್ಮ ಪೂರ್ವಜರು’ ನಡೆಸಿಕೊಂಡು ಬಂದದ್ದು ಅಂತ ರೈತರು ಹೇಳಿದರೆ ಒಂದರ್ಥ ಬರುತ್ತೆ. ಸಾಮಾಜಿಕವಾಗಿ ಸಂಪ್ರದಾಯವಾದಿಗಳು ಹೇಳುವಾಗ ಮತ್ತೊಂದರ್ಥ ಬರುತ್ತೆ. ಜಾಗತೀಕರಣದ ಹೊತ್ತಲ್ಲಿ ಈ ಎರಡನೇ ಸಾಧ್ಯತೆ-ಮೂಲಭೂತವಾದಿಗಳ ಕನ್ಸರ್ವೇಟಿವ್ ಆಟಿಟೂಡ್ -ಕೂಡ ಮೇಲಕ್ಕೆ ಏಳ್ತಾ ಇದೆ. ಹೀಗಾಗಿ ಹಿಂದಕ್ಕೆ ಹೋಗೋದು ಯಾರು ಯಾವುದಕ್ಕಾಗಿ ಅನ್ನೋ ಪ್ರಶ್ನೇನ ಎಚ್ಚರದಿಂದ ಗಮನಿಸಬೇಕಾಗಿದೆ. ನಿಜ, ಈಗ ನಮ್ಮದು ಅಂತ ನಾವು ಹೇಳೂದಕ್ಕೂ, ನಮ್ಮದು ಅಂತ ಮತೀಯ ಸಂಪ್ರದಾಯವಾದಿಗಳು ಹೇಳೋದಕ್ಕೂ ಭಾರಿ ವ್ಯತ್ಯಾಸ ಇದೆ. ಕನ್ಸರ್ವೇಟಿವ್ ಆಟಿಟೂಡ್ ಅಂತ ಏನಂದಿರಿ, ಆ ಅಂಶ ನಾವು ಹೇಳೋದು ವೈeನಿಕ ಸತ್ಯದ ಆಧಾರದ ಮೇಲೆ. ಯಾಕಂದರೆ ಈ ಪ್ರಪಂಚ ಸಂಪೂರ್ಣ ವೈವಿಧ್ಯತೆಯಿಂದ ಕೂಡಿದೆ. ಅದರಲ್ಲೂ ವಿಶೇಷವಾಗಿ ಪ್ರಪಂಚದ ಕೃಷಿಪದ್ಧತಿಗಳು ಸಂಪೂರ್ಣ ವೈವಿಧ್ಯತೆಯಿಂದ ಕೂಡಿವೆ. ಇದಕ್ಕೆ ಕಾರಣ ಆಗ್ರೋ ಕ್ಲೈಮ್ಯಾಟಿಕ್ ಕಂಡಿಶನ್ಸ್ ಅಂತ ಏನು ಕರೀತೀವಿ ಅದು ಒಂದೊಂದು ಪ್ರದೇಶದಲ್ಲಿ ಒಂದೊಂದು ತರಹ ಇರೋದು. ಹಂಗಾಗಿ ಬೇರೆ ಬೇರೆ ಪ್ರದೇಶದಲ್ಲಿ ಬೇರೆಬೇರೆ ಕೃಷಿ ಪದ್ಧತಿಗಳು ಇವೆ. ಅವು ಸಾವಿರಾರು ವರ್ಷಗಳಿಂದ ಪರೀಕ್ಷೆಗೆ ಒಳಗಾಗಿರೋವು. ಸಸ್ಟೈನಬಲ್ ಪ್ಲಾನೆಟ್ ಹ್ಯಾಜ್ ಬೀನ್ ದೇರ್, ಬಿಕಾಸ್ ಆಫ್ ದೀಸ್ ಡೈವೋರ್ಸ್ ಅಗ್ರಿಕಲ್ಚರ್ ಸಿಸ್ಟಮ್ಸ್. ಆಕಾರಣ ಮಾನೋ ಕಲ್ಚರ್‌ನಿಂದ ಪ್ಲಾನೆಟ್ ಹಾಳು ಮಾಡ್ತೀವಿ. ಮಾನೋ ಕಲ್ಚರ್ ಬಿಟ್ಟು, ಡೈವರ್ಸಿಟಿಗೆ ಇರೋವಂಥ ಒಂದು ಪದ್ಧತಿಗೆ ನಾವು ಬರಬೇಕು ಅಂತ ವೈeನಿಕವಾಗಿ ಹೇಳ್ತಾ ಇರೋ ಮಾತು. ಅದರೆ ಸ್ವದೇಶಿ ಸ್ವದೇಶಿ ಅಂತ ಸಂಪ್ರದಾಯವಾದಿಗಳು ಹೇಳೋ ಮಾತು ಇದೆಯಲ್ಲ, ಅದು ಆಷಾಢಭೂತಿತನದ ಮಾತು. ಜಾಗತೀಕರಣವು ಏಕರೂಪೀ ಸಂಸ್ಕೃತಿಯನ್ನ ಹೇರುತ್ತೆ ಅಂತನ್ನೊ ಆತಂಕ ರೈತರು ಮಾಡೋವಾಗ, ಅದು ಬೀಜ ವೈವಿಧ್ಯವನ್ನ ಆಹಾರ ವೈವಿಧ್ಯವನ್ನ ರಕ್ಷಿಸಿಕೊಳ್ಳೋ ಕ್ರಿಯೆಯಾಗಿದೆ. ವಿಚಿತ್ರ ಅಂದರೆ, ನಮ್ಮ ಸಂಸ್ಕೃತಿಯಲ್ಲಿರೋ ಜಾನಾಂಗಿಕ ವೈವಿಧ್ಯಗಳನ್ನು ಉಳಿಸಿಕೋಬೇಕು ಅಂತ ಅನೇಕ ಎನ್‌ಜಿಓಗಳು ಕೆಲಸ ಮಾಡ್ತಾ ಇವೆ. ಜಾಗತೀಕರಣದ ಸಂದರ್ಭದಲ್ಲಿ ತುಂಬ ಕ್ರಿಯಾಶೀಲವಾಗಿರುವ ಈ ಎನ್‌ಜಿಓಗಳ ಪಾತ್ರವನ್ನ ಚಳುವಳಿಗಾರರಾಗಿ ಹೇಗೆ ನೋಡುತ್ತೀರಿ? ನಮ್ಮಲ್ಲಿರೋವಂಥ ಬಹುಪಾಲು ಸರಕಾರೇತರ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳ ಅಥವಾ ಫೋರ್ಡು, ರಾಕ್‌ಫೆಲರ್ ಮುಂತಾದ ವಿದೇಶಿ ಫೌಂಡೇಶನ್ಸುಗಳ ಏಜೆಂಟರಾಗಿ ಕೆಲಸ ಮಾಡ್ತಾ ಇವೆ. ಈ ಫೌಂಡೇಶನ್‌ಗಳು ಎಲ್ಲಾ ದೇಶದಲ್ಲೂ ದೊಡ್ಡ ಪ್ರಮಾಣದಲ್ಲಿವೆ. ಜೊತೆಗೆ ನೀವೇನು ಆಧುನಿಕತೆ ಅಂದಿರಿ, ಅದಕ್ಕೆ ಯಾವ ರೀತಿ ವೈeನಿಕವಾದ ಒಂದು ಅರ್ಥ ಕೊಡಬೇಕೋ, ಅದೇ ರೀತಿ ಕಲ್ಚರ್ ಅಂತನ್ನೋದಕ್ಕೂ ಒಂದು ವೈeನಿಕ ಅರ್ಥ ಕೊಡಬೇಕಾಗುತ್ತೆ. ನಮ್ಮ ಕಲ್ಚರ್ ಅಂದರೆ ಏನದು? ಅವರು ಹೇಳೋದೆ ನಮ್ಮ ಕಲ್ಚರೋ ಅಥವಾ ಅದು ಬೇರೇನೇ ಇದೆಯೋ? ನಮ್ಮ ನಿಜವಾದ ಕಲ್ಚರ್ ಏನಿದೆ, ಅದನ್ನು ಉಳಿಸ್ಕೋಬೇಕು. ಅದನ್ನ ಉಳಿಸ್ಕೋಬೇಕು ಅನ್ನೋದರ ಹಿನ್ನೆಲೆಯಲ್ಲಿ ವೈeನಿಕ ಕಾರಣಗಳು ಇರಬೇಕು. ಇಂಡಿಯನ್ ಕಲ್ಚರ್ ಅಂತ ಮಾತಾಡಿದರೆ ಸ್ವದೇಶಿ ಜಾಗರಣ ಮಂಚ್‌ನ ಮನಸ್ಸಿನಲ್ಲಿ ಅದಕ್ಕೆ ಬೇರೆ ಅರ್ಥ ಇದೆ. ಈಗ ನಾನು ಇಂಡಿಯನ್ ಕಲ್ಚರ್ ಅಂದರೆ, ನನ್ನ ಮನಸಲ್ಲಿ ಅದಕ್ಕೆ ಸಂಪೂರ್ಣ ಬೇರೆ ಅರ್ಥ ಇದೆ. ನನ್ನ ಮನಸ್ಸು ಜಾನಪದದ ದಿಕ್ನಲ್ಲಿ ಹೋಗ್ತದೆ. ಅದು ನಮ್ಮ ದೇಶದ ದುಡಿಯುವ ಜನರ ಸಂಸ್ಕೃತಿ. ೧. ಕನ್ನಡದಲ್ಲಿ ಚಿಂತನ ಪರಂಪರೆ ದೀರ್ಘವಾಗಿದೆ ಮತ್ತು ಸದೃಢವಾಗಿದೆ. ಕುವೆಂಪು ಕಾರಂತ ಡಿವಿಜಿ ಶಂಬಾ ಜೋಶಿ ಅವರಿಂದ ಹಿಡಿದು ಈಚಿನ ಚಿಂತಕರವರೆಗೆ ಅದರ ಹರಹು ಇದೆ. ಆದರೆ ಹೆಚ್ಚಿನವರು ಸಾಹಿತ್ಯ ಸಂಸ್ಕೃತಿ ನೆಲೆಯಿಂದ ಚಿಂತನೆ ಮಾಡುವವರು. ಕರ್ನಾಟಕದ ರಾಜಕಾರಣ ಆರ್ಥಿಕತೆಯ ನೆಲೆಯಿಂದ ಚಿಂತನೆ ಮಾಡುವವರು ಕಡಿಮೆ. ಸಮಾಜವಿeನದ ವೃತ್ತಿಪರ ಪ್ರಾಧ್ಯಾಪಕರು ಕನ್ನಡದಲ್ಲಿ ಬರೆಯುವುದೇ ಕಡಿಮೆ. ಬರೆದರೆ ಅದರಲ್ಲಿ ಸಮುದಾಯ ಬದುಕಿನ ರಾಜಕಾರಣ ಇರುವುದಿಲ್ಲ. ರಾಜಕೀಯ ಅರ್ಥಶಾಸ್ತ್ರಗಳನ್ನು ತರಗತಿಯ ಗಿಳಿಪಾಠವನ್ನಾಗಿ ಮಾಡಿರುವ, ಬೌದ್ಧಿಕತೆಯನ್ನು ಪ್ರಭುತ್ವ ಪರವಾದ ಸೇವೆಯನ್ನಾಗಿ ಮಾಡಿರುವ ಅಕೆಡೆಮಿಕ್ ವಿದ್ವತ್ತಿಗೆ ಒಂದು ಮಂಕು ಬಡಿದಿರುತ್ತದೆ. ಇಂತಹದೊಂದು ಹಿನ್ನೆಲೆಯಲ್ಲಿ ಪ್ರೊ. ನಂಜುಂಡಸ್ವಾಮಿ ಅವರ ರಾಜಕೀಯ ಚಿಂತನೆಗಳನ್ನು ಇಟ್ಟು ನೋಡಿದರೆ, ಅವುಗಳ ಮಹತ್ವ ತಿಳಿಯುತ್ತದೆ. ಅಧ್ಯಯನದಿಂದ ಚಿಂತನೆಗೆ ಸೈದ್ಧಾಂತಿಕತೆ ಮತ್ತು ಪಾಂಡಿತ್ಯ ಒದಗುತ್ತದೆ. ಚಳುವಳಿಗಳ ನಡುವಿಂದ ಹುಟ್ಟುವ ಚಿಂತನೆಗೆ ಸೈದ್ಧಾಂತಿಕ ಸ್ಪಷ್ಟತೆ, ಸರಳತೆ ಮತ್ತು ಆನ್ವಯಿಕತೆ ಇರುತ್ತದೆ. ಅಂತಹ ಉಪಯುಕ್ತತೆಯ ಆಯಾಮ ನಂಜುಂಡಸ್ವಾಮಿ ಚಿಂತನೆಗೆ ಇದೆ. ಅತ್ಯಂತ ಸ್ಥಳೀಯವಾದುದನ್ನು ಅಂತಾರಾಷ್ಟ್ರೀಯ ರಾಜಕೀಯ ತಿಳಿವಳಿಕೆಯಲ್ಲಿ ಇಟ್ಟು ವಿಶ್ಲೇಷಿಸುವ ಪ್ರಬುದ್ಧತೆಯಿದೆ. ಹೀಗೆ ಅವರ ಚಿಂತನೆಯು ಸಮುದಾಯ, ಅಂತರಾಷ್ಟ್ರೀಯ ರಾಜಕಾರಣ, ಸಾಹಿತ್ಯ ಸಂಸ್ಕೃತಿಗಳ ಒಬ್ಬ ವಿಚಿತ್ರ ಮಿಲನವಾಗಿದೆ. ನಂಜುಂಡಸ್ವಾಮಿ ಚಳುವಳಿಗಾರರೂ ಹಾಗೂ ಮಾಸ್‌ಲೀಡರೂ ಆಗಿದ್ದರು. ಇದರ ಜತೆಯಲ್ಲಿ ಅವರೊಬ್ಬ ರಾಜಕೀಯ ಚಿಂತಕರೂ ಆಗಿದ್ದರು. ಅದರಲ್ಲೂ ಚಳುವಳಿಗಳು ಹಾಗೂ ಪ್ರಭುತ್ವ, ಜಾಗತೀಕರಣ ಹಾಗೂ ಭಾರತದಂತಹ ದೇಶಗಳ ಆರ್ಥಿಕತೆ ವಿಶ್ಲೇಷಣೆ, ಎನ್‌ಜಿಓ ಹಾಗೂ ಸಾಮ್ರಾಜ್ಯಶಾಹಿ ಸಂಬಂಧಗಳು, ಬೆಳೆಪದ್ಧತಿ, ಆಹಾರ ಸಂಸ್ಕೃತಿ ಹಾಗೂ ಬೀಜೋತ್ಪಾದನೆ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ಅಂತರ್‌ಸಂಬಂಧ, ಪ್ರಭುತ್ವಪೋಷಕ ಅರ್ಥಶಾಸ್ತ್ರಜ್ಞರ ಸ್ವಭಾವ, ನಕ್ಸಲ್ ಹೋರಾಟದ ಸ್ವರೂಪ, ಲೋಹಿಯಾವಾದದ ದೃಷ್ಟಿಯಿಂದ ಕಮ್ಯುನಿಸಂನ ವಿಮರ್ಶೆ ಇತ್ಯಾದಿ ಕುರಿತಂತೆ ಅವರ ತಿಳಿವಳಿಕೆಯು ವಿಶಿಷ್ಟವಾಗಿದೆ. ಆದರೆ ವರ್ಗಕಲ್ಪನೆಯ ಬಗೆಗಿನ ಪೂರ್ವಗ್ರಹಗಳಿಂದ ಬಂದಿರುವ ಮಿತಿಗಳು ಸ್ವಾಮಿಯವರಲ್ಲಿವೆ. ಇದನ್ನು ಭೂಮಾಲೀಕತ್ವದ ಬಗೆಗಿನ ಅವರ ಮೆದು ಧೋರಣೆಯಲ್ಲಿಯೂ ದಲಿತ ಮತ್ತು ಭೂರಹಿತ ಕೃಷಿಕಾರ್ಮಿಕರ ಸಮಸ್ಯೆಗಳ ಬಗೆಗಿನ ನಿರ್ಲಕ್ಷ್ಯದಲ್ಲಿಯೂ ಕಾಣಬಹುದು. ಇದು ಬಹುಶಃ ಬಹುತೇಕ ಲೋಹಿಯಾವಾದಿಗಳ ಸಮಸ್ಯೆ ಕೂಡ. ಇದರ ಜತೆಗೆ ವ್ಯಕ್ತಿವಾದಿ ಹಠವೂ ಸೇರಿದೆ. ಸಿರಿವಂತ ಕುಟುಂಬಗಳಲ್ಲಿ ಹುಟ್ಟಿಬಂದವರು ಸಮಾಜವಾದಿ ಚಳುವಳಿಗಳಲ್ಲಿ ತೊಡಗಿಕೊಂಡರು ಎನ್ನುವುದು ಮೆಚ್ಚುಗೆಯ ಸಂಗತಿಯಾದರೆ, ಅವರಿಗೆ ಜಮೀನುದಾರಿ ದರ್ಪಗಳನ್ನು ಬಿಡಲಾಗಲಿಲ್ಲ ಎನ್ನುವುದು ಒಂದು ವೈರುಧ್ಯ. ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯ ಬಗ್ಗೆ ಖಚಿತವಾಗಿ ಮಾತಾಡಬಲ್ಲ ಸ್ವಾಮಿ, ಸಾಮಾಜಿಕ ಸಮಸ್ಯೆಗಳಿಗೆ ಬಂದಂತೆ ಅಸೂಕ್ಷ್ಮರಾಗುತ್ತಾರೆಯೆ? ಇದು ಕರ್ನಾಟಕದ ರಾಜಕೀಯ ಚಿಂತನೆಯಲ್ಲಿರುವ ಸಮಸ್ಯೆಯೂ ಆಗಿದೆ. ಈ ಸಮಸ್ಯೆಗೆ ಪರ‍್ಯಾಯ ಉತ್ತರವನ್ನು ಕಡಿದಾಳು ಹಾಗೂ ಗಣಪತಿಯಪ್ಪನವರ ಸಂದರ್ಶನಗಳಲ್ಲಿ ಕಾಣಬಹುದು. ಪೋಸ್ಟ್ ಮಾಡಿದವರು ಬೆಳೆ ಸಂಬಂಧಿ ರೈತರ ಆಚರಣೆಗಳು ಸೌಜನ್ಯ:ಕಣಜ ರೈತರು ನೆಲಕ್ಕೆ ಬೀಜ ಬಿತ್ತುವುದರಿಂದ ಹಾಗೂ ಸಸಿ ಮಡಿ ಹಾಕುವುದರಿಂದ ಮೊದಲುಗೊಂಡು ಬೆಳೆ ಕುಯಿಲಾಗುವ ತನಕ ಹೊಲದಲ್ಲಿ ವಿವಿಧ ರೀತಿಯ ಬೆಳೆ ಸಂಬಂಧಿ ಆಚರಣೆಗಳನ್ನು ನೆರವೇರಿಸುತ್ತಾರೆ. ಬೆಳೆಯ ವಿವಿಧ ಹಂತಗಳಲ್ಲಿ ಇವು ಜರುಗುತ್ತವೆ. ಇವುಗಳ ಉದ್ದೇಶ ಸ್ಪಷ್ಟ, ಮಾಡಿದ ಆರಂಬ ಕೈ ಹತ್ತಲಿ, ಬಿತ್ತಿದ ಬೀಜ ಮೊಳೆಯಲು ಯಾವುದೇ ಆತಂಕ ಅಡ್ಡಿಯಾಗದಿರಲಿ, ಬೆಳೆದ ಪೈರಿಗೆ ಕೀಟ– ರೋಗಾದಿಗಳ ಬಾಧೆ ತಗುಲದಿರಲಿ, ಅದರ ಹಸುರಿಗೆ ನೋಡುಗರ ಕಣ್ಣೆಸರು ತಾಗದಿರಲಿ ಮುಂತಾದ ಕಾರಣಗಳಿಂದ ಇವುಗಳನ್ನು ಆಚರಿಸಲಾಗುತ್ತದೆ. ಕಾರಬ್ಬ ದಕ್ಷಿಣ ಕರ್ನಾಟಕದ ರೈತಾಪಿಗಳಲ್ಲಿ ಆಚರಿಸಲ್ಪಡುವ ಬಹುಮುಖ್ಯವಾದ ಆಚರಣೆ. ಇದು ತುಂಬಾ ಸರಳವಾಗಿ ಆಚರಿಸಲ್ಪಡುವ ಕ್ರಿಯೆ. ಆದರೆ ಈ ಆಚರಣೆಯೇ ನಿರ್ದಿಷ್ಟ ವರ್ಷದ ಬೇಸಾಯದ ಕೆಲಸಗಳಿಗೆ ಮುನ್ನುಡಿ. ಗೊಲ್ಲ ಸಮುದಾಯಗಳಲ್ಲಿ ವಿಶೇಷವಾಗಿ ಕಾಣಬಹುದು. ಸಾಮಾನ್ಯವಾಗಿ ಮೃಗಶಿರ, ಆರಿದ್ರಾ ಮಳೆಗಳ ಸಂದರ್ಭದಲ್ಲಿ ಕಾರಬ್ಬವನ್ನು ಆಚರಿಸಲಾಗುತ್ತದೆ. ರಾಗಿ ಅಥವಾ ಭತ್ತದ ಸಸಿ ಮಡಿ (ಒಟ್ಲು ಬಿಡುವುದು) ಹಾಕುವ ಮುನ್ನ ಇದನ್ನು ಆಚರಿಸುವುದು ವಾಡಿಕೆ. ಸಸಿ ಮಡಿ ಹಾಕುವ ದಿವಸದ ಬೆಳಿಗ್ಗೆ ಕರಿನ ಸೊಪ್ಪನ್ನು ತಂದು ತೋರಣ ಮಾಡಿ ಬಾಗಿಲಿಗೆ ಕಟ್ಟುತ್ತಾರೆ. ಕರಿನ ಸೊಪ್ಪೆಂದರೆ ಮಾವು, ಬೇವು ಮತ್ತು ಲಕ್ಕಿ -ಈ ಮೂರು ಸೊಪ್ಪುಗಳ ಸಂಗ್ರಹ. ಬೇಸಾಯದ ಸಲಕರಣೆಗಳಾದ ನೇಗಿಲು ನೊಗ ಮೇಣಿ ಇತ್ಯಾದಿ ಮುಟ್ಟುಗಳನ್ನೆಲ್ಲಾ ತೊಳೆದು ಅವುಗಳಿಗೆ ಸುಣ್ಣ-ಕೆಮ್ಮಣ್ಣು ಹಚ್ಚಿ, ಅಂಗುನೂಲು (ಹರಿಶಿನದ ದಾರ) ಕಟ್ಟಿ, ಎಡೆಹಾಕಿ ಪೂಜಿಸುತ್ತಾರೆ. ಎತ್ತು-ಕರಗಳಿಗೂ ಮೈತೊಳೆದುವುಗಳ ಹಣೆಗೆ, ಗೋಪುರಕ್ಕೆ, ಮುಂಗೊರಸಿಗೆ ಅಕ್ಷತೆ (ಅಕ್ಕಸ್ತೆ) ಇಟ್ಟು, ಕೊರಳಿಗೆ ಅಂಗುನೂಲು ಕಟ್ಟಿ ಎಡೆ ತಿನ್ನಿಸುತ್ತಾರೆ. ಅದೇ ದಿನ ಸಾಯಂಕಾಲ ಮನೆಯಲ್ಲಿ ಕುಕ್ಕೆಯೊಂದಕ್ಕೆ (ಬಿದಿರಿನಲ್ಲಿ ಮಾಡಿದ ಬುಟ್ಟಿ) ಬಿತ್ತನೆ ರಾಗಿ ತೋಡಿಕೊಂಡು, ನಡುಮನೆಯಲ್ಲಿ ನೆಲ ಸಾರಿಸಿ ರಂಗೋಲಿ ಬಿಡಿಸಿದ ಜಾಗದಲ್ಲಿ ಆ ಬುಟ್ಟಿಯನ್ನು ಇಟ್ಟು ಅದಕ್ಕೂ ಸಹ ಅಂಗುನೂಲು, ಅಕ್ಸತ್ತೆ ಇಟ್ಟು, ವಿಭೂತಿ ಧರಿಸಿ ಕುಕ್ಕೆ ಸಮೇತ ಹೊಲಕ್ಕೆ ತೆಗೆದುಕೊಂಡು ಹೋಗಿ ರಾಗಿ ಒಟ್ಲು ತೊಳೆಯುತ್ತಾರೆ. ಶೆಟ್ಟಿಕೆರೆಯ ವಿಶೇಷ ಕಾರಬ್ಬ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ನಡೆಯುವ ಕಾರಬ್ಬ ವಿಶೇಷವಾದುದು. ಆ ವರ್ಷ ಯಾವ ಬೆಳೆ ಹುಲುಸಾಗುತ್ತದೆ, ಯಾವ ಬೆಳೆ ಚೆನ್ನಾಗಿ ಹುಲುಸುವರಿಯುವುದಿಲ್ಲ ಎಂಬುದನ್ನು ಇಲ್ಲಿ ನಡೆಯುವ ಧಾನ್ಯದ ಗಡಿಗೆ ಒಡೆಯುವ ಕ್ರಿಯೆಯ ಮೂಲಕ ರೈತಾಪಿಗಳು ತಿಳಿಯುತ್ತಾರೆ. ಹಳ್ಳಿಗರು ಕಾರಬ್ಬ ಮಾಡಿದ ಮರುದಿವಸ ಮೂಲಾ ನಕ್ಷತ್ರದಂದು ಇಲ್ಲಿ ಕಾರಬ್ಬ ನಡೆಯುತ್ತದೆ. ಅಂದು ಊರಿನ ಸಕಲಾದಿ ಜನರೂ ಮತ್ತು ಸುತ್ತ-ಮುತ್ತಲ ಗ್ರಾಮಗಳ ಒಕ್ಕಲುಗಳೂ ಶೆಟ್ಟಿಕೆರೆಯ ಆಚಿಜನೇಯ ದೇವಾಲಯದ ಬಳಿ ಸೇರಿರುತ್ತಾರೆ. ಒಂದು ಮಣ್ಣಿನ ಗಡಿಗೆಯಲ್ಲಿ (ಕರಗ) ತಾವು ಬೆಳೆಯುವ ಸಕಲ ಧಾನ್ಯಗಳನ್ನೂ ಒಂದೊಂದು ಹಿಡಿಯಷ್ಟು ತುಂಬಿ ಆ ಗಡಿಗೆಗೆ ಕರಿನ ಸೊಪ್ಪು, ಅಂಗುನೂಲು, ಅಕ್ಷತೆಗಳನ್ನಿಟ್ಟು ಪೂಜಿಸುತ್ತಾರೆ. ಹೀಗೆ ಪೂಜಿಸಿದ ನಂತರ ಎಲ್ಲರ ಅಪ್ಪಣೆ ಪಡೆದು ಪೂಜಾರಪ್ಪನು ಅಥವಾ ನಿಗದಿತ ವ್ಯಕ್ತಿಯು ಆ ಧಾನ್ಯ ತುಂಬಿದ ಕರಗವನ್ನು ಜೋಡೇತ್ತಿನ ನೇಗಿಲಿನಿಂದ ಹೊಡೆಯುತ್ತಾನೆ. ಹಾಗೆ ಹೊಡೆದ ರಭಸಕ್ಕೆ ಒಳಗಿನ ಧಾನ್ಯಗಳೆಲ್ಲಾ ದೂರಕ್ಕೆ ಚಲ್ಲಾಡುತ್ತವೆ. ಹೀಗೆ ಚೆಲ್ಲಿದ ಧಾನ್ಯಗಳಲ್ಲಿ ಯಾವುದು ಎಲ್ಲಕ್ಕಿಂತ ಮುಂದೆ ಬಿದ್ದಿರುತ್ತದೆಯೋ ಆ ಧಾನ್ಯ ಈ ವರ್ಷ ಉತ್ತಮ ಫಸಲು ಕೊಡುತ್ತದೆಂದು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಮುಂಗಾರು ಒಳ್ಳೆಯದೋ ಅಥವಾ ಹಿಂಗಾರು ಒಳ್ಳೆಯದೋ ಎಂಬುದನ್ನೂ ಸಹ ಈ ಆಚರಣೆಯಲ್ಲಿಯೇ ತಿಳಿಯುತ್ತಾರೆ. ಅಂದರೆ ಕರಗ ಹೊಡೆದಾಗ ಕಾಳುಗಳು ಮುಂದೆ ಬಿದ್ದಿದ್ದರೆ ಹಿಂಗಾರು ಒಳ್ಳೆಯದು ಮತ್ತು ರಾಗಿ ಮುಂದೆ ಬಿದ್ದಿದ್ದರೆ ಮುಂಗಾರು ಒಳ್ಳೆಯದು ಎಂದರ್ಥ. ಕೂರಿಗೆ ಪೂಜೆ ಕೂರಿಗೆಯು ಬೀಜ ಬಿತ್ತನೆಗೆ ಬಳಸುವ ಒಂದು ಪ್ರಮುಖ ಉಪಕರಣ. ರಾಗಿ, ಜೋಳ, ಅಕ್ಕಡಿ ಕಾಳುಗಳು ಮುಂತಾದವನ್ನು ಸಾಲು ಬಿತ್ತನೆ ಮಾಡಲು ಕೂರಿಗೆಯನ್ನು ಬಳಸುತ್ತಾರೆ, ಇದು ಮುಖ್ಯವಾಗಿ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಚಾಲ್ತಿಯಲ್ಲಿದೆ. ಐದು ಮತ್ತು ಏಳು ತಾಳುಗಳುಳ್ಳ, ಅಂದರೆ ಐದು ಮತ್ತು ಏಳು ಸಾಲು ಬಿತ್ತುವ ಕೂರಿಗೆಗಳಿವೆ, ಕೂರಿಗೆಯ ದಿಂಡನ್ನು ಗಟ್ಟಿ ಮರದಲ್ಲಿ ಮಾಡಿದ್ದರೆ ಕೊಳವೆಗಳನ್ನು ಬಿದಿರಿನಲ್ಲಿ ಮಾಡಿರುತ್ತಾರೆ. ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ ರಾಗಿ ಬಿತ್ತುವ ದಿವಸ ಹಾಗೂ ಉತ್ತರ ಕರ್ನಾಟಕದಲ್ಲಿ ಜೋಳ ಬಿತ್ತುವ ದಿವಸ ಕೂರಿಗೆ ಪೂಜೆ ಮಾಡುವುದು ರೂಢಿ. ಎರಡೂ ಪ್ರದೇಶಗಳಲ್ಲಿನ ಆಚರಣೆಯ ಉದ್ದೇಶ ಒಂದೇ ಆದರೂ ಸಹ ಮಾಡುವ ರೀತಿಯಲ್ಲಿ ತುಸು ವ್ಯತ್ಯಾಸವಿದೆ. ದಕ್ಷಿಣದಲ್ಲಿ ಒಂದು ಕುಟುಂಬಕ್ಕೆ ಸೀಮಿತವಾದ ಆಚರಣೆಯಾಗಿದ್ದು ಕೆಳಗೆ ವಿವರಿಸಿದ ರೀತಿ ಕೂರಿಗೆ ಪೂಜೆ ನಡೆಯುತ್ತದೆ. ಬಿತ್ತನೆಗೆ ಸೂಕ್ತ ಹದವಿರುವ ದಿನ ಜನ-ಜಾನುವಾರು-ಬಿತ್ತನೆ ಸಮೇತ ಹೊಲಕ್ಕೆ ಹೋಗುತ್ತಾರೆ. ಅಲ್ಲಿ ಕೂರಿಗೆಗೆ ಎತ್ತುಗಳನ್ನು ಹೂಡಿ ನಿಲ್ಲಿಸಿ, ಮನೆ ಹೆಣ್ಣು ಮಗಳು ಎತ್ತುಗಳಿಗೆ ಹಾಗೂ ಕೂರಿಗೆಗೆ ಅರಿಶಿನ ಕುಂಕುಮ ಇಟ್ಟು, ಕೈಗಳನ್ನು ಕಣ್ಣಿಗೆ ಮುಟ್ಟಿಸಿ ಸಣಮಾಡಿಕೊಂಡು ರಾಗಿ ಬಿತ್ತಲು ನಿಂತವರ ಮಡಿಲಿಗೆ ಮೂರು ಬೊಗಸೆ ಬಿತ್ತನೆಯನ್ನು ಹಾಕುತ್ತಾಳೆ. ರಾಗಿ ಬಿತ್ತುವ ವ್ಯಕ್ತಿ ಸೊಂಟಕ್ಕೆ ರಾಗಿ ತುಂಬುವ ಜೋಳಿಗೆಯನ್ನು ಕಟ್ಟಿಕೊಂಡಿರುತ್ತಾರೆ. ಆ ಜೋಳಿಗೆಯಲ್ಲಿ ವಿವಿಧ ಪದರಗಳಿದ್ದು ಅದರಲ್ಲಿ ಒಂದರಲ್ಲಿ ರಾಗಿ ಉಳಿದವುಗಳಲ್ಲಿ ಅವರೆ, ತೊಗರಿ, ಹುರುಳಿ ಇತ್ಯಾದಿ ಅಕ್ಕಡಿ ಕಾಳುಗಳನ್ನು ಹಾಕಿಕೊಂಡಿರುತ್ತಾರೆ. ಹೆಣ್ಣುಮಗಳು ಮೂರು ಬೊಗಸೆ ಬಿತ್ತನೆಯನ್ನು ಹಾಕಿದ ನಂತರ ಒಳ್ಳೇದಾಗ್ಲಿ ಎಂದು ಉದ್ಘರಿಸುವುದರೊಂದಿಗೆ ಬಿತ್ತನೆ ಪ್ರಾರಂಭವಾಗುತ್ತದೆ. ಉತ್ತರದಲ್ಲಿ ಈ ಆಚರಣೆಯ ರೀತಿ ಸ್ವಲ್ಪ ಭಿನ್ನ. ಅಲ್ಲಿ ಇದುಂದು ಸಾಮುದಾಯಿಕ ಕ್ರಿಯೆ. ಅವರು ಕೂರಿಗೆಯನ್ನು ಮನೆಯಲ್ಲಿಯೇ ಇಟ್ಟು ಪೂಜಿಸಿ ನಂತರ ಹೊಲಕ್ಕೆ ತೆಗೆದುಕೊಂಡು ಹೋಗಿ ಬಿತ್ತಲು ಪ್ರಾರಂಭಿಸುತ್ತಾರೆ, ಅಲ್ಲದೆ ಈ ಪೂಜೆಗೆ ಊರಿನ ಹಿರಿ-ಕಿರಿಯರನ್ನು ಪ್ರಸಾದಕ್ಕೆ ಬರಹೇಳುವುದು ರೂಢಿ. ವಿಶೇಷ ಅಡುಗೆಗಳನ್ನು ಮಾಡಿ ಬಂದವರಿಗೆ ನೀಡುತ್ತಾರೆ. ಬೆಳೆ ಉತ್ತಮವಾಗಿ ಬರಬೇಕಾದರೆ ಬೀಜ ಬಿತ್ತನೆ ಸಾವಕಾಶವಾಗಿ, ಸಮರ್ಪಕವಾಗಿ, ಹೊಲದ ನಾಲ್ಕೂ ಮೂಲೆಗೆ ಒಂದೇ ಪ್ರಮಾಣದಲ್ಲಿ ಬೀಳಬೇಕು, ಹಾಗೆ ಬೀಜ ಬೀಳಬೇಕಾದರೆ ಬಿತ್ತುವ ಹತಾರ, ಅಂದರೆ ಕೂರಿಗೆ ಸರಿಯಾಗಿರಬೇಕು. ಹೀಗಾಗಿ ಆ ಕೂರಿಗೆ ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ಕೂರಿಗೆ ಪೂಜೆಯನ್ನು ಮಾಡುತ್ತಾರೆ. ಪೂಜೆಯ ನೆಪದಲ್ಲಿ ಕೂರಿಗೆಯನ್ನು ಬಿಚ್ಚಿ ಅದರ ಕೊಳವೆಗಳು, ಕೊಳವೆಯ ರಂದ್ರಗಳು ಸರಿಯಾಗಿವೆಯೋ, ಸದೃಢವಾಗಿವೆಯೋ ಎಂದು ನೋಡಲಾಗುತ್ತದೆ. ಒಂದು ವೇಳೆ ದೋಷವೇನಾದರೂ ಕಂಡು ಬಂದರೆ ಬಡಗಿಯನ್ನು ಕರೆಸಿ ಸರಿಪದಿಸಲಾಗುತ್ತದೆ ಅಥವಾ ಮನೆಯವರೇ ಸರಿಪಡಿಸುತ್ತಾರೆ. ನಂತರ ಕೂರಿಗೆ ಪೂಜೆಗೆ ಅಣಿಯಾಗುತ್ತಾರೆ. ಮನೆಯ ಪಡಸಾಲೆಯಲ್ಲಿ ಕಂಬಳಿ ಅಥವಾ ಬಟ್ಟೆಯನ್ನು ಹಾಸಿ ಕೂರಿಗೆಯನ್ನಿಡುತ್ತಾರೆ. ಅದರ ಈಚು ಅಥವಾ ದಂಡಿಗೆಗಳಿಗೆ ಹೂವಿನ ಮಾಲೆಗಳನ್ನು ಹಾಕಿ, ದಿಂಡು ಮತ್ತು ಮೇಣಿಗೆ ಸೇರಿಸಿ ಸೀರೆ ಉಡಿಸುತ್ತಾರೆ, ಕುಪ್ಪಸ ತೊಡಿಸುತ್ತಾರೆ. ಕೂರಿಗೆಯ ಕೊಳವೆಯ ಭಾಗಕ್ಕೆ ಉಡಿಚೀಲವನ್ನು ಕಟ್ಟಿ ಅದಕ್ಕೆ ಬಿತ್ತನೆ ಜೋಳವನ್ನು ಹಾಕುತ್ತಾರೆ. ಕೆಲವರು ಚಿನ್ನದ ಆಭರಣವನ್ನೂ ಸಹ ಕಟ್ಟುವುದುಂಟು. ಹೀಗೆ ಅಲಂಕರಿಸಿದ ಕೂರಿಗೆಗೆ ಹಿರಿಯರಿಂದ ಪೂಜೆ ಸಲ್ಲಿಸಲಾಗುತ್ತದೆ. ನಂತರ ದಿವಿನಾದ ಊಟ. ಊಟಕ್ಕೆ ಅವರವರ ಇಷ್ಟಾನುಸಾರ ಭಕ್ಷ್ಯಗಳಿರುತ್ತವೆ. ಸಾಮಾನ್ಯವಾಗಿ ಜೋಳ ಮತ್ತು ಸಜ್ಜೆಯ ಕಡುಬು, ಶೇಂಗಾ ಹೋಳಿಗೆ, ಎಣ್ಣೆಗಾಯಿ ಬದನೆಕಾಯಿ, ಅಗಸಿ ಚಟ್ನಿ, ಉಳ್ಳಾಗಡ್ಡಿ ಚಟ್ನಿ, ವಿವಿಧ ರೀತಿಯ ಪಲ್ಯಗಳು ಇರುವುದು ವಾಡಿಕೆ. ಉತ್ತಮ ಫಸಲಿಗೆ ಉತ್ತಮ ಬಿತ್ತನೆಯೇ ಮೂಲ ಎಂಬುದನ್ನು ಅನುಭವದಿಂದ ತಿಳಿದಿರುವ ರೈತರು ಈ ಆಚರಣೆಯ ಮೂಲಕ ವಿಧಿವತ್ತಾಗಿ ಅದನ್ನು ನೆರವೇರಿಸುತ್ತಾರೆ. ಕೊಡಗಿನ ಹುತ್ತರಿ ರಾತ್ರಿ ಎಂಟೂವರೆಯ ಸಮಯ, ಹುಣ್ಣಿಮೆ ಬೆಳದಿಂಗಳು ಎಲ್ಲೆಲ್ಲೂ ಹರಡಿದ ತಣ್ಣನೆಯ ವಾತಾವರಣ. ಡಿಸೆಂಬರ್ ತಿಂಗಳ ಕೊರೆ ಬೀಳುವ ಕಾಲ. ಕೊಡಗಿನಲ್ಲಿ ಭತ್ತದ ಹೊಲಗಳು ಹಾಲುದುಂಬಿ ತೆನೆಗಟ್ಟುವ ಸಮಯ. ಇಂತಹ ಸಂದರ್ಭದಲ್ಲಿ ಕೊಡಗಿನಾದ್ಯಂತ ಹುತ್ತರಿ ಹಬ್ಬದ ಸಂಭ್ರಮ. ಕೊಡವರಿಗೆ ಹುತ್ತರಿ ದೀಪಾವಳಿಗಿಂತಲೂ ಮಿಗಿಲಾದ ಹಬ್ಬ. ಬಯಲು ಸೀಮೆಯವರಿಗೆ ಸಂಕ್ರಾಂತಿ ಸುಗ್ಗಿಯ ಆಚರಣೆಯಾದರೆ ಹುತ್ತರಿ ಕೊಡವರಿಗೆ ಸುಗ್ಗಿಯ ಕ್ಷಣ. ಕೊಡವರಿಗೆ ಹುತ್ತರಿ ಹಬ್ಬ ಬಂತೆಂದರೆ ಹೊಸ ಸೊಸೆ ಮನೆ ತುಂಬಿದಷ್ಟೇ ಸಂಭ್ರಮ. ಹುಣ್ಣಿಮೆಯ ಪರಿಶುಭ್ರ ಬೆಳಕಿನಲ್ಲಿ, ಶುಭ ಸಂದರ್ಭವನ್ನು ನೋಡಿ ಈಡು ಹಾರಿಸುತ್ತಾ, ಪಟಾಕಿ ಸಿಡಿಸುತ್ತಾ ಭತ್ತದ ಕದಿರು ಕೊಯ್ಯುವುದರೊಂದಿಗೆ ಆಚರಿಸಲಾಗುವ ಹುತ್ತರಿ ಕೊಡವರ ಕೌಟುಂಬಿಕ ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತ. ಹುತ್ತರಿ ಕೊಡವರ ನಾಡಹಬ್ಬವೆಂದೇ ಪ್ರಚಲಿತ. ಚಿಕ್ಕ ಮಕ್ಕಳಿಂದ ಮೊದಲ್ಗೊಂಡು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಪಾಲ್ಗೊಂಡು ಆಚರಿಸಲ್ಪಡುವ ಹುತ್ತರಿ ಕ್ಯಾಲೆಂಡರುಗಳಲ್ಲಿ ಸ್ಥಾನ ಪಡೆದಿರುವ ಬೆರಳೆಣಿಕೆಯ ಆಚರಣೆಗಳಲ್ಲೊಂದು. ಎಲ್ಲಾ ಪ್ರಮುಖ ಕ್ಯಾಲೆಂಡರುಗಳಲ್ಲಿ ಹುತ್ತರಿ ನಡೆಯುವ ದಿನಾಂಕವನ್ನು ಗಮನಿಸಬಹುದು. (ಡಿಸೆಂಬರ್ ತಿಂಗಳಿನಲ್ಲಿ) ಕೊಡವ ಭಾಷೆಯಲ್ಲಿ ಪುತ್ತರಿ (ಪುದಿಯ -ಅಕ್ಕಿ- ಹೊಸ ಅಕ್ಕಿ) ಎಂದು ಕರೆಯಲ್ಪಡುವ ಈ ಹಬ್ಬಕ್ಕೆ ಕನ್ನಡದಲ್ಲಿ ಹುತ್ತರಿ ಎಂದು ಕರೆಯುತ್ತಾರೆ. ಹಾಗೆಂದರೆ ಈಗಾಗಲೇ ಹೇಳಿದಂತೆ ಹೊಸ ಅಕ್ಕಿ ಎಂದರ್ಥ. ಹುತ್ತರಿ ಹಬ್ಬವು ಧಾನ್ಯ ಲಕ್ಷ್ಮಿಯನು ಮನೆಗೆ ಬರಮಾಡಿಕೊಳ್ಳುವ ಒಂದು ವಿಧಾನ. ಅಂದರೆ ಭತ್ತದ ಕದಿರುಗಳನ್ನು ಕಡಿದು ತಂದು ಶಾಸ್ತ್ರೋಕ್ತವಾಗಿ ಮನೆತುಂಬಿಸಿಕೊಳ್ಳಲಾಗುತ್ತದೆ. ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆ-ಮನೆಯ ಕಿಟಕಿ ಬಾಗಿಲುಗಳು ಮಾವಿನ ತೋರಣ, ಚೆಂಡು ಹೂವಿನ ಮಾಲೆಗಳಿಂದ ಅಲಂಕೃತಗೊಳ್ಳುತ್ತವೆ. ಸಂಜೆ ಪೂರ್ವ ದಿಕ್ಕಿನಲ್ಲಿ ಚಂದ್ರ ಉದಯವಾಗುತ್ತಿದ್ದಂತೆ ಹುತ್ತರಿಯ ಆಚರಣೆಗೆ ರಂಗೇರುತ್ತದೆ. ನೆಲ್ಲಕ್ಕಿ ಬಾಡೆಯಿಂದ ಇದು ಪ್ರಾರಂಭವಾಗುತ್ತದೆ. ಕದಿರು ಕಡಿಯಲು ಹೋಗುವ ಈ ಸಂದರ್ಭದಲ್ಲಿ ಕುಲ ದೇವರಾದ ಇಗ್ಗುತಪ್ಪನಿಗೆ ನಮಿಸಿ ಈ ಶುಭ ಕಾರ್ಯದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಕಾಪಾಡು ಎಂದು ಬೇಡಿಕೊಳ್ಳಲಾಗುತ್ತದೆ. ಈ ಹಬ್ಬದ ಆಚರಣೆಗೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸುತ್ತಾರೆ. ಅ ಉಡುಪಿನ ಜೊತೆಗೆ ಸೊಂಟಕ್ಕೆ ರೇಷ್ಮೆಯ ನಡುಪಟ್ಟಿ ಕಟ್ಟಿ ಅದರೊಳಕ್ಕೆ ಕತ್ತಿ ಸಿಗಿಸಿ ಮನೆಯ ಯಜಮಾನರಾದವರು ನೆಲ್ಲಕ್ಕಿ ಬಾಡೆಯಲ್ಲಿರುವ ಬೆಳಗುವ ದೀಪಕ್ಕೆ ಕೈಜೋಡಿಸಿ ನಮಿಸುತ್ತಾರೆ. ನಂತರ ಗುಂಪು-ಗುಂಪಾಗಿ ಭತ್ತದ ತಾಕಿನ ಕಡೆಗೆ ಸಾಗುತ್ತದೆ ಮೆರವಣಿಗೆ. ಡೋಲು ವಾದ್ಯಗಳು, ಕೋಲಾಟದ ತಂಡಗಳು ಜೊತೆಗೂಡುವುದರಿಂದ ಮೆರವಣಿಗೆ ಮತ್ತಷ್ಟು ಖದರು ಪಡೆಯುತ್ತದೆ. ಗದ್ದೆಯ ಬಳಿ ತೆರಳಿ ಅಲ್ಲಿ ನಿಗದಿಪಡಿಸಿದ ಒಂದು ತಾಕಿನಲ್ಲಿ ಎಲ್ಲರೂ ಒಟ್ಟುಗೂಡಿ, ಹಾಲು-ಜೇನು ಹಾಗೂ ಹಣ್ಣು-ಕಾಯಿಯನ್ನು ಇಟ್ಟು, ಎಡೆಯನ್ನು ಭತ್ತದ ಪೈರಿನಡಿಗೆ ಸುರಿದು, ಸಾಂಬ್ರಾಣಿಯ ಹೊಗೆ ಕೊಟ್ಟು ಒಂದು ಹಿಡಿಯಷ್ಟು ಭತ್ತದ ಪೈರಿನ ಬುಡವನ್ನು ಕಟ್ಟಿ ಬಂದೂಕಿನಿಂದ ಗುಂಡು ಹಾರಿಸುತ್ತಾರೆ. ಬಳಿಕ ಮನೆ ಹಿರಿಯರು ಸುಬ್ರಹ್ಮಣ್ಯನನ್ನು ನೆನೆದು ಕದಿರು ಕೊಯ್ಯುತ್ತಾರೆ. ಈ ಸಂದರ್ಭದಲ್ಲಿ ಪೊಲಿ ಪೊಲಿದೇವ ಪೊಲಿಯೇ ಬಾ ಎಂಬ ಕೂಗು ಮುಗಿಲು ಮುಟ್ಟುತ್ತದೆ, ಈ ಆಚರಣೆಯ ವಿಶೇಷ ತಿಂಡಿಗಳಾದ ತಂಬಿಟ್ಟು, ಏಳಕ್ಕಿಪುಟ್‌ಗಳನ್ನು ಎಲ್ಲರಿಗೂ ಹಂಚಲಾಗುತ್ತದೆ. ನಂತರ ಕೊಯ್ದ ಭತ್ತದ ಕದಿರುಗಳನ್ನು ತಂದು ಮನೆತುಂಬಿಸಿಕೊಳ್ಳಲಾಗುತ್ತದೆ. ಪೋಪಕ ಪುತ್ತರಿ ಎಣ್ಣತೆ ಪೋಚ್ ದಮ್ಮಯ್ಯ ಪುತ್ತರಿ ಒಮ್ಮೆಲು ಪೋತೆ ಎಂಬ ಹಾಡನ್ನು ಹಬ್ಬದ ಕೊನೆಯಲ್ಲಿ ಹಾಡಲಾಗುತ್ತದೆ. ಈ ಹಾಡಿನ ಅರ್ಥ; ಬರುವಾಗ ಹುತ್ತರಿ ಸಡಗರದಿಂದ ಬಂತು, ಹೋಗುವಾಗ ಹುತ್ತರಿ ಯಾರಿಗೂ ಹೇಳದೆ ಹೋಯಿತು, ಆದರೆ ಹುತ್ತರಿ ನೀನು ಒಮ್ಮೆಯೂ ಹೋಗದಿರು. ಹುತ್ತರಿಯಂದು ವಿಶೇಷ ಅಡುಗೆಗಳನ್ನು ಮಾಡಲಾಗುತ್ತದೆ. ಆಗ ತಾನೇ ಗದ್ದೆಯಿಂದ ಕುಯ್ದು ತಂದ ಭತ್ತದ ಕಾಳನ್ನು ಸುಲಿದು ಅಕ್ಕಿಯನ್ನು ಪಾಯಸಕ್ಕೆ ಸೇರಿಸಲಾಗುತ್ತದೆ. ಇದು ಹೊಸ ಅಕ್ಕಿ ಪಾಯಸ. ಇದನ್ನು ಬೇಯಿಸುವಾಗ ಐದಾರು ಪುಟ್ಟ-ಪುಟ್ಟ ಕಲ್ಲಿನ ಚೂರುಗಳನ್ನು ಸೇರಿಸುತ್ತಾರೆ. ಊಟಕ್ಕೆ ಕುಳಿತಾಗ ಯಾರಿಗೆ ಈ ಕಲ್ಲಿನ ಚೂರುಗಳು ಸಿಗುತ್ತವೋ ಅವರಿಗೆ ಕಲ್ಲಾಯುಷ್ಯ (ಧೀರ್ಘಾಯುಷ್ಯ) ಲಭಿಸುತ್ತದೆನ್ನುವ ನಂಬಿಕೆ ಇದೆ. ಪಾಯಸದ ಜೊತೆಗೆ ಬಾಳೆ ಹಣ್ಣಿನಿಂದ ತಯಾರಿಸಿದ ತಂಬಿಟ್ಟು, ಘಮಘಮಿಸುವ ಏಲಕ್ಕಿ ಪೂಟ್, ವಿವಿಧ ರೀತಿಯ ಎಣ್ಣೆ ಖಾದ್ಯಗಳ ಸತ್ಕಾರ ನಡೆಯುತ್ತದೆ. ಸಾಂಪ್ರದಾಯಿಕ ನೃತ್ಯಗಳು ಹಾಗೂ ಕ್ರೀಡೆಗಳ ಪ್ರದರ್ಶನ ಹುತ್ತರಿಯ ಮತ್ತೊಂದು ಆಕರ್ಷಣೆ. ಕೊಡವ ರೈತಾಪಿಗಳು ವಾರಗಟ್ಟಳೆ ಇದರಲ್ಲಿ ಪಾಲ್ಗೊಂಡು ತಮ್ಮ ಕೌಶಲ್ಯ ಮತ್ತು ಶೌರ್ಯ ಮೆರೆಯುತ್ತಾರೆ. ಮುಂಚೆ ಕ್ರೀಡಾ ಪ್ರದರ್ಶನಕ್ಕಾಗಿಯೇ ಊರ ಹೊರಗೆ ಕ್ರೀಡಾಂಗಣವೊಂದನ್ನು ಮಾಡಲಾಗುತ್ತಿತ್ತು. ಅದಕ್ಕೆ ಮಂದ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಊರ ಎಲ್ಲರೂ ಸೇರಿ ಜನಪದ ಗೀತೆಗಳನ್ನಾಡುತ್ತಾ ಗುಂಪಾಗಿ ಕೂಡಿ ಎರಡೂ ಕೈಗಳಲ್ಲಿ ಬೆತ್ತದ ಬಾರುಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಲಯಬದ್ಧವಾಗಿ ತಿರುವುತ್ತಾ, ಬೀಸುತ್ತಾ ಕುಣಿಯುವ ಪರಿ ನೋಡಲು ಅದ್ಭುತ. ಇದಕ್ಕೆ ಹುತ್ತರಿ ಕೋಲಾಟ ಎಂದೇ ಕರೆಯಲಾಗುತ್ತದೆ. ಕೊಡವ ನೃತ್ಯಗಳಲ್ಲಿ ಇದು ಅತ್ಯಂತ ಜನಪ್ರಿಯ. ಹುತ್ತರಿಯ ಮತ್ತೊಂದು ಆಕರ್ಷಣೆ ಹೆಣ್ಣುಮಕ್ಕಳು ಭಾಗವಹಿಸುವ ಉಮ್ಮತ್ತಾಟ್ ನೃತ್ಯ. ಕೃಷಿ ಆಚರಣೆಗಳಲ್ಲಿ ಕೊಡಗಿನ ಹುತ್ತರಿಗೆ ವಿಶಿಷ್ಟ ಸ್ಥಾನವಿದೆ. ಸುಗ್ಗಿಯನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಾಗೂ ತಮ್ಮ ಜಾನಪದ ನೃತ್ಯ ಸಂಗೀತಗಳನ್ನು ತಲೆಮಾರಿನಿಂದ ತಲೆಮಾರಿಗೆ ಒಯ್ಯುವ ಸಾಧನವಾಗಿಯೂ ಸಹ ಈ ಆಚರಣೆ ಬಳಕೆಯಾಗುತ್ತಿರುವುದು ಮಹತ್ವದ ಸಂಗತಿ. ಆದರೆ ಕೊಡಗಿನಲ್ಲಿ ಸಾಂಪ್ರದಾಯಿಕ ಬೆಳೆಯಾದ ಭತ್ತದ ಸ್ಥಾನವನ್ನು ನಿಧಾನಕ್ಕೆ ವಾಣಿಜ್ಯ ಬೆಳೆಗಳಾದ ಶುಂಠಿ ಮುಂತಾದವು ಆಕ್ರಮಿಸುತ್ತಿವೆ. ಇದು ಹುತ್ತರಿಗೆ ಶಾಶ್ವತ ಕುತ್ತು ತರುವ ಬದಲಾವಣೆಯಾಗಿದೆ. ಒಂದು ಬೆಳೆಯ ಬದಲಾವಣೆ ಸಮಗ್ರವಾಗಿ ನೋಡಿದರೆ ಚಿಕ್ಕ ಕ್ರಿಯೆಯಂತೆ ಕಂಡರೂ ಸಹ ಅದು ಒಂದು ಶ್ರೀಮಂತ ಕೃಷಿ ಸಂಸ್ಸೃತಿಯ ಕೊಂಡಿಯನ್ನೇ ಕಳಚಿ ಹಾಕುತ್ತಿರುವ ರೀತಿ ಭಯ ಹುಟ್ಟಿಸುವಂತಹುದು. ಬೆಳೆ ರಕ್ಷಣೆಗೆ ಕಾಸರಕದ ಕೊಂಬೆ ನೆಡುವಿಕೆ ತುಳುವರಿಗೆ ವರ್ಷದಲ್ಲಿ ಆಟಿ ತಿಂಗಳು (ಜುಲೈ-ಆಗಸ್ಟ್) ಬಹು ಮಹತ್ವದ ತಿಂಗಳುಗಳು. ಈ ಕಾಲದಲ್ಲಿ ಬೆಳೆಗಳಿಗೆ ಮತ್ತು ಮನುಷ್ಯರಿಗೆ ರೋಗಗಳು ಬರುವುದು ಸರ್ವೇ ಸಾಮಾನ್ಯ. ಇದರ ನಿವಾರಣೆಗಾಗಿ ಕೆಲವು ವಿಶಿಷ್ಟ ಆಚರಣೆಗಳು ಬಳಕೆಯಲ್ಲಿವೆ. ಈ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯ ದಿನ ಬೆಳಗಿನ ಜಾವದಲ್ಲಿ ಭತ್ತದ ಗದ್ದೆಗೆ ಕಾಸರಕದ ಗಿಡದ ರೆಂಬೆಗಳನ್ನು ನೆಡುತ್ತಾರೆ, ಈ ಸಂದರ್ಭದಲ್ಲಿ ವರ್ಷದ ಮೊದಲನೇ ಬೇಳೆ- – ಅಂದರೆ ಎಣಿಲು ಬೆಳೆ ಚಾಲ್ತಿಯಲ್ಲಿರುತ್ತದೆ. ಹಾಗೂ ಈ ನಿರ್ದಿಷ್ಟ ತಿಂಗಳಿನಲ್ಲಿ ನಾಟಿ ಹಾಕಿದ ಭತ್ತದ ಸಸಿಗಳು ಇನ್ನೂ ಎಳೆಯದಾಗಿರುತ್ತದೆ. ಹಾಗಾಗಿ ಹುಳುಗಳ ಕಾಟ ಹೆಚ್ಚು. ಇದರಿಂದ ರಕ್ಷಣೆ ಪಡೆಯಲು ಆಚರಿಸುವುದೇ ಈ ಆಚರಣೆ. ಈ ಕಾಸರಕದ-ತುಳುವಿನಲ್ಲಿ ಕಾಯೆರ್- ರೆಂಬೆ ನೆಡುವ ಕ್ರಿಯೆಯನ್ನು ಕಾಪು (ರಕ್ಷಣೆ) ಎನ್ನಲಾಗುತ್ತದೆ. ಹೀಗೆ ಮಾಡುವುದರಿಂದ ಬೆಳೆಗೆ ಅಮರಿಕೊಳ್ಳುವ ಮಾರಿ ಅರ್ಥಾತ್ ಹುಳಗಳ ಕಾಟವನ್ನು ಕಾಯೆರ್ ತಡೆಗಟ್ಟುತ್ತದೆ, ಆ ಮೂಲಕ ಬೆಳೆಯನ್ನು ರಕ್ಷಿಸುತ್ತದೆ, ನಮಗೆ ಸಮೃದ್ಧಿ ತರುತ್ತದೆ ಎಂಬ ನಂಬಿಕೆ ರೈತಾಪಿಗಳಲ್ಲಿದೆ. ಈ ಪ್ರದೇಶದಲ್ಲಿಯೇ ಮನುಷ್ಯರಿಗೆ ಮತ್ತು ಗ್ರಾಮಗಳಿಗೆ ಬರುವ ಮಾರಿಯನ್ನು ಓಡಿಸಲು ಆಚರಿಸಲಾಗುವ ಆಟಿಕಳೆಂಜ ಕ್ರಿಯೆಯೂ ಸಹ ಬಳಕೆಯಲ್ಲಿರುವುದನ್ನು ನಾವು ಕಾಣಬಹುದು. ಹಾಲೆ ಮರದ ಹಾಲು ಕುಡಿಯುವುದು ಕರಾವಳಿಯ ತುಳು ಸಂಸ್ಕೃತಿಯಲ್ಲಿ ಸಾಮೂಹಿಕವಾಗಿ ಹಾಲೆಮರದ ಮದ್ದು (ಹಾಲು) ಕುಡಿಯುವ ಸಂಪ್ರದಾಯವೂ ಸಹ ಇದೇ ಆಟಿ ಮಾಸದ ಸಂದರ್ಭದಲ್ಲಿ ಇರುವುದು ವಿಶೇಷ. ತುಳುವಿನಲ್ಲಿ ಪಾಲೆ ಎಂದು ಕರೆಯಲ್ಪಡುವ ಹಾಲೆಯ ಸಸ್ಯ ಶಾಸ್ತ್ರೀಯ ಹೆಸರು Alstonia Scholaris. ಆಟಿ ಮಾಸದಲ್ಲಿಯೇ ಹಾಲೆ ಮರದ ಹಾಲನ್ನು ಕುಡಿಯಲು ಒಂದು ಪ್ರಬಲವಾದ ಕಾರಣವಿದೆ, ಏನೆಂದರೆ; ತುಳುವರಿಗೆ ಮೇ-ಜೂನ್-ಜುಲೈ ತಿಂಗಳುಗಳು ಮಳೆಗಾಲದ ಆರಂಭದ ತಿಂಗಳುಗಳಾಗಿದ್ದು ಈ ಸಮಯದಲ್ಲಿ ಉಳುಮೆ ಕೆಲಸ, ಬೀಜ ಹಾಕುವ ಹಾಗೂ ಭತ್ತದ ಸಸಿಗಳನ್ನು ನಾಟಿ ಹಾಕುವ ಕೆಲಸವಿರುತ್ತದೆ. ಈ ಕೆಲಸಗಳನ್ನೆಲಾ ಅವರು ಹೆಚ್ಚು-ಕಡಿಮೆ ಬಿರು ಮಳೆಯಲ್ಲಿದ್ದುಕೊಂಡೇ ಮಾಡುತ್ತಾರೆ. ಸದಾ ನೆನೆಯುವ ದೇಹವು ಛಳಿಯನ್ನು ತಾಳಿಕೊಳ್ಳಲು ಹುರಿದ ಹುಣಸೆ ಬೀಜಗಳನ್ನು ಹೆಚ್ಚು ತಿನ್ನುತ್ತಾರೆ. ಈ ಕಾರಣದಿಂದ ಹೊಟ್ಟೆಯಲ್ಲಿ ಹುಳದ ಬಾಧೆ ಕಾಣಿಸಿಕೊಳ್ಳುತ್ತದೆ. ಈ ತೊಂದರೆಯಿಂದ ಮುಕ್ತಿ ಪಡೆಯಲು ಅವರು ಅನುಭವದಿಂದ ಕಂಡುಕೊಂಡದ್ದು ಹಾಲೆ ಮರದ ಹಾಲು ಕುಡಿಯುವ ಪರಿಹಾರ. ಹಾಲೆ ಮರದಿಂದ ಹಾಲು ಸಂಗ್ರಹಿಸುವ ವಿಧಾನವೂ ಸಹ ವಿಚಿತ್ರವಾಗಿದೆ. ಅಮಾವಾಸ್ಯೆಯ ರಾತ್ರಿ ಬೆಳಕು ಮೂಡುವ ಮುಂಚೆಯೇ ಬೆತ್ತಲೆಯಾಗಿ ಹಾಲೆ ಮರದ ಬಳಿ ಬಂದು ಮರಕ್ಕೆ ಮೂರು ಸುತ್ತು ಹಾಕಿ ತೊಗಟೆಯನ್ನು ಕಲ್ಲಿನಿಂದ ಕೆತ್ತಿ ತೆಗೆಯುತ್ತಾರೆ. ಮೈಮೇಲೆ ಬಟ್ಟೆ ಹಾಕಿಕೊಂಡು ಹೋದರೆ ಹಾಲಿನಲ್ಲಿರುವ ಔಷದಿಯ ಅಂಶ ಹೋಗಿಬಿಡುತ್ತದಂತೆ. ಮತ್ತೊಂದು ನಿಷಿದ್ಧವೆಂದರೆ, ಹಾಲೆ ಮರದ ತೊಗಟೆ ತೆಗೆಯಲು ಕಬ್ಬಿಣ ಇಲ್ಲವೇ ಇನ್ನಾವುದೇ ಆಯುಧ ಬಳಸುವಂತಿಲ್ಲ. ಹಾಗಾಗಿಯೇ ಕಲ್ಲನ್ನು ಬಳಸುತ್ತಾರೆ. ತೊಗಟೆ ತೆಗೆದುಕೊಂಡ ನಂತರ ಮನೆಗೆ ಬರಬೇಕು. ಅಲ್ಲದೆ ಹಿಂದಿನ ದಿನವೇ ಮರದ ಬಳಿ ಹೋಗಿ ನಾಳೆ ಬರುತ್ತೇವೆ ಮದ್ದು ಕೊಡು ಎಂದು ಪ್ರಾರ್ಥಿಸಿ ಹೋಗಿರುತ್ತಾರೆ. ತೊಗಟೆ ತಂದ ನಂತರ ಮನೆಯಲ್ಲಿ ಹೆಣ್ಣುಮಕ್ಕಳು ಅದನ್ನು ಜಜ್ಜಿ ರಸ ತೆಗೆದು ಅದಕ್ಕೆ ಬೆಳ್ಳುಳ್ಳಿ, ಮೆಣಸು ರಸವನ್ನು ಬೆರೆಸುತ್ತಾರೆ. ಅಲ್ಲದೆ ಒಂದು ಬೆಣಚು ಕಲ್ಲನ್ನು ಒಲೆಗೆ ಹಾಕಿ ಚೆನ್ನಾಗಿ ಕಾಯಿಸಿ ಬಿಸಿ ಮಾಡಿ ಆ ರಸಕ್ಕೆ ಒಗ್ಗರಣೆ ಹಾಕುತ್ತಾರೆ. (ಹೀಗೆ ಬೆಣಚು ಕಲ್ಲಿನ ಒಗ್ಗರಣೆ ಕೊಡುವ ಪದ್ಧತಿ ಬಯಲು ಸೀಮೆಯಲ್ಲಿಯೂ ಸಹ ಪ್ರಚಲಿತದಲ್ಲಿದೆ, ಅಲ್ಲಿ ಬಿದಿರು ಕಳಲೆ ಸಾರು ಮಡುವಾಗ ಹೀಗೆ ಮಾಡುತ್ತಾರೆ) ನಂತರ ಖಾಲಿ ಹೊಟ್ಟೆಗೆ ಎಲ್ಲರೂ ಅದನ್ನು ಕುಡಿಯುತ್ತಾರೆ. ಹಾಲೆ ಮರದ ರಸ ಉಷ್ಣ ಎಂಬ ಭಾವನೆಯಿರುವುದರಿಂದ ಅದನ್ನು ಕುಡಿದ ನಂತರ ಮೆಂತ್ಯದ ಗಂಜಿಯನ್ನು ಎಲ್ಲರಿಗೂ ಕೊಡುವುದು ರೂಡಿ. ಬಲಿಪಾಡ್ಯಮಿಯ ವಿವಿಧ ಆಚರಣೆಗಳು ದೀಪಾವಳಿ ಸಮಯದಲ್ಲಿ; ಅಂದರೆ ಅಕ್ಟೋಬರ್-ನವಂಬರ್ ತಿಂಗಳಿನಲ್ಲಿ ಎಲ್ಲೆಡೆ ಕುಯಿಲಿಗೆ ಸಿದ್ಧವಾಗುವ ಬೆಳೆಗಳನ್ನು ಕಾಣಬಹುದು. ರೈತಾಪಿಗಳಿಗೆ ವರ್ಷದ ದುಡಿಮೆ ಕೈಗೆ ಬರುವ ಸಮಯ. ಈ ಸಂದರ್ಭದಲ್ಲಿ ವಿವಿಧ ರೀತಿಯ ಕೃಷಿ ಆಚರಣೆಗಳೂ ಗರಿಗೆದರುತ್ತವೆ. ಬಯಲು ಸೀಮೆಯಲ್ಲಿ ಇವು ಸ್ವಲ್ಪ ಕಡಿಮೆಯಾದರೂ ಮಲೆನಾಡು ಮತ್ತು ಕರಾವಳಿ/ತುಳುನಾಡುಗಳಲ್ಲಿ ವಿಶೇಷವಾದ ಕೃಷಿ ಆಚರಣೆಗಳಿವೆ. ಇದು ಮುಖ್ಯವಾಗಿ ಭತ್ತದ ಬೆಳೆ ತೆನೆ ಹೊಡೆದು ಕಾಳು ಕಟ್ಟುವ ಸಮಯ, ಅಡಿಕೆ ತೋಟದ ಕೆಲಸಗಳು ಇನ್ನೂ ಪ್ರಾರಂಭವಾಗಿರುವುದಿಲ್ಲ. ಸ್ವಲ್ಪ ಬಿಡುವಿನ ಮತ್ತು ನಿರಾಳತೆಯ ಕಾಲ. ಎಲ್ಲೆಲ್ಲೂ ಹಸಿರು, ಮಳೆಯ ಬಿರುಸು ಕಡಿಮೆಯಾಗಿದ್ದರೂ ಅದರ ಪರಿಣಾಮವಾಗಿ ಹೊಲ-ಗದ್ದೆಗಳಲ್ಲಿ, ಹಳ್ಳ-ಕಾಲುವೆಗಳಲ್ಲಿ ನೀರು ಹರಿಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಕಾಲಿಡುವ ಬೆಳಕಿನ ಹಬ್ಬ ದೀಪಾವಳಿ ಹತ್ತು-ಹಲವು ಕೃಷಿ ಆಚರಣೆಗಳಿಗೆ ವೇದಿಕೆಯಾಗುತ್ತದೆ. ಮಲೆನಾಡಿನಲ್ಲಿ ನದೆಯುವ ಕೆಲವು ಆಚರಣೆಗಳನ್ನು ನೋಡುವುದಾರೆ; ದೀಪಾವಳಿ ಸಮಯದಲ್ಲಿ ಬಲಿಪಾಡ್ಯಮಿಯ ದಿವಸ ತುಳುನಾಡು ಮತ್ತು ಮಲೆನಾಡಿನಲ್ಲಿ ಭೂಮಿ ಪುತ್ರನಾದ ಬಲೀಂದ್ರನನ್ನು ಭೂಮಿಗೆ ಬರಮಾಡಿಕೊಳ್ಳುವ ಆಚರಣೆಯೇ ಬಲೀಂದ್ರ ಪೂಜೆ. ಅಂದು ಮನೆಯಲ್ಲಿ ಹೆಣ್ಣು ಮಕ್ಕಳು ಮನೆಯ ಮುಂದಿನ ತುಳಸಿ ಕಟ್ಟೆಯ ಬಳಿ ಕಳಸ ಹೂಡಿ, ಅದಕ್ಕೆ ಅಡಿಕೆ ಹಿಂಗಾರದಿಂದ ಅಲಂಕರಿಸಿ ವಿವಿಧ ಅಡುಗೆಗಳ ಎಡೆ ಹಾಕುತ್ತಾರೆ. ಕೆಲವು ಕಡೆ ಬಾಳೆ ದಿಂಡಿನಲ್ಲಿ ಬಲೀಂದ್ರನ ಪ್ರತಿಮೆ ಮಾಡಿ ತುಳಸಿ ಕಟ್ಟೆಯ ಬಳಿ ಸ್ಥಾಪಿಸುವ ಸಂಪ್ರದಾಯವನ್ನೂ ಸಹ ಕಾಣಬಹುದು. ಅದೇ ದಿನ ಸಂಜೆ ಇನ್ನೇನು ಹೊತ್ತು ಮುಳುಗುತ್ತದೆ ಎನ್ನುವಾಗ ಗದ್ದೆಗೆ ದೀಪದ ಕೋಲುಗಳನ್ನಿಡುವ ವಿಶಿಷ್ಟವಾದ ಹಾಗೂ ಅರ್ಥಪೂರ್ಣವಾದ ಆಚರಣೆ ನಡೆಯುತ್ತದೆ, ಗಂಡಸರು ಹೊಲಕ್ಕೆ ದೀಪ ಹಚ್ಚಲು ಹೊರಡುತ್ತಾರೆ, ಮನೆಯಲ್ಲಿ ಅದಕ್ಕಾಗಿಯೇ ಉದ್ದನೆಯ ಬಿದಿರು ಕೋಲುಗಳಿರುತ್ತವೆ, ಇವು ಅಂದಾಜು ನಾಲ್ಕರಿಂದ ಐದು ಅಡಿ ಉದ್ದವಿರುತ್ತವೆ, ಇವುಗಳ ತುದಿಗೆ ಎಣ್ಣೆ ಸವರಿದ ಬಟ್ಟೆಯನ್ನು ಸುತ್ತಿರುತ್ತಾರೆ. ಒಬ್ಬೊಬ್ಬರು ಏಳೆಂಟು ಕೋಲುಗಳನ್ನು ಕಂಕುಳಲ್ಲಿ ಇಟ್ಟುಕೊಂಡು ಅವರವರ ಗದ್ದೆಯಲ್ಲಿ ಓಡಾಡುತ್ತಾ ಅಲ್ಲಲ್ಲಿ ನೆಡುತ್ತಾರೆ, ಒಂದು ಕಡೆ ಎರಡರಿಂದ ಮೂರು ಕೋಲುಗಳಂತೆ ಗದ್ದೆಯ ವಿವಿಧ ಭಾಗಗಳಲ್ಲಿ ನೆಡುವುದು ವಾಡಿಕೆ, ಹೀಗೆ ನೆಡುವಾಗ ಬಲಿಯೇ ಬಾ.. ಬಲಿಯೇ ಕೂ.. ಎಂದು ತಾರಕ ಸ್ವರದಲ್ಲಿ ಕೂಗುತ್ತಾರೆ. ಶಿವಮೊಗ್ಗದ ಭಾಗದಲ್ಲಿ ಈ ಆಚರಣೆಯನ್ನು ದೀವೋಳಿಗೆ ಎಂದು ಕರೆಯುತ್ತಾರೆ. ಆಚರಣೆಯ ಉದ್ದೇಶ ಹಾಗೂ ವಿಧಾನ ಬಹುಮಟ್ಟಿಗೆ ಒಂದೇ ಆದರೂ ಕೂಗುವುದರಲ್ಲಿ ಸ್ವಲ್ಪ ವ್ಯತ್ಯಾಸವಿದೆ, ಇವರು ಓಳಿಗೆ.. ದೀಪೋಳಿಗೆ… ಎಂದು ಗದ್ದೆಗಳಲ್ಲಿ ಲಯಬದ್ದವಾಗಿ ಕೂಗುತ್ತಾ ಸಾಗುತ್ತಾರೆ. ಎಲ್ಲರ ಗದ್ದೆಗಳಲ್ಲಿ ಹತ್ತಿ ಉರಿಯುವ ದೀಪದ ಕೋಲುಗಳನ್ನು ನೋಡುವುದು ಅತ್ಯಂತ ಮನೋಹರ. ಗದ್ದೆಗೆ ಹೂ ಹಾಕುವುದು ಇದೇ ಸಂದರ್ಭದಲ್ಲಿ ಆಚರಿಸಲ್ಪಡುವ ಗದ್ದೆಗೆ ಹೂ ಹಾಕುವ ಆಚರಣೆಯೂ ಸಹ ಅರ್ಥಪೂರ್ಣವಾದುದು. ಬಲಿಪಾಡ್ಯಮಿಯ ಸಂಜೆ ಗದ್ದೆಗಳಿಗೆ ಮುಂಡುಗದ ಹೂ, ಕಕ್ಕೆ ಹೂ ಮತ್ತು ಹುಲಿಗಿಡದ ಹೂಗಳನ್ನು ಹಾಕುತ್ತಾರೆ, ಹೀಗೆ ಮಾಡುವುದರಿಂದ ಗದ್ದೆಗೆ ಕಾಟಕೊಡುವ ಹುಳುಗಳು ಮತ್ತು ಕೀಟಗಳು ಈ ಹೂಗಳಿಗೆ ಆಕರ್ಷಿತವಾಗುತ್ತವೆ ಎಂದು ರೈತಾಪಿಗಳ ಅನಿಸಿಕೆ. ಬಲಿಪಾಡ್ಯಮಿಯ ಸಂದರ್ಭದಲ್ಲಿಯೇ ಮಲೆನಾಡಿನಲ್ಲಿ ಕಾಣಬರುವ ಮತ್ತೊಂದು ವಿಶೇಷ ಕ್ರಿಯೆ ಅಂಟಿಗೆ-ಪಂಟಿಗೆ. ಬಲಿಪಾಡ್ಯಮಿಯಿಂದ ಮುಂದಿನ ಮೂರು ದಿವಸ ಕಾಲ ಯುವಕರ ಹಿಂಡು ಹಳ್ಳಿಯ ಪ್ರತಿ ಮನೆಗೂ ಭೇಟಿ ನೀಡಿ ದೀವೋಳಿಗೆ ಪದಗಳನ್ನು ಹಾಡುತ್ತಾರೆ. ಇದು ಮಲೆನಾಡಿನ ಸಮೃದ್ಧ ಜನಪದ ಸಾಹಿತ್ಯವನ್ನು ಉಳಿಸುವ ಗಾಯನ ಪದ್ಧತಿಯಾಗಿದೆ. ಬೂರಿಹಬ್ಬ ಸತತ ಐದು ದಿನಗಳ ಕಾಲ ನಡೆಯುವ ವಿಶಿಷ್ಟ ಹಬ್ಬ. ದೀಪಾವಳಿಯ ಹಿಂದಿನ ದಿನ ಪ್ರಾರಂಭ. ಪ್ರತಿ ದಿನ ಒಂದೊಂದು ಆಚರಣೆ, ಚಿಕ್ಕವರು ದೊಡ್ಡವರಾದಿಯಾಗಿ ಎಲ್ಲರೂ ಪಾಲ್ಗೊಂಡು ಖುಷಿ ಪಡುವ ರೀತಿ ಅನನ್ಯವಾದುದು. ಮೊದಲ ದಿನ ಭೂತಗಳಿಗೆ ಕೋಳಿಯ ಬಲಿ ನಡೆಯುತ್ತದೆ, ಅವುಗಳನ್ನು ಸಂತೃಪ್ತಗೊಳಿಸಿದರೆ ಉಳಿದಿದ್ದೆಲ್ಲವೂ ಸುಸೂತ್ರ ಎಂದು ಜನಪದರ ನಂಬಿಕೆ, ಹಾಗಾಗಿ ಅವಕ್ಕೆ ಮೊದಲ ಆದ್ಯತೆ. ಅಂದು ಬೆಳಿಗ್ಗೆಯೇ ಅಡಿಕೆ ಹಿಂಗಾರ, ಪಚ್ಚೆತೆನೆ ಹಗೂ ಹಣ್ಣಡಿಕೆಗಳನ್ನು ಸುಟ್ಟು ಬೂದಿ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹುಡುಗರು ಖುಷಿಗಾಗಿ ಕಳ್ಳತನ ಮಾಡುವ ಪ್ರಸಂಗ ವಿಶೇಷವಾದದ್ದು. ತೆಂಗಿನ ಕಾಯಿಗಳನ್ನು ಕದಿಯುತ್ತಾರೆ, ಹಸೆಕಲ್ಲನ್ನೇ ಎತ್ತಿ ಬಚ್ಚಿಟ್ಟುಬಿಡುತ್ತಾರೆ, ಅರೆಯಲು ಕಲ್ಲಿಲ್ಲದೆ ಹೆಂಗಸರ ಪರದಾಟ ಇವರಿಗೆ ನಗೆಪಾಟಲಿನ ಸಂಗತಿ. ಬೀದಿಯಲ್ಲಿ ನಿಲ್ಲಿಸಿದ್ದ ಗಾಡಿಯ ಚಕ್ರವನ್ನೇ ಬಿಚ್ಚಿ ಬೇರೆಡೆ ಸಾಗಿಸಿಬಿಡುತ್ತಾರೆ. ಮರುದಿನ ಅಮಾವಾಸ್ಯೆ, ಅಂದು ಜಾನುವಾರುಗಳ ಹಬ್ಬ, ಅವುಗಳಿಗೆ ಮೈತೊಳೆದು, ಅಲಂಕಾರ ಮಾಡಿ ಬೆದರಿಸುತ್ತಾರೆ-ಅಂದರೆ ಓಡಿಸುತ್ತಾರೆ. ಅದರ ಮರುದಿನ ಪಾಡ್ಯ, ಅಂತಹ ವಿಶೇಷವೇನಿಲ್ಲ. ಆದರೆ ನಂತರದ ದಿನ-ಅಂದರೆ ನಾಲ್ಕನೆಯ ದಿನ ಅತ್ಯಂತ ಮುಖ್ಯವಾದುದು, ಅಂದು ಕರಿ ಹಬ್ಬ. ಬಲೀಂದ್ರನ ಪೂಜೆ, ಆಯುಧಗಳಿಗೆ ಪೂಜೆ ಮಾಡಲಾಗುತ್ತದೆ. ಎತ್ತಿನ ಗಾಡಿ, ನೇಗಿಲು, ನೊಗ, ಮಚ್ಚು, ಕುಡುಗೋಲು ಮುಂತಾದ ಸಕಲೆಂಟು ಹತಾರಗಳನ್ನು ಸ್ವಚ್ಚವಾಗಿ ತೊಳೆದು ಅಚ್ಚುಕಟ್ಟಾಗಿ ಜೋಡಿಸಿ ಅರಿಶಿನ-ಕುಂಕುಮ ಹೂ-ಪತ್ರೆಗಳನಿಟ್ಟು ಪೂಜೆ ಮಾಡುತ್ತಾರೆ. ಐದನೇ ದಿನ ಹಾಗೂ ಕೊನೆಯ ದಿನ ವರ್ಷದ ತೊಡಕು. ಮನೆಯಲ್ಲಿ ಸಿಹಿ ಅಡುಗೆ. ಗದ್ದೆಯಿಂದ ಹೊಸ ಕದಿರು ತಂದು ಅಕ್ಕಿಯನ್ನು ಬಿಡಿಸಿ ಅದರಿಂದ ವಿಶೇಷ ತಿನಿಸುಗಳನ್ನು ಮಾಡಿ ಊಟ ಮಾಡುತ್ತಾರೆ. ಜೊತೆಗೆ ಭತ್ತದ ಕದಿರುಗಳನ್ನು ತಂದು ಮನೆಯ ವಿವಿಧ ಜಾಗಗಳಲ್ಲಿಡುವುದು ಸಂಪ್ರದಾಯ. ಹೀಗೆ ಭೂತಗಳಿಗೆ ಬಲಿ ಕೊಡುವುದರಿಂದ ಶುರುವಾಗುವ ಬೂರಿ ಹಬ್ಬ ಭತ್ತದ ಹೊಸ ಕದಿರನ್ನು ತರುವ ಕ್ರಿಯೆಯೊಂದಿಗೆ ಮುಕ್ತಾಯವಾಗುತ್ತದೆ. ಭರ್ತಿ ಐದು ದಿನ ಕಾಲ ಬೇಸಾಯದ ವಿವಿಧ ಅವಿಭಾಜ್ಯ ಅಂಗಗಳಿಗೆ ನಮಿಸಿ ಧನ್ಯತೆ ಹೊಂದುವ ರೀತಿಯೇ ವಿಶಿಷ್ಟವಾದದ್ದು. ಚರಗ ಚೆಲ್ಲುವುದು ಬೆಳೆಗಳಿಗೆ ಅಂಟುವ ಪೀಡೆ ಪರಿಹಾರಾರ್ಥವಾಗಿ, ರೋಗ ನಿವಾರಣಾರ್ಥವಾಗಿ ಚರಗ ಚಲ್ಲುವ ಆಚರಣೆ ವ್ಯವಸಾಯಗಾರರಲ್ಲಿ ದಟ್ಟವಾಗಿ ನೆಲೆಯೂರಿದೆ. ಚರಗ ಪದವನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಪ್ರಾಣಿಬಲಿಯ ನಂತರದ ರಕ್ತದ ಅನ್ನ ಹಾಗೂ ತಂಗಳು ಅಡುಗೆ ಪದಾರ್ಥಗಳಿಂದ ಮಾಡಿದ ಮಿಶ್ರಣ ನೆನಪಿಗೆ ಬರುತ್ತದೆ. ಪ್ರಾಣಿಬಲಿಯನ್ನು ನೀಡಿ ಮಾಡಿದ ಚರಗವು ಸಮಗ್ರವಾಗಿ ಊರಿನ ಕ್ಷೇಮವನ್ನು ಕಾಪಾಡುತ್ತದೆ ಎಂದು ಭಾವಿಸುವುದಾದರೆ, ಪ್ರತಿ ರೈತ ತನ್ನ ಹೊಲಗದ್ದೆಗಳಿಗೆ ಚಲ್ಲುವ ಚರಗ ಅವನ ಆರಂಬವನ್ನು ರಕ್ಷಿಸುತ್ತದೆ. ಕೆಲವು ಪ್ರದೇಶಗಳಲ್ಲಿ ಚರಗದ ಕುಡಿಕೆಯೊಂದನ್ನು ಮನೆಯಲ್ಲಿ ಸದಾ ಇಟ್ಟುಕೊಂಡಿರುತ್ತಾರೆ. ಬೆಳೆಗಳಿಗೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಮುದ್ದೆ, ಅನ್ನ ಇಂತಹ ಯಾವುದಾದರೂ ಅಡಿಗೆಯನ್ನು ನೀರಿಗೆ ತೆಳ್ಳಗೆ ಕಲಸಿಕೊಂಡು ಹೊಲದ ಸುತ್ತ ಚಲ್ಲುತ್ತಾರೆ. ಹಾಗೆ ಮಾಡುವುದರಿಂದ ಬೆಳೆಗಳಿಗೆ ಅಪಾಯಕಾರಿಯಾಗುವ ಹುಳು-ಹುಪ್ಪಟೆಗಳ ನಿವಾರಣೆ ಮತ್ತು ಪೀಡೆ ಪರಿಹಾರ ಮಾಡಿದಂತಾಗುತ್ತದೆ ಎಂಬ ಭಾವನೆ ರೈತಾಪಿಗಳಲ್ಲಿದೆ. ಎಲೆ ತೋಟ, ಬಾಳೆ ತೋಟಗಳಿಗಂತೂ ನಿಯಮಿತವಾಗಿ ಚರಗ ಚಲ್ಲುವುದನ್ನು ಕಾಣಬಹುದು, ಈ ಕ್ರಿಯೆ ಕ್ರಮಬದ್ಧವಾಗಿ ನಡೆಯುತ್ತದೆ. ಸಾಮಾನ್ಯವಾಗಿ ಹೀಗೆ ಚರಗ ಚೆಲುವುದು ಇಬ್ಬರ ಕೆಲಸ. ಮುಂದಿರುವ ನ ವ್ಯಕ್ತಿ ಒಂದು ಕೈಯಲ್ಲಿ ಬೆಂಡುಗೊಳ್ಳಿ ಮತ್ತೊಂದು ಕೈಯಲ್ಲಿ ಕುಡುಗೋಲು ಹಿಡಿದು ಹೊರಟರೆ, ಹಿಂದಿನವನು ಚರಗದ ಕುಡಿಕೆ ಹಿಡಿದು ಅದನ್ನು ಚಲ್ಲುತ್ತಾ ‘ಹೋಲಿಗ್ಯ ಹೋಲಿಗ್ಯ ಎಂದು ಉದ್ಘರಿಸುತ್ತಾನೆ. ಹೋಲಿಗ್ಯ ಎಂಬ ಕೂಗು ಎಲ್ಲಿಯವರೆಗೆ ಕೇಳಿಸುತ್ತದೆಯೋ ಅಷ್ಟು ವ್ಯಾಪ್ತಿಯ ಬೆಳೆಗಳಿಗೆ ಒಳ್ಳೆಯದಾಗುತ್ತದೆ ಎಂದು ನಂಬಿಕೆ. ಒಂದು ಸುತ್ತು ಚರಗ ಚಲ್ಲಿದ ಮೇಲೆ ಮುಂದಿದ್ದವನು ಕುಡುಗೋಲಿನಿಂದ ಬಾಳೆಯ ಗಿಡವೊಂದನ್ನು ಕಡಿದು ಹಾಕು ಬೆಂಡುಗೊಳ್ಳಿಯನ್ನು ಬಿಸಾಕುತ್ತಾನೆ. ಒಕ್ಕಣೆ ಮಾಡುವ ಸಂದರ್ಭದಲ್ಲಿ ಒಕ್ಕುವ ಕಣದಲ್ಲಂತೂ ಚರಗದ ಕುಡಿಕೆ ಸದಾ ತುಂಬಿರುತ್ತದೆ. ಪ್ರತಿ ಹಂತದಲ್ಲೂ ಬೆಳಿಗ್ಗೆ, ಸಂಜೆ ಚರಗ ಚಲ್ಲಿಯೇ ಕೆಲಸ ಆರಂಭವಾಗುವುದು. ಚರಗ ಚೆಲ್ಲುವ ಈ ಆಚರಣೆಯಿಂದ ಲೌಕಿಕ ಉಪಯೋಗವೂ ಇದೆ. ಚರಗದಲ್ಲಿರುವ ರಕ್ತ, ಅನ್ನದಗುಳು, ಮುದ್ದೆ ಚೂರು ಮುಂತಾದ ಆಹಾರದ ಪದಾರ್ಥಗಳನ್ನು ತಿನ್ನಲು ಬರುವ ಹಕ್ಕಿಗಳು ಅಲ್ಲಿರುವ ಆಹಾರವನು ತಿಮ್ದು ಮುಗಿಸಿದ ನಂತರ ಅಲಿಯೇ ಕಣ್ಣಿಗೆ ಬೀಳುವ ಹುಳುಗಳನ್ನು ತಿಂದು ಹಾಕುತ್ತವೆ. ಹಾಗಾಗಿ ಚರಗ ಚೆಲ್ಲುವುದು ಕೀಟ ನಿವಾರಣೆ ಮಾಡುವ ಸರಳ ವಿಧಾನವೂ ಆಗಿದೆ. ಔಡಲ ಗಿಡಗಳಿಗೆ, ಹೆಸರು ಗಿಡಗಳಿಗೆ ಹತ್ತಿದ ಹುಳಗಳನ್ನು ಚರಗ ಹಾಕಿ ಪಕ್ಷಿಗಳನ್ನು ಆಕರ್ಷಿಸಿ ನಿವಾರಣೆ ಮಾಡಿಕೊಂಡ ಉದಾಹರಣೆಗಳೂ ಸಾಕಷ್ಟು ಸಿಗುತ್ತವೆ. ಎಳ್ಳಮವಾಸ್ಯೆ ವರ್ಷದ ಜನವರಿ ಅಥವಾ ಡಿಸೆಂಬರ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಸಂಭ್ರಮದ ಆಚರಣೆ ಎಳ್ಳಮಾವಾಸ್ಯೆ. ಈ ತಿಂಗಳುಗಳು ಮುಂಗಾರಿನ ಬೆಳೆಗಳ ಕಟಾವು ಮತ್ತು ಹಿಂಗಾರಿ ಬೆಳೆಗಳ ಬಿತ್ತನೆಗಳೆರಡೂ ಏಕಕಾಲಕ್ಕೆ ನಡೆಯುವ ಸಂಭ್ರಮದ ಮತ್ತು ಸಂಧಿಗ್ದದ ಸಮಯ. ಒಂದೆಡೆ ಮುಂಗಾರಿನ ಪ್ರಮುಖ ಬೆಳೆಯಾದ ಜೋಳದ ಕಟಾವು ನಡೆಯುತ್ತಿದ್ದರೆ, ಮತ್ತೊಂದೆಡೆ ಹಿಂಗಾರು ಬೆಳೆಗಳಾದ ಶೇಂಗಾ, ಕಡಲಿ, ಸೂರ್ಯಕಾಂತಿ, ಬೇಸಿಗೆ ಸಜ್ಜೆ ಮುಂತಾದ ಬೆಳೆಗಳ ಬಿತ್ತನೆ ನಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಹಾಜರಾಗುವುದು ಎಳ್ಳಮವಾಸ್ಯೆಯ ಸಡಗರ. ಅಂದು ಎಲ್ಲಿ ನೋಡಿದರೂ ರಂಗುರಂಗಿನ ಬಟ್ಟೆ ತೊಟ್ಟ ಹೆಂಗಳೆಯರನ್ನು ಕರೆದೊಯ್ಯುವ ಸಾಲಂಕೃತ ಸಾಲು-ಸಾಲು ಎತ್ತಿನ ಗಾಡಿಗಳು ಎಲ್ಲರ ಗಮನ ಸೆಳೆಯುತ್ತವೆ. ಈ ಆಚರಣೆಯ ದಿವಸ ಎಳ್ಳಿನ ಅಡುಗೆಗಳ ವಿಶೇಷ. ಅಂದು ಮೊದಲ ಕೋಳಿ ಕೂಗುವಾಗಲೇ ಊರಿಡೀ ಎಚ್ಚೆತ್ತಿರುತ್ತದೆ. ಯುವಕರು ಬಂಡಿ ತೊಳೆದು ಅದರ ಚಕ್ರಕ್ಕೆ ಕೀಲೆಣ್ಣೆ ಹಾಕಿ, ಕೊಲ್ಲಾರಿ ಕಟ್ಟಿ, ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಬಣ್ಣ ಹಚ್ಚಿ ಕೊಂಬು ಗುಣುಸು ಹಾಕಿ, ಹಣೆ ಗೆಜ್ಜೆ, ಕೊರಳು ಗಂಟೆ ಕಟ್ಟಿ, ಮೈ ತುಂಬ ಚಿತ್ತಾರದ ಜೂಲ ಹಚ್ಚುತ್ತಿದ್ದರೆ… ಅತ್ತ ಹೆಣ್ಣು ಮಕ್ಕಳಿಂದ ಅಡುಗೆಮನೆ ಘಮಘಮಗುಟ್ಟುತ್ತಿರುತ್ತದೆ. ಎತ್ತು-ಗಾಡಿಗಳನ್ನು ಅಲಂಕರಿಸಿ ಮನೆಯ ಎಲ್ಲರೂ ಸೇರಿ ಹೊಲದತ್ತ ಸಾಗುತ್ತಾರೆ. ಅವರು ತಂತಮ್ಮ ಹೊಲಗಳಿಗೆ `ಚರಗ’ ಆಚರಿಸಲು ಹೊರಟ ಪರಿ ಇದು. ಹಚ್ಚ ಹಸರಿನ ಬೆಳೆ ಹೊತ್ತ ಭೂಮಿ ತಾಯಿಗೆ ಇಂದು `ಸೀಮಂತ’ ಮಾಡಿ ಸಂತಸ ಹಂಚಿಕೊಳ್ಳುವ ಶುಭ ದಿನ ಈ ಎಳ್ಳು ಅಮಾವಾಸ್ಯೆ. ಅಂದು ಹೊಲಕ್ಕೆ ಯಾರೇ ಬಂದರೂ ಅವರು ಅತಿಥಿಗಳು. ಎಳ್ಳಮವಾಸ್ಯೆಯ ಅಡುಗೆ ವೈವಿಧ್ಯ ಅಪಾರ. ಹಿಂದಿನ ದಿನ ಇಡೀ ರಾತ್ರಿ ತಯಾರಿಸಿದ ಎಳ್ಳು ಹೋಳಿಗೆ, ಎಳ್ಳು ಬಜಿ, ಕಡಕ್ ಸೆಜ್ಜೆ ರೊಟ್ಟಿ, ಕರಿಗಡಬು, ತರಾವರಿ ಮಸಾಲೆ ಉಸುಳಿ, ಖಾರಸಾರು, ಎಣ್ಣೆಗಾಯಿ ಬದನೆಕಾಯಿ ಪಲ್ಯೆ, ಕೆನೆ ಮೊಸರು, `ಚರಗ’ದ ನೈವೇದ್ಯಕ್ಕೆ ತಯಾರಿಸಿದ ಜೋಳ, ಅವರೆ, ಅಕ್ಕಿ ಕಿಚಡಿ. ಈ ಎಲ್ಲಾ ಭಕ್ಷ್ಯಾನ್ನಗಳ ಬಿದಿರು ಬುಟ್ಟಿ ಭರ್ತಿಯಾಗಿ ಬಂಡಿ ಏರಿರುತ್ತವೆ. ಹೊಲಕ್ಕೆ ಸಾಗುವ ಬಂಡಿಗಳ ಸಂಭ್ರಮ ಮಾತಿಗೆ ನಿಲುಕದ್ದು. ನಾ ಮುಂದೆ- ತಾ ಮುಂದೆ ಎಂಬ ಸ್ಪರ್ಧೆಯೂ ನಡೆಯುತ್ತದೆ. ಹೊಸದಾಗಿ ಮದುವೆಯಾದ ಜೋಡಿಗಳೂ ಅಂದು ಈ ಆಚರಣೆಯಲ್ಲಿ ಪಾಲ್ಗೊಳ್ಳಬೇಕು. ‘ಕಡಬು ಬಜಿ’ ಇಂದಿನ ಅತ್ಯಂತ ವಿಶೇಷ ತಿನಿಸು. ಪ್ರತಿಯೊಂದು ಕಾಳು, ಕಾಯಿ ಪಲ್ಲೆ ಮತ್ತು ತರಕಾರಿಗಳನ್ನು ಸೇರಿಸಿ ಬೇಯಿಸಿದ್ದೇ ಕಡಬು ಬಜಿ. ಎಲ್ಲ ಪದಾರ್ಥಗಳನ್ನೂ ಸಹ ಸೇರಿಸುವುದರಿಂದ ಇದು ಅತ್ಯಂತ ರುಚಿಯಾಗಿರುತ್ತದೆ. ಅಲ್ಲದೆ ಜೋಳದ ಕಬ್ಬು (ಕಾಂಡ) ತಿನ್ನುವುದು ಇಂದಿನ ದಿನದ ಪದ್ಧತಿ. ಬೇರೆ ದಿನಗಳಲ್ಲಿಯೂ ತಿನ್ನುತ್ತಾರೆ ಆದರೆ ಎಳ್ಳಮವಾಸ್ಯೆಯಂದು ತಿಂದರೆ ತುಂಬಾ ರುಚಿಯಾಗಿರುತ್ತದೆ ಎಂಬುದು ಹಿರಿಯರ ಅನಿಸಿಕೆ. ಹೊಲಕ್ಕೆ ಸಾಗಿದ ನಂತರ ಬನ್ನಿ ಗಿಡದ ಕೆಳಗಡೆ ಭರಮ ದೇವರೆಂದು ಕರೆಯುವ ಐದು ಕಲ್ಲುಗಳನ್ನು ಇಟ್ಟು ಪೂಜಿಸುತ್ತಾರೆ. ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ `ಉಲ್ಲುಲ್ಲಗೋ… ಚಳಂಬ್ರಿಗೋ’ ಎನ್ನುತ್ತಾ ಉಗ್ಗುತ್ತಾರೆ. ಹೊಲದಲ್ಲಿ ಬೆಳೆದಿರುವ ಜೋಳದ ತೆನೆಗಳಿಗೆ ಅರಿಶಿನ -ಕುಂಕುಮ ಇಟ್ಟು, ಆರತಿ ಬೆಳಗಿ ಮನೆಯ ಹ್ಗಿರಿಯರು ಅಥವಾ ಹೆಣ್ಣು ಮಕ್ಕಳು ಪೂಜಿಸುತ್ತಾರೆ, ಅಲ್ಲದೆ ಹೊಲದಲ್ಲಿರುವ ಬಾವಿ, ಬೋರ್ ವೆಲ್ ಗಳಿಗೂ ಸಹ ಪೂಜಿಸಲಾಗುತ್ತದೆ. ಹೊಲದಲ್ಲಿರುವ ಇತರ ಬೆಳೆಗಳಿಗೂ ಸಹ ಪೂಜಿಸಲಾಗುತ್ತದೆ. ಎಳ್ಳಮವಾಸ್ಯೆಯ ಮತ್ತೊಂದು ವಿಶೇಷವೆಂದರೆ ಅಂದು ಜೇನು ತಿಂದರೆ ಒಳ್ಳೆಯದೆಂಬ ಭಾವನೆಯಿದೆ. ಗಂಡಸರು ಹೊಲದಲ್ಲಿ ಜೇನು ಕಟ್ಟಿದ್ದರೆ ಕಿತ್ತು ತಂದು ತುಪ್ಪವನ್ನು ಎಲ್ಲರಿಗೂ ಹಂಚುತ್ತಾರೆ. ಹೊಲದಲಿ ಜೇನಿರುವ ಸ್ಥಳ ಮುಂಚಿತವಾಗಿ ತಿಳಿದಿದ್ದರೂ ಸಹ ಎಳ್ಳಮವಾಸ್ಯೆಯ ದಿವಸವೇ ಕೀಳುವುದು ಪದ್ಧತಿ. ಇದಾದ ನಂತರ `ಹುಲಸಾಗಿ ಬೆಳೆ ಬರಲಿ’ ಎಂದು ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಒಂದೆಡೆ ಕುಳಿತು ಊಟ ಮಾಡುತ್ತಾರೆ. ಸಂಜೆಯಾಗುತ್ತಿದ್ದಂತೆ ಚಕ್ಕಡಿಗಳು ಮತ್ತೆ ಒಂದೊಂದಾಗಿ ಊರ ದಾರಿ ಹಿಡಿಯುತ್ತವೆ. ಮಗೆ ಮುಂಡುಗನನ್ನು ಹಾಕುವುದು ನಾಟಿಯಾದ ಸಸಿಗಳು ಗಟ್ಟಿಯಾಗಿ ಚಿಗುರತೊಡಗಿದಾಗ ಮಲೆನಾಡಿನ ವ್ಯವಸಾಯಗಾರರು `ಎರಕಲು ಗೂಟ’ದ ಆಚರಣೆಗೆ ತೊಡಗುತ್ತಾರೆ. ಮಗೆ ಮಳೆ ಶುರುವಾಗುತ್ತದೆ ಎನ್ನುವಾಗ ಹಿಂದಿನ ಸಂಜೆಯೇ ಹಳ್ಳಗಳ ದಂಡೆಯಲ್ಲಿ ಬೆಳೆಯುವ ಮುಂಡುಗದ ತುಂಡುಗಳನ್ನು ಕಡಿದು ತಂದು ಗದ್ದೆಯ ಪ್ರತಿ ಹಾಳೆಯಲ್ಲೂ ಇಟ್ಟು ಬರುತ್ತಾರೆ. ರಾತ್ರಿಯ ಹೊತ್ತು ಒಬ್ಬ ಗಂಡಸು ಮೈಮೇಲೆ ನೂಲೆಳೆಯಿಲ್ಲದಂತೆ ಬೆತ್ತಲೆಯಾಗಿ ಹೋಗಿ ಆ ತುಂಡುಗಳನ್ನು ಪ್ರತಿ ಹಾಳೆಯಲ್ಲಿ ನೆಟ್ಟು ಬರುತ್ತಾನೆ. ಇತ್ತೀಚೆಗೆ ಬೆತ್ತಲೆ ಹೋಗುವ ಮನುಷ್ಯ ಕರಿ ಕಂಬಳಿ ಹೊದೆಯಬಹುದೆಂಬ ರಿಯಾಯಿತಿ ನೀಡಿದ್ದಾರೆ. ಹೀಗೆ ಎರಕಲು ಗೂಟ ನೆಡುವುದರಿಂದ ಭೂಮಿ ತನ್ನ ಫಲವಂತಿಕೆಯನ್ನು ಕಳೆದುಕೊಳ್ಳುವುದಿಲ್ಲವೆಂತಲೂ, ಪೈರಿಗೆ ಯಾವ ರೋಗ ರುಜಿನ, ಹುಳು, ಉಪ್ಪಟೆಯ ಕಾಟವಿರುವುದಿಲ್ಲವೆಂತಲೂ, ಪ್ರಾಣಿಗಳಿಂದ ತೊಂದರೆ ಬರುವುದಿಲ್ಲವೆಂತಲೂ ನಂಬಲಾಗುವುದು. ಕೆಲವರು ಮುಂಡಗದ ತುಂಡಿನ ಬದಲು ಕವೆಕೋಲುಗಳನ್ನು ನೆಟ್ಟು ಅದರ ಮೇಲೆ ಬಿಳಿಕಲ್ಲಿಟ್ಟು `ಕಣ್ಣಾಸರು’ ಎಂದುಕೊಳ್ಳುತ್ತಾರೆ. ಕರಿಕೊಳ್ಳಿ ಹಾಕುವುದು ಗದ್ದೆಯನ್ನು ಕೊಯ್ಲು ಮಾಡುವಾಗ ಪೈರನ್ನು ಸಂಪೂರ್ಣವಾಗಿ ಕಟಾವು ಮಾಡದಿರುವುದು ಒಂದು ವಿಶೇಷ. ಮಲೆನಾಡಿನ ಭಾಗಗಳಲ್ಲಿ ಕೊನೆಯಲ್ಲಿ ಐದು ಸಸಿಗಳನ್ನು ಉಳಿಸುತ್ತಾರೆ. ಕೊಯ್ಲು ಮಾಡಿದ ಹುಲ್ಲನ್ನು ಹೊರೆ ಮಾಡಿ ಬಣವೆಗೆ ಹೊತ್ತು ಸಾಗಿಸುತ್ತಾರೆ. ಐದು ಸಸಿಗಳ ಜಾಗದ ಹತ್ತಿರದ ಕೊನೆಯ ಹೊರೆಯನ್ನು ನಿಶ್ಚಿತ ಮನುಷ್ಯನೊಬ್ಬ ಹೊತ್ತು ಹೊರಡುತ್ತಾನೆ. ಆಗ ಅವನು ಯಾರು ಮಾಡನಾಡಿಸಿದರೂ ಮಾತನಾಡದೆ ಬಣವೆಗೆ ಹಾಕಿ, ಮನೆಯ ಒಲೆಯಲ್ಲಿ ಕೊಳ್ಳಿಯೊಂದನ್ನು ತಂದು ಪ್ರಸ್ತುತ ಗದ್ದೆಗೆ ಹಣಿದು ಬರುತ್ತಾನೆ. ಇದಕ್ಕೆ `ಕರಿಕೊಳ್ಳಿ ಹಾಕುವುದು’ ಎನ್ನುತ್ತಾರೆ. ಇಷ್ಟು ದಿವನ ಪೈರಿನಿಂದ ತುಂಬಿ ತುಳುಕಿದ ಗದ್ದೆ ಬೋಳಾಗಿರುವುದನ್ನು ಕಂಡು ಯಾರೂ ಕಣ್ಣು ಹಾಕಬಾರದೆಂದು ಈ ಆಚರಣೆ. ಬಯಲು ನಾಡಿನಲ್ಲಿ ಐದು ಸಸಿ ಉಳಿಸಿ ಪೂಜಿಸುವುದನ್ನೇ `ಬೆಳೆಮುಂಬು’ ಎಂದು ಕರೆಯುತ್ತಾರೆ. ಕೊನೆಯಲ್ಲಿನ ಸಸಿಗಳನ್ನು ತುದಿಗಂಟು ಹಾಕಿ ಕಟ್ಟಿ ಕುಡುಗೋಲು ಮಸಗಲ್ಲುಗಳನ್ನಿಟ್ಟು ಪೂಜಿಸಿ ಎಡೆ ಹಿಡಿದು ಊಟ ಮಾಡುತ್ತಾರೆ. ಬೆಳೆಮುಂಬು ಆಚರಣೆಗೆ ದಾಸಯ್ಯ ಪೂಜಾರಿಗಳನ್ನೂ ಆಹ್ವಾನಿಸುವುದುಂಟು. ಆಗ ಜೊತೆ – ಜೊತೆಗೆ ಮಂತ್ರ ಹೇಳುವುದು, ಶಂಖ ಊದುವುದು, ಜಾಗಟೆ ಬಾರಿಸುವುದು ನಡೆಯುತ್ತದೆ. ಬೆಳೆ ಮುಂಬನ್ನೇ ಹೋಲುವಂತಹ ಹತ್ತಿದೇವರ ಆಚರಣೆ ಒಂದಿದೆ. ಮೊದಲ ಬಾರಿಗೆ ಹತ್ತಿ ಬಿಡಿಸುವಾಗ ಆಯ್ದ ಗಿಡವೊಂದಕ್ಕೆ ಪೂಜಿಸಿ ಬಿಡಿಸಿದ ಮೊದಲ ಹತ್ತಿಯನ್ನು ಏರಿಸುತ್ತಾರೆ. ನಂತರ ಪ್ರತಿ ಸಾರಿ ಹಾಗೆಯೇ ಇರುತ್ತದೆ. ಎಲ್ಲ ಗಿಡಗಳನ್ನು ಕತ್ತರಿಸಿ ಹಾಕಿದರೂ ಹತ್ತಿ ದೇವರ ಗಿಡ ಮಾತ್ರ ಮುಂದಿನ ಉಳುಮೆಯಾಗುವ ತನಕ ಹಾಗೆಯೇ ಇರುತ್ತದೆ. ಪ್ರಸ್ತುತ ಬೆಳೆಮುಂಬು ಮತ್ತು ಹತ್ತಿ ದೇವರ ಪೂಜೆ ಆಚರಣೆಯು ಪ್ರಾಕ್ತನ ಮಾನವನ ನಂಬಿಕೆಯ ಪಳೆಯುಳಿಕೆಯಂತೆ ಕಾಣುತ್ತದೆ. ಧಾನ್ಯಗಳಲ್ಲಿ, ಬೆಳೆಗಳಲ್ಲಿ ಆತ್ಮವಿದೆ. ಅದನ್ನು ಪೂರ್ಣ ಕೊಯ್ದು ಹಾಕಿದರೆ ಪುನಃ ನಮಗೆ ಸಿಕ್ಕಲಾರದು ಎಂಬ ನಂಬಿಕೆಯ ಪರಿಣಾಮವೂ ಇದ್ದಂತೆ ತೋರುತ್ತದೆ. ಪ್ರಪಂಚದಾದ್ಯಂತ ಹರಡಿರುವ ಇಂತಹ ಅನೇಕ ಆಚರಣೆಗಳನ್ನು ಫ್ರೇಜರ್‌ರವರು ಗಮನಿಸಿ ವಿಶ್ಲೇಷಿಸಿದ್ದಾರೆ. ಆದಿವಾಸಿಗಳ ಪ್ರಕಾರ ಒಂದು ಹೊಲದಲ್ಲಿ ಬೆಳೆ ಬೆಳೆದಿದ್ದರೆ ಹಾಗಾಗಲು ಅದರಲ್ಲಿ ಧಾನ್ಯಮಾತೃವಿನ ಆತ್ಮ ಇರುವುದೇ ಕಾರಣ. ಬೆಳೆಯನ್ನು ಕೊಯ್ಯುವವರೆಗೆ ಮಾತ್ರ ಧಾನ್ಯಮಾತೃ ಹೊಲವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಆದರೆ ಬೆಳೆಯನ್ನು ಕೊಯ್ಯುತ್ತಾ ಬಂದಂತೆ ಸಾಯುವುದನ್ನು ತಪ್ಪಿಸಿಕೊಳ್ಳಲು ಒಂದರಿಂದ ಇನ್ನೊಂದು ಪೈರಿಗೆ ಓಡುತ್ತದೆ. ಆದರೆ ಹೊಲದಲ್ಲಿ ಎಲ್ಲ ಪೈರನ್ನೂ ಕೊಯ್ದು ಇನ್ನೊಂದು ಮಾತ್ರ ಉಳಿದಿದ್ದರೆ ಅದರಲ್ಲಿಯೇ ಧಾನ್ಯಮಾತೃ ಇರುವುದೆಂದು ಅವರ ನಂಬಿಕೆ. ಆದುದರಿಂದ ಧಾನ್ಯಮಾತೃ ಆ ಕೊನೆಯ ಪೈರಿನಲ್ಲಿ, ಕೊನೆಯ ಕಂತೆಯಲ್ಲಿ, ಕೊನೆಯ ಪೈರನ್ನು ಕೊಯ್ಯುವ ವ್ಯಕ್ತಿಯಲ್ಲಿ, ಕೊನೆಯ ಕಂತೆ ಕಟ್ಟುವ ವ್ಯಕ್ತಿಯಲ್ಲಿ ಇರಲು ಸಾಧ್ಯ. ಈ ಧಾನ್ಯಮಾತೃವನ್ನು ಹೊರಗೆ ಹೋಗದಂತೆ ಸಾಯಿಸಿದರೆ ಅದರ ಶಕ್ತಿ ಹೊಲದಲ್ಲಿಯೇ ಉಳಿದು ಮುಂದಿನ ವರ್ಷ ಬೆಳೆ ಬೆಳೆಯಲು ಸುಗಮವಾಗುತ್ತದೆ. ಈ ಮಾತುಗಳ ಆಧಾರದ ಮೇಲೆ ನಮ್ಮ ಬೆಳೆಮುಂಬು ಈ ಹೊಲದ ಧಾನ್ಯದ ಆತ್ಮವನ್ನು ತನ್ನಲ್ಲೇ ಉಳಿಸಿಕೊಂಡು ಮುಂದಿನ ಫಲಶಕ್ತಿಗೆ ಕಾರಣವಾಗುವ ಸಂಕೇತವಾಗಿದೆ. ಹತ್ತಿ ದೇವರ ಪೂಜೆ ಆಚರಣೆಯೂ ಇದನ್ನೇ ನೆನಪಿಸುತ್ತದೆ. ಪ್ರಾಯಶಃ ಬಲಿ ಕೊಡುವ ಪದ್ಧತಿ ಸುಧಾರಣೆ ಆಗಿ ಆಗಿ ಬೆಳೆ ಉಳಿಸುವ ಕ್ರಮಕ್ಕೆ ಬಂದು ನಿಂತಿದೆ. ವೀಳ್ಯದೆಲೆಗೆ ಗೌರಿ ಪೂಜೆ ವೀಳ್ಯದೆಲೆಗೆ ನಮ್ಮ ಗ್ರಾಮೀಣ ಸಮುದಾಯ ನೀಡುವ ಪ್ರಾಮುಖ್ಯತೆ ನಮಗೆಲ್ಲರಿಗೂ ತಿಳಿದದ್ದೇ. ಶುಭ ಕಾರ್ಯವಾಗಲೀ, ಅಶುಭ ಕಾರ್ಯವಾಗಲೀ, ಭೂತ ಬಿಡಿಸುವುದಿರಲಿ, ಬಾಗಿನ ಕೊಡುವುದಿರಲಿ `ಎರಡೆಲೆ ಎರಡಡಿಕೆ’ ಇರಲೇಬೇಕು. ಏನೇ ಕೊಡು-ತೆಗೆದುಕೊಳ್ಳುವುದಿರಲಿ ಎಲೆಯಡಿಕೆ ಜೊತೆಯಲ್ಲಿಟ್ಟೇ ಕೊಡಬೇಕೆಂಬುದು ಒಂದು ಸಂಪ್ರದಾಯ, ತಾಂಬೂಲಕ್ಕಂತೂ ವೀಳ್ಯದೆಲೆಯೇ ಮೂಲ. ಹಾಗಾಗಿ ವೀಳ್ಯದೆಲೆ ಎಂದರೆ ರೈತರಿಗೆ ಸಾಕ್ಷಾತ್ ಗೌರಿ. ವೀಳ್ಯದೆಲೆ ತೋಟವನ್ನು ಅವರು ವಿಶೇಷ ಗೌರವದಿಂದಲೇ ಕಾಣುತ್ತಾರೆ. ಅಲ್ಲಿ ಚಪ್ಪಲು ಮೆಟ್ಟಬಾರದು, ಔಷಧ ಸಿಂಪರಣೆ ಕೂಡದು ಎಂಬ ನಿಷೇಧಗಳಿವೆ. ವೀಳ್ಯದೆಲೆಯನ್ನು ಗೌರಿಯ ಅವತಾರ ಎಂದು ನಂಬುವುದು ಎಲ್ಲ ಪ್ರದೇಶಗಳಲ್ಲಿ ಕಾಣಬಹುದು. ಎಲೆ ತೋಟವಂತೂ ಸಾಕ್ಷಾತ್ ದೇವಾಲಯದಂತೆಯೇ ಪರಿಗಣಿಸುತ್ತಾರೆ. ದೇವಾಲಯದ ಸಕಲ ನಿರ್ಬಂಧಗಳೂ ಇಲ್ಲಿವೆ. ಕೃಷಿ ಏನೆಲ್ಲ ಆಧುನೀಕರಣಗೊಂಡಿದ್ದರು ಸಹ ಎಲೆ ತೋಟಕ್ಕೆ ಮಾತ್ರ ರಾಸಾಯನಿಕಗಳು ಸೋಂಕುವಂತಿಲ್ಲ. ವೀಳ್ಯದೆಲೆ ವಾಣಿಜ್ಯ ಬೆಳೆಯಾಗಿದ್ದರೂ ಈಗಲೂ ರೈತರಲ್ಲಿ ಎಲೆತೋಟದ ಬಗೆಗಿನ ಭಕ್ತಿ, ಗೌರವ, ನಂಬಿಕೆಗಳು ಬದಲಾಗಿಲ್ಲ. ತೋಟವಿರುವ ಪ್ರತಿಯೊಬ್ಬರೂ ಗೌರಿ ಹಬ್ಬದ ಸಮಯದಲ್ಲಿ ಗೌರಿಪೂಜೆ ಮತ್ತು ಬೊಮ್ಮಪ್ಪನ ಪೂಜೆಯನ್ನು ತೋಟದಲ್ಲೇ ಮಾಡುತ್ತಾರೆ. ಅದಕ್ಕೆ ಹಿನ್ನೆಲೆಯಾಗಿ ಸ್ವಾರಸ್ಯವಾದ ಕಥೆಯೊಂದು ಹೀಗಿದೆ: ಪಾಂಡವರ ತಾಯಿ ಕುಂತಿದೇವಿಯು ಗಜಗೌರಿ ವ್ರತವನ್ನು ಮಾಡಲು ದೇವಲೋಕದಿಂದ ತರಿಸಿದ ಐರಾವತ ಮುಂತಾದ ಅನೇಕ ವಸ್ತುಗಳಲ್ಲಿ ವೀಳ್ಯದೆಲೆ ಅಂಬು ಸಹ ಒಂದು. ಪೂಜೆ ಮುಗಿದ ನಂತರ ಮುಂಚೆಯೇ ಆದ ಕರಾರಿನಂತೆ ಅವು ದೇವಲೋಕದ ಕಡೆ ಹೊರಟವು. ಆದರೆ ಅವುಗಳನ್ನು ದೇವಲೋಕಕ್ಕೆ ಹೋಗಲು ಬಿಡದೆ ಒಬ್ಬೊಬ್ಬರು ಒಂದೊಂದನ್ನು ಕಟ್ಟಿ ಹಾಕಿದರು. ಭೀಮ – ಐರಾವತವನ್ನು, ಧರ್ಮರಾಯ ಅವರೆಕಾಳನ್ನು, ನಕುಲ – ಸಹದೇವರು ಭತ್ತವನ್ನು ಹಿಡಿದು ಕಟ್ಟಿಹಾಕಿದರೆ ವೀಳ್ಯದೆಲೆ ಅಂಬನ್ನು `ಬೊಮ್ಮಪ್ಪ’ನೆಂಬ ಗಂಗ ಮತಸ್ಥ ಬೆಸ್ತರವನು ಕಟ್ಟಿ ಹಾಕಿದನಂತೆ. ಹಾಗಾಗಿ ಅವೆಲ್ಲಾ ಭೂ ಲೋಕದಲ್ಲಿಯೇ ಉಳಿದವಂತೆ. ಈಗಲೂ ಸಹ ವೀಳ್ಯದೆಲೆ ಅಂಬು ಆಕಾಶದತ್ತ ಹರಿಯುವುದು ದೇವಲೋಕದ ಆಸೆಗಾಗಿಯೇ! ಅದಕ್ಕಾಗಿಯೇ ಪ್ರತಿ ವರ್ಷ ಎಲೆ ಅಂಬನ್ನು ಇಳಿಸುವ ಪದ್ಧತಿ ಇದೆ ಎನ್ನುತ್ತಾರೆ. ಮತ್ತು ವೀಳ್ಯದೆಲೆಯನ್ನು ಕಟ್ಟಿ ಹಾಕಿದ ಬೊಮ್ಮಪ್ಪನ ನೆನಪಿಗಾಗಿ ವರ್ಷಕ್ಕೊಮ್ಮೆ ಎಲೆ ಅಂಬನ್ನು ಇಳಿಸಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ಜೊತೆಗೆ ಸಾಕ್ಷಾತ್ ಗೌರಿಯೇ `ವೀಳ್ಯದೆಲೆ’ಯಾಗಿದ್ದಾಳೆ ಎಂದು ನಂಬಿದ ರೈತರು ಅದೇ ಸಮಯಕ್ಕೆ `ಗೌರಿ ಪೂಜೆ’ಯನ್ನೂ ಮಾಡುತ್ತಾರೆ. ಗೌರಿ ಹಬ್ಬದ ದಿನ ಅಥವಾ ಹಬ್ಬ ಮುಗಿದ ಒಂಭತ್ತು ದಿವಸಕ್ಕೆ ತೋಟದ ದೇವ ಮೂಲೆಯಲ್ಲಿ ಮೂಡಣ ದಿಕ್ಕಿಗೆ ಚಿಕ್ಕ ಚಪ್ಪರ ಹಾಕಿ ಬಾಳೆಕಂದು ಕಟ್ಟಿ ಕಳಸವಿಟ್ಟು ಗೌರಿಯ ಮುಖವನ್ನು ಬರೆದ ತೆಂಗಿನ ಕಾಯಿಯನು ಕಳಸದ ಬಾಯಿಗಿಡುತ್ತಾರೆ. ಆ ತೆಂಗಿನಕಾಯಿಗೆ ವಾಲೆ, ಜುಮುಕಿ, ಬಳೆ, ಸರ… ಮುಂತಾದ ಒಡವೆಗಳನ್ನು ತೊಡಿಸಿ, ಹೊಸ ಸೀರೆ, ಕುಬುಸದ ಕಣ ಉಡಿಸಿ ಎಳ್ಳಿನ ಚಿಗಳಿ, ಅಕ್ಕಿಯ ತಂಬಿಟ್ಟು, ಅಕ್ಷತೆ, ಸಿಹಿ ಅಡುಗೆ ಎಡೆ ಇಡುತ್ತಾರೆ. ತೋಟದಲ್ಲಿ ಬಳಸುವ ಕುಡುಗತೋಲು, ಏಣಿ, ಎಲೆ ಕುಯ್ಯುವ ಉಗುರು, ನೀರು ಹುಯ್ಯುವ ಗುಂಬ ಎಲ್ಲವನ್ನೂ ಇಟ್ಟು ಸಿಂಗರಿಸಿ ಸಮೃದ್ಧವಾಗಿ ಸೇವಂತಿಗೆ ಹೂ ಮುಡಿಸಿ ಮೊದಲು ಗೌರಮ್ಮನ ತಂಗಿಯಾದ ಗಂಗೆಯನ್ನು ಪೂಜಿಸುತ್ತಾರೆ. ನಂತರ ಗೌರಿಗೆ ಪೂಜೆ ಮಾಡಿ ಮುತ್ತೈದೆಯರು ಅಕ್ಷತೆ ಹಚ್ಚಿ ಬಾಗಿನ ಕೊಡುತ್ತಾರೆ. ಪೂಜೆಯೆಲ್ಲಾ ಹೆಂಗಸರ ಕೆಲಸ. ಆದರೆ ಬೊಮ್ಮಪ್ಪನಿಗೆ ಎಡೆ ಹಾಕುವುದು ಗಂಡಸರ ಕೆಲಸ. ಬೊಮ್ಮಪ್ಪನಿಗೆಂದೇ ಜೀರಿಗೆ ಮೆಣಸು ಹಾಕಿ ಮಾಡಿದ ಕಿಚಡಿ ಅನ್ನ, ನೀರು ಮತ್ತು ಗಂಧದ ಕಡ್ಡಿ. ಇವು ಮೂರನ್ನೂ ಒಬ್ಬೊಬ್ಬರು ಹಿಡಿದುಕೊಂಡು `ಬೊಮ್ಮಪ್ಪೊ, ಬೊಮ್ಮಪ್ಪೊ, ವರಗುಡ್ಲು ಮಡಗಿವ್ನಿ, ಗುಂಬ ಮಡಗಿವ್ನಿ, ನಿಂಗೆ ಬೇಕಾದ್ದೆಲ್ಲ ಮಡಗಿವ್ನಿ ಊಟ ಮಾಡಿ ಬೊಮ್ಮಪ್ಪೋ, ಒಳ್ಳೇದು ಮಾಡು ಬೊಮ್ಮಪ್ಪೋ…’ ಎನ್ನುತ್ತಾ, ಅನ್ನ-ನೀರು ಎರಚುತ್ತಾ ತೋಟ ಮೂರು ಸುತ್ತು ಹಾಕುತ್ತಾರೆ. ಸಂಜೆ ಹೊತ್ತು ಈ ಪೂಜೆ ನಡೆಯುತ್ತದೆ. ಇಳಿಗತ್ತಲ ಹೊತ್ತಿನಲ್ಲಿ ಹಳ್ಳಿಯ ಎಲ್ಲರೂ ವೀಳ್ಯದೆಲೆ ತೋಟದಲ್ಲಿ ಸೇರಿ ಗೌರಿಗೆ ಹಸೆ ಹಚ್ಚಿ, ಬೊಮ್ಮಪ್ಪನಿಗೆ ಎಡೆ ಹಾಕಿ, ಆ ಮೂಲಕ ತಮ್ಮ ಬೇಸಾಯವೆಂಬ ಕಾಯಕಕ್ಕೆ ದೈವತ್ವದ ಸ್ವರೂಪ ನೀಡಿ ಖುಷಿಪಡುತ್ತಾರೆ. ನೇಗಿಲು ಪೂಜೆ : ಬಿತ್ತನೆ ಬೀಜ ಪರೀಕ್ಷಿಸುವ ಆಚರಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಕನಕಪುರ ಮತ್ತು ತಮಿಳುನಾಡು ಪ್ರದೇಶದ ಕೆಲವು ಹಳ್ಳಿಗಳಲ್ಲಿ ಯುಗಾದಿ ಹಿಂದೆ – ಮುಂದೆ ನೇಗಿಲು ಪೂಜೆ ಎಂಬ ವಿಶಿಷ್ಟ ಆಚರಣೆ ಮಾಡುತ್ತಾರೆ. ಹಸಿ ಸಗಣಿಯಲ್ಲಿ ಬಟ್ಟಲಾಕಾರ ಮಾಡಿ ಸ್ವಲ್ಪ ಒಣಗಿಸಿ ಅದಕೆ ಕೆಮ್ಮಣ್ಣು ಹಾಕಿ ತಾವು ಮುಂದಿನ ವರ್ಷ ಬಿತ್ತುವ ೫, ೭ ಅಥವಾ ೯ ಜಾತಿಯ ಬೀಜಗಳನ್ನು ಸ್ವಲ್ಪ-ಸ್ವಲ್ಪ ಬಿತ್ತುತ್ತಾರೆ. ಸಾಮಾನ್ಯವಾಗಿ ಅವರೆ, ತೊಗರಿ, ರಾಗಿ, ಭತ್ತ, ಜೋಳ, ನವಣೆ, ಹರಳು, ಹುರುಳಿ ಮುಂತಾದವನ್ನು ಬಿತ್ತುವುದು ರೂಢಿ. ಬಿತ್ತಿದ ನಂತರ ಈ ಸಗಣಿ ಬಟ್ಟಲನ್ನು ಎರಡು ಮರದ ನೇಗಿಲುಗಳಿಗೆ ಕಟ್ಟುತ್ತಾರೆ. ನೇಗಿಲುಗಳು ಹೊಸತಾಗಿರಬೇಕು, ಹಳೆಯವನ್ನು ಬಳಸುವುದಿಲ್ಲ. ಹೀಗೆ ಬಿತ್ತಿದ ನಂತರ ಒಂಭತ್ತನೇ ದಿನದವರೆಗೆ ನೀರು ಹಾಕಿ ಕೊನೆಯ ದಿನ ಮನೆ ಹಿರಿಯರು ಮತ್ತು ಗ್ರಾಮದ ಹಿರಿಯರು ಸೇರಿ ಮೊಳಕೆಯನ್ನು ಪರೀಕ್ಷಿಸುತ್ತಾರೆ. ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಮೊಳಕೆ ಬಂದಿದೆಯೋ ಅಷ್ಟು ಬೆಳೆ ಮುಂದಿನ ವರ್ಷ ಆಗುತ್ತದೆ ಎಂಬುದು ನಿರೀಕ್ಷೆ. ಉದಾಹರಣೆಗೆ ರಾಗಿ ಐವತ್ತು ಪೈಸೆ (ಅರ್ಧ ಭಾಗ) ಮೊಳಕೆ ಬಂದಿದ್ದರೆ ಎಂಟಾಣೆ ಬೆಳೆ, ಮುಕ್ಕಾಲು ಭಾಗ ಬಂದಿದ್ದರೆ ಹನ್ನೆರಡಾಣೆ ಬೆಳೆ ಆಗುತ್ತದೆ. ಈ ರೀತಿ ನಿರ್ಧರಿಸಿ ಯಾವುದು ಹೆಚ್ಚು ಹುಲುಸಾಗಿ ಮೊಳಕೆ ಬಂದಿರುತ್ತದೆಯೋ ಅದನ್ನು ಈ ವರ್ಷ ಜಾಸ್ತಿ ಪ್ರಮಾಣದಲ್ಲಿ (ಒಂದ್ ಕೈ ಮುಂದೆ ಮಾಡಿ ಬಿತ್ಬೇಕು) ಬಿತ್ತಬೇಕೆಂದು ತೀರ್ಮಾನಿಸಿಕೊಳ್ಳುತ್ತಾರೆ. ಹೇಗೆಂದರೆ ಹೆಸರು ಕಾಳು ಉತ್ತಮವಾಗಿ ಮೊಳಕೆಯಾಗಿದ್ದರೆ ಅಕ್ಕಡಿ ಸಾಲಿಗೆ ಬೇರೆ ಕಾಳುಗಳನ್ನು ಕಡಿಮೆ ಮಾಡಿ ಹೆಸರುಕಾಳು ಜಾಸ್ತಿ ಮಾಡುತ್ತಾರೆ. ತೊಗರಿ ಚೆನ್ನಾಗಿ ಮೊಳಕೆ ಬಂದಿದ್ದರೆ ಅದನ್ನು ಹೆಚ್ಚು ಮಾಡುತ್ತಾರೆ. ತೀರ್ಮಾನ ಮುಗಿದ ನಂತರ ಊರವರೆಲ್ಲರೂ ಸಾಮೂಹಿಕವಾಗಿ ತೆರಳಿ ಎಲ್ಲಾ ಮೊಳಕೆ ಬಂದ ಬಟ್ಟಲುಗಳನ್ನು ಗಂಗಮ್ಮನಿಗೆ (ನೀರಿನ ಸೆಲೆ) ಬಿಡುತ್ತಾರೆ. ಇದನ್ನು ಆಚರಣೆಯ ಮಟ್ಟಕ್ಕಿಂತ ಆಚೆ ನಿಂತು ನೋಡಿದರೆ ಹೀಗನ್ನಿಸುತ್ತದೆ. ಯುಗಾದಿ ಮಾರ್ಚಿ-ಏಪ್ರಿಲ್‌ನಲ್ಲಿ ಬರುತ್ತದೆ. ಡಿಸೆಂಬರ್, ಜನವರಿಯಲ್ಲಿ ಕುಯಿಲು, ಒಕ್ಕಣೆ ಮಾಡಿ ಸಂಗ್ರಹ ಮಾಡಿದ ಬೀಜಗಳನ್ನು ಜೂನ್-ಜುಲೈ ತಿಂಗಳಲ್ಲಿ ತೆಗೆದು ಬಿತ್ತನೆ ಮಾಡುತ್ತಾರೆ. ಈ ಎರಡು ಅವಧಿಯ ನಡುವೆ ನೇಗಿಲು ಪೂಜೆ ನೆಪದಲ್ಲಿ ಸಂಗ್ರಹವಾದ ಬೀಜಗಳನ್ನು ಒಮ್ಮೆ ಬಿಚ್ಚಿ ನೋಡಿದಂತಾಗುತ್ತದೆ. ಹುಳ-ಗಿಳ ಬಿದ್ದಿದ್ದರೆ ಹುಷಾರಾಗಬಹುದು. ಜೊತೆಗೆ ನೇಗಿಲು ಪೂಜೆಯಲ್ಲಿ ಚೆನ್ನಾಗಿ ಮೊಳಕೆ ಬರದಿದ್ದಾಗ ಬೀಜ ಹಾಳಾಗಿದೆ ಎಂಬ ಅಂಶ ತಿಳಿದುಬಂದು ಅದನ್ನು ಬದಲಾಯಿಸಬಹುದು ಮತ್ತು ಮೊಳಕೆ ಪ್ರಮಾಣ ಕಡಿಮೆಯಾಗಿದ್ದು ಗೊತ್ತಾಗಿ ಬಿತ್ತುವ ಬೀಜದ ಪ್ರಮಾಣವನ್ನು ಹೆಚ್ಚಿಸಬಹುದು. ಅಂದರೆ ಎಕರೆಗೆ ೧೪ ಕೆ.ಜಿ. ಬಿತ್ತುವ ಕಡೆ ೧೬ ಕೆ.ಜಿ. ಬಿತ್ತುವುದು… ಹೀಗೆ. ಆಗ ಅಲ್ಲಿಗಲ್ಲಿಗೆ ಸರಿಹೋಗುತ್ತದೆ. ತಮಿಳುನಾಡಿನ ಹುಲಿಬಂಡೆ ಎಂಬ ಕಾಡುಹಳ್ಳಿಯಲ್ಲಿ ಇಡೀ ಗ್ರಾಮದ ಪ್ರತಿಯೊಂದು ಮನೆಯವರೂ ನೇಗಿಲು ಪೂಜೆಯನ್ನು ಅತ್ಯಂತ ಶ್ರದ್ಧೆಯಿಂದ ಕ್ರಮಬದ್ಧವಾಗಿ ಮಾಡುತ್ತಾರೆ. ಬಿತ್ತನೆ ಬೀಜಗಳ ಮೊಳಕೆ ಶಕ್ತಿಯನ್ನು ಪರೀಕ್ಷಿಸುವ ಈ ಆಚರಣೆ ವಿಶಿಷ್ತವಾದುದು ಮತ್ತು ರೈತರ ಜಾಣತನಕ್ಕೆ ಉತ್ತಮ ನಿದರ್ಶನ. ಆದರೆ ಈ ಆಚರಣೆ ಇಂದು ತೀರಾ ಅಪರೂಪವಾಗುತ್ತಿದೆ. ಬೆಳೆ ಹರಕೆಗಳು ತನಗೆ ಖಾಯಿಲೆ-ಕಸಾಲೆ ಬಂದಾಗ ಅದು ವಾಸಿಯಾಗಲೆಂದು ಹೇಗೆ ಹರಕೆ ಕಟ್ಟಿಕೊಳ್ಳುತ್ತಾರೋ ಅದೇ ರೀತಿ ತನ್ನ ಬೆಲೆಗಳಿಗೂ ರೋಗ-ರುಜಿನಗಳು ಬಾರದಿರಲೆಂದು ಹರಕೆ ಕಟ್ಟಿಕೊಳ್ಳೂವುದನ್ನು ಕಾಣಬಹುದು. ದವಸ ಧಾನ್ಯಗಳಿಗೆ ದೆವ್ವ, ಪೀಡೆಯ ಕಾಟ ಬರದಿರಲೆಂದು, ಕಳ್ಳ-ಕಾಕರ ಕಾಟವಿರದಿರಲೆಂದು, ರೋಗ-ರುಜಿನಗಳು ಮುತ್ತದಿರಲೆಂದು ಹರಕೆ ಹಾಕಿಕೊಳ್ಳುತ್ತಾನೆ. ಅದು ಈಡೇರಿದರೆ ತಪ್ಪದೆ ಹರಕೆ ತೀರಿಸುತ್ತಾನೆ. ಉದಾಹರಣೆಗೆ ಔಡಲಕ್ಕೆ ಕೊಂಡಲ ಹುಳ ಬಿದ್ದರೆ ಮನೆ ದೇವರಿಗೆ ಹರಳೆಣ್ಣೆ ತಂದು ಒಪ್ಪಿಸುವುದಾಗಿ ಹರಕೆ ಹಾಕಿಕೊಂಡು ದೇವರ ತೀರ್ಥ ತಂದು ಹಾಕುತ್ತಾನೆ. ಜೋಳಕ್ಕೆ ಜೋನಿ ಬೀಳದಿರಲೆಂದು, ತೆಂಗಿನಕಾಯಿಯ ಹರಳುದುರದಿದ್ದರೆ ಸೂರೆ ಹಬ್ಬ ಮಾಡುತ್ತೇನೆಂದು, ಹೊಗೆಸೊಪ್ಪಿಗೆ ತೊಂಡ್ಲೆ ಹುಳ ಬೀಳದಿದ್ದರೆ ಬೆಳ್ಳಿಯ ಅಥವಾ ಬಂಗಾರದ ತೊಂಡ್ಲೆ ಮಾಡಿಸಿಕೊಡುತ್ತೇವೆಂದು ಹರಕೆ ಹಾಕಿಕೊಳ್ಳುತ್ತಾರೆ. ಪೈರು ಚೆನ್ನಾಗಿ ಬೆಳೆದರೆ ಕಣ್ಣಾಸರು ಆಗದಿರಲಿ ಎಂದು ಬೆರ್ಚು ನಿಲ್ಲಿಸುತ್ತಾರೆ. ಬೆರ್ಚು, ಬೆಳ್ತಲೆ, ಚಂದಪ್ಪ, ಬೆಕ್ಕಿನ ಸೋರೆ ಗಡಿಗೆ, ಮಡಕೆ ಎಂದೆಲ್ಲ ಕರೆಸಿಕೊಳ್ಳುವ ಈ ಸುಣ್ಣ ಹಚ್ಚಿದ ಬೋರಲು ಮಡಕೆ ಪ್ರತಿ ಹೊಲಗದ್ದೆಗಳಲ್ಲೂ ಕಾಣಸಿಗುತ್ತದೆ. ಅಡಿಕೆ, ಬಾಳೆ, ತೆಂಗಿನ ತೋಟಗಳಲ್ಲಂತೂ ಆಳೆತ್ತರದ ಮನುಷ್ಯನ ಆಕಾರವೇ ಬೆರ್ಚು ಆಗಿ ಕಾರ್ಯನಿರ್ವಹಿಸುತ್ತದೆ. ಬೆರ್ಚು ನಿಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೇ ಇರುವಂತೆ ಕಾಣುತ್ತದೆ. ಜನ್ನ ಕವಿ ತನ್ನ ಯಶೋಧರ ಚರಿತೆಯಲ್ಲಿ `ಪಾಪದ ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರದಿಂ’ ಎಂದು ಪ್ರಯೋಗಿಸಿದ್ದಾನೆ. ಋಗ್ವೇದದ ಕಾಲದಲ್ಲೂ ಸಹ ಜೋಳದ ಜಮೀನಿನಿಂದ ಹಕ್ಕಿಗಳನ್ನು ದೂರವಿರಿಸಲು ಬೆದರುಗೊಂಬೆಗಳನ್ನು ನಿಲ್ಲಿಸಲಾಗುತ್ತಿತ್ತು ಎಂದು ತಿಳಿದು ಬರುತ್ತದೆ. ಹೊಸ ಪೈರಿನ ಹಬ್ಬ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಬಂಧುಗಳು ಮಾತೆ ಮೇರಿಯ ಹುಟ್ಟಿದ ಹಬ್ಬವನ್ನು ಹೊಸ ಪೈರಿನ ಹಬ್ಬವನ್ನಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸುವುದು ವಾಡಿಕೆ. ಅಂದು ಮನೆಯನ್ನು ವಿಶೇಷವಾಗಿ ಅಲಂಕರಿಸಿ ವಿವಿಧ ರೀತಿಯ ತರಕಾರಿ ಮತ್ತು ವೈವಿಧ್ಯಮಯ ಬೆಳೆಗಳ ತೆನೆಗಳನ್ನು ಮನೆಗೆ ತಂದು ಮಾತೆ ಮೇರಿಯ ಮೂರ್ತಿಯ ಮುಂದಿರಿಸಿ ಶಾಖಾಹಾರಿ ಅಡುಗೆ ತಯಾರಿಸಿ ಎಲ್ಲ ಒಟ್ಟಿಗೆ ಕಲೆತು ಊಟ ಮಾಡಿ ಸಂಭ್ರಮಿಸುತ್ತಾರೆ. ಕೊನೆ ಮಹೂರ್ತ ಮಲೆನಾಡಿನ ಸಾಂಪ್ರದಾಯಿಕ ಅಡಕೆ ಬೆಳೆಯುವ ಕುಟುಂಬಗಳಲ್ಲಿ ಪ್ರಚಲಿತವಿರುವ ಆಚರಣೆ. ವಿಜಯದಶಮಿಯ ದಿವಸ ಸಾಂಕೇತಿಕವಾಗಿ ಅಡಿಕೆ ಗೊನೆ ಇಳಿಸುತ್ತಾರೆ, ಹಾಗೆ ಮೊದಲ ಗೊನೆ ಇಳಿಸುವಾಗ ಮಡುವ ಆಚರಣೆಯೇ ಕೊನೆ ಮಹೂರ್ತ. ಒಂದು ನಿರ್ದಿಷ್ಟ ಅಡಿಕೆ ಮರವನ್ನು ಗುರುತಿಸಿ ಅದಕ್ಕೆ ಪೂಜೆ ನೆರವೇರಿಸಿ ಆ ಮರದಿಂದ ಐದು ಗೊನೆಗಳನ್ನು ಇಳಿಸಿ ಆ ಗೊನೆಗಳನು ತುಳಸಿಕಟ್ಟೆಯ ಮುಂದೆ ಇಟ್ಟು ಜಾಗಟೆ ಬಾರಿಸುವ ಮೂಲಕ ಪೂಜಿಸುತ್ತಾರೆ. ಗೌರಿ ಮತ್ತು ಗಣೇಶನ ಹಬ್ಬ ಮುಖ್ಯವಾಗಿ ಭೂಮಿ ಮತ್ತು ಜಲ ಸಂಬಂಧದ ಆಚರಣೆಗಳನ್ನು ಹೊಂದಿವೆ. ಹೊಲಗದ್ದೆಗಳಲ್ಲಿ ಪೈರು ಮೊಳೆತು ಬೆಳೆ ಏಳುವುದರ ಆರಂಭಕಾಲದಲ್ಲಿ ಗೌರಿ-ಗಣೇಶ ಹಬ್ಬ ಕಾಲೂರುತ್ತದೆ. ಇದು ಹುಬ್ಬೆ-ಉತ್ತರೆ ಮಳೆಗಳ ತುಂಬು ಮಳೆಗಾಲ. ಬಯಲು ಸೀಮೆಯಲ್ಲಿ ರಾಗಿ, ಶೇಂಗಾ ಕಳೆ ತೆಗೆಯುವ ಹಂತದಲ್ಲಿರುತ್ತವೆ. ಈಗ ನಡೆಯುತ್ತಿರುವ ಆಬ್ಬರದ, ಆರ್ಭಟದ ಹಬ್ಬಕ್ಕೂ ಸಾಂಪ್ರದಾಯಿಕವಾದ ಹಬ್ಬಕ್ಕೂ ಅಜಗಜಂತರ ವ್ಯತ್ಯಾಸವಿದೆ. ಕೃಷಿಕರ ಗೌರಿ-ಗಣೇಶ ಆಚರಣೆಯ ಆಶಯವೇ ಬೇರೆ. ಗಣೇಶನ ಇನ್ನೊಂದು ಹೆಸರು ವಿಘ್ನೇಶ್ವರ ಎಂಬುದು ನಮಗೆಲ್ಲ ತಿಳಿದಿದೆ. ಬಹಳ ಹಿಂದೆ ರೈತರು ಹೊಲಗದ್ದೆಗಳ ಕಡೆಯಿಂದಲೇ ಮರಳು ಮಿಶ್ರಿತ ಕೆಂಪು ಮಣ್ಣನ್ನು ತಂದು, ಅದರಿಂದಲೇ ಗಣೇಶನನ್ನು ನಿರ್ಮಿಸಿ ಪೂಜಿಸುತ್ತಿದ್ದರು. ಪೂಜಾ ಸಾಮಗ್ರಿಯಲ್ಲಿ ಮುಖ್ಯವಾದುದು ಗರಿಕೆ. ತೋಟಗಳಲ್ಲಿ ಬೆಳೆಗೆ ತೊಂದರೆ ಕೊಡುವ ಮುಖ್ಯ ಕಳೆ ಗರಿಕೆ. ಈ ಗರಿಕೆಯ ಜತೆಗೆ ಧಾನ್ಯ ಶತ್ರು ಇಲಿಯೂ ಇರುತ್ತದೆ. ಗಣೇಶನ ಕಾಲ ಅಡಿಯಲ್ಲಿ ಇಲಿ, ಗಣೇಶನ ಒಂದು ಕೈಯಲ್ಲಿ ಧಾನ್ಯದ ತೆನೆ, ಇನ್ನೊಂದು ಕೈಯಲ್ಲಿ ಅದೇ ಧಾನ್ಯದಿಂದ ತಯಾರಿಸಿದ ಕಡುಬು ಇರುತ್ತದೆ. ಜನಪದ ಗೀತೆಗಳಲ್ಲಿ ಭೂಮಿಯನ್ನು ಸ್ತುತಿಸುವಾಗ ಎಳ್ಳು ಬೆಳೆಯುವ ಭೂಮಿ ಎಂದು ಹೇಳಲಾಗುತ್ತದೆ. ಈ ಎಳ್ಳಿನಿಂದ ತಯಾರಿಸಿದ ಉಂಡೆ ಗಣೇಶನಿಗೆ ಪ್ರಿಯ. ಇದರ ಜತೆಗೆ ಗಣೇಶನು ಚೆನ್ನಾಗಿ ಊಟ ಮಾಡಿದ್ದರಿಂದ ಆತನ ಹೊಟ್ಟೆ ದಪ್ಪವಾಗಿ, ಆ ಹೊಟ್ಟೆ ಒಡೆಯಬಾರದೆಂದು ಹಾವು ಸುತ್ತಿಕೊಂಡಿರುತ್ತಾನೆ ಎಂದು ಕಥೆ ಪ್ರಚಲಿತದಲ್ಲಿರುವುದು ಎಲ್ಲರೂ ತಿಳಿದ ವಿಷಯ. ಒಟ್ಟಾರೆ ಇಡೀ ಗಣೇಶನಲ್ಲಿ ಪ್ರಕ್ರಿತಿಯ ವಿವಿಧ ಅಂಗಗಳಿರುವುದನ್ನು ಗುರುತಿಸಬಹುದು. ಗಣೇಶನ ಸಮೃದ್ಧಿಯ ಊಟ, ಒಂದು ಕೈಯ ತೆನೆ, ಇನ್ನೊಂದು ಕೈಯ ಕಡುಬು, ಕಾಲ ಕೆಳಗಿನ ಗರಿಕೆ ಮತ್ತು ಇಲಿ ಹಾಗೂ ಈ ಹಬ್ಬ ಬೆಳೆಗಳೆಲ್ಲಾ ಬೆಳವಣಿಗೆ ಹಂತದಲ್ಲಿರುವಾಗ ಬರುವುದು, ಇದೆಲ್ಲಾ ಭೂಮಿಯ ಮತ್ತು ಮಣ್ಣಿನ ವ್ಯವಸಾಯ ಸಂಬಂಧದ ಆಚರಣೆಯಾಗಿ ಕಾಣಿಸುತ್ತದೆ. ಆದರೆ ಕಾಲಕ್ರಮೇಣ ಗಣೇಶನ ರೂಪ ಮತ್ತು ಇನ್ನಿತರ ವಿವರಗಳ ಮೇಲೆ ಬೇರೆ ಬೇರೆ ಕಥೆಗಳು ಹುಟ್ಟಿಕೊಂಡು ಪ್ರಚಾರಕ್ಕೆ ಬಂದವು. ಗಣೇಶನ ಹಬ್ಬ ಭೂಮಿ ಮತ್ತು ಪ್ರಕೃತಿ ಪ್ರಜ್ಞೆಯನ್ನು ಸಂಕೇತಿಸಿದರೆ, ಇದರೊಡನೆ ಹೊಂದಿಕೊಂಡು ಬರುವ ಗೌರಿಹಬ್ಬ ನೀರಿನ ಪೂಜೆಯನ್ನು ಕುರಿತು ಹೇಳುತ್ತದೆ. ಗಣೆಶನ ಹಬ್ಬಕ್ಕಿಂತ ಒಂದು ದಿನ ಮುಂಚೆ ಗೌರಿ ಹಬ್ಬ ಬರುತ್ತದೆ. ಇದಕ್ಕೆ ಹಳ್ಳಿಗರು ನೀಡುವ ಕಾರಣ. ತವರು ಮನೆಗೆ ಬರುವ ಗೌರಮ್ಮನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಮಗನಾದ ಗಣೇಶ ಒಂದು ದಿನ ತಡೆದು ಬರುತ್ತಾನೆ. ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆಯ ಹೆಂಗಸರು ನೀರು ತುಂಬಿರುವ ಕೆರೆ, ಬಾವಿ ಅಥವಾ ಹರಿಯುವ ತೊರೆ ಕಡೆಗೆ ಹೋಗಿ ಆ ನೀರನ್ನು ಪೂಜಿಸಿ, ನೀರಿನೊಳಗೆ ಕೈಯಿಟ್ಟು ಒಂದು ಹಿಡಿ ಮರಳು ತರುತ್ತಾರೆ, ಅದನ್ನು ಮರಳು ಗೌರಮ್ಮ ಎಂದು ಕರೆಯುತ್ತಾರೆ. ಮತ್ತೆ ಕೆಲವೆಡೆ ಅರಿಷಿಣದ ಹುಂಡಿಯಿಂದ ತಯಾರಿಸಿದ ಮೂರ್ತಿಯನ್ನು ಗೌರಿಯೆಂದು ಮನೆಗೆ ತರುತ್ತಾರೆ. ವಾಸ್ತವವಾಗಿ ಇದು ಜಲಪೂಜೆಯೇ. ಈ ಗೌರಿ ಗಣೇಶನ ತಾಯಿಯೆಂದು ಹೆಸರಿಸಲಾಗಿದೆ. ಎಂದರೆ ಧಾನ್ಯ ದೇವತೆ ಗಣೇಶನಿಗೆ ಜಲದೇವತೆಯನ್ನು ತಾಯಿಯಾಗಿ ಕಲ್ಪಿಸಲಾಗಿದೆ. ಮನೆಯಲ್ಲಿ ಗೌರಮ್ಮನನ್ನು ಕೂರಿಸಿ (ಪ್ರತಿಷ್ಠಾಪಿಸಿ) ಬಾಗಿನ ಕೊಡುತ್ತಾರೆ. ಈ ಬಾಗಿನದಲ್ಲಿ ಕಾರೆ ಹಣ್ಣು, ಯಲಚಿ ಹಣ್ಣು (ಬೋರೆ ಹಣ್ಣು) ಬಿಕ್ಕೆ ಹಣ್ಣು, ಹಸಿ ಅಕ್ಕಿ ತಂಬಿಟ್ಟು, ಎಳ್ಳಿನ ಚಿಗುಳಿ ಪ್ರಮುಖವಾಗಿರುತ್ತವೆ. ಹೊಸದಾಗಿ ಮದುವೆಯಾದವರು ಗೌರಮ್ಮನಿಗೆ ಪೂಜಿಸಿ ಬಾಗಿನ ಅರ್ಪಿಸುತ್ತಾರೆ. ಈ ಹಬ್ಬಕ್ಕೆ ಮದುವೆಯಾಗಿ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ಕಡ್ಡಾಯವಾಗಿ ತವರಿಗೆ ಬರುತ್ತಾರೆ. ಮರು ದಿವಸ ಗೌರಮ್ಮನ ಪಕ್ದಲ್ಲಿಯೇ ಗಣೆಶನ ವಿಗ್ರಹವನ್ನು ಕೂಡಿಸಿ ಕಡುಬಿನ ವಿಶೇಷ ಅಡುಗೆ ಮಾಡಿ ಅದರ ಮರುದಿನ ಇಬ್ಬರನ್ನೂ ನೀರಿಗೆ ಬಿಟ್ಟು ಬರುತ್ತಾರೆ. ಭೂಮಿ ಮತ್ತು ಜಲ ಪೂಜೆಯ ಆಚರಣೆ ಹೊಂದಿರುವ ಗೌರಿ- ಗಣೇಶನ ಈ ಹಬ್ಬ ಇಂದು ತನ್ನ ಸ್ವರೂಪವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದೆ. ಕರಿಭಂಟನ ಪೂಜೆ ಹುಬ್ಬೆ-ಉತ್ತರೆ ಮಳೆಯಲ್ಲಿ ಹುಲುಸಾಗಿ ಬೆಳೆದ ಬೆಳೆಗಳಿಗೆ ರೋಗ-ರುಜಿನ, ನೋಡುಗರ ಕೆಟ್ಟ ದೃಷ್ಟಿ ತಾಕದಿರಲಿ ಎಂಬ ಉದ್ದೇಶದಿಂದ ಬಯಲು ಸೀಮೆ ಹಳ್ಳಿಗರು ಆಚರಿಸುವ ಕರಿಭಂಟನ ಆಚರಣೆ ಅತ್ಯಂತ ವಿಶಿಷ್ಟವಾದದ್ದು. ಇಡೀ ಗ್ರಾಮ ಸಮುದಾಯ ಒಂದುಗೂಡಿ, ಮೂರು ದಾರಿ ಕೂಡುವಲ್ಲಿ ಬೂದಿಯಿಂದ ರಾಕ್ಷಸಿಯ ಚಿತ್ರ ಬರೆದು ಅದರ ಹೊಟ್ಟೆಯ ಮೇಲೆ ಹಾರೆಯಿಂದ ರಂಧ್ರ ಮಾಡಿ, ಹೊಲದಲ್ಲಿ ಪಚ್ಚಾಡಿ ಮರದ ಕೊಂಬೆಗಳನ್ನು ನೆಟ್ಟು ಹರಿಶಿಣದ ಬಟ್ಟೆಯಲ್ಲಿ ಸೇರಿಸಿದ ನವಧಾನ್ಯಗಳನ್ನು ಗಂಟು ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ. ಕೋಳಿ ಇಲ್ಲವೇ ಕುರಿ ಬಲಿ ಕೊಟ್ಟು ಅದರ ರಕ್ತದ ಜೊತೆ ರಾಗಿ ಪೈರಿನ ಎಳೆ ಗರಿಗಳನ್ನು ಸೇರಿಸಿ ಹೊಲಕ್ಕೆ ಬಲಿಯೋ ಬಲಿ ಎಂದು ಕೂಗುತ್ತಾ ಎರಚಲಾಗುತ್ತದೆ. ಬೆಳೆಗಳು ಬೆಳವಣಿಗೆ ಹಂತದಲ್ಲಿರುವಾಗ ಇದನ್ನು ಆಚರಿಸುವುದರಿಂದ ಬೆಳೆಗಳಿಗೆ, ಅದರಲ್ಲಿಯೂ ಮುಖ್ಯವಾಗಿ ರಾಗಿ ಪ್ಶೆರಿಗೆ ಬರುವ ಇಲುಕು ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಈ ಆಚರಣೆಯು ವೈಯಕ್ತಿಕ ಮಟ್ಟದಲ್ಲಿ ಮತ್ತು ಸಾಮೂಹಿಕವಾಗಿ ಇಡೀ ಗ್ರಾಮವು ಒಗ್ಗಟ್ಟಾಗಿ ಮಾಡುವುದನ್ನು ಕಾಣಬಹುದು. ರಾಗಿ ಮುಖ್ಯ ಬೆಳೆಯಾಗಿ ಬೆಳೆಯುವ ಪ್ರದೇಶಗಳಲ್ಲಿ ಇದು ಅತ್ಯಂತ ವೈಭವಯುತವಾಗಿ, ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ, ಉಳಿದ ಭಾಗಗಳಲ್ಲಿ ಸಾಧಾರಣ ರೀತಿಯಲ್ಲಿ ಹೊಲಕ್ಕೆ ಚರಗ ಚೆಲ್ಲಿ ಪಚ್ಚಾಡಿ ಕೊಂಬೆಗಳನ್ನು ನೆಡುವ ಮೂಲಕ ಆಚರಿಸುತ್ತಾರೆ. ಸಾಮೂಹಿಕ ಕರಿಭಂಟನ ಆಚರಣೆ: ಇಡೀ ಗ್ರಾಮ ಸಮುದಾಯ ಸೇರಿ ಮಾಡುವ ಕರಿಬಂಟನ ಪೂಜೆಯ ವಿಧಿ-ವಿಧಾನಗಳು ಈ ರೀತಿ ಇರುತ್ತವೆ: ಹುಬ್ಬೆ ಮಳೆ ಹುಟ್ಟಿದಾಗ ಗ್ರಾಮಸ್ಥರು ಒಂದೆಡೆ ಕಲೆತು ಹಬ್ಬ ಮಾಡುವ ದಿನಾಂಕವನ್ನು ಗೊತ್ತುಪಡಿಸುತ್ತಾರೆ. ಹಬ್ಬಕ್ಕಾಗಿ ಮನೆಗೆ ಇಂತಿಷ್ಟು ಹಣ ವಸೂಲು ಮಾಡಲಾಗುತ್ತದೆ. ಹಬ್ಬದ ಹಿಂದಿನ ದಿನವೇ ಗ್ರಾಮದ ಹಿರಿಯರು ಜವಾಬ್ದಾರಿಗಳನ್ನು ಎಲ್ಲರಿಗೂ ಹಂಚಿಬಿಡುತ್ತಾರೆ. ಆ ಪ್ರಕಾರ ಕೆಲವರು ಮೂರು ತೆರನಾದ ಬೂದಿ ತರಬೇಕು, ಮತ್ತೆ ಕೆಲವರು ಪಚ್ಚಾಡಿ ಮರದ ಕೊಂಬೆಗಳನ್ನು ಕಡಿದು ತರಬೇಕು, ಉಳಿದವರು ಬಲಿ ಕೊಡಲು ಮರಿ ವ್ಯವಸ್ಥೆ ಮಾಡಬೇಕು ಮತ್ತು ರಾಗಿ ಗರಿಗಳನ್ನು ಕತ್ತರಿಸಿ ತರಬೇಕು. ಹಾಗೆಯೇ ಹಿಂದಿನ ದಿನವೇ ಊರಿನಲ್ಲಿ ಡಂಗೂರ ಸಾರುವ ಮೂಲಕ ಹಬ್ಬದ ಬಗ್ಗೆ ತಿಳಿಸಲಾಗುತ್ತದೆ. ಎಲ್ಲ ಮನೆಯವರೂ ರಾತ್ರಿ ಅಡುಗೆ ಉಳಿಕೆಯನ್ನು- ಅಂದರೆ ಮುದ್ದೆ, ಅನ್ನ ಇತ್ಯಾದಿ- ಬೆಳಿಗ್ಗೆ ತಂದು ಒಂದೆಡೆ ಗುಡ್ಡೆ ಹಾಕಬೇಕು. ಕರಿಬಂಟನ ಅಚರಣೆಗೆ ಮೂರು ರೀತಿಯ ಬೂದಿ ತರುವುದು ಕಡ್ಡಾಯ. ಒಂದು-ಕುಂಬಾರರ ಮನೆಯ ಬೂದಿ, ಎರಡು- ಕಮ್ಮಾರರ ಮನೆಯ ಬೂದಿ ಮತ್ತು ಮೂರು- ಮಡಿವಾಳರ ಮನೆ ಬೂದಿ. ಇವುಗಳಿಗೆ ಕ್ರಮವಾಗಿ ಆವಿಗೆ ಬೂದಿ, ಕುಲುಮೆ ಬೂದಿ, ಮತ್ತು ಉಬ್ಬೆ ಬೂದಿ ಎಂದು ಕರೆಯುತ್ತಾರೆ. ಈ ಮೂರು ಬಗೆಯ ಬೂದಿಗಳನ್ನು ತಂದು ಮಿಶ್ರ ಮಾಡಿ ಇಟ್ಟುಕೊಳ್ಳುತ್ತಾರೆ. ಪಚ್ಚಾಡಿ ಕೊಂಬೆ ನೆಡುವುದು ಈ ಆಚರಣೆಯ ಅತ್ಯಂತ ಮುಖ್ಯ ಕ್ರಿಯೆ. ಆಚಿಟbಚಿಡಿರಿiಚಿ ಠಿಚಿಟಿiಛಿuಟಚಿಣಚಿ ಎಂಬ ವ್ಶೆಜ್ಞಾನಿಕ ಹೆಸರಿನ ಪಚ್ಚಾಡಿ ಮರ ಕುರುಚಲು ಕಾಡುಗಳಲ್ಲಿ ಸಾಧಾರಣ ಎತ್ತರ ಬೆಳೆಯುವ ಮರ. ಕಾಂಡವು ಬಿಳುಪಾಗಿದ್ದು ಕಾಸಗಲದ ಎಲೆಗಳಿರುತ್ತವೆ. ಈ ಮರದ ವಿಶೇಷವೆಂದರೆ ಕೊಂಬೆಯನ್ನು ಕತ್ತರಿಸಿ ಹೊಲದಲ್ಲಿ ನೆಟ್ಟರೆ ೨೪ ಗಂಟೆಗಳೊಳಗಾಗಿ ಎಲೆಗಳು ಕಪ್ಪನೆ ಬಣ್ಣಕ್ಕೆ ತಿರುಗುತ್ತವೆಯೇ ಹೊರತು ಒಣಗಿ ಉದುರುವುದಿಲ್ಲ. ಬಹಳ ದಿವಸಗಳ ನಂತರ ಒಣಗಿದ ಎಲೆಗಳು ಉದುರುತ್ತವೆ. ಹಬ್ಬದ ದಿನ ಬೆಳಿಗ್ಗೆಯೇ ಒಂದು ನಿಗದಿತ ಸ್ಥಳದಲ್ಲಿ ಎಲ್ಲರೂ ಸೇರಿ ಚಪ್ಪರ ಹಾಕುತ್ತಾರೆ, ಸಾಮಾನ್ಯವಾಗಿ ಮೂರು ದಾರಿ ಕೂಡುವ ಸ್ಥಳವನ್ನು ಚಪ್ಪರ ಹಾಕಲು ಅಯ್ಕೆ ಮಾಡುತ್ತಾರೆ. ಚಪ್ಪರಕ್ಕೂ ಸಹ ಪಚ್ಚಾಡಿ ಕೊಂಬೆಗಳನ್ನು ಬಳಸುತ್ತಾರೆ. ಅಷ್ಟೊತ್ತಿಗೆ ಎಲ್ಲ ಮನೆಯವರೂ ಉಳಿಕೆ ಅಡುಗೆಯನ್ನು ತಂದು ಅಲ್ಲಿ ಹಾಕುವುದು ನಡೆದಿರುತ್ತದೆ. ರಾಗಿ ಗರಿಗಳನ್ನು ತುಂಡು-ತುಂಡಾಗಿ ಕತ್ತರಿಸಿ ಅದಕ್ಕೆ ಮೂರು ರೀತಿಯ ಬೂದಿಯ ಮಿಶ್ರಣದಲ್ಲಿ ಸ್ವಲ್ಪವನ್ನು ಬೆರೆಸಲಾಗುತ್ತದೆ. ಮೂರು ದಾರಿ ಕೂಡುವ ಸ್ಥಳದಲ್ಲಿ ಬೂದಿಯಿಂದ ಒಂದು ರಾಕ್ಷಸಾಕೃತಿಯನ್ನು ಬರೆಯುತ್ತಾರೆ. ಹಳ್ಳಿಗರ ಪ್ರಕಾರ ಅದು ಪುಂಡರೀಕಾಕ್ಷಿ ಎಂಬ ರಾಕ್ಷಸಿ. ಕೇವಲ ಊರಿನ ಮೂರು ದಾರಿ ಕೂಡುವಲ್ಲಲ್ಲದೆ ಆಯಾ ಹೊಲದವರು ತಮ್ಮ ಹೊಲಗಳಲ್ಲಿಯೂ ಸಹ ಈ ರಾಕ್ಷಸಿ ಚಿತ್ರವನ್ನು ಬರೆಯುತ್ತಾರೆ. ಹಾಗೂ ಊರಿನ ಬೇರೆ-ಬೇರೆ ಭಾಗಗಳಲ್ಲಿಯೂ ಸಹ ಚಿತ್ರ ಬರೆಯುವುದು ರೂಢಿ. ಇದೆಲ್ಲ ಮುಗಿಯುವ ಹೊತ್ತಿಗೆ ಬಲಿ ಕೊಡುವ ಮರಿಯನ್ನು ತಂದು ಅದಕ್ಕೆ ಪೂಜೆ ಮಾಡಿ ಚಪ್ಪರದ ಮುಂದೆ ನಿಲ್ಲಿಸಿ ಊರವರ ಅಪ್ಪಣೆ ಕೇಳಿ ಬಲಿ ಕೊಡಲಾಗುತ್ತದೆ. ಬಲಿ ಕೊಟ್ಟ ಪ್ರಾಣಿಯ ರಕ್ತವನ್ನು ಬೂದಿ ಮತ್ತು ರಾಗಿ ಗರಿ ಮಿಶ್ರಣದೊಂದಿಗೆ ಮತ್ತು ಉಳಿಕೆ ಅಡುಗೆಯೊಂದಿಗೆ ಬೆರೆಸುತ್ತಾರೆ. ಪ್ರತಿಯೊಂದು ಹೊಲದವರೂ ಒಂದೊಂದು ಬೋಕಿ ಬಿಂಚೆ (ಮಣ್ಣಿನ ಮಡಕೆಯ ಚೂರು) ಯನ್ನು ತಂದು ಹಿರಿಯರ ಕೈಲಿ ಆ ಚರಗವನ್ನು ಹಾಕಿಸಿಕೊಂಡು ತಮಗೆ ಎಷ್ಟು ಬೇಕೋ ಅಷ್ಟು ಪಚ್ಚಾಡಿ ಕೊಂಬೆಗಳನ್ನು ತೆಗೆದುಕೊಂಡು ಹೊರಡುತ್ತಾರೆ. ಕೈಯಲ್ಲೊಂದು ಹಾರೆಯೂ ಇರುತ್ತದೆ. ಇಬ್ಬರು ಮೂವರು ಗುಂಪಾಗಿ ಹೊರಟು ತಂತಮ್ಮ ಹೊಲಗಳಿಗೆ ಚರಗವನ್ನು ಚೆಲ್ಲುತ್ತಾ ಬಲಿಯೋ ಬಲಿ ಎಂದು ಕೂಗುತ್ತಾರೆ. ಹಾರೆಯಿಂದ ಒಂದು ದಸಿ ಹಾಕಿ ಪಚ್ಚಾಡಿ ಕೊಂಬೆಯನ್ನು ನೆಡುತ್ತಾರೆ, ಅಲ್ಲದೆ ರಾಕ್ಷಸಿ ಚಿತ್ರದ ಹೊಟ್ಟೆಯ ಭಾಗಕ್ಕೆ ಹಾರೆಯಿಂದ ತಿವಿಯುತ್ತಾರೆ. ಎಲ್ಲರೂ ತಂತಮ್ಮ ಹೊಲಗಳಿಗೆ ಈ ರೀತಿ ಮಾಡಿ ಊರಿಗೆ ಹಿಂತಿರುಗುತ್ತಾರೆ, ನಂತರ ಬಲಿ ಕೊಟ್ಟ ಮರಿಯನ್ನು ಕೊಯ್ದು ಪಾಲು ಮಾಡಿ ಗುಡ್ಡೆ ಹಾಕಿ ಎಲ್ಲರೂ ಹಂಚಿಕೊಳ್ಳುತ್ತಾರೆ. ಅಂದು ಎಲ್ಲರ ಮನೆಯಲ್ಲಿ ವಿಶೇಷ ಅಡುಗೆ. ಈ ಆಚರಣೆಗೆ ಹಸಿರುಬಲಿ, ಅತ್ತೆ ಮಳೆ ವಂಗಲು ಎಂಬ ಹೆಸರುಗಳೂ ಇವೆ. ಕೆಲವರು ಹಸಿರು ಬಲಿ ಮತ್ತು ಕರಿಬಂಟನ ಆಚರಣೆ ಬೆರೆ-ಬೇರೆ ಎನ್ನುತ್ತಾರಾದರೂ ಆಚರಿಸುವ ರೀತಿಯನ್ನು ನೋಡಿದರೆ ಹೆಚ್ಚು-ಕಡಿಮೆ ಒಂದೇ ರೀತಿ ಇರುತ್ತವೆ. ಒಟ್ಟಾರೆ ಈ ಆಚರಣೆಯಿಂದ ರಾಗಿ ಬೆಳೆಗೆ ಬರುವ ಇಲುಕೆ ರೋಗ (ಈiಟಿgeಡಿ ಃಟಚಿsಣ) ನಿವಾರಣೆಯಾಗುತ್ತದೆ ಎಂದು ರೈತಾಪಿಗಳ ದೃಢವಾದ ನಂಬಿಕೆ. ಅಲ್ಲದೆ ಹುಲುಸಾಗಿ ಬೆಳೆದ ಪ್ಶೆರಿಗೆ ನೋಡುಗರ ದೃಷ್ಟಿ ತಾಗದಿರಲಿ ಎಂಬ ಆಶಯವೂ ಇದರ ಹಿಂದಿದೆ. ಆಚರಣೆಯ ಹಿಂದಿನ ಜನಪದ ನಂಬಿಕೆ ಈ ಆಚರಣೆಯ ಕಾಲ, ಇಲ್ಲಿನ ವಿಧಿ ವಿಧಾನಗಳು, ಪಚ್ಚಾಡಿ ಕೊಂಬೆ ನೆಡುವಿಕೆ, ರಾಕ್ಷಸಿ ಚಿತ್ರ ಮುಂತಾದ ಕ್ರಿಯೆಗಳು ಕುತೂಹಲ ಮೂಡಿಸುತ್ತವೆ. ಈ ಎಲ್ಲವುಗಳಿಗೆ ಹಿನ್ನೆಲೆಯಾಗಿ ಒಂದು ಅದ್ಭುತವಾದ ಜಾನಪದ ಕಥೆಯಿದೆ. ಮೈಸೂರು ಸೀಮೆಯಲ್ಲಿ ಕರಿಭಂಟನ ಕುರಿತಾಗಿ ಅನೇಕ ಸಾಹಿತ್ಯ, ಕಥನ ಕಾವ್ಯಗಳು ಲಭ್ಯವಿವೆ, ಕರಿಬಂಟನ ಕಾಳಗ ಎಂಬ ಹೆಸರಿನ ಬಯಲು ನಾಟಕ, ಯಕ್ಷಗಾನಗಳೂ ಸಹ ಅಭಿನಯಿಸಲ್ಪಡುತ್ತವೆ. ಸಂಕ್ಷಿಪ್ತ ವಿವರಣೆಗಳನ್ನು ನೀಡುವುದಾರೆ… ಕರಿಬಂಟ ಒಬ್ಬ ರಾಜ. ಮಾರಭೂಪ ಮತ್ತು ಬಲವಂತದೇವಿಯವರ ಮಗ. ವೀರ, ಶೂರ. ಆತ ಒಮ್ಮೆ ಬಲ್ಲಾಳರಾಯನೆಂಬ ರಾಜನ ಮಗಳಾದ ಧರಣಿಮೋಹಿನಿ ಎಂಬಾಕೆಯನ್ನು ಮದುವೆಯಾಗುವ ಸಲುವಾಗಿ ತನ್ನ ರಾಜ್ಯದಿಂದ ಬಲ್ಲಾಳರಾಜನ ರಾಜ್ಯಕ್ಕೆ ಪ್ರಯಾಣ ಹೊರಡುತ್ತಾನೆ, ಹೊರಡುವಾಗ ಕೆಲವು ಅಪಶಕುನಗಳಾಗುತ್ತವೆ. ಆತನ ತಾಯಿ ಪ್ರಯಾಣ ಬೇಡವೆನ್ನುತ್ತಾಳೆ, ಅದಕ್ಕೊಪ್ಪದ ಕರಿಬಂಟ ಏಕಾಂಗಿಯಾಗಿ ದಾರಿಗೆ ಬುತ್ತಿ ಕಟ್ಟಿಸಿಕೊಂಡು ಹೊರಡುತ್ತಾನೆ. ಬಲ್ಲಾಳರಾಯನ ರಾಜ್ಯ ತಲುಪಲು ಒಂದು ಗೊಂಡಾರಣ್ಯವನ್ನು ದಾಟಬೇಕಾಗಿರುತ್ತದೆ. ಆ ಗೊಂಡಾರಣ್ಯದಲ್ಲಿ ಉದ್ದಂಡಿ ಎಂಬ ರಾಕ್ಷಸಿಯು ವಾಸವಾಗಿರುತ್ತಾಳೆ, ಆಕೆಗೆ ಬೊಮ್ಮ ಎಂಬ ತಮ್ಮನಿರುತ್ತಾನೆ. ಕಾಡೆಲ್ಲಾ ಇವರಿಬ್ಬರದೇ, ಭಯಂಕರ ರೂಪದ ಇವರು ಅಲ್ಲಿಗೆ ಬರುವ ಮನುಷ್ಯರನ್ನು ಹಿಡಿದು ತಿನ್ನುತ್ತಾ ಕಾಲ ಕಳೆಯುತ್ತಿರುತ್ತಾರೆ. ರಾಕ್ಷಸಿಗೆ ಒಬ್ಬ ಮಗಳಿರುತ್ತಾಳೆ. ಹೆಸರು ಪುಂಡರೀಕಾಕ್ಷಿ. ಅವಳೋ ಈ ಅಮ್ಮ ಮತ್ತು ತಮ್ಮನ ಸ್ವಭಾವ, ರೂಪಗಳಿಗೆ ತದ್ವಿರುದ್ದವಾದ ಗುಣದವಳು. ರೂಪ ಲಾವಣ್ಯವತಿ, ಸಾಧು ಸ್ವಭಾವ. ಕರಿಬಂಟನು ಈ ರಾಕ್ಷಸರ ಹಾವಳಿಯಿರುವ ಕಾಡನ್ನು ದಾಟಬೇಕಾದರೆ ರಾಕ್ಷಸಿಯ ಮಗಳಾದ ಪುಂಡರೀಕಾಕ್ಷಿ ಕಣ್ಣಿಗೆ ಬೀಳುತ್ತಾನೆ. ಕರಿಬಂಟನ ರೂಪಿಗೆ ಮನಸೋತು ಅವನನ್ನೇ ವರಿಸುವ ಆಸೆಯಿಂದ ಉಪಾಯ ಮಾಡಿ ತನ್ನ ಮನೆಗೆ ಕರೆತರುತ್ತಾಳೆ. ರಾತ್ರಿ ಮನೆಗೆ ಬಂದ ಉದ್ದಂಡಿ ರಾಕ್ಷಸಿ ತನ್ನ ಮನೆಯಲ್ಲಿ ನರಮಾನವರ ವಾಸನೆ ಅರಿತು ಮಗಳನ್ನು ಕೇಳುತ್ತಾಳೆ. ಮಗಳು ತನ್ನಾಸೆಯನ್ನು ಹೇಳಿಕೊಂಡಾಗ ತನ್ನ ತಮ್ಮನಿಗೇ ಮಗಳನ್ನು ಕೊಟ್ಟು ಮದುವೆ ಮಾಡಬೇಕೆಂದಿದ್ದ ರಾಕ್ಷಸಿ ಮನಸ್ಸಿನಲ್ಲೇ ಕ್ರೋಧಗೊಳ್ಳುತ್ತಾಳೆ, ಆದರೂ ಹೊರಗೆ ತೋರ್ಪಡಿಸದೆ ಮಗಳ ಆಸೆಗೆ ಸಮ್ಮತಿಸಿದಂತೆ ಮಾಡಿ, ಬೆಳಿಗ್ಗೆ ನಿಮ್ಮಿಬ್ಬರಿಗೂ ಮದುವೆ ಮಾಡಿಸುತ್ತೇನೆ, ಇಂದು ರಾತ್ರಿ ಅವನು ಬೊಮ್ಮನ ಜೊತೆ ಮಲಗಿರಲಿ ಈ ದಾರವನ್ನು ನಿನ್ನ ಗಂಡನಾಗುವವನ ಕಾಲಿಗೆ ಕಟ್ಟು ಎನ್ನುತ್ತಾಳೆ. ಆದರೆ ಅಮ್ಮನ ಈ ವರ್ತನೆಯನ್ನು ಅನುಮಾನಿಸುವ ಮಗಳು ದಾರವನ್ನು ಕರಿಬಂಟನಿಗೆ ಬದಲಾಗಿ ಬೊಮ್ಮನ ಕಾಲಿಗೆ ಕಟ್ಟುತ್ತಾಳೆ. ಅರ್ಧ ರಾತ್ರಿಯಲ್ಲಿ ಎದ್ದ ಉದ್ದಂಡಿ ರಾಕ್ಷಸಿ ದಾರ ಕಟ್ಟಿರುವ ಕಾಲಿನವನೇ ಕರಿಬಂಟನೆಂದು ತಿಳಿದು ತಮ್ಮನಾದ ಬೊಮ್ಮನನ್ನು ಸಿಗಿದು ಕೊಂದು ಹಾಕುತ್ತಾಳೆ. ಇದನ್ನು ಕಂಡ ಮಗಳು ಕರಿಬಂಟನನ್ನು ಎಬ್ಬಿಸಿ ನೀನು ಬದುಕಿರುವುದನ್ನು ನೋಡಿದರೆ ನಮ್ಮಮ್ಮ ನಿನ್ನನ್ನು ಬಿಡುವುದಿಲ್ಲ ಹೊರಟು ಹೋಗು ಎಂದು ಕಳಿಸಿಬಿಡುತ್ತಾಳೆ. ಬೆಳಿಗ್ಗೆ ಎದ್ದು ಮಹದಾನಂದದಿಂದ ತಮ್ಮನನ್ನು ಕಾಣಲು ಬಂದ ಉದ್ದಂಡಿ ರಾಕ್ಷಸಿ ಸತ್ತು ಬಿದ್ದಿರುವ ತಮ್ಮನನ್ನು ಕಾಣುತ್ತಾಳೆ, ಕ್ಷಣಾರ್ಧದಲ್ಲಿ ಆಕೆಗೆ ನಿಜಾಂಶ ತಿಳಿಯುತ್ತದೆ. ಕರಿಬಂಟನ ಮೇಲೆ ರಣಕೋಪಗೊಂಡು ಆತನನ್ನು ಸಾಯಿಸೇ ತೀರುತ್ತೇನೆಂದು ಯೋಜನಾ ವೇಗದಲ್ಲಿ ಧಾವಿಸುತ್ತಾಳೆ. ಆಕೆ ಕರಿಬಂಟನನ್ನು ಸಮೀಪಿಸುವಾಗ ಆತ ಒಂದು ಹಳ್ಳಿಯ ಬಳಿ ಹೋಗುತ್ತಿರುತ್ತಾನೆ. ಆಗ ರಾಕ್ಷಸಿ ಬಾಣಂತಿಯಂತೆ ವೇಷ ಧರಿಸಿ ಆ ಹಳ್ಳಿಯ ೭ ಜನ ಗೌಡರನ್ನು ಭೇಟಿ ಮಾಡಿ ಈತ ನನ್ನ ಗಂಡ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ, ಈತನನ್ನು ನನ್ನ ಜೊತೆ ಕಳಿಸಿಕೊಡಿ ಎಂದು ರೋಧಿಸುತ್ತಾಳೆ. ಆದರೆ ಕರಿಬಂಟ ಈಕೆ ಯಾರೆಂಬುದೇ ನನಗೆ ಗೊತ್ತಿಲ್ಲ ನನಗಿನ್ನು ಮದುವೆಯೇ ಆಗಿಲ್ಲ ಎಂದು ವಾದ ಮಾಡುತ್ತಾನೆ. ಇದರಿಂದ ಗೊಂದಲಗೊಂಡ ಹಳ್ಳಿಯ ಗೌಡರು ಒಂದು ಸಲಹೆ ನೀಡುತ್ತಾರೆ. ಏನೆಂದರೆ, ಇಂದು ರಾತ್ರಿ ಇಬ್ಬರೂ ಈ ದೇವಾಲಯದಲ್ಲಿ ತಂಗಿರಿ ಬೆಳಿಗ್ಗೆ ತೀರ್ಪು ನೀಡುತ್ತೇವೆ ಎಂದು ಹೇಳುತ್ತಾರೆ. ಅರ್ಧ ರಾತ್ರಿಯಲ್ಲಿ ತನ್ನ ನಿಜ ಸ್ವರೂಪ ತಾಳಿದ ರಾಕ್ಷಸಿ ಕರಿಬಂಟನನ್ನು ಕೊಂದು ದೇವಾಲಯದ ಸೂರನ್ನು ಮುರಿದುಕೊಂಡು ಪರಾರಿಯಾಗುತ್ತಾಳೆ. ಬೆಳಿಗ್ಗೆ ಬಂದ ಗೌಡರು ಸತ್ತು ಬಿದ್ದಿರುವ ಕರಿಬಂಟನನ್ನು ಕಂಡು ಹೌಹಾರುತ್ತಾರೆ, ತಾವೇ ಕೈಯಾರ ಕರಿಬಂಟನನ್ನು ಕೊಂದಂತಾಯಿತಲ್ಲಾ ಎಂದು ಮರುಗಿದ ಅವರು ಅದಕ್ಕೆ ಪಶ್ಚಾತ್ತಾಪ ಕ್ರಮವಾಗಿ ಸಾಮೂಹಿಕ ಅಗ್ನಿಪ್ರವೇಶಕ್ಕೆ ಊರ ಹೊರಗೆ ಕುಂಡ ಸಿದ್ದಪಡಿಸಿ ಒಬ್ಬೊಬ್ಬರಾಗಿ ಎಲ್ಲರೂ ಅಗ್ನಿಪ್ರವೇಶಿಸುತ್ತಾರೆ. ತನ್ನಿಂದಾಗಿ ಕರಿಬಂಟ ಸತ್ತನೆಂಬ ಕಾರಣದಿಂದ ರಾಕ್ಷಸಿಯ ಮಗಳು ಪುಂಡರೀಕಾಕ್ಷಿಯೂ ಸಹ ಬೆಂಕಿಗೆ ಹಾರುತ್ತಾಳೆ, ಬಲ್ಲಾಳರಾಯನ ಮಗಳಾದ ಧರಣಿಮೋಹಿನಿಯು ತನ್ನನ್ನು ಮದುವೆಯಾಗಲು ಬಂದಿದ್ದರಿಂದಲೇ ಕರಿಬಂಟ ಸಾವಿನ ದವಡೆಗೆ ಹೋಗಬೇಕಾಯಿತೆಂದು ಭಾವಿಸಿ ಅವಳೂ ಸಹ ಬಂದು ಬೆಂಕಿಗೆ ಹಾರುತ್ತಾಳೆ. ಆಗ ಶಿವ-ಪಾರ್ವತಿಯರು ಪ್ರತ್ಯಕ್ಷವಾಗಿ ಕರಿಬಂಟನ ಸಮೇತ ಎಲ್ಲರನ್ನೂ ಬದುಕಿಸುತ್ತಾರೆ. ಊರ ೭ ಜನ ಗೌಡರ ಪ್ರಾಮಾಣಿಕತೆ ಎಲ್ಲರ ಜೀವ ಉಳಿಯಲು ಕಾರಣವಾಗುತ್ತದೆ. ಆದರೆ ಇದರಿಂದ ಕೆರಳಿದ ರಾಕ್ಷಸಿ ಗೌಡರ ಮೇಲೆ ಕೋಪಗೊಂಡು ತಾನು ಪ್ರತಿ ವರ್ಷ ರೋಗವಾಗಿ ಬಂದು ಹಳ್ಳಿಗರ ಬೆಳೆ ಹಾಳು ಮಾಡುವುದಾಗಿ ಶಪಥ ಮಾಡುತ್ತಾಳೆ, ಆಗ ಕರಿಬಂಟ ತನ್ನಿಂದಾಗಿ ಹಳ್ಳಿಗರಿಗೆ ಈ ಸ್ಥಿತಿ ಬಂದೊದಗಿತಲ್ಲಾ ಎಂದುಕೊಂಡು ತಾನು ಪಚಾಡಿ ಮರವಾಗಿ ಹುಟ್ಟಿ ರೈತರ ಹೊಲದಲ್ಲಿ ನಿಂತು ರೋಗ-ರುಜಿನಗಳಿಂದ ಬೆಳೆ ರಕ್ಷಿಸುವುದಾಗಿ ಪಣ ತೊಡುತ್ತಾನೆ. ಇದು ಕರಿಬಂಟನ ಆಚರಣೆಯ ಹಿಂದಿನ ಕತೆ. ಭತ್ತದ ಗದ್ದೆಗೆ ಗೊಡ್ಡೀಚಲು ಗರಿ ಇಡುವುದು ಕರ್ನಾಟಕದ ಕನಕಪುರ, ಆನೇಕಲ್ ಪ್ರದೇಶಗಳಲ್ಲಿ ಪ್ರಚಲಿತವಿರುವ ವಿಶಿಷ್ಟ ಆಚರಣೆ ಗೊಡ್ಡೀಚಲು ಗಿಡದ ಕೊಂಬೆ ನೆಡುವುದು. ಭತ್ತದ ಗದ್ದೆ ನಾಟಿ ಮಾಡಿದ ೨೦ ದಿವಸ ಅಥವಾ ಒಂದು ತಿಂಗಳಿಗೆ ಇದನ್ನು ಮಾಡಲಾಗುತ್ತದೆ. ರೈತರು ಹೆಚ್ಚಾಗಿ ಮುಂಗಾರು ಹಂಗಾಮಿನ ಭತ್ತದ ತಾಕಿಗೆ ಈ ಆಚರಣೆ ಮಾಡುವುದು ರೂಢಿ. ಸಾಮಾನ್ಯವಾಗಿ ಮಗೆ (ಮಖಾ) ಮಳೆಯ ಅವಧಿಯಲ್ಲಿ ಇದರ ಆಚರಣೆಯನ್ನು ಕಾಣಬಹುದು. ಒಂದು ಗೊತ್ತಾದ ದಿನ ಹಳ್ಳಿಯ ಎಲ್ಲರೂ ಹೊತ್ತಿಗೆ ಮುಂಚೆ ಹತ್ತಿರದ ಗುಡ್ಡಗಳಿಗೆ ಹೋಗಿ ಈಚಲು ಗರಿಗಳನ್ನು ತಂದು ತಮ್ಮ-ತಮ್ಮ ಗದ್ದೆಗಳಿಗೆ ನೆಡುತ್ತಾರೆ. ಸಾಮಾನ್ಯವಾಗಿ ಎಕರೆಗೆ ನಾಲ್ಕೈದು ಗರಿ ನೆಡುವುದು ವಾಡಿಕೆ. ಹೀಗೆ ನೆಟ್ಟ ಗರಿಗಳು ಬಹಳ ದಿವಸದವೆರೆಗೂ ಹಸಿರಾಗೇ ಇರುತ್ತವೆ. ಈ ಗರಿಗಳಲ್ಲಿ ಔಷಧೀಯ ಗುಣವಿದ್ದು ಅದು ಗಾಳಿಯ ಮೂಲಕ ಹಾದು ಭತ್ತದ ಪೈರುಗಳಿಗೆ ಸೋಕಿ ರೋಗ ನಿವಾರಣೆಯಾಗುತ್ತದೆ ಎನ್ನುತ್ತಾರೆ ರೈತರು. ಗರಿಗಳು ೧೫ ರಿಂದ ೨೦ ದಿವಸದ ನಂತರ ತುದಿಯ ಭಾಗದಿಂದ ಸ್ವಲ್ಪ-ಸ್ವಲ್ಪವೇ ಒಣಗುತ್ತಾ ಬರುತ್ತವೆ. ಗರಿಗಳು ಹೀಗೆ ಒಣಗಿದಂತೆ ಭತ್ತದ ಗದ್ದೆಯ ರೋಗವೂ ನಿಧಾನವಾಗಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಗದ್ದೆಗೆ ಗರಿಗಳನ್ನು ನೆಟ್ಟ ನಂತರ ಕೆಲವರು ಕೋಳಿಯನ್ನು ಸುಟ್ಟು ಗದ್ದೆಯ ಸುತ್ತಲೂ ಬರುತ್ತಾರೆ. ಅದರ ಹೊಗೆ ಭತ್ತದ ಪೈರುಗಳಿಗೆ ಸೋಕಿದರೆ ರೋಗ-ಕೀಟಗಳು ಬೇಗ ವಾಸಿಯಾಗುತ್ತವೆಯಂತೆ. ಕೆರೆ ಹಿಂಭಾಗದಲ್ಲಿ ಗದ್ದೆಯಿರುವವರು ಒಟ್ಟಾಗಿ ಕಪ್ಪು ಬಣ್ಣದ ಹಂದಿಯನ್ನು ಸುಟ್ಟು ಈ ರೀತಿ ಸುತ್ತು ಹಾಕುತ್ತಾರೆ. ಗೊಡ್ಡೀಚಲು ಗಿಡ ಈಚಲು ಜಾತಿಗೆ ಸೇರಿದ ಸಸ್ಯ. ಕಾಡು, ಬಯಲುಗಳಲ್ಲಿ ಬೆಳೆಯುತ್ತದೆ. ಇದರ ಗರಿಗಳು ಈಚಲು ಗರಿಗಳನ್ನೇ ಹೋಲುತ್ತವೆ. ಆದರೆ ಈಚಲು ಗರಿಗಳಿಗಿರುವಂತೆ ತುದಿಯಲ್ಲಿ ಚೂಪಾದ ಮುಳ್ಳುಗಳಿರುವುದಿಲ್ಲ, ಮತ್ತು ಈಚಲು ಗರಿಗಳಿಗಿಂತ ಗಾಢ ಹಸಿರು ಹಾಗೂ ಮೃದುವಾಗಿರುತ್ತವೆ. ನಗರಗಳಲ್ಲಿ ಮನೆಯ ಮುಂದೆ ಫ಼್ಯಾಷನ್‌ಗಾಗಿ ಗೊಡ್ಡೀಚಲು ಗಿಡಗಳನ್ನು ಹಾಕಿಕೊಂಡಿರುತ್ತಾರೆ. ಕಡ್ಲೆ ಕಾಯಿ ಹೊಲದಲ್ಲಿ ಕರಡಿ ಬೂತಪ್ಪ ಕಡ್ಲೆಕಾಯಿ (ಶೇಂಗಾ) ಬೆಳೆಯುವ ಪ್ರದೇಶದಲ್ಲಿ ಕಂಡುಬರುವ ಆಚರಣೆ. ಹೊಲಕ್ಕೆ ಬಿತ್ತಿದ ಕಡ್ಲೆಕಾಯಿ ಹೊಲಕ್ಕೆ ಕರಡಿಗಳು ಧಾಳಿ ಮಾಡಿ ಬೆಳೆ ಹಾಳು ಮಾಡದಿರಲಿ ಎಂಬ ಆಶಯದಿಂದ ಆಚರಿಸಲಾಗುತ್ತದೆ. ಕಡ್ಲೆ ಕಾಯಿ ಮುಖ್ಯ ಬೆಳೆಯಾದ ತುಮಕೂರು, ಹಿರಿಯೂರು ಭಾಗದಲ್ಲಿ ಕರಡಿಗಳು ವಿಪರೀತ. ಇವು ಕಡ್ಲೆ ಬೀಜವನ್ನು ಹೊಲಕ್ಕೆ ಬಿತ್ತಿದ ಎರಡು-ಮೂರು ದಿವಸಕ್ಕೇ ಹೊಲಕ್ಕೆ ಧಾಳಿ ಇಡುತ್ತವೆ, ಇನ್ನೂ ಮೊಳಕೆಯಾಗದೆ ಇರುವ ಬೀಜಗಳನ್ನು ಮೂತಿಯಲ್ಲಿ ಮಣ್ಣು ಬಗೆದು ಆರಿಸಿ ತಿನ್ನುತ್ತವೆ. ಸಾಲು ಹಿಡಿದು ತಿನ್ನುತ್ತಾ ಹೋಗುವುದರಿಂದ ಅಷ್ಟು ಜಾಗ ಖಾಲಿ ಬೀಳುತ್ತದೆ. ಇದಲ್ಲದೆ ಕಡ್ಲೆ ಗಿಡದಲ್ಲಿ ಕಾಯಿ ಬಲಿತ ಹೊತ್ತಿಗೆ ಮತ್ತೆ ಧಾಳಿ ಶುರು. ಗಿಡವನ್ನು ಅನಾಮತ್ ಹೊರಳಿಸಿ ಕಾಯಿಗಳನ್ನು ಅಲ್ಲೇ ಕಡಿದು ಬೀಜ ತಿನ್ನುತ್ತವೆ. ಗಿಡ ಹಸಿರಾಗೇ ಇದ್ದರೂ ಸಹ ಬುಡದಲ್ಲಿ ಕಾಯಿ ಇರುವುದಿಲ್ಲ. ಈ ಕರಡಿಗಳ ನಿಯಂತ್ರಣಕ್ಕಾಗೇ ಕರಡಿ ಭೂತಪ್ಪನ ಆಚರಣೆ ಮಾಡುತ್ತಾರೆ. ಹೊಲಕ್ಕೆ ಬೀಜ ಬಿತ್ತಿದ ಹತ್ತು ಹದಿನೈದು ದಿವಸದಲ್ಲಿ ಇದನ್ನು ನೆರವೇರಿಸಲಾಗುತ್ತದೆ. ಅದರ ವಿಧಾನ ಹೀಗಿದೆ. ಕಡ್ಲೆ ಬೀಜಗಳನ್ನು ಹುರಿದು ತಂಬಿಟ್ಟು ಆರತಿ ಮಾಡಿಕೊಂಡು ಹೊಲಕ್ಕೆ ಹೋಗುತ್ತಾರೆ. ಅಲ್ಲಿ ಪೂಜೆ ಮಾಡಿ ತಂಬಿಟ್ಟಿನ ಆರತಿಯನ್ನು ಕರಡಿಗಳು ಹೆಚ್ಚಾಗಿ ಯಾವ ದಿಕ್ಕಿನಿಂದ ಬರುತ್ತವೆಯೋ ಆ ದಿಕ್ಕಿಗೆ ಬೆಳಗುತ್ತಾರೆ. ನಮ್ಮ ಹೊಲ ಹಾಳು ಮಾಡಬೇಡ ಸ್ವಾಮಿ ಎಂದು ಹೇಳುತ್ತಾ ಸಣ ಮಾಡುತ್ತಾರೆ. ತಂಬಿಟ್ಟನ್ನು ಬಂದವರಿಗೆಲ್ಲ ಹಂಚಿ ಮನೆಗೆ ತೆರಳುತ್ತಾರೆ. ಯಾರು ಕರಡಿ ಭೂತಪ್ಪನನ್ನು ಮಾಡಿರುತ್ತಾರೋ ಅವರ ಹೊಲಕ್ಕೆ ಕರಡಿಗಳು ಹಾನಿ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಅಂಗನವಾಡಿ ಸ್ಟ್ರೈಕುಗಳ ಪ್ರವಾಸ ಕಥನ ಗರಗದ ಮಡಿವಾಳಪ್ಪನ ಜಾತ್ರೆಯಲ್ಲಿ ಕಂಡ ಚಿತ್ರಗಳು
"2017-05-23T18:38:34"
http://kannadajaanapada.blogspot.com/2015/02/
'ಬಿಬಿಎಂಪಿ ಮೇಯರ್‌ ಗೌತಮ್‌ಕುಮಾರ್‌ RSSನ ಅಜೆಂಡಾದಂತೆ ವರ್ತನೆ' | Members of the Opposition Held Protest in BBMP Bengaluru, First Published 4, Mar 2020, 8:25 AM IST ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಿಷೇಧಕ್ಕೆ ಕಿಡಿ| ಬಿಜೆಪಿ ನಿರ್ಣಯಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಕೆಂಡಾಮಂಡಲ| ಆಯುಕ್ತರ ಉತ್ತರಕ್ಕೂ ಬಗ್ಗದ ಪ್ರತಿಪಕ್ಷಗಳು| ಬೆಂಗಳೂರು(ಮಾ.04): ನಗರದ ಸರ್‌.ಪುಟ್ಟಣ್ಣ ಚೆಟ್ಟಿ ಪುರಭವನದ (ಟೌನ್‌ಹಾಲ್‌) ಮುಂಭಾಗ ಪ್ರತಿಭಟನೆ ನಿಷೇಧಿಸಿ ಬಿಬಿಎಂಪಿ ಆಡಳಿತ ಪಕ್ಷ ಬಿಜೆಪಿಯ ನಿರ್ಣಯ ವಿರೋಧಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಮಂಗಳವಾರ ಮೇಯರ್‌ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಸಾಮಾನ್ಯ ಸಭೆ ಆರಂಭವಾಗುತ್ತಿದಂತೆ ಸಭಾಂಗಣದ ಒಳಗೆ ಪ್ರತಿಪಕ್ಷಗಳ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸುತ್ತಾ ಮೇಯರ್‌ ಪೀಠದ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಮೇಯರ್‌ ಎಂ.ಗೌತಮ್‌ಕುಮಾರ್‌ ಅವರು ಆರ್‌ಎಸ್‌ಎಸ್‌ನ ಅಜೆಂಡಾದಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರತಿಭಟನೆ ಮಾಡುವವರನ್ನು ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಮಾತನಾಡಿ, ಪುರಭವನದ ಮುಂದೆ ಪ್ರತಿಭಟನೆ ಮಾಡಬಾರದು ಎಂದು ಸ್ವಯಂ ಪ್ರೇರಿತವಾಗಿ ನಿರ್ಣಯ ಅಂಗೀಕಾರ ಮಾಡಲಾಗಿದೆ. ಪೊಲೀಸ್‌ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಏನಿದೆ? ನಿರ್ಣಯದ ಬಗ್ಗೆ ಕಾನೂನು ಕೋಶದ ಅಧಿಕಾರಿಗಳಿಂದ ಉತ್ತರ ಕೊಡಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಎಂ.ಗೌತಮ್‌ಕುಮಾರ್‌, ಬಿಬಿಎಂಪಿ ಆಯುಕ್ತರು ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂದರೂ, ವಿರೋಧ ಪಕ್ಷದ ಸದಸ್ಯರು ಸುಮ್ಮನಾಗಲಿಲ್ಲ. ಆಯುಕ್ತರಿಂದ ಉತ್ತರ ಬೇಡ, ಕಾನೂನು ಕೋಶದ ಮುಖ್ಯಸ್ಥರಿಂದಲೇ ಕೊಡಿಸಿ ಎಂದು ಆಗ್ರಹಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ಉಂಟಾಯಿತು. ಈ ನಡುವೆಯೇ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿ, ಪುರಭವನದ ಮುಂದೆ ಪ್ರತಿಭಟನೆ ನಡೆಸುವುದರಿಂದ ಇಲ್ಲಿನ ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತಿದೆ. ಪಾಲಿಕೆಯ ಆದಾಯವೂ ಕಡಿಮೆಯಾಗಿದೆ. ಪೊಲೀಸ್‌ ಆಯುಕ್ತರೊಂದಿಗೂ ಚರ್ಚೆ ಮಾಡಲಾಗಿದೆ. ಪ್ರತಿಭಟನೆಗೆ ಸ್ವಾತಂತ್ರ್ಯ ಉದ್ಯಾನ, ಮೌರ್ಯವೃತ್ತದಲ್ಲಿ ಅವಕಾಶವಿದೆ. ನಿರ್ಣಯ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು. ಆಯುಕ್ತರ ಉತ್ತರಕ್ಕೆ ಸಮಾಧಾನಗೊಳ್ಳದ ವಿರೋಧ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ಮೇಯರ್‌ ಸಭೆಯನ್ನು ಭೋಜನ ವಿರಾಮಕ್ಕೆ ಮುಂದೂಡಿದರು. ನಿಲುವಳಿ ಮಂಡನೆ, ಚರ್ಚೆಗೆ ಅವಕಾಶ ನೀಡದ ಮೇಯರ್‌: ಮತ್ತೆ ಸಭೆ ಆರಂಭವಾಗುತ್ತಿದಂತೆ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಹಾಗೂ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಅವರು ಪುರಭವನದ ಮುಂದೆ ಪ್ರತಿಭಟನೆ ವಿಚಾರವಾಗಿ ನಿಲುವಳಿ ಮಂಡಿಸಿದರು. ಆದರೆ ಮೇಯರ್‌ ನಿಲುವಳಿಯನ್ನು ತಿರಸ್ಕರಿಸಿರುವುದಾಗಿ ಘೋಷಿಸಿದರು. ಮೇಯರ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು ನಿರ್ಣಯ ಪ್ರತಿಯನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದರು. ಸಭಾಂಗಣದಲ್ಲಿ ಭಿತ್ತಿಪತ್ರ ಪ್ರದರ್ಶನ ಸರ್‌.ಪುಟ್ಟಣ್ಣಚೆಟ್ಟಿಪುರಭವನದ ಎದುರು ಪ್ರತಿಭಟನೆಗೆ ನಿಷೇಧ ಹೇರಿರುವುದನ್ನು ವಿರೋಧಿಸುವ ಬರಹವುಳ್ಳ ಭಿತ್ತಿಪತ್ರಗಳನ್ನು ಪ್ರತಿಪಕ್ಷದ ಸದಸ್ಯರು ಕೆಂಪೇಗೌಡ ಪೌರಸಭಾಂಗಣದ ಒಳಗೆ ತೆಗೆದುಕೊಂಡು ಬಂದಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಹಾಗೂ ಮೇಯರ್‌ ಆಕ್ಷೇಪ ವ್ಯಕ್ತಪಡಿಸಿದರು. ಭಿತ್ತಿಪತ್ರ ಪ್ರದರ್ಶಿಸದಂತೆ ಮೇಯರ್‌ ಸೂಚನೆ ನೀಡಿದರೂ ವಿರೋಧ ಪಕ್ಷದ ಸದಸ್ಯರು ಕೇಳಲಿಲ್ಲ. ಹೀಗಾಗಿ, ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಭಿತ್ತಿಪತ್ರ ಕಿತ್ತುಕೊಳ್ಳುವಂತೆ ಕೌನ್ಸಿಲ್‌ ಅಧಿಕಾರಿ- ಸಿಬ್ಬಂದಿಗೆ ಸೂಚನೆ ನೀಡಿದರು. ಆದರೆ, ಕೌನ್ಸಿಲ್‌ ಅಧಿಕಾರಿಗಳು ಇದಕ್ಕೆ ಹಿಂದೇಟು ಹಾಕಿದರು.
"2020-03-31T14:40:07"
https://kannada.asianetnews.com/karnataka-districts/members-of-the-opposition-held-protest-in-bbmp-q6net2
ಹಟ್ಟಿಚಿನ್ನದಗಣಿ Archives · Page 2 of 3 · VIJAYAVANI - ವಿಜಯವಾಣಿ Raichur January 6, 2019 7:47 PM Baik AccidentHosuru CrossHuttichinnadaganiInjuryRaichurಡಿಕ್ಕಿನಾಲ್ವರು ಗಾಯರಾಯಚೂರುಹಟ್ಟಿಚಿನ್ನದಗಣಿಹೊಸೂರು ಕ್ರಾಸ್‌ ಬೆಳ್ಳಂಬೆಳಗ್ಗೆ ಮಟ್ಕಾ ಬುಕ್ಕಿಗಳ ಮನೆ ಮೇಲೆ ದಾಳಿ Raichur December 31, 2018 5:27 PM HouseHuttichinnadaganiMatca BookiePolice raidRaichurSubdivision officer Saranabassappa H. Subedarಉಪವಿಭಾಗಾಧಿಕಾರಿಪೊಲೀಸರ ದಾಳಿಮಟ್ಕಾ ಬುಕ್ಕಿಮನೆರಾಯಚೂರುವಿ.ಬಿ. ಹಿರೇಮಠವೃತ್ತ ನಿರೀಕ್ಷಕಶರಣಬಸ್ಸಪ್ಪ ಎಚ್.ಸುಬೇದಾರ್ಹಟ್ಟಿಚಿನ್ನದಗಣಿ ಹಟ್ಟಿಚಿನ್ನದಗಣಿ (ರಾಯಚೂರು): ಮಟ್ಕಾ ಅಡ್ಡ ಹಾಗೂ ಬುಕ್ಕಿಗಳ ಮನೆಗಳ ಮೇಲೆ ಸೋಮವಾರ ಬೆಳಗ್ಗೆ ಉಪವಿಭಾಗಾಧಿಕಾರಿ ಶರಣಬಸ್ಸಪ್ಪ ಎಚ್.ಸುಬೇದಾರ್, ವೃತ್ತ ನಿರೀಕ್ಷಕ ವಿ.ಬಿ. ಹಿರೇಮಠ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದರು. ಕಾಂಗ್ರೆಸ್ ಮುಖಂಡರಾದ ನಿಂಗಪ್ಪ… View More ಬೆಳ್ಳಂಬೆಳಗ್ಗೆ ಮಟ್ಕಾ ಬುಕ್ಕಿಗಳ ಮನೆ ಮೇಲೆ ದಾಳಿ ಡಿಸೇಲ್ ಸೋರಿಕೆ, ಸಿಮೆಂಟ್ ಲಾರಿ ಕರಕಲು Raichur December 18, 2018 5:54 PM Cement lorryDisel LeakFireHuttichinnadaganiLacincheri CrossMeltRaichurಕರಕಲುಡಿಸೇಲ್ ಸೋರಿಕೆರಾಯಚೂರುಲೇಕಿಂಚೇರಿ ಕ್ರಾಸ್‌ಸಿಮೆಂಟ್ ಲಾರಿಹಟ್ಟಿಚಿನ್ನದಗಣಿ ಹಟ್ಟಿಚಿನ್ನದಗಣಿ(ರಾಯಚೂರು): ಬಿದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಗುರುಗುಂಟಾ ಸಮೀಪದ ಲೇಕಿಂಚೇರಿ ಕ್ರಾಸ್‌ಬಳಿ ಲಾರಿಯ ಡಿಸೇಲ್ ಸೋರಿ ಬೆಂಕಿ ತಗುಲಿದ್ದರಿಂದ ಲಾರಿ ಹಾಗೂ ಸಿಮೆಂಟ್ ಸೋಮವಾರ ರಾತ್ರಿ ಸುಟ್ಟಿದೆ. ಸೇಡಂನಿಂದ ಹುಬ್ಬಳ್ಳಿಗೆ ಸಿಮೆಂಟ್ ತುಂಬಿಕೊಂಡು ಹೊರಟಿದ್ದ ಲಾರಿಯ… View More ಡಿಸೇಲ್ ಸೋರಿಕೆ, ಸಿಮೆಂಟ್ ಲಾರಿ ಕರಕಲು Raichur September 16, 2018 5:55 PM bill collectorGazzalakatta GPhutti gold minesToilet ConstrctionWage reductionಕರವಸೂಲಿಗಾರಗೆಜ್ಜಲಗಟ್ಟಾ ಗ್ರಾಪಂವೇತನ ಕಡಿತಶೌಚಗೃಹ ನಿರ್ಮಾಣಹಟ್ಟಿಚಿನ್ನದಗಣಿ ಕಾರ್ಮಿಕರ ಸೌಲಭ್ಯ ಮತ್ತಷ್ಟು ವಿಳಂಬ Raichur August 25, 2018 7:53 PM Bonus delayDirectors meetingHutti Glod MineWorkers New wagesನಿರ್ದೇಶಕ ಮಂಡಳಿ ಸಭೆಬೋನಸ್ ವಿಳಂಬಹಟ್ಟಿಚಿನ್ನದಗಣಿಹೊಸ ವೇತನ ಹಟ್ಟಿಚಿನ್ನದಗಣಿ : ಚಿನ್ನದಗಣಿ ಕಂಪನಿ ನಿರ್ದೇಶಕ ಮಂಡಳಿ ಸಭೆ ಆ.31ಕ್ಕೆ ಮುಂದೂಡಿರುವುದರಿಂದ ಕಾರ್ಮಿಕರ ಹೊಸ ವೇತನ ಒಪ್ಪಂದ ಜಾರಿ ಹಾಗೂ ಬೋನಸ್ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ನಿರ್ದೇಶಕ ಮಂಡಳಿ ಒಪ್ಪಿಗೆ ಇಲ್ಲದೆ ಸ್ಥಳೀಯ ಕಂಪನಿ… View More ಕಾರ್ಮಿಕರ ಸೌಲಭ್ಯ ಮತ್ತಷ್ಟು ವಿಳಂಬ ಪಿಕಪ್ ವಾಹನ ಪಲ್ಟಿ, ನಾಲ್ವರಿಗೆ ಗಾಯ Raichur July 25, 2018 5:33 PM 4 people InjurisHutti GoldmineRoad Accidentನಾಲ್ವರಿಗೆ ಗಾಯಪಿಕಪ್ ವಾಹನ ಪಲ್ಟಿಹಟ್ಟಿಚಿನ್ನದಗಣಿ ಹಟ್ಟಿಚಿನ್ನದಗಣಿ: ಗುರುಗುಂಟಾ ಬಳಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾಗಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರು ಗಂಗಾವತಿ ತಾಲೂಕಿನ ಬುಕನಟ್ಟಿ ಗ್ರಾಮದವರು. ನಾಲ್ವರಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಲಿಂಗಸುಗೂರಿನ… View More ಪಿಕಪ್ ವಾಹನ ಪಲ್ಟಿ, ನಾಲ್ವರಿಗೆ ಗಾಯ
"2019-04-24T21:55:02"
https://www.vijayavani.net/tag/%E0%B2%B9%E0%B2%9F%E0%B3%8D%E0%B2%9F%E0%B2%BF%E0%B2%9A%E0%B2%BF%E0%B2%A8%E0%B3%8D%E0%B2%A8%E0%B2%A6%E0%B2%97%E0%B2%A3%E0%B2%BF/page/2/
ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ - ವಿಕಿಪೀಡಿಯ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ೧ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ೧.೧ ವೈಯುಕ್ತಿಕ ಮಾಹಿತಿ ೧.೨ ಶೈಕ್ಷಣಿಕ ಸೇವೆ ೧.೩ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಾಚರಣೆಗಳು ೧.೪ ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್ ೧.೫ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರಚಿಸಿದ ಕೃತಿಗಳು ೧.೬ ಅರಬಿಕ್ ಕೃತಿಗಳು ೧.೭ ಇಂಗ್ಲಿಷ್ ಕೃತಿಗಳು ೧.೮ ಗೌರವಗಳು, ಪ್ರಶಸ್ತಿಗಳು ಮತ್ತು ಅಂತರಾಷ್ಟ್ರೀಯ ಮನ್ನಣೆ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್[ಬದಲಾಯಿಸಿ] ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್[೧] ಇವರನ್ನು ಶೈಖ್ ಅಬೂಬಕ್ಕರ್ ಅಹ್ಮದ್, ಎ.ಪಿ ಉಸ್ತಾದ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇವರು ಭಾರತದ ಎ. ಪಿ ಪಂಗಡ ಸುನ್ನಿಮುಸ್ಲಿಂ ಮುಖಂಡರಾಗಿದ್ದಾರೆ. ಭಾರತದ ಗ್ರಾಂಡ್ ಮುಫ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುತ್ತದೆ. (ಭಾರತೀಯ ಎ.ಪಿ ಸುನ್ನೀ ಮುಸ್ಲಿಮರ ಪರಮೋನ್ನತ ನಾಯಕ) ಅಖಿಲ ಭಾರತ ಮುಸ್ಲಿಂ ವಿದ್ವಾಂಸರ ಸಂಘದ ಪ್ರಧಾನ ಕಾರ್ಯದರ್ಶಿ (ಅಖಿಲ ಭಾರತ ಸುನ್ನಿ ಜಂ-ಇಯ್ಯತುಲ್ ಉಲಮಾ) ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಮತ್ತು ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್.ಎಸ್.ಎಫ್) ಇದರ ನಿರ್ದೇಕರು. ಎರಡು ಸಾವಿರದಷ್ಟು ಮದ್ರಸಗಳಿಗೆ ನೇತೃತ್ವ ನೀಡುವ ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾದ ಕೋಶಾಧಿಕಾರಿ ಹಾಗೂ ಕೇರಳದ ಕೋಯಿಕ್ಕೋಡಿನ ಕಾರಂದೂರಿನಲ್ಲಿರುವ ಮರ್ಕಝ್[೨] ವಿಶ್ವವಿದ್ಯಾನಿಲಯದ ಸ್ಥಾಪಕರು ಮತ್ತು ಕುಲಪತಿಯಾಗಿದ್ದಾರೆ. ವೈಯುಕ್ತಿಕ ಮಾಹಿತಿ[ಬದಲಾಯಿಸಿ] ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್[೩] ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕಾಂತಪುರಂ ಎಂಬಲ್ಲಿ 22 ಮಾರ್ಚ್ 1939ರಲ್ಲಿ ಜನಿಸಿದರು. ಇವರ ಪತ್ನಿ ಝೈನಬ. ಮಗ ಡಾ.ಎಪಿ ಅಬ್ದುಲ್ ಹಕೀಮ್ ಅಝ್ಹರಿ. ತಾಯಿಯ ಕುನ್ಹೀಮ ಹಜ್ಜುಮ್ಮ. ತಂದೆ ಮೌತರಯಿಲ್ ಅಹ್ಮದ್ ಹಾಜಿ. ತಮಿಳುನಾಡಿನ ವೆಲ್ಲೂರಿನ ಬಾಕಿಯಾತು ಸ್ವಾಲಿಯಾತು ಕಾಲೇಜಿನಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಇವರು ಬಾಖವಿ ಬಿರುದನ್ನು ಪಡೆದಿದ್ದಾರೆ. ಶೈಕ್ಷಣಿಕ ಸೇವೆ[ಬದಲಾಯಿಸಿ] ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮರ್ಕಝ್[೪] ವಿಶ್ವವಿದ್ಯಾನಿಯ ಕೇಂದ್ರವಾಗಿಟ್ಟುಕೊಂಡು ದೇಶ-ವಿದೇಶಗಳಲ್ಲಿ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಮರ್ಕಝ್ ನಾಲೆಡ್ಜ್ ಸಿಟಿ[೫], ಮರ್ಕಝ್ ಯುನಾನಿ ವೈದ್ಯಕೀಯ ಕಾಲೇಜು, ಮರ್ಕಝ್ ಕಾನೂನು ಮಹಾ ವಿದ್ಯಾಲಯ ಇವರ ಪ್ರಮುಖ ಸಂಸ್ಥೆಗಳು. ದೇಶ-ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯೊಂದಿಗೆ ತೊಡಗಿಸಿಕೊಂಡಿದ್ದಾರೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಾಚರಣೆಗಳು[ಬದಲಾಯಿಸಿ] ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕೇರಳದ ಮುಸಲ್ಮಾನರ ಪ್ರಭಾವಿ ನಾಯಕ. ಅವರು ದೇಶ ಮತ್ತು ವಿದೇಶಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಕೇರಳದ ಕೋಯಿಕ್ಕೋಡಿನ ಕಾರಂದೂರ್ ಮರ್ಕಝ್ ಸಂಸ್ಥೆಯನ್ನು ಎಪಿ ಅಬೂಬಕ್ಕರ್ ಮುಸ್ಲಿಯಾರ್ ಸ್ಥಾಪಿಸಿದ್ದಾರೆ. ಮರ್ಕಝ್ ಸಂಸ್ಥೆಯಲ್ಲಿ 2,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ. ಮರ್ಕಝ್ ಅಧೀನದಲ್ಲಿ ದೇಶದ ಪ್ರಮುಖ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಮರ್ಕಝ್ ಅಧೀನದಲ್ಲಿ ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜು[೬] (ಕೇರಳದ ಪ್ರಥಮ ಯುನಾನಿ ಮೆಡಿಕಲ್ ಕಾಲೇಜು) ಮರ್ಕಝ್ ಕಾನೂನು ಮಹಾ ವಿದ್ಯಾಲಯ ಕಾರ್ಯಾಚರಿಸುತ್ತಿದೆ. ಮರ್ಕಝ್ ಕಲ್ಯಾಣ ಸೇವೆಗಳಿಗೂ ಒತ್ತು ನೀಡುತ್ತಿದೆ. ವಿವಿಧ ರೀತಿಯಲ್ಲಿ ಜನರಿಗೆ ಸೇವೆಯನ್ನು ಒದಗಿಸುತ್ತದೆ. ಉನ್ನತ ಅಧ್ಯಯನಗಳಿಗಾಗಿ ಬಡ ವಿದ್ಯಾರ್ಥಿಗಳಿಗೆ ಮರ್ಕಝ್ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ದೇಶದಲ್ಲಿ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಂಸ್ಥೆಯಲ್ಲಿ ವಿಶೇಷ ನಿಧಿಯನ್ನು ಸ್ಥಾಪಿಸಲಾಗಿದೆ. ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಈಜಿಪ್ಟ್, ರಷ್ಯಾ ರಾಷ್ಟ್ರಗಳ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣವನ್ನು ಮುಂದುವರೆಸಲು ಮರ್ಕಝ್ ಧನ ಸಹಾಯವನ್ನು ಒದಗಿಸುತ್ತದೆ. ಕೇರಳ ಮತ್ತು ಇತರ ರಾಜ್ಯಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮರ್ಕಝ್ ಪ್ರಾಯೋಜಕತ್ವದಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ. ಕರ್ನಾಟಕ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಮರ್ಕಝ್ ವಿಶೇಷ ಸೇವಾ ಕೇಂದ್ರಗಳನ್ನು ತೆರೆದಿದೆ. ಇಸ್ಲಾಮಿಕ್ ಅಧ್ಯಯನದಲ್ಲಿ ಮರ್ಕಝ್ ಉನ್ನತ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಮೌಲವೀ ಫಾಝಿಲ್ ಸಖಾಫಿ ಮತ್ತು ಮೌಲವೀ ಫಾಝಿಲ್ ಖಾಮಿಲ್ ಸಖಾಫಿ ಎಂಬ ಬಿರುದನ್ನು ನೀಡುತ್ತಿದೆ. ಇದು ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಮರ್ಕಝ್ ಅಧೀನದಲ್ಲಿ ಇಸ್ಲಾಮಿಕ್ ಧಾರ್ಮಿಕ ಪದವಿಯನ್ನು ಪಡೆದ ಸುಮಾರು 15,000ದಷ್ಟು ಧಾರ್ಮಿಕ ವಿದ್ವಾಂಸರು ಜಗತ್ತಿನ ವಿವಿಧ ರಾಷ್ಟ್ರಗಳಾದ ಆಫ್ರಿಕಾ, ಯುಕೆ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಈಜಿಫ್ಟ್ ಮುಂತಾದ ಕಡೆಗಳಲ್ಲಿ ಸೇವೆಯಲ್ಲಿ ನಿರತರಾಗಿದ್ದಾರೆ. ಉದ್ದೇಶಿತ ಮರ್ಕಝ್ ನಾಲೆಡ್ಜ್ ಸಿಟಿ ಅಥವಾ ಜ್ಞಾನ ನಗರ ಕೇರಳದ ಕೋಝಿಕೋಡಿನಲ್ಲಿರುವ ಮರ್ಕಝ್ ವಿಶ್ವವಿದ್ಯಾನಿಲಯದ ಒಂದು ಯೋಜನೆಯಾಗಿದೆ. ಯೋಜನಾ ಅಡಿಪಾಯವನ್ನು ಡಿಸೆಂಬರ್ 24, 2012 ರಂದು ಸಮಸ್ತ ಕೇರಳ ಸುನ್ನಿ ಜಂ-ಇಯತುಲ್ ಉಲಮಾ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಹಾಕಿದರು. ಯೋಜನೆಯ ವೆಚ್ಚವು 10 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ 40 ಕೋಟಿ ಎಂದು ಅಂದಾಜಿಸಿ ದೇಶ ವಿದೇಶಗಳಿಂದ ವ್ಯಾಪಕವಾಗಿ ಹಣ ಸಂಗ್ರಹಿಸಲಾಗಿತ್ತು. ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್[ಬದಲಾಯಿಸಿ] ಶಅರೇ ಮುಬಾರಕ್ ಮಸೀದಿ[೭] ಅಥವಾ ಶಅರೇ ಮುಬಾರಕ್ ಗ್ರ್ಯಾಂಡ್ ಮಸ್ಜಿದ್. ಕೇರಳ ರಾಜ್ಯದ ಕ್ಯಾಲಿಕಟ್‍ನಲ್ಲಿ ಮರ್ಕಝ್ ಅಧೀನದಲ್ಲಿ ಕಾಂತಪುರಂ ಎಪಿ ಅಬೂಬಕ್ಕರ್ ಅಹ್ಮದ್ ಅವರು ಪ್ರಸ್ತಾಪಿಸಿದ ಮಸೀದಿಯಾಗಿದೆ. 12ಎಕರೆ ಭೂಮಿಯಲ್ಲಿ ನಾಲೆಡ್ಜ್ ಸಿಟಿ ಜೊತೆಗೆ ಇದನ್ನು ಪ್ರಸ್ತಾಪಿಸಲಾಗಿದೆ. ಸುಮಾರು 40 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮಸೀದಿಯು ಭಾರತದ ಅತ್ಯಂತ ದೊಡ್ಡ ಮಸೀದಿಯಾಗಲಿದೆ. ಈ ಮಸೀದಿಯಲ್ಲಿ ಸುಮಾರು 25000 ಜನರು ಒಂದೇ ಸಮಯಕ್ಕೆ ನಮಾಝ್ ಮಾಡಬಹುದಾಗಿದೆ. ಮೊಘಲ್ ವಾಸ್ತುಶೈಲಿಯಲ್ಲಿ ಮಸೀದಿಯು ನಿರ್ಮಾಣಗೊಳ್ಳುತ್ತಿದೆ. ಮತ್ತು ಹಸಿರು ಕಟ್ಟಡದ ಪರಿಕಲ್ಪನೆಯನ್ನು ಅನುಸರಿಸಲಾಗುತ್ತಿದೆ. ವಿಶಾಲವಾದ ಪ್ರಾರ್ಥನಾ ಸಭಾಂಗಣದ ಜೊತೆಗೆ ಸೆಮಿನಾರ್ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶಾಲವಾದ ಸಭಾಂಗಣವನ್ನು ಹೊಂದಿದೆ. ಒಂದೇ ಸಮಯಕ್ಕೆ 1000 ಕ್ಕಿಂತಲೂ ಹೆಚ್ಚಿನ ಜನರಿಗೆ ಉಪಯೋಗಿಸಲು ಸಾಧ್ಯವಾಗುವ ಸ್ಥಳಾವಕಾಶವನ್ನು ಹೊಂದಿರುವ ದೊಡ್ಡ ಗ್ರಂಥಾಲಯ ಮತ್ತು ಇತರ ಸೌಲಭ್ಯಗಳು ಶಅರೇ ಮುಬಾರಕ್ ಮಸೀದಿಯಲ್ಲಿ ಇರಲಿದೆ. ಮಸೀದಿ ಕಟ್ಟಡವು ಎಂಟು ಎಕರೆಗಳನ್ನು ಒಳಗೊಂಡಿದೆ ಮತ್ತು ನಾಲ್ಕು ಎಕರೆ ಹಸಿರು ಬೆಲ್ಟ್ ಮತ್ತುತೋಟದಿಂದ ಸುತ್ತುವರಿದಿದೆ. ಶಅರೇ ಮುಬಾರಕ್ ಮಸೀದಿಯು ಮರ್ಕಝ್ ವಿದ್ಯಾಸಂಸ್ಥೆಯಲ್ಲಿರುವ ಪ್ರವಾದಿ ಮುಹಮ್ಮದರ ಕೇಶವೆಂದು ಆಧಾರ ರಹಿತವಾಗಿ ವಾದಿಸುವ ಕೇಶವನ್ನು ಸಂರಕ್ಷಿಸಿಡುವ ಸಲುವಾಗಿ ನಿರ್ಮಾಣವಾಗುತ್ತಿದೆ. ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರಚಿಸಿದ ಕೃತಿಗಳು[ಬದಲಾಯಿಸಿ] ಅರಬಿಕ್ ಕೃತಿಗಳು[ಬದಲಾಯಿಸಿ] • ಇಸ್ಮತುಲ್ ಅಂಬಿಯಾ • ಅಸ್ಸಿಯಾಸತುಲ್ ಇಸ್ಲಾಮಿಯ್ಯಾ • ಅಲ್-ವಹದತುಲ್ ಇಸ್ಲಾಮಿಯ್ಯಾ • ಅಲ್-ಇತಿಬಾಹು ವಲ್-ಇಬತಿದಾಹು • ರಿಯಾಲಹುತ್ತ್ವಾಲಿಬೀನ್ • ಇದ್ಹಾರುಲ್ ಫರ್ರ್ಹಾ ವಸುರ್ರೂರ್ ಬಿ ಮೀಲಾದಿನ್ನಬಿಯ್ಯಿ ಮಬ್ರೂರ್ • ಅಲ್-ಮೌಲಿದು ರವಿಯ್ಯ್ • ದಹ್‍ದೀಮುಲ್ ಅಖಾಬಿರ್ ವಹತಿರಾಮು ಶಾಹಿರ್ • ಫೈದಾನುಲ್ ಮುಸಾಲಾತ್ ಫೀ ಬಯಾನಿ ಇಜಾಝತ್ ಅಲ್-ಮತದಾವಿಲಿಯ್ಯಾ • ತರ್ಕೀಕತು ತಸವ್ವುಫ್ • ಅಲ್-ಬರಾಹಿನುಲ್ ಕ್ವತಿಯ್ಯಾ ಫಿರ್ ರಾದ್ದಿ ಅಲಲ್ ಖ್ವಾದಿಯಾನಿಯ್ಯಾ • ಅದೀಲತು ಸಲಾಲತಿ ತರಾವೀಹ್ • ಇಯಾಸುತ್ತವಾಬಿಲ್ ಇಂಕಾಝಿಲ್ ಮಿನ್ ಅಲ್ ಇಕಾಬ್ • ತಾಟ್ಸ್ ಆಫ್ ಮುಸ್ಲಿಂ ವರ್ಲ್ • ಆನ್ ಇಂಟ್ರಡಕ್ಷನ್ ಟು ದಿ ಸ್ಡಡೀ ಆಫ್ ಇಸ್ಲಾಂ • ದಿ ಹಜ್ಜ್ • ದಿ ಅಮೇರಿಕನ್ ಡೈರಿ • ದಿ ಹೋಲಿ ಪ್ರೊಫೆಟ್ಸ್ • ಕಾಂಗ್ರೆಗೇಶನಲ್ ಪ್ರೆಯರ್ ಇನ್ ಇಸ್ಲಾಂ • ಉಮೆನ್ ಅಂಡ್ ಫ್ರೈಡೇ ಪ್ರೆಯರ್ • ತರೀಕತ್- ಅ ಸ್ಟಡೀ ಗೌರವಗಳು, ಪ್ರಶಸ್ತಿಗಳು ಮತ್ತು ಅಂತರಾಷ್ಟ್ರೀಯ ಮನ್ನಣೆ[ಬದಲಾಯಿಸಿ] ಇಸ್ಲಾಮಿಕ್ ಪರಂಪರೆ ಮತ್ತು ಸಂಸ್ಕøತಿಯ ಸಂರಕ್ಷಣೆಯ ಸೇವೆಗಾಗಿ ಜಿದ್ದಾ ಮೂಲದ ಇಸ್ಲಾಮಿಕ್ ಪಾರಂಪರಿಕ ಸಂಸ್ಥೆ 2008 ಜನವರಿಯಲ್ಲಿ ಇಸ್ಲಾಮಿಕ್ ಪಾರಂಪರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೋರ್ಡಾನಿನ ಓಐಸಿ ಟುಡೇ ಸಂಸ್ಥೆಯು 2016ರಲ್ಲಿ “ಜ್ಯುವೆಲ್ ಆಫ್ ಮುಸ್ಲಿಂ ವರ್ಲ್ ಬಿಝ್” ಪ್ರಶಸ್ತಿಯನ್ನು ನೀಡಿದೆ. ಜೋರ್ಡಾನಿನ ಪ್ರತಿಷ್ಠಿತ “ರೋಯಲ್ ಇಸ್ಲಾಮಿಕ್ ಸ್ಟ್ರಾಟಜಿಕ್ ಸ್ಟಡೀಸ್ ಸೆಂಟರ್” ಪ್ರಕಟಿಸಿದ ವಿಶ್ವದ ಐನೂರು ಪ್ರಭಾವಿ ಮುಸ್ಲಿಂ ನಾಯಕರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ↑ https://en.wikipedia.org/wiki/Kanthapuram_A.P._Aboobacker_Musliyar ↑ https://www.markaz.in/ ↑ https://en.wikipedia.org/wiki/Markaz_Knowledge_City ↑ http://markazunanimedicalcollege.org/ ↑ https://en.wikipedia.org/wiki/Shahre_Mubarak_Grand_Masjid "https://kn.wikipedia.org/w/index.php?title=ಕಾಂತಪುರಂ_ಎ_ಪಿ_ಅಬೂಬಕ್ಕರ್_ಮುಸ್ಲಿಯಾರ್&oldid=968017" ಇಂದ ಪಡೆಯಲ್ಪಟ್ಟಿದೆ ಈ ಪುಟವನ್ನು ೧೮ ಜನವರಿ ೨೦೨೦, ೦೫:೫೯ ರಂದು ಕೊನೆಯಾಗಿ ಸಂಪಾದಿಸಲಾಯಿತು.
"2020-02-26T14:42:27"
https://kn.wikipedia.org/wiki/%E0%B2%95%E0%B2%BE%E0%B2%82%E0%B2%A4%E0%B2%AA%E0%B3%81%E0%B2%B0%E0%B2%82_%E0%B2%8E_%E0%B2%AA%E0%B2%BF_%E0%B2%85%E0%B2%AC%E0%B3%82%E0%B2%AC%E0%B2%95%E0%B3%8D%E0%B2%95%E0%B2%B0%E0%B3%8D_%E0%B2%AE%E0%B3%81%E0%B2%B8%E0%B3%8D%E0%B2%B2%E0%B2%BF%E0%B2%AF%E0%B2%BE%E0%B2%B0%E0%B3%8D
ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸಾಕಿ ಅಸಿಸ್ಟೆಂಟ್ ಕಮಿಷನರ್ ಮಾಡಿದ ತರಕಾರಿ ವ್ಯಾಪಾರಿ | News13 News13 > ಸುದ್ದಿಗಳು > ರಾಷ್ಟ್ರೀಯ > ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸಾಕಿ ಅಸಿಸ್ಟೆಂಟ್ ಕಮಿಷನರ್ ಮಾಡಿದ ತರಕಾರಿ ವ್ಯಾಪಾರಿ ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸಾಕಿ ಅಸಿಸ್ಟೆಂಟ್ ಕಮಿಷನರ್ ಮಾಡಿದ ತರಕಾರಿ ವ್ಯಾಪಾರಿ ಅಸ್ಸಾಂನಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೊಬ್ಬರು ಕಸದ ತೊಟ್ಟಿಯಲ್ಲಿ ಸಿಕ್ಕ ಮಗವನ್ನು ಸಾಕಿ ಬೆಳೆಸಿ ಇನ್‌ಕಮ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ತರಕಾರಿ ವ್ಯಾಪಾರಿ ಸೊಬೆರನ್ ಅವರು ಸಾಕು ಮಗಳನ್ನು ಅಸಿಸ್ಟೆಂಟ್ ಕಮಿಷನರ್ ಮಾಡಿದ ಆದರ್ಶಮಯ ತಂದೆ, ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸ್ವಂತ ಮಗಳಂತೆ ಸಾಕಿ ಉತ್ತಮ ಶಿಕ್ಷಣ ನೀಡಿ ಅತ್ಯುನ್ನತ ಹುದ್ದೆ ಏರುವಂತೆ ಮಾಡಿರುವ ಇವರು ಸಮಾಜದಲ್ಲಿನ ಎಲ್ಲಾ ತಂದೆಯರಿಗೂ ಮಾದರಿಯಾಗಿ ನಿಲ್ಲುತ್ತಾರೆ. ತಿನ್‌ಸುಖಿಯ ಪ್ರದೇಶದಲ್ಲಿ ತರಕಾರಿ ಅಂಗಡಿ ಇಟ್ಟಿದ ಸೊಬೆರನ್ ಅವರು ಮನೆಗೆ ವಾಪಾಸ್ಸಾದಾಗ ಕಸದ ತೊಟ್ಟಿಯಲ್ಲಿ ಮಗುವೊಂದು ಅಳುವುದು ಕಂಡು ಬಂತು. ತಕ್ಷಣ ಅದನ್ನು ಎತ್ತಿಕೊಂಡ ಅವರು, ಅದನ್ನು ಸಾಕುವ ನಿರ್ಧಾರಕ್ಕೆ ಬಂದರು. ಅದಕ್ಕೆ ಜ್ಯೋತಿ ಎಂದು ಹೆಸರಿಟ್ಟರು, ತನಗೆ ಬರುತ್ತಿದ್ದ ತುಸುವೇ ಆದಾಯದಲ್ಲಿ ಮಗುವನ್ನು ಉತ್ತಮ ರೀತಿಯಲ್ಲಿ ಬೆಳೆಸಿದರು, ತಾವು ಹಸಿದಿದ್ದರೂ ಆ ಮಗುವಿಗೆ ಹಸಿವು ಗೊತ್ತಾಗದಂತೆ ಅವರು ನೋಡಿಕೊಂಡರು. ಜ್ಯೋತಿ ಪದವಿಯನ್ನು ಪಡೆದು, ಪಿಸಿಎಸ್ ತೇರ್ಗಡೆ ಮಾಡಿ, ಈಗ ಆದಾಯ ತೆರಿಗೆ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ತಮ್ಮ ತಂದೆಯ ಮೊಗದಲ್ಲಿ ಸಂತೋಷ ಜಿನುಗುವಂತೆ ಮಾಡಿದ್ದಾರೆ. ಹೆಣ್ಣುಮಕ್ಕಳು ಇರುವುದೇ ಕೇವಲ ಮದುವೆ ಮಾಡಿ ಕಳುಹಿಸಿಕೊಡಲು ಎಂದು ಭಾವಿಸುವ ಪೋಷಕರು ಇರುವ ಈ ಕಾಲದಲ್ಲಿ ಸೊಬೆರನ್ ಅವರು ಮಗಳನ್ನು ಗಣ್ಯ ವ್ಯಕ್ತಿ ಮಾಡುವ ಕನಸು ಕಂಡು, ಬಡತನದಲ್ಲೂ ಕನಸನ್ನು ಈಡೇರಿಸಿದ್ದಾರೆ. ‘ನಾನು ಕಸದ ತೊಟ್ಟಿಯಿಂದ ಮಗುವನ್ನು ಎತ್ತಿಕೊಳ್ಳಲಿಲ್ಲ, ಬದಲಾಗಿ ನನ್ನ ಬದುಕನ್ನು ಬೆಳಗುವ, ನನ್ನನ್ನು ಹೆಮ್ಮೆಪಡಿಸುವ ಅಮೂಲ್ಯ ವಜ್ರದವೊಂದನ್ನು ಎತ್ತಿಕೊಂಡೆ’ -ಇದು ಸೊಬೆರನ್ ತನ್ನ ಮಗಳ ಬಗ್ಗೆ ಹೇಳುವ ಹೆಮ್ಮೆಯ ಮಾತು.
"2019-09-17T06:15:59"
https://news13.in/archives/107720
ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಸಾವು | Prajavani ಬೆಂಗಳೂರು: ಕೆ.ಆರ್.ಪುರ ಸಮೀಪದ ಕೃಷ್ಣಾನಗರದಲ್ಲಿ ಕಟ್ಟಡದ ಕಾಮಗಾರಿ ವೇಳೆ ವಿದ್ಯುತ್‌ ಪ್ರವಹಿಸಿ ಚನ್ನಸಂದ್ರದ ವಿ.ನಾಗಭೂಷಣ್‌ (33) ಎಂಬುವರು ಮೃತಪಟ್ಟಿದ್ದಾರೆ. ‘ಪುರುಷೋತ್ತಮ್‌ ಎಂಬುವರಿಗೆ ಸೇರಿದ ಕಟ್ಟಡದ ಮೂರನೇ ಮಹಡಿಯಲ್ಲಿ ಮೋಲ್ಡಿಂಗ್‌ಗಾಗಿ ಕಂಬಿ ಕಟ್ಟುವ ಕೆಲಸದಲ್ಲಿ ನಾಗಭೂಷಣ್‌ ಹಾಗೂ ಗಜೇಂದ್ರ ನಿರತರಾಗಿದ್ದರು. ಮನೆ ಮೇಲೆ ಹಾದು ಹೋಗಿರುವ ಹೈಟೆನ್ಷನ್‌ ತಂತಿಗೆ ಕಂಬಿಯು ತಗುಲಿದೆ. ಇದರಿಂದ ವಿದ್ಯುತ್‌ ಪ್ರವಹಿಸಿದ್ದು, ನಾಗಭೂಷಣ್‌ ಸುಟ್ಟು ಕರಕಲಾಗಿದ್ದಾರೆ. ಗಜೇಂದ್ರ ಅವರಿಗೂ ಸುಟ್ಟ ಗಾಯಗಳಾಗಿವೆ. ಪುರುಷೋತ್ತಮ್‌ ಹಾಗೂ ‌ಮೇಸ್ತ್ರಿ ರವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು. ‘ಕಟ್ಟಡದ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ಅವಘಡ ಸಂಭವಿಸಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
"2019-06-20T18:05:27"
https://www.prajavani.net/news/article/2017/10/22/527645.html
ಕುಡಿದ ಮತ್ತಿನಲ್ಲಿ ತನ್ನ ಕಣ್ಣಗುಡ್ಡೆಗಳನ್ನು ಕಳೆದುಕೊಂಡರೂ, ಆತನಿಗೆ ಗೊತ್ತೇ ಆಗಿಲ್ಲವಂತೆ!! | He Lost His Eyeball And Din’t Realise! - Kannada BoldSky | Updated: Wednesday, March 13, 2019, 11:17 [IST] ಮದ್ಯಪಾನದಿಂದಾಗಿ ಆರೋಗ್ಯ ಕೆಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಕೆಲವರು ವಿಪರೀತವಾಗಿ ಕುಡಿದು ಮೈಮೇಲೆ ಪರಿಜ್ಞಾನವೇ ಇರುವುದಿಲ್ಲ. ತಮ್ಮ ದೇಹ ಅಥವಾ ಸುತ್ತಮುತ್ತಲು ಏನಾಗುತ್ತಿದೆ ಎನ್ನುವುದೇ ತಿಳಿದಿರುವುದಿಲ್ಲ. ಕುಡಿಯುವುದರಿಂದ ಆಗುವಂತಹ ಅನಾಹುತಗಳ ಬಗ್ಗೆ ಆಗಾಗ ಸುದ್ದಿಯಾಗುತ್ತಿದ್ದರೂ ಕುಡಿಯುದನ್ನು ಮಾತ್ರ ಜನರು ಕಡಿಮೆ ಮಾಡುವುದಿಲ್ಲ. ಅದರಲ್ಲೂ ಕೆಲವರು ಮಿತಿಮೀರಿ ಕುಡಿಯುತ್ತಾರೆ. ಇದು ದೇಹಕ್ಕೆ ಮಾತ್ರವಲ್ಲದೆ, ಸುತ್ತಲಿನವರಿಗೂ ತುಂಬಾ ಅಪಾಯಕಾರಿ. ಕುಡಿತದಲ್ಲಿ ಮತ್ತಿನಲ್ಲಿ ತಮಗೆ ಏನಾಗುತ್ತಿದೆ ಎನ್ನುವುದೇ ಕೆಲವು ಜನರಿಗೆ ತಿಳಿದಿರುವುದಿಲ್ಲ. ಅಂತಹ ಒಂದು ಘಟನೆ ಬಗ್ಗೆ ಈ ಲೇಖನದಲ್ಲಿ ಹೇಳಲು ಹೊರಟಿರುವುದು. ಇಲ್ಲೊಬ್ಬ ವ್ಯಕ್ತಿ ವಿಪರೀತವಾಗಿ ಕುಡಿದು ಮಾಡಿಕೊಂಡಿರುವ ಅವಾಂತರವು ಇದಕ್ಕೆ ಸಾಕ್ಷಿಯಾಗಿದೆ. ವಿಪರೀತವಾಗಿ ಕುಡಿದಿದ್ದ ವ್ಯಕ್ತಿಯು ಅಪಘಾತಕ್ಕೆ ಸಿಲುಕಿ ಆತನ ಕಣ್ಣಗುಡ್ಡೆಗಳು ಹೊರಗೆ ಬಂದು ಗಂಟೆಗಳ ಕಾಲ ನೆಲದ ಮೇಲೆ ಬಿದ್ದಿದ್ದರೂ ಕುಡಿದ ಮತ್ತಿನಲ್ಲಿದ್ದ ಆತನಿಗೆ ಏನೂ ತಿಳಿದಿರಲಿಲ್ಲ. ಈ ವಿಚಿತ್ರ ಘಟನೆ ಬಗ್ಗೆ ನೀವು ಮುಂದಕ್ಕೆ ಓದಿಕೊಂಡು ಹೋಗಿ... ಈ ಘಟನೆ ನಡೆದಿರುವು ಚೀನಾದಲ್ಲಿ 26ರ ಹರೆಯದ ವ್ಯಕ್ತಿ(ಹೆಸರನ್ನು ಬಹಿರಂಗಪಡಿಸಲಾಗಿಲ್ಲ) ವಿಪರೀತವಾಗಿ ಕುಡಿದ ಮತ್ತಿನಲ್ಲಿ ಇದ್ದಾಗ ಆತ ಅಪಘಾತಕ್ಕೆ ಸಿಲುಕಿದ. ಚಿನಾದ ಶಾನ್ ಡಾಂಗ್ ಪ್ರಾಂತ್ಯದ ಜಿನಾಣ್ ನ ಲಿಕ್ಸಿಯಾ ಜಿಲ್ಲೆಯಲ್ಲಿ ವಾಸವಿದ್ದ ಈ ವ್ಯಕ್ತಿ ವಿಪರೀತ ಕುಡಿದ ಮತ್ತಿನಲ್ಲಿ ಜಾರಿ ಬಿದ್ದಿದ್ದ. Most Read: ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಮಹಿಳೆಗೆ ಶಾಕ್! ಆಹಾರದಲ್ಲಿ ಸಿಕ್ಕಿತ್ತು 40 ಜಿರಳೆ!! ಆತನ ಕುಟುಂಬವು ಆಸ್ಪತ್ರೆಗೆ ದಾಖಲಿಸಿತು ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಆತನ ಕುಟುಂಬ ಸದಸ್ಯರು ಇದನ್ನೆಉ ನೋಡಿ ಆಸ್ಪತ್ರೆಗೆ ದಾಖಲು ಮಾಡಿದರು. ಅಪಘಾತವಾದ ಆರು ಗಂಟೆಗಳ ಬಳಿಕ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವ್ಯಕ್ತಿಯ ಕಣ್ಣಗುಡ್ಡೆಯೇ ಇಲ್ಲವೆಂದು ವೈದ್ಯರು ತಿಳಿಸಿದರು! ವೈದ್ಯರು ಆ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ಅವರಿಗೆ ಅಚ್ಚರಿ ಕಾದಿತ್ತು. ಅದೇನೆಂದರೆ ಆತನ ಕಣ್ಣ ಗುಡ್ಡೆಗಳೇ ಮಾಯವಾಗಿದ್ದವು. ಕೆಲವೇ ಸಮಯದ ಬಳಿಕ ವೈದ್ಯರಿಗೆ ಫೋನ್ ಕರೆಯೊಂದು ಬಂದಿದ್ದು, ಮನೆಯಲ್ಲಿ ಕಣ್ಣಗುಡ್ಡೆಯು ಪತ್ತೆಯಾಗಿದೆ ಎಂದು ಕುಟುಂಬದವರು ತಿಳಿಸಿದರು. ದೀರ್ಘಕಾಲ ತನಕ ಕಣ್ಣಗುಡ್ಡೆಯು ಬಿದ್ದುಕೊಂಡಿತ್ತು! ಕಣ್ಣಗುಡ್ಡೆಯು ದೀರ್ಘಕಾಲದ ತನಕ ನೆಲದ ಮೇಲೆ ಬಿದ್ದುಕೊಂಡಿದ್ದ ಕಾರಣದಿಂದಾಗಿ ಇದನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವು ಗಂಟೆಗಳ ಕಾಲ ಕಣ್ಣಗುಡ್ಡೆಯು ನೆಲದ ಮೇಲಿದ್ದ ಕಾರಣದಿಂದಾಗಿ ಅದು ಕಲುಷಿತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆ ವ್ಯಕ್ತಿ ಕಣ್ಣು ಕಳಕೊಂಡ ಆ ವ್ಯಕ್ತಿಯ ಸೂಕ್ಷ್ಮ ಸ್ನಾಯುಗಳು ಮತ್ತು ಆಪ್ಟಿಕ್ ನರಗಳು ಹೊರಗೆ ಬಂದಿದ್ದ ಕಾರಣದಿಂದಾಗಿ ಏನೂ ಮಾಡುವಂತೆ ಇರಲಿಲ್ಲ ಮತ್ತು ಇದರಿಂದ ಸೋಂಕು ಬರುವುದನ್ನು ತಪ್ಪಿಸಲು ಕೂಡ ಸಾಧ್ಯ ವಾಗಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಗಾಯಕ್ಕೆ ಹೊಲಿಗೆ ಹಾಕಲಾಗಿದೆ. ಆಘಾತದಿಂದ ಆ ವ್ಯಕ್ತಿಯು ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ. He Lost His Eyeball And Din’t Realise! A young man who is just 26 years old was so drunk that he did not realise when he slipped and fell inside his home in China. The man's left eye was beyond repair as the eyeball remained detached for at least 6 hours. The man confessed that he was 'too drunk' to remember anything about the accident.He Lost His Eyeball And Din't Realise!
"2019-03-26T14:12:45"
https://kannada.boldsky.com/insync/pulse/2019/he-lost-his-eyeball-din-t-realise-019704.html
‘ಅಂಬಿ ನನ್ನ ಆಸ್ತಿ ಮತ್ತು ದೌರ್ಬಲ್ಯ-ವಿಷ್ಣು – Cinibuzz ಒಮ್ಮೆ ಅಂಬರೀಶ್ ವಿಷ್ಣು ಮನೆಗೆ ಬಂದಾಗ ‘ಸೂಪರ್ ಸ್ಟಾರ್ ಮನೆಯಂತೆ ಇದು.. ಗುಂಡು-ತುಂಡು ಏನೂ ಇಲ್ಲ..’ ಎಂದುಬಿಟ್ಟಿದ್ದರಂತೆ. ಅಂಬಿ ಹೀಗಂದ ಮರುದಿನವೇ ತಮ್ಮ ಮನೆಯಲ್ಲೇ ಬಾರ್ ನಿರ್ಮಿಸಿಬಿಟ್ಟರಂತೆ ವಿಷ್ಣು… ಎಷ್ಟೋ ಸಲ ವಿಷ್ಣುಗೆ ರಾತ್ರೋ ರಾತ್ರಿ ಫೋನು ಮಾಡುತ್ತಿದ್ದ ಅಂಬಿ, ಮಲಗಿದ್ದ ವಿಷ್ಣುವನ್ನು ಎಬ್ಬಿಸಿ ‘ಲೇ ಕುಚುಕೂ, ಟೀವಿ ಆನ್ ಮಾಡೋ ನಿನ್ನ ಹಳೇ ಸಿನಿಮಾದ ಹಾಡು ಬರ‍್ತಾ ಇದೆ…’ ಎನ್ನುತ್ತಿದ್ದರಂತೆ… ಹಾಗೆ ನೋಡಿದರೆ, ಸಿನಿಮಾಕ್ಕೆ ಬರುವ ಮೊದಲು ಅಂಬರೀಶ್ ಮತ್ತು ವಿಷ್ಣು ಅಂಥಾ ಪರಿಚಿತರೂ ಆಗಿರಲಿಲ್ಲ. ಮೈಸೂರಿನಲ್ಲಿ ‘ನಾಗರಹಾವು’ ಚಿತ್ರದ ಸ್ಕ್ರೀನ್ ಟೆಸ್ಟ್ ನಡೆದ ಸಂದರ್ಭದಲ್ಲಿ ಇವರಿಬ್ಬರೂ ಪರಸ್ಪರ ಭೇಟಿಯಾಗಿದ್ದರು. ನಂತರ ‘ನಾಗರಹಾವು’ ಚಿತ್ರದಲ್ಲಿ ವಿಷ್ಣು ರಾಮಾಚಾರಿಯಾಗಿ, ಅಂಬಿ ಜಲೀಲ್ ಆಗಿ ತೆರೆಯ ಮೇಲೆ ಮಾರಾಮಾರಿ ಗುದ್ದಾಡಿಕೊಂಡರು. ಆದರೆ ರಿಯಲ್ ಲೈಫ್‌ನಲ್ಲಿ ಮಾತ್ರ ಅಂಬಿ-ವಿಷ್ಣು ಪ್ರಾಣಮಿತ್ರರಾಗೇ ಉಳಿದವರು. ‘ಕಡೇ ಪಕ್ಷ ದಿನಕ್ಕೆರಡು ಬಾರಿ ಅಂಬಿಯೊಂದಿಗೆ ಫೋನ್‌ನಲ್ಲಾದರೂ ಮಾತಾಡದೇ ಇದ್ದರೆ ಏನೋ ಕಳಕೊಂಡ ಹಾಗಾಗುತ್ತೆ. ನನ್ನ ಚೈತನ್ಯವೇ ಹುದುಗಿಹೋಗುತ್ತದೆ…’ ನಾವಿಬ್ಬರೂ ಬೇರೆ ಬೇರೆ ಜಾತಿಯವರಿರಬಹುದು. ಆದರೂ ನಾವಿಬ್ಬರೂ ಒಂದೇ ತಾಯಿಯ ಮಕ್ಕಳಂತೆ ಬೆಳೆದಿದ್ದೇವೆ. ನನ್ನ ತಾಯಿಗಂತೂ ಅಂಬರೀಶ್ ಎಂದರೆ ಪಂಚಪ್ರಾಣ. ಆಕೆ ಗಂಭೀರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅಂಬರೀಶ್‌ನನ್ನು ನೋಡಬೇಕೆಂದು ಹಠ ಹಿಡಿದಿದ್ದಳು. ವಿಷ್ಯ ತಿಳಿದ ಅಂಬರೀಶ್ ದೂರದೂರಿನಲ್ಲಿದ್ದರೂ, ಶೂಟಿಂಗ್ ಅರ್ಧಕ್ಕೆ ಬಿಟ್ಟು ಓಡಿಬಂದು ಅಮ್ಮನನ್ನು ನೋಡಿಕೊಂಡು ಹೋಗಿದ್ದ; ನನ್ನ ಅಮ್ಮ ತೀರಿ ಹೋದಾಗಲೂ ಅಷ್ಟೇ…” ಅಂಬಿ ಬಗೆಗಿನ ಇಂಥ ಹತ್ತು ಹಲವು ವಿಷಯಗಳನ್ನು ಸ್ಮರಿಸಿಕೊಳ್ಳುತ್ತಿದ್ದರು. ವಿಷ್ಣು-ಅಂಬಿ ಸ್ನೇಹ-ಪ್ರೀತಿಯ ಉತ್ಕಟತೆ ಅದ್ಯಾವ ಮಟ್ಟದ್ದು ಎಂದರೆ “ನಾನು ಸತ್ತಾಗ ನನ್ನ ಹೆಣವನ್ನು ಹೊರಲು ಅಂಬರೀಶ್ ಖಂಡಿತಾ ಎಲ್ಲಿದ್ದರೂ ಬಂದೇ ಬರುತ್ತಾನೆ ಎಂಬ ವಿಶ್ವಾಸ ನನಗಿದೆ. ಅಂತಹ ದೊಡ್ಡ ವ್ಯಕ್ತಿತ್ವ ಅವನದು” ಎಂದು ವಿಷ್ಣು ತಮ್ಮ ಆಪ್ತರಲ್ಲಿ ಅನೇಕ ಬಾರಿ ಹೇಳಿಕೊಂಡಿದ್ದರು. ವಿಷ್ಣು ಅವರ ದೂರದೃಷ್ಟಿ, ಲೆಕ್ಕಾಚಾರ ಒಂದಿಷ್ಟೂ ಏರುಪೇರಾಗಲಿಲ್ಲ. ಸಾಹಸಸಿಂಹ ಕಣ್ಮುಚ್ಚಿದಾಗ ಓಡೋಡಿ ಬಂದ ಅಂಬಿ ಎಳೇ ಮಗುವಿನಂತೆ ಕಣ್ಣೀರಿಟ್ಟು, ಒಡಹುಟ್ಟಿದವರಿಗಿಂತಲೂ ಹೆಚ್ಚಾಗಿ ರೋಧಿಸಿದ್ದರು. ಆಗ “ತೀರಾ ಪ್ರಬುದ್ಧನಂತಿರುವ ಅಂಬಿ ಕೆಲವೊಮ್ಮೆ ಪುಟ್ಟ ಮಕ್ಕಳಂತೆ ವರ್ತಿಸುತ್ತಾನೆ…” ಎಂದು ಸ್ವತಃ ವಿಷ್ಣು ಹೇಳಿದ್ದ ಮಾತುಗಳು ಅಗೋಚರವಾಗಿ ಮಾರ್ದನಿಸಿದಂತಿತ್ತು. ನಿಜಕ್ಕೂ ಅಂಬರೀಶ್ ಇರದಿದ್ದರೆ, ಅವತ್ತು ವಿಷ್ಣು ದೇಹ ಬನಶಂಕರಿಯ ಚಿತಾಗಾರದಲ್ಲಿ ಕರಗಿಹೋಗುತ್ತಿತ್ತು. ತನ್ನ ಸ್ನೇಹಿತನ ಅಂತ್ಯಕ್ರಿಯೆ ಗೌರವಯುತವಾಗಿ ನಡೆಯಬೇಕು ಎಂದು ತೀರ್ಮಾನಿಸಿದ ಅಂಬಿ ತಕ್ಷಣ ‘ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲು ತೀರ್ಮಾನಿಸಿ, ಸರ್ಕಾರದ ಪ್ರತಿನಿಧಿಗಳು, ಬಾಲಣ್ಣನ ಮಗ ಗಣೇಶ್- ಎಲ್ಲರೊಂದಿಗೂ ಮಾತನಾಡಿ ಜಾಗದ ವ್ಯವಸ್ಥೆ ಮಾಡಿಕೊಟ್ಟರು. ಪ್ರಾಣ ಸ್ನೇಹಿತರು ಎಂದರೆ ಇವರೇ ಅಲ್ಲವೇ? ambi vishnu
"2020-07-07T15:50:35"
https://cinibuzz.in/ambarish-vishnu/
ವಧು-ವರ ಇಬ್ಬರು ಇದ್ರೆ ಮದುವೆ,ಮದುವೆಗೆ ವರ ಇಲ್ಲದೆ ಈ ವಧು ಮಾಡಿದ ಕೆಲಸ ಏನ್ ಗೊತ್ತಾ,ಖಂಡಿತಾ ನಿಮಗೆ ಆಶ್ಚರ್ಯ ಆಗುತ್ತೆ – Logical Kannadiga
"2018-10-22T03:40:00"
http://www.logicalkannadiga.com/2018/10/11/she-married-herself/
ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ: ಎಚ್.ಎಸ್.ದೊರೆಸ್ವಾಮಿ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jun 30, 2019, 8:46 PM IST ಬೆಂಗಳೂರು, ಜೂ.30: ವಿಚಾರ ಕಾಂತ್ರಿಯಿಂದಲೇ ಸಮಾಜವನ್ನು ಪರಿವರ್ತನೆಗೊಳಿಸಲು ಸಾಧ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಜಯನಗರ ಜೆ.ಎಸ್.ಎಸ್ ಚಿಂತನ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ..ಗು.ಹಳಕಟ್ಟಿ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ಸಮಾಜದ ಬಗ್ಗೆ ಚಿಂತಿಸುವವರು ಕಡಿಮೆಯಾಗಿದ್ದಾರೆ. ಸಮಾಜದಲ್ಲಿ ಮಾನವೀಯ ಗುಣಕ್ಕೆ ಬೆಲೆ ಇಲ್ಲದಂತಾಗಿದೆ. ನಾವೆಲ್ಲರೂ ಮನುಷ್ಯ ಸಮಾಜವನ್ನು ಕಟ್ಟಬೇಕಾದರೆ ಎಲ್ಲರಲ್ಲೊಬ್ಬರಾಗಿ ಜಾತಿ, ಧರ್ಮ ಮರೆತು ಸಮಾಜವನ್ನು ಮುನ್ನಡೆಸಬೇಕಿದೆ ಎಂದರು. ಬಸವಣ್ಣನವರ ವಚನ ಸಾಹಿತ್ಯ ,ಕ್ರಾಂತಿ ವಿಚಾರಧಾರೆಗಳು ಇಂದಿನ ಪೀಳಿಗೆಗೆ ತಲುಪಬೇಕು. ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆಗೊಳಿಸಬೇಕಿದೆ ಎಂದು ಹೇಳಿದರು. ವಚನ ಸಾಹಿತ್ಯದ ಮಹತ್ವವನ್ನು ಎಲ್ಲೆಡೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು ಗುರುತಿಸಿ ಗೌರವಿಸಬೇಕಿದೆ. ಡಾ..ಗು.ಹಳಹಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ಎಲ್ಲೆಡೆ ಪ್ರಚುರ ಮಾಡಲು ಹಾಗೂ ಕರ್ನಾಟಕವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ಸಾಕಷ್ಟು ಶ್ರಮಿಸಿದ್ದಾರೆ. ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದರು. ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪರಾವ್ ಅಕ್ಕೋಣೆ ಮಾತನಾಡಿ, ಇಡೀ ಜಗತ್ತಿಗೆ ಕಾಯಕದ ಮಹತ್ವವನ್ನು ಸಾರಿದವರು ಬಸವಣ್ಣನವರು. ವಚನ ಸಾಹಿತ್ಯವನ್ನು ಸಂರಕ್ಷಿಸುವುದರಲ್ಲಿ ಡಾ..ಗು.ಹಳಹಟ್ಟಿ ಅವರ ಪಾತ್ರ ಮಹತ್ತರವಾದ್ದದ್ದು ಎಂದು ಹೇಳಿದರು. ಪ್ರೊ.ಎಂ.ಬಿ.ಶಿವಾನಂದ ಮಾತನಾಡಿ, ಸಮಾಜದಲ್ಲಿ ಇಂದು ಹಣಗಳಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸಾಹಿತ್ಯ ಆಸಕ್ತಿಗಳು ಯುವಪೀಳಿಗೆಯವರಲ್ಲಿ ಕಡಿಮೆಯಾಗುತ್ತಿದೆ. ನಾವು ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ, ವಚನಕಾರರ ಬಗ್ಗೆ ಮಾಹಿತಿಗಳನ್ನು ತಿಳಿಸಿ ಅವರನ್ನು ಗೌರವಿಸುವ ಸಂಸ್ಕಾರವನ್ನು ಬೆಳಸಬೇಕಿದೆ. ನಿರ್ಗುಣವನ್ನ ಬಿಟ್ಟು ಸುಗುಣಗಳನ್ನು ಅಳವಡಿಸಿಕೊಂಡವರಲ್ಲಿ ಡಾ..ಗು.ಹಳಹಟ್ಟಿ ಕೂಡ ಒಬ್ಬರು. ಕನ್ನಡ ನಾಡಿನ ಯಶಸ್ಸಿಗಾಗಿ ಶ್ರಮಿಸಿದ ಅವರು ಎಲ್ಲರಿಗೂ ಸ್ಪೂರ್ತಿ ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಎಸ್.ಕೆಂಡದಮಠ, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ನನ್ನ ಧರ್ಮ ಎಂಬ ಪ್ರವೃತ್ತಿ ಬೇಸರದ ಸಂಗತಿ: ಮೂಡ್ನಾಕೂಡು ಚಿನ್ನಸ್ವಾಮಿ
"2020-05-25T21:55:10"
http://www.varthabharati.in/article/bengaluru/198313
ಮತ್ತೆ ಮತ್ತೆ ಕಾಡುವ ಪೆದ್ದ ಮಾರಾ.... ಮಂಕುತಿಮ್ಮ ಅನ್ನುವ ಶಬ್ಧ ಕೇಳಿದಾಗಲೆಲ್ಲ ಕಗ್ಗ ಬರೆದ ಡಿ.ವಿ. ಗುಂಡಪ್ಪನವರ ನೆನಪಾಗುವುದು. ಒಬ್ಬ ಪತ್ರಕರ್ತರಾಗಿ ವೃತ್ತಿ ಜೀವನವನ್ನು ನಡೆಸಿದ ಡಿವಿಜಿ ಕೊಟ್ಟ ಕಗ್ಗದ ಗಂಟು ಮಾತ್ರ ಅತ್ಯಮೂಲ್ಯವಾದುದು. ಸರ್ವರೊಳಗೊಂದೊಂದು ನುಡಿ ಕಲಿತು ಸರ್ವಜ್ಞ ಕವಿ ಬದುಕಿನ ಎಲ್ಲ ದಿಕ್ಕುಗಳಿಂದಲೂ ಅನುಭವದ ಸಾರವನ್ನು ಹೆಕ್ಕಿ ತೆಗೆದು ತ್ರಿಪದಿಗಳಲ್ಲಿ ಇಟ್ಟ ಹಾಗೆ ಡಿ.ವಿ.ಜಿ. ತಮ್ಮದೇ ಧಾಟಿಯಲ್ಲಿ ಕಗ್ಗಗಳನ್ನು ಕೈಗಿತ್ತವರು. ಇವತ್ತು ಡಿ.ವಿ.ಜಿ.ಯವರನ್ನು ನೆನೆದು ಅವರ ಬಗ್ಗೆ ನಾಲ್ಕಾರು ಸಾಲು ಬರೆಯಲಿಕ್ಕೆ ಕಾರಣವಿದೆ. ಅದೆಂದರೆ ಡಿ.ವಿ.ಜಿ.ಯವರ ಕಗ್ಗಗಳೋಪಾದಿಯಲ್ಲಿ ಮಂಡ್ಯದ ನೆಲದೊಳಗೊಂದು ಪದ್ಯ ಪುಸ್ತಕ ಜಗತ್ತಿಗೆ ಕಣ್ತೆರೆದಿದೆ. ಅಲ್ಲಿ ಜಗತ್ತಿನ ಜನರಿಗೆ ಕಿವಿ ಹಿಂಡಿ ಉಪದೇಶ ಕೊಟ್ಟವನು ಮಂಕುತಿಮ್ಮನಾದರೆ ಇಲ್ಲಿವನು ಪೆದ್ದಮಾರ ಹೌದು! ಡಾ. ಪ್ರದೀಪಕುಮಾರ ಹೆಬ್ರಿ, ಯುಗಾವತಾರಿಯಂತಹ ಮಹಾಕಾವ್ಯವನ್ನು ತಮ್ಮ ಲೇಖನಿಯಿಂದ ಒಡಮೂಡಿಸುತ್ತಲೇ, ಕಗ್ಗದಂತಹ ೧೧೩೪ ಪದ್ಯಗಳನ್ನು ಪೆದ್ದಮಾರನ ಪದ್ಯವಾಗಿ ನಮ್ಮ ಕೈಗಿತ್ತಿದ್ದಾರೆ. ಬೇಸರವಾದಾಗಲೆಲ್ಲ ಪುಟತಿರುವಿ ಹಾಕಿ ಅಲ್ಲಿ ನಿಮಗೊಂದು ಸಾಂತ್ವನ ಸಿಗುತ್ತದೆ. ನೆನಪಾದಾಗಲೆಲ್ಲ ಕಣ್ಣಾಡಿಸಿ ನಿಮಗೊಂದು ಸಭ್ಯ ಓದಿನ ಅನುಭೂತಿ ಸಿಗುತ್ತದೆ. ಖಷಿಯಾದಾಗ ಒಮ್ಮೆ ಹಾಳೆ ತೆರೆದು ಓದಿ, ಆ ಖುಷಿಯ ಹಿಂದೆಯೇ ಬಂದೊದಗಲಿರುವ ದುಃಖಕ್ಕೆ ಒಂದು ಪರಿಹಾರ ಸಿಗುತ್ತದೆ. ಹೀಗೆ.... ಅಲ್ಲಿ ಯಾವುದುಂಟು ಯಾವುದಿಲ್ಲ ಅಂತ ಹೇಳುವ ಹಾಗಿಲ್ಲ. ಸುಮ್ಮನೇ ಕೇಳಿಸಿಕೊಳ್ಳಿ, ‘ಬದುಕು ಸಾಯುವ ಮುನ್ನ ಗಮನಿಸುತ ಎಲ್ಲವನು ವ್ಯರ್ಥವೆನಿಸದ ರೀತಿ ಬದುಕ ಸಾಗಿಸಬೇಕು ಇಂದಿದ್ದು ಹೋದವನ ನೆನೆಯಲಾರರು ಜನರು ನಾಳೆಗಿರಬೇಕು ನೀನು-ಪೆದ್ದಮಾರಾ!’ ಜಗತ್ತಿನಲ್ಲಿ ನಾವೆಲ್ಲರೂ ಜನ್ಮ ತಳೆದಿದ್ದಾಗಿದೆ. ಯಾವುದೋ ಪುಣ್ಯ, ಯಾರದೋ ಹರಕೆ ನಾವಿಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ. ಆದರೆ ನಿಜ ಅರ್ಥದಲ್ಲಿ ಮನುಜರಾಗಿ ಬಾಳುವೆ ನಡೆಸಬೇಕಾಗಿದೆ. ಸಾಯುವ ಮೊದಲೊಮ್ಮೆ ಯೋಜಿಸಿ, ಯೋಚಿಸಿ ಜೀವನದ ಹಾದಿಯನ್ನು ನಾವೇ ನಿರ್ಮಿಸಿಕೊಳ್ಳಬೇಕಿದೆ. ಛೇ! ನಾವಿರೋದೇ ದಂಡ ಅಂತ ಯಾವತ್ತಿಗಾದರೂ ಯಾರಿಗಾದರೂ ಅನಿಸಬಾರದು. ಅಷ್ಟೇ ಯಾಕೆ ನಮಗೇ ಹಾಗನ್ನಿಸಕೂಡದು. ಬದುಕು ಮುಗಿದು ನಾವು ಮಣ್ಣು ಸೇರಿದರೂ ನಮ್ಮ ಕೆಲಸದಿಂದ ನಡೆಯಿಂದ, ನುಡಿಯಿಂದ, ಸತ್ವಪೂರ್ಣವಾಗಿ ಬದುಕಿದ ನೆನಪುಗಳಿಂದ ಎಷ್ಟು ವರ್ಷವಾದರೂ ನಾವು ಈ ಜಗತ್ತಿನಲ್ಲಿ ಉಳಿಯಬೇಕೆಂಬ ಸತ್ಯವನ್ನು ಹೆಬ್ರಿ ತಣ್ಣಗೆ ಬಿಚ್ಚಿಡುತ್ತಾ ಹೋಗುತ್ತಾರೆ. ‘ಓದದಿದ್ದರೆ ನೀನು ಯಾವ ಫಲವಿದೆ ಹೇಳು? ಓದು ಒಯ್ಯುವುದು ದಿವ್ಯತೆಯ ಭಾವಕ್ಕೆ, ನೋವನೆಲ್ಲವ ಮರೆಸಿ ಹೊಸಲೋಕದನುಭಾವ ಓದೆಂಬುದನನ್ಯತೆಯು-ಪೆದ್ದಮಾರಾ!’ ದೇಶ ಸುತ್ತು ಇಲ್ಲ ಕೋಶ ಓದು ಅನ್ನುವುದೊಂದು ಸೂಕ್ತಿಯಿದೆ. ನಾಲ್ಕು ಗೋಡೆಯ ಮಧ್ಯೆ ಕುಳಿತರೆ ಮೂರ್ಖರಾಗುವುದು ಹೇಗೋ ಹಾಗೆ, ನಮ್ಮದೇ ಲೋಕದಲ್ಲಿ ನಾವಿದ್ದು ಕೂಪಮಂಡೂಕಗಳಾಗುವುದಕ್ಕಿಂತ ದೇಶ ಸುತ್ತಿ ಅನುಭವ ಪಡೆಯಬೇಕು ಅಥವಾ ಓದಿನ ಮೂಲಕ ಜ್ಞಾನ ಪಡೆಯಬೇಕು. ಓದೆನ್ನುವುದು ನೀಡುವ ಸಂತಸವನ್ನು ವರ್ಣಿಸಲು ಅಸಾಧ್ಯ. ಏಕಾಂಗಿಯಾಗಿ ಕೂತವನ ಜೊತೆಗಾರನಾಗಿ ಬರುವುದೇ ಓದು. ಅದೊಂದು ಸಮ್ಮೋಹನ ಕ್ರಿಯೆ. ಓದಿಗೆ ಕೂತಾಗಲೆಲ್ಲ ಊಟ, ತಿಂಡಿ, ನಿದ್ರೆ ಮರೆತೇ ಹೋಗುವ ಹಾಗೆ ಓದು ನಮ್ಮ ಮೇಲೆ ಮಾಡುವ ಯಕ್ಷಿಣಿ ಅನನ್ಯವಾದುದು. ಅದೊಂದು ದಿವ್ಯ ಅನುಭೂತಿ. ಸಾವಿರ ಚಿಂತೆಯಿರಲಿ. ಅದನ್ನೆಲ್ಲ ಗಂಟು ಕಟ್ಟಿ ಬಿಸಾಕುವ ಹಾಗೆ ಒಂದು ಒಳ್ಳೆಯ ಓದು ನಮ್ಮ ಮನಸ್ಸನ್ನು ಪರಿವರ್ತನೆ ಮಾಡುತ್ತದೆ. ಅಂಥಾ ಓದನ್ನೇ ನಾವು ಕಡೆಗಣಿಸಿಬಿಟ್ಟರೆ ನಮಗ್ಯಾವ ಫಲವಿದೆ ಅನ್ನುತ್ತಾರೆ ಹೆಬ್ರಿ. ಅಂಥಾ ಅನನ್ಯವಾದ ಓದನ್ನು ಸಿದ್ದಿಸಿಕೊಂಡ ಮಾತ್ರಕ್ಕೇ ಅವರಿಲ್ಲಿ ನಮ್ಮ ಕೈಗೆ ಒಂದು ಸಿದ್ಧಪಾಕದಂತಿರುವ ಕೃತಿಯೊಂದನ್ನು ಕೈಗಿತ್ತಿದ್ದಾರೆ. ಇಂತಹ ಸಾವಿರಕ್ಕೂ ಹೆಚ್ಚು ಪದ್ಯಗಳು. ನಿಮ್ಮ ಮನ ತಣಿಸಲಿಕ್ಕೇ ಸನ್ನದ್ಧವಾಗಿ ಪುಸ್ತಕವಾಗಿ ಹೊರ ಬಂದಿದೆ. ಹೊಸ ವರ್ಷದ ಮೊದಲ ದಿನ ನಮ್ಮೆಲ್ಲರಿಗೊಂದು ಕೊಡುಗೆಯಾಗಿ ಸಿಕ್ಕಿದ್ದು ಪೆದ್ದಮಾರನ ಪದ್ಯ.
"2018-10-22T14:26:11"
http://amerikannada.org/html/latest_articles.php?artid=116
ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರ, ಬಿಝಿನೆಸ್ ಪಾರ್ಕ್‍ಗೆ ಶಂಕುಸ್ಥಾಪನೆ | CM will laying foundation for International Convention Center, Business Park - Kannada Oneindia | Updated: Thursday, February 22, 2018, 12:04 [IST] ಬೆಂಗಳೂರು, ಫೆ. 22: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ತಲೆಯೆತ್ತಲಿರುವ ಬಹುನಿರೀಕ್ಷಿತ ಬೆಂಗಳೂರು ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ (ಬಿಐಸಿಸಿ- ಬೆಂಗಳೂರು ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್) ಮತ್ತು ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ (ಬಿಎಸ್‍ಬಿಪಿ)ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಭುವನಹಳ್ಳಿಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಶ್ರೀ ಆರ್.ವಿ.ದೇಶಪಾಂಡೆ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ : ದೇಶಪಾಂಡೆ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಈ ಸಮಾರಂಭದಲ್ಲಿ ಸಚಿವ ಕೃಷ್ಣ ಬೈರೇಗೌಡ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಸಂಸದ ವೀರಪ್ಪ ಮೊಯಿಲಿ, ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮುಂತಾದವರು ಉಪಸ್ಥಿತರಿರಲಿದ್ದಾರೆ. "ಉದ್ಯಮಲೋಕದವರು ಸಭೆ, ಸಮಾರಂಭ, ಸಮಾಲೋಚನೆ, ಸಮಾವೇಶ, ವಸ್ತುಪ್ರದರ್ಶನ ನಡೆಸಲು ಅನುಕೂಲವಾಗಲೆಂಬ ಉದ್ದೇಶದಿಂದ ಸಮಾವೇಶ ಕೇಂದ್ರ ಮತ್ತು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಕ್ರಮವಾಗಿ 35 ಎಕರೆ ಮತ್ತು 407 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದೆ,'' ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. 'ಮಹತ್ವಾಕಾಂಕ್ಷಿ ಸಿಗ್ನೇಚರ್ ಬಿಝಿನೆಸ್ ಪಾರ್ಕ್, ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಉದ್ಯಾನನಗರಿ ಮತ್ತು ಗ್ರೀನ್‍ಹೌಸ್ ಪರಿಕಲ್ಪನೆಯಡಿ ನಿರ್ಮಿಸಲಿರುವ ಈ ಎರಡೂ ಯೋಜನೆಗಳಿಗೆ ಅಂದಾಜು 935 ಕೋಟಿ ರೂ. ವೆಚ್ಚವಾಗಲಿದೆ," ಎಂದು ಅವರು ಮಾಹಿತಿ ನೀಡಿದ್ದಾರೆ. "ಸಿಗ್ನೇಚರ್ ಬಿಝಿನೆಸ್ ಪಾರ್ಕ್‍ನಲ್ಲಿ 8,000 ಆಸನ ಸಾಮರ್ಥ್ಯದ ಸಮಾವೇಶ ಕೇಂದ್ರ, 6,500 ಚದರ ಮೀಟರ್ ವಿಸ್ತೀರ್ಣದ ವಸ್ತುಪ್ರದರ್ಶನಾಲಯ, ಕನಿಷ್ಠ 20 ಜನರಿಂದ ಹಿಡಿದು ಗರಿಷ್ಠ 1,000 ಜನ ಪಾಳ್ಗೊಳ್ಳಬಹುದಾದ ಸಭಾಂಗಣಗಳು, ಪಂಚತಾರಾ ಮತ್ತು ತ್ರಿತಾರಾ ಹೋಟೆಲುಗಳು, ಸರ್ವೀಸ್ ಅಪಾರ್ಟ್‍ಮೆಂಟ್‍ಗಳು ಇರಲಿವೆ,'' ಎಂದು ದೇಶಪಾಂಡೆ ವಿವರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು "ಐಟಿ, ಬಿಟಿ, ಬಿಪಿಓ, ಔಷಧೋದ್ಯಮ ಮುಂತಾದ ಕ್ಷೇತ್ರಗಳ ದೇಶದ ಕೇಂದ್ರ ಸ್ಥಾನವಾಗಿರುವ ಬೆಂಗಳೂರಿನ ಉದ್ಯಮಿಗಳಿಗೆ ಇಂಥದೊಂದು ಸಮಾವೇಶ ಕೇಂದ್ರ ಮತ್ತು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ತುಂಬಾ ಅಗತ್ಯವಾಗಿತ್ತು. ಇದರಿಂದ ಇಲ್ಲಿನ ಉದ್ಯಮ ಪರಿಸರ ಮತ್ತಷ್ಟು ಬೆಳೆಯಲಿದೆ," ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ (ಐಡಿಡಿ) ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‍ಐಐಡಿಸಿ) ಜತೆಗೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿವೆ. rv deshpande siddaramaiah bengaluru karnataka ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಬೆಂಗಳೂರು ಕರ್ನಾಟಕ Bengaluru International Convention Center (BICC) and Bengaluru Signature Business Park (BSBP) will be constructed near Kempegowda International Airport. Today, the Chief Minister Siddaramaiah will laying the foundation stone for this project.
"2019-10-19T21:22:40"
https://kannada.oneindia.com/news/bengaluru/cm-will-laying-foundation-for-international-convention-center-business-park-135478.html
ನಾ ನೋಡಿದ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ವಿಮರ್ಶೆ: ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್ - Niranthara News https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#cmVkLmpwZw== Published: Sunday, December 29, 2019, 10:21 [IST] ಮೇಕಿಂಗ್ ನಲ್ಲಿ ಪ್ರೇಕ್ಷಕರ ಪ್ರಶಂಸೆಗಳಿಸಿದ ಉಗ್ರಂ, ಟಗರು, ಮಫ್ತಿ, ಕೆಜಿಎಫ್, ಸಾಲಿಗೆ ಸೇರುವ ಇನ್ನೊಂದು ಸಿನಿಮಾ ಸಚಿನ್ ನಿರ್ದೇಶನದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಪ್ರತಿಯೊಂದು ಫ್ರೇಮ್ ನಲ್ಲೂ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತದೆ. ಸಿಂಪಲ್ ಸ್ಟೋರಿ ಲೈನ್ ಅನ್ನು ಹೇಗೆ ಡಿಫರೆಂಟ್ ಆಗಿ ತೆರೆಮೇಲೆ ತರಬಹುದು ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆ ಈ ಚಿತ್ರ ಎನ್ನುವುದಕ್ಕೆ ಅಡ್ದಿಯಿಲ್ಲ. https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#YXZhbmUtc3JpbWF ಹಾಗಂತ, ನಿರ್ದೇಶಕರು ಚಿತ್ರದಲ್ಲಿ ಎಲ್ಲೂ ಎಡವಿಲ್ಲ ಎಂದು ಹೇಳಲು ಬರುವುದಿಲ್ಲ. ಕೆಲವೊಂದು, ಪ್ರಶ್ನೆಗಳಿಗೆ ಉತ್ತರ ಕೊಡುವ ವಿಚಾರದಲ್ಲಿ ನಿರ್ದೇಶಕರೂ ಗೊಂದಲದಲ್ಲಿದ್ದಾರಾ, ಗೊತ್ತಿಲ್ಲ? ಆದರೆ, ಇದು, ಒಟ್ಟಾರೆಯಾಗಿ, ಚಿತ್ರದ ಔಟ್ ಪುಟ್ ಗೆ ಅಷ್ಟಾಗಿ ಎಫೆಕ್ಟ್ ಕೊಡುವುದಿಲ್ಲ. ‘ಶ್ರೀಮನ್ನಾರಾಯಣ’ನನ್ನು ನೋಡಿ ದೀರ್ಘ ವಿಮರ್ಶೆ ಮಾಡಿದ ನಟಿ ಆಶಿಕಾ ರಂಗನಾಥ್ https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#ZHAtc2hpa2EtMTU ನಾಯಕನ ಇಂಟ್ರಡಕ್ಷನ್ ಸೀನ್ ನಿಂದು ಹಿಡಿದು, ಹಲವು ದೃಶ್ಯಗಳು ವಿಭಿನ್ನತೆಯಿಂದ ಕೂಡಿದೆ. ಚಿತ್ರಕ್ಕಾಗಿ ಕಾಲ್ಪನಿಕವಾಗಿ ಸೃಷ್ಟಿಸಿರುವ ಅಮರಾವತಿ ಎನ್ನುವ ಊರಿನಲ್ಲಿ, ಹಾಕಿರುವ ಎಲ್ಲಾ ಸೆಟ್ ಗಳು ತಾಜಾತನದಿಂದ ಕೂಡಿದ್ದು ಚಿತ್ರಕ್ಕೆ ಪೂರಕವಾಗಿದೆ. https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#YXNuMWNvcHktMTU ಇಬ್ಬರು ಮಕ್ಕಳಾದ ಜಯರಾಮ ಮತ್ತು ತುಕಾರಾಮ ಅಭೀರ ಸಂಸ್ಥಾನದ ರಾಮಚಂದ್ರನ ಇಬ್ಬರು ಮಕ್ಕಳಾದ ಜಯರಾಮ ಮತ್ತು ತುಕಾರಾಮ ನಡುವೆ ‘ಲೂಟಿ’ ಪತ್ತೆಗಾಗಿ ನಡೆಯುವ ಸಹೋದರರ ಕಲಹ, ಅಲ್ಲಿಗೆ, ಪೊಲೀಸ್ ಅಧಿಕಾರಿಯಾಗಿ ಎಂಟ್ರಿ ಕೊಡುವ ನಾಯಕ, ಅಲ್ಲಿಂದ ಲೂಟಿಗಾಗಿ ಕಳ್ಳ-ಪೊಲೀಸ್ ನಡುವೆ ನಡೆಯುವ ಆಟವೇ ಚಿತ್ರದ ಕಥಾಹಂದರ. https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#YXNuMmNvcHktMTU ಅಮರಾವತಿ ಎನ್ನುವ ಸೃಷ್ಟಿಯೇ ಒಂದು ಅದ್ಭುತ ಚಿತ್ರದಲ್ಲಿನ ಅಮರಾವತಿ ಎನ್ನುವ ಸೃಷ್ಟಿಯೇ ಒಂದು ಅದ್ಭುತ. ಚಿತ್ರದ ಕಲಾನಿರ್ದೇಶಕರ ಈ ಪ್ರಯತ್ನಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲೇ ಬೇಕು. ತಮ್ಮ ಕಲಾಕುಸುರಿಯಿಂದ ಚಿತ್ರಕ್ಕೆ ಹೊಸ ಮೆರುಗನ್ನು ಇವರು ನೀಡಿದ್ದಾರೆ. ಹಾಗೆಯೇ, ಚಿತ್ರದ ಮೈನಸ್ ಪಾಯಿಂಟ್ ಏನಂದರೆ, ಚಿತ್ರದ ಅವಧಿ. ಇಂಟರ್ವಲ್ ನಂತರ, ಕೆಲವೊಂದು ದೃಶ್ಯಕ್ಕೆ ಸಂಕಲನಕಾರರೂ ಆಗಿರುವ ನಿರ್ದೇಶಕರು ಸಚಿನ್ ಕತ್ತರಿ ಪ್ರಯೋಗಿಸಬಹುದಿತ್ತು. https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#YXNuM2NvcHktMTU ತಾಂತ್ರಿಕ ವರ್ಗದ ಪರ್ಫೆಕ್ಟ್ ಕೆಲಸ ಚಿತ್ರದ ಎಲ್ಲಾ ವರ್ಗವು ತಮ್ಮತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಸಿನಿಮಾವನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗಲು ಕಾರಣರಾಗಿದ್ದಾರೆ. ಅದರಲ್ಲೂ, ಸಿನಿಮಾಟೋಗ್ರಾಫರ್ ಕರ್ಮ್ ಚಾವ್ಲಾ ತುಂಬಾ ಕಣ್ಮನ ಸೆಳೆಯುವಂತೆ ಸೆರೆ ಹಿಡಿದಿದ್ದಾರೆ. ಚರಣ್ ರಾಜ್ ನೀಡಿದ ಸಿನಿಮಾದ ಎರಡು ಹಾಡುಗಳು ಈಗಾಗಲೇ ಭರ್ಜರಿಯಾಗಿ ಹಿಟ್ ಆಗಿದೆ. https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#YXNuNGNvcHktMTU ಬಿಜಿಎಂ – ಅಜನೀಶ್ ಲೋಕನಾಥ್ ಎನ್ನುವ ಪ್ರತಿಭೆ ಈ ವಿಷಯವನ್ನು ಒತ್ತಿಒತ್ತಿ ಹೇಳಬೇಕಿದೆ. ಅದು, ಚಿತ್ರವನ್ನು ಹಾಲಿವುಡ್ ಲೆವೆಲಿಗೆ ತೆಗೆದುಕೊಂಡು ಹೋಗುವುದು ಚಿತ್ರದ ಹಿನ್ನಲೆ ಸಂಗೀತ. ಈ ಹಿಂದೆಯೇ ತಾನೆಂತಹ ಪ್ರತಿಭೆ ಎನ್ನುವುದನ್ನು ನಿರೂಪಿಸಿರುವ ಅಜನೀಶ್ ಲೋಕನಾಥ್, ಈ ಚಿತ್ರಕ್ಕೆ ನೀಡಿದ ಬಿಜಿಎಂ, ಒಂದೊಂದು ಸನ್ನಿವೇಶವನ್ನು ಇನ್ನೊಂದು ಲೆವೆಲಿಗೆ ತೆಗೆದುಕೊಂಡು ಹೋಗಲು (ಚಿತ್ರದಲ್ಲಿ ಅಜನೀಶ್) ಕಾರಣವಾಗುತ್ತದೆ. https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#YXNuNWNvcHktMTU ಬಾಲಾಜಿ ಮನೋಹರ್ (ಜಯರಾಮ) ಮತ್ತು ಪ್ರಮೋದ್ ಶೆಟ್ಟಿ (ತುಕಾರಾಂ) ಚಿತ್ರದ ಇಬ್ಬರು ಸಹೋದರರ ಪಾತ್ರಧಾರಿಗಳಾದ ಬಾಲಾಜಿ ಮನೋಹರ್ (ಜಯರಾಮ) ಮತ್ತು ಪ್ರಮೋದ್ ಶೆಟ್ಟಿ (ತುಕಾರಾಂ) ಅದ್ಭುತವಾಗಿ ನಟಿಸಿದ್ದಾರೆ. ಅದರಲ್ಲೂ, ಜಯರಾಮ ಪಾತ್ರಧಾರಿಯಂತೂ ಪರಕಾಯ ಪ್ರವೇಶ ಮಾಡಿದ್ದಾರೆ. ಮಾತಿಲ್ಲದೇ ರಿಷಬ್ ಶೆಟ್ಟಿ ಗಮನ ಸೆಳೆಯುತ್ತಾರೆ. ಇನ್ನು, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ (ಬ್ಯಾಂಡ್ ಮಾಸ್ಟರ್, ಸಲ್ಮಾನ್ ಅಹಮದ್, ಯೋಗರಾಜ್ ಭಟ್ ಉತ್ತಮವಾಗಿ ನಟಿಸಿದ್ದಾರೆ. https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#YXNuNmNvcHktMTU ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್ ಚಿತ್ರದ ನಾಯಕಿ ಶಾನ್ವಿ ಶ್ರೀವಾಸ್ತವ್ ಗೆ ಇದೊಂದು ಹೊಸರೀತಿಯ ಪಾತ್ರ ಮತ್ತು ಅದನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಕೂಡಾ… ಮೂರು ವರ್ಷಗಳ ಲಾಂಗ್ ಗ್ಯಾಪ್ ನಂತರ, ತೆರೆಮೇಲೆ ಬಂದ ರಕ್ಷಿತ್ ಶೆಟ್ಟಿ, ಸೀರಿಯಸ್ ಮತ್ತು ಕಾಮಿಡಿ ಪಾತ್ರಗಳಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಚಿತ್ರದ ನಿರ್ದೇಶಕ ಸಚಿನ್, ಮೂರು ದಿನಗಳ ಹಿಂದೆ ಒಂದು ಮಾತನ್ನು ಹೇಳಿದ್ದರು. ತಿಂಗಳಾನುಗಟ್ಟಲೆ ಎಡಿಟಿಂಗ್ ರೂಂನಿಂದ ಹೊರಬಂದಿಲ್ಲ ಎಂದು. ಅವರ ಪ್ರಯತ್ನ ಚಿತ್ರದ ಎಲ್ಲಾ ಸನ್ನಿವೇಶಗಳಲ್ಲಿ ಕಾಣಿಸುತ್ತದೆ. ಒಟ್ಟಾರೆಯಾಗಿ ರೆಟ್ರೋ ಶೈಲಿಯಲ್ಲಿ ಸಾಗುವ ಸಿನಿಮಾ ಇದಾಗಿದೆ. ಡೋಂಟ್ ಮಿಸ್ ಇಟ್. Source Credit Kannada.boldsky.com Pin it Email https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#MS0xNTc3NjgxNjY ಮೇಷ ರಾಶಿ ಆದಾಯದಲ್ಲಿ ಸ್ಥಿರತೆ ಕಾಣಬಹುದು. ನಿಮ್ಮ ಬಳಿ ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬರಬಹುದು ಸೂಕ್ತ ಮಾರ್ಗದರ್ಶನ ನೀಡಿ. ಹಿತೈಷಿಗಳ ಸಹಕಾರದಿಂದ ಬಂಡವಾಳದ ಕ್ರೂಡಿಕರಣ ಮಾಡುವ ಸಿದ್ಧತೆ ನಡೆಸುವಿರಿ. ದೀರ್ಘಾವಧಿಯ ಹೂಡಿಕೆಗಳನ್ನು ಮಾಡಲು ಬಯಸುವಿರಿ, ಇದರಿಂದ ಲಾಭ ಹೆಚ್ಚಾಗಲಿದೆ. ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ 9886665656 9886155755 Pin it Email https://nirantharanews.com/%e0%b2%a8%e0%b2%be-%e0%b2%a8%e0%b3%8b%e0%b2%a1%e0%b2%bf%e0%b2%a6-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%85%e0%b2%b5%e0%b2%a8%e0%b3%87-%e0%b2%b6%e0%b3%8d%e0%b2%b0%e0%b3%80/#Mi0xNTc3NjgxMjM ವೃಷಭ ರಾಶಿ ದಾಂಪತ್ಯದಲ್ಲಿ ನಡೆಯುವ ಸಣ್ಣಪುಟ್ಟ ಜಗಳವನ್ನು ಆದಷ್ಟು ಶಾಂತರೀತಿಯಿಂದ ಸಮಾಧಾನಪಡಿಸಿ. ವಿದ್ಯೆ […]
"2020-02-21T16:14:17"
https://nirantharanews.com/%E0%B2%A8%E0%B2%BE-%E0%B2%A8%E0%B3%8B%E0%B2%A1%E0%B2%BF%E0%B2%A6-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE-%E0%B2%85%E0%B2%B5%E0%B2%A8%E0%B3%87-%E0%B2%B6%E0%B3%8D%E0%B2%B0%E0%B3%80/
ಖಾಸಗಿ - Thirukkural ಕೊನೆಯ ಬಾರಿ ಮಾರ್ಪಡಿಸಿರುವುದು: 17-Mar-2015 Thirukkural.net ("ನಮಗೆ", "ನಾವು", ಅಥವಾ "ನಮ್ಮ") ನಡೆಸುತ್ತಿವೆ http://www.thirukkural.net (ಈ "ಸೈಟ್"). ಈ ಪುಟದಲ್ಲಿ ನಾವು ಜಾಲತಾಣದ ಬಳಕೆದಾರರಿಂದ ಸ್ವೀಕರಿಸಲು ಸಂಗ್ರಹಣೆ, ಬಳಕೆ ಮತ್ತು ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯ ಬಗ್ಗೆ ನಮ್ಮ ನೀತಿಗಳ ನೀವು ಮಾಹಿತಿನೀಡಿ. ನಾವು ನಿಮ್ಮ ಮಾಹಿತಿಯನ್ನು ನಮ್ಮ ಸೈಟ್ ಒದಗಿಸುವದಕ್ಕೆ ಮತ್ತು ಉತ್ತಮಗೊಳಿಸುವಕ್ಕೆ ಮಾತ್ರ ಉಪಯೋಗಿಸುತ್ಹಿವಿ. ನಮ್ಮ ಸೈಟ್ ಬಳಸಿಕೊಂಡು, ನೀವು ನೀತಿ ಅನುಗುಣವಾದ ಮಾಹಿತಿಗೆ ಮತ್ತು ಸಂಗ್ರಹಕ್ಕೆ ಒಪ್ಪುಕೊಳುತಿದ್ದಿರಿ. ಮಾಹಿತಿ ಸಂಗ್ರಹಣೆ ಮತ್ತು ಉಪಯೋಗ ನಮ್ಮ ಸೈಟ್ ಬಳಸಿಕೊಂಡು, ನಾವು ನಿಮ್ಮನ್ನು ಸಂಪರ್ಕಿಸಲು ಅಥವಾ ಗುರುತಿಸಲು ಬಳಸಬಹುದಾದ ಕೆಲವು ವೈಯಕ್ತಿಕವಾಗಿ ಗುರುತಿಸಬಲ್ಲಂತಹ ಮಾಹಿತಿಯೊಂದಿಗೆ ನಮಗೆ ಒದಗಿಸಲು ನಿಮ್ಮನ್ನು ಕೇಳಿಕೊಳ್ಳಬಹುದು. ವೈಯಕ್ತಿಕವಾಗಿ ಗುರುತಿಸಬಲ್ಲಂತಹ ಮಾಹಿತಿಯನ್ನು ಒಳಗೊಂಡಿದೆ, ಆದರೆ ನಿಮ್ಮ ಹೆಸರು ಸೀಮಿತವಾಗಿಲ್ಲ ("ವೈಯಕ್ತಿಕ ಮಾಹಿತಿ"). ಚರಿತ್ರೆ ಡಾಟಾ ನಮ್ಮ ಸೈಟ್ ಭೇಟಿ ಮಾಡಿದಾಗ ಅನೇಕ ಸೈಟ್ ನಿರ್ವಾಹಕರ ಹಾಗೆ ನಿಮ್ಮ ಬ್ರೌಸರ್ ನಮಗೆ ಕಳುಸುವ ಮಾಹಿತಿ ಸಂಗ್ರಹಿಸುಥ್ಹೇವೆ ("ಚರಿತ್ರೆ ಡಾಟಾ"). ಈ ಡೇಟಾ ಯಲ್ಲಿ ನಿಮ್ಮ ಕಂಪ್ಯೂಟರ್ ಇಂಟರ್ನೆಟ್ ಪ್ರೊಟೋಕಾಲ್ ("IP") ವಿಳಾಸ, ಬ್ರೌಸರ್ ಪ್ರಕಾರ, ಬ್ರೌಸರ್ ಆವೃತ್ತಿ, ನೀವು ಭೇಟಿ ನಮ್ಮ ಸೈಟ್ ಪುಟಗಳಲ್ಲಿ, ಸಮಯ ಮತ್ತು ನಿಮ್ಮ ಭೇಟಿಯ ದಿನಾಂಕ, ಆ ಪುಟಗಳಲ್ಲಿ ಕಳೆದ ಸಮಯವನ್ನು ಮಾಹಿತಿಯನ್ನು ಮತ್ತು ಒಳಗೊಂಡಿರಬಹುದು. ಕುಕೀಸ್ ದತ್ತಾಂಶದ ಸಣ್ಣ ಪ್ರಮಾಣ ಕಡತಗಳಾಗಿದ್ದು ಅದರಲ್ಲಿ ಅನಾಮಿಕ ಅನನ್ಯ ಗುರುತು ಒಳಗೊಂಡಿರಬಹುದಾದ. ಕುಕೀಸ್ ಒಂದು ಜಾಲತಾಣದಲ್ಲಿ ನಿಮ್ಮ ಬ್ರೌಸರ್ಗೆ ಕಳುಹಿಸಲಾಗುತ್ತದೆ ಮತ್ತು ನಿಮ್ಮ ಕಂಪ್ಯೂಟರ್ನ ಹಾರ್ಡ್ ಡ್ರೈವ್ ಅಲ್ಲಿ ಸಂಗ್ರಹಗೊಂಡಿರುಥ್ಹದೆ.ಅನೇಕ ಸೈಟ್ಗಳ ಹಾಗೆ ನಾವು ಮಾಹಿತಿ ಸಂಗ್ರಹಿಸಲು "ಕುಕೀಗಳನ್ನು" ಬಳುಸುಥ್ಹೇವೆ. ಎಲ್ಲ ಕುಕೀಸ್ ಅನ್ನು ನಿರಾಕರಿಸಲು ನಿಮ್ಮ ಬ್ರೌಸರ್ ಸೂಚನೆ ನೀಡಬಹುದಾಗಿದೆ ಅಥವಾ ಕುಕೀ ಅನ್ನು ಕಳುಹಿಸಿದಾಗ ಸೂಚಿಸಲು. ನೀವು ಕುಕೀಗಳನ್ನು ಸ್ವೀಕರಿಸಲು ಹೋದರೆ, ನೀವು ನಮ್ಮ ಸೈಟ್ ಕೆಲವು ಭಾಗಗಳು ಬಳಸಲು ಸಾಧ್ಯವಾಗುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯ ಭದ್ರತೆ ನಮಗೆ ಮುಖ್ಯ, ಆದರೆ ಇಂಟರ್ನೆಟ್ನಲ್ಲಿ ಸ್ಥಳಾಂತರ, ಅಥವಾ ವಿದ್ಯುನ್ಮಾನ ಸಂಗ್ರಹಣಾ ವಿಧಾನ, ಯಾವುದೇ ವಿಧಾನವಿಲ್ಲ 100% ಸುರಕ್ಷಿತ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ರಕ್ಷಿಸಲು ವಾಣಿಜ್ಯ ರೀತಿಯಲ್ಲಿ ಸ್ವೀಕಾರಾರ್ಹ ರೀತಿಯಲ್ಲಿ ಬಳಸಲು ಶ್ರಮಿಸುಥೇವೆ, ಅದರ ನಾವು ಸಮಗ್ರ ಭದ್ರತ ಯನ್ನು ಕೊಡೋದಿಲ್ಲ. ಈ ಗೌಪ್ಯತಾ ನೀತಿ ಬದಲಾವಣೆಗಳು Thirukkural.net ಕಾಲಕಾಲಕ್ಕೆ ಈ ಗೌಪ್ಯತಾ ನೀತಿ ಪರಿಷ್ಕರಿಸಬಹುದು. ನಾವು ಸೈಟ್ ಹೊಸ ಖಾಸಗಿ ನಿಯಮಾವಳಿ ನೀಡಿ ಯಾವುದೇ ಬದಲಾವಣೆಗಳನ್ನು ನಿಮಗೆ ಸೂಚಿಸುತ್ತೇವೆ. ನೀವು ಯಾವುದೇ ಬದಲಾವಣೆಗಳನ್ನು ನಿಯತಕಾಲಿಕವಾಗಿ ಈ ಗೌಪ್ಯತಾ ನೀತಿ ವಿಮರ್ಶಿಸಿ ಸಲಹೆ ನೀಡಿರಿ. ಈ ಗೌಪ್ಯತಾ ನೀತಿ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
"2020-08-15T08:06:35"
https://www.thirukkural.net/kn/privacy.html
01201. ಕಾಯಬೇಕು – ಕರುಣೆ – ಮೃಗ – ಬೈತಲೆ – ಮನದಿಂಗಿತಗಳ ಸ್ವಗತ 01201. ಕಾಯಬೇಕು – ಕರುಣೆ – ಮೃಗ – ಬೈತಲೆ (೦೧) ಕಾಯದ ಮಾಯ ! ಕಾಯಬೇಕು ಭೌತಿಕ ಕಾಯಬೇಕು ಜೀವಾತ್ಮಕೆ ಪರಮಾತ್ಮದ ಕರುಣೆ ಜತೆಗೂಡಬೇಕು ಇಹ ಜೀವನಕೆ ಖಗ ಮೃಗ ಜಗದೆ ಮಾನವ ಜನ್ಮ ಪೂರ್ವ ಪುಣ್ಯ ಮೋಹದೆ ಮೈಮರೆತೀಯ, ಬೈತಲೆ ತೆಗೆದಂತಲ್ಲ ಪರದ ದಾರಿ ! (೦೨) ಸಹನೆ ಕಾಯಬೇಕು ತನು ಕಾಯಬೇಕು, ಪಕ್ವವಾಗುವತನಕ ಕಾಯಬೇಕು ಬೆಳೆಸುವ ಬದುಕ, ಕರುಣೆ ದಕ್ಕುವ ತನಕ ನಡೆ ನುಡಿ ತಾಳ್ಮೆ ಭಯವಿಲ್ಲದ ಮೃಗದಂತಾಗೆ ಅಸಂಬದ್ಧ ಬಾಚಿಯು ಗಾಳಿಗೆ ಕೆದರಿ, ಕೆಟ್ಟ ಬೈತಲೆಯಂತೆ ಬಾಳೆ ಪ್ರಕ್ಷುಬ್ಧ ! ೦೭.೦೪.೨೦೧೭ Posted on ಏಪ್ರಿಲ್ 7, 2017 Author ನಾಗೇಶ ಮೈಸೂರುCategories ನಾಗೇಶ-ಮೈಸೂರು-ಬ್ಲಾಗ್, ಹನಿಗವನ, kannada-blog, Nagesha Blog, nagesha-mysore-blog, Poem_ಕವನTags ಕರುಣೆ, ಕಾಯಬೇಕು, ಬೈತಲೆ, ಮೃಗ, chouchoupadi, mysore, Nagesha ಹಿಂದೆ Previous post: 01200. ಬುಗುರಿ – ಸೋಪು – ಪುನೀತ – ಅಲ್ಪವಿರಾಮ ಮುಂದೆ Next post: 01202. ಇದ್ದಕ್ಕಿದ್ದಂತೆ ತಟ್ಟನೆ..
"2018-06-20T03:19:05"
https://nageshamysore.wordpress.com/2017/04/07/01201-%E0%B2%95%E0%B2%BE%E0%B2%AF%E0%B2%AC%E0%B3%87%E0%B2%95%E0%B3%81-%E0%B2%95%E0%B2%B0%E0%B3%81%E0%B2%A3%E0%B3%86-%E0%B2%AE%E0%B3%83%E0%B2%97-%E0%B2%AC%E0%B3%88%E0%B2%A4%E0%B2%B2%E0%B3%86/
ದೇಶದ ಮೊದಲ ಮಹಿಳಾ ವೈಮಾನಿಕ ಇಂಜಿನಿಯರ್ ಹಿನಾ ಜೈಸ್ವಾಲ್, ಇತಿಹಾಸ ಸೃಷ್ಟಿ – Karavali Kirana ಬ್ಯಾಡ್ಮಿಂಟನ್‌ ರಾಷ್ಟ್ರೀಯ ಚಾಂಪಿಯನ್‌ಶ...
"2019-11-21T18:52:29"
https://karavalikirana.com/110496
ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? | Digital Kannada Home ರಾಜಕೀಯ ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..? ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲುಂಡಿದೆ. ಪ್ರಧಾನಿ ಮೋದಿ, ಅಮಿತ್​ ಶಾ ಜೋಡಿ ಕಡೆಗೆ ಎಲ್ಲರೂ ಬೆರಳು ಮಾಡ್ತಿದ್ದಾರೆ. ಇದೀಗ ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ಕೃಷ್ಣ ಮಠದ ಹಿರಿಯ ಯತಿ ವಿಶ್ವೇಶತೀರ್ಥರೂ ಕೂಡ ಪ್ರಧಾನಿ ಮೋದಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅದರಲ್ಲೂ ಪಕ್ಕದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟವಾಗಲಿದೆ ಎಂದಿರುವ ಶ್ರೀಗಳು, ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗುಬಡಿಯಲು ಹಠ ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್​ ಬಿಹಾರಿ ವಾಜಪೇಯಿ ಅವರ ನೀತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ. ಮೋದಿ ಕೆಲವು ದಿಟ್ಟ ನಿರ್ಧಾರ ಮಾಡಿದ್ದಾರೆ ಆದ್ರೆ ಅವು ಜನರನ್ನು ತಲುಪಿಲ್ಲ. ಈ ಮೊದಲು ಪ್ರಧಾನಿ ಮೋದಿ ಬಗ್ಗೆ ಜನರಿಗಿದ್ದ ನಿರೀಕ್ಷೆ ಈಗ ಇಲ್ಲ. ದೇಶದ ಜನರು ನಿರೀಕ್ಷೆ ಇಟ್ಟ ಪ್ರಮಾಣದಲ್ಲಿ ದೇಶದಲ್ಲಿ ಕೆಲಸ ಆಗಿಲ್ಲ ಎಂದಿರುವ ಪೇಜಾವರ ಶ್ರೀಗಳು, ‘ಜನಸಾಮಾನ್ಯರಿಗೆ ನೋಟ್ ಬ್ಯಾನ್ ಫಲ ಮುಟ್ಟಿಲ್ಲ. ಹೀಗಾಗಿ ಆರ್ಥಿಕ ಸುಧಾರಣೆ, ರಾಮಮಂದಿರಕ್ಕೆ ಆದ್ಯತೆ ಕೊಡಲಿ. ರಾಮ ಮಂದಿರ ನಿರ್ಮಾಣ ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು’ ಎಂದು ಸಲಹೆಯನ್ನೂ ನೀಡಿದ್ದಾರೆ. ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ವಿಚಾರದಲ್ಲಿ ಪೇಜಾವರ ಶ್ರೀಗಳು ಮಾತನಾಡಿದ್ದು, ದೇಶಕ್ಕೆ ಮೋದಿಯೇ ಮುಂದಿನ ಪ್ರಧಾನಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಮೋದಿಯಷ್ಟು ಸಮರ್ಥ ನಾಯಕ ಅಲ್ಲ. ಆದಿತ್ಯನಾಥ ರಾಜಕಾರಣಿಯಲ್ಲ ಅವರು ಸಂತ. ಉತ್ತರಪ್ರದೇಶದಲ್ಲಿ ಇಷ್ಟು ಮಾಡೋದೇ ವಿಶೇಷವಾಗಿದೆ ಎಂದಿದ್ದು, ಪಂಚರಾಜ್ಯ ಫಲಿತಾಂಶ ಮೋದಿಗೆ ಎಚ್ಚರಿಕೆ ಗಂಟೆಯಾಗಿದ್ದು, ಎನ್​ಡಿಎ ಮೈತ್ರಿಕೂಟ ಉಳಿಸಲು ಮಂದಿರ ನಿರ್ಮಾಣ ಮಾಡಬೇಕು. ಈ ಮೂಲಕ ಇತರೆ ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದಿದ್ದಾರೆ. PejavaraShri Previous articleಲೋಕಸಭೆಗೆ ಬಿಜೆಪಿ ಶಕ್ತಿ ಕುಂದಿ ಹೋಯ್ತಾ? Next articleರಾಫೆಲ್ ಡೀಲಲ್ಲಿ ಅವ್ಯವಹಾರದ ಶಂಕೆ ಇಲ್ಲ, ತನಿಖೆ ಬೇಕಿಲ್ಲ: ಸುಪ್ರೀಂ ತೀರ್ಪು
"2019-01-20T23:23:36"
https://digitalkannada.com/2018/12/14/pejavara-shree-suggestion-to-modi/
ಜನರ ಸೇವಕನಾಗಿ ದುಡಿಯುತ್ತೇನೆ: ಪ್ರಮೋದ್ ಮಧ್ವರಾಜ್ | Vartha Bharati- ವಾರ್ತಾ ಭಾರತಿ ಹೆಬ್ರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜನರ ಸೇವಕನಾಗಿ ದುಡಿಯುತ್ತೇನೆ: ಪ್ರಮೋದ್ ಮಧ್ವರಾಜ್ ವಾರ್ತಾ ಭಾರತಿ Mar 27, 2019, 9:51 PM IST ಹೆಬ್ರಿ, ಮಾ. 27: ಕೆಲಸ ಮಾಡುವ ಪ್ರಮೋದ್ ಬೇಕಾ...ಅಥವಾ... ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕಾ ಎಂದು ನೀವೆಲ್ಲ ಯೋಚಿಸಿ, ನನ್ನನ್ನು ಗೆಲ್ಲಿಸಿ. ಮುಂದಿನ 5 ವರ್ಷಗಳ ಕಾಲ ಜನರ ಸೇವಕನಾಗಿ ದುಡಿಯುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸಂ ಹಾಗೂ ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಿರುವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಬುಧವಾರ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು. ನಾನು ಸಚಿವನಾಗಿದ್ದಾಗ ಉಡುಪಿ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿದ್ದೆ. ಮುಂದೆ ಲೋಕಸಭಾ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿ ಜನಸೇವೆ ಮುಂದು ವರಿಸುವೆ ಎಂದು ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು. ಸತ್ಯ ಹೇಳುವ, ಪ್ರಾಮಾಣಿಕ ರಾಜಕಾರಣಿ ಇದ್ದರೆ ದೇಶದಲ್ಲಿ ನಾನು ಮಾತ್ರ ಎಂದ ಮಧ್ವರಾಜ್, ಈ ತನಕ ಜನರ ಸೇವೆಯನ್ನು ಮಾಡಿದ್ದೇನೆ. ಓಟಿಗೋಸ್ಕರ ಸುಳ್ಳು ಹೇಳುವ ಅನಿವಾರ್ಯತೆ ಇಲ್ಲ. ಜನರೊಂದಿಗೆ ನಿರಂತರ ಇರುವ ಸಂಸದರು ನಿಮಗೆ ಬೇಕಾ ಅಪರೂಪಕ್ಕೆ ಬಂದು ಹೋಗುವ ಸಂಸದರು ಬೇಕಾ ಯೋಚಿಸಿ ಎಂದು ಅವರು ನುಡಿದರು. ಉಡುಪಿ ಜಿಲ್ಲೆಯ ಮರಳು ಲೋಡಿಗೆ ಒಂದು ಲಕ್ಷದಂತೆ ಬೆಂಗಳೂರಿಗೆ ಹೋಗುತ್ತಿತ್ತು. ನಮ್ಮ ಜಿಲ್ಲೆಯ ಮರಳು ನಮ್ಮ ಜಿಲ್ಲೆಗೆ ದೊರೆಯಬೇಕು ಎಂದು ಕಾನೂನು ತಂದು ನಮ್ಮ ಜನರಿಗೆ ಮರಳು ದೊರೆಯುವಂತೆ ಮಾಡಿದೆ. ಈಗಿನ ಮರಳು ಸಮಸ್ಯೆಗೆ ಪ್ರಮೋದ್ ಮಧ್ವರಾಜ್ ಕಾರಣ ಎಂದು ಈಗ ಅಪಪ್ರಚಾರ ಮಾಡಲಾಗುತ್ತಿದೆ ಎಂವರು ಬೇಸರ ವ್ಯಕ್ತಪಡಿಸಿದರು. ಉಡುಪಿ ಜಿಲ್ಲೆಯ ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆ ವೈಫಲ್ಯವೇ ಕಾರಣ. ಕೇಂದ್ರ ಸರಕಾರದ ಕಠಿಣ ಮರಳು ನೀತಿಯಿಂದ ನಮ್ಮ ಜಿಲ್ಲೆಗೆ ಸಮಸ್ಯೆಯಾಗಿದೆ. ಇದರ ಬಗ್ಗೆ ಸಂಸದರು ತುಟಿ ಬಿಚ್ಚುತ್ತಿಲ್ಲ ಎಂದು ಪ್ರಮೋದ್ ಟೀಕಿಸಿದರು. ಹುಲಿ ಯೋಜನೆ ಜಾರಿ; ಶೋಭಾ ಮೌನ: ಕೇಂದ್ರ ಅರಣ್ಯ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಕುದುರೆಮುಖ ಸೇರಿ ದೇಶದಲ್ಲಿ 45 ಹುಲಿ ಕಡೆಗಳಲ್ಲಿ ಯೋಜನೆ ಜಾರಿಗೊಳಿಸುವಾಗ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್‌ ಕುಮಾರ್ ಮೌನವಾಗಿದ್ದರಿಂದ ಹುಲಿ ಯೋಜನೆ ಜಾರಿ ಯಾಗಿದೆ. ಕರ್ನಾಟಕದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನ ಆಗಬಾರದು ಎಂದು ಮೂರು ಸಲ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ನೀಡಿದ್ದರೂ ನರೇಂದ್ರ ಮೋದಿಯ ಕೇಂದ್ರ ನಮ್ಮ ವರದಿಗೆ ಕಿವಿಗೊಡುತ್ತಿಲ್ಲ. ಪರಿಣಾಮ ಕಸ್ತೂರಿ ರಂಗನ್ ವರದಿ ಜಾರಿಯ ತೂಗುಕತ್ತಿ ನಮ್ಮ ಮೇಲಿದೆ ಎಂದು ಕಾರ್ಕಳದ ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಭಂಡಾರಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಪಕ್ಷದ ಪ್ರಮುಖರಾದ ಎಚ್.ಶೀನ ಪೂಜಾರಿ, ರಾಘವ ದೇವಾಡಿಗ, ಜೆಡಿಎಸ್ ಕಾರ್ಕಳ ಕ್ಷೇತ್ರದ ಕಾರ್ಯಧ್ಯಕ್ಷ ಹೆಬ್ರಿ ಶ್ರೀಕಾಂತ್ ಪೂಜಾರಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಉಡುಪಿ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುದ್ರಾಡಿ ಸಂತೋಷ ಕುಮಾರ್ ಶೆಟ್ಟಿ ನಿರೂಪಿಸಿ, ಎಚ್. ಜನಾರ್ದನ್ ವಂದಿಸಿದರು. ಪರಿಶ್ರಮದಿಂದ ಕಲೆಯಲ್ಲಿ ಸಾಧನೆ ಮಾಡಲು ಸಾಧ್ಯ: ರಾಜಗೋಪಾಲ್ ಉಡುಪಿ: ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನ ಕುರಿತು ರಾಜ್ಯಮಟ್ಟದ ಜನಾಂದೋಲನ
"2019-07-23T05:42:07"
http://www.varthabharati.in/article/karavali/184155
ಬಂದೆ ಬಿಡ್ತು ಹೈ ಆಕ್ಟೇನ್ ಪೆಟ್ರೋಲ್ !! ಇದರ ಬೆಲೆ, ವಿಶೇಷತೆ ತಿಳ್ಕೊಳಿ - KannadaPlus ಬಂದೆ ಬಿಡ್ತು ಹೈ ಆಕ್ಟೇನ್ ಪೆಟ್ರೋಲ್ !! ಇದರ ಬೆಲೆ, ವಿಶೇಷತೆ ತಿಳ್ಕೊಳಿ ದೇಶದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಹೈ ಆಕ್ಟೇನ್( 99-ಆಕ್ಟೇನ್) ಪೆಟ್ರೋಲ್ ಮಾದರಿಯನ್ನು ಇದೀಗ ದೇಶಿಯ ಮಾರುಕಟ್ಟೆಗೂ ಪರಿಚಯಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ರೂ.100 ಗಳಿಗೆ ನಿಗದಿ ಮಾಡಲಾಗಿದೆ. ಇದು ಸಾಮಾನ್ಯ ಮಾದರಿಯ ಪೆಟ್ರೋಲ್‌ಗಿಂತ ಹೆಚ್ಚಿನ ಗುಣಮಟ್ಟ ಹೊಂದಿರಲಿದ್ದು, ಕಾರಿನ ಎಂಜಿನ್ ಕಾರ್ಯಕ್ಷಮತೆಗೆ ಸಹಕಾರಿಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಏನು ಇದರ ಸ್ಪೆಶಾಲಿಟಿ ? ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಬಳಕೆ ಮಾಡುತ್ತಾ ಬಂದಲ್ಲಿ ಎಂಜಿನ್ ಡ್ಯಾಮೇಜ್ ಸಮಸ್ಯೆಯಿಂದ ಮುಕ್ತಿ ಸಿಗಲಿದ್ದು, ವಾಹನಗಳಿಂದ ಇಂಗಾಲದ ಹೊರಸೂಸುವಿಕೆಯ ಪ್ರಮಾಣವು ಸಾಮಾನ್ಯ ಪೆಟ್ರೋಲ್‌ಗಿಂತ ಅಧಿಕ ಮಟ್ಟದಲ್ಲಿ ಇಳಿಕೆ ಇರುತ್ತೆ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯಿಂದ ಕಾರಿನ ಮೈಲೇಜ್ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಇತರೆ ಕಾರುಗಳಿಂತ ಉತ್ತಮವಾಗಿದೆ. ಹೈ-ಆಕ್ಟೇನ್ ಫ್ಯೂಲ್ ಮಾದರಿಯು ದುಬಾರಿ ಬೆಲೆಯ ಕಾರುಗಳ ಮತ್ತು ದುಬಾರಿ ಬೆಲೆಯ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಎಂಜಿನ್ ಆಯಷ್ಯ ಕೂಡಾ ಹೆಚ್ಚಲು ಸಹಕರಿಸಲಿದೆ. ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಟೋ ಮೊಬೈಲ್ ಉದ್ಯಮದಲ್ಲಿ ‘ಪವರ್ 99’ ಎಂದೇ ಜನಪ್ರಿಯವಾಗಿದ್ದು, ಬೆಂಗಳೂರು ಮತ್ತು ಪುಣೆಯಲ್ಲಿ ಈಗಾಗಲೇ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಯ್ದ ಹಿಂದೂಸ್ತಾನ್ ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಕೇವಲ ಸೂಪರ್ ಕಾರುಗಳಿಗೆ ಮಾತ್ರವಲ್ಲದೇ ಇತರೆ ಸಾಮಾನ್ಯ ಪೆಟ್ರೋಲ್ ಕಾರುಗಳಲ್ಲೂ ಸಹ ಬಳಕೆ ಮಾಡಬಹುದಾಗಿದ್ದು, ಕುತೂಹಲ ಇದ್ದಲ್ಲಿ ನೀವು ಕೂಡಾ ಒಂದು ಬಾರಿ ಹೈ-ಆಕ್ಟೇನ್ ಪೆಟ್ರೋಲ್ ಬಳಕೆ ಮಾಡಿ ನಮ್ಮೊಂದಿಗೆ ಅನುಭವ ಹಂಚಿಕೊಳ್ಳಿ…. ಮಹಿಳೆಯರು ಶೃಂಗಾರ ಕ್ರಿಯೆಯ ಬಳಿಕ ಅಳುತ್ತಾರೆ ಯಾಕೆ ಗೊತ್ತಾ..? ಕ್ಲರ್ಕ್ To ಸಿಎಂ… ಯಡಿಯೂರಪ್ಪ ಪ್ರಯಾಣ..! ಓನರ್ ಮಗಳ ಜತೆಗೆ ಲವ್ ಮ್ಯಾರೇಜ್ – ವಾರದ ಕಾಲ CM ಆಗಿದ್ದ ಇತಿಹಾಸ.! ಐಪಿಎಲ್‌ನಲ್ಲಿ ಚೆನ್ನೈ ತಂಡ ಮ್ಯಾಚ್‌ಗಳನ್ನು ಆಡುವಾಗ ಸ್ಟೇಡಿಯಂನಲ್ಲಿ ಕಾಣಿಸಿದ ಈ ಯುವತಿ ನೆನಪಾಯಿತಾ ? ಆಕೆ ಯಾರು ಗೊತ್ತಾ..? ಬಸ್‌ನಲ್ಲಿ ಚಿಲ್ಲರೆ ಇಲ್ಲ ಎಂದು ಅವರಿಗೆ ರೂ.35 ಕೊಟ್ಟೆ… ಬಳಿಕ ಏನಾಯಿತೆಂದರೆ… plusadmin - May 20, 2018 ಆ ದಿನ ನಾನು ಸಿಟಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದೆ. ಬಸ್ ಜಾಮ್ ಪ್ಯಾಕ್ ಆಗಿತ್ತು. ಕಾಲು ತೆಗೆದು ಕಾಲಿಡಬೇಕಾದರೆ ಕಷ್ಟಪಡಬೇಕಾಗಿತ್ತು. ನನ್ನ ಪಕ್ಕದಲ್ಲೇ ಓರ್ವ ಯುವಕ ನಿಂತಿದ್ದ. ಆತನ ಹೆಸರು ಗೊತ್ತಿಲ್ಲ. ಆತನನ್ನು... ಹಿಂದೂ ಪುರಾಣಗಳು ನಮ್ಮ ದೇಶಕ್ಕಷ್ಟೇ ಅಲ್ಲ, ಇತರೆ ದೇಶಗಳೊಂದಿಗೂ ಸಂಬಂಧ ಹೊಂದಿವೆ ಗೊತ್ತಾ..? ಪ್ರೇಮದ ಸಂಕೇತ “ತಾಜ್ ಮಹಲ್” ಹೆಸರನ್ನು ಡಿವಿಲಿಯರ್ಸ್ ತನ್ನ ಮಗುವಿಗೆ ಇಡ್ತಾರಂತೆ ಯಾಕೆ ಗೊತ್ತಾ..? ದೇವಸ್ಥಾನಕ್ಕೆ ಹೋಗಿಬಂದ ಆಕೆ ತಂದೆಗೆ ಇನ್ನುಮುಂದೆ ದೇವಸ್ಥಾನಕ್ಕೆ ಹೋಗಲ್ಲ ಎಂದಳು.. ಯಾಕೆ ಗೊತ್ತಾ..? ಬಳಿಕ... 400 ವರ್ಷಗಳಿಂದ ಆ ಗ್ರಾಮದಲ್ಲಿ ಒಬ್ಬ ಮಹಿಳೆಗೂ ಸಹ ಹೆರಿಗೆ ಆಗಲಿಲ್ಲ…! ಯಾಕೆ ಗೊತ್ತಾ..? ಮಧುಮೇಹ ರೋಗಿಗಳಿಗೆ ಶುಭವಾರ್ತೆ, ರೂ.5ಕ್ಕೆ ಸಕ್ಕರೆ ಕಾಯಿಲೆ ಔಷಧಿ ಎಲ್ಲರಿಗೂ ತಿಳಿಸಿ. ಚೇಳಿನ ವಿಷದ ಬಗ್ಗೆ ಈ ವಿಷಯವನ್ನು ತಿಳಿದುಕೊಂಡರೆ ನೀವು ಅವುಗಳನ್ನು ಬಿಡುವುದೇ ಇಲ್ಲ..!
"2018-05-20T13:37:47"
https://kannadaplus.in/99-octane-petrol-available-in-india-priced-rs-100-per-liter/
ನಮ್ಮನ್ನು ಉಗ್ರರೆಂದ ಸಿಎಂ ಈ ಕೂಡಲೇ ಕ್ಷಮೆ ಕೇಳಲಿ: ಸಂಸದೆ ಶೋಭಾ – Bunts Info Media ನಮ್ಮನ್ನು ಉಗ್ರರೆಂದ ಸಿಎಂ ಈ ಕೂಡಲೇ ಕ್ಷಮೆ ಕೇಳಲಿ: ಸಂಸದೆ ಶೋಭಾ ಬೆಂಗಳೂರು: ಬಿಜೆಪಿ, ಆರ್​ಎಸ್​ಎಸ್​ ನವರನ್ನು ಉಗ್ರಗಾಮಿಗಳೆಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ದಿನೇಶ್ ಗುಂಡೂರಾವ್ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಾಳೆಯಿಂದ ರಾಜ್ಯಾದ್ಯಂತ ಜೈಲ್ ಭರೋ ಚಳುವಳಿ ಆರಂಭಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ದೇಶದಲ್ಲಿ ಉಗ್ರರನ್ನು ಬೆಳೆಸಿರೋ ಕಾಂಗ್ರೆಸ್ ಇದೀಗ ರಾಜ್ಯದಲ್ಲಿಯೂ ದೇಶದ್ರೋಹಿ ಸಂಘಟನೆಗಳ ಜೊತೆ ಸೇರಿ ಉಗ್ರವಾದವನ್ನು ಬೆಳೆಸುತ್ತಿದೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಅಲ್ಲದೇ ನಮ್ಮನ್ನು ಉಗ್ರರೆಂದಿರುವ ರಾಜ್ಯ ಸರ್ಕಾರ ಈ ಕೂಡಲೇ ಬಂಧಿಸಲಿ ಎಂದು ಸವಾಲು ಹಾಕಿದರು. ಬ್ರಹ್ಮಾವರಕ್ಕೆ ಕಥೋಲಿಕೊಸ್ ಪರಮ ಪವಿತ್ರ ದೀಪಕ್ ರಾವ್ ಕೊಲೆ ಪ್ರಕರಣ : ಕರ್ತವ್ಯ ನಿಷ್ಠೆ ಮೆರೆದ ಮಲ್ಲಿಕಾ ಬಿ, ಹರೀಶ್ ಪೂಜಾರಿಗೆ ಆಯುಕ್ತರಿಂದ ಸನ್ಮಾನ
"2018-01-20T12:51:48"
https://buntsinfomedia.com/archives/6674
ವೀಡಿಯೋ ಸ್ಪೆಷಲ್ | ಸುದ್ದಿ ಪುತ್ತೂರು | Page 3 : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 ಕೊರೊನಾ ಬಗ್ಗೆ ಮಾತು -ಆರ್. ಸಿ ನಾರಾಯಣ್ ಜಿಲ್ಲಾಧ್ಯಕ್ಷರು, ಒಬಿಸಿ ಮೋರ್ಛಾ ಬಿಜೆಪಿ ಆಲಂಕಾರಿನಲ್ಲಿ ಸಂಪೂರ್ಣ ಬಂದ್ | ಪೋಲಿಸರಿಂದ ಬಿಗಿ ಬಂದೊ... ಉಪ್ಪಿನಂಗಡಿ: ನಿರಂತರ ಮಳೆ, ನದಿ ನೀರಿನ ಮಟ್ಟ ಹೆಚ್ಚಳ... ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಜ್ಞಾ ವಿಧಿ... ಕೋವಿಡ್ -19 ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯುವುದಿಲ್ಲ ... ಪೌರಕಾರ್ಮಿಕ ಚಾಲಕನಿಗೆ ಕೊರೋನಾ -ಕಸ ಸಂಗ್ರಹಕರಲ್ಲಿ ಭಯದ... ತೆಂಕಿಲ: ಕೊಟ್ಟಿಬೆಟ್ಟು ಎಂಬಲ್ಲಿ ಮರಬಿದ್ದು ಮನೆ, ದೈವದ... ಕೊರೋನಾ ಮಾಹಾಮಾರಿಯನ್ನು ಹೊಡೆದೋಡಿಸೊ ದೇವಾ | ಲೋಕಕಲ್ಯಾಣಕ್ಕಾಗಿ ಕಿಶೋರ್ ಬೊಟ್ಯಾಡಿ ನೇತೃತ್ವದಲ್ಲಿ ಶ್ರೀಕ್ಷೇತ್ರ ಕದ್ರಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆ ಪುತ್ತೂರು: ಕೊರೋನಾ ಸೋಂಕು ಮುನ್ನೆಚ್ಚರಿಕೆ ಕ್ರಮವಾಗಿ ಹಲವು ದಿನಗಳ ಬಳಿಕ ಜೂ.8ರಂದು ದೇವಸ್ಥಾನಗಳಲ್ಲಿ ಶ್ರೀ ದೇವರ ದರ್ಶನಕ್ಕೆ ... ಪುತ್ತೂರು: ಕೊರೋನಾ ಸೋಂಕು ಮುನ್ನೆಚ್ಚರಿಕೆ ಕ್ರಮವಾಗಿ ಹಲವು ದಿನಗಳ ಬಳಿಕ ಜೂ.8ರಂದು ದೇವಸ್ಥಾನಗಳಲ್ಲಿ ಶ್ರೀ ದೇವರ ದರ್ಶನಕ್ಕೆ ಅವಕಾಶ ಸಿಕ್ಕಿದ‌ ಬೆನ್ನಲ್ಲೆ ಕೊರೋನಾ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಮಾಜಿ ಅಧ ... ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕೇಂದ್ರ ಕಚೇರಿ, ಪುತ್ತೂರು ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ನಂಬಿಕೆ, ವಿಶ್ವಾಸಕ್ಕೆ ಮಾದರಿಯಾಗಿ ರಾಜ್ಯದ್ಯಾಂತ ಶಾಖೆ ಬೆಳೆಯಲಿ - ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆರ್ಥಿಕ ಡಿಸಿಪ್ಲೀನ್‌ನಿಂದ ... ನಂಬಿಕೆ, ವಿಶ್ವಾಸಕ್ಕೆ ಮಾದರಿಯಾಗಿ ರಾಜ್ಯದ್ಯಾಂತ ಶಾಖೆ ಬೆಳೆಯಲಿ - ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆರ್ಥಿಕ ಡಿಸಿಪ್ಲೀನ್‌ನಿಂದ ಸಹಕಾರಿ ಸಂಘ ಬೆಳೆದಿದೆ - ಸಂಜೀವ ಮಠಂದೂರು ಸಂಘ ಮಾನವೀಯ ಚಿಂತನೆಯನ್ನೊಳಗೊಂಡಿದೆ - ರಾಧಾಕೃಷ್ಣ ಬೋರ್ಕರ್ ಶೀಘ್ರದಲ್ ... ಜೂ.21ಕ್ಕೆ ಸೂರ್ಯನಿಗೆ ರಾಹು ಗ್ರಹಣ -ಜುಲೈ ತಿಂಗಳಿನಿಂದ ಲೋಕಕ್ಕೆ ಕ್ಷೇಮ : ವೇ ಮೂ| ಎ ವಸಂತ ಕೆದಿಲಾಯ ಪುತ್ತೂರು: ಉಲ್ಕೆಗಳು, ಧೂಮಕೇತುಗಳು, ಜ್ವಾಲಾಮುಖಿಗಳು, ಭೂಕಂಪಗಳು, ಗ್ರಹಣಗಳು ಬರುವಾಗ ಲೋಕಕ್ಕೆ ಅನಿಷ್ಠ ಉಂಟಾಗುತ್ತದೆ ಎಂದು ... ಪುತ್ತೂರು: ಉಲ್ಕೆಗಳು, ಧೂಮಕೇತುಗಳು, ಜ್ವಾಲಾಮುಖಿಗಳು, ಭೂಕಂಪಗಳು, ಗ್ರಹಣಗಳು ಬರುವಾಗ ಲೋಕಕ್ಕೆ ಅನಿಷ್ಠ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದಕ್ಕೆ ದೋಷ ಪರಿಹಾರವೂ ಮಾಡಲು ಶಾಸ್ತ್ರ ಹೇಳುತ್ತದೆ. ಅದೇ ರೀತಿ ಒಂದು ಗ್ರಹಣ ಮ ... ಪುತ್ತೂರು: ದೇಶದ ನಾನಾ ಭಾಗಗಳಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಶ್ರಮಿಕ್ ರೈಲಿನ ವ್ಯವಸ್ಥೆಯನ್ನು ಕೇ ... ಪುತ್ತೂರು: ದೇಶದ ನಾನಾ ಭಾಗಗಳಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಶ್ರಮಿಕ್ ರೈಲಿನ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಿದ್ದು, ಈಗಾಗಲೇ ಪುತ್ತೂರಿನಿಂದ ಬಿಹಾರ, ಉತ್ತರ ಪ್ರದೇಶಕ್ಕೆ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾ ...
"2020-07-06T13:20:15"
https://puttur.suddinews.com/archives/category/video-special/page/3
ಚೆಟ್ರಿ ಬಳಗಕ್ಕೆ ಮಾಡು–ಮಡಿ ಪಂದ್ಯ | Prajavani ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ: ಒಮನ್ ವಿರುದ್ಧ ಮಹತ್ವದ ಹಣಾಹಣಿ ಪಿಟಿಐ Updated: 19 ನವೆಂಬರ್ 2019, 13:18 IST ಮಸ್ಕತ್: ಸತತ 4 ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವ ಭಾರತ ತಂಡ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಮಹತ್ವದ ಪಂದ್ಯದಲ್ಲಿ ಮಂಗಳವಾರ ಒಮನ್ ತಂಡವನ್ನು ಎದುರಿಸಲಿದೆ. ಸುಲ್ತಾನ್ ಖಬೂಸ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೂಡ ಗೆಲುವು ಗಳಿಸಲಾಗದಿದ್ದರೆ ಮುಂದಿನ ಹಂತಕ್ಕೆ ಸಾಗುವ ತಂಡದ ಕನಸು ಭಗ್ನವಾಗಲಿದೆ. ಆದ್ದರಿಂದ ಸುನಿಲ್ ಚೆಟ್ರಿ ಬಳಗಕ್ಕೆ ಇದು ಮಾಡು ಇಲ್ಲ, ಮಡಿ ಪಂದ್ಯ. ಗುವಾಹಟಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಮೊದಲ ಸುತ್ತಿನ ‍ಪಂದ್ಯದಲ್ಲಿ ಒಮನ್‌ ಭಾರತವನ್ನು 2–1 ಗೋಲಿನಿಂದ ಮಣಿಸಿತ್ತು. ಆ ಪಂದ್ಯದ 24ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟಿದ್ದರು. ಆದರೆ ಕೊನೆಯ 10 ನಿಮಿಷಗಳಲ್ಲಿ 2 ಗೋಲುಗಳನ್ನು ಗಳಿಸಿದ ಪ್ರವಾಸಿ ತಂಡ ಭಾರತದ ಕನಸನ್ನು ಭಗ್ನಗೊಳಿಸಿತ್ತು. 82 ಮತ್ತು 90ನೇ ನಿಮಿಷಗಳಲ್ಲಿ ಅಲ್‌ ಮಂದಾರ್ ಗೋಲು ಗಳಿಸಿದ್ದರು. ಆ ಪಂದ್ಯದ ನಂತರದ ಮೂರು ಪಂದ್ಯಗಳಲ್ಲಿ ಭಾರತ ಉತ್ತಮ ಆಟ ಆಡಿದ್ದರೂ ಜಯ ಗಳಿಸಲು ಆಗಲಿಲ್ಲ. ಆದರೆ ಒಮನ್ ಅಮೋಘ ಸಾಧನೆ ಮಾಡುತ್ತ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಕಳೆದ 14ರಂದು ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 4–1ರಿಂದ ಮಣಿಸಿರುವ ತಂಡ ಆತ್ಮವಿಶ್ವಾಸದಲ್ಲೇ ತವರಿನ ಅಂಗಣದಲ್ಲಿ ಕಣಕ್ಕೆ ಇಳಿಯಲಿದೆ. ಒಮನ್ ವಿರುದ್ಧದ ಸೋಲಿನ ನಂತರ ಏಷ್ಯಾ ಚಾಂಪಿಯನ್ ಕತಾರ್ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿ ಭಾರತ ಭರವಸೆ ಮೂಡಿಸಿತ್ತು. ಆದರೆ ತನಗಿಂತ ಕಡಿಮೆ ರ‍್ಯಾಂಕಿಂಗ್ ಹೊಂದಿರುವ ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ಎದುರಿನ ಪಂದ್ಯಗಳಲ್ಲಿ ಡ್ರಾ ಗಳಿಸಲಷ್ಟೇ ಸಾಧ್ಯವಾಗಿತ್ತು. ಆದ್ದರಿಂದ ಮಂಗಳವಾರದ ಪಂದ್ಯದ ವೇಳೆ ತಂಡಕ್ಕೆ ಆತಂಕ ಇರುವುದು ಸಹಜ. ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಭಾರತಕ್ಕೆ ಮುಂದಿನ ಸುತ್ತು ಪ್ರವೇಶಿಸುವುದು ಕಷ್ಟಸಾಧ್ಯ. ಆದರೆ 1 ಪಾಯಿಂಟ್ ಗಳಿಸಿದರೆ 2023ರ ಏಷ್ಯಾಕಪ್‌ಗೆ ಅರ್ಹತೆ ಗಳಿಸಲು ರಹದಾರಿ ಒದಗಲಿದೆ. ಎಲ್ಲ ವಿಭಾಗದಲ್ಲೂ ಸುಧಾರಣೆ ಅಗತ್ಯ:ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತ ತಂಡ ಆಕ್ರಮಣದಲ್ಲಿ ಮಾತ್ರವಲ್ಲ, ರಕ್ಷಣಾ ವಿಭಾಗದಲ್ಲೂ ವೈಫಲ್ಯ ಕಂಡಿದೆ. ಆಕ್ರಮಣದಲ್ಲಿ ನಾಯಕ ಸುನಿಲ್ ಚೆಟ್ರಿ ಅವರನ್ನೇ ಅವಲಂಬಿಸಿರುವುದು ತಂಡಕ್ಕೆ ಮಾರಕವಾಗಿದೆ. ಅಂತಿಮ ನಿಮಿಷಗಳಲ್ಲಿ ಗೋಲು ಬಿಟ್ಟುಕೊಡುತ್ತಿರುವುದನ್ನು ತಡೆಯಲು ಸಾಧ್ಯವಾಗದೇ ಇರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ತಾಯಿಯ ಸಾವಿನಿಂದಾಗಿ ತವರಿಗೆ ಮರಳಿರುವ ಅನಾಸ್ ಎಡತೋಡಿಕಾ ಇನ್ನೂ ವಾಪಸಾಗಲಿಲ್ಲ. ಗಾಯಗೊಂಡಿರುವ ಸಂದೇಶ್ ಜಿಂಗಾನ್, ರಾವ್ಲಿಂಗ್ ಬೋರ್ಜೆಸ್ ಮತ್ತು ಅಮರ್‌ಜೀತ್ ಸಿಂಗ್ ಕೂಡ ಮಂಗಳವಾರ ಆಡಲು ಲಭ್ಯರಿಲ್ಲ. ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ : ಭಾರತಕ್ಕೆ ಗೆಲುವಿನ ನಿರೀಕ್ಷೆ ಫಿಫಾ ವಿಶ್ವಕಪ್‌ ಕ್ವಾಲಿಫೈಯರ್ಸ್ ಭಾರತ ತಂಡದಲ್ಲಿ ಕನ್ನಡಿಗ ನಿಖಿಲ್‌ ಹಾಂಗ್‌ಕಾಂಗ್‌ಗೆ ಫಿಫಾ ದಂಡ ಜೂನಿಯರ್ ವಿಶ್ವಕಪ್‌ಗೆ ಸಂಭವನೀಯ ತಂಡ ಮಹಿಳಾ ವಿಶ್ವಕಪ್: ಬಹುಮಾನ ಮೊತ್ತ ಹೆಚ್ಚಳ ವಿಶ್ವಕಪ್ ಕನಸಿಗೆ ಟಿಟಿ ಬಲ ಕ್ರೀಡಾ ಸುದ್ದಿಸಂಸ್ಥೆಗೆ ₹1632 ಕೋಟಿ ದಂಡ ಮೊದಲ ಸೆಮಿಗೆ ಕ್ಷಣಗಣನೆ: ಫ್ರಾನ್ಸ್–ಬೆಲ್ಜಿಯಂ ಹಣಾಹಣಿ ಪೆನಾಲ್ಟಿಯಲ್ಲಿ ಸಿಲುಕಿದ ರಷ್ಯಾ ಕನಸು ನುಚ್ಚುನೂರು: ಸೆಮಿಗೆ ಕ್ರೊವೇಷ್ಯಾ ಸೆಮಿ ಫೈನಲ್‌ಗೆ ಬೆಲ್ಜಿಯಂ: ಬ್ರೆಜಿಲ್‌ಗೆ ಆಘಾತ ಜಪಾನ್‌ ಮೋಡಿಗೆ ಸಿಲುಕದ ಬೆಲ್ಜಿಯಂ: ಕ್ವಾರ್ಟರ್‌ ಫೈನಲ್‌ ಪ್ರವೇಶ '); $('#div-gpt-ad-683221-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-683221'); }); googletag.cmd.push(function() { googletag.display('gpt-text-700x20-ad2-683221'); }); },300); var x1 = $('#node-683221 .field-name-body .field-items div.field-item > p'); if(x1 != null && x1.length != 0) { $('#node-683221 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-683221').addClass('inartprocessed'); } else $('#in-article-683221').hide(); } else { // Text ad googletag.cmd.push(function() { googletag.display('gpt-text-300x20-ad-683221'); }); googletag.cmd.push(function() { googletag.display('gpt-text-300x20-ad2-683221'); }); // Remove current Outbrain $('#dk-art-outbrain-683221').remove(); //ad before trending $('#mob_rhs1_683221').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-683221 .field-name-body .field-items div.field-item > p'); if(x1 != null && x1.length != 0) { $('#node-683221 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-683221').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-683221','#dk-art-outbrain-690238','#dk-art-outbrain-690051','#dk-art-outbrain-689391','#dk-art-outbrain-689216']; var obMobile = ['#mob-art-outbrain-683221','#mob-art-outbrain-690238','#mob-art-outbrain-690051','#mob-art-outbrain-689391','#mob-art-outbrain-689216']; var obMobile_below = ['#mob-art-outbrain-below-683221','#mob-art-outbrain-below-690238','#mob-art-outbrain-below-690051','#mob-art-outbrain-below-689391','#mob-art-outbrain-below-689216']; var in_art = ['#in-article-683221','#in-article-690238','#in-article-690051','#in-article-689391','#in-article-689216']; var twids = ['#twblock_683221','#twblock_690238','#twblock_690051','#twblock_689391','#twblock_689216']; var twdataids = ['#twdatablk_683221','#twdatablk_690238','#twdatablk_690051','#twdatablk_689391','#twdatablk_689216']; var obURLs = ['https://www.prajavani.net/sports/football/india-to-face-oman-in-do-or-die-tie-683221.html','https://www.prajavani.net/sports/football/isl-odisha-match-690238.html','https://www.prajavani.net/sports/football/super-division-football-690051.html','https://www.prajavani.net/sports/football/ansu-fati-bags-lionel-messi-esque-winner-to-become-youngest-scorer-in-champions-league-history-689391.html','https://www.prajavani.net/sports/football/sunil-chhetri-signs-three-year-deal-with-puma-689216.html']; var vuukleIds = ['#vuukle-comments-683221','#vuukle-comments-690238','#vuukle-comments-690051','#vuukle-comments-689391','#vuukle-comments-689216']; // var nids = [683221,690238,690051,689391,689216]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2019-12-14T13:06:05"
https://www.prajavani.net/sports/football/india-to-face-oman-in-do-or-die-tie-683221.html
ಮೇಕಪ್‌ ಕಲಾವಿದ ಕೃಷ್ಣ ನಿಧನ | Prajavani ಮೇಕಪ್‌ ಕಲಾವಿದ ಕೃಷ್ಣ ನಿಧನ ಪ್ರಜಾವಾಣಿ ವಾರ್ತೆ Updated: 13 ಜನವರಿ 2020, 18:08 IST ಬೆಂಗಳೂರು: ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್‌ ಸೇರಿ ಹಲವು ಮೇರು ನಟರಿಗೆ ಬಣ್ಣ ಹಚ್ಚಿದ ಪ್ರಸಾದನ ಕಲಾವಿದ ಮೇಕಪ್ ಕೃಷ್ಣ (55) ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ವತ್ಸಲಾ ಕೃಷ್ಣ ಮತ್ತು ಪುತ್ರಿ ‌ವರ್ಷಾ ಕೃಷ್ಣ ಇದ್ದಾರೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ ಕೊನೆ ಉಸಿರೆಳೆದಿದ್ದಾರೆ. ಅವರ ಹುಟ್ಟೂರಾದ ಕುಂಬಳಗೋಡು ಬಳಿಯ ಗೊಲ್ಲಹಳ್ಳಿಯಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಿತು. ಕನ್ನಡದಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಸಾದನ ಕಲಾವಿದನಾಗಿ ದುಡಿದಿದ್ದರು. ಬಾಲಿವುಡ್‌ ನಟರಿಗೂ ಅವರು ಮೇಕಪ್‌ ಮಾಡಿದ್ದರು. ರಾಜ್‌ ಕುಟುಂಬದೊಂದಿಗೆ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದ ಕೃಷ್ಣ, ರಾಜ್‌ಕುಮಾರ್‌ ಅವರ ಮಕ್ಕಳಿಗೂ ಹಲವು ಚಿತ್ರಗಳಲ್ಲಿ ಪ್ರಸಾದನ ಕಲಾವಿದನಾಗಿ ಬಣ್ಣ ಹಚ್ಚಿದ್ದಾರೆ. ಮೇಕಪ್‌ ರಾಮಕೃಷ್ಣ ಅವರ ಶಿಷ್ಯರಾಗಿದ್ದ ಕೃಷ್ಣ, ಚಿತ್ರರಂಗದಲ್ಲಿ‌ ಒಂದೊಂದೆ ಹೆಜ್ಜೆ ಮುಂದಿಟ್ಟು, ಯಶಸ್ಸು ಸಂಪಾದಿಸಿಕೊಂಡಿದ್ದರು. ವರ್ಷಾ ಕ್ರಿಯೇಷನ್ಸ್‌ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದ ಅವರು ‘ಚಂದ್ರ ಚಕೋರಿ’, ‘ಓ ನನ್ನ ಚೇತನ’, ‘ನೀನೆಲ್ಲಿರುವೆ’ ಸೇರಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಡಾ.ರಾಜ್ ಕುಮಾರ್ ಜೀವನಕಥೆ ಕುರಿತು ದೂರದರ್ಶನಕ್ಕಾಗಿ ಅವರು ‘ನಟಸಾರ್ವಭೌಮ’ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು, ಇದು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಇದು ಡಿಡಿ1 ಮತ್ತು ಉದಯ ಟಿ.ವಿ ಸೇರಿ ಹಲವು ಟಿ.ವಿ ವಾಹಿನಿಗಳಲ್ಲಿ 108 ಎಪಿಸೋಡ್‌ಗಳಲ್ಲಿ ಪ್ರಸಾರವಾಯಿತು. ಎರಡು ತಿಂಗಳ ಹಿಂದಷ್ಟೇ ಚಲನಚಿತ್ರ ವಾಣಿಜ್ಯಮಂಡಳಿ ಮಾಜಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡರ ಬದುಕಿನ ಕುರಿತು ‘ಬೆಳ್ಳಿ ಹೆಜ್ಜೆ’ ಸಾಕ್ಷ್ಯಚಿತ್ರವನ್ನು ಕೃಷ್ಣ ವಾರ್ತಾ ಇಲಾಖೆಗಾಗಿ ನಿರ್ಮಿಸಿಕೊಟ್ಟಿದ್ದರು. Makeup krishna ಮೇಕಪ್ ಕೃಷ್ಣ '); $('#div-gpt-ad-697704-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-697704'); }); googletag.cmd.push(function() { googletag.display('gpt-text-700x20-ad2-697704'); }); },300); var x1 = $('#node-697704 .field-name-body .field-items div.field-item > p'); if(x1 != null && x1.length != 0) { $('#node-697704 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-697704').addClass('inartprocessed'); } else $('#in-article-697704').hide(); } else { // Text ad googletag.cmd.push(function() { googletag.display('gpt-text-300x20-ad-697704'); }); googletag.cmd.push(function() { googletag.display('gpt-text-300x20-ad2-697704'); }); // Remove current Outbrain $('#dk-art-outbrain-697704').remove(); //ad before trending $('#mob_rhs1_697704').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-697704 .field-name-body .field-items div.field-item > p'); if(x1 != null && x1.length != 0) { $('#node-697704 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-697704').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-697704','#dk-art-outbrain-701576','#dk-art-outbrain-701527','#dk-art-outbrain-701522','#dk-art-outbrain-701517']; var obMobile = ['#mob-art-outbrain-697704','#mob-art-outbrain-701576','#mob-art-outbrain-701527','#mob-art-outbrain-701522','#mob-art-outbrain-701517']; var obMobile_below = ['#mob-art-outbrain-below-697704','#mob-art-outbrain-below-701576','#mob-art-outbrain-below-701527','#mob-art-outbrain-below-701522','#mob-art-outbrain-below-701517']; var in_art = ['#in-article-697704','#in-article-701576','#in-article-701527','#in-article-701522','#in-article-701517']; var twids = ['#twblock_697704','#twblock_701576','#twblock_701527','#twblock_701522','#twblock_701517']; var twdataids = ['#twdatablk_697704','#twdatablk_701576','#twdatablk_701527','#twdatablk_701522','#twdatablk_701517']; var obURLs = ['https://www.prajavani.net/entertainment/cinema/makeup-krishna-no-more-697704.html','https://www.prajavani.net/entertainment/cinema/bengaluru-film-festival-701576.html','https://www.prajavani.net/entertainment/cinema/priyanka-chopra-jonas-in-final-negotiations-to-join-matrix-four-701527.html','https://www.prajavani.net/entertainment/cinema/mithali-raj-701522.html','https://www.prajavani.net/entertainment/cinema/rajanikant-on-man-vs-wild-701517.html']; var vuukleIds = ['#vuukle-comments-697704','#vuukle-comments-701576','#vuukle-comments-701527','#vuukle-comments-701522','#vuukle-comments-701517']; // var nids = [697704,701576,701527,701522,701517]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2020-01-29T17:15:48"
https://www.prajavani.net/entertainment/cinema/makeup-krishna-no-more-697704.html