news
stringlengths
297
35.5k
class
int64
0
2
ಬಾಕ್ಸಿಂಗ್‌: ಸರಿತಾ, ಮನೀಷಾ ಇಂದು ಕಣಕ್ಕೆ ಬಾಕ್ಸಿಂಗ್‌: ಸರಿತಾ, ಮನೀಷಾ ಇಂದು ಕಣಕ್ಕೆ ಪಿಟಿಐ 16 ನವೆಂಬರ್ 2018, 01:15 IST Updated: 16 ನವೆಂಬರ್ 2018, 01:15 IST ಅಕ್ಷರ ಗಾತ್ರ : ಆ ಆ ನವದೆಹಲಿ: ಭಾರತದ ಎಲ್‌.ಸರಿತಾ ದೇವಿ ಮತ್ತು ಮನೀಷಾ ಮೌನ್‌ ಅವರು ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಕಣಕ್ಕೆ ಇಳಿಯುವರು. ಈ ಮೂಲಕ ಆತಿಥೇಯರು ಚಾಂಪಿಯನ್‌ಷಿಪ್‌ನಲ್ಲಿ ಅಭಿಯಾನ ಆರಂಭಿಸುವರು. 36 ವರ್ಷದ ಸರಿತಾ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ಎರಡನೇ ಸುತ್ತಿನಲ್ಲಿ ಅವರಿಗೆ ಸ್ವಿಟ್ಜರ್ಲೆಂಡ್‌ನ ಡಯಾನ ಸಾಂಡ್ರಾ ಬ್ರುಗರ್‌ ಎದುರಾಳಿ. 2006ರಲ್ಲಿ ಚಿನ್ನ ಗೆದ್ದಿದ್ದ ಸರಿತಾ ಅವರು ಪೋಲೆಂಡ್‌ನಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯಾ ಓಪನ್ ಮತ್ತು ಸಿಲೆಸಿಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇಲ್ಲಿ ಅವರಿಗೆ ನಾಲ್ಕನೇ ಶ್ರೇಯಾಂಕ ಲಭಿಸಿದೆ. 20 ವರ್ಷದ ಮನೀಷಾ 54ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. 2106ರಲ್ಲಿ ಅವರು ಕಂಚಿನ ಪದಕ ಗಳಿಸಿದ್ದರು. ಮೊದಲ ಬೌಟ್‌ನಲ್ಲಿ ಅವರು ಅಮೆರಿಕದ ಕ್ರಿಸ್ಟಿಯಾನ ಕ್ರೂಜ್ ವಿರುದ್ಧ ಸೆಣಸುವರು.
2
ನೈಸರ್ಗಿಕ ಕಂಡೀಶನರ್ ಮನೆಯಂಗಳದ ದಾಸವಾಳ… April 4, 2019 Facebook Twitter Google+ LinkedIn StumbleUpon Tumblr Pinterest Reddit VKontakte Odnoklassniki Pocket WhatsApp ಬೆಂಗಳೂರು, ಏ.04: ದಾಸವಾಳ ಅಂದರೆ ಬರೀ ಹೂವಿನ ಗಿಡವಲ್ಲ. ಬದಲಿಗೆ ದಾಸವಾಳವೂ ಒಂದು ಔಷಧ ಗಿಡವಾಗಿಯೂ ಪ್ರಸಿದ್ಧ. ಇದರ ಬೇರಿನಿಂದ ಹಿಡಿದು ಎಲೆ, ಹೂವು ಎಲ್ಲವೂ ಅಗಾಧ ಪ್ರಮಾಣದ ಔಷಧೀಯ ಗುಣ ಹೊಂದಿವೆ. ಸಾಮಾನ್ಯ ರೋಗಗಳಿಂದ ಹಿಡಿದು ದೀರ್ಘಾವಧಿ ಕಾಯಿಲೆಯ ನಿವಾರಣೆಯವರೆಗೂ ಇದು ಸಹಕಾರಿ. ಕೂದಲು, ತ್ವಚೆಯ ಸಮಸ್ಯೆಗೆ ಇದು ರಾಮಬಾಣವೂ ಹೌದು.ಅದೇ ಕಾರಣದಿಂದ ಕೂದಲ ಸೌಂದರ್ಯ ಹಾಗೂ ಆರೋಗ್ಯ ಚಿಕಿತ್ಸೆಯಲ್ಲಿ ಇದರ ಬಳಕೆ ಹೆಚ್ಚು. ನೈಸರ್ಗಿಕ ಕಂಡೀಷನರ್‌ ನಂತೆ ದಾಸವಾಳವು ಕೂದಲಿಗೆ ಪ್ರಯೋಜನವನ್ನು ಉಂಟುಮಾಡುತ್ತದೆ. ತೆಂಗಿನ ಎಣ್ಣೆಗೆ ಸ್ವಲ್ಪ ದಾಸವಾಳದ ಎಲೆಗಳನ್ನು ಹಾಕಿ ಕುದಿಸಬೇಕು. ಎಣ್ಣೆ ತಣ್ಣಗಾದ ಬಳಿಕ ಇದಕ್ಕೆ ಒಂದೆರಡು ಚಮಚ ಕಡಲೆಹುಡಿಯನ್ನು ಬೆರೆಸಿ ಪೇಸ್ಟ್‌ ನಂತೆ ತಯಾರಿಸಿಕೊಳ್ಳಬೇಕು. ಈ ಪೇಸ್ಟ್‌ ಅನ್ನು ತಲೆಬುರುಡೆಗೆ ಹಚ್ಚಿ  ಮೂವತ್ತು ನಿಮಿಷಗಳ ನಂತರ ಕೂದಲು ತೊಳೆದುಕೊಳ್ಳಬೇಕು. ಕೂದಲಿನ ಬೆಳವಣಿಗೆಗೆ ಅತ್ಯುತ್ತಮವಾಗಿರುವ ದಾಸವಾಳದ ಎಣ್ಣೆಯಿಂದ ಕೂದಲಿಗೆ ನೈಸರ್ಗಿಕವಾದ ಕಪ್ಪು ಬಣ್ಣ ಸಿಗುವುದು ಮಾತ್ರವಲ್ಲದೇ ಕೂದಲಿಗೆ ಆದ್ರತೆಯೂ ನೀಡುತ್ತದೆ. ಮಾತ್ರವಲ್ಲ ಕೂದಲಿಗೆ ಉತ್ತಮವಾದ ಪೋಷಣೆಯೂ ಇದರಿಂದ ಸಿಗುವುದಲ್ಲದೇ ಕೂದಲಿನ ಕಾಂತಿಯೂ ಹೆಚ್ಚುತ್ತದೆ. ನಿಯಮಿತವಾಗಿ ದಾಸವಾಳದ ಎಣ್ಣೆಯನ್ನು ಬಳಕೆ ಮಾಡುವುದರಿಂದ ಕೂದಲಿನ ಬುಡ ಧೃಡವಾಗುತ್ತದೆ. ಹೇರಳವಾಗಿ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ. ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದನ್ನು ತಡೆಯುವ ಶಕ್ತಿ ದಾಸವಾಳ ಎಣ್ಣೆಗೆ ಇದೆ. ಅಷ್ಟು ಮಾತ್ರವಲ್ಲದೇ ಎಣ‍್ಣೆಯ ಹೊರತಾಗಿ ದಾಸವಾಳ ಹೂವು ಅತ್ಯುತ್ತಮ ಕಂಡೀಶನರ್ ಹೌದು. ನೈಸರ್ಗಿಕವಾದ ಕಂಡೀಶನರ್ ನಿಂದ ಕೂದಲು ಮೃದುವಾಗುತ್ತದೆ ಮತ್ತು ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಆದ್ದರಿಂದ ವಾರಕ್ಕೊಂದು ಬಾರಿಯಾದರೂ ದಾಸವಾಳ ಹೂವನ್ನು ಹಾಕಿ ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು.  ದಾಸವಾಳ ಹೂವಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ. ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆ ಹಾಕಿದ ಮೆಂತೆ ಕಾಳಿಗೆ ಸ್ವಲ್ಪ ಆಲೀವ್‌ಎಣ್ಣೆ ಸೇರಿಸಿ ಮಿಕ್ಸರ್‌ನಲ್ಲಿ ಹಾಕಿ ಪೇಸ್ಟ್ ತಯಾರಿಸಬೇಕು. ಹೀಗೆ ತಯಾರಿಸಿದ ಪೇಸ್ಟ್‌ಗೆ ಎರಡು ಚಮಚ ದಾಸವಾಳದ ಎಲೆಯ ಹುಡಿಯನ್ನು ಬೆರೆಸಿ ತಲೆಬುರುಡೆಗೆ ಹಚ್ಚಬೇಕು. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಕೂದಲನ್ನು ತೊಳೆದುಕೊಂಡರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ ಹಾಗೂ ತಲೆ ತುರಿಕೆ ಇದ್ದರೂ ನಿವಾರಣೆಯಾಗುತ್ತದೆ.ಆರು ಚಮಚಗಳಷ್ಟು ದಾಸವಾಳದ ಎಣ್ಣೆಗೆ ಐದರಿಂದ ಆರು ಚಮಚ ನೆಲ್ಲಿಕಾಯಿ ಹುಡಿ, ಸ್ವಲ್ಪ ಲಿಂಬೆ ರಸವನ್ನು ಬೆರೆಸಿಕೊಂಡು ಮಿಶ್ರಣ ಮಾಡಿ ತಲೆಬುರುಡೆಗೆ ಹಚ್ಚಬೇಕು. ಇದರಿಂದ ಕೂದಲಿನ ಬೇರುಗಳು ಆರೋಗ್ಯವಾಗಿರುವುದು. #balkaninews #hibiscusflower #hibiscusflowerusefull #hibiscusflowerimages ##hibiscusflowerfacepack Tags
1
‘ಆಲೂಗಡ್ಡೆ’ಯಿಂದ ಮುಖದ ಅಂದ ಹೆಚ್ಚುತ್ತೆ   19-02-2019 4:35PM IST    /     No Comments    /     Posted In: Beauty , Latest News ಆಲೂಗಡ್ಡೆಯನ್ನು ಸೌಂದರ್ಯ ಪ್ರಸಾಧನವಾಗಿ ನಿತ್ಯ ಬಳಸಬಹುದು. ಯಾಕಂದ್ರೆ ಆಲೂಗಡ್ಡೆಯ ರಸ ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ. ತ್ವಚೆ ಕಪ್ಪಾಗಿದ್ದರೆ : ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು, ಇದಕ್ಕೆ ಒಂದು ಚಮಚ ಮೊಸರು ಸೇರಿಸಿ ನುಣ್ಣಗೆ ಅರೆಯಬೇಕು. ಈ ಪೇಸ್ಟ್‌ ಅನ್ನು ಕಪ್ಪಾಗಿದ್ದ ಚರ್ಮದ ಮೇಲೆ ತೆಳುವಾಗಿ ಹೆಚ್ಚಿ ನಯವಾಗಿ ಮಸಾಜ್‌ ಮಾಡಬೇಕು. ಸುಮಾರು ಇಪ್ಪತ್ತು ನಿಮಿಷ ಹಾಗೆಯೇ ಬಿಡಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಬೇಕು. ಒಣ ಚರ್ಮವಾಗಿದ್ದರೆ : ನಿತ್ಯ ಆಲೂಗಡ್ಡೆ ರಸವನ್ನು ಹಚ್ಚಿಕೊಳ್ಳುತ್ತಿದ್ದರೆ, ಚರ್ಮಕ್ಕೆ ಕಾಂತಿ ಬರುತ್ತದೆ. ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದುಕೊಳ್ಳಬೇಕು. ಇದಕ್ಕೆ ಸ್ವಲ್ಪ ಲೋಳೆಸರದ ರಸವನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಬೇಕು. ಇದನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಂಡು ನಲವತ್ತು ನಿಮಿಷ ಒಣಗಲು ಬಿಡಬೇಕು. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ತ್ವಚೆ ಸುಟ್ಟಂತಾಗಿದ್ದರೆ : ಮಿಕ್ಸಿಗೆ ಆಲೂಗಡ್ಡೆ ಹಾಕಿ ಅದರ ರಸ ತೆಗೆಯಬೇಕು. ಈ ರಸವನ್ನು ಫ್ರಿಜ್ ನಲ್ಲಿ ಇರಿಸಬೇಕು. ಬಿಸಿಲಿನಿಂದ ಚರ್ಮ ಸುಟ್ಟಂತಾದಾಗ ಈ ರಸವನ್ನು ಚರ್ಮದ ಮೇಲೆ ಹಚ್ಚಿಕೊಂಡು ನಯವಾಗಿ ಮಸಾಜ್‌ ಮಾಡಬೇಕು. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು.
1
ಮಾಲ್ ಶೌಚಾಲಯಗಳು ಯಾಕೆ ಭಿನ್ನವಾಗಿರುತ್ತೆ ಗೊತ್ತಾ?   13-01-2019 6:47AM IST    /     No Comments    /     Posted In: Latest News , Special ಮಾಲ್ ಗಳಿಗೆ ಸಾಮಾನ್ಯವಾಗಿ ಎಲ್ಲರೂ ಹೋಗಿರ್ತಾರೆ. ಅಲ್ಲಿಯ ಶೌಚಾಲಯವನ್ನೂ ಬಳಕೆ ಮಾಡಿರ್ತಾರೆ. ಮಾಲ್ ಗಳಲ್ಲಿ ಶೌಚಾಲಯಗಳು ವಿಭಿನ್ನವಾಗಿರುತ್ತವೆ. ಗೋಡೆಗಳು ಮಹಡಿಗೆ ಅಂಟಿಕೊಂಡಿರುವುದಿಲ್ಲ. ಮಹಡಿ ಮತ್ತು ಗೋಡೆ ಮಧ್ಯೆ ದೊಡ್ಡ ಗ್ಯಾಪ್ ಇರುತ್ತದೆ. ಹಾಗೆ ಒಂದು ಶೌಚಾಲಯದಿಂದ ಇನ್ನೊಂದು ಶೌಚಾಲಯದ ಮಧ್ಯೆ ಇರುವ ಗೋಡೆ ಕೂಡ ಮೇಲಿನ ಚಾವಣಿಗೆ ತಾಗಿರುವುದಿಲ್ಲ. ಅಲ್ಲೂ ದೊಡ್ಡ ಗ್ಯಾಪ್ ಇರುತ್ತದೆ. ಇದಕ್ಕೆ ಕಾರಣ ಏನು ಎಂಬುದು ನಿಮಗೆ ಗೊತ್ತಾ? ಮಾಲ್ ಗಳಲ್ಲಿ ದಿನವಿಡೀ ಶೌಚಾಲಯವನ್ನು ಬಳಸಲಾಗುತ್ತಿರುತ್ತದೆ. ಇದ್ರಿಂದ ಶೌಚಾಲಯ ಕೊಳಕಾಗುತ್ತದೆ. ಮಹಡಿ ಮತ್ತು ಬಾಗಿಲಿನ ಮಧ್ಯೆ ಗ್ಯಾಪ್ ಇದ್ರೆ ಕ್ಲೀನ್ ಮಾಡುವುದು ಸುಲಭ. ಮಾಪ್ ಬಳಸಿ ಸುಲಭವಾಗಿ ಕ್ಲೀನ್ ಮಾಡಬಹುದು. ಟಾಯ್ಲೆಟ್ ಒಳಗೆ ವ್ಯಕ್ತಿ ಅನಾರೋಗ್ಯಕ್ಕೊಳಗಾದ್ರೆ, ಪ್ರಜ್ಞೆ ತಪ್ಪಿದ್ರೆ, ಕುಸಿದು ಬಿದ್ರೆ ತಕ್ಷಣ ಹೊರಗಿರುವವರಿಗೆ ತಿಳಿಯುತ್ತದೆ. ಬಾಗಿಲು ಹಾಗೂ ಮಹಡಿ ಮಧ್ಯೆ ಜಾಗವಿಲ್ಲದೆ ಹೋದ್ರೆ ಒಳಗೆ ಏನಾಗುತ್ತಿದೆ ಎಂಬುದು ತಿಳಿಯುವುದಿಲ್ಲ. ಕೆಲವೊಮ್ಮೆ ಮಕ್ಕಳು ಶೌಚಾಲಯದ ಬಾಗಿಲನ್ನು ಹಾಕಿಕೊಳ್ತಾರೆ. ಅವ್ರಿಗೆ ಬಾಗಿಲು ತೆಗೆಯಲು ಬರುವುದಿಲ್ಲ. ಹೊರಗೆ ಯಾರೂ ಇಲ್ಲವೆಂದಾದ್ರೆ ಬಾಗಿಲಿನಡಿಯಿಂದ ನುಸುಳಿ ಸುಲಭವಾಗಿ ಹೊರಗೆ ಬರಬಹುದಾಗಿದೆ.
1
”ಪಾಕ್ ವಿರುದ್ಧದ ಪಂದ್ಯ ಒಂದು ಸಾಮಾನ್ಯ ಮ್ಯಾಚ್”   16-06-2017 11:38AM IST    /     No Comments    /     Posted In: Latest News , Sports ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡಿದಿರುವ ಟೀಂ ಇಂಡಿಯಾ ಚಿತ್ತ ಈಗ ಫೈನಲ್ ಮೇಲಿದೆ. ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಅಂತಿಮ ಹಣಾಹಣಿ ನಡೆಸಲಿದೆ. ಭಾರತ –ಪಾಕಿಸ್ತಾನ ಹಣಾಹಣಿ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೊಂದು ಸಾಮಾನ್ಯ ಪಂದ್ಯದಂತೆ ಪರಿಗಣಿಸಿರುವುದಾಗಿ ಹೇಳಿದ್ದಾರೆ. ಜೂನ್ 18ರಂದು ಭಾರತ-ಪಾಕ್ ಸೆಣೆಸಲಿದೆ. ಈ ಬಗ್ಗೆ ಮಾತನಾಡಿದ ಕೊಹ್ಲಿ ನಾವು ಈ ಪಂದ್ಯವನ್ನು ಸಾಮಾನ್ಯ ಪಂದ್ಯದಂತೆ ಪರಿಗಣಿಸಿದ್ದೇವೆ. ಈ ಪಂದ್ಯದ ಬಗ್ಗೆ ಯಾವುದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಗೆಲುವಿನ ಬಗ್ಗೆ ಮಾತನಾಡಿದ ಕೊಹ್ಲಿ, ಇದು ಉತ್ತಮ ಆಟಕ್ಕೆ ಉದಾಹರಣೆ. 9 ವಿಕೆಟ್ ಗಳಿಂದ ಗೆಲುವು ಸಾಧಿಸುವ ನಿರೀಕ್ಷೆ ಇರಲಿಲ್ಲ. ಆದ್ರೆ ಟೀಂ ಸಾಮರ್ಥ್ಯವನ್ನು ತೋರಿಸಿದೆ ಎಂದಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ ಪಾಕ್ ಸೋಲಿಸಿದ್ದ ಭಾರತ ಐ.ಸಿ.ಸಿ. ಟೂರ್ನಿಗಳಲ್ಲಿ ಎಂದಿಗೂ ಪಾಕ್ ಎದುರು ಸೋಲು ಕಂಡಿಲ್ಲ. ಹಾಗಾಗಿ ಭಾನುವಾರದ ಪಂದ್ಯದಲ್ಲಿಯೂ ಗೆಲ್ಲುವ ನಿರೀಕ್ಷೆಯಲ್ಲಿದೆ. ಇನ್ನು ಭಾನುವಾರದ ಹೈವೋಲ್ಟೇಜ್ ಮ್ಯಾಚ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
2
Bangalore, First Published 19, Jun 2019, 8:46 AM IST Highlights ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಮತ್ತೆ ಶುರುವಾಗುತ್ತಿದೆ. ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಜೂನ್‌ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ‘ಕನ್ನಡದ ಕೋಟ್ಯಧಿಪತಿ’ ಪ್ರಸಾರವಾಗಲಿದೆ. ಈ ಸಲ ನಿರೂಪಕರ ಸೀಟಿಗೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಬಂದಿದ್ದಾರೆ. ‘ಕನ್ನಡದ ಕೋಟ್ಯಧಿಪತಿ’ಯ ನಾಲ್ಕನೇ ಸೀಸನ್‌ ಇದು. ಆದರೆ ಕಲರ್ಸ್‌ ಕನ್ನಡ ವಾಹಿನಿಗೆ ಇದು ಮೊಟ್ಟಮೊದಲ ಸೀಸನ್‌. ಜತೆಗೆ ಇದರ ಆರಂಭದ ಎರಡು ಆವೃತ್ತಿಗಳಿಗೆ ನಿರೂಪಕರಾಗಿದ್ದ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಇದು ಮೂರನೇ ಸೀಸನ್‌. ಕನ್ನಡದ ಕೋಟ್ಯಧಿಪತಿ ಶೋಗೆ ಈಗಾಗಲೇ ಭರದ ಸಿದ್ಧತೆ ಸಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಸ್ಟುಡಿಯೋದಲ್ಲಿ ಅದರ ಚಿತ್ರೀಕರಣಕ್ಕೆ ಭವ್ಯವಾದ ಸೆಟ್‌ ಹಾಕಲಾಗಿದೆ. ಈಗಾಗಲೇ ಹಲವು ಎಪಿಸೋಡ್‌ ಶೂಟ್‌ ಕೂಡ ಆಗಿದೆ. ಈ ಶೋ ಪ್ರಸಾರದ ಸಿದ್ಧತೆ ಕುರಿತು ಕಲರ್ಸ್‌ ಕನ್ನಡದ ಮುಖ್ಯಸ್ಥರ ಅದೇ ಸೆಟ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ಅಲ್ಲಿ ಶೋ ಕುರಿತು ಪುನೀತ್‌ ರಾಜ್‌ಕುಮಾರ್‌ ಹಲವು ಸಂಗತಿ ಹಂಚಿಕೊಂಡರು. 'ಕಷ್ಟಗಾಲದಲ್ಲಿ ಬರೋದೇ ಫ್ರೆಂಡ್ಸ್' ಇದು ಕನ್ನಡದ ಕೋಟ್ಯಧಿಪತಿ! ಅಪ್ಪಾಜಿಗೆ ಈ ಶೋ ಅಂದ್ರೆ ತುಂಬಾ ಇಷ್ಟ... ನನಗೆ ಈ ಪಯಣ ಶುರುವಾಗಿದ್ದು 2011 ರಿಂದ. ಈ ಶೋ ಆಫರ್‌ ಬಂದಾಗ ತಕ್ಷಣವೇ ನನಗೆ ನೆನಪಾಗಿದ್ದು ಅಪ್ಪಾಜಿ. ಯಾಕಂದ್ರೆ, ಅವರಿಗೆ ಹಿಂದಿಯ ‘ಕೌನ್‌ ಬನೇಗಾ ಕರೋಡ್‌ಪತಿ’ ಶೋ ಅಂದ್ರೆ ತುಂಬಾ ಇಷ್ಟ. ಅದರ ಪ್ರತಿ ಎಪಿಸೋಡ್‌ ನೋಡಿ ಖುಷಿ ಪಡುತ್ತಿದ್ದರು. ಅದೇನೋ ಅವರಿಗೆ ಸೋಜಿಗ. ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ಬರುತ್ತಿದ್ದ ಪ್ರಶ್ನೆಗಳು, ಅವುಗಳಿಗೆ ಸ್ಪರ್ಧಿಗಳು ಉತ್ತರಿಸುತ್ತಿದ್ದ ರೀತಿ ಎಲ್ಲವೂ ಅವರಿಗೆ ಖುಷಿಯೇ. ಯಾರು ಗೆಲ್ತಾರೆ, ಯಾರು ಸೋಲ್ತಾರೆ ಎನ್ನುವ ಕುತೂಹಲಕ್ಕಿಂತ ಆ ಶೋನಿಂದ ಜ್ಞಾನ ಹೆಚ್ಚಾಗುತ್ತದೆ ಎನ್ನುವುದೇ ಅವರ ಆಸಕ್ತಿಗೆ ಕಾರಣವಾಗಿತ್ತು. ಹಾಗಂತ ಅವರು ನನಗೆ ಹೇಳುತ್ತಿದ್ದರು. ಅದೇ ನನಗೂ ಸ್ಫೂರ್ತಿ ಆಗಿತ್ತು. ಅವರ ಮಾತು ನಿಜ. ಇದೊಂದು ಬರೀ ಮನರಂಜನೆಯ ಶೋ ಅಲ್ಲ, ಜ್ಞಾನ ನೀಡುವ ಶೋ. ಅಮ್ಮನ ಮಾತೇ ಧೈರ್ಯ ತುಂಬಿತು.. ಕನ್ನಡದ ಕೋಟ್ಯಧಿಪತಿ ಶೋಗೆ ನಿರೂಪಕನಾಗುವ ಅವಕಾಶ ಬಂದಾಗ ಒಂದೆಡೆ ಖುಷಿ ಮತ್ತೊಂದೆಡೆ ಭಯ ಎರಡು ಇದ್ದವು. ನೆಚ್ಚಿನ ನಟ ಅಮಿತಾಬ್‌ ಬಚ್ಚನ್‌ ಮೇಲಿನ ಅಭಿಮಾನಕ್ಕೆ ಆ ಕಾರ್ಯಕ್ರಮಕ್ಕೆ ನಾನು ಖಾಯಂ ವೀಕ್ಷಕ ಎನ್ನುವುದೇನೋ ನಿಜ, ಆದರೆ ಅದರ ನಿರೂಪಕನಾಗುವುದು ಅಷ್ಟುಸುಲಭವಲ್ಲ ಅನ್ನೋದು ನನಗಿದ್ದ ಭಯ. ಕೊನೆಗೆ ಅಮ್ಮ ಧೈರ್ಯ ತುಂಬಿದರು. ‘ನೀನ್‌ ಹೋದ್ರೆ ಚಚ್ಚಿ ಹಾಕ್ತೀಯಾ ಬಿಡು...’ ಅಂತ ಧೈರ್ಯ ಕೊಟ್ಟರು. ಹಾಗೆಯೇ ಶಿವಣ್ಣ ಸಾಥ್‌ ಕೊಟ್ಟರು. ರಾಘಣ್ಣ ಜತೆಗೆ ನಿಂತರು. ಅವರೆಲ್ಲರ ಬೆಂಬಲದಿಂದಾಗಿ ನಾನು ಮೊದಲು ಈ ಶೋ ನಿರೂಪಕನಾದೆ. ಹೊರಗಡೆ ಇದ್ದಾಗ ಏನೋ ಭಯ, ಆದ್ರೆ ಶೋ ಸ್ಟೇಜ್‌ಗೆ ಬಂದಾಗ ಅದೇನೋ ಎನರ್ಜಿ ಬರುತ್ತೆ. ಇಲ್ಲಿ ಪಾಸಿಟಿವ್‌ ವೈಬ್ರೇಷನ್‌ ಇರುತ್ತೆ. ಪ್ರತಿಯೊಬ್ಬರು ಗೆಲ್ಲಬೇಕೆನ್ನುವುದು ನನ್ನಾಸೆ.. ಶೋ ನಿರೂಪಕ ನಾನು. ಹಾಟ್‌ ಸೀಟ್‌ ಮೇಲೆ ಕುಳಿತುಕೊಳ್ಳುವ ಕಂಟೆಸ್ಟ್‌ಗಳಿಗೆ ಒಂದಷ್ಟುಕಾಲೆಳೆಯಬೇಕು, ಕನ್‌ಫä್ಯಸ್‌ ಮೂಡುವಂತೆ ಮಾಡ್ಬೇಕೆನ್ನುವುದು ಶೋನ ಟ್ರಿಕ್ಸ್‌ ಆಗಿದ್ದರೂ, ನಾನಿಲ್ಲಿ ಅದಕ್ಕೆ ಹೆಚ್ಚು ಒತ್ತು ಕೊಡುವುದಿಲ್ಲ. ಆದಷ್ಟುಸ್ಪರ್ಧಿಗಳು ಆಪ್ತವಾಗಿಯೇ ಆಟ ಮುನ್ನಡೆಸಬೇಕು ಎನ್ನುವುದರ ಕಡೆಯೇ ಆದ್ಯತೆ ನೀಡುತ್ತೇನೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಸ್ಪರ್ಧಿಯೂ ಗೆಲ್ಲಬೇಕೆನ್ನುವುದು ನನ್ನಾಸೆ. ಕೆಲವರು ಕ್ಲಿಷ್ಟಪ್ರಶ್ನೆಗಳಿಗೂ ಉತ್ತರಿಸಿ, ಇನ್ನಾವುದೋ ಸರಳ ಪ್ರಶ್ನೆಗೆ ಉತ್ತರಿಸಲಾಗದೆ ಸ್ಪರ್ಧೆಯಿಂದ ಎದ್ದು ಹೊರಟಾಗ ಬೇಸರ ಎನಿಸುತ್ತೆ. ಯಾಕಂದ್ರೆ ಇಲ್ಲಿಗೆ ಬರುವವರೆಲ್ಲ ಏನೇನೋ ಕನಸು ಹೊತ್ತು ಬರುತ್ತಾರೆ. ಅವರು ಕನಸು ನನಸಾಗಬೇಕೆನ್ನುವ ಆಸೆಗಳು ಅವರ ಕಣ್ಣಲ್ಲಿ ಕಾಣುತ್ತವೆ. ಅದನ್ನು ಕಂಡಾಗ ನನಗೆ ಅವರು ಗೆಲ್ಲಬೇಕು ಅಂತಲೇ ಎನಿಸುತ್ತೆ. ಭರದ ಸಿದ್ಧತೆ, ಸ್ಪರ್ಧಿಗಳ ಆಯ್ಕೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಸೋನಿ ಪಿಕ್ಚರ್ಸ್‌ ಪ್ರೊಡಕ್ಷನ್‌ ಹೌಸ್‌ ಮತ್ತು ಸ್ಟುಡಿಯೋ ನೆಕ್ಟ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಸಂತೂರ್‌ ಸೋಪ್‌ ಸೇರಿದಂತೆ ಹಲವು ಸಂಸ್ಥೆಗಳು ಸಾಥ್‌ ನೀಡಿವೆ. ಆ ಮೂಲಕ ಕಾರ್ಯಕ್ರಮದ ಒಂದು ಹಂತದ ಸ್ವರೂಪ ಸಿದ್ಧವಾಗಿದೆ. ‘ಕನ್ನಡದ ಕೋಟ್ಯಧಿಪತಿ ಶೋ ರೂಪುರೇಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಸ್ಪರ್ಧಿಗಳ ಕತೆಗಳು, ಅವರ ಅಗತ್ಯಗಳು, ಕೋಟಿ ರೂಪಾಯಿ ಗೆಲ್ಲಲು ಅವರು ಪಡುವ ಪ್ರಯತ್ನ ಮತ್ತು ಬುದ್ಧಿವಂತಿಕೆ ಇತ್ಯಾದಿಗಳನ್ನು ತೋರಿಸುವ ವಿಧಾನ ಹೊಸದಾಗಿರುತ್ತದೆ. ಈಗಾಗಲೇ ರಾಜ್ಯದ ಐದು ನಗರಗಳಲ್ಲಿ ಆಡಿಷನ್‌ ನಡೆಸಿ ಸ್ಫರ್ಧಿಗಳನ್ನು ಆಯ್ಕೆ ಮಾಡಿದ್ದೇವೆ. ಸ್ಟುಡಿಯೋ ನೆಕ್ಷಾ…$್ಟಸಿದ್ಧಪಡಿಸಿದ ಪ್ರಶ್ನೆಗಳ ಮೂಲಕ ಸ್ಪರ್ಧಿಗಳ ಆಯ್ಕೆ ನಡೆದಿದೆ. ಸ್ಪರ್ಧಿಗಳ ಸಂಖ್ಯೆ ಎಷ್ಟಾಗುತ್ತೋ ಖಚಿತವಾಗಿಲ್ಲ. ಅದು ಆಟದ ಮೇಲೆ ನಿಂತಿರುತ್ತದೆ. ಅನೇಕ ಹೊಸ ಸಂಗತಿಗಳ ಮೂಲಕ ಇದನ್ನು ವೀಕ್ಷಕರಿಗೆ ನೀಡುತ್ತಿದ್ದೇವೆ. ಅದೆಲ್ಲಕ್ಕಿಂತ ಮುಖ್ಯವಾಗಿ ಪುನೀತ್‌ ರಾಜ್‌ ಕುಮಾರ್‌ ಶೋ ನಿರೂಪಕರಾಗಿದ್ದು ಖುಷಿ ತಂದಿದೆ. ಅವರು ಕಾರ್ಯಕ್ರಮ ನಡೆಸಿಕೊಡುವ ರೀತಿಯೇ ಅತ್ಯಾಕರ್ಷಕ. ಹಾಗಾಗಿ ಈ ಶೋ ವಿಶೇಷವಾಗಿರುತ್ತೆ ಎನ್ನುವ ನಂಬಿಕೆಯಿದೆ’ ಎನ್ನುತ್ತಾರೆ ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌. - ಶೋಗೆ ಸ್ಟುಡಿಯೋ ನೆಕ್ಟ್ ಸಂಸ್ಥೆಯೇ ಪ್ರಶ್ನೆಗಳನ್ನು ತಯಾರಿಸುತ್ತಿದೆ. ಅದರ ತಂಡವೇ ಕನ್ನಡಕ್ಕೆ ಪೂರಕವಾಗಿ ನಿಗೂಢವಾಗಿ ಪ್ರಶ್ನೆಗಳ ಪಟ್ಟಿತಯಾರಿಸುತ್ತಿದೆ. ಅದರ ಚಾನೆಲ್‌ ಹಸ್ತಕ್ಷೇಪವೇ ಇರುವುದಿಲ್ಲ. - ವೂಟ್‌ ಮತ್ತು ಮೈ ಜಿಯೋ ಆ್ಯಪ್‌ಗಳಲ್ಲೂ ಪ್ರಸಾರ ಪ್ರಾರಂಭಿಸಲಾಗಿದೆ. ಆ ಮೂಲಕ ಕಾರ್ಯಕ್ರಮ ವೀಕ್ಷಿಸುವ ಜನರು ಕೂಡ ಶೋ ಕ್ವೀಜ್‌ನಲ್ಲಿ ಭಾಗವಿಹಿಸಬಹುದು. Last Updated 19, Jun 2019, 8:46 AM IST
0
ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಆರನೇ ಚಿನ್ನಕ್ಕೆ ಮುತ್ತಿಕ್ಕಿದ ಮೇರಿಕೋಮ್‌ ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ದಾಖಲೆ ಬರೆದ ಭಾರತದ ಬಾಕ್ಸರ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಆರನೇ ಚಿನ್ನಕ್ಕೆ ಮುತ್ತಿಕ್ಕಿದ ಮೇರಿಕೋಮ್‌ ಪ್ರಜಾವಾಣಿ ವಾರ್ತೆ Published: 24 ನವೆಂಬರ್ 2018, 16:45 IST Updated: 24 ನವೆಂಬರ್ 2018, 19:51 IST ಅಕ್ಷರ ಗಾತ್ರ : ಆ ಆ ನವದೆಹಲಿ: ಭಾರತದ ಎಂ.ಸಿ.ಮೇರಿ ಕೋಮ್‌, ಶನಿವಾರ ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ 48 ಕೆ.ಜಿ.ವಿಭಾಗದ ಫೈನಲ್‌ನಲ್ಲಿ ಮಣಿಪುರದ ಮೇರಿ 5–0 ಪಾಯಿಂಟ್ಸ್‌ನಿಂದ ಉಕ್ರೇನ್‌ನ ಹನಾ ಒಖೋಟಾ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್‌ ಎಂಬ ಹಿರಿಮೆಗೆ ಮೇರಿ ಭಾಜನರಾಗಿದ್ದಾರೆ. ಜೊತೆಗೆ ವಿಶ್ವ ಚಾಂಪಿಯನ್‌ಷಿ‍ಪ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಕ್ಯೂಬಾದ ಫೆಲಿಕ್ಸ್‌ ಸೇವನ್‌ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ತಾವು ಗೆದ್ದ ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸುವುದಾಗಿ ಅವರು ತಿಳಿಸಿದರು.  ಫೆಲಿಕ್ಸ್‌ ಅವರು 1986 ರಿಂದ 1989ರ ಅವಧಿಯಲ್ಲಿ ಪುರುಷರ ಹೆವಿವೇಟ್‌ ವಿಭಾಗದಲ್ಲಿ ಒಟ್ಟು ಆರು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಜಯಿಸಿದ್ದರು.  2002ರಲ್ಲಿ ಮೊದಲ ಬಾರಿ ಮೇರಿ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಆಗ ಅವರು 45 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. 2005, 2006 ಮತ್ತು 2008ರಲ್ಲಿ 46 ಕೆ.ಜಿ ವಿಭಾಗದಲ್ಲಿ ಚಿನ್ನ ಗಳಿಸಿದ್ದರು. 2010ರಲ್ಲಿ 48 ಕೆ.ಜಿ ವಿಭಾಗದಲ್ಲಿ ಕಣಕ್ಕೆ ಇಳಿದು ಮೊದಲಿಗರಾಗಿದ್ದರು. A proud moment for Indian sports. Congratulations to Mary Kom for winning a Gold in the Women’s World Boxing Championships. The diligence with which she’s pursued sports and excelled at the world stage is extremely inspiring. Her win is truly special. @MangteC — Narendra Modi (@narendramodi) November 24, 2018 Heartiest congratulations to #MaryKom for creating history, by clinching record 6th World Boxing Championship Gold #WWCHs2018 pic.twitter.com/DFzvuJBa3b — Sushil Kumar (@WrestlerSushil) November 24, 2018 The moment. Mary, World Champion for the sixth time. #boxing pic.twitter.com/HwLKuCFH7W
2
ಪಾನ್ ಬೀಡಾದ ಸಿಹಿ 'ಗುಲ್ಕಂದ್' ಆರೋಗ್ಯದ ಕೀಲಿಕೈ! Wellness | Updated: Friday, November 27, 2015, 11:47 [IST] ಗುಲ್ಕಂದ್ ಎಂದರೆ ಪಾನ್ ಬೀಡಾದಲ್ಲಿ ಸಿಹಿ ಮತು ಸುವಾಸನೆ ಮೂಡಿಸಲು ಸೇರಿಸುವ ಒಂದು ಪದಾರ್ಥ. ಇದರ ಹೊರತಾಗಿ ಗುಲ್ಕಂದ್ ಬಳಕೆ ಇನ್ನೆಲ್ಲೂ ಸಾಮಾನ್ಯವಾಗಿ ಕೇಳಿಬರುವುದಿಲ್ಲ. ಆದರೆ ಪ್ರತ್ಯೇಕವಾಗಿ ಪರಿಗಣಿಸಿದಾಗ ಇದೊಂದು ಉತ್ತಮ ಔಷಧಿಯ ರೂಪದಲ್ಲಿಯೂ ಬಳಸಬಹುದು. ಮುಖ್ಯವಾಗಿ ಅಜೀರ್ಣ, ನಾರಿಲ್ಲದ ಕಳಪೆ ಆಹಾರದ ಸೇವನೆ ಮೊದಲಾದ ಕಾರಣಗಳಿಂದ ಉಂಟಾಗುವ ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ತಕ್ಷಣ ಕಡಿಮೆಮಾಡುತ್ತದೆ. ಅತಿಯಾದ ಮದ್ಯಪಾನ, ಮಾನಸಿಕ ಒತ್ತಡ, ಉದ್ವೇಗ, ಅತಿಯಾದ ಧೂಮಪಾನ ಮೊದಲಾದ ಕಾರಣಗಳಿಂದಲೂ ಉಂಟಾಗುವ ಆಮ್ಲೀಯತೆಯನ್ನು ಗುಲ್ಕಂದ್ ನಿವಾರಿಸಲು ಸಮರ್ಥವಾಗಿದೆ. ಇನ್ನುಳಿದಂತೆ ಆಮ್ಲೀಯತೆಗೆ ಅತಿ ಖಾರದ, ಅತಿಯಾದ ಎಣ್ಣೆ ಇರುವ ಆಹಾರಗಳು, ಆಹಾರವನ್ನು ಕ್ಲುಪ್ತಕಾಲಕ್ಕೆ ಸೇವಿಸದೇ ಇರುವುದು, ಅತಿ ಹೆಚ್ಚಾಗಿ ತಿನ್ನುವುದು, ಬೇಗಬೇಗನೇ ತಿನ್ನುವುದು ಮೊದಲಾದವೆಲ್ಲಾ ಕಡಿಮೆ ಪ್ರಕೋಪದ ಆಮ್ಲೀಯತೆ ಮತ್ತು ಹುಳಿತೇಗಿಗೆ ಕಾರಣವಾಗುತ್ತವೆ. ಈ ಉರಿಗೂ ಗುಲ್ಕಂದ್ ಸೇವನೆ ಉತ್ತಮ ಪರಿಹಾರ ನೀಡುತ್ತದೆ. ಬನ್ನಿ, ಇದರ ಇತರ ಆರೋಗ್ಯಕರ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ: ಆಮ್ಲೀಯತೆಗೆ ಸೂಕ್ತ ಔಷಧಿಯಾಗಿದೆ ಗುಲ್ಕಂದ್ ಎಂದರೆ ಯಾವುದೋ ಸ್ವರ್ಗದಿಂದ ಇಳಿದುಬಂದ ಔಷಧಿಯಲ್ಲ. ಗುಲಾಬಿ ಹೂವಿನ ದಳಗಳನ್ನು ಸಕ್ಕರೆಯ ಪಾಕದಲ್ಲಿ ಕರಗಿಸಿ ಮಾಡಿರುವ ದ್ರವ್ಯ. ಆಮ್ಲೀಯತೆಗೆ ತಕ್ಷಣ ಪರಿಹಾರ ನೀಡುವ ಈ ಅದ್ಭುತ ಔಷಧಿ ಆಯುರ್ವೇದದ ಔಷಧಿಗಳಲ್ಲಿಯೇ ಅತ್ಯಂತ ಸಿಹಿಯುಳ್ಳದ್ದಾಗಿದೆ. ಊಟದ ಬಳಿಕ ಒಂದು ಚಮಚ ಗುಲ್ಕಂದ್ ಅನ್ನು ಹಾಗೇ ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು. ಜಡತ್ವವನ್ನು ಕಡಿಮೆಗೊಳಿಸುತ್ತದೆ ಸಾಮಾನ್ಯವಾಗಿ ಊಟವಾದ ಬಳಿಕ ಜಡತ್ವ ಆವರಿಸುತ್ತದೆ. ಕೊಂಚ ಹೊತ್ತಿಗಾದರೆ ಪರವಾಗಿಲ್ಲ, ಇಡಿಯ ದಿನ ಈ ಜಡತ್ವ ಆವರಿಸಿದ್ದರೆ? ಇದಕ್ಕೆ ಗುಲ್ಕಂದ್ ಉತ್ತಮ ಪರಿಹಾರವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಜಡತ್ವವನ್ನು ಕಡಿಮೆಗೊಳಿಸುತ್ತದೆ ಜೊತೆಗೇ ತುರಿಕೆ, ಸ್ನಾಯುಗಳ ನೋವು, ಸುಸ್ತು, ಬಿಸಿ ಮತ್ತು ಸೆಖೆಯಲ್ಲಿ ಅತಿ ಹೆಚ್ಚು ಹೊತ್ತು ಕಳೆಯುವ ಮೂಲಕ ದಣಿದ ಶರೀರ ಮೊದಲಾದವುಗಳಿಗೂ ಗುಲ್ಕಂದ್ ಉತ್ತಮವಾಗಿದೆ. ಅಲ್ಲದೇ ನೀರಿನಲ್ಲಿ ಕದಡಿ ಕುಡಿಯುವ ಮೂಲಕ ರಕ್ತವನ್ನು ಶುದ್ಧೀಕರಿಸುತ್ತದೆ ಹಾಗೂ ಕಣ್ಣಿನ ದೃಷ್ಟಿ ಮತ್ತು ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ. ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮಗಳಿಂದ ರಕ್ಷಿಸುತ್ತದೆ ಕೆಲವು ಬಗೆಯ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯ ರೂಪದಲ್ಲಿ ರೇಡಿಯೋಥೆರಪಿ ಮತ್ತು ಖೀಮೋಥೆರಪಿಗಳನ್ನು ನಡೆಸಿದ ಬಳಿಕ ಹಲವಾರು ಅಡ್ಡಪರಿಣಾಮಗಳು ಎದುರಾಗುತ್ತವೆ. (ತಲೆ ಬೋಳಾಗುವುದು ಇದರಲ್ಲಿ ಒಂದು). ಗುಲ್ಕಂದ್ ಈ ಅಡ್ಡಪರಿಣಾಮಗಳಿಗೆ ಅಡ್ಡಗೋಡೆಯಾಗಿ ನಿಂತು ಶರೀರವನ್ನು ರಕ್ಷಿಸುತ್ತದೆ. ಕರುಳಿನ ಹುಣ್ಣಿನಿಂದ ರಕ್ಷಿಸುತ್ತದೆ ಕೆಲವೊಮ್ಮೆ ಆಹಾರದಲ್ಲಿ ಆಮ್ಲೀಯತೆ ಹೆಚ್ಚುವ ಕಾರಣ ಜೀರ್ಣಾಂಗಗಳ ಒಳಪದರ ಅಪಾರವಾಗಿ ಬಾಧೆಗೊಳಗಾಗುತ್ತವೆ. ಅದರಲ್ಲೂ ಸೂಕ್ಷ್ಮಭಾಗಗಳು ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತವೆ. ಜಠರದಿಂದ ಸಣ್ಣಕರುಳಿಗೆ ಆಹಾರ ದಾಟುವ ಸ್ಥಳದಲ್ಲಿ (duodenun) ಈ ಪ್ರಭಾವ ಅತಿಯಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಕರುಳಿನ ಹುಣ್ಣಿನಿಂದ ರಕ್ಷಿಸುತ್ತದೆ ಜೊತೆಗೆ ಈ ಸ್ಥಳದಲ್ಲಿ ಹುಣ್ಣುಗಳಾಗುವ ಸಾಧ್ಯತೆ ಹೆಚ್ಚುತ್ತದೆ. (duodenal ulcer) ಬಳಿಕ ಕರುಳುಗಳ ಒಳಭಾಗ ಮತ್ತು ಜೀರ್ಣಾಂಗಗಳ ಅಷ್ಟೂ ಒಳಭಾಗದಲ್ಲಿ ಹುಣ್ಣುಗಳಾಗುವ ಸಾಧ್ಯತೆ ಇರುತ್ತದೆ. ಗುಲ್ಕಂದ್ ಈ ಆಮ್ಲವನ್ನು ನಿರ್ಜೀವಗೊಳಿಸಿ ಈ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ. ಅತಿಮೂತ್ರದಿಂದ ರಕ್ಷಿಸುತ್ತದೆ ಕೆಲವರಲ್ಲಿ ಮೂತ್ರಕೋಶದ ಸಾಮರ್ಥ್ಯ ಕೆಲವು ಕಾರಣಗಳಿಂದ ಕಡಿಮೆಗಾಗಿದ್ದು ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತದೆ. ಇವರಿಗೆ ಗುಲ್ಕಂದ್ ಉತ್ತಮವಾಗಿದೆ. ಇದು ಮೂತ್ರಕೋಶದ ಸಾಮರ್ಥ್ಯ ಹೆಚ್ಚಿಸಿ ಈ ತೊಂದರೆಯಿಂದ ಕಾಪಾಡುತ್ತದೆ. ಮಹಿಳೆಯರಿಗೆ ಕಾಡುವ ಮಾಸಿಕ ರಜಾದಿನಗಳ ನೋವು, ಬಿಳಿಸೆರಗು ಮೊದಲಾದ ತೊಂದರೆಗಳಿಂದಲೂ ರಕ್ಷಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಊಟದ ಬಳಿಕ ಗುಲ್ಕಂದ್ ಸೇವಿಸುವ ಮೂಲಕ ಜೀರ್ಣಕ್ರಿಯೆಯನ್ನು ಹೆಚ್ಚಿಸಬಹುದು. ಇದರ ಪರಿಣಾಮವಾಗಿ ವಾಂತಿ, ವಾಕರಿಕೆ ಮೊದಲಾದ ತೊಂದರೆಗಳನ್ನು ನಿವಾರಿಸಬಹುದು. ಅಲ್ಲದೇ ಬೆವರಿನಲ್ಲಿ ದುರ್ಗಂಧ ಮತ್ತು ಮೊಡವೆಗಳು ಮೂಡುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಬಾಯಿಹುಣ್ಣಿಗೂ ಉತ್ತಮವಾಗಿದೆ ಬಾಯಿಯ ಒಳಭಾಗ, ಅಂದರೆ ನಾಲಿಗೆಯ ಮೇಲೆ, ತುಟಿ ಮತ್ತು ಕೆನ್ನೆಗಳ ಒಳಭಾಗದ ಚರ್ಮದಲ್ಲಿ ಆವರಿಸುವ ಹುಣ್ಣುಗಳು (mouth ulcers) ಗುಲ್ಕಂದ್ ನೀರನ್ನು ಮುಕ್ಕಳಿಸಿ ಸೇವಿಸುವ ಮೂಲಕ ಕಡಿಮೆಯಾಗುತ್ತವೆ. ಅಲ್ಲದೇ ಒಸಡು ಮತ್ತು ಹಲ್ಲುಗಳು ಸಹಾ ದೃಢಗೊಳ್ಳುತ್ತವೆ. ಅಲ್ಲದೇ ಇದನ್ನು ಸೇವಿಸುವ ಮೂಲಕ ಪುರುಷತ್ವ ಹೆಚ್ಚುತ್ತದೆ. ಉತ್ತಮ ಕಾಮೋತ್ತೇಜಕವೂ ಆಗಿರುವ ಗುಲ್ಕಂದ್ ದಂಪತಿಯರಿಗೂ ಉತ್ತಮವಾಗಿದೆ. ಹೃದಯ ಬಡಿತದ ಏರುಪೇರು ಸರಿಪಡಿಸುತ್ತದೆ ಹೃದಯದ ಹಲವಾರು ತೊಂದರೆಗಳಿಗೂ ಗುಲ್ಕಂದ್ ಉತ್ತಮವಾಗಿದೆ. ಇದು ಹೃದಯದ ತೊಂದರೆಗೆ ನೀಡಿರುವ ಔಷಧಿಗಳ ಪರಿಣಾಮ ಸರಿಯಾಗಿ ಆಗುವಲ್ಲಿ ಸಹಕರಿಸುತ್ತದೆ. ಜೊತೆಗೇ ಹೃದಯ ಬಡಿತದ ಏರುಪೇರುಗಳನ್ನು, ಅತಿ ರಕ್ತದ ಒತ್ತಡ ಮತ್ತು ಅತಿಯಾದ ಒತ್ತಡದ ಮೂಲಕ ಸಂಭವಿಸುವ ಹೃದಯಾಘಾತವನ್ನೂ ತಪ್ಪಿಸುತ್ತದೆ. ಮೂಗಿನಿಂದ ರಕ್ತ ಬರುವುದನ್ನು ತಪ್ಪಿಸುತ್ತದೆ ಕೆಲವರಿಗೆ ಸಾಮಾನ್ಯವಾಗಿ ಸೆಖೆಗಾಲದಲ್ಲಿ ಮೂಗಿನೊಳಗಿನಿಂದ ರಕ್ತ ಬರುತ್ತದೆ. ಇದಕ್ಕೆ ಕಾರಣವೇನೆಂದರೆ ಮೂಗಿನ ಒಳಭಾಗದ ಚರ್ಮ (ಕೂದಲು ಇರುವ ಚರ್ಮ ಮುಗಿಯುವಲ್ಲಿ) ಅತಿ ತೆಳುವಾಗಿದ್ದು ಸೆಖೆಯ ಕಾರಣ ಸುಲಭವಾಗಿ ಹರಿಯುತ್ತದೆ. ಗುಲ್ಕಂದ್ ಸೇವನೆಯಿಂದ ಈ ಭಾಗದಲ್ಲಿ ಉತ್ತಮ ಪೋಷಣೆ ದೊರೆತು ರಕ್ತ ಹರಿಯುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಹಸ್ತ ಮತ್ತು ಪಾದಗಳಲ್ಲಿ ಉರಿ, ಸೂಜಿ ಚುಚ್ಚಿದಂತಾಗುವುದು, ಮಾನಸಿಕ ಒತ್ತಡ ಮೊದಲಾದ ತೊಂದರೆಗಳಿಂದ ಕಾಪಾಡುತ್ತದೆ. ಅಲ್ಲದೇ ನರವ್ಯವಸ್ಥೆಯನ್ನು ಉತ್ತಮಪಡಿಸಲೂ ನೆರವಾಗುತ್ತದೆ. ಮಲಬದ್ಧತೆಯಿಂದ ರಕ್ಷಿಸುತ್ತದೆ ನಾರು ಇಲ್ಲದ ಅಹಾರದ ಸೇವನೆಯಿಂದ ಬಹಿರ್ದೆಶೆ ಬಹಳ ತಡವಾಗಿ ಆಗುತ್ತಿದ್ದರೆ ಗುಲ್ಕಂದ್ ಸೇರಿಸಿದ ನೀರನ್ನು ಕುಡಿಯುವ ಮೂಲಕ ಬಹಿರ್ದೆಶೆ ಸುಲಭವಾಗುತ್ತದೆ. ಆಹಾರಗಳ ಸಿಹಿಯನ್ನೂ ಹೆಚ್ಚಿಸುತ್ತದೆ ಮೇಲಿನ ಎಲ್ಲಾ ಪರಿಣಾಮಗಳನ್ನು ಒಂದೆರಡು ಬಾರಿ ಸೇವಿಸುವ ಮೂಲಕ ಪಡೆಯಲು ಸಾಧ್ಯವಿಲ್ಲ. ನಿಯಮಿತವಾಗಿ ಸೇವಿಸುವ ಮೂಲಕ ಮಾತ್ರ ಪಡೆಯಬಹುದು. ಆದ್ದರಿಂದ ಇದನ್ನು ಹಾಗೇ ಸೇವಿಸುವ ಬದಲು ಹೇಗೂ ಸಕ್ಕರೆ ಸೇರಿಸಬೇಕಾದ ಸಿಹಿ ಮತ್ತು ಇತರ ಪದಾರ್ಥಗಳಲ್ಲಿ ಸಕ್ಕರೆಯ ಅಥವಾ ಬೆಲ್ಲದ ಬದಲಿಗೆ ಸೇರಿಸಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು. ಇನ್ನೊಂದು ವಿಧಾನವೆಂದರೆ ರಾತ್ರಿ ಕುಡಿಯುವ ಹಾಲಿನಲ್ಲಿ ಗುಲ್ಕಂದ್ ಸೇರಿಸಿ ಕುಡಿಯುವುದು. ಗುಲ್ಕಂದ್ ಸೇವನೆಯ ಮಿತಿ ಇದರಲ್ಲಿ ಸಕ್ಕರೆ ಅಪಾರ ಪ್ರಮಾಣದಲ್ಲಿರುವ ಕಾರಣ ಇದರ ಸೇವನೆ ಮಧುಮೇಹಿಗಳಿಗೆ ಸಲ್ಲದು. ಅತಿ ಹೆಚ್ಚು ಪೋಷಕಾಂಶ ಮತ್ತು ಶಕ್ತಿ ನೀಡುವ ಕಾರಣ ಸ್ಥೂಲದೇಹಿಗಳಿಗೂ ಇದು ಸೂಕ್ತವಲ್ಲ. ಆದರೆ ಸ್ಥೂಲದೇಹಿಗಳು ತಮ್ಮ ನಿತ್ಯದ ಸಕ್ಕರೆಯ ಬದಲಿಗೆ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಉಪಯುಕ್ತವಾಗಬಲ್ಲುದು. Image courtesy - en.wikipedia.org
1
#Gomonster Samsung M30s: ಹೊಸ ಸ್ಮಾರ್ಟ್‌ಫೋನ್‌ ನ ವಿಶೇಷತೆಗಳೇನು ನೋಡಿ! WATCH LIVE TV ಅಲ್ಲಮನಿಗಾಗಿ ಮೃದಂಗ ಕಲಿತ ಧನಂಜಯ ಅಲ್ಲಮ ಚಿತ್ರಕ್ಕಾಗಿ ಧನಂಜಯ ವಿಶೇಷ ತಯಾರಿಗಳನ್ನು ಮಾಡಿಕೊಂಡಿದ್ದರಂತೆ | Updated: Jan 23, 2017, 04:00AM IST - ಹರೀಶ್‌ ಬಸವರಾಜ್‌ ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್‌ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದ ಕನ್ನಡ ಚಿತ್ರ ಅಲ್ಲಮ ಜ.26ರಂದು ಪ್ರೇಕ್ಷಕರ ಎದುರಿಗೆ ಬರಲಿದೆ. ಇದರಲ್ಲಿನ ಅಲ್ಲಮನ ಪಾತ್ರ ಈಗಾಗಲೇ ಚರ್ಚೆಗೆ ಗ್ರಾಸವಾಗಿದ್ದು, ಈ ಕ್ಯಾರೆಕ್ಟರ್‌ಗಾಗಿ ತಾವು ಮಾಡಿಕೊಂಡಿದ್ದ ತಯಾರಿಯನ್ನು ಈ ವೇಳೆ ಧನಂಜಯ ನೆನಪಿಸಿಕೊಳ್ಳುತ್ತಾರೆ. 'ಜಯನಗರ 4ನೇ ಬ್ಲಾಕ್‌' ಕಿರುಚಿತ್ರ ನೋಡಿದ ನಾಗಾಭರಣ, ಧನಂಜಯ ಅವರನ್ನು ಅಲ್ಲಮನ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ. ಈ ಸಿನಿಮಾದ ಶೂಟಿಂಗ್‌ ಆರಂಭಗೊಳ್ಳುವುದಕ್ಕೂ ಮುನ್ನ ಬಾಕ್ಸರ್‌, ರಾಟೆ, ಬದ್ಮಾಶ್‌ನಂತಹ ಪಕ್ಕಾ ಮಾಸ್‌ ಮತ್ತು ಕಮರ್ಷಿಯಲ್‌ ಸಿನಿಮಾಗಳಲ್ಲಿ ನಟಿಸಿದ್ದರು ಧನಂಜಯ. ಅಲ್ಲಮ ಆರಂಭವಾಗುವ ಹೊತ್ತಿಗೆ ಒಂದಿಷ್ಟು ತಯಾರಿಗಳನ್ನು ಮಾಡಿಕೊಳ್ಳಬೇಕಿತ್ತು, ಅದರಲ್ಲಿ ಮೃದಂಗ ನುಡಿಸುವುದು ಸಹ ಒಂದು. ಭರಣ ಅವರ ಆದೇಶದಂತೆ ಧನಂಜಯ ಒಂದಿಷ್ಟು ದಿನ ಮೃದಂಗ ಬಾರಿಸುವುದನ್ನು ಕಲಿತಿದ್ದಾರೆ. ಅಷ್ಟೇ ಅಲ್ಲದೆ ಸಿಕ್ಸ್‌ ಪ್ಯಾಕ್‌ ಮಾಡಿ ಬಾಕ್ಸರ್‌ ಆಗಿದ್ದ ಧನಂಜಯ ಕೆಲವೇ ದಿನಗಳಲ್ಲಿ ಯೋಗ ಮಾಡಿ 'ಅಲ್ಲಮ'ರಾದರಂತೆ. 'ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ, ನಿರ್ದೇಶಕ ನಾಗಭರಣ ಮತ್ತು ನಿರ್ಮಾಪಕ ಹರಿಖೋಡೆ ಅವರ ಕಾಂಬಿನೇಷನ್‌.ನಾಗಭರಣ ಅವರೊಂದಿಗೆ ಕೆಲಸ ಮಾಡಬೇಕು ಎನ್ನುವ ಆಸೆಯೂ ಇತ್ತು. ಅದು ಈ ಸಿನಿಮಾ ಮೂಲಕ ಈಡೇರಿತು. ಕಮರ್ಷಿಯಲ್‌ ಸಿನಿಮಾಗಳಲ್ಲಿ ಎಲ್ಲರೂ ನಟಿಸುತ್ತಾರೆ. ಆದರೆ ಅದರ ಜತೆ ಕ್ಲಾಸಿಕಲ್‌ ಸಿನಿಮಾದಲ್ಲಿಯೂ ನಟಿಸಬೇಕು ಎನ್ನುವ ಹಂಬಲವಿತ್ತು' ಎನ್ನುತ್ತಾರೆ ಧನಂಜಯ. 'ಸಿನಿಮಾ ಆರಂಭಕ್ಕೂ ಮುನ್ನ ನಾಗಾಭರಣ ಒಂದಿಷ್ಟು ಪುಸ್ತಕಗಳನ್ನು ಕೊಟ್ಟಿದ್ದರು. ಅದನ್ನು ನಾನು ಓದಿ ಅದರ ಸಾಕಷ್ಟು ಅಂಶಗಳನ್ನು ತಿಳಿದುಕೊಳ್ಳಬೇಕಿತ್ತು. ಅಲ್ಲದೆ ಬರಹಗಾರರು ಸ್ಕ್ರಿಪ್ಟ್‌ ಬಗ್ಗೆ ಚರ್ಚೆ ಮಾಡಿದ್ದನ್ನು ಅವರು ರೆಕಾರ್ಡ್‌ ಮಾಡಿ ನನಗೆ ಕೊಟ್ಟಿದ್ದರು. ಅದನ್ನು ಪ್ರಯಾಣ ಮಾಡುವಾಗ, ಬಿಡುವಿನ ವೇಳೆಯಲ್ಲಿ ಕೇಳುತ್ತಾ ಕೇಳುತ್ತಾ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದೆ. ಇನ್ನು ಪೂರ್ತಿ ಸ್ಕ್ರಿಪ್ಟನ್ನು ಮೊದಲೇ ಕೊಟ್ಟಿದ್ದರು. ಅದನ್ನು ಮೊದಲೇ ಓದಿಕೊಂಡು ಅಭ್ಯಾಸ ಮಾಡಿಕೊಂಡಿದ್ದೆ' ಎಂದು ತಯಾರಿಯ ವಿವರ ನೀಡುತ್ತಾರೆ. 'ಅಲ್ಲಮ ಸಿನಿಮಾ ಯುವಕರಿಗೆ ಕನೆಕ್ಟ್ ಆಗುತ್ತದೆ. ಈ ಸಿನಿಮಾ ಸೆಟ್‌ನಲ್ಲಿದ್ದ ಸಾಕಷ್ಟು ಮಂದಿ ಯುವಕರಿಗೆ ಅಲ್ಲಮನ ಬಗ್ಗೆ ಗೊತ್ತಿರಲಿಲ್ಲ, ಸಿನಿಮಾ ಮುಗಿಯವ ಹೊತ್ತಿಗೆ ಎಲ್ಲರೂ ಅಲ್ಲಮರ ಅಭಿಮಾನಿಗಳಾಗಿಬಿಟ್ಟರು' ಎಂದು ಹೇಳಲು ಈ ನಟ ಮರೆಯುವುದಿಲ್ಲ. ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ವೇಳೆ ಶನಿವಾರ ಅಲ್ಲಮ ಸಿನಿಮಾವನ್ನು ಸ್ಕ್ರೀನಿಂಗ್‌ ಮಾಡಲಾಯಿತಂತೆ. ಆಗ ಅಲ್ಲಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ. ಬರೀ ಶಿಳ್ಳೆಗಳನ್ನು ಕೇಳುತ್ತಿದ್ದ ಧನಂಜಯ, ಬಹಳ ದಿನಗಳ ನಂತರ ಚಪ್ಪಾಳೆ ಕೇಳಿ ಥ್ರಿಲ್‌ ಆಗಿದ್ದಾರೆ. 'ಇಂತಹ ಕ್ಲಾಸಿಕ್‌ ಸಿನಿಮಾಗಳು ತಯಾರಾಗುವುದೇ ಕಡಿಮೆ. ಆ ಪ್ರಯತ್ನದಲ್ಲಿ ನಾನು ಭಾಗವಾಗುವುದೇ ದೊಡ್ಡ ಖುಷಿ. ಇಂಥ ಅವಕಾಶ ಸಿಕ್ಕಾಗ ಎಷ್ಟು ಸಾಧ್ಯವೋ ಅಷ್ಟು ತೊಡಗಿಸಿಕೊಳ್ಳಬೇಕು. ಆ ಅದೃಷ್ಟ ನನಗೆ ಒದಗಿ ಬಂದಿದ್ದು ಸಂಭ್ರಮದ ವಿಷಯ' -ಧನಂಜಯ, ನಟ
0
Bengaluru, First Published 8, Oct 2018, 1:00 PM IST Highlights ಬಾಲಿವುಡ್ ನಟ ರಣವೀರ್ ಸಿಂಗ್‌ನಂಥಾ ಲುಕ್ ಮತ್ತು ದೇಹಧಾರ್ಡ್ಯ ಹೊಂದಿರುವ ಧೀರೇನ್ ಸಿದ್ಧರಾಗಿಯೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇವರ ಹಿನ್ನೆಲೆಯೇ ಇವರ ದೊಡ್ಡ ಶಕ್ತಿ. ನಟ ರಾಮ್ ಕುಮಾರ್ ಪುತ್ರ ಇವರು.  ಬೆಂಗಳೂರು (ಅ. 08): ಚೂಪಾದ ಹುರಿ ಮೀಸೆ, ಭಾರಿ ಗಡ್ಡ, ಗಮನ ಸೆಳೆಯುವ ಹೇರ್ ಸ್ಟೈಲ್ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಾಗಲೇ ಧೀರೇನ್ ರಾಮ್‌ಕುಮಾರ್ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ ಅನ್ನುವುದು ಸಾಬೀತಾಗಿತ್ತು. ಇದೀಗ ಚಿತ್ರರಂಗ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪ್ರಖ್ಯಾತ ನಿರ್ಮಾಪಕ ಜಯಣ್ಣ- ಭೋಗೇಂದ್ರ ಅವರು ರಾಮ್‌ಕುಮಾರ್ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಯಶ್ ಅಭಿನಯದ ‘ಮೈ ನೇಮ್ ಇಸ್ ಕಿರಾತಕ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಯಶ್ ಸಿನಿಮಾ ಮುಗಿದ ಕೂಡಲೇ ಈ ಚಿತ್ರ ಆರಂಭವಾಗಲಿದೆ. ಬಾಲಿವುಡ್ ನಟ ರಣವೀರ್ ಸಿಂಗ್‌ನಂಥಾ ಲುಕ್ ಮತ್ತು ದೇಹಧಾರ್ಡ್ಯ ಹೊಂದಿರುವ ಧೀರೇನ್ ಸಿದ್ಧರಾಗಿಯೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇವರ ಹಿನ್ನೆಲೆಯೇ ಇವರ ದೊಡ್ಡ ಶಕ್ತಿ. ತಾತ ಡಾ.ರಾಜ್ ಕುಮಾರ್, ತಂದೆ ರಾಮ್‌ಕುಮಾರ್, ಮಾವಂದಿರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಎಲ್ಲರೂ ಕನ್ನಡ ಚಿತ್ರರಂಗದ ಆಸ್ತಿಗಳು. ಇದೀಗ ಅವರ ದಾರಿಯಲ್ಲೇ ಧೀರೇನ್ ಬಂದಿದ್ದಾರೆ. ಧೀರೇನ್ ಅವರು ರಾಮ್‌ಕುಮಾರ್- ಪೂರ್ಣಿಮಾ ಅವರ ಪುತ್ರ. ಈಗ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬ್ಯಾನರ್ ಮೂಲಕ ಸಿನಿಮಾ ಜಗತ್ತಿಗೆ ಕಾಲಿಡುತ್ತಿದ್ದು, ಅದಕ್ಕೆ ತೆರೆ ಮರೆಯಲ್ಲಿ ಸಿದ್ಧತೆ ಶುರುವಾಗಿದೆ. ಈ ಹಿಂದೆ ಧೀರೇನ್ ರಾಮ್‌ಕುಮಾರ್ ಸಿನಿಮಾ ಎಂಟ್ರಿ ಕುರಿತು ಈ ಹಿಂದೆಯೇ ಚರ್ಚೆ ಆಗಿತ್ತು. ಅದಕ್ಕೆ ಕಾರಣವಾಗಿದ್ದು ಧೀರೇನ್ ಮಾಡಿಸಿದ್ದ ಚೆಂದದ ಫೋಟೋಶೂಟ್. ಆನಂತರ ಏನಾಯಿತು ಎನ್ನುವ ಹೊತ್ತಿಗೀಗ ಗಾಂಧಿನಗರದ ಬಹು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಜಯಣ್ಣ ಕಂಬೈನ್ಸ್ ಮೂಲಕ ಧೀರೇನ್ ಸಿನಿಮಾ ಎಂಟ್ರಿಗೆ ತಯಾರಿ ನಡೆಯುತ್ತಿದೆ. ಧೀರೇನ್ ಚಿತ್ರರಂಗಕ್ಕೆ ಬರಬೇಕು ಅಂತಲೇ ನಟನೆ ತರಬೇತಿ ಪಡೆದುಕೊಂಡಿದ್ದರು. ಅಲ್ಲದೇ ಸಿಕ್ಸ್ ಪ್ಯಾಕ್ ಮಾಡಿಸಿಕೊಂಡು ಸಿದ್ಧರಾಗಿದ್ದರು. ಈಗ ಡಾನ್ಸ್, ಫೈಟು, ಜಿಮ್ ವರ್ಕೌಟ್ ಜತೆಗೆ ನಟನೆಯಲ್ಲೂ ಪಕ್ಕಾ ಆಗಿದ್ದಾರೆ. ಹಾಗಾಗಿಯೇ ನಿರ್ಮಾಪಕ ಜಯಣ್ಣ ಸಿನಿಮಾ ನಿರ್ಮಾಣಕ್ಕೂ ರೆಡಿ ಆಗಿದ್ದಾರೆ. ಧೀರೇನ್ ಲುಕ್‌ಗೆ, ಗೆಟಪ್ಗೆ ತಕ್ಕಂತೆ ಪಕ್ಕಾ ಯೂತ್‌ಫುಲ್ ಕತೆಯನ್ನು ನಿರ್ದೇಶಕ ಅನಿಲ್ ರೆಡಿ ಮಾಡುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರುವುದಕ್ಕೆ ಇನ್ನಷ್ಟು ಸಮಯ ಬೇಕಿದೆ. ಕಾರಣ ಯಶ್ ನಟನೆಯ ಮೈ ನೇಮ್ ಈಸ್ ಕಿರಾತಕ ಮುಗಿಯಬೇಕಿದೆ. ನಿರ್ದೇಶಕ ಅನಿಲ್ ಮತ್ತು ಜಯಣ್ಣ ಈಗ ಅದರ ಒತ್ತಡದಲ್ಲಿದ್ದಾರೆ. ಅದು ಮುಗಿದ ನಂತರವೇ ಈ ಸಿನಿಮಾ ಕೆಲಸ. ಹಾಗಂತ ಈ ಸಿನಿಮಾದ ಮುಹೂರ್ತಕ್ಕಾಗಿ ಅಲ್ಲಿಯವರೆಗೂ ಕಾಯುವ ಅವಶ್ಯಕತೆಯಿಲ್ಲ, ಸದ್ಯದಲ್ಲೇ ಈ ಚಿತ್ರವನ್ನು ಅಧಿಕೃತವಾಗಿ ಅನೌನ್ಸ್ ಮಾಡುವ ಯೋಚನೆಯಲ್ಲಿ ನಿರ್ಮಾಪಕರು ಇದ್ದಾರೆ ಎನ್ನಲಾಗಿದೆ. Last Updated 8, Oct 2018, 1:00 PM IST
0
ಕಳಚಿ ಬಿತ್ತು ಕರಣ್ ಜೋಹರ್ ಮುಖವಾಡ..!   02-09-2016 12:14PM IST    /     No Comments    /     Posted In: Latest News , Entertainment ಬಹುಷಃ ಇದು ಈ ವರ್ಷದ ಬಾಲಿವುಡ್ ನಲ್ಲಿ ನಡೆದ ಅತಿ ದೊಡ್ಡ ವಿವಾದ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಹಾಗೂ ಅಜಯ್ ದೇವಗನ್ ನಡುವಣ ಮುಸುಕಿನ ಗುದ್ದಾಟ ಈಗ ಬಯಲಾಗಿದೆ. ಅಸಲಿಗೆ ವಿವಾದ ಶುರುವಾಗಿದ್ದು ಅಜಯ್ ದೇವಗನ್ ರ ‘ಶಿವಾಯ್’ ಹಾಗೂ ಕರಣ್ ಜೋಹರ್ ನಿರ್ದೇಶನದ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾಗಳಿಂದ. ಇವೆರಡೂ ಚಿತ್ರಗಳು ಒಟ್ಟೊಟ್ಟಿಗೆ ಅಕ್ಟೋಬರ್ 28ರಂದು ರಿಲೀಸ್ ಆಗ್ತಿವೆ. ಬಾಕ್ಸ್ ಆಫೀಸ್ ಫೈಟ್ ಗೂ ಮುನ್ನವೇ ಕರಣ್, ದೇವಗನ್ ವಿರುದ್ಧ ಷಡ್ಯಂತ್ರ ಮಾಡಿದ್ದಾರಂತೆ. ‘ಏ ದಿಲ್ ಹೈ ಮುಷ್ಕಿಲ್’ ಚಿತ್ರವನ್ನು ಹೊಗಳಲು ಮತ್ತು ದೇವಗನ್ ರ ‘ಶಿವಾಯ್’ ಚಿತ್ರದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲು ಕಮಾಲ್ ಆರ್.ಖಾನ್ ಗೆ ಕರಣ್ ಜೋಹರ್ 25 ಲಕ್ಷ ರೂಪಾಯಿ ಕೊಟ್ಟಿದ್ದಾರಂತೆ. ಈ ವಿಚಾರವನ್ನು ಕಮಾಲ್ ಖಾನ್, ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರ ಬಳಿ ಬಾಯ್ಬಿಟ್ಟಿದ್ದಾರೆ. ಅವರಿಬ್ಬರ ಫೋನ್ ಸಂಭಾಷಣೆ ಈಗ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು ಭಾರೀ ವಿವಾದ ಎಬ್ಬಿಸಿದೆ. ‘ಶಿವಾಯ್’ ಬಗ್ಗೆ ಕೆಟ್ಟದಾಗಿ ಮಾತನಾಡಲೆಂದೇ ತಾವು ಕರಣ್ ಜೋಹರ್ ಬಳಿ 25 ಲಕ್ಷ ರೂಪಾಯಿ ಪಡೆದಿದ್ದಾಗಿ ಕಮಾಲ್ ಖಾನ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಟ್ವಿಟ್ಟರ್ ನಲ್ಲಿ ಶಿವಾಯ್ ಬಗ್ಗೆ ಕೆಟ್ಟ ಟೀಕೆ ಮಾಡಿದ್ದ ಕಮಾಲ್ ಖಾನ್, ಕರಣ್ ಜೋಹರ್ ಅವರ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಜೊತೆ ಸಂಘರ್ಷಕ್ಕಿಳಿಯದಂತೆ ಅಜಯ್ ದೇವಗನ್ ಗೆ ಸಲಹೆ ನೀಡಿದ್ದರು. ನಿಮ್ಮ 'ಕನ್ನಡ ದುನಿಯಾ' ದ ತಾಜಾ ಸುದ್ದಿಗಳನ್ನು ಮೊಬೈಲ್ ನಲ್ಲಿ ಪಡೆಯಲು ಈ ಆಪ್ 'ಡೌನ್ ಲೋಡ್' ಮಾಡಿಕೊಳ್ಳಿ Related News
0
ಮಧುಮೇಹ ಇರುವ ವ್ಯಕ್ತಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಾರದು! Wellness | Published: Thursday, April 6, 2017, 23:41 [IST] ಭೂ ಮೇಲಿರುವ ಪ್ರತಿಯೊಬ್ಬ ಮನುಷ್ಯ ಕೂಡ ಹೊಟ್ಟೆಪಾಡಿಗಾಗಿ ಏನಾದರೂ ಕೆಲಸ ಮಾಡಲೇಬೇಕಾಗುತ್ತದೆ. ಪ್ರತಿದಿನ ಶ್ರಮ ವಹಿಸದೆ ಇದ್ದರೆ ಹೊಟ್ಟೆ ತುಂಬುವುದು ಕಷ್ಟವಾಗುತ್ತದೆ. ಅವರವರ ಸಾಮರ್ಥ್ಯ ಹಾಗೂ ಶಿಕ್ಷಣಕ್ಕೆ ಅನುಗುಣವಾಗಿ ಏನಾದರೊಂದು ವೃತ್ತಿ ಮಾಡಿಕೊಂಡಿರುತ್ತಾರೆ. ಕೆಲವೊಂದು ಅನಾರೋಗ್ಯಗಳು ವೃತ್ತಿಗೆ ತೊಂದರೆಯುಂಟು ಮಾಡುತ್ತದೆ. ಇದರಲ್ಲಿ ಪ್ರಮುಖವಾಗಿ ಮಧುಮೇಹ(ಡಯಾಬಿಟಿಸ್) ಇರುವವವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಎರಡನೇ ಹಂತ(ಟೈಪ್ 2)ದ ಮಧುಮೇಹ ಇರುವವರಿಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಎರಡನೇ ಹಂತದ ಮಧುಮೇಹ ಇರುವ ವ್ಯಕ್ತಿಗಳು ರಾತ್ರಿ ಪಾಲಿಯಲ್ಲಿ ಕೆಲಸ ಮಾಡಬಾರದು ಎಂದು ಅಧ್ಯಯನಗಳು ಹೇಳಿವೆ. ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವಂತಹ ಎರಡನೇ ಹಂತದ ಮಧುಮೇಹ ರೋಗಿಗಳು ಗ್ಲೈಸೆಮಿಕ್ ಮಟ್ಟವು ಸರಾಸರಿ ಶೇ. 8.2ರಷ್ಟು ಇರುತ್ತದೆ. ಇದು ದಿನದಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಸರಾಸರಿ ಶೇ. 7.6 ರಷ್ಟಿರುತ್ತದೆ. ಕೆಲಸ ಮಾಡದೆ ಇರುವವರಲ್ಲಿ ಇದು 7.5 ರಷ್ಟು ಇರುತ್ತದೆ. ಮಧುಮೇಹ ನಿಯಂತ್ರಿಸುವ ನೈಸರ್ಗಿಕ 'ಜ್ಯೂಸ್'-ಶೀಘ್ರ ಪರಿಹಾರ ಮಧುಮೇಹ ಇರುವಂತಹ ಹೆಚ್ಚಿನ ಜನರು ಶೇ.7ಕ್ಕಿಂತ ಕಡಿಮೆ ಎಐಸಿಗಾಗಿ ಶ್ರಮಿಸಬೆಕು ಎಂದು ಹಾರ್ಮೊನು ಹೆಲ್ತ್ ನೆಟ್ ವರ್ಕ್ ಹೇಳಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳ ಮಧುಮೇಹ ಮಟ್ಟವನ್ನು ನಿಯಂತ್ರಿಸುವ ಕಠಿಣತೆಗಳ ಬಗ್ಗೆ ಅಧ್ಯಯನವು ಜಾಗೃತಿಯನ್ನು ಮೂಡಿಸಿದೆ ಎಂದು ಥಾಯ್ಲೆಂಡ್ ನ ಮಹಿಡೊಲ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಸಿರಿಮೊನ್ ರೆಯುತ್ರಕುಲ್ ತಿಳಿಸಿದರು. ದಿನದಲ್ಲಿ ಕೆಲಸ ಮಾಡುವವರು ಅಥವಾ ನಿರುದ್ಯೋಗಿಗಳಿಗಿಂತ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವವರು ನಿದ್ರೆಯ ಸಮಯದ ತೊಂದರೆ ಹಾಗೂ ನಿದ್ರಾ ಕ್ರಮದಲ್ಲಿ ಆಗುವಂತಹ ಬದಲಾವಣೆಗಳಿಂದ ಸಮಸ್ಯೆಯಾಗುತ್ತದೆ ಎಂದು ಅಧ್ಯಯನವು ಹೇಳಿದೆ. ಈ ಅಧ್ಯಯನದ ವರದಿಯನ್ನು ಒರ್ಲಾಂಡೊದಲ್ಲಿ ನಡೆದ 2017ರ 99ನೇ ವಾರ್ಷಿಕ ಎಂಡೋ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. ಈ ಅಧ್ಯಯನಕ್ಕಾಗಿ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವ ಸುಮಾರು 260 ಮಂದಿ ಹಾಗೂ ದಿನದಲ್ಲಿ ಕೆಲಸ ಮಾಡು 94 ಮತ್ತು 104 ಮಂದಿ ನಿರುದ್ಯೋಗಿಗಳನ್ನು ಸೇರಿಸಿಕೊಳ್ಳಲಾಯಿತು. ದಿನದಲ್ಲಿ ಕೆಲಸ ಮಾಡುವವರು ಮತ್ತು ನಿರುದ್ಯೋಗಿಗಳಿಗಿಂತ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವಂತವರ ನಿದ್ರೆಯ ಅವಧಿ ತುಂಬಾ ಕಡಿಮೆಯಿರುತ್ತದೆ. ಇವರ ಕ್ಯಾಲರಿ ಸೇವನೆಯು ಹೆಚ್ಚಿರುತ್ತದೆ ಮತ್ತು ಬಿಎಂಐ ಕೂಡ ಹೆಚ್ಚಿರುತ್ತದೆ. ಎರಡನೇ ಹಂತದ ಮಧುಮೇಹ ಹೊಂದಿರುವ ವ್ಯಕ್ತಿಗಳು ರಾತ್ರಿ ಪಾಲಿಯಲ್ಲಿ ಕೆಲಸ ಮಾಡುತ್ತಾ ಇದ್ದರೆ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯರು ಸೂಚಿಸಿದಂತಹ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಾ ಇರಬೇಕು ಎಂದು ರೆಯುತ್ರಕುಲ್ ತಿಳಿಸಿದರು....
1
ಬಾಂಗ್ಲಾದೇಶ ಎದುರಿನ ಟೆಸ್ಟ್‌: ರಷೀದ್‌ ಆಲ್‌ರೌಂಡ್‌ ಆಟ, ಅಫ್ಗಾನಿಸ್ತಾನ ಮೇಲುಗೈ ಬಾಂಗ್ಲಾದೇಶ ಎದುರಿನ ಟೆಸ್ಟ್‌ ಬಾಂಗ್ಲಾದೇಶ ಎದುರಿನ ಟೆಸ್ಟ್‌: ರಷೀದ್‌ ಆಲ್‌ರೌಂಡ್‌ ಆಟ, ಅಫ್ಗಾನಿಸ್ತಾನ ಮೇಲುಗೈ ಪ್ರಜಾವಾಣಿ ವಾರ್ತೆ Published: 06 ಸೆಪ್ಟೆಂಬರ್ 2019, 22:16 IST Updated: 06 ಸೆಪ್ಟೆಂಬರ್ 2019, 22:16 IST ಅಕ್ಷರ ಗಾತ್ರ : ಆ ಆ ಚಿತ್ತಗಾಂಗ್‌ (ಎಎಫ್‌ಪಿ): ಸ್ಪಿನ್‌ ಪರಿಣತ ರಷೀದ್‌ ಖಾನ್‌ ಬ್ಯಾಟ್‌ನಿಂದಲೂ, ಚೆಂಡಿನಿಂದಲೂ ಉತ್ತಮ ಪ್ರದರ್ಶನ ನೀಡಿದರು. ಆತಿಥೇಯ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಅಫ್ಗಾನಿಸ್ತಾನ ಉತ್ತಮ ಸ್ಥಿತಿಗೆ ತಲುಪಿತು. ಕೆಳಕ್ರಮಾಂಕದಲ್ಲಿ 61 ಎಸೆತಗಳಲ್ಲಿ 51 ರನ್‌ಗಳ ಉಪಯುಕ್ತ ಅರ್ಧಶತಕ ಹೊಡೆದ ಪರಿಣಾಮ ಬಾಂಗ್ಲಾದೇಶದ ಮೊತ್ತ 342 ರನ್‌ಗಳಿಗೆ ಬೆಳೆಯಿತು. ನಂತರ 47 ರನ್ನಿಗೆ 4 ವಿಕೆಟ್‌ ಪಡೆದರು. ದಿನದಾಟದ ಕೊನೆಗೆ ಆತಿಥೇಯರು 8 ವಿಕೆಟ್‌ಗೆ 194 ರನ್‌ ಗಳಿಸಿ ಪರದಾಡುತಿತ್ತು. ಬಾಂಗ್ಲಾದೇಶದ ಪರ ಮೊಮಿನುಲ್‌ ಹಕ್‌ ಪ್ರತಿರೋಧ ತೋರಿದ್ದು, 71 ಎಸೆತಗಳ ಇನಿಂಗ್ಸ್‌ನಲ್ಲಿ 52 ರನ್‌ ಹೊಡೆದರು. ಮೊಸಾದಿಕ್‌ ಹುಸೇನ್‌ 44 ರನ್‌ಗಳೊಡನೆ ಅಜೇಯರಾಗುಳಿದು ಬಾಂಗ್ಲಾ. ‘ಕ್ರಿಕೆಟ್‌ ಶಿಶು’ಗಳ ಎದುರು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಮೊಸಾದಿಕ್‌ ಅವರು ಮುರಿಯದ 9ನೇ ವಿಕೆಟ್‌ಗೆ ತೈಜುಲ್‌ ಇಸ್ಲಾಂ (ಔಟಾಗದೇ 11) ಜೊತೆ 48 ರನ್‌ ಸೇರಿಸಿದ್ದಾರೆ. ಬಾಂಗ್ಲಾದೇಶ, ಪ್ರವಾಸಿ ತಂಡದ ಮೊತ್ತ ದಾಟಬೇಕಾದರೆ ಉಳಿದಿರುವ ಎರಡು ವಿಕೆಟ್‌ಗಳಿಂದ ಇನ್ನೂ 148 ರನ್‌ ಗಳಿಸಬೇಕಾಗಿದೆ.  ಸ್ಕೋರುಗಳು: ಅಫ್ಗಾನಿಸ್ತಾನ: 1ನೇ ಇನಿಂಗ್ಸ್: 117 ಓವರುಗಳಲ್ಲಿ 342 (ರಹಮತ್‌ ಶಾ 102, ಅಸ್ಗರ್‌ ಆಫ್ಗನ್‌ 92, ಅಫ್ಸರ್‌ ಝಝೈ 41, ರಶೀದ್‌ ಖಾನ್‌ 51; ತೈಜುಲ್‌ ಇಸ್ಲಾಂ 116ಕ್ಕೆ4, ಶಕೀಬ್‌ ಅಲ್ ಹಸನ್‌ 64ಕ್ಕೆ2, ನಯೀಮ್‌ ಹಸನ್‌ 43ಕ್ಕೆ2); ಬಾಂಗ್ಲಾದೇಶ: 1ನೇ ಇನಿಂಗ್ಸ್‌: 67 ಓವರುಗಳಲ್ಲಿ 8 ವಿಕೆಟ್‌ಗೆ 194 (ಲಿಟ್ಟನ್‌ ದಾಸ್‌ 33, ಮೊಮಿನುಲ್‌ ಹಕ್‌ 52, ಮೊಸಾದೆಕ್‌ ಹುಸೇನ್‌ ಬ್ಯಾಟಿಂಗ್‌ 44, ತೈಜುಲ್‌ ಇಸ್ಲಾಂ ಬ್ಯಾಟಿಂಗ್‌ 11; ಮೊಹಮದ್‌ ನಬಿ 53ಕ್ಕೆ2, ರಷೀದ್‌ ಖಾನ್‌ 47ಕ್ಕೆ4).
2
#Gomonster Samsung M30s: ಹೊಸ ಸ್ಮಾರ್ಟ್‌ಫೋನ್‌ ನ ವಿಶೇಷತೆಗಳೇನು ನೋಡಿ! WATCH LIVE TV ಈ ವೀಕೆಂಡ್‌ಗೆ ಕಿಕ್‌ ಕೊಡಲು ಬರ್ತಿರೋದು ಯಾರು? ಈ ವಾರದ ವೀಕೆಂಡ್‌ ಅತಿಥಿಯಾಗಿ ಉತ್ತರ ಕರ್ನಾಟಕದ ಪ್ರತಿಭೆ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ ಸುದ್ದಿಲೋಕ | Updated: Apr 11, 2017, 01:16PM IST ಫೋಟೋ ಕೃಪೆ: ಜೀ ಕನ್ನಡ ವಾಹಿನಿ ರಮೇಶ್‌ ಅರವಿಂದ್‌ ನಡೆಸಿಕೊಡುವ 'ವೀಕೆಂಡ್‌ ವಿತ್‌ ರಮೇಶ್‌' ಕಾರ್ಯಕ್ರಮಕ್ಕೆ ಇಲ್ಲಿಯವರೆಗೂ ಹಲವಾರು ಸಾಧಕರು ಬಂದು ತಮ್ಮ ಜೀವನದ ಕತೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಈ ವಾರದ ವೀಕೆಂಡ್‌ ಅತಿಥಿಯಾಗಿ ಉತ್ತರ ಕರ್ನಾಟಕದ ಪ್ರತಿಭೆ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಮಾತುಗಾರಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಪ್ರಾಣೇಶ್‌, ಜ್ಯೂನಿಯರ್‌ ಬೀಚಿ ಅಂತಲೇ ಕರೆಯಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶ-ವಿದೇಶಗಳಲ್ಲೂ ತಮ್ಮ ಹಾಸ್ಯ ಭಾಷಣದ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದ ಖ್ಯಾತಿ ಪ್ರಾಣೇಶ್‌ ಅವರಿಗೆ ಸಲ್ಲುತ್ತದೆ. ಪ್ರೇಕ್ಷಕರ ಅಭಿಲಾಷೆಯ ಮೇರೆಗೆ ಜೀ ಕನ್ನಡ ವಾಹಿನಿ, ಬೀಚಿ ಪ್ರಾಣೇಶ್‌ ಅವರನ್ನು ಸಾಧಕರ ಸೀಟ್‌ನಲ್ಲಿ ಕುಳಿತುಕೊಳ್ಳಲು ಆಮಂತ್ರಿಸಿದೆ. ಪ್ರಾಣೇಶ್‌ ಭಾಗವಹಿಸಿರುವ ಎಪಿಸೋಡ್‌ಗಳು ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ. ಇದಕ್ಕೂ ಮುನ್ನ ಈ ವಿಡಿಯೋ ತುಣುಕನ್ನು ನೋಡಿ ಎಂಜಾಯ್‌ ಮಾಡಿ.
0
ಬಿಗ್ ಬಾಸ್ ನಿರೂಪಕನಾಗಿ ಕಾಣಿಸಿಕೊಳ್ಳಬೇಕು ಅಂದ್ರೆ ಹುಚ್ಚ ವೆಂಕಟ್'ಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಕಿಚ್ಚ ಸುದೀಪ್ Highlights ನಾನು ಈಗಷ್ಟೆ ಕಾರ್ಯಕ್ರಮವನ್ನು ನೋಡಿದೆ, ಅದರಲ್ಲಿ ಹಚ್ಚು ವೆಂಕಟ್ ಮಾಡಿರುವುದು ಅಕ್ಷಮ್ಯ ತಪ್ಪು, ನಾನು ಖಂಡಿತ ನ್ಯಾಯದ ಪರ ನಿಲ್ಲುತ್ತೇನೆ ಎಂದಿದ್ದಾರೆ.  ಬೆಂಗಳೂರು(ನ.16): ನಿನ್ನೇ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದ 'ಹುಚ್ಚ' ವೆಂಕಟ್, ಕಳೆದ ಸೀಜನ್'ನಲ್ಲಿ ಮಾಡಿದಂತೆ ಈ ಬಾರಿಯೂ ಸರ್ಧಿಯೊಬ್ಬರ ಮೇಲೆ ಕೈ ಮಾಡಿ ಬಿಗ್ ಮನೆಯಿಂದ ಹೊರ ದಬ್ಬಿಸಿಕೊಂಡಿದ್ದಾರೆ.  ಕಳೆದ ಸೀಜನ್'ನಲ್ಲಿ ರವಿ ಮುರೂರು ಅವರ ಮೇಲೆ ಹಲ್ಲೆ ನಡೆಸಿದ್ದ 'ಹುಚ್ಚ' ವೆಂಕಟ್, ಸೀಜನ್4ರ ಸ್ಪರ್ಧಿ ಪ್ರಥಮ್'ಗೆ ರಕ್ತ ಬರುವಂತೆ ಹೊಡೆದು ಮನೆಯಿಂದ ಹೊರ ಬಂದಿದ್ದಾರೆ.  ಹುಚ್ಚ ವೆಂಕಟ್'ರನ್ನು ಬಿಗ್ ಬಾಸ್ ಮನೆಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ, ಜೊತೆಗೆ ಗಾರ್ಡ್'ಗಳ ಜೊತೆ ಬಿಗ್ ಮನೆಯೊಳಗೆ ಎಂಟ್ರಿ ಪಡೆದಿದ್ದರು. ಆದರೆ ಕೊನೆಯಲ್ಲಿ ಪ್ರಥಮ್ ಮೇಲೆ ಕೈ ಮಾಡಿದ್ದರು.  ಇದಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್, ನಾನು ಈಗಷ್ಟೆ ಕಾರ್ಯಕ್ರಮವನ್ನು ನೋಡಿದೆ, ಅದರಲ್ಲಿ ಹಚ್ಚು ವೆಂಕಟ್ ಮಾಡಿರುವುದು ಅಕ್ಷಮ್ಯ ತಪ್ಪು, ನಾನು ಖಂಡಿತ ನ್ಯಾಯದ ಪರ ನಿಲ್ಲುತ್ತೇನೆ ಎಂದಿದ್ದಾರೆ.  'ನ್ಯಾಯ ಸಿಕ್ಕಿದ ನಂತರವೇ ಈ ಕಾರ್ಯಕ್ರಮದ ನಿರೂಪಕನಾಗಿ ಕಾಣಿಸಿಕೊಳ್ಳುವೆ, ಇದು ನನ್ನ ಪ್ರೇಕ್ಷಕರಿಗೆ ನಾನು ನೀಡುವ ಭರವಸೆ' ಎಂದಿರುವ ಕಿಚ್ಚ ಸುದೀಪ್, ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಯೊಳಗೆ ಹೋಗಿ ಸ್ಪರ್ಧಿಗಳ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ತಪ್ಪು, ಆತನಿಗೆ ಶಿಕ್ಷೆ ಆಗಲೇ ಬೇಕು ಎಂದು ಸುದೀಪ್ ಆಗ್ರಹಿಸಿದ್ದಾರೆ.    Just saw th episode and this act by Huccha Venkat is inexcusable... I shall stand by wat needs to be done... — Kichcha Sudeepa (@KicchaSudeep) November 15, 2016 @KicchaSudeep A scripted & TRP gimmicks.Trying to attract TRP using HV n making people fool. No doubt #BBK4 is just a flop show frm the Day1 — Bharath Suryaprakash (@bhsngr) November 15, 2016 This is my promise to my viewers and the contestants tat I shall only appear again to host only after justice is done. — Kichcha Sudeepa (@KicchaSudeep) November 15, 2016 Last Updated 11, Apr 2018, 12:53 PM IST
0
ಬೇಸಿಗೆಯಲ್ಲಿ ಕಣ್ಣಿನ ಸೋಂಕು ಕಾಡಬಹುದು ಬೇಸಿಗೆಯಲ್ಲಿ ಕಣ್ಣಿನ ಸೋಂಕು ಕಾಡಬಹುದು LK   ¦    Apr 25, 2018 05:41:17 PM (IST) ಹಲವು ಕಾರಣಗಳಿಂದಾಗಿ ಜನ ನಗರದತ್ತ ಮುಖ ಮಾಡುತ್ತಿದ್ದಾರೆ. ಆದರೆ ನಗರದಲ್ಲಿ ಇರುವವರೆಲ್ಲರೂ ಸುರಕ್ಷಿತವಾಗಿದ್ದಾರಾ? ಆರೋಗ್ಯವಾಗಿದ್ದಾರಾ? ಎಂಬ ಪ್ರಶ್ನೆ ಹಾಕಿ ನೋಡಿದರೆ ಹೆಚ್ಚುತ್ತಿರುವ ತಾಪಮಾನ, ವಾಯು ಮಾಲಿನ್ಯ ಇವುಗಳನ್ನೆಲ್ಲ ಗಮನಿಸಿದರೆ ನಗರದಲ್ಲಿ ಆರೋಗ್ಯಕಾರಿ ವಾತಾವರಣ ಇಲ್ಲ ಎಂಬುದನ್ನು ತೋರ್ಪಡಿಸುತ್ತದೆ. ಹಾಗೆಂದು ನಗರ ಬಿಟ್ಟು ಹೊರ ಹೋಗಿ ಬದುಕಲು ಸಾಧ್ಯವಿಲ್ಲ. ಬದಲಿಗೆ ನಾವೇ ಒಂದಿಷ್ಟು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ವಾಂತಿ, ಭೇದಿ, ತಲೆನೋವು, ತುರಿಕೆ ಹೀಗೆ ಹತ್ತು ಹಲವು ಸಮಸ್ಯೆಗಳು ಕಾಣಿಸುತ್ತಿವೆ. ಈ ಸೋಂಕುಗಳ ಪೈಕಿ ಕಣ್ಣಿನ ಸೋಂಕು ಅಪಾಯಕಾರಿಯಾಗಿದೆ. ಈ ಕಣ್ಣಿನ ಸೋಂಕನ್ನು ಲಘುವಾಗಿ ಪರಿಗಣಿಸದೆ ವೈದ್ಯರ ಬಳಿಗೆ ತೆರಳಿ ಪರೀಕ್ಷಿಸಿ ಔಷಧಿ ಪಡೆಯುವುದು ಉತ್ತಮ. ಏಕೆಂದರೆ ಕೆಲವೊಮ್ಮೆ ಸೋಂಕುಗಳು ವಿವಿಧ ರೋಗಗಳಿಗೆ ಕಾರಣವಾಗಲಿವೆ. ಹಾಗೆ ನೋಡಿದರೆ ಈ ಸೋಂಕುಗಳು ಪರಿಸರದಲ್ಲಿನ ಮಾಲಿನ್ಯದ ಪರಿಣಾಮದಿಂದ ಆಗುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸೋಂಕುಗಳ ಬಗ್ಗೆ ತಿಳಿಯದೆ ಸ್ವಯಂ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಒಳ್ಳೆಯದಲ್ಲ. ಬೇಸಿಗೆಯಲ್ಲಿ ಕಣ್ಣಿನ ಸೋಂಕು ಹೆಚ್ಚಾಗಿ ಕಾಣಿಸುತ್ತದೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದೇ ಹೋದರೆ ಸೋಂಕುಗಳು, ಕಣ್ಣಿನ ಕಾರ್ನಿಯಾ ಮೇಲೆ ಪರಿಣಾಮ ಬೀರಿ ದೃಷ್ಟಿಗೆ ಧಕ್ಕೆ ತರಲಿವೆ. ಸೋಂಕುಗಳಿಂದ ನೋವು, ಕಣ್ಣು ಕೆಂಪಾಗುವುದು, ತುರಿಕೆ, ಇರಿಸು ಮುರಿಸಿನ ಸಮಸ್ಯೆ ಕಾಣಿಸುತ್ತದೆ. ಕಣ್ಣಿನ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲ ಕೆಲವರು ಕಣ್ಣಿಗೆ ಐ ಡ್ರಾಪ್ಸ್ ಹಾಕುತ್ತಾರೆ. ಇದು ಒಳ್ಳೆಯದಲ್ಲ. ವೈದ್ಯರ ಸಲಹೆಯಿಲ್ಲದೆ ಯಾವುದೇ ಡ್ರಾಪ್ಸ್ ಗಳನ್ನು ಬಳಸಬಾರದು. ಇದರಿಂದ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯಿದ್ದು, ದೃಷ್ಟಿಪಠಲ, ಗ್ಲುಕೋಮಾ, ಕಾರ್ನಿಯಾಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಂತಹ ನಗರಗಳಲ್ಲಿ ಪ್ರತಿನಿತ್ಯ ಸುಮಾರು 10 ಮಂದಿ ರೋಗಿಗಳ ಪೈಕಿ ನಾಲ್ಕು ಮಂದಿಗೆ ಸೋಂಕು ಸಮಸ್ಯೆ ಇರುವುದು ಪತ್ತೆಯಾಗಿದೆ. ಆದರೆ, ಸೂಕ್ತ ನೀರಿನ ಬಳಕೆಯಿಂದ ಈ ಸಮಸ್ಯೆಯನ್ನು ಬಗೆ ಹರಿಸಬಹುದು ಎನ್ನುತ್ತಾರೆ ವೈದ್ಯರು. ಕಣ್ಣಿನ ಸೋಂಕುಗಳನ್ನು ತಡೆಗಟ್ಟಲು ನಾವೇ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ಅದೇನೆಂದರೆ ಪರಿಸರವನ್ನು ಶುಚಿಯಾಗಿಡುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು, ಕಾಸ್ಮೆಟಿಕ್ ಬಳಕೆಯನ್ನು ಆದಷ್ಟು ತಪ್ಪಿಸುವುದು ಮುಖ್ಯವಾಗಿ ಮೇಕ್ ಅಪ್ ಬಳಕೆಯನ್ನು ಗಣನೀಯವಾಗಿ ಕುಗ್ಗಿಸುವುದು, ನಿಯಮಿತವಾಗಿ ಕಣ್ಣನ್ನು ತಣ್ಣನೆಯ ನೀರಿನಿಂದ ಸ್ವಚ್ಛತೆ ಮಾಡುವುದರಿಂದ ಸೋಂಕನ್ನು ಸ್ವಲ್ಪಮಟ್ಟಿಗೆ ತಡೆಯಬಹುದು. ಹವಾನಿಯಂತ್ರಿತ ವ್ಯವಸ್ಥೆಗೆ ಹತ್ತಿರದಲ್ಲಿ ಕೂರುವುದನ್ನು ಆದಷ್ಟು ಕಡಿಮೆ ಮಾಡಬೇಕು. ವುಲ್ಲನ್ ಹೊದಿಕೆಗಳ ಬಳಕೆಯನ್ನು ತಪ್ಪಿಸಬೇಕು, ಸಾಕು ಪ್ರಾಣಿಗಳನ್ನು ಶುಚಿಯಾಗಿಡಬೇಕು, ಆಟ ಆಡುವಾಗ ಅವುಗಳಿಂದ ದೂರ ಇರಬೇಕು. ಮನೆಯೊಳಗೆ ಕಾರ್ಪೆಟ್ ಬಳಕೆ ತಪ್ಪಿಸಬೇಕು. ಯಾವುದೇ ಕಾರಣಕ್ಕೂ ಸ್ವಯಂ ಚಿಕಿತ್ಸೆಯನ್ನು ಮಾಡದೆ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮನರಂಜನೆ
1
Bengaluru, First Published 20, Nov 2018, 5:40 PM IST Highlights ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯ ಮೊದಲ ದಿನವೇ ಕುತೂಹಲ ಕೆರಳಿಸಿದೆ. ಮೊದಲ ದಿನದಾಟದಲ್ಲಿ ಕನ್ನಡಿಗರ ಹೋರಾಟ  ಹೇಗಿತ್ತು? ಇಲ್ಲಿದೆ ಹೈಲೈಟ್ಸ್.   ಬೆಳಗಾವಿ(ನ.20): ಮುಂಬೈ ವಿರುದ್ಧದ ರಣಜಿ ಪಂದ್ಯದ ಮೊದಲ ದಿನದಲ್ಲಿ ಕರ್ನಾಟಕ ದಿಟ್ಟ ಹೋರಾಟ ನೀಡಿದೆ. ಕೆವಿ ಸಿದ್ದಾರ್ಥ್ ಭರ್ಜರಿ ಶತಕ ಹಾಗೂ ಕೊನೈನ ಅಬ್ಬಾಸ್ ಅರ್ಧಶತಕದ ನೆರವಿನಿಂದ ಕರ್ನಾಟಕ ಮೊದಲ ದಿನದಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಸಿಡಿಸಿದೆ. ಬೆಳಗಾವಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಕರ್ನಾಟಕ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಶಿಶಿರ್ ಭವಾನೆ ಕೇವಲ 5 ರನ್ ಸಿಡಿಸಿ ಔಟಾದರು. ಇನ್ನು ಡಿ ನಿಶ್ಚಲ್ 27 ರನ್ ಸಿಡಿಸಿ ಔಟಾದರು. 59 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ಕೊನೈನ ಅಬ್ಬಾಸ್, ಕೆವಿ ಸಿದ್ಧಾರ್ಥ್ ಜೊತೆಯಾಟದಿಂದ ಚೇತರಿಸಿಕೊಂಡಿತು. ಅತ್ಯುತ್ತಮ ಹೋರಾಟ ನೀಡಿದ ಕೆವಿ ಸಿದ್ದಾರ್ಥ್ ಆಕರ್ಷಕ  ಶತಕ ಸಿಡಿಸಿ ಮಿಂಚಿದರು.  ಸಿದ್ದಾರ್ಥ್‌ಗೆ ಉತ್ತಮ ಸಾಥ್ ನೀಡಿದ ಅಬ್ಬಾಸ್ 64 ರನ್ ಸಿಡಿಸಿ  ಔಟಾದರು. ಸ್ಟುವರ್ಟ್ ಬಿನ್ನಿ ಕೇವಲ 3 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆದರೆ ಸಿದ್ದಾರ್ಥ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಶ್ರೇಯಸ್ ಗೋಪಾಲ್ ತಂಡಕ್ಕೆ ಆಸರೆಯಾಗಿದ್ದಾರೆ.  ಮಂದ ಬೆಳಕಿನ ಕಾರಣ 2 ಓವರ್ ಮೊದಲೇ ಆಟ ನಿಲ್ಲಿಸಲಾಯಿತು. ದಿನದಾಟದ ಅಂತ್ಯದಲ್ಲಿ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 263 ರನ್ ಸಿಡಿಸಿದೆ. ಸಿದ್ದಾರ್ಥ್ ಅಜೇಯ  104 ಹಾಗೂ ಶ್ರೇಯಸ್ ಗೋಪಾಲ್ ಅಜೇಯ 47 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮುಂಬೈ ಪರ ಶಿವಂ ದುಬೆ 4 ವಿಕೆಟ್ ಕಬಳಿಸಿ ಮಿಂಚಿದರು. Last Updated 20, Nov 2018, 5:43 PM IST
2
11 ಅಕ್ಟೋಬರ್ 2018, 01:00 IST Updated: 11 ಅಕ್ಟೋಬರ್ 2018, 01:00 IST ಅಕ್ಷರ ಗಾತ್ರ : ಆ ಆ ದಿನೇಶ್ ಬಾಬು ಅವರ ನೆಚ್ಚಿನ ಶಿಷ್ಯ ಶಿವಪ್ರಭು ವಿಶಿಷ್ಟವಾದ ಗುರುಕಾಣಿಕೆ ಸಲ್ಲಿಸಲು ಸಜ್ಜಾಗಿದ್ದಾರೆ. ದಿನೇಶ್ ಬಾಬು ನಿರ್ದೇಶಿಸಿದ್ದ  ‘ಅಮೃತವರ್ಷಿಣಿ’ 1997ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು. ಈಗ ಶಿವಪ್ರಭು ಅದೇ ಶೀರ್ಷಿಕೆಯನ್ನಿಟ್ಟುಕೊಂಡು ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದೇ ತಿಂಗಳ 19ಕ್ಕೆ ಚಿತ್ರದ ಮುಹೂರ್ತವೂ ನಡೆಯಲಿದೆ. ಶಿವಪ್ರಭು   ‘ಅಮೃತವರ್ಷಿಣಿ ಮತ್ತು ಸುಪ್ರಭಾತ ಈ ಎರಡೂ ನನ್ನ ನೆಚ್ಚಿನ ಸಿನಿಮಾಗಳು. ನಾನು ಮಾಡಿಕೊಂಡಿರುವ ಕಥೆಗೂ ಅಮೃತವರ್ಷಿಣಿ ಎಂಬ ಹೆಸರೇ ಸರಿಯಾಗಿ ಹೊಂದಿಕೊಳ್ಳುತ್ತದೆ. ಹಳೆಯ ಸಿನಿಮಾದ ಹೆಸರನ್ನೇ ಯಾಕೆ ಇಟ್ಟುಕೊಂಡಿರಿ ಎಂದು ಕೇಳುವವರೂ ಸಿನಿಮಾವನ್ನು ನೋಡಿದ ಮೇಲೆ ಇದೇ ಸರಿಯಾದ ಹೆಸರು ಎಂದು ಹೇಳುತ್ತಾರೆ’ ಎನ್ನುತ್ತಾರೆ ಶಿವಪ್ರಭು. ಇದೇ ಕಾರಣದಿಂದ ‘ತುಂತುರು ಅಲ್ಲಿ ನೀರ ಹಾಡು’ ಎಂಬ ಅಡಿಶೀರ್ಷಿಕೆಯನ್ನೂ ಇಟ್ಟುಕೊಂಡಿದ್ದಾರೆ. ‘ನನಗೆ ಹೊಡೆದು, ಬೈದು, ಕಾಸು ಕೊಟ್ಟು, ಊಟ ಕೊಟ್ಟು ತಿದ್ದಿದವರು ದಿನೇಶ್ ಬಾಬು. ಅವರ ಬಳಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಹಾಗಾಗಿ ಈಗ ನಾನು ಮಾಡುತ್ತಿರುವ ಸಿನಿಮಾ ಅವರಿಗೆ ನಾನು ನೀಡುವ ಗುರುಕಾಣಿಕೆ’ ಎಂದು ತುಸು ಭಾವುಕವಾಗಿಯೇ ನೆನೆಯುತ್ತಾರೆ ಶಿವಪ್ರಭು.  ‘ಪರಬ್ರಹ್ಮ’ ಚಿತ್ರ ನಿರ್ಮಿಸಿದ್ದ ಸುಂದರ್‌ ಜತೆಗೆ ಸ್ವತಃ ಶಿವಪ್ರಭು ಅವರೂ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅವರಿಗೆ ಹಲವು ಆಪ್ತಸ್ನೇಹಿತರ ಬೆಂಬಲವೂ ದೊರಕಿದೆ. ಯಶಸ್‌ ಸೂರ್ಯ ಈ ಚಿತ್ರದ ನಾಯಕ. ಯಶಸ್‌ ಸೂರ್ಯ ಅವರಿಗೆ ಶಿವಪ್ರಭು ಹತ್ತು ವರ್ಷಗಳ ಹಿಂದೆಯೇ ಒಂದು ರೂಪಾಯಿ ಅಡ್ವಾನ್ಸ್‌ ಕೊಟ್ಟು ‘ನಿಮ್ಮ ಜತೆ ಒಂದು ಸಿನಿಮಾ ಮಾಡುತ್ತೇನೆ’ ಎಂದು ಮಾತುಕೊಟ್ಟಿದ್ದರಂತೆ. ಆದರೆ ಕಾಲ ಕೂಡಿಬಂದಿರಲಿಲ್ಲ. ಈಗ ಇಬ್ಬರೂ ಒಟ್ಟಾಗಿದ್ದಾರೆ. ಜತೆಗೆ ‘ಮಾರ್ಚ್‌ 22’, ‘ಕೃಷ್ಣ ತುಳಸಿ’ ಚಿತ್ರಗಳಲ್ಲಿ ನಟಿಸಿದ್ದ ಮೇಘಶ್ರೀ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದ ಶೀರ್ಷಿಕೆಯನ್ನಷ್ಟೇ ಅಲ್ಲ, ಹಿಂದಿನ ಅಮೃತವರ್ಷಿಣಿ ಚಿತ್ರದ ಹಾಡುಗಳ ಟ್ಯೂನ್‌ ಅನ್ನೂ ಈ ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಅಲ್ಲಲ್ಲಿ ಬಳಸಿಕೊಳ್ಳುವ ಯೋಚನೆಯೂ ಅವರಿಗಿದೆ. ಹಾಗೆಯೇ ಜೆಸ್ಸಿಗಿಫ್ಟ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಒಂದೊಂದು ಹಾಡೂ ಜನರಿಗೆ ಇಷ್ಟವಾಗುವಂತೆ ನೋಡಿಕೊಳ್ಳುವ ಮುತುವರ್ಜಿಯನ್ನೂ ನಿರ್ದೇಶಕರು ಅವರ ಹೆಗಲಿಗೇರಿಸಿದ್ದಾರೆ. ಒಟ್ಟಾರೆ ಅದೇ ಅಮೃತವರ್ಷಿಣಿಯ ನೆನಪಿನಲ್ಲಿ ಹೊಸ ರುಚಿಯ ಸಿನಿಮಾ ಮಾಡುವುದು ಅವರ ಉದ್ದೇಶ. ಕಥೆ ಹೇಳಿದರೆ ಸ್ವಾರಸ್ಯ ಇರಲ್ಲ ಇದು ಯಾವ ಬಗೆಯ ಚಿತ್ರ ಎಂದು ಕೇಳಿದರೆ ‘ಕಥೆ ಹೇಳಿದರೆ ಸ್ವಾರಸ್ಯ ಇರುವುದಿಲ್ಲ’ ಎಂದು ನಗುತ್ತಾರೆ. ‘ಲವ್‌ ಸ್ಟೋರಿಯಂತೂ ಹೌದು, ಜತೆಗೆ ಸಸ್ಪೆನ್ಸ್‌ ನಿರೀಕ್ಷೆ ಮಾಡುತ್ತೀರಾದರೆ ಅದೂ ಇದೆ, ಆ್ಯಕ್ಷನ್ ಬೇಕೆನ್ನುವವರಿಗೆ ನಾಲ್ಕು ಫೈಟ್‌ಗಳಿವೆ. ಮರ್ಡರ್ ಮಿಸ್ಟರಿಯ ಅಂಶಗಳನ್ನೂ ಒಳಗೊಂಡಿದೆ’ ಎಂದು ಭಿನ್ನ ಅಭಿರುಚಿಯ ಪ್ರೇಕ್ಷಕರನ್ನು ಒಟ್ಟಿಗೇ ಚಿತ್ರಮಂದಿರಕ್ಕೆ ಕರೆತರುವ ಯೋಚನೆಯನ್ನು ಹಂಚಿಕೊಳ್ಳುತ್ತಾರೆ. ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರುಗಳಲ್ಲಿ 35 ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಮಳೆ, ಮಂಜು, ಹಸಿರು ಈ ಚಿತ್ರದ ಹಿನ್ನೆಲೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿಕೊಳ್ಳಲಿವೆಯಂತೆ.  ‘ಚಿತ್ರದ ಮುಹೂರ್ತ ಸಮಾರಂಭದಲ್ಲಿ ದೊಡ್ಡದೊಂದು ಅಚ್ಚರಿ ಇರಲಿದೆ. ಅದು ಹಿಂದೆಂದೂ ಆಗದೇ ಇರುವ ರೀತಿಯ ಅಚ್ಚರಿ’ ಎಂದು ಕುತೂಹಲದ ಒಗ್ಗರಣೆ ಹಾಕುವ ಶಿವಪ್ರಭು ‘ಅಂಥದ್ದೇನು ಅಚ್ಚರಿ?’ ಎಂದರೆ ಕಾದುನೋಡಿ ಎಂದು ನಗುತ್ತಾರೆ ಶಿವಪ್ರಭು.
0
ಅಪ್ಪೆ ಟೀಚರ್ ಮುಹೂರ್ತ ಫಿಕ್ಸ್ Highlights ಹಲವು ಸ್ಯಾಂಡಲ್ವುಡ್, ಕೋಸ್ಟಲ್'ವುಡ್, ಕೊಂಕಣಿ ಚಿತ್ರಗಳು, ಕನ್ನಡ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಕಿಶೋರ್ ಮೂಡಬಿದ್ರೆ ಅವರು ಮೊತ್ತಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಪ್ಪೆ ಟೀಚರ್'ಗೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಕಿಶೋರ್ ಅವರದ್ದೆಯೇ. ಚಿತ್ರವು ಪಕ್ಕಾ ಕಾಮಿಡಿ ಕಥೆ ಹೊಂದಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯುವ ನಿರೀಕ್ಷೆ ಇದೆ. ಮಂಗಳೂರು(ನ. 11): ದಿನೇದಿನೇ ಸಮೃದ್ಧಿಯಾಗಿ ಬೆಳೆಯುತ್ತಿರುವ ಕೋಸ್ಟಲ್'ವುಡ್'ಗೆ ಈಗ ಹೊಚ್ಚಹೊಸ ಚಿತ್ರವೊಂದು ಸೇರ್ಪಡೆಯಾಗುತ್ತಿದೆ. ಕಿಶೋರ್ ಮೂಡಬಿದ್ರೆ ನಿರ್ದೇಶನದ "ಅಪ್ಪೆ ಟೀಚರ್" ಸೆಟ್ಟೇರಿದೆ. ಇಂದು ಇಲ್ಲಿಯ ಪುರಭವನದಲ್ಲಿ ಅಪ್ಪೆ ಟೀಚರ್'ನ ಮುಹೂರ್ತ ನೆರವೇರಿತು. ತುಳು ಭಾಷೆಯ ಈ ಚಿತ್ರಕ್ಕೆ ಸುನೀಲ್ ಮತ್ತು ನಿರೀಕ್ಷಾ ಶೆಟ್ಟಿ ನಾಯಕ-ನಾಯಕಿಯಾಗಿದ್ದಾರೆ. ತುಳುವಿನ ಖ್ಯಾತ ಕಲಾವಿದರು ಚಿತ್ರದಲ್ಲಿದ್ದಾರೆ. ಜೊತೆಗೆ ಸಾಕಷ್ಟು ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ಹಲವು ಸ್ಯಾಂಡಲ್ವುಡ್, ಕೋಸ್ಟಲ್'ವುಡ್, ಕೊಂಕಣಿ ಚಿತ್ರಗಳು, ಕನ್ನಡ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಕಿಶೋರ್ ಮೂಡಬಿದ್ರೆ ಅವರು ಮೊತ್ತಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಪ್ಪೆ ಟೀಚರ್'ಗೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಕಿಶೋರ್ ಅವರದ್ದೆಯೇ. ಚಿತ್ರವು ಪಕ್ಕಾ ಕಾಮಿಡಿ ಕಥೆ ಹೊಂದಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯುವ ನಿರೀಕ್ಷೆ ಇದೆ. ಚಿತ್ರ: ಅಪ್ಪೆ ಟೀಚರ್ ಭಾಷೆ: ತುಳು ತಾರಾಗಣ: ಸುನೀಲ್, ನಿರೀಕ್ಷಾ ಶೆಟ್ಟಿ, ನವೀನ್ ಪಡೀಲ್, ಅರವಿಂದ್ ಬೋಳಾರ, ಭೋಜರಾಜ್ ವಾಮಂಜೂರು, ಉಮೇಶ್ ಮಿಜರ್, ಗೋಪಿನಾಥ್ ಭಟ್, ಉಷಾ ಭಂಡಾರಿ, ಸತೀಶ್ ಬಂಡಾಳೆ, ಸ್ಟಾನಿ ಅಲ್ವಾರೆಸ್, ಲೂಸಿ ಆರನ್ನಾ, ರೋವನ್ಸ್ ಲಂಡನ್, ಸಂದೀಪ್ ಶೆಟ್ಟಿ ಮಣಿಬೆಟ್ಟು, ರಘು ಪಾಂಡೇಶ್ವರ್, ಲತೀಫ್ ಸಣೂರು, ರಂಜನ್ ಬೋಳಾರ, ಮಿಮಿಕ್ರಿ ಶರಣ್, ದಿನೇಶ್ ಕಾಮತ್, ಕಾಮಿಡಿ ಕಿಲಾಡಿ ಹಿತೇಶ್, ಅನೀಶ್, ವಸಂತ್ ಅಮಿನ್, ಸುಜಾತಾ ಶಕ್ತಿನಗರ್, ಸುಜಾತಾ ಮುದ್ರಾಡಿ, 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ಶೈಲಶ್ರೀ ಮತ್ತಿತರರು. ಸಂಗೀತ: ವಾಣಿಲ್ ವೆಗಾಸ್ ಕ್ಯಾಮೆರಾ: ಉದಯ್ ಲೀಲಾ ಸಂಕಲನ: ಪ್ರದೀಪ್ ನಾಯಕ್ ನಿರ್ಮಾಣ: ರತ್ನಾಕರ್ ಕಾಮತ್, ರವಿಶಂಕರ್ ಪೈ ನಿರ್ದೇಶನ: ಕಿಶೋರ್ ಮೂಡಬಿದ್ರೆ ಸಹ-ನಿರ್ದೇಶಕರು: ರಾಮದಾಸ್ ಶಶಿತ್ಲು, ಮಣಿ ಕಾರ್ತಿಕೇಯನ್, ಸ್ವಾತಿಕ್ ಹೆಬ್ಬಾರ್, ಸಂದೀಪ್ ಬೇದ್ರಾ ಮತ್ತು ಕರುಣಾಕರ್ ಆಚಾರ್. Last Updated 11, Apr 2018, 12:59 PM IST
0
ಶುಚಿತ್ವ ಕಾಪಾಡಿ.. ರೋಗ ತಡೆಯಿರಿ.. ಶುಚಿತ್ವ ಕಾಪಾಡಿ.. ರೋಗ ತಡೆಯಿರಿ.. Mar 14, 2017 01:02:44 PM (IST) ಬೇಸಿಗೆ ಬಂತೆಂದರೆ ರೋಗಗಳು ಕೂಡ ನಮ್ಮನ್ನರಸಿ ಬರುತ್ತವೆ. ಅದರಲ್ಲೂ ಬೇಸಿಗೆ ಕಾಲ ಎಂದರೆ ಸಾಂಕ್ರಾಮಿಕ ರೋಗ ಹರಡುವುದಕ್ಕೊಂದು ಪ್ರಸಕ್ತ ಕಾಲ ಎಂದರೆ ತಪ್ಪಾಗಲಾರದು. ಹೀಗಾಗಿ ನಾವೆಷ್ಟು ಜಾಗರೂಕತೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದು ಎಂಬುವುದರಲ್ಲಿ ಎರಡು ಮಾತಿಲ್ಲ. ಬೇಸಿಗೆಯಲ್ಲಿ ನೀರಿಗೆ ತೊಂದರೆ ಹೀಗಾಗಿ ಶುಚಿತ್ವ ಕಾಪಾಡುವುದು ಕಷ್ಟವೇ. ಚರಂಡಿಯಲ್ಲಿ ತುಂಬಿಕೊಂಡ ತ್ಯಾಜ್ಯಗಳು, ಹರಿಯದೆ ನಿಂತ ನೀರು, ಶುಚಿತ್ವ ಕಾಣದ ಸಾರ್ವಜನಿಕ ಸ್ಥಳಗಳೆಲ್ಲವೂ ರೋಗ ಹರಡುವ ತಾಣಗಳಾಗಿ ಮಾರ್ಪಾಡಾಗಿ ಬಿಡುತ್ತವೆ. ಸೊಳ್ಳೆ, ನೊಣಗಳ ಸಂಖ್ಯೆ ಹೆಚ್ಚಾಗಿ ಇವು ಸಾಂಕ್ರಾಮಿಕ ರೋಗಗಳನ್ನು ಹರಡುವಲ್ಲಿಯೂ ತಮ್ಮ ಪಾತ್ರ ವಹಿಸುತ್ತವೆ. ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ತಿನ್ನುವುದು, ಕುಡಿಯುವುದು ಕೂಡ ಅಪಾಯವೇ. ಯಾವಾಗ ಏನಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವೇ. ಅದರಲ್ಲೂ ಸಾಂಕ್ರಾಮಿಕ ರೋಗಗಳು ಬಂದರಂತು ಅವು ಇಡೀ ಮನೆಯವರಿಗೆ ಹರಡಿ ಎಲ್ಲರನ್ನೂ ರೋಗಿಗಳನ್ನಾಗಿ ಮಾಡಿ ಬಿಡುತ್ತದೆ. ಶುಚಿತ್ವದ ಕೊರತೆ, ಕಲುಷಿತ ನೀರು ಸೇರಿದಂತೆ ಹಲವು ಕಾರಣಗಳಿಂದಾಗಿ ಹಲವೆಡೆ, ಜಾಂಡೀಸ್, ಚಿಕೂನ್ ಗುನ್ಯಾ, ಹೆಚ್1ಎನ್1, ಟೈಪಾಯಿಡ್, ಮಲೇರಿಯಾ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಬೇಸ್ತು ಬೀಳಿಸಿದೆ. ಪಟ್ಟಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಹಣ್ಣು, ತಿಂಡಿ, ಉಪಹಾರ ಕ್ಯಾಂಟೀನ್ ಗಳು ಇರುವುದರಿಂದ ಅವರು ಸ್ವಚ್ಛತೆ ವಹಿಸದೆ ಹೋದರೆ ರೋಗಗಳಿಗೆ ಆಹ್ವಾನ ನೀಡಿದಂತೆಯೇ. ಹೀಗಾಗಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆಗಳು ಈ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ. ಈಗಾಗಲೇ ಮೈಸೂರು ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮೈಸೂರು ಮಹಾನಗರ ಪಾಲಿಕೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಕರ್ನಾಟಕ ಪೌರ ನಿಗಮ ಕಾಯ್ದೆ 1976 ಸೆಕ್ಷನ್ 343 ರಂತೆ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೋಟೆಲ್, ಕ್ಯಾಂಟಿನ್, ದರ್ಶಿನಿ, ಫಾಸ್ಟ್ ಫುಡ್ ಉದ್ದಿಮೆದಾರರು ಗ್ರಾಹಕರಿಗೆ ಬಿಸಿಯಾದ ನೀರು, ಶುಚಿಯಾದ ಆಹಾರವನ್ನು ಸರಬರಾಜು ಮಾಡಬೇಕು, ತಟ್ಟೆ ಮತ್ತು ಲೋಟಗಳನ್ನು ಸೋಪಿನ ನೀರು ಮತ್ತು ಬಿಸಿ ನೀರಿನಲ್ಲಿ ತೊಳೆದು ಶುಚಿಗೊಳಿಸಬೇಕು, ನೆಲ ಮತ್ತು ಟೇಬಲ್ಗಳನ್ನು ಕ್ರಿಮಿನಾಶಕ ಉಪಯೋಗಿಸಿ, ಶುಚಿಗೊಳಿಸಬೇಕು. ಅಡುಗೆ ಮನೆ ಯಾವಾಗಲೂ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳ ತಯಾರಿಕೆಗೆ ಉಪಯೋಗಿಸುವ ದಿನಸಿ ಪದಾರ್ಥ ಉತ್ತಮ ಗುಣಮಟ್ಟದ್ದಾಗಿರಬೇಕು. ಹೋಟೆಲ್ನ ಸುತ್ತಮುತ್ತಲ ಆವರಣ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಸಪ್ಲೆಯರ್ಸ್ ಆರೋಗ್ಯವಂತರಾಗಿರಬೇಕು ಹಾಗೂ ಗ್ರಾಹಕರಿಗೆ ಊಟ ತಿಂಡಿ ಸರಬರಾಜು ಮಾಡುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಎಪ್ರಾನ್ ಮತ್ತು ಗ್ಲೌಸ್ ಹಾಕಿ ಕೊಂಡಿರಬೇಕು. ಶೌಚಾಲಯ ವ್ಯವಸ್ಥೆ ಉತ್ತಮವಾಗಿರಬೇಕು. ನೀರಿನ ಸೌಲಭ್ಯವಿರಬೇಕು ಹಾಗೂ ಆಗಿಂದಾಗ್ಯೆ ಶುಚಿಗೊಳಿಸಬೇಕು. ಸಿದ್ದಪಡಿಸಿದ ತಿಂಡಿ ಪದಾರ್ಥಗಳನ್ನು ಕಡ್ಡಾಯವಾಗಿ ಗ್ಲಾಸ್ ಕೇಸ್ ಒಳಗಡೆ ಇಡಬೇಕು. ಫುಟ್ಪಾತ್ ನಲ್ಲಿ ತಿಂಡಿ ಪದಾರ್ಥ ಮಾರಾಟ ಮಾಡುವವರು, ಕೊಯ್ದು ಹಣ್ಣು ಹಂಪಲುಗಳನ್ನು ಸೊಳ್ಳೆ, ನೊಣ ಹಾಗೂ ಧೂಳು ಬೀಳದಂತೆ ಗಾಜಿನ ಪೆಟ್ಟಿಗೆಯಲ್ಲಿ  ಕಡ್ಡಾಯವಾಗಿ ಇಟ್ಟು ಮಾರಾಟ ಮಾಡುವಂತೆ ಸೂಚನೆ ನೀಡಿದ್ದು, ತಪ್ಪಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದೇ ರೀತಿ ಎಲ್ಲೆಡೆಯೂ ಕ್ರಮಗಳನ್ನು ಕೈಗೊಂಡಿದ್ದೇ ಆದರೆ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ. ಜತೆಗೆ ನಮ್ಮ ಮನೆ ಸುತ್ತಮುತ್ತಲೂ ಸ್ವಚ್ಛತೆಯಿಂದ ಕೂಡಿರುವಂತೆ ನೋಡಿಕೊಳ್ಳುವುದು ಕೂಡ ಅಗತ್ಯವಾಗಿದೆ. ನಾವೆಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತೇವೆಯೋ ಅಷ್ಟೇ ರೋಗಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಈ ಬಾರಿಗೆ ಕುಡಿಯುವ ನೀರಿಗೆ ಸಮಸ್ಯೆಯುಂಟಾಗಿರುವುದರಿಂದ ನೀರನ್ನು ಉಪಯೋಗಿಸುವಾಗಲೂ ಎಚ್ಚರಿಕೆ ಅಗತ್ಯ. ಶುದ್ದೀಕರಣಗೊಂಡ ನೀರನ್ನು ಬಳಸುವುದು, ಅಥವಾ ಕುದಿಸಿ ಆರಿಸಿ ಕುಡಿಯುವುದು ಆರೋಗ್ಯದ ದೃಷ್ಠಿಯಿಂದ ಉತ್ತಮ. ಮನರಂಜನೆ
1
ಜಾಲತಾಣದಲ್ಲಿ ಸದ್ದು ಮಾಡ್ತಿದೆ ಸಲ್ಮಾನ್ ತೆಗೆದಿರೋ ಫೋಟೋ   19-08-2018 5:13PM IST    /     No Comments    /     Posted In: Latest News , Entertainment ಬಾಲಿವುಡ್ ನ ಹಾಸ್ಯ ನಟ ಸುನೀಲ್ ಗ್ರೋವರ್ ಅವರ ಫೋಟೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡ್ತಿದೆ. ಅದು ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಸೆಟ್ ನಲ್ಲಿ ತೆಗೆದಿರುವಂತಾ ಫೋಟೋ. ಈ ಫೋಟೋದಲ್ಲಿ ಸುನೀಲ್ ಗ್ರೋವರ್ ಒಂದು ಆಂಗಲ್ ನಿಂದ ನೋಡೋದಕ್ಕೆ ಶಾರುಕ್ ಖಾನ್ ರೀತಿಯಲ್ಲೇ ಪೋಸ್ ಕೊಟ್ಟಿದ್ದಾರೆ. ಸುನೀಲ್ ಗ್ರೋವರ್ ರನ್ನ ಈ ರೇಂಜಿಗೆ ಫೋಟೋದಲ್ಲಿ ಸೆರೆ ಹಿಡಿದಿದ್ದು ಯಾರು ಅನ್ನೋದನ್ನ ತಿಳಿದುಕೊಂಡ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ಯಾಕಂದ್ರೆ ಇಲ್ಲಿ ಸುನೀಲ್ ಗ್ರೋವರ್ ಗೆ ಕ್ಯಾಂಡಿಡ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿರೋದು ಸಲ್ಮಾನ್ ಖಾನ್. ಯುರೋಪ್ ನ ಮಾಲ್ಟಾಗೆ ಭಾರತ್ ಚಿತ್ರೀಕರಣಕ್ಕಾಗಿ ತೆರಳಿರುವ ಸಲ್ಮಾನ್ ಬಿಹೈಂಡ್ ದ ಸ್ಕ್ರೀನ್ ಚಿತ್ರದ ಸಹ ನಟರಿಗೆ ಬೆಸ್ಟ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಸುನೀಲ್ ಗ್ರೋವರ್ ಅವರ ಚಿತ್ರವನ್ನು ಸೆರೆ ಹಿಡೀತಿರೋ ತಮ್ಮದೇ ಫೋಟೋವನ್ನ ಸಲ್ಮಾನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ಒಳ್ಳೆ ಫೋಟೋ ತೆಗಿಬೇಕು ಅಂದ್ರೆ ತುಂಬಾನೇ ಫೋಕಸ್ ಮಾಡಬೇಕಾಗುತ್ತೆ ಅಂತ ಸಲ್ಮಾನ್ ಈ ಫೋಟೋಗೆ ಮೆಸೇಜ್ ಹಾಕಿದ್ದಾರೆ. ಫೋಟೋ ನೋಡಿದ ಸಲ್ಲು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ದಿನದ ಸಲುವಾಗಿ ಸಲ್ಮಾನ್ ಅಪ್ಕಮಿಂಗ್ ಸಿನಿಮಾ ಭಾರತ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿದೆ. 2019ರ ಈದ್ ಮಿಲಾದ್ ಹಬ್ಬಕ್ಕೆ ಭಾರತ್ ಸಿನಿಮಾ ತೆರೆಗೆ ಬರಲಿದೆ.
0
ಕಾಬಿಲ್ ಟೀಸರ್ :ಮತ್ತೊಮ್ಮೆ ವಿಭಿನ್ನವಾಗಿ ಹೃತಿಕ್ Highlights ಇದು ಬಾಲಿವುಡ್ ಸಖತ್ ಗಮನ ಸೆಳೆಯುತ್ತಿದೆ.ಈ ಚಿತ್ರದಲ್ಲಿ ಹೃತಿಕ್ ರೋಶನ್ ಎದುರು ಯಾಮಿ ಗೌತಮ್ ನಟಿಸುತ್ತಿದ್ದು ನಿರ್ದೇಶಕ ಸಂಜಯ್ ಗುಪ್ತಾ ಹೊಸತನ್ನ ಮೆಚ್ಚುಗೆಗಳು ವ್ಯಕ್ತವಾಗಿದೆ.. ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೋಶನ್ ನಟನೆಯ ಬಹು ನೀರಿಕ್ಷೆಯ ಕಾಬಿಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆದರೆ ಕಾಬಿಲ್ ಟೀಸರ್ ನ್ನ ನಿರ್ದೇಶಕ ಸಂಜಯ್ ಗುಪ್ತಾ ವಿಭಿನ್ನವಾಗಿ ಕಟ್ ಮಾಡಿಸಿ ರಿಲೀಸ್ ಮಾಡಿದ್ದಾರೆ. ಟೀಸರ್ ನಲ್ಲಿ ದೃಶ್ಯಗಳೇ ಇಲ್ಲದೇ ಬರೀ ಕಾರುಗಳ ಲೈಟ್ ಗಳನ್ನ ಜೂಮ್ ಔಟ್ ಮಾಡಿ. ಹೃತಿಕ್ ರೋಷನ್ ಅವರ ಹಿನ್ನೆಲೆ ಸಂಭಾಷಣೆ ಮಾತ್ರ ಕೇಳುತ್ತದೆ.  ಇದು ಬಾಲಿವುಡ್ ಸಖತ್ ಗಮನ ಸೆಳೆಯುತ್ತಿದೆ.ಈ ಚಿತ್ರದಲ್ಲಿ ಹೃತಿಕ್ ರೋಶನ್ ಎದುರು ಯಾಮಿ ಗೌತಮ್ ನಟಿಸುತ್ತಿದ್ದು ನಿರ್ದೇಶಕ ಸಂಜಯ್ ಗುಪ್ತಾ ಹೊಸತನ್ನ ಮೆಚ್ಚುಗೆಗಳು ವ್ಯಕ್ತವಾಗಿದೆ..
0
#Gomonster Samsung M30s: ಹೊಸ ಸ್ಮಾರ್ಟ್‌ಫೋನ್‌ ನ ವಿಶೇಷತೆಗಳೇನು ನೋಡಿ! WATCH LIVE TV ಯಾವತ್ತೂ ನಮಗೆ ಬೇಕಾದುದನ್ನು ಪಡೆಯಲು ಸಾಧ್ಯವಿಲ್ಲ: ರೋಹಿತ್ ಅಸಂಖ್ಯಾತ ಮುಂಬಯಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ತದಾ ಬೆನ್ನಲ್ಲೇ ತಂಡದ ಸಾಮಾನ್ಯ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮಾ ಬೇಸರ ತೋಡಿಕೊಂಡಿದ್ದಾರೆ. ವಿಜಯ ಕರ್ನಾಟಕ | Updated: May 22, 2018, 03:04PM IST ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ಮುಂಬಯಿ ಇಂಡಿಯನ್ಸ್ ಎಡವಿದೆ. ಇದರೊಂದಿಗೆ ಅಸಂಖ್ಯಾತ ಮುಂಬಯಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ತದಾ ಬೆನ್ನಲ್ಲೇ ತಂಡದ ಸಾಮಾನ್ಯ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮಾ ಬೇಸರ ತೋಡಿಕೊಂಡಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮುಂಬಯಿ ಮುಗ್ಗರಿಸಿತ್ತು. ಈ ಮೂಲಕ ಟೂರ್ನಿಯಿಂದಲೇ ಮುಗ್ಗರಿಸಿತ್ತು. ''ಪಂದ್ಯಾವಳಿಯಲ್ಲಿ ತಮ್ಮ ತಂಡದ ಪ್ರದರ್ಶನದ ಬಗ್ಗೆ ಬೇಸರವಿದೆ. ನನಗನಿಸುತ್ತದೆ ಇದುವೇ ಜೀವನ ಮತ್ತು ಕ್ರೀಡೆ. ಯಾವತ್ತೂ ನಮಗೆ ಬೇಕಾದುದನ್ನು ಪಡೆಯಲು ಸಾಧ್ಯವಿಲ್ಲ. ನಾವು ಕಠಿಣವಾಗಿ ಹೋರಾಡಿದ್ದೆವು. ಆದರೆ ನನಗನಿಸುತ್ತದೆ ಆ ದಿನದಲ್ಲಿ ಎದುರಾಳಿ ತಂಡವು ನಮಗಿಂತಲೂ ಉತ್ತಮವಾಗಿತ್ತು'' ಎಂದರು. Disappointing to be out of the tournament, I guess that’s life and sport. We can’t always get what we want. We did… https://t.co/Wp2jk1FhOR — Rohit Sharma (@ImRo45) 1526911201000 ಅದೇ ಹೊತ್ತಿಗೆ ಮುಂದಿನ ವರ್ಷದಲ್ಲಿ ಇನ್ನಷ್ಟು ಉತ್ತಮ ನಿರ್ವಹಣೆ ಭರವಸೆಯನ್ನು ರೋಹಿತ್ ಟ್ವಿಟರ್‌ನಲ್ಲಿ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಐಪಿಎಲ್ 11ರಲ್ಲಿ ಆಡಿರುವ 14 ಪಂದ್ಯಗಳ ಪೈಕಿ ಆರರಲ್ಲಿ ಮಾತ್ರ ಗೆಲುವು ದಾಖಲಿಸಿರುವ ಮುಂಬಯಿ ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದೊಂದಿಗೆ ಪಯಣ ಕೊನೆಗೊಳಿಸಿದೆ.
2
ಕೊಹ್ಲಿ–ಎಬಿಡಿ ಚಿತ್ರಗಳಿಗೆ ಕ್ಷೀರಾಭಿಷೇಕ ಭಾನುವಾರ 35ನೇ ಜನ್ಮದಿನ ಆಚರಿಸಿಕೊಂಡ ಡಿವಿಲಿಯರ್ಸ್‌ ಕೊಹ್ಲಿ–ಎಬಿಡಿ ಚಿತ್ರಗಳಿಗೆ ಕ್ಷೀರಾಭಿಷೇಕ ಪ್ರಜಾವಾಣಿ ವಾರ್ತೆ Published: 19 ಫೆಬ್ರವರಿ 2019, 01:59 IST Updated: 19 ಫೆಬ್ರವರಿ 2019, 01:59 IST ಅಕ್ಷರ ಗಾತ್ರ : ಆ ಆ ಬೆಂಗಳೂರು: ಇಂಡಿಯನ್ ಪ್ರೀಮಿ ಯರ್ ಲೀಗ್‌ (ಐಪಿಎಲ್‌) ಸಮೀಪಿಸುತ್ತಿದ್ದಂತೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳ ಉತ್ಸಾಹ ಇಮ್ಮಡಿಯಾಗಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ಅವರ ಭಾವಚಿತ್ರಕ್ಕೆ ಅವರು ಕ್ಷೀರಾಭಿಷೇಕ ಮಾಡಿದ್ದಾರೆ. ಭಾನುವಾರ ಎಬಿ ಡಿವಿಲಿಯರ್ಸ್ ಅವರ 35ನೇ ಜನ್ಮದಿನ. ಇದರ ನಿಮಿತ್ತ ಒಂಡೆಡೆ ಸೇರಿದ ಅಭಿಮಾನಿಗಳು ಡಿವಿ ಲಿಯರ್ಸ್ ಮತ್ತು ಕೊಹ್ಲಿ ಜೊತೆಯಾಗಿ ಇರುವ ಚಿತ್ರಕ್ಕೆ ಪ್ಯಾಕೆಟ್ ಹಾಲನ್ನು ಸುರಿದರು. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೊಹ್ಲಿ ಮತ್ತು ಡಿವಿಲಿಯರ್ಸ್ ಆರ್‌ಸಿಬಿ ತಂಡದ ಬೆನ್ನೆಲೆಬು. ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 229 ರನ್‌ಗಳ ಜೊತೆಯಾಟದ ಮೂಲಕ ಟೂರ್ನಿಯಲ್ಲಿ ದಾಖಲೆ ಬರೆದಿದ್ದಾರೆ.
2
ಇದು ಲೈಂಗಿಕ ಶಕ್ತಿ ಹೆಚ್ಚಿಸುವ ಪವರ್ ಫುಲ್ 'ಗಿಡಮೂಲಿಕೆಗಳ ಔಷಧಿ' Wellness | Updated: Saturday, December 30, 2017, 10:50 [IST] ಮಾಕಾ, ನಮಗೆ ಇದು ಅಪರಿಚಿತವಾದ ಹೆಸರು. ಆದರೆ ಇದರ ಬಗ್ಗೆ ಅರಿತವರು ಇದನ್ನು ಗಡ್ಡೆಗಳ ರಾಜನೆಂದು ಯಾವುದೇ ತಕರಾರಿಲ್ಲದೇ ಒಪ್ಪುತ್ತಾರೆ. lepidium Meyenii ಎಂಬ ವೈಜ್ಞಾನಿಕ ಹೆಸರಿನ ಈ ಗಡ್ಡೆ ದಕ್ಷಿಣ ಅಮೇರಿಕಾದ ಪೆರು ಮತ್ತು ಬೊಲಿವಿಯಾ ದೇಶದ ಮೂಲದ್ದಾಗಿದ್ದು ನೋಡಲಿಕ್ಕೆ ಬಿಳಿ ಮೂಲಂಗಿಯೊಂದು ಬೀಟ್ರೂಟಿನ ವೇಷ ಧರಿಸಿದಂತೆ ಕಾಣುತ್ತದೆ. ಇದರ ರುಚಿ ರುಚಿಯಾದ ಬಾದಾಮಿ ಅಥವಾ ಬಟರ್ ಸ್ಕಾಚ್ಐಸ್ ಕ್ರೀಮ್ ನಂತಿರುತ್ತದೆ. ಈ ಗಡ್ಡೆಯಲ್ಲಿಯೂ ಕೆಲವಾರು ವಿಧಗಳಿದ್ದು ರುಚಿಯೂ ಕೊಂಚ ಭಿನ್ನವಾಗಿರುತ್ತದೆ. ಇವುಗಳು ಕಪ್ಪು, ಹಳದಿ, ಕೆಂಪು ಬಣ್ಣಗಳಲ್ಲಿಯೂ ಲಭ್ಯವಿವೆ. ಇವುಗಳನ್ನು ಸಂಸ್ಕರಿಸಿ ಪುಡಿಯನ್ನು ಮಾತ್ರೆಗಳ ರೂಪದಲ್ಲಿ ಅಥವಾ ಒಣಗಿದ ಗಡ್ಡೆಗಳ ರೂಪದಲ್ಲಿ ಹೆಚ್ಚು ಕಾಲ ಕೆಡದಿರುವಂತೆ ಡಬ್ಬಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದೊಂದು ಗಿಡಮೂಲಿಕೆಯಾದುದರಿಂದ ಯಾವುದೇ ಗ್ರಂಥಿಗೆ ಅಂಗಡಿಯಲ್ಲಿ ಪಡೆಯಬಹುದು. ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ! ಆದರೆ ಇದನ್ನೇಕೆ ಇಷ್ಟೊಂದು ಕಾಳಜಿಯಿಂದ ಮಾರಲಾಗುತ್ತಿದೆ ಹಾಗೂ ಸೇವಿಸುವಂತೆ ಪ್ರಚಾರ ಮಾಡಲಾಗುತ್ತಿದೆ? ಈ ಗಡ್ಡೆಯ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ, ಮಾನಸಿಕ ಹಾಗೂ ದೈಹಿಕ ದಾರ್ಢ್ಯತೆಯೂ ಹೆಚ್ಚುತ್ತದೆ. ವಿಶೇಷವಾಗಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಇದು ಅದ್ಭುತಗಳನ್ನೇ ಸಾಧಿಸಬಲ್ಲುದು. ಆದ್ದರಿಂದ ಇದರ ಸೇವನೆಯ ಅವಕಾಶ ಒದಗಿಬಂದರೆ ಇದನ್ನು ಖಂಡಿತಾ ಕಳೆದುಕೊಳ್ಳಬಾರದು. ಮಾಕಾ ದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣ, ಅಯೋಡಿನ್, ಬಿ ವಿಟಮಿನ್ನುಗಳು ಹಾಗೂ ಪ್ರೋಟೀನುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಲೈಂಗಿಕ ಶಕ್ತಿ ಹೆಚ್ಚಿಸಲು ಈ ಗಡ್ಡೆಯನ್ನು ನಿತ್ಯವೂ 1.5 ರಿಂದ 3 ಗ್ರಾಂ ನಷ್ಟು ಸೇವಿಸಬೇಕು. ಇದರಿಂದ ಹಲವಾರು ಪ್ರಯೋಜನಗಳಿವೆ. ಬನ್ನಿ, ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ... ಉತ್ತಮ ಲೈಂಗಿಕ ಶಕ್ತಿ ಲೈಫ್ ಎ ಎಂಬ ಸಂಶೋಧನಾ ಸಂಸ್ಥೆ ಈ ಗಡ್ಡೆಯ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸಿದ್ದು ನಿತ್ಯವೂ ಮೂರು ಗ್ರಾಂ ನಷ್ಟು ಮಾಕಾ ಪೌಡರ್ ಸೇವನೆಯಿಂದ ಲೈಂಗಿಕ ಶಕ್ತಿ ಅಪಾರವಾಗಿ ಹೆಚ್ಚುತ್ತದೆ ಎಂದು ಕಂಡುಕೊಂಡಿದೆ. ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಇದು ಸಮಾನವಾಗಿ ಕಾರ್ಯನಿರ್ವಹಿಸುವ ಮೂಲಕ ಅಫಲವತ್ತತೆ, ನಿರಾಸಕ್ತಿ ಮೊದಲಾದವುಗಳನ್ನು ನಿವಾರಿಸುತ್ತದೆ. ಪುರುಷರಲ್ಲಿ ನಿಮಿರು ದೌರ್ಬಲ್ಯವನ್ನು ಅಪಾರವಾಗಿ ಕಡಿಮೆ ಮಾಡುವ ಈ ಅದ್ಭುತ ಮೂಲಿಕೆ ವೀರ್ಯಾಣುಗಳ ಸಂಖ್ಯೆ ವೃದ್ಧಿಸಲೂ ನೆರವಾಗುತ್ತದೆ. ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ ಮಾಕಾ ಪುಡಿಯನ್ನು ನಿತ್ಯವೂ ಸೇವಿಸುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುವ ಹಾಗೂ ಇದರಲ್ಲಿ ಆರೋಗ್ಯರಕ ವೀರ್ಯಾಣುಗಳ ಸಂಖ್ಯೆ ಹೆಚ್ಚಿರುವಂತೆ ನೋಡಿಕೊಳ್ಳುವ ಮೂಲಕ ಫಲವತ್ತತೆ ಹೆಚ್ಚುತ್ತದೆ. ವೀರ್ಯಾಣುಗಳ ಗುಣಮಟ್ಟ ಉತ್ತಮವಾದಷ್ಟೂ ಇವು ಗರ್ಭನಾಳದಲ್ಲಿ ಅಂಡಾಣುವೊಡನೆ ಮಿಲಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ತನ್ಮೂಲಕ ಸಂತಾನಹೀನ ಪುರುಷರಿಗೆ ಈ ಮೂಲಿಗೆ ಅದ್ಭುತವಾದ ವರದಾನವಾಗಿದೆ. ಸ್ಮರಣಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮಾಕಾ ಪುಡಿಯ ಸೇವನೆಯ ಕುರಿತು ನಡೆಸಿದ ಇನ್ನೊಂದು ಸಂಶೋಧನೆಯಲ್ಲಿ ಇದು ಸ್ಮರಣಶಕ್ತಿ ಹಾಗೂ ಕಲಿಯುವಿಕೆಯನ್ನು ಉತ್ತಮಗೊಳಿಸುವುದನ್ನು ಕಂಡುಕೊಳ್ಳಲಾಗಿದೆ. ವಿಶೇಷವಾಗಿ ಕಪ್ಪು ಮಾಕಾ ಗಡ್ಡೆಯ ಪುಡಿಯ ಸೇವನೆಯಿಂದ ಸ್ಮರಣಶಕ್ತಿ ಹಾಗೂ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಒಂದು ವೇಳೆ ನೀವು ಮಾನಸಿಕವಾಗಿ ಬಹಳಷ್ಟು ಕುಗ್ಗಿದ್ದರೆ ಹಾಗೂ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಹೆಣಗಾಡುತ್ತಿದ್ದರೆ ನಿಮಗೆ ಮಾಕಾ ಪುಡಿಯ ಅಗತ್ಯವಿದೆ. ಇದು ಹಿರಿಯರ ಜೊತೆಗೇ ಮಕ್ಕಳಿಗೂ ಸೂಕ್ತವಾಗಿದ್ದು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ತನ್ಮೂಲಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ನೆರವಾಗುತ್ತದೆ. ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನು ಕಡಿಮೆ ಮಾಡುತ್ತದೆ ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮಾನಸಿಕ ಒತ್ತಡ ಹಾಗೂ ಉದ್ವೇಗ ಕಡಿಮೆಯಾಗುತ್ತದೆ. ಅಲ್ಲದೇ ದೈಹಿಕ ದಾರ್ಢ್ಯತೆಯನ್ನೂ ಹೆಚ್ಚಿಸಿ ಖಿನ್ನತೆಯ ವಿರುದ್ಧ ಹೋರಾಡಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಮನೋಭಾವ ಪದೇಪದೇ ಬದಲಾಗುತ್ತಿದ್ದರೆ ಹಾಗೂ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದರೆ ನಿಮಗೆ ಮಾಕಾ ಸೇವನೆ ಅಗತ್ಯವಾಗಿದೆ. ಸಂಧಿವಾತ ಹಾಗೂ ಉರಿಯೂತವನ್ನು ನಿವಾರಿಸುತ್ತದೆ ಸಂಧಿವಾತದಿಂದ ಬಳಲುತ್ತಿರುವವರು ಮಾಕಾ ಸೇವನೆಯನ್ನು ಪ್ರಯತ್ನಿಸಬೇಕು. ಇದರಿಂದ ಸಂಧಿವಾತ ಹಾಗೂ ಗಂಟುಗಳಲ್ಲಿ ಉಂಟಾಗಿರುವ ಉರಿಯೂತವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮೂಳೆಗಳ ಗಂಟುಗಳಲ್ಲಿ ಉಂಟಾಗಿರುವ ಸಂಧಿವಾತ, ಈ ಭಾಗ ಪೆಡಸಾಗುವುದು ಹಾಗೂ ಉರಿಯನ್ನು ಇಲ್ಲವಾಗಿಸುತ್ತದೆ. ಇದಕ್ಕಾಗಿ 1,500ಮಿಲಿಗ್ರಾಂ ಮಾಕಾ ಪುಡಿಯನ್ನು 300 ಮಿಲಿಗ್ರಾಂ cat's claw (Uncaria tomentosa ಅಥವಾ Uncaria guianensis) ಎಂಬ ಮೂಲಿಕೆಯ ಪುಡಿಯೊಂದಿಗೆ ಬೆರೆಸಿ ನಿತ್ಯವೂ ಸತತವಾಗಿ ಎರಡು ತಿಂಗಳ ಕಾಲ ಸೇವಿಸಬೇಕು. ಇದರಿಂದ ಸಂಧಿವಾತ, ಉರಿ, ಪೆಡಸಾಗಿರುವುದು ಎಲ್ಲವೂ ಗುಣವಾಗುತ್ತವೆ. ಮಹಿಳೆಯರಲ್ಲಿ ರಸದೂತಗಳ ಪ್ರಭಾವವನ್ನು ಸರಿಯಾಗಿಸುತ್ತದೆ ಇನ್ನೊಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಮಾಕಾ ಸೇವನೆಯಿಂದ ಮಹಿಳೆಯರಲ್ಲಿ ಎದುರಾಗುವ ರಸದೂತಗಳ ಏರಿಳಿತದ ಪ್ರಭಾವ ಕಡಿಮೆಯಾಗುತ್ತದೆ. ವಿಶೇಷವಾಗಿ ನಲವತ್ತು ವರ್ಷ ದಾಟಿದ ಮಹಿಳೆಯರು ನಿತ್ಯವೂ ಎರಡು ಗ್ರಾಂ ಮಾಕಾ ಪುಡಿಯವನ್ನು ಸೇವಿಸುವ ಮೂಲಕ ರಜೋನಿವೃತ್ತಿಯ ಸೂಚನೆಗಳಿಂದ ಬಿಡುಗಡೆ ಪಡೆಯಬಹುದು. ಅಲ್ಲದೇ ಈ ಸಮಯದಲ್ಲಿ ಎದುರಾಗುವ ರಾತ್ರಿಯ ಹೊತ್ತಿನ ಬೆವರುವಿಕೆ ಹಾಗೂ ದೇಹದ ಕೆಲವು ಭಾಗಗಳು ಬಿಸಿಯಾಗುವುದು ಮೊದಲಾದವುಗಳನ್ನೂ ಇಲ್ಲವಾಗಿಸಬಹುದು. ಅಷ್ಟೇ ಅಲ್ಲ, ಒಂದು ವೇಳೆ ಗರ್ಭಾಶಯದಲ್ಲಿ ಗಡ್ಡೆಗಳಾಗಿದ್ದರೆ ಇವುಗಳನ್ನು ಗುಣಪಡಿಸಲೂ ನೆರವಾಗುತ್ತದೆ. ತಾರುಣ್ಯವನ್ನು ಕಾಪಾಡುತ್ತದೆ ಮಾಕಾ ಸೇವನೆಯ ಜೊತೆಗೇ ಮಾಕಾಪುಡಿಯನ್ನು ಮುಖಲೇಪದಂತೆ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ತಾರುಣ್ಯ ಹಾಗೂ ಕಾಂತಿಯುಕ್ತ ತ್ವಚೆಯನ್ನು ಹೆಚ್ಚು ವಯಸ್ಸಿನವರೆಗೆ ಕಾಪಾಡಿಕೊಳ್ಳಬಹುದು. ನಿತ್ಯದ ಮಾಕಾದಲ್ಲಿರುವ ಕಾರ್ಬೋಹೈಡ್ರೇಟುಗಳು ಹಾಗೂ ಇತರ ಪೋಷಕಾಂಶಗಳ ಸೇವನೆಯಿಂದ ನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಪಡೆಯುವುದರ ಜೊತೆಗೇ ಸೂರ್ಯನ ವಿಕಿರಣಗಳಿಂದ ರಕ್ಷಣೆಯನ್ನೂ ಪಡೆಯಬಹುದು.
1
ಹದಿಹರೆಯದಲ್ಲಿ ಅತಿಯಾಗಿ ಪೋರ್ನ್ ವೀಕ್ಷಿಸಿದ್ರೆ ಅಪಾಯ   23-10-2018 5:40AM IST    /     No Comments    /     Posted In: Latest News , Health ಟೆಕ್ನಾಲಜಿ ಮುಂದುವರಿದಿರೋದ್ರಿಂದ ಈಗ ಇಂಟರ್ನೆಟ್ ಎಲ್ಲರ ಬೆರಳ ತುದಿಯಲ್ಲೇ ಇದೆ. ಕಂಪ್ಯೂಟರ್, ಸ್ಮಾರ್ಟ್ ಫೋನ್ ಎಲ್ಲದರಲ್ಲೂ ಅಶ್ಲೀಲ ವಿಡಿಯೋಗಳದ್ದೇ ಹಾವಳಿ. ಹದಿಹರೆಯದವರಿಗಂತೂ ಪೋರ್ನ್ ದೃಶ್ಯ ವೀಕ್ಷಣೆ ಚಟವಾಗಿಬಿಟ್ಟಿದೆ. ಅತಿಯಾಗಿ ಇಂತಹ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸುವುದರಿಂದ ಅವರ ವರ್ತನೆ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಅವರು ಲೈಂಗಿಕ ಹಿಂಸಾ ಪ್ರವೃತ್ತಿಗಿಳಿಯುವ ಸಾಧ್ಯತೆ ಹೆಚ್ಚು ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಜೊತೆಗೆ ಅವರ ಮಾನಸಿಕ ಸ್ಥಿತಿ ಮೇಲೆ ಕೂಡ ಅದು ಪರಿಣಾಮ ಬೀರುತ್ತದೆ. ಸೂಕ್ತ ಲೈಂಗಿಕ ಶಿಕ್ಷಣದ ಮೂಲಕ ಅವರನ್ನು ಸರಿದಾರಿಗೆ ತರಬಹುದು. ಹಾಗಾಗಿ ಮಕ್ಕಳು ಹಾಗೂ ಹದಿಹರೆಯದವರು ಪೋರ್ನ್ ಸೈಟ್ ಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಉತ್ತಮ. ಬ್ರಿಟನ್ ಸರ್ಕಾರ, ಮಕ್ಕಳು ಹಾಗೂ ಹದಿಹರೆಯದವರಿಗೆ ಪೋರ್ನ್ ಸೈಟ್ ಗಳಿಗೆ ಆಕ್ಸೆಸ್ ದೊರೆಯದಂತೆ ಮಾಡಲು ಕ್ರಮ ಕೈಗೊಳ್ಳುತ್ತಿದೆ.
1
ಟೆನ್ನಿಸ್ ಎರಡನೇ ಸುತ್ತಿಗೆ ಸಿಂಧು, ಸೈನಾ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಮೀರ್‌ ವರ್ಮಾಗೆ ಜಯ; ಶ್ರೀಕಾಂತ್‌ಗೆ ಆಘಾತ ಎರಡನೇ ಸುತ್ತಿಗೆ ಸಿಂಧು, ಸೈನಾ ಪ್ರಜಾವಾಣಿ ವಾರ್ತೆ Published: 25 ಏಪ್ರಿಲ್ 2019, 01:18 IST Updated: 25 ಏಪ್ರಿಲ್ 2019, 01:19 IST ಅಕ್ಷರ ಗಾತ್ರ : ಆ ಆ ವುಹಾನ್ (ಪಿಟಿಐ): ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದರು.   ಬುಧವಾರ ನಡೆದ ಪಂದ್ಯದಲ್ಲಿ ಪಿ.ವಿ.ಸಿಂಧು ಜಪಾನ್‌ನ ಸಯಾಕ ಟಕಹಾಶಿ ಅವರನ್ನು 21–14 21–7 ರಿಂದ ಮಣಿಸಿದರೆ, ಸೈನಾ ‌ಚೀನಾದ ಹಾನ್‌ ಯೂ ವಿರುದ್ಧ 12–21, 21–11, 21–17ರಿಂದ ಗೆದ್ದರು.  ಆಕರ್ಷಕ ಸರ್ವ್‌ ಮತ್ತು ಡ್ರಾಪ್ ಶಾಟ್‌ಗಳಿಂದ ಗಮನ ಸೆಳೆದ ಸಿಂಧು, ಆರಂಭದಿಂದಲೂ ಪ್ರಾಬಲ್ಯ ಮೆರೆದರು. ಕೇವಲ 28 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡು ಎರಡನೇ ಸುತ್ತಿಗೆ ಪ್ರವೇಶ ಪಡೆದರು. ಮುಂದಿನ ಹಂತದಲ್ಲಿ ಇಂಡೊನೇಷ್ಯಾದ ಚೊಯಿರುನ್ನಿಸಾ ವಿರುದ್ಧ ಸೆಣಸಲಿದ್ದಾರೆ.  ಸೈನಾಗೆ ಪ್ರಯಾಸದ ಗೆಲುವು: ವಿಶ್ವದ ಒಂಬತ್ತನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್, ಆರಂಭದ ಗೇಮ್‌ ಅನ್ನು ಎದುರಾಳಿ ಹಾನ್‌ ಯೂ ಅವರಿಗೆ ಒಪ್ಪಿಸಿದರು. 12–21ರಿಂದ ಹಿನ್ನಡೆ ಅನುಭವಿಸಿ ಸೈನಾ ಪಂದ್ಯವನ್ನು ಕೈ ಚೆಲ್ಲುವ ಹಂತಕ್ಕೆ ತಲುಪಿದ್ದರು. ಆದರೆ, ಎರಡನೇ ಗೇಮ್‌ನಲ್ಲಿ ತಿರುಗೇಟು ಕೊಟ್ಟ ಸೈನಾ, 21–11ರಿಂದ ಮುನ್ನಡೆ ಪಡೆದರು. ಮೂರನೇ ಗೇಮ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈ‍ಪೋಟಿ ಎದುರಾಯಿತು. ಆದರೂ, 21–17ರಿಂದ ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ದಕ್ಷಿಣ ಕೊರಿಯಾದ ಕಿಮ್‌ ಗ ಯುನ್ ವಿರುದ್ಧ ಸೆಣಸಲಿದ್ದಾರೆ. ಸಮೀರ್‌ ವರ್ಮಾಗೆ ಜಯ: ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ ಅವರು ಜಪಾನ್‌ನ ಕಜುಮಸಾ ಸಕಾಯ್‌ ಅವರನ್ನು 21–13, 17–21, 21–18ರಿಂದ ಮಣಿಸಿ ಮುಂದಿನ ಸುತ್ತಿಗೆ ‍ಪ್ರವೇಶ ಪಡೆದರು.  ಎರಡನೇ ಗೇಮ್‌ ಅನ್ನು ಕೈ ಚೆಲ್ಲಿದ ವರ್ಮಾ, ಮೂರನೇ ಗೇಮ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. 67 ನಿಮಿಷಗಳ ಪೈಪೋಟಿಯ ಆಟ ಅಭಿಮಾನಿಗಳ ಗಮನ ಸೆಳೆಯಿತು. ಎರಡನೇ ಸುತ್ತಿನಲ್ಲಿ ಹಾಂಕಾಂಗ್‌ನ ಆಂಗಸ್ ಎನ್‌ ಕಾ ಲಾಂಗ್ ವಿರುದ್ಧ ಸೆಣಸಲಿದ್ದಾರೆ.  ಶ್ರೀಕಾಂತ್‌ಗೆ ಆಘಾತ: ಕಿದಂಬಿ ಶ್ರೀಕಾಂತ್‌ 16–21, 20–22 ರಲ್ಲಿ ಇಂಡೊನೇಷ್ಯಾದ ಶ್ರೇಸರ್‌ಹಿರೇನ್ ರುಸ್ತಾವಿಟೋ ಅವರಿಗೆ ಮಣಿದರು. ಕೇವಲ 44 ನಿಮಿಷಗಳಲ್ಲಿ ಶ್ರೀಕಾಂತ್‌ ಪಂದ್ಯವನ್ನು ಎದುರಾಳಿಗೆ ಒಪ್ಪಿಸಿದರು.  ಡಬಲ್ಸ್‌ನಲ್ಲಿ ನಿರಾಸೆ: ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌ ಮತ್ತು ರಾಮಚಂದ್ರ್ ಶ್ಲೋಕ್ ಅವರು ಚೀನಾದ ಜಿತಾಂಹ್‌ ಹಿ ಮತ್ತು ತಾನ್‌ ಕಿಯಾಂಗ್‌ ವಿರುದ್ಧ 18–21, 15–21ರಿಂದ ಸೋತರು. ಮಹಿಳೆಯರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ಜೊಂಗ್‌ಕೊಲ್ಪನ್ ಕಿತಿತಾರಕುಲ್‌– ರಾವಿಂದಾ ಪ್ರಜೋಂಗ್ಜಾಯ್‌ ಜೋಡಿಗೆ ಮೇಘನಾ ಜಕ್ಕಂಪುಡಿ–ಪೂರ್ವಿಶಾ ಎಸ್‌.ಶ್ಯಾಮ್‌ ಜೋಡಿ 21–13, 21–16ರಿಂದ ಮಣಿದರೆ, ಪೂಜಾ ದಂಡಾ–ಸಂಜನಾ ಸಂತೋಷ್‌ ಜೋಡಿ ಶ್ರೀಲಂಕಾದ ತಿಲಿನಿ ಪ್ರಮೋದಿಕಾ– ಕವಿದಿ ಸಿರಿಮನ್ನಾಗಿ ಅವರಿಗೆ ಮಣಿಯಿತು.
2
Guwahati, First Published 4, Mar 2019, 9:46 AM IST Highlights ಹಾಲಿ ವಿಶ್ವ ಚಾಂಪಿಯನ್ನರ ವಿರುದ್ಧ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಭಾರತ, ಟಿ20 ಮಾದರಿಯಲ್ಲೂ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ.  ಗುವಾಹಟಿ[ಮಾ.04]: 2020ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ಮಹಿಳಾ ತಂಡ ಸಿದ್ಧತೆ ಆರಂಭಿಸಿದೆ. ಸೋಮವಾರದಿಂದ ಇಲ್ಲಿ ಇಂಗ್ಲೆಂಡ್‌ ವಿರುದ್ಧ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿ, ಸೂಕ್ತ ಆಟಗಾರ್ತಿಯರನ್ನು ಗುರುತಿಸಲು ನೆರವಾಗಲಿದೆ. ಹಾಲಿ ವಿಶ್ವ ಚಾಂಪಿಯನ್ನರ ವಿರುದ್ಧ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಭಾರತ, ಟಿ20 ಮಾದರಿಯಲ್ಲೂ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ. ನ್ಯೂಜಿಲೆಂಡ್‌ನಲ್ಲಿ ಐತಿಹಾಸಿಕ ಏಕದಿನ ಸರಣಿ ಗೆದ್ದ ಬಳಿಕ ಟಿ20ಯಲ್ಲಿ 0-3 ಅಂತರದಲ್ಲಿ ವೈಟ್‌ವಾಶ್‌ ಮುಖಭಂಗ ಅನುಭವಿಸಿತ್ತು. ಆ ಸೋಲಿನ ಕಹಿಯನ್ನು ಮರೆಯಲು ಭಾರತ ಪಣ ತೊಟ್ಟಿದೆ. ತವರಿನಲ್ಲಿ ಕೊನೆಯ ಏಕದಿನ ಪಂದ್ಯವಾಡಿದ ಗೇಲ್ ಹೇಳಿದ್ದಿಷ್ಟು... ಕಾಯಂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಸರಣಿಯಲ್ಲಿ ಭಾರತ ತಂಡವನ್ನು ಸ್ಮೃತಿ ಮಂಧನಾ ಮುನ್ನಡೆಸಲಿದ್ದಾರೆ. ರಾಷ್ಟ್ರೀಯ ತಂಡವನ್ನು ಸ್ಮೃತಿ ಮುನ್ನಡೆಸುತ್ತಿರುವುದು ಇದೇ ಮೊದಲು. ಕರ್ನಾಟಕದ ವೇದಾ ಕೃಷ್ಣಮೂರ್ತಿ ತಂಡಕ್ಕೆ ವಾಪಸಾಗಿದ್ದು, ಅವರ ಹೆಗಲ ಮೇಲೆ ನಿರೀಕ್ಷೆಯ ಭಾರವಿದೆ. ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ತಂಡದಲ್ಲಿದ್ದಾರೆ. ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಮಿಥಾಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸುವ ನಿರೀಕ್ಷೆ ಇದ್ದು ಅವರ ಅನುಭವವನ್ನು ತಂಡ ಯಾವ ರೀತಿ ಉಪಯೋಗಿಸಿಕೊಳ್ಳಲಿದೆ ಎನ್ನುವ ಕುತೂಹಲವಿದೆ. ಬೆಂಗಳೂರಲ್ಲಿ ‘ಈ ಸಲ ಕಪ್‌ ನಮ್ದೇ’ ಕೆಫೆ! ಹರ್ಲೀನ್‌ ಡಿಯೋಲ್‌ ಹಾಗೂ ಭಾರತಿ ಫುಲ್ಮಾಲಿ ತಂಡಕ್ಕೆ ಸೇರ್ಪಡೆಗೊಂಡಿರುವ ಹೊಸ ಆಟಗಾರ್ತಿಯರಾಗಿದ್ದು, ಮೊದಲ ಯತ್ನದಲ್ಲೇ ಆಯ್ಕೆಗಾರರ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ. ಎಡಗೈ ವೇಗಿ ಕೋಮಲ್‌ ಜಂಜಾಡ್‌ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದು, ಶಿಖಾ ಪಾಂಡೆ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಐವರು ಸ್ಪಿನ್ನರ್‌ಗಳಿರುವುದು ವಿಶೇಷ. ಪಂದ್ಯ ಆರಂಭ: ಬೆಳಗ್ಗೆ 11ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
2
ಕುಡ್ಲದಲ್ಲಿ ಮಲ್ಟಿಪ್ಲೆಕ್ಸ್‌ಗಳ ಅವಾಂತರ; ಟಿಕೆಟ್‌ ಜತೆಗೆ ಜಂಕ್‌ಫುಡ್‌ ಕಡ್ಡಾಯ! Vijaya Karnataka| May 10, 2019, 08.00 AM IST * ಬಿ. ರವೀಂದ್ರ ಶೆಟ್ಟಿ ಕುಡ್ಲದಲ್ಲಿ ಸಿಂಗಲ್‌ ಥಿಯೇಟರ್‌ಗಳು ಸರದಿಯಂತೆ ಬಾಗಿಲು ಮುಚ್ಚುತ್ತಿವೆ. ಮಲ್ಟಿಪ್ಲೆಕ್ಸ್‌ಗಳ ಜಮಾನ ಶುರುವಾಗಿದೆ. ಆದರೆ ಈ ಮಲ್ಪಿಪ್ಲೆಕ್ಸ್‌ಗಳಲ್ಲಿ ಜನಸಾಮಾನ್ಯರು ಸಿನಿಮಾ ವೀಕ್ಷಿಸುವುದು ಮಾತ್ರ ಅಸಾಧ್ಯದ ಸಂಗತಿ ಎಂಬಂತಾಗಿದೆ. ಈ ಥಿಯೇಟರ್‌ಗಳಲ್ಲಿ ಪ್ರೇಕ್ಷ ಕರ ಜೇಬಿಗೆ ಬೇರೆ ಬೇರೆ ರೀತಿಯಲ್ಲಿ ಕನ್ನ ಹಾಕುತ್ತಾ ಬರುತ್ತಿವೆ. ಮಲ್ಟಿಪ್ಲೆಕ್ಸ್‌ಗಳು ಸರಕಾರ ನಿಗದಿ ಮಾಡಿದ ದರಕ್ಕಿಂತಲೂ ಹೆಚ್ಚಿನ ಟಿಕೆಟ್‌ ದರ ವಸೂಲಿ ಮಾಡುವುದು ಒಂದು ಕಡೆಯಾದರೆ, ಅಲ್ಲಿ ಮಾರಾಟ ಮಾಡುವ ಪಾಪ್‌ಕಾರ್ನ್‌, ನಾನಾ ಅನಾರೋಗ್ಯಕರ ತಂಪು ಪಾನೀಯ, ಜಂಕ್‌ಫುಡ್‌ಗಳಿಗೆ ದುಬಾರಿ ಬಿಲ್‌ ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದೇ ಇದೆ. ಫುಡ್‌ ಬೇಡವಾದರೆ ಟಿಕೆಟ್‌ ಇಲ್ಲ : ಮಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳು ಇದಕ್ಕಿಂತಲೂ ಒಂದು ಹೆಚ್ಚು ಮುಂದೆ ಹೋಗಿ, ಟಿಕೆಟ್‌ ಜತೆಗೆ ಫುಡ್‌ ಖರೀದಿ ಕಡ್ಡಾಯ ಮಾಡಿವೆ. ಟಿಕೆಟ್‌ ಮತ್ತು ಫುಡ್‌ ಸೇರಿಸಿಯೇ ಆಫರ್‌ ನೀಡುತ್ತಿದೆ. ಫುಡ್‌ ಬೇಡ ಎಂದರೆ ಟಿಕೆಟ್‌ ನೀಡೋದಿಲ್ಲ ಎಂದೂ ಕಡ್ಡಿ ಮುರಿದಂತೆ ಹೇಳುವ ಮಲ್ಟಿಪ್ಲೆಕ್ಸ್‌ ಥಿಯೇಟರ್‌ ಕುಡ್ಲದಲ್ಲಿವೆ. ಇಲ್ಲ ನಾವು ಆನ್‌ಲೈನ್‌ ಬುಕ್‌ ಮಾಡುತ್ತೇವೆ. ಆಗ ಫುಡ್‌ ಖರೀದಿಸುವ ಪ್ರಮೇಯವಿಲ್ಲ ಎಂದು ನೀವು ಬಯಸಿದರೆ ಫುಡ್‌ ಖರೀದಿಸಬೇಕಾಗಿಲ್ಲ. ಆದರೆ ಆನ್‌ಲೈನ್‌ ಬುಕ್ಕಿಂಗ್‌ಗೆ ಬೇರೆ ಬೇರೆ ನಿರ್ವಹಣೆ ಹೆಸರಲ್ಲಿ ಟಿಕೆಟೊಂದರ ಮೇಲೆ 20-30 ರೂ. ಹೆಚ್ಚುವರಿ ಚಾರ್ಜ್‌ ಮಾಡುವುದು ವಾಡಿಕೆ. ಹೇಗಾದರೂ ಮಾಡಿ ನಿಮ್ಮ ಜೇಬಿಗೆ ಕನ್ನ ಹಾಕುವುದು ಗ್ಯಾರಂಟಿ. ಹಾಗೆ ನೋಡಿದರೆ ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ಪ್ರೈಮ್‌ ಟೈಂನಲ್ಲಿ ಅವಕಾಶ ನೀಡಬೇಕು. ಆದರೆ ಆ ನಿಯಮವನ್ನು ಪಾಲಿಸುವುದಿಲ್ಲ. ಇಲ್ಲಿ ಮಲ್ಟಿಪ್ಲೆಕ್ಸ್‌ಗಳು ಹೇಳಿದ್ದೇ ಶಾಸನ. ಎಷ್ಟೋ ತುಳು ಸಿನಿಮಾಗಳ ಟಿಕೆಟ್‌ಗಳನ್ನು ಫುಡ್‌ ಖರೀದಿಸದ ಕಾರಣಕ್ಕೆ ನಿರಾಕರಿಸಿದ ಉದಾಹರಣೆಯೂ ಇದೆ. ಪಾಪ್‌ಕಾರ್ನ್‌ನಲ್ಲಿಯೇ ಲಾಭ : ಮಲ್ಟಿಪ್ಲಕ್ಸ್‌ಗಳಿಗೆ ಟಿಕೆಟ್‌ಗಿಂತ ಹೆಚ್ಚಿನ ಲಾಭವಿರೋದು ಪಾಪ್‌ಕಾರ್ನ್‌, ತಂಪುಪಾನೀಯದಂತಹ ಜಂಕ್‌ಫುಡ್‌ನಿಂದ. ಹೊರಗಿನಿಂದ ಆಹಾರ ತೆಗೆದುಕೊಂಡು ಹೋಗುವಂತೆಯೇ ಇಲ್ಲ. ಇಷ್ಟೇ ಅಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಉಚಿತವಾಗಿ ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲ. ಮಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾರ್ಕಿಂಗ್‌ ಶುಲ್ಕವನ್ನೂ ಪಾವತಿಸಬೇಕಿದೆ. ಒಟ್ಟಿನಲ್ಲಿ ಚಿತ್ರಪ್ರೇಮಿಗಳು ಸಂಕಷ್ಟ ಪಡುವಂತಾಗಿದೆ. ಪರಿಣಾಮ ಮಲ್ಟಿಪ್ಲೆಕ್ಸ್‌ಗಳಿಂದ ಸಿನಿಮಾಸಕ್ತರು ದೂರ ಸರಿಯುವುದು ಗ್ಯಾರಂಟಿ.
0
ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ ಸ್ವೀಡನ್‌ಗೆ ಸೋಲುಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲಿಷ್‌ ಪಡೆ ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ ಎಎಫ್‌ಸಿ 08 ಜುಲೈ 2018, 01:38 IST Updated: 08 ಜುಲೈ 2018, 01:46 IST ಅಕ್ಷರ ಗಾತ್ರ : ಆ ಆ ಸಮಾರ. ರಷ್ಯಾ: ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ಮುನ್ನ ಇಂಗ್ಲೆಂಡ್ ತಂಡವು ತನ್ನ ಅಭ್ಯಾಸದ ಸಂದರ್ಭದಲ್ಲಿ ಕಬಡ್ಡಿ ಆಡಿ ದೊಡ್ಡ ಸುದ್ದಿ ಮಾಡಿತ್ತು. ಕಬಡ್ಡಿ ಆಟದಲ್ಲಿ ಕಂಡು ಬರುವ ಜಿಗುಟುತನ, ದಿಟ್ಟ ಹೋರಾಟವನ್ನೇಲ್ಲ ಫುಟ್‌ಬಾಲ್‌ನಲ್ಲಿ ಬಳಸಿಕೊಂಡ ಇಂಗ್ಲಿಷ್ ಪಡೆಯು ಈಗ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ರಾತ್ರಿ ಸಮಾರ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹ್ಯಾರಿ ಮಗೈರ್ ಮತ್ತು ಡೆಲೆ ಅಲ್ಲಿ ಅವರು ಹೊಡೆದ ತಲಾ ಒಂದು ಗೋಲಿನ ನೆರವಿನಿಂದ ಇಂಗ್ಲೆಂಡ್ ತಂಡವು 2–0 ಗೋಲುಗಳಿಂದ ಸ್ವೀಡನ್‌ ತಂಡವನ್ನು ಸೋಲಿಸಿತು. ಟೂರ್ನಿಯುದ್ದಕ್ಕೂ ಮಿಂಚಿದ್ದ ಹ್ಯಾರಿ ಕೇನ್ ಈ ಪಂದ್ಯದಲ್ಲಿ ಗೋಲು ಗಳಿಸಲಿಲ್ಲ. ಸ್ವೀಡನ್ ತಂಡದ ರಕ್ಷಣಾ ಆಟಗಾರರು ಅವರನ್ನು ಕಟ್ಟಿಹಾಕಲು ಮಾಡಿದ್ದ ಯೋಜನೆಯ ಸಫಲರಾದರು. ಆದರೆ ಇದನ್ನು ಮೊದಲೇ ಊಹಿಸಿದ್ದ ಇಂಗ್ಲೆಂಡ್ ಕೋಚ್ ಗರೆತ್ ಸೌತ್‌ ಗೇಟ್ ಬೇರೆಯದೇ ತಂತ್ರ ಹೆಣೆದಿದ್ದರು. ಅದನ್ನು ಹ್ಯಾರಿ ಮಗೈರ್‌ (33ನೇ ನಿಮಿಷ) ಕಾರ್ಯಗತ ಗೊಳಿಸಿದರು. ಎದುರಾಳಿ ತಂಡದ ಆಟಗಾರರು ಹ್ಯಾರಿ ಕೇನ್ ಅವರ ಸುತ್ತುವರಿದಿದ್ದನ್ನು ಮನಗಂಡ ಮಗೈರ್‌ ಚೆಂಡನ್ನು ಗೋಲ್‌ಪೋಸ್ಟ್‌ಗೆ ಸೇರಿಸುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ಆಟಗಾರರು ಚುಟುಕು ಪಾಸ್‌ಗಳ ಮೂಲಕ ಸ್ವೀಡನ್ ತಂಡದ ಒತ್ತಡ ಹೆಚ್ಚಿಸಿದರು. ಫಿಫಾ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ  ಇಂಗ್ಲೆಂಡ್ ತಂಡದ ಸ್ಟ್ರೈಕರ್‌ಗಳು ಮತ್ತಷ್ಟು ಚುರುಕಿನಿಂದ ದಾಳಿ ನಡೆಸಿದರು. ಈ ಹಂತದಲ್ಲಿ ಒರಟು ಆಟ ಪ್ರದರ್ಶಿಸಿದ ಸ್ವೀಡನ್ ತಂಡದ ಇಬ್ಬರು ಆಟಗಾರರು ಹಳದಿ ಕಾರ್ಡ್‌ ದರ್ಶನ ಮಾಡಬೇಕಾಯಿತು. 59ನೇ ನಿಮಿಷದಲ್ಲಿ ಡೆಲೆ ಅಲಿ ಅವರು ಕಾಲ್ಚಳಕ ಮೆರೆದರು. ಮೂವರು ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್ ಕಣ್ಣು ತಪ್ಪಿಸಿದ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಇಂಗ್ಲೆಂಡ್ 2–0 ಮುನ್ನಡೆ ಸಾಧಿಸಿತು. ನಂತರದ ಅವಧಿಯಲ್ಲಿ ಸ್ವೀಡನ್ ತಂಡವು ಗೋಲು ಗಳಿಸಲು ಮಾಡಿದ ಪ್ರಯತ್ನಗಳಿಗೆ ಅಡ್ಡಗಾಲು ಹಾಕುವಲ್ಲಿಯೂ ಇಂಗ್ಲೆಂಡ್ ರಕ್ಷಣಾ ಪಡೆ ಸಫಲವಾಯಿತು. ಇಂಗ್ಲೆಂಡ್ ತಂಡದ ಗೋಲ್‌ಕೀಪರ್ ಪಿಕ್‌ಫೋರ್ಡ್‌ ಅವರ ಅಮೋಘ ಆಟವು  ಮೇಲುಗೈ ಸಾಧಿಸಿತು.  ತಮ್ಮ ಎರಡೂ ಬದಿಗೆ ಅವರು ಡೈವ್ ಮಾಡಿ ಚೆಂಡನ್ನು ಹಿಡಿತಕ್ಕೆ ಪಡೆಯುತ್ತಿದ್ದ ರೀತಿಯು ಆಕರ್ಷಕವಾಗಿತ್ತು. ಇದರಿಂದಾಗಿ ಸ್ವೀಡನ್‌ ತಂಡಕ್ಕೆ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ. ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಸ್ವೀಡನ್ ತಂಡವು ಸ್ವಿಟ್ಜರ್‌ಲೆಂಡ್ ತಂಡವನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತ್ತು. ಆದರೆ ನಾಲ್ಕರ ಘಟ್ಟಕ್ಕೆ ಹೋಗುವ ತಂಡದ ಆಸೆ ಕಮರಿತು. ಪಂದ್ಯದ ನಂತರ ತಂಡದ ಆಟಗಾರರು ಕಣ್ಣೀರು ಸುರಿಸುತ್ತ ಕುಸಿದು ಕುಳಿತರು. ಸ್ವೀಡನ್‌ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ ಬಗೆ -ರಾಯಿಟರ್ಸ್‌ ಚಿತ್ರ
2
| Updated: Wednesday, August 23, 2017, 10:13 [IST] ಹಸಿರು ಬೀನ್ಸ್ ಕಾಳುಗಳಲ್ಲಿ ಹಲವು ಪೋಷಕಾಂಶಗಳು ಸಾಂದ್ರೀಕೃತ ಸ್ಥಿತಿಯಲ್ಲಿದ್ದು ದೇಹದ ಹಲವು ಅಗತ್ಯತೆಗಳನ್ನು ಪೂರೈಸುತ್ತವೆ. ವಿಶೇಷವಾಗಿ ಕ್ಯಾರೋಟಿಯಾಯ್ಡುಗಳು ಆಂಟಿ ಆಕ್ಸಿಡೆಂಟುಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತವೆ. ಇಂದು ನಾವು ನಾರಿಲ್ಲದ ಹುರುಳಿಕಾಯಿ (String beans) ನ ಬೀಜಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ. ಈ ಬೀಜಗಳಲ್ಲಿ ಮೂರು ವಿಧದ ಕ್ಯಾರೋಟಿನಾಯ್ಡುಗಳು-ಅಂದರೆ ಬೀಟಾ ಕ್ಯಾರೋಟಿನ್, ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಹೆಚ್ಚಿನ ಪ್ರಮಾಣದಲ್ಲಿವೆ. ಜೀರ್ಣಕ್ರಿಯೆಯಲ್ಲಿ ಬೀಟ್ಯಾ ಕ್ಯಾರೋಟಿನ್ ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ. ಎದೆ ಹಾಲುಣಿಸುವ ತಾಯಿ 'ಬೀನ್ಸ್' ಸೇವಿಸಬಹುದೇ? ಇದು ನಮ್ಮ ಸಾಮಾನ್ಯ ಇರುಳಿನ ದೃಷ್ಟಿಗೆ ಅತ್ಯಂತ ಅಗತ್ಯವಾಗಿದೆ. ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಪ್ರಖರ ನೀಲಿ ಕಿರಣಗಳಿಂದ ನಮ್ಮ ಕಣ್ಣುಗಳನ್ನು ರಕ್ಷಿಸುತ್ತವೆ. ಕ್ಯಾರೋಟಿನಾಯ್ಡುಗಳನ್ನು ಸೇವಿಸುವ ಮೂಲಕ ನಿತ್ಯದ ಅಗತ್ಯದ ವಿಟಮಿನ್ ಎ ಲಭಿಸುವ ಕಾರಣ ಇದನ್ನು ನಿತ್ಯವೂ ಸೇವಿಸಲು ಸಲಹೆ ಮಾಡಲಾಗುತ್ತದೆ. ಅಂದರೆ ನಿತ್ಯವೂ ಒಂದು ಕಪ್ ನಷ್ಟು ಹುರುಳಿಕಾಯಿಯ ಬೀಜಗಳನ್ನು ಸೇವಿಸುವ ಮೂಲಕ ದೈನಂದಿನ ಅಗತ್ಯದ ವಿಟಮಿನ್ ಎ ನ ಸುಮಾರು 29% ರಷ್ಟು ಪ್ರಮಾಣ ದೊರಕುತ್ತದೆ. ಹಚ್ಚ ಹಸಿರು ಬೀನ್ಸ್‌ನಲ್ಲಿ ಅಡಗಿದೆ ತೂಕ ಇಳಿಸುವ ರಹಸ್ಯ! ಈ ಬೀಜಗಳಲ್ಲಿ ಸಂಕೀರ್ಣ ನಾರುಗಳು, ವಿವಿಧ ವಿಟಮಿನ್ನುಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲವೇ ಇಲ್ಲದ ಕಾರಣ ಎಲ್ಲಾ ವಯಸ್ಸಿನವರಿಗೆ ಸೂಕ್ತವಾದ ಆಹಾರವಾಗಿದೆ. ಇಂದಿನ ಲೇಖನದಲ್ಲಿ ಈ ಬೀಜಗಳನ್ನು ನಿತ್ಯವೂ ಸೇವಿಸುವ ಮೂಲಕ ದೇಹ ಪಡೆಯುವ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ... ದೃಢವಾದ ಮೂಳೆಗಳಿಗಾಗಿ ವಿಟಮಿನ್ ಕೆ ನಮ್ಮ ಆಹಾರದಲ್ಲಿ ಎಷ್ಟು ಕ್ಯಾಲ್ಸಿಯಂ ಇದ್ದರೂ ಇದನ್ನು ಮೂಳೆಗಳು ನೇರವಾಗಿ ಹೀರಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಇದನ್ನು ಹೀರಿಕೊಳ್ಳಲು ಸಾಧ್ಯವಾಗಿಸಲು ಕೆಲವು ಪ್ರೋಟೀನುಗಳ ಅಗತ್ಯವಿದ್ದು ಈ ಅಗತ್ಯತೆಯನ್ನು ವಿಟಮಿನ್ ಕೆ ಪೂರೈಸುತ್ತದೆ. ಅಲ್ಲದೇ ವಿಟಮಿನ್ ಕೆ ಮೂಳೆಗಳ ಜೀವರಾಸಾಯನಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಹಾಗೂ ಮೂಳೆಗಳಿಂದ ಖನಿಜಗಳು ನಷ್ಟಗೊಳ್ಳುವುದನ್ನು ತಡೆಯುತ್ತದೆ. ಪ್ರತಿದಿನ ಒಂದು ಕಪ್ ಹಸಿರು ಬೀನ್ಸ್ ಬೀಜ ಸೇವಿಸುವ ಮೂಲಕ ಇಪ್ಪತ್ತು ಮೈಕ್ರೋಗ್ರಾಂ ವಿಟಮಿನ್ ಪಡೆಯಬಹುದು. ವಿಟಮಿನ್ ಸಿ ದೇಹವನ್ನು ಹೇಗೋ ಪ್ರವೇಶಿಸಿ ಜೀವಕೋಶಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ವಿಟಮಿನ್ ಸಿ ನಿಷ್ಕ್ರಿಯಗೊಳಿಸುತ್ತದೆ. ಅಲ್ಲದೇ ವಿಟಮಿನ್ ಸಿ ಪ್ರೋಟೀನುಗಳು, ಕಾರ್ಬೋಹೈಡ್ರೇಟುಗಳು ಮತ್ತು ಡಿ ಎನ್ ಎ ಗಳನ್ನು ಈ ಫ್ರೀ ರ್‍ಯಾಡಿಕಲ್ ಗಳ ಧಾಳಿಯಿಂದ ರಕ್ಷಿಸುತ್ತದೆ. ಹಸಿರು ಬೀನ್ಸ್ ಸೇವನೆಯ ಇದು ಅತ್ಯುತ್ತಮ ಪ್ರಯೋಜನವಾಗಿದೆ. ಕಡಿಮೆ ಕ್ಯಾಲೋರಿಗಳು ತಾಜಾ ಹಸಿರು ಬೀನ್ಸ್ ಗಳು ಅತಿ ಅಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಅತ್ಯಂತ ಸೂಕ್ತವಾದ ಆಹಾರವಾಗಿದೆ. ಹೆಚ್ಚಿನ ಪ್ರಮಾಣದ ನಾರು ಈ ಕಾಳುಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಕರಗುವ ನಾರು ಇದ್ದು ಜೀರ್ಣಕ್ರಿಯೆಯಲ್ಲಿ ತೊಂದರೆ ಇರುವ ವ್ಯಕ್ತಿಗಳಿಗೂ ಸೂಕ್ತವಾಗಿದೆ. ಇದರ ನಾರು ಮಲಬದ್ಧತೆಯಾಗದಂತೆ ತಡೆಯುತ್ತದೆ ಹಾಗೂ ಮೂಲವ್ಯಾಧಿ ಹಾಗೂ ಕರುಳುಗಳ ಒಳಗಣ ಗಂಟುಗಳ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಿಗೂ ಸುರಕ್ಷಿತವಾಗಿ ಸೇವಿಸಬಹುದಾದ ಆಹಾರವಾಗಿದೆ. ಫೋಲೇಟುಗಳು ಜೀವಕೋಶಗಳ ಭಾಗವಾಗುವಿಕೆ ಹಾಗೂ ಡಿ ಎನ್ ಎ ಗಳ ಸಂಶ್ಲೇಷಣೆ ಗೆ ಫೋಲೇಟುಗಳು ತುಂಬಾ ಅಗತ್ಯವಾಗಿವೆ. ವಿಶೇಷವಾಗಿ ಗರ್ಭಧರಿಸಬಯಸುವ ಮಹಿಳೆಯರು ಹಾಗೂ ಪ್ರಥಮ ತ್ರೈಮಾಸಿಕ ಅವಧಿಯಲ್ಲಿರುವ ಗರ್ಭಿಣಿಯರಿಗೆ ಈ ಫೋಲೇಟುಗಳು ಇತರರಿಗಿಂತ ಹೆಚ್ಚು ಅಗತ್ಯವಿವೆ. ಸೋಂಕುಗಳಿಂದ ರಕ್ಷಿಸುತ್ತದೆ ಹಸಿರು ಬೀಜಗಳಲ್ಲಿ ಇತರ ವಿಟಮಿನ್ನುಗಳಾದ ನಿಯಾಸಿನ್ ಹಾಗೂ ಥೈಯಾಮಿನ್ ಗಳೂ ಉತ್ತಮ ಪ್ರಮಾಣದಲ್ಲಿದ್ದು ಇವು ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. ಜೀವಕೋಶಗಳಲ್ಲಿ ಹಾಗೂ ಇಡಿಯ ದೇಹದಲ್ಲಿ ನೀರನ್ನು ಹಿಡಿದಿಡುತ್ತದೆ ಹಸಿರು ಬೀಜಗಳಲ್ಲಿರುವ ಪೊಟ್ಯಾಷಿಯಂ ಜೀವಕೋಶಗಳ ಇಬ್ಭಾಗವಾಗುವಿಕೆಯಲ್ಲಿ ನೆರವಾಗುವ ಜೊತೆಗೇ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಹಾಗೂ ಹರಿವು ಸುಲಲಿತವಾಗಿರುವಂತೆ ನೋಡಿಕೊಳ್ಳುತ್ತದೆ. ವಿಟಮಿನ್ ಎ ಪರಿಣಾಮಗಳು ಹಸಿರು ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ಹಲವು ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುವಲ್ಲಿ ನೆರವಾಗುತ್ತದೆ. ಇವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿ ವೃದ್ಧಾಪ್ಯವನ್ನು ದೂರವಿಡುತ್ತದೆ. ಹಸಿರು ಬೀನ್ಸ್ ತಿನ್ನುವ ಮೂಲಕ ನಾವು ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಅತಿ ಮುಖ್ಯವಾಗಿದೆ.
1
ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದ್ದ ‘ಪದ್ಮಾವತ್’ ಹೆಸರಲ್ಲಿವೆ ಈ ಮೂರು ದಾಖಲೆಗಳು…!   26-01-2019 7:15PM IST    /     No Comments    /     Posted In: Latest News , Entertainment ನವ ವಿವಾಹಿತ ತಾರಾದಂಪತಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತ್ ಚಿತ್ರ ಗಲ್ಲಾಪೆಟ್ಟಿಗೆಯನ್ನು ಭರ್ಜರಿ ಕೊಳ್ಳೆ ಹೊಡೆದದ್ದಲ್ಲದೆ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದೆ. ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆಯಾಗಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹು ವಿವಾದಿತ ಪದ್ಮಾವತ್ ಚಿತ್ರ ಬಿಡುಗಡೆಗೆ ಮುಂಚೆಯೇ ಭಾರೀ ಸದ್ದು ಮಾಡಿತ್ತು. ರಜಪೂತ ರಾಣಿ ಪದ್ಮಾವತಿ ಬದುಕಿನ ಕಥಾಹಂದರವನ್ನೊಳಗೊಂಡ ಚಿತ್ರದ ಬಗ್ಗೆ ಎಡ-ಬಲ-ಮಧ್ಯಮ ಪಂಥಗಳ ಚಿಂತಕರು ಬಿಸಿ ಬಿಸಿ ಚರ್ಚೆ ನಡೆಸಿದ್ದರು. ಈ ಚಿತ್ರ ಬಿಡುಗಡೆಯೇ ಆಗಬಾರದೆಂದು ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಬಿಡುಗಡೆಯಾದ ಬಳಿಕ ಈ ಚಿತ್ರ ಬಾಕ್ಸಾಫೀಸ್ ನಲ್ಲಿ  ಮೂರು ದಾಖಲೆಗಳನ್ನು ಬರೆದಿದೆ. ಆ ಮೂರು ದಾಖಲೆಗಳಿವು. 1. ಗಣರಾಜ್ಯೋತ್ಸವದಂದು ಬಿಡುಗಡೆಯಾದ ಚಿತ್ರಗಳಲ್ಲಿ ಗಣರಾಜ್ಯೋತ್ಸವದ ದಿನ ಅತ್ಯಂತ ಹೆಚ್ಚು ಗಳಿಕೆ- 24 ಕೋಟಿ ರೂ. 2. ಗಣರಾಜ್ಯೋತ್ಸವದಂದು ಬಿಡುಗಡೆಯಾದ ಚಿತ್ರಗಳಲ್ಲಿ ಮೊದಲ ವಾರ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರ-114 ಕೋಟಿ ರೂ. 3. ಗಣರಾಜ್ಯೋತ್ಸವದಂದು ಬಿಡುಗಡೆಯಾದ ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರ- 302 ಕೋಟಿ ರೂ.
0
Bengaluru, First Published 18, Sep 2018, 3:54 PM IST Highlights ಅಲಿಯಾ ಭಟ್ ತಾಯಿ ಸೋನಿಯಾ ರಾಜ್ದಾನ್ ಅವರಿಬ್ಬರ ಸಂಬಂಧದ ಕುರಿತಾಗಿ ಮಾತನಾಡುತ್ತಾ ರಣಬೀರ್ ಕಪೂರ್ ನನ್ನು ಬಹಳ ಮೆಚ್ಚಿಕೊಂಡಿದ್ದಾರೆ.  ಚಿತ್ರರಂಗದಲ್ಲಿ ಗಾಸಿಪ್ಪುಗಳು ಆಗಾಗ ಹುಟ್ಟಿಕೊಳ್ಳುತ್ತವೆ. ಕೆಲವು ಸ್ಟ್ರಾಂಗು ಆಗುತ್ತವೆ. ಮತ್ತೆ ಕೆಲವು ಅಲ್ಲಲ್ಲೇ ಬಿದ್ದು ಹೋಗುತ್ತವೆ. ಆದರೆ ಈಗೀಗ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಸಂಬಂಧದ ಕುರಿತಂತೆ ಹಬ್ಬಿರುವ ಗಾಸಿಪ್ಪು ನಿಜವಾಗುವ ಲಕ್ಷಣ ಗೋಚರಿಸುತ್ತಿದೆ. ಸದ್ಯಕ್ಕೆ ಅಯನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣಕ್ಕಾಗಿ ರಣಬೀರ್, ಅಲಿಯಾ ಇಬ್ಬರೂ ಬೆಲ್‌ಗ್ರೇಡ್‌ನಲ್ಲಿದ್ದಾರೆ. ಸಂದರ್ಭ ಹೀಗಿರುವಾಗ ಮಬ್ಬು ಕವಿದ ಕಂಜೆಯಲ್ಲಿ ಅಯನ್, ರಣಬೀರ್, ಅಲಿಯಾ ಜೊತೆಯಾಗಿ ಒಂದು ಫೋಟೋ ತೆಗೆದು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇ ತಡ ಅಭಿಮಾನಿಗಳೆಲ್ಲಾ ಖುಷ್. ಅದಕ್ಕೆ ತಕ್ಕಂತೆ ಅಲಿಯಾ ಭಟ್ ತಾಯಿ ಸೋನಿಯಾ ರಾಜ್ದಾನ್ ಅವರಿಬ್ಬರ ಸಂಬಂಧದ ಕುರಿತಾಗಿ ಮಾತನಾಡುತ್ತಾ ರಣಬೀರ್ ಕಪೂರ್‌ನನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಲವ್ಲೀ ಲವ್ಲೀ ಬಾಯ್ ರಣಬೀರ್ ಎಂದು ಕರೆದಿದ್ದಾರೆ. ಇತ್ತೀಚೆಗೆ ರಿಶಿ ಕಪೂರ್ ನಮ್ಮ ಕುಟುಂಬಕ್ಕೆ ಅಲಿಯಾ ಅಂದ್ರೆ ಇಷ್ಟ ಎಂದಿದ್ದರು. ಹಾಗಾಗಿ ಬಾಲಿವುಡ್ ಪ್ರಖ್ಯಾತ ನಟ, ನಟಿ ಜೋಡಿಯಾಗುವ ಕಾಲ ಬಹುಶಃ ದೂರವಿಲ್ಲ Last Updated 19, Sep 2018, 9:29 AM IST
0
Bangalore, First Published 17, Jun 2019, 8:36 AM IST Highlights ಅಪ್ಪಂದಿರ ದಿನದಂದು ನಟ ವರುಣ್‌ ಧವನ್‌ಗೆ ತಂದೆ ಕಪಾಳಮೋಕ್ಷ!| ವೈರಲ್ ವಿಡಿಯೋ ಮುಂಬೈ[ಜೂ.17]: ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಬಾಲಿವುಡ್‌ನ ಬಹುಬೇಡಿಕೆಯ ನಟರ ಪೈಕಿ ಒಬ್ಬರಾದ ವರುಣ್‌ ಧವನ್‌ ಅವರು ತಮ್ಮ ತಂದೆ ಕುರಿತಾದ ತಮಾಷೆಯ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವರುಣ್‌ ಧವನ್‌ ಅವರಿಗೆ ಅವರ ತಂದೆ ಡೇವಿಡ್‌ ಧವನ್‌ ಅವರು ತಮಾಷೆಯಾಗಿ 2 ಬಾರಿ ಕಪಾಳಕ್ಕೆ ತಟ್ಟುತ್ತಾರೆ.
0
ಶುಕ್ರವಾರ ತೆರೆಕಾಣುತ್ತಿರುವ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತಿರುವ ಸಿನಿಮಾಗಳು ಪ್ರಜಾವಾಣಿ ವಾರ್ತೆ Published: 21 ಡಿಸೆಂಬರ್ 2018, 01:09 IST Updated: 21 ಡಿಸೆಂಬರ್ 2018, 01:09 IST ಅಕ್ಷರ ಗಾತ್ರ : ಆ ಮಾರಿ–2 (ತಮಿಳು) ಹಲವು ತಿಂಗಳು ಬ್ರೇಕ್ ತೆಗೆದುಕೊಂಡಿದ್ದ ನಟ ಧನುಷ್ ಮಾರಿ–2 ಮೂಲಕ ಮೋಡಿ ಮಾಡಲು ತೆರೆಗೆ ಬರುತ್ತಿದ್ದಾರೆ. ಧನುಷ್ ಅಭಿನಯದ ಮಾರಿ ಸಿನಿಮಾವು ಹೊಸ ಕ್ರೇಜ್ ಹುಟ್ಟುಹಾಕಿತ್ತು. ಧನುಷ್‌ಗೆ ಜೋಡಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಬಾಲಾಜಿ ನಿರ್ದೇಶನದ ಈ ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ಟೊವಿನೊ ಥಾಮಸ್ ಸಹ ಬಣ್ಣ ಹಚ್ಚಿದ್ದಾರೆ. ಅಂತರಿಕ್ಷಂ 9000ಕೆಎಂಪಿಎಚ್ (ತೆಲುಗು) ‘ಅಂತರಿಕ್ಷಂ 9000ಕೆಎಂಪಿಎಚ್’ ಬಾಹ್ಯಕಾಶದ ಥ್ರಿಲ್ಲರ್ ಕಥೆಯ ಸಿನಿಮಾ. ಆಂಧ್ರಪ್ರದೇಶದ ನೆಲ್ಲೂರು ಬಳಿಯ ಶ್ರೀಹರಿಕೋಟ ಬಾಹ್ಯಕಾಶ ಕೇಂದ್ರದಲ್ಲಿ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದ್ದು, ನಾಯಕ ನಟನಾಗಿ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿಯಾದ ವರುಣ್ ತೇಜ್ ಕಾಣಿಸಿಕೊಂಡಿದ್ದಾರೆ. ವರುಣ್‌ ಜೊತೆ ಅದಿತಿ ರಾವ್ ಹೈದರಿ, ಲಾವಣ್ಯ ತ್ರಿಪಾಟಿ ಬಣ್ಣ ಹಚ್ಚಿದ್ದಾರೆ. ಸಂಕಲ್ ಪಿ. ರೆಡ್ಡಿ ನಿರ್ದೇಶನದ ಈ ಸಿನಿಮಾವನ್ನು ಫರ್ಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ಸ್ ಕಂಪನಿ ನಿರ್ಮಿಸಿದೆ. ಪಡಿ ಪಡಿ ಲೇಚೇ ಮನಸು (ತೆಲುಗು) ಹನು ರಾಘವಪುಡಿ ನಿರ್ದೇಶನದ ಈ ಸಿನಿಮಾ ರೋಮ್ಯಾಂಟಿಕ್ ಕಥಾಹಂದರದಿಂದ ಕೂಡಿದೆ. ಟಾಲಿವುಡ್‌ನ ಕ್ಯೂಟ್ ಗರ್ಲ್ ಸಾಯಿಪಲ್ಲವಿ ನಟ ಶ್ರಾವಂದ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದ ಆಡಿಯೊ ಲಾಂಚ್ ಕಾರ್ಯಕ್ರಮದಲ್ಲಿ ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲುಅರ್ಜುನ್ ಪಾಲ್ಗೊಂಡು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಡಂಗ ಮರು (ತಮಿಳು) ಈ ಸಿನಿಮಾ 2016ರಲ್ಲಿ ತೆರೆಕಂಡ ತನಿ ಒರುವನ್ ಸಿನಿಮಾದ ಮುಂದುವರೆದ ಭಾಗ. ಕಾರ್ತಿಕ್ ತಂಗವೇಲು ನಿರ್ದೇಶನದ ಈ ಸಿನಿಮಾದಲ್ಲಿ ನಟ ಜಯಂ ರವಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಮುಖ್ಯಭೂಮಿಕೆಯಲ್ಲಿ ರಾಶಿ ಖನ್ನಾ ಹಾಗೂ ಸಂಪತ್ ರಾಜ್ ಇದ್ದಾರೆ. ಕನಾ (ತಮಿಳು) ಬಾಲಕಿಯೊಬ್ಬಳ ಕ್ರಿಕೆಟ್ ಆಸಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡು ಅರುಣ್ ರಾಜ ಕಾಮರಾಜ ಅವರು ಸುಂದರವಾಗಿ ಕಥೆ ಎಣೆದು ನಿರ್ದೇಶಿಸಿರುವ ಸಿನಿಮಾವಿದು. ಐಶ್ವರ್ಯಾ ರಾಜ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಆಕೆಯ ತಂದೆ ಪಾತ್ರದಲ್ಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಕಾಣಿಸಿಕೊಂಡಿದ್ದಾರೆ. 0 Post Comments (+)
0
ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ ಪಿಟಿಐ 21 ಡಿಸೆಂಬರ್ 2018, 01:12 IST Updated: 21 ಡಿಸೆಂಬರ್ 2018, 01:12 IST ಅಕ್ಷರ ಗಾತ್ರ : ಆ ಆ ಪಂಚಕುಲಾ: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ದಬಂಗ್‌ ಡೆಲ್ಲಿ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡಗಳು 37–37ರಿಂದ ಡ್ರಾ ಸಾಧಿಸಿದವು. ಗುರುವಾರ ರಾತ್ರಿ ಇಲ್ಲಿನ ತವು ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಉಭಯ ತಂಡಗಳು ಆರಂಭದಿಂದಲೇ ಸಮಬಲದ ಪೈಪೋಟಿ ನಡೆಸಿದ್ದವು. ದೀಪಕ್ ಹೂಡಾ ಎಂಟು ಪಾಯಿಂಟ್ ಗಳಿಸಿ ಜೈಪುರ ತಂಡದಲ್ಲಿ ಮಿಂಚಿದರು. ಡೆಲ್ಲಿ ಪರ ಚಂದ್ರನ್‌ ರಂಜಿತ್‌ ಸೂಪರ್ ಟೆನ್‌ (11 ಪಾಯಿಂಟ್‌) ಮೂಲಕ ಗಮನ ಸೆಳೆದರು. ಅವರಿಗೆ ಉತ್ತಮ ಸಹಕಾರ ನೀಡಿದ ಪವನ್ ಕಡಿಯಾನ್ (ಒಂಬತ್ತು ಪಾಯಿಂಟ್‌) ಕೂಡ ಪ್ರೇಕ್ಷಕರ ಮನಸೂರೆಗೈದರು. ಸೆಲ್ವಮಣಿ ಒಂದೇ ರೇಡ್‌ನಲ್ಲಿ ನಾಲ್ಕು ಪಾಯಿಂಟ್ ಗಳಿಸಿದ್ದು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟಿತು. ಸಂದೀಪ್ ಧುಳ್‌ ಆರು ಟ್ಯಾಕಲ್ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಆರಂಭದಲ್ಲಿ ದಬಂಗ್ ಡೆಲ್ಲಿ 5–0ಯಿಂದ ಮುನ್ನಡೆದಿತ್ತು. ಐದನೇ ನಿಮಿಷದಲ್ಲಿ ಸೂಪರ್‌ ಟ್ಯಾಕಲ್ ಮೂಲಕ ಜೈಪುರ ತಂಡದವರು ಪಾಯಿಂಟ್ ಗಳಿಸಲು ಆರಂಭಿಸಿದರು. ನಂತರ ಪಂದ್ಯ ಪ್ರತಿ ಕ್ಷಣವೂ ರೋಚಕವಾಗುತ್ತ ಸಾಗಿತು.
2
ವೈದ್ಯರಿಗೊಂದು ಸಲಾಮ್ ವೈದ್ಯರಿಗೊಂದು ಸಲಾಮ್ Jul 01, 2016 11:58:26 AM (IST) ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜಯಂತಿಯಾದ ಜುಲೈ 1ನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಸದಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿ ಆರೋಗ್ಯ ಸೇವೆ ಮಾಡುವ ವೈದ್ಯರಿಗೆ ಸಲಾಂ ಎನ್ನಲೇ ಬೇಕು. ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವೈದ್ಯರ ಕರ್ತವ್ಯಕ್ಕೆ ಚ್ಯುತಿ ತರುತ್ತಿವೆ ಎನ್ನುವ ಮಾತುಗಳೂ ಇವೆ. ಮತ್ತೊಂದೆಡೆ ವೈದ್ಯರು ಭಯದ ವಾತಾವರಣದಲ್ಲಿ ಕೆಲಸ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ. ವೈದ್ಯ ವೃತ್ತಿ ಎನ್ನುವುದು ಪವಿತ್ರವಾದ ವೃತ್ತಿ. ಅದಕ್ಕೆ ತನ್ನದೇ ಆದ ಗೌರವ, ಜವಬ್ದಾರಿ ಎಲ್ಲವೂ ಇದೆ. ವೈದ್ಯರು ಒಂದು ಕ್ಷಣ ಎಚ್ಚರ ತಪ್ಪಿದರೂ ಅದರಿಂದ ಭಾರೀ ಅನಾಹುತ ಸಂಭವಿಸಿ ಬಿಡುತ್ತದೆ. ಹೀಗಾಗಿ ಪವಿತ್ರ ವೃತ್ತಿಯಾಗಿರುವ ವೈದ್ಯ ವೃತ್ತಿಯನ್ನು ಮಾಡುವ ಎಲ್ಲಾ ವೈದ್ಯರು ಒಂದೆಡೆ ಕಲೆತು  ವೈದ್ಯರ ದಿನಾಚರಣೆ ಸಂದರ್ಭ ಮನನ ಮಾಡಿಕೊಳ್ಳಲೊಂದು ಅವಕಾಶ ದೊರೆತಂತಾಗಿದೆ.  ಹಾಗೆನೋಡಿದರೆ ವೈದ್ಯರ ದಿನಾಚರಣೆಯನ್ನು ಭಾರತದಲ್ಲಿ ಜುಲೈ 1ರಂದು ಆಚರಿಸಿದರೆ, ಅಮೆರಿಕದಲ್ಲಿ ಮಾರ್ಚ್ 30ರಂದು ವೈದ್ಯ ದಿನಾಚರಣೆಯನ್ನು ಆಚರಿಸುತ್ತಾರೆ. ಏಕೆಂದರೆ ಮಾರ್ಚ್ 30, 1842 ರಂದು ಡಾ.ಕ್ರಾಫರ್ಡ್ ಡಬ್ಲ್ಯು ಲಾಂಗ್ ಎನ್ನುವವರು ಮೊದಲ ಬಾರಿಗೆ ಅರಿವಳಿಕೆಯನ್ನು (ಅನೆಸ್ತೀಸಿಯ) ಪರಿಣಾಮಕಾರಿಯಾಗಿ ಬಳಸಿ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಿದರಂತೆ. ಈ ಮಹತ್ವದ ದಿನವನ್ನು ಅವರು ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ.  ಅಂದು ಅಲ್ಲಿ ರೋಗಿಗಳು ಮತ್ತು ಸಾರ್ವಜನಿಕರು ವೈದ್ಯರಿಗೆ ಕೆಂಪು ಗುಲಾಬಿ ಹೂವು ನೀಡಿ ಶುಭಾಶಯ ಹೇಳುತ್ತಾರಂತೆ. ಕಾರಣ ಕೆಂಪು ಗುಲಾಬಿ ಪ್ರೀತಿ, ತ್ಯಾಗ, ಧೈರ್ಯ, ಸಾಹಸ ಹಾಗೂ ಸೇವೆಯ ಪ್ರತೀಕವಂತೆ. ಭಾರತದಲ್ಲಿ ಜುಲೈ1ನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವುದರ ಹಿಂದೆ ಹಲವು ಮಹತ್ವದ ವಿಚಾರಗಳಿವೆ. ಅದು ಮೇಲ್ನೋಟಕ್ಕೆ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮದಿನವಾದರೂ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಡಾ.ಬಿದನ್ ಚಂದ್ರ ರಾಯ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರೂ ಹೌದು. ಅವರು ಲಂಡನ್ ನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿಗಳೆರಡನ್ನೂ ಪಡೆದ ತಜ್ಞವೈದ್ಯ, ಶಸ್ತ್ರಚಿಕಿತ್ಸಕರಾಗಿದ್ದದ್ದು ಮತ್ತೊಂದು ವಿಶೇಷ. ಇವರು ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರೊಂದಿಗೆ  ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯೊಂದಿಗೆ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು ಎಂದರೆ ಅವರ ಸೇವಾ ಮನೋಭಾವನೆ ಹೇಗಿದ್ದಿರಬಹುದೆಂಬುದು ಅರ್ಥವಾಗಿ ಬಿಡುತ್ತದೆ. ಇಂತಹ ಮಹಾನ್ ವ್ಯಕ್ತಿ ಜುಲೈ 1, 1882ರಲ್ಲಿ ಜನಿಸಿ ಜುಲೈ 1, 1962ರಂದು ವಿಧಿವಶರಾದರು. ಆದರೆ ಅವರು ಜುಲೈ 1ರಂದು ಜನಿಸಿ, ಜುಲೈ 1ರಂದೇ ಇಹಲೋಕ ತ್ಯಜಿಸಿದ್ದು ವಿಶೇಷ. ಅವರ ನೆನಪು ಚಿರವಾಗಿರಲೆಂದೇ ವೈದ್ಯರ ದಿನಾಚರಣೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇವತ್ತು ವೈದ್ಯಲೋಕ ಅಗಾಧವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುವ ಆರೋಗ್ಯ ಕೇಂದ್ರದಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ, ಹೈಟೆಕ್ ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ವೈದ್ಯಕೀಯ ಕಾಲೇಜುಗಳು ಪ್ರತಿವರ್ಷ ಲಕ್ಷಾಂತರ ವೈದ್ಯರನ್ನು ತಯಾರು ಮಾಡಿ ಕಳುಹಿಸುತ್ತಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರ ವಿಶಾಲವಾಗುತ್ತಿದೆ.  ಮತ್ತೊಂದೆಡೆ ಹಣ ಮಾಡುವ ದಂಧೆಯಾಗಿಯೂ ಬದಲಾಗುತ್ತಿದೆ ಎಂದರೆ ತಪ್ಪಾಗಲಾರದು. ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗುತ್ತಿದೆ. ಇದರ ನಡುವೆ ಬಡವರ ಸೇವೆ ಮಾಡುತ್ತಾ ತಮ್ಮ ವೃತ್ತಿಧರ್ಮ ಪಾಲಿಸುತ್ತಿರುವ ವೈದ್ಯರೂ ಇಲ್ಲದಿಲ್ಲ. ಬಡ, ಅನಾಥ, ವೃದ್ಧಾಶ್ರಮಗಳಿಗೆ ತೆರಳಿ ಚಿಕಿತ್ಸೆ ನೀಡುವವರು ಒಂದು ಕಡೆಯಾದರೆ, ಮತ್ತೊಂದೆಡೆ ರೋಗಿಗಳಿಗೆ ಹೊರೆಯಾಗದಂತೆ ಆರೋಗ್ಯ ಸೇವೆ ನೀಡುವ ವೈದ್ಯರೂ ಇದ್ದಾರೆ. ಇಂತಹ ವೈದ್ಯರಿಗೆ ಪ್ರತಿಯೊಬ್ಬರೂ ಕೃತಜ್ಞತೆಯನ್ನು ಸಲ್ಲಿಸಲೇ ಬೇಕು. ಡಾ.ನಾ.ಸೋಮೇಶ್ವರ್ ಹೇಳುವಂತೆ ವೈದ್ಯಕೀಯ ಒಂದು ವೃತ್ತಿಯಲ್ಲ, ಅದು ಅರಿವು, ಮಾನವೀಯತೆ, ಶ್ರದ್ಧೆ ಹಾಗೂ ಸೇವಾಮನೋಭಾವ ಮೇಳೈಸಿರುವ ಸೇವೆ. ವೈದ್ಯನಾದವನಿಗೆ ಹದ್ದಿನ ಕಣ್ಣುಗಳು, ಸಿಂಹದ ಹೃದಯ ಹಾಗೂ ಹೆಣ್ಣಿನ ಕೋಮಲ ಕರಗಳಿರಬೇಕಾಗುತ್ತದೆ. ಆಗ ಮಾತ್ರ ಅವನು ವೃತ್ತಿಗೆ ನ್ಯಾಯವನ್ನು ಒದಗಿಸಬಲ್ಲನು. ವೈದ್ಯನು ಸದಾ ಜಾಗೃತನಾಗಿರಬೇಕು. ಅವನು ಮಾಡಬಹುದಾದ ಒಂದು ಸಣ್ಣ ತಪ್ಪು ಒಂದು ಜೀವಕ್ಕೆ (ತನ್ಮೂಲಕ ಒಂದು ಕುಟುಂಬಕ್ಕೆ) ಎರವಾಗಬಹುದು. ಹಾಗಾಗಿ ಪ್ರತಿ ಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕಾಗುತ್ತದೆ. ವೈದ್ಯನು ಸದಾ ಒತ್ತಡದಲ್ಲಿರುವುದು ಅನಿವಾರ್ಯ. ವೈದ್ಯನು ತಾನು ಎಷ್ಟೇ ಒತ್ತಡದಲ್ಲಿರಲಿ, ಅದನ್ನು ತೋರಿಸಿಕೊಳ್ಳುವ ಹಾಗಿಲ್ಲ. ರೋಗಿಗೆ ಚಿಕಿತ್ಸೆಯನ್ನು ಹಾಗೂ ನೋವಿನಲ್ಲಿ ಪಾಲ್ಗೊಂಡು ಸಾಂತ್ವಾನವನ್ನು ನೀಡಬೇಕಾಗುತ್ತದೆ. ವೈದ್ಯ ದಿನಾಚರಣೆಯಂದು  ವೈದ್ಯರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಅರಿತುಕೊಳ್ಳಬೇಕು. ಸೇವೆಯ ಪ್ರತಿಜ್ಞೆಯನ್ನು ಸ್ವೀಕರಿಸಿರುವುದನ್ನು ನೆನಪಿಸಿಕೊಂಡು ವೃತ್ತಿಗೆ ನ್ಯಾಯವನ್ನು ಒದಗಿಸಬೇಕು. ಇಂದು ವೈದ್ಯಕೀಯ ವೃತ್ತಿ ಕವಲುಹಾದಿಯಲ್ಲಿ ನಿಂತಿದ್ದು, ಸೇವೆಯಾಗಿ ಉಳಿಯದೇ ಉದ್ಯಮವಾಗಿದೆ. ಆದರೆ ಆ ವೃತ್ತಿಗೆ ಅಂದು-ಇಂದು-ಮುಂದು ತನ್ನದೇ ಗೌರವ ಇದ್ದೇ ಇರುತ್ತೆ ಅದನ್ನು ಮನಗಂಡು ವೈದ್ಯರು ಕಾರ್ಯನಿರ್ವಹಿಸಬೇಕು ಹಾಗಾದಲ್ಲಿ ವೈದ್ಯೋ ನಾರಾಯಣೋ ಹರಿಃ ಮಾತಿಗೆ ಅರ್ಥಬರುತ್ತದೆ. ಮನರಂಜನೆ
1
ಮೆಸ್ಸಿ, ರೋಜೊ ಮತ್ತು 90 ನಿಮಿಷಗಳು.. ಪುಟಿದೆದ್ದ ಲಯೋನೆಲ್; ಪ್ರೀಕ್ವಾರ್ಟರ್‌ಫೈನಲ್‌ಗೆ ಅರ್ಜೆಂಟೀನಾ ಮೆಸ್ಸಿ, ರೋಜೊ ಮತ್ತು 90 ನಿಮಿಷಗಳು.. ಪ್ರಜಾವಾಣಿ ವಾರ್ತೆ Published: 27 ಜೂನ್ 2018, 18:39 IST Updated: 28 ಜೂನ್ 2018, 00:00 IST ಅಕ್ಷರ ಗಾತ್ರ : ಆ ಆ ಸೇಂಟ್ ಪೀಟರ್ಸ್‌ಬರ್ಗ್‌ (ಎಎಫ್‌ಪಿ): ವಿಶ್ವ ಫುಟ್‌ಬಾಲ್‌ನ ದಿಗ್ಗಜ ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರ ಬದುಕಿನ ಅತ್ಯಂತ ಉದ್ವೇಗಕಾರಿ 90 ನಿಮಿಷಗಳು ಮಂಗಳವಾರ ರಾತ್ರಿ ಕಳೆದುಹೋದವು. ವಿಶ್ವಕಪ್‌ ಟೂರ್ನಿಯ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ನೈಜೀರಿಯಾ ಎದುರು ಸೆಣಸಿದ ಸಂದರ್ಭದಲ್ಲಿ ಅನುಭವಿಸಿದ ಆತಂಕ, ಉದ್ವೇಗವನ್ನು ತಮ್ಮ ಬದುಕಿನಲ್ಲಿ ಎಂದಿಗೂ ಅನುಭವಿಸರಲಿಲ್ಲ. ಮುಂದೆಯೂ ಇಂತಹದನ್ನು ನಿರೀಕ್ಷಿಸಲಾರೆ ಎಂದು ಮೆಸ್ಸಿ ಅವರೇ ಹೇಳಿದ್ದಾರೆ. ಸೇಂಟ್ ಪೀಟರ್ಸ್‌ಬರ್ಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ಮೊದಲಾರ್ಧದಲ್ಲಿ 1–0ಯಿಂದ ಮುನ್ನಡೆ ಸಾಧಿಸಿದ್ದ ಅರ್ಜೆಂಟೀನಾ 51ನೇ ನಿಮಿಷದ ನಂತರ ಆತಂಕಕ್ಕೆ ಒಳಗಾಯಿತು. ಪೆನಾಲ್ಟಿ ಅವಕಾಶದಲ್ಲಿ ವಿಕ್ಟರ್ ಮೋಸೆಸ್ ಗಳಿಸಿದ ಗೋಲಿನ ಮೂಲಕ ನೈಜೀರಿಯಾ ಸಮಬಲ ಸಾಧಿಸಿದ್ದರಿಂದ ಮೆಸ್ಸಿ ಬಳಗದ ಕನಸು ಭಗ್ನವಾಗುವ ಆತಂಕ ಎದುರಾಗಿತ್ತು. ಆದರೆ 86ನೇ ನಿಮಿಷದಲ್ಲಿ ಮಾರ್ಕೋಸ್ ರೋಜೊ ಗಳಿಸಿದ ಗೋಲಿನ ಬಲದಿಂದ ಅರ್ಜೆಂಟೀನಾ ಗೆಲುವು ಸಾಧಿಸಿತು. ಈ ಜಯ ಅರ್ಜೆಂಟೀನಾ ತಂಡವನ್ನು ಪ್ರೀ ಕ್ವಾರ್ಟರ್ ಫೈನಲ್‌ ಘಟ್ಟಕ್ಕೆ ತಲುಪಿಸಿತು. ಮೆಸ್ಸಿ ಮೊದಲ ಗೋಲು: ಮೆಸ್ಸಿ ಅವರು ಮೊದಲ ಎರಡು ಪಂದ್ಯಗಳಲ್ಲಿ ಒಂದೂ ಗೋಲು ಗಳಿಸಿರಲಿಲ್ಲ.  ಐಸ್‌ಲ್ಯಾಂಡ್ ಎದುರಿನ ಪಂದ್ಯದಲ್ಲಿ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಮೆಸ್ಸಿ ವಿಫಲರಾದ ಕಾರಣ ಪಂದ್ಯ ಡ್ರಾ ಆಗಿತ್ತು. ಕ್ರೊವೇಷ್ಯಾ ಎದುರಿನ ಪಂದ್ಯದಲ್ಲಿ ಮೂರು ಗೋಲು ಬಿಟ್ಟುಕೊಟ್ಟ ಅರ್ಜೆಂಟೀನಾಗ ಗೋಲಿನ ಖಾತೆ ತೆರೆಯಲೂ ಆಗಿರಲಿಲ್ಲ. ಮಂಗಳವಾರ ಐದು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದ ತಂಡ ಯಶಸ್ಸು ಕಂಡಿತು. ಪಂದ್ಯದ 14ನೇ ನಿಮಿಷದಲ್ಲಿಯೇ ಮೆಸ್ಸಿ ಜಾದೂ ನಡೆಯಿತು. ಈವರ್‌ ಬನೇಗಾ ಅವರು ನೀಡಿದ ಚೆಂಡನ್ನು ತೊಡೆಯಲ್ಲಿ ತಡೆದು ನಿಯಂತ್ರಿಸಿದ ಮೆಸ್ಸಿ, ಎದುರಾಳಿ ರಕ್ಷಣಾ ವಿಭಾಗವನ್ನು ಗಲಿಬಿಲಿಗೊಳಿಸಿ ಚೆಂಡನ್ನು ಗುರಿ ಮುಟ್ಟಿಸಿದರು. ಬಲಗಾಲಿನಿಂದ ಒದ್ದ ಚೆಂಡನ್ನು ತಡೆಯಲು ಗೋಲ್‌ಕೀಪರ್ ನಡೆಸಿದ ಶ್ರಮಕ್ಕೆ ಫಲ ಸಿಗಲಿಲ್ಲ. ಮುನ್ನಡೆಯ ನಂತರ ಪೆನಾಲ್ಟಿ ಅವಕಾಶ ಲಭಿಸಿದರೂ ಅದರಲ್ಲಿ ಗೋಲು ಗಳಿಸಲು ಅರ್ಜೆಂಟೀನಾಗೆ ಸಾಧ್ಯವಾಗಲಿಲ್ಲ. ಈ ನಡುವೆ ಮೋಸೆಸ್ ಗಳಿಸಿದ ಗೋಲು ಅರ್ಜೆಂಟೀನಾಗೆ ಆಘಾತ ನೀಡಿತು. ಆದರೆ ಗ್ಯಾಬ್ರಿಯೆಲ್‌ ಮೆರ್ಕಾಡೊ ಅವರ ಕ್ರಾಸ್‌ನಿಂದ ರೋಜೊ ಗಳಿಸಿದ ಗೋಲು ತಂಡದಲ್ಲಿ ಸಂಭ್ರಮ ಉಕ್ಕಿಸಿತು.
2
Bangalore, First Published 8, Jun 2019, 9:46 AM IST Highlights ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಕಾರು ಚಲಿಸಿದ್ದರಿಂದ ಕಿರುತೆರೆ ನಟಿಯ ಕಾರಿಗೆ ಸಿಮೆಂಟ್ ಕಲ್ಲೊಂದು ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಖ್ಯಾತ ಮಲಯಾಳಂ ನಟಿ ಅರ್ಚನಾ ಕವಿ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ದಾರಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಚೆಲಿಸುತ್ತಿದ್ದ ಕಾರಿನ ಮೇಲೆ ಸಿಮೆಂಟ್ ಕಲ್ಲೊಂದು ಬಿದ್ದು ಕಾರಿನ ಗಾಜು ಪುಡಿ ಪುಡಿಯಾಗಿದೆ. ಅರ್ಚನಾ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ನಡೆದ ಘಟನೆ ಹಾಗೂ ಫೋಟೋ ಶೇರ್ ಮಾಡಿಕೊಂಡು 'ದೊಡ್ಡ ಅಘಾತದಿಂದ ಪಾರಾದೆವು. ಏರ್‌ಪೋರ್ಟ್‌ ಮಾರ್ಗದಲ್ಲಿ ಕಾರು ಚಲಿಸುತ್ತಿದ್ದು ಮೆಟ್ರೋ ಕಾಮಗಾರಿಯಿಂದ ಸಿಮೆಂಟ್ ಕಲ್ಲು ಬಿದ್ದು ಗಾಜಿನ್ನು ಪುಡಿ ಮಾಡಿದೆ. ಯಾರಿಗೂ ಇದರಿಂದ ತೊಂದರೆ ಆಗಿಲ್ಲ. ಆದರೆ ಇಂತಹದ್ದೊಂದು ಕೆಲಸ ಎಂದೂ ಆಗಬಾರದು. ನಾನು ಕೊಚ್ಚಿನ್ ಮೆಟ್ರೋ ಹಾಗೂ ಕೊಚ್ಚಿನ್ ಪೊಲೀಸ್ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಇದಕ್ಕೆ ಡ್ರೈವರ್‌ಗೆ ಪರಿಹಾರ ನೀಡಬೇಕು ' ಎಂದು ಬರೆದುಕೊಂಡಿದ್ದಾರೆ.   We had a narrow (providential) escape. A concrete slab fell on our moving car while we were on the way to the airport. I would request @kochimetro and @KochiPolice to look into the matter and compensate the driver. Also see to it that such things don't happen in future. pic.twitter.com/knDdqC3bwN — Archana Kavi (@archana_kavi) June 5, 2019 ಅರ್ಚನಾ ಟ್ವೀಟ್ ಮಾಡುತ್ತಿದ್ದಂತೆ ವೈರಲ್ ಆಗಿದ್ದು ತಕ್ಷಣವೇ ಮೆಟ್ರೋ ಅಧಿಕಾರಿಗಳು 'ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕಾರು ಚಾಲಕನನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಾಜೆಕ್ಟ್ ಸುರಕ್ಷಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತೇವೆ' ಎಂದು ಸ್ಪಂದಿಸಿದ್ದಾರೆ. Last Updated 8, Jun 2019, 9:46 AM IST
0
ಆಟಗಾರನಿಗೆ ಒದ್ದ ರೆಫ್ರಿ 6 ತಿಂಗಳು ಸಸ್ಪೆಂಡ್..! Highlights ಜರ್ಮನ್ ಮೂಲದ ಪ್ಯಾರಿಸ್ ಸೇಂಟ್ ಹಾಗೂ ಫ್ರಾನ್ಸ್‌'ನ ನ್ಯಾನ್‌'ಟಿಸ್ ನಡುವೆ ಜ.14ರಂದು ಪಂದ್ಯ ನಡೆಯುವ ಸಂದರ್ಭದಲ್ಲಿ ಚಾಪ್ರಾನ್, ನ್ಯಾನ್‌'ಟಿಸ್ ತಂಡದ ಡಿಯಾಗೊ ಕಾರ್ಲೊಸ್ ಅವರನ್ನು ಒದ್ದಿದ್ದರು. ಮರುದಿನ ಚಾಪ್ರಾನ್ ಆಟಗಾರರನ ಕ್ಷಮೆ ಕೋರಿದ್ದರು. ಪ್ಯಾರೀಸ್(ಫೆ.02): ಫುಟ್ಬಾಲ್ ಪಂದ್ಯದ ವೇಳೆ ಆಟಗಾರನ ಕಾಲಿನಿಂದ ಒದ್ದ ಅಪರಾಧಕ್ಕಾಗಿ ಫ್ರಾನ್ಸ್‌'ನ ರೆಫ್ರಿ ಟೋನಿ ಚಾಪ್ರಾನ್ ಅವರನ್ನು ಮುಂದಿನ 6 ತಿಂಗಳು ಕಾಲ ನಿಷೇಧಿಸಲಾಗಿದೆ. ಜರ್ಮನ್ ಮೂಲದ ಪ್ಯಾರಿಸ್ ಸೇಂಟ್ ಹಾಗೂ ಫ್ರಾನ್ಸ್‌'ನ ನ್ಯಾನ್‌'ಟಿಸ್ ನಡುವೆ ಜ.14ರಂದು ಪಂದ್ಯ ನಡೆಯುವ ಸಂದರ್ಭದಲ್ಲಿ ಚಾಪ್ರಾನ್, ನ್ಯಾನ್‌'ಟಿಸ್ ತಂಡದ ಡಿಯಾಗೊ ಕಾರ್ಲೊಸ್ ಅವರನ್ನು ಒದ್ದಿದ್ದರು. ಮರುದಿನ ಚಾಪ್ರಾನ್ ಆಟಗಾರರನ ಕ್ಷಮೆ ಕೋರಿದ್ದರು. ವಿಚಾರಣೆ ನಡೆಸಿದ ಫ್ರೆಂಚ್ ಫುಟ್ಬಾಲ್ ಫೆಡರೇಶನ್ ಈ ಕ್ರಮಕ್ಕೆ ಮುಂದಾಗಿದೆ. ಫ್ರೆಂಚ್ ಕಪ್ ಸೇರಿದಂತೆ ಹಲವು ಪ್ರತಿಷ್ಠಿತ ಟೂರ್ನಿಗಳ 400ಕ್ಕೂ ಅಧಿಕ ಪಂದ್ಯಗಳಲ್ಲಿ ಚಾಪ್ರಾಲ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. Last Updated 11, Apr 2018, 1:11 PM IST
2
#Gomonster Samsung M30s: ಹೊಸ ಸ್ಮಾರ್ಟ್‌ಫೋನ್‌ ನ ವಿಶೇಷತೆಗಳೇನು ನೋಡಿ! WATCH LIVE TV ಭಾವಮಾಧ್ಯಮದ ಸಿನಿಮಾ ಸಂಭ್ರಮ ನಿರ್ದೇಶಕ ಉಮಾಶಂಕರ್‌ ಅವರ ಚಿತ್ರಗಳ ಸಿನಿಮೋತ್ಸವ ಜ20ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ... | Updated: Jan 20, 2017, 05:00AM IST ನಿರ್ದೇಶಕ ಉಮಾಶಂಕರ್‌ ಅವರ ಚಿತ್ರಗಳ ಸಿನಿಮೋತ್ಸವ ಜ.20ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಜತೆಗೆ ಸಿನಿಮಾ ಕುರಿತು ವಿಶೇಷ ಕಮ್ಮಟವನ್ನು ಆಯೋಜನೆ ಮಾಡಿದ್ದಾರೆ ನಿರ್ದೇಶಕರು. ಸದಭಿರುಚಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು ನಿರ್ದೇಶಕ ಉಮಾಶಂಕರ್‌. ಜ.20ರಿಂದ 26ರವರೆಗೂ ಇವರ ನಿರ್ದೇಶನದ ಚಿತ್ರಗಳ ಸಿನಿಮೋತ್ಸವ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಸಾಲದ ಮಗು ಮತ್ತು ಮುನ್ಸೀಫ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಏಳು ದಿನಗಳ ಕಾಲ ನಡೆಯುವ ಸಿನಿಮಾ ಸಂಭ್ರಮದಲ್ಲಿ ಪ್ರತಿ ದಿನವೂ ಚಿತ್ರ ಪ್ರದರ್ಶನ ಮತ್ತು ಸಿನಿಮಾ ಕುರಿತಾದ ಕಮ್ಮಟ ಕೂಡ ನಡೆಯಲಿದೆ. ಬೆಂಗಳೂರಿನ ಸವಿತಾ ಚಿತ್ರಮಂದಿರದಲ್ಲಿ ಆಯೋಜನೆಯಾದ ಸಿನಿಮೋತ್ಸವದಲ್ಲಿ ಸಿನಿಮಾ ಕತೆಯ ಆಯ್ಕೆ, ಚಿತ್ರಕತೆ ರಚನೆ, ವಿನ್ಯಾಸ, ನಿರ್ದೇಶನ ಮತ್ತು ಸಿನಿಮಾಟೋಗ್ರಫಿಯ ಕುರಿತಾದ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಸಿನಿಮೋತ್ಸವವನ್ನು ಗಿರೀಶ್‌ ಕಾಸರವಳ್ಳಿ ಉದ್ಘಾಟಿಸಲಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌, ನಟ ಅಚ್ಯುತ್‌ಕುಮಾರ್‌, ಕಮ್ಮಟದ ನಿರ್ದೇಶಕ ಜಿ.ಎಸ್‌.ಭಾಸ್ಕರ್‌ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಕವಿ ಕೋಟಿಗಾನಹಳ್ಳಿ ರಾಮಯ್ಯ, ಪತ್ರಕರ್ತ ಜೋಗಿ ಮತ್ತು ರಘುನಾಥ್‌ ಚ.ಹ, ಸಿನಿಮಾಟೋಗ್ರಾಫರ್‌ ಎಚ್‌.ಎಂ.ರಾಮಚಂದ್ರ, ಕಲಾ ನಿರ್ದೇಶಕ ಶಶಿಧರ್‌ ಅಡಪ, ನಿರ್ದೇಶಕರಾದ ಪಿ.ಶೇಷಾದ್ರಿ, ಬಿ.ಸುರೇಶ ಮತ್ತು ಬಿ.ಎಸ್‌.ಲಿಂಗದೇವರು, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವು ತಂತ್ರಜ್ಞರು ಸಿನಿಮಾದ ಬಗ್ಗೆ ಮಾತಾನಾಡಲಿದ್ದಾರೆ.
0
README.md exists but content is empty. Use the Edit dataset card button to edit it.
Downloads last month
6
Edit dataset card