id
stringlengths
3
6
url
stringlengths
33
779
title
stringlengths
1
95
text
stringlengths
3
190k
152100
https://kn.wikipedia.org/wiki/%E0%B2%B6%E0%B2%BE%E0%B2%82%E0%B2%A4%E0%B2%BE%20%E0%B2%B5%E0%B2%B8%E0%B2%BF%E0%B2%B7%E0%B3%8D%E0%B2%A0
ಶಾಂತಾ ವಸಿಷ್ಠ
ಶಾಂತಾ ವಸಿಷ್ಠ (ಜನನ ೧೯೨೬ ) ಅವರು ಭಾರತದ ರಾಜಕಾರಣಿ. ೧೯೫೦ ಮತ್ತು ೧೯೬೦ ರ ದಶಕದಲ್ಲಿ ಅವರು ದೆಹಲಿಯ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಮತ್ತು ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾಭ್ಯಾಸ ವಸಿಷ್ಠ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಆಕೆಯ ತಂದೆ ಎಲ್‌.ಡಿ. ವಸಿಷ್ಠ ಅವರು ರಕ್ಷಣಾ ಸಚಿವಾಲಯದ ಮುಖ್ಯ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ವಿದ್ಯಾರ್ಥಿ ಜೀವನದಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ದೆಹಲಿ ಶಾಖೆಯಲ್ಲಿ ಸಕ್ರಿಯರಾಗಿದ್ದರು ಮತ್ತು ಕಿಂಗ್ಸ್‌ವೇ ನಿರಾಶ್ರಿತರ ಸಮಿತಿಯೊಂದಿಗೆ ಕೆಲಸ ಮಾಡಿದ್ದರು. ೧೯೫೦ರಲ್ಲಿ ಅವರು ಕಪ್ಪಾ ಆಲ್ಫಾ ಥೀಟಾ ಸೊರೊರಿಟಿಯ ವಿದೇಶಿ ವಿದ್ಯಾರ್ಥಿ ವಿದ್ಯಾರ್ಥಿವೇತನದ ಮೂಲಕ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಕಾರ್ಯವನ್ನು ಅಧ್ಯಯನ ಮಾಡಿದರು. ದೆಹಲಿ ವಿಧಾನಸಭೆ ಭಾರತಕ್ಕೆ ಹಿಂದಿರುಗಿದ ನಂತರ, ವಸಿಷ್ಠ ೧೯೫೨ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕೋಟ್ಲಾ ಫಿರೋಜ್ ಷಾ ಕ್ಷೇತ್ರದಲ್ಲಿ ವಸಿಷ್ಠ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಭಾರತೀಯ ಜನಸಂಘದ ವಿ.ಪಿ. ಜೋಶಿ ಅವರನ್ನು ಪರಾಭವಗೊಳಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಟ್ಟಾರೆಯಾಗಿ ವಸಿಷ್ಠ ಅವರು ೪,೬೪೬ ಮತಗಳನ್ನು ಪಡೆದರು (ಕ್ಷೇತ್ರದಲ್ಲಿ ೫೬.೨೬% ಮತಗಳು). ೧೯೫೩ ರಲ್ಲಿ ದೆಹಲಿಯ ಮುಖ್ಯಮಂತ್ರಿ ಚೌಧರಿ ಬ್ರಹ್ಮ ಪ್ರಕಾಶ್ ಅವರು ದೆಹಲಿ ರಾಜ್ಯ ಸರ್ಕಾರದಲ್ಲಿ ಇವರನ್ನು ಶಿಕ್ಷಣ ಖಾತೆಯ ಉಪ ಮಂತ್ರಿಯಾಗಿ ನೇಮಕಗೊಳಿಸಿದ್ದರು. ಅವರ ನಾಮನಿರ್ದೇಶನವನ್ನು ದೆಹಲಿಯ ಕಾಂಗ್ರೆಸ್ ಶಾಸಕಾಂಗ ಪಕ್ಷದೊಳಗಿನ ಅಲ್ಪಸಂಖ್ಯಾತರ ಬಣ ಟೀಕಿಸಿತ್ತು. ಮುಖ್ಯಮಂತ್ರಿ ಅವರು ಪಕ್ಷದ ವಿಧಾನಸಭಾ ಸದಸ್ಯರನ್ನು ಸಂಪರ್ಕಿಸದೇ ಉಪ ಮಂತ್ರಿಗಳನ್ನು ನಾಮನಿರ್ದೇಶನ ಮಾಡಬಾರದು ಎಂದು ಪ್ರತಿಪಾದಿಸಿದ್ದರು. ವಸಿಷ್ಠರು ೧೯೫೪ ರಲ್ಲಿ ದೆಹಲಿ ಲೈಬ್ರರಿ ಅಸೋಸಿಯೇಶನ್‌ನ ಪುನರುಜ್ಜೀವನದಲ್ಲಿ ಭಾಗವಹಿಸಿದ್ದರು. ಸಂಘದ ಸುದೀರ್ಘ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ರಾಜ್ಯಸಭೆ ವಸಿಷ್ಠರು ೧೯೬೦ ರಲ್ಲಿ ರಾಜ್ಯಸಭೆಗೆ ( ಭಾರತದ ಸಂಸತ್ತಿನ ಮೇಲ್ಮನೆ) ಚುನಾಯಿತರಾಗಿದ್ದರು. ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರ ಸರ್ಕಾರಗಳ ಅಡಿಯಲ್ಲಿ ಅವರ ಅವಧಿಯು ೩ ಏಪ್ರಿಲ್ ೧೯೬೦ ರಿಂದ ೨ ಏಪ್ರಿಲ್ ೧೯೬೬ ರವರೆಗೆ ಇತ್ತು. ನಂತರದ ಅವಧಿ ೨೦೦೮ರಲ್ಲಿ ವಸಿಷ್ಠ ನೆಹರು ಟು ಇರಾಕ್ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು. ಇದು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಅನುಭವಗಳನ್ನು ವಿವರಿಸುತ್ತದೆ. ೨೦೧೩ರ ಹೊತ್ತಿಗೆ, ವಸಿಷ್ಠರು ಸರ್ವೋದಯ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದರು. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152101
https://kn.wikipedia.org/wiki/%E0%B2%B9%E0%B2%B0%E0%B3%8D%E0%B2%B8%E0%B2%BF%E0%B2%AE%E0%B3%8D%E0%B2%B0%E0%B2%A4%E0%B3%8D%20%E0%B2%95%E0%B3%8C%E0%B2%B0%E0%B3%8D%20%E0%B2%AC%E0%B2%BE%E0%B2%A6%E0%B2%B2%E0%B3%8D
ಹರ್ಸಿಮ್ರತ್ ಕೌರ್ ಬಾದಲ್
ಹರ್ಸಿಮ್ರತ್ ಕೌರ್ ಬಾದಲ್ (ಜನನ ೨೫ ಜುಲೈ ೧೯೬೬) ಒಬ್ಬರು ಭಾರತೀಯ ರಾಜಕಾರಣಿ ಮತ್ತು ಭಾರತ ಸರ್ಕಾರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಾಜಿ ಕೇಂದ್ರ ಕ್ಯಾಬಿನೆಟ್ ಮಂತ್ರಿ. ಇವರು ಬಟಿಂಡಾದಿಂದ ಲೋಕಸಭೆಯಲ್ಲಿ ಸಂಸತ್ತಿನ ಸದಸ್ಯರಾಗಿದ್ದಾರೆ . ಅವರು ಶಿರೋಮಣಿ ಅಕಾಲಿದಳ ಪಕ್ಷದ ಸದಸ್ಯೆ. ಅವರ ಪತಿ ಸುಖಬೀರ್ ಸಿಂಗ್ ಬಾದಲ್ ಪಂಜಾಬ್‌ನ ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿದಳದ ಅಧ್ಯಕ್ಷರಾಗಿದ್ದಾರೆ. ಕೆಲವು ರೈತರಿಗೆ ಸಂಬಂಧಿಸಿದ ಸುಗ್ರೀವಾಜ್ಞೆಗಳು ಮತ್ತು ಶಾಸನಗಳನ್ನು ವಿರೋಧಿಸಲು ಅವರು ೧೭ ಸೆಪ್ಟೆಂಬರ್ ೨೦೨೦ ರಂದು ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದರು. ವೈಯಕ್ತಿಕ ಜೀವನ ಬಾದಲ್ ೨೫ ಜುಲೈ ೧೯೬೬ ರಂದು ದೆಹಲಿಯಲ್ಲಿ ಸತ್ಯಜಿತ್ ಸಿಂಗ್ ಮಜಿಥಿಯಾ ಮತ್ತು ಸುಖಮಂಜುಸ್ ಮಜಿಥಿಯಾ ದಂಪತಿಗೆ ಜನಿಸಿದರು. ಅವರು ದೆಹಲಿಯ ಲೊರೆಟೊ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ಅವರು ಮೆಟ್ರಿಕ್ಯುಲೇಟ್ ಮುಗಿಸಿದ್ದಾರೆ ಮತ್ತು ಜವಳಿ ವಿನ್ಯಾಸದಲ್ಲಿ ಡಿಪ್ಲೊಮಾವನ್ನು ಹೊಂದಿದ್ದಾರೆ. ಅವರು ೨೧ ನವೆಂಬರ್ ೧೯೯೧ ರಂದು ಸುಖಬೀರ್ ಸಿಂಗ್ ಬಾದಲ್ ಅವರನ್ನು ವಿವಾಹವಾದರು ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಆಕೆಯ ಸಹೋದರ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಶಿರೋಮಣಿ ಅಕಾಲಿ ದಳದ ಸದಸ್ಯರಾಗಿದ್ದಾರೆ, ಮಾಜಿ ಶಾಸಕರಾದ ಮಾಜಿತಾ ಮತ್ತು ಆಕೆಯ ಮಾವ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಪಂಜಾಬ್ ರಾಜ್ಯ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದಾರೆ. ರಾಜಕೀಯ ವೃತ್ತಿಜೀವನ ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆಯೊಂದಿಗೆ ಬಾದಲ್ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ರಣಿಂದರ್ ಸಿಂಗ್ ಅವರನ್ನು ೧೨೦,೯೬೦ ಮತಗಳಿಂದ ಸೋಲಿಸಿದ ನಂತರ ಬಟಿಂಡಾ ಕ್ಷೇತ್ರದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾದರು. ಅವರ ಮೊದಲ ಭಾಷಣವು ೩ ಡಿಸೆಂಬರ್ ೨೦೦೯ ರಂದು ಆಗಿತ್ತು, ಅಲ್ಲಿ ಅವರು ೧೯೮೪ ರ ಸಿಖ್-ವಿರೋಧಿ ದಂಗೆಯ ಬಲಿಪಶುಗಳು ಮತ್ತು ಬದುಕುಳಿದವರ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಹೆಣ್ಣು ಮಗು ಮತ್ತು ಮರಗಳನ್ನು ಉಳಿಸುವ "ನನ್ಹಿ ಛನ್" ಹೆಸರಿನ ಯೋಜನೆಯ ಭಾಗವಾಗಿದ್ದರು. ಬಾದಲ್ ಅವರು ೨೦೧೪ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಜಂಟಿ ಅಭ್ಯರ್ಥಿ ಮನ್‌ಪ್ರೀತ್ ಸಿಂಗ್ ಬಾದಲ್ ಅವರನ್ನು ಸೋಲಿಸಿ ಬಟಿಂಡಾದಿಂದ ಸಂಸದರಾಗಿ ಮರು ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಅವರು ಮೋದಿ ಸರ್ಕಾರದಲ್ಲಿ ಆಹಾರ ಸಂಸ್ಕರಣೆ ರಾಜ್ಯ ಸಚಿವರಾಗಿ ನೇಮಕಗೊಂಡರು. ಅವರು ೨೦೧೯ ರ ಲೋಕಸಭೆ ಚುನಾವಣೆಯಲ್ಲಿ ಬಟಿಂಡಾದಿಂದ ಸತತವಾಗಿ ೩ ನೇ ಬಾರಿಗೆ ಆಯ್ಕೆಯಾದರು. ಅವರು ಸುಮಾರು ೨೧,೦೦೦ ಮತಗಳಿಂದ ನಿಕಟ ಹೋರಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಸೋಲಿಸಿದರು. ಸರ್ಕಾರವು ಅಂಗೀಕರಿಸಿದ ಹೊಸ ಕೃಷಿ ಮಸೂದೆಗಳನ್ನು ವಿರೋಧಿಸಲು ಅವರು ೧೭ ಸೆಪ್ಟೆಂಬರ್ ೨೦೨೦ ರಂದು ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದರು. ಬಾದಲ್ ಮತ್ತು ಅವರ ಕುಟುಂಬವು ಯಾವುದೇ ರೀತಿಯ ವ್ಯವಹಾರಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಆಸಕ್ತಿಯನ್ನು ಹೊಂದಿದೆ. ಹರ್ಸಿಮ್ರತ್ ಅವರ ಮಾವ ಮತ್ತು ಪತಿ ಸೇರಿದಂತೆ ಬಾದಲ್ ಕುಟುಂಬದ ಸದಸ್ಯರು ಆರ್ಬಿಟ್ ರೆಸಾರ್ಟ್‌ಗಳು, ಮೆಟ್ರೋ ಇಕೋ ಗ್ರೀನ್ ರೆಸಾರ್ಟ್‌ಗಳು, ಸಾಂಜ್ ಫೌಂಡೇಶನ್, ಫಾಲ್ಕನ್ ಪ್ರಾಪರ್ಟೀಸ್, ದಬ್ವಾಲಿ ಟ್ರಾನ್ಸ್‌ಪೋರ್ಟ್ ಮತ್ತು ಆರ್ಬಿಟ್ ಏವಿಯೇಷನ್‌ನಲ್ಲಿ ಮಾಲೀಕತ್ವದ ಆಸಕ್ತಿಗಳನ್ನು ಹೊಂದಿದ್ದಾರೆ. ಅವರ ತಾಯಿಯ ಕುಟುಂಬವು ಸರಯಾ ಇಂಡಸ್ಟ್ರೀಸ್, ಅಜ್ನಾಲಾ ಪವರ್ ಮತ್ತು ಬಟಾಲಾ ಪವರ್ ಅನ್ನು ನಿಯಂತ್ರಿಸುತ್ತದೆ. ಅವರ ಪತಿ ಪಂಜಾಬಿ ಭಾಷೆಯ ಪಿ‌ಟಿ‌ಸಿ ಟೆಲಿವಿಷನ್ ನೆಟ್‌ವರ್ಕ್‌ನಲ್ಲಿ ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ಸಾಮಾಜಿಕ ಕೆಲಸ ಸೆಪ್ಟೆಂಬರ್ ೨೦೦೮ ರಲ್ಲಿ, ಕೌರ್ ಪಂಜಾಬ್‌ನಲ್ಲಿ ಹೆಣ್ಣು ಭ್ರೂಣಹತ್ಯೆಯ ವಿರುದ್ಧ ಹೋರಾಡಲು, ಮಹಿಳಾ ಸಬಲೀಕರಣ ಮತ್ತು ಮರಗಳನ್ನು ಉಳಿಸಲು " ನನ್ಹಿ ಛನ್ " ಯೋಜನೆಯನ್ನು ಪ್ರಾರಂಭಿಸಿದರು. ಇದು ಶಾಲೆಗಳು, ಕಾಲೇಜುಗಳು, ಗುರುದ್ವಾರಗಳು, ದೇವಾಲಯಗಳು, ಚರ್ಚ್‌ಗಳು ಮತ್ತು ಪುರಸಭೆಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯ ಮೂಲಕ ಪಂಜಾಬ್ ಹಳ್ಳಿಗಳಲ್ಲಿ ಅನೇಕ ಹುಡುಗಿಯರು ಮತ್ತು ಮಹಿಳೆಯರಿಗೆ ಬಟ್ಟೆ ಹೊಲಿಯುವುದು, ಹೆಣಿಗೆ ಮತ್ತು ಹೂಬಿಡುವುದರಲ್ಲಿ ತರಬೇತಿ ನೀಡಲಾಗಿದೆ. ಸಹ ನೋಡಿ ಪಂಜಾಬ್ ಶಿರೋಮಣಿ ಅಕಾಲಿದಳ ಬಟಿಂಡಾ ಉಲ್ಲೇಖಗಳು |- |- ಬಾಹ್ಯ ಕೊಂಡಿಗಳು ಹರ್ಸಿಮ್ರತ್ ಬಾದಲ್
152103
https://kn.wikipedia.org/wiki/%E0%B2%AE%E0%B2%82%E0%B2%9C%E0%B3%81%20%E0%B2%B5%E0%B2%B0%E0%B3%8D%E0%B2%AE%E0%B2%BE
ಮಂಜು ವರ್ಮಾ
ಮಂಜು ವರ್ಮಾ ಒಬ್ಬ ಭಾರತೀಯ ರಾಜಕಾರಣಿ ಮತ್ತು ಬಿಹಾರ ವಿಧಾನಸಭೆಯ ಮಾಜಿ ಸದಸ್ಯೆ. ಇವರು ಬಿಹಾರ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದರು. ಆರಂಭಿಕ ಜೀವನ ವರ್ಮಾ ಕುಶ್ವಾಹ ಅಥವಾ ಕೋರಿ ಜಾತಿಗೆ ಸೇರಿದವರು. ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರು ಮಧ್ಯಂತರ ಹಂತದವರೆಗೆ ಶಿಕ್ಷಣವನ್ನು ಪಡೆದಿದ್ದಾರೆ ಮತ್ತು ಅವರ ಪತಿ ಕೃಷಿಕರಾಗಿದ್ದರು. ರಾಜಕೀಯ ವೃತ್ತಿಜೀವನ ಮಂಜು ವರ್ಮಾ ಬೇಗುಸರಾಯ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚೆರಿಯಾ-ಬರಿಯಾರ್‌ಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. ಅವರು ಪ್ರತಿನಿಧಿಸುವ ಸ್ಥಾನವನ್ನು ಈ ಹಿಂದೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾಗಿದ್ದ ಅವರ ಮಾವ ಪ್ರತಿನಿಧಿಸಿದ್ದರು. ಆದರೆ ಅವರ ಪತಿ ಅವರು ಮೊದಲು ಸೇರಿದ್ದ ಜನತಾದಳ (ಯುನೈಟೆಡ್) ನ ನಾಯಕರೂ ಆಗಿದ್ದಾರೆ. ವರ್ಮಾ ೨೦೧೦ ಹಾಗೂ ೨೦೧೫ ರಲ್ಲಿ ಶಾಸಕಿಯಾಗಿದ್ದರು. ೨೦೧೫ ರಲ್ಲಿ, ನಿತೀಶ್ ಕುಮಾರ್ ಅವರ ಕ್ಯಾಬಿನೆಟ್‌ನ ಏಕೈಕ ಮಹಿಳಾ ಸದಸ್ಯೆ ಆಗಿದ್ದರು. ಅಲ್ಲಿ ಅವರಿಗೆ ಸಾಮಾಜಿಕ ನ್ಯಾಯ ಸಚಿವಾಲಯದ ಖಾತೆಯನ್ನು ನೀಡಲಾಗಿತ್ತು. ವರ್ಮಾ ಅವರು ಭಾಗಿಯಾಗಿದ್ದಾರೆ ಎನ್ನಲಾದ ಕುಖ್ಯಾತ ಮುಜಾಫರ್‌ಪುರ ಆಶ್ರಯ ಪ್ರಕರಣದ ನಂತರ ಅವರು ಜೆಡಿಯುನಿಂದ ಹೊರಹಾಕಲ್ಪಟ್ಟರು. ಅಪ್ರಾಪ್ತ ಬಾಲಕಿಯರನ್ನು ಇರಿಸಲಾಗಿದ್ದ ಶೆಲ್ಟರ್ ಹೋಮ್ ನಿರ್ವಹಣೆ ಆವರ ಉಸ್ತುವಾರಿಯಲ್ಲಿತ್ತು. ನಂತರ, ನಿರ್ಗತಿಕ ಅಪ್ರಾಪ್ತ ಬಾಲಕಿಯರ ವಿರುದ್ಧ ಲೈಂಗಿಕ ದೌರ್ಜನ್ಯವನ್ನು ಒಳಗೊಂಡಿರುವ "ಆಶ್ರಯ ಪ್ರಕರಣ" ಕ್ಕೆ ಸಂಬಂಧಿಸಿದಂತೆ ಅವರ ಪೂರ್ವಜರ ಮನೆಯ ಮೇಲೆ ಸಿಬಿಐ ದಾಳಿ ನಡೆದಾಗ ಅವರು ಮತ್ತು ಅವರ ಪತಿಯ ವಿರುದ್ಧ "ಶಸ್ತ್ರಾಸ್ತ್ರ ಕಾಯ್ದೆ" ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು. ಪ್ರಕರಣ ದಾಖಲಾದ ನಂತರ ಪೊಲೀಸರು ಅವರನ್ನು ಬಂಧಿಸುವಲ್ಲಿ ವಿಫಲರಾದರು ಮತ್ತು ಆಶ್ರಯ ಮನೆ ಮಾಲೀಕ ಬ್ರಜೇಶ್ ಠಾಕೂರ್ ಅವರನ್ನು ಬಂಧಿಸಲಾಯಿತು. ಮೂರು ತಿಂಗಳ ನಂತರ, ಅವರು ನ್ಯಾಯಾಲಯಕ್ಕೆ ಶರಣಾದರು ಮತ್ತು ಜೆಡಿಯು ಮತ್ತು ನಿತೀಶ್ ಕುಮಾರ್ ತನ್ನನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದರು. ಮಾರ್ಚ್ ೨೦೧೯ ರಲ್ಲಿ, ಪಾಟ್ನಾ ಹೈಕೋರ್ಟ್ ಎರಡೂ ಪ್ರಕರಣಗಳಲ್ಲಿ ಜಾಮೀನು ನೀಡಿತು ಮತ್ತು ಆಕೆಯ ಪತಿ ಜೈಲಿನಲ್ಲಿಯೇ ಇದ್ದಾರೆ . ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಮಾ ಅವರು ಸಮಾಜ ಕಲ್ಯಾಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ನಿತೀಶ್ ಅವರ ೬ ನೇ ಸಂಪುಟದಲ್ಲಿ ಶಿಕ್ಷಣ ಸಚಿವ ಕೃಷ್ಣ ನಂದನ್ ವರ್ಮಾ ಅವರಿಗೆ ಸಮಾಜ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಉಸ್ತುವಾರಿಯನ್ನು ನೀಡಲಾಯಿತು. ತನ್ನ ಜಾತಿಯ ಕಾರಣಕ್ಕಾಗಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಂಜು ವರ್ಮಾ ತನ್ನ ವಿಚಾರಣೆಯ ಸಮಯದಲ್ಲಿ ಹೇಳಿಕೊಂಡಿದ್ದರು, ಹೀಗಾಗಿ ಕೃಷ್ಣ ನಂದನ್ ವರ್ಮಾಗೆ ತನ್ನ ಸಚಿವಾಲಯವನ್ನು ಹಂಚಿಕೆ ಮಾಡುವುದನ್ನು ಜೆಡಿಯು ನಾಯಕತ್ವವು ಮಿತವಾದ ಪ್ರಯತ್ನವೆಂದು ಪರಿಗಣಿಸಿದೆ. ೨೦೧೮ ರಲ್ಲಿ, ದಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ, ವರ್ಮಾ ತನ್ನ ಪತಿ ಮುಗ್ಧ ಎಂದು ಹೇಳಿಕೊಂಡಿದ್ದರು. ಅವರ ಪ್ರಕಾರ, ಕಾರ್ಯಕ್ರಮದ ಸಂದರ್ಭದಲ್ಲಿ ಹುಡುಗಿಯರು ತಮ್ಮ ಕೊಳಕು ಬಟ್ಟೆಯಲ್ಲಿ ಅಡುಗೆ ಮಾಡುವುದನ್ನು ನೋಡಿದಾಗ ಅವರು ತಮ್ಮ ಪತಿಯೊಂದಿಗೆ ಒಮ್ಮೆ ಮಾತ್ರ ಆಶ್ರಯ ಮನೆಗೆ ಭೇಟಿ ನೀಡಿದ್ದರು, ಆದರೆ ಅವರು ವಿಚಾರಣೆಯಲ್ಲಿ ಏನನ್ನೂ ಹೇಳಲು ನಿರಾಕರಿಸಿದರು. ೨೦೨೦ ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಮುಜಾಫರ್‌ಪುರ ಶೆಲ್ಟರ್ ಹೋಮ್ ಪ್ರಕರಣದಲ್ಲಿ ತಮ್ಮ ಪತಿ ಭಾಗಿಯಾಗಿರುವ ಆರೋಪದ ಪ್ರಕರಣಗಳ ನಂತರ ವರ್ಮಾ ಈ ಹಿಂದೆ ರಾಜೀನಾಮೆ ನೀಡಿದ್ದ ಜನತಾ ದಳ (ಯುನೈಟೆಡ್) ಪಕ್ಷವು ಅವರನ್ನು ಮತ್ತೆ ಚೆರಿಯಾ-ಬರಿಯಾರ್‌ಪುರ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿತು. ವರ್ಮಾ ಅವರು ಈ ಚುನಾವಣೆಯಲ್ಲಿ ಮಾಜಿ ಸಂಸದರಾಗಿದ್ದ ರಾಷ್ಟ್ರೀಯ ಜನತಾ ದಳದ ರಾಜ್ ಬನ್ಶಿ ಮಹ್ತೋ ಅವರಿಂದ ಪರಾಭವಗೊಂಡರು. ಸಹ ನೋಡಿ ಕುಶಾವಾಹ ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ ಮಹಿಳಾ ರಾಜಕಾರಣಿಗಳು
152104
https://kn.wikipedia.org/wiki/%E0%B2%A4%E0%B2%B8%E0%B3%8D%E0%B2%A8%E0%B3%80%E0%B2%AE%E0%B3%8D%20%E0%B2%AC%E0%B2%BE%E0%B2%A8%E0%B3%8A
ತಸ್ನೀಮ್ ಬಾನೊ
ತಸ್ನೀಮ್ ಬಾನೊ ೧೫೮ ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೈಸೂರು ಸಿಟಿ ಕಾರ್ಪೊರೇಷನ್‌ನ ಮೊದಲ ಮುಸ್ಲಿಂ ಮಹಿಳಾ ಮೇಯರ್ ಆಗಿದ್ದಾರೆ. ಅವರು ಜನತಾ ದಳ (ಜಾತ್ಯತೀತ)ದ ರಾಜಕಾರಣಿಯಾಗಿದ್ದಾರೆ. ಆರಂಭಿಕ ಜೀವನ ಮತ್ತು ಹಿನ್ನೆಲೆ ಬಾನೋ ಮುನ್ನವರ್ ಪಾಷಾ (ದರ್ಜಿ) ಮತ್ತು ತಹಸೀನ್ ಬಾನು (ಗೃಹಿಣಿ) ದಂಪತಿಗೆ ಜನಿಸಿದರು. ಅವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ವೈಯಕ್ತಿಕ ಜೀವನ ಬಾನೋ ಸೈಯದ್ ಸಮೀವುಲ್ಲಾ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಕೆಯ ಚಿಕ್ಕಪ್ಪ ಅಲ್ಹಾಜ್ ನಾಸಿರುದ್ದೀನ್ ಬಾಬು ಮೈಸೂರಿನಲ್ಲಿ ಮೂರು ಬಾರಿ ಕಾರ್ಪೊರೇಟರ್ ಆಗಿದ್ದರು. ರಾಜಕೀಯ ವೃತ್ತಿಜೀವನ ಬಾನೊ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ರಾಜಕಾರಣಿಯಾಗಿ ವೃತ್ತಿ ಪ್ರಾರಂಭಿಸಿದರು. ಮಾರ್ಚ್ ೨೦೧೩ ರಲ್ಲಿ ವಾರ್ಡ್ ೨೬ - ಮೀನಾ ಬಜಾರ್, ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾದ ವಾರ್ಡ್‌ನಿಂದ ಅಭ್ಯರ್ಥಿಯಾಗುವ ಮೂಲಕ ಚುನಾವಣೆಯನ್ನು ಮಾಡಿದರು. ೨೦೧೮ ರಲ್ಲಿ, ಅವರು ತಮ್ಮ ನಿಷ್ಠೆಯನ್ನು ಜನತಾ ದಳ (ಜಾತ್ಯತೀತ)ಕ್ಕೆ ಬದಲಾಯಿಸಿದರು ಮತ್ತು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿದರು. ಅವರು ೩೧ ನೇ ವಯಸ್ಸಿನಲ್ಲಿ ಮೈಸೂರು ಸಿಟಿ ಕಾರ್ಪೊರೇಷನ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿ(ಎಸ್) ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರು. ಅವರು ೧೮ ಜನವರಿ ೨೦೨೦ ರಂದು ಮೇಯರ್ ಆಗಿ ನೇಮಕಗೊಂಡರು. ನಂತರ ಮೈಸೂರಿನ ೨೨ ನೇ ಮೇಯರ್ ಆದರು. ಮೇಯರ್ ಚುನಾವಣೆಯಲ್ಲಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಗೀತಾ ಯೋಗಾನಂದ್ ಅವರನ್ನು ಸೋಲಿಸಿದರು. ಕೇಂದ್ರ ಸಚಿವಾಲಯವು ದೇಶದಲ್ಲಿ ಸಿಎಎ-ಎನ್‌ಆರ್‌ಸಿಯನ್ನು ಜಾರಿಗೆ ತರಲು ಪ್ರಯತ್ನಿಸಿದ ಸಮಯದಲ್ಲಿ ಅವರ ನೇಮಕಾತಿ ನಡೆದಿದೆ. ವಿವಾದಗಳು ಬಾನೊ ಅವರು ಉಪ ಆಯುಕ್ತೆ ರೋಹಿಣಿ ಸಿಂದೂರಿ ಮತ್ತು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಬಹಿರಂಗ ಸಂಘರ್ಷಕ್ಕೆ ಇಳಿದರು. ಉಲ್ಲೇಖಗಳು ಜೀವಂತ ವ್ಯಕ್ತಿಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152106
https://kn.wikipedia.org/wiki/%E0%B2%95%E0%B2%BE%E0%B2%B3%E0%B2%BF%E0%B2%A6%E0%B2%BE%E0%B2%B8%E0%B3%8D%20%28%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0%29
ಕಾಳಿದಾಸ್ (ಚಲನಚಿತ್ರ)
ಕಾಳಿದಾಸ್ ಇದು ೧೯೩೧ ರ ಭಾರತೀಯ ತಮಿಳು ಮತ್ತು ತೆಲುಗು ಭಾಷೆಯ ಚಲನಚಿತ್ರವಾಗಿದ್ದು, ಇದನ್ನು ಹೆಚ್.ಎಂ. ರೆಡ್ಡಿ ನಿರ್ದೇಶಿಸಿದ್ದಾರೆ ಮತ್ತು ಅರ್ದೇಶಿರ್ ಇರಾನಿ ನಿರ್ಮಿಸಿದ್ದಾರೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಂದ ಮೊದಲ ಧ್ವನಿ ಚಿತ್ರ .ಮತ್ತು ದಕ್ಷಿಣ ಭಾರತದ ಭಾಷೆಯಲ್ಲಿ ತಯಾರಾದ ಮೊದಲ ಧ್ವನಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಸಂಸ್ಕೃತ ಕವಿ ಕಾಳಿದಾಸನ ಜೀವನವನ್ನು ಆಧರಿಸಿತ್ತು; ಇದರಲ್ಲಿ ಪಿಜಿ ವೆಂಕಟೇಶನ್ ಶೀರ್ಷಿಕೆ ಪಾತ್ರದಲ್ಲಿ ಮತ್ತು ಟಿಪಿ ರಾಜಲಕ್ಷ್ಮಿ ನಾಯಕಿಯಾಗಿ ಎಲ್ ವಿ ಪ್ರಸಾದ್, ತೇವರಂ ರಾಜಾಂಬಾಳ್, ಟಿ. ಸುಶೀಲಾ ದೇವಿ, ಜೆ. ಸುಶೀಲಾ ಮತ್ತು ಎಂಎಸ್ ಸಂತಾನಲಕ್ಷ್ಮಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿದಾಸ್, ಮುಖ್ಯವಾಗಿ ತಮಿಳಿನಲ್ಲಿ, ತೆಲುಗು ಮತ್ತು ಹಿಂದಿಯಲ್ಲಿ ಹೆಚ್ಚುವರಿ ಸಂಭಾಷಣೆಯನ್ನು ಒಳಗೊಂಡಿತ್ತು. ರಾಜಲಕ್ಷ್ಮಿ ತಮಿಳು ಮಾತನಾಡಿದ್ದರೆ, ವೆಂಕಟೇಶನಿಗೆ ತಮಿಳಿನಲ್ಲಿ ನಿರರ್ಗಳವಾಗಿ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು, ಮತ್ತು ಪ್ರಸಾದ್ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅದರ ಪೌರಾಣಿಕ ವಿಷಯದ ಹೊರತಾಗಿಯೂ, ಚಲನಚಿತ್ರವು ನಂತರದ ಅವಧಿಯ ಹಾಡುಗಳನ್ನು ಒಳಗೊಂಡಿತ್ತು, ಉದಾಹರಣೆಗೆ ಕರ್ನಾಟಕ ಸಂಗೀತಗಾರ ತ್ಯಾಗರಾಜರ ಸಂಯೋಜನೆಗಳು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಚಾರ ಗೀತೆಗಳು ಮತ್ತು ಮಹಾತ್ಮ ಗಾಂಧಿ ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಹಾಡುಗಳು. ಜರ್ಮನ್ ನಿರ್ಮಿತ ತಂತ್ರಜ್ಞಾನವನ್ನು ಬಳಸಿ ಧ್ವನಿಯನ್ನು ರೆಕಾರ್ಡ್ ಮಾಡಲಾಗಿದೆ. ಭಾರತದ ಮೊದಲ ಧ್ವನಿ ಚಿತ್ರ ಇದನ್ನು ಬಾಂಬೆಯ ಆಲಂ ಆರಾ ಸೆಟ್‌ಗಳಲ್ಲಿ ಕಾಳಿದಾಸ್ ಅನ್ನು ಎಂಟು ದಿನಗಳಲ್ಲಿ ಚಿತ್ರೀಕರಿಸಲಾಯಿತು. ಕಾಳಿದಾಸ್ ೩೧ ಅಕ್ಟೋಬರ್ ೧೯೩೧ ರಂದು ದೀಪಾವಳಿಯ ದಿನದಂದು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ಆ ವರ್ಷ ನಿರ್ಮಾಣಗೊಂಡು ಬಿಡುಗಡೆಯಾದ ಏಕೈಕ ದಕ್ಷಿಣ ಭಾರತದ ಚಿತ್ರ ಇದಾಗಿತ್ತು. ಹಲವಾರು ತಾಂತ್ರಿಕ ದೋಷಗಳ ಹೊರತಾಗಿಯೂ, ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು, ರಾಜಲಕ್ಷ್ಮಿ ಅವರ ಗಾಯನ ಪ್ರದರ್ಶನಕ್ಕಾಗಿ ಪ್ರಶಂಸೆ ಗಳಿಸಿತು ಮತ್ತು ಪ್ರಮುಖ ವಾಣಿಜ್ಯ ಯಶಸ್ಸನ್ನು ಗಳಿಸಿತು. ಕಾಳಿದಾಸರ ಯಶಸ್ಸು ಮಹಾಕವಿ ಕಾಳಿದಾಸ (೧೯೫೫), ಮಹಾಕವಿ ಕಾಳಿದಾಸ (೧೯೬೦) ಮತ್ತು ಮಹಾಕವಿ ಕಾಳಿದಾಸ (೧೯೬೬) ಸೇರಿದಂತೆ ಕಾಳಿದಾಸನ ಆಧಾರಿತ ಇತರ ಚಲನಚಿತ್ರಗಳನ್ನು ಹುಟ್ಟುಹಾಕಿತು. ಅದರ ವಾಣಿಜ್ಯ ಯಶಸ್ಸಿನ ಜೊತೆಗೆ, ಕಾಳಿದಾಸ್ ರಾಜಲಕ್ಷ್ಮಿ ಅವರ ವೃತ್ತಿಜೀವನಕ್ಕೆ ಒಂದು ಪ್ರಮುಖ ಪ್ರಗತಿಯಾಗಿದೆ ಮತ್ತು ಆಕೆಯನ್ನು ಹಿನ್ನಲೆ ಗಾಯನ ತಾರೆಯನ್ನಾಗಿ ಮಾಡಿತು. ಏಕೆಂದರೆ ಚಿತ್ರದ ಯಾವುದೇ ಮುದ್ರಣ, ಗ್ರಾಮಫೋನ್ ರೆಕಾರ್ಡ್ ಅಥವಾ ಹಾಡಿನ ಪುಸ್ತಕ ಉಳಿದುಕೊಂಡಿಲ್ಲ, ಇದು ಕಳೆದುಹೋದ ಚಲನಚಿತ್ರವಾಗಿದೆ . ಕಥಾವಸ್ತು ವಿಧ್ಯಾಧಾರಿ ತೇಜಾವತಿಯು ರಾಜ ವಿಜಯವರ್ಮನ ಮಗಳು. ರಾಜಕುಮಾರಿಯು ತನ್ನ ಮಗನನ್ನು ಮದುವೆಯಾಗಬೇಕೆಂದು ಅವನ ಮಂತ್ರಿ ಬಯಸುತ್ತಾನೆ ಆದರೆ ಅವಳು ನಿರಾಕರಿಸುತ್ತಾಳೆ. ಇದರಿಂದ ಬೇಸರಗೊಂಡ ಮಂತ್ರಿ ವಿಧ್ಯಾಧಾರಿಗೆ ಇನ್ನೊಬ್ಬ ಸಂಭಾವ್ಯ ಗಂಡನನ್ನು ಹುಡುಕಲು ಮುಂದಾಗುತ್ತಾರೆ. ಕಾಡಿನಲ್ಲಿ ಒಬ್ಬ ಅನಕ್ಷರಸ್ಥ ದನಗಾಹಿಯೊಬ್ಬ ಮರದ ಮೇಲೆ ಕುಳಿತು ತಾನು ಕುಳಿತಿದ್ದ ಕೊಂಬೆಗೆ ಕಡಿಯುತ್ತಿರುವುದನ್ನು ಮಂತ್ರಿ ಕಾಣುತ್ತಾನೆ. ಮಂತ್ರಿಯು ದನಗಾಯಿಯ ಮನವೊಲಿಸಿ ಅರಮನೆಗೆ ಬರುವಂತೆ ಮಾಡಿ ವಿಧ್ಯಾಧಾರಿಯನ್ನು ಮದುವೆಯಾಗುವಂತೆ ಮಾಡುತ್ತಾನೆ. ವಿಧ್ಯಾಧಾರಿಯು ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡಾಗ ಅವಳು ಪರಿಹಾರಕ್ಕಾಗಿ ಕಾಳಿ ದೇವಿಯನ್ನು ಪ್ರಾರ್ಥಿಸುತ್ತಾಳೆ. ಕಾಳಿ ಅವಳ ಮುಂದೆ ಕಾಣಿಸಿಕೊಳ್ಳುತ್ತಾಳೆ, ತನ್ನ ಪತಿಗೆ ಕಾಳಿದಾಸ್ ಎಂದು ಹೆಸರಿಸುತ್ತಾಳೆ ಮತ್ತು ಅವನಿಗೆ ಅಸಾಧಾರಣ ಸಾಹಿತ್ಯಿಕ ಪ್ರತಿಭೆಯನ್ನು ನೀಡುತ್ತಾಳೆ. ಪಾತ್ರವರ್ಗ ವಿದ್ಯಾಧಾರಿಯಾಗಿ ಟಿ.ಪಿ.ರಾಜಲಕ್ಷ್ಮಿ ಕಾಳಿದಾಸನಾಗಿ ಪಿಜಿ ವೆಂಕಟೇಶನ್ ದೇವಸ್ಥಾನದ ಅರ್ಚಕ ಎಲ್.ವಿ.ಪ್ರಸಾದ್ ಇತರ ಪೋಷಕ ಪಾತ್ರಗಳನ್ನು ತೇವರಂ ರಾಜಂಬಾಳ್, ಟಿ.ಸುಶೀಲಾ ದೇವಿ, ಜೆ.ಸುಶೀಲಾ ಮತ್ತು ಎಂ.ಎಸ್.ಸಂತಾನಲಕ್ಷ್ಮಿ ನಿರ್ವಹಿಸಿದ್ದಾರೆ. ಉತ್ಪಾದನೆ   ಭಾರತದ ಮೊದಲ ಧ್ವನಿ ಚಿತ್ರ (೧೯೩೧) ಯಶಸ್ಸಿನ ನಂತರ, ಅದರ ನಿರ್ದೇಶಕ ಅರ್ದೇಶಿರ್ ಇರಾನಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಾಹಸ ಮಾಡಲು ಬಯಸಿದ್ದರು. ಅದೇ ವರ್ಷದಲ್ಲಿ, ಅವರು ತಮ್ಮ ಮಾಜಿ ಸಹಾಯಕರಾದ ಹೆಚ್ಚ್ ಎಂ.ರೆಡ್ಡಿಯನ್ನು ಮೊದಲ ದಕ್ಷಿಣ ಭಾರತದ ಧ್ವನಿ ಚಲನಚಿತ್ರವನ್ನು ನಿರ್ದೇಶಿಸಲು ಆಯ್ಕೆ ಮಾಡಿದರು, ಇದು ನಂತರ ಮೊದಲ ತಮಿಳು - ತೆಲುಗು ಚಲನಚಿತ್ರ ಕಾಳಿದಾಸ್, ಅವರ ಜೀವನವನ್ನು ಆಧರಿಸಿದೆ. ಸಂಸ್ಕೃತ ಕವಿ ಮತ್ತು ನಾಟಕಕಾರ ಕಾಳಿದಾಸ . ಇರಾನಿ ಇಂಪೀರಿಯಲ್ ಮೂವಿ-ಟೋನ್ ಅಡಿಯಲ್ಲಿ ಚಲನಚಿತ್ರವನ್ನು ನಿರ್ಮಿಸಿದರು. ಪಿಜಿ ವೆಂಕಟೇಶನನ್ನು ಶೀರ್ಷಿಕೆ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಎಲ್ ವಿ ಪ್ರಸಾದ್ —ನಂತರ ಪ್ರಸಾದ್ ಸ್ಟುಡಿಯೋಸ್ ಅನ್ನು ಸ್ಥಾಪಿಸಿದರು —ದೇವಸ್ಥಾನದ ಅರ್ಚಕನಾಗಿ ಕಾಮಿಕ್ ಪಾತ್ರದಲ್ಲಿ ಕಾಣಿಸಿಕೊಂಡರು. ರಂಗಭೂಮಿ ಕಲಾವಿದೆ ಟಿ.ಪಿ.ರಾಜಲಕ್ಷ್ಮಿಯನ್ನು ಮಹಿಳಾ ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಲಾಯಿತು; ಚಲನಚಿತ್ರ ಇತಿಹಾಸಕಾರ ರಾಂಡರ್ ಗೈ ಪ್ರಕಾರ, ಅವರು "ನಾಯಕಿಯಾಗಿ ನಟಿಸಲು ಸ್ವಯಂಚಾಲಿತ ಆಯ್ಕೆ." ಇದಕ್ಕೂ ಮೊದಲು, ರಾಜಲಕ್ಷ್ಮಿ ಅನೇಕ ಮೂಕಿ ಚಿತ್ರಗಳಲ್ಲಿ ನಟಿಸಿದ್ದರು ಮತ್ತು ಕಾಳಿದಾಸ್ ಅವರ ಮೊದಲ ಧ್ವನಿ ಚಿತ್ರವಾಗಿತ್ತು. ಪೋಷಕ ಪಾತ್ರಗಳನ್ನು ತೇವರಂ ರಾಜಂಬಾಳ್, ಟಿ. ಸುಶೀಲಾ ದೇವಿ, ಜೆ.ಸುಶೀಲಾ, ಮತ್ತು ಎಂ.ಎಸ್.ಸಂತಾನಲಕ್ಷ್ಮಿ ನಿರ್ವಹಿಸಿದ್ದಾರೆ. ಜರ್ಮನ್ ತಂತ್ರಜ್ಞರು ಜರ್ಮನ್ ನಿರ್ಮಿತ ಉಪಕರಣಗಳನ್ನು ಬಳಸಿಕೊಂಡು ಧ್ವನಿಯನ್ನು ರೆಕಾರ್ಡ್ ಮಾಡಿದ್ದಾರೆ. ಕಾಳಿದಾಸ್ ಅನ್ನು ಬಾಂಬೆಯಲ್ಲಿ (ಈಗ ಮುಂಬೈ ) ಆಲಂ ಅರಾ ಸೆಟ್‌ನಲ್ಲಿ ಚಿತ್ರೀಕರಿಸಲಾಯಿತು; ಇದನ್ನು ಎಂಟು ದಿನಗಳಲ್ಲಿ ಪೂರ್ಣಗೊಳಿಸಲಾಯಿತು, ೬.೦೦೦ ‍ಪೀಟ್ ಬಳಸಿ ಅಥವಾ ಚಿತ್ರದ ಮೂಲಗಳು ಭಿನ್ನವಾಗಿರುತ್ತವೆ. ಚಲನಚಿತ್ರ ಇತಿಹಾಸಕಾರ ಫಿಲ್ಮ್ ನ್ಯೂಸ್ ಆನಂದನ್ ಅವರು ಕಾಳಿದಾಸ್ "ತರಾತುರಿಯಲ್ಲಿ ನಿರ್ಮಿಸಲಾಗಿದೆ ಮತ್ತು ತಾಂತ್ರಿಕವಾಗಿ ದೋಷಪೂರಿತವಾಗಿದೆ" ಎಂದು ಹೇಳಿದ್ದಾರೆ. ಕಾಳಿದಾಸ್ ಪ್ರಾಥಮಿಕ ಭಾಷೆ ತಮಿಳು ಆಗಿದ್ದರೆ, ಚಿತ್ರದ ನಟರು ತಮಿಳು (ರಾಜಲಕ್ಷ್ಮಿ), ತೆಲುಗು (ವೆಂಕಟೇಶನ್) ಮತ್ತು ಹಿಂದಿ (ಪ್ರಸಾದ್) ಸೇರಿದಂತೆ ವಿವಿಧ ಭಾಷೆಗಳನ್ನು ಮಾತನಾಡುತ್ತಿದ್ದರು. ವೆಂಕಟೇಶನ ಮೊದಲ ಭಾಷೆ ತೆಲುಗು, ಮತ್ತು ಅವರಿಗೆ ತಮಿಳು ಪದಗಳನ್ನು ಸರಿಯಾಗಿ ಉಚ್ಚರಿಸಲು ಬರದ ಕಾರಣ, ಅವರ ಸಂಭಾಷಣೆ ತೆಲುಗು ಭಾಷೆಯಲ್ಲಿತ್ತು. ಗೈ ಪ್ರಕಾರ, ಜರ್ಮನ್ ಧ್ವನಿಮುದ್ರಣ ಉಪಕರಣವು ತಮಿಳು ಭಾಷೆಯನ್ನು ರೆಕಾರ್ಡ್ ಮಾಡುತ್ತದೆಯೇ ಎಂದು ಇರಾನಿ ಆರಂಭದಲ್ಲಿ ಖಚಿತವಾಗಿರಲಿಲ್ಲ; ಅವರ ಸಂದೇಹಗಳನ್ನು ನಿವಾರಿಸಲು, ಅವರು ಕೆಲವು ನಟರು ತಮಿಳಿನಲ್ಲಿ ಮಾತನಾಡಲು ಮತ್ತು ಹಾಡಲು, ತೆಲುಗಿನಲ್ಲಿ ವೆಂಕಟೇಶನ್ ಅವರೊಂದಿಗೆ ಹಾಡಿದರು. ಹಿಂದಿಯನ್ನು ರೆಕಾರ್ಡ್ ಮಾಡಲು ಉಪಕರಣವನ್ನು ಈಗಾಗಲೇ ಬಳಸಲಾಗಿದ್ದರಿಂದ, ಅವರು ಇತರ ನಟರು ಆ ಭಾಷೆಯನ್ನು ಮಾತನಾಡುವಂತೆ ಮಾಡಿದರು; ಉಪಕರಣವು ಪ್ರತಿ ಭಾಷೆಯನ್ನು ಸ್ಪಷ್ಟವಾಗಿ ದಾಖಲಿಸಿದೆ. ಬಹು ಭಾಷೆಗಳ ಬಳಕೆಯಿಂದಾಗಿ, ಫಿಲ್ಮ್ ನ್ಯೂಸ್ ಆನಂದನ್, ಬಿರ್ಗಿಟ್ ಮೇಯರ್, ಮತ್ತು ಗೈ ಸೇರಿದಂತೆ ಮೂಲಗಳು ಕಾಳಿದಾಸ್ ಅನ್ನು ಮೊದಲ ತಮಿಳು ಧ್ವನಿ ಚಿತ್ರ ಎಂದು ಕರೆಯಲು ನಿರಾಕರಿಸಿವೆ; ಗೈ ಬದಲಿಗೆ ಇದನ್ನು ಭಾರತದ ಮೊದಲ ಬಹುಭಾಷಾ ಚಿತ್ರ ಎಂದು ಕರೆದರು. ೨೦೧೦ರ ಪುಸ್ತಕ ಸಿನಿಮಾಸ್ ಆಫ್ ಸೌತ್ ಇಂಡಿಯಾ: ಕಲ್ಚರ್, ರೆಸಿಸ್ಟೆನ್ಸ್, ಐಡಿಯಾಲಜಿ, ಸೌಮ್ಯ ದೇಚಮ್ಮ ಹೇಳುವಂತೆ ಚಿತ್ರದಲ್ಲಿ ತೆಲುಗು ಸಂಭಾಷಣೆಗಳನ್ನು ಸೇರಿಸಲಾಗಿದೆ, ಸ್ಪಷ್ಟವಾಗಿ "ದಕ್ಷಿಣ ಭಾರತದ ಎರಡು ಪ್ರಮುಖ ಭಾಷೆಯ ಮಾರುಕಟ್ಟೆಗಳಲ್ಲಿ ಅದರ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸಲು". ಸಂಗೀತ ಭಾಸ್ಕರ ದಾಸ್ ರಚಿಸಿದ ಮತ್ತು ಬರೆದ ಐವತ್ತು ಹಾಡುಗಳನ್ನು ಕಾಳಿದಾಸ್ ಒಳಗೊಂಡಿತ್ತು. ಚಲನಚಿತ್ರ ಇತಿಹಾಸಕಾರ ಎಸ್. ಥಿಯೋಡರ್ ಬಾಸ್ಕರನ್ ಅವರು ತಮ್ಮ ೧೯೯೬ ರ ಪುಸ್ತಕ, ದಿ ಐ ಆಫ್ ದಿ ಸರ್ಪೆಂಟ್: ಆನ್ ಇಂಟ್ರಡಕ್ಷನ್ ಟು ತಮಿಳು ಸಿನಿಮಾದಲ್ಲಿ, ಎಲ್ಲಾ ಹಾಡುಗಳು ತಮಿಳಿನಲ್ಲಿವೆ ಎಂದು ಉಲ್ಲೇಖಿಸಿದ್ದಾರೆ. ಬಿರ್ಗಿತ್ ಮೆಯೆರ್ ತನ್ನ ೨೦೦೯ ರ ಪುಸ್ತಕದ ಸೌಂದರ್ಯದ ರಚನೆಗಳಲ್ಲಿ ಬಾಸ್ಕರನ್ ಅವರನ್ನು ವಿರೋಧಿಸಿದರು, ಚಲನಚಿತ್ರವು ತೆಲುಗು ಹಾಡುಗಳನ್ನು ಹೊಂದಿದೆ ಎಂದು ಹೇಳಿದ್ದಾರೆ, ಈ ದೃಷ್ಟಿಕೋನವನ್ನು ಸೌಮ್ಯ ದೇಚಮ್ಮ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬೆಂಬಲಿಸಿದರು: ಸಂಸ್ಕೃತಿ, ಪ್ರತಿರೋಧ, ಐಡಿಯಾಲಜಿ . ಚಲನಚಿತ್ರವು ಪುರಾಣವನ್ನು ಆಧರಿಸಿದ್ದರೂ, ಇದು ಕರ್ನಾಟಕ ಸಂಗೀತಗಾರ ತ್ಯಾಗರಾಜರ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಚಾರದ ಹಾಡುಗಳಂತಹ ಸಂಯೋಜನೆಗಳನ್ನು ಒಳಗೊಂಡಿತ್ತು. ಫಿಲ್ಮ್ ನ್ಯೂಸ್ ಆನಂದನ್ ಅವರು ರೆಡ್ಡಿಯವರು "ಬಹುಶಃ ತನಗೆ ಬಂದ ಯಾವುದೇ ಕಲಾತ್ಮಕತೆಯನ್ನು ಸೇರಿಸಲು ಸಂತೋಷಪಡುತ್ತಾರೆ. ಪ್ರಸ್ತುತತೆ ಅಷ್ಟೇನೂ ಸಮಸ್ಯೆಯಾಗಿರಲಿಲ್ಲ." ೨೦೦೮ ರ ಪುಸ್ತಕ ತಮಿಳು ಸಿನಿಮಾ: ದಿ ಕಲ್ಚರಲ್ ಪಾಲಿಟಿಕ್ಸ್ ಆಫ್ ಇಂಡಿಯಾನ್ ಅದರ್ ಫಿಲ್ಮ್ ಇಂಡಸ್ಟ್ರಿ ಸೆಲ್ವರಾಜ್ ವೇಲಾಯುಥಮ್ ಮತ್ತು ಬಿರ್ಗಿಟ್ ಮೆಯೆರ್ ಅವರ ಸೌಂದರ್ಯದ ರಚನೆಗಳು ಚಿತ್ರದಲ್ಲಿ ಕಾಣಿಸಿಕೊಂಡಿರುವ ರಾಷ್ಟ್ರೀಯತೆಯ ಹಾಡುಗಳಿಗೆ ಮುಖ್ಯ ಕಥಾವಸ್ತುವಿನ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತದೆ, [೩೪] ಆದರೆ ರಾಂಡರ್ ಗೈ ಆ ಅವಧಿಯಲ್ಲಿ ಹೇಳುತ್ತದೆ, "ಐತಿಹಾಸಿಕ ನಿಖರತೆಯು ಸಂಗೀತದಷ್ಟೇ ಮುಖ್ಯವಾಗಿರಲಿಲ್ಲ. ದೇವತೆಗಳು ಆಧುನಿಕ ಕವಿತೆಗಳು ಅಥವಾ ರಾಷ್ಟ್ರೀಯತಾವಾದಿ ಹಾಡುಗಳನ್ನು ಹಾಡುವುದು ಅಸಾಮಾನ್ಯವೇನಲ್ಲ." ಇದು "ರಾಜಕೀಯ ಪ್ರಚಾರದ ಸಾಧನವಾಗಿ ಬಳಕೆಯಾಗುತ್ತಿರುವ ಸಿನಿಮಾದ ಆರಂಭವನ್ನು" ಗುರುತಿಸಿದೆ ಎಂದು ಬಾಸ್ಕರನ್ ಗಮನಿಸಿದರು. ದೇಶಭಕ್ತಿ ಗೀತೆ "ಗಾಂಧಿಯಿನ್ ಕೈ ರತ್ತಿನಮೆ" (" [ಮಹಾತ್ಮ] ಗಾಂಧಿ ನಿರ್ವಹಿಸುವ ಚರಕಾ "), ಇದನ್ನು "ರಾಟ್ಟಿನಾಮಂ" ಎಂದೂ ಕರೆಯಲಾಗುತ್ತದೆ. ... ಗಾಂಧಿ ಕೈ ಭಾನಾಮಮ್ ...", ಟಿ.ಪಿ. ರಾಜಲಕ್ಷ್ಮಿ ಅವರು ಹಾಡಿದ್ದಾರೆ, ಮತ್ತು ಇದು ಕಾಳಿದಾಸ್ ಕಥೆಗೆ ಸಂಬಂಧಿಸಿಲ್ಲ; ಈ ಹಾಡು ರಾಷ್ಟ್ರೀಯತೆಯ, ಗಾಂಧಿಯ ಸಂಕೇತವಾದ ಚರಕಾವನ್ನು (ನೂಲುವ ಚಕ್ರ) ಶ್ಲಾಘಿಸುತ್ತದೆ. [೩೭] ತ್ಯಾಗರಾಜರ ಎರಡು ಸಂಯೋಜನೆಗಳಾದ "ಎಂತ ನೆರ್ಚಿನ" ಮತ್ತು "ಸುರರಾಗಧಾರ" ವನ್ನು ರಾಜಲಕ್ಷ್ಮಿ ಅವರು ಚಿತ್ರಕ್ಕಾಗಿ ಪ್ರದರ್ಶಿಸಿದರು. ರಾಜಲಕ್ಷ್ಮಿ ಹಾಡಿರುವ ಇನ್ನೊಂದು ಹಾಡು, "ಮನ್ಮದ ಬಾನಮದಾ", ಅಗಾಧವಾಗಿ ಜನಪ್ರಿಯವಾಯಿತು ಮತ್ತು "ನಾಯಕಿಯ ಪ್ರೀತಿಯ ಭಾವನಾತ್ಮಕ ಪ್ರಕೋಪ" ಎಂದು ಗೈ ವಿವರಿಸಿದರು. ಇನ್ನೊಂದು ಹಾಡು, "ಇಂದಿಯರ್‌ಗಳು ನಮ್ಮವರ್ಕ್ಕುಲ್ ಎನೋ ವೀನ್ ಸಂದೈ", ಭಾರತೀಯ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಮತ್ತು ಭಾರತೀಯರಲ್ಲಿ ಒಗ್ಗಟ್ಟಿನ ಅಗತ್ಯದ ಬಗ್ಗೆ ಮಾತನಾಡಿದೆ. ಗೈ "ಮನ್ಮದ ಬಾನಮದಾ" ಅನ್ನು "ತಮಿಳು ಚಿತ್ರರಂಗದ ಮೊದಲ ಹಿಟ್ ಹಾಡು" ಎಂದು ಬಣ್ಣಿಸಿದರು. ಕಾಳಿದಾಸ್ ಬಿಡುಗಡೆಯನ್ನು ಘೋಷಿಸುವ ಜಾಹೀರಾತನ್ನು ೩೦ ಅಕ್ಟೋಬರ್ ೧೯೩೧ ರಂದು ದಿ ಹಿಂದೂ ನಲ್ಲಿ ಪ್ರಕಟಿಸಲಾಯಿತು, ಅಲ್ಲಿ ಚಲನಚಿತ್ರವು "ತಮಿಳು ಮತ್ತು ತೆಲುಗು ಹಾಡುಗಳೊಂದಿಗೆ ನಗರದಲ್ಲಿ ಪ್ರದರ್ಶಿಸಲಾದ ಮೊದಲ ಟಾಕಿ" ಎಂದು ಘೋಷಿಸಲಾಯಿತು. ಕಾಳಿದಾಸ್ ಮೊದಲ ಬಾರಿಗೆ ೩೧ ಅಕ್ಟೋಬರ್ ೧೯೩೧ ರಂದು ಮದ್ರಾಸ್ ನ(ಈಗ ಚೆನ್ನೈ ) ಥಿಯೇಟರ್ ಕಿನೆಮಾ ಸೆಂಟ್ರಲ್ (ಈಗ ಮುರುಗನ್ ಥಿಯೇಟರ್ ಎಂದು ಕರೆಯಲಾಗುತ್ತದೆ) ನಲ್ಲಿ ಬಿಡುಗಡೆಯಾಯಿತು, ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಮತ್ತು ಅಸಹಕಾರ ಚಳುವಳಿಯೊಂದಿಗೆ ಹೊಂದಿಕೆಯಾಯಿತು. ಫಿಲ್ಮ್ ರೀಲುಗಳನ್ನು ಮದ್ರಾಸಿಗೆ ಕೊಂಡೊಯ್ದಾಗ, ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಾವಿರಾರು ಜನರು ಜಮಾಯಿಸಿದರು ಮತ್ತು ವಾಲ್ ಟ್ಯಾಕ್ಸ್ ರಸ್ತೆಯ ಮೂಲಕ ಕಿನೆಮಾ ಸೆಂಟ್ರಲ್‌ಗೆ ರೀಲ್ ಬಾಕ್ಸ್ ಅನ್ನು ಹಿಂಬಾಲಿಸಿದರು, ಗುಲಾಬಿ ದಳಗಳನ್ನು ಎಸೆದು, ತೆರೆದ ತೆಂಗಿನಕಾಯಿ ಒಡೆದು, ಧೂಪವನ್ನು ಸುಟ್ಟು ಸ್ವಾಗತಿಸಿದರು. ಚಿತ್ರದ ಪೋಸ್ಟರ್‌ಗಳು, ತಮಿಳು ತೆಲುಗು ಪೇಸಿ ಪಾಡು ಪದಮ್ ತಮಿಳು ಧ್ವನಿ ಚಲನಚಿತ್ರವನ್ನು ನಿರ್ಮಿಸುವ ಹಿಂದಿನ ಪ್ರಯತ್ನ, ನಾಲ್ಕು-ರೀಲ್ ಕಿರುಚಿತ್ರವನ್ನು (ಎಸ್. ಥಿಯೋಡರ್ ಬಾಸ್ಕರನ್ ಅವರು ಕೊರತಿ ನೃತ್ಯ ಮತ್ತು ಹಾಡುಗಳು ಎಂದು ಗುರುತಿಸಿದ್ದಾರೆ) ಪಕ್ಕದ ಆಕರ್ಷಣೆಯಾಗಿ ಕಾಳಿದಾಸ್ ಜೊತೆಗೆ ಪ್ರದರ್ಶಿಸಲಾಯಿತು. ಇದರಲ್ಲಿ ರಾಜಲಕ್ಷ್ಮಿ ಮತ್ತು ಜಿಪ್ಸಿ ನೃತ್ಯಗಾರ್ತಿ ಝಾನ್ಸಿ ಬಾಯಿ ನಟಿಸಿದ್ದರು. ೨೦೧೫ ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ರಾಜಲಕ್ಷ್ಮಿ ಅವರ ಪುತ್ರಿ ಕಮಲಾ ಅವರು ಚಲನಚಿತ್ರದ ಬಿಡುಗಡೆಯ ಸಮಯದಲ್ಲಿ, "[ರಾಜಲಕ್ಷ್ಮಿ] ಅವರ ಮೊದಲ ಪೆಸಮ್ ಪದದಲ್ಲಿ ನಟಿಸುವುದನ್ನು ವೀಕ್ಷಿಸಲು ಮದ್ರಾಸ್‌ನ ಜನರು ಸುಮಾರು 4-5 ಕಿಮೀ ದೂರದವರೆಗೆ ಥಿಯೇಟರ್‌ಗಳ ಹೊರಗೆ ನಿಲ್ಲುತ್ತಿದ್ದರು. ಅವಳು ಇಲ್ಲಿ ಘರ್ಜನೆಯೊಂದಿಗೆ ಸ್ವಾಗತಿಸಲಾಯಿತು. ಜನರಿಗೆ ಹೊಸ ವಿಷಯವಾದ್ದರಿಂದ ರಸ್ತೆಗಳು ಮತ್ತು ಆಟೋರಿಕ್ಷಾಗಳಲ್ಲಿ ಅಳವಡಿಸಲಾಗಿರುವ ಸ್ಪೀಕರ್‌ಗಳಿಂದ ಆಕೆಯ ಹೆಸರನ್ನು ಘೋಷಿಸಲಾಯಿತು. ಕಾಳಿದಾಸ್ ವಾಣಿಜ್ಯಿಕವಾಗಿ ಯಶಸ್ವಿಯಾಯಿತು, ೭೫೦೦೦ ಕ್ಕಿಂತ ಹೆಚ್ಚು ಗಳಿಸಿತು ಮತ್ತು ಹಿಂದೂ ತಮಿಳು ಥಿಸೈ ೨೦೧೩ ರ ಅಂದಾಜಿನ ಪ್ರಕಾರ ೮೦೦೦೦ (೨೦೨೧ ರ ಬೆಲೆಯಲ್ಲಿ ೧.೫ ಕೋಟಿ ಮೌಲ್ಯದ) ಬಜೆಟ್ ಅನ್ನು ಸುಲಭವಾಗಿ ಕವರ್ ಮಾಡಿತು. ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರ ಜಿ. ಧನಂಜಯನ್ ಅವರು "ಪ್ರೇಕ್ಷಕರು ತಮ್ಮ ಭಾಷೆಯ ಸಂಭಾಷಣೆ ಮತ್ತು ಹಾಡುಗಳೊಂದಿಗೆ ಆಡಿಯೊ ದೃಶ್ಯವನ್ನು ವೀಕ್ಷಿಸಲು ಹೊಸತನ" ಎಂಬ ಕಾರಣದಿಂದ ಚಿತ್ರ ಯಶಸ್ವಿಯಾಗಿದೆ ಎಂದು ಹೇಳಿದರು. ಅವರ ೧೯೯೭ರ ಪುಸ್ತಕ ಸ್ಟ್ರೀಟ್ ಲೈಟ್, ಸ್ಟ್ರಾರ್ ಬ್ರೈಟ್ :ದ ಅರ್ಲಿ ತಮಿಳ್ ಸಿನಿಮಾ ರಾಂಡರ್ ಗೈ ಕಾಳಿದಾಸ್ ಅನ್ನು "ಕಚ್ಚಾ ಪ್ರಯೋಗ" ಎಂದು ವಿವರಿಸಿದರು, ಅದು ಕಳಪೆ ಲಿಪ್ ಸಿಂಕ್ ಅನ್ನು ಹೊಂದಿದೆ; ಪಾತ್ರಗಳು ಬಾಯಿ ತೆರೆದಾಗ ಶಬ್ದವಾಗಲಿಲ್ಲ, ಸಂಭಾಷಣೆ ಅಥವಾ ಹಾಡು ಕೇಳಿದಾಗ ಕಲಾವಿದರು ಮೌನವಾಗಿದ್ದರು. ತಾಂತ್ರಿಕ ಸೊಗಡುಗಳ ಬಗ್ಗೆ ಸಾರ್ವಜನಿಕರು ತಲೆಕೆಡಿಸಿಕೊಳ್ಳದೆ ಚಿತ್ರ ನೋಡಲು ಮುಗಿಬಿದ್ದರು ಎಂದರು. ಚಲನಚಿತ್ರ ವಿಮರ್ಶಕ ಮತ್ತು ಪತ್ರಕರ್ತ ಕಲ್ಕಿ ಕೃಷ್ಣಮೂರ್ತಿ ಅವರು ಆನಂದ ವಿಕಟನ್‌ಗಾಗಿ ಚಿತ್ರದ ವಿಮರ್ಶೆಯಲ್ಲಿ ಅವರು ಬಳಸಿದ ವೇಷಭೂಷಣಗಳಿಂದ ವಿಸ್ಮಯಗೊಂಡಿದ್ದಾರೆ ಎಂದು ಗಮನಿಸಿದರು. ಅವರು ರಾಜಲಕ್ಷ್ಮಿ ಅವರ ಅಭಿನಯ ಮತ್ತು ಅವರ ನೃತ್ಯವನ್ನು ಶ್ಲಾಘಿಸಿದರು ಆದರೆ ಅವರ ಗಾಯನವನ್ನು ಟೀಕಿಸಿದರು, ಆಕೆಯ ಗಾಯನದ ಗಾಯ ಸರಿಪಡಿಸಲು ವೈದ್ಯರ ಬಳಿಗೆ ಹೋಗಬೇಕಾಯಿತು ಎಂದು ಹೇಳಿದರು. ತಮಿಳು ವಾರ್ತಾಪತ್ರಿಕೆ ಸ್ವದೇಶಮಿತ್ರನ್ ೨೯ ಅಕ್ಟೋಬರ್ ೧೯೩೧ ರಂದು ಕಾಳಿದಾಸ್ ಅವರ ಥಿಯೇಟರ್ ಬಿಡುಗಡೆಗೆ ಎರಡು ದಿನಗಳ ಮೊದಲು ಒಂದು ಅನುಕೂಲಕರ ವಿಮರ್ಶೆಯನ್ನು ಮುದ್ರಿಸಿತು, ಅಲ್ಲಿ ವಿಮರ್ಶಕರು ಕೃಷ್ಣಮೂರ್ತಿಯವರ ಕಾಮೆಂಟ್‌ಗಳಿಗೆ ವಿರುದ್ಧವಾಗಿ ರಾಜಲಕ್ಷ್ಮಿಯವರ ಗಾಯನವನ್ನು ಮೆಚ್ಚಿದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಧ್ವನಿಯ ಆಗಮನ, ಕಾಳಿದಾಸ್ ಬಿಡುಗಡೆಯೊಂದಿಗೆ, ರಂಗಭೂಮಿ ಕಲಾವಿದರ ವಲಸೆಯನ್ನು ಚಿತ್ರರಂಗಕ್ಕೆ ಪ್ರಚೋದಿಸಿತು. ಕಾಳಿದಾಸ್ ೧೯೩೧ ರಲ್ಲಿ ನಿರ್ಮಾಣಗೊಂಡು ಬಿಡುಗಡೆಯಾದ ಏಕೈಕ ದಕ್ಷಿಣ ಭಾರತದ ಚಲನಚಿತ್ರವಾಗಿದೆ ಚಿತ್ರದ ಯಾವುದೇ ಮುದ್ರಣ ಅಥವಾ ಗ್ರಾಮಫೋನ್ ರೆಕಾರ್ಡ್ ಉಳಿದುಕೊಂಡಿದೆ ಎಂದು ತಿಳಿದಿಲ್ಲ, ಇದು ಕಳೆದುಹೋದ ಚಲನಚಿತ್ರವಾಗಿದೆ . ೧೯೬೪ ರಲ್ಲಿ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾವನ್ನು ಸ್ಥಾಪಿಸುವ ಮುಂಚೆಯೇ ಚಲನಚಿತ್ರವು "ಧೂಳಾಗಿ ಮಾರ್ಪಟ್ಟಿದೆ" ಎಂದು ಇಂಡಿಯನ್ ಎಕ್ಸ್‌ಪ್ರೆಸ್ ೨೦೧೪ ರಲ್ಲಿ ಹೇಳಿದೆ ಉಳಿದಿರುವ ಕಲಾಕೃತಿಗಳಲ್ಲಿ ಕೆಲವು ಸ್ಟಿಲ್‌ಗಳು, ಜಾಹೀರಾತುಗಳು ಮತ್ತು ಹಾಡಿನ ಪುಸ್ತಕದ ಮುಖಪುಟದ ಚಿತ್ರ ಸೇರಿವೆ. ಡಿಸೆಂಬರ್ ೨೦೦೨ ರ ಹೊತ್ತಿಗೆ, ಫಿಲ್ಮ್ ನ್ಯೂಸ್ ಆನಂದನ್ ಅವರು ಚಲನಚಿತ್ರಕ್ಕೆ ಸಂಬಂಧಿಸಿದ ಹಲವಾರು ಛಾಯಾಚಿತ್ರಗಳನ್ನು ಸಂರಕ್ಷಿಸಿದ್ದಾರೆ. ಕಾಳಿದಾಸ್ ಅವರು ರಾಜಲಕ್ಷ್ಮಿ ಅವರ ವೃತ್ತಿಜೀವನದಲ್ಲಿ ಪ್ರಮುಖ ಪ್ರಗತಿಯಾಗಿದ್ದರು, ಮತ್ತು ಅವರನ್ನು " ಹಿನ್ನಲೆ ಗಾಯನ ತಾರೆ " ಮಾಡಿದರು. ಕಾಳಿದಾಸನ ಜೀವನವನ್ನು ಆಧರಿಸಿದ ಇತರ ಚಲನಚಿತ್ರಗಳು ಕನ್ನಡ ಚಲನಚಿತ್ರ ಮಹಾಕವಿ ಕಾಳಿದಾಸ (೧೯೫೫), ಇದು ಕನ್ನಡದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಹಿಂದಿ ಚಲನಚಿತ್ರ ಕವಿ ಕಾಳಿದಾಸ್ (೧೯೫೯), ತೆಲುಗು ಚಲನಚಿತ್ರ ಮಹಾಕವಿ ಕಾಳಿದಾಸ (೧೯೬೦), ತಮಿಳು ಚಲನಚಿತ್ರ ಮಹಾಕವಿ ಕಾಳಿದಾಸ್ (೧೯೬೬), ಮತ್ತು ಕನ್ನಡ ಚಲನಚಿತ್ರ ಕವಿರತ್ನ ಕಾಳಿದಾಸ (೧೯೮೩). ಸಹ ನೋಡಿ ಕೀಚಕ ವಧಂ, ದಕ್ಷಿಣ ಭಾರತದ ಮೊದಲ ಮೂಕಿ ಚಿತ್ರ ಕಳೆದುಹೋದ ಚಲನಚಿತ್ರಗಳ ಪಟ್ಟಿ ಟಿಪ್ಪಣಿಗಳು ಉಲ್ಲೇಖಗಳು Pages with unreviewed translations
152108
https://kn.wikipedia.org/wiki/%E0%B2%95%E0%B2%AA%E0%B2%BF%E0%B2%B2%20%E0%B2%A4%E0%B3%80%E0%B2%B0%E0%B3%8D%E0%B2%A5%E0%B2%82
ಕಪಿಲ ತೀರ್ಥಂ
ಕಪಿಲ ತೀರ್ಥಂ ಭಾರತದ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಪತಿಯಲ್ಲಿರುವ ಪ್ರಸಿದ್ಧ ಶೈವ ದೇವಾಲಯ ಮತ್ತು ತೀರ್ಥವಾಗಿದೆ. ಈ ವಿಗ್ರಹವನ್ನು ಕಪಿಲ ಮುನಿ ಸ್ಥಾಪಿಸಿದನೆಂದು ನಂಬಲಾಗಿದೆ ಆದ್ದರಿಂದ ಇಲ್ಲಿ ಶಿವನನ್ನು ಕಪಿಲೇಶ್ವರ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಶೇಷಾಚಲಂ ಬೆಟ್ಟಗಳ ಭಾಗವಾಗಿರುವ ತಿರುಮಲ ಬೆಟ್ಟಗಳ ಬುಡದಲ್ಲಿ ಕಡಿದಾದ ಮತ್ತು ಲಂಬವಾದ ಮುಖಗಳಲ್ಲಿ ಪರ್ವತದ ಗುಹೆಯ ಪ್ರವೇಶದ್ವಾರದಲ್ಲಿ ನಿಂತಿದೆ. ಅಲ್ಲಿ ಪರ್ವತದ ಹೊಳೆಯ ನೀರು ನೇರವಾಗಿ " ಕಪಿಲ ತೀರ್ಥಂ " ಎಂದು ಕರೆಯಲ್ಪಡುವ ದೇವಾಲಯದ ಪುಷ್ಕರಿಣಿಗೆ ಬೀಳುತ್ತದೆ. ಇಲ್ಲಿ ಕುಳಿತಿರುವ " ನಂದಿ "ಯ ಕಲ್ಲಿನ ಪ್ರತಿಮೆ, ಶಿವನ ಕುದುರೆ, ದೇವಾಲಯದ ಪ್ರವೇಶದ್ವಾರದಲ್ಲಿ ಭಕ್ತರು ಮತ್ತು ದಾರಿಹೋಕರನ್ನು ಸ್ವಾಗತಿಸುತ್ತದೆ. ವ್ಯುತ್ಪತ್ತಿ ದೇವಾಲಯ ಮತ್ತು ತೀರ್ಥವು ಕಪಿಲ ಮುನಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ದಂತಕಥೆ ದೇವಾಲಯದ ದಂತಕಥೆಯ ಪ್ರಕಾರ ಕಪಿಲ ಮುನಿ ಈ ಸ್ಥಳದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದರು ಮತ್ತು ಮುನಿಯ ಭಕ್ತಿಯಿಂದ ಸಂತೋಷಪಟ್ಟ ಶಿವ ಮತ್ತು ಪಾರ್ವತಿ ತಮ್ಮನ್ನು ತಾವು ಪ್ರಸ್ತುತಪಡಿಸಿದರು. ಲಿಂಗವು ಸ್ವಯಂ-ಪ್ರಕಟವಾಗಿದೆ ಎಂದು ನಂಬಲಾಗಿದೆ. ಕಪಿಲ ಮುನಿಯು ಪುಷ್ಕರಿಣಿಯಲ್ಲಿ (ತೀರ್ಥ) ಬಿಲಂ (ಕುಳಿ) ದಿಂದ ಭೂಮಿಗೆ ಹೊರಹೊಮ್ಮಿದನೆಂದು ನಂಬಲಾಗಿದೆ. ಇತಿಹಾಸ ಈ ದೇವಾಲಯವು ೧೩ ನೇ ಮತ್ತು ೧೬ ನೇ ಶತಮಾನಗಳಲ್ಲಿ ವಿಜಯನಗರದ ರಾಜರಿಂದ, ವಿಶೇಷವಾಗಿ ಸಾಲುವ ನರಸಿಂಹ ದೇವರಾಯ ಮತ್ತು ಶ್ರೀ ಕೃಷ್ಣದೇವರಾಯ ಮತ್ತು ನಂತರದ ಕೆಲವು ಆಡಳಿತಗಾರರಾದ ವೆಂಕಟಪತಿ ರಾಯ ಮತ್ತು ಶ್ರೀ ಕೃಷ್ಣ ದೇವರಾಯನ ಅಳಿಯರಾದ ಅಳಿಯ ರಾಮರಾಯರಿಂದ ಉತ್ತಮ ಪೋಷಣೆಯನ್ನು ಪಡೆಯಿತು. ಆಡಳಿತ ಈಗಿನ ದೇವಾಲಯವು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಆಡಳಿತದಲ್ಲಿದೆ. ಟಿಟಿಡಿ(TTD) ಅಡಿಯಲ್ಲಿ ಈ ದೇವಾಲಯವು ನಿರಂತರ ರಕ್ಷಣೆ ಮತ್ತು ಪೋಷಣೆಯನ್ನು ಪಡೆಯುತ್ತದೆ ಮತ್ತು ವಾರ್ಷಿಕ ಉತ್ಸವಗಳನ್ನು ಮಹಾ ವೈಭವದಿಂದ ಆಚರಿಸಲಾಗುತ್ತದೆ. ಧಾರ್ಮಿಕ ಪ್ರಾಮುಖ್ಯತೆ ಕಾರ್ತಿಕ ಮಾಸದಲ್ಲಿ ಹುಣ್ಣಿಮೆಯ ದಿನದಂದು ಮೂರು ಲೋಕಗಳಲ್ಲಿರುವ ಎಲ್ಲಾ ತೀರ್ಥಗಳು ಮಧ್ಯಾಹ್ನ ಹತ್ತು ಘಟಿಕಾಗಳಿಗಾಗಿ (ಒಂದು ಘಟಿಕಾ ೨೪ ನಿಮಿಷಗಳಿಗೆ ಸಮಾನ) ಈ ಕಪಿಲ ತೀರ್ಥದಲ್ಲಿ ವಿಲೀನಗೊಳ್ಳುತ್ತವೆ. ಆ ಶುಭ ಸಮಯದಲ್ಲಿ ಸ್ನಾನ ಮಾಡುವ ವ್ಯಕ್ತಿಗಳು ಜನನ ಮತ್ತು ಮರಣದ ಚಕ್ರದಿಂದ ('ಬ್ರಹ್ಮಲೋಕ') ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಇದಲ್ಲದೆ, ತಮ್ಮ ಅಗಲಿದ ಪೂರ್ವಜರ ಆತ್ಮಗಳಿಗೆ ಪಿಂಡಮ್ (ತಿಧಿ ಅಥವಾ ತಧಿನಾ) ಅನ್ನು ಎಂದಿಗೂ ಅರ್ಪಿಸದವರು ಅದನ್ನು ಇಲ್ಲಿ ಮಾಡಬಹುದು ಮತ್ತು ಹಿಂದೆ ಅದನ್ನು ಮಾಡದ ಕಾರಣ ನಿಮ್ಮ ಪಾಪಗಳನ್ನು ತೊಳೆಯಬಹುದು. ಹಬ್ಬಗಳು ಈ ದೇವಾಲಯವು ಮಹಾ ಶಿವರಾತ್ರಿ, ಕಾರ್ತಿಕ ದೀಪ, ವಿನಾಯಕ ಚೌತಿ, ಆದಿಕೀರ್ತಿಕ ಇತ್ಯಾದಿಗಳನ್ನು ಒಳಗೊಂಡಿರುವ ಶೈವ ಧರ್ಮದ ಎಲ್ಲಾ ಪ್ರಮುಖ ಹಬ್ಬಗಳನ್ನು ಆಚರಿಸುತ್ತದೆ. ಕಪಿಲೇಶ್ವರ ಸ್ವಾಮಿ ಬ್ರಹ್ಮೋತ್ಸವಗಳು ಫೆಬ್ರವರಿ ತಿಂಗಳಲ್ಲಿ ಟಿಟಿಡಿಯಿಂದ ಆಚರಿಸಲ್ಪಡುವ ದೇವಾಲಯದ ಅತಿದೊಡ್ಡ ಕಾರ್ಯಕ್ರಮವಾಗಿದೆ. ಇದು ಒಂಬತ್ತು ದಿನಗಳ ಕಾರ್ಯಕ್ರಮವಾಗಿದ್ದು, ಶಿವ ಮತ್ತು ಪಾರ್ವತಿಯ ಮೆರವಣಿಗೆ ದೇವತೆಯನ್ನು ಹಂಸ ವಾಹನದಿಂದ ಪ್ರಾರಂಭಿಸಿ ತ್ರಿಶೂಲ ಸ್ನಾನದೊಂದಿಗೆ (ಶಿವ ತ್ರಿಶೂಲಕ್ಕೆ ಆಕಾಶ ಸ್ನಾನ) ವಿವಿಧ ವಾಹನಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಉಪ-ದೇಗುಲಗಳು ಮುಖ್ಯ ದೇವಾಲಯದ ಆವರಣದಲ್ಲಿ ಅನೇಕ ಉಪ-ದೇಗುಲಗಳಿವೆ. ಶಿವ, ವಿನಾಯಕ, ಸುಬ್ರಮಣ್ಯ, ಅಗಸ್ತೇಶ್ವರ, ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಕೃಷ್ಣನ ಕಾಮಾಕ್ಷಿ ದೇವಾಲಯಗಳು ಅವುಗಳಲ್ಲಿ ಕೆಲವು. ಸಹ ನೋಡಿ ಕಪಿಲ ತಿರುಪತಿ ಉಲ್ಲೇಖಗಳು ಹಿಂದೂ ದೇವಾಲಯಗಳು ದೇವಾಲಯಗಳು ಆಂಧ್ರ ಪ್ರದೇಶದ ಪ್ರವಾಸಿ ತಾಣಗಳು ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ
152132
https://kn.wikipedia.org/wiki/%E0%B2%97%E0%B2%BE%E0%B2%B5%E0%B2%B3%E0%B2%BF%2C%20%E0%B2%89%E0%B2%A1%E0%B3%81%E0%B2%AA%E0%B2%BF
ಗಾವಳಿ, ಉಡುಪಿ
ಗಾವಳಿಯು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದ್ದು, ಇಲ್ಲಿ ಇತಿಹಾಸಪೂರ್ವ ಶಿಲಾ ಚಿತ್ರಗಳು ಕಂಡುಬರುತ್ತವೆ. ಪುರಾತತ್ವ ಸಂಶೋಧನೆಗಳು ಗಾವಳಿಯ ಗ್ರಾಮದೇವತೆ ಬ್ರಹ್ಮಸ್ಥಾನ ದೇವಾಲಯದ ಸಮೀಪ ಬಂಡೆಯ ಮೇಲೆ ಕಲ್ಲಿನ ರೇಖಾಚಿತ್ರಗಳು ಕೆತ್ತನೆಯ ರೂಪದಲ್ಲಿವೆ. ಭಾರತೀಯ ಮೂಲದ್ದೇ ಆಗಿರುವ ಅಮೆರಿಕಾದ 'ಬ್ರಹ್ಮನ್' ಹಸುವಿನ ಆಕೃತಿಯನ್ನು ಬಂಡೆಯ ಮೇಲೆ ಕೆತ್ತಲಾಗಿದೆ ಮತ್ತು ಈ ರೇಖಾ ರೇಖಾಚಿತ್ರವನ್ನು ರಂಗೋಲಿ ರೇಖಾಚಿತ್ರಗಳಿಗೆ ವಿಸ್ತರಿಸಲಾಗಿದೆ. ಬಂಡೆಗಳ ಮೇಲೆ ಇದೇ ರೀತಿಯ ಕೆತ್ತನೆಯ ರೇಖಾಚಿತ್ರಗಳು ಹಿರೇ ಬೆಣಕಲ್, ಬಳ್ಳಾರಿ ಜಿಲ್ಲೆಯ ರಾಂಪುರ, ಉತ್ತರ ಕನ್ನಡ ಜಿಲ್ಲೆಯ ಸೋಂದಾದಲ್ಲಿ ಕಂಡುಬರುತ್ತವೆ. ಈ ಸ್ಥಳದಲ್ಲಿ ಹೊಸ ಶಿಲಾಯುಗಕ್ಕೆ ಸೇರಿದ ಒಂದು ಬದಿಯ ಆಯುಧದ ರೂಪದಂತೆ ಕಾಣಿಸುವ ಕಲ್ಲಿನ ಉಪಕರಣಗಳು ಮತ್ತು ಮರಳುಗಲ್ಲಿನ ಆಯುಧಗಳು ಕಂಡುಬಂದಿವೆ. ಇಂತಹ ಆಯುಧಗಳನ್ನು ಡೊಲೊರೈಟ್ ಕಲ್ಲಿನಿಂದ ತಯಾರಿಸಲಾಗುತ್ತದೆ ಮತ್ತು ಅವುಗಳು ಉತ್ತಮವಾದ ಮೇಲ್ಮೈಯನ್ನು ಹೊಂದಿರುತ್ತದೆ ಮತ್ತು ಈಟಿಯನ್ನು ಹೋಲುತ್ತದೆ. ಕ್ರಿಸ್ತಪೂರ್ವ ೮೦೦-೬೦೦ ಇಸವಿಯದ್ದೆಂದು ಗುರುತಿಸಲಾದ, ಸಮುದ್ರಮಟ್ಟದಿಂದ 250 ಅಡಿ ಎತ್ತರದಲ್ಲಿ ಸ್ಥಿತಗೊಂಡಿರುವ ಈ ಸ್ಥಳವನ್ನು ಪ್ರಸಿದ್ಧ ಇತಿಹಾಸಕಾರ ಡಾ.ಎ.ಸುಂದರ ಅವರು ಗುರುತಿಸಿರುತ್ತಾರೆ. ಇಲ್ಲಿ ಕಂಡುಬಂದಿರುವ ಕಲ್ಲಿನ ಆಯುಧಗಳು ಕ್ರಿ.ಪೂ. 2000-1500 BCE ರಷ್ಟು ಹಳೆಯದ್ದೆಂದೂ ಗುರುತಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಂಡುಬರುವ ಮಧ್ಯಶಿಲಾಯುಗದ ತಾಣಗಳಾದ ಅವರ್ಸೆ, ಮಸಿಕೆರೆ, ಗುಡ್ಡೆಟ್ಟು, ಕೊಳನಕಲ್ಲು, ನಂಚಾರು, ಪೇತ್ರಿ ಸಮೀಪದ ಸಾಸ್ತಾವು ಇತ್ಯಾದಿಗಳ ಪಟ್ಟಿಯಲ್ಲಿ ಗಾವಳಿಯನ್ನೂ ಸೇರಿಸಲಾಗಿದೆ. ಈ ಪುಟವನ್ನೂ ನೋಡಿ ಸೋಂದಾ, ಕರ್ನಾಟಕ ಬಾಹ್ಯ ಕೊಂಡಿಗಳು ಗಾವಳಿಯಲ್ಲಿ ದೊರೆತ ಕಲ್ಲಿನ ಉಪಕರಣಗಳ ಚಿತ್ರ ಉಲ್ಲೇಖಗಳು ಉಡುಪಿ ಜಿಲ್ಲೆಯ ಗ್ರಾಮಗಳು
152175
https://kn.wikipedia.org/wiki/%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AE%E0%B2%BE%20%E0%B2%AD%E0%B3%8C%E0%B2%AE%E0%B2%BF%E0%B2%95%E0%B3%8D
ಪ್ರತಿಮಾ ಭೌಮಿಕ್
ಪ್ರತಿಮಾ ಭೌಮಿಕ್ (ಜನನ ೨೮ ಮೇ ೧೯೬೯) ಒಬ್ಬ ಭಾರತೀಯ ರಾಜಕಾರಣಿ. ಅವರು ೨೦೨೧ ರಿಂದ ೨೦೨೩ ರವರೆಗೆ ಮೋದಿಯವರ ಸಚಿವಾಲಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಈಶಾನ್ಯದಿಂದ ಕೇಂದ್ರ ಸಚಿವರಾದ ಮೊದಲ ತ್ರಿಪುರ ನಿವಾಸಿ ಮತ್ತು ಎರಡನೇ ಮಹಿಳೆಯಾಗಿದ್ದಾರೆ. ಅವರು ೨೦೧೯ ರಿಂದ ೨೦೨೩ ರವರೆಗೆ ಭಾರತೀಯ ಜನತಾ ಪಕ್ಷದ ಸದಸ್ಯರಾಗಿ ತ್ರಿಪುರಾ ಪಶ್ಚಿಮದಿಂದ ಭಾರತದ ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಚುನಾಯಿತರಾದರು. ೨೦೧೬ ರಲ್ಲಿ ಅವರು ಬಿಜೆಪಿ, ತ್ರಿಪುರ ರಾಜ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. ಅವರು ೧೯೯೧ ರಿಂದ ಬಿಜೆಪಿ ಸದಸ್ಯರಾಗಿದ್ದಾರೆ. ಅವರು ೨೦೨೩ ರಲ್ಲಿ ರಾಜೀನಾಮೆ ನೀಡುವವರೆಗೆ ಧನ್‌ಪುರ್ ಕ್ಷೇತ್ರದಿಂದ ತ್ರಿಪುರಾ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಲೋಕಸಭೆಯ ಪಕ್ಷದ ವಿಪ್ ಆಗಿ ಶ್ರೀಮತಿ ಪ್ರತಿಮಾ ಭೌಮಿಕ್ ಅವರು ತಮ್ಮನ್ನು ಪಕ್ಷದ ಲೋಕಸಭೆಯ ವಿಪ್ ಪಟ್ಟಿಯಲ್ಲಿ ಸೇರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಸತ್ ಸದಸ್ಯರಾಗಿ ಪ್ರತಿಮಾ ಭೌಮಿಕ್ ಅವರು ತ್ರಿಪುರ ಪಶ್ಚಿಮದಿಂದ ೧೭ನೇ ಲೋಕಸಭೆಗೆ ಆಯ್ಕೆಯಾದರು. ಔಪಚಾರಿಕವಾಗಿ ಫಲಿತಾಂಶ ಪ್ರಕಟವಾದ ನಂತರ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ೫೦ ರ ಹರೆಯದ ವಿಜ್ಞಾನ ಪದವೀಧರ ಪ್ರತಿಮಾ ಭೌಮಿಕ್ “ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅಭಿವೃದ್ಧಿ ಮಂತ್ರ ಮತ್ತು ದೂರದೃಷ್ಟಿಯು ಜನರ ಕಲ್ಯಾಣ ನಮ್ಮ ಭವಿಷ್ಯದ ಕ್ರಮವಾಗಿದೆ " ಎಂದರು. "ತ್ರಿಪುರಾವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ದೂರದೃಷ್ಟಿಯನ್ನು ಈಡೇರಿಸಲು ನಾವೆಲ್ಲರೂ ಒಟ್ಟಾಗಿ ಕನಸನ್ನು ನನಸಾಗಿಸಲು ಶ್ರಮಿಸುತ್ತೇವೆ" ಎಂದು ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭೌಮಿಕ್ ಹೇಳಿದರು. ಭೌಮಿಕ್ ಅವರು ೫,೭೩,೫೩೨ ಮತಗಳನ್ನು (ಚಲಿಸಿದ ಮಾನ್ಯ ಮತಗಳ ಶೇಕಡಾ ೫೧.೭೭) ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ಪಡೆದು, ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿ ಸುಬಲ್ ಭೌಮಿಕ್ ಅವರನ್ನು ೩,೦೫,೬೮೯ ಮತಗಳ ಅಂತರದಿಂದ ಸೋಲಿಸಿ ಗೆದ್ದರು. ಕಾಂಗ್ರೆಸ್‌ನ ಮಹಾರಾಣಿ ಬಿಭು ನಂತರ ಇವರು ತ್ರಿಪುರಾದ ಎರಡನೇ ಲೋಕಸಭಾ ಸದಸ್ಯರಾಗಿದ್ದಾರೆ. ಲೋಕಸಭೆ ಸ್ಥಾಯಿ ಸಮಿತಿ ಸದಸ್ಯ, ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣೆಯ ಸ್ಥಾಯಿ ಸಮಿತಿ ಸದಸ್ಯರು, ಸದನದ ಸಭೆಗಳಿಗೆ ಸದಸ್ಯರ ಗೈರುಹಾಜರಿ ಸಮಿತಿ ಮೊದಲ ಸಂಬಳದ ಕೊಡುಗೆ ತ್ರಿಪುರಾ ಪಶ್ಚಿಮ ಸಂಸದೀಯ ಕ್ಷೇತ್ರದ ಲೋಕಸಭಾ ಸಂಸದೆ ಪ್ರತಿಮಾ ಭೌಮಿಕ್ ಅವರು ತಮ್ಮ ಮೊದಲ ತಿಂಗಳ ಸಂಬಳದಿಂದ ೧,೦೦,೦೦೦ ರೂಪಾಯಿಗಳನ್ನು ಅಸ್ಸಾಂ ಪ್ರವಾಹ ಪರಿಹಾರಕ್ಕಾಗಿ ದೇಣಿಗೆ ನೀಡಿದರು. ಅಸ್ಸಾಂನ ೧೭ ಜಿಲ್ಲೆಗಳಲ್ಲಿ ೨,೦೦೦ ಕ್ಕೂ ಹೆಚ್ಚು ಹಳ್ಳಿಗಳನ್ನು ಮುಳುಗಿಸಿದ ಪ್ರವಾಹದಲ್ಲಿ ಕನಿಷ್ಠ ೬೭ ಜನರು ಸಾವನ್ನಪ್ಪಿದ್ದಾರೆ ಮತ್ತು ೩೩,೫೫,೮೩೭ ಜನರು ಪ್ರಭಾವಿತರಾಗಿದ್ದಾರೆ. ಕೇಂದ್ರ ಸಚಿವ ಕ್ಯಾಬಿನೆಟ್ ಕೂಲಂಕುಷ ಪರೀಕ್ಷೆ ನಡೆದಾಗ ಅವರು ಎರಡನೇ ಮೋದಿ ಸಚಿವಾಲಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವರಾದರು. ಅವರು ತ್ರಿಪುರಾದಿಂದ ಮೊದಲ ಕೇಂದ್ರ ಸಚಿವರಾದರು. ಉಲ್ಲೇಖಗಳು ಬಾಹ್ಯ ಕೊಂಡಿಗಳು ಪಾರ್ಲಿಮೆಂಟ್ ಆಫ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಅಧಿಕೃತ ಜೀವನಚರಿತ್ರೆಯ ರೇಖಾಚಿತ್ರ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152191
https://kn.wikipedia.org/wiki/%E0%B2%90%E0%B2%B8%E0%B2%BF%E0%B2%B8%E0%B2%BF%20%E0%B2%AA%E0%B3%81%E0%B2%B0%E0%B3%81%E0%B2%B7%E0%B2%B0%20%E0%B2%9F%E0%B2%BF%E0%B3%A8%E0%B3%A6%E0%B2%90%20%E0%B2%B6%E0%B3%8D%E0%B2%B0%E0%B3%87%E0%B2%AF%E0%B2%BE%E0%B2%82%E0%B2%95
ಐಸಿಸಿ ಪುರುಷರ ಟಿ೨೦ಐ ಶ್ರೇಯಾಂಕ
ಐಸಿಸಿ ಪುರುಷರ ಟಿ೨೦ಐ ಶ್ರೇಯಾಂಕ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಂತಾರಾಷ್ಟ್ರೀಯ ಟ್ವೆಂಟಿ20 ಕ್ರಿಕೆಟ್ ಶ್ರೇಯಾಂಕ ವ್ಯವಸ್ಥೆಯಾಗಿದೆ . ಪ್ರತಿ ಟ್ವೆಂಟಿ20 ಅಂತರಾಷ್ಟ್ರೀಯ (T20I) ಪಂದ್ಯದ ನಂತರ , ಒಳಗೊಂಡಿರುವ ಎರಡು ತಂಡಗಳು ಗಣಿತದ ಸೂತ್ರದ ಆಧಾರದ ಮೇಲೆ ಅಂಕಗಳನ್ನು ಪಡೆಯುತ್ತವೆ. ಪ್ರತಿ ತಂಡದ ಅಂಕಗಳ ಒಟ್ಟು ಮೊತ್ತವನ್ನು ರೇಟಿಂಗ್ ನೀಡಲು ಒಟ್ಟು ಪಂದ್ಯಗಳ ಸಂಖ್ಯೆಯಿಂದ ಭಾಗಿಸಲಾಗಿದೆ , ಮತ್ತು ಎಲ್ಲಾ ತಂಡಗಳು ರೇಟಿಂಗ್‌ನ ಕ್ರಮದಲ್ಲಿ ಟೇಬಲ್‌ನಲ್ಲಿ ಸ್ಥಾನ ಪಡೆದಿವೆ . ತಂಡಗಳು ಶ್ರೇಯಾಂಕ ಪಟ್ಟಿಯಲ್ಲಿ ಉಳಿಯಲು ಹಿಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಕನಿಷ್ಠ ಆರು ಟಿ20ಐ ಪಂದ್ಯಗಳನ್ನು ಆಡಿರಬೇಕು . ಭಾರತವು ಪ್ರಸ್ತುತ ICC ಪುರುಷರ T20I ತಂಡದ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ, ಅವರು 21 ಫೆಬ್ರವರಿ 2022 ರಿಂದ ಈ ಸ್ಥಾನವನ್ನು ಹೊಂದಿದ್ದಾರೆ
152196
https://kn.wikipedia.org/wiki/%E0%B2%AE%E0%B2%B9%E0%B2%BE%E0%B2%A4%E0%B3%8D%E0%B2%AE%20%E0%B2%97%E0%B2%BE%E0%B2%82%E0%B2%A7%E0%B2%BF%20%E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95%20%28%E0%B2%AE%E0%B2%BF%E0%B2%B2%E0%B3%8D%E0%B2%B5%E0%B2%BE%E0%B2%95%E0%B3%80%29
ಮಹಾತ್ಮ ಗಾಂಧಿ ಸ್ಮಾರಕ (ಮಿಲ್ವಾಕೀ)
ಮಹಾತ್ಮಾ ಗಾಂಧಿ ಸ್ಮಾರಕವು ಗೌತಮ್ ಪಾಲ್ ಅವರ 2002 ರ ಸಾರ್ವಜನಿಕ ಶಿಲ್ಪವಾಗಿದ್ದು, ಯುನೈಟೆಡ್ ಸ್ಟೇಟ್ಸ್‌ನ ವಿಸ್ಕಾನ್ಸಿನ್‌ನ ಮಿಲ್ವಾಕೀ ಡೌನ್‌ಟೌನ್‌ನಲ್ಲಿರುವ ಮಿಲ್ವಾಕೀ ಕೌಂಟಿ ಕೋರ್ಟ್‌ಹೌಸ್‌ನಲ್ಲಿದೆ . ವಿವರಣೆ 8 ಅಡಿ 8 ರಲ್ಲಿ (2.64 m) ಶಿಲ್ಪವು ಭಾರತೀಯ ನಾಗರಿಕ ಹಕ್ಕುಗಳ ನಾಯಕ ಮಹಾತ್ಮ ಗಾಂಧಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಮತ್ತು ಉದ್ದನೆಯ ಸಿಬ್ಬಂದಿಯೊಂದಿಗೆ ನಡೆಯುವುದನ್ನು ಚಿತ್ರಿಸುತ್ತದೆ. ಅವನ ತಲೆ ಬೋಳಾಗಿದೆ, ಮತ್ತು ಅವನ ಎದೆ, ಭುಜಗಳು ಮತ್ತು ಕಾಲುಗಳು ಬರಿದಾಗಿವೆ. ಅವನು ಕನ್ನಡಕವನ್ನು ಧರಿಸುತ್ತಾನೆ ಮತ್ತು ಅವನ ನೋಟವು ಅವನು ನಡೆಯುವ ದಾರಿಯ ಕಡೆಗೆ ನಿರ್ದೇಶಿಸಲ್ಪಡುತ್ತದೆ. ಅವನು ಚಪ್ಪಲಿಯನ್ನು ಧರಿಸುತ್ತಾನೆ. ಆಕೃತಿಯು ಕೋರ್ಟ್‌ಹೌಸ್‌ನಿಂದ ದೂರದಲ್ಲಿದೆ, ಪೂರ್ವಕ್ಕೆ ಡೌನ್‌ಟೌನ್ ಮತ್ತು ಮಿಚಿಗನ್ ಸರೋವರದ ಕಡೆಗೆ ನಡೆಯುವಂತೆ ಕಾಣುತ್ತದೆ. ವಾಷಿಂಗ್ಟನ್, DC ಯಲ್ಲಿನ ಮಹಾತ್ಮ ಗಾಂಧಿ ಸ್ಮಾರಕವು ಗೌತಮ ಪಾಲ್ ಅವರ ಇದೇ ರೀತಿಯ ಪ್ರತಿಮೆಯನ್ನು ಒಳಗೊಂಡಿದೆ, ಇದನ್ನು ಕೆಂಪು ಗ್ರಾನೈಟ್ ಸ್ತಂಭದ ಮೇಲೆ ಕೂಡ ಅಳವಡಿಸಲಾಗಿದೆ. ಈ ಶಿಲ್ಪವು ಮೊನಚಾದ ಕೆಂಪು ಗ್ರಾನೈಟ್ ತಳಹದಿಯ ಮೇಲೆ ನಿಂತಿದೆ, ಅದರ ಮೇಲೆ ಕಂಚಿನ ಫಲಕಗಳನ್ನು ಪಠ್ಯಗಳನ್ನು ಪ್ರದರ್ಶಿಸಲು ನಾಲ್ಕು ಬದಿಗಳಲ್ಲಿ ಜೋಡಿಸಲಾಗಿದೆ. ನ್ಯಾಯಾಲಯದ ಬಾಗಿಲುಗಳ ನಡುವೆ "ಸತ್ಯ" ಮತ್ತು "ನ್ಯಾಯ" ಎಂದು ಲೇಬಲ್ ಮಾಡಿರುವುದು ಶಿಲ್ಪದ ಸಂದೇಶವನ್ನು ಬಲಪಡಿಸುತ್ತದೆ. ಐತಿಹಾಸಿಕ ಮಾಹಿತಿ ವಿಸ್ಕಾನ್ಸಿನ್ ಒಕ್ಕೂಟದ ಏಷ್ಯನ್ ಇಂಡಿಯನ್ ಆರ್ಗನೈಸೇಶನ್ಸ್ (WCAIO) ಶಿಲ್ಪ ಮತ್ತು ಅದರ ಸ್ಥಾಪನೆಗಾಗಿ $12,000 ಸಂಗ್ರಹಿಸಿತು. WCAIO ಮಿಲ್ವಾಕೀ ಪ್ರದೇಶದಲ್ಲಿ 16 ಭಾರತೀಯ ಅಮೇರಿಕನ್ ಗುಂಪುಗಳನ್ನು ಪ್ರತಿನಿಧಿಸುತ್ತದೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಸಹ ಬೆಂಬಲ ನೀಡಿತು. ಮಾರ್ಕ್ವೆಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಡೆಂಟಿಸ್ಟ್ರಿಯ ನಿವೃತ್ತ ಡೀನ್ ಕುಮಾರ್ ಧಲಿವಾಲ್ ಮತ್ತು ಅವರ ಪತ್ನಿ ದರ್ಶನ್ ಅವರು ಶಿಲ್ಪವನ್ನು ಮಿಲ್ವಾಕೀಗೆ ತರುವ ಅಭಿಯಾನದ ನೇತೃತ್ವ ವಹಿಸಿದ್ದರು ಅಲ್ಲದೆ $25,000 ದೇಣಿಗೆ ನೀಡಿದರು. ಧಲಿವಾಲ್ ಅವರು ಇಂಡಿಯಾ-ವೆಸ್ಟ್ ನ್ಯೂಸ್‌ಪೇಪರ್‌ಗೆ ಹೇಳಿದರು, "ಮಹಾತ್ಮ ಗಾಂಧಿಯವರ ಸಂದೇಶಗಳು ಜಗತ್ತಿನಲ್ಲಿ ಹಿಂಸೆಯನ್ನು ತಡೆಗಟ್ಟಲು ಮಾತ್ರವಲ್ಲ, ಕೌಟುಂಬಿಕ ಹಿಂಸಾಚಾರ ಮತ್ತು ಬೀದಿಗಳಲ್ಲಿನ ಹಿಂಸಾಚಾರಕ್ಕೂ ಸಹ ಮಹತ್ವದ್ದಾಗಿದೆ." ಮಿಲ್ವಾಕೀ ಕೌಂಟಿಯು ಶಿಲ್ಪವನ್ನು ದಾನ ಮಾಡುವ ಪ್ರಸ್ತಾಪವನ್ನು ಒಪ್ಪಿಕೊಂಡಿತು ಮತ್ತು ಆರಂಭದಲ್ಲಿ ಹತ್ತು ಸಂಭವನೀಯ ಸ್ಥಳಗಳನ್ನು ಪ್ರಸ್ತಾಪಿಸಿತು. ಭಾರತೀಯ ಅಮೇರಿಕನ್ ಸಮುದಾಯವು ಮ್ಯಾಕ್‌ಆರ್ಥರ್ ಸ್ಕ್ವೇರ್‌ನಲ್ಲಿ ಸೈಟ್ ಅನ್ನು ಆಯ್ಕೆ ಮಾಡಿದೆ ಏಕೆಂದರೆ "ಇದು ಸುಂದರವಾದ, ಪ್ರಶಾಂತ ವಾತಾವರಣವಾಗಿದೆ." ಈ ಶಿಲ್ಪವನ್ನು ಅಕ್ಟೋಬರ್ 5, 2002 ರಂದು ಅನಾವರಣಗೊಳಿಸಲಾಯಿತು ಮತ್ತು ಸಮರ್ಪಣಾ ಕಾರ್ಯಕ್ರಮವು ಶಾಂತಿ ಮೆರವಣಿಗೆ, ವಿಸ್ಕಾನ್ಸಿನ್ ಚುನಾಯಿತ ಅಧಿಕಾರಿಗಳು ಮತ್ತು ಭಾರತೀಯ ರಾಯಭಾರಿ ಲಲಿತ್ ಮಾನ್ಸಿಂಗ್ ಅವರ ಭಾಷಣಗಳು ಮತ್ತು ಭಜನೆಗಳ ಗಾಯನವನ್ನು ಒಳಗೊಂಡಿತ್ತು. ಭಾರತ-ಪಶ್ಚಿಮ ಪತ್ರಿಕೆಯ ಪ್ರಕಾರ, 850 ಜನರು ಸಮರ್ಪಣೆಗೆ ಹಾಜರಾಗಿದ್ದರು. ಈ ಶಿಲ್ಪವು ಸ್ಥಳೀಯ ಭಾರತೀಯ ಅಮೇರಿಕನ್ ಸಮುದಾಯಕ್ಕೆ ಮತ್ತು ಶಾಂತಿ ಕಾರ್ಯಕರ್ತರಿಗೆ ಜಾಗರಣೆ ಮಾಡುವ ಸ್ಥಳವಾಗಿದೆ. ಕಲಾತ್ಮಕ ಚಿತ್ರಣಗಳ ಪಟ್ಟಿಯ ಕೊಂಡಿ ಮಹಾತ್ಮಾ ಗಾಂಧಿಯವರ ಕಲಾತ್ಮಕ ಚಿತ್ರಣಗಳ ಪಟ್ಟಿ ಉಲ್ಲೇಖಗಳು
152201
https://kn.wikipedia.org/wiki/%E0%B2%85%E0%B2%98%E0%B2%BE%E0%B2%B8%E0%B3%81%E0%B2%B0
ಅಘಾಸುರ
ಅಘಾಸುರ (ಸಂಸ್ಕೃತ: अघासुर) ಎಂಬುದು ಹಿಂದೂ ಸಾಹಿತ್ಯ, ವಿಶೇಷವಾಗಿ ಭಾಗವತ ಪುರಾಣದಲ್ಲಿ ಕಾಣಿಸಿಕೊಂಡಿರುವ ಅಸುರ. ಕಂಸನು ತನ್ನ ಶತ್ರುವಾದ ಶ್ರೀಕೃಷ್ಣನನ್ನು ಕೊಲ್ಲಲು ಕಳುಹಿಸಿದ ಅನೇಕ ರಾಕ್ಷಸರಲ್ಲಿ ಅಘಾಸುರನೂ ಒಬ್ಬನು. ಈ ರಾಕ್ಷಸನ ಹಿರಿಯ ಸಹೋದರಿ ಪೂತನಿ ಮತ್ತು ಸಹೋದರಬಕಾಸುರ. ಅಘಾಸುರನು ಕಂಸನೊಂದಿಗೆ ಮೈತ್ರಿ ಮಾಡಿಕೊಂಡ ಬುಡಕಟ್ಟು ಜನಾಂಗಗಳಲ್ಲಿ ಒಬ್ಬನೆಂದು ಹೇಳಲಾಗಿದೆ. ಕೃಷ್ಣನು ಅಘಾಸುರನನ್ನು ಕೊಂದ ವಿಷಯವನ್ನು ಪರೀಕ್ಷಿತ ರಾಜನಿಗೆ ಋಷಿ ಶುಕನು ಭಾಗವತ ಪುರಾಣದಲ್ಲಿ ವಿವರಿಸಿದ್ದಾನೆ. ದಂತಕಥೆ ರಾಜ ಕಂಸ ಕೃಷ್ಣನನ್ನು ಕೊಲ್ಲಲೂ ಅನೇಕ ಪ್ರಯತ್ನಗಳನ್ನು ಮಾಡಿದನು ಆದರೆ ಅವೆಲ್ಲವೂ ವಿಫಲವಾದವು. ಪೂತನಿ ಮತ್ತು ಬಕಾಸುರರು ಕೃಷ್ಣನಿಂದ ಕೊಲ್ಲಲ್ಪಟ್ಟರು ಎಂದು ತಿಳಿದ ಕಂಸನು, ನಂತರ ಕೃಷ್ಣನನ್ನು ಕೊಲ್ಲಲು ಅಘಾಸುರನನ್ನು ಕಳುಹಿಸಿದನು. ಅಘಾಸುರನು ೮-ಮೈಲಿ ಉದ್ದದ ಸರ್ಪದ ರೂಪವನ್ನು ಪಡೆದುಕೊಂಡು, ಪರ್ವತದ ವಿರುದ್ಧ ತನ್ನ ತೆರೆದ ಬಾಯಿಯನ್ನು ಮರೆಮಾಚಿದನು. ಎಲ್ಲಾ ಗೋಪಾಲಕರು ರಾಕ್ಷಸನ ಬಾಯಿಯನ್ನು ಗುಹೆ ಎಂದು ತಪ್ಪಾಗಿ ಭಾವಿಸಿ ಅದರ ಒಳಗೆ ಪ್ರವೇಶಿಸಿದರು. ಸರ್ಪವು ತನ್ನ ಬಾಯಿಯನ್ನು ಮುಚ್ಚಿದಾಗ, ಎಲ್ಲಾ ಗೋಪಾಲಕರು ಉಸಿರುಗಟ್ಟಿ ಸಾಯುತ್ತಾರೆ. ಆಗ ಕೃಷ್ಣನು ಸರ್ಪದ ಒಳಗೆ ಪ್ರವೇಶಿಸಿ ತನ್ನ ದೇಹದ ಗಾತ್ರವನ್ನು ಹೆಚ್ಚಿಸಿದನು. ಪ್ರತಿಕ್ರಿಯೆಯಾಗಿ, ರಾಕ್ಷಸನು ತನ್ನ ದೇಹದ ಗಾತ್ರವನ್ನು ವಿಸ್ತರಿಸಿದನು, ಆದರೆ ಕೃಷ್ಣನು ಅವನಿಗಿಂತ ಹೆಚ್ಚು ವೇಗವಾಗಿ ಹಿಗ್ಗುತ್ತಿದ್ದರಿಂದ ಅಘಾಸುರನು ಉಸಿರುಗಟ್ಟಲು ಪ್ರಾರಂಭಿಸಿದನು, ಇದರಿಂದಾಗಿ ಅವನ ಕಣ್ಣುಗಳು ಹೊರಬರುತ್ತವೆ. ಹೀಗೆ ಅಘಾಸುರನ ಅಂತ್ಯವಾಯಿತು. ಉಲ್ಲೇಖಗಳು ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ ಪುರಾಣಗಳು
152203
https://kn.wikipedia.org/wiki/%E0%B2%B5%E0%B2%BF%E0%B2%9C%E0%B2%BF%20%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6%E0%B3%8D
ವಿಜಿ ಪ್ರಕಾಶ್
ಜನಪ್ರಿಯವಾಗಿ ವಿಜಿ ಪ್ರಕಾಶ್ ಎಂದು ಕರೆಯಲ್ಪಡುವ ವಿಜಯ ಲಕ್ಷ್ಮಿ ಪ್ರಕಾಶ್ ಅವರು ಭಾರತೀಯ ಭರತ ನಾಟ್ಯ ನೃತ್ಯಗಾರ್ತಿ, ಬೋಧಕಿ ಹಾಗೂ ನೃತ್ಯ ಸಂಯೋಜಕಿ. ಇವರು ಶಕ್ತಿ ನೃತ್ಯ ಕಂಪನಿ ಮತ್ತು ಶಕ್ತಿ ಸ್ಕೂಲ್ ಆಫ್ ಭರತ ನಾಟ್ಯಂನ ಸ್ಥಾಪಕರು. ವಿಜಯಲಕ್ಷ್ಮಿ ಪ್ರಕಾಶ್ ಅವರು ೧೯೭೬ ರಿಂದ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಉಲ್ಲೇಖಗಳು ಬಾಹ್ಯ ಕೊಂಡಿಗಳು ಶ್ರೀ. ರಾಜರಾಜೇಶ್ವರಿ ಭ್ರಾತನಾಟ್ಯ ಕಲಾ ಮಂದಿರ ಶಕ್ತಿ ನೃತ್ಯ ಕಂಪನಿ - ಅಧಿಕೃತ ವೆಬ್‌ಸೈಟ್ ಮೈಥಿಲಿ ಪ್ರಕಾಶ್ ಅವರ ವೆಬ್‌ಸೈಟ್ ಏಷ್ಯಾ ಸೊಸೈಟಿ, ಟೆಕ್ಸಾಸ್, 'ಮೈಥಿಲಿ ಪ್ರಕಾಶ್', ASTC ಪ್ರೆಸೆಂಟ್ಸ್ ಯುನೈಟೆಡ್ ಸ್ಟೇಟ್ಸ್, ಜಕಾರ್ತಾ ಮತ್ತು ಇಂಡೋನೇಷಿಯಾದ ರಾಯಭಾರ ಕಚೇರಿ, PAU HANA ಕಲಾ ಪ್ರದರ್ಶನದ ಅಂತರರಾಷ್ಟ್ರೀಯ ಕಾರ್ಯಾಗಾರ ಜಕಾರ್ತಾ | 12 ಫೆಬ್ರವರಿ 2009 ಹಫಿಂಗ್ಟನ್ ಪೋಸ್ಟ್, ನನ್ನ ಗುರು ವಿಜಿ ಪ್ರಕಾಶ್ : 27/03/2012 ಜೀವಂತ ವ್ಯಕ್ತಿಗಳು
152204
https://kn.wikipedia.org/wiki/%E0%B2%B8%E0%B3%81%E0%B2%AC%E0%B3%8D%E0%B2%AC%E0%B3%81%E0%B2%B2%E0%B2%95%E0%B3%8D%E0%B2%B6%E0%B3%8D%E0%B2%AE%E0%B3%80%20%E0%B2%9C%E0%B2%97%E0%B2%A6%E0%B3%80%E0%B2%B6%E0%B2%A8%E0%B3%8D
ಸುಬ್ಬುಲಕ್ಶ್ಮೀ ಜಗದೀಶನ್
ಸುಬ್ಬುಲಕ್ಷ್ಮೀ ಜಗದೀಶನ್ (ಜನನ ೨೪ ಜೂನ್ ೧೯೪೭) ಒಬ್ಬ ಭಾರತೀಯ ರಾಜಕಾರಣಿ. ಅವರು ದ್ರಾವಿಡ ಮುನ್ನೇತ್ರ ಕಳಗಂನ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕೇಂದ್ರ ರಾಜ್ಯ ಸಚಿವರಾಗಿದ್ದರು. ಅವರು ಜವಳಿ, ಖಾದಿ, ಕೈಮಗ್ಗ, ಸಣ್ಣ ಪ್ರಮಾಣದ ಕೈಗಾರಿಕೆಗಳು, ತಮಿಳುನಾಡಿನ ನಿಷೇಧ ಮತ್ತು ಅಬಕಾರಿ ಸಚಿವಾಲಯದಲ್ಲಿ ೧೯೭೭ ರಿಂದ ೧೯೮೦ ರ ವರೆಗೆ ಸಚಿವರಾಗಿದ್ದರು. ಅವರು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿದ್ದರು. ಅವರು ಉಪ ಪ್ರಧಾನ ಕಾರ್ಯದರ್ಶಿಯಾಗಿ, ದ್ರಾವಮುನ್ನೇತ್ರ ಕಳಗಂನ ಉನ್ನತ ಮಟ್ಟದ ಸಮಿತಿಯಲ್ಲಿ ಸೇವೆ ಸಲ್ಲಿಸಿದರು. ನಿವೃತ್ತಿ ಸುಬ್ಬುಲಕ್ಷ್ಮಿ ಜಗದೀಸನ್ ಅವರು "ರಾಜಕೀಯದಿಂದ ನಿವೃತ್ತರಾಗಲು" ಬಯಸಿ, ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಲು ಎಂ‌ಕೆ ಸ್ಟಾಲಿನ್ ಅವರಿಗೆ ೩೯ ಆಗಸ್ಟ್ ೨೦೨೨ ಪತ್ರದಲ್ಲಿ ಬರೆದರು. ನಂತರ ಪಕ್ಷಕ್ಕೆ ರಾಜೀನಾಮೆ ನೀಡಿದರು. . ಉಲ್ಲೇಖಗಳು ಸಹ ನೋಡಿ ಭಾರತದ ಸಂಸತ್ತಿನ ವೆಬ್‌ಸೈಟ್‌ನಲ್ಲಿ ಅಧಿಕೃತ ಜೀವನಚರಿತ್ರೆಯ ರೇಖಾಚಿತ್ರ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152205
https://kn.wikipedia.org/wiki/%E0%B2%A4%E0%B2%B0%E0%B3%8D%E0%B2%95%E0%B3%87%E0%B2%B6%E0%B3%8D%E0%B2%B5%E0%B2%B0%E0%B2%BF%20%E0%B2%B8%E0%B2%BF%E0%B2%A8%E0%B3%8D%E0%B2%B9%E0%B2%BE
ತರ್ಕೇಶ್ವರಿ ಸಿನ್ಹಾ
ತರ್ಕೇಶ್ವರಿ ಸಿನ್ಹಾ (೨೬ ಡಿಸೆಂಬರ್ ೧೯೨೬ - ೧೪ ಆಗಸ್ಟ್ ೨೦೦೭) ಬಿಹಾರದ ಭಾರತೀಯ ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು. ೧೯೫೨ ರಲ್ಲಿ ತಮ್ಮ ೨೬ ನೇ ವಯಸ್ಸಿನಲ್ಲಿ ಇವರು ಪಾಟ್ನಾ ಪೂರ್ವ ಕ್ಷೇತ್ರದಿಂದ ೧ ನೇ ಲೋಕಸಭೆಗೆ ಆಯ್ಕೆಯಾದರು. ತರುವಾಯ, ೧೯೫೭, ೧೯೬೨ ಮತ್ತು ೧೯೬೭ ರಲ್ಲಿ ಬಾರ್ಹ್ ಕ್ಷೇತ್ರದಿಂದ ಲೋಕಸಭೆಗೆ ಮರು ಆಯ್ಕೆಯಾದರು. ಇವರು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ೧೯೫೮ - ೬೪ ನೇತೃತ್ವದ ಕೇಂದ್ರ ಸಂಪುಟದಲ್ಲಿ ಮೊದಲ ಮಹಿಳಾ ಉಪ ಹಣಕಾಸು ಸಚಿವರಾಗಿದ್ದರು. ಯುಎನ್ ಮತ್ತು ಟೋಕಿಯೊಗೆ ನಿಯೋಗವನ್ನು ಸಹ ಮುನ್ನಡೆಸಿದ್ದರು. ಗುಲ್ಜಾರ್ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರ, ಆಂಧಿಯು ಇಂದಿರಾ ಗಾಂಧಿಯನ್ನು ಹೊರತುಪಡಿಸಿ ತಾರಕೇಶ್ವರಿ ಸಿನ್ಹಾ ಅವರಿಂದ ಭಾಗಶಃ ಸ್ಫೂರ್ತಿ ಪಡೆದಿದೆ. ಆರಂಭಿಕ ಜೀವನ ತರ್ಕೇಶ್ವರಿ ಸಿನ್ಹಾ ನಳಂದಾ ಜಿಲ್ಲೆಯ ಚಂಡಿ ಬಳಿಯ ತುಳಸಿಗಢ ಗ್ರಾಮದಲ್ಲಿ ಭೂಮಿಹಾರ್ ಕುಟುಂಬದಲ್ಲಿ ಜನಿಸಿದರು. ಅವರು ಪಾಟ್ನಾದ ಮಗಧ ಮಹಿಳಾ ಕಾಲೇಜು ಎಂದು ಕರೆಯಲ್ಪಡುವ ಬಂಕಿಪೋರ್ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಇವರು ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್‌ನಿಂದ ಬೇರ್ಪಟ್ಟ ಬಿಹಾರ ವಿದ್ಯಾರ್ಥಿ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಮುಗಿಸಿದ್ದಾರೆ. ವೃತ್ತಿ ಇವರು ಬಿಹಾರದ ಬಾರ್ಹ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಭಾರತೀಯ ಸ್ವಾತಂತ್ರ್ಯದ ನಂತರದಲ್ಲಿ ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ನಂತರ ೧೯೫೨ ರಲ್ಲಿ ಪಾಟ್ನಾ ಪೂರ್ವ ಕ್ಷೇತ್ರದಿಂದ ಮೊದಲ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಕಾಂಗ್ರೆಸ್ ಪಕ್ಷದ ಮೂಲಕ, ಅವರು ೧೯೫೭, ೧೯೬೨ ಮತ್ತು ೧೯೬೭ ರಲ್ಲಿ ಮರು ಆಯ್ಕೆಯಾದರು ಸಿನ್ಹಾ ೧೯ ನವೆಂಬರ್ ೧೯೫೭ ರಂದು ಟು ಟೆಲ್ ದಿ ಟ್ರೂತ್ ಎಂಬ ಗೇಮ್ ಶೋನಲ್ಲಿ ಕಾಣಿಸಿಕೊಂಡರು, ಪ್ಯಾನೆಲ್‌ನಲ್ಲಿರುವ ನಾಲ್ಕು ಸದಸ್ಯರಲ್ಲಿ ಇಬ್ಬರನ್ನು ಮೂರ್ಖರನ್ನಾಗಿ ಮಾಡಿದರು. ತರ್ಕೇಶ್ವರಿ ಸಿನ್ಹಾರವರು ಮೊರಾರ್ಜಿ ದೇಸಾಯಿಯವರಿಗೆ ಹತ್ತಿರವಾಗಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ದೇಸಾಯಿ ಮತ್ತು ಇಂದಿರಾ ಗಾಂಧಿಯವರ ನಡುವಿನ ಉತ್ತರಾಧಿಕಾರದ ಯುದ್ಧದಲ್ಲಿ ಅವರ ಪರವಾಗಿದ್ದರು. ದೇಸಾಯಿ ಮತ್ತು ಇತರ ನಾಯಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಒಡೆದ ಗುಂಪನ್ನು ರಚಿಸಿದಾಗ, ಅವರೂ ಅದಕ್ಕೆ ಸೇರಿಕೊಂಡರು. ೧೯೭೧ ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂದಿರಾ ಅಲೆಯಲ್ಲಿ, ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ, ಕಾಂಗ್ರೆಸ್ ಅಭ್ಯರ್ಥಿ ಧರ್ಮವೀರ್ ಸಿನ್ಹಾ ಅವರ ವಿರುದ್ಧ ಸೋತರು.ಇದು ಅವರ ಮೊದಲ ಚುನಾವಣಾ ಸೋಲಿನ ರುಚಿಯಾಗಿತ್ತು, ಮುಂದಿನ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಸೋತರು ಮತ್ತು ಇಂದಿರಾ ಗಾಂಧಿಯವರ ಪಕ್ಷಕ್ಕೆ ಮರಳಿದರು. ೧೯೭೭ ರಲ್ಲಿ, ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಬೇಗುಸರಾಯ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಬಿಹಾರದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋತಿದ್ದರಿಂದ ಜನತಾ ಅಲೆಯಲ್ಲಿ ಸೋತರು. ಈ ಸೋಲಿನ ನಂತರ, ಅವರು ನವೆಂಬರ್ ೧೯೭೮ ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮಸ್ತಿಪುರದಿಂದ ಲೋಕಸಭೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು ಆದರೆ ಮತ್ತೆ ಸೋತರು. ಅಂತಿಮವಾಗಿ, ಇವರು ರಾಜಕೀಯದಿಂದ ನಿವೃತ್ತಿ ಹೊಂದಿ ಸಾಮಾಜಿಕ ಕಾರ್ಯಗಳನ್ನು ಮಾಡಿದರು. ಸಮಾಜಿಕ ಕಾರ್ಯ ತರ್ಕೇಶ್ವರಿ ಸಿನ್ಹಾ ಅವರು ಹೊಸದಿಲ್ಲಿಯಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಇವರ ನೆನಪಿಗಾಗಿ ಅವರ ಸಹೋದರ, ಏರ್ ಇಂಡಿಯಾದ ಪೈಲಟ್, ಕ್ಯಾಪ್ಟನ್ ಗಿರೀಶ್ ನಂದನ್ ಸಿಂಗ್ ರವರು ತುಳಸಿಗಢದಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಆ ದಿನಗಳಲ್ಲಿ ಇದಕ್ಕಾಗಿ ಸುಮಾರು ೨೫ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದರು. ಇದು ಎರಡು ಅಂತಸ್ತಿನ ಆಸ್ಪತ್ರೆಯ ನಿರ್ಮಾಣವಾಗಿದ್ದು, ಚಿಕಿತ್ಸೆಯು ಬಹುತೇಕ ಉಚಿತವಾಗಿದೆ. ನಳಂದದಲ್ಲಿ ಚಂಡಿ ಮತ್ತು ಹರ್ನಾಟ್ ಗ್ರಾಮವನ್ನು ಸಂಪರ್ಕಿಸಲು ರಸ್ತೆಯನ್ನು ನಿರ್ಮಿಸಲು ಅವರು ಕ್ರಮ ತೆಗೆದುಕೊಂಡಿದ್ದರು. ಉಲ್ಲೇಖಗಳು   ವಿಕಿಪೀಡಿಯ ಅನುವಾದ ಶಿಬಿರ ಲೇಖನ
152206
https://kn.wikipedia.org/wiki/%E0%B2%B9%E0%B2%BE%E0%B2%93%E0%B2%AC%E0%B2%BE%E0%B2%AE%E0%B3%8D%20%E0%B2%92%E0%B2%82%E0%B2%97%E0%B3%8D%E0%B2%AC%E0%B2%BF%20%E0%B2%A8%E0%B3%8D%E0%B2%97%E0%B2%BE%E0%B2%82%E0%B2%97%E0%B3%8D%E0%B2%AC%E0%B2%BF%20%E0%B2%A6%E0%B3%87%E0%B2%B5%E0%B2%BF
ಹಾಓಬಾಮ್ ಒಂಗ್ಬಿ ನ್ಗಾಂಗ್ಬಿ ದೇವಿ
ಹಾಓಬಾಮ್ ಒಂಗ್ಬಿ ನ್ಗಾಂಗ್ಬಿ ದೇವಿ (೧ ಆಗಸ್ಟ್ ೧೯೨೪ - ೧೨ ಜೂನ್ ೨೦೧೪) ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಸಂಗೀತಗಾರ್ತಿ. ಮಣಿಪುರಿ ನೃತ್ಯ ಪ್ರಕಾರಗಳಾದ ಲೈ ಹರೋಬಾ ಮತ್ತು ರಾಸ್‌ನಲ್ಲಿ ಪರಿಣತಿ ಹೊಂದಿದ್ದಾರೆ. ೨೦೧೦ ರಲ್ಲಿ, ಭಾರತ ಸರ್ಕಾರವು ಹಾಓಬಾಮ್ ಒಂಗ್ಬಿ ನ್ಗಾಂಗ್ಬಿ ದೇವಿಗೆ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಜೀವನಚರಿತ್ರೆ ಹಾಓಬಾಮ್ ಒಂಗ್ಬಿ ನ್ಗಾಂಗ್ಬಿ ದೇವಿ ಅವರು ೧೯೨೪ ರ ಆಗಸ್ಟ್ ೧ ರಂದು ಭಾರತದ ಮಣಿಪುರ ರಾಜ್ಯದ ಇಂಫಾಲ್‌ನ ಉರಿಪೋಕ್ ಬಚಸ್ಪತಿ ಲೈಕೈಯಲ್ಲಿ, ಸ್ಥಳೀಯವಾಗಿ ಸಂಕೀರ್ತನ್ ಪಾಲಾ ಪ್ರದರ್ಶಕರಾದ ಕಿಜಾಮ್ ಬೋಕುಲ್ ಸಿಂಗ್‌ಗೆ ಜನಿಸಿದರು. ಅವರು ಮಣಿಪುರಿ ಸಂಗೀತನ್ ಸಂಘದಿಂದ ಐದನೇ ವಯಸ್ಸಿನಿಂದ ಮಣಿಪುರಿ ನೃತ್ಯ ಮತ್ತು ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ೧೯೩೦ ರಲ್ಲಿ ಕೋಲ್ಕತ್ತಾದ ಜೈಪೈಗುರಿ ಉತ್ಸವದಲ್ಲಿ ಕಲಾವಿದರಾಗಿ ಪಾದಾರ್ಪಣೆ ಮಾಡಿದರು. ಅವರು, ನಂತರ, ಗುರು ಆಟೋಂಬಾ ಸಿಂಗ್, ಯುಮ್ನಮ್ ಓಜಾ ನತುಮ್ ಸಿಂಗ್, ಗುರು ಎಂ. ಅಮುಬಿ ಸಿಂಗ್, ಮತ್ತು ನ್ಗಾಂಗೊಮ್ ಓಜಾ ಜುಗೀಂದ್ರೋ ಸಿಂಗ್ ಅವರಂತಹ ಹೆಸರಾಂತ ಶಿಕ್ಷಕರ ಮಾರ್ಗದರ್ಶನದಲ್ಲಿ ಲೈ ಹರೋಬಾ, ರಾಸ್ ಮತ್ತು ಬೆಟ್ಟಗಳ ಜನಾಂಗೀಯ ನೃತ್ಯ ಪ್ರಕಾರಗಳನ್ನು ಅಧ್ಯಯನ ಮಾಡಿದರು. ೧೯೩೨ ರಿಂದ ೧೯೪೦ ರವರೆಗೆ ಅವರು ಉಸ್ತಾದ್ ಮೈಸ್ನಮ್ ಬಿಧು ಸಿಂಗ್ ಮತ್ತು ಚಿಂಗಖಮ್ ರಾಧಾಚರಣ್ ಸಿಂಗ್ ಅವರಿಂದ ಶಾಸ್ತ್ರೀಯ ಸಂಗೀತವನ್ನು ಕಲಿತರು. ಮಣಿಪುರದ ಮೊದಲ ಶಾಸ್ತ್ರೀಯ ಗಾಯಕಿ ಎಂದು ಕರೆಯಲ್ಪಡುವ ನ್ಗಾಂಗ್ಬಿ ದೇವಿ ಅವರು ಆಲ್ ಇಂಡಿಯಾ ರೇಡಿಯೊಗೆ ಧ್ವನಿಮುದ್ರಣವನ್ನು ನೀಡಲು ಪ್ರಾರಂಭಿಸಿದರು ಮತ್ತು ೧೯೪೮ ರಲ್ಲಿ ಮಣಿಪುರಿಯವರು [ ಪ್ರಯತ್ನಿಸಿದ ಮೊದಲ ಚಲನಚಿತ್ರವಾದ ಮೈನು ಪೆಮ್ಚಾಗೆ ಹಿನ್ನೆಲೆ ಹಾಡಿದರು. ಜವಾಹರಲಾಲ್ ನೆಹರು ಮಣಿಪುರ ಡ್ಯಾನ್ಸ್ ಅಕಾಡೆಮಿಯನ್ನು ಸ್ಥಾಪಿಸಿದಾಗ, ನ್ಗಾಂಗ್ಬಿ ದೇವಿ ಅವರನ್ನು ನೃತ್ಯ ಮತ್ತು ಸಂಗೀತ ವಿಭಾಗಗಳಲ್ಲಿ ಅಧ್ಯಾಪಕರಾಗಿ ನೇಮಿಸಲಾಯಿತು. ಆರಂಭದಲ್ಲಿ ಮಧ್ಯಮ ಪ್ರಮಾಣದ ಸಂಸ್ಥೆಯಾಗಿದ್ದ ಅಕಾಡೆಮಿ, ದೇವಿ ಅವರು ಅಲ್ಲಿ ಲಾಯ್ ಹರೋಬಾ ಅವರ ಶಿಕ್ಷಕರಾಗಿದ್ದ ಅವಧಿಯಲ್ಲಿ ವರ್ಷಗಳಲ್ಲಿ ಬೆಳೆಯಿತು. ಅವರು ಲೈ ಹರೋಬಾದಲ್ಲಿ ಸಂಶೋಧನೆ ಮಾಡಿದ್ದಾರೆ ಮತ್ತು ಸಂಸ್ಥೆಗೆ ಪಠ್ಯಕ್ರಮವನ್ನು ಸಿದ್ಧಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ. ಅವರು ಲಲಿತ ಕಲಾ ಭವನದಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸುವ ಮೂಲಕ ತಮ್ಮನ್ನು ತಾವು ನವೀಕರಿಸಿಕೊಂಡರು. ೧೯೩೬ ರಿಂದ ೧೯೪೫ ರ ಅವಧಿಯಲ್ಲಿ ಮಣಿಪುರದ ನಾಟಕೀಯ ಒಕ್ಕೂಟ, ರೂಪಮಹಲ್ ಥಿಯೇಟರ್ ಮತ್ತು ಆರ್ಯನ್ ಥಿಯೇಟರ್‌ಗಳಲ್ಲಿ ನಟಿಯಾಗಿ ಕೆಲಸ ಮಾಡಿದರು. ದೇವಿ ಅವರು ಜೆ‌ಎನ್‌ಎಂ ನೃತ್ಯ ಅಕಾಡೆಮಿಯಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು. ಅಲ್ಲಿ ಅವರು ೧೯೬೬ ರಲ್ಲಿ ಜಾನಪದ ಮತ್ತು ಸಮುದಾಯ ನೃತ್ಯ ವಿಭಾಗದ ಮುಖ್ಯಸ್ಥರಾದರು ಮತ್ತು ೧೯೮೫ ರಲ್ಲಿ ನಿವೃತ್ತಿಯ ಸಮಯದಲ್ಲಿ ಅಕಾಡೆಮಿಯ ಉಪ ಪ್ರಾಂಶುಪಾಲರ ಹುದ್ದೆಯನ್ನು ಅಲಂಕರಿಸಿದರು. ದೇವಿ ಅವರು ತಮ್ಮ ಸಕ್ರಿಯ ವರ್ಷಗಳಲ್ಲಿ, ಗಣರಾಜ್ಯೋತ್ಸವದ ಜಾನಪದ ನೃತ್ಯೋತ್ಸವ, ರಾಷ್ಟ್ರೀಯ ನೃತ್ಯೋತ್ಸವ ಮತ್ತು ಅಂತರ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಂತಹ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂದರ್ಭಗಳಲ್ಲಿ ಮತ್ತು ಉತ್ಸವಗಳಲ್ಲಿ ಭಾಗವಹಿಸಿದ್ದಾರೆ. ನ್ಗಾಂಬಿ ದೇವಿ ೧೯೪೧ ರಲ್ಲಿ ಹಾಬಾಮ್ ಅಮುಬಾ ಸಿಂಗ್ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಒಬ್ಬ ಮಗನಿದ್ದನು. ಅವರು ೧೧ ಜೂನ್ ೨೦೧೪ ರಂದು ಇಂಫಾಲ್‌ನ ತಮ್ಮ ನಿವಾಸ ಉರಿಪೋಕ್ ಟೂರಂಗ್‌ಬಾಮ್ ಲೈಕೈಯಲ್ಲಿ ನಿಧನರಾದರು. ಪ್ರಶಸ್ತಿಗಳು ಮತ್ತು ಮನ್ನಣೆಗಳು ಅಸ್ಸಾಂ ಸರ್ಕಾರದಿಂದ ಬೀರಾಂಗನಾ ಪ್ರಶಸ್ತಿಯನ್ನು ಮತ್ತು ಮಣಿಪುರ ಸರ್ಕಾರದಿಂದ ಚಿನ್ನದ ಪದಕವನ್ನು ಪಡೆದಿರುವ ನಂಗ್ಬಿ ದೇವಿ ಅವರಿಗೆ ೧೯೮೦ ರಲ್ಲಿ ಮಣಿಪುರ ರಾಜ್ಯ ಕಲಾ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ಎರಡು ವರ್ಷಗಳ ನಂತರ, ೧೯೮೫ ರಲ್ಲಿ, ಮಣಿಪುರಿ ಸಾಹಿತ್ಯ ಪರಿಷತ್ತು ಅವರಿಗೆ ನಿರ್ತ್ಯಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೧೯೯೩ ರಲ್ಲಿ, ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರವು ೨೦೧೦ ರಲ್ಲಿ ಪದ್ಮಶ್ರೀ ನಾಗರಿಕ ಪ್ರಶಸ್ತಿಗಾಗಿ ಗಣರಾಜ್ಯೋತ್ಸವದ ಗೌರವ ಪಟ್ಟಿಯಲ್ಲಿ ಅವರನ್ನು ಸೇರಿಸಿತು. ಸಹ ನೋಡಿ ಮಣಿಪುರಿ ನೃತ್ಯ ಲೈ ಹರೋಬಾ ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152207
https://kn.wikipedia.org/wiki/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%BF%20%E0%B2%AD%E0%B2%BF%E0%B2%B8%E0%B3%86
ಸ್ವಾತಿ ಭಿಸೆ
ಸ್ವಾತಿ ಭಿಸೆ ( ಜನನ ೨೧ ಅಕ್ಟೋಬರ್ ೧೯೫೯) ಒಬ್ಬ ಭರತನಾಟ್ಯ ನೃತ್ಯಗಾರ್ತಿ, ನೃತ್ಯ ಸಂಯೋಜಕಿ, ಶಿಕ್ಷಣತಜ್ಞೆ, ನಿರ್ಮಾಪಕಿ, ನಿರ್ದೇಶಕಿ, ಬರಹಗಾರ್ತಿ ಮತ್ತು ಕಲೆಯ ಪ್ರವರ್ತಕಿ. ನೃತ್ಯ ವೃತ್ತಿ ಸ್ವಾತಿ " ಪದ್ಮವಿಭೂಷಣ " ಸೋನಾಲ್ ಮಾನ್ಸಿಂಗ್ ಅವರ ಮೊದಲ ಶಿಷ್ಯೆ . ನವದೆಹಲಿಯ ಸೆಂಟರ್ ಆಫ್ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸ್‌ನಲ್ಲಿ ಅವರ ಚೊಚ್ಚಲ ಪ್ರದರ್ಶನದಿಂದ, ಅವರು ನ್ಯಾಷನಲ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್ (ಭಾರತ), ಲಿಂಕನ್ ಸೆಂಟರ್, ಏಷ್ಯಾ ಸೊಸೈಟಿ, ಸಿಂಫನಿ ಸ್ಪೇಸ್, ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ,ಸ್ಪಿಕ್ ಮೆಕೆ, ಮತ್ತು ಸೋವಿಯತ್ ಕಲ್ಚರ್ ಹೌಸ್ ಸೇರಿದಂತೆ ಇತರ ಸ್ಥಳಗಳಲ್ಲಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರದರ್ಶನ ನೀಡಿದ್ದಾರೆ. ಅವರ ಕೆಲವು ಗಮನಾರ್ಹ ಪ್ರದರ್ಶನಗಳು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ೪೦ ನೇ ವಾರ್ಷಿಕೋತ್ಸವಕ್ಕಾಗಿ, ಎಲ್ಸಾ ಪೆರೆಟ್ಟಿ ಮತ್ತು ಪಲೋಮಾ ಪಿಕಾಸೊ ಅವರ ಹೊಸ ಮೆಶ್ ವಿನ್ಯಾಸಗಳನ್ನು ಟಿಫಾನಿ ಆಂಡ್ ಕೋ ಮತ್ತು ದಕ್ಷಿಣ ಏಷ್ಯಾದ ಶಿಲ್ಪಕಲೆ ವಿಭಾಗವಾದ, ದಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಪ್ರದರ್ಶಿಸಲಾಯಿತು. ಸ್ವಾತಿ ಅವರು ಥಾಮಸ್ ಮನ್ ಅವರ ದಿ ಟ್ರಾನ್ಸ್‌ಪೋಸ್ಡ್ ಹೆಡ್ಸ್‌ಗಾಗಿ ಭಾರತೀಯ ನೃತ್ಯ ಸಂಯೋಜನೆಯಲ್ಲಿ ಕೆಲಸ ಮಾಡಿದರು. ಇದನ್ನು ಸಿಡ್ನಿ ಗೋಲ್ಡ್‌ಫಾರ್ಬ್ ಮತ್ತು ಜೂಲಿ ಟೇಮರ್ ಅಳವಡಿಸಿದ್ದಾರೆ. ಸ್ವಾತಿ ಅವರು 'ಸೇಕ್ರೆಡ್ ಆರ್ಟ್ಸ್' ಎಂಬ ಸಿ‌ಬಿ‌ಎಸ್ ಸಾಕ್ಷ್ಯಚಿತ್ರದಲ್ಲಿ ತಮ್ಮ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಿಕ್ಷಣತಜ್ಞೆ ಸ್ವಾತಿ ಅವರು ೧೯೯೧ ರಿಂದ ೨೦೦೬ ರವರೆಗೆ ನ್ಯೂಯಾರ್ಕ್ ನಗರದ ಬ್ರೇರ್ಲಿ ಸ್ಕೂಲ್‌ನಲ್ಲಿ ಕಲಾವಿದೆಯಾಗಿ ಸೇವೆ ಸಲ್ಲಿಸಿದರು. ಇವರು ಮಕ್ಕಳು ಮತ್ತು ಹದಿಹರೆಯದವರಿಗೆ ಶಿಕ್ಷಣದಲ್ಲಿ ಭಾರತೀಯ ಕಲೆಗಳಿಗಾಗಿ ಲಾಭರಹಿತ ಸಂಸ್ಕೃತಿ ಕೇಂದ್ರವನ್ನು ಸ್ಥಾಪಿಸಿದರು. ಅವರು ಸಿಂಫನಿ ಸ್ಪೇಸ್ ನಲ್ಲಿ ದಿ ಕರಿಕ್ಯುಲಮ್ ಇನ್ ಆರ್ಟ್ಸ್ ಪ್ರೋಗ್ರಾಂನಲ್ಲಿ ಕಲಿಸುವುದನ್ನು ಮುಂದುವರೆಸಿದ್ದಾರೆ ಮತ್ತು ರಿಂದ ಲಿಂಕನ್ ಸೆಂಟರ್ ಇನ್ಸ್ಟಿಟ್ಯೂಟ್ ರೆಪರ್ಟರಿ ಕಲಾವಿದರಾಗಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್‌ನ ನೂರಾರು ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯ, ನ್ಯೂಯಾರ್ಕ್ ವಿಶ್ವವಿದ್ಯಾಲಯ, ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯ, ಸೇಂಟ್ ಮಾರ್ಕ್ಸ್ ಸ್ಕೂಲ್ ಆಫ್ ಟೆಕ್ಸಾಸ್, ದಿ ಡಾಲ್ಟನ್ ಸ್ಕೂಲ್, ದಿ ಬ್ರೇರ್ಲಿ ಸ್ಕೂಲ್, ದಿ . ಚಾಪಿನ್ ಶಾಲೆ, ಬ್ರೂಕ್ಲಿನ್ ಕಾಲೇಜು ಮತ್ತು ವೆಸ್ಲಿಯನ್ ವಿಶ್ವವಿದ್ಯಾಲಯಗಳಲ್ಲಿ ಪ್ರದರ್ಶನ ನೀಡಿದ್ದಾರೆ . ರಂಗಭೂಮಿ ಮತ್ತು ಚಲನಚಿತ್ರ ನಿರ್ಮಾಣ ೨೦೧೨ ರಲ್ಲಿ, ಸ್ವಾತಿ ದಿ ಸದಿರ್ ಥಿಯೇಟರ್ ಫೆಸ್ಟಿವಲ್ ಅನ್ನು ಸ್ಥಾಪಿಸಿದರು. ಇದು ಮೂರು ದಿನಗಳ ಉತ್ಸವವಾಗಿದ್ದು, ಇದು ವಾರ್ಷಿಕವಾಗಿ ಭಾರತದ ಗೋವಾದಲ್ಲಿ ನಡೆಯುತ್ತದೆ. ಲಿಲೆಟ್ ದುಬೆ, ಗಿರೀಶ್ ಕಾರ್ನಾಡ್, ರಜತ್ ಕಪೂರ್, ಮೊಹಮ್ಮದ್ ಅಲಿ ಬೇಗ್ ಮತ್ತು ವಿಕ್ರಮ್ ಕಪಾಡಿಯಾ ಸೇರಿದಂತೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ರಂಗಭೂಮಿ ತಾರೆಯರು ಎಲ್ಲಾ ವರ್ಷಗಳಿಂದ ಭಾಗವಹಿಸಿದ್ದಾರೆ ಮತ್ತು ಅವರು ಇನ್ನೂ ಉತ್ಸವದ ಕಲಾತ್ಮಕ ನಿರ್ದೇಶಕರಾಗಿದ್ದಾರೆ. ಸ್ವಾತಿ ಅವರು ಚೀನೀ ರಂಗಭೂಮಿಯ ಹಳೆಯ ಶೈಲಿಗಳಲ್ಲಿ ಒಂದಾದ ಕುಂಕು ಒಪೆರಾವನ್ನು ಯುನೆಸ್ಕೋ ಪರಂಪರೆಯ ಕಲಾ ಪ್ರಕಾರವನ್ನು ಭಾರತಕ್ಕೆ ಮೊದಲ ಬಾರಿಗೆ ತಂದರು. ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ನವದೆಹಲಿಯ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ಪ್ರದರ್ಶನ ನೀಡಿದರು. ೨೦೧೪ ರಲ್ಲಿ, ಸ್ವಾತಿ ಅವರು ದೇವ್ ಪಟೇಲ್ ಮತ್ತು ಜೆರೆಮಿ ಐರನ್ಸ್ ನಟಿಸಿದ ಎಡ್ವರ್ಡ್ ಆರ್ ಪ್ರೆಸ್‌ಮ್ಯಾನ್ ಚಲನಚಿತ್ರವಾದ ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿಯಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ ಮತ್ತು ಭಾರತೀಯ ಸಾಂಸ್ಕೃತಿಕ ಸಲಹೆಗಾರರಾಗಿ ಚಲನಚಿತ್ರ ನಿರ್ಮಾಣ ಕಂಪನಿಯನ್ನು ಸ್ಥಾಪಿಸಿದರು. ಈ ಚಲನಚಿತ್ರವು ಸೆಪ್ಟೆಂಬರ್ ೨೦೧೫ ರಲ್ಲಿ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಸ್ವಾತಿ ಇತ್ತೀಚೆಗೆ ೧೯ ನೇ ಶತಮಾನದ ಭಾರತದಲ್ಲಿ ಬ್ರಿಟಿಷ್ / ಭಾರತೀಯ ಸ್ವಯಂ-ಬರಹದ ಅವಧಿಯ ನಾಟಕವನ್ನು ನಿರ್ದೇಶಿಸಿದ್ದಾರೆ. ದಿ ವಾರಿಯರ್ ಕ್ವೀನ್ ಆಫ್ ಝಾನ್ಸಿ ಚಲನಚಿತ್ರವು ಯುಎಸ್, ಕೆನಡಾ ಮತ್ತು ಭಾರತದಲ್ಲಿ ನವೆಂಬರ್ ೨೦೧೯ ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಲನಚಿತ್ರವು ಇತಿಹಾಸದಲ್ಲಿ ಕಂದು ಬಣ್ಣದ ಸ್ತ್ರೀ ನಾಯಕಿಯೊಂದಿಗೆ ಮೊದಲ ಹಾಲಿವುಡ್ ಆಕ್ಷನ್ ಚಿತ್ರವಾಗಿದೆ ಮತ್ತು ವ್ಯಾಂಕೋವರ್ ಇಂಟರ್ನ್ಯಾಷನಲ್ ವುಮೆನ್ ಇನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ "ಇಂಪ್ಯಾಕ್ಟ್ ಪ್ರಶಸ್ತಿ" ಮತ್ತು ಲಿಂಗ ಸಮಾನತೆಯನ್ನು ಪ್ರದರ್ಶಿಸಲು ಪ್ರತಿಷ್ಠಿತ ದಿ ರಿಫ್ರೇಮ್ ಸ್ಟ್ಯಾಂಪ್ ಅನ್ನು ಪಡೆಯಿತು. ಅವರ ಮಗಳು ದೇವಿಕಾ ಭಿಸೆ ಶೀರ್ಷಿಕೆ ಪಾತ್ರವನ್ನು ನಿರ್ವಹಿಸಿದ್ದಾರೆ. ೯ ನೇ ವಾರ್ಷಿಕ ಮಹೀಂದ್ರಾ ಎಕ್ಸಲೆನ್ಸ್ ಇನ್ ಥಿಯೇಟರ್ ಅವಾರ್ಡ್ಸ್ (ಎಂ‌ಇ‌ಟಿ‌ಎ) ನಲ್ಲಿ ಶಬಾನಾ ಅಜ್ಮಿ, ಸುಷ್ಮಾ ಸೇಠ್, ಕುಲಭೂಷಣ್ ಖರ್ಬಂದಾ ಮತ್ತು ಉತ್ಕರ್ಷ್ ಮಜುಂದಾರ್ ಜೊತೆಗೆ ಸ್ವಾತಿ ಐದು ಸದಸ್ಯರ ಗ್ರ್ಯಾಂಡ್ ಜ್ಯೂರಿ ಸೇರಿದಂತೆ ಹಲವಾರು ಪ್ಯಾನೆಲ್‌ಗಳಲ್ಲಿ ಕುಳಿತುಕೊಂಡಿದ್ದಾರೆ. ಅವರ ತಾಯಿ ಉಷಾ ಗುಪ್ತೆ ಅವರೊಂದಿಗೆ, ಆಯಿ ಅವರ ಪಾಕವಿಧಾನಗಳು: ಮಹಾರಾಷ್ಟ್ರದ ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿ, ಪುಸ್ತಕದ ಸಹ ಲೇಖಕಿಯೂ ಹೌದು. ಇದು ಚಂದ್ರಸೇನಿಯಾ ಕಾಯಸ್ತಾನ್ ಪ್ರಭು (ಸಿ‌ಕೆ‌ಪಿ) ಅವರ ಪಾಕವಿಧಾನಗಳ ಸಂಗ್ರಹ. ' ವೈಯಕ್ತಿಕ ಜೀವನ ಸ್ವಾತಿ ಪ್ರಸ್ತುತ ನ್ಯೂಯಾರ್ಕ್ ಮತ್ತು ಗೋವಾದಲ್ಲಿ ತನ್ನ ಪತಿ, ಉದ್ಯಮಿ ಮತ್ತು ಲೋಕೋಪಕಾರಿ, ಭಾರತ್ ಭಿಸೆ, ಅವರ ತಾಯಿ ಮತ್ತು ಅವರ ನಾಲ್ಕು ನಾಯಿ (ಎರಡು ಡಾಬರ್‌ಮನ್‌ಗಳು ಮತ್ತು ಎರಡು ಬಾಕ್ಸರ್‌ಗಳು)ಗಳೊಂದಿಗೆ ವಾಸಿಸುತ್ತಿದ್ದಾರೆ. ನೃತ್ಯ ಸಂಯೋಜನೆಗಳು ಕಾಮ ಸೂತ್ರ: ರೈ ಆರ್ಟ್ಸ್ ಸೆಂಟರ್ / ಇಂಡೋ-ಅಮೇರಿಕನ್ ಕೌನ್ಸಿಲ್‌ಗಾಗಿ ನೃತ್ಯ-ಸಂವಾದ ಲಿಂಕನ್ ಸೆಂಟರ್ ಇನ್ಸ್ಟಿಟ್ಯೂಟ್ ಗಾಗಿ ಸೃಷ್ಟಿ ಅಮೇರಿಕನ್ ಚೇಂಬರ್ ಒಪೇರಾ ಕಂಪನಿ ಮತ್ತು ಆಲಿಸ್ ಶೀಲ್ಡ್ಸ್ ಗಾಗಿ ಮಾಸ್ ಫಾರ್ ದ ಡೆಡ್ ಅಮೇರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಗಾಗಿ ಸಿದ್ಧಾಂತ ಮತ್ತು ಅಭ್ಯಾಸದಲ್ಲಿ ರಾಸಾ ಭಾರತೀಯ ನೃತ್ಯದಲ್ಲಿನ ಭಾವನೆಗಳು ಅಷ್ಟನಾಯಕ: ಮಹಿಳೆಯ ೮ ವಿಶಾಲ ಮುಖಗಳು ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ - ಯುರಿಸ್ ಆಡಿಟೋರಿಯಂ - ' ಶೃಂಗಾರ ' ಬ್ರೂಕ್ಲಿನ್ ಮ್ಯೂಸಿಯಂ - ವೀರರ ಕ್ಷೇತ್ರಗಳು - 'ಭಾರತೀಯ ಚಿಕಣಿ ಚಿತ್ರಕಲೆಗಳಲ್ಲಿ ಅಷ್ಟನಾಯಕಿ' ಸ್ಮಿತ್ಸೋನಿಯನ್ - ಆರ್ಥರ್ ಸ್ಯಾಕ್ಲರ್ ವಿಂಗ್ " ಗೀತ ಗೋವಿಂದದಲ್ಲಿ ಸಖಿಯ ಪಾತ್ರ" ಡಾ. ವಿದ್ಯಾ ಡೆಹೆಜಿಯಾ ಅವರಿಂದ ಕ್ಯುರೇಟೆಡ್ ನಯಿಕಾಸ್ - ಟಿಫಾನೆ ಆಂಡ್ ಕೊ ಗಾಗಿ ಎಲ್ಸಾ ಪೆರೆಟ್ಟಿ ಮತ್ತು ಪಲೋಮಾ ಪಿಕಾಸೊ ಅವರ ಮೆಶ್ ವಿನ್ಯಾಸಗಳ ಅನಾವರಣಕ್ಕಾಗಿ. ಲಿಂಕನ್ ಸೆಂಟರ್‌ನಲ್ಲಿ ಜಾಝ್‌ಗಾಗಿ ಜಾಝ್ ಕರ್ನಾಟಿಕ್ ರಾಗಮಾಲಿಕಾ ದಶಾವತಾರ ಲಿಂಕನ್ ಸೆಂಟರ್‌ನಲ್ಲಿ ಜಾಝ್‌ಗಾಗಿ ಜಾಝ್ ಕರ್ನಾಟಿಕ್ ರಾಗಮಾಲಿಕಾ ನವರಸ ಲಿಂಕನ್ ಸೆಂಟರ್‌ನಲ್ಲಿ ಜಾಝ್‌ಗಾಗಿ ಜಾಝ್ ಕರ್ನಾಟಿಕ್ ಹಿಂದೋಲಂ ತಿಲ್ಲಾನ ೨೦೧೭ರಲ್ಲಿ ನ್ಯೂಪೋರ್ಟ್ ಜಾಝ್ ಫೆಸ್ಟಿವಲ್‌ನಲ್ಲಿ ೧೭ವರ್ಷದ ಅವಳಿಗಳಾದ ರಿಯಾ ಮತ್ತು ಸಾರಾ ಕಪೂರ್ ಅವರ ನೃತ್ಯ ವಿಭಾಗಗಳಿಗೆ ಕರ್ನಾಟಕ ಸಂಗೀತ ಮತ್ತು ಆರ್ಕೆಸ್ಟ್ರಾ ವ್ಯವಸ್ಥೆಗಾಗಿ ಕಂಡಕ್ಟರ್ ಮತ್ತು ಕೊರಿಯೋಗ್ರಾಫರ್ ಪರೋಪಕಾರ ಸ್ವಾತಿ ಆಗ್ನೇಯ ಏಷ್ಯಾವನ್ನು ಕೇಂದ್ರೀಕರಿಸಿ ಮಹಿಳಾ ಸಬಲೀಕರಣಕ್ಕಾಗಿ ಬಹಿರಂಗವಾಗಿ ಪ್ರತಿಪಾದಿಸುವವರು. ಅವರು ಲೋಟಸ್ ಸರ್ಕಲ್ ದಿ ಏಷ್ಯಾ ಫೌಂಡೇಶನ್‌ನ ಸಲಹೆಗಾರರಾಗಿದ್ದಾರೆ, ಇದು "ಕ್ರಿಯಾತ್ಮಕ ಮತ್ತು ಅಭಿವೃದ್ಧಿಶೀಲ ಏಷ್ಯಾದಾದ್ಯಂತ ಜೀವನವನ್ನು ಸುಧಾರಿಸಲು ಬದ್ಧವಾಗಿರುವ ಲಾಭೋದ್ದೇಶವಿಲ್ಲದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ". ೨೦೨೧ ರ ನವೆಂಬರ್‌ನಲ್ಲಿ ಅವರ ಚಲನಚಿತ್ರ ದಿ ವಾರಿಯರ್ ಕ್ವೀನ್ ಆಫ್ ಝಾನ್ಸಿಯಿಂದ ಸ್ಫೂರ್ತಿ ಪಡೆದ ಸ್ವಾತಿ ಭಿಸೆ ಅವರು "ದಿ ವಾರಿಯರ್ ಕ್ವೀನ್ ಪ್ರಾಜೆಕ್ಟ್" ಅನ್ನು ಪ್ರಾರಂಭಿಸಿದರು, ಇದು ಏಷ್ಯನ್ ಅಮೇರಿಕನ್ ಪೆಸಿಫಿಕ್ ಐಲ್ಯಾಂಡರ್ (ಏಎಪಿ‌ಐ) ಮಹಿಳೆಯರಿಗೆ ಯೋಧರ ರಾಣಿಯಾಗಲು ಅಧಿಕಾರ ನೀಡಲು ಸಜ್ಜಾಗಿದೆ. ಯೋಜನೆಯನ್ನು ೨೦೨೨ ರ ಆರಂಭದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ. ಉಲ್ಲೇಖಗಳು   ವಿಕಿಪೀಡಿಯ ಅನುವಾದ ಶಿಬಿರ ಲೇಖನ
152208
https://kn.wikipedia.org/wiki/%E0%B2%AA%E0%B2%A8%E0%B2%AC%E0%B2%BE%E0%B2%95%E0%B2%BE%20%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B3%80
ಪನಬಾಕಾ ಲಕ್ಷ್ಮೀ
ಡಾ. ಪನಬಾಕಾ ಲಕ್ಷ್ಮೀ (ಜನನ ೬ ಅಕ್ಟೋಬರ್ ೧೯೫೮) ಇವರು ಒಬ್ಬ ಭಾರತೀಯ ರಾಜಕಾರಣಿ. ಇವರು ಮಾಜಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ (೨೦೦೪-೨೦೦೯) ಮತ್ತು ಕೇಂದ್ರ ಜವಳಿ ರಾಜ್ಯ ಸಚಿವೆ (೨೦೦೯-೨೦೧೪) ಆಗಿದ್ದರು .ಇವರು ಆಂಧ್ರಪ್ರದೇಶದ ಬಾಪಟ್ಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಸಂಯೋಜಿತ ಆಂಧ್ರಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. ಈಗ ಇವರು ತೆಲುಗು ದೇಶಂ ಪಕ್ಷದ (ಟಿಡಿಪಿ)ದಲ್ಲಿ ಭಾಗಿಯಾಗಿದ್ದಾರೆ. ವೈಯಕ್ತಿಕ ಜೀವನ ಡಾ. ಪನಬಾಕಾ ಲಕ್ಷ್ಮೀ ಅವರು ಕಾವಲಿಯ ನೆಲ್ಲೂರಿ(ಆಂಧ್ರ ಪ್ರದೇಶ)ನಲ್ಲಿ ಜನಿಸಿದರು. ಡಾ. ಪಿ. ಕೃಷ್ಣಯ್ಯ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಆಂಧ್ರ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಎಂ.ಎ ಮುಗಿಸಿದರು. ವೃತ್ತಿ ಇವರು ನೆಲ್ಲೂರಿನಿಂದ ೧೧, ೧೨, ಮತ್ತು ೧೪ ನೇ ಲೋಕಸಭೆಗೆ ಮತ್ತು ಬಾಪಟ್ಲಾದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ಯು.ಪಿ.ಎ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (೨೦೦೪-೨೦೦೯), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಜವಳಿ ಸಚಿವಾಲಯ (೨೦೧೪) ರಾಜ್ಯ ಸಚಿವೆಯಾಗಿದ್ದರು . ಇವರು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ವೈ.ಎಸ್‌.ಆರ್‌.ಸಿ.ಪಿ.ಯ ಬಲ್ಲಿ ದುರ್ಗಾ ಪ್ರಸಾದ್ ರಾವ್ ವಿರುದ್ಧ ಟಿ.ಡಿ.ಪಿ ಯ ಅಭ್ಯರ್ಥಿಯಾಗಿ ತಿರುಪತಿಯಿಂದ ಸ್ಪರ್ಧಿಸಿ ವಿಫಲರಾದರು. ೨೦೨೧ ರಲ್ಲಿ, ಹಾಲಿ ಸಂಸದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರ ನಿಧನದ ನಂತರ ತೆರವಾಗಿರುವ ಅದೇ ತಿರುಪತಿ ಕ್ಷೇತ್ರದಿಂದ ಅವರು ಲೋಕಸಭಾ ಉಪಚುನಾವಣೆಯಲ್ಲಿ ವಿಫಲರಾದರು. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152210
https://kn.wikipedia.org/wiki/%E0%B2%A6%E0%B3%80%E0%B2%AA%E0%B2%BE%20%E0%B2%A6%E0%B2%BE%E0%B2%B8%E0%B3%8D%E0%B2%AE%E0%B3%81%E0%B2%A8%E0%B3%8D%E0%B2%B8%E0%B2%BF
ದೀಪಾ ದಾಸ್ಮುನ್ಸಿ
ದೀಪಾ ದಾಸ್ಮುನ್ಸಿ ಒಬ್ಬ ಭಾರತೀಯ ರಾಜಕಾರಣಿ. ಅವರು ೧೫ ನೇ ಲೋಕಸಭೆಯಲ್ಲಿ ರಾಯಗಂಜ್ ಸಂಸತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ಅಕ್ಟೋಬರ್ ೨೦೧೨ ರಿಂದ ಮೇ ೨೦೧೪ ರವರೆಗೆ ನಗರಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. ಅವರು ೨೦೧೭ ರಲ್ಲಿ ಅವರು ಸಾಯುವವರೆಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜಕಾರಣಿ ಪ್ರಿಯಾ ರಂಜನ್ ದಾಸ್ಮುನ್ಸಿ ಅವರ ಪತ್ನಿಯಾಗಿದ್ದರು. ಆರಂಭಿಕ ಜೀವನ ದೀಪಾ ದಾಸ್ಮುನ್ಸಿಯವರು ೧೫ ಜುಲೈ ೧೯೬೦ ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬೆನೋಯ್ ಘೋಷ್ ಮತ್ತು ದುರ್ಗಾ ಘೋಷ್ ದಂಪತಿಗೆ ಜನಿಸಿದರು. ದೀಪಾ ದಾಸ್ಮುನ್ಸಿ ಅವರು ಕೋಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು ಮತ್ತು ನಾಟಕಶಾಸ್ತ್ರದಲ್ಲಿ ಎಂಎ ಪಡೆದರುತ್ತಾರೆ. ಅವರು ೧೫ ಏಪ್ರಿಲ್ ೧೯೯೪ ರಂದು ಪ್ರಿಯಾ ರಂಜನ್ ದಾಸ್ಮುನ್ಸಿ ಅವರನ್ನು ವಿವಾಹವಾದರು ಮತ್ತು ಒಬ್ಬ ಮಗನನ್ನು ಹೊಂದಿದ್ದಾರೆ. ಸ್ಥಾನಗಳನ್ನು ಪಡೆದಿದ್ದಾರೆ 1. ೨೦೦೬-೨೦೦೯ ಸದಸ್ಯ, ಗೋಲ್‌ಪೋಖರ್‌ಗೆ ಪಶ್ಚಿಮ ಬಂಗಾಳ ವಿಧಾನಸಭೆ. 2. ೨೦೦೯-೨೦೧೪ ರಾಯಗಂಜ್‌ನಿಂದ ೧೫ ನೇ ಲೋಕಸಭೆಗೆ ಆಯ್ಕೆಯಾದರು. 3. ೩೧ ಆಗಸ್ಟ್ ೨೦೦೯ ಸದಸ್ಯರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಸಂಸದೀಯ ಸಮಿತಿ. 4. ೨೮ ಅಕ್ಟೋಬರ್ ೨೦೧೨,ಕೇಂದ್ರ ರಾಜ್ಯ ಸಚಿವರು, ನಗರಾಭಿವೃದ್ಧಿ. ಸಾಧನೆಗಳು ೧೯೮೪ ರಿಂದ ರಂಗ ಪ್ರದರ್ಶಕ, ದೂರದರ್ಶನ ಕಲಾವಿದರಾಗಿ, ವಸ್ತ್ರ ವಿನ್ಯಾಸಕರಾಗಿ, ಕಲಾ ನಿರ್ದೇಶಕರಾಗಿ (ಟಿವಿ ಧಾರಾವಾಹಿ ಮತ್ತು ಕಿರುಚಿತ್ರಗಳು)ಯೂ ಸೇವೆ ಸಲ್ಲಿಸಿದ್ದಾರೆ. ಕ್ರೀಡೆಗಳು ಮತ್ತು ಕ್ಲಬ್‌ಗಳು ಅಧ್ಯಕ್ಷೆ, ದೆಹಲಿ ಮಹಿಳಾ ಫುಟ್‌ಬಾಲ್ ಇತರ ಮಾಹಿತಿ ಸ್ನಾತಕೋತ್ತರ ಹಂತದಲ್ಲಿ ಚಿನ್ನದ ಪದಕ ವಿಜೇತರಾಗಿ ಮತ್ತು ರಂಗಭೂಮಿಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದರುತ್ತಾರೆ. ಶಿಕ್ಷಣ ಮತ್ತು ವೃತ್ತಿ ದಾಸ್‌ಮುಂಸಿಯವರು ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದರು ಮತ್ತು ನಾಟಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಇವರು ಸ್ನಾತಕೋತ್ತರ ಹಂತದಲ್ಲಿ ಚಿನ್ನದ ಪದಕ ವಿಜೇತೆ. ಅವರು ೨೦೦೬ ರಲ್ಲಿ ಗೋಲ್ಪೋಖರ್ನಿಂದ ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ೨೦೦೯ ರಲ್ಲಿ, ಅವರು ೧೫ ನೇ ಲೋಕಸಭೆಗೆ ಆಯ್ಕೆಯಾದರು ಮತ್ತು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಸಮಿತಿಯ ಸದಸ್ಯರಾಗಿದ್ದರು. ಅವರು ಕೇಂದ್ರ ರಾಜ್ಯ ಸಚಿವ, ನಗರಾಭಿವೃದ್ಧಿ ಸಚಿವರಾಗಿದ್ದರು. ಅವರು ನಿರಾಶ್ರಿತ ಬೀದಿ ಮಕ್ಕಳು, ಅಂಗವಿಕಲ ಮಕ್ಕಳು ಮತ್ತು ಬುಡಕಟ್ಟು ಜನರಿಗಾಗಿ ಕೆಲಸ ಮಾಡಿದ್ದಾರೆ. ಆಸಕ್ತಿಗಳು ದಾಸ್‌ಮುಂಸಿ‌ಯವರಿಗೆ ಪುಸ್ತಕಗಳನ್ನು ಓದುವುದು, ತೋಟಗಾರಿಕೆ ಮಾಡುವುದು, ಅಡುಗೆ ಮಾಡುವುದು ಮತ್ತು ಶಾಸ್ತ್ರೀಯ ಸಂಗೀತವನ್ನು ಕೇಳುವುದು ತಮ್ಮ ಕಾಲಕ್ಷೇಪವಾಗಿದೆ. ಅವರು ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದ್ದಾರೆ ಮತ್ತು ದೆಹಲಿ ಮಹಿಳಾ ಫುಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದಾರೆ. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152211
https://kn.wikipedia.org/wiki/%E0%B2%A6%E0%B2%B0%E0%B3%8D%E0%B2%B6%E0%B2%A8%20%E0%B2%9C%E0%B2%B0%E0%B3%8D%E0%B2%A6%E0%B3%8B%E0%B2%B6%E0%B3%8D
ದರ್ಶನ ಜರ್ದೋಶ್
ದರ್ಶನ ಜರ್ದೋಶ್ (ಜನನ ೨೧ ಜನವರಿ ೧೯೬೧) ಒಬ್ಬ ಭಾರತೀಯ ರಾಜಕಾರಣಿ. ಇವರು ಪ್ರಸ್ತುತ ಕೇಂದ್ರ ರೈಲ್ವೆ ರಾಜ್ಯ ಸಚಿವ ಮತ್ತು ಕೇಂದ್ರ ಜವಳಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಗುಜರಾತ್‌ನ ಸೂರತ್ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾಗಿದ್ದಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರ. ಇವರು ೨೦೦೯ ರಲ್ಲಿ ೧೫ ನೇ ಲೋಕಸಭೆಗೆ ಚುನಾಯಿತರಾದರು, ನಂತರ ೨೦೧೪ ರಲ್ಲಿ ೧೬ ನೇ ಲೋಕಸಭೆ ಮತ್ತು ೨೦೧೯ ರಲ್ಲಿ ೧೭ ನೇ ಲೋಕಸಭೆಗೆ ಆಯ್ಕೆಯಾದರು. ವೃತ್ತಿ ಅವರು ೨೦೦೯ ರಲ್ಲಿ ೧೫ ನೇ ಲೋಕಸಭೆಗೆ ಆಯ್ಕೆಯಾದರು. ೨೦೦೯ ರಲ್ಲಿ, ವಜ್ರದ ವ್ಯಾಪಾರವನ್ನು ಹೆಚ್ಚಿಸಲು ಸರ್ಕಾರವು ಸೂರತ್‌ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ೨೦೧೨ ರಲ್ಲಿ, ಕಾಂಗ್ರೆಸ್ ಸಂಸದ ತುಷಾರ್ ಚೌಧರಿ ಅವರು ಸೂರತ್‌ಗೆ ವಿಮಾನ ಸಂಪರ್ಕದ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿ, ಅವರು ಮತ್ತು ನವಸಾರಿ ಸಂಸದ ಸಿಆರ್ ಪಾಟೀಲ್ ಪ್ರಚಾರ ಮಾಡಿದರು. ೨೦೧೪ ರಲ್ಲಿ ಸೂರತ್‌ನಿಂದ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಅವರು ಸಂಸತ್ ಸದಸ್ಯರಾಗಿ ಮರು ಆಯ್ಕೆಯಾದರು. ಅವರು ೫,೩೩,೧೯೦ ಮತಗಳ ಐತಿಹಾಸಿಕ ಅಂತರದಿಂದ ಜಯಗಳಿಸಿದರು. ಇದು ಶ್ರೀಮತಿ ಇಂದಿರಾ ಗಾಂಧಿಯವರ ೨೦೧೪ ರ ಚುನಾವಣೆಯಲ್ಲಿ ೪ ನೇ ಅತ್ಯಧಿಕ ಮುನ್ನಡೆ ನಂತರ, ಭಾರತೀಯ ಚುನಾವಣಾ ಇತಿಹಾಸದಲ್ಲಿ ಯಾವುದೇ ಮಹಿಳಾ ಸಂಸದರ ಅತ್ಯಧಿಕ ಮುನ್ನಡೆಯಾಗಿದೆ. ಅವರು ೭೬.೬% ಮತಗಳನ್ನು ಗಳಿಸಿದರು, ಇದು ೨೦೧೪ ರ ಚುನಾವಣೆಯಲ್ಲಿ ದಾಖಲೆಯಾಗಿದೆ. ಅವರು ೨೦೧೯ ರ ಚುನಾವಣೆಯಲ್ಲಿ ಸೂರತ್‌ನಿಂದ ಲೋಕಸಭೆಗೆ ೭,೯೫,೬೫೧ ಮತಗಳೊಂದಿಗೆ ಸಂಸತ್ ಸದಸ್ಯರಾಗಿ ಮರು ಆಯ್ಕೆಯಾದರು. ಅವರು ೭ ಜುಲೈ ೨೦೨೧ ರಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರ ಸಚಿವಾಲಯದ ವಿಸ್ತರಣೆಯ ಸಂದರ್ಭದಲ್ಲಿ ರೈಲ್ವೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಲ್ಲೇಖಗಳು ಬಾಹ್ಯ ಕೊಂಡಿಗಳು ಭಾರತ ಸರ್ಕಾರದ ಪೋರ್ಟಲ್‌ನಲ್ಲಿ ವಿವರವಾದ ಪ್ರೊಫೈಲ್ ಟ್ವಿಟ್ಟರ್ ನಲ್ಲಿ ದರ್ಶನಾ ಜರ್ದೋಶ್ ಫೇಸ್ ಬುಕ್ ನಲ್ಲಿ Darshana Jardosh ವಿಕಿಪೀಡಿಯ ಅನುವಾದ ಶಿಬಿರ ಲೇಖನ
152212
https://kn.wikipedia.org/wiki/%E0%B2%B8%E0%B3%82%E0%B2%B0%E0%B3%8D%E0%B2%AF%E0%B2%95%E0%B2%BE%E0%B2%82%E0%B2%A4%E0%B2%BE%20%E0%B2%AA%E0%B2%BE%E0%B2%9F%E0%B3%80%E0%B2%B2%E0%B3%8D
ಸೂರ್ಯಕಾಂತಾ ಪಾಟೀಲ್
ಸೂರ್ಯಕಾಂತಾ ಪಾಟೀಲ್ (ಜನನ ೧೫ ಅಗಸ್ಟ್ ೧೯೪೮) ಭಾರತದ ೧೪ ನೇ ಲೋಕಸಭೆಯ ಸದಸ್ಯರಾಗಿದ್ದರು. ಅವರು ಮಹಾರಾಷ್ಟ್ರದ ಹಿಂಗೋಲಿ ಮತ್ತು ನಾಂದೇಡ್ ಕ್ಷೇತ್ರವನ್ನು ಪ್ರತಿನಿಧಿಸಿದರು ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್.ಸಿ.ಸಿ) ಸದಸ್ಯರಾಗಿದ್ದರು. ನಂತರ ೨೦೧೪ ರಲ್ಲಿ, ಪಕ್ಷಕ್ಕೆ ರಾಜೀನಾಮೆ ನೀಡಿದರು ಮತ್ತು ಡಾ. ಮಾಧವರಾವ್ ಕಿನ್ಹಾಲ್ಕರ್ ಅವರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಅವರು ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿದ್ದರು. ಜನನ ಇವರು ವೈಫನಾದ, ನಾಂದೇಡ್, ಮಹಾರಾಷ್ಟ್ರದಲ್ಲಿ ಹುಟ್ಟಿದರು. ಇವರು ೨ ಜನವರಿ ೧೯೬೬ ರಂದು ವಿವಾಹವಾದರು. ಪತ್ರಕರ್ತರಾಗಿ ಅಧ್ಯಕ್ಷರು - ೧೯೮೦ ರಿಂದ ಜಿಲ್ಲಾ ಪತ್ರಕರ್ತರ ಸಂಘ (ಅಖಿಲ ಭಾರತೀಯ ಪತ್ರಕರ್ ಪರಿಷತ್ತಿನೊಂದಿಗೆ ಸಂಯೋಜಿತವಾಗಿದೆ). ಪತ್ರಕರ್ತ - ಸಂಪಾದಕರು ಸಾಕ್ಷರತೆ ಕಲಾತ್ಮಕ ಮತ್ತು ವೈಜ್ಞಾನಿಕ ಸಾಧನೆ. ರಾಜಕೀಯ ವೃತ್ತಿಜೀವನ ಕಾರ್ಪೊರೇಟರ್- ನಾಂದೇಡ್-ವಾಘಾಲಾ ಮುನ್ಸಿಪಲ್ ಕಾರ್ಪೊರೇಷನ್. ೧೯೭೧: ಅಧ್ಯಕ್ಷರು-ಜಿಲ್ಲಾ ಕಾಂಗ್ರೆಸ್ ಸಮಿತಿ (ಮಹಿಳಾ ವಿಭಾಗ), ನಾಂದೇಡ್. ೧೯೭೨-೭೪: ಪ್ರಧಾನ ಕಾರ್ಯದರ್ಶಿ-ಜಿಲ್ಲಾ ಯುವ ಕಾಂಗ್ರೆಸ್ ೧೯೭೭-೭೮: ಸಂಸ್ಥಾಪಕ- ಸದಸ್ಯ ಡಿ.ಸಿ.ಸಿ (ಭಾರತ) ನಾಂದೇಡ್. ೧೯೮೦: ಸದಸ್ಯ- ಮುನ್ಸಿಪಲ್ ಕೌನ್ಸಿಲ್ ನಾಂದೇಡ್. ೧೯೮೦-೮೫: ಸದಸ್ಯ- ಮಹಾರಾಷ್ಟ್ರ ವಿಧಾನಸಭೆ (ಹಡಗಾಂವ್) ೧೯೮೧-೮೨: ಅಧ್ಯಕ್ಷರು- ಅಧೀನ ಶಾಸನ ಸಮಿತಿ. ೧೯೮೧-೮೫: ಪ್ರಧಾನ ಕಾರ್ಯದರ್ಶಿ- ಪ್ರದೇಶ ಯುವ ಕಾಂಗ್ರೆಸ್ (ಐ), ಮಹಾರಾಷ್ಟ್ರ. ೧೯೯೧-೯೬: ಕಾರ್ಯಕಾರಿ ಸದಸ್ಯ-ಸಿಪಿಪಿ ಕಾಂಗ್ರೆಸ್ ಸಂಸದೀಯ ಪಕ್ಷ (ಐ) ೧೯೯೭-೯೮: ಉಪಾಧ್ಯಕ್ಷ- ಪ್ರದೇಶ ಕಾಂಗ್ರೆಸ್ ಸಮಿತಿ. ಶಾಸಕಾಂಗದಲ್ಲಿ ೧೯೮೬ - ೯೧: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮಹಾರಾಷ್ಟ್ರದಿಂದ ಸಂಸದ-(ರಾಜ್ಯಸಭೆ) ಆಯ್ಕೆ. ೧೯೮೮ - ೮೯: ಸದಸ್ಯ- ಸಲಹಾ ಸಮಿತಿ, ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ಸಚಿವಾಲಯ. ೧೯೮೮ - ೯೦: ಸದಸ್ಯ, ನಿಯಮಗಳ ಸಮಿತಿ. ಹಿಂದಿ ಸಲಹಾಕಾರ್ ಸಮಿತಿ, ಉಕ್ಕು ,ಗಣಿ ಸಚಿವಾಲಯ ಮತ್ತು ಜಲಸಂಪನ್ಮೂಲ ಸಚಿವಾಲಯದ ಸದಸ್ಯ. ಸದಸ್ಯ- ಲೈಟ್ ಹೌಸ್ ಕೇಂದ್ರ ಸಲಹಾ ಸಮಿತಿ, ಮೇಲ್ಮೈ ಸಾರಿಗೆ ಸಚಿವಾಲಯ. ೧೯೯೧: ನಾಂದೇಡ್ ಲೋಕಸಭಾ ಕ್ಷೇತ್ರದಿಂದ ೧೦ನೇ ಲೋಕಸಭೆಗೆ ಆಯ್ಕೆ. ೧೯೮೮: ೧೨ನೇ ಲೋಕಸಭೆಯಲ್ಲಿ ಮರು ಆಯ್ಕೆ (೨ನೇ ಅವಧಿ) ೧೯೯೮ - ೯೯: ಸದಸ್ಯರ ರಕ್ಷಣಾ ಸಮಿತಿ ಮತ್ತು ಅದರ ಉಪ-ಸಮಿತಿ-I ಸದಸ್ಯ ಮಹಿಳೆಯರ ಸಬಲೀಕರಣದ ಜಂಟಿ ಸಮಿತಿ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳ ಮೌಲ್ಯಮಾಪನದ ಉಪ ಸಮಿತಿ -ಅಪರಾಧ ಕಾನೂನುಗಳು. ೧೯೯೯ - ೨೦೦೪: ವೈಸ್ ಚೇರ್‌ಪರ್ಸನ್ - ಮಹಾರಾಷ್ಟ್ರ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ಎಜುಕೇಶನ್ ಅಂಡ್ ರಿಸರ್ಚ್ (ಎಮ್ ಸಿ ಎ ಇ ಆರ್), ಪುಣೆ ೨೦೦೪ - ೨೦೦೯ – ಎಂಪಿ ಮತ್ತು ಎನ್‌ಸಿಪಿ ಕೋಟಾದಿಂದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು. ವಿಶೇಷ ಆಸಕ್ತಿ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವುದು, ಕಾರ್ಮಿಕ ಚಳುವಳಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಬಡವರು ಮತ್ತು ದೀನದಲಿತರ ಉನ್ನತಿ. ನೆಚ್ಚಿನ ಕಾಲಕ್ಷೇಪ ಮನರಂಜನೆ: ಓದುವುದು, ಸಂಗೀತವನ್ನು ಆಲಿಸುವುದು ಮತ್ತು ಪ್ರಕೃತಿಯನ್ನು ಆನಂದಿಸುವುದು. ಕ್ರೀಡೆಗಳು ಮತ್ತು ಕ್ಲಬ್‌ಗಳು: ಈಜು, ಶೂಟಿಂಗ್ ಮತ್ತು ಟೇಬಲ್ ಟೆನ್ನಿಸ್. ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತ, ಟ್ರೇಡ್ ಯೂನಿಯನ್‌ವಾದಿ ಭೇಟಿ ನೀಡಿದ ದೇಶಗಳು ಜಪಾನ್, ಯುಎಸ್ಎ, ಚೀನಾ, ಈಜಿಪ್ಟ್, ಯುಕೆ, ಜರ್ಮನಿ, ನ್ಯೂಜಿಲೆಂಡ್, ಯುಎಇ, ಗ್ವಾಟೆಮಾಲಾ, ನಿಕರಾಗುವಾ. ಜನತಾ ಆಡಳಿತದಲ್ಲಿ ಮೂರು ಬಾರಿ ಜೈಲುವಾಸ ಅನುಭವಿಸಿದರು ಮತ್ತು ಷಾ ಆಯೋಗದ ಮುಂದೆ ಹಾಜರಾದರು. ಸದಸ್ಯ ಸಮಾಲೋಚನಾ ಸಮಿತಿ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧ್ಯಕ್ಷರು - ನಗರಸಭಾ ಶಿಕ್ಷಣ ಸಮಿತಿ, ನಾಂದೇಡ್. ಅಧ್ಯಕ್ಷೆ: ೧೯೭೭-೭೮ರಲ್ಲಿ ರಚನೆಯಾದಾಗಿನಿಂದ ಮಹಿಳಾ ಉದ್ಯೋಗ ವಿಕಾಸ್ ಸಂತೆ. ಸ್ಥಾಪಕ ಅಧ್ಯಕ್ಷರು: ವಿವಿಧೋದ್ದೇಶ ಕಾರ್ಮಿಕ ಸಂಘ, ನಾಂದೇಡ್ ಅಧ್ಯಕ್ಷರು: ಹುತಾತ್ಮ ಜಯವಂತರಾವ್ ಪಾಟೀಲ್ ಸಹಕಾರಿ ಸಕ್ಕರೆ ಕಾರ್ಖಾನೆ, ಸೂರ್ಯನಗರ ತಾ.ಪಂ. ಹಡಗಾಂವ್ ಜಿಲ್ಲೆ. ನಾಂದೇಡ್ ನಿರ್ದೇಶಕರು - ೧೯೮೮ ರಿಂದ ಜಿಲ್ಲಾ ನಾಂದೇಡ್ ಸಹಕಾರಿ ಗ್ರಾಹಕ ಒಕ್ಕೂಟ; ನಿರ್ದೇಶಕರು : ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್, ಮುಂಬೈ. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152213
https://kn.wikipedia.org/wiki/%E0%B2%B8%E0%B3%86%E0%B2%B2%E0%B3%8D%E0%B2%9C%E0%B2%BE%20%E0%B2%95%E0%B3%81%E0%B2%AE%E0%B2%BE%E0%B2%B0%E0%B2%BF
ಸೆಲ್ಜಾ ಕುಮಾರಿ
ಸೆಲ್ಜಾ ಕುಮಾರಿ (ಜನನ ೨೪ ಸೆಪ್ಟೆಂಬರ್ ೧೯೬೨) ಒಬ್ಬ ಭಾರತೀಯ ರಾಜಕಾರಣಿ ಮತ್ತು ಮಾಜಿ ಸಂಸದೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯೆ. ಅವರು, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಭಾರತ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಸೆಲ್ಜಾ ಅವರು ೧೯೯೧ ರಲ್ಲಿ ಸಿರ್ಸಾದಿಂದ ಲೋಕಸಭೆಗೆ ಮೊದಲ ಬಾರಿಗೆ ಚುನಾಯಿತರಾದರು. ಅವರು ೧೯೯೬ರ ಚುನಾವಣೆಯಲ್ಲಿ ಸ್ಥಾನ ಉಳಿಸಿಕೊಂಡರು. ಅಂಬಾಲಾದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾದ ನಂತರ, ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ನೇಮಕಗೊಂಡರು. ಈ ಅವಧಿಯಲ್ಲಿಯೇ ಸೆಲ್ಜಾ ಅವರು ಮಹಿಳೆಯರ ಹಕ್ಕುಗಳ ಕಾರಣಕ್ಕಾಗಿ ಮತ್ತು ಭಾರತದಲ್ಲಿನ ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳನ್ನು ಹೆಚ್ಚಿಸಲು ಕೆಲಸ ಮಾಡಿದರು. ಸೆಲ್ಜಾ ಅವರು ಅಂಬಾಲಾದಿಂದ ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಫಲರಾದರು ಮತ್ತು ಅದರ ನಂತರ ರಾಜ್ಯ ರಾಜಕೀಯಕ್ಕೆ ಮರಳಿದರು. ಅದೇ ವರ್ಷದ ನಂತರ ಕಾಂಗ್ರೆಸ್ ಪಕ್ಷದ ಹರಿಯಾಣ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ೨೦೧೪ ರಿಂದ ೨೦೨೦ ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ಆರಂಭಿಕ ಜೀವನ ಸೆಲ್ಜಾ ಕುಮಾರಿ ೨೪ ಸೆಪ್ಟೆಂಬರ್ ೧೯೬೨ ರಂದು ಪರ್ಭುವಲಾ ಹಿಸಾರ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ರಾಜಕಾರಣಿಯಾಗಿದ್ದ ಚೌಧರಿ ದಲ್ಬೀರ್ ಸಿಂಗ್‌ಗೆ ಜನಿಸಿದರು. ಅವರು ನವದೆಹಲಿಯ ಜೀಸಸ್ ಮತ್ತು ಮೇರಿ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು ಮತ್ತು ನಂತರ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅವರು ಸ್ನಾತಕೋತ್ತರ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ರಾಜಕೀಯ ವೃತ್ತಿಜೀವನ ಸೆಲ್ಜಾ ಅವರು ೧೯೯೦ ರಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವರು ೧೯೯೧ ರಲ್ಲಿ ಹರಿಯಾಣದ ಸಿರ್ಸಾದಿಂದ ೧೦ ನೇ ಲೋಕಸಭೆಗೆ ಆಯ್ಕೆಯಾದರು. ಇವರು ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅವರು ಕೇಂದ್ರ ಶಿಕ್ಷಣ ಮತ್ತು ಸಂಸ್ಕೃತಿ ರಾಜ್ಯ ಸಚಿವರಾಗಿದ್ದರು. ೧೯೯೬ ರಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿನ ಹೊರತಾಗಿಯೂ, ಅವರು ೧೧ನೇ ಲೋಕಸಭೆಗೆ ಮರು ಆಯ್ಕೆಯಾದರು. ೨೦೦೪ ರಲ್ಲಿ ೧೪ ನೇ ಲೋಕಸಭೆಗೆ ಆಯ್ಕೆಯಾದ ನಂತರ ಸೆಲ್ಜಾ ಅವರು ಅಂತರರಾಷ್ಟ್ರೀಯ ಸಮ್ಮೇಳನಗಳು ಮತ್ತು ಶೃಂಗಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರಾರಂಭಿಸಿದರು. ಅವರು ೨೦೦೫ ರಲ್ಲಿ ಕಾಮನ್‌ವೆಲ್ತ್ ಸ್ಥಳೀಯ ಸರ್ಕಾರದ ವೇದಿಕೆಯ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದರು. ಅವರು ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್‌ನಂತಹ ಇತರ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರೆಸಿದರು ಮತ್ತು ಕಾಮನ್‌ವೆಲ್ತ್ ಕನ್ಸಲ್ಟೇಟಿವ್ ಗ್ರೂಪ್ ಆನ್ ಹ್ಯೂಮನ್ ಸೆಟಲ್‌ಮೆಂಟ್‌ನ ಮುಖ್ಯಸ್ಥರಾಗಿದ್ದರು. ಯುಪಿಎ ಸರ್ಕಾರಗಳಲ್ಲಿ ಪಾತ್ರ (೨೦೦೪–೨೦೧೩) ೨೦೦೪ರ ಚುನಾವಣಾ ವಿಜಯದ ನಂತರ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸೆಲ್ಜಾ ಅವರು ವಸತಿ ಮತ್ತು ನಗರ ಬಡತನ ನಿರ್ಮೂಲನೆಗಾಗಿ ಕೇಂದ್ರ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಪ್ರಮಾಣ ವಚನ ಸ್ವೀಕರಿಸಿದರು. ಅಂಬಾಲಾದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾದ ನಂತರ, ಸೆಲ್ಜಾ ಅವರನ್ನು ಮನಮೋಹನ್ ಸಿಂಗ್ ಅವರ ಎರಡನೇ ಕ್ಯಾಬಿನೆಟ್‌ನಲ್ಲಿ ಪ್ರವಾಸೋದ್ಯಮ ಸಚಿವರಾಗಿ ನೇಮಿಸಲಾಯಿತು. ಅವರು ಇಟಲಿ ಮತ್ತು ಸೈಪ್ರಸ್‌ನಂತಹ ದೇಶಗಳಿಗೆ ಭೇಟಿ ನೀಡಿದರು. ಅವರು ತಮ್ಮ ಕಚೇರಿಯಲ್ಲಿದ್ದಾಗ ಅಂತರರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರು. ಮಾರ್ಚ್ ೨೦೧೧ ರಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನಿಂದ ಸೆಲ್ಜಾ ಅವರು "ನಕಲಿ, ಕ್ರಿಮಿನಲ್ ಬೆದರಿಕೆ, ಫ್ಯಾಬ್ರಿಕೇಶನ್ ಮತ್ತು ಕ್ರಿಮಿನಲ್ ಪಿತೂರಿಯನ್ನು ರೂಪಿಸಿದ್ದಾರೆ" ಎಂದು ಆರೋಪಿಸಿರುವ ಅರ್ಜಿಯ ಮೇಲೆ ನೋಟಿಸ್ ನೀಡಿದ್ದರು. " ಮಿರ್ಚ್‌ಪುರ್ ಪ್ರಕರಣದಲ್ಲಿ ಜಾಟ್ ನಾಯಕರ ವಿರುದ್ಧ ಬಾಲ್ಮೀಕಿ ಸಮುದಾಯದ ನಾಯಕರು ಮತ್ತು ಸದಸ್ಯರನ್ನು ಪ್ರಚೋದಿಸಲು ಕೈಜೋಡಿಸುವ ಸಾಧನ" ಎಂದು ಅರ್ಜಿದಾರರಾದ ವಕೀಲ ಬಿ.ಎಸ್. ಚಾಹರ್ ಅವರು ಆರೋಪಿಸಿದ್ದು, ವಿಚಾರಣಾಧೀನ ಕೈದಿಗಳ ಮೇಲೆ ಒತ್ತಡ ಹೇರಿ ಮತ್ತು ಸಹಿ ಹಾಕುವಂತೆ ಒತ್ತಾಯಿಸುವ ಮೂಲಕ ಖಾಲಿ ಮತ್ತು ನ್ಯಾಯಾಂಗವಲ್ಲದ ಪತ್ರಗಳು". ಸೆಲ್ಜಾ ನಂತರ ೨೦೧೨ ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೇ ೨೦೧೪ ರಲ್ಲಿ ಅವರ ಅವಧಿ ಪೂರ್ಣಗೊಳ್ಳುವವರೆಗೆ ಅವರು ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಈ ಅವಧಿಯಲ್ಲಿ ಅವರು ಮಹಿಳೆಯರ ಸಬಲೀಕರಣ ಮತ್ತು ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೆಲಸ ಮಾಡಿದರು. ರಾಜ್ಯಸಭೆಗೆ (೨೦೧೪–ಇಂದಿನವರೆಗೆ) ಸೆಲ್ಜಾ ಅವರು ೨೦೧೪ ರಲ್ಲಿ ತಮ್ಮ ತವರು ರಾಜ್ಯವಾದ ಹರಿಯಾಣದಿಂದ ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಆಯ್ಕೆಯಾದರು. ಅವರು ಅಂಬಾಲಾದಿಂದ ೨೦೧೯ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ವಿಫಲರಾಗಿ ಭಾರತೀಯ ಜನತಾ ಪಕ್ಷದ ರತ್ತನ್ ಲಾಲ್ ಕಟಾರಿಯಾ ವಿರುದ್ಧ ಸೋತರು. ಅದರ ನಂತರ, ಅವರು ರಾಜ್ಯದ ರಾಜಕೀಯದಲ್ಲಿ ಹೊಸ ಆಸಕ್ತಿಯನ್ನು ವ್ಯಕ್ತಪಡಿಸಿದರು ಮತ್ತು ಅಕ್ಟೋಬರ್ ೨೦೧೯ ರಲ್ಲಿ ನಿಗದಿಯಾಗಿದ್ದ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೆಪ್ಟೆಂಬರ್, ೨೦೧೯ ರಲ್ಲಿ ನೇಮಕಗೊಂಡರು. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152214
https://kn.wikipedia.org/wiki/%E0%B2%B0%E0%B3%87%E0%B2%A3%E0%B3%81%E0%B2%95%E0%B2%BE%20%E0%B2%B8%E0%B2%BF%E0%B2%82%E0%B2%97%E0%B3%8D%20%28%E0%B2%B0%E0%B2%BE%E0%B2%9C%E0%B2%95%E0%B2%BE%E0%B2%B0%E0%B2%A3%E0%B2%BF%29
ರೇಣುಕಾ ಸಿಂಗ್ (ರಾಜಕಾರಣಿ)
ರೇಣುಕಾ ಸಿಂಗ್ ಸರುತಾ (ಜನನ ೫ ಜನವರಿ ೧೯೬೪) ಛತ್ತೀಸ್‌ಗಢದ ಭಾರತೀಯ ರಾಜಕಾರಣಿ. ಅವರು ೩೦ ಮೇ ೨೦೧೯ ರಿಂದ ಭಾರತದ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದರು. ರಾಜಕೀಯ ವೃತ್ತಿಜೀವನ ರೇಣುಕಾ ಅವರು ೨೦೦೩ ರಲ್ಲಿ ಛತ್ತೀಸ್‌ಗಢ ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದರು. ನಂತರ ಛತ್ತೀಸ್‌ಗಢ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕುಟುಂಬ ಕಲ್ಯಾಣ ರಾಜ್ಯ (ಸ್ವತಂತ್ರ ಉಸ್ತುವಾರಿ) ಸಚಿವರಾದರು. ೨೦೦೮ ರಲ್ಲಿ ಮತ್ತೊಮ್ಮೆ ಮರು ಆಯ್ಕೆಯಾದರು. ೨೦೧೩ ರ ವಿಧಾನಸಭೆ ಚುನಾವಣೆಯಲ್ಲಿ ಅವರು ಹಿರಿಯ ಕಾಂಗ್ರೆಸ್ ನಾಯಕ ಖೇಲ್ಸಾಯಿ ಸಿಂಗ್ ವಿರುದ್ಧ ಸೋತಿದ್ದರು. ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ, ಅವರು ಮತ್ತೊಮ್ಮೆ ಖೇಲ್ಸಾಯಿ ಸಿಂಗ್ ವಿರುದ್ಧ ಸ್ಪರ್ಧಿಸಿದರು. ಮತ್ತು ೧,೫೭,೮೭೩ ಮತಗಳ ಅಂತರದಿಂದ ಗೆದ್ದರು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕೇಂದ್ರ ಸಚಿವರಾದರು. ಉಲ್ಲೇಖಗಳು ಬಾಹ್ಯ ಕೊಂಡಿಗಳು ಭಾರತದ ಸಂಸತ್ತಿನ ವೆಬ್‌ಸೈಟ್‌ನಲ್ಲಿ ಅಧಿಕೃತ ಜೀವನಚರಿತ್ರೆಯ ರೇಖಾಚಿತ್ರ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152215
https://kn.wikipedia.org/wiki/%E0%B2%97%E0%B3%8C%E0%B2%B0%E0%B2%BF%20%E0%B2%AA%E0%B2%BE%E0%B2%B0%E0%B3%8D%E0%B2%B5%E0%B2%A4%E0%B2%BF%20%E0%B2%AC%E0%B2%BE%E0%B2%AF%E0%B2%BF
ಗೌರಿ ಪಾರ್ವತಿ ಬಾಯಿ
ಉತೃತ್ತತಿ ತಿರುನಾಳ್ ಗೌರಿ ಪಾರ್ವತಿ ಬಾಯಿ (೧೮೦೨-೧೮೫೩) ೧೮೧೫ - ೧೮೨೯ ರಲ್ಲಿ ಭಾರತದ ತಿರುವಾಂಕೂರ್ ರಾಜ್ಯದ ರಾಜಪ್ರತಿನಿಧಿಯಾದರು. ಅವರ ಸೋದರಳಿಯ ಮಹಾರಾಜ ಸ್ವಾತಿ ತಿರುನಾಳ್ ಪರವಾಗಿ ತಮ್ಮ ಆಳ್ವಿಕೆಯನ್ನು ಬಿಟ್ಟುಕೊಡುವವರೆಗೂ ಅವರು ತಮ್ಮ ಸಹೋದರಿ ಮಹಾರಾಣಿ ಗೌರಿ ಲಕ್ಷ್ಮಿ ಬಾಯಿಯ ಉತ್ತರಾಧಿಕಾರಿಯಾಗಿದ್ದರು. ಆರಂಭಿಕ ಜೀವನ ಮಹಾರಾಣಿ ಗೌರಿ ಪಾರ್ವತಿ ಬಾಯಿ ಅವರು ೧೮೦೨ ರಲ್ಲಿ ತಿರುವಾಂಕೂರ್ ರಾಜಮನೆತನದ ರಾಜಕುಮಾರಿ ಭರಣಿ ತಿರುನಾಳ್‌ಗೆ ಜನಿಸಿದರು. ಅವರು ಅಟ್ಟಿಂಗಲ್‌ನ ಹಿರಿಯ ರಾಣಿಯಾಗಿದ್ದರು ( ತಿರುವಾಂಕೂರಿನ ಮಹಾರಾಣಿಯರನ್ನು ಅಟ್ಟಿಂಗಲ್‌ನ ರಾಣಿ ಎಂದು ಕರೆಯಲಾಗುತ್ತಿತ್ತು). ೧೮೧೫ ರಲ್ಲಿ ಅವರ ಅಕ್ಕ ಮಹಾರಾಣಿ ಗೌರಿ ಲಕ್ಷ್ಮಿ ಬಾಯಿ ಹೆರಿಗೆಯ ನಂತರ ನಿಧನರಾದಾಗ, ಗೌರಿ ಪಾರ್ವತಿ ಬಾಯಿಯ ವಯಸ್ಸು ಕೇವಲ ಹದಿಮೂರು ವರ್ಷ. ಕುಟುಂಬದಲ್ಲಿ ಉಳಿದಿರುವ ಏಕೈಕ ಹೆಣ್ಣಾಗಿ, ಗೌರಿ ಪಾರ್ವತಿ ಬಾಯಿ ತನ್ನ ಸೋದರಳಿಯ, ಉತ್ತರಾಧಿಕಾರಿ ಮಹಾರಾಜ ಸ್ವಾತಿ ತಿರುನಾಳ್ ರಾಮವರ್ಮರ ಪರವಾಗಿ ರೀಜೆಂಟ್ ಮಹಾರಾಣಿಯಾಗಿದ್ದರು . ಅವರ ಪ್ರವೇಶದ ನಂತರ ಅವರ ಸೋದರ ಮಾವ, ಚಂಗನ್ಸೆರಿ ರಾಜಮನೆತನದ ರಾಜ ರಾಜ ವರ್ಮ ಮತ್ತು ಕಿಲಿಮನೂರಿನ ರಾಜಮನೆತನಕ್ಕೆ ಸೇರಿದ ಅವರ ಪತಿ ರಾಘವ ವರ್ಮರಿಂದ ಆಳ್ವಿಕೆಯಲ್ಲಿ ಸಕ್ರಿಯವಾಗಿ ಸಲಹೆ ನೀಡಲಾಯಿತು. ಸಚಿವ ಸ್ಥಾನ ಬದಲಾವಣೆ ಅಧಿಕಾರಕ್ಕೆ ಬಂದ ನಂತರ ಮಹಾರಾಣಿಯ ಮೊದಲ ಕಾರ್ಯವೆಂದರೆ ತನ್ನ ರಾಜ್ಯಕ್ಕೆ ಹೊಸ ದಿವಾನ್ ಅಥವಾ ಪ್ರಧಾನ ಮಂತ್ರಿಯನ್ನು ನೇಮಿಸುವುದು. ಏಕೆಂದರೆ ದಿವಾನ್ ದೇವನ್ ಪದ್ಮನಾಭನ್ ನಿಧನರಾದರು ಮತ್ತು ಅವರ ಉಪನಾಯಕ ಬಪ್ಪು ರಾವ್ ಅವರು ರಾಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದರು. ೧೮೧೫ ರಲ್ಲಿ ಸಂಕು ಅಣ್ಣಾವಿ ಪಿಳ್ಳೈ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಯಿತು ಆದರೆ ಶೀಘ್ರದಲ್ಲೇ ಅವರ ಕಷ್ಟಕರವಾದ ಕಚೇರಿಯನ್ನು ನಿಭಾಯಿಸಲು ಅಸಮರ್ಥರೆಂದು ಕಂಡುಬಂದಿತು ಮತ್ತು ಎರಡು ತಿಂಗಳೊಳಗೆ ಅವರನ್ನು ತೆಗೆದುಹಾಕಲಾಯಿತು. ಬ್ರಿಟಿಷ್ ರೆಸಿಡೆಂಟ್, ಕರ್ನಲ್ ಮುನ್ರೋ ಅವರ ಸಲಹೆಯ ನಂತರ ಹತ್ತು ತಿಂಗಳ ನಂತರ, ತಿರುವಾಂಕೂರಿನ ಹುಜೂರ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮನ್ ಮೆನನ್ ಅವರನ್ನು ದಿವಾನ್ ಆಗಿ ನೇಮಿಸಲಾಯಿತು. ಆದಾಗ್ಯೂ, ದಿವಾನ್ ರಾಮನ್ ಮೆನನ್ ಮತ್ತು ಬ್ರಿಟಿಷ್ ರೆಸಿಡೆಂಟ್ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು ಮತ್ತು ಆದ್ದರಿಂದ ರಾಮನ್ ಮೆನನ್ ಅವರನ್ನು೧೮೧೭ ರಲ್ಲಿ ಕೆಳಮಟ್ಟದ ಕಚೇರಿಗೆ ಸ್ಥಳಾಂತರಿಸಲಾಯಿತು. ಆ ಸಮಯದಲ್ಲಿ ಅವರು ಸೇವೆಯಿಂದ ಸಂಪೂರ್ಣವಾಗಿ ನಿವೃತ್ತರಾಗಲು ಆದ್ಯತೆ ನೀಡಿದರು. ದಿವಾನ್ ರಾಮನ್ ಮೆನನ್ ಅವರು ೨೦ ನೇ ಶತಮಾನದ ಪ್ರತಿಷ್ಠಿತ ಭಾರತೀಯ ರಾಜತಾಂತ್ರಿಕ ಕೃಷ್ಣ ಮೆನನ್ ಅವರ ಮುತ್ತಜ್ಜ ಮತ್ತು ವೆಂಗಲಿಲ್ ಕುಟುಂಬದ ಪೂರ್ವಜರಾಗಿದ್ದರು. ಅವರ ಬದಲಿಗೆ ರೆಡ್ಡಿ ರಾವ್ ಎಂದು ಕರೆಯಲ್ಪಡುವ ಡೆಪ್ಯೂಟಿಯನ್ನು ದಿವಾನ್ ಆಗಿ ನೇಮಕಗೊಂಡರು ಏಕೆಂದರೆ ಅವರು ಸೆಪ್ಟೆಂಬರ್ ೧೮೧೭ ರಲ್ಲಿ ರೆಸಿಡೆಂಟ್‌ಗೆ ಹತ್ತಿರವಾಗಿದ್ದರು . ಅವರು ೧೮೨೧ ರವರೆಗೆ ಯಶಸ್ವಿಯಾಗಿ ಆಳ್ವಿಕೆ ನಡೆಸಿದರು. ೧೮೧೯ ರಲ್ಲಿ ಬ್ರಿಟಿಷ್ ರೆಸಿಡೆಂಟ್ ಕರ್ನಲ್ ಮುನ್ರೋ ಅವರು ತಮ್ಮ ಕಚೇರಿಗೆ ರಾಜೀನಾಮೆ ನೀಡಿದರು ಮತ್ತು ಹೊಸ ರೆಸಿಡೆಂಟ್ ಕರ್ನಲ್ ಮೆಕ್‌ಡೊವೆಲ್ ಯಶಸ್ವಿಯಾದರು. ಅವರು ತಿರುವಾಂಕೂರ್‌ನಲ್ಲಿ ಬ್ರಿಟಿಷ್ ಪ್ರತಿನಿಧಿಯಾಗಿ ಅವರ ಸಹಾಯಕ ವೆಂಕಟ್ಟ ರಾವ್ ಅವರು ಮತ್ತು ದಿವಾನರ ನಡುವೆ ವೈಮನಸ್ಸು ಉಂಟಾಯಿತು ಮತ್ತು ೧೮೨೧ ರಲ್ಲಿ ವೆಂಕಟ ರಾವ್ ತಿರುವಾಂಕೂರಿನ ದಿವಾನರಾದರು. ಅವರು ೧೮೩೦ ರವರೆಗೆ ದಿವಾನರಾಗಿದ್ದರು. ಮುಖ್ಯ ಕಾರ್ಯಗಳು ಮಹಾರಾಣಿ ಗೌರಿ ಪಾರ್ವತಿ ಬಾಯಿ ತಮ್ಮ ಸೋದರಳಿಯನ ಪರವಾಗಿ ತಮ್ಮ ಆಳ್ವಿಕೆಯಲ್ಲಿ ತಮ್ಮ ರಾಜ್ಯದಲ್ಲಿ ಹಲವಾರು ಸುಧಾರಣೆಗಳನ್ನು ಸ್ಥಾಪಿಸಿದರು. ಕೆಲವು ಮುಖ್ಯ ಸುಧಾರಣೆಗಳೆಂದರೆ: ಪಾಶ್ಚಿಮಾತ್ಯ ದೇಶಗಳನ್ನು ಒಳಗೊಂಡಂತೆ ಹೆಚ್ಚಿನ ದೇಶಗಳಲ್ಲಿ "ಸಾರ್ವತ್ರಿಕ ಶಿಕ್ಷಣ" ಆಚರಣೆಯಲ್ಲಿಲ್ಲ ಎಂಬ ಅಂಶವನ್ನು ಪರಿಗಣಿಸಿ, ತಿರುವಾಂಕೂರಿನಲ್ಲಿ ಆಧುನಿಕ ಶಿಕ್ಷಣದ ಆರಂಭವನ್ನು ೧೮೧೭ ರಲ್ಲಿ ರಾಣಿ ಗೌರಿ ಪಾರ್ವತಿ ಬಾಯಿಯವರ ರಾಯಲ್ ರೆಸ್ಕ್ರಿಪ್ಟ್ ಸಮಸ್ಯೆಯಿಂದ ಗುರುತಿಸಬಹುದು. ಕ್ರಿಶ್ಚಿಯನ್ ರಯೋಟ್‌ಗಳನ್ನು ಹಿಂದೂ ಧಾರ್ಮಿಕ ಸಮಾರಂಭಗಳಿಗೆ ಸಂಬಂಧಿಸಿದ ಸೇವೆಗಳಿಂದ ಮುಕ್ತಗೊಳಿಸಲಾಯಿತು. ಅವರ ಧಾರ್ಮಿಕ ಪದ್ಧತಿಗಳಿಗೆ ಸಂಬಂಧಿಸಿದಂತೆ ಭಾನುವಾರದಂದು ಸಾರ್ವಜನಿಕ ಕೆಲಸಕ್ಕೆ ಹಾಜರಾಗುವುದರಿಂದ ಅವರನ್ನು ಮುಕ್ತಗೊಳಿಸಲಾಯಿತು. ತಿರುವಾಂಕೂರ್‌ನ ಕೆಲವು ಕೆಳಜಾತಿಗಳಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಧರಿಸುವುದರ ಬಗ್ಗೆ ನಿರ್ಬಂಧಗಳನ್ನು ತೆಗೆದುಹಾಕಲಾಯಿತು ಮತ್ತು ಅವರು ತಮಗೆ ಇಷ್ಟಬಂದಂತೆ ತಮ್ಮನ್ನು ತಾವು ಅಲಂಕರಿಸಿಕೊಳ್ಳಲು ಅನುಮತಿಸಲಾಯಿತು. ನಾಯರ್‌ಗಳಂತಹ ಉನ್ನತ ಜಾತಿಗಳಲ್ಲಿ, ಚಿನ್ನದ ಆಭರಣಗಳ ಬಳಕೆಗಾಗಿ ವಿಶೇಷ ಪರವಾನಗಿಗಳನ್ನು ( ಅಡಿಯಾರ ಪಣಂ) ಖರೀದಿಸಬೇಕಾಗಿತ್ತು. ಇದನ್ನು ರದ್ದುಪಡಿಸಲಾಯಿತು. ಮಹಾರಾಣಿ ತನ್ನ ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಅವರ ಮನೆಗಳ ಮೇಲ್ಛಾವಣಿಗೆ ಹೆಂಚು ಹಾಕಲು ಅವಕಾಶ ನೀಡುವ ಘೋಷಣೆಯನ್ನು ಜಾರಿಗೆ ತಂದರು. ಕೇರಳದ ಸಂದರ್ಭದಲ್ಲಿ ಇದು ಒಂದು ಪ್ರಮುಖ ಘೋಷಣೆಯಾಗಿತ್ತು, ಒಂದು ಸಮಯದಲ್ಲಿ ಝಮೋರಿನ್‌ನಂತಹ ಶಕ್ತಿಶಾಲಿ ರಾಜರು ತಮ್ಮ ಸಾಮಂತ ರಾಜರು ತಮ್ಮ ಅರಮನೆಗಳ ಛಾವಣಿಗಳಿಗೆ ಹೆಂಚು ಹಾಕಲು ಸಹ ಅನುಮತಿಸಲಿಲ್ಲ. ಕೆಲವು ರೀತಿಯ ಮನೆಗಳ ಬಳಕೆಯ ವಿಷಯದಲ್ಲಿ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಈ ಹಿಂದೆ ನಾಯರ್‌ಗಳವರೆಗಿನ ಜಾತಿಗಳಿಗೆ ಮಾತ್ರ ಪರವಾನಗಿಯನ್ನು ಖರೀದಿಸಿದ ನಂತರ ( ಅಡಿಯಾರ ಪಣಂ) ನಲುಕೆಟ್ಟುಗಳು ಎಂದು ಕರೆಯಲ್ಪಡುವ ನಿವಾಸಗಳಿಗೆ ಅನುಮತಿ ನೀಡಲಾಗುತ್ತಿತ್ತು. ಎಂಟು ಕೆಟ್ಟುಗಳು, ಪಂಥ್ರಾಂಡು ಕೆಟ್ಟುಗಳು ಇತ್ಯಾದಿಗಳೆಂದು ಕರೆಯಲ್ಪಡುವ ಕಟ್ಟಡಗಳು ಹೆಚ್ಚಿನ ತೆರಿಗೆಗಳಿಗೆ ಒಳಪಟ್ಟಿವೆ ಮತ್ತು ಪರವಾನಗಿಗಳನ್ನು ಪಡೆಯಬೇಕಾಗಿತ್ತು. ಅಂತಹ ತೆರಿಗೆಗಳು ಮತ್ತು ಪಾವತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು ಮತ್ತು ಎಲ್ಲಾ ಸಮುದಾಯಗಳ ಸದಸ್ಯರಿಗೆ ಈ ಕಟ್ಟಡಗಳ ಬಳಕೆಯನ್ನು ಅನುಮತಿಸಲಾಯಿತು. ಅದೇ ರೀತಿ ಪಲ್ಲಕ್ಕಿಗಳಲ್ಲಿ, ಆನೆಗಳ ಮೇಲೆ ಮತ್ತು ಗಾಡಿಗಳಲ್ಲಿ ಪ್ರಯಾಣಿಸುವ ಹಕ್ಕನ್ನು ಅದೇ ವೆಚ್ಚವನ್ನು ಹೊಂದಿರುವ ಎಲ್ಲರಿಗೂ ಅನುಮತಿಸಲಾಗಿದೆ. ಕಾಫಿ ಕೃಷಿಯನ್ನು ತಿರುವಾಂಕೂರ್‌ಗೆ ಮೊದಲ ಬಾರಿಗೆ ಪರಿಚಯಿಸಲಾಯಿತು. ಅವರ ಸಹೋದರಿ ಮಹಾರಾಣಿ ಗೌರಿ ಲಕ್ಷ್ಮಿ ಬಾಯಿಯವರ ಆಳ್ವಿಕೆಯ ಅಂತ್ಯದ ವೇಳೆಗೆ ಲಸಿಕೆಯನ್ನು ಪರಿಚಯಿಸಲಾಯಿತು. ಇದನ್ನು ಅವರ ಸಹೋದರಿ ರೀಜೆಂಟ್ ಮಹಾರಾಣಿ ಗೌರಿ ಪಾರ್ವತಿ ಬಾಯಿ ಅವರು ಜನಪ್ರಿಯಗೊಳಿಸಿದರು, ಇದು ಅವರ ದೊಡ್ಡ ಸಾಧನೆಯಾಗಿದೆ. ಮಹಾರಾಣಿ ತಿರುವಾಂಕೂರಿನಲ್ಲಿ ಕ್ರಿಶ್ಚಿಯನ್ ಮಿಷನರಿ ಉದ್ಯಮಕ್ಕೆ ಅನುಮತಿ ನೀಡಿದರು ಮತ್ತು ತಮ್ಮ ರಾಜ್ಯದಲ್ಲಿ ಚರ್ಚ್‌ಗಳ ನಿರ್ಮಾಣಕ್ಕಾಗಿ ಭೂಮಿಯನ್ನು ಸಹ ದಾನ ಮಾಡಿದರು. ವೇಲು ತಂಪಿ ದಳವಾ ಅವರ ದಂಗೆಯ ನಂತರ ತಿರುವಾಂಕೂರಿನ ಸೈನ್ಯವನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಅರಮನೆಗಳನ್ನು ಕಾವಲು ಮತ್ತು ರಾಜ್ಯ ಸಮಾರಂಭಗಳಿಗಾಗಿ ಏಳು ನೂರು ಜನರನ್ನು ಹೊರತುಪಡಿಸಿ ವಿಸರ್ಜಿಸಲಾಯಿತು. ೧೮೧೯ ರಲ್ಲಿ ಅದನ್ನು ಎರಡು ಸಾವಿರದ ನೂರಕ್ಕೆ ಏರಿಸಲು ಮಹಾರಾಣಿ ಮದ್ರಾಸ್ ಬ್ರಿಟಿಷ್ ಸರ್ಕಾರಕ್ಕೆ ಮನವರಿಕೆ ಮಾಡಿದರು. ೧೮೧೮ ರಲ್ಲಿ ಮಹಾರಾಣಿಯ ಆಳ್ವಿಕೆಯಲ್ಲಿ, ತಿರುವಾಂಕೂರು ಕೆಲವು ನಿರ್ದಿಷ್ಟ ಷರತ್ತುಗಳು ಮತ್ತು ಬೆಲೆಗಳ ಮೇಲೆ ಜಾಫ್ನಾ ತಂಬಾಕು ಪೂರೈಕೆಗಾಗಿ ಸಿಲೋನ್‌ನೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿತು. ಮಹಾರಾಣಿ ೧೮೨೩ ರಲ್ಲಿ ರಾಜ್ಯ ಮೆರವಣಿಗೆಗಳಲ್ಲಿ ಪಂಜುಗಳನ್ನು ಹೊತ್ತೊಯ್ಯುವ ಧಾರ್ಮಿಕ ಕಟ್ಟುಪಾಡುಗಳಿಂದ ತನ್ನ ದೇಶದ ಹೆಣ್ಣುಮಕ್ಕಳನ್ನು ಬಿಡುಗಡೆ ಮಾಡಿದರು. ಲಾರ್ಡ್ ಆಶ್ಲೇ ಇಂಗ್ಲೆಂಡ್‌ನಲ್ಲಿ ಆ ದೇಶದ ಮಹಿಳೆಯರನ್ನು ಕಲ್ಲಿದ್ದಲು ಗಣಿಗಳಲ್ಲಿ ಬರಿ-ಎದೆಯಿಂದ ಕೆಲಸ ಮಾಡುವಂತಹ ಕೆಲವು ದಬ್ಬಾಳಿಕೆಯ ಮತ್ತು ಅವನತಿಗೊಳಿಸುವ ಜವಾಬ್ದಾರಿಗಳಿಂದ ಮುಕ್ತಗೊಳಿಸುವ ಕಾಯಿದೆಯನ್ನು ಅಂಗೀಕರಿಸುವ ಕಾಯ್ದೆ ಜಾರಿಗೊಳಿಸಲಾಯಿತು. ೧೮೧೭ ರ ಶಿಕ್ಷಣದ ಸಾರ್ವತ್ರೀಕರಣದ ಕುರಿತಾದ ಪತ್ರ ಹೇಳುತ್ತದೆ: "ರಾಜ್ಯವು ತನ್ನ ಜನರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಬೇಕು. ಅವರಲ್ಲಿ ಜ್ಞಾನೋದಯದ ಹರಡುವಿಕೆಯಲ್ಲಿ ಯಾರೂ ಹಿಂದುಳಿದಿರಬಾರದು. ಶಿಕ್ಷಣದ ಪ್ರಸರಣದಿಂದ ಅವರು ಉತ್ತಮರಾಗಬಹುದು. ಪ್ರಜೆಗಳು ಮತ್ತು ಸಾರ್ವಜನಿಕ ಸೇವಕರು ಮತ್ತು ಆ ಮೂಲಕ ರಾಜ್ಯದ ಖ್ಯಾತಿಯನ್ನು ಹೆಚ್ಚಿಸಬಹುದು." ೧೮೧೭ ರ ರಾಣಿಯ ಘೋಷಣೆಯನ್ನು ಶಿಕ್ಷಣ ಇತಿಹಾಸಕಾರರು ತಿರುವಾಂಕೂರಿನಲ್ಲಿ 'ಶಿಕ್ಷಣದ ಮ್ಯಾಗ್ನಾ ಕಾರ್ಟಾ ' ಎಂದು ಶ್ಲಾಘಿಸಿದ್ದಾರೆ. ಈ ಪತ್ರದ ಮೂಲಕ, ಒಳಗೊಂಡಿರುವ ವೆಚ್ಚಗಳಿಗೆ ಬಜೆಟ್ ಸೌಕರ್ಯಗಳನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯವು ಘೋಷಿಸುತ್ತಿತ್ತು. ವ್ಯವಸ್ಥಿತ ಮಾರ್ಗದಲ್ಲಿ ನಡೆಯುವ ಪ್ರತಿಯೊಂದು ಶಾಲೆಗೂ ಇಬ್ಬರು ಶಿಕ್ಷಕರಿಗೆ ರಾಜ್ಯದಿಂದ ವೇತನ ನೀಡಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಯಿತು. ಇದು ಸಾರ್ವಜನಿಕ ಆದಾಯದಿಂದ ಶಿಕ್ಷಣದ ಹಕ್ಕಿಗೆ ರಾಜ್ಯದಿಂದ ಮೊದಲ ಔಪಚಾರಿಕ ಮಾನ್ಯತೆ ಎಂದು ಪರಿಗಣಿಸಬಹುದು. ಆಳ್ವಿಕೆಯ ಅಂತ್ಯ ೧೮೨೯೦ ರಲ್ಲಿ ಮಹಾರಾಜ ಸ್ವಾತಿ ತಿರುನಾಳ್ ಹದಿನಾರನೇ ವಯಸ್ಸನ್ನು ತಲುಪಿ ಮೇಜರ್ ಆದರು. ಆದ್ದರಿಂದ ಅವನ ಚಿಕ್ಕಮ್ಮ, ಮಹಾರಾಣಿ, ಅವನ ಪರವಾಗಿ ತಮ್ಮ ಆಳ್ವಿಕೆಯನ್ನು ತ್ಯಜಿಸಲು ಮತ್ತು ಅವನಿಗೆ ಸಂಪೂರ್ಣ ಅಧಿಕಾರವನ್ನು ಕೊಡಲು ನಿರ್ಧರಿಸಿದರು. ಅದರಂತೆ, ಮಹಾರಾಜ ಸ್ವಾತಿ ತಿರುನಾಳ್ ಅವರಿಗೆ ೧೮೨೯ ರಲ್ಲಿ ಪಟ್ಟಾಭಿಷೇಕ ಮಾಡಿದರು. ಪೂರ್ಣ ಶೀರ್ಷಿಕೆ ಶ್ರೀ ಪದ್ಮನಾಭ ಸೇವಿನಿ ವಾಂಚಿ ಧರ್ಮ ವರ್ಧಿನಿ ರಾಜ ರಾಜೇಶ್ವರಿ ಮಹಾರಾಣಿ ಉತೃತ್ತತಿ ತಿರುನಾಳ್ ಗೌರಿ ಪಾರ್ವತಿ ಬಾಯಿ, ಅಟ್ಟಿಂಗಲ್ ಎಲಾಯ ತಂಪುರನ್, ತಿರುವಾಂಕೂರಿನ ರೀಜೆಂಟ್ ಮಹಾರಾಣಿ. ಮಹಾರಾಣಿಯವರ ವಿಮರ್ಶೆ ೧೯೦೬ರ ತಿರುವಾಂಕೂರು ರಾಜ್ಯ ಕೈಪಿಡಿಯ ಲೇಖಕ ವಿ.ನಾಗಂ ಅಯ್ಯ ಅವರ ಮಾತುಗಳಲ್ಲಿ, ಕುಟುಂಬ ಮಹಾರಾಣಿ ಗೌರಿ ಪಾರ್ವತಿ ಬಾಯಿ ಮೂರು ಬಾರಿ ವಿವಾಹವಾದರು. ಅವರ ಮೊದಲ ಪತಿ ಕಿಲಿಮನೂರು ರಾಜಮನೆತನದ ರಾಘವ ವರ್ಮ. ಅವರ ಮರಣದ ನಂತರ ಅವರು ತಮ್ಮ ಗಂಡನ ಸಹೋದರನನ್ನು ಮತ್ತೆ ವಿವಾಹವಾದರು. ೧೮೨೪ ರಲ್ಲಿ ಅವನ ಮರಣವು ಅವಳು ಮತ್ತೆ ಮದುವೆಯಾಗಲು ಕಾರಣವಾಯಿತು ಆದರೆ ಅವಳ ಮೂರು ಮದುವೆಗಳಲ್ಲಿ ರಾಣಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಅವರು ತಮ್ಮ ಸೋದರಳಿಯ ಮತ್ತು ಸೊಸೆಯನ್ನು ಸ್ವಂತ ಮಕ್ಕಳಂತೆ ನೋಡುತ್ತಿದ್ದರು. ಅವಳು ೧೮೫೩ ರಲ್ಲಿ ನಿಧನರಾದರು. ಉಲ್ಲೇಖಗಳು ವಿ.ನಾಗಂ ಅಯ್ಯ ಅವರಿಂದ ತಿರುವಾಂಕೂರು ರಾಜ್ಯ ಕೈಪಿಡಿ ಶಂಕುನ್ನಿ ಮೆನನ್ ಅವರಿಂದ ತಿರುವಾಂಕೂರಿನ ಇತಿಹಾಸ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152218
https://kn.wikipedia.org/wiki/%E0%B2%95%E0%B3%81%E0%B2%AE%E0%B3%81%E0%B2%A6%E0%B2%BE%E0%B2%AC%E0%B3%86%E0%B2%A8%E0%B3%8D%20%E0%B2%9C%E0%B3%8B%E0%B2%B6%E0%B2%BF
ಕುಮುದಾಬೆನ್ ಜೋಶಿ
ಕುಮುದಾಬೆನ್ ಮಣಿಶಂಕರ್ ಜೋಶಿ ಅವರು (೩೧ ಜನವರಿ ೧೯೩೪ - ೧೪ ಮಾರ್ಚ್ ೨೦೨೨) ಒಬ್ಬ ಭಾರತೀಯ ರಾಜಕಾರಣಿ. ಜೀವನಚರಿತ್ರೆ ಅವರು ೨೬ ನವೆಂಬರ್ ೧೯೮೫ ರಿಂದ, ೭ ಫೆಬ್ರವರಿ ೧೯೯೦ ರವರೆಗೆ ಭಾರತದ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದರು. ಶಾರದಾ ಮುಖರ್ಜಿ ನಂತರ ಅವರು ರಾಜ್ಯದ ಎರಡನೇ ಮಹಿಳಾ ರಾಜ್ಯಪಾಲರಾಗಿದ್ದರು. ಅವರು (ಅಕ್ಟೋಬರ್ ೧೯೮೦ - ಜನವರಿ ೧೯೮೨) ಮಾಹಿತಿ ಮತ್ತು ಪ್ರಸಾರ ಖಾತೆಯ ಉಪ ಮಂತ್ರಿಯೂ ಆದರು. ಇವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಉಪ ಮಂತ್ರಿ (ಜನವರಿ ೧೯೮೨ - ಡಿಸೆಂಬರ್ ೧೯೮೪)ಯಾಗಿದ್ದರು. ಜೋಶಿ ಅವರು ೧೫ ಅಕ್ಟೋಬರ್ ೧೯೭೩ ರಿಂದ ೨ ಏಪ್ರಿಲ್ ೧೯೭೬, ೩ ಏಪ್ರಿಲ್ ೧೯೭೬ ರಿಂದ ೨ ಏಪ್ರಿಲ್ ೧೯೮೨ ಮತ್ತು ೩ ಏಪ್ರಿಲ್ ೧೯೮೨ ರಿಂದ ೨೫ ನವೆಂಬರ್ ೧೯೮೫ ರವರೆಗೆ ಮೂರು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದರು. ಗುಜರಾತ್ ಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಅಧಿಕಾರ ವಹಿಸಿಕೊಂಡ ಕೂಡಲೇ, ಅವರು ರಾಜ್ಯದ ಎಲ್ಲಾ ೨೩ ಜಿಲ್ಲೆಗಳಿಗೆ ಮತ್ತು ಆಗಾಗ್ಗೆ ಹೊರಗೆ ಪ್ರಯಾಣಿಸಿ, ಒಂದು ರೀತಿಯ ದಾಖಲೆಯನ್ನು ಸೃಷ್ಟಿಸಿದರು. ಅದು ಹೈದರಾಬಾದ್‌ನ ರಾಜಭವನದಲ್ಲಿ ಅವರ ೧೩ ಹಿಂದಿನವರಿಗಿಂತ ಹೆಚ್ಚು ಸಕ್ರಿಯವಾಗಿತ್ತು. ೨೬ ನವೆಂಬರ್ ೧೯೮೫ ಮತ್ತು ೩೦ ಸೆಪ್ಟೆಂಬರ್ ೧೯೮೭ ರ ನಡುವೆ ಅವರು ೧೦೮ ಸಂದರ್ಭಗಳಲ್ಲಿ ಜಿಲ್ಲೆಗಳಿಗೆ ಮತ್ತು ರಾಜ್ಯದ ಹೊರಗೆ ೨೨ ಬಾರಿ ಪ್ರಯಾಣಿಸಿದ್ದಾರೆ. ಆಗಿನ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಮತ್ತು ಅವರ ಪಕ್ಷದವರು ಇದನ್ನು ಕಾಂಗ್ರೆಸ್‌ಗೆ ಭದ್ರವಾದ ನೆಲೆಯನ್ನು ನಿರ್ಮಿಸುವ ಜೋಶಿಯವರ ಪ್ರಯತ್ನವೆಂದು ಪರಿಗಣಿಸಿದರು. ವಿವಾದಗಳು ಜೋಶಿ ಅವರು ಹೈದರಾಬಾದ್‌ನ ಸ್ಥಳೀಯ ಪತ್ರಿಕೆಗಳಿಗೆ ಹಲವಾರು ಸಂದರ್ಶನಗಳನ್ನು ನೀಡುವ ಮೂಲಕ ಪ್ರತಿಕ್ರಿಯಿಸಿದರು. ಅವರು ಆರೋಪಗಳನ್ನು "ಕಸ" ಎಂದು ತಳ್ಳಿಹಾಕಿದರು ಮತ್ತು "ಅಂತಹ ಟೀಕೆಗಳಿಗೆ ಉತ್ತರಿಸುವುದು ನನ್ನ ಘನತೆಗೆ ಕಡಿಮೆಯಾಗಿದೆ" ಎಂದು ಹೇಳಿದರು. ಸಾವು ಅವರು ೧೪ ಮಾರ್ಚ್ ೨೦೨೨ ರಂದು ಗಾಂದೇವಿ ಬಳಿಯ ಚಾಂಗಾ ಧನೋರಿ ಗ್ರಾಮದಲ್ಲಿ ತಮ್ಮ ೮೮ ನೇ ವಯಸ್ಸಿನಲ್ಲಿ ನಿಧನರಾದರು. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152219
https://kn.wikipedia.org/wiki/%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B3%80%20%E0%B2%8E%E0%B2%A8%E0%B3%8D.%20%E0%B2%AE%E0%B3%86%E0%B2%A8%E0%B2%A8%E0%B3%8D
ಲಕ್ಷ್ಮೀ ಎನ್. ಮೆನನ್
ಲಕ್ಷ್ಮೀ ಎನ್. ಮೆನನ್ (೨೯ ಮಾರ್ಚ್ ೧೮೯೯  – ೩೦ ನವೆಂಬರ್ ೧೯೯೪ ) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ರಾಜಕಾರಣಿ. ಅವರು ೧೯೬೨ ರಿಂದ ೧೯೬೬ ರವರೆಗೆ ರಾಜ್ಯ ಸಚಿವರಾಗಿದ್ದರು. ಆರಂಭಿಕ ಜೀವನ ತಿರುವನಂತಪುರದಲ್ಲಿ ಜನಿಸಿದ ಅವರು ರಾಮವರ್ಮ ಥಂಪನ್ ಮತ್ತು ಮಾಧವಿಕುಟ್ಟಿ ಅಮ್ಮನವರ ಮಗಳು. ೧೯೩೦ ರಲ್ಲಿ, ಅವರು ಪ್ರೊಫೆಸರ್ ವಿ.ಕೆ. ನಂದನ್ ಮೆನನ್ ಅವರನ್ನು ವಿವಾಹವಾದರು. ಅವರು ನಂತರ ತಿರುವಾಂಕೂರ್ ವಿಶ್ವವಿದ್ಯಾಲಯದ (೧೯೫೦-1೧೯೫೧) ಮತ್ತು ಪಾಟ್ನಾ ವಿಶ್ವವಿದ್ಯಾಲಯದ ಉಪಕುಲಪತಿಯಾದರು. ಜೊತೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನ ನಿರ್ದೇಶಕಿಯಾಗಿದ್ದರು. ವೃತ್ತಿ ಅವರು ೧೯೫೨ ರಿಂದ ೧೯೬೬ ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ೧೯೫೨ ರಿಂದ ೧೯೫೭ ರವರೆಗೆ ಸಂಸದೀಯ ಕಾರ್ಯದರ್ಶಿಯಾಗಿ, ೧೯೫೭ ರಿಂದ ೧೯೬೨ ರವರೆಗೆ ಉಪ ಮಂತ್ರಿಯಾಗಿ ಮತ್ತು ೧೯೬೬ ರವರೆಗೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ೧೯೬೭ ರಲ್ಲಿ ರಾಜಕೀಯ ಸೇವೆಯಿಂದ ನಿವೃತ್ತರಾದ ಅವರು, ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಮುದ್ರಣಾಲಯ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ ಆಕ್ಸ್‌ಫರ್ಡ್ ಪಾಂಪ್ಲೆಟ್ಸ್ ಆನ್ ಇಂಡಿಯನ್ ಅಫೇರ್ಸ್ ಸರಣಿಗಾಗಿ ಭಾರತೀಯ ಮಹಿಳೆಯರ ಕುರಿತಾದ ಇತರ ವಿಷಯಗಳ ಜೊತೆಗೆ ಬರೆಯುವ, ಸಾಮಾಜಿಕ ಕಾರ್ಯಗಳತ್ತ ಮುಖಮಾಡಿದರು. ಅವರು ಭಾರತದಲ್ಲಿ ವಿಶ್ವವಿದ್ಯಾನಿಲಯ ಮಹಿಳಾ ಒಕ್ಕೂಟವನ್ನು ಸ್ಥಾಪಿಸಲು ಸಹಾಯ ಮಾಡಿದರು. ಅವರ ಸೇವೆಯನ್ನು ಗುರುತಿಸಿ, ಅವರಿಗೆ ೧೯೫೭ ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಇವರು ಈ ಪ್ರಶಸ್ತಿಯನ್ನು ಪಡೆದ ಎರಡನೇ ಮಲಯಾಳಿ ಮಹಿಳೆಯಾಗಿದ್ದರು . ಮೆನನ್ ರಾಜಕೀಯದ ನಂತರ ತನ್ನ ಸಕ್ರಿಯ ಜೀವನವನ್ನು ರಾಷ್ಟ್ರದ ಉದ್ದೇಶಕ್ಕಾಗಿ ಮುಡಿಪಾಗಿಟ್ಟರು. ಅವರು ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ಪೋಷಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರು ಮೊರಾರ್ಜಿ ದೇಸಾಯಿ ಅವರೊಂದಿಗೆ ಅಖಿಲ ಭಾರತ ನಿಷೇಧ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ೧೯೮೮ ರಲ್ಲಿ, ಅವರು ಎಪಿ ಉದಯಭಾನು ಮತ್ತು ಜಾನ್ಸನ್ ಜೆ. ಎಡಯರನ್ಮುಲ ಅವರೊಂದಿಗೆ ಆಲ್ಕೋಹಾಲ್ ಮತ್ತು ಡ್ರಗ್ ಇನ್ಫರ್ಮೇಷನ್ ಸೆಂಟರ್ (ಎಡಿಐಸಿ)-ಭಾರತವನ್ನು ಸ್ಥಾಪಿಸಿದರು ಮತ್ತು ಅವರು ಸಾಯುವವರೆಗೂ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಮಹಿಳೆಯರಲ್ಲಿ ಅನಕ್ಷರತೆ ನಿರ್ಮೂಲನೆಗಾಗಿ ಅಖಿಲ ಭಾರತ ಸಮಿತಿಯ ಅಧ್ಯಕ್ಷರಾಗಿ ಮತ್ತು ೧೯೭೨ ರಿಂದ ೧೯೮೫ ರವರೆಗೆ ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಲಕ್ಷ್ಮಿ ಮೆನನ್ ಅವರು ನೆಹರೂ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದಾಗ ತಿರುವನಂತಪುರದಲ್ಲಿ ತುಂಬ ಈಕ್ವಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರದ ಸ್ಥಾಪನೆಯನ್ನು ಒಳಗೊಂಡಿರುವ ಅಧಿಕಾರಶಾಹಿ ಕಾರ್ಯವಿಧಾನವನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ರಂಥಸೂಚಿ ಉಲ್ಲೇಖಗಳು ಬಾಹ್ಯ ಕೊಂಡಿಗಳು ಮ್ಯಾಡಿಸ್ ರಾಂಬ್ಲಿಂಗ್ಸ್ (೨೦೧೬) ಬ್ಲಾಗ್‌ನಿಂದ ಜೀವನಚರಿತ್ರೆಯ ವಿವರಗಳು ದೊಡ್ಡ ಸೊಸೆಯ ವೈಯಕ್ತಿಕ ನೆನಪುಗಳು (೨೦೨೧) ವಿಕಿಪೀಡಿಯ ಅನುವಾದ ಶಿಬಿರ ಲೇಖನ ಮಹಿಳಾ ರಾಜಕಾರಣಿಗಳು
152220
https://kn.wikipedia.org/wiki/%E0%B2%B0%E0%B3%8B%E0%B2%B6%E0%B2%A8%E0%B3%8D%20%E0%B2%95%E0%B3%81%E0%B2%AE%E0%B2%BE%E0%B2%B0%E0%B2%BF
ರೋಶನ್ ಕುಮಾರಿ
ರೋಶನ್ ಕುಮಾರಿ ಫಕೀರ್ ಮೊಹಮ್ಮದ್ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ನಟಿ ಮತ್ತು ನೃತ್ಯ ಸಂಯೋಜಕಿ. ಕಥಕ್‌ನ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರದ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರೆಂದು ಇವರನ್ನು ಪರಿಗಣಿಸಲಾಗಿದೆ. ಅವರು ಜೈಪುರದ ಘರಾನಾವನ್ನು ಅನುಸರಿಸುತ್ತಾರೆ ಮತ್ತು ಕಥಕ್‌ಅನ್ನು ಉತ್ತೇಜಿಸುವ ಅಕಾಡೆಮಿಯಾದ ಮುಂಬೈನ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕರಾಗಿದ್ದಾರೆ. ಅವರು ೧೯೭೫ ರಲ್ಲಿ ಸಂಗೀತ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ೧೯೯೪ ರಲ್ಲಿ ಭಾರತ ಸರ್ಕಾರದಿಂದ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಗೌರವ ಪದ್ಮಶ್ರೀ ಪಡೆದರು. ಜೀವನಚರಿತ್ರೆ ರೋಶನ್ ಕುಮಾರಿ ಅವರು ಕ್ರಿಸ್‌ಮಸ್ ಮುನ್ನಾದಿನದಂದು (ಹುಟ್ಟಿದ ವರ್ಷ ಅನಿಶ್ಚಿತ) ಉತ್ತರ ಭಾರತದ ಹರಿಯಾಣದ (ಹಿಂದಿನ ಪಂಜಾಬ್ ) ಅಂಬಾಲಾದಲ್ಲಿ ಪ್ರಸಿದ್ಧ ತಬಲಾ ವಾದಕ ಚೌಧರಿ ಫಕೀರ್ ಮೊಹಮ್ಮದ್ ಮತ್ತು ಪ್ರಸಿದ್ಧ ಶಾಸ್ತ್ರೀಯ ಮತ್ತು ಹಿನ್ನೆಲೆ ಗಾಯಕಿ ಜೊಹ್ರಾಬಾಯಿ ಅಂಬಲೇವಾಲಿ ಅವರಿಗೆ ಜನಿಸಿದರು. ಅವರು ಕೆಎಸ್ ಮೋರೆ ಅವರಿಂದ ಕಥಕ್‌ನ ಮೂಲಭೂತ ಅಂಶಗಳನ್ನು ಕಲಿತರು ಮತ್ತು ಮುಂಬೈನ ಕಥಕ್‌ನ ಮಹಾರಾಜ್ ಬಿಂದದ್ದೀನ್ ಸ್ಕೂಲ್‌ನಲ್ಲಿ ಸುಂದರ್ ಪ್ರಸಾದ್ ಜಿ ಅಡಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು ಮತ್ತು ಜೈಪುರ ಘರಾನಾವನ್ನು ಕಲಿತರು. ನಂತರ ಅವರು ಗುಲಾಮ್ ಹುಸೇನ್ ಖಾನ್ ಮತ್ತು ಹನುಮಾನ್ ಪ್ರಸಾದ್ ಅವರ ಬಳಿ ತರಬೇತಿ ಪಡೆದರು ಮತ್ತು ಗೋವಿಂದರಾಜ್ ಪಿಳ್ಳೈ ಮತ್ತು ಮಹಾಲಿಂಗಂ ಪಿಲೈ ಅವರಿಂದ ಭರತ ನಾಟ್ಯವನ್ನು ಕಲಿತರು. ರೋಷನ್ ಕುಮಾರಿ ಅವರು ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನ ಸೇರಿದಂತೆ ಭಾರತದ ಅನೇಕ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ನಿಕಿತಾ ಕ್ರುಶ್ಚೇವ್, ಮಿಲ್ಟನ್ ,ಒಬೋಟೆ, ಜೋರ್ಡಾನ್ ಹುಸೇನ್ ಮತ್ತು ನೇಪಾಳದ ರಾಜರಂತಹ ವ್ಯಕ್ತಿಗಳ ಮುಂದೆ ಪ್ರದರ್ಶನ ನೀಡಿದ್ದಾರೆ. ೧೯೭೧ ರಲ್ಲಿ, ಅವರು ಮುಂಬೈನ ಬಾಂದ್ರಾದಲ್ಲಿ ನೃತ್ಯ ಕಲಾ ಕೇಂದ್ರವನ್ನು ಸ್ಥಾಪಿಸಿದರು. ಅಲ್ಲಿ ಅವರು ಹಲವಾರು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಮುಕ್ತಾ ಜೋಷಿ, ಅದಿತಿ ಭಾಗವತ್, ನಂದಿತಾ ಪುರಿ, ನಿಗಾರ್ ಬಾನೋ, ಶೆಲಿನಾ ವಿರಾನಿ, ಸೆಹಜ್‌ಪ್ರೀತ್ ಸಿಂಗ್, ಹಿಮಾನಿ, ಸಂಗೀತಾ, ಅನೋನ್ನಾ ಗುಹಾ ಮತ್ತು ಶೈಲ್ಲಾ ಅರೋರಾ ಅವರ ಕೆಲವು ಗಮನಾರ್ಹ ವಿದ್ಯಾರ್ಥಿಗಳು. ಅವಿವಾಹಿತರಾಗಿರುವ ರೋಷನ್ ಕುಮಾರಿ ಜಿ ಮುಂಬೈನಲ್ಲಿ ನೆಲೆಸಿದ್ದಾರೆ. ಚಲನಚಿತ್ರ ವೃತ್ತಿಜೀವನ ೧೯೫೩ ರಲ್ಲಿ, ಬಿಮಲ್ ರಾಯ್ ತಮ್ಮ ಪರಿಣೀತಾ ಚಿತ್ರದಲ್ಲಿ ಕಥಕ್ ಸಂಗೀತವನ್ನು ಪ್ರದರ್ಶಿಸಲು ಕುಮಾರಿ ಅವರನ್ನು ಆಹ್ವಾನಿಸಿದರು. ಮುಂದಿನ ವರ್ಷ, ಅವರು ವಾರಿಸ್ ಆಫ್ ನಿತಿನ್ ಬೋಸ್ ಮತ್ತು ಸೊಹ್ರಾಬ್ ಮೋದಿ ನಿರ್ದೇಶನದ ಹಿಂದಿ / ಉರ್ದು ದ್ವಿಭಾಷಾ ಮಿರ್ಜಾ ಗಾಲಿಬ್‌ನಲ್ಲಿ ಪ್ರದರ್ಶನ ನೀಡಿದರು. ಅವರ ಮುಂದಿನ ಪಾತ್ರವು ರಾಜಾ ನವಾಥೆಯವರ ೧೯೫೮ ರ ಚಲನಚಿತ್ರವಾದ ಬಸಂತ್ ಬಹಾರ್ ನಲ್ಲಿ ಆಗಿತ್ತು. ಖ್ಯಾತ ಭಾರತೀಯ ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ ಅವರು ೧೯೫೮ ರ ಚಲನಚಿತ್ರ ಜಲಸಾಘರ್‌ನಲ್ಲಿ ಅವರು ಪ್ರದರ್ಶಿಸಿದ ನೃತ್ಯ ಅನುಕ್ರಮವನ್ನು ಬಳಸಿದರು. ೧೯೭೦ರಲ್ಲಿ, ಭಾರತ ಸರ್ಕಾರದ ಚಲನಚಿತ್ರ ವಿಭಾಗವು ಕಥಕ್‌ನ ಇತಿಹಾಸ ಮತ್ತು ಅಭ್ಯಾಸದ ಕುರಿತು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತು. ಇದು ರೋಶನ್ ಕುಮಾರಿ ಜೊತೆಗೆ ದಮಯಂತಿ ಜೋಶಿ, ಉಮಾ ಶರ್ಮಾ, ಸುದರ್ಶನ ಧೀರ್ ಮತ್ತು ಶಂಭು ಮಹಾರಾಜ್ ಅವರಂತಹ ಗಮನಾರ್ಹ ಕಥಕ್ ಪ್ರತಿಪಾದಕರ ಪ್ರದರ್ಶನಗಳನ್ನು ಒಳಗೊಂಡಿದೆ. ನಂತರ ಅವರು ಹಿಂದಿ ಚಲನಚಿತ್ರಗಳಾದ ಗೋಪಿ, ಲೇಕಿನ್ ... (೧೯೯೦), ಚೈತಾಲಿ (೧೯೭೫) ಮತ್ತು ಸರ್ದಾರಿ ಬೇಗಂ (೧೯೯೬)ಗಳಲ್ಲಿ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದರು. ಪ್ರಶಸ್ತಿಗಳು ಮತ್ತು ಗೌರವಗಳು ೧೯೬೩ ರ ಹನ್ನೆರಡನೇ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಪ್ರಯಾಗ ಸಂಗೀತ ಸಮಿತಿಯಿಂದ ನೃತ್ಯ ಶಿರೋಮಣಿ ಪ್ರಶಸ್ತಿಯನ್ನು ಕುಮಾರಿ ಪಡೆದರು.೧೯೭೬ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು ಒಂದು ವರ್ಷದ ನಂತರ, ಸುರ್ ಸಿಂಗರ್ ಸಂಸದ್ ಅವರಿಗೆ ನೃತ್ಯ ವಿಲಾಸ್ ಗೌರವವನ್ನು ನೀಡಿದರು. ಭಾರತ ಸರ್ಕಾರವು ೧೯೮೪ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು ಮತ್ತು ಬಂಗಾಳ ಸರ್ಕಾರವು ೧೯೮೯ ರಲ್ಲಿ ವಿಶ್ವ ಉಣ್ಣಯ್ಯನ್ ಸಂಸದ್ ಪ್ರಶಸ್ತಿಯನ್ನು ನೀಡಿತು. ಅವರು ೧೯೯೦ ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮಹಾರಾಷ್ಟ್ರ ಗೌರವ ಪುರಸ್ಕಾರ್ ಮತ್ತು ರಲ್ಲಿ ಜೈಪುರದ ಕಥಕ್ ಕೇಂದ್ರದಿಂದ ಮನ್ ಪತ್ರ ಗೌರವವನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ ಆಗಿರುವ ಕುಮಾರಿ ಅವರು ಅಖಿಲ ಭಾರತ ಭುವಲ್ಕ ಪ್ರಶಸ್ತಿ (೨೦೦೫) ಮತ್ತು ಹನುಮಂತ್ ಪ್ರಶಸ್ತಿ (೨೦೦೮) ಗೆ ಭಾಜನರಾಗಿದ್ದಾರೆ. ಚಿತ್ರಕಥೆ ಪರಿಣೀತಾ (೧೯೫೩ - ನಟಿ ವಾರಿಸ್ (೧೯೫೪) - ನಟಿ ಮಿರ್ಜಾ ಗಾಲಿಬ್ (೧೯೫೪) - ನಟಿ ಬಸಂತ್ ಬಹಾರ್ (೧೯೫೬) - ನಟಿ ಜಲಸಾಘರ್ (೧೯೫೮) - ನಟಿ ಗೋಪಿ (೧೯೭೦) - ನೃತ್ಯ ಸಂಯೋಜಕಿ ಲೆಕಿನ್... (೧೯೯೦) - ನೃತ್ಯ ಸಂಯೋಜಕಿ ಚೈತಾಲಿ (೧೯೭೫) - ನೃತ್ಯ ಸಂಯೋಜಕಿ ಸರ್ದಾರಿ ಬೇಗಂ (೧೯೯೬) - ನೃತ್ಯ ಸಂಯೋಜಕಿ ಸಹ ನೋಡಿ ಅಂಬಲೇವಾಲಿ (೧೯೫೩ ಚಲನಚಿತ್ರ) ಬಹಾರ್ (ಚಲನಚಿತ್ರ) ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152221
https://kn.wikipedia.org/wiki/%E0%B2%B5%E0%B3%88%E0%B2%B2%E0%B3%86%E0%B2%9F%E0%B3%8D%20%E0%B2%86%E0%B2%B3%E0%B3%8D%E0%B2%B5%E0%B2%BE
ವೈಲೆಟ್ ಆಳ್ವಾ
ವೈಲೆಟ್ ಹರಿ ಆಳ್ವಾ (೨೪ ಏಪ್ರಿಲ್ ೧೯೦೮ - ೨೦ ನವೆಂಬರ್ ೧೯೬೯) ಒಬ್ಬ ಭಾರತೀಯ ವಕೀಲೆ, ಪತ್ರಕರ್ತೆ ಮತ್ತು ರಾಜಕಾರಣಿ. ಇವರು ರಾಜ್ಯಸಭೆಯ ಉಪ ಅಧ್ಯಕ್ಷರಾಗಿದ್ದರು. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ.ಎನ್.ಸಿ) ಸದಸ್ಯರಾಗಿದ್ದರು. ಭಾರತದಲ್ಲಿ ಹೈಕೋರ್ಟ್‌ಗೆ ಹಾಜರಾದ ಮೊದಲ ಮಹಿಳಾ ವಕೀಲೆ ಮತ್ತು ರಾಜ್ಯಸಭೆಯ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ ಇವರಾಗಿದ್ದರು. ಆರಂಭಿಕ ಜೀವನ ವೈಲೆಟ್ ಹರಿ ಆಳ್ವಾ ಅವರು ೨೪ ಏಪ್ರಿಲ್ ೧೯೦೮ ರಂದು ಅಹಮದಾಬಾದ್‌ನಲ್ಲಿ ಜನಿಸಿದರು. ಅವರು ಒಂಬತ್ತು ಮಕ್ಕಳಲ್ಲಿ ಎಂಟನೆಯವರು. ವೈಲೆಟ್ ಅವರ ತಂದೆ, ರೆವರೆಂಡ್ ಲಕ್ಷ್ಮಣ್ ಹರಿ, ಚರ್ಚ್ ಆಫ್ ಇಂಗ್ಲೆಂಡ್‌ನ ಮೊದಲ ಭಾರತೀಯ ಪಾದ್ರಿಗಳಲ್ಲಿ ಒಬ್ಬರು. ಹದಿನಾರನೇ ವಯಸ್ಸಿನಲ್ಲಿ ತಮ್ಮ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ನಂತರ, ಅವರ ಹಿರಿಯ ಒಡಹುಟ್ಟಿದವರು ಬಾಂಬೆಯ ಕ್ಲೇರ್ ರೋಡ್ ಕಾನ್ವೆಂಟ್‌ನಲ್ಲಿ ಮೆಟ್ರಿಕ್ಯುಲೇಷನ್ ತನಕ ಅವರಿಗೆ ಶಿಕ್ಷಣವನ್ನು ಒದಗಿಸಿ ಕೊಟ್ಟರು. ಅವರು ಬಾಂಬೆಯ ಸೇಂಟ್ ಕ್ಸೇವಿಯರ್ ಕಾಲೇಜು ಮತ್ತು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಸ್ವಲ್ಪ ಸಮಯದವರೆಗೆ ಅವರು ಬಾಂಬೆಯ ಭಾರತೀಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ವೃತ್ತಿ ೧೯೪೪ ರಲ್ಲಿ ಅವರು ಪೂರ್ಣ ಹೈಕೋರ್ಟ್ ಪೀಠದ ಮುಂದೆ ಒಂದು ಪ್ರಕರಣವನ್ನು ವಾದಿಸಿದ ಭಾರತದ ಮೊದಲ ಮಹಿಳಾ ವಕೀಲರಾಗಿದ್ದರು. ೧೯೪೪ ರಲ್ಲಿ ಆಳ್ವಾ ಮಹಿಳಾ ನಿಯತಕಾಲಿಕವನ್ನು ಸಹ ಪ್ರಾರಂಭಿಸಿದರು.ಬೇಗಂ' ನಂತಹ ಮರುನಾಮಕರಣ ಭಾರತೀಯ ಮಹಿಳೆಯರಾದ ಆಳ್ವಾ ಅವರು ಹೊಂದಿದ್ದರು . ೧೯೪೬ ರಿಂದ ೧೯೪೭ ರವರೆಗೆ ಅವರು ಬಾಂಬೆ ಮುನ್ಸಿಪಲ್ ಕಾರ್ಪೊರೇಶನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೯೪೭ ರಲ್ಲಿ ಆಳ್ವಾ ಮುಂಬೈನಲ್ಲಿ ಗೌರವ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದರು. ೧೯೪೮ ರಿಂದ ೧೯೫೪ ರವರೆಗೆ ಅವರು ಬಾಲಾಪರಾಧಿ ನ್ಯಾಯಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಯಂಗ್ ವುಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್, ಬಿಸಿನೆಸ್ ಅಂಡ್ ಪ್ರೊಫೆಷನಲ್ ವುಮೆನ್ಸ್ ಅಸೋಸಿಯೇಷನ್ ಮತ್ತು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ವುಮೆನ್ ಲಾಯರ್ಸ್ನಂತಹ ಹಲವಾರು ಸಾಮಾಜಿಕ ಸಂಸ್ಥೆಗಳೊಂದಿಗೆ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ೧೯೫೨ ರಲ್ಲಿ ಅಖಿಲ ಭಾರತ ಪತ್ರಿಕೆ ಪ್ರಕಟಿಸಿದರು . ೧೯೫೨ ರಲ್ಲಿ ಆಳ್ವಾ ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಚುನಾಯಿತರಾದರು. ಅಲ್ಲಿ ಅವರು ಕುಟುಂಬ ಯೋಜನೆ, ಸಂಶೋಧನೆ ಮತ್ತು ರಕ್ಷಣಾ ಕಾರ್ಯತಂತ್ರಕ್ಕೆ ಒಳಪಟ್ಟ ಪ್ರಾಣಿಗಳ ಹಕ್ಕುಗಳು, ವಿಶೇಷವಾಗಿ ನೌಕಾ ವಲಯಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದರು. ವಿದೇಶಿ ಬಂಡವಾಳ ಮತ್ತು ಬೆಂಬಲಿತ ಭಾಷಾವಾರು ರಾಜ್ಯಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿ ಭಾರತೀಯ ಸಾರ್ವತ್ರಿಕ ಚುನಾವಣೆಯ ನಂತರ ಅವರು ಗೃಹ ವ್ಯವಹಾರಗಳ ರಾಜ್ಯ ಉಪ ಮಂತ್ರಿಯಾದರು. ೧೯೬೨ ರಲ್ಲಿ ಆಳ್ವಾ ಅವರು ರಾಜ್ಯಸಭೆಯ ಉಪಾಧ್ಯಕ್ಷರಾದರು ಆ ಮೂಲಕ ರಾಜ್ಯಸಭೆಯ ಇತಿಹಾಸದಲ್ಲಿ ಅಧ್ಯಕ್ಷರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ರಾಜ್ಯಸಭೆಯಲ್ಲಿ ಸತತ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ಮೊದಲ ಅವಧಿಯು ೧೯ ಏಪ್ರಿಲ್ ೧೯೬೨ರಂದು ಪ್ರಾರಂಭವಾಯಿತು. ಅದು ೨ ಏಪ್ರಿಲ್ ೧೯೬೬ ರವರೆಗೆ ಮುಂದುವರೆಯಿತು. ಅವರ ಎರಡನೇ ಅವಧಿಯು ೭ ಏಪ್ರಿಲ್ ೧೯೬೬ ರಂದು ಡೆಪ್ಯೂಟಿ ಚೇರ್ಮನ್ ಹುದ್ದೆಗೆ ಆಯ್ಕೆಯಾಗುವುದರೊಂದಿಗೆ ಪ್ರಾರಂಭವಾಯಿತು ಮತ್ತು ಅವರು ೧೬ ನವೆಂಬರ್ ೧೯೬೯ ರವರೆಗೆ ಆ ಸ್ಥಾನವನ್ನು ಅಲಂಕರಿಸಿದ್ದರು. ೧೯೦೬೯ ರಲ್ಲಿ ಇಂದಿರಾ ಗಾಂಧಿಯವರು ಭಾರತದ ಉಪರಾಷ್ಟ್ರಪತಿಯಾಗಿ ಅವರನ್ನು ಬೆಂಬಲಿಸಲು ನಿರಾಕರಿಸಿದ ನಂತರ ಆಳ್ವಾ ಅವರ ಹುದ್ದೆಗೆ ರಾಜೀನಾಮೆ ನೀಡಿದರು. ವೈಯಕ್ತಿಕ ಜೀವನ ೧೯೩೭ ರಲ್ಲಿ ವೈಲೆಟ್ ಹರಿ ಆಳ್ವಾ ಅವರು ರಾಜಕಾರಣಿ, ವಕೀಲ, ಪತ್ರಕರ್ತ ಮತ್ತು ನಂತರ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಂಸದ ಜೋಕಿಮ್ ಆಳ್ವಾ ಅವರನ್ನು ಆಳ್ವಾ ಅವರು ವಿವಾಹವಾದರು. ೧೯೪೩ ರಲ್ಲಿ ವೈಲೆಟ್ ಆಳ್ವಾ ಅವರನ್ನು ಬ್ರಿಟಿಷ್ ಭಾರತೀಯ ಅಧಿಕಾರಿಗಳು ಬಂಧಿಸಿದರು. ಅವರು ತಮ್ಮ ಐದು ತಿಂಗಳ ಮಗು ಚಿತ್ತರಂಜನ್ನನ್ನು ಆರ್ಥರ್ ರೋಡ್ ಜೈಲಿಗೆ ಕರೆದೊಯ್ದರು ಅಲ್ಲಿ ಅವರನ್ನು ಬಂಧಿಸಲಾಗಿತ್ತು. ಸಾವು ಮತ್ತು ಪರಂಪರೆ ಐದು ದಿನಗಳ ನಂತರ ಅವರು ೭:೪೫ (ಐ.ಎಸ್.ಟಿ ) ಕ್ಕೆ ರಾಜ್ಯಸಭೆಯ ಉಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ೨೦ ನವೆಂಬರ್ ೧೯೬೯ ರಂದು ಅವರು ಮಿದುಳಿನ ರಕ್ತಸ್ರಾವದಿಂದ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಆಳ್ವಾ ಅವರ ನಿಧನದ ನಂತರ ಅವರಿಗೆ ಗೌರವ ಸೂಚಕವಾಗಿ ಸಂಸತ್ತಿನ ಉಭಯ ಸದನಗಳನ್ನು ಸ್ವಲ್ಪ ಸಮಯದವರೆಗೆ ಮುಂದೂಡಲಾಯಿತು. ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು "ಮಹಿಳೆಯರು ಅನುಸರಿಸಲು ಒಂದು ಜಾಡನ್ನು ಬೆಳಗಿದ ರಾಷ್ಟ್ರೀಯ ಉದ್ದೇಶಕ್ಕಾಗಿ ಸ್ನೇಹಪರ ಮತ್ತು ಸಮರ್ಪಿತ ಕಾರ್ಯಕರ್ತೆ" ಎಂದು ಅವರನ್ನು ಬಣ್ಣಿಸಿದರು. ಆಳ್ವಾ ಅವರು ರಾಜ್ಯಸಭೆಯ ಉಪಸಭಾಪತಿಯಾಗಿದ್ದಾಗ ಕಲಾಪಗಳನ್ನು ನಡೆಸುವಾಗ ಅವರು ಸೌಮ್ಯವಾಗಿದ್ದರೂ ಮತ್ತು ದೃಢವಾಗಿರುತ್ತಿದ್ದರು ಎಂದು ಇಂದಿರಾ ಗಾಂಧಿಯವರೇ ಹೇಳಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಆಳ್ವಾ ಭಾಗವಹಿಸಿದ್ದನ್ನು ಸ್ಮರಿಸಿದ ರಾಜ್ಯಸಭೆಯ ಅಧ್ಯಕ್ಷ ಗೋಪಾಲ್ ಸ್ವರೂಪ್ ಪಾಠಕ್ ಅವರು "ಘನತೆ ಮತ್ತು ನಿಷ್ಪಕ್ಷಪಾತದ ಸಂಪ್ರದಾಯವನ್ನು" ತೊರೆದಿದ್ದಾರೆ ಎಂದು ಭಾವಿಸಿದರು. ಆಗ ಭಾರತೀಯ ಜನಸಂಘದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಚಳವಳಿಯ ಸಂದರ್ಭದಲ್ಲಿ ತಮ್ಮ ಐದು ತಿಂಗಳ ಮಗುವನ್ನು ಜೈಲಿಗೆ ಕರೆದೊಯ್ದಿದ್ದರು ಎಂದು ನೆನಪಿಸಿಕೊಂಡರು ಮತ್ತು ಐ.ಎನ್.ಸಿ ಅವರನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲಾ ಎಂದು ಭಾವಿಸಿದರು. ಎರಾ ಸೆಜಿಯನ್, ಎಕೆ ಗೋಪಾಲನ್ ಮತ್ತು ನಿರ್ಮಲ್ ಚಂದ್ರ ಚಟರ್ಜಿಯಂತಹ ರಾಜಕೀಯ ವಲಯದ ನಾಯಕರು ಆಳ್ವಾ ಅವರಿಗೆ ಗೌರವ ಸಲ್ಲಿಸಿದರು ಮತ್ತು ಸರಳತೆಯ ಜೀವನವನ್ನು ನಡೆಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು. ೨೦೦೭ ರಲ್ಲಿ ಇತಿಹಾಸದಲ್ಲಿ ಮೊದಲ ಸಂಸದೀಯ ದಂಪತಿಗಳಾದ ಜೋಕಿಮ್ ಮತ್ತು ವೈಲೆಟ್ ಆಳ್ವಾ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಅನಾವರಣಗೊಳಿಸಲಾಯಿತು. ೨೦೦೮ ರಲ್ಲಿ ವೈಲೆಟ್ ಜನ್ಮ ಶತಮಾನೋತ್ಸವದ ವರ್ಷದಲ್ಲಿ, ಭಾರತ ಸರ್ಕಾರವು ದಂಪತಿಗಳ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು. ಸಹ ನೋಡಿ ವಿಶ್ವದ ಮೊದಲ ಮಹಿಳಾ ವಕೀ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152222
https://kn.wikipedia.org/wiki/%E0%B2%AD%E0%B2%BE%E0%B2%B5%E0%B2%A8%E0%B2%BE%20%E0%B2%9A%E0%B2%BF%E0%B2%96%E0%B2%BE%E0%B2%B2%E0%B2%BF%E0%B2%AF%E0%B2%BE
ಭಾವನಾ ಚಿಖಾಲಿಯಾ
ಭಾವನಾ ಚಿಖಾಲಿಯಾ ( ಗುಜರಾತ್, ೧೪ ಫೆಬ್ರವರಿ ೧೯೫೫-೨೮ ಜೂನ್ ೨೦೧೩) ೨೦೦೩ ರಿಂದ ೨೦೦೪ ರವರೆಗೆ ಭಾರತ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಅವರು ಲೋಕಸಭೆಯ ಸದಸ್ಯರಾಗಿದ್ದರು ಮತ್ತು ಗುಜರಾತ್‌ನ ಜುನಾಗಢ್ ಕ್ಷೇತ್ರದಿಂದ (೧೯೯೧ ರಿಂದ ೨೦೦೪ ರವರೆಗೆ) ಸತತ ನಾಲ್ಕು ಬಾರಿ ಲೋಕಸಭೆಗೆ ಗೆದ್ದ ಗುಜರಾತ್‌ನ ಪ್ರಥಮ ಮಹಿಳೆಯಾಗಿದ್ದರು. ಅವರು ೧೯೯೩ ರಿಂದ ೧೯೯೬ ರವರೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದೀಯ ವಿಭಾಗದ ಕಾರ್ಯಕಾರಿ ಕಾರ್ಯದರ್ಶಿ ಮತ್ತು ೧೯೯೮ರಲ್ಲಿ ಪಕ್ಷದ ವಿಪ್ ಮತ್ತು ಪಕ್ಷದ ಉಪಾಧ್ಯಕ್ಷರಾಗಿದ್ದರು. ಅವರು ೧೯೯೯-೨೦೦೨ ರ ಅವಧಿಯಲ್ಲಿ ರೈಲ್ವೆ ಕನ್ವೆನ್ಷನ್ ಸಮಿತಿಯ ಅಧ್ಯಕ್ಷರಾಗಿದ್ದರು. ಆರಂಭಿಕ ಜೀವನ ಭಾವನಾ ಚಿಖಾಲಿಯಾ ಅವರು ಗುಜರಾತ್‌ನ ಜುನಾಗಢ್ ಬಳಿಯ ದೇವಲ್ಕಿ ಎಂಬ ಸಣ್ಣ ಪಟ್ಟಣದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ೧೯೫೫ ರಲ್ಲಿ ಜನಿಸಿದರು. ಅವರ ತಂದೆ ಜಮ್ನಾದಾಸ್ ಪಟೇಲ್ ಅವರು ಕಟ್ಟಡ ನಿರ್ಮಾಣ ವ್ಯವಹಾರದಲ್ಲಿದ್ದರು ಮತ್ತು ಸವಿತಾಬೆನ್ ಪಟೇಲ್ ಅವರು ಧರ್ಮನಿಷ್ಠ ಗೃಹಿಣಿಯಾಗಿದ್ದರು. ಭಾವನಾ ಅವರಿಗೆ ಮೂವರು ಒಡಹುಟ್ಟಿದವರು, ಒಬ್ಬ ಸಹೋದರಿ ಮತ್ತು ಇಬ್ಬರು ಸಹೋದರರು ಇದ್ದಾರೆ. ಸೋದರಿ ಪುಷ್ಷಾ ಪಟೇಲ್ ಅನ್ನನಾಳದ ಕ್ಯಾನ್ಸರ್ ನಿಂದ ನಿಧನರಾದರು. ಸಹೋದರ ಭರತ್ ಪಟೇಲ್ ೧೯೯೬ ರಲ್ಲಿ ಕಾರು ಅಪಘಾತದಲ್ಲಿ ನಿಧನರಾದರು. ಸಹೋದರನ ಮಗ ಡಾ. ವತ್ಸಲ್ ಪಟೇಲ್, ಮಡಿ, ಮಬಿಎ, ಡಿಎಬಿಆರ್, ಯುಎಸ್ಎ, ಯಲ್ಲಿ ಖ್ಯಾತ ವಿಕಿರಣ ಆಂಕೊಲಾಜಿಸ್ಟ್ (ಕ್ಯಾನ್ಸರ್ ಸ್ಪೆಷಾಲಿಟಿ) ಆಗಿದ್ದಾರೆ. ಚಿಖಾಲಿಯಾ ಅವರು ಗುಜರಾತ್‌ನಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಕ ಮತ್ತು ಮೂತ್ರಶಾಸ್ತ್ರಜ್ಞರಾಗಿರುವ ದೇವರಾಜ್ ಚಿಖಾಲಿಯಾ ಅವರನ್ನು ವಿವಾಹವಾದರು. ರಾಜಕೀಯ ವೃತ್ತಿಜೀವನ ಅವರು ವಕೀಲರಾಗಿ (ಬಿಕಾಂ, ಎಲ್‌ಎಲ್‌ಬಿ) ವೃತ್ತಿಯನ್ನು ಪ್ರಾರಂಭಿಸಿದ್ದರು ಮತ್ತು ಅಂದಿನಿಂದ ಸಮಾಜ ಸೇವಕಿಯಾಗಿದ್ದಾರೆ. ಚಿಖಾಲಿಯಾ ಅವರು ೧೯೯೧ ರಲ್ಲಿ ೧೦ ನೇ ಲೋಕಸಭೆಯ ಜುನಾಗಢ್ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ೧೯೯೩ರಲ್ಲಿ ಅವರು ಬಿಜೆಪಿ ಸಂಸದೀಯ ವಿಭಾಗದ ಕಾರ್ಯಕಾರಿ ಕಾರ್ಯದರ್ಶಿಯಾದರು. ಅವರು ೧೯೯೬ ರಲ್ಲಿ, ೧೧ ನೇ ಲೋಕಸಭೆಯ ಸಂಸತ್ ಸದಸ್ಯರಾಗಿ ಮರು ಆಯ್ಕೆಯಾದರು. ಅವರು ೧೯೯೬ - ೯೭ರಲ್ಲಿ ರೈಲ್ವೆ ಸಚಿವಾಲಯದ ಸರ್ಕಾರಿ ಭರವಸೆಗಳು, ಸಂವಹನ ಮತ್ತು ಸಲಹಾ ಸಮಿತಿಯ ಸಕ್ರಿಯ ಸದಸ್ಯರಾದರು. ೧೯೯೮ ರಲ್ಲಿ ಅವರು ೧೨ ನೇ ಲೋಕಸಭೆಯ ಸಂಸದರಾಗಿ ಮೂರನೇ ಅವಧಿಗೆ ಆಯ್ಕೆಯಾದರು. ಅವರು ೧೯೯೮-೨೦೦೦ರಲ್ಲಿ ರಾಷ್ಟ್ರೀಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿದ್ದರು ಮತ್ತು ೧೯೯೯ - ೨೦೦೨ರಲ್ಲಿ ರೈಲ್ವೆ ಕನ್ವೆನ್ಷನ್ ಸಮಿತಿಯ ಅಧ್ಯಕ್ಷರಾಗಿದ್ದರು. ೧೭ ಏಪ್ರಿಲ್ ೧೯೯೯ ರಂದು, ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸಮ್ಮಿಶ್ರ ಸರ್ಕಾರವು ಲೋಕಸಭೆಯಲ್ಲಿ (ಭಾರತದ ಕೆಳಮನೆ) ವಿಶ್ವಾಸ ಮತವನ್ನು ಗೆಲ್ಲುವಲ್ಲಿ ವಿಫಲವಾಯಿತು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಡಿಎಮ್ ಕೆ) ಸರ್ಕಾರದ ಸಮ್ಮಿಶ್ರ ಪಾಲುದಾರರಲ್ಲಿ ಒಬ್ಬರ ಹಿಂತೆಗೆದುಕೊಳ್ಳುವಿಕೆಯಿಂದಾಗಿ ಒಂದೇ ಒಂದು ಮತವನ್ನು ಕಳೆದುಕೊಂಡಿತು. ಸೋನಿಯಾ ಗಾಂಧಿಯವರು ವಿರೋಧ ಪಕ್ಷದ ನಾಯಕಿಯಾಗಿ ಮತ್ತು ಅತಿದೊಡ್ಡ ವಿರೋಧ ಪಕ್ಷ ( ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ) ಲೋಕಸಭೆಯಲ್ಲಿ ಬಹುಮತವನ್ನು ಪಡೆಯಲು ಸಾಕಷ್ಟು ದೊಡ್ಡ ಪಕ್ಷಗಳ ಒಕ್ಕೂಟವನ್ನು ರಚಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದ ನಂತರ ಕೆಲವೇ ದಿನಗಳಲ್ಲಿ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆಗೆ ಕರೆ ನೀಡಿದರು. ಅಟಲ್ ಬಿಹಾರಿ ವಾಜಪೇಯಿ ಅವರು ೧೯೯೯ ರ ಭಾರತೀಯ ಸಾರ್ವತ್ರಿಕ ಚುನಾವಣೆಯು ಅದೇ ವರ್ಷದ ನಂತರ ನಡೆಯುವವರೆಗೂ ಹಂಗಾಮಿ ಪ್ರಧಾನಿಯಾಗಿದ್ದರು. ೧೯೯೯ ರ ಉಪಚುನಾವಣೆಯಲ್ಲಿ, ೧೯೯೯ ರಲ್ಲಿ ೧೩ ನೇ ಲೋಕಸಭೆಯ ಸತತ ನಾಲ್ಕನೇ ಅವಧಿಗೆ ಚುನಾಯಿತರಾಗುವ ಮೂಲಕ ಚಿಖಾಲಿಯಾ ಅವರು ಸತತವಾಗಿ ನಾಲ್ಕು ಬಾರಿ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾದ ಗುಜರಾತ್‌ನ ಪ್ರಥಮ ಮಹಿಳೆಯಾಗಿದ್ದರು. ಅವರು ೨೦೦೦ ರಲ್ಲಿ ಅಖಿಲ ಭಾರತ ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಅವರು ೨೦೦೦ ರಲ್ಲಿ ನ್ಯಾಷನಲ್ ಕೋ-ಆಪರೇಟಿವ್ ಹೌಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿದ್ದರು. ಅವರು ಐದು ವರ್ಷಗಳ ಕಾಲ ಗುಜರಾತ್ ರಾಜ್ಯ ವಸತಿ ಹಣಕಾಸು ನಿಗಮದ ಅಧ್ಯಕ್ಷರಾಗಿದ್ದರು. ಅವರನ್ನು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರನ್ನಾಗಿ ಮಾಡಲಾಯಿತು ಮತ್ತು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರೊಂದಿಗೆ ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಸಹ ಕಾರ್ಯನಿರ್ವಹಿಸಿದರು. ಅವರು ಜನವರಿ ೨೦೦೩ ರಿಂದ ಮೇ ೨೦೦೪ ರವರೆಗೆ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರವು ಚುನಾವಣೆಯಲ್ಲಿ ಸೋತಾಗ ಈ ಹುದ್ದೆಗಳನ್ನು ಹೊಂದಿದ್ದರು. ಅವರು ೨೦೧೩ ರಲ್ಲಿ ಹೃದಯ ಸ್ತಂಭನದಿಂದ ನಿಧನರಾದರು ಪ್ರಮುಖ ರಾಜಕೀಯ ಸ್ಥಾನಗಳು ೧೯೯೩ - ೧೯೯೬ ಕಾರ್ಯಕಾರಿ ಕಾರ್ಯದರ್ಶಿ, ಬಿಜೆಪಿ (ಸಂಸದೀಯ ವ್ಯವಹಾರಗಳು) ೧೯೯೬ - ೧೯೯೮ ರಾಷ್ಟ್ರೀಯ ಶಿಪ್ಪಿಂಗ್ ಬೋರ್ಡ್ ಸದಸ್ಯ ೧೯೯೬ - ೧೯೯೮ ಉಪಾಧ್ಯಕ್ಷರಾಗಿದ್ದರು, ಗುಜರಾತ್ ಪ್ರದೇಶ ಬಿಜೆಪಿ ಮಹಿಳಾ ಮೋರ್ಚಾ ೧೯೯೬ - ೧೯೯೮ ಉಪಾಧ್ಯಕ್ಷರಾಗಿದ್ದರು, ಅಖಿಲ ಭಾರತ ಬಿಜೆಪಿ ಮಹಿಳಾ ಮೋರ್ಚಾ ೧೯೯೮ - ಲೋಕಸಭೆಯ ಪಕ್ಷ, ಬಿಜೆಪಿ ಸಂಸದೀಯ ಸಚೇತಕ ೧೯೯೮ - ಕಾರ್ಯಕಾರಿ ಸಮಿತಿ ಸದಸ್ಯ, ಬಿಜೆಪಿ ಸಂಸದೀಯ ಪಕ್ಷ ೨೦೦೦ - ಉಪಾಧ್ಯಕ್ಷ, ಅಖಿಲ ಭಾರತ ಬಿಜೆಪಿ ೧೯೯೧ - ೨೦೦೪ ಸಂಸತ್ ಸದಸ್ಯ ೨೦೦೩ - ೨೦೦೪ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು. ಉಲ್ಲೇಖಗಳು ಬಾಹ್ಯ ಕೊಂಡಿಗಳು ಅಧಿಕೃತ ಭಾರತೀಯ ಸಂಸತ್ತಿನ ವೆಬ್‌ಸೈಟ್‌ನಲ್ಲಿ ಶ್ರೀಮತಿ ಭಾವನಾ ಚಿಖಾಲಿಯಾ ಅವರ ಪ್ರವೇಶ ಶ್ರೀಮತಿ ಭಾವನಾ ಚಿಖಾಲಿಯಾ ಅವರು ರೈಲ್ವೆ ಕನ್ವೆನ್ಷನ್ ಸಮಿತಿಯ ಅಧ್ಯಕ್ಷರಾಗಿ ಭಾರತದ ರಾಯಭಾರ ಕಚೇರಿ ಮತ್ತು ಭಾರತ-ಕ್ರೊಯೇಷಿಯಾ ಸಂಬಂಧಗಳು ಫೆಸ್ಟಿವಲ್ ಆಫ್ ಇಂಡಿಯಾ & ಭೂತಾನ್‌ನಲ್ಲಿ ಶ್ರೀಮತಿ ಭಾವನಾ ಚಿಖಾಲಿಯಾ ಶ್ರೀಮತಿ ಭಾವನಾ ಚಿಖಾಲಿಯಾ ಕುರಿತು ಸುದ್ದಿ ಲಿಂಕ್ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152223
https://kn.wikipedia.org/wiki/%E0%B2%B0%E0%B3%8B%E0%B2%B6%E0%B2%A8%E0%B3%8D%20%E0%B2%95%E0%B3%81%E0%B2%AE%E0%B2%BE%E0%B2%B0%E0%B2%BF%20%E0%B2%AB%E0%B2%95%E0%B3%80%E0%B2%B0%E0%B3%8D%20%E0%B2%AE%E0%B2%B9%E0%B2%AE%E0%B3%8D%E0%B2%AE%E0%B2%A6%E0%B3%8D
ರೋಶನ್ ಕುಮಾರಿ ಫಕೀರ್ ಮಹಮ್ಮದ್
ರೋಶನ್ ಕುಮಾರಿ ಫಕೀರ್ ಮೊಹಮ್ಮದ್ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ನಟಿ ಮತ್ತು ನೃತ್ಯ ಸಂಯೋಜಕಿ. ಕಥಕ್‌ನ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರದ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರೆಂದು ಇವರನ್ನು ಪರಿಗಣಿಸಲಾಗಿದೆ. ಅವರು ಜೈಪುರದ ಘರಾನಾವನ್ನು ಅನುಸರಿಸುತ್ತಾರೆ ಮತ್ತು ಕಥಕ್‌ಅನ್ನು ಉತ್ತೇಜಿಸುವ ಅಕಾಡೆಮಿಯಾದ ಮುಂಬೈನ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕರಾಗಿದ್ದಾರೆ. ಅವರು ೧೯೭೫ ರಲ್ಲಿ ಸಂಗೀತ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ೧೯೯೪ ರಲ್ಲಿ ಭಾರತ ಸರ್ಕಾರದಿಂದ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಗೌರವ ಪದ್ಮಶ್ರೀ ಪಡೆದರು. ಜೀವನಚರಿತ್ರೆ ರೋಶನ್ ಕುಮಾರಿ ಅವರು ಕ್ರಿಸ್‌ಮಸ್ ಮುನ್ನಾದಿನದಂದು (ಹುಟ್ಟಿದ ವರ್ಷ ಅನಿಶ್ಚಿತ) ಉತ್ತರ ಭಾರತದ ಹರಿಯಾಣದ (ಹಿಂದಿನ ಪಂಜಾಬ್ ) ಅಂಬಾಲಾದಲ್ಲಿ ಪ್ರಸಿದ್ಧ ತಬಲಾ ವಾದಕ ಚೌಧರಿ ಫಕೀರ್ ಮೊಹಮ್ಮದ್ ಮತ್ತು ಪ್ರಸಿದ್ಧ ಶಾಸ್ತ್ರೀಯ ಮತ್ತು ಹಿನ್ನೆಲೆ ಗಾಯಕಿ ಜೊಹ್ರಾಬಾಯಿ ಅಂಬಲೇವಾಲಿ ಅವರಿಗೆ ಜನಿಸಿದರು. ಅವರು ಕೆಎಸ್ ಮೋರೆ ಅವರಿಂದ ಕಥಕ್‌ನ ಮೂಲಭೂತ ಅಂಶಗಳನ್ನು ಕಲಿತರು ಮತ್ತು ಮುಂಬೈನ ಕಥಕ್‌ನ ಮಹಾರಾಜ್ ಬಿಂದದ್ದೀನ್ ಸ್ಕೂಲ್‌ನಲ್ಲಿ ಸುಂದರ್ ಪ್ರಸಾದ್ ಜಿ ಅಡಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು ಮತ್ತು ಜೈಪುರ ಘರಾನಾವನ್ನು ಕಲಿತರು. ನಂತರ ಅವರು ಗುಲಾಮ್ ಹುಸೇನ್ ಖಾನ್ ಮತ್ತು ಹನುಮಾನ್ ಪ್ರಸಾದ್ ಅವರ ಬಳಿ ತರಬೇತಿ ಪಡೆದರು ಮತ್ತು ಗೋವಿಂದರಾಜ್ ಪಿಳ್ಳೈ ಮತ್ತು ಮಹಾಲಿಂಗಂ ಪಿಲೈ ಅವರಿಂದ ಭರತ ನಾಟ್ಯವನ್ನು ಕಲಿತರು. ರೋಷನ್ ಕುಮಾರಿ ಅವರು ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನ ಸೇರಿದಂತೆ ಭಾರತದ ಅನೇಕ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ನಿಕಿತಾ ಕ್ರುಶ್ಚೇವ್, ಮಿಲ್ಟನ್ ,ಒಬೋಟೆ, ಜೋರ್ಡಾನ್ ಹುಸೇನ್ ಮತ್ತು ನೇಪಾಳದ ರಾಜರಂತಹ ವ್ಯಕ್ತಿಗಳ ಮುಂದೆ ಪ್ರದರ್ಶನ ನೀಡಿದ್ದಾರೆ. ೧೯೭೧ ರಲ್ಲಿ, ಅವರು ಮುಂಬೈನ ಬಾಂದ್ರಾದಲ್ಲಿ ನೃತ್ಯ ಕಲಾ ಕೇಂದ್ರವನ್ನು ಸ್ಥಾಪಿಸಿದರು. ಅಲ್ಲಿ ಅವರು ಹಲವಾರು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಮುಕ್ತಾ ಜೋಷಿ, ಅದಿತಿ ಭಾಗವತ್, ನಂದಿತಾ ಪುರಿ, ನಿಗಾರ್ ಬಾನೋ, ಶೆಲಿನಾ ವಿರಾನಿ, ಸೆಹಜ್‌ಪ್ರೀತ್ ಸಿಂಗ್, ಹಿಮಾನಿ, ಸಂಗೀತಾ, ಅನೋನ್ನಾ ಗುಹಾ ಮತ್ತು ಶೈಲ್ಲಾ ಅರೋರಾ ಅವರ ಕೆಲವು ಗಮನಾರ್ಹ ವಿದ್ಯಾರ್ಥಿಗಳು. ಅವಿವಾಹಿತರಾಗಿರುವ ರೋಷನ್ ಕುಮಾರಿ ಜಿ ಮುಂಬೈನಲ್ಲಿ ನೆಲೆಸಿದ್ದಾರೆ. ಚಲನಚಿತ್ರ ವೃತ್ತಿಜೀವನ ೧೯೫೩ ರಲ್ಲಿ, ಬಿಮಲ್ ರಾಯ್ ತಮ್ಮ ಪರಿಣೀತಾ ಚಿತ್ರದಲ್ಲಿ ಕಥಕ್ ಸಂಗೀತವನ್ನು ಪ್ರದರ್ಶಿಸಲು ಕುಮಾರಿ ಅವರನ್ನು ಆಹ್ವಾನಿಸಿದರು. ಮುಂದಿನ ವರ್ಷ, ಅವರು ವಾರಿಸ್ ಆಫ್ ನಿತಿನ್ ಬೋಸ್ ಮತ್ತು ಸೊಹ್ರಾಬ್ ಮೋದಿ ನಿರ್ದೇಶನದ ಹಿಂದಿ / ಉರ್ದು ದ್ವಿಭಾಷಾ ಮಿರ್ಜಾ ಗಾಲಿಬ್‌ನಲ್ಲಿ ಪ್ರದರ್ಶನ ನೀಡಿದರು. ಅವರ ಮುಂದಿನ ಪಾತ್ರವು ರಾಜಾ ನವಾಥೆಯವರ ೧೯೫೮ ರ ಚಲನಚಿತ್ರವಾದ ಬಸಂತ್ ಬಹಾರ್ ನಲ್ಲಿ ಆಗಿತ್ತು. ಖ್ಯಾತ ಭಾರತೀಯ ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ ಅವರು ೧೯೫೮ ರ ಚಲನಚಿತ್ರ ಜಲಸಾಘರ್‌ನಲ್ಲಿ ಅವರು ಪ್ರದರ್ಶಿಸಿದ ನೃತ್ಯ ಅನುಕ್ರಮವನ್ನು ಬಳಸಿದರು. ೧೯೭೦ರಲ್ಲಿ, ಭಾರತ ಸರ್ಕಾರದ ಚಲನಚಿತ್ರ ವಿಭಾಗವು ಕಥಕ್‌ನ ಇತಿಹಾಸ ಮತ್ತು ಅಭ್ಯಾಸದ ಕುರಿತು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತು. ಇದು ರೋಶನ್ ಕುಮಾರಿ ಜೊತೆಗೆ ದಮಯಂತಿ ಜೋಶಿ, ಉಮಾ ಶರ್ಮಾ, ಸುದರ್ಶನ ಧೀರ್ ಮತ್ತು ಶಂಭು ಮಹಾರಾಜ್ ಅವರಂತಹ ಗಮನಾರ್ಹ ಕಥಕ್ ಪ್ರತಿಪಾದಕರ ಪ್ರದರ್ಶನಗಳನ್ನು ಒಳಗೊಂಡಿದೆ. ನಂತರ ಅವರು ಹಿಂದಿ ಚಲನಚಿತ್ರಗಳಾದ ಗೋಪಿ, ಲೇಕಿನ್ ... (೧೯೯೦), ಚೈತಾಲಿ (೧೯೭೫) ಮತ್ತು ಸರ್ದಾರಿ ಬೇಗಂ (೧೯೯೬)ಗಳಲ್ಲಿ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದರು. ಪ್ರಶಸ್ತಿಗಳು ಮತ್ತು ಗೌರವಗಳು ೧೯೬೩ ರ ಹನ್ನೆರಡನೇ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಪ್ರಯಾಗ ಸಂಗೀತ ಸಮಿತಿಯಿಂದ ನೃತ್ಯ ಶಿರೋಮಣಿ ಪ್ರಶಸ್ತಿಯನ್ನು ಕುಮಾರಿ ಪಡೆದರು.೧೯೭೬ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು ಒಂದು ವರ್ಷದ ನಂತರ, ಸುರ್ ಸಿಂಗರ್ ಸಂಸದ್ ಅವರಿಗೆ ನೃತ್ಯ ವಿಲಾಸ್ ಗೌರವವನ್ನು ನೀಡಿದರು. ಭಾರತ ಸರ್ಕಾರವು ೧೯೮೪ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು ಮತ್ತು ಬಂಗಾಳ ಸರ್ಕಾರವು ೧೯೮೯ ರಲ್ಲಿ ವಿಶ್ವ ಉಣ್ಣಯ್ಯನ್ ಸಂಸದ್ ಪ್ರಶಸ್ತಿಯನ್ನು ನೀಡಿತು. ಅವರು ೧೯೯೦ ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮಹಾರಾಷ್ಟ್ರ ಗೌರವ ಪುರಸ್ಕಾರ್ ಮತ್ತು ರಲ್ಲಿ ಜೈಪುರದ ಕಥಕ್ ಕೇಂದ್ರದಿಂದ ಮನ್ ಪತ್ರ ಗೌರವವನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ ಆಗಿರುವ ಕುಮಾರಿ ಅವರು ಅಖಿಲ ಭಾರತ ಭುವಲ್ಕ ಪ್ರಶಸ್ತಿ (೨೦೦೫) ಮತ್ತು ಹನುಮಂತ್ ಪ್ರಶಸ್ತಿ (೨೦೦೮) ಗೆ ಭಾಜನರಾಗಿದ್ದಾರೆ. ಚಿತ್ರಕಥೆ ಪರಿಣೀತಾ (೧೯೫೩ - ನಟಿ ವಾರಿಸ್ (೧೯೫೪) - ನಟಿ ಮಿರ್ಜಾ ಗಾಲಿಬ್ (೧೯೫೪) - ನಟಿ ಬಸಂತ್ ಬಹಾರ್ (೧೯೫೬) - ನಟಿ ಜಲಸಾಘರ್ (೧೯೫೮) - ನಟಿ ಗೋಪಿ (೧೯೭೦) - ನೃತ್ಯ ಸಂಯೋಜಕಿ ಲೆಕಿನ್... (೧೯೯೦) - ನೃತ್ಯ ಸಂಯೋಜಕಿ ಚೈತಾಲಿ (೧೯೭೫) - ನೃತ್ಯ ಸಂಯೋಜಕಿ ಸರ್ದಾರಿ ಬೇಗಂ (೧೯೯೬) - ನೃತ್ಯ ಸಂಯೋಜಕಿ ಸಹ ನೋಡಿ ಅಂಬಲೇವಾಲಿ (೧೯೫೩ ಚಲನಚಿತ್ರ) ಬಹಾರ್ (ಚಲನಚಿತ್ರ) ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152226
https://kn.wikipedia.org/wiki/%E0%B2%95%E0%B3%81%E0%B2%B8%E0%B3%81%E0%B2%AE%E0%B3%8D%20%E0%B2%AE%E0%B3%86%E0%B2%B9%E0%B2%A6%E0%B3%86%E0%B2%B2%E0%B3%86
ಕುಸುಮ್ ಮೆಹದೆಲೆ
ಕುಸುಮ್ ಮೆಹ‌ದೆಲೆ (ಜನನ ೧೫ ಆಗಸ್ಟ್ ೧೯೪೩) ಭಾರತೀಯ ರಾಜಕಾರಣಿ, ಇವರು ಮಧ್ಯಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಅವರು ಭಾರತೀಯ ಜನತಾ ಪಕ್ಷದ ನಾಯಕಿ ಮತ್ತು ಪನ್ನಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರು ೧೯೮೪ ರಿಂದ ೧೯೯೦ ರವರೆಗೆ ಮೂರು ಬಾರಿ ಭಾರತೀಯ ಜನತಾ ಮಹಿಳಾ ಮೋರ್ಚಾ ಆಗಿದ್ದರು ಮತ್ತು ೧೯೮೪-೮೬ ಮತ್ತು ೧೯೯೫-೯೬ ರಲ್ಲಿ ಎರಡು ಬಾರಿ ಮಧ್ಯಪ್ರದೇಶ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ೨೦೦೫ ರಲ್ಲಿ, ಅವರು ಬಾಬುಲಾಲ್ ಗೌರ್ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕಂದಾಯ ಸಚಿವರಾಗಿ ಸೇರ್ಪಡೆಗೊಂಡರು ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಪುಟದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಉಲ್ಲೇಖಗಳು   ವಿಕಿಪೀಡಿಯ ಅನುವಾದ ಶಿಬಿರ ಲೇಖನ
152228
https://kn.wikipedia.org/wiki/%E0%B2%B8%E0%B3%81%E0%B2%AE%E0%B2%BF%E0%B2%A4%E0%B3%8D%E0%B2%B0%E0%B2%BE%20%E0%B2%AE%E0%B2%B9%E0%B2%BE%E0%B2%9C%E0%B2%A8%E0%B3%8D
ಸುಮಿತ್ರಾ ಮಹಾಜನ್
ಸುಮಿತ್ರಾ ಮಹಾಜನ್ (ಜನನ ೧೨, ೧೯೪೩) ಒಬ್ಬ ಭಾರತೀಯ ರಾಜಕಾರಣಿ. ಅವರು ೨೦೧೪ ರಿಂದ ೨೦೧೯ ರವರೆಗೆ ಭಾರತೀಯ ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಸ್ಪೀಕರ್ ಆಗಿದ್ದರು. ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು. ಅವರು ೧೯೮೯ ರಿಂದ ೨೦೧೯ ರವರೆಗೆ ಮಧ್ಯಪ್ರದೇಶದ ಇಂದೋರ್ ಕ್ಷೇತ್ರವನ್ನು ಪ್ರತಿನಿಧಿಸಿದರು. ಅವರು ಸಂಸತ್ತಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮಹಿಳಾ ಸದಸ್ಯೆ, ಅವರು ೧೯೯೯ ರಿಂದ ೨೦೦೪ ರವರೆಗೆ ಕೇಂದ್ರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಮಾನವ ಸಂಪನ್ಮೂಲ ಅಭಿವೃದ್ಧಿ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಗಳನ್ನು ಹೊಂದಿದ್ದಾರೆ. ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸ್ಥಾಯಿ ಸಮಿತಿಯ (೦೯ ಮತ್ತು ಗ್ರಾಮೀಣಾಭಿವೃದ್ಧಿ ಸ್ಥಾಯಿ ಸಮಿತಿಯ (೨೦೦೯-೨೦೦೪-೨೦೧೪) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರು ೧೬ ನೇ ಲೋಕಸಭೆಯಲ್ಲಿ ಸಂಸತ್ತಿನ ಮಹಿಳಾ ಸದಸ್ಯರಲ್ಲಿ ಹಿರಿಯರಾಗಿದ್ದರು. ಮೀರಾ ಕುಮಾರ್ ನಂತರ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಎರಡನೇ ಮಹಿಳೆ ಇವರು. ಇವರಿಗೆ ೨೦೨೧ ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು ಆರಂಭಿಕ ಜೀವನ ಮತ್ತು ಶಿಕ್ಷಣ ಸುಮಿತ್ರಾ ಮಹಾಜನ್ ಅವರು ಚಿತ್ಪಾವನ್ ಬ್ರಾಹ್ಮಣ ಮರಾಠ ಕುಟುಂಬದಲ್ಲಿ, ಉಷಾ ಮತ್ತು ಪುರುಷೋತ್ತಮ ಸಾಠೆ ಅವರಿಗೆ, ಮಹಾರಾಷ್ಟ್ರದ ಚಿಪ್ಲುನ್‌ನಲ್ಲಿ ಜನಿಸಿದರು. ಇಂದೋರ್‌ನ ಜಯಂತ್ ಮಹಾಜನ್ ಅವರನ್ನು ಮದುವೆಯಾದ ನಂತರ ಅವರು ಇಂದೋರ್ ವಿಶ್ವವಿದ್ಯಾಲಯದಿಂದ (ಈಗ ದೇವಿ ಅಹಲ್ಯಾ ವಿಶ್ವವಿದ್ಯಾಲಯ) ಎಂ‌ಎ ಮತ್ತು ಎಲ್‌ಎಲ್‌ಬಿ ಪಡೆದರು. ಸುಮಿತ್ರಾ ಮಹಾಜನ್ ಅವರ ಹವ್ಯಾಸಗಳೆಂದರೆ ಓದು, ಸಂಗೀತ, ನಾಟಕ ಮತ್ತು ಸಿನಿಮಾ ಜೊತೆಗೆ ಹಾಡುವ ಉತ್ಸಾಹ. ಅವರು ೧೮ ನೇ ಶತಮಾನದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರನ್ನು ತಮ್ಮ ಜೀವನದುದ್ದಕ್ಕೂ ಸ್ಪೂರ್ತಿದಾಯಕ ವ್ಯಕ್ತಿ ಎಂದು ಒಪ್ಪಿಕೊಂಡಿದ್ದಾರೆ ಮತ್ತು ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ ಪಯಣ 'ಮಾತೋಶ್ರೀ' ಕುರಿತು ಪುಸ್ತಕವನ್ನು ಬರೆದಿದ್ದಾರೆ. ಇದನ್ನು೨೦೧೭ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. ರಾಜಕೀಯ ವೃತ್ತಿಜೀವನ ಸುಮಿತ್ರಾ ಮಹಾಜನ್ ಅವರು ೧೯೮೨ ರಲ್ಲಿ ಇಂದೋರ್ ಮುನ್ಸಿಪಲ್ ಕಾರ್ಪೊರೇಟರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು ೧೯೮೪ ರಲ್ಲಿ ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ನ ಉಪ ಮೇಯರ್ ಆಗಿ ಆಯ್ಕೆಯಾದರು. ಅವರು ೧೯೮೯ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ಚಂದ್ರ ಸೇಥಿ ವಿರುದ್ಧ ಗೆದ್ದರು. ಅವರು ತಮ್ಮ ಕ್ಷೇತ್ರದ ಜನರಲ್ಲಿ ಸೈ ಎಂದು ಜನಪ್ರಿಯರಾಗಿದ್ದಾರೆ. ಲೋಕಸಭೆಯ ಸ್ಪೀಕರ್ ೬ ಜೂನ್ ೨೦೧೪ ರಂದು, ಮಹಾಜನ್ ಅವರು ೧೬ ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಲೋಕಸಭೆಯಲ್ಲಿ 'ಪ್ಯಾನಲ್ ಆಫ್ ಚೇರ್ಮನ್' ಸದಸ್ಯೆಯಾಗಿ ಕೆಲಸ ಮಾಡಿದ್ದರು. ಸದನದಲ್ಲಿ ಅಶಿಸ್ತಿನ ಕಾರಣಕ್ಕಾಗಿ ೨೫ ಕಾಂಗ್ರೆಸ್ ಸಂಸದರನ್ನು ಐದು ದಿನಗಳ ಕಾಲ (ಆಗಸ್ಟ್ ೨೦೧೫) ಸದನದಿಂದ ಅಮಾನತುಗೊಳಿಸುವ ಕ್ರಮವನ್ನು ಅವರು ತೆಗೆದುಕೊಂಡರು. ವಿವಾದ ಇಂದೋರ್ ಮೂಲದ ಮಹಾರಾಷ್ಟ್ರ ಬ್ರಾಹ್ಮಣ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಧಾದ್ವಾಯಿವಾಲೆ ಅವರು ೧೯೯೭ ಮತ್ತು ೨೦೦೩ ರ ನಡುವೆ ಬ್ಯಾಂಕ್‌ನಲ್ಲಿ ನಡೆದ ಹಗರಣಗಳಲ್ಲಿ ಸುಮಿತ್ರಾ ಮಹಾಜನ್ ಮತ್ತು ಅವರ ಮಗ ಮಿಲಿಂದ್ ಮಹಾಜನ್ ಅವರ ಪಾತ್ರಗಳು ನಿರ್ಣಾಯಕವಾಗಿವೆ ಎಂದು ಆರೋಪಿಸಿದರು. ಈ ಅವಧಿಯಲ್ಲಿ ಸುಮಿತ್ರಾ ಮಹಾಜನ್ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಆಪಾದಿತ ಹಗರಣ ನಡೆದಾಗ ಮಿಲಿಂದ್ ಮಹಾಜನ್ ಬ್ಯಾಂಕಿನ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ೨೦೦೫ ರಲ್ಲಿ, ಮಿಲಿಂದ್ ಮಹಾಜನ್ ಸೇರಿದಂತೆ ೧೬ ಜನರ ವಿರುದ್ಧ ಇಂದೋರ್‌ನ ಸೆಂಟ್ರಲ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಹಗರಣದ ಎಫ್‌ಐಆರ್ ದಾಖಲಾಗಿತ್ತು. ಆದರೆ ತನಿಖೆಯ ನಂತರ ಅದನ್ನು ತೆಗೆದುಹಾಕಲಾಯಿತು. "ಸುಮಿತ್ರಾ ಮಹಾಜನ್ ಅವರ ಖಾಸಗಿ ಕಾರ್ಯದರ್ಶಿಯ ಪತಿ ಸೇರಿದಂತೆ ಹಲವು ನಿರ್ದೇಶಕರು ಸಾಲ ಪಡೆದಿದ್ದಾರೆ. ಆದರೆ ಹಣ ನೀಡಿಲ್ಲ" ಎಂದು ಆರೋಪಿಸಲಾಗಿತ್ತು. ಉಲ್ಲೇಖಗಳು |- |- ಬಾಹ್ಯ ಕೊಂಡಿಗಳು ಭಾರತದ ಸಂಸತ್ತಿನ ವೆಬ್‌ಸೈಟ್‌ನಲ್ಲಿ ಅಧಿಕೃತ ಜೀವನಚರಿತ್ರೆಯ ರೇಖಾಚಿತ್ರ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152229
https://kn.wikipedia.org/wiki/%E0%B2%97%E0%B2%BF%E0%B2%B0%E0%B2%BF%E0%B2%9C%E0%B2%BE%20%E0%B2%B5%E0%B3%8D%E0%B2%AF%E0%B2%BE%E0%B2%B8%E0%B3%8D
ಗಿರಿಜಾ ವ್ಯಾಸ್
ಗಿರಿಜಾ ವ್ಯಾಸ್ (ಜನನ ೮ ಜುಲೈ ೧೯೪೬) ಒಬ್ಬ ಭಾರತೀಯ ರಾಜಕಾರಣಿ, ಕವಯಿತ್ರಿ ಮತ್ತು ಲೇಖಕಿ. ಇವರು ೧೫ ನೇ ಲೋಕಸಭೆಯ ಸದಸ್ಯರಾಗಿದ್ದರು. ಇವರು ಭಾರತ ಸಂಸತ್ತಿನ ಕೆಳಮನೆ, ಛೀತ್ತೋರಘಡಾದ ಭಾರತೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾಗಿದ್ದರು. ವೈಯಕ್ತಿಕ ಜೀವನ ಗಿರಿಜಾ ವ್ಯಾಸ್ ಅವರು ೮ ಜುಲೈ ೧೯೬೧ ರಂದು ಕೃಷ್ಣ ಶರ್ಮಾ ಮತ್ತು ಜಮುನಾ ದೇವಿ ವ್ಯಾಸ್ ಅವರಿಗೆ ಜನಿಸಿದರು. ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ನಂತರ, ಅವರು ಉದಯಪುರದ ಮೋಹನ್‌ಲಾಲ್ ಸುಖಡಿಯಾ ವಿಶ್ವವಿದ್ಯಾಲಯ ಮತ್ತು ಡೆಲವೇರ್ ವಿಶ್ವವಿದ್ಯಾಲಯದಲ್ಲಿ ಕಲಿಸಿದರು. ಅವರು ಎಂಟು ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಮೂರು ಕವನಗಳನ್ನು ಒಳಗೊಂಡಿವೆ. ಎಹ್ಸಾಸ್ ಕೆ ಪರ್ ಉರ್ದು ಕವಿತೆಗಳನ್ನು ಹೊಂದಿದೆ, ಸೀಪ್, ಸಮುಂದರ್ ಔರ್ ಮೋತಿ ಹಿಂದಿ ಮತ್ತು ಉರ್ದು ಕವನಗಳನ್ನು ಹೊಂದಿದೆ ಮತ್ತು ನಾಸ್ಟಾಲ್ಜಿಯಾ ಇಂಗ್ಲಿಷ್ ಪದ್ಯಗಳಿಂದ ಸಮೃದ್ಧವಾಗಿದೆ. ರಾಜಕೀಯ ವೃತ್ತಿಜೀವನ ೧೯೮೫ ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ, ಅವರು ರಾಜಸ್ಥಾನದ ಉದಯಪುರದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ೧೯೯೦ ರವರೆಗೆ ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು ೧೯೯೧ ರಲ್ಲಿ, ಅವರು ಲೋಕಸಭೆಯಲ್ಲಿ ರಾಜಸ್ಥಾನದ ಉದಯಪುರವನ್ನು ಪ್ರತಿನಿಧಿಸುವ ಭಾರತೀಯ ಸಂಸತ್ತಿಗೆ ಚುನಾಯಿತರಾದರು ಮತ್ತು ನರಸಿಂಹರಾವ್ ಸಚಿವಾಲಯದಲ್ಲಿ ಭಾರತದ ಫೆಡರಲ್ ಸರ್ಕಾರದಲ್ಲಿ ಉಪ ಮಂತ್ರಿಯಾಗಿದ್ದರು . ೧೯೯೩ ರಿಂದ : ಅಧ್ಯಕ್ಷೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್; ೧೯೯೩-೯೬ : ಸದಸ್ಯ, ಸಲಹಾ ಸಮಿತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ; ಸದಸ್ಯ, ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ೧೯೯೬ : ೧೧ನೇ ಲೋಕಸಭೆಗೆ ಮರು ಆಯ್ಕೆ (೨ನೇ ಅವಧಿ) ೧೯೯೬ ರಿಂದ : ಸದಸ್ಯ, ರಾಜ್ ಭಾಷಾ ಸಮಿತಿ; ಸದಸ್ಯೆ, ಮಹಿಳಾ ಸಬಲೀಕರಣ ಸಮಿತಿ; ಸದಸ್ಯ, ಪೆಟ್ರೋಲಿಯಂ ಸ್ಥಾಯಿ ಸಮಿತಿ; , ಗೃಹ ವ್ಯವಹಾರಗಳ ಸಚಿವಾಲಯ ೧೯೯೯ : ೧೩ನೇ ಲೋಕಸಭೆಗೆ ಮರು ಆಯ್ಕೆ (೩ನೇ ಅವಧಿ) ೧೯೯೯-೨೦೦೦ : ಸದಸ್ಯರು, ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ಸಮಿತಿ ೨೦೦೧ ರಿಂದ ೨೦೦೪ ರವರೆಗೆ ಅವರು ರಾಜಸ್ಥಾನ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಪ್ರಸ್ತುತ, ಅವರು ಅಧ್ಯಕ್ಷರು, ಮಾಧ್ಯಮ ವಿಭಾಗ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮತ್ತು ಸದಸ್ಯೆ, ಫೆಬ್ರವರಿ ೨೦೦೫ ರಲ್ಲಿ, ಕಾಂಗ್ರೆಸ್ ಪಕ್ಷವು ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರದ ಪ್ರಾಬಲ್ಯವನ್ನು ಹೊಂದಿತ್ತು. ಅವರು ಒಂದು ಸಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆಯಾದ ಐದನೇ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದರು. ೨೦೦೮ರಲ್ಲಿ ರಾಜಸ್ಥಾನದಲ್ಲಿ ಶಾಸಕಿಯಾಗಿಯೂ ಆಯ್ಕೆಯಾಗಿದ್ದರು. ಅವರು ೨೦೧೩ ರಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆಯ ಸಚಿವರಾಗಿದ್ದರು. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152230
https://kn.wikipedia.org/wiki/%E0%B2%AE%E0%B2%B9%E0%B2%82%20%E0%B2%85%E0%B2%82%E0%B2%97%E0%B2%BE
ಮಹಂ ಅಂಗಾ
ಮಹಂ ಅಂಗಾ (ಮರಣ ೧೫೬೨) ಮೊಘಲ್ ಚಕ್ರವರ್ತಿ ಅಕ್ಬರನ ಸಾಕು ತಾಯಿ ಮತ್ತು ಮುಖ್ಯ ಸ್ತನ್ಯ ದಾದಿ. ಅವಳು ಹದಿಹರೆಯದ ಚಕ್ರವರ್ತಿಯ ರಾಜಕೀಯ ಸಲಹೆಗಾರ್ತಿಯಾಗಿದ್ದಳು ಮತ್ತು ೧೫೬೦ ರಿಂದ ೧೫೬೨ ರವರೆಗೆ ಮೊಘಲ್ ಸಾಮ್ರಾಜ್ಯದ ವಾಸ್ತವಿಕ ರಾಜಪ್ರತಿನಿಧಿಯಾಗಿದ್ದಳು. ಜೀವನಚರಿತ್ರೆ ೧೫೫೬ ರಲ್ಲಿ ಮೊಘಲ್ ಚಕ್ರವರ್ತಿಯಾಗಿ ಹದಿಮೂರನೇ ವಯಸ್ಸಿನಲ್ಲಿ ಅಕ್ಬರ್ ಸಿಂಹಾಸನಾರೋಹಣ ಮಾಡುವ ಮೊದಲು ಮಹಂ ಅಂಗಾ ಅವರ ಮುಖ್ಯ ದಾದಿಯಾಗಿದ್ದಳು. ಅವಳ ಸ್ವಂತ ಮಗ ಅದಮ್ ಖಾನ್, ಅಕ್ಬರನ ಸಾಕು ಸಹೋದರನಾಗಿ, ಬಹುತೇಕ ಸಾಮ್ರಾಜ್ಯಶಾಹಿ ಕುಟುಂಬದಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟನು. ಮಹಾಂ ಅಂಗ, ತನ್ನ ಸ್ವಂತ ಅಧಿಕಾರವನ್ನು ಮತ್ತು ತನ್ನ ಮಗನನ್ನು ಮುನ್ನಡೆಸಲು ಪ್ರಯತ್ನಿಸಿದಳು. ೧೫೬೦ ರಲ್ಲಿ, ಈ ಇಬ್ಬರು ಅಕ್ಬರ್‌ನನ್ನು ತನ್ನ ರಾಜಪ್ರತಿನಿಧಿ ಮತ್ತು ರಕ್ಷಕ ಬೈರಾಮ್ ಖಾನ್ ಇಲ್ಲದೆ ಭಾರತಕ್ಕೆ ಬರುವಂತೆ ಮೋಸದ ಉಪಾಯ ಮಾಡಿದರು ಮತ್ತು ಅಕ್ಬರ್‌ಗೆ ತನ್ನ ಹದಿನೇಳನೇ ವಯಸ್ಸಿನಲ್ಲಿ ಬೈರಾಮ್‌ನ ಅಗತ್ಯವಿಲ್ಲ ಎಂದು ಮನವರಿಕೆ ಮಾಡಿಸಿದರು. ಅಕ್ಬರ್ ತನ್ನ ರಾಜಪ್ರತಿನಿಧಿಯನ್ನು ವಜಾಗೊಳಿಸಿ ಮೆಕ್ಕಾಗೆ ತೀರ್ಥಯಾತ್ರೆಗೆ ಕಳುಹಿಸಿದನು. ತಿಂಗಳುಗಳ ನಂತರ, ಬೈರಾಮ್ ಒಬ್ಬ ಅಫಘಾನ್‌ನಿಂದ ಹತ್ಯೆಗೀಡಾದ, ಮತ್ತು ಹಿಂದಿನ ಅಧಿಕಾರದ ಬಹುಪಾಲು ಮಹಂ ಅಂಗಾಗೆ ಹಸ್ತಾಂತರವಾಯಿತು. ಸಾವು ಮೇ ೧೫೬೨ ರಲ್ಲಿ ಅಕ್ಬರ್‌ನ ನೆಚ್ಚಿನ ಜನರಲ್ ಶಮ್ಸ್-ಉದ್-ದೀನ್ ಅಟಗಾ ಖಾನ್‌ನ ಹತ್ಯೆ ಮಾಡಿದ್ದರಿಂದ ಆದಮ್ ಖಾನ್‌ಗೆ ಹಿಂಸಾತ್ಮಕ ಮರಣದಂಡನೆ ನೀಡಲಾಯಿತು. ಇದು ಅವಳನ್ನು ತೀವ್ರವಾಗಿ ಪ್ರಭಾವಿಸಿತು. ಇದಾದ ಸ್ವಲ್ಪ ಸಮಯದ ನಂತರ ಆಕೆಯೂ ನಿಧನಳಾದಳು. ಅಧಮ್ ಖಾನ್ ಸಮಾಧಿ ಎಂದು ಕರೆಯಲ್ಪಡುವ ಅವಳ ಮತ್ತು ಅವಳ ಮಗನ ಸಮಾಧಿಯನ್ನು ಅಕ್ಬರ್ ನಿರ್ಮಿಸಿದನು ಮತ್ತು ಅದರ ರಚನೆಯಲ್ಲಿರುವ ಚಕ್ರವ್ಯೂಹದ ಕಾರಣದಿಂದ ಜನಪ್ರಿಯವಾಗಿ ಭುಲ್-ಬುಲೈಯನ್ ಎಂದು ಹೆಸರಿಸಲಾಯಿತು. ಇದು ಮೆಹ್ರೌಲಿಯಲ್ಲಿರುವ ಕುತುಬ್ ಮಿನಾರ್‌ನ ಉತ್ತರಕ್ಕೆ ಇದೆ. ಖೈರುಲ್ ಮನಜಿಲ್ ಅವಳು ೧೫೬೧ ಸಿ‌ಇ ನಲ್ಲಿ ಮೊಘಲ್ ವಾಸ್ತುಶಿಲ್ಪದ ರೀತಿಯಲ್ಲಿ ಖೈರುಲ್ ಮನಜಿಲ್ ಎಂಬ ಮಸೀದಿಯನ್ನು ನಿರ್ಮಿಸಿದಳು. ಇದು ನಂತರ ಮದರ್ಸಾವಾಗಿ ಸೇವೆ ಸಲ್ಲಿಸಿತು. ಪುರಾನಾ ಕಿಲಾ, ದೆಹಲಿಯ ಮಥುರಾ ರಸ್ತೆಯಲ್ಲಿ ಆಗ್ನೇಯಕ್ಕೆ ಶೇರ್ ಶಾ ಗೇಟ್‌ಗೆ ಎದುರಾಗಿ ನಿಂತಿದೆ. ಅಕ್ಬರ್ ಬೇಟೆಯಿಂದ ಹಿಂದಿರುಗಿದ ನಂತರ ಮತ್ತು ನಿಜಾಮುದ್ದೀನ್ ದರ್ಗಾಕ್ಕೆ ತೆರಳಿದ ನಂತರ ಅವಳ ಗುಲಾಮನು ಅಕ್ಬರ್‌ನನ್ನು ಕೊಲ್ಲಲು ಪ್ರಯತ್ನಿಸಿದನು. ಆದರೆ ಬಾಣವು ಅವನ ಪರಿವಾರದಲ್ಲಿದ್ದ ಸೈನಿಕನಿಗೆ ತಗುಲಿತು. ಆದರೆ ಅವನು ಗಂಭೀರವಾಗಿಲ್ಲದಿದ್ದರೂ ಗಾಯಗೊಂಡನು. ಜನಪ್ರಿಯ ಸಂಸ್ಕೃತಿಯಲ್ಲಿ ಇಲಾ ಅರುಣ್ ಬಾಲಿವುಡ್ ಚಲನಚಿತ್ರ ಜೋಧಾ ಅಕ್ಬರ್ (೨೦೦೮) ನಲ್ಲಿ ಮಹಾಮ್ ಅಂಗಾ ಪಾತ್ರವನ್ನು ನಿರ್ವಹಿಸಿದ್ದಾರೆ. ಜೀ ಟಿವಿಯ ಕಾಲ್ಪನಿಕ ನಾಟಕ ಜೋಧಾ ಅಕ್ಬರ್‌ನಲ್ಲಿ ಕಾಲ್ಪನಿಕವಾದ ಮಹಾಮ್ ಅಂಗವನ್ನು ಅಶ್ವಿನಿ ಕಲ್ಸೇಕರ್ ಅವರು ಚಿತ್ರಿಸಿದ್ದಾರೆ. ಬಿಗ್ ಮ್ಯಾಜಿಕ್‌ನ ೨೦೧೫ ರ ಸಿಟ್‌ಕಾಮ್, ಹಜೀರ್ ಜವಾಬ್ ಬೀರ್ಬಲ್‌ನಲ್ಲಿ ತಿಯಾ ಗಂಡ್ವಾನಿ ಮಹಾಮ್ ಅಂಗಾ ಪಾತ್ರವನ್ನು ಚಿತ್ರಿಸಿದ್ದಾರೆ. ಜಯ ಭಟ್ಟಾಚಾರ್ಯರು ಸೋನಿ ಟಿವಿಯ ಐತಿಹಾಸಿಕ ನಾಟಕ ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್‌ನಲ್ಲಿ ಮಹಾಮ್ ಅಂಗವನ್ನು ಚಿತ್ರಿಸಿದ್ದಾರೆ. ಉಲ್ಲೇಖಗಳು ಹೆಚ್ಚಿನ ಓದುವಿಕೆ ದೆಹಲಿಯ ಮೊಘಲ್ ಆರ್ಕಿಟೆಕ್ಚರ್ : ಎ ಸ್ಟಡಿ ಆಫ್ ಮಸೀದಿಗಳು ಮತ್ತು ಗೋರಿಗಳು (೧೫೫೬-೧೬೨೭AD), ಪ್ರದ್ಯುಮನ್ ಕೆ. ಶರ್ಮಾ ಅವರಿಂದ, ಸಂದೀಪ್, ೨೦೦೧  . ಅಧ್ಯಾಯ ೪ ಬಿವಿ ಭವನ್ 'ದಿ ಮೊಘಲ್ ಎಂಪೈರ್' (ಬಾಂಬೆ ೧೯೭೪) ದಿ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಇಂಡಿಯಾ v.೪ ಅಬು'ಲ್ ಫಜಲ್ ' ಅಕ್ಬರ್ನಾಮಾ ' ಬದೌನಿ. ವಿಕಿಪೀಡಿಯ ಅನುವಾದ ಶಿಬಿರ ಲೇಖನ
152231
https://kn.wikipedia.org/wiki/%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0%E0%B2%BF%E0%B2%AE%E0%B2%AF%E0%B3%81%E0%B2%82%20%E0%B2%92%E0%B2%82%E0%B2%97%E0%B3%8D%E0%B2%AC%E0%B2%BF%20%E0%B2%A4%E0%B3%8C%E0%B2%B0%E0%B2%A8%E0%B2%BF%E0%B2%B8%E0%B2%BE%E0%B2%AC%E0%B2%BF%20%E0%B2%A6%E0%B3%87%E0%B2%B5%E0%B2%BF
ಕ್ಷೇತ್ರಿಮಯುಂ ಒಂಗ್ಬಿ ತೌರನಿಸಾಬಿ ದೇವಿ
ಕ್ಷೇತ್ರಿಮಯುಮ್ ಒಂಗ್ಬಿ ತೌರಾನಿಸಾಬಿ ದೇವಿ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಲೇಖಕಿ. ಇವರು ಮಣಿಪುರಿಯ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರದಲ್ಲಿ ಪರಿಣತಿ ಹೊಂದಿದ್ದಾರೆ. ೨೦೦೩ ರಲ್ಲಿ ಭಾರತ ಸರ್ಕಾರವು ಇವರಿಗೆ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. ಜೀವನಚರಿತ್ರೆ ಕ್ಷೇತ್ರಿಮಯುಮ್ ಒಂಗ್ಬಿ ತೌರಾನಿಸಾಬಿ ದೇವಿ ಅವರು೩ ನವೆಂಬರ್ ೧೯೪೬ ರಂದು ಭಾರತದ ಮಣಿಪುರ ರಾಜ್ಯದ ಸಿಂಗ್ಜಮೇಯ್ ಸಪಮ್ ಲೈಕೈ ಎಂಬ ಸಣ್ಣ ಕುಗ್ರಾಮದಲ್ಲಿ ಪೋಲೊ ಆಟಗಾರ ಲೀಶಾಂಗ್ಥೆಮ್ ತಂಫಾ ಸಿಂಗ್ ಮತ್ತು ಲೀಶಾಂಗ್ಥೆಮ್ ಒಂಗ್ಬಿ ಇಬೆತೊಂಬಿಮಾಚಾ ದೇವಿ ಅವರ ಮೂರನೇ ಮಗಳಾಗಿ ಜನಿಸಿದರು. ಅವರು ಯಾವುದೇ ಔಪಚಾರಿಕ ತರಬೇತಿಯನ್ನು ಪಡೆಯುವ ಮೊದಲೇ ತಮ್ಮ ೬ ನೇ ವಯಸ್ಸಿನಲ್ಲಿ ವೇದಿಕೆಯ ಪ್ರದರ್ಶನಗಳನ್ನು ಪ್ರಾರಂಭಿಸಿದರು. ನಂತರ, ಅವರು ೧೦ ನೇ ವಯಸ್ಸಿನಿಂದ ಗೋವಿಂದಜಿ ನರ್ತನಾಲಯದಲ್ಲಿ (ಮಣಿಪುರದ ಸರ್ಕಾರಿ ನೃತ್ಯ ಕಾಲೇಜು) ರಾಸ್ ಲೀಲಾದಲ್ಲಿ ತರಬೇತಿಗೊಂಡರು. ಇವರು ವಿಶಾರದ್ ಮತ್ತು ಆಚಾರ್ಯಗಳಲ್ಲಿ ಉತ್ತೀರ್ಣರಾದರು. ಮೈಷ್ಣಮ್ ಅಮುಬಿ ಸಿಂಗ್, ಅಮುದೋನ್ ಶರ್ಮಾ, ಎಚ್. ತೊಂಬಾ, ಎ. ತೋಂಬಾ ಮುಂತಾದ ಗುರುಗಳ ಬಳಿ ತರಬೇತಿ ಪಡೆದರು. ಸಿಂಗ್, ಲೌರೆಂಬಮ್ ಟೊಂಬಿ ದೇವಿ ಮತ್ತು ಆರ್‌ಕೆ ತೋಮಲ್ಸಾನಾ ವೃತ್ತಿಪರವಾಗಿ ಪ್ರದರ್ಶನ ನೀಡಲು ಪ್ರಾರಂಭಿಸುವ ಮೊದಲು, ಅವರು ಭಾರತ ಮತ್ತು ಕೆನಡಾ, ಪಶ್ಚಿಮ ಜರ್ಮನಿ, ಲಂಡನ್, ದುಬೈ ಮತ್ತು ಯುಎಸ್ಎಯಂತಹ ಇತರ ದೇಶಗಳಲ್ಲಿ ಅನೇಕ ಕಲಾ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ತೌರಾನಿಸಾಬಿ ದೇವಿ ಜವಾಹರಲಾಲ್ ನೆಹರು ಮಣಿಪುರ ಡ್ಯಾನ್ಸ್ ಅಕಾಡೆಮಿಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅದರ ಬ್ಯಾಲೆ ನಿರ್ಮಾಣಗಳಲ್ಲಿ ಒಂದಾದ ರಾಧಾ ಸತಿಯನ್ನು ನಿರ್ದೇಶಿಸಿದ್ದಾರೆ. ಅವರು ೨೦೦೬ ರಲ್ಲಿ ನಿವೃತ್ತರಾಗುವವರೆಗೆ ಹಲವಾರು ವರ್ಷಗಳ ಕಾಲ ಅಕಾಡೆಮಿಯಲ್ಲಿ ಗುರು ರಾಸ್ಧಾರಿ, ಗುರುಹಾನ್ ಮತ್ತು ಪ್ರಧಾನ ಗುರುಗಳಾಗಿ ಕಲಿಸಿದರು. ಮಣಿಪುರಿ ನೃತ್ಯವನ್ನು ಆಧರಿಸಿದ ದಿವಾ ರಾಸ್ (೨ ಸಂಪುಟಗಳು-೧೯೯೩) ಮತ್ತು ರಾಸ್ ಮಖಾ ಅಮ್ಸಂಗ್ ನುಂಗಿ ಮಸಾಹ್ಕ್ (೨೦೦೬) ಎಂಬ ಎರಡು ಪುಸ್ತಕಗಳಿಗೆ ಅವರು ಮನ್ನಣೆ ನೀಡಿದ್ದಾರೆ ಮತ್ತು ಎಚ್‌ಎಂ‌ವಿ ಗಾಗಿ ಆರು ಆಲ್ಬಂಗಳನ್ನು ರೆಕಾರ್ಡ್ ಮಾಡಿದ್ದಾರೆ. ದೇವಿಯು ಮಹಾರಾಜ ಒಕೇಂದ್ರಜಿತ್ ಸಿಂಗ್ ಅವರಿಂದ ರಾಯಲ್ ರೋಬ್ ಮತ್ತು ಮಣಿಪುರ ಸರ್ಕಾರದಿಂದ ಚಿನ್ನದ ಪದಕವನ್ನು ಪಡೆದಿದ್ದಾರೆ. ಮಣಿಪುರ ರಾಜ್ಯ ಕಲಾ ಅಕಾಡೆಮಿಯು ೧೯೭೭ ರಲ್ಲಿ ಅವಳಿಗೆ ವಾರ್ಷಿಕ ಪ್ರಶಸ್ತಿಯನ್ನು ನೀಡಿತು. ಸಂಗೀತ ನಾಟಕ ಅಕಾಡೆಮಿಯು ೧೯೮೦ ರಲ್ಲಿ ಪ್ರಶಸ್ತಿ ನೀಡಿತು. ಮಣಿಪುರ ಸಾಹಿತ್ಯ ಪರಿಷತ್ತು ೧೯೮೧ ರಲ್ಲಿ ಆಕೆಗೆ ನೃತ್ಯ ರತ್ನ ಎಂಬ ಬಿರುದನ್ನು ನೀಡಿತು. ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆ, ಭಾರತ ಸರ್ಕಾರವು ೧೯೮೭ ರಲ್ಲಿ ಅವರಿಗೆ ಹಿರಿಯ ಫೆಲೋಶಿಪ್ ನೀಡಿತು ಮತ್ತು ಅವರು ೧೯೯೧ ರಲ್ಲಿ ಮಣಿಪುರ ಸರ್ಕಾರದಿಂದ ಗೌರವ ಪ್ರಮಾಣಪತ್ರವನ್ನು ಪಡೆದರು. ಭಾರತ ಸರ್ಕಾರವು ೨೦೦೩ ರಲ್ಲಿ ಪದ್ಮಶ್ರೀ ಎಂಬ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೨೦೧೧ ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದರು, ಆದರೂ ಯಶಸ್ವಿಯಾಗಲಿಲ್ಲ. ಕ್ಷೇತ್ರಿಮಯುಮ್ ಒಂಗ್ಬಿ ತೌರಾನಿಸಾಬಿ ದೇವಿಯು ಕ್ಷೇತ್ರಿಮಯುಮ್ ನವಾಂಗ್ ಸಿಂಗ್ ಅವರನ್ನು ವಿವಾಹವಾದರು ಮತ್ತು ದಂಪತಿಗಳು ಮಣಿಪುರಿಯ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದಾರೆ. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152232
https://kn.wikipedia.org/wiki/%E0%B2%AE%E0%B2%82%E0%B2%9C%E0%B2%B0%E0%B2%BF%20%E0%B2%9A%E0%B2%A4%E0%B3%81%E0%B2%B0%E0%B3%8D%E0%B2%B5%E0%B3%87%E0%B2%A6%E0%B2%BF
ಮಂಜರಿ ಚತುರ್ವೇದಿ
Articles with short description Short description is different from Wikidata Articles with hCards ವಿಕಿಪೀಡಿಯ ಅನುವಾದ ಶಿಬಿರ ಲೇಖನ ಮಂಜರಿ ಚತುರ್ವೇದಿ ಒಬ್ಬ ಭಾರತೀಯ ಕಥಕ್ ನೃತ್ಯಗಾರ್ತಿ. ಇವರು ಲಕ್ನೋದ ಘರಾನಾಗೆ ಸೇರಿದವರು. ಆರಂಭಿಕ ಜೀವನ ಮತ್ತು ಹಿನ್ನೆಲೆ ಮಂಜರಿ ಚತುರ್ವೇದಿ ಲಕ್ನೋದ ಸುಸ್ಥಾಪಿತ ಕುಟುಂಬದಲ್ಲಿ ಜನಿಸಿದರು. ಇವರ ಅಜ್ಜ ನ್ಯಾಯಮೂರ್ತಿ ಹರಿ ಶಂಕರ್ ಚತುರ್ವೇದಿ, ಲಕ್ನೋ ಪೀಠದಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದರು. ಇವರ ತಂದೆ, ಪ್ರೊ. ರವಿಶಂಕರ್ ಚತುರ್ವೇದಿ, ಐಐಟಿ ರೂರ್ಕಿಯಲ್ಲಿ ಭೂವಿಜ್ಞಾನಿ ಮತ್ತು ಜಿಯೋಫಿಸಿಕ್ಸ್ ಪ್ರಾಧ್ಯಾಪಕರಾಗಿದ್ದರು ಮತ್ತು ಲಕ್ನೋದಲ್ಲಿ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ಸ್ ಸೆಂಟರ್ ಅನ್ನು ಸ್ಥಾಪಿಸಿದ ಗೌರವಾನ್ವಿತ ಬಾಹ್ಯಾಕಾಶ ವಿಜ್ಞಾನಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದಾರ್ಶನಿಕರಾಗಿದ್ದರು. ಅವರ ತಾಯಿ ಸುಧಾ ಚತುರ್ವೇದಿ ಅವರು ಓದಿದ ಮಹಿಳೆಯಾಗಿದ್ದು, ತಮ್ಮ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬಿದರು. ಮಂಜರಿ ಯವರು ತಮ್ಮ ಆರಂಭಿಕ ವರ್ಷಗಳನ್ನು ಲಕ್ನೋದಲ್ಲಿ ಕಳೆದರು ಮತ್ತು ಈ ನಗರವೇ ಅವರ ಕೆಲಸದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಅವರು ಕಾರ್ಮೆಲ್ ಕಾನ್ವೆಂಟ್ ಮತ್ತು ಹೋರ್ನರ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮತ್ತು ಲಕ್ನೋ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣವನ್ನು ಪಡೆದರು. ಅವರು ಲಕ್ನೋ ವಿಶ್ವವಿದ್ಯಾನಿಲಯದಿಂದ ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ (ಎಂ.ಎಸ್‌ಸಿ) ಮಾಡಿದರು. ಇವರು ಯು‌ಪಿ ಸಂಗೀತ ನಾಟಕ ಅಕಾಡೆಮಿಯ ಅಡಿಯಲ್ಲಿ ಕಥಕ್ ಕೇಂದ್ರದಲ್ಲಿ ಕಥಕ್ ನೃತ್ಯದ ವೃತ್ತಿಪರ ವಿಭಾಗದಲ್ಲಿ ತರಬೇತಿ ಪಡೆದರು. ಮಂಜರಿಯವರು ಆರಂಭದಲ್ಲಿ ಅರ್ಜುನ್ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಲಕ್ನೋದ ಘರಾನಾದಲ್ಲಿ ಕಥಕ್‌ನಲ್ಲಿ ತರಬೇತಿ ಪಡೆದರು. ಪ್ರೊತಿಮಾ ಬೇಡಿಯವರ ನೃತ್ಯಗ್ರಾಮದಲ್ಲಿ ಕಲಾನಿಧಿ ನಾರಾಯಣ್ ರವರ ಬಳಿ ಅಭಿನಯವನ್ನೂ ಅಧ್ಯಯನ ಮಾಡಿದರು. ಅವರು ಪಂಜಾಬಿ ಸೂಫಿ ಸಂಪ್ರದಾಯಗಳಿಗೆ ಬಾಬಾ ಬುಲ್ಲೆಹ್ ಷಾ ಅವರ ಕೊಡುಗೆಯನ್ನು ನಿಕಟವಾಗಿ ಅಧ್ಯಯನ ಮಾಡಿದರು. ಮಾವ್ಲಾನಾ ರೂಮಿ ಮತ್ತು ಅಮೀರ್ ಖುಸ್ರೊ ಕೂಡ ಇವರ ಮೇಲೆ ಪ್ರಭಾವ ಬೀರಿದರು. ವೃತ್ತಿ ಚತುರ್ವೇದಿ ಕಥಕ್ ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಾಜಸ್ಥಾನ, ಕಾಶ್ಮೀರ, ಅವಧ್, ಪಂಜಾಬ್, ತುರ್ಕಮೆನಿಸ್ತಾನ್, ಇರಾನ್ ಮತ್ತು ಕ್ರಿಗಿಸ್ತಾನ್‌ನ ಸಂಗೀತದಂತಹ ವೈವಿಧ್ಯಮಯ ರೂಪಗಳೊಂದಿಗೆ ಇಂಟರ್ಫೇಸ್ ಅನ್ನು ನಿರ್ಮಿಸಲು ಇವರು ಪ್ರಯತ್ನಿಸಿದ್ಧರು. ಅವರು ನಿರ್ದಿಷ್ಟವಾಗಿ ಸೂಫಿ ಅತೀಂದ್ರಿಯತೆಗೆ ಆಕರ್ಷಿತರಾಗಿದ್ದರು ಮತ್ತು ತಮ್ಮ ಪ್ರದರ್ಶನಗಳಲ್ಲಿ ಚಲನೆಗಳನ್ನು ಅಳವಡಿಸಲು ಪ್ರಯತ್ನಿಸಿದರು. ಅದು ಗಿರಕಿ ಹೊಡೆಯುವ ಡರ್ವಿಶ್‌ಗಳ ಧ್ಯಾನ ಅಭ್ಯಾಸಗಳನ್ನು ನೆನಪಿಸುತ್ತದೆ. ಆದ್ದರಿಂದ ಅವರು ತಮ್ಮ ನೃತ್ಯ ಶೈಲಿಯನ್ನು ಸೂಫಿ ಕಥಕ್ ಎಂದು ಹೆಸರಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ತಾಜ್ ಮಹಲ್ ಮತ್ತು ಸಿಡ್ನಿ ಒಪೆರಾ ಹೌಸ್‌ನಲ್ಲಿ ಪ್ರದರ್ಶನ ನೀಡಿದರು. ಅವರು ವಿಶಾಲ್ ಭಾರದ್ವಾಜ್ ನಿರ್ದೇಶಿಸಿದ ಮತ್ತು ಗುಲ್ಜಾರ್ ಬರೆದ ತೇರೆ ಇಷ್ಕ್ ಮೇ ಎಂಬ ಸೂಫಿ ಸಂಗೀತ ವೀಡಿಯೊವನ್ನು ಮಾಡಿದ್ಧಾರೆ. ಇವರು ಪ್ರಪಂಚದಾದ್ಯಂತ ೨೨ ಕ್ಕೂ ಹೆಚ್ಚು ದೇಶಗಳಲ್ಲಿ ೩೦೦ ಕ್ಕೂ ಹೆಚ್ಚು ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ, ಮಂಜರಿ ಯುರೋಪ್ (ಫ್ರಾನ್ಸ್, ಜರ್ಮನಿ, ಪೋರ್ಚುಗಲ್, ಇಟಲಿ, ಆಸ್ಟ್ರಿಯಾ, ಸ್ವಿಟ್ಜರ್ಲೆಂಡ್, ಯುಕೆ ಮತ್ತು ಐರ್ಲೆಂಡ್), ಅರ್ಮೇನಿಯಾ, ಜಾರ್ಜಿಯಾ, ಮಧ್ಯಪ್ರಾಚ್ಯ (ದುಬೈ, ಬಹ್ರೇನ್, ಅಬುಧಾಬಿ, ಕತಾರ್, ಕುವೈತ್) ಸೇರಿದಂತೆ ಪ್ರಪಂಚದಾದ್ಯಂತ ಸಂಗೀತ ಕಚೇರಿಗಳನ್ನು ಪ್ರದರ್ಶಿಸಿದ್ದಾರೆ. ಆಗ್ನೇಯ ಏಷ್ಯಾ (ಸಿಂಗಪುರ, ಮಲೇಷಿಯಾ, ಶ್ರೀಲಂಕಾ) ಮತ್ತು ಮಧ್ಯ ಏಷ್ಯಾ (ತುರ್ಕಮೆನಿಸ್ತಾನ್, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ತಜಿಕಿಸ್ತಾನ್) ಜೊತೆಗೆ ಆಸ್ಟ್ರೇಲಿಯಾ ಮತ್ತು ಅಮೇರಿಕಾಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಮಹತ್ವದ ಸ್ಥಳಗಳು ಭಾರತ ಅಂತರಾಷ್ಟ್ರೀಯ ಕೇಂದ್ರ ಕಲಘೋಡ, ಮುಂಬಯಿ ಟಾಗೋರ್ ಆಡಿಟೋರಿಯಂ, ಚಂಡೀಗಢ ಚೌಮಹಲ್ಲಾ ಅರಮನೆ, ಹೈದರಾಬಾದ್ ಅರಾವಳಿ ಬಯೋ ಡೈವರ್ಸಿಟಿ ಪಾರ್ಕ್, ಗುರಗಾಂವ್ ಜುಮೇರಾ ಬೀಚ್ ಹೋಟೆಲ್, ದುಬೈ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ನವದೆಹಲಿ ಸಿಂಫನಿ ಸ್ಪೇಸ್, ನ್ಯೂಯಾರ್ಕ್ ಸಿಟಿ ಜುಡಿತ್ ರೈಟ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ - ಬ್ರಿಸ್ಬೇನ್ ಸ್ಮಿತ್ಸೋನಿಯನ್ ಮ್ಯೂಸಿಯಂ, ವಾಷಿಂಗ್ಟನ್ DC ರಾಯಲ್ ಫೆಸ್ಟಿವಲ್ ಹಾಲ್, ಸೌತ್ ಬ್ಯಾಂಕ್ ಸೆಂಟರ್, ಲಂಡನ್, ಯುಕೆ ಸಿಡ್ನಿ ಒಪೇರಾ ಹೌಸ್, ಆಸ್ಟ್ರೇಲಿಯಾ ನ್ಯಾಷನಲ್ ಗ್ಯಾಲರಿ ಆಫ್ ವಿಕ್ಟೋರಿಯಾ, ಆಸ್ಟ್ರೇಲಿಯಾ ರಾಷ್ಟ್ರಪತಿ ಭವನ ಸಂಸತ್ ಭವನ ಮೆದಿನಾತ್ ಜುಮೇರಾ ಪುರಾಣ ಕಿಲಾ ಜಗಮಂದಿರ ಅರಮನೆ, ಉದಯಪುರ ಲೇಕ್ ಪ್ಯಾಲೇಸ್, ಉದಯಪುರ ಅಮನ್-ಇ-ಬಾಗ್ ರಾಮ್ ಬಾಗ್ ಅರಮನೆ, ಜೈಪುರ ಲೋಟಸ್ ಟೆಂಪಲ್, ನವದೆಹಲಿ ಟೌನ್ ಹಾಲ್, ಕೋಲ್ಕತ್ತಾ ಕುತುಬ್ ಮಿನಾರ್, ನ್ಯೂ ದಲೇಹಿ ಮುರ್ಷಿದಾಬಾದ್ ಅರಮನೆ, ಮುರ್ಷಿದಾಬಾದ್ ನೀಮ್ರಾಣ ಕೋಟೆ ದೇವಿಗಢ ಕೋಟೆ ಕಿಲಾ ಮುಬಾರಕ್, ಪಟಿಯಾಲ ಜಗತ್ಜಿತ್ ಅರಮನೆ, ಕಪುರ್ತಲಾ ಖಜುರಾಹೊ ದೇವಾಲಯ ಜನನ ಮಹಲ್, ಉದಯಪುರ ಅಂಬರ್ ಫೋರ್ಟ್, ಜೈಪುರ ಫತೇಪುರ್ ಸಿಕ್ರಿ ಅರಬ್ ಕಿ ಸರಾಯ್, ಹುಮಾಯೂನ್ ಸಮಾಧಿ ಹೋಲ್ಕರ್ ಅರಮನೆ, ಮಹೇಶ್ವರ ತಾಜ್ ಮಹಲ್, ಆಗ್ರಾ ದಿಲ್ಕುಶಾ ಅರಮನೆ, ಲಕ್ನೋ ಮಿಸ್ಟಿಕ್ಸ್ ನೃತ್ಯ ಇವರು ಪ್ರತಿಷ್ಠಿತ ಸ್ಮಿತ್ಸೋನಿಯನ್ ಮ್ಯೂಸಿಯಂ ವಾಷಿಂಗ್ಟನ್ ಡಿಸಿ ಯಲ್ಲಿ ಸೂಫಿ ಸಿಂಪೋಸಿಯಂನ ಯುನೆಸ್ಕೋ ಲಿವಿಂಗ್ ಹೆರಿಟೇಜ್ ಸಮ್ಮೇಳನದ ಭಾಗವಾಗಿದ್ದಾರೆ ಹಾಗೂ ಕೊರಿಯಾದ ಪ್ರತಿಷ್ಠಿತ ಏಷ್ಯನ್ ನೃತ್ಯ ಸಮಿತಿಯ "ಥಿಂಕ್ ಟ್ಯಾಂಕ್ ಆನ್ ಏಷ್ಯನ್ ಡ್ಯಾನ್ಸ್" ನ ತೀರ್ಪುಗಾರರಾಗಿದ್ದಾರೆ ಮತ್ತು ಸದಸ್ಯರಾಗಿದ್ದಾರೆ. ಕಳೆದ ದಶಕದಲ್ಲಿ ಮಂಜರಿ ಚತುರ್ವೇದಿ ಅವರು ಟಿಮ್ ರೈಸ್ (ಸ್ಯಾಕ್ಸೋಫೋನ್, ರೋಲಿಂಗ್ ಸ್ಟೋನ್ಸ್, ಯು‌ಎಸ್‌ಎ) ಮತ್ತು ಉಸ್ತಾದ್ ಶುಜಾತ್ ಹುಸೇನ್ ಖಾನ್ (ಸಿತಾರ್, ಭಾರತ), ತೌಫಿಕ್ ಖುರೇಷಿ (ಭಾರತ), ಕೈಲಾಶ್ ಖೇರ್(ಭಾರತ), ಕೆವಿನ್ ಹೇಸ್ (ಪಿಯಾನೋ, ಯು‌ಎಸ್‌ಎ), ಧಾಫರ್ ಯೋಸುಫ್ (ಔದ್, ಗಾಯನ, ಟುನೀಶಿಯಾ), ರಹೀಮ್ ಅಲ್ ಹಜ್ (ಔದ್, ಇರಾಕ್), ಪ್ಯಾಟ್ರಿಕ್ ಪೋಸ್ಸಿ (ಸ್ಯಾಕ್ಸೋಫೋನ್, ಯುಎಸ್ ಎ), ಫಿರಾಸ್ ಶಹರ್ಸ್ತಾನ್ (ಕ್ವಾನುನ್, ಸಿರಿಯಾ), ಮೈಕೆಲ್ ಗ್ಲೆನ್ ( ಬಾಸ್, ಯುಎಸ್ಎ) ಅವರೊಂದಿಗೆ ಗ್ಲೋಬಲ್ ಫ್ಯೂಷನ್ ಆಗಿ ವ್ಯಾಪಕ ಶ್ರೇಣಿಯ ಅಂತರರಾಷ್ಟ್ರೀಯ ಕಲಾವಿದರ ಸಹಯೋಗದೊಂದಿಗೆ ಪ್ರದರ್ಶನ ನೀಡಿದ್ದಾರೆ. ಕಿರುಚಿತ್ರಗಳು ಮತ್ತು ವೀಡಿಯೊಗಳು ಹಾಗೂ ವಿಶಾಲ್ ಭಾರದ್ವಾಜ್ ನಿರ್ದೇಶಿಸಿದ ತೇರೆ ಇಷ್ಕ್ ಮೇ ಎಂಬ ಸೂಫಿ ಸಂಗೀತ ವೀಡಿಯೊವನ್ನು ಮಾಡಿದ್ದಾರೆ. ಇವರು ಜರಾ ಥಾಹೆರ್ ಜಾವೊದಲ್ಲಿ ಪ್ರದರ್ಶನ ನೀಡಿದ್ದಾರೆ. ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಸಂಗೀತದ ಒಂದು ನೃತ್ಯದ ಸರಣಿ ಹಾಗೂ ಜಶ್ನ್-ಇ-ಅವಧ್: ತಾಜ್ ಗ್ರೂಪ್ ಆಫ್ ಹೋಟೆಲ್‌ಗಾಗಿ ಆಡಿಯೊ ದೃಶ್ಯದಲ್ಲಿ ಇವರು ಪ್ರದರ್ಶನ ನೀಡಿದ್ದಾರೆ. ಇವರು ಸೋಲ್ಫುಲ್ ಸ್ಟ್ರಿಂಗ್ಸ್ ಆಫ್ ಸಾರಂಗಿ ಪಮೇಲಾ ಚಲನಚಿತ್ರ ರೂಕ್ಸ್ ಹಾಗೂ ತಾಜ್ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಅರಮನೆಗಳ ಐತಿಹಾಸಿಕ ಪ್ರಯಾಣದಲ್ಲಿ ಪ್ರದರ್ಶನ ನೀಡಿದ್ದಾರೆ. ಜಾಫರ್ ಹೈ ಅವರು ನಿರ್ದೇಶಿಸಿದ ಚಲನಚಿತ್ರ ಅಮೀರ್ ಖುಸ್ರೂ, ರಾಷ್ಟ್ರೀಯ ದೂರದರ್ಶನಕ್ಕಾಗಿ ಮುಜಾಫರ್ ಅಲಿ ನಿರ್ದೇಶಿಸಿದ ಚಲನಚಿತ್ರ ಹಾಗೂ ರಾಕ್ಸ್-ಇ-ದಿಲ್, ಚಲನಚಿತ್ರಕ್ಕಾಗಿ ಮುಜಾಫರ್ ಅಲಿಯವರ ರಾಷ್ಟ್ರೀಯ ಟೆಲಿವಿಷನ್ ಹಾಗೂ ರೂಮಿ ಇನ್ ದಿ ಲ್ಯಾಂಡ್ ಆಫ್ ಖುಸ್ರೌ ಸೇರಿದಂತೆ ಪ್ರಪಂಚದಾದ್ಯಂತದ ಸೂಫಿ ಸಂಪ್ರದಾಯಗಳ ಕುರಿತಾದ ಚಲನಚಿತ್ರದಲ್ಲಿ ಮತ್ತು ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ಮುಜಫರ್ ಅಲಿ ಅವರ ದೂರದರ್ಶನ ಧಾರಾವಾಹಿ ಮತ್ತು ದಿ ಲೆಗಸಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಆಫ್ ಆನ್ ಎರಾ ಮತ್ತು ಮಜರ್ ಕಮ್ರಾನ್ ಅವರ ಲಕ್ನೋ ಕುರಿತಾದ ಚಲನಚಿತ್ರದಲ್ಲಿ ಭಾಗವಹಿಸಿದ್ದಾರೆ. ಕೋರ್ಟೇಸನ್ ಪ್ರಾಜೆಕ್ಟ್ ಮಂಜರಿ ಚತುರ್ವೇದಿಯವರ ಅದ್ಭುತ ಉಪಕ್ರಮವು ಸೌಜನ್ಯ, ತವೈಫ್‌ಗಳಿಗೆ ಸಂಬಂಧಿಸಿದ ಸಾಮಾಜಿಕ ಕಳಂಕಗಳನ್ನು ತೊಡೆದುಹಾಕಲು ಕೆಲಸ ಮಾಡಿದ್ದಾರೆ ಮತ್ತು ಆ ಮೂಲಕ ಅವರಿಗೆ ಅರ್ಹವಾದ ಗೌರವ ಮತ್ತು ಶ್ರೇಷ್ಠ ಕಲಾವಿದೆಯರ ಸ್ಥಾನವನ್ನು ನೀಢಲಾಗಿದೆ. "ದಿ ಲಾಸ್ಟ್ ಸಾಂಗ್ಸ್ ಅಂಡ್ ಡ್ಯಾನ್ಸ್ ಆಫ್ ವೇಶ್ಯೆಯನ್ಸ್ - ಜೆಂಡರ್ ಡಿಸ್ಕ್ರಿಮಿನೇಷನ್ ಇನ್ ಆರ್ಟ್ಸ್ ಅಂಡ್ ಹೌ ಇಟ್ ಶೇಪ್ಸ್ ದಿ ಆರ್ಟ್ ಫಾರ್ ಫ್ಯೂಚರ್" ಎನ್ನುವುದು ನಂಬಲಾಗದ ಮಹಿಳಾ ಪ್ರದರ್ಶಕರ ಜೀವನ ಮತ್ತು ಕಥೆಗಳನ್ನು ಆರ್ಕೈವ್ ಮಾಡುವ ಮತ್ತು ದಾಖಲಿಸುವ ಯೋಜನೆಯಾಗಿದೆ. ಮಂಜರಿ ಅವರು ಸಂಪೂರ್ಣವಾಗಿ ಹೊಸ ಕೆಲಸವನ್ನು ಕೈಗೊಂಡಿದ್ದಾರೆ. ಇದು ಜೀವಂತ ನೃತ್ಯ ಮತ್ತು ಸಂಗೀತ ಮತ್ತು ನೃತ್ಯ ಎರಡರಲ್ಲೂ ಕಲಾವಿದರಾಗಿ ಸಮಾಜದಿಂದ ಕಳಂಕಿತರಾದ ಮಹಿಳೆಯರ ಕಥೆಗಳನ್ನು ತೋರುತ್ತದೆ ಮತ್ತು ಲಿಂಗ ತಾರತಮ್ಯದಿಂದ ಕೂಡಿದ ದುರದೃಷ್ಟಕರ ಸಮಾಜದಲ್ಲಿ ಭಾಗವಹಿಸದ ಮಹಿಳೆಯರ ಕಥೆಗಳನ್ನು ತಿಳಿಸುತ್ತದೆ. "ಅಸಮರ್ಪಕ ಸಂಶೋಧನೆ ಮತ್ತು ದಾಖಲಾತಿಗಳ ಹಿನ್ನೆಲೆಯಲ್ಲಿ, ಹಲವಾರು ಪುರಾಣಗಳು ಮತ್ತು ತಪ್ಪುಗ್ರಹಿಕೆಗಳು ವೇಶ್ಯೆಯರ ಜೀವನ ಮತ್ತು ಇತಿಹಾಸವನ್ನು ಮುಚ್ಚಿಹಾಕುತ್ತವೆ" ಎಂಬುದು ಅವರ ಅಭಿಪ್ರಾಯ. ಇಂದು, 'ಸೌಜನ್ಯ' ಮತ್ತು 'ವೇಶ್ಯೆ' ಪದಗಳನ್ನು ಪರಸ್ಪರ ಬದಲಾಯಿಸುವ ರೀತಿಯಲ್ಲಿ ಬಳಸುವುದು ಅಸಾಮಾನ್ಯವೇನಲ್ಲ. ಇದು ನಿರಂತರವಾಗಿ ಮಾಡಿದ ದೊಡ್ಡ ತಪ್ಪು. ಲಿಂಗ ಅಸಮಾನತೆಯ ಆಧಾರದ ಮೇಲೆ ಇತಿಹಾಸದ ಅತ್ಯಂತ ಅನ್ಯಾಯದ ದಾಖಲೆಯಲ್ಲಿ, ಈ ಕಲೆಗಳನ್ನು ಅನುಸರಿಸುವ ಪುರುಷರನ್ನು "ಉಸ್ತಾದ್‌ಗಳು" (ಮಾಸ್ಟರ್ಸ್) ಎಂದು ಪೂಜಿಸಲಾಗುತ್ತದೆ ಆದರೆ ಅದೇ ಕಲೆಗಳನ್ನು ಅನುಸರಿಸುವ ಮಹಿಳೆಯರು "ನಾಚ್ ಗರ್ಲ್ಸ್" (ನೃತ್ಯ ಹುಡುಗಿಯರು) ಎಂದು ಕರೆಯುತ್ತಾರೆ ಹಿಂದಿನ ಪುರುಷ ನ್ಯಾಯಾಲಯದ ನರ್ತಕರ ಪ್ರಸ್ತುತ ತಲೆಮಾರುಗಳು ತಮ್ಮ ಪೂರ್ವಜರ ಹಿರಿಮೆಯನ್ನು ರಾಜಮನೆತನದ ನ್ಯಾಯಾಲಯಗಳಲ್ಲಿ ನರ್ತಕರಾಗಿ ಶ್ಲಾಘಿಸುವ ಹೆಮ್ಮೆಯ ಭಾವನೆಯೊಂದಿಗೆ ಕುಟುಂಬದ ವಂಶಾವಳಿಯ ಬಗ್ಗೆ ಮಾತನಾಡುತ್ತಾರೆ. ಅದೇ ಸಮಯದಲ್ಲಿ, ಮಹಿಳಾ ನ್ಯಾಯಾಲಯದ ನೃತ್ಯಗಾರರ ತಲೆಮಾರುಗಳು ತಮ್ಮ ವಂಶಾವಳಿಯನ್ನು ಅಥವಾ ಹಿಂದಿನ ನ್ಯಾಯಾಲಯಗಳೊಂದಿಗಿನ ಯಾವುದೇ ಸಂಪರ್ಕವನ್ನು ಎಂದಿಗೂ ಬಹಿರಂಗಪಡಿಸದೆ ಅವಮಾನದ ಭಾವನೆಯಿಂದ ಬದುಕುತ್ತಾರೆ. ಕಲೆಯ ಕ್ಷೇತ್ರದಲ್ಲಿ ಲಿಂಗ ತಾರತಮ್ಯವನ್ನು ಎಂದಿಗೂ ಪರಿಹರಿಸಲಾಗಿಲ್ಲ ಮತ್ತು ಇಂದು ಈ ಪಂಗಡದ ಮಹಿಳೆಯರನ್ನು ಸಮಾಜದಲ್ಲಿ ಬಹಿಷ್ಕರಿಸಲಾಗಿದೆ ಮತ್ತು ಅವರ ಸಮಕಾಲೀನ ಪುರುಷರಿಗಿಂತ "ಕಡಿಮೆ" ಎಂದು ಪರಿಗಣಿಸಲಾಗಿದೆ. ಈ ಮಹಿಳಾ ಕಲಾವಿದರು ಮತ್ತು ಅವರ ಸಂಪ್ರದಾಯಗಳ ಮೇಲಿನ ನಿರ್ಲಕ್ಷ್ಯವನ್ನು ಪ್ರಶ್ನಿಸುವುದು ಮತ್ತು ಸವಾಲು ಹಾಕುವುದು ಇಂದಿನ ಅಗತ್ಯವಾಗಿದೆ ನಾವು ಇದನ್ನು ಸಾಮೂಹಿಕ ಸಮಾಜವಾಗಿ ಯೋಚಿಸಬೇಕು ಮತ್ತು ಈ ರೀತಿಯ ಯೋಜನೆಯು ಸಾಮೂಹಿಕ ಆತ್ಮಸಾಕ್ಷಿಯನ್ನು ರೂಪಿಸಲು ಸಮಾಜ ಸಹಾಯ ಮಾಡುತ್ತದೆ" ಎಂದು ಮಂಜರಿ ಹೇಳುತ್ತಾರೆ. ವಿವಾದ ೧೭ ಜನವರಿ ೨೦೨೦ ರಂದು, ಲಕ್ನೋದ ಖಾಸಗಿ ಹೋಟೆಲ್‌ನಲ್ಲಿ ಅಧಿಕೃತ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ತಮ್ಮ ಕವ್ವಾಲಿ ಪ್ರದರ್ಶನವನ್ನು "ಉದ್ದೇಶಪೂರ್ವಕವಾಗಿ" ನಿಲ್ಲಿಸಿದ್ದಾರೆ ಎಂದು ಮಂಜರಿ ಚತುರ್ವೇದಿ ಹೇಳಿದ್ದಾರೆ. ಆದರೆ, ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆ ಈ ಆರೋಪವನ್ನು ನಿರಾಕರಿಸಿದೆ. ಉಲ್ಲೇಖಗಳು
152233
https://kn.wikipedia.org/wiki/%E0%B2%B8%E0%B2%82%E0%B2%97%E0%B3%80%E0%B2%A4%E0%B2%BE%20%E0%B2%88%E0%B2%B6%E0%B3%8D%E0%B2%B5%E0%B2%B0%E0%B2%A8%E0%B3%8D
ಸಂಗೀತಾ ಈಶ್ವರನ್
ಸಂಗೀತಾ ಈಶ್ವರನ್ ಅವರು ಭಾರತೀಯ ಭರತನಾಟ್ಯ ನೃತ್ಯಗಾರ್ತಿ, ಸಂಶೋಧನಾ ವಿದ್ವಾಂಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅವರಿಗೆ, ಯುವ ನೃತ್ಯಗಾರರಿಗೆ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಆರಂಭಿಕ ಜೀವನ ಮತ್ತು ಶಿಕ್ಷಣ ಈಶ್ವರನ್ ಭಾರತದ ಚೆನ್ನೈನಲ್ಲಿರುವ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ (ಎಮ್.ಸಿ .ಸಿ) ಗಣಿತಶಾಸ್ತ್ರದಲ್ಲಿ ಪದವಿ ಪಡೆದರು. ಅವರು ಐದನೇ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ಔಪಚಾರಿಕ ತರಬೇತಿಯನ್ನು ಪಡೆದರು. ಕಲಾನಿಧಿ ನಾರಾಯಣನ್ ಅವರು ಸ್ಥಾಪಿಸಿದ ನೃತ್ಯ ಶಾಲೆಯಾದ ಅಭಿಯಾನ ಸುಧಾರದ ಮೊದಲ ವಿದ್ಯಾರ್ಥಿಗಳಲ್ಲಿ ಒಬ್ಬರಾದರು. ಅವರು ನೃತ್ಯ, ಅಭಿನಯ, ಕಲರಿಪಯಟ್ಟು, ಕೂಚಿಪುಡಿ, ಕರ್ನಾಟಕ ಸಂಗೀತ ಮತ್ತು ನಟ್ಟುವಂಗಂ ವಾದ್ಯದಂತಹ ಲಲಿತಕಲೆಗಳಲ್ಲಿ ತರಬೇತಿ ಪಡೆದಿದ್ದರು. ವೃತ್ತಿ ಈಶ್ವರನ ಅವರು ಕತ್ರಾಡಿ ಎನ್‌ಜಿಒ‌ದ ಸ್ಥಾಪಕರಾಗಿದ್ದರು. ಇವರು ಸಂಘರ್ಷ ಪರಿಹಾರದ ಉದ್ದೇಶಕ್ಕಾಗಿ ಲಲಿತಕಲೆಗಳನ್ನು ಬಳಸಿಕೊಳ್ಳುವ ಕತ್ರಾಡಿ ವಿಧಾನವನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಇವರು ಶಿಕ್ಷಣ ನೀಡುವ ಮೂಲಕ ಅಂಚಿನಲ್ಲಿರುವ ಮತ್ತು ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಾರೆ. ಈಶ್ವರನ್ ಅವರು ದೌರ್ಜನ್ಯಕ್ಕೊಳಗಾದ ಮಕ್ಕಳು, ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಬೀದಿ ಮಕ್ಕಳು, ಮಾದಕ ವ್ಯಸನಿಗಳು ಮತ್ತು ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಕೆಲಸ ಮಾಡಿದ್ದಾರೆ. ಸಾಮಾಜಿಕ ಸುಧಾರಣೆಯನ್ನು ತರುವ ಪ್ರಯತ್ನದಲ್ಲಿ ನೃತ್ಯ ಮತ್ತು ರಂಗಭೂಮಿಯನ್ನು ಬಳಸುತ್ತಾರೆ. ಕತ್ರಾಡಿ ಅವರು ಅಮೇರಿಕನ್ ಹಣಕಾಸು ವಿಶ್ಲೇಷಕರಾಗಿ ಸಾಮಾಜಿಕ ಕಾರ್ಯಕರ್ತೆ ಲಿಜ್ ಹೇನ್ಸ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ವಿಂಡ್ ಡ್ಯಾನ್ಸರ್ಸ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇದು ಮಕ್ಕಳ ಶಿಕ್ಷಣಕ್ಕಾಗಿ ಜಾನಪದ ಕಲೆಗಳನ್ನು ಬಳಸಿಕೊಳ್ಳುತ್ತದೆ. ಕೂತು ಕಲಾವಿದ ತಿಲಗಾವತಿಯವರ ಸಹಯೋಗದೊಂದಿಗೆ ಈ ಟ್ರಸ್ಟ್ ಕೆಲಸ ಮಾಡುತ್ತದೆ. ಈಶ್ವರನ್ ತಮ್ಮ ಯೋಜನೆಗಳಲ್ಲಿ ಚಿಕಿತ್ಸಿಕ ಮತ್ತು ಜಾಗೃತಿ ವೇದಿಕೆಗಳೊಂದಿಗೆ ಸಹಕರಿಸುತ್ತಾರೆ. ಈ ಕಾರಣದಿಂದಾಗಿ ಅವರನ್ನು "ಚಿಂತನಾ ನರ್ತಕಿ" ಎಂದು ವಿವರಿಸಲಾಗಿದೆ ಮತ್ತು ಸೌಂದರ್ಯದ ಆಕರ್ಷಣೆಯ ಸೀಮಿತ ವ್ಯಾಪ್ತಿಯನ್ನು ಮೀರಿ ಶಾಸ್ತ್ರೀಯ ನೃತ್ಯವನ್ನು ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಯೂತ್ ಫಾರ್ ಪೀಸ್ ಎಂಬ ಯುನೆಸ್ಕೋ ಉಪಕ್ರಮದ ಸಂಯೋಜಕರಾಗಿದ್ದರು ಮತ್ತು ಮೆಕ್ಸಿಕೋ, ಬ್ರೆಜಿಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದರು. ಇವರು ಹ್ಯಾಂಡಿಕ್ಯಾಪ್ ಇಂಟರ್‌ನ್ಯಾಶನಲ್ ವರ್ಲ್ಡ್ ವಿಷನ್ ಇಂಟರ್‌ನ್ಯಾಷನಲ್ ಮತ್ತು ಆಕ್ಸ್‌ಫ್ಯಾಮ್ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳೊಂದಿಗೆ (ಎನ್‌ಜಿಒ) ಸಹಕರಿಸಿದ್ದಾರೆ. ಅವರು ದೇಶ್ ಎಂಬ ಎನ.ಜಿ ಒ ನೊಂದಿಗೆ ಸಹ ಸಂಬಂಧ ಹೊಂದಿದ್ದರು. ಎಚ್‌ಐ‌ವಿ/ಏಡ್ಸ್ ರೋಗಿಗಳ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಕೆಲಸ ಮಾಡಿದರು. ಇವರು ಭಾರತದಲ್ಲಿ ಕೋವಿಡ್ - ೧೯ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ಚೆನ್ನೈ ವಲಸೆ ಕಾರ್ಯಪಡೆಯೊಂದಿಗೆ ಸ್ವಯಂಸೇವಕರಾಗಿದ್ದರು. ಅವರು ೨೦೦೮ ರಿಂದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್‌ನಲ್ಲಿ ಫೆಲೋಶಿಪ್ ಅನ್ನು ಹೊಂದಿದ್ದಾರೆ. ಮತ್ತು ಏಷ್ಯಾ ಫೌಂಡೇಶನ್‌ನಲ್ಲಿ ಫೆಲೋಶಿಪ್ ಅನ್ನು ಹೊಂದಿದ್ದಾರೆ. ಇದಕ್ಕಾಗಿ ಅವರು ಕಾರ್ಯಕ್ರಮದ ಭಾಗವಾಗಿ ಥೈಲ್ಯಾಂಡ್, ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಇಂಡೋನೇಷ್ಯಾದಲ್ಲಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152238
https://kn.wikipedia.org/wiki/%E0%B2%B0%E0%B3%82%E0%B2%AA%E0%B2%AE%E0%B3%8D%20%E0%B2%95%E0%B3%81%E0%B2%B0%E0%B3%8D%E0%B2%AE%E0%B2%BF
ರೂಪಮ್ ಕುರ್ಮಿ
ರೂಪಮ್ ಕುರ್ಮಿ (ಮರಣ ೪ ಫೆಬ್ರವರಿ ೨೦೦೪) ಅವರು ಅಸ್ಸಾಂ ರಾಜ್ಯದ ಭಾರತೀಯ ರಾಜಕಾರಣಿ. ಅವರು ತರುಣ್ ಗೊಗೊಯ್ ಕ್ಯಾಬಿನೆಟ್‌ನಲ್ಲಿ ಉದ್ಯೋಗ ಮತ್ತು ಕರಕುಶಲತೆಯ ಮಾಜಿ ಸಚಿವರಾಗಿದ್ದರು ಮತ್ತು ಮರಿಯಾನಿಗಾಗಿ ಅಸ್ಸಾಂ ವಿಧಾನಸಭೆಯ ಸದಸ್ಯರಾಗಿದ್ದರು. ಅವರು ಶಾಸಕ ರೂಪ್‌ಜ್ಯೋತಿ ಕುರ್ಮಿ ಅವರ ತಾಯಿ. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152239
https://kn.wikipedia.org/wiki/%E0%B2%95%E0%B3%81%E0%B2%AE%E0%B3%81%E0%B2%A6%E0%B2%BF%E0%B2%A8%E0%B2%BF%20%E0%B2%B2%E0%B2%96%E0%B2%BF%E0%B2%AF%E0%B2%BE
ಕುಮುದಿನಿ ಲಖಿಯಾ
ಕುಮುದಿನಿ ಲಖಿಯಾ (ಜನನ ೧೭ ಮೇ ೧೯೩೦) ಗುಜರಾತ್‌ನ ಅಹಮದಾಬಾದ್‌ನಲ್ಲಿ ನೆಲೆಸಿರುವ ಭಾರತೀಯ ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿ. ಅಲ್ಲಿ ಅವರು ೧೯೬೭ ರಲ್ಲಿ ಭಾರತೀಯ ನೃತ್ಯ ಮತ್ತು ಸಂಗೀತದ ಸಂಸ್ಥೆಯಾದ ಕದಂಬ್ ಆಫ್ ಡ್ಯಾನ್ಸ್ ಅಂಡ್ ಮ್ಯೂಸಿಕ್ ಅನ್ನು ಸ್ಥಾಪಿಸಿದರು. ಇವರು ಸಮಕಾಲೀನ ಕಥಕ್ ನೃತ್ಯದ ಪ್ರವರ್ತಕಿ, ಅವರು ೧೯೬೦ ರ ದಶಕದಲ್ಲಿ ಪ್ರಾರಂಭವಾದ ಕಥಕ್‌ನ ಏಕವ್ಯಕ್ತಿ ರೂಪದಿಂದ ದೂರ ಸರಿಯುವ ಮೂಲಕ ಅದನ್ನು ಸಮೂಹ ದೃಶ್ಯವಾಗಿ ಪರಿವರ್ತಿಸುವ ಮೂಲಕ ಮತ್ತು ಸಾಂಪ್ರದಾಯಿಕ ಕಥೆಗಳನ್ನು ತೆಗೆದುಹಾಕುವುದು ಮತ್ತು ಕಥಕ್ ಸಂಗ್ರಹಕ್ಕೆ ಸಮಕಾಲೀನ ಕಥಾಹಂದರವನ್ನು ಸೇರಿಸುವಂತಹ ಹೊಸತನವನ್ನು ಹೊಂದಿದ್ದಾರೆ. ಆರಂಭಿಕ ಜೀವನ ಮತ್ತು ಶಿಕ್ಷಣ ಲಖಿಯಾ ತಮ್ಮ ಏಳನೇ ವಯಸ್ಸಿನಲ್ಲಿ ಬಿಕಾನೇರ್ ಘರಾನಾದಿಂದ ಸೋಹನ್‌ಲಾಲ್‌ನೊಂದಿಗೆ ಕಥಕ್ ತರಬೇತಿಯನ್ನು ಪ್ರಾರಂಭಿಸಿದರು. ಇದರ ನಂತರ ಬನಾರಸ್ ಘರಾನಾದ ಆಶಿಕ್ ಹುಸೇನ್ ಮತ್ತು ಜೈಪುರ ಶಾಲೆಯ ಸುಂದರ್ ಪ್ರಸಾದ್ ಅವರಿಂದ ತರಬೇತಿ ಪಡೆದರು. ಸ್ವತಃ ಶಾಸ್ತ್ರೀಯ ಗಾಯಕಿಯಾಗಿದ್ದ ಅವರ ತಾಯಿ ಲೀಲಾ ಅವರಿಂದ ಉತ್ತೇಜಿತರಾದ ಅವರನ್ನು ಜೈ ಲಾಲ್ ಅವರ ಶಿಷ್ಯರಾದ ರಾಧೇಲಾಲ್ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ತರಬೇತಿಗೆ ಕಳುಹಿಸಲಾಯಿತು. ಪರಿಣಾಮವಾಗಿ, ಅವರು ತಮ್ಮ ಶಾಲಾ ಶಿಕ್ಷಣವನ್ನು ಲಾಹೋರ್‌ನಲ್ಲಿ ಮತ್ತು ಕಾಲೇಜು ಅಲಹಾಬಾದ್‌ನಲ್ಲಿ ಪೂರ್ಣಗೊಳಿಸಿದರು. ವೃತ್ತಿ ರಾಮ್ ಗೋಪಾಲ್ ಅವರು ಪಾಶ್ಚಿಮಾತ್ಯ ಪ್ರವಾಸ ಕೈಗೊಂಡಾಗ ಅವರು ನೃತ್ಯವನ್ನು ತಮ್ಮ ವೃತ್ತಿಜೀವನವನ್ನಾಗಿ ಆರಿಸಿಕೊಂಡರು. ಮೊದಲ ಬಾರಿಗೆ ಭಾರತೀಯ ನೃತ್ಯವನ್ನು ವಿದೇಶದ ಜನರೆದುರು ಪ್ರದರ್ಶಿಸಿದರು. ನಂತರ ಸ್ವತಃ ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕರಾದರು. ಅವರು ಮೊದಲು ಜೈಪುರ ಘರಾನಾದ ವಿವಿಧ ಗುರುಗಳಿಂದ ಕಲಿತರು ಮತ್ತು ನಂತರ ಶಂಭು ಮಹಾರಾಜರಿಂದ ಕಲಿತರು. ಅವರು ಬಹು-ವ್ಯಕ್ತಿ ನೃತ್ಯ ಸಂಯೋಜನೆಗಳಿಗೆ ವಿಶೇಷವಾಗಿ ಹೆಸರುವಾಸಿಯಾಗಿದ್ದಾರೆ. ೧೯೮೦ ರಲ್ಲಿ ದೆಹಲಿಯಲ್ಲಿ ನಡೆದ ವಾರ್ಷಿಕ ಕಥಕ್ ಮಹೋತ್ಸವದಲ್ಲಿ ಅವರು ಪ್ರದರ್ಶಿಸಿದ ಧಾಬ್ಕರ್ (ಪಲ್ಸ್), ಯುಗಲ್ (ದಿ ಡ್ಯುಯೆಟ್) ಮತ್ತು ಅತಾಹ್ ಕಿಮ್ (ಈಗ ಎಲ್ಲಿ?) ಅವರ ಕೆಲವು ಪ್ರಸಿದ್ಧ ನೃತ್ಯ ಸಂಯೋಜನೆಗಳು ಸೇರಿವೆ. ಅವರು ಗೋಪಿ ಕೃಷ್ಣ ಅವರೊಂದಿಗೆ ಹಿಂದಿ ಚಲನಚಿತ್ರ ಉಮ್ರಾವ್ ಜಾನ್ (೧೯೮೧) ನಲ್ಲಿ ನೃತ್ಯ ಸಂಯೋಜಕರಾಗಿದ್ದರು. ಕಥಕ್ ನೃತ್ಯಗಾರ್ತಿ ಅದಿತಿ ಮಂಗಲದಾಸ್, ವೈಶಾಲಿ ತ್ರಿವೇದಿ, ಸಂಧ್ಯಾ ದೇಸಾಯಿ, ದಕ್ಷಾ ಶೇಠ್, ಮೌಲಿಕ್ ಶಾ, ಇಶಿರಾ ಪಾರಿಖ್, ಪ್ರಶಾಂತ್ ಶಾ, ಉರ್ಜಾ ಠಾಕೋರ್ ಮತ್ತು ಪಾರುಲ್ ಶಾ ಸೇರಿದಂತೆ ಅನೇಕ ಶಿಷ್ಯರಿಗೆ ಅವರು ಗುರುವಾಗಿದ್ದಾರೆ. ವೈಯಕ್ತಿಕ ಜೀವನ ಅವರು ಲಿಂಕನ್ಸ್ ಇನ್‌ನಲ್ಲಿ ಕಾನೂನು ಓದುತ್ತಿದ್ದ ರಜನಿಕಾಂತ್ ಲಖಿಯಾ ಅವರನ್ನು ವಿವಾಹವಾದರು. ಅವರು ರಾಮ್ ಗೋಪಾಲ್ ಕಂಪನಿಯಲ್ಲಿ ಪಿಟೀಲು ವಾದಕರಾಗಿದ್ದರು ಮತ್ತು ೧೯೬೦ ರಲ್ಲಿ ಅಹಮದಾಬಾದ್‌ಗೆ ತೆರಳಿದರು. ಅವರಿಗೆ ಪುತ್ರ ಶ್ರೀರಾಜ್ ಮತ್ತು ಪುತ್ರಿ ಮೈತ್ರೇಯಿ ಇದ್ದಾರೆ. ನೃತ್ಯ ಸಂಯೋಜನೆಗಳು "ತುಮ್ರಿಯಲ್ಲಿ ವ್ಯತ್ಯಾಸ" (೧೯೬೯) "ವೇಣು ನಾಡ್" (೧೯೭೦) "ಭಜನ್" (೧೯೮೫) "ಹೋರಿ" (೧೯೭೦) "ಕೋಲಾಹಲ್" (೧೯೭೧) "ದುವಿಧಾ" (೧೯೭೧) "ಧಬ್ಕರ್" (೧೯೭೩) "ಯುಗಲ್" (೧೯೭೬) "ಉಮ್ರಾವ್ ಜಾನ್" (೧೯೮೧) "ಅತಃ ಕಿಮ್" (೧೯೮೨) "ಓಖಾ ಹರನ್" (೧೯೯೦) "ಹನ್-ನಾರಿ" (೧೯೯೩) "ಗೋಲ್ಡನ್ ಚೈನ್ಸ್" (ನೀನಾ ಗುಪ್ತ್, ಲಂಡನ್‌ಗಾಗಿ) "ಸಂ ಸಂವೇದನ್" (೧೯೯೩) "ಸಮನ್ವೇ" (೨೦೦೩) "ಭಾವ ಕ್ರೀಡಾ" (೧೯೯೯) "ಗರಿಗಳಿರುವ ಬಟ್ಟೆ - ಹಗೊರೊಮೊ" (೨೦೦೬) "ಮುಷ್ಟಿ" (೨೦೦೫) ಪ್ರಶಸ್ತಿಗಳು ಮತ್ತು ಗೌರವಗಳು ೧೯೮೭ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ೨೦೧೦ ರಲ್ಲಿ ಪದ್ಮಭೂಷಣ ೧೯೮೨ ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೨೦೦೨ - ೦೩ ರ ಕಾಳಿದಾಸ್ ಸಮ್ಮಾನ್ ೨೦೧೧ ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ಸಂಗೀತ ನಾಟಕ ಅಕಾಡೆಮಿ ಟ್ಯಾಗೋರ್ ರತ್ನ ಗುರು ಗೋಪಿನಾಥ್ ದೇಸಿಯ ನಾಟ್ಯ ಪುರಸ್ಕಾರಂ (೨೦೨೧) ಕೇರಳ ಸರ್ಕಾರದಿಂದ ಉಲ್ಲೇಖಗಳು ಹೆಚ್ಚಿನ ಓದುವಿಕೆ ಸ್ಟಿಲ್ಸ್‌ನಲ್ಲಿನ ಚಲನೆ: ಕುಮುದಿನಿ ಲಖಿಯಾ ಅವರ ನೃತ್ಯ ಮತ್ತು ಜೀವನ (  ) ರೀನಾ ಶಾ ಅವರಿಂದ ಕುಮುದಿನಿ ಲಖಿಯಾ ಅವರಿಂದ ಭಾರತೀಯ ಸನ್ನಿವೇಶದಲ್ಲಿ ನೃತ್ಯ ಸಂಯೋಜನೆ, (ಮುಖ್ಯ ಭಾಷಣ ಫೆಬ್ರವರಿ 2002) ಬಾಹ್ಯ ಕೊಂಡಿಗಳು ಕದಂಬ್ ವೆಬ್‌ಸೈಟ್ ಕುಮುದಿನಿ ಲಖಿಯಾ ಸಂದರ್ಶನ nartaki.com ವಿಕಿಪೀಡಿಯ ಅನುವಾದ ಶಿಬಿರ ಲೇಖನ
152240
https://kn.wikipedia.org/wiki/%E0%B2%B0%E0%B2%BE%E0%B2%A3%E0%B3%80%20%E0%B2%A8%E0%B2%BE%E0%B2%B0%E0%B2%BE%E0%B2%B9%E0%B3%8D
ರಾಣೀ ನಾರಾಹ್
ರಾಣೀ ನಾರಾಹ್ (ಜಹನಾರಾ ಚೌಧರಿ; ಜನನ : ೩೧ ಅಕ್ಟೋಬರ್ ೧೯೬೫) ಅಸ್ಸಾಂ ಮೂಲದ ಭಾರತೀಯ ರಾಜಕಾರಣಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ಅವರು ೨೦೧೬ ರಿಂದ ೨೦೨೨ ರವರೆಗೆ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ ಅಸ್ಸಾಂ ಅನ್ನು ಪ್ರತಿನಿಧಿಸಿದರು. ಅವರು ೧೯೯೮ ರಿಂದ ೧೦೦೪ ರವರೆಗೆ ಮತ್ತು ೨೦೦೯ ರಿಂದ ೨೦೧೪ ರವರೆಗೆ ಲೋಕಸಭೆಯಲ್ಲಿ ಲಖಿಂಪುರವನ್ನು ಪ್ರತಿನಿಧಿಸಿದರು. ನಾರಾ ಅವರು ೨೦೧೨ ರಿಂದ ೨೦೧೪ ರವರೆಗೆ ಭಾರತ ಸರ್ಕಾರದಲ್ಲಿ ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ಇವರ ಪತಿ ಭರತ್ ನಾರಾಹ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯ ಮತ್ತು ನವೋಬೋಚಾದ ಶಾಸಕರೂ ಆಗಿದ್ದಾರೆ . ಜೀವನಚರಿತ್ರೆ ನಾರಾಹ್ ಅವರು ಗುವಾಹಾಟಿ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಅವರು ವೃತ್ತಿಪರ ಕ್ರಿಕೆಟ್‌ಗಾರ್ತಿ ಮತ್ತು ಅಸ್ಸಾಂ ರಾಜ್ಯ ತಂಡದ ನಾಯಕಿಯಾಗಿದ್ದರು. ಅವಳು ಭಾರತದ ಮಹಿಳಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಅಸ್ಸಾಂ ಮಹಿಳಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಅಸ್ಸಾಂ ಕ್ರಿಕೆಟ್ ಸಂಸ್ಥೆ ಮತ್ತು ಅಸ್ಸಾಂ ಫುಟ್ಬಾಲ್ ಸಂಸ್ಥೆಗಳ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತ ಮಹಿಳಾ ಸಮಿತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸದಸ್ಯರಾಗಿದ್ದರು. ಅದೇ ವರ್ಷದಲ್ಲಿ ಅವರು ಲಖಿಂಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಇವರು ೧೯೯೯ ಮತ್ತು ೨೦೦೯ ರಲ್ಲಿ ಲಖಿಂಪುರದಿಂದ ಮರು ಆಯ್ಕೆಯಾದರು. ನಾರಾ ಅವರು ೨೦೦೩ ರಲ್ಲಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಂಡಳಿಗೆ ಆಯ್ಕೆಯಾದರು. ಇವರು ೨೦೦೯ ರಲ್ಲಿ ಲೋಕಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉಪ ಮುಖ್ಯ ಸಚೇತಕರಾಗಿ ನೇಮಕಗೊಂಡರು. ೨೦೧೨ ರಲ್ಲಿ, ನಾರಾ ಅವರು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿ ಭಾರತದ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡರು. ೨೦೧೬ ರಲ್ಲಿ, ನಾರಾ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾದರು. ಅಸ್ಸಾಂ ವಿಧಾನಸಭೆಯ ಆರು ಅವಧಿಯ ಸದಸ್ಯ ಮತ್ತು ಅಸ್ಸಾಂ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಭರತ್ ನಾರಾಹ್ ಅವರನ್ನು ಇವರು ವಿವಾಹವಾದರು. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152241
https://kn.wikipedia.org/wiki/%E0%B2%85%E0%B2%97%E0%B2%BE%E0%B2%A5%E0%B2%BE%20%E0%B2%B8%E0%B2%82%E0%B2%97%E0%B3%8D%E0%B2%AE%E0%B2%BE
ಅಗಾಥಾ ಸಂಗ್ಮಾ
ಅಗಾಥಾ ಕೊಂಗಲ್ ಸಂಗ್ಮಾ (ಜನನ ೨೪ ಜುಲೈ ೧೯೮೦) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಮೇಘಾಲಯದ ತುರಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂದಸ್ಯರಾಗಿ ೨೯ ನೇ ವಯಸ್ಸಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಭಾರತ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ನೇಮಕಗೊಂಡ ಭಾರತದ ಸಂಸತ್ತಿನ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಅಸ್ಸಾಂನ ರೇಣುಕಾ ದೇವಿ ಬರ್ಕಟಕಿ ನಂತರ ಭಾರತ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ನೇಮಕಗೊಂಡ ಈಶಾನ್ಯ ಭಾರತದ ಎರಡನೇ ಮಹಿಳೆ ಸಂಗ್ಮಾ. ಇವರು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಸದಸ್ಯೆ. ಆರಂಭಿಕ ಮತ್ತು ವೈಯಕ್ತಿಕ ಜೀವನ ಅಗಾಥಾ ಸಂಗ್ಮಾ ಅವರು ಲೋಕಸಭೆಯ ಮಾಜಿ ಸ್ಪೀಕರ್ ಪಿಎ ಸಂಗ್ಮಾ ಮತ್ತು ಸೊರದಿನಿ ಕೆ. ಸಂಗ್ಮಾ ಅವರ ಮಗಳಾಗಿ ನವದೆಹಲಿಯಲ್ಲಿ ಜನಿಸಿದರು. ಇವರು ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್‌ನಲ್ಲಿ ಬೆಳೆದರು. ಇವರ ಸಹೋದರ ಕಾನ್ರಾಡ್ ಸಂಗ್ಮಾ ಮೇಘಾಲಯ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅಗಾಥಾ ೨೧ ನವೆಂಬರ್ ೨೦೧೯ ರಂದು ಡಾ. ಪ್ಯಾಟ್ರಿಕ್ ರೊಂಗ್ಮಾ ಮರಕ್ ಅವರನ್ನು ವಿವಾಹವಾದರು. ಶಿಕ್ಷಣ ಇವರು ಪುಣೆ ವಿಶ್ವವಿದ್ಯಾನಿಲಯದಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದರು. ನಂತರ ದೆಹಲಿ ಹೈಕೋರ್ಟ್‌ನಲ್ಲಿ ಸೇರಿದರು. ಇವರು ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಪರಿಸರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವೃತ್ತಿ ಸಂಗ್ಮಾ ಅವರು ಮೇ ೨೦೦೮ ರಲ್ಲಿ ನಡೆದ ಉಪಚುನಾವಣೆಯಲ್ಲಿ ೧೪ ನೇ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅವರ ತಂದೆ ಪಿಎ ಸಂಗ್ಮಾ ಅವರು ರಾಜ್ಯ ರಾಜಕೀಯಕ್ಕೆ ಪ್ರವೇಶಿಸಲು ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರು ೧೫ ನೇ ಲೋಕಸಭೆಗೆ ಮರು ಆಯ್ಕೆಯಾದರು. ೨೯ ನೇ ವಯಸ್ಸಿನಲ್ಲಿ, ಸಂಗ್ಮಾ ಅವರು ಇಲ್ಲಿಯವರೆಗೆ ಭಾರತ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ನೇಮಕಗೊಂಡ ಅತ್ಯಂತ ಕಿರಿಯ ಅಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿದ್ದಾರೆ . ಸಂಗ್ಮಾ ಅವರು ಗ್ರಾಮೀಣಾಬಿವೃದ್ದಿ ಖಾತೆ ರಾಜ್ಯಸಚಿವರಾಗಿದ್ದಾರೆ . ಅಕ್ಟೋಬರ್ ೨೦೧೨ ರಲ್ಲಿ ಕ್ಯಾಬಿನೆಟ್ ಪುನರ್‌ ರಚನೆಯ ಸಮಯದಲ್ಲಿ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದರು. ಅವರು ೨೦೧೮ ರ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿ‌ಪಿ) ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಾರೆ ಎಂದು ನವೆಂಬರ್ ೨೦೧೭ ರಲ್ಲಿ ವರದಿಯಾಗಿದೆ. ಅವರು ದಕ್ಷಿಣ ತುರಾ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ೬,೪೯೯ ಮತಗಳನ್ನು ಗಳಿಸಿದರು. ಆದರೆ ತಮ್ಮ ಸಹೋದರನಿಗೆ ತಮ್ಮ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ದಾರಿ ಮಾಡಿಕೊಡುವ ಪ್ರಯತ್ನದಲ್ಲಿ ಅವರು ಸದನದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152244
https://kn.wikipedia.org/wiki/%E0%B2%AE%E0%B2%BE%E0%B2%AF%E0%B2%BE%20%E0%B2%B8%E0%B2%BF%E0%B2%82%E0%B2%97%E0%B3%8D
ಮಾಯಾ ಸಿಂಗ್
ಮಾಯಾ ಸಿಂಗ್ (ಜನನ ೧೫ ಆಗಸ್ಟ್ ೧೯೫೦). ಭಾರತೀಯ ಜನತಾ ಪಕ್ಷದ ಭಾರತೀಯ ರಾಜಕಾರಣಿ ಮತ್ತು ರಾಜ್ಯಸಭೆಯಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುವ ಮಾಜಿ ಸಂಸದೆ. ಅವರು ೨೦೧೬ ರವರೆಗೆ 'ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ' ಮತ್ತು ೨೦೧೬ ರಿಂದ ಡಿಸೆಂಬರ್ ೨೦೧೮ ರವರೆಗೆ 'ನಗರಾಭಿವೃದ್ಧಿ ಮತ್ತು ವಸತಿ' ಖಾತೆಯನ್ನು ಹೊಂದಿರುವ ಮಧ್ಯಪ್ರದೇಶ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ೮ ಡಿಸೆಂಬರ್ ೨೦೧೩ ರಂದು ಅವರು ಗ್ವಾಲಿಯರ್‌ನಲ್ಲಿ ೫೯,೮೨೪ ಮತಗಳೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಶಾಸಕರಾಗಿ ಆಯ್ಕೆಯಾದರು. ಉಲ್ಲೇಖಗಳು ಬಾಹ್ಯ ಕೊಂಡಿಗಳು ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಪ್ರೊಫೈಲ್ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152245
https://kn.wikipedia.org/wiki/%E0%B2%A6%E0%B2%B0%E0%B3%8D%E0%B2%B6%E0%B2%A8%E0%B2%BE%20%E0%B2%9D%E0%B2%B5%E0%B3%87%E0%B2%B0%E0%B2%BF
ದರ್ಶನಾ ಝವೇರಿ
ದರ್ಶನಾ ಝವೇರಿ (ಜನನ ೧೯೪೦), ನಾಲ್ಕು ಝವೇರಿ ಸಹೋದರಿಯರಲ್ಲಿ ಕಿರಿಯವರು. ಇವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಮಣಿಪುರಿ ನೃತ್ಯದ ಪ್ರಮುಖ ಭಾರತೀಯ ನೃತ್ಯಗಾರ್ತಿ. ಅವರು ಗುರು ಬಿಪಿನ್ ಸಿಂಗ್ ಅವರ ಶಿಷ್ಯೆ ಮತ್ತು ೧೯೫೮ ರಲ್ಲಿ ತಮ್ಮ ಸಹೋದರಿಯರೊಂದಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಅವರು ೧೯೭೨ ರಲ್ಲಿ ಸ್ಥಾಪನೆಯಾದ ಮಣಿಪುರಿ ನರ್ತನಾಲಯದ ಸಂಸ್ಥಾಪಕರಲ್ಲಿ ಒಬ್ಬರು. ಇದು ಭಾರತದಲ್ಲಿ ಮಣಿಪುರಿ ನೃತ್ಯವನ್ನು ಜನಪ್ರಿಯಗೊಳಿಸಿತು ಮತ್ತು ಪ್ರಸ್ತುತ ಅವರ ನೇತೃತ್ವದಲ್ಲಿ ಮುಂಬೈ, ಕೋಲ್ಕತ್ತಾ ಮತ್ತು ಇಂಫಾಲ್‌ನಲ್ಲಿ ಕೇಂದ್ರಗಳಿವೆ. ಆರಂಭಿಕ ಜೀವನ ಮತ್ತು ತರಬೇತಿ ದರ್ಶನಾ ಝವೇರಿ ಮುಂಬೈನಲ್ಲಿ ಗುಜರಾತಿನ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆರನೇ ವಯಸ್ಸಿನಲ್ಲಿ, ಅವರು ತಮ್ಮ ಹಿರಿಯ ಸಹೋದರಿಯರಾದ ನಯನಾ ಮತ್ತು ರಂಜನಾ ಅವರು ಮನೆಯಲ್ಲಿ ಗುರು ಬಿಪಿನ್ ಸಿಂಗ್ ಅವರಿಂದ ಮಣಿಪುರಿ ನೃತ್ಯವನ್ನು ಕಲಿಯುವುದನ್ನು ನೋಡಿದರು. ಶೀಘ್ರದಲ್ಲೇ, ಅವರೂ ತಮ್ಮ ಸಹೋದರಿ ಸುವರ್ಣರೊಂದಿಗೆ ನೃತ್ಯ ಪ್ರಕಾರವನ್ನು ಕಲಿಯಲು ಪ್ರಾರಂಭಿಸಿದರು. ನಂತರ ಅವರು ಸೂತ್ರಧಾರಿ ಕ್ಷೇತ್ರಿತೊಂಬಿ ದೇವಿಯಿಂದ ಸಾಂಪ್ರದಾಯಿಕ ರಾಸ್ಲೀಲಾ ನೃತ್ಯಗಳನ್ನು, ಗುರು ಮೈತೇಯಿ ತೋಂಬಾ ಸಿಂಗ್ ಅವರಿಂದ ನಾಟಾ ಪಂಗ್ ಮತ್ತು ಕುಮಾರ್ ಮೈಬಿ ಅವರಿಂದ ಸಾಂಪ್ರದಾಯಿಕ ಮೈಬಿ ಜಾಗೋಯ್ ಅನ್ನು ಕಲಿತರು. ವೃತ್ತಿ ೧೯೫೦ ರ ಹೊತ್ತಿಗೆ ಝವೇರಿ ಸಹೋದರಿಯರು – ನಯನಾ, ರಂಜನಾ, ಸುವರ್ಣ, ಮತ್ತು ದರ್ಶನ  ಭಾರತದಾದ್ಯಂತ ಮತ್ತು ವಿದೇಶಗಳ ವೇದಿಕೆಯಲ್ಲಿ ಒಟ್ಟಾಗಿ ಪ್ರದರ್ಶನ ನೀಡಲು ಪ್ರಾರಂಭಿಸಿದರು. ೧೯೫೬ ರಲ್ಲಿ ಇಂಫಾಲ್ ರಾಜಮನೆತನದೊಳಗಿನ ಗೋವಿಂದಜಿ ದೇವಾಲಯದಲ್ಲಿ ತಮ್ಮ ನೃತ್ಯಗಳನ್ನು ಪ್ರದರ್ಶಿಸಿದ ಮೊದಲ ಮಣಿಪುರಿಯೇತರರು ಅಂತಿಮವಾಗಿ ಸಹೋದರಿಯರು ತಮ್ಮ ಗುರು ಮತ್ತು ಕಲಾವತಿ ದೇವಿಯೊಂದಿಗೆ ೧೯೭೨ ರಲ್ಲಿ ಮುಂಬೈ, ಕೋಲ್ಕತ್ತಾ ಮತ್ತು ಇಂಫಾಲ್ ನಲ್ಲಿ ಮಣಿಪುರಿ ನರ್ತನಾಲಯವನ್ನು ಸ್ಥಾಪಿಸಿದರು. ಕಾಲಾನಂತರದಲ್ಲಿ ಅವರ ಹೆಸರು ಮಣಿಪುರಿ ನೃತ್ಯಕ್ಕೆ ಸಮಾನಾರ್ಥಕವಾಯಿತು. ವರ್ಷಗಳಲ್ಲಿ ದರ್ಶನಾ ಅವರು ನೃತ್ಯದ ಕುರಿತು ಹಲವಾರು ಪುಸ್ತಕಗಳು ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಅವರ ಜೀವಿತಾವಧಿಯಲ್ಲಿ, ಬೋಧನೆ, ಸಂಶೋಧನೆ ಮತ್ತು ನೃತ್ಯ ಸಂಯೋಜನೆಯಲ್ಲಿ ಸ್ವತಃ ನಿಲುವುಗಳನ್ನು ತೆಗೆದುಕೊಳ್ಳುವ ಮೊದಲು ಅವರ ಗುರುಗಳಿಗೆ ಸಹಾಯ ಮಾಡಿದ್ದಾರೆ. ೨೦೦೮ ರ ಲೇಖನವೊಂದರಲ್ಲಿ ಪ್ರಸಿದ್ಧ ನೃತ್ಯ ವಿಮರ್ಶಕ ಸುನಿಲ್ ಕೊಠಾರಿ ಪ್ರಕಾರ, ಅವರು "ಮಣಿಪುರಿ ನೃತ್ಯದ ದೇವಾಲಯದ ಸಂಪ್ರದಾಯವನ್ನು ನಗರಗಳಿಗೆ ತರುವ ಜವಾಬ್ದಾರಿಯನ್ನು ಹೊಂದಿದ್ದಾರೆ". ನಯನಾ ಅವರು ಎರಡು ದಶಕಗಳ ಹಿಂದೆ ನಿಧನರಾದರು ಮತ್ತು ಸುವರ್ಣಾ ಅಸ್ವಸ್ಥರಾಗಿದ್ದರಿಂದ, ರಂಜನಾ ಮತ್ತು ದರ್ಶನಾ ಅವರು ತಮ್ಮ ನೃತ್ಯ ತಂಡದೊಂದಿಗೆ ಪ್ರದರ್ಶನವನ್ನು ಮುಂದುವರೆಸಿದರು. ಇವರು ಮಣಿಪುರಿ ನೃತ್ಯವನ್ನು ಕಲಿಸುತ್ತಾರೆ. ಪ್ರಶಸ್ತಿಗಳು ಮತ್ತು ಗೌರವಗಳು ದರ್ಶನ ಝವೇರಿ ಅವರು ೧೯೯೬ ರಲ್ಲಿ ಸಂಗೀತ ನಾಟಕ ಅಕಾಡೆಮಿ, ಭಾರತದ ರಾಷ್ಟ್ರೀಯ ನೃತ್ಯ, ಸಂಗೀತ ಮತ್ತು ನಾಟಕ ಅಕಾಡೆಮಿಯಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಅವರಿಗೆ ೨೦೦೨ ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರಿಗೆ ೨೦೧೮ ರಲ್ಲಿ ಕಾಳಿದಾಸ್ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು. ಟಿಪ್ಪಣಿಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152246
https://kn.wikipedia.org/wiki/%E0%B2%A6%E0%B2%AE%E0%B2%AF%E0%B2%82%E0%B2%A4%E0%B2%BF%20%E0%B2%9C%E0%B3%8B%E0%B2%B6%E0%B2%BF
ದಮಯಂತಿ ಜೋಶಿ
ದಮಯಂತಿ ಜೋಶಿ ( ೫ ಸೆಪ್ಟೆಂಬರ್ ೧೯೨೮ - ೧೯ ಸೆಪ್ಟೆಂಬರ್ ೨೦೦೪) ಅವರು ಕಥಕ್ ನೃತ್ಯ ಪ್ರಕಾರದ ಹೆಸರಾಂತ ನೃತ್ಯಗಾರ್ತಿಯಾಗಿದ್ದರು. ಕಥಕ್ ಎಂಬುದು ಕಥೆ ಹೇಳುವ ಕಲೆ ಎಂದು ಅವರು ನಂಬಿದ್ದರು. ಅವರು ೧೯೩೦ ರ ದಶಕದಲ್ಲಿ ಅವರು ಮೇಡಮ್ ಮೇನಕಾ ಅವರ ತಂಡದಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ಇದು ಪ್ರಪಂಚದ ಅನೇಕ ಭಾಗಗಳಿಗೆ ಅವರನ್ನು ಕೊಂಡೊಯ್ಯಿತು. ಅವರು ಜೈಪುರ ಘರಾನಾದ ಸೀತಾರಾಮ್ ಪ್ರಸಾದ್ ಅವರಿಂದ ಕಥಕ್ ನೃತ್ಯ ಕಲಿತರು ಮತ್ತು ಚಿಕ್ಕ ವಯಸ್ಸಿನಲ್ಲೇ ಪ್ರವೀಣ ನರ್ತಕಿಯಾದರು. ನಂತರ ಲಕ್ನೋ ಘರಾನಾದ ಅಚ್ಚನ್ ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಶಂಭು ಮಹಾರಾಜ್ ಅವರಿಂದ ತರಬೇತಿ ಪಡೆದರು. ಹೀಗೆ ಎರಡೂ ಸಂಪ್ರದಾಯಗಳಿಂದ ಸೂಕ್ಷ್ಮ ವ್ಯತ್ಯಾಸಗಳನ್ನು ಅಳವಡಿಸಿಕೊಂಡರು. ಅವರು ೧೯೫೦ ರ ದಶಕದಲ್ಲಿ ಸ್ವತಂತ್ರ ನೃತ್ಯಗಾರ್ತಿಯಾದರು ಮತ್ತು ೧೯೬೦ ರ ದಶಕದಲ್ಲಿ ಪ್ರಾಮುಖ್ಯತೆಯನ್ನು ಗಳಿಸಿದರು. ಮೊದಲು ಮುಂಬೈನಲ್ಲಿ ಅವರು ನೃತ್ಯ ಶಾಲೆಯಲ್ಲಿ ಗುರುವಾಗಿದ್ದರು. ಅವರು ೧೯೭೦ ರಲ್ಲಿ ಪದ್ಮಶ್ರೀ, ೧೯೬೮ ರಲ್ಲಿ ನೃತ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು ಮತ್ತು ಲಕ್ನೋದ ಯುಪಿ ಕಥಕ್ ಕೇಂದ್ರದ ನಿರ್ದೇಶಕರಾಗಿ ಉಳಿದಿದ್ದರು. ಆರಂಭಿಕ ಜೀವನ ಮತ್ತು ತರಬೇತಿ ಇವರು ೧೯೨೮ ರಲ್ಲಿ ಮುಂಬೈನಲ್ಲಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರು ಜನರಲ್ ಡಾ ಸಾಹಿಬ್ ಸಿಂಗ್ ಸೋಖೆ ಮತ್ತು ಮೇಡಮ್ ಮೇನಕಾ ಎಂದು ಪ್ರಸಿದ್ಧರಾದ, ಅವರ ಪತ್ನಿ ಲೀಲಾ ಸೋಖೆ (ಜನನ ರಾಯ್) ಅವರ ಮನೆಯಲ್ಲಿ ಬೆಳೆದರು. ಮೇನಕಾ ತಮ್ಮ ಸ್ವಂತ ಮಗುವನ್ನು ಕಳೆದುಕೊಂಡಿದ್ದರು ಮತ್ತು ಅವರು ಜೋಶಿಯವರನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಜೋಶಿಯವರ ತಾಯಿ ವತ್ಸಲಾ ಜೋಶಿಯವರು ತಮ್ಮ ಮಗಳನ್ನು ಬಿಟ್ಟುಕೊಡಲಿಲ್ಲ. ನಂತರ ಅವರು ಜಂಟಿ ಪೋಷಕರಾಗಲು ಒಪ್ಪಿಕೊಂಡರು. ಆರಂಭದಲ್ಲಿ ದೇವಾಲಯಗಳಲ್ಲಿ ಪ್ರದರ್ಶನ ನೀಡಲಾಯಿತು. ಮೇನಕಾ ಅವರ ತಂಡದಲ್ಲಿ ಅವರು ಪಂಡಿತ್ ಸೀತಾರಾಮ್ ಪ್ರಸಾದ್ ಅವರಿಂದ ಕಥಕ್ ಬಗ್ಗೆ ಕಲಿತರು. ಅವರು ಮೇನಕಾ ಅವರ ತಂಡದಲ್ಲಿ ಪ್ರವಾಸ ಮಾಡಿದರು. ಹತ್ತು ವರ್ಷಗಳ ನಂತರ, ಅವರು ೧೫ ವರ್ಷದವರಿದ್ದಾಗ ಅವರು ಯುರೋಪಿಯನ್ ಪ್ರಮುಖ ನಗರಗಳಲ್ಲಿ ಪ್ರದರ್ಶನ ನೀಡಿದರು. ಸೋಖೇಯರು ದಮಯಂತಿಯ ತಾಯಿಯನ್ನು ನೇಮಿಸಿಕೊಂಡರು ಮತ್ತು ಜೋಶಿಯವರು ಶಿಕ್ಷಣವನ್ನು ಪಡೆದರು. ಅವರು ಮುಂಬೈನ ಶ್ರೀ ರಾಜರಾಜೇಶ್ವರಿ ಭರತ ನಾಟ್ಯ ಕಲಾ ಮಂದಿರದಲ್ಲಿ ಮೊದಲ ವಿದ್ಯಾರ್ಥಿಯಾಗಿದ್ದರು. ಅಲ್ಲಿ ಅವರು ಗುರು ಟಿಕೆ ಮಹಾಲಿಂಗಂ ಪಿಳ್ಳೈ ಅವರಿಂದ ಭರತ ನಾಟ್ಯವನ್ನು ಕಲಿತರು. ವೃತ್ತಿ ೧೯೫೦ ರ ದಶಕದ ಮಧ್ಯಭಾಗದ ನಂತರ ದಮಯಂತಿ ಲಕ್ನೋ ಘರಾನಾದ ಪಂಡಿತರು, ಅಚ್ಚನ್ ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಶಂಭು ಮಹಾರಾಜ್ ಮತ್ತು ಜೈಪುರ ಘರಾನಾದ ಗುರು ಹೀರಾಲಾಲ್ ಅವರಿಂದ ತರಬೇತಿ ಪಡೆದು ಯಶಸ್ವಿಯಾದ ಏಕ್ಕೆಕ ವ್ಯಕ್ತಿಯಾಗಿದ್ದರು. ಕಥಕ್ ನೃತ್ಯಗಾರ್ತಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ವಿಶೇಷವಾಗಿ ಕಥಕ್ ನೃತ್ಯದಲ್ಲಿ " ಸೀರೆ " ಅನ್ನು ವೇಷಭೂಷಣವಾಗಿ ಪರಿಚಯಿಸಿದ ಮೊದಲ ವ್ಯಕ್ತಿಯಾದ ದೆಹಲಿಯ ಕಥಕ್ ಕೇಂದ್ರದ ಶಂಭು ಮಹಾರಾಜರ ಬಳಿ ತರಬೇತಿ ಪಡೆದರು. ಅವರು ಇಂದಿರಾ ಕಲಾ ವಿಶ್ವವಿದ್ಯಾಲಯ, ಖೈರಾಘರ್ ಮತ್ತು ಲಕ್ನೋದ ಕಥಕ್ ಕೇಂದ್ರದಲ್ಲಿ ಕಥಕ್ ಕಲಿಸಿದರು. ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೬೮) ಮತ್ತು ಪದ್ಮಶ್ರೀ (೧೯೭೦) ನೀಡಿ ಗೌರವಿಸಲಾಗಿದೆ. ಅವರು ಬೀರೇಶ್ವರ ಗೌತಮನಿಗೆ ಗುರುವೂ ಆಗಿದ್ದರು. ೧೯೭೧ ರಲ್ಲಿ ಭಾರತ ಸರ್ಕಾರದ ಚಲನಚಿತ್ರ ವಿಭಾಗದಿಂದ ಕಥಕ್‌ನ ಸಾಕ್ಷ್ಯಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹುಕುಮತ್ ಸರಿನ್ ನಿರ್ದೇಶಿಸಿದ "ದಮಯಂತಿ ಜೋಶಿ" ಎಂಬ ಇನ್ನೊಂದು ಚಲನಚಿತ್ರವನ್ನು ೧೯೭೩ ರಲ್ಲಿ ನಿರ್ಮಿಸಲಾಯಿತು. ದಮಯಂತಿ ಜೋಶಿ ಅವರು ಮುಂಬೈನಲ್ಲಿ ಸೆಪ್ಟೆಂಬರ್ ೧೯, ೨೦೦೪ ರಂದು ಭಾನುವಾರದಂದು ತಮ್ಮ ಮನೆಯಲ್ಲಿ ನಿಧನರಾದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಪಾರ್ಶ್ವವಾಯು ದಾಳಿಗೆ ಒಳಗಾದ ನಂತರ ಸುಮಾರು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಕೃತಿಗಳು ಮೇನಕಾ ಮೇನಕಾ, ದಮಯಂತಿ ಜೋಶಿ ಅವರಿಂದ ಸಂಗೀತ ನಾಟಕ ಅಕಾಡೆಮಿ ೧೯೮೯. ರಿಡಿಸ್ಕವರಿಂಗ್ ಇಂಡಿಯಾ, ಇಂಡಿಯನ್ ಫಿಲಾಸಫಿ ಲೈಬ್ರರಿ: ಪ್ರಜೆಶ್ ಬ್ಯಾನರ್ಜಿ, ದಮಯಂತಿ ಜೋಶಿ ಅವರಿಂದ ಕಥಕ್ ನೃತ್ಯ. ''ಕಾಸ್ಮೊ ಪ್ರಕಟಣೆಗಳು ೧೯೯೦. ಸಹ ನೋಡಿ ನೃತ್ಯಗಾರರ ಪಟ್ಟಿ ಉಲ್ಲೇಖಗಳು
152247
https://kn.wikipedia.org/wiki/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%BF%20%E0%B2%B8%E0%B3%8B%E0%B2%AE%E0%B2%A8%E0%B2%BE%E0%B2%A5%E0%B3%8D
ಸ್ವಾತಿ ಸೋಮನಾಥ್
ಸ್ವಾತಿ ಸೋಮನಾಥ್ ಒಬ್ಬ ಭಾರತೀಯ ಕೂಚಿಪುಡಿ ನೃತ್ಯಗಾರ್ತಿ ಮತ್ತು ಆಂಧ್ರ ಪ್ರದೇಶ ರಾಜ್ಯದ ನೃತ್ಯ ಶಿಕ್ಷಕಿ. ಅವರು ಕಾಮಸೂತ್ರ, ಕಾಮಪ್ರಚೋದಕ ಪ್ರೇಮದ ಮೇಲೆ ಹಿಂದೂ ಸಾಹಿತ್ಯದ ಆಧಾರದ ಮೇಲೆ ಬ್ಯಾಲೆ ನೃತ್ಯ ಪ್ರದರ್ಶಿಸಿದರು. ಅದರ ಮೂಲಕ ಅವರು ಮನ್ನಣೆಯನ್ನೂ ಗಳಿಸಿದರು. ಅವರು ೨೦೦೬ ರಲ್ಲಿ ಕಲಾ ರತ್ನ ಪ್ರಶಸ್ತಿಯನ್ನು ಪಡೆದರು. ಅವರು ಹೈದರಾಬಾದ್‌ನಲ್ಲಿ ನೃತ್ಯ ಭಾರತಿ ಮತ್ತು ಶ್ರೀಕಾಕುಳಂ ಜಿಲ್ಲೆಯಲ್ಲಿ ಸಂಪ್ರದಾಯಿಕ ನೃತ್ಯ ಮತ್ತು ಸಂಗೀತ ಕೇಂದ್ರವನ್ನು ಸ್ಥಾಪಿಸಿದರು. ವೈಯಕ್ತಿಕ ಜೀವನ ಸ್ವಾತಿ ಬಿಹಾರದ ಚಕ್ರಧರಪುರದಲ್ಲಿ ಹಿಂದೂ ಬ್ರಾಹ್ಮಣ ಕುಟುಂಬದ, ಭಾರತೀಯ ರೈಲ್ವೇ ಉದ್ಯೋಗಿ ಸೋಮನಾಥ್ ಮತ್ತು ಲಕ್ಷ್ಮಿ ದಂಪತಿಗೆ ಜನಿಸಿದರು. ಅವರ ಕುಟುಂಬ ಶ್ರೀಕಾಕುಳಂ ಜಿಲ್ಲೆಯ ದೂಸಿ ಅಗ್ರಹಾರದಿಂದ ಬಂದಿದೆ. ಅವರಿಗೆ ಒಬ್ಬ ಸಹೋದರ ಇದ್ದಾರೆ, ಅವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಾರೆ. ಅವರು ಹೈದರಾಬಾದ್‌ಗೆ ತೆರಳುವ ಮೊದಲು ಪಶ್ಚಿಮ ಬಂಗಾಳದಲ್ಲಿ ಬೆಳೆದರು. ಅವರು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಕೂಚಿಪುಡಿಯಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು, ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಮಾಡಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆಯುತ್ತಿದ್ದಾರೆ. ಅವರು ತೆಲುಗು ಚಿತ್ರರಂಗದಲ್ಲಿ ಚಲನಚಿತ್ರ ನಿರ್ದೇಶಕರಾದ ಚೆವೆಲ್ಲಾ ರವಿ ಕುಮಾರ್ ಅವರನ್ನು ವಿವಾಹವಾದರು. ಕೂಚಿಪುಡಿ ನೃತ್ಯ ಸ್ವಾತಿ ಅವರು ಶಾಲಾ ದಿನಗಳಲ್ಲಿ ಲಂಬಾಣಿ ನೃತ್ಯ ಮಾಡಿದ್ದರು. ಅವರು ೧೧ ವರ್ಷದವರಿದ್ದಾಗ ನೃತ್ಯ ಕಲಿಯಲು ಪ್ರಾರಂಭಿಸಿದರು. ನಂತರ ನಾಲ್ಕು ವರ್ಷಗಳ ಕಾಲ ಸುಮತಿ ಕುಶಲ್ ಅವರಿಂದ ಕೂಚಿಪುಡಿ ಮತ್ತು ಭರತನಾಟ್ಯವನ್ನು ಕಲಿತರು. ಮಾಧ್ಯಮಿಕ ಶಾಲೆಯನ್ನು ಪೂರ್ಣಗೊಳಿಸಿದ ನಂತರ, ಅವರು ಆಗಸ್ಟ್ ೧೯೮೦ ರಲ್ಲಿ ರವೀಂದ್ರ ಭಾರತೀಯ ವೇದಿಕೆಯಲ್ಲಿ ಪಾದಾರ್ಪಣೆ ಮಾಡಿದರು. ೧೯೮೧ ರಲ್ಲಿ ಅವರ ತಂದೆಯ ಮರಣದ ನಂತರ, ಅವರ ಕುಟುಂಬವು ಕೆಳ ಮಧ್ಯಮ ವರ್ಗದಲ್ಲಿದ್ದ ಕಾರಣ, ಅವರು ತಮ್ಮ ಮನೆಯನ್ನು ಆರ್ಥಿಕವಾಗಿ ಮುನ್ನಡೆಸಲು ತಮ್ಮ ಪ್ರದರ್ಶನಗಳನ್ನು ಮುಂದುವರೆಸಿದರು. ಅವರು ಪ್ರದರ್ಶನ ಮತ್ತು ಮುಂದಿನ ಶಿಕ್ಷಣವನ್ನು ಏಕಕಾಲದಲ್ಲಿ ಮುಂದುವರೆಸಿದರು. ಸ್ವಲ್ಪ ಸಮಯದ ನಂತರ, ಅವರು ೧೬ ನೇ ವಯಸ್ಸಿನಲ್ಲಿ ತಮ್ಮದೇ ಆದ ಆರ್ಕೆಸ್ಟ್ರಾವನ್ನು ರಚಿಸಿದರು ಮತ್ತು ತಮ್ಮದೇ ಆದ ಪ್ರದರ್ಶನವನ್ನು ಪ್ರಾರಂಭಿಸಿದರು. ತಮ್ಮ ತಂದೆಯ ನೆನಪಿಗಾಗಿ, ಅವರು ತಮ್ಮ ಕೊನೆಯ ಹೆಸರನ್ನು ಸೋಮನಾಥ್ ಎಂದು ಬದಲಾಯಿಸಿದರು. ವಾತ್ಸಾಯನ ಕಾಮಪ್ರಚೋದಕ ಪ್ರೇಮ ಹಿಂದೂ ಸಾಹಿತ್ಯ, ಕಾಮಸೂತ್ರವನ್ನು ಆಧರಿಸಿದ ಅವರ ಮ್ಯಾಲೆ ವಾತ್ಸಾಯನಿ ಕಾಮಸೂತ್ರವು ಅಪಾರ ಮನ್ನಣೆಯನ್ನು ಗಳಿಸಿತು. ಇದು ರಸಿಕರಲ್ಲಿ ಸ್ವೀಕರಿಸಲ್ಪಟ್ಟಿತು ಮತ್ತು ವೇದಿಕೆಯಲ್ಲಿ ಶೃಂಗಾರ ಉಲ್ಲೇಖಿಸಿ ಸಂಪ್ರದಾಯವಾದಿ ನೃತ್ಯಗಾರರು ಟೀಕಿಸಿದರು. ಅವರು ೧೯೯೦ರ ದಶಕದಲ್ಲಿ ಹೈದರಾಬಾದ್‌ನಲ್ಲಿ ನೃತ್ಯ ಭಾರತಿ ನೃತ್ಯ ಅಕಾಡೆಮಿಯನ್ನು ಸ್ಥಾಪಿಸಿದರು. ೨೦೧೫ ರಲ್ಲಿ, ಆಂಧ್ರ ಪ್ರದೇಶ ಸರ್ಕಾರವು ೧೨ - ೧೬ ಎಕರೆ ಜಾಗ ಮಂಜೂರು ಮಾಡಿ, ಶ್ರೀಕಾಕುಲಂ ಬಳಿಯ ಕಲ್ಲೇಪಲ್ಲಿ ಗ್ರಾಮದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಕಲಿಸಲು ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲು ಅವರನ್ನು ಬೆಂಬಲಿಸಿತು. ಆಂಧ್ರಪ್ರದೇಶ ಪ್ರಜಾ ನಾಟ್ಯಮಂಡಳಿ ಸೇರಿದಂತೆ ಇತರರು ಸರ್ಕಾರದ ಕ್ರಮವನ್ನು ಪ್ರತಿಭಟಿಸಿದರು ಮತ್ತು ಅವರು ಶ್ರೀಕಾಕುಳಂ ಜಿಲ್ಲೆಯಲ್ಲಿ ಬೆಳೆದವಳಲ್ಲವಾದ್ದರಿಂದ, ಭೂಮಿ ಹಂಚಿಕೆಗೆ ಪರ್ಯಾಯ ಸ್ಥಳೀಯ ನೃತ್ಯಗಾರರನ್ನು ಪರಿಗಣಿಸುವಂತೆ ಸೂಚಿಸಿದರು. ಅವರು ಅಂತಿಮವಾಗಿ ತಮ್ಮ ಗುರುಕುಲ ಅಕಾಡೆಮಿ, ಸಂಪ್ರದಾಯಂ ನೃತ್ಯ ಮತ್ತು ಸಂಗೀತ ಕೇಂದ್ರವನ್ನು ಸ್ಥಾಪಿಸಿದರು ಮತ್ತು ಕೂಚಿಪುಡಿ ಕಲಿಸುವುದರ ಜೊತೆಗೆ ಅದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರಕಾರ, ೧೫ ಆಗಸ್ಟ್ ೨೦೧೫ ರಂದು ಭಾರತೀಯ ಸ್ವಾತಂತ್ರ್ಯ ದಿನದಂದು ಈ ಸಂಸ್ಥೆಯ ಅಡಿಪಾಯ ಹಾಕಲಾಯಿತು. ಸಂಸ್ಥೆಯು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ ಮತ್ತು ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದ ಕೋರ್ಸ್‌ಗಳನ್ನು ನೀಡುತ್ತದೆ. ಅವರು ೧೦೦ ಕ್ಕೂ ಹೆಚ್ಚು ಬ್ಯಾಲೆಗಳಲ್ಲಿ ಅಭಿನಯಿಸಿದ್ದಾರೆ, ಅವುಗಳಲ್ಲಿ ಕೆಲವು ದ್ರೌಪದಿ ಆಧಾರಿತ ದ್ರೌಪದಿ, ಕಾಮಸೂತ್ರ ಆಧಾರಿತ ಕಾಮತೋ ಮೋಕ್ಷ, ಹಿಂದುತ್ವ, ಸಹೃಣಂ ಗೋವಿಂದಂ, ಸೌಂದರ್ಯ ದರ್ಶನ ರಾಮಾನುಜರ ಜೀವನ ಆಧಾರಿತ ಸೌಂದರ್ಯ ದರ್ಶನ, ಆದಿ ಶಂಕರರ ಜೀವನವನ್ನು ಆಧರಿಸಿದ ಸರ್ವಜ್ಞ ಶಂಕರ . ಡಿಡಿ ಯಾದಗಿರಿ ಅವರೊಂದಿಗಿನ ಸಂದರ್ಶನದಲ್ಲಿ, ಅವರು ಒಡಿಸ್ಸಿ ಶಾಸ್ತ್ರೀಯ ನೃತ್ಯವನ್ನು ಕಲಿತಿದ್ದರೂ ಮೂಲಭೂತ ವಿಷಯಗಳಿಗೆ ಸೀಮಿತವಾಗಿದ್ದರು. ಇತರೆ ಕೆಲಸ ಅವರು ಕೂಚಿಪುಡಿ, ನೃತ್ಯ, ನವದೆಹಲಿಗಾಗಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಮತ್ತು ಸೆಂಟ್ರಲ್ ಆಡಿಷನ್ ಬೋರ್ಡ್‌ನ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ, ಅವರು ಹೈದರಾಬಾದ್‌ನ ಸಂಗೀತ ಮತ್ತು ನೃತ್ಯ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿಗಳು ಸ್ವಾತಿ ಅವರು ಕೂಚಿಪುಡಿಗೆ ನೀಡಿದ ಕೊಡುಗೆಗಳಿಗಾಗಿ ೨೦೦೬ರಲ್ಲಿ ಯುನೈಟೆಡ್ ಆಂಧ್ರಪ್ರದೇಶ ಸರ್ಕಾರದಿಂದ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಟಿಪ್ಪಣಿಗಳು ಉಲ್ಲೇಖಗಳು ಬಾಹ್ಯ ಕೊಂಡಿಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152248
https://kn.wikipedia.org/wiki/%E0%B2%85%E0%B2%AA%E0%B2%B0%E0%B3%8D%E0%B2%A3%E0%B2%BE%20%E0%B2%AC%E0%B2%BF.%20%E0%B2%AE%E0%B2%BE%E0%B2%B0%E0%B2%BE%E0%B2%B0%E0%B3%8D
ಅಪರ್ಣಾ ಬಿ. ಮಾರಾರ್
ಅಪರ್ಣಾ ಬಿ. ಮಾರಾರ್ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ಸಂಘಟಕಿ, ಕಲಾ ಶಿಕ್ಷಣತಜ್ಞೆ , ನೃತ್ಯ ಸಂಯೋಜಕಿ ಮತ್ತು ಗಾಯಕಿ. ಅವರು ಪಿ‌ಎಸ್‌ಜಿ ಕಾಲೇಜ್ ಆಫ್ ಟೆಕ್ನಾಲಜಿಯಿಂದ ವೈರ್‌ಲೆಸ್ ಕಮ್ಯುನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಇಂಜಿನಿಯರ್ ಆಗಿದ್ದಾರೆ. ಕೇರಳ ಸಂಗೀತ ನಾಟಕ ಅಕಾಡೆಮಿಯ ಯುವ ಪ್ರತಿಭಾ ಪ್ರಶಸ್ತಿ, ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಕಲಾತಿಲಕಂ ಪ್ರಶಸ್ತಿ ಮತ್ತು ಸಂಸ್ಕೃತಿ ಸಚಿವಾಲಯದ ರಾಷ್ಟ್ರೀಯ ವಿದ್ಯಾರ್ಥಿವೇತನ ಸೇರಿದಂತೆ ಹಲವಾರು ಗೌರವಗಳನ್ನು ಅವರು ಪಡೆದಿದ್ದಾರೆ. ಅವರು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್‌ನ ಎಂಪನೆಲ್ಡ್ ಕಲಾವಿದೆ ಮತ್ತು ಅಮೇರಿಕನ್ ಡ್ಯಾನ್ಸ್ ಥೆರಪಿ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. ಅವರು ಕಲಾಭಾರತಿ ಫೌಂಡೇಶನ್ ಫಾರ್ ಇಂಡಿಯನ್ ಕಲ್ಚರ್ ಅಂಡ್ ಹೆರಿಟೇಜ್, ಲಾಭದಾಯಕವಲ್ಲದ ಸಾಂಸ್ಕೃತಿಕ ಸಂಘಟನೆಯ ನಿರ್ದೇಶಕರಾಗಿದ್ದಾರೆ, ನಿಯಮಿತವಾಗಿ ಉತ್ಸವಗಳು, ಕಾರ್ಯಾಗಾರಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಮಾರಾರ್ ಅವರು ಸಾಮಾನ್ಯ ಜನರು ಮತ್ತು ವಿದ್ಯಾರ್ಥಿಗಳ ಕಲಾ ರಸಗ್ರಹಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ವೃತ್ತಿಪರ ಜೀವನ ಮತ್ತು ವೃತ್ತಿ ಅವರು ಮೋಹಿನಿಯಾಟ್ಟಂನಲ್ಲಿರುವ ಕಲಾಮಂಡಲಂ ಕ್ಷೇಮಾವತಿಯ ವಿದ್ಯಾರ್ಥಿನಿ. ಅವರು ಇಸೈಮಣಿ ಆರ್. ವೈದ್ಯನಾಥ ಭಾಗವತರಲ್ಲಿ ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಾಗಿ ಕಲಾಭಾರತಿ ಫೌಂಡೇಶನ್‌ನ ಬ್ಯಾನರ್ ಅಡಿಯಲ್ಲಿ, ಮಾರಾರ್ ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿ ಯುವಕರನ್ನು ಉತ್ತೇಜಿಸಲು ಉತ್ಸವಗಳನ್ನು ಆಯೋಜಿಸುತ್ತಾರೆ. ಪ್ರಶಸ್ತಿಗಳು ಮತ್ತು ಗೌರವಗಳು ಮೋಹಿನಿಯಾಟ್ಟಂನಲ್ಲಿ ೨೦೧೦ ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿಯಿಂದ ಯುವಪ್ರತಿಭಾ ಪ್ರಶಸ್ತಿ ೨೦೦೯ ಮತ್ತು ೨೦೧೦ರಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಿಂದ ಕಲಾತಿಲಕಂ ಪ್ರಶಸ್ತಿಗಳು ೨೦೦೯ ಮತ್ತು ೨೦೧೦ ರ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಇಂಟರ್‌ಜೋನ್ ಕಲಾ ಉತ್ಸವದಲ್ಲಿ ಮೋಹಿನಿಯಾಟ್ಟಂ ಭರತನಾಟ್ಯಾದಲ್ಲಿ ಪ್ರಥಮ ಬಹುಮಾನ ಪಡೆದರು ಮೋಹಿನಿಯಾಟ್ಟಂ- ೨೦೦೯ರಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಯುವ ಕಲಾವಿದರಿಗೆ ವಿದ್ಯಾರ್ಥಿವೇತನವನ್ನು ಪಡೆದರು ತಿರುಪತಿಯಲ್ಲಿ ನಡೆದ೨೦೧೦ರ ಅಂತರ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಯುವ ಉತ್ಸವದಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ವಿಜೇತರು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್‌ನ ಎಂಪನೆಲ್ಡ್ ಕಲಾವಿದ ದೂರದರ್ಶನ, ಭಾರತದ ಶ್ರೇಣೀಕೃತ ಕಲಾವಿದ ಅಮೇರಿಕನ್ ಡ್ಯಾನ್ಸ್ ಥೆರಪಿ ಅಸೋಸಿಯೇಷನ್, ೨೦೧೪ ರ ಸಹಾಯಕ ಸದಸ್ಯ ೨೦೧೦ ರಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕುಂದುಕೊರತೆ ನಿವಾರಣಾ ಕೋಶದ ಸದಸ್ಯ ಅಂತರರಾಷ್ಟ್ರೀಯ ನೃತ್ಯ ಮಂಡಳಿಯ ಸದಸ್ಯ - ಯುನೆಸ್ಕೊ, ೨೦೧೧ ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152249
https://kn.wikipedia.org/wiki/%E0%B2%B8%E0%B3%8B%E0%B2%B9%E0%B2%BF%E0%B2%A8%E0%B2%BF%20%E0%B2%B0%E0%B3%87
ಸೋಹಿನಿ ರೇ
ಸೋಹಿನಿ ರೇ (ಜನನ ೨೫ ಆಗಸ್ಟ್ ೧೯೬೬) ಭಾರತದ ಶಾಸ್ತ್ರೀಯ ಮಣಿಪುರಿ ನೃತ್ಯಗಾರ್ತಿ, ನೃತ್ಯ-ಸಂಶೋಧಕಿ ಮತ್ತು ಮಾನವಶಾಸ್ತ್ರಜ್ಞೆ. ಇವರು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ. ಆರಂಭಿಕ ವೃತ್ತಿಜೀವನ ರೇ ಏಳನೇ ವಯಸ್ಸಿನಿಂದ ಕೋಲ್ಕತ್ತಾದ ಮಣಿಪುರಿ ನರ್ತನಾಲಯದಲ್ಲಿ ಗುರು ಬಿಪಿನ್ ಸಿಂಗ್, ದರ್ಶನ ಝವೇರಿ ಮತ್ತು ಕಲಾವತಿ ದೇವಿ ಅವರ ಬಳಿ ಮಣಿಪುರಿ ನೃತ್ಯವನ್ನು ಅಧ್ಯಯನ ಮಾಡಿದರು. ಅವರು ಹನ್ನೊಂದನೇ ವಯಸ್ಸಿನಲ್ಲಿ ಗುರು ಬಿಪಿನ್ ಸಿಂಗ್ ಅವರೊಂದಿಗೆ ದೀಕ್ಷಾ ಸಮಾರಂಭವನ್ನು ನಡೆಸಿದರು ಮತ್ತು ಹದಿನಾಲ್ಕನೇ ವಯಸ್ಸಿನಲ್ಲಿ ವೃತ್ತಿಪರವಾಗಿ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಅವರು ಹದಿನಾಲ್ಕನೇ ವಯಸ್ಸಿನಿಂದ ಗುರು ಬಿಪಿನ್ ಸಿಂಗ್ ಅವರ ಸಂಶೋಧನಾ ಸಹಾಯಕರಾಗಿದ್ದರು ಮತ್ತು ೧೯೮೨ ರಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಮಣಿಪುರಿ ನೃತ್ಯದಲ್ಲಿ ರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಪಡೆದರು. ಅದೇ ಸಮಯದಲ್ಲಿ ಅವರು ಕೋಲ್ಕತ್ತಾದ ಬಾಲಕಿಯರಿಗಾಗಿ ಮಾಡರ್ನ್ ಹೈಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ಅಲ್ಲಿ ಅವರು ಶಾಲೆಯ ಕಾರ್ಯಗಳಲ್ಲಿ ಸಹ ಪ್ರದರ್ಶನ ನೀಡಿದರು. ಶೈಕ್ಷಣಿಕ ವೃತ್ತಿಜೀವನ ರೇ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಮಾನವಶಾಸ್ತ್ರದಲ್ಲಿ ಬಿ.ಎಸ್‌ಸಿ ಮತ್ತು ಎಂ.ಎಸ್‌ಸಿ ಪದವಿಗಳನ್ನು ಪಡೆದರು. ನಂತರ, ಅವರು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ನೃತ್ಯದಲ್ಲಿ ಎಂಎ ಮತ್ತು ಮಾನವಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದರು. ಅವರು ಹಾರ್ವರ್ಡ್ ಡಿವಿನಿಟಿ ಸ್ಕೂಲ್‌ನ ಸೆಂಟರ್ ಫಾರ್ ದಿ ಸ್ಟಡಿ ಆಫ್ ವರ್ಲ್ಡ್ ರಿಲಿಜಿಯನ್ಸ್‌ನಲ್ಲಿ ಫೆಲೋ ಆಗಿದ್ದರು ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಮಾನವಿಕ ಸಂಶೋಧನಾ ಸಂಸ್ಥೆ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಇರ್ವಿನ್ನಲ್ಲಿ ಅಧ್ಯಾಪಕ ಫೆಲೋ ಆಗಿದ್ದರು. ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಇರ್ವಿನ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸಾಂಟಾ ಬಾರ್ಬರಾ ಮತ್ತು ಸಾಂಟಾ ಮೋನಿಕಾ ಕಾಲೇಜಿನಲ್ಲಿ ಬೋಧಿಸಿದ್ದಾರೆ ಮತ್ತು ಅನೇಕ ಪ್ರಕಟಣೆಗಳನ್ನು ಹೊಂದಿದ್ದಾರೆ. ನೃತ್ಯ ವೃತ್ತಿಜೀವನ ಸೋಹಿನಿ ರೇ ದಕ್ಷಿಣ ಕ್ಯಾಲಿಫೋರ್ನಿಯಾದ ಮಣಿಪುರಿ ಡ್ಯಾನ್ಸ್ ವಿಷನ್ಸ್ - ಇನ್ಸ್ಟಿಟ್ಯೂಟ್ ಆಫ್ ಮಣಿಪುರಿ ಡ್ಯಾನ್ಸ್ ನ ಸ್ಥಾಪಕಿ ಮತ್ತು ಕಲಾತ್ಮಕ ನಿರ್ದೇಶಕಿಯಾಗಿದ್ದಾರೆ. ಅವರು ಶಾಸ್ತ್ರೀಯ ಮಣಿಪುರಿ ನೃತ್ಯದಲ್ಲಿ ಅನೇಕ ನಿರ್ಮಾಣಗಳನ್ನು ಪ್ರದರ್ಶಿಸಿದ್ದಾರೆ, ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. ಅವುಗಳೆಂದರೆ ಹರಾವ್-ಕುಮ್ಮಿ: ಮಣಿಪುರಿ ನೃತ್ಯದಲ್ಲಿ ಸಂತೋಷದ ಆಚರಣೆಗಳು, ಗೀತಾ-ಗೋವಿಂದ, ಕೃಷ್ಣ-ನಿಂಗ್ಶಿಂಗ್ಬಾ ಮತ್ತು ಯುರೋಪ್ ಮತ್ತು ಉತ್ತರ ಅಮೆರಿಕಾ ಮತ್ತು ಭಾರತದಲ್ಲಿ ಪ್ರದರ್ಶಿಸಿದ್ದಾರೆ ಮತ್ತು ಪ್ರವಾಸ ಮಾಡಿದ್ದಾರೆ. ಶೈಕ್ಷಣಿಕ ಪ್ರಶಸ್ತಿಗಳು ಮತ್ತು ಸಾಧನೆಗಳು ಇವರಿಗೆ ಜುಬಿಲಿ ಪ್ರಶಸ್ತಿ, ಕಲ್ಕತ್ತಾ ವಿಶ್ವವಿದ್ಯಾಲಯ, ೧೯೮೮ ರಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿವೇತನ, ಕಲ್ಕತ್ತಾ ವಿಶ್ವವಿದ್ಯಾಲಯ, ೧೯೮೮ ರಲ್ಲಿ ಭಾರತ ವಿಶ್ವವಿದ್ಯಾಲಯ ಚಿನ್ನದ ಪದಕ, ಕಲ್ಕತ್ತಾ ವಿಶ್ವವಿದ್ಯಾಲಯ, ೨೦೧೧ ರಲ್ಲಿ ಮಾನವಶಾಸ್ತ್ರದಲ್ಲಿ ಜೆಬಿ ಡೊನ್ನೆ ಪ್ರಶಸ್ತಿ, ೨೦೦೯ ರಾಯಲ್ ಆಂಥ್ರೊಪೊಲಾಜಿಕಲ್ ಇನ್ಸ್ಟಿಟ್ಯೂಟ್ ‌ನಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನೃತ್ಯ ಪ್ರಶಸ್ತಿಗಳು ಮತ್ತು ಸಾಧನೆಗಳು ೧೯೮೨-೧೯೮೬ ರಿಂದ ಭಾರತ ಸರ್ಕಾರದಿಂದ ರಾಷ್ಟ್ರೀಯ ವಿದ್ಯಾರ್ಥಿವೇತನ, ಮಣಿಪುರಿ ನೃತ್ಯದಲ್ಲಿ ಪ್ರಥಮ ಬಹುಮಾನ, ಸಂಗೀತೋತ್ಸವ, ೧೯೮೮ ಶೃಂಗಾರ್-ಮಣಿ ಪ್ರಶಸ್ತಿ, ಕಲ್-ಕೆ-ಕಲಾಕಾರ್ ಸಂಗೀತ ಸಮ್ಮೇಳನ, ಮುಂಬೈ, ೧೯೮೮ ನರತನ್ ಆಚಾರ್ಯ, ಮಣಿಪುರಿ ನರ್ತನಾಲಯ, ಕೋಲ್ಕತಾ, ೧೯೯೯ ಎಲೈನ್ ವೈಸ್ಮನ್ ಲಾಸ್ ಏಂಜಲೀಸ್ ಟ್ರೆಷರ್ಸ್ ಅವಾರ್ಡ್, ಕ್ಯಾಲಿಫೋರ್ನಿಯಾ ಟ್ರೆಡಿಷನಲ್ ಮ್ಯೂಸಿಕ್ ಸೊಸೈಟಿ, ೨೦೦೭ ನಾಮನಿರ್ದೇಶನ, ಲೆಸ್ಟರ್ ಹಾರ್ಟನ್ ಪ್ರಶಸ್ತಿ, ೨೦೦೭ ವಿಜೇತ, ಲೆಸ್ಟರ್ ಹಾರ್ಟನ್ ಪ್ರಶಸ್ತಿ, ೨೦೦೮ ನಾಮನಿರ್ದೇಶನ, ಲೆಸ್ಟರ್ ಹಾರ್ಟನ್ ಪ್ರಶಸ್ತಿ, ೨೦೧೦ ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152250
https://kn.wikipedia.org/wiki/%E0%B2%AE%E0%B2%BE%E0%B2%B0%E0%B3%8D%E0%B2%97%E0%B2%BF%20%E0%B2%B8%E0%B2%A4%E0%B2%BF
ಮಾರ್ಗಿ ಸತಿ
ಮಾರ್ಗಿ ಸತಿ (ಅಧಿಕೃತ ಹೆಸರು ಪಿ. ಎಸ್ ಸತಿ ದೇವಿ) (೧೯೬೫ - ೨೦೧೫) ಕೂಡಿಯಾಟಮ್‌ನಿಂದ ಪಡೆದ ಪ್ರದರ್ಶನ ಕಲೆಯ ಒಂದು ರೂಪವಾದ, ಕೇರಳದ ಚಾಕ್ಯಾರ್ ಸಮುದಾಯದ ಮಹಿಳಾ ಸದಸ್ಯರಿಂದ ಸಾಂಪ್ರದಾಯಿಕವಾಗಿ ಪ್ರದರ್ಶಿಸಲಾಗುವ ನಂಗೀರ್ ಕುತು ಎಂಬ ನೃತ್ಯ ಪ್ರಕಾರದ ನೃತ್ಯಗಾರ್ತಿ. ಕೂಡಿಯಾಟಂನಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವಲ್ಲಿ ಅವರು ನಿಪುಣ ಪರಿಣತಿ ಕೂಡ ಹೊಂದಿದ್ದರು. ಅವರು ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ಪ್ರದರ್ಶನ ನೀಡಿದ್ದಾರೆ. ಕುಡಿಯಾಟ್ಟಂ ಅನ್ನು "ಮಾನವೀಯತೆಯ ಮೌಖಿಕ ಮತ್ತು ಅಮೂರ್ತ ಪರಂಪರೆಯ ಮೇರುಕೃತಿ" ಎಂದು ಯುನೆಸ್ಕೋದ ಘೋಷಣೆಯನ್ನು ಗುರುತಿಸುವ ಕಾರ್ಯಕ್ರಮದ ಭಾಗವಾಗಿ ಅಕ್ಟೋಬರ್ ೨೦೦೧ ರಲ್ಲಿ ಪ್ಯಾರಿಸ್‌ನಲ್ಲಿರುವ ಯುನೆಸ್ಕೊ ಪ್ರಧಾನ ಕಛೇರಿಯಲ್ಲಿ ಇವರಿಂದ ಗಮನಾರ್ಹ ಪ್ರದರ್ಶನವನ್ನು ನೀಡಲಾಯಿತು. ಸತಿ ಅವರು ಇವರು ಹಲವಾರು ನಂಗೀರ್ ಕುತು ಪ್ರದರ್ಶನಕ್ಕಾಗಿ ಅಟ್ಟಪ್ರಕಾರವನ್ನು (ಕಾರ್ಯನಿರ್ವಹಣೆಯ ಕೈಪಿಡಿಗಳು) ಬರೆದಿದ್ದಾರೆ. ಶ್ರೀರಾಮಚರಿತಂ (ಸೀತೆಯ ದೃಷ್ಟಿಕೋನದಿಂದ ರಾಮನ ಕಥೆ) ಗಾಗಿ ಬರೆದ ಅಟ್ಟಪ್ರಕಾರವನ್ನು ೧೯೯೯ ರಲ್ಲಿ ಪುಸ್ತಕವಾಗಿ ಪ್ರಕಟಿಸಲಾಗಿದೆ. ಕೆಲವು ಮಲಯಾಳಂ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜೀವನ ಮಾರ್ಗಿ ಸತಿ ಅವರು ೧೯೬೫ ರಲ್ಲಿ ತ್ರಿಶ್ಶೂರಿನ ಚೆರುತುರುತಿಯಲ್ಲಿ ಪುತ್ತಿಲ್ಲತು ಸುಬ್ರಹ್ಮಣ್ಯನ್ ಎಂಬ್ರಂತಿರಿ ಮತ್ತು ಪಾರ್ವತಿ ಅಂದರ್ಜನಂ ಅವರ ಪುತ್ರಿಯಾಗಿ ಜನಿಸಿದರು. ಅವರು ಕೇರಳ ಕಲಾಮಂಡಲಂನಲ್ಲಿ ಮತ್ತು ಪೈಂಕುಳಂ ರಾಮ ಚಾಕ್ಯಾರ್ ಅವರ ಅಡಿಯಲ್ಲಿ ಕೂಡಿಯಟ್ಟಂ ಕಲಿಯಲು ಪ್ರಾರಂಭಿಸಿದರು . ದಿವಂಗತ ಇಡಕ್ಕ ಮಾಂತ್ರಿಕ ಎನ್ ಸುಬ್ರಮಣಿಯನ್ ಪೊಟ್ಟಿ ಅವರೊಂದಿಗಿನ ವಿವಾಹದ ನಂತರ, ಅವರು ತಿರುವನಂತಪುರಕ್ಕೆ ತೆರಳಿದರು ಮತ್ತು ೧೯೮೮ ರಲ್ಲಿ ಮಾರ್ಗಿ ನೃತ್ಯ ಸಂಸ್ಥೆಗೆ ಸೇರಿದರು. ನೃತ್ಯ ಸಂಸ್ಥೆಯೊಂದಿಗಿನ ಅವರ ಒಡನಾಟವೇ ಅವರ ಹೆಸರಿನಲ್ಲಿ ಮಾರ್ಗಿ ಎಂಬ ವಿಶೇಷಣವನ್ನು ನೀಡಿತು. ಮಾರ್ಗಿಯು ಕೇರಳದ ಎರಡು ಶಾಸ್ತ್ರೀಯ ಕಲಾ ಪ್ರಕಾರಗಳಾದ ಕಥಕ್ಕಳಿ ಮತ್ತು ಕೂಡಿಯಾಟ್ಟಂನ ಪುನರುಜ್ಜೀವನಕ್ಕೆ ಮೀಸಲಾದ ಸಂಸ್ಥೆಯಾಗಿದೆ. ೩೦ ಜೂನ್ ೨೦೦೫ ರಂದು ಕೂಡಿಯಟ್ಟಂ ಆಧಾರಿತ ನೋಟಂ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಆಕೆಯ ಪತಿ ವಿದ್ಯುದಾಘಾತದಿಂದ ಸಾವನ್ನಪ್ಪಿದರು. ಪತಿಯ ಮರಣದ ನಂತರ ಸತಿ ಕೇರಳ ರಾಜ್ಯ ಸರ್ಕಾರದ ಮೊದಲ ರೀತಿಯ ಆದೇಶದ ಆಧಾರದ ಮೇಲೆ ಕೂಡಿಯಟ್ಟಂನಲ್ಲಿ ಶಿಕ್ಷಕಿಯಾಗಿ ಕಲಾಮಂಡಲಂಗೆ ತೆರಳಿದರು. ಅವರು ಡಿಸೆಂಬರ್ ೧, ೨೦೧೫ ರಂದು ತಿರುವನಂತಪುರಂನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಲ್ಲಿ ನಿಧನರಾದರು. ಅವರು ಬಹಳ ಸಮಯದಿಂದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು ಮತ್ತು ಅವರ ಸ್ಥಿತಿಯು ಹದಗೆಟ್ಟ ನಂತರ ಸಾಯುವ ಒಂದು ವಾರದ ಮೊದಲು ಆರ್‌ಸಿ‍ಸಿ ಗೆ ದಾಖಲಿಸಲಾಯಿತು. ಅವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ, ರೇವತಿ, ಶಿಕ್ಷಕಿ ಮತ್ತು ಕೂಡಿಯಟ್ಟಂ ಕಲಾವಿದೆ ಮತ್ತು ದೇವನಾರಾಯಣನ್, ಎಡಕ್ಕ ಕಲಾವಿದ ಮತ್ತು ಪಟ್ಟಾಂಬಿ ಸಂಸ್ಕೃತ ಕಾಲೇಜಿನ ಮಾಜಿ ವಿದ್ಯಾರ್ಥಿ. ಸತಿ ನಟಿಸಿದ ಚಲನಚಿತ್ರಗಳ ಪಟ್ಟಿ ಸ್ವಪಾನಂ (೨೦೧೪) ಸ್ವಪಾನಂ (ಅಚ್ಯುತನ ಪತ್ನಿಯಾಗಿ) ಇವಾನ್ ಮೇಘರೂಪನ್ (೨೦೧೨) (ಕವಿಯ ತಾಯಿಯಾಗಿ) ಮೇಕಿಂಗ್ ಆಫ್ ಎ ಮೆಸ್ಟ್ರೋ (೨೦೧೦) (ತಂಬುರಾಟಿಯಾಗಿ) ರಾಮನಂ (೨೦೧೦) (ಆಟ್ಟ ಬೀವಿಯಾಗಿ) ದೃಷ್ಟಾಂತಂ (೨೦೦೭) ನೋಟಮ್ (೨೦೦೫) ಸತಿ ಬರೆದ ಪುಸ್ತಕಗಳು "ಸೀತಾಯನಂ" (ರಂಗ ಪ್ರಸ್ತುತಿ ಕೈಪಿಡಿ) (೨೦೦೮) "ಕನ್ನಕಿಚರಿತಂ" (ರಂಗ ಪ್ರಸ್ತುತಿ ಕೈಪಿಡಿ)(೨೦೦೨) "ಶ್ರೀರಾಮಚರಿತಂ ನಂಗಿಯಾರ್‌ಕೂತ್ತು" (ರಂಗ ಪ್ರಸ್ತುತಿ ಕೈಪಿಡಿ) - ಅಯ್ಯಪ್ಪ ಪಣಿಕ್ಕರ್‌ರಿಂದ ಇಂಗ್ಲಿಷ್‌ನಲ್ಲಿ 'ನಂಗಿಯಾರ್ ಕೂತು' ಕುರಿತು ಅನುಬಂಧದೊಂದಿಗೆ ಮಲಯಾಳಂನಲ್ಲಿ ಡಿಸಿಬುಕ್ಸ್, ಕೊಟ್ಟಾಯಂ, ಕೇರಳ (೧೯೯೯) ಪ್ರಕಟಿಸಿದೆ. ಗುರುತಿಸುವಿಕೆಗಳು ಪ್ರದರ್ಶಕ ಕಲೆಗಳ ಜಗತ್ತಿಗೆ ಮಾರ್ಗಿ ಸತಿ ಅವರ ಕೊಡುಗೆಗಳನ್ನು ವ್ಯಾಪಕವಾಗಿ ಗುರುತಿಸಲಾಗಿದೆ ಮತ್ತು ಅವರ ಕೆಲಸವನ್ನು ಪ್ರಶಂಸಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ನಂಗಿಯಾರ್‌ಕೂತ್‌ನಲ್ಲಿ ಸಂಶೋಧನಾ ಯೋಜನೆಗಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಜೂನಿಯರ್ ಫೆಲೋಶಿಪ್ (೧೯೯೭) ಕೂಡಿಯಟ್ಟಂ (೨೦೦೨) ಗಾಗಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕಲಾದರ್ಪಣಂ ಪ್ರಶಸ್ತಿ (೨೦೦೮) ತುಂಚನ್ ಸ್ಮಾರಕ ಸಮಿತಿಯಿಂದ ನಾಟ್ಯರತ್ನ ಪುರಸ್ಕಾರ, ತಿರುವನಂತಪುರಂ (೨೦೦೮) ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನ ಹೆಚ್ಚಿನ ಓದುವಿಕೆ ಮಾರ್ಗಿ ಸತಿ ಅವರೊಂದಿಗೆ ಸಂದರ್ಶನ: ಆರ್.ಮಿನಿದೇವಿ (2008). ಕೂಡಿಯಾಟಂನಲ್ಲಿ ಮಹಿಳೆಯರ ಪಾತ್ರ . ತ್ರಿಪ್ಪುಣಿತುರಾ: ಸರ್ಕಾರಿ ಸಂಸ್ಕೃತ ಕಾಲೇಜು. ಪುಟಗಳು 233–243 . 2 ಡಿಸೆಂಬರ್ 2015 ರಂದು ಮರುಸಂಪಾದಿಸಲಾಗಿದೆ . ಉಲ್ಲೇಖಗಳು ವಿಕಿಪೀಡಿಯ ಅನುವಾದ ಶಿಬಿರ ಲೇಖನ
152251
https://kn.wikipedia.org/wiki/%E0%B2%B6%E0%B3%8B%E0%B2%B5%E0%B2%A8%20%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3
ಶೋವನ ನಾರಾಯಣ
ಶೋವನಾ ನಾರಾಯಣ್ ಒಬ್ಬ ಮಾನ್ಯತೆ ಪಡೆದ ಭಾರತೀಯ ಕಥಕ್ ನೃತ್ಯಗಾರ್ತಿ ಮತ್ತು ಭಾರತೀಯ ಆಡಿಟ್ ಮತ್ತು ಅಕೌಂಟ್ಸ್ ವೃತ್ತಿಯಲ್ಲಿರುವ ಅಧಿಕಾರಿ. ಅವರು ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತಾರೆ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಬಿರ್ಜು ಮಹಾರಾಜ್ ಅವರ ಬಳಿ ತರಬೇತಿ ಪಡೆದರು. ಆರಂಭಿಕ ಜೀವನ ಮತ್ತು ಶಿಕ್ಷಣ ಭಾರತದ ದೆಹಲಿಯ ಮಿರಾಂಡಾ ಹೌಸ್‌ನಲ್ಲಿ ಅಧ್ಯಯನ ಮಾಡಿದರು. ೧೯೭೨ ರಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ೨೦೦೮ ರಲ್ಲಿ, ಮದ್ರಾಸ್ ವಿಶ್ವವಿದ್ಯಾನಿಲಯದಿಂದ ರಕ್ಷಣಾ ಮತ್ತು ಕಾರ್ಯತಂತ್ರದ ಅಧ್ಯಯನದಲ್ಲಿ ಎಂ.ಫಿಲ್ ಮುಗಿಸಿದಳು. ೨೦೦೧ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನದಲ್ಲಿ ಎಂಫಿಲ್ ಮುಗಿಸಿದರು. ಅವರು ಭಾರತೀಯ ಲೆಕ್ಕಪರಿಶೋಧನೆ ಮತ್ತು ಖಾತೆಗಳ ಸೇವೆಗಾಗಿ ವೃತ್ತಿ ಅಧಿಕಾರಿಯಾಗಿ ಕೆಲಸ ಮಾಡಿದರು ಮತ್ತು ೨೦೧೦ ರಲ್ಲಿ ನಿವೃತ್ತರಾದರು. ಅವರು ಭಾರತದಲ್ಲಿನ ಆಸ್ಟ್ರಿಯನ್ ರಾಯಭಾರಿ, ಡಾ. ಹರ್ಬರ್ಟ್ ಟ್ರಾಕ್ಸ್ಲ್ ಅವರನ್ನು ವಿವಾಹವಾದರು. ನೃತ್ಯ ವೃತ್ತಿಯಲ್ಲಿ ಸಾಧನೆಗಳು "ಪ್ರದರ್ಶಕ ಮತ್ತು ಗುರು" ಆಗಿ, ಶೋವನ ನಾರಾಯಣ್ ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಉತ್ಸವಗಳಲ್ಲಿ ಮತ್ತು ಹಲವಾರು ರಾಜ್ಯ ಸರ್ಕಾರಗಳ ಮುಂದೆ ವ್ಯಾಪಕವಾಗಿ ಪ್ರದರ್ಶನ ನೀಡಿದ್ದಾರೆ ಮತ್ತು ಯುವ ಪೀಳಿಗೆಯ ಹಲವಾರು ಕಥಕ್ ಕಲಾವಿದರಿಗೆ ತರಬೇತಿ ನೀಡಿದ್ದಾರೆ. "ನೃತ್ಯ ಸಂಯೋಜಕ-ಪ್ರದರ್ಶಕರಾಗಿ" ಶೋವನ ನಾರಾಯಣ್ ಅವರು ಪಾಶ್ಚಿಮಾತ್ಯ ಶಾಸ್ತ್ರೀಯ ಬ್ಯಾಲೆ, ಫ್ಲಮೆಂಕೊ, ಟ್ಯಾಪ್ ಡ್ಯಾನ್ಸ್, ಬೌದ್ಧ ಸನ್ಯಾಸಿಗಳೊಂದಿಗೆ ಬೌದ್ಧ ಪಠಣಗಳ ಪ್ರಮುಖ ನೃತ್ಯಗಾರರೊಂದಿಗೆ ಅಂತರರಾಷ್ಟ್ರೀಯ ಸಹಯೋಗದ ಕೃತಿಗಳನ್ನು ಮುನ್ನಡೆಸಿದ್ದಾರೆ. ಅವರು ೧೯೯೪ ರಲ್ಲಿ "ದಿ ಡಾನ್ ಆಫ್ಟರ್" ನಲ್ಲಿ ಪಾಶ್ಚಿಮಾತ್ಯ ಶಾಸ್ತ್ರೀಯ ನೃತ್ಯ - ಕಥಕ್ - ಫ್ಲೆಮೆಂಕೊವನ್ನು ಒಳಗೊಂಡ ಮೊದಲ ಟ್ರೈಲಾಜಿಯ ಸೃಜನಶೀಲ ನಿರ್ದೇಶಕ - ನಿರ್ಮಾಪಕ - ನರ್ತಕಿಯಾಗಿದ್ದರು. ಅವರು ನವದೆಹಲಿಯಲ್ಲಿ ನಡೆದ ೬ ನೇ ಅಬಿಲಿಂಪಿಕ್ಸ್ ೨೦೦೩ ರ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳ ಸೃಜನಶೀಲ ನಿರ್ದೇಶಕರಾಗಿದ್ದರು. ಅವರು ೨೦೧೦ ರಲ್ಲಿ ಕಾಮನ್ವೆಲ್ತ್ ಗೇಮ್ಸ್ ದೆಹಲಿಯ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ನೀಡಿದರು. ಅವರು ಹಲವಾರು ಭಾರತೀಯ ಶಾಸ್ತ್ರೀಯ ನೃತ್ಯ ಶೈಲಿಗಳ ಪ್ರಮುಖ ನೃತ್ಯಗಾರರೊಂದಿಗೆ ಹಲವಾರು ಸಹಯೋಗದ ಕೃತಿಗಳನ್ನು ಮುನ್ನಡೆಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. ಅವರು ಸೃಜನಶೀಲ ನಿರ್ದೇಶಕ-ನಿರ್ಮಾಪಕರಾಗಿದ್ದರು. ಅವರು ನೀಡಿದ ಪ್ರಮುಖ ಕಾರ್ಯಕ್ರಮಗಳು: ೧೯೯೭ ರ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತೀಯ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಶಾಸ್ತ್ರೀಯ ನೃತ್ಯ ಅನುಕ್ರಮ. ಬೇಗಂ ಹಜರತ್ ಮಹಲ್ ಮೇಲಿನ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬ್ಯಾಲೆ ಗುರು ಗೋಬಿಂದ್ ಸಿಂಗ್ ಅವರ ಖಾಲಾ ೧೯೯೯ರ ಶತಮಾನೊತ್ಸವದ ಬ್ಯಾಲೆ ಅವರ ಕೆಲವು ನೃತ್ಯ ಸಂಯೋಜನೆಗಳು: ಸಮಕಾಲೀನ ಚಿಂತಕರು ಮತ್ತು ಋಷಿಮುನಿ ಜೀವನವನ್ನು ಆಧರಿಸಿದ ಪ್ರಖ್ಯಾತ ತತ್ವಜ್ಞಾನಿ, ದಿವಂಗತ ಪ್ರೊ.ರಾಮಚಂದ್ರ ಗಾಂಧಿಯವರೊಂದಿಗೆ ತಾತ್ವಿಕ ವಿಷಯಗಳಿಗೆ ನೃತ್ಯ ರಚನೆಗಳ ಪ್ರಾಧಾಪಕರು. ಉತ್ತರ - ಭಾರತೀಯ ನೃತ್ಯ ಪ್ರಕಾರದ ನಿರೂಪಣಾ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದ "ಶಕುಂತಲಾ" ಇಂಡಿಯಾ ಹ್ಯಾಬಿಟೇಟ್ ಸೆಂಟರ್‌ನಲ್ಲಿ ಶಾಸ್ತ್ರೀಯ ಪ್ರದರ್ಶನ ಕಲೆಗಳ ಯುವ ಜ್ಯೋತಿ ಹೊತ್ತವರಿಗಾಗಿ "ಲಲಿತಾರ್ಪಣ್ ಉತ್ಸವ" ಅಸಾವರಿ ಉತ್ಸವವು ಶಾಸ್ತ್ರೀಯ ಪ್ರದರ್ಶನ ಕಲೆಗಳ ಮಾಸ್ತರರನ್ನು ಒಳಗೊಂಡಿರುತ್ತದೆ ಕಥಕ್‌ನ ಯುವ ವಿದ್ಯಾರ್ಥಿಗಳ ವಾರ್ಷಿಕ ದಿನ 'ರಿದಮ್ ಆಂಡ್ ಜಾಯ್' ಸಂಶೋಧನೆ ಮತ್ತು ಚಲನಚಿತ್ರಗಳು ಶೋವಾನಾ ಅವರು ಗಯಾ ಬಳಿಯ ೮ ಕಥಕ್ ಗ್ರಾಮಗಳನ್ನು ಸಾಕ್ಷ್ಯಚಿತ್ರ ಮತ್ತು ಅಧಿಕೃತ ದಾಖಲೆಗಳೊಂದಿಗೆ ಸಂಶೋಧಿಸಿದ್ದಾರೆ ಮತ್ತು ಕಂಡುಹಿಡಿದಿದ್ದಾರೆ. ಅವರು 'ಡಾನ್ಸ್ ಆಫ್ ದಿ ಟೆಂಪಲ್ಸ್' ಎಂಬ ಶೀರ್ಷಿಕೆಯಡಿಯಲ್ಲಿ ಅಮರ ಖಜುರಾಹೊ ದೇವಾಲಯಗಳ ತತ್ವಶಾಸ್ತ್ರ ಮತ್ತು ದಂತಕಥೆಯ ಕುರಿತು ನೃತ್ಯ ವೀಡಿಯೊವನ್ನು ಕಲ್ಪಿಸಿ, ಪರಿಕಲ್ಪನೆಗೊಳಿಸಿದ ಮತ್ತು ಹೊರತಂದ ಮೊದಲ ನೃತ್ಯಗಾರ್ತಿ, ಸಂಸ್ಕೃತ ಮತ್ತು ಶಿಲಾಶಾಸನ ವಿದ್ವಾಂಸರಾದ, ಕೆಕೆ ಮಿಶ್ರಾ ಅವರೊಂದಿಗೆ ಸಹಕರಿಸಿದರು. ಈ ಆಳವಾದ ಸಂಶೋಧನೆಯೊಂದಿಗೆ ೮೦ ಕ್ಕೂ ಹೆಚ್ಚು ಲೇಖನಗಳನ್ನು ಹಲವಾರು ರಾಷ್ಟ್ರೀಯ ಪತ್ರಿಕೆಗಳು, ಮಾನ್ಯತೆ ಪಡೆದ ನಿಯತಕಾಲಿಕೆಗಳು, ಟೈಮ್ಸ್ ಆಫ್ ಇಂಡಿಯಾ, ಟ್ರಿಬ್ಯೂನ್, ಏಷ್ಯನ್ ಏಜ್, ಸಂಗೀತ ನಾಟಕ ಅಕಾಡೆಮಿ, ರಾಜಸ್ಥಾನ ವಿಶ್ವವಿದ್ಯಾಲಯ, ಮತ್ತು ಹಲವಾರು ಇತರ ನಿಯತಕಾಲಿಕಗಳಲ್ಲಿ ಪ್ರಕಟಿಸಲಾಗಿದೆ. ಪುಸ್ತಕಗಳು ಶೋವನ ನಾರಾಯಣ್ ಅವರಿಂದ ನಾರಾಯಣ್, ಶೋವನ (೧೪ ಮಾರ್ಚ್ ೨೦೦೫). ಭಾರತೀಯ ಶಾಸ್ತ್ರೀಯ ನೃತ್ಯಗಳು. ಸ್ಟರ್ಲಿಂಗ್ ಪಬ್ಲಿಷರ್ಸ್ ಪ್ರೈ. ಲಿ. ISBN 978-1-84557-169-6. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ನಾರಾಯಣ್, ಶೋವನ (೨೦೦೩). ಭಾರತದಲ್ಲಿ ಪ್ರದರ್ಶನ ಕಲೆಗಳು: ನೀತಿ ದೃಷ್ಟಿಕೋನ. ಕಾನಿಷ್ಕ ಪ್ರಕಾಶಕರು, ವಿತರಕರು. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ನಾರಾಯಣ್, ಶೋವನ (೧ ಜನವರಿ ೨೦೦೪). ಭಾರತೀಯ ರಂಗಭೂಮಿ ಮತ್ತು ನೃತ್ಯ ಸಂಪ್ರದಾಯಗಳು. ಹರ್ಮನ್ ಪಬ್. ಇದ್ಯಂತ್ ಜೊತೆಗಿನ ಮನೆ. ISBN 978-81-86622-61-2. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ನಾರಾಯಣ್, ಶೋವನ (೧ ಫೆಬ್ರವರಿ ೧೯೯೮). ಲಯಬದ್ಧ ಪ್ರತಿಧ್ವನಿಗಳು ಮತ್ತು ಪ್ರತಿಫಲನಗಳು: ಕಥಕ್. ರೋಲಿ ಬುಕ್ಸ್. ISBN 978-81-7436-049-6. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ನಾರಾಯಣ, ಶೋವನ; ಭಾರತ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ. ಪ್ರಕಾಶನ ವಿಭಾಗ (೧೯೯೯). ಪಟ್ಲೀಪುತ್ರದ ನೃತ್ಯ ಪರಂಪರೆ. ಪ್ರಕಟಣೆ ವಿಭಾಗ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸರ್ಕಾರ. ಭಾರತದ. ISBN 978-81-230-0699-4. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ರಘುವಂಶಿ, ಅಲ್ಕಾ; ನಾರಾಯಣ, ಶೋವನ; ಪಾಸ್ರಿಚಾ, ಅವಿನಾಶ್ (೨೦೦೪). ಕಥಕ್ ಬುದ್ಧಿವಂತಿಕೆಯ ಮರ. ISBN 978-81-86685-14-3. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ನಾರಾಯಣ್, ಶೋವನ (೨೦೦೪). ಭಾರತದ ಜಾನಪದ ನೃತ್ಯ ಸಂಪ್ರದಾಯಗಳು. ಶುಭಿ ಪ್ರಕಾಶನ. ISBN 9788187226932. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ನಾರಾಯಣ್, ಶೋವನ (೨೦೦೭). ನೆನಪುಗಳ ಮೆಲುಕು ಹಾಕುವ ಹುಲ್ಲುಗಾವಲುಗಳು. ಮ್ಯಾಕ್ಮಿಲನ್. ISBN 978-1-4039-3102-3. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ನಾರಾಯಣ್, ಶೋವನ (೧ ಜನವರಿ ೨೦೦೭). ಪ್ರದರ್ಶಕ ಕಲೆಯಲ್ಲಿ ಕೃಷ್ಣ. ಶುಭಿ. ISBN 978-81-8290-042-4. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ಮಿಶ್ರಾ, ಕಮಲ್ ಕೆ. (೧ ಜನವರಿ ೨೦೦೬). ಮಿಶ್ರಾ, ಗಿರೀಶ್ವರ್; ಝಾ, ಬಿನಯ್ ಕೆ. (ಸಂ.). ಕಥಕ್: ಶೋವನ ನಾರಾಯಣನ ಪ್ರಪಂಚ. ಕಾನಿಷ್ಕ. ISBN 978-81-7391-725-7. ೩೦ ಜನವರಿ ೨೦೧೨ ರಂದು ಮರುಸಂಪಾದಿಸಲಾಗಿದೆ. ಪ್ರಶಸ್ತಿಗಳು ಪದ್ಮಶ್ರೀ, ೧೯೯೨ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೧೯೯೯ – ೨೦೦೦ ದೆಹಲಿ ಸರ್ಕಾರದ ಪರಿಷತ್ ಸಮ್ಮಾನ್ ರಾಜೀವ್ ಸ್ಮೃತಿ ಪುರಸ್ಕಾರ ಬಿಹಾರ ಗೌರವ್ ಪುರಸ್ಕಾರ್, ೧೯೮೫ ಇಂದಿರಾ ಪ್ರಿಯದರ್ಶಿನಿ ಸಮ್ಮಾನ್ ರಾಜಧಾನಿ ರತ್ನ ಪ್ರಶಸ್ತಿ ಶೃಂಗಾರ್ ಶಿರೋಮಣಿ ಪ್ರಶಸ್ತಿ ರೋಟರಿ ಅಂತರಾಷ್ಟ್ರೀಯ ಪ್ರಶಸ್ತಿ ಭಾರತ್ ನಿರ್ಮಾಣ್ ಪ್ರಶಸ್ತಿ ರಾಷ್ಟ್ರೀಯ ಏಕೀಕರಣ ಪ್ರಶಸ್ತಿ ಓಯಿಸ್ಕಾ ಪ್ರಶಸ್ತಿ (ಜಪಾನ್), ೧೯೯೦ – ೯೧ ದಾದಾಭಾಯಿ ನೌರೋಜಿ ಪ್ರಶಸ್ತಿ, ೧೯೯೩ ಕೆಲ್ವಿನೇಟರ್ ಅವರ ಜಿ‌ಆರ್೮ ಪ್ರಶಸ್ತಿ ಎಫ್‌ಐ‌ಸಿ‌ಸಿ‌ಐ‌ಯ ಎಫ್‌ಎಲ್‌ಒ ಪ್ರಶಸ್ತಿ ಉಲ್ಲೇಖಗಳು ಸಹ ನೋಡಿ ಕಲಾತ್ಮಕ ಬಯೋಡೇಟಾ ಮುಖಪುಟ IA&AS ನಲ್ಲಿ ಕೆಲಸದ ಸಂಪರ್ಕ ವಿಕಿಪೀಡಿಯ ಅನುವಾದ ಶಿಬಿರ ಲೇಖನ
152252
https://kn.wikipedia.org/wiki/%E0%B2%B8%E0%B3%80%E0%B2%AE%E0%B2%BE%E0%B2%A8%E0%B3%8D%20%28%E0%B2%B0%E0%B2%BE%E0%B2%9C%E0%B2%95%E0%B2%BE%E0%B2%B0%E0%B2%A3%E0%B2%BF%29
ಸೀಮಾನ್ (ರಾಜಕಾರಣಿ)
ಸೆಂತಮಿಝನ್ ಸೀಮಾನ್ (ಜನನ 8 ನವೆಂಬರ್ 1966) ಒಬ್ಬ ಭಾರತೀಯ ರಾಜಕಾರಣಿ, ಚಲನಚಿತ್ರ ನಿರ್ಮಾಪಕ ಮತ್ತು ತಮಿಳುನಾಡಿನ ನಾಮ್ ತಮಿಳರ್ ಕಚ್ಚಿ ರಾಜಕೀಯ ಪಕ್ಷದ ಮುಖ್ಯ ಸಂಯೋಜಕರಾಗಿದ್ದಾರೆ. ಅವರು ತಮಿಳರ ಮತಬ್ಯಾಂಕ್ ಸೃಷ್ಟಿಯ ಪ್ರತಿಪಾದಕರು. ಸೀಮಾನ್ 1990 ರ ದಶಕದ ಮಧ್ಯಭಾಗದಲ್ಲಿ ಚಲನಚಿತ್ರ ನಿರ್ಮಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಪಾಂಚಾಲಂಕುರಿಚಿ (1996) ಮತ್ತು ವೀರನಾಡೈ (2000) ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರ ಆರಂಭಿಕ ಚಲನಚಿತ್ರಗಳ ವೈಫಲ್ಯವು ಅವರಿಗೆ ನಿರ್ದೇಶಕರಾಗಿ ಆಫರ್‌ಗಳನ್ನು ಆಕರ್ಷಿಸಲು ಕಷ್ಟಕರವಾಯಿತು ಮತ್ತು ಅವರ ಹಲವಾರು ಪ್ರಸ್ತಾವಿತ ಯೋಜನೆಗಳು 1990 ರ ದಶಕದ ಅಂತ್ಯದಲ್ಲಿ ಸ್ಥಗಿತಗೊಂಡವು. ನಂತರ ಅವರು ಯಶಸ್ವಿ ಜಾಗೃತ ಚಲನಚಿತ್ರ ತಂಬಿ (2006) ಮೂಲಕ ಪುನರಾಗಮನ ಮಾಡಿದರು, ಆದರೂ ಅವರ ಮುಂದಿನ ಚಲನಚಿತ್ರದ ವಾಣಿಜ್ಯ ವೈಫಲ್ಯ, 2000 ರ ದಶಕದ ಅಂತ್ಯದಲ್ಲಿ ಪೋಷಕ ನಟನಾಗಿ ಬದ್ಧತೆಗಳಿಗೆ ಆದ್ಯತೆ ನೀಡಲು ಸೀಮಾನ್ ಅವರನ್ನು ಪ್ರೇರೇಪಿಸಿತು. 2010 ರ ದಶಕದ ಆರಂಭದಲ್ಲಿ, ಸೀಮಾನ್ ತಮಿಳು ರಾಷ್ಟ್ರೀಯತಾವಾದಿ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು ಮತ್ತು ನಂತರ ಭಾರತೀಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿಗಾಗಿ ಸುದ್ದಿಯಲ್ಲಿದ್ದರು. ಸೀಮಾನ್ ತೆಲುಗು ಜನರು ಮತ್ತು ಕನ್ನಡಿಗರ ವಿರುದ್ಧ ಅನ್ಯದ್ವೇಷಕ್ಕೆ ಹೆಸರುವಾಸಿಯಾಗಿದ್ದಾರೆ. ವಿವಾದಗಳು ನವೆಂಬರ್ 2009 ರಲ್ಲಿ, ಕೆನಡಾದಲ್ಲಿ ಭಾಷಣ ಪ್ರವಾಸದಲ್ಲಿದ್ದಾಗ, ಟೊರೊಂಟೊದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷ ತುಂಬಿದ ಬೆಂಕಿಯಿಡುವ ಭಾಷಣಕ್ಕಾಗಿ ಕೆನಡಾ ಬಾರ್ಡರ್ ಸರ್ವಿಸಸ್ ಏಜೆನ್ಸಿಯಿಂದ ಸೀಮಾನ್ ಅವರನ್ನು ಬಂಧಿಸಲಾಯಿತು. ಭಾಷಣದಲ್ಲಿ, ಅವರು ಶ್ರೀಲಂಕಾದಲ್ಲಿ ಅಂತರ್ಯುದ್ಧವನ್ನು ಪುನರಾರಂಭಿಸುವ ಬಗ್ಗೆ ಮಾತನಾಡಿದ್ದಾರೆ ಮತ್ತು "ಯಾವುದೇ ಸಿಂಹಳೀಯರು ಬದುಕಲು ಸಾಧ್ಯವಿಲ್ಲ" ಎಂದು ಹೇಳಿದರು, ಎಲ್ಟಿಟಿಇ ದಾಳಿಗೊಳಗಾದ ಪ್ರತಿ ತಮಿಳು ಶಾಲೆಗೆ 100 ಸಿಂಹಳೀಯ ಶಾಲೆಗಳಲ್ಲಿ ಬಾಂಬ್ ದಾಳಿ ಮಾಡಬೇಕಿತ್ತು ಎಂದು ಹೇಳಿದರು. ವಿಕ್ರವಾಂಡಿ ವಿಧಾನಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಅವರು ತಮ್ಮ ಪಕ್ಷವು ಶತ್ರುವನ್ನು ( ರಾಜೀವ್ ಗಾಂಧಿ ) ಕೊಲ್ಲುವುದನ್ನು ಹೆಮ್ಮೆಯಿಂದ ಘೋಷಿಸಿತು ಎಂದು ಘೋಷಿಸಿದರು, ಏಕೆಂದರೆ ಅವರು ಹಲವಾರು ತಮಿಳು ಜನರನ್ನು ಕೊಂದ ಭಾರತೀಯ ಶಾಂತಿ ಪಾಲನಾ ಪಡೆ (ಐಪಿಕೆಎಫ್) ಅನ್ನು ಈಳಂಗೆ ಕಳುಹಿಸಿದ್ದರು. ಈ ಭಾಷಣವು ವಿವಿಧ ರಾಜಕೀಯ ವರ್ಣಪಟಲದ ಜನರಿಂದ ಟೀಕೆಗಳನ್ನು ಹುಟ್ಟುಹಾಕಿತು. ಈ ಘಟನೆಯ ನಂತರ ಪೊಲೀಸರು ಆತನ ವಿರುದ್ಧ ಹಲವು ಆರೋಪಗಳನ್ನು ದಾಖಲಿಸಿದ್ದರು. ಸೀಮಾನ್ ಮತ್ತು ಅವರ ರಾಜಕೀಯ ಪಕ್ಷದ ಅತ್ಯಂತ ವಿವಾದಾತ್ಮಕ ಅಂಶವೆಂದರೆ ಜಾತಿಯ ರೇಖೆಗಳ ಮೇಲೆ ಅನಿಯಂತ್ರಿತವಾಗಿ ಜನಾಂಗೀಯ ಶುದ್ಧೀಕರಣ. ತಮಿಳುನಾಡಿನ 'ವಂಧೇರಿ'ಗಳ ನಿರಂತರ ಆಳ್ವಿಕೆಯಿಂದಾಗಿ 'ತಮಿಳು ಜನರ ಅವನತಿ' ಎಂದು ಅವರು ಹೇಳುತ್ತಾರೆ (ಹೊರಗಿನವರು ಅಥವಾ ತಮಿಳರಲ್ಲದವರು ವಿಶೇಷವಾಗಿ ತೆಲುಗರನ್ನು ಜಾತಿ ಮತ್ತು ವಲಸೆಯ ಇತಿಹಾಸದ ಆಧಾರದ ಮೇಲೆ ಉಲ್ಲೇಖಿಸುತ್ತಾರೆ) ಮತ್ತು ತಮಿಳರು "ನಿಜವಾದ ತಮಿಳಿಗರನ್ನು" ಆಯ್ಕೆ ಮಾಡುವುದಾಗಿದೆ. ಅಧಿಕಾರಕ್ಕೆ. ಸೀಮಾನ್ ಅವರು ತಮಿಳು ಈಳಂ ಮತ್ತು ಎಲ್‌ಟಿಟಿಇಯ ಬೆಂಬಲಿಗ ಎಂದು ಬಹಿರಂಗವಾಗಿ ಹೇಳಿಕೊಂಡರೂ, ಅವರ ಘೋಷಿತ ನಿಲುವಿನ ಹಿಂದಿನ ಪ್ರಾಮಾಣಿಕತೆಯನ್ನು ಹಲವು ಬಾರಿ ಪ್ರಶ್ನಿಸಲಾಗಿದೆ. ಉದಾಹರಣೆಗೆ, 2019 ರಲ್ಲಿ ಆಡಿಯೋ ಸೋರಿಕೆಯು ಶ್ರೀಲಂಕಾದ ತಮಿಳರು ಮತ್ತು ಭಾರತೀಯ ತಮಿಳರಲ್ಲಿ ಚಲನಚಿತ್ರವು ಉತ್ತಮ ಸ್ವಾಗತವನ್ನು ಹೊಂದಿದ್ದರೂ ಸಹ ಸೀಮಾನ್ ಮೆಥಗು ಎಂಬ ಎಲ್‌ಟಿಟಿಇ ಪರ ಚಲನಚಿತ್ರವನ್ನು ವಿರೋಧಿಸಿದರು ಎಂಬ ಅಂಶವನ್ನು ದೃಢಪಡಿಸಿತು. Articles with unsourced statements from February 2023 [ ಉಲ್ಲೇಖದ ಅಗತ್ಯವಿದೆ ] ಮತ್ತೊಂದು ಸೋರಿಕೆಯಾದ ಆಡಿಯೋದಲ್ಲಿ, ಕೊಲ್ಲಲ್ಪಟ್ಟ ಎಲ್‌ಟಿಟಿಇ ಹೋರಾಟಗಾರ ಪೊಟ್ಟು ಅಮ್ಮನ್ ವಿರುದ್ಧ ಅಶ್ಲೀಲ ಮಾತುಗಳನ್ನು ಬಳಸಿ ಸಿಕ್ಕಿಬಿದ್ದಿದ್ದಾನೆ 2013 ರಲ್ಲಿ, ಸೀಮಾನ್ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸೀನ್ ಮಲಿಕ್ ಅವರನ್ನು ತನ್ನ ಸಾರ್ವಜನಿಕ ಸಭೆಯೊಂದಕ್ಕೆ ಆಹ್ವಾನಿಸಿ ಟೀಕೆಗೆ ಗುರಿಯಾದರು ಫೆಬ್ರವರಿ 2023 ರಲ್ಲಿ, ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದ ಸಮಯದಲ್ಲಿ, ವಿಜಯನಗರ ರಾಜರು ತಮಿಳುನಾಡನ್ನು ವಶಪಡಿಸಿಕೊಂಡ ಬಗ್ಗೆ ಮಾತನಾಡುವಾಗ, ಅವರು "ಅರುಂತಥಿಯಾರ್ ಸಮುದಾಯದ ಸದಸ್ಯರನ್ನು ಈ ಪ್ರದೇಶಕ್ಕೆ ಕಸವಿಲೇವಾರಿ ಮಾಡಲು ಕರೆತಂದರು" ಎಂದು ಉಲ್ಲೇಖಿಸಿದ್ದರು. ಅವರು ಹಿನ್ನಡೆಯನ್ನು ಪಡೆದರು ಮತ್ತು ಅವರ ಕಾಮೆಂಟ್‌ಗಳು ಅರುಂತಥಿಯಾರ್ ಸಂಘಟನೆಗಳಿಂದ ಪ್ರತಿಭಟನೆಯನ್ನು ಹುಟ್ಟುಹಾಕಿದವು. ಈ ಕುರಿತು ವಿವರಣೆ ಕೋರಿ ಚುನಾವಣಾ ಆಯೋಗ ಎನ್‌ಟಿಕೆಗೆ ನೋಟಿಸ್ ಕೂಡ ಜಾರಿ ಮಾಡಿದೆ. ಸೀಮಾನ್ ವಿರುದ್ಧವೂ ಕರುಂಗಲ್ಪಾಳ್ಯಂ ಪೊಲೀಸರು ಮೂರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೈಯಕ್ತಿಕ ಜೀವನ ಎಐಎಡಿಎಂಕೆ ಪಕ್ಷದಿಂದ ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್ ಕೆ. ಕಾಳಿಮುತ್ತು ಅವರ ಪುತ್ರಿ ಕಯಲ್ವಿಜಿ ಅವರನ್ನು ಸೀಮಾನ್ ವಿವಾಹವಾಗಿದ್ದಾರೆ. ಸೆಪ್ಟೆಂಬರ್ 2013 ರಲ್ಲಿ ಚೆನ್ನೈನ ನಂದನಂನಲ್ಲಿರುವ YMCA ಮೈದಾನದಲ್ಲಿ ತಮಿಳು ಸಂಪ್ರದಾಯಗಳ ಪ್ರಕಾರ ಸಮಾರಂಭವನ್ನು ನಡೆಸಲಾಯಿತು 2007ರಲ್ಲಿ ಸೀಮಾನ್‌ನ ವಾಜ್ತುಗಳು ಚಿತ್ರದ ಸೆಟ್‌ನಲ್ಲಿ ಭೇಟಿಯಾದ ಸೀಮಾನ್‌ನೊಂದಿಗೆ ತಾನು ಸಂಬಂಧ ಹೊಂದಿದ್ದೇನೆ ಎಂದು ನಟಿ ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ 2011ರಲ್ಲಿ ತನಗೆ ವಂಚಿಸಿದ ಆರೋಪದ ಮೇಲೆ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಈ ಜೋಡಿಯು 2010 ರ ದಶಕದ ಉದ್ದಕ್ಕೂ ಸಾರ್ವಜನಿಕ ಪದಗಳ ಯುದ್ಧದಲ್ಲಿ ತೊಡಗಿತ್ತು, ವಿಜಯಲಕ್ಷ್ಮಿ ನಂತರ ಜುಲೈ 2020 ರಲ್ಲಿ ಆತ್ಮಹತ್ಯೆಗೆ ಯತ್ನಿಸಿದರು, ಚಿತ್ರಹಿಂಸೆಗಾಗಿ ಸೀಮಾನ್ ಮತ್ತು ಅವರ ಬೆಂಬಲಿಗರನ್ನು ದೂಷಿಸಿದರು. 2011 ರಲ್ಲಿ, ಸೀಮಾನ್ ಶ್ರೀಲಂಕಾದ ತಮಿಳು ಮಹಿಳೆಯನ್ನು ಮದುವೆಯಾಗಲು ತನ್ನ ಆಸಕ್ತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದನು ಮತ್ತು ಎಲ್ಟಿಟಿಇ ಹೋರಾಟಗಾರನ ವಿಧವೆ ಯರ್ಲ್ಮತಿಯನ್ನು ಆಯ್ಕೆ ಮಾಡಿದನು, ಆದರೆ ನಂತರ ಹಾಗೆ ಮಾಡಲಿಲ್ಲ.
152254
https://kn.wikipedia.org/wiki/%E0%B2%A6%E0%B3%8D%E0%B2%B0%E0%B2%BE%E0%B2%95%E0%B3%8D%E0%B2%B7%E0%B2%B0%E0%B2%BE%E0%B2%AE
ದ್ರಾಕ್ಷರಾಮ
ಹಿಂದೂ ದೇವರಾದ ಶಿವನಿಗೆ ಪವಿತ್ರವಾದ ಐದು ಪಂಚರಾಮ ಕ್ಷೇತ್ರಗಳಲ್ಲಿ ದ್ರಾಕ್ಷರಾಮ ಒಂದಾಗಿದೆ. ಈ ದೇವಾಲಯವು ಭಾರತದ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ದ್ರಾಕ್ಷಾರಾಮಮ್ ಪಟ್ಟಣದಲ್ಲಿದೆ. ಈ ದೇವಾಲಯದಲ್ಲಿ ಭೀಮೇಶ್ವರ ಸ್ವಾಮಿಯು ಶಿವನನ್ನು ಉಲ್ಲೇಖಿಸುತ್ತಾನೆ. ವ್ಯುತ್ಪತ್ತಿ ಈ ಪಟ್ಟಣವನ್ನು ಹಿಂದೆ ದಕ್ಷತಪೋವನ ಮತ್ತು ದಕ್ಷವಾಟಿಕ ಎಂದು ಕರೆಯಲಾಗುತ್ತಿತ್ತು. ಎಲ್ಲಾ ಪ್ರಜಾಪತಿಗಳ ಮುಖ್ಯಸ್ಥ ದಕ್ಷನು "ನಿರೀಶ್ವರ ಯಾಗ" ಅಥವಾ "ನಿರೀಶ್ವರ ಯಜ್ಞ" ಎಂಬ ಯಾಗ ಅಥವಾ ಯಜ್ಞವನ್ನು ಮಾಡಿದ ಸ್ಥಳ ಇದು. ಈ ಸ್ಥಳದ ಪ್ರಸ್ತುತ ಹೆಸರು "ದಕ್ಷ ಆರಾಮ" ದ ವ್ಯುತ್ಪನ್ನವಾಗಿದೆ ಇದರರ್ಥ "ದಕ್ಷನ ವಾಸಸ್ಥಾನ". ಈ ಸ್ಥಳವನ್ನು ಜಗದ್ಗುರು ಶಂಕರಾಚಾರ್ಯರು / ಆದಿ ಶಂಕರರು ಮಹಾಶಕ್ತಿ ಪೀಠದ ಶ್ಲೋಕದಲ್ಲಿ "ಮಾಣಿಕ್ಯೇ ದಕ್ಷ ವಾಟಿಕಾ" ದಲ್ಲಿ ಉಲ್ಲೇಖಿಸಿದ್ದಾರೆ. ಇದು "ದ್ರಾಕ್ಷರಾಮದ ಮಾಣಿಕ್ಯಾಂಬಾ ದೇವಿ" ಯನ್ನು ಸೂಚಿಸುತ್ತದೆ. ದಕ್ಷನು "ನಿರೀಶ್ವರ ಯಜ್ಞ" ಮಾಡಿದ ಸ್ಥಳಕ್ಕೆ ಇಂದಿಗೂ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ದೇವಾಲಯದ ಇತಿಹಾಸ ಈ ದೇವಾಲಯದಲ್ಲಿನ ಶಾಸನಗಳು ಇದನ್ನು ಕ್ರಿ.ಶ ೯ ಮತ್ತು ೧೦ ನೇ ಶತಮಾನಗಳ ನಡುವೆ ಪೂರ್ವ ಚಾಲುಕ್ಯ ರಾಜ ಭೀಮನು ನಿರ್ಮಿಸಿದನೆಂದು ಬಹಿರಂಗಪಡಿಸುತ್ತದೆ. ದೇವಾಲಯದ ದೊಡ್ಡ ಮಂಟಪವನ್ನು ಒಡಿಶಾದ ಪೂರ್ವ ಗಂಗಾ ರಾಜವಂಶದ ಒಂದನೇ ನರಸಿಂಗ ದೇವನ ಸೊಸೆ ಗಂಗಾ ಮಹಾದೇವಿ ನಿರ್ಮಿಸಿದಳು. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಲ್ಲಿ, ದೇವಾಲಯವು ಚಾಲುಕ್ಯ ಮತ್ತು ಚೋಳ ಶೈಲಿಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ದೇವಾಲಯವು ಐತಿಹಾಸಿಕವಾಗಿ ಪ್ರಮುಖವಾಗಿದೆ. ಈ ಪ್ರದೇಶವನ್ನು ಆಳಿದ ಪೂರ್ವ ಚಾಲುಕ್ಯರು ಇದನ್ನು ನಿರ್ಮಿಸಿದರು. ಇದನ್ನು ೮೯೨ CE ಮತ್ತು ೯೨೨ CE ರ ನಡುವೆ ನಿರ್ಮಿಸಲಾದ ಸಮರ್ಲಕೋಟದ (ಸಮಲ್ಕೋಟ್) ಭೀಮೇಶ್ವರಸ್ವಾಮಿ ದೇವಾಲಯಕ್ಕೆ ಮುಂಚಿತವಾಗಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ದಂತಕಥೆ ದಕ್ಷ ಯಜ್ಞ ನಡೆದ ಸ್ಥಳವನ್ನು ದಕ್ಷರಾಮ ಎಂದು ಪರಿಗಣಿಸಲಾಗಿದೆ. ಭಗವಾನ್ ವೀರಭದ್ರನು ಸ್ಥಳದಲ್ಲಿ ನಡೆಸಿದ ರಂಪಾಟ ಮತ್ತು ಹತ್ಯಾಕಾಂಡದ ನಂತರ ಶಿವನು ಈ ಸ್ಥಳವನ್ನು ಪವಿತ್ರಗೊಳಿಸಿದನು. ಹೆಗ್ಗುರುತುಗಳು ಭೀಮೇಶ್ವರ ಸ್ವಾಮಿ ದೇವಾಲಯವು ಒಂದು ದೊಡ್ಡ ದೇವಾಲಯವಾಗಿದ್ದು, ಇದನ್ನು ಪೂರ್ವ ಚಾಲುಕ್ಯರು ನವೀಕರಿಸಿದರು. ಈ ದೇವಾಲಯವು "ಸಪ್ತ ಗೋದಾವರಿ" ಎಂದು ಕರೆಯಲ್ಪಡುವ ಪುಷ್ಕರಿಣಿಯನ್ನು ಹೊಂದಿದೆ, ಅಲ್ಲಿ ಸಪ್ತ ಋಷಿಗಳು ಇದನ್ನು ರಚಿಸಲು ಏಳು ವಿವಿಧ ನದಿಗಳಿಂದ ನೀರನ್ನು ತಂದರು. ಸಪ್ತ ಗೋದಾವರಿ ಪುಷ್ಕರಿಣಿಯಲ್ಲಿರುವ ಸಣ್ಣ ಮಂಟಪದಲ್ಲಿ ಸಪ್ತರ್ಷಿಗಳನ್ನು ಕಾಣಬಹುದು. ವ್ಯಾಸ ಮತ್ತು ಅಗಸ್ತ್ಯ ಋಷಿಯಿಂದ ಪೂಜಿಸಲ್ಪಟ್ಟ ಅಗಸ್ತ್ಯೇಶ್ವರ ಸ್ವಾಮಿ ನಿರ್ಮಿಸಿದ ಕಾಶಿ ವಿಶ್ವೇಶರ ದೇವಸ್ಥಾನಕ್ಕೆ ಭೇಟಿ ನೀಡಬಹುದು. ದೇವಾಲಯದ ಆವರಣದಲ್ಲೂ ಕೆಲವು ಮಂಟಪಗಳು ಲಭ್ಯವಿವೆ. ದೇವಾಲಯದ ಸುತ್ತಲೂ ನಾಲ್ಕು ಗೋಪುರಗಳನ್ನು ಮತ್ತು ದೇವಾಲಯದ ಆವರಣದೊಳಗೆ ಕಾಲಭೈರವ, ವೀರಭದ್ರ ಮತ್ತು ವಟುಕ ಭೈರವ ದೇವಾಲಯಗಳಂತಹ ಕೆಲವು ದೇವಾಲಯಗಳನ್ನು ಕಾಣಬಹುದು. ಹಬ್ಬಗಳು ಮಹಾ ಶಿವರಾತ್ರಿ ಮತ್ತು ದಸರಾ ದ್ರಾಕ್ಷರಾಮಕ್ಕೆ ಸಂಬಂಧಿಸಿದ ಪ್ರಮುಖ ಹಬ್ಬಗಳಾಗಿವೆ. ಸಾರಿಗೆ ದ್ರಾಕ್ಷರಾಮವು ಅಮಲಪುರಂನಿಂದ ೨೫ ಕಿ.ಮೀ, ಕಾಕಿನಾಡದಿಂದ ೨೮ ಕಿ.ಮೀ ಮತ್ತು ರಾಜಮಂಡ್ರಿಯಿಂದ ೫೦ ಕಿ.ಮೀ ದೂರದಲ್ಲಿದೆ. ಜನರು ರೈಲಿನ ಮೂಲಕ ರಾಜಮಂಡ್ರಿ ಮತ್ತು ಕಾಕಿನಾಡವನ್ನು ತಲುಪಬಹುದು ಮತ್ತು ಅಲ್ಲಿಂದ ರಸ್ತೆಯ ಮೂಲಕ ದ್ರಾಕ್ಷರಾಮವನ್ನು ತಲುಪಬಹುದು. ರಾಜ್ಯ ಹೆದ್ದಾರಿಯು ಭಾರತದ ಎಲ್ಲಾ ಪ್ರಮುಖ ಪಟ್ಟಣಗಳು ಮತ್ತು ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಆಗಾಗ್ಗೆ ಬಸ್ ಸೇವೆಗಳು ಲಭ್ಯವಿದೆ. ಇದರ ಹತ್ತಿರದ ವಿಮಾನ ನಿಲ್ದಾಣವೆಂದರೆ ''ರಾಜಮಂಡ್ರಿ ವಿಮಾನ ನಿಲ್ದಾಣ''. ರಸ್ತೆ, ರೈಲು ಮತ್ತು ವಿಮಾನದ] ಮೂಲಕ ದ್ರಾಕ್ಷರಾಮವನ್ನು ತಲುಪಬಹುದು. ರಸ್ತೆ: ರಾಜಮಂಡ್ರಿ ತಲುಪಿ ರಾಮಚಂದ್ರಾಪುರಕ್ಕೆ ಬಸ್‌ನಲ್ಲಿ ಹೋಗಬಹುದು ಅಥವಾ ರಾವುಲಪಾಲೆಂಗೆ ಬಂದು ರಾಮಚಂದ್ರಾಪುರಕ್ಕೆ ಬಸ್‌ನಲ್ಲಿ ಹೋಗಬಹುದು. ರಾಮಚಂದ್ರಾಪುರದಿಂದ ಕೋಟಿಪಲ್ಲಿ ಅಥವಾ ಯಾನಂ ಮತ್ತು ಇತರ ಬಸ್ಸುಗಳಲ್ಲಿ ದ್ರಾಕ್ಷರಾಮ ತಲುಪಬೇಕು. ರೈಲು: ಕಾಕಿನಾಡ ತಲುಪಿ ದ್ರಾಕ್ಷಾರಾಮಕ್ಕೆ ರೈಲಿನಲ್ಲಿ ಹೋಗಬಹುದು ಆದರೆ ಈಗ ಒಂದೇ ರೈಲು ಬಸ್ ಚಲಿಸುತ್ತಿದೆ ಮತ್ತು ಅದು ನಿರಂತರವಾಗಿ ಚಲಿಸುವುದಿಲ್ಲ. ವಿಮಾನ: ವಿಮಾನದ ಮೂಲಕ ರಾಜಮಂಡ್ರಿಗೆ ತಲುಪಬಹುದು ಮತ್ತು ವಿಮಾನ ನಿಲ್ದಾಣದಿಂದ ಕ್ಯಾಬ್ ಮೂಲಕ ಒಂದೂವರೆ ಗಂಟೆಯಲ್ಲಿ ದ್ರಾಕ್ಷರಾಮವನ್ನು ತಲುಪಬಹುದು. ಉಲ್ಲೇಖಗಳು ಹಿಂದೂ ದೇವಾಲಯಗಳು ಆಂಧ್ರ ಪ್ರದೇಶದ ಪ್ರವಾಸಿ ತಾಣಗಳು ದೇವಾಲಯಗಳು ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ
152261
https://kn.wikipedia.org/wiki/%E0%B2%95%E0%B3%8B%E0%B2%B0%E0%B2%BF%20%E0%B2%B0%E0%B3%8A%E0%B2%9F%E0%B3%8D%E0%B2%9F%E0%B2%BF
ಕೋರಿ ರೊಟ್ಟಿ
ಕೋರಿ ರೊಟ್ಟಿ ತುಳು ಉಡುಪಿ - ಮಂಗಳೂರು ಪಾಕಪದ್ಧತಿಯ ಭಕ್ಷ್ಯವಾಗಿದೆ. ಕೋರಿ ಎಂದರೆ ತುಳುವಿನಲ್ಲಿ ಕೋಳಿ ಎಂದರ್ಥ. ರೊಟ್ಟಿ ಅಕ್ಕಿಯಿಂದ ತಯಾರಿಸಲಾಗುತ್ತದೆ. ಸಹ ನೋಡಿ ಕೋಳಿ ಭಕ್ಷ್ಯಗಳ ಪಟ್ಟಿ ಮಂಗಳೂರಿನ ಪಾಕಪದ್ಧತಿ ಉಡುಪಿ ತಿನಿಸು ಬಾಹ್ಯ ಕೊಂಡಿಗಳು ಕೋರಿ ರೊಟ್ಟಿ ಮಾಡುವುದು ಹೇಗೆ ಉಲ್ಲೇಖಗಳು ಆಹಾರ ಪದಾರ್ಥಗಳು
152262
https://kn.wikipedia.org/wiki/%E0%B2%A6%E0%B2%BE%E0%B2%B0%E0%B3%81%E0%B2%95
ದಾರುಕ
ದಾರುಕಾ ಹಿಂದೂ ಪುರಾಣದ ಎರಡು ಪ್ರಮುಖ ಪಾತ್ರಗಳ ಹೆಸರು: ದಾರುಕ (ಸಂಸ್ಕೃತ: दारुक) ಕೃಷ್ಣನ ಸಾರಥಿ ಎಂದು ಸೂಚಿಸುತ್ತದೆ. ದಾರುಕಾ (ಸಂಸ್ಕೃತ: दारुका) ರಾಕ್ಷಸಿಯ ಹೆಸರನ್ನು ಸೂಚಿಸುತ್ತದೆ. ಸಾರಥಿ ದಾರುಕ ಮಹಾಕಾವ್ಯ ಮಹಾಭಾರತವು ದಾರುಕನನ್ನು ಕೃಷ್ಣನ ಸಾರಥಿಯಾಗಿ ಚಿತ್ರಿಸುತ್ತದೆ. ರಥವನ್ನು ಓಡಿಸುವಲ್ಲಿ ಅವರು ಅಸಾಧಾರಣ ಕೌಶಲ್ಯವನ್ನು ಹೊಂದಿದ್ದರು. ದಾರುಕನು ತನ್ನ ಮಿತ್ರನಾದ ಶಿಶುಪಾಲನ ಮರಣದ ನಂತರ ದ್ವಾರಕಾದ ಮೇಲೆ ದಾಳಿ ಮಾಡಿದಾಗ ರಾಜ ಶಾಲ್ವನ ಬಾಣಗಳಿಂದ ಹತನಾದನು. ಮಹಾಭಾರತ ಯುದ್ಧದಲ್ಲಿ ದಾರುಕನು ಸಾತ್ಯಕಿಯ ರಥವನ್ನು ಓಡಿಸಿದನು. ಸಾತ್ಯಕಿಯು ಕರ್ಣನೊಡನೆ ಹೋರಾಡಿದಾಗ ದಾರುಕನು ಸಾತ್ಯಕಿಯನ್ನು ರಕ್ಷಿಸಲು ತನ್ನ ಪ್ರತಿಭೆ ಮತ್ತು ಕೌಶಲ್ಯವನ್ನು ಅನೇಕ ಬಾರಿ ಬಳಸಿದನು. ಶ್ರೀ ಕೃಷ್ಣನು ಭೂಮಿಯಿಂದ ಕಣ್ಮರೆಯಾದ ನಂತರ, ದಾರುಕನು ಶ್ರೀ ಕೃಷ್ಣನ ರಥದ ಕುದುರೆಗಳು ಆಕಾಶದಲ್ಲಿ ಹಾರುತ್ತಾ ಕಣ್ಮರೆಯಾಗುವುದನ್ನು ನೋಡಿದನು. ಯಾದವ ವಂಶದ ಅಂತ್ಯಕ್ಕೂ ಸಾಕ್ಷಿಯಾದರು, ಅವನು ಯಾದವರ ಅಂತ್ಯದ ಬಗ್ಗೆ ಅರ್ಜುನನಿಗೆ ತಿಳಿಸಿದನು. ರಾಕ್ಷಸ ದಾರುಕ ಶಿವ ಪುರಾಣದಲ್ಲಿ ರಾಕ್ಷಸಿ ದಾರುಕಾ ಮತ್ತು ಅವಳ ಪತಿ ದಾರುಕ ಎಂಬ ರಾಕ್ಷಸನನ್ನು ಒಳಗೊಂಡಿದೆ. ಅವರು ದಾರುಕವನ ಎಂದು ಕರೆಯಲ್ಪಡುವ ಅರಣ್ಯದಲ್ಲಿ ವಾಸಿಸುತ್ತಿದ್ದರು. ದಾರುಕಾ ದೇವತೆ ಪಾರ್ವತಿಯಿಂದ ವರವನ್ನು ಪಡೆದಳು ಎಂದು ಹೇಳಲಾಗುತ್ತದೆ. ದಾರುಕಾ ದೇವಿ ಪಾರ್ವತಿಯಿಂದ ವರವನ್ನು ಪಡೆದಳು, ಇದರಿಂದಾಗಿ ಅವಳು ಕಾಡಿನಲ್ಲಿ ಎಲ್ಲಿಗೆ ಹೋದರೂ ಆ ಭಾಗವು ಮರಗಳು ಮತ್ತು ಇತರ ಅಗತ್ಯಗಳಿಂದ ತುಂಬಿತ್ತು. ಋಷಿ ಔರ್ವನ ಆಶ್ರಯ ಪಡೆದ ಉದಾತ್ತ ಜನರು ರಾಕ್ಷಸರಿಂದ ಭಯಭೀತರಾಗಿ ಋಷಿ ಔರ್ವನ ಆಶ್ರಯ ಪಡೆದರು ಮತ್ತು ತಮ್ಮನ್ನು ರಕ್ಷಿಸುವಂತೆ ವಿನಂತಿಸಿದರು. ಋಷಿ ಔರ್ವ ರಾಕ್ಷಸರ ಮೇಲೆ ಒಂದು ಶಾಪವನ್ನು ಉಚ್ಚರಿಸಿದರು, ಅವರು ಭೂಮಿಯ ಮೇಲಿನ ಜನರನ್ನು ಕೊಲ್ಲಲು ಪ್ರಯತ್ನಿಸಿದರೆ, ಅವರು ಶಕ್ತಿಯುತವಾಗಿದ್ದರೂ ಅವರೇ ಕೊಲ್ಲಲ್ಪಡುತ್ತಾರೆ. ದೇವತೆಗಳು ಈ ಶಾಪವನ್ನು ತಿಳಿದುಕೊಂಡರು ಮತ್ತು ಈ ಅವಕಾಶವನ್ನು ಬಳಸಿಕೊಂಡು ರಾಕ್ಷಸರೊಂದಿಗೆ ಯುದ್ಧಕ್ಕೆ ಸಿದ್ಧರಾದರು. ರಾಕ್ಷಸರು ದೇವತೆಗಳ ಉದ್ದೇಶವನ್ನು ತಿಳಿದು ಭಯಗೊಂಡರು. ಅವರು ಹೋರಾಡಿದರೆ, ಅವರು ನಾಶವಾಗುತ್ತಾರೆ. ಹೀಗೆ ಚಿಂತಿತರಾದಾಗ, ರಾಕ್ಷಸ ದಾರುಕಾವು ತನಗೆ ಪಾರ್ವತಿ ದೇವಿಯಿಂದ ವರವಿದೆ ಎಂದು ಹೇಳಿದಳು, ಅದರ ಮೂಲಕ ಇಡೀ ಅರಣ್ಯವನ್ನು ತನಗೆ ಇಷ್ಟವಾದ ಕಡೆ ಸಾಗಿಸಬಹುದು. ನಂತರ ಅವಳು ಇಡೀ ಅರಣ್ಯವನ್ನು ಸಾಗರದೊಳಗೆ ಸಾಗಿಸಿದಳು. ಋಷಿ ಔರ್ವನ ಶಾಪದಿಂದಾಗಿ, ರಾಕ್ಷಸರು ಭೂಮಿಗೆ ಹಿಂತಿರುಗಲಿಲ್ಲ, ಆದರೆ ನೀರಿನ ಮೇಲ್ಮೈಯಲ್ಲಿ ಸುತ್ತಾಡಿದರು. ಅವರು ನಾವಿಕ ಕಿರುಕುಳದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಾಕ್ಷಸರು ಜನರನ್ನು ಬಂಧಿಗಳನ್ನಾಗಿ ಮಾಡಿ ತಮ್ಮ ನಗರದಲ್ಲಿ ಬಂಧಿಸಿಟ್ಟರು. ಆ ಜನರ ನಾಯಕ ಸುಪ್ರಿಯ, ಒಬ್ಬ ವೈಶ್ಯ ಮತ್ತು ಶಿವನ ಭಕ್ತ. ಪ್ರತಿನಿತ್ಯ ಶಿವನನ್ನು ಪೂಜಿಸಿ ಬೂದಿಯನ್ನು ಮೈಮೇಲೆ ಹಚ್ಚಿಕೊಂಡು ರುದ್ರಾಕ್ಷ ಜಪಮಾಲೆಯನ್ನು ಧರಿಸುತ್ತಿದ್ದರು. ಶಿವನನ್ನು ಪೂಜಿಸಲು ವಿಫಲವಾದ ದಿನ, ಅವರು ಆ ದಿನ ಆಹಾರವನ್ನು ತೆಗೆದುಕೊಳ್ಳುದಿಲ್ಲ. ಜೈಲಿನೊಳಗೆ ಸುಪ್ರಿಯಾ ಪಾರ್ಥಿವ ಲಿಂಗದಲ್ಲಿ ಶಿವನನ್ನು ಪೂಜಿಸಿದರು. ಇತರ ಕೈದಿಗಳಿಗೆ ಶಿವನ ಪಂಚಾಕ್ಷರಿ ಮಂತ್ರವನ್ನು ಬೋಧಿಸಿದರು. ರಾಕ್ಷಸ ದಾರುಕನು ಸುಪ್ರಿಯಾಳನ್ನು ಕೊಲ್ಲಲು ಪ್ರಯತ್ನಿಸಿದನು. ಶಿವನು ತನ್ನ ಭಕ್ತನನ್ನು ರಕ್ಷಿಸಲು, ದಾರುಕನನ್ನು ಪಾಶುಪತಾಸ್ತ್ರದಿಂದ ಸಂಹರಿಸಿದನು. ಉಲ್ಲೇಖಗಳು ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ ಪುರಾಣಗಳು
152266
https://kn.wikipedia.org/wiki/%E0%B2%AA%E0%B3%80%E0%B2%9F%E0%B2%B0%E0%B3%8D%20%E0%B2%AC%E0%B3%8D%E0%B2%B0%E0%B3%86%E0%B2%AF%E0%B2%BE%E0%B2%A8%E0%B3%8D%20%E0%B2%AE%E0%B3%87%E0%B2%A1%E0%B2%BE%E0%B2%B5%E0%B2%B0%E0%B3%8D
ಪೀಟರ್ ಬ್ರೆಯಾನ್ ಮೇಡಾವರ್
ಪೀಟರ್ ಬ್ರೆಯಾನ್ ಮೇಡಾವರ್ (28 ಫೆಬ್ರುವರಿ 1915 - 2 ಅಕ್ಟೋಬರ್ 1987) ಬ್ರಿಟನ್ನಿನ ಜೀವವಿಜ್ಞಾನಿ. ಪ್ರತಿರೋಧಜನಕಗಳ (ಆಂಟಿಜೆನ್ಸ್) ಆರ್ಜಿತಸಹಿಷ್ಣುತೆಯ (ಅಕ್ವೈರ್ಡ್ ಇಮ್ಯೂನೊಲಾಜಿಕಲ್ ಟಾಲರೆನ್ಸ್) ಬಗ್ಗೆ ನಡೆಸಿದ ವ್ಯಾಸಂಗಕ್ಕಾಗಿ ಬರ್ನೆಟ್ ಎಂಬ ವಿಜ್ಞಾನಿಯೊಂದಿಗೆ ಜಂಟಿಯಾಗಿ 1960 ರ ನೊಬೆಲ್ ಪಾರಿತೋಷಿಕ ಪಡೆದ. ಜನನ, ವಿದ್ಯಾಭ್ಯಾಸ ಮೇಡಾವರ್ 1915 ಫೆಬ್ರುವರಿ 28 ರಂದು ದಕ್ಷಿಣ ಅಮೆರಿಕದ ರೈಯೋಡಿಜನೈರೋವಿನಲ್ಲಿ ಜನಿಸಿದ. ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿ ಆಕ್ಸ್‌ಫರ್ಡಿನ ಮಾರ್ಲ್‌ಬರೋ ಮತ್ತು ಮ್ಯಾಗ್ಡಲೀನ್ ವಿದ್ಯಾಲಯಗಳಲ್ಲಿ ವ್ಯಾಸಂಗಿಸಿ 1939 ರಲ್ಲಿ ವಿಜ್ಞಾನ ಪದವೀಧರನಾದ. ವೃತ್ತಿ, ಸಾಧನೆಗಳು ಅಲ್ಲೇ ಅಧ್ಯಾಪಕವೃತ್ತಿ ಕೈಗೊಂಡು 1936 - 45 ಮತ್ತು 1946 - 47 ಅವಧಿಗಳಲ್ಲಿ ಕೆಲಸ ಮಾಡಿದ. 1947 - 51 ಅವಧಿಯಲ್ಲಿ ಬರ್ಮಿಂಗ್ಹ್ಯಾಮಿನಲ್ಲಿ ಪ್ರಾಣಿವಿಜ್ಞಾನದ ಪ್ರಾಧ್ಯಾಪಕನಾಗಿದ್ದ. 1951 - 62 ರ ಅವಧಿಯಲ್ಲಿ ಲಂಡನ್ ಯೂನಿವರ್ಸಿಟಿಯ ಕಾಲೇಜಿನಲ್ಲಿ ಮೇಸನ್ ನಾಮಾಂಕಿತ ಪ್ರಾಣಿವಿಜ್ಞಾನ ಪ್ರಾಧ್ಯಾಪಕನಾಗಿಯೂ ಜೋಡ್ರೆಲ್ ನಾಮಾಂಕಿತ ತುಲನಾತ್ಮಕ ಅಂಗರಚನಾ ವಿಜ್ಞಾನದ ಪ್ರಾಧ್ಯಾಪಕನಾಗಿಯೂ ನೇಮಿತನಾಗಿದ್ದ. 1962 ರಲ್ಲಿ ಬ್ರಿಟನ್ನಿನ ವೈದ್ಯಕೀಯ ಸಂಶೋಧನೆಯ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಹುದ್ದೆ ಪಡೆದು 1971 ರ ತನಕ ಅಲ್ಲಿ ಸ್ವತಃ ಸಂಶೋಧನೆಗಳಲ್ಲಿ ನಿರತನಾಗಿದ್ದ. ವಿದ್ಯಾಭ್ಯಾಸ ಮುಗಿದೊಡನೆ ಮೇಡಾವರ್ ತನ್ನ ಪ್ರಯೋಗಾಲಯದಲ್ಲಿ ಊತಕ ಕೃಷಿ (ಟಿಶ್ಯೂ ಕಲ್ಚರ್) ಸಫಲವಾಗಲು ಅಗತ್ಯ ವಿಷಯಗಳ ವ್ಯಾಸಂಗಗಳಲ್ಲಿ ತೊಡಗಿದ. 1939 ರಲ್ಲಿ ಎರಡನೆಯ ಮಹಾಯದ್ಧ ಪ್ರಾರಂಭವಾದಾಗ ಯುದ್ಧರಂಗದಲ್ಲಿ ಅನುಕೂಲವಾದೀತು ಎನ್ನಿಸಿದ ಛಿದ್ರಿತ ನರದುರಸ್ತಿ ಬಗ್ಗೆ ಸಂಶೋಧನೆ ಮಾಡಿ ಛಿದ್ರಿತ ನರಗಳನ್ನೂ ನಾಟಿಮಾಡಿದ ನರಗಳನ್ನೂ ಸ್ಥಳೀಯವಾಗಿ ನೆಲೆ ನಿಲ್ಲಿಸಲು ಮೊತ್ತಮೊದಲಾದ ಜೈವಿಕ ಅಂಟನ್ನು (ಬಯೊಲಾಜಿಕಲ್ ಗ್ಲೂ) ತಯಾರಿಸಿದ. ಅಧಿಕವಾಗಿ ವಿಲೀನಗೊಳಿಸಿದ ಫೈಬ್ರಿನೋಜೆನ್ ದ್ರಾವಣ ಇದು. ಯುದ್ಧರಂಗದಲ್ಲಿ ತೀರ ಅಗತ್ಯವೆಂದು ತೋರಿದ ಇನ್ನೊಂದು ಸಂದರ್ಭವೆಂದರೆ ಗಾಯದಿಂದ ಚರ್ಮನಾಶವಾಗಿ ಗಾಯಾಳುಗಳು ಅಗಾಧ ನೋವು ವ್ರಣಗಳಿಂದ ನರಳುವುದಕ್ಕೆ ಚಿಕಿತ್ಸೆ. ಗಾಯವಾದ ಜಾಗದಲ್ಲಿ ಚರ್ಮ ಪುನಃಶ್ಚೇತನವನ್ನು ತೀವ್ರಗೊಳಿಸುವ ಚಿಕಿತ್ಸೆಗಳನ್ನೂ, ಲೇಪನಗಳನ್ನೂ ಬಳಸಿ ಸಫಲವಾಗದೇ ಮೇಡಾವರ್ ಹತಾಶನಾಗಿ ಮೃತ ವ್ಯಕ್ತಿಯೊಬ್ಬನ ಚರ್ಮವನ್ನು ಗಾಯದ ಮೇಲೆ ನಾಟಿ ಹಾಕಲು ಆಸಕ್ತನಾದ. ಇದಕ್ಕಾಗಿ ಮೇಧೋಜೀರಕ ರಸದಲ್ಲಿ ಇರುವ ಟ್ರಿಪ್ಸಿನ್ ಎಂಬ ಕಿಣ್ವದಿಂದ ಚರ್ಮವನ್ನು ಭಾಗಶಃ ಪಚನಮಾಡಿಸಿ ದ್ರವದಲ್ಲಿ ಇನ್ನೂ ಉಳಿದುಕೊಂಡು ತೇಲಾಡುತ್ತಿರುವ ಹೊರಚರ್ಮಕೋಶಗಳನ್ನು ಗಾಯದ ಮೇಲೆ ಪದರವಾಗುವಂತೆ ಲೇಪಿಸಿದ. ಈ ಕೋಶಗಳು ನೆಲೆನಿಂತು ಹೊಸಚರ್ಮ ಬೆಳೆಯುವುದೇನೋ ಎಂಬ ಇವನ ಆಸೆ ಸಫಲವಾಗಲಿಲ್ಲ. ಗಾಯ ವಾಸಿ ಆದಾಗ ಅದು ಮಾಮೂಲಿನಂತೆ ಸುತ್ತಲಿನ ಚರ್ಮವನ್ನು ಎಳೆದುಕೊಂಡು ಸುತ್ತುಕಟ್ಟಿಕೊಂಡ ಕಲೆಯಾಗಿಯೇ ಉಳಿಯಿತು. ಮುಂದೆ ಮೇಡಾವರ್ ತಾವಾಗಿಯೇ ಮುಂಬಂದ ದಾನಿಗಳ ಚರ್ಮ ತೆಗೆದು ನಾಟಿಹಾಕಿದ. ಆದರೆ ಇಲ್ಲಿಯೂ ಯಶಸ್ಸು ದೊರೆಯಲಿಲ್ಲ. ಅಕಸ್ಮಾತ್ ಏನಾದರೂ ನಾಟಿ ಕೆಲವು ದಿನ ನಿಂತಿದ್ದರೂ ಶೀಘ್ರವಾಗಿ ನಾಶವಾಗಿ ಹೋಗುತ್ತಿತ್ತು. ಇಲಿ ಚರ್ಮಗಳನ್ನು ನಾಟಿಹಾಕಿ ಅವು ಊರ್ಜಿತವಾಗದಿರುವ ವಿಷಯ ಇವನಿಗೆ ಮುಂಚೆಯೇ ತಿಳಿದಿತ್ತು. ಅನ್ಯಜಾತಿ ನಾಟಿ ವಿಫಲವಾಗುವುದೇನೋ ಸರಿ. ಆದರೆ ಜೀವಂತ ವ್ಯಕ್ತಿಯ ಚರ್ಮನಾಟಿ ಅನೂರ್ಜಿತವಾಗುವುದು ಏಕೆಂದು ಈತನಿಗೆ ಅರ್ಥವಾಗಲಿಲ್ಲ. ಅಲ್ಲದೆ ಎರಡನೆಯ ಸಾರಿ ನಾಟಿಹಾಕಿದರೆ ಅದು ಇನ್ನೂ ಬೇಗ ನಾಶವಾಗಿಬಿಡುತ್ತಿತ್ತು. ಅಂದರೆ ದೇಹದಲ್ಲೇ ನಾಟಿಗೆ ಪ್ರತಿರೋಧಕತೆ ಇರುವುದು ಸ್ಪಷ್ಟವಾಯಿತು. ಆದರೆ ಪ್ರತಿಶೋಧಕ ವಸ್ತು ಯಾವುದೆಂಬುದು ಪತ್ತೆ ಆಗಲಿಲ್ಲ. ದೇಹದಲ್ಲಿ ಪರಜೀವಿಯ ಕೋಶ ಹಾಗೂ ಅನ್ಯವಸ್ತುಗಳ ವಿರುದ್ಧ ಪ್ರತಿರೋಧಕತೆ ಇದ್ದು ಅವನ್ನು ದೇಹ ಸಹಿಸುವುದಿಲ್ಲ, ವರ್ಜಿಸುತ್ತದೆ, ನಾಶಮಾಡುತ್ತದೆ. ಈ ವಿಷಯವಾಗಿ ಬರ್ನೆಟ್ ಎಂಬ ವಿಜ್ಞಾನಿ ಪ್ರಾಯೋಗಿಕ ವ್ಯಾಸಂಗ ಮಾಡಿ 1949 ರಲ್ಲಿ ಒಂದು ಸಿದ್ಧಾಂತ ಮಂಡಿಸಿದ್ದ. ಭ್ರೂಣ ಬೆಳೆವಣಿಗೆಯ ಒಂದು ಹಂತದಲ್ಲಿ ಅದು ಸ್ವಕೀಯ ಕೋಶಗಳನ್ನೂ ಅನ್ಯ ಕೋಶಗಳನ್ನೂ ಗುರುತಿಸುವ ಸಾಮರ್ಥ್ಯ ಪಡೆದು ಅನ್ಯಕೋಶಗಳ ವಿರುದ್ಧ ಪ್ರತಿರೋಧಕಗಳನ್ನು ತಯಾರಿಸಿಕೊಳ್ಳುವುದೆಂದೂ ಜನನಾನಂತರವೂ ಈ ಪ್ರತಿರೋಧ ವಸ್ತುಗಳು ಅನ್ಯಕೋಶ ಆಕ್ರಮಣ ವಿರುದ್ಧ ರಕ್ಷಣೆ ಒದಗಿಸುವುದೆಂದೂ ಸಿದ್ಧಾಂತಿಸಿದ. ಇವಕ್ಕೂ ಅನುಗುಣವಾಗಿಯೇ ಅನ್ಯಚರ್ಮದ ನಾಟಿ ನಿಲ್ಲದೆ ಹೋಗಿರಬೇಕೆಂದು ಮೇಡಾವರನಿಗೆ ವೇದ್ಯವಾಯಿತು. ಆದರೆ ಸಜಾತಿ ನಾಟಿಯಾದರೂ ನಿಲ್ಲುವಂತೆ ಉಪಾಯ ಪತ್ತೆ ಮಾಡಬೇಕೆಂದು ಬಯಸಿ ಬಿಲ್ಲಿಂಗ್ಹ್ಯಾಮ್ ಎಂಬ ಪ್ರತಿಭಾವಂತ ವಿಜ್ಞಾನಿ ಎರಡನೆಯ ಮಹಾಯುದ್ಧದ ನಂತರ ಮೇಡಾವರನಿಗೆ ಸಹಾಯಕನಾಗಿ ಸೇರಿದ. ಮೊದಲು ಇವರು ಬೇರೆ ವ್ಯಾಸಂಗಗಳ ಕಡೆ ಗಮನ ಕೊಟ್ಟರೂ ಶೀಘ್ರವಾಗಿಯೇ ಸ್ವಜಾತಿ ಅಂಗನಾಟಿ ಊರ್ಜಿತವಾಗಲು ಉಪಾಯ ಶೋಧಿಸುವ ಪ್ರಯತ್ನ ಮುಂದುವರಿಸಿದರು. ಈ ಸಮಯದಲ್ಲಿ ಇವರಿಗೆ ಅವಳಿ ಕರುಗಳ ವಿಷಯ ತನಿಖೆಗಾಗಿ ಒಂದು ಕರೆ ಬಂತು. ಅವು ಒಂದೇ ಭ್ರೂಣಾಣುವಿನಿಂದ ಬೆಳೆದಿದ್ದವೇ ಅಥವಾ ಎರಡು ಬೇರೆ ಭ್ರೂಣಾಣುಗಳಿಂದ ಬೆಳೆದಿದ್ದವೇ ಎಂಬುದನ್ನು ಖಚಿತವಾಗಿ ಪತ್ತೆಮಾಡುವ ವಿಧಾನವನ್ನು ಇವರು ಸೂಚಿಸಬೇಕಾಗಿತ್ತು. ಅವಳಿಗಳು ಗಂಡೊಂದು ಹೆಣ್ಣೊಂದಾಗಿದ್ದರೆ ಅವು ಬೇರೆ ಬೇರೆ ಭ್ರೂಣಾಣುಗಳಿಂದ ಬೆಳೆದವು ಎಂಬುದು ವ್ಯಕ್ತ. ಎರಡೂ ಒಂದೇ ಲಿಂಗವಾಗಿದ್ದರೆ ಕಷ್ಟ. ಈ ಸಂದರ್ಭದಲ್ಲಿ ಒಂದರ ಚರ್ಮವನ್ನು ಇನ್ನೊಂದಕ್ಕೆ ನಾಟಿಹಾಕಿ ನೋಡಿದರೆ ಪತ್ತೆ ಆದೀತೇನೋ ಎನಿಸಿತು. ಅದರಂತೆ ಪ್ರಯೋಗ ಮಾಡಿದಾಗ ಅವಳಿಗಳಲ್ಲಿ ಗಂಡೊಂದು ಹೆಣ್ಣೊಂದು ಆಗಿದ್ದ ಸಂದರ್ಭದಲ್ಲಿ (ಅಂದರೆ ಅವು ಬೇರೆ ಬೇರೆ ಭ್ರೂಣಾಣುಗಳಿಂದ ಜನಿಸಿದವು ಎಂದು ಖಾತ್ರಿ ಆಗಿದ್ದರೂ) ಒಂದರ ಚರ್ಮ ಇನ್ನೊಂದಕ್ಕೆ ಸಹ್ಯವಾಗಿರುತ್ತಿತ್ತು. ಇದು ಬರ್ನೆಟ್ಟನ ಸಿದ್ಧಾಂತಕ್ಕೆ ವ್ಯತಿರಿಕ್ತ ಎನಿಸಿತು. ಆದರೆ ಅದೇ ಕಾಲದಲ್ಲಿ ಓವೆನ್ ಎಂಬ ವಿಜ್ಞಾನಿ ಗರ್ಭದಲ್ಲಿ ಏಕಕಾಲಿಕವಾಗಿ ಇರುವ ಎರಡು ಭ್ರೂಣಗಳ ನಡುವೆ ಕೆಂಪು ರಕ್ತಕಣ ಮಾತೃಕೆಗಳ ವಿನಿಮಯ ಆಗುತ್ತದೆ ಎಂದು ತೋರಿಸಿದ್ದ. ಇದೇ ರೀತಿ ಬಹುಶಃ ಎರಡೂ ಭ್ರೂಣಗಳ ನಡುವೆ ಚರ್ಮಕೋಶಗಳೂ (ಇನ್ನಿತರವೂ) ವಿನಿಮಯಗೊಳ್ಳುವುದೆಂದೂ ಅಂಥ ಅನ್ಯಕೋಶಗಳನ್ನು ಭ್ರೂಣ ಗುರುತಿಸಲಾರದೆಂದೂ ಆದ್ದರಿಂದ ಜನಿಸಿದ ಮೇಲೂ ಅದನ್ನು ಸಹಿಸಿಕೊಳ್ಳವುದೆಂದೂ ಯೋಚಿಸಿದರು. ಬಹುಶಃ ಹೀಗಾಗಿಯೇ ಹೆಣ್ಣುಗಂಡು ಅವಳಿಗಳಲ್ಲಿ ಚರ್ಮಕೋಶಗಳ ವಿನಿಮಯ ಆಗಿರುವುದರಿಂದ ಜನಿಸಿದ ಮೇಲೆಯೂ ಅವುಗಳಲ್ಲಿ ಪರಸ್ಪರ ಚರ್ಮನಾಟಿ ಸಹ್ಯವಾಗುವುದೆಂದು ಅರ್ಥ ಮಾಡಿದನು. ಆದರೆ ಈ ವಾದ ಸರಣಿ ಸರಿ ಎಂದು ಪ್ರಾಯೋಗಿಕವಾಗಿ ತೋರಿಸಿದ ಹೊರತು ಇದನ್ನು ಒಪ್ಪುವಂತಿರಲಿಲ್ಲ. ಆದ್ದರಿಂದ ಯುಕ್ತ ಪ್ರಯೋಗಗಳನ್ನು ಮಾಡಲು ಮೇಡಾವರ್ ಮತ್ತು ಬಿಲ್ಲಿಂಗ್ಹ್ಯಾಮ್ ನಿರ್ಧರಿಸಿದರು. ಇದೇ ಕಾಲದಲ್ಲಿ ಅವರನ್ನು ಇನ್ನೊಬ್ಬ ಪ್ರತಿಭಾವಂತ ವಿಜ್ಞಾನಿ ಬ್ರೆಂಟ್ ಎಂಬಾತ ಸೇರಿದ. ಬೆಳೆದ ಒಂದು ನಿರ್ದಿಷ್ಟ ಇಲಿಯ ಕೋಶಗಳನ್ನು ಇವರು ಇನ್ನೊಂದು ಇಲಿಯ ಗರ್ಭಸ್ಥ ಭ್ರೂಣ ದೇಹದ ಒಳಕ್ಕೆ ಚುಚ್ಚಿ ಮದ್ದು ರೀತಿ ಹುಗಿಸಿದರು. ಇಲಿಮರಿ ಹುಟ್ಟಿದ ಮೇಲೆ ಅದಕ್ಕೆ ನಿರ್ದಿಷ್ಟ ಇಲಿಯ ಚರ್ಮ ನಾಟಿಹಾಕಿ ನೋಡಿದರು. ನಾಟಿ ಸಫಲವಾಯಿತು. ದಾನಿಯ ಕೋಶಗಳನ್ನು ಭ್ರೂಣ ಕಾಲದಲ್ಲಿಯೇ ಪಡೆದಿದ್ದರೆ ಜನನಾನಂತರ ಆ ಜೀವಿ ದಾನಿಯ ಕೋಶಗಳನ್ನು ವರ್ಜಿಸದೆ, ಅಂದರೆ ಪ್ರತಿರೋಧಕತೆ ತೋರಿಸದೆ ಸಹಿಸಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿದಂತಾಯಿತು. ಭ್ರೂಣದಲ್ಲಿ ಸಹಿಷ್ಣುತೆ ಉಂಟುಮಾಡತಕ್ಕವು ಅನ್ಯಕೋಶಗಳು ಮಾತ್ರವೇ ಅಲ್ಲ. ಅವುಗಳ ಸಾರ ಕೂಡ ಈ ರೀತಿ ಪ್ರತಿಕ್ರಿಯೆ ತೋರಿಸಬಲ್ಲದು ಎಂದು ಮೇಡಾವರ್ ಮತ್ತು ಅವನ ಸಹೋದ್ಯೋಗಿಗಳು ತೋರಿಸಿದರು. ಇಷ್ಟರಲ್ಲಿ ಬಿಲ್ಲಿಂಗ್ಹ್ಯಾಮ್ ಬೇರೆ ಕಡೆ ಹೊರಟುಹೋಗಿದ್ದರಿಂದ ಬ್ರೆಂಟ್ ಒಬ್ಬನೇ ಮೇಡಾವರನ ಜೊತೆಗೆ ಉಳಿದ. ಇವರಿಬ್ಬರೇ ವ್ಯಾಸಂಗ ಮುಂದುವರಿಸುತ್ತ ಅನ್ಯಕೋಶ ಪ್ರತಿರೋಧಕತೆ ಕುರಿತು ಕೆಲವು ಅಂಶಗಳನ್ನು ವಿಶದೀಕರಿಸಿದರು. ದೇಹ ಅನ್ಯಕೋಶಾಂಗವನ್ನು ತಿರಸ್ಕರಿಸುವುದರ ಮುಖ್ಯ ಕಾರಣ ಆ ಕೋಶಗಳಿಗೆ ಅನುಗುಣವಾದ ಪ್ರತಿರೋಧವಸ್ತುವಿನ (ಆಂಟಿಬಾಡಿ) ತಯಾರಿಕೆ ಅಲ್ಲ, ದೇಹದ ದುಗ್ಧರಸ ಕಣಗಳು ಸೂಕ್ಷ್ಮಗ್ರಾಹಿಗಳಾಗಿ ವ್ಯತ್ಯಸ್ತವಾಗುವುದೆ ನಿಜ ಕಾರಣ ಎಂದು ಇವರು ವಿವರಿಸಿದರು. ಪ್ರತಿರೋಧಜನಕಗಳನ್ನು ದೇಹಕ್ಕೆ ಹುದುಗಿಸಿದರೆ ಪ್ರತಿರೋಧಕಗಳು ರಕ್ತದಲ್ಲಿ ಮತ್ತು ಲಸಿಕೆಯಲ್ಲಿ ಸಾಕಷ್ಟು ಶೀಘ್ರವಾಗಿಯೇ ಕಂಡುಬರುವುದು ಸಾಮಾನ್ಯ. ಇವು ಕೂಡಲೇ ಪ್ರತಿರೋಧಕಜನಕಗಳೊಡನೆ ವರ್ತಿಸಿ ಇವನ್ನು ನಿಷ್ಕ್ರಿಯಗೊಳಿಸುತ್ತವೆ. ಆದರೆ ಪ್ರತಿರೋಧಕಜನಕಗಳು ಗ್ರಾಹಕ ದೇಹದಲ್ಲಿ ದುಗ್ಧರಸ ಕಣಗಳನ್ನು ಸೂಕ್ಷ್ಮವೇದಿಗಳಾಗಿಯೂ ಮಾರ್ಪಡಿಸುತ್ತವೆ. ಇದರಿಂದ ಪುನಃ ಪ್ರತಿಕ್ರಿಯೆ ಕಂಡುಬರುತ್ತದೆ. ಅಂಗನಾಟಿ ವಿಸರ್ಜನೆಯಲ್ಲಿ ಪ್ರತಿರೋಧಕಗಳ ಕ್ರಿಯೆಗಿಂತಲೂ ಈ ರೀತಿಯ ತಡವಾದ ಪ್ರತಿಕ್ರಿಯೆ ಮುಖ್ಯ; ಆದರೆ ರಾಸಾಯನಿಕಗಳೇ ಆದ ಪ್ರತಿರೋಧಕಗಳಿಗಿಂತ ದುಗ್ಧರಸಕಣಗಳ ಪಾತ್ರವನ್ನೇ ಹೆಚ್ಚಾಗಿ ಗಮನಿಸಬೇಕು ಎಂದು ಮೇಡಾವರ್ ಸ್ಪಷ್ಟಪಡಿಸಿದ. ಇದಕ್ಕಾಗಿಯೇ ಇವನಿಗೆ ನೊಬೆಲ್ ಪಾರಿತೋಷಿಕ ದೊರೆತದ್ದು. ಪ್ರಾರಂಭದಲ್ಲಿ ಅಂಗನಾಟಿ ವ್ಯಾಸಂಗವನ್ನು ಕೆಲವೇ ವಿಜ್ಞಾನಿಗಳು ಕೈಗೊಳ್ಳುತ್ತಿದ್ದರು. ಮೇಡಾವರನ ಸಂಶೋಧನೆಯಿಂದಾಗಿ ಸಾವಿರಾರು ಜನ ವಿಜ್ಞಾನಿಗಳು ಈ ಒಂದು ವ್ಯಾಸಂಗದಲ್ಲಿ ನಿರತರಾದರು. ಹಾಗೆಯೇ ಅಂಗನಾಟಿ ಪ್ರಾರಂಭದಲ್ಲಿ ಅಕಸ್ಮಾತ್ತಾಗಿ ಊರ್ಜಿತವಾಗುವ ಸಂಭವವಿತ್ತು. ಈಗ ಮೇಡಾವರನ ವಿಶದೀಕರಣಗಳಿಂದ ತಕ್ಕ ಕ್ರಮಗಳನ್ನು ಅನುಸರಿಸಿ ಅದು ಅಧಿಕ ಪ್ರಮಾಣದಲ್ಲಿ ಸಫಲವಾಗುವಂತೆ ಮಾಡಲಾಗುತ್ತದೆ. ಇದಕ್ಕೆ ಮಾರ್ಗ ತೋರಿಸಿಕೊಟ್ಟ ಮೇಡಾವರನನ್ನು ಅಂತಾರಾಷ್ಟ್ರೀಯ ಅಂಗನಾಟಿ ಸಂಸ್ಥೆ 1966 ರಲ್ಲಿ ತನ್ನ ಅಧ್ಯಕ್ಷನನ್ನಾಗಿ ಮಾಡಿ ಗೌರವಿಸಿತು. ಮನುಷ್ಯನ ದೇಹ ಬೆಳೆವಣಿಗೆ ಮತ್ತು ಅದರ ಮೇಲೆ ವಯಸ್ಸಿನ ಪರಿಣಾಮ, ಅಂಗನಾಟಿಯ ಮೇಲೆ ಪ್ರತಿರೋಧ ಲಕ್ಷಣಗಳು, ಮುಖ್ಯವಾಗಿ ಅಂಗನಾಟಿ ತಿರಸ್ಕೃತವಾಗುವುದಕ್ಕೆ ಕಾರಣಗಳು, ಪ್ರತಿರೋಧಜನಕಗಳು, ಸೂಕ್ಷ್ಮಗ್ರಾಹಿಗಳಾಗಿ ಅಂಗನಾಟಿ ವಿಸರ್ಜಿತವಾಗುವುದಕ್ಕೆ ಕಾರಣವಾದ ದುಗ್ಧರಸಕಣಗಳನ್ನು ನಾಶಮಾಡಬಲ್ಲ ಲಸಿಕೆ ಮುಂತಾದ ವಿಷಯ ಕುರಿತು ಮೇಡಾವರ್ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. 1949 ರಲ್ಲಿ ಇಂಗ್ಲೆಂಡಿನ ರಾಯಲ್ ಸೊಸೈಟಿ ಇವನನ್ನು ಸದಸ್ಯನಾಗಿ ಪರಿಗಣಿಸಿ ಗೌರವಿಸಿತು. ಉಲ್ಲೇಖಗಳು ಹೊರಗಿನ ಕೊಂಡಿಗಳು The Personal Papers of Peter Medwar are available for study at the Wellcome Collection. ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತರು ವಿಜ್ಞಾನಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152286
https://kn.wikipedia.org/wiki/%E0%B2%B8%E0%B3%81%E0%B2%AC%E0%B3%8B%E0%B2%A7%E0%B3%8D%20%E0%B2%B0%E0%B2%BE%E0%B2%AF%E0%B3%8D
ಸುಬೋಧ್ ರಾಯ್
ಸುಬೋಧ್ ರಾಯ್ (1915 - 26 ಆಗಸ್ಟ್ 2006) (ಜುಂಕು ರಾಯ್ ಎಂದೂ ಸಹ ಕರೆಯುತ್ತಾರೆ) ಒಬ್ಬ ಭಾರತೀಯ ಕ್ರಾಂತಿಕಾರಿ ಸಮಾಜವಾದಿ, ರಾಜಕಾರಣಿ ಮತ್ತು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಭಾವಶಾಲಿಯಾಗಿದ್ದರು. ಜೀವನಚರಿತ್ರೆ ಸುಬೋಧ್ ರಾಯ್ ಅವರು 1915 ರಲ್ಲಿ ಹಿಂದಿನ-ಅವಿಭಜಿತ ಬಂಗಾಳದ ಚಿತ್ತಗಾಂಗ್‌ನಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. 14 ನೇ ವಯಸ್ಸಿನಲ್ಲಿ, ಅವರು ಕ್ರಾಂತಿಕಾರಿ ನಾಯಕ ಸೂರ್ಯ ಸೇನ್ (ಮಾಸ್ಟರ್ಡಾ) ನಿರ್ದೇಶನದ ಅಡಿಯಲ್ಲಿ 1930-31ರಲ್ಲಿ ಚಿತ್ತಗಾಂಗ್ ಶಸ್ತ್ರಾಸ್ತ್ರಗಳ ದಾಳಿಯಲ್ಲಿ ಭಾಗವಹಿಸಿದ ಅತ್ಯಂತ ಕಿರಿಯರಾಗಿದ್ದರು. ರಾಯ್ ಶಿಕ್ಷೆಗೆ ಗುರಿಯಾದ ಮೊದಲ ಬ್ಯಾಚ್‌ನಲ್ಲಿದ್ದರು. ವಿಚಾರಣೆಯ ನಂತರ, ಸುಬೋಧ್ ರಾಯ್ ಅವರನ್ನು 1934 ರಲ್ಲಿ ಪೋರ್ಟ್ ಬ್ಲೇರ್‌ನಲ್ಲಿರುವ ಸೆಲ್ಯುಲರ್ ಜೈಲಿಗೆ ಗಡೀಪಾರು ಮಾಡಲಾಯಿತು. 1940 ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ, ಅವರು ಕಮ್ಯುನಿಸ್ಟ್ ರಾಜಕೀಯಕ್ಕೆ ಸೇರಿದರು ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾದರು. ಸ್ವಾತಂತ್ರ್ಯದ ನಂತರ, ಅವರು ಕಲ್ಕತ್ತಾಗೆ ಸ್ಥಳಾಂತರಗೊಂಡರು ಮತ್ತು ಪಕ್ಷದ ಪ್ರಾಂತೀಯ ಕೇಂದ್ರದಲ್ಲಿ ಸಂಪೂರ್ಣ ಟೈಮರ್ ಆಗಿ ಸೇರಿಕೊಂಡರು. 1964 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಲ್ಲಿ ವಿಭಜನೆಯಾದ ನಂತರ, ಸುಬೋಧ್ ರಾಯ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ(ಎಂ)) ಪರವಾಗಿ ನಿಂತರು. ಅವರು ಸಿಪಿಐ(ಎಂ)ನ ಪಶ್ಚಿಮ ಬಂಗಾಳ ರಾಜ್ಯ ಸಮಿತಿಯ ದೀರ್ಘಕಾಲದ ಸದಸ್ಯರಾಗಿದ್ದರು. ಸುಬೋಧ್ ರಾಯ್ ಅವರು ಕಮ್ಯುನಿಸ್ಟ್ ಚಳುವಳಿಯ ಇತಿಹಾಸಕ್ಕೆ ಪ್ರಮುಖ ಪಾಂಡಿತ್ಯಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ. ನ್ಯಾಷನಲ್ ಆರ್ಕೈವ್ಸ್‌ನಲ್ಲಿ ಸಂಶೋಧನೆ ನಡೆಸಿದ್ದಾರೆ. ನಂತರ, ಅವರು "ಕಮ್ಯುನಿಸಂ ಇನ್ ಇಂಡಿಯಾ: ಅಪ್ರಕಟಿತ ದಾಖಲೆಗಳು" ಎಂಬ ಪುಸ್ತಕವನ್ನು ಸಂಪಾದಿಸಿದರು. ಜನಪ್ರಿಯ ಸಂಸ್ಕೃತಿ ಸುಬೋಧ್ ರಾಯ್ (ಜುಂಕು ಎಂಬ ಅಡ್ಡಹೆಸರು) ಡೆಲ್ಜಾದ್ ಹಿಲ್ವಾಡೆ ಯುವ ಪಾತ್ರವನ್ನು ನಿರ್ವಹಿಸಿದರೆ, ವಿಜಯ್ ವರ್ಮಾ ಬೇಡಬ್ರತ ಪೇನ್‌ನ ಚಿತ್ರ ಚಿತ್ತಗಾಂಗ್‌ನಲ್ಲಿ ತನ್ನ ಹಿರಿಯ ಪಾತ್ರವನ್ನು ನಿರ್ವಹಿಸಿದರು. ಉಲ್ಲೇಖಗಳು ಮಹಾತ್ಮ ಗಾಂಧಿ
152287
https://kn.wikipedia.org/wiki/%E0%B2%AE%E0%B2%95%E0%B2%BE%E0%B2%95%E0%B3%8D%20%E0%B2%95%E0%B3%8B%E0%B2%A4%E0%B2%BF
ಮಕಾಕ್ ಕೋತಿ
ಮಕಾಕ್ ಕೋತಿಯು ಸ್ತನಿ ವರ್ಗದ ಪ್ರೈಮೇಟ್ ಗಣದ ಸರ್ಕೋಪಿತಿಸಿಡೀ ಕುಟುಂಬಕ್ಕೆ ಸೇರಿದ ಮಕಾಕ ಜಾತಿಯ ಕೋತಿ. ಇದರಲ್ಲಿ ಸುಮಾರು 12 ಪ್ರಭೇದಗಳುಂಟು. ದಕ್ಷಿಣ ಏಷ್ಯದಿಂದ ತೊಡಗಿ ಇಂಡೊನೇಷ್ಯ, ಫಿಲಿಪೀನ್ಸ್, ಹೈನಾನ್, ಫಾರ್ಮೋಸ, ಜಪಾನ್ ವರೆಗಿನ ವಿವಿಧ ದೇಶಗಳಲ್ಲಿ ಸುಮಾರು 11 ಪ್ರಭೇದಗಳೂ ಆಫ್ರಿಕದ ಆಲ್ಜೀರಿಯಾ, ಮೊರಾಕೊಗಳಲ್ಲಿ ಹಾಗೂ ಜಿಬ್ರಾಲ್ಟರಿನಲ್ಲಿ ತಲಾ ಒಂದು ಪ್ರಭೇದವೂ ಕಾಣದೊರೆಯುವುವು. ಇವುಗಳ ಪೈಕಿ ಬಲು ಪ್ರಸಿದ್ಧವಾದುವು ಇಂತಿವೆ: ಭಾರತದಲ್ಲಿ ಸಿಕ್ಕುವ ಮಕಾಕ ರೇಡಿಯೇಟ (ಬಾನೆಟ್ ಕೋತಿ); ಮಕಾಕ ಮುಲೆಟ (ರೀಸಸ್ ಕೋತಿ); ಮಕಾಕ ಸೈಲಿನಸ್ (ಲಯನ್ ಟೇಲ್ಡ್ ಮಕಾಕ್-ಸಿಂಗಳೀಕ); ಜಪಾನಿನಲ್ಲಿ ವಾಸಿಸುವ ಮಕಾಕ ಫಸ್ಕೇಟ; ಫಿಲಿಪೀನ್ಸ್ ವಾಸಿಯಾದ ಮಕಾಕ ಐರಸ್ (ಏಡಿಭಕ್ಷಕ ಮಕಾಕ್); ಆಲ್ಜೀರಿಯ, ಮೊರಾಕೊಗಳಲ್ಲಿ ಕಾಣಸಿಕ್ಕುವ ಮಕಾಕ ಸಿಲ್ವೇನಸ್ (ಬಾರ್ಬರಿ ಕೋತಿ). ದೇಹರಚನೆ ಮಕಾಕ್ ಕೋತಿಗಳೆಲ್ಲವೂ ಮಧ್ಯಮ ಗಾತ್ರದವು; ದೇಹದ ಉದ್ದ 35-75 ಸೆಂಮೀ. ತೂಕ 5-15 ಕೆಜಿ. ಗಂಡು ಹೆಣ್ಣಿಗಿಂತ ದೊಡ್ಡದು. ಬಾರ್ಬರಿ ಕೋತಿಯನ್ನುಳಿದು ಎಲ್ಲವುಗಳಿಗೂ ಬಾಲವುಂಟು. ಬಾಲದ ಉದ್ದ ಕೆಲವು ಸೆಂಟಿಮೀಟರುಗಳಿಂದ ಹಿಡಿದು ಸುಮಾರು 60 ಸೆಂಮೀ ವರೆಗೆ ಇರುವುದುಂಟು. ಮುಖವನ್ನು ಬಿಟ್ಟು ಇಡೀ ದೇಹ ರೋಮಾವೃತವಾಗಿದೆ. ಕೆಲವು ಪ್ರಭೇದಗಳಲ್ಲಿ ತಲೆಯ ಮೇಲೆ ಉದ್ದ ಕೂದಲುಗಳ `ಟೋಪಿ'ಯುಂಟು. ಸಿಂಗಳೀಕದ ಮುಖದ ಸುತ್ತ ಜೂಲು ಇದೆ. ಜಪಾನಿನ ಮಕಾಕ್ ಕೋತಿಗೆ ಉದ್ದಮೀಸೆ, ಗಡ್ಡಗಳಿವೆ. ಎಲ್ಲ ಕೋತಿಗಳ ಮೈಬಣ್ಣ ಕಂದು ಇಲ್ಲವೇ ಹಸುರುಮಿಶ್ರಿತ ಕಪ್ಪು. ಮೂತಿ ಸ್ವಲ್ಪ ಮುಂಚಾಚಿದೆ. ಮೂಗಿನ ಹೊಳ್ಳೆಗಳು ಮೂತಿಯ ತುದಿಯಲ್ಲಿರದೆ ಕೊಂಚ ಮೇಲ್ಭಾಗದಲ್ಲಿ ಸ್ಥಿತವಾಗಿವೆ. ಮಕಾಕ್ ಕೋತಿಗಳು ಭಾರಿಗಾತ್ರದವಲ್ಲವಾದರೂ ಸದೃಢ ಮೈಕಟ್ಟು, ಪುಷ್ಟವಾದ ಕೈಕಾಲುಗಳನ್ನು ಪಡೆದಿರುವ ಬಲಶಾಲಿ ಕೋತಿಗಳೆನಿಸಿವೆ. ಧೈರ್ಯಶಾಲಿಗಳೂ ಹೌದು. ನಡವಳಿಕೆ ಸಾಮಾನ್ಯವಾಗಿ ವಿವಿಧ ವಯಸ್ಸಿನ ಎರಡೂ ಲಿಂಗಗಳ ಸದಸ್ಯಗಳುಳ್ಳ ಸಣ್ಣ ಹಿಂಡುಗಳಲ್ಲಿ ಇವು ವಾಸಿಸುವವು. ಒಂದೊಂದು ಹಿಂಡಿನಲ್ಲಿ ಸುಮಾರು 24 ಸದಸ್ಯಗಳಿರುವುದುಂಟು. ಗುಂಪಿಗೆ ಬಲಯುತ ಗಂಡುಕೋತಿ ನಾಯಕ. ಇವು ನೆಲದ ಮೇಲೆ ಹೇಗೋ ಹಾಗೆ ಮರದ ಮೇಲೂ ಚುರುಕಾಗಿ ಸಾಗುವುವು. ಚೆನ್ನಾಗಿ ಈಜಲೂ ಬಲ್ಲವು. ಇವುಗಳ ಚಟುವಟಿಕೆಗಳೆಲ್ಲ ಹಗಲಿನಲ್ಲಿ. ಆಹಾರ ವಿವಿಧ ಬಗೆಯ ಸಸ್ಯ ಸಾಮಗ್ರಿಗಳೂ ಕೀಟ, ಮೊಟ್ಟೆ ಮುಂತಾದ ಪ್ರಾಣಿವಸ್ತುಗಳೂ ಇವುಗಳ ಆಹಾರ. ಸಂತಾನೋತ್ಪತ್ತಿ ಮಕಾಕ್ ಕೋತಿಗಳಲ್ಲಿ ಸಂತಾನವೃದ್ಧಿಯ ನಿರ್ದಿಷ್ಟ ಶ್ರಾಯವಿಲ್ಲ. ಗರ್ಭಾವಧಿಯ ಕಾಲ 5-7 ತಿಂಗಳುಗಳು. ಸಾಮಾನ್ಯವಾಗಿ ಒಂದು ಸಲಕ್ಕೆ ಒಂದೇಒಂದು ಮರಿ, ಅಪೂರ್ವವಾಗಿ ಅವಳಿ ಮರಿಗಳು ಹುಟ್ಟುವವು. ಮರಿಗಳು ಸುಮಾರು ಒಂದು ವರ್ಷ ಕಾಲ ತಾಯಿಯೊಂದಿಗೆ ಇದ್ದು ನಾಲ್ಕು ವರ್ಷ ವಯಸ್ಸಾಗುವ ವೇಳೆಗೆ ಬೇರೆಯಾಗುವುವು. ಇವುಗಳ ಸರಾಸರಿ ಜೀವಿತಕಾಲ 30 ವರ್ಷಗಳು. ಮಾನವನೊಂದಿಗಿನ ಸಂಬಂಧ ರೀಸಸ್ ಹಾಗೂ ಬಾನೆಟ್ ಕೋತಿಗಳನ್ನು ಭಾರತದಲ್ಲಿ ಪೂಜ್ಯಭಾವನೆಯಿಂದ ಕಾಣಲಾಗುತ್ತದೆ. ಇವನ್ನು ಸಾಕುವುದೂ ಉಂಟು. ಪಳಗಿಸಿ ಹಲವಾರು ಆಟಗಳನ್ನು ಕಲಿಸಿ ಸರ್ಕಸ್ ಮುಂತಾಗಿ ಮನರಂಜನೆಗೆ ಬಳಸಲಾಗುತ್ತದೆ. ಹಲವಾರು ರೀತಿಯ ವೈದ್ಯಕೀಯ, ಬಾಹ್ಯಾಕಾಶ ಪ್ರಯೋಗಗಳಲ್ಲೂ ಇವನ್ನು ಉಪಯೋಗಿಸಿದೆ. ರಕ್ತದ ರೀಸಸ್ ಗಟಕ ಮೊತ್ತ ಮೊದಲು ಪತ್ತೆಯಾದದ್ದು ರೀಸಸ್ ಕೋತಿಗಳಲ್ಲಿ. ಅಂತೆಯೇ ಫಿಲಿಫೀನ್ಸ್ ದ್ವೀಪಗಳ ಏಡಿಭಕ್ಷಕ ಕೋತಿಯನ್ನು ಪೋಲಿಯೋ ಲಸಿಕೆ ಸಿದ್ಧಪಡಿಸುವ ಪ್ರಯೋಗಗಳಲ್ಲಿ ಬಳಸಲಾಯಿತು. ಉಲ್ಲೇಖಗಳು ಹೊರಗಿನ ಕೊಂಡಿಗಳು Macaque Monkey Brain Atlas Primate Info Net Macaca Factsheets ಸಸ್ತನಿ ಪ್ರಾಣಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152293
https://kn.wikipedia.org/wiki/%E0%B2%85%E0%B2%A3%E0%B2%95%E0%B3%81%20%E0%B2%B0%E0%B2%BE%E0%B2%AE%E0%B2%A8%E0%B2%BE%E0%B2%A5%E0%B3%8D
ಅಣಕು ರಾಮನಾಥ್
ಅಣಕು ರಾಮನಾಥ್ (24 ಏಪ್ರಿಲ್ 1962 -) ಎಂಬ ಕಾವ್ಯನಾಮದಿಂದ ಜನಪ್ರಿಯವಾಗಿರುವ ನರಸಿಂಹಮೂರ್ತಿ ರಾಮನಾಥ್ ಒಬ್ಬ ಹಿರಿಯ ಲೇಖಕ, ಹಾಸ್ಯಗಾರ, ಅಂಕಣಕಾರ ಪತ್ರಕರ್ತ, ವಿಮರ್ಶಕ, ಪ್ರಕಾಶಕ ಮತ್ತು ಅನುವಾದಕರಾಗಿ ಮುಖ್ಯವಾಗಿ ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಪ್ರಕಾಶನ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸುಧಾ, ವಿಜಯ ಕರ್ನಾಟಕ ಮತ್ತು ಅಪರಂಜಿ ಸೇರಿದಂತೆ ಹಲವಾರು ಪ್ರಮುಖ ಕನ್ನಡ ದೈನಿಕ, ಸಾಪ್ತಾಹಿಕ, ಮತ್ತು ಮಾಸಿಕ ಪತ್ರಿಕೆಗಳಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕನ್ನಡದಲ್ಲಿ ವಿಡಂಬನೆ, ಲಲಿತ ಪ್ರಬಂಧಗಳು, ಹಾಸ್ಯ ಅಂಕಣಗಳು ಮತ್ತು ಸಣ್ಣ ಕಥೆಗಳಲ್ಲದೇ ಅನೇಕ ಕಾದಂಬರಿಯೇತರ ಸಾಹಿತ್ಯದ ಪುಸ್ತಕಗಳನ್ನೂ ಬರೆದಿದ್ದಾರೆ.ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2020ರ ಪುರಸ್ಕೃತರಾಗಿದ್ದಾರೆ. ಅದೇ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಜನನ, ಜೀವನ ಸಾಹಿತ್ಯ ಇವರ ಕೃತಿಗಳನ್ನು ತೇಜು ಪಬ್ಲಿಕೇಶನ್ಸ್, ನ್ಯೂ ವೇವ್ ಬುಕ್ಸ್ ಮತ್ತು ಶ್ರೀನಿವಾಸ ಪ್ರಕಾಶನದಡಿಯಲ್ಲಿ ಸ್ವತಃ ತಾವೇ ಪ್ರಕಟಿಸಿದ್ದಾರೆ ಪ್ರಶಸ್ತಿ ಪುರಸ್ಕಾರಗಳು ಉಲ್ಲೇಖಗಳು ಬಾಹ್ಯ ಕೊಂಡಿಗಳು ತೇಜು ಪಬ್ಲಿಕೇಶನ್ಸ್ ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯ ಕೃತಿಗಳು
152294
https://kn.wikipedia.org/wiki/%E0%B2%9C%E0%B2%BF%E0%B2%B7%E0%B3%8D%E0%B2%A3%E0%B3%81%20%E0%B2%B0%E0%B2%BE%E0%B2%98%E0%B2%B5%E0%B2%A8%E0%B3%8D
ಜಿಷ್ಣು ರಾಘವನ್
ಜಿಷ್ಣು ರಾಘವನ್ ಅಲಿಂಗಿಲ್ (23 ಏಪ್ರಿಲ್ 1979 – 25 ಮಾರ್ಚ್ 2016),  ಜಿಷ್ಣು ಎಂದು ಏಕನಾಮದಿಂದ ಕರೆಯಲ್ಪಡುವ ಭಾರತೀಯ ನಟ, ಇವರು ಪ್ರಧಾನವಾಗಿ ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು . ಅವರು ನಟ ರಾಘವನ್ ಅವರ ಮಗ . ಅವರು ತಮ್ಮ ಚೊಚ್ಚಲ ಚಿತ್ರ ನಮ್ಮಲ್ (2002) ಗಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ ,  ಇದಕ್ಕಾಗಿ ಅವರು ಅತ್ಯುತ್ತಮ ನಟನಿಗಾಗಿ ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಪ್ರಶಸ್ತಿ ಮತ್ತು ಅತ್ಯುತ್ತಮ ಪುರುಷ ಚೊಚ್ಚಲ ಚಿತ್ರಕ್ಕಾಗಿ ಮಾತೃಭೂಮಿ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅವರ ಕೊನೆಯ ಚಿತ್ರ ಟ್ರಾಫಿಕ್ (2016). ಆರಂಭಿಕ ಜೀವನ ಮತ್ತು ಶಿಕ್ಷಣ ಜಿಷ್ಣು ಚಲನಚಿತ್ರ ನಟ ಮತ್ತು ನಿರ್ದೇಶಕ ರಾಘವನ್  ಮತ್ತು ಶೋಭಾ ಅವರ ಪುತ್ರ . ಅವರು ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನಲ್ಲಿ ಮತ್ತು ನಂತರ ತಿರುವನಂತಪುರಂನ ಭಾರತೀಯ ವಿದ್ಯಾಭವನದಲ್ಲಿ ಮಾಡಿದರು . ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಲಿಕಟ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ವ್ಯಾಸಂಗ ಮಾಡಿದರು. ನಟನಾ ವೃತ್ತಿ 1987; 2002–2006: ಚೊಚ್ಚಲ ಮತ್ತು ಪ್ರಗತಿ ಜಿಷ್ಣು ಮೊದಲು ಬಾಲ ಕಲಾವಿದನಾಗಿ 1987 ರಲ್ಲಿ ತನ್ನ ತಂದೆ ನಿರ್ದೇಶಿಸಿದ ಕಿಲಿಪಟ್ಟು ಚಿತ್ರದಲ್ಲಿ ಕಾಣಿಸಿಕೊಂಡರು ಮತ್ತು ಅದು ಭಾರತೀಯ ಪನೋರಮಾಗೆ ಆಯ್ಕೆಯಾಯಿತು. ಅವರು ಮಲಯಾಳಂ ಚಿತ್ರರಂಗದಲ್ಲಿ ನಮ್ಮಲ್ ಚಿತ್ರದಲ್ಲಿ ನಾಯಕರಾಗಿ 2002 ರಲ್ಲಿ ಹೊಸಬರಾದ ಸಿದ್ಧಾರ್ಥ್ ಭರತನ್ ಮತ್ತು ರೇಣುಕಾ ಮೆನನ್ ಅವರೊಂದಿಗೆ ನಟಿಸಿದರು , ಕಮಲ್ ನಿರ್ದೇಶಿಸಿದರು , ಇದು ಅವರಿಗೆ ಮನ್ನಣೆಯನ್ನು ಗಳಿಸುವ ಮೂಲಕ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಚಿತ್ರದಲ್ಲಿನ ಅವರ ಅಭಿನಯವು ಅವರಿಗೆ ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ಮತ್ತು ಅತ್ಯುತ್ತಮ ಚೊಚ್ಚಲ ಪುರುಷನ ಮಾತೃಭೂಮಿ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಾಲತೊಟ್ಟು ತಿರಿಂಜಲ್ ನಳಮಾತೆ ವೀಡು , ಚೂಂಡಾದಲ್ಲಿ ಪ್ರಮುಖ ಪಾತ್ರಗಳೊಂದಿಗೆ ಅವರ ವೃತ್ತಿಜೀವನವು ಮುಂದುವರಿಯಿತು., ಸ್ವಾತಂತ್ರ್ಯ , ಪಾರಯಂ , ದ್ವಿಚಕ್ರ ವಾಹನ ಮತ್ತು ಜಾನ್ . ನಂತರ ಅವರು ನೆರರಿಯನ್ CBI , ಪೌರನ್, ಯುಗಪುರುಷ ಮತ್ತು ದಿಲೀಪ್ ಜೊತೆಗೆ ಚಕ್ಕರ ಮುತ್ತು ನಲ್ಲಿ ಋಣಾತ್ಮಕ ಪಾತ್ರವನ್ನು ನಿರ್ವಹಿಸಿದರು. 2012–2014: ವಿರಾಮ ಮತ್ತು ಪುನರಾಗಮನ ಕೆಲವು ಮಾನ್ಯತೆ ಪಡೆಯದ ಚಲನಚಿತ್ರಗಳ ಜೊತೆಗೆ, ಅವರು ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಲು ಚಲನಚಿತ್ರೋದ್ಯಮದಿಂದ ವಿರಾಮ ತೆಗೆದುಕೊಂಡರು. ನಂತರ ಅವರು ಚಲನಚಿತ್ರೋದ್ಯಮಕ್ಕೆ ಮರಳಿದರು ಮತ್ತು ನಿದ್ರಾ , ಸಾಮಾನ್ಯ , ಬ್ಯಾಂಕಿಂಗ್ ಅವರ್ಸ್ 10 ರಿಂದ 4 ಮತ್ತು ಉಸ್ತಾದ್ ಹೋಟೆಲ್‌ನಲ್ಲಿ ಅತಿಥಿ ಪಾತ್ರದಲ್ಲಿ ಪೋಷಕ ಪಾತ್ರಗಳನ್ನು ಮಾಡಿದರು . ಅವರಿಗೆ 2012 ರಲ್ಲಿ ಬಿಡುಗಡೆಯಾದ ಪ್ರಭುವಿಂತೆ ಮಕ್ಕಳ್ ಚಿತ್ರದಲ್ಲಿ ನಟಿಸಲು ಆಫರ್ ನೀಡಲಾಯಿತು. 2013 ರಲ್ಲಿ, ಅವರು ಇನ್ನುಮ್ ಇನ್ನುಮ್ ಎನ್ನಮ್ ಮತ್ತು ರೆಬೆಕಾ ಉತ್ತುಪ್ ಕಿಜಕ್ಕೆಮಾಲಾ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು . ಅವರು ಬ್ಯಾರಿ ಜಾನ್ ಥಿಯೇಟರ್ ಸ್ಟುಡಿಯೋದಲ್ಲಿ ನಟನೆಯನ್ನು ಪ್ರಯೋಗಿಸಿದರುಮುಂಬೈ . ಅದೇ ವರ್ಷದಲ್ಲಿ, ಅವರು ತಮ್ಮ ತಂದೆ ರಾಘವನ್ ಮತ್ತು ವಿನೀತ್ ಅವರೊಂದಿಗೆ ಸಿದ್ಧಾರ್ಥ ಶಿವ , ಇಂಡಿಯನ್ ಕಾಫಿ ಹೌಸ್ ಮತ್ತು ಐಫೋನ್ ಜೊತೆಗೆ ಅವರ ಮುಂಬರುವ ಚಲನಚಿತ್ರಗಳಾದ ಮಿಸ್ಫಿಟ್ಗೆ ಸಹಿ ಹಾಕಿದರು , ಆದರೆ ಈ ಚಲನಚಿತ್ರಗಳು ಆ ಸಮಯದಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 2014. 2014–2016: ಆರೋಗ್ಯ ಅನಾರೋಗ್ಯ ಮತ್ತು ಅಂತಿಮ ಚಿತ್ರ ಕ್ಯಾನ್ಸರ್‌ನೊಂದಿಗೆ ಅವರ ಮೊದಲ ಯುದ್ಧದ ಸಮಯದಲ್ಲಿ, ಅವರ ಸ್ನೇಹಿತರು ಸ್ಪೀಚ್‌ಲೆಸ್ ಎಂಬ ಕಿರುಚಿತ್ರವನ್ನು ಮಾಡಿದರು .ಇದು ಕಾಲೇಜು ಉಪನ್ಯಾಸಕರ ಬಗ್ಗೆ, ಅವರ ಜೀವನವು ಕ್ಯಾನ್ಸರ್ನಿಂದ ತೀವ್ರವಾಗಿ ಬದಲಾಗಿದೆ. ಈ ಕಿರುಚಿತ್ರದಲ್ಲಿ ಜಿಷ್ಣುವಿನ ಗೆಳೆಯನೂ ಆಗಿರುವ ಚಿತ್ರ ನಿರ್ಮಾಪಕ ಶಫೀರ್ ಸೇಠ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಚಿಕಿತ್ಸೆ ಮುಂದುವರಿಯುವ ಮೊದಲು, ಅವರು 2015 ರ ಚಲನಚಿತ್ರ ಕಲ್ಲಪ್ಪಡಂ ನಲ್ಲಿ ಲಕ್ಷ್ಮಿ ಪ್ರಿಯಾ ಚಂದ್ರಮೌಳಿ ಅವರೊಂದಿಗೆ ನಾಯಕ ನಟನಾಗಿ ತಮಿಳು ಚೊಚ್ಚಲ ಪ್ರವೇಶವನ್ನು ಪೂರ್ಣಗೊಳಿಸಿದರು ಮತ್ತು ಇದು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಅವರು 2016 ರಲ್ಲಿ ಬಿಡುಗಡೆಯಾದ ಟ್ರಾಫಿಕ್ ನಲ್ಲಿ ನಕಾರಾತ್ಮಕ ಪಾತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಇದು ಅವರ ಕೊನೆಯ ಚಿತ್ರವಾಗಿತ್ತು. ಕಿರುಚಿತ್ರದಲ್ಲೂ ನಟಿಸಿದ್ದಾರೆಆದರ್ಶ್ ಬಾಲಕೃಷ್ಣ ಅವರೊಂದಿಗೆ ಕರ್ಮ ಆಟಗಳು , ಇದನ್ನು 2013 ರಲ್ಲಿ ಚಿತ್ರೀಕರಿಸಲಾಯಿತು ಮತ್ತು 2017 ರಲ್ಲಿ ಬಿಡುಗಡೆ ಮಾಡಲಾಯಿತು. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಆದರ್ಶ ಬಾಲಕೃಷ್ಣ ಈ ಕಿರುಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಜಿಷ್ಣುವಿಗೆ ನಮನ ಸಲ್ಲಿಸಿದರು. ವೈಯಕ್ತಿಕ ಜೀವನ ಅವರು 2007 ರಲ್ಲಿ ತಮ್ಮ ದೀರ್ಘಕಾಲದ ಗೆಳತಿ ಧನ್ಯಾ ರಾಜನ್ ಅವರನ್ನು ವಿವಾಹವಾದರು, ಅವರು ಕಾಲೇಜಿನಲ್ಲಿ ಅವರ ಜೂನಿಯರ್ ಮತ್ತು ವಾಸ್ತುಶಿಲ್ಪಿ. ಸಾವು ಜಿಷ್ಣುವಿಗೆ 2014 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು.  ಕ್ಯಾನ್ಸರ್ ಉಪಶಮನಕ್ಕೆ ಹೋಯಿತು, ನಂತರ 2015 ರಲ್ಲಿ ಮರುಕಳಿಸಿತು  ಮತ್ತು ಅವರು ಅದಕ್ಕೆ ಚಿಕಿತ್ಸೆ ಪಡೆದರು. ಅವರು 36 ನೇ ವಯಸ್ಸಿನಲ್ಲಿ 25 ಮಾರ್ಚ್ 2016 ರಂದು ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ನಿಧನರಾದರು. ಚಿತ್ರಕಥೆ ಚಲನಚಿತ್ರಗಳು ಕಿರುಚಿತ್ರಗಳು ಪುರಸ್ಕಾರಗಳು ಉಲ್ಲೇಖಗಳು ಬಾಹ್ಯ ಕೊಂಡಿಗಳು Articles with hCards
152295
https://kn.wikipedia.org/wiki/%E0%B2%B0%E0%B3%8D%E2%80%8D%E0%B2%AF%E0%B2%BE%E0%B2%95%E0%B3%82%E0%B2%A8%E0%B3%8D
ರ್‍ಯಾಕೂನ್
ರ್‍ಯಾಕೂನ್ ಉತ್ತರ ಅಮೆರಿಕದಲ್ಲಿ ಕಾಣದೊರೆಯುವ ಮಾಂಸಾಹಾರಿ ಸ್ತನಿ. ಕಾರ್ನಿವೊರ ಗಣದ ಪ್ರೋಸೈಯಾನಿಡೀ ಕುಟುಂಬಕ್ಕೆ ಸೇರಿದೆ. ಪ್ರೋಸೈಯಾನ್ ಜಾತಿಯ ಸುಮಾರು 7 ಪ್ರಭೇದಗಳಿಗೆ ಸಾಮಾನ್ಯವಾಗಿ ಈ ಹೆಸರು ಅನ್ವಯವಾಗುವುದಾದರೂ ಪ್ರಮುಖವಾಗಿ ಈ ಹೆಸರಿನಿಂದ ಪ್ರಸಿದ್ಧವಾಗಿರುವುದು ಪ್ರೋಸೈಯಾನ್ ಲೋಟೊರ್ ಎಂಬುದು ಮಾತ್ರ. ದೇಹರಚನೆ ದೇಹದ ಉದ್ದ ಸುಮಾರು 40-60 ಸೆಂಮೀ. ಭುಜದ ಬಳಿಯ ಎತ್ತರ 20-30 ಸೆಂಮೀ. ತೂಕ 1.5-2.5 ಕೆಜಿ. ಮೈಬಣ್ಣ ಬೂದು. 20-40 ಸೆಂಮೀ ಉದ್ದದ ಬಾಲವುಂಟು. ಮೈಮೇಲೂ ಬಾಲದಲ್ಲೂ ಹುಲುಸಾದ, ಮೃದುವಾದ ತುಪ್ಪಳಿನಂಥ ಕೂದಲುಗಳಿವೆ. ಬಾಲದಲ್ಲಿ ಕಪ್ಪುಬಣ್ಣದ 5-10 ಪಟ್ಟೆಗಳಿವೆ. ಮುಸುಡಿ ನಾಯಿ ಮುಸುಡಿಯಂತೆ ಮುಂಚಾಚಿದೆ. ಮುಖದ ಮೇಲೆ ಕಪ್ಪುಬಣ್ಣದ ಅಡ್ಡ ಪಟ್ಟೆಯುಂಟು. ಕಾಲುಗಳಲ್ಲಿ ಉದ್ದ ಬೆರಳುಗಳೂ ಚೂಪು ನಖಗಳೂ ಇವೆ. ಕೈಗಳನ್ನು ಕೋತಿಗಳು ಬಳಸುವಂತೆಯೇ ಬಲು ಸಮರ್ಥವಾಗಿ ಬಳಸಬಲ್ಲುದು. ನಡವಳಿಕೆ ರ‍್ಯಾಕೂನ್ ನಿಶಾಚರಿ. ಸಾಮಾನ್ಯವಾಗಿ ಹಗಲಿನಲ್ಲಿ ಮರದ ಪೊಟರೆಗಳಲ್ಲೊ ಕಲ್ಲುಬಂಡೆಗಳ ಸಂದುಗಳಲ್ಲೊ ಮಲಗಿದ್ದು ರಾತ್ರಿವೇಳೆ ಬೇಟೆ ಅರಸಿ ಹೊರಡುತ್ತದೆ. ಮರ ಹತ್ತುವುದರಲ್ಲಿ ಅಂತೆಯೇ ನೀರಿನ ಮೇಲೆ ಈಸುವುದರಲ್ಲಿ ನಿಷ್ಣಾತ. ಆಹಾರ ಇದು ಎಲ್ಲ ಬಗೆಯ ಆಹಾರವನ್ನು ತಿನ್ನುತ್ತದಾದರೂ ಜಲಜೀವಿಗಳಾದ ಕಪ್ಪೆ, ಮೀನು, ಸಣ್ಣಪುಟ್ಟ ನೆಲಪ್ರಾಣಿಗಳನ್ನೂ ಇಷ್ಟಪಡುತ್ತದೆ. ಹಲವಾರು ಬಗೆಯ ಕಾಯಿ, ಬೀಜ, ಕಾಳುಗಳನ್ನೂ ತಿನ್ನುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಪ್ರಾಂತ್ಯಗಳಲ್ಲಿ ಕಾಣಸಿಗುವ ರ‍್ಯಾಕೂನ್ ವರ್ಷವಿಡೀ ಚಟುವಟಿಕೆಯಿಂದ ಇರುತ್ತದೆ ಆದರೆ ಉತ್ತರ ಭಾಗದಲ್ಲಿ ಜೀವಿಸುವ ರ‍್ಯಾಕೂನ್ ಜಾತಿ ಚಳಿಗಾಲದಲ್ಲಿ ಶಿಶಿರ ನಿದ್ರಾವಶವಾಗುತ್ತದೆ. ಸಂತಾನೋತ್ಪತ್ತಿ ಇದರ ಸಂತಾನವೃದ್ಧಿಯ ಕಾಲ ಜನವರಿಯಿಂದ ಜೂನ್. ಗರ್ಭಾವಸ್ಥೆಯ ಅವಧಿ ಸುಮಾರು 65 ದಿವಸಗಳು. ಒಂದು ಸೂಲಿಗೆ 1-7 ಮರಿ ಹುಟ್ಟುತ್ತವೆ. ಮರಿಗಳು ಸುಮಾರು 10 ವಾರಗಳ ಕಾಲ ತಾಯಿಯೊಡನೆಯೇ ಇದ್ದು ನಿಧಾನವಾಗಿ, ಅಂದರೆ ಒಂದು ವರ್ಷ ವಯಸ್ಸಿನವಾಗುವ ವೇಳೆಗೆ ಸ್ವತಂತ್ರವಾಗಿ ಜೀವಿಸತೊಡಗುತ್ತವೆ. ರ‍್ಯಾಕೂನಿನ ಆಯಸ್ಸು ಸುಮಾರು 10-15 ವರ್ಷಗಳು. ಉಲ್ಲೇಖಗಳು ಹೊರಗಿನ ಕೊಂಡಿಗಳು Raccoon Tracks – general information about raccoons Raccoons – Living with Wildlife – information about dealing with urban raccoons from the Washington Department of Fish and Wildlife The Biology and Management of the Raccoon, c. 1970, Archives of Ontario YouTube Channel ಸಸ್ತನಿ ಪ್ರಾಣಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152301
https://kn.wikipedia.org/wiki/%E0%B2%B5%E0%B3%80%E0%B2%B0%E0%B2%95%E0%B2%AA%E0%B3%81%E0%B2%A4%E0%B3%8D%E0%B2%B0%20%E0%B2%8E%E0%B2%82.%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8
ವೀರಕಪುತ್ರ ಎಂ.ಶ್ರೀನಿವಾಸ
ವೀರಕಪುತ್ರ ಎಂ ಶ್ರೀನಿವಾಸ / ವೀರಕಪುತ್ರ ಶ್ರೀನಿವಾಸ ( 8 ಜೂನ್ 1982 -) ಎಂಬ ಕಾವ್ಯನಾಮದಿಂದ ಜನಪ್ರಿಯವಾಗಿರುವ ವೀರಕಪುತ್ರ ಮುನಿವೆಂಕಟಪ್ಪ ಶ್ರೀನಿವಾಸ  ಅವರು ಕರ್ನಾಟಕದ ಒಬ್ಬ ಪುಸ್ತಕೋದ್ಯಮಿ, ಪ್ರಕಾಶಕ, ಸಾಮಾಜಿಕ ಕಾರ್ಯಕರ್ತ, ಫಸ್ಟ್ ಫೋರ್ಸ್ ಕಟ್ಟಡ ಸುರಕ್ಷಣಾ ಸೇವಾ ಸಂಸ್ಥೆ ಮಾಲೀಕ ಮತ್ತು ಕನ್ನಡ ಚಲಚಿತ್ರರಂಗದಲ್ಲಿ ನಟ ಡಾ ವಿಷ್ಣುವರ್ಧನ್ ಅಭಿಮಾನಿಗಳ ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರು. ಅವರು ವೀರಲೋಕ ಬುಕ್ಸ್ ಎಂಬ ಪುಸ್ತಕ ಪ್ರಕಾಶಕ ಸಂಸ್ಥೆ, ಕನ್ನಡ ಮಾಣಿಕ್ಯ ಪತ್ರಿಕೆ ಮತ್ತು ಬುಕ್ಸ್ ಬರ್ಗರ್ ಕಾಫಿ (ಬಿಬಿಸಿ) ಮಳಿಗೆಯನ್ನು ಆರಂಭಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ನಡೆಸುತ್ತಿದ್ದಾರೆ. ಜನನ, ಜೀವನ ಶ್ರೀನಿವಾಸ ಅವರು ವೀರಕಪುತ್ರ ಗ್ರಾಮ , ಮಾಲೂರು ತಾಲೂಕು , ಕೋಲಾರ ಜಿಲ್ಲೆಯಲ್ಲಿ 8 ಜೂನ್ 1982 ರಂದು ಜನಿಸಿದರು. ಇವರ ತಂದೆ ಮುನಿವೆಂಕಟಪ್ಪನವರು ಮತ್ತು ತಾಯಿ ನಾರಾಯಣಮ್ಮನವರು. ಇವರು ಕೆ.ಜಿ.ಎಫ್ ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾಪದವಿ ಪಡೆದರು. ವೃತ್ತಿ ಮತ್ತು ಸಮಾಜ ಸೇವೆ ಇವರು ಬೆಂಗಳೂರಿನಲ್ಲಿ ಫಸ್ಟ್ ಫೋರ್ಸ್ ಎಂಬ ಕಟ್ಟಡ ಸುರಕ್ಷಣಾ ದಳದ ಸೇವಾ ಸಂಸ್ಥೆಯನ್ನು 2005 ರಲ್ಲಿ ಆರಂಭಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ 200ಕೂ ಹೆಚ್ಚು ಸಿಬ್ಬಂದಿ ಸೇವೆಯಲ್ಲಿದ್ದಾರೆ. ಚಲನಚಿತ್ರ ನಟ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಯಾದ ಇವರು ಅವರ ಹೆಸರಿನ ಡಾ.ವಿಷ್ಣು ಸೇನಾ ಸಮಿತಿ ಎಂಬ ಅಭಿಮಾನಿ ಸಂಘವನ್ನು ರಾಜ್ಯದ್ಯಾಂತ ಕಟ್ಟಿ ಅದರ ರಾಜ್ಯಾದ್ಯಕ್ಷರಾಗಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ ಕಾಲೇಜಿನ ವಿದ್ಯಾರ್ಥಿಯಾದ ಸಮಯದಿಂದಲೂ ಕನ್ನಡ ಸಾಹಿತ್ಯದ ಒಲವು ಇದ್ದುದರಿಂದ ಶ್ರೀಯುತರು ತಮ್ಮದೇ ಆದ ಪುಸ್ತಕ ಪ್ರಕಾಶಕ ಸಂಸ್ಥೆ -ವೀರಲೋಕ ಬುಕ್ಸ್ ಮತ್ತು ಅದರ ವಿಶೇಷ ಮಳಿಗೆ ಬುಕ್ಸ್ ಬರ್ಗರ್ ಕಾಫಿ (ಬಿಬಿಸಿ) ತೆರೆದು ಆ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಾದ್ಯಂತ ಸಸಿ ನೆಡುವ ಅಭಿಯಾನ ನಡೆಸಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಇದುವರೆಗೆ ನೇರ ರಕ್ತದಾನದ ಮೂಲಕ ಸುಮಾರು ೪೫೬ ಜನರಿಗೆ ರಕ್ತದಾನಿಗಳನ್ನು ಒದಗಿಸಿಕೊಟ್ಟಿದ್ದಾರೆ. ಏಳಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಆಧುನಿಕರಣಗೊಳಿಸಿದ್ದಾರೆ. ಡಾ.ವಿಷ್ಣುವರ್ಧನ್ ಅವರ ವಿಶೇಷ ಅಂಚೆ ಲಕೋಟೆಯನ್ನು ಹೊರತರಲು ಶ್ರಮಿಸಿಡ್ದಾರೆ. ಒರಿಸ್ಸಾ ದ ಪುರಿ ಸಮುದ್ರ ತೀರದಲ್ಲಿ ಡಾ.ವಿಷ್ಣುವರ್ಧನ್‌ ಅವರ ಮರಳು ಶಿಲ್ಪ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ದೆಹಲಿಯಲ್ಲಿ ಡಾ.ವಿಷ್ಣುವರ್ಧನ್ (ನಟ) ರಾಷ್ಟ್ರೀಯ ಉತ್ಸವ ಆಯೋಜಿಸಿ ದಾಖಲೆ ಬರೆದಿದ್ದಾರೆ. ಇದುವರೆಗೆ ೫೪ ಡಾ.ವಿಷ್ಣುವರ್ಧನ್‌ ಅವರ ಪ್ರತಿಮೆಗಳನ್ನು ಕೊಡುಗೆಯಾಗಿ ನೀಡಿ ದಾಖಲೆಯಾಗಿಸಿದ್ದಾರೆ. ಇವರು ಆಯೋಜಿಸಿದ ಕಟೌಟ್‌ ಜಾತ್ರೆ ಎಂಬ ಕಾರ್ಯಕ್ರಮವು ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಮೈಸೂರಿನಿಂದ ಬೆಂಗಳೂರಿನ ತನಕ ೧೮೦ ಕಿಮಿಗಳ ಸ್ವಾಸ್ಥ್ಯ ಸಮಾಜಕ್ಕಾಗಿ ಪಾದಯಾತ್ರೆ ಮಾಡಿದ್ದಾರೆ. ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ೧೪ ದಿನಗಳ ಅನಿರ್ಧಿಷ್ಠಾವಧಿ ಧರಣಿ ಮಾಡಿ, ಸರ್ಕಾರವನ್ನು ತಾವಿದ್ದ ಜಾಗಕ್ಕೆ ಕರೆಸಿಕೊಂಡಿದ್ದಾರೆ. ಡಾ.ವಿಷ್ಣುವರ್ಧನ್‌ ಅವರ ಬದುಕು, ಸಾಧನೆ ಕುರಿತಾದ ಕರುನಾಡ ಯಜಮಾನ ಎಂಬ ಪುಸ್ತಕದ ಹತ್ತುಸಾವಿರ ಪ್ರತಿಗಳನ್ನು ಉಚಿತವಾಗಿ ಶಾಲಾ ಮಕ್ಕಳಿಗೆ ನೀಡಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಹತ್ತು ವರ್ಷದಿಂದ ಹದಿನೈದು ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತಿದ್ದಾರೆ. . ಕೋಟಿಗೊಬ್ಬ ಎಂಬ ಕ್ಯಾಲೆಂಡರ್‌ ಅನ್ನು ರೂಪಿಸಿ ಅದು ಪ್ರತಿವರ್ಷ ಇಪ್ಪತ್ತು ಸಾವಿರ ಮನೆಗಳಿಗೆ ತಲುಪಿಸವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡಪ್ರಭ ದಿನಪತ್ರಿಕೆ+ಏಷ್ಯಾನೆಟ್ -ಸುವರ್ಣ ನ್ಯೂಸ್ ಆಯೋಜಿಸಿದ ಅಕ್ಟೋಬರ್ 13, 2023ರ ಸಮಾರಂಭದಲ್ಲಿ ಇವರಿಗೆ "ಅಸಾಮಾನ್ಯ ಕನ್ನಡಿಗ" ಪುರಸ್ಕಾರ ಪ್ರದಾನ ಮಾಡಲಾಗಿದೆ. ಡಾ, ಶರಣ ಹುಲ್ಲೂರ ಅವರ ಜೊತೆಗೂಡಿ ಡಾ.ವಿಷ್ಣುವರ್ಧನ್‌ ರ ವೃತ್ತಿ ಜೀವನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ "ಮೇರುನಟ" ಎಂಬ ಪುಸ್ತಕವನ್ನು ಸಹಲೇಖಕರಾಗಿ ರಚಿಸಿ ಬಿಡುಗಡೆ ಮಾಡಿದ್ದಾರೆ. ವೀರಲೋಕ ಬುಕ್ಸ್ ಅವರು ವಿಜಯ ಕರ್ನಾಟಕ ದೈನಿಕ ಸಹಯೋಗದಲ್ಲಿ 2023 ರ ದೀಪಾವಳಿ ಕಥಾಸ್ಪರ್ಧೆ ಏರ್ಪಡಿಸಿದ್ದು ಅದರಲ್ಲಿ ಮೊದಲ ಬಹುಮಾನ ರೂ 51,000 ಇಟ್ಟಿರುವುದು ಅತಿ ಹೆಚ್ಚಿನ ಮೊತ್ತ ಇಂತಹ ಸ್ಪರ್ಧೆಗಳಿಗೆ ಎನಿಸಿದೆ. ಇದಕ್ಕೆ 25ಕ್ಕೂ ಹೆಚ್ಚು ಕಥೆಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. ಉಲ್ಲೇಖಗಳು ಬಾಹ್ಯ ಕೊಂಡಿಗಳು https://www.linkedin.com/in/veerakaputra-srinivas-49157b262/ https://veeralokabooks.com/product/merunata/ https://vijaykarnataka.com/entertainment/news/veerakaputra-srinivasa-s-post-on-negative-remarks-about-kiccha-sudeep-starrer-vikrant-rona/articleshow/93212610.cms https://publictv.in/superstar-dr-vishnus-52nd-puthali-anavarana/ https://kannada.asianetnews.com/sandalwood/veerakaputra-m-srinivasa-writes-a-open-letter-to-sandalwood-star-heroes-about-helping-their-fans-on-this-pandemic-time-dpl-qryps8 https://kannada.asianetnews.com/sandalwood/veerakaputra-m-srinivasa-writes-a-open-letter-to-sandalwood-star-heroes-about-helping-their-fans-on-this-pandemic-time-dpl-qryps8 https://www.asiabookofrecords.com/ https://www.youtube.com/watch?v=jyn5u-72uug ಕನ್ನಡ ಸಾಹಿತಿಗಳು ವಿಷ್ಣುವರ್ಧನ್ ಚಲನಚಿತ್ರಗಳು ಪ್ರಕಾಶನ ಸಮಾಜಸೇವಕರು
152302
https://kn.wikipedia.org/wiki/%E0%B2%A5%E0%B3%88%E0%B2%B0%E0%B2%BE%E0%B2%AF%E0%B3%8D%E0%B2%A1%E0%B3%8D%20%E0%B2%B2%E0%B2%BF%E0%B2%82%E0%B2%AB%E0%B3%8B%E0%B2%AE%E0%B2%BE
ಥೈರಾಯ್ಡ್ ಲಿಂಫೋಮಾ
ಥೈರಾಯ್ಡ್ ಲಿಂಫೋಮಾ ಅಪರೂಪದ ಕ್ಯಾನ್ಸರ್ ಆಗಿದ್ದು, ಇದು ಎಲ್ಲಾ ಥೈರಾಯ್ಡ್ ಕ್ಯಾನ್ಸರ್‌ಗಳಲ್ಲಿ ೧%೦ ರಿಂದ ೨% ರಷ್ಟು ಮತ್ತು ೨% ಕ್ಕಿಂತ ಕಡಿಮೆ ಲಿಂಫೋಮಾಗಳನ್ನು ಹೊಂದಿರುತ್ತದೆ. ಥೈರಾಯ್ಡ್ ಲಿಂಫೋಮಾಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಹಾಡ್ಗ್‌ಕಿನ್ಸ್ ಅಲ್ಲದ ಬಿ-ಸೆಲ್ ಲಿಂಫೋಮಾ ಎಂದು ವರ್ಗೀಕರಿಸಲಾಗಿದೆ, ಆದಾಗ್ಯೂ ಥೈರಾಯ್ಡ್‌ನ ಹಾಡ್ಗ್‌ಕಿನ್ಸ್ ಲಿಂಫೋಮಾವನ್ನು ಸಹ ಗುರುತಿಸಲಾಗಿದೆ. ರೋಗ ಸೂಚನೆ ಹಾಗೂ ಲಕ್ಷಣಗಳು ಇತರ ಥೈರಾಯ್ಡ್ ಗಾಯಗಳಂತೆ, ಥೈರಾಯ್ಡ್ ಲಿಂಫೋಮಾವು ಹಶಿಮೊಟೊ ಥೈರಾಯ್ಡಿಟಿಸ್ನ ಇತಿಹಾಸದೊಂದಿಗೆ ೭೦ ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಥೈರಾಯ್ಡ್ ಲಿಂಫೋಮಾ ಬೆಳವಣಿಗೆಗೆ ಹಶಿಮೊಟೊ ಥೈರಾಯ್ಡಿಟಿಸ್ ಅಪಾಯಕಾರಿ ಅಂಶವೆಂದು ಪರಿಗಣಿಸಲಾಗಿದೆ. ಥೈರಾಯ್ಡ್ ಲಿಂಫೋಮಾವು ವೇಗವಾಗಿ ವಿಸ್ತರಿಸುವ ಕುತ್ತಿಗೆಯ ದ್ರವ್ಯರಾಶಿಯಾಗಿ ಪ್ರಕಟವಾಗುತ್ತದೆ, ಇದು ಹತ್ತಿರದ ಶ್ವಾಸನಾಳವನ್ನು ಸಂಕುಚಿತಗೊಳಿಸುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ ಅಥವಾ ಉಸಿರಾಟದ ವೈಫಲ್ಯದ ಪರಿಣಾಮವಾಗಿ ಶ್ವಾಸನಾಳದ ಕಿರಿದಾಗುವಿಕೆ ಅಥವಾ ಅಡಚಣೆ ಉಂಟಾಗುತ್ತದೆ. ದೈಹಿಕ ಪರೀಕ್ಷೆಯಲ್ಲಿ, ಪೀಡಿತ ಜನರು ಸಾಮಾನ್ಯವಾಗಿ ದೃಢವಾದ ಥೈರಾಯ್ಡ್ ಗ್ರಂಥಿ ಮತ್ತು ವಿಸ್ತರಿಸಿದ ದುಗ್ಧರಸ ಗ್ರಂಥಿಗಳನ್ನು ಪ್ರದರ್ಶಿಸುತ್ತಾರೆ. ನೋವುರಹಿತ ಕುತ್ತಿಗೆಯ ದ್ರವ್ಯರಾಶಿ ಒರಟುತನ ನುಂಗಲು ತೊಂದರೆ ಶ್ವಾಸನಾಳದ ಸಂಕೋಚನದ ಚಿಹ್ನೆಗಳು ರೋಗನಿರ್ಣಯ ಥೈರಾಯ್ಡ್ ಲಿಂಫೋಮಾ ರೋಗನಿರ್ಣಯ ಮತ್ತು ಚಿಕಿತ್ಸಕ ಸವಾಲನ್ನು ಒಡ್ಡುತ್ತದೆ. ಏಕೆಂದರೆ ಹಲವಾರು ಅಭಿವ್ಯಕ್ತಿ ಮಾದರಿಗಳು ಅನಾಪ್ಲಾಸ್ಟಿಕ್ ಥೈರಾಯ್ಡ್ ಕ್ಯಾನ್ಸರ್ (ಎಟಿಸಿ) ಯಂತೆಯೇ ಇರುತ್ತವೆ. ಫೈನ್-ಸೂಜಿ ಆಕಾಂಕ್ಷೆ (ಅಫ್‌ ಎನ್‌ ಎ) ಪೂರ್ವಭಾವಿಯಾಗಿ ಎರಡು ಘಟಕಗಳನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಹಿಸ್ಟೋಪಾಥಾಲಜಿ ಹೆಚ್ಚಿನ ಥೈರಾಯ್ಡ್ ಲಿಂಫೋಮಾಗಳು ಹಾಡ್ಗ್ಕಿನ್ಸ್ ಅಲ್ಲದ ಬಿ-ಸೆಲ್ ಲಿಂಫೋಮಾಗಳಾಗಿವೆ. ಅಲ್ಪಸಂಖ್ಯಾತರು ಟಿ-ಸೆಲ್ ಲಿಂಫೋಮಾಗಳ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಾರೆ.  ದೊಡ್ಡ ಬಿ-ಸೆಲ್ ಲಿಂಫೋಮಾವನ್ನು ಅಂಚಿನ ವಲಯದೊಂದಿಗೆ ಹರಡಿ ಅಂಚಿನ ವಲಯವಿಲ್ಲದೆ ದೊಡ್ಡ ಬಿ-ಸೆಲ್ ಲಿಂಫೋಮಾವನ್ನು ಹರಡಿ ಮ್ಯೂಕೋಸಾ-ಸಂಬಂಧಿತ ಲಿಂಫಾಯಿಡ್ ಅಂಗಾಂಶದ ಮಾರ್ಜಿನಲ್ ಝೋನ್ ಬಿ-ಸೆಲ್ ಲಿಂಫೋಮಾ (ಎಮ್‌ ಎ ಎಲ್‌ ಟಿ) ಫೋಲಿಕ್ಯುಲರ್ ಲಿಂಫೋಮಾ ಹಂತ ಥೈರಾಯ್ಡ್ ಲಿಂಫೋಮಾದ ಹಂತವನ್ನು ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ ಚಿಕಿತ್ಸೆ ಥೈರಾಯ್ಡ್ ಲಿಂಫೋಮಾಗಳ ಆರಂಭಿಕ ಚಿಕಿತ್ಸೆಗೆ ಸಂಯೋಜಿತ ವಿಧಾನ ಚಿಕಿತ್ಸೆಯು ಅತ್ಯಂತ ಸಾಮಾನ್ಯ ವಿಧಾನವಾಗಿದೆ. ಸಿ ಎಚ್‌ ಒ ಪಿ ಕಟ್ಟುಪಾಡು ( ಸೈಕ್ಲೋಫಾಸ್ಫಮೈಡ್, ಡಾಕ್ಸೊರುಬಿಸಿನ್, ವಿನ್ಕ್ರಿಸ್ಟಿನ್ ಮತ್ತು ಪ್ರೆಡ್ನಿಸೋನ್ ) ಅನೇಕ ವಿಧದ ಥೈರಾಯ್ಡ್ ಲಿಂಫೋಮಾಗಳಿಗೆ ಹೆಚ್ಚು ಪರಿಣಾಮಕಾರಿ ಎಂದು ತೋರಿಸಲಾಗಿದೆ. ಆದಾಗ್ಯೂ, ಕೇವಲ ೩೦% ಮರುಕಳಿಸುವಿಕೆಯ ದರದೊಂದಿಗೆ ೯೬% ಸಂಪೂರ್ಣ ಪ್ರತಿಕ್ರಿಯೆಯ ಪರಿಣಾಮವಾಗಿ ಎಮ್‌ ಎ ಎಲ್‌ ಟಿ ಗಾಗಿ ಮಾತ್ರ ವಿಕಿರಣ ಚಿಕಿತ್ಸೆಯನ್ನು ಮಾಡಲು ಸೂಚಿಸಲಾಗುತ್ತದೆ. ಕೀಮೋಥೆರಪಿ ಮತ್ತು ವಿಕಿರಣದ ಜೊತೆಗೆ ಥೈರಾಯ್ಡ್ ಲಿಂಫೋಮಾ ಹೊಂದಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಚಿಕಿತ್ಸೆಯನ್ನು ನಡೆಸಬಹುದು, ವಿಶೇಷವಾಗಿ ಎಮ್‌ ಎ ಎಲ್‌ ಟಿ ಲಿಂಫೋಮಾಗಳಿಗೆ. ಮುನ್ಸೂಚನೆ ಥೈರಾಯ್ಡ್ ಲಿಂಫೋಮಾ ಹೊಂದಿರುವ ಜನರಿಗೆ ಕಳಪೆ ಮುನ್ನರಿವಿನ ಅಂಶಗಳು ಗೆಡ್ಡೆಯ ಮುಂದುವರಿದ ಹಂತ, ದೊಡ್ಡ ಗಾತ್ರ (> ೧೦ ಸೆಂ) ಜೊತೆಗೆ ಮೆಡಿಯಾಸ್ಟಿನಮ್ಗೆ ಹರಡುತ್ತದೆ. ಪ್ರಾಥಮಿಕ ಥೈರಾಯ್ಡ್ ಲಿಂಫೋಮಾದ ಒಟ್ಟಾರೆ ಬದುಕುಳಿಯುವಿಕೆಯು ೫೦% ರಿಂದ ೭೦% ರಷ್ಟಿದೆ, ಹಂತ IE ನಲ್ಲಿ ೮೦% ರಿಂದ ೫ ವರ್ಷಗಳಲ್ಲಿ ಹಂತ IIE ಮತ್ತು IVE ನಲ್ಲಿ ೩೬% ಕ್ಕಿಂತ ಕಡಿಮೆ ಇರುತ್ತದೆ. ಉಲ್ಲೇಖಗಳು ಥೈರಾಯ್ಡ್ ಕ್ಯಾನ್ಸರ್ ವಿಧಗಳು
152304
https://kn.wikipedia.org/wiki/%E0%B2%A5%E0%B3%88%E0%B2%B0%E0%B2%BE%E0%B2%AF%E0%B3%8D%E0%B2%A1%E0%B3%8D%20%E0%B2%97%E0%B3%8D%E0%B2%B0%E0%B2%82%E0%B2%A5%E0%B2%BF%E0%B2%AF%20%E0%B2%B8%E0%B3%8D%E0%B2%95%E0%B3%8D%E0%B2%B5%E0%B2%BE%E0%B2%AE%E0%B2%B8%E0%B3%8D-%E0%B2%B8%E0%B3%86%E0%B2%B2%E0%B3%8D%20%E0%B2%95%E0%B2%BE%E0%B2%B0%E0%B3%8D%E0%B2%B8%E0%B2%BF%E0%B2%A8%E0%B3%8B%E0%B2%AE
ಥೈರಾಯ್ಡ್ ಗ್ರಂಥಿಯ ಸ್ಕ್ವಾಮಸ್-ಸೆಲ್ ಕಾರ್ಸಿನೋಮ
ಥೈರಾಯ್ಡ್ ಸ್ಕ್ವಾಮಸ್-ಸೆಲ್ ಕಾರ್ಸಿನೋಮ ( ಎಸ್ ಸಿ ಟಿ), ಅಥವಾ ಥೈರಾಯ್ಡ್ ಸ್ಕ್ವಾಮಸ್-ಸೆಲ್ ಕಾರ್ಸಿನೋಮ, ಥೈರಾಯ್ಡ್ ಗ್ರಂಥಿಯ ಅಪರೂಪದ ಮಾರಣಾಂತಿಕ ನಿಯೋಪ್ಲಾಸಂ, ಇದು ವಿಭಿನ್ನ ಸ್ಕ್ವಾಮಸ್ ವ್ಯತ್ಯಾಸದೊಂದಿಗೆ ಗೆಡ್ಡೆಯ ಕೋಶಗಳನ್ನು ತೋರಿಸುತ್ತದೆ. ಎಸ್ ಸಿ ಟಿ ಯ ಸಂಭವವು ಥೈರಾಯ್ಡ್ ಮಾರಕತೆಗಳಲ್ಲಿ ೧% ಕ್ಕಿಂತ ಕಡಿಮೆಯಾಗಿದೆ. ರೋಗಶಾಸ್ತ್ರ ಸ್ಕ್ವಾಮಸ್ ಎಪಿತೀಲಿಯಲ್ ಕೋಶಗಳು ಸಾಮಾನ್ಯ ಥೈರಾಯ್ಡ್‌ನಲ್ಲಿ ಕಂಡುಬರುವುದಿಲ್ಲ, ಹೀಗಾಗಿ ಎಸ್ ಸಿ ಟಿ ಯ ಮೂಲವು ಸ್ಪಷ್ಟವಾಗಿಲ್ಲ. ಆದಾಗ್ಯೂ, ಇದು ಥೈರೋಗ್ಲೋಸಲ್ ನಾಳ ಅಥವಾ ಬ್ರಾಂಚಿಯ ಸೀಳುಗಳಂತಹ ಭ್ರೂಣದ ಅವಶೇಷಗಳಿಂದ ಹುಟ್ಟಿಕೊಂಡಿರಬಹುದು. ಸಾಮಾನ್ಯವಾಗಿ ಎಸ್ ಸಿ ಟಿ ಯನ್ನು ಥೈರಾಯ್ಡ್ ಲೋಬ್‌ಗಳಲ್ಲಿ ಒಂದರಲ್ಲಿ ರೋಗನಿರ್ಣಯ ಮಾಡಲಾಗುತ್ತದೆ, ಆದರೆ ಪಿರಮಿಡ್ ಲೋಬ್‌ನಲ್ಲಿ ಅಲ್ಲ. ಜೀವಕೋಶಗಳ ಸ್ಕ್ವಾಮಸ್ ಮೆಟಾಪ್ಲಾಸಿಯಾ ಮೂಲಕ ಎಸ್ ಸಿ ಟಿ ಅಭಿವೃದ್ಧಿಯ ಮತ್ತೊಂದು ಸಂಭವನೀಯ ಮಾರ್ಗವಾಗಿದೆ. ಆದಾಗ್ಯೂ, ಆ ಸಿದ್ಧಾಂತವು ವಿವಾದಾಸ್ಪದವಾಗಿದೆ, ಏಕೆಂದರೆ ಹಶಿಮೊಟೊದ ಥೈರಾಯ್ಡಿಟಿಸ್ ಮತ್ತು ದೀರ್ಘಕಾಲದ ಲಿಂಫೋಸೈಟಿಕ್ ಥೈರಾಯ್ಡೈಟಿಸ್ (ನಿಯೋಪ್ಲಾಸಂಗಳನ್ನು ತೋರಿಸಬೇಕು. ಸ್ಕ್ವಾಮಸ್ ಮೆಟಾಪ್ಲಾಸಿಯಾ) ಎಸ್ ಸಿ ಟಿ ಯೊಂದಿಗೆ ಸಂಬಂಧ ಹೊಂದಿಲ್ಲ. ಪ್ರಾಥಮಿಕ ಎಸ್ ಸಿ ಟಿ ಯನ್ನು ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯ ಎರಡೂ ಹಾಲೆಗಳಲ್ಲಿ ರೋಗನಿರ್ಣಯ ಮಾಡಲಾಗುತ್ತದೆ. ಎಸ್ ಸಿ ಟಿ ಯ ಹಿಸ್ಟೋಪಾಥಾಲಜಿಯು ಗೆಡ್ಡೆಯ ಕೋಶಗಳ ಸ್ಕ್ವಾಮಸ್ ವ್ಯತ್ಯಾಸವನ್ನು ತೋರಿಸುತ್ತದೆ. ರೋಗನಿರ್ಣಯ ಥೈರಾಯ್ಡ್‌ನ ಸ್ಕ್ವಾಮಸ್-ಸೆಲ್ ಕಾರ್ಸಿನೋಮವು ಜೈವಿಕವಾಗಿ ಆಕ್ರಮಣಕಾರಿ ಮಾರಣಾಂತಿಕ ನಿಯೋಪ್ಲಾಸಂ ಆಗಿದೆ. ಇದು ಕುತ್ತಿಗೆಯ ದ್ರವ್ಯರಾಶಿಯ ತ್ವರಿತ ಬೆಳವಣಿಗೆಯೊಂದಿಗೆ ಥೈರಾಯ್ಡ್-ಪಕ್ಕದ ರಚನೆಗಳ ಒಳನುಸುಳುವಿಕೆಗೆ ಸಂಬಂಧಿಸಿದೆ. ರೋಗಿಗಳು ಸಾಮಾನ್ಯವಾಗಿ ಡಿಸ್ಫೇಜಿಯಾ, ಡಿಸ್ಪ್ನಿಯಾ ಮತ್ತು ಧ್ವನಿ ಬದಲಾವಣೆಗಳನ್ನು ಪ್ರದರ್ಶಿಸುತ್ತಾರೆ, ಜೊತೆಗೆ ಕುತ್ತಿಗೆಯಲ್ಲಿ ಸ್ಥಳೀಯ ನೋವು. ಫೈನ್-ಸೂಜಿ ಆಕಾಂಕ್ಷೆ ಸೈಟೋಲಜಿ ಎಸ್ ಸಿ ಟಿಯ ಪರಿಶೀಲನೆಗಾಗಿ ಅಲ್ಟ್ರಾಸೌಂಡ್-ಗೈಡೆಡ್ ಫೈನ್-ಸೂಜಿ ಆಕಾಂಕ್ಷೆಯನ್ನು ನಡೆಸಬೇಕು. ವಿಕಿರಣಶಾಸ್ತ್ರದ ಪರೀಕ್ಷೆ ಎಸ್ ಸಿ ಟಿ ಪರಿಶೀಲನೆಗಾಗಿ ಯಾವುದೇ ನಿರ್ದಿಷ್ಟ ವಿಕಿರಣಶಾಸ್ತ್ರದ ಪರೀಕ್ಷೆಗಳಿಲ್ಲ. ಆದಾಗ್ಯೂ, ಈ ಪರೀಕ್ಷೆಗಳು ಗೆಡ್ಡೆಯ ಗಡಿಗಳನ್ನು ಗುರುತಿಸಲು ಮತ್ತು ಶಸ್ತ್ರಚಿಕಿತ್ಸೆಯ ಯೋಜನೆಗೆ ಉಪಯುಕ್ತವಾಗಬಹುದು. ಗುರುತುಗಳು ಇಮ್ಯುನೊಹಿಸ್ಟೊಕೆಮಿಸ್ಟ್ರಿ ಹೆಚ್ಚುವರಿ ಪರೀಕ್ಷೆಯಾಗಿ ನಡೆಸಲಾಗುತ್ತದೆ. ಸೈಟೊಕೆರಾಟಿನ್ ೧೯ ರ ಪ್ರಬಲ ಧನಾತ್ಮಕ ಅಭಿವ್ಯಕ್ತಿಯನ್ನು ಪ್ರಾಥಮಿಕ ಎಸ್ ಸಿ ಟಿಯಲ್ಲಿ ತೋರಿಸಲಾಗಿದೆ ಮತ್ತು ಮೆಟಾಸ್ಟಾಟಿಕ್ ಎಸ್ ಸಿ ಟಿಯಲ್ಲಿ ಋಣಾತ್ಮಕವಾಗಿದೆ. ಚಿಕಿತ್ಸೆ ಥೈರಾಯ್ಡೆಕ್ಟಮಿ ಮತ್ತು ಕುತ್ತಿಗೆ ಛೇದನವು ಎಸ್ ಸಿ ಟಿಯ ಆರಂಭಿಕ ಹಂತಗಳಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸುತ್ತದೆ. ಆದಾಗ್ಯೂ, ಹೆಚ್ಚು ಆಕ್ರಮಣಕಾರಿ ಫಿನೋಟೈಪ್ ಕಾರಣ, ಶಸ್ತ್ರಚಿಕಿತ್ಸೆಯ ಚಿಕಿತ್ಸೆಯು ಯಾವಾಗಲೂ ಸಾಧ್ಯವಿಲ್ಲ. ಎಸ್ ಸಿ ಟಿ ರೇಡಿಯೊ ಅಯೋಡಿನ್-ವಕ್ರೀಭವನದ ಗೆಡ್ಡೆಯಾಗಿದೆ. ರೇಡಿಯೊಥೆರಪಿ ಕೆಲವು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿರಬಹುದು. ಇದು ತುಲನಾತ್ಮಕವಾಗಿ ಉತ್ತಮ ಬದುಕುಳಿಯುವಿಕೆಯ ಪ್ರಮಾಣ ಮತ್ತು ಜೀವನದ ಗುಣಮಟ್ಟವನ್ನು ಉಂಟುಮಾಡುತ್ತದೆ. ವಿನ್ಕ್ರಿಸ್ಟಿನ್, ಡಾಕ್ಸೊರುಬಿಸಿನ್ ಮತ್ತು ಬ್ಲೋಮೈಸಿನ್ ಅನ್ನು ಸಹಾಯಕ ಕೀಮೋಥೆರಪಿಗಾಗಿ ಬಳಸಲಾಗುತ್ತದೆ, ಆದರೆ ಪ್ರಕಟಣೆಗಳ ಪ್ರಕಾರ ಅವುಗಳ ಪರಿಣಾಮಗಳು ಸಾಕಷ್ಟು ಉತ್ತಮವಾಗಿಲ್ಲ. ಮುನ್ಸೂಚನೆ ಥೈರಾಯ್ಡ್‌ನ ಸ್ಕ್ವಾಮಸ್-ಸೆಲ್ ಕಾರ್ಸಿನೋಮವು ಹೆಚ್ಚು ಆಕ್ರಮಣಕಾರಿ ಫಿನೋಟೈಪ್ ಅನ್ನು ಪ್ರದರ್ಶಿಸುತ್ತದೆ, ಹೀಗಾಗಿ ಆ ಮಾರಣಾಂತಿಕತೆಯ ಮುನ್ನರಿವು ಅತ್ಯಂತ ಕಳಪೆಯಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಒಟ್ಟಾರೆ ಬದುಕುಳಿಯುವಿಕೆಯು ೧ ವರ್ಷಕ್ಕಿಂತ ಕಡಿಮೆಯಿರುತ್ತದೆ. ಉಲ್ಲೇಖಗಳು ಥೈರಾಯ್ಡ್ ಕ್ಯಾನ್ಸರ್ ವಿಧಗಳು
152306
https://kn.wikipedia.org/wiki/%E0%B2%95%E0%B2%B0%E0%B2%AE%E0%B2%9A%E0%B2%82%E0%B2%A6%20%E0%B2%97%E0%B2%BE%E0%B2%82%E0%B2%A7%E0%B2%BF
ಕರಮಚಂದ ಗಾಂಧಿ
Articles with hCards ಮಹಾತ್ಮ ಗಾಂಧಿ ಕರಮಚಂದ್ ಉತ್ತಮಚಂದ್ ಗಾಂಧಿ (1822 - 16 ನವೆಂಬರ್ 1885) ಪೋರಬಂದರ್‌ನಲ್ಲಿ ನ್ಯಾಯಾಲಯದ ಅಧಿಕಾರಿಯಾಗಿದ್ದರು . ಅವರು ಪೋರಬಂದರ್ ಮತ್ತು ರಾಜ್ಕೋಟ್ನ ದಿವಾನ್ ಆಗಿ ಸೇವೆ ಸಲ್ಲಿಸಿದರು ಮತ್ತು ಮಹಾತ್ಮ ಗಾಂಧಿಯವರ ತಂದೆಯಾಗಿದ್ದರು. ಜೀವನ ಗಾಂಧಿ ಕುಟುಂಬವು ಮೂಲತಹ ಆಗಿನ ಜುನಾಗಢ ರಾಜ್ಯದ ಕುಟಿಯಾನ ಹಳ್ಳಿಯಲ್ಲಿತ್ತು. 18 ನೇ ಶತಮಾನದ ಆರಂಭದಲ್ಲಿ, ಲಾಲ್ಜಿ ಗಾಂಧಿ ಪೋರಬಂದರಿಗೆ ತೆರಳಿದರು ಮತ್ತು ಅದರ ಆಡಳಿತಗಾರನಾಗಿ ರಾಣಾನ ಸೇವೆಯನ್ನು ಪ್ರಾರಂಭಿಸಿದರು. ಕರಮಚಂದ್ ಅವರ ತಂದೆ ಉತ್ತಮ್‌ಚಂದ್ ಅವರು 19 ನೇ ಶತಮಾನದ ಆರಂಭದಲ್ಲಿ ಪೋರಬಂದರ್‌ನ ರಾಣಾ, ಖಿಮೋಜಿರಾಜ್ ಅವರ ಅಡಿಯಲ್ಲಿ ದಿವಾನರಾಗಿದ್ದರು. ಅದಕ್ಕಿಂತ ಮೊದಲು ಅವರ ಕುಟುಂಬವು ಸತತ ರಾಜ್ಯ ಆಡಳಿತದಲ್ಲಿ ನಾಗರಿಕ ಸೇವಕರಾಗಿ ಸೇವೆ ಸಲ್ಲಿಸಿದರು. 1831 ರಲ್ಲಿ, ರಾಣಾ ಖಿಮೋಜಿರಾಜ್ ಹಠಾತ್ತನೆ ನಿಧನರಾದರು ಮತ್ತು ಅವರ 12 ವರ್ಷದ ಏಕೈಕ ಮಗ ವಿಕ್ಮತ್ಜಿ ಉತ್ತರಾಧಿಕಾರಿಯಾದರು. ಪರಿಣಾಮವಾಗಿ, ರಾಣಾ ಖಿಮೋಜಿರಾಜ್ ಅವರ ವಿಧವೆ ರಾಣಿ ರೂಪಾಲಿಬಾ ತನ್ನ ಮಗನಿಗೆ ರಾಜಪ್ರತಿನಿಧಿಯಾದಳು. ಅವಳು ಶೀಘ್ರದಲ್ಲೇ ಉತ್ತಮ್‌ಚಂದ್‌ನೊಂದಿಗೆ ಜಗಳವಾಡಿದಳು ಮತ್ತು ಜುನಾಗಢ್‌ನಲ್ಲಿರುವ ಅವನ ಪೂರ್ವಜರ ಹಳ್ಳಿಗೆ ಹಿಂತಿರುಗುವಂತೆ ಒತ್ತಾಯಿಸಿದಳು. ಜುನಾಗಢದಲ್ಲಿದ್ದಾಗ, ಉತ್ತಮ್‌ಚಂದ್ ಅದರ ನವಾಬನ ಮುಂದೆ ಕಾಣಿಸಿಕೊಂಡರು ಮತ್ತು ಅವರ ಬಲಗೈಯ ಬದಲಿಗೆ ಎಡಗೈಯಿಂದ ಅವರಿಗೆ ನಮಸ್ಕರಿಸಿದರು, ಅವರ ಬಲಗೈ ಪೋರಬಂದರ್‌ನ ಸೇವೆಗೆ ವಾಗ್ದಾನ ಮಾಡಲ್ಪಟ್ಟಿದೆ ಎಂದು ಉತ್ತರಿಸಿದರು. 1841 ರಲ್ಲಿ, ವಿಕ್ಮತ್ಜಿ ಸಿಂಹಾಸನವನ್ನು ವಹಿಸಿಕೊಂಡರು ಮತ್ತು ಉತ್ತಮಚಂದ್ ಅವರನ್ನು ತಮ್ಮ ದಿವಾನ್ ಆಗಿ ಮರುಸ್ಥಾಪಿಸಿದರು. ಅವರ ತಂದೆ, ಉತ್ತಮಚಂದ್ ಗಾಂಧಿಯವರಂತೆ, ಕರಮಚಂದ್ ಅವರು ಪೋರಬಂದರ್‌ನ ಸ್ಥಳೀಯ ಆಡಳಿತ ರಾಜಕುಮಾರನ ನ್ಯಾಯಾಲಯದ ಅಧಿಕಾರಿ ಅಥವಾ ಮುಖ್ಯಮಂತ್ರಿಯಾಗಿದ್ದರು. ಕರಮಚಂದ್ ಅವರ ಕರ್ತವ್ಯಗಳಲ್ಲಿ ಪೋರಬಂದರ್‌ನ ರಾಜಮನೆತನಕ್ಕೆ ಸಲಹೆ ನೀಡುವುದು ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ನೇಮಿಸಿಕೊಳ್ಳುವುದೂ ಸೇರಿದೆ. ಕರಮಚಂದ್ ಅವರು ಸಾಮಾನ್ಯ ಶಿಕ್ಷಣವನ್ನು ಹೊಂದಿದ್ದರು, ಆದರೆ ಅವರ ಜ್ಞಾನ ಮತ್ತು ಅನುಭವವು ಅವರನ್ನು ಉತ್ತಮ ಆಡಳಿತಗಾರರನ್ನಾಗಿ ಮಾಡಿತು. ಅವರು ದಯೆ ಮತ್ತು ಉದಾರರಾಗಿದ್ದರು. ಆದರೆ ಕೆಟ್ಟ ಸ್ವಭಾವವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಅವರು ತಮ್ಮ ತಂದೆ ಕೆಲಸ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನೋಡಿ ಅನುಭವದಿಂದ ಕಲಿತರು. ಭೌಗೋಳಿಕತೆ ಮತ್ತು ಇತಿಹಾಸವನ್ನು ಒಳಗೊಂಡಂತೆ ಅವರು ಎಂದಿಗೂ ಹೆಚ್ಚಿನ ಜ್ಞಾನವನ್ನು ಗಳಿಸದ ಕೆಲವು ಕ್ಷೇತ್ರಗಳಿವೆ. ಅದೇನೇ ಇದ್ದರೂ, ಪೋರಬಂದರ್‌ನಲ್ಲಿ ಕರಮಚಂದ್ ಮುಖ್ಯಮಂತ್ರಿಯಾಗಿ ಉತ್ತಮ ಸಾಧನೆ ಮಾಡಿದರು. ಕರಮಚಂದ್ ತನ್ನ ಕೆಲಸದಲ್ಲಿ ಯಶಸ್ಸಿನ ಹೊರತಾಗಿಯೂ, ಅವರು ಸಂಪತ್ತನ್ನು ಸಂಗ್ರಹಿಸುವ ಮಾರ್ಗಗಳನ್ನು ಕಂಡುಕೊಳ್ಳಲಿಲ್ಲ. ಗಾಂಧೀಜಿಯವರಿಗೆ ಸಾಕಷ್ಟು ತಿನ್ನಲು, ಗೌರವಾನ್ವಿತ ಸಂಖ್ಯೆಯ ಸೇವಕರನ್ನು ಮತ್ತು ಕೆಲವು ಉತ್ತಮ ಪೀಠೋಪಕರಣಗಳನ್ನು ಹೊಂದಿದ್ದರು, ಆದರೆ ಅವರು ಯಾವುದೇ ರೀತಿಯಲ್ಲಿ ಶ್ರೀಮಂತರಂತೆ ಗುರುತಿಸಿಕೊಳ್ಳುತ್ತಿರಲಿಲ್ಲ. ಕರಮಚಂದ್ ತಂದ ಹಣ ಕೇವಲ ಮನೆಯ ಖರ್ಚಿಗೆ ಮಾತ್ರ. ಕರಮಚಂದ್ ನಾಲ್ಕು ಬಾರಿ ವಿವಾಹವಾದರು. ಅವನ ಮೊದಲ ಮೂರು ಮದುವೆಗಳು ಅವರ ಹೆಂಡತಿಯರ ಸಾವಿನೊಂದಿಗೆ ಕೊನೆಗೊಂಡವು; ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಕ್ಷಣ ಇಬ್ಬರು ಸಾವನ್ನಪ್ಪಿದ್ದಾರೆ. ನಂತರ ಅವರು 1857 ರಲ್ಲಿ ಪುತ್ಲಿಬಾಯಿ ಗಾಂಧಿ (1844 - 12 ಜೂನ್ 1891) ಯವರನ್ನು ವಿವಾಹವಾದರು ಮತ್ತು ಅವರ ವಿವಾಹವು ದಾಂಪತ್ಯ ಜೀವನವು 1885 ರ , ಅವರ ಮರಣದ ವರೆಗೆ ಮುನ್ನಡೆಯಿತು. ಈ ವಿವಾಹದಿಂದ ನಾಲ್ವರು ಮಕ್ಕಳು ಹುಟ್ಟಿದರು. ಅವರು ಲಕ್ಷ್ಮೀದಾಸ್ ಗಾಂಧಿ (1860 - 9 ಮಾರ್ಚ್ 1914), ಕರ್ಸಂದಾಸ್ ಗಾಂಧಿ (1866 - 22 ಜೂನ್ 1913) ಮತ್ತು ಮೋಹನ್ ದಾಸ್ ಗಾಂಧಿ (2 ಅಕ್ಟೋಬರ್ 1869 - 30 ಜನವರಿ 1948) ಮತ್ತು ರಾಲಿಯಾತ್ಬೆನ್ (1862 - ಡಿಸೆಂಬರ್ 1960) ಎಂಬ ಮಗಳು ಸೇರಿದಂತೆ ಮೂವರು ಗಂಡು ಮಕ್ಕಳನ್ನು ಪಡೆದರು. ) ಮೋಹನ್ ದಾಸ್ ಗಾಂಧಿ ಅವರ ಕಿರಿಯ ಮಗು. ಅವರ ಜೀವಿತಾವಧಿಯಲ್ಲಿ ಅವರ ಎಲ್ಲಾ ಮಕ್ಕಳು ವಿವಾಹವಾದರು. 1885 ರಲ್ಲಿ, ಕರಮಚಂದ್ ಫಿಸ್ಟುಲಾದ ಗಂಭೀರ ಕಾಯಿಲೆಯನ್ನು ಅನುಭವಿಸಿದರು. ಪುತ್ಲಿಬಾಯಿ ಮತ್ತು ಅವರ ಮಕ್ಕಳು (ವಿಶೇಷವಾಗಿ ಮೋಹನ್‌ದಾಸ್ ) ಅವರನ್ನು ನೋಡಿಕೊಂಡರು. ದಿನದಿಂದ ದಿನಕ್ಕೆ ಅವರ ಸ್ಥಿತಿ ಹದಗೆಡಲಾರಂಭಿಸಿತು ಮತ್ತು ವೈದ್ಯರು ಹಲವಾರು ರೀತಿಯ ಚಿಕಿತ್ಸೆಗೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಅವರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು, ಆದರೆ ಅವರ ಕುಟುಂಬ ವೈದ್ಯರು ಅದನ್ನು ಮಾಡಲು ನಿರಾಕರಿಸಿದರು. ಕರಮಚಂದ್ ಅವರ ಸ್ಥಿತಿ ಮತ್ತಷ್ಟು ಹದಗೆಡುತ್ತಲೇ ಇತ್ತು, ಅಂತಿಮವಾಗಿ ಅವರು ನವೆಂಬರ್ 16 ರಂದು 63 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮಗ ಮೋಹನ್‌ದಾಸ್ (ಮಹಾತ್ಮ ಗಾಂಧಿ) ನಂತರ ಆ ರಾತ್ರಿಯ ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ:"ಅಂದು ರಾತ್ರಿ (ನವೆಂಬರ್ 16 ರಂದು), ಅವರ ಚಿಕ್ಕಪ್ಪ ತುಳಸಿದಾಸ್ (ಕರಮಚಂದ್ ಅವರ ಕಿರಿಯ ಸಹೋದರ) ಅವರ ಮನೆಗೆ ಬಂದರು, ಸಾವು ಸನ್ನಿಹಿತವಾಗಿದ್ದರೂ, ನಿನ್ನೆ ರಾತ್ರಿ ಎಂದು (ಕರಮಚಂದ್ ಅವರ) ಯಾರೂ ಒಪ್ಪಿಕೊಳ್ಳಲಿಲ್ಲ. ತುಳಸಿದಾಸರು ಭೇಟಿ ಮಾಡಲು ಬರುತ್ತಿದ್ದರು. ಅವನ ಅಸ್ವಸ್ಥ ಅಣ್ಣ, ಅವನು ಹಗಲಿನಲ್ಲಿ ಅವನ ಹಿಂದೆ ಕೂರುತ್ತಿದ್ದನು.ಅಂದು ರಾತ್ರಿ 10:30 ಅಥವಾ 11 ರ ಸುಮಾರಿಗೆ, ಆಗ 16 ವರ್ಷದ ಮೋಹನ್‌ದಾಸ್ ತನ್ನ ತಂದೆಯ ಕಾಲುಗಳಿಗೆ ಮಸಾಜ್ ಮಾಡುತ್ತಿದ್ದಾಗ, ತುಳಸಿದಾಸ್ ಅಲ್ಲಿಗೆ ಬಂದು ಅವನನ್ನು ಹೋಗು ಎಂದು ಹೇಳಿದರು, ಅವನು ಸಂತೋಷದಿಂದ ಅವನ ಹಾಸಿಗೆ ಬಳಿಗೆ ಹೋದನು. ಅವರ ಪತ್ನಿ ಕಸ್ತೂರಬಾ ಮಲಗಿದ್ದರು, ಕೆಲವೇ ಸೆಕೆಂಡುಗಳಲ್ಲಿ, ಅವರ ಸೇವಕನು ಅವರಿಗೆ ಕರೆ ಮಾಡಿ ಕರಮಚಂದ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದನು. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಎಲ್ಲರೂ ಈಗಾಗಲೇ ಅರಿತುಕೊಂಡಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಅರಿತುಕೊಂಡರು. ಉಲ್ಲೇಖಗಳು
152353
https://kn.wikipedia.org/wiki/%E0%B2%B5%E0%B3%80%E0%B2%B0%E0%B2%B2%E0%B3%8B%E0%B2%95%20%E0%B2%AC%E0%B3%81%E0%B2%95%E0%B3%8D%E0%B2%B8%E0%B3%8D
ವೀರಲೋಕ ಬುಕ್ಸ್
ವೀರಲೋಕ ಬುಕ್ಸ್ ಒಂದು ಪುಸ್ತಕ ಪ್ರಕಾಶನ ಸಂಸ್ಥೆ. 2022ರಲ್ಲಿ ಬೆಂಗಳೂರಲ್ಲಿ ಸ್ಥಾಪಿತವಾಯಿತು. ಪುಸ್ತಕ ಪ್ರಕಾಶನ ಮತ್ತು ಹಂಚಿಕೆಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು ಹಲವಾರು ವಿಷಯಗಳ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಿದೆ ವೀರಲೋಕ ಬುಕ್ಸ್ ಇದುವರೆಗೂ (ಆಕ್ಟೋಬರ್ ೨೦೨೩) ಸುಮಾರು 51 ಪ್ರಕಟಣೆಗಳನ್ನು ಮಾಡಿದೆ. ಅವುಗಳಲ್ಲಿ ಬಹುಪಾಲು ಕನ್ನಡದ್ದಾಗಿದೆ. ಇದರಲ್ಲಿ ಹಲವಾರು ಪ್ರಕಟಣೆಗಳು ಅನೇಕ ಮರುಮುದ್ರಣಗಳನ್ನು ಕಂಡು ಜನಪ್ರಿಯವಾಗಿವೆ . ಕರ್ನಾಟಕದ ಹಲವಾರು ಊರುಗಳಲ್ಲಿ ಕೆಲವು ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸುವ ಮೂಲಕ ಓದುಗರಿಗೆ ಪುಸ್ತಕಗಳನ್ನು ಕೊಳ್ಳಲು ವ್ಯವಸ್ಥೆ ಕಲ್ಪಿಸುತ್ತದೆ. ಜೊತೆಗೆ ಕೆಲವು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನೂ ಆಯೋಜಿಸುತ್ತದೆ. ಇತಿಹಾಸ ಪ್ರಮುಖ ಮೈಲಿಗಲ್ಲುಗಳು ಉಲ್ಲೇಖಗಳು
152355
https://kn.wikipedia.org/wiki/%E0%B2%B9%E0%B2%B0%E0%B3%8D%E0%B2%A5%E0%B3%8D%E0%B2%B2%E0%B3%8D%20%E0%B2%B8%E0%B3%86%E0%B2%B2%E0%B3%8D%20%E0%B2%A8%E0%B2%BF%E0%B2%AF%E0%B3%8B%E0%B2%AA%E0%B3%8D%E0%B2%B2%E0%B2%BE%E0%B2%B8%E0%B2%82
ಹರ್ಥ್ಲ್ ಸೆಲ್ ನಿಯೋಪ್ಲಾಸಂ
ಹರ್ಥ್ಲ್ ಸೆಲ್ ನಿಯೋಪ್ಲಾಸಂ ಥೈರಾಯ್ಡ್ ಗ್ರಂಥಿಯ ಅಪರೂಪದ ಗೆಡ್ಡೆಯಾಗಿದೆ. ಇದು ಸಾಮಾನ್ಯವಾಗಿ ೭೦ ರಿಂದ ೮೦ ವರ್ಷ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಹಾನಿಕರವಲ್ಲದ ಸಂದರ್ಭದಲ್ಲಿ, ಅದನ್ನು ಹರ್ಥ್ಲ್ ಸೆಲ್ ಅಡೆನೊಮಾ ಎಂದು ಕರೆಯಲಾಗುತ್ತದೆ ಮತ್ತು ಮಾರಣಾಂತಿಕವಾದಾಗ ಅದನ್ನು ಹರ್ಥ್ಲ್ ಸೆಲ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ. ಹರ್ಥ್ಲ್ ಸೆಲ್ ಅಡೆನೊಮಾವನ್ನು ಹಾನಿಕರವಲ್ಲದ ಹರ್ಥ್ಲ್ ಕೋಶಗಳ (ಅಸ್ಕನಾಜಿ ಜೀವಕೋಶಗಳು) ಸಮೂಹದಿಂದ ನಿರೂಪಿಸಲಾಗಿದೆ. ವಿಶಿಷ್ಟವಾಗಿ ಅಂತಹ ದ್ರವ್ಯರಾಶಿಯನ್ನು ತೆಗೆದುಹಾಕಲಾಗುತ್ತದೆ ಏಕೆಂದರೆ ಇದು ಫೋಲಿಕ್ಯುಲರ್ ಥೈರಾಯ್ಡ್ ಕ್ಯಾನ್ಸರ್ನ ಉಪವಿಭಾಗವಾದ ಹರ್ಥ್ಲ್ ಸೆಲ್ ಕಾರ್ಸಿನೋಮದ ಮಾರಣಾಂತಿಕ ಪ್ರತಿರೂಪವಾಗಿ ರೂಪಾಂತರಗೊಳ್ಳುತ್ತದೆಯೇ ಎಂದು ಊಹಿಸಲು ಸುಲಭವಲ್ಲ. ಇತಿಹಾಸ ಹರ್ಥ್ಲ್ ಕೋಶಗಳನ್ನು ವಿಸ್ತರಿಸಿದ ಎಪಿತೀಲಿಯಲ್ ಕೋಶಗಳಾಗಿ ನಿರೂಪಿಸಲಾಗಿದೆ. ಈ ಜೀವಕೋಶಗಳು, ಹೆಮಾಟಾಕ್ಸಿಲಿನ್-ಇಯೊಸಿನ್‌ನೊಂದಿಗೆ ಕಲೆ ಹಾಕಿದಾಗ ಗುಲಾಬಿ ಬಣ್ಣದ್ದಾಗಿರುತ್ತವೆ. ಜೀವಕೋಶಗಳ ಸೈಟೋಪ್ಲಾಸಂನಲ್ಲಿ ಹೇರಳವಾಗಿರುವ ಮೈಟೊಕಾಂಡ್ರಿಯಾ ಮತ್ತು ಗ್ರ್ಯಾನ್ಯುಲರ್ ಇಯೊಸಿನೊಫಿಲಿಕ್ ಮ್ಯಾಟರ್ ಇದಕ್ಕೆ ಕಾರಣವಾಗಿದೆ. ಈ ಜೀವಕೋಶಗಳು ಹೆಚ್ಚಾಗಿ ಥೈರಾಯ್ಡ್ ಗ್ರಂಥಿಯಲ್ಲಿ ಕಂಡುಬರುತ್ತವೆ. ಥೈರಾಯ್ಡ್ ಗ್ರಂಥಿಯು ಚಿಟ್ಟೆಯ ಆಕಾರದ ಅಂಗವಾಗಿದ್ದು, ಚಯಾಪಚಯ ಕ್ರಿಯೆಗೆ ವಿವಿಧ ಗ್ರಂಥಿಗಳನ್ನು ಉತ್ಪಾದಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಜೀವಕೋಶಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಆದರೆ, ಅವು ಮಾರಣಾಂತಿಕ ಅಥವಾ ಮೆಟಾಸ್ಟಾಸೈಜ್ ಕೂಡ ಆಗಿರಬಹುದು. ಹರ್ಥ್ಲ್ ಕೋಶಗಳು ವಿಕಿರಣಕ್ಕೆ ನಿರೋಧಕವಾಗಿರುತ್ತವೆ, ಆದರೆ ವಿಕಿರಣಶೀಲ ಅಯೋಡಿನ್ ಚಿಕಿತ್ಸೆಯನ್ನು ಬಳಸಿಕೊಂಡು ಚಿಕಿತ್ಸೆ ನೀಡಬಹುದಾಗಿದೆ.. ರೋಗನಿರ್ಣಯ ರೂಪಾಂತರ ಮತ್ತು ಮೆಟಾಸ್ಟಾಸಿಸ್ ನ ಮೊದಲು ಈ ದ್ರವ್ಯರಾಶಿಯನ್ನು ಪತ್ತೆಹಚ್ಚಬಹುದು ಮತ್ತು ತೆಗೆದುಹಾಕಬಹುದು. ಅಲ್ಟ್ರಾಸೌಂಡ್‌ನಂತಹ ಇಮೇಜಿಂಗ್ ಮೂಲಕ ಗೆಡ್ಡೆಯನ್ನು ಹೆಚ್ಚಾಗಿ ಪತ್ತೆ ಮಾಡಲಾಗುತ್ತದೆ. ಗೆಡ್ಡೆಯ ಸ್ಥಳ ಮತ್ತು ಗಾತ್ರವು ರೋಗಿಗೆ ಒತ್ತಡ ಮತ್ತು ನೋವನ್ನು ಉಂಟುಮಾಡಬಹುದು. ಆದರೆ ಆಗಾಗ್ಗೆ ಗೆಡ್ಡೆಯು ಪತ್ತೆಯಾಗುವುದಿಲ್ಲ. ಪತ್ತೆಯಾದ ನಂತರ, ಆಕ್ರಮಣಶೀಲ ಸೂಕ್ಷ್ಮ ಸೂಜಿ ಆಕಾಂಕ್ಷೆ ಬಯಾಪ್ಸಿ ಯನ್ನು ಬಳಸಿ ದ್ರವ್ಯರಾಶಿಯನ್ನು ಪರೀಕ್ಷಿಸಲಾಗುತ್ತದೆ. ಹರ್ಥ್ಲ್ ಸೆಲ್ ಅಡೆನೊಮಾ ಎಂಬುದು ಹರ್ಥ್ಲ್ ಸೆಲ್ ಕಾರ್ಸಿನೋಮದ ಹಾನಿಕರವಲ್ಲದ ಸಮಶಬ್ದವಾಗಿದೆ. ಈ ಅಡೆನೊಮಾ ಅತ್ಯಂತ ಅಪರೂಪ; ಇದು ಸಂಭವಿಸಿದಾಗ, ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಸಂಭವಿಸುತ್ತದೆ. ಸಾಮಾನ್ಯವಾಗಿ ಅಡೆನೊಮಾವು ನಿರುಪದ್ರವವಾಗಿದೆ ಆದರೆ ಪತ್ತೆಹಚ್ಚಿದ ನಂತರ ತೆಗೆದುಹಾಕಲಾಗುತ್ತದೆ ಏಕೆಂದರೆ ಅದರ ಭವಿಷ್ಯದ ಕೋರ್ಸ್ ಅನ್ನು ನಂಬಲಾಗುವುದಿಲ್ಲ. ಸೈಟೋಪಾಥಾಲಜಿಯು ಹರ್ಥ್ಲ್ ಸೆಲ್ ಅಡೆನೊಮಾವನ್ನು ಹರ್ಥ್ಲ್ ಸೆಲ್ ಕಾರ್ಸಿನೋಮದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಇದು ಟ್ರಾನ್ಸ್‌ಕ್ಯಾಪ್ಸುಲರ್ ಅಥವಾ ನಾಳೀಯ ಆಕ್ರಮಣವನ್ನು ನೋಡಲು ಹಿಸ್ಟೋಪಾಥೋಲಾಜಿಕ್ ವಿಭಾಗಗಳ ಅಗತ್ಯವಿರುತ್ತದೆ. ಹರ್ಥ್ಲ್ ಸೆಲ್ ಹೈಪರ್ಪ್ಲಾಸಿಯಾ (ಹಶಿಮೊಟೊನ ಥೈರಾಯ್ಡಿಟಿಸ್ನಲ್ಲಿ ಕಂಡುಬರುವಂತೆ) ಪರಮಾಣು ಗಾತ್ರಗಳು ಮತ್ತು ಪ್ರಮುಖ ನ್ಯೂಕ್ಲಿಯೊಲಿಗಳಲ್ಲಿ ಮಧ್ಯಮ ವ್ಯತ್ಯಾಸವನ್ನು ತೋರಿಸಬಹುದು, ಆದರೆ ಹರ್ಥ್ಲ್ ಸೆಲ್ ನಿಯೋಪ್ಲಾಸಂಗೆ ಅನುಕೂಲಕರವಾದ ಹೆಚ್ಚಿನ ಸಂಶೋಧನೆಗಳು ಹೆಚ್ಚಿನ ಸಂಖ್ಯೆಯ ಹರ್ಥ್ಲ್ ಕೋಶಗಳು ಮತ್ತು ಅಸಂಘಟಿತತೆಯನ್ನು ಒಳಗೊಂಡಿವೆ. ಚಿಕಿತ್ಸೆ ಹರ್ಥ್ಲ್ ಸೆಲ್ ಅಡೆನೊಮಾಗಳಿಗೆ ಮೂರು ಮುಖ್ಯ ಚಿಕಿತ್ಸೆಗಳಿವೆ. ಅಡೆನೊಮಾವನ್ನು ಪತ್ತೆಹಚ್ಚಿದ ನಂತರ, ಜೀವಕೋಶಗಳು ನಂತರ ಮೆಟಾಸ್ಟಿಸೈಜ್ ಆಗುವುದನ್ನು ತಡೆಯಲು ಗಂಟುಗಳನ್ನು ತೆಗೆದುಹಾಕಲಾಗುತ್ತದೆ. ಒಟ್ಟು ಥೈರಾಯ್ಡೆಕ್ಟಮಿಯನ್ನು ಹೆಚ್ಚಾಗಿ ನಡೆಸಲಾಗುತ್ತದೆ, ಇದು ಥೈರಾಯ್ಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಕಾರಣವಾಗುತ್ತದೆ. ಕೆಲವು ರೋಗಿಗಳಿಗೆ ತಮ್ಮ ಥೈರಾಯ್ಡ್ ಗ್ರಂಥಿಯ ಅರ್ಧದಷ್ಟು ಭಾಗವನ್ನು ಮಾತ್ರ ತೆಗೆದುಹಾಕಬಹುದು, ಇದನ್ನು ಥೈರಾಯ್ಡ್ ಲೋಬೆಕ್ಟಮಿ ಎಂದು ಕರೆಯಲಾಗುತ್ತದೆ. ಮತ್ತೊಂದು ಚಿಕಿತ್ಸೆಯ ಆಯ್ಕೆಯು ಥೈರಾಯ್ಡ್ ಹಾರ್ಮೋನ್ನ ಔಷಧೀಯ ನಿಗ್ರಹವನ್ನು ಒಳಗೊಂಡಿದೆ. ಥೈರಾಯ್ಡ್ ಗ್ರಂಥಿಯು ಥೈರಾಯ್ಡ್ ಹಾರ್ಮೋನುಗಳ ಟ್ರಯೋಡೋಥೈರೋನೈನ್ (ಟಿ೩) ಮತ್ತು ಥೈರಾಕ್ಸಿನ್ (ಟಿ೩) ಅನ್ನು ಉತ್ಪಾದಿಸಲು ಕಾರಣವಾಗಿದೆ. ಥೈರಾಯ್ಡ್ ಕಾರ್ಯವನ್ನು ನಿಗ್ರಹಿಸಿದ ರೋಗಿಗಳಿಗೆ ಸಾಮಾನ್ಯ ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಾಮಾನ್ಯವಾಗಿ ಮೌಖಿಕ ಥೈರಾಯ್ಡ್ ಬದಲಿ (ಉದಾಹರಣೆಗೆ ಲೆವೊಥೈರಾಕ್ಸಿನ್) ಅಗತ್ಯವಿರುತ್ತದೆ. ಅಂತಿಮ ಚಿಕಿತ್ಸೆಯ ಆಯ್ಕೆಯು ಆರ್ ಎ ಐ ಅಬ್ಲೇಶನ್ (ವಿಕಿರಣಶೀಲ ಅಯೋಡಿನ್ ಅಬ್ಲೇಶನ್) ಆಗಿದೆ. ಸಂಪೂರ್ಣ ಥೈರಾಯ್ಡೆಕ್ಟಮಿ ನಂತರ ಸೋಂಕಿತ ಥೈರಾಯ್ಡ್ ಕೋಶಗಳನ್ನು ನಾಶಮಾಡಲು ಈ ಚಿಕಿತ್ಸಾ ಆಯ್ಕೆಯನ್ನು ಬಳಸಲಾಗುತ್ತದೆ. ಈ ಚಿಕಿತ್ಸೆಯು ರೋಗದ ಮುನ್ನರಿವನ್ನು ಬದಲಾಯಿಸುವುದಿಲ್ಲ, ಆದರೆ ಮರುಕಳಿಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಹರ್ಥ್ಲ್ ಜೀವಕೋಶಗಳು ಆರ್ ಎ ಐ ಗೆ ಉತ್ತಮವಾಗಿ ಪ್ರತಿಕ್ರಿಯಿಸುವುದಿಲ್ಲ. ಆದಾಗ್ಯೂ, ಸಾಮಾನ್ಯವಾಗಿ ವೈದ್ಯರು ಹರ್ಥ್ಲ್ ಸೆಲ್ ಅಡೆನೊಮಾ ಮತ್ತು ಹರ್ಥ್ಲ್ ಸೆಲ್ ಕಾರ್ಸಿನೋಮ ಹೊಂದಿರುವ ರೋಗಿಗಳಿಗೆ ಈ ಚಿಕಿತ್ಸೆಯನ್ನು ಸೂಚಿಸುತ್ತಾರೆ ಏಕೆಂದರೆ ಕೆಲವು ಹರ್ಥ್ಲ್ ಕೋಶಗಳು ಪ್ರತಿಕ್ರಿಯಿಸುತ್ತವೆ ಮತ್ತು ಇದು ಉಳಿದ ಅಂಗಾಂಶವನ್ನು ಕೊಲ್ಲುತ್ತದೆ. ಇತಿಹಾಸ ಮೊದಲ ಹರ್ಥ್ಲ್ ಸೆಲ್ ಅಡೆನೊಮಾವನ್ನು ಡಾ. ಜೇಮ್ಸ್ ಎವಿಂಗ್ ಅವರು ೧೯೨೮ ರಲ್ಲಿ ಕಂಡುಹಿಡಿದರು. ಹರ್ಥ್ಲ್ ಕೋಶಗಳನ್ನು ೧೮೯೦ ರ ದಶಕದಲ್ಲಿ ಕಂಡುಹಿಡಿಯಲಾಯಿತು ಮತ್ತು ಕಾರ್ಲ್ ಹರ್ಥ್ಲೆ ಮತ್ತು ಮ್ಯಾಕ್ಸ್ ಅಸ್ಕನಾಜಿಯ ಹೆಸರನ್ನು ಇಡಲಾಗಿದೆ. ಉಲ್ಲೇಖಗಳು ಬಾಹ್ಯ ಕೊಂಡಿಗಳು http://www.knowcancer.com/oncology/hurthle-cell-adenoma/ https://www.mskcc.org/cancer-care/types/thyroid/about-thyroid http://columbiasurgery.org/conditions-and-treatments/follicular-and-hurthle-cell-thyroid-cancer ಥೈರಾಯ್ಡ್ ಕ್ಯಾನ್ಸರ್ ವಿಧಗಳು
152357
https://kn.wikipedia.org/wiki/%E0%B2%86%E0%B2%97%E0%B3%8D%E0%B2%B0%E0%B2%BE%20%E0%B2%95%E0%B2%A6%E0%B2%A8
ಆಗ್ರಾ ಕದನ
ಆಗ್ರಾ ಕದನವು ತುಲನಾತ್ಮಕವಾಗಿ ಚಿಕ್ಕದಾಗಿದೆ ಆದರೆ 1857ರ ಭಾರತೀಯ ದಂಗೆಯ ಸಮಯದಲ್ಲಿ ದೀರ್ಘಾವಧಿಯ ಮುತ್ತಿಗೆಯ ಕೊನೆಯಲ್ಲಿ ಇದು ನಿರ್ಣಾಯಕ ಕ್ರಮವಾಗಿತ್ತು. ದಂಗೆಯ ಆರಂಭಿಕ ದಿನಗಳಲ್ಲಿ, ಆಗ್ರಾದ ಸುತ್ತಲಿನ ಗ್ರಾಮಾಂತರವು ವ್ಯಾಪಕ ಅಸ್ವಸ್ಥತೆಗೆ ಒಳಗಾಯಿತು. ಅನೇಕ ಈಸ್ಟ್ ಇಂಡಿಯಾ ಕಂಪನಿಯ ಆಡಳಿತಗಾರರು ಮತ್ತು ಅವರ ಕುಟುಂಬಗಳು ಮತ್ತು ಸೇವಕರು []ಯ ರಕ್ಷಣೆಗೆ ಓಡಿದರು. ಬ್ರಿಟಿಷ್ ಅಧಿಕಾರಿಗಳ ವಿರುದ್ಧ ದಂಗೆಯೆದ್ದ ಸಿಪಾಯಿಗಳಿಂದ ಕೂಡಿದ ಬಂಡಾಯ ಸೈನ್ಯವು ಆಗ್ರಾವನ್ನು ಸಮೀಪಿಸಿದಾಗ ರಕ್ಷಣಾ ವ್ಯವಸ್ಥೆಯಿಂದ (ಗ್ಯಾರಿಸನ್‌) ಒಂದು ದಾಳಿಯನ್ನು ವಿಫಲಗೊಳಿಸಿದರು, ಅದು ಅಸಮರ್ಥವಾಗಿ ವಯಸ್ಸಾದ ಅಧಿಕಾರಿಗಳ ನೇತೃತ್ವದಲ್ಲಿತ್ತು. ಆದಾಗ್ಯೂ, ಅವರು ಕೋಟೆಯ ಮೇಲೆ ದಾಳಿ ಮಾಡಲು ಅಗತ್ಯವಾದ ಭಾರೀ ಫಿರಂಗಿಗಳ ಕೊರತೆಯನ್ನು ಹೊಂದಿದ್ದರು ಮತ್ತು ದೆಹಲಿಯಲ್ಲಿ ಚಕ್ರವರ್ತಿ ಬಹದ್ದೂರ್ ಷಾ ಜಾಫರ್ ಅವರ ನಾಮಮಾತ್ರ ನಾಯಕತ್ವದ ಚಳುವಳಿಯನ್ನು ಮಾಡಿದ ಬಂಡುಕೋರರನ್ನು ಸೇರಲು ತೆರಳಿದರು. ಕೆಲವು ತಿಂಗಳು, ಬ್ರಿಟಿಷರು ಕೋಟೆಯೊಳಗೆ ಈ ಕ್ರಮಬಧ್ದವಲ್ಲದ ಮುತ್ತಿಗೆಯನ್ನು ಸಹಿಸಿಕೊಂಡರು. ಕೋಟೆಯಲ್ಲಿದ್ದ ಬ್ರಿಟಿಷ್ ನಾಯಕರು ಬಂಡುಕೋರರ ವಿರುದ್ಧ ಯಾವುದೇ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ದೆಹಲಿಯ ಮುತ್ತಿಗೆಯು ಬ್ರಿಟಿಷ್ ವಿಜಯದಲ್ಲಿ ಕೊನೆಗೊಂಡಾಗ, ಬ್ರಿಟಿಷರು ದೆಹಲಿಯಿಂದ ಹಿಮ್ಮೆಟ್ಟುವ ಬಂಡುಕೋರರ ದಾಳಿಗೆ ಹೆದರಿದರು ಮತ್ತು ಸಹಾಯಕ್ಕಾಗಿ ಹತ್ತಿರದ ಬ್ರಿಟಿಷ್ ಕಾಲಮ್‍ನ ಕಮಾಂಡರ್‌ಗೆ ಮನವಿ ಮಾಡಿದರು. ಬ್ರಿಟಿಷ್ ಕಾಲಮ್‍ ಕೋಟೆಯನ್ನು ಬಿಡುಗಡೆಗೊಳಿಸಿ ಕೋಟೆಯ ಹೊರಗೆ ಶಿಬಿರವನ್ನು ಸ್ಥಾಪಿಸಿತು. ಆಶ್ಚರ್ಯಕರವಾಗಿ ಭಾರತೀಯ ಬಂಡುಕೋರರು ದಾಳಿ ಮಾಡಿ ಸಂಪೂರ್ಣ ವಿಜಯವನ್ನು ಸಾಧಿಸಿದರು, ಆದರೆ ಬ್ರಿಟಿಷರ ಯುದ್ಧ-ಕಠಿಣ ಪಡೆಗಳು ಒಟ್ಟುಗೂಡಿ ಮತ್ತು ಬಂಡುಕೋರರನ್ನು ಸೋಲಿಸಿ ಚದುರಿಸಿದವು. ಇದು ಹಿಂದೆ ಬಂಡಾಯಗಾರರ ಕೈಯಲ್ಲಿದ್ದ ಉತ್ತರ ಭಾರತದ ಭೂಪ್ರದೇಶಗಳಾದ್ಯಂತ ಪೂರ್ವದಿಂದ ಪಶ್ಚಿಮಕ್ಕೆ ದುರ್ಬಲ ಸಂವಹನಗಳನ್ನು ಸ್ಥಾಪಿಸಲು ಮತ್ತು ಲಕ್ನೋದ ಪ್ರಮುಖ ಪರಿಹಾರಕ್ಕಾಗಿ ಸೈನ್ಯವನ್ನು ಕೇಂದ್ರೀಕರಿಸಲು ಬ್ರಿಟಿಷರಿಗೆ ಅವಕಾಶ ಮಾಡಿಕೊಟ್ಟಿತು. ಹಿನ್ನೆಲೆ ಆಗ್ರಾ ನಗರ ಮತ್ತು ಕೋಟೆಯು ತಾಜ್ ಮಹಲ್ ಹತ್ತಿರ ಯಮುನಾ ನದಿಯ ತೀರದಲ್ಲಿದೆ. ದಂಗೆ ಭುಗಿಲೇಳುವ ಮೊದಲು, ಆಗ್ರಾವು ವಾಯವ್ಯ ಪ್ರಾಂತ್ಯಗಳೆಂದು ಕರೆಯಲ್ಪಡುತ್ತಿದ್ದ ಆಡಳಿತದ ಕೇಂದ್ರವಾಗಿತ್ತು (ಮತ್ತೆ ಹುಟ್ಟಿಕೊಂಡ ಫ್ರಾಂಟಿಯರ್ ಪ್ರಾಂತ್ಯ ಬೇರೆಯಾಗಿರುತ್ತದೆ). ಈ ಪ್ರಾಂತ್ಯದ ಲೆಫ್ಟಿನೆಂಟ್ ಗವರ್ನರ್ ಜಾನ್ ರಸೆಲ್ ಕೊಲ್ವಿನ್. ಮಿಲಿಟರಿ ಕಂಟೋನ್ಮೆಂಟ್‌ಗಳಲ್ಲಿ 3 ನೇ ಬೆಂಗಾಲ್ ಫ್ಯುಸಿಲಿಯರ್ಸ್ ( ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಪದಾತಿಸೈನ್ಯದ "ಯುರೋಪಿಯನ್" ರೆಜಿಮೆಂಟ್), ಶ್ವೇತ ಪಡೆಗಳಿಂದ ಕೂಡಿದ ಫಿರಂಗಿದಳದ ಬ್ಯಾಟರಿ ಮತ್ತು ಬಂಗಾಳ ಸ್ಥಳೀಯ ಪದಾತಿ ದಳದ 44 ನೇ ಮತ್ತು 67 ನೇ ರೆಜಿಮೆಂಟ್‌ಗಳು ಹತ್ತಿರದಲ್ಲಿ ನೆಲೆಗೊಂಡಿವೆ. ಹೊಸದಾಗಿ ಸೇರ್ಪಡೆಗೊಂಡ 3 ನೇ ಬೆಂಗಾಲ್ ಫ್ಯುಸಿಲಿಯರ್ಸ್ವ, ಇವರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯದ ಮತ್ತು ಒಗ್ಗಿಕೊಳ್ಳದ ಪುರುಷರ ಪಟ್ಟಿಯನ್ನು ಹೊಂದಿದ್ದರು.. ವಯಸ್ಸಾದ ಬ್ರಿಗೇಡಿಯರ್ ಪೊಲ್ವ್ಹೆಲ್ ಮಿಲಿಟರಿ ಕಮಾಂಡರ್ ಆಗಿದ್ದರು. ಈಸ್ಟ್ ಇಂಡಿಯಾ ಕಂಪನಿಯ ಕ್ರಮಗಳು ಮತ್ತು ಸುಧಾರಣೆಗಳು ಭಾರತೀಯ ಸಮಾಜಕ್ಕೆ ಮತ್ತು ತಮ್ಮದೇ ಆದ ಜಾತಿ ಮತ್ತು ಸ್ಥಾನಮಾನಕ್ಕೆ ಧಕ್ಕೆ ತರುತ್ತಿವೆ ಎಂದು ಹೆದರಿದ ಬಂಗಾಳದ ಸೇನೆಯ ಸಿಪಾಯಿಗಳು (ಭಾರತೀಯ ಸೈನಿಕರು) ಹಲವಾರು ವರ್ಷಗಳಿಂದ ಹಿಂಜರಿಯುತ್ತಿತ್ತು. 1857 ರ ಆರಂಭಿಕ ತಿಂಗಳುಗಳಲ್ಲಿ ಅಶಾಂತಿಯು ಹೆಚ್ಚಿದ ನಂತರ, ಮೀರತ್‌ನಲ್ಲಿನ ಸಿಪಾಯಿಗಳು 10 ಮೇ 1857 ರಂದು ದಂಗೆಯನ್ನು ಮುರಿದು ದೆಹಲಿಗೆ ತೆರಳಿದರು. ತರುವಾಯ ಅವರು ತಮ್ಮೊಂದಿಗೆ ಸೇರಲು ಮತ್ತು ಚಕ್ರವರ್ತಿ ಬಹದ್ದೂರ್ ಷಾ ಜಾಫರ್ ರಾಷ್ಟ್ರವ್ಯಾಪಿ ದಂಗೆಯನ್ನು ಮುನ್ನಡೆಸಲು ಹೆಚ್ಚಿನ ಸಿಪಾಯಿಗಳನ್ನು ಕರೆದರು. ನಗರವು ಶೀಘ್ರದಲ್ಲೇ ಬಂಡುಕೋರರ ವಶವಾಯಿತು. ಮೇ 16 ರಂದು, ನಗರದಿಂದ ತಪ್ಪಿಸಿಕೊಳ್ಳಲು ವಿಫಲರಾದ 52 ಬ್ರಿಟಿಷ್ ನಿರಾಶ್ರಿತರನ್ನು ರಾಜನ ಅರಮನೆಯ ಮುಂದೆ ಗಲ್ಲಿಗೇರಿಸಲಾಯಿತು. ದಂಗೆಯ ಸುದ್ದಿ ತ್ವರಿತವಾಗಿ ಹರಡಿತು. ದೆಹಲಿಯನ್ನು ವಶಪಡಿಸಿಕೊಳ್ಳುವ ಮೊದಲು ಕಳುಹಿಸಲಾದ ಟೆಲಿಗ್ರಾಫ್ ಸಂದೇಶಗಳಿಂದ ಬ್ರಿಟಿಷರಿಗೆ ಎಚ್ಚರಿಕೆ ನೀಡಲಾಯಿತು, ಆದರೆ ಭಾರತೀಯ ಸಂದೇಶವಾಹಕರು ಮತ್ತು ಇತರ ಪ್ರಯಾಣಿಕರು ಘಟನೆಗಳ ಉತ್ಸಾಹಭರಿತ ಆವೃತ್ತಿಗಳನ್ನು ತ್ವರಿತವಾಗಿ ಹರಡಿದರು. ಕೊಲ್ವಿನ್ ಮೇ 17 ರಂದು ಸಭೆಯನ್ನು ಕರೆದರು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತಗಾರರು ಮತ್ತು ಅವರ ಕುಟುಂಬಗಳನ್ನು ಆಗ್ರಾ ಕೋಟೆಗೆ ಹಿಂತೆಗೆದುಕೊಳ್ಳುವುದು ಅವರ ಮೊದಲ ಪ್ರವೃತ್ತಿಯಾಗಿತ್ತು ಆದರೆ ಮುಖ್ಯ ಮ್ಯಾಜಿಸ್ಟ್ರೇಟ್ ರಾಬರ್ಟ್ ಡ್ರಮ್ಮಂಡ್ ಸೇರಿದಂತೆ ಇತರರು ಮನವೊಲಿಸಿದರು, ಸಿಪಾಯಿಗಳ ನಿಷ್ಠೆಯು ಅನುಮಾನಾಸ್ಪದವಾಗಿದ್ದರೂ, ಪ್ರಾಂತ್ಯದ ಸಾಮಾನ್ಯ ಜನರು ನಿಷ್ಠಾವಂತರಾಗಿದ್ದರು. ಬ್ರಿಟಿಷರ ಯಾವುದೇ ಭೀತಿಯ ನೋಟವು ಅಡಚಣೆಗಳನ್ನು ಉಂಟುಮಾಡುತ್ತದೆ. ವಾಸ್ತವವಾಗಿ, ದಂಗೆಯ ಸುದ್ದಿಯು ಪ್ರಾಂತ್ಯದಲ್ಲಿ ಸಾರ್ವಜನಿಕ ಸುವ್ಯವಸ್ಥೆಯನ್ನು ಬಹಳ ವೇಗವಾಗಿ ಮುರಿಯಲು ಕಾರಣವಾಯಿತು. ಭಾರೀ ತೆರಿಗೆ ಮೌಲ್ಯಮಾಪನಗಳ ಮೇಲೆ ಅಸಮಾಧಾನವಿತ್ತು ಮತ್ತು ಇತರ ಅಂತರ-ಕೋಮು ದ್ವೇಷಗಳು ಶೀಘ್ರದಲ್ಲೇ ಹೊರಹೊಮ್ಮಿದವು. ಖಜಾನೆಗಳು ಮತ್ತು ಜೈಲುಗಳನ್ನು ತೊರೆದು ಸಶಸ್ತ್ರ ಪಡೆಗಳೊಂದಿಗೆ ಭಾರತೀಯ ಪೋಲೀಸ್ ಕಾವಲುಗಾರರು ಗ್ರಾಮಾಂತರಕ್ಕೆ ಸಂಚರಿಸಿದವು. ಸಚೇತಾದಲ್ಲಿ ನಡೆದ ವಿಷಯಗಳು ಆಗ್ರಾದ ಎರಡು ಬಂಗಾಳ ಸ್ಥಳೀಯ ಪದಾತಿ ದಳಗಳ ಅಧಿಕಾರಿಗಳು ತಮ್ಮ ಪುರುಷರು ನಿಷ್ಠಾವಂತರು ಎಂದು ಒತ್ತಾಯಿಸಿದರೂ, ಪುರುಷರ ಹೆಚ್ಚುತ್ತಿರುವ ಹುಚ್ಚುತನದ ವರ್ತನೆಯು ಮೇ 31 ರಂದು ಅವರನ್ನು ನಿಶ್ಯಸ್ತ್ರಗೊಳಿಸಲು ಬ್ರಿಟಿಷರನ್ನು ಪ್ರೇರೇಪಿಸಿತು. ನಿರಾಯುಧರಾದ ಸಿಪಾಯಿಗಳನ್ನು ಅವರ ಮನೆಗಳಿಗೆ ರಜೆಯ ಮೇಲೆ ಕಳುಹಿಸಿ ವಜಾಗೊಳಿಸಲಾಯಿತು. ಫತೇಪುರದ ದಿಕ್ಕಿನಿಂದ ದೊಡ್ಡ ಬಂಡಾಯ ಪಡೆ ಸಮೀಪಿಸುತ್ತಿದೆ ಎಂದು ಬ್ರಿಟಿಷರು ತಿಳಿದುಕೊಂಡರು. ನಿಮಾಚ್ ಮತ್ತು ನಾಸಿರಾಬಾದ್‌ನಲ್ಲಿ ನೆಲೆಸಿದ್ದ ಮತ್ತು ಬಂಡಾಯಕ್ಕೆ ಸೇರಿದ ಬಂಗಾಳದ ಸ್ಥಳೀಯ ಪಡೆಗಳ ಬ್ರಿಗೇಡ್‌ಗಳನ್ನು ಈ ಪಡೆಯು ಒಳಗೊಂಡಿತ್ತು. ಸರಿಸುಮಾರು 7000 ಕಾಲಾಳುಪಡೆ, 1500 ಅಶ್ವದಳ ಮತ್ತು 8 ಬಂದೂಕುಗಳನ್ನು ಈ ಪಡೆಯು ಹೊಂದಿಕೊಂಡಿತ್ತು. ಮಾಜಿ(ಹಿಂದಿನ) ಪಳಗಿದ ಬಂಗಾಳ ಸೈನ್ಯವು ಉತ್ತಮ ತರಬೇತಿ ಪಡೆದವರು ಮತ್ತು ಸಂಘಟಿತ ಪಡೆಗಳಾಗಿದ್ದರು. ಬ್ರಿಟಿಷರನ್ನು ಬೆಂಬಲಿಸಲೆಂದು ಕೊಟಾಹ್ ರಾಜ್ಯದಿಂದ ಬಂದ ಸೈನ್ಯದ ತುಕಡಿಯನ್ನು ಫತೇಪುರ್ ರಸ್ತೆಯನ್ನು ತಡೆಯಲು ಕಳುಹಿಸಲಾಯಿತು. ಜೂನ್ 4 ರಂದು, ಕೋಟಾ ಸೈನ್ಯದ ತುಕಡಿಯು ಸಂಪೂರ್ಣವಾಗಿ ಸ್ಥಳಾಂತರಗೊಂಡಿತು. ಕೊಲ್ವಿನ್ ವಿಳಂಬವಾಗಿ 6,000 ಬ್ರಿಟಿಷ್ ನಾಗರಿಕರು ಮತ್ತು ಅವರ ಕುಟುಂಬಗಳು ಮತ್ತು ಅವಲಂಬಿತರು (ಗ್ರಾಮೀಣ ಪ್ರದೇಶದಲ್ಲಿನ ಅಡಚಣೆಗಳಿಂದ ಪಲಾಯನ ಮಾಡಿದ ಅನೇಕರು ಸೇರಿದಂತೆ) ದುರ್ಬಲ ನಾಗರಿಕ ತಾತ್ಕಾಲಿಕ ವಸತಿಗ್ರಹಗಳಿಂದ ಕೋಟೆಗೆ ತೆರಳಲು ಅನುಮತಿ ನೀಡಿದರು. ಈ ಕ್ರಮವು ಎಷ್ಟು ತರಾತುರಿಯಲ್ಲಿ ಮತ್ತು ಭಯಭೀತರಾಗಿ ಮಾಡಲಾಗಿದೆಯೆಂದರೆ ಹೆಚ್ಚಿನ ನಾಗರಿಕರು ತಮ್ಮ ಬೆಲೆಬಾಳುವ ವಸ್ತುಗಳನ್ನು ಮತ್ತು ಇತರ ಆಸ್ತಿಯನ್ನು ಅವರಿದ್ದಲ್ಲಿಂದಲೇ ಬಿಟ್ಟು ಹೋಗಬೇಕಾಯಿತು. ಫಲಿತಾಂಶಗಳು ಈ ಸಣ್ಣ ಆದರೆ ಉಗ್ರ ಕ್ರಮವು ದೆಹಲಿ ಮತ್ತು ಕಾನ್‌ಪೋರ್ ನಡುವೆ ಬ್ರಿಟಿಷರಿಗೆ ಸಂಘಟಿತ ವಿರೋಧವು ಮುರಿಯಿತು. ವಿಜಯದ ನಂತರ, ಗ್ಯಾರಿಸನ್‌ನ ಕಮಾಂಡರ್‌ಗಳು ತಮ್ಮ ಹಿಂದಿನ ಭೀತಿಯ ಸ್ಥಿತಿಗೆ ಮರಳಿದರು ಮತ್ತು ಗ್ವಾಲಿಯರ್‌ನಿಂದ ಬಂಡುಕೋರರ ವಿರುದ್ಧ ಆಗ್ರಾವನ್ನು ರಕ್ಷಿಸಲು ಗ್ರೇಥೆಡ್ ಪ್ರದೇಶದಲ್ಲಿ ಉಳಿಯಲು ಬಯಸಿದ್ದರು. ಆದಾಗ್ಯೂ, ಗಂಗಾ ಮತ್ತು ಯಮುನಾ ನದಿಗಳ ನಡುವಿನ ಪ್ರದೇಶವನ್ನು ತೆರವುಗೊಳಿಸಲು ತನ್ನ ಮೂಲ ಆದೇಶಗಳನ್ನು ಕೈಗೊಳ್ಳಲು ಗ್ರೇಟ್ ಒತ್ತಾಯಿಸಿದರು. ಬುಲಂದ್‌ಶಹರ್‌ನಲ್ಲಿರುವಾಗ ಜನರಲ್ ಹೆನ್ರಿ ಹ್ಯಾವ್‌ಲಾಕ್‌ನಿಂದ ಸ್ವೀಕರಿಸಿದ ಟಿಪ್ಪಣಿಯಿಂದ ಅವರು ಮನವೊಲಿಸಿದರು, ಅವರು ಲಕ್ನೋವನ್ನು ಬಿಡುಗಡೆಗೊಳಿಸಲು ಹೋಗುತ್ತಿದ್ದಾರೆ ಮತ್ತು ತುರ್ತಾಗಿ ಬಲವರ್ಧನೆ ಮತ್ತು ಸಾರಿಗೆ ಅಗತ್ಯವಿದೆ ಎಂದು ಹೇಳಿದರು. ಗ್ರೇಥೆಡ್‌ನ ಪಡೆ ಅಂತಿಮವಾಗಿ ಲಕ್ನೋದ ಎರಡನೇ ವಿಮೋಚನೆಯನ್ನು ನಡೆಸಿದ ಸೈನ್ಯದ ಅಧಿಕೃತ ಭಾಗವನ್ನು ರಚಿಸಿತು. ಉಲ್ಲೇಖಗಳು ಮೂಲ ಸಂಪಾದನೆ
152358
https://kn.wikipedia.org/wiki/%E0%B2%9C%E0%B3%87%E0%B2%AE%E0%B3%8D%E0%B2%B8%E0%B3%8D%20%E0%B2%8E%E0%B2%B5%E0%B2%BF%E0%B2%82%E0%B2%97%E0%B3%8D%20%28%E0%B2%B0%E0%B3%8B%E0%B2%97%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%9C%E0%B3%8D%E0%B2%9E%29
ಜೇಮ್ಸ್ ಎವಿಂಗ್ (ರೋಗಶಾಸ್ತ್ರಜ್ಞ)
ಜೇಮ್ಸ್ ಸ್ಟೀಫನ್ ಎವಿಂಗ್ (ಡಿಸೆಂಬರ್ ೨೫, ೧೮೬೬, ಪಿಟ್ಸ್‌ಬರ್ಗ್ - ಮೇ ೧೬, ೧೯೪೩, ನ್ಯೂಯಾರ್ಕ್ ನಗರ ) ಒಬ್ಬ ಅಮೇರಿಕನ್ ರೋಗಶಾಸ್ತ್ರಜ್ಞ ರಾಗಿದ್ದರು. ಅವರು ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ರೋಗಶಾಸ್ತ್ರದ ಮೊದಲ ಪ್ರಾಧ್ಯಾಪಕರಾಗಿದ್ದರು ಮತ್ತು ಮೂಳೆ ಕ್ಯಾನ್ಸರ್ನ ಒಂದು ರೂಪವನ್ನು ಕಂಡುಹಿಡಿದರು. ಈ ಕಾರಣಕ್ಕಾಗಿ ಅವರ ಹೆಸರನ್ನು ಮೂಳೆ ಕ್ಯಾನ್ಸರ್ನ ಒಂದು ರೂಪಕ್ಕೆ ಎವಿಂಗ್ ಸಾರ್ಕೋಮಾ .ಎಂದು ಇಡಲಾಯಿತು. ಜೀವನ ಜೇಮ್ಸ್ ಎವಿಂಗ್ ರವರು, ೧೮೬೬ರಲ್ಲಿ ಪಿಟ್ಸ್‌ಬರ್ಗ್‌ನ ಪ್ರಮುಖ ಕುಟುಂಬದಲ್ಲಿ ಜನಿಸಿದರು. ಅವರು ೧೪ ವರ್ಷದವರಾಗಿದ್ದಾಗ ಅವರಿಗೆ ಆಸ್ಟಿಯೋಮೈಲಿಟಿಸ್ ರೋಗನಿರ್ಣಯ ಮಾಡಲಾಯಿತು ಮತ್ತು ಎರಡು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಅವರು ಮೊದಲು ೧೮೮೮ ರಲ್ಲಿ ಅಮ್ಹೆರ್ಸ್ಟ್ ಕಾಲೇಜಿನಲ್ಲಿ ತಮ್ಮ ಬಿಎಯನ್ನು ಪೂರ್ಣಗೊಳಿಸಿದರು ಮತ್ತು ನಂತರ ೧೮೮೮ ರಿಂದ ೧೮೯೧ ರವರೆಗೆ ನ್ಯೂಯಾರ್ಕ್ನ ವೈದ್ಯ ಮತ್ತು ಶಸ್ತ್ರಚಿಕಿತ್ಸಕರ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದರು. ಅವರು ಹಿಸ್ಟಾಲಜಿ (೧೮೯೩-೧೮೯೭), ಮತ್ತು ಕ್ಲಿನಿಕಲ್ ಪ್ಯಾಥಾಲಜಿ (೧೮೯೭-೧೮೯೮) ಬೋಧಕರಾಗಿ ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್‌ಗೆ ಮರಳಿದರು. ಅಮೇರಿಕದ ಸೈನ್ಯದೊಂದಿಗೆ ಶಸ್ತ್ರಚಿಕಿತ್ಸಕರಾಗಿ ಕೆಲವು ಅವಧಿ ಕಾರ್ಯನಿರ್ವಹಿಸಿದ ನಂತರ, ಎವಿಂಗ್ ಅವರನ್ನು ೧೮೯೯ರಲ್ಲಿ ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ರೂಪುಗೊಂಡ ವೈದ್ಯಕೀಯ ಕಾಲೇಜಿನಲ್ಲಿ ಕ್ಲಿನಿಕಲ್ ರೋಗಶಾಸ್ತ್ರದ ಮೊದಲ ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ಅಲ್ಲಿ ಅವರು ಪೂರ್ಣ ಸಮಯದ ಪ್ರಾಧ್ಯಾಪಕರಾಗಿದ್ದರು. ೧೯೦೨ರಲ್ಲಿ, ಎವಿಂಗ್ ಕ್ಯಾನ್ಸರ್ ಸಂಶೋಧನೆಗಾಗಿ ಮೊದಲ ನಿಧಿಯನ್ನು ಸ್ಥಾಪಿಸಲು ಸಹಾಯ ಮಾಡಿದರು. ನಿಧೀಯನ್ನು ಮೊದಲು ನೀಡಿದವರು ಶ್ರೀಮತಿ ಕಾಲಿಸ್ ಪಿ. ಹಂಟಿಂಗ್ಟನ್ . ಆ ಸಂಶೋಧನಾ ನಿಧಿಯನ್ನು ಬಳಸಿಕೊಂಡು ಅವರ ಆವಿಷ್ಕಾರಗಳೊಂದಿಗೆ, ಎವಿಂಗ್ ಪ್ರಮುಖ ಪ್ರಾಯೋಗಿಕ ಆಂಕೊಲಾಜಿಸ್ಟ್ ಆದರು ಮತ್ತು ೧೯೦೭ರಲ್ಲಿ ಅಮೇರಿಕನ್ ಅಸೋಸಿಯೇಷನ್ ಫಾರ್ ಕ್ಯಾನ್ಸರ್ ರಿಸರ್ಚ್ ಮತ್ತು ೧೯೧೩ರಲ್ಲಿ ಅಮೇರಿಕನ್ ಸೊಸೈಟಿ ಫಾರ್ ದಿ ಕಂಟ್ರೋಲ್ ಆಫ್ ಕ್ಯಾನ್ಸರ್ ಅನ್ನು, ಈಗಿನ ಅಮೇರಿಕನ್ ಕ್ಯಾನ್ಸರ್ ಸೊಸೈಟಿಯಲ್ಲಿ ಕಂಡುಹಿಡಿಯಲು ಸಹಾಯ ಮಾಡಿದರು. ೧೯೦೬ ರಲ್ಲಿ ಎವಿಂಗ್, ಎಸ್ಪಿ ಬೀಬೆ ಮತ್ತು ಸಹಯೋಗಿಗಳೊಂದಿಗೆ ಕೆಲಸ ಮಾಡುತ್ತಾ, ಕ್ಯಾನ್ಸರ್ (ನಾಯಿಗಳಲ್ಲಿ ದವಡೆ ಹರಡುವ ವೆನೆರಿಯಲ್ ಗೆಡ್ಡೆ ) ಹರಡಬಹುದು ಎಂಬುದಕ್ಕೆ ಮೊದಲ ಪುರಾವೆಯನ್ನು ತೋರಿಸಿದರು. ೧೯೧೦ರಲ್ಲಿ, ಕ್ಲಿನಿಕಲ್ ಸಂಶೋಧನಾ ಸೌಲಭ್ಯವನ್ನು ಸ್ಥಾಪಿಸುವ ಕುರಿತು ಎವಿಂಗ್ ನ್ಯೂಯಾರ್ಕ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಇದು ವಿಫಲವಾದಾಗ, ಅವರು ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ಜೇಮ್ಸ್ ಡೌಗ್ಲಾಸ್ ಅವರ ಸಹಾಯದಿಂದ ಸ್ಮಾರಕ ಆಸ್ಪತ್ರೆಯೊಂದಿಗೆ ( ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ಆಗುತ್ತದೆ) ಸಹಯೋಗವನ್ನು ಸ್ಥಾಪಿಸಿದರು, ಅವರು ಆ ಉದ್ದೇಶಕ್ಕಾಗಿ ಸ್ಮಾರಕಕ್ಕೆ ಕ್ಲಿನಿಕಲ್ ಪ್ರಯೋಗಾಲಯ, ರೇಡಿಯಂನೊಂದಿಗೆ ಕೆಲಸ ಮಾಡಲು ಉಪಕರಣಗಳು ಮತ್ತು ಕ್ಲಿನಿಕಲ್ ಸಂಶೋಧನೆಗಾಗಿ ಇಪ್ಪತ್ತು ಹಾಸಿಗೆಗಳನ್ನು ನೀಡಲು $೧೦೦೦೦೦ ನೀಡಿದರು. ಡಗ್ಲಾಸ್‌ನ ಉತ್ಸಾಹ ಮತ್ತು ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆಯ ಅಭಿವೃದ್ಧಿಗೆ ಧನಸಹಾಯವು ಎವಿಂಗ್‌ಗೆ ಈ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರವರ್ತಕರಲ್ಲಿ ಒಬ್ಬನಾಗಲು ಪ್ರೇರೇಪಿಸಿತು. ಎವಿಂಗ್ ಶೀಘ್ರದಲ್ಲೇ ಮೆಮೋರಿಯಲ್‌ನಲ್ಲಿ ಕ್ಲಿನಿಕಲ್ ಮತ್ತು ಪ್ರಯೋಗಾಲಯ ಸಂಶೋಧನೆಯ ಪರಿಣಾಮಕಾರಿ ನಾಯಕತ್ವವನ್ನು ವಹಿಸಿಕೊಂಡರು. ೧೯೧೯ರಲ್ಲಿ ಎವಿಂಗ್ ನಿಯೋಪ್ಲಾಸ್ಟಿಕ್ ರೋಗಗಳ ಮೊದಲ ಆವೃತ್ತಿಯಾದ ಎ ಟೆಕ್ಸ್ಟ್-ಬುಕ್ ಆನ್ ಟ್ಯೂಮರ್ಸ್ ಅನ್ನು ಪ್ರಕಟಿಸಿದರು: ಇದನ್ನು ಹಲವಾರು ಭಾಷೆಗಳಿಗೆ ಅನುವಾದಿಸಲಾದ ಪುಸ್ತಕವಾಗಿದ್ದು, ಮಾನವ ಕ್ಯಾನ್ಸರ್ ರೋಗನಿರ್ಣಯಕ್ಕೆ ವ್ಯವಸ್ಥಿತ ಮತ್ತು ಸಮಗ್ರ ಆಧಾರವನ್ನು ಸ್ಥಾಪಿಸುವ ಮೂಲಕ ಆಧುನಿಕ ಆಂಕೊಲಾಜಿಯ ಮೂಲಾಧಾರವಾಗಿದೆ. ೧೯೨೧ರಲ್ಲಿ ಅವರು ಒಂದು ರೀತಿಯ ಆಸ್ಟಿಯೋಮಾವನ್ನು ವಿವರಿಸುವ ಕಾಗದವನ್ನು ಪ್ರಕಟಿಸಿದರು, ನಂತರ ಅದು ಎವಿಂಗ್ ಸಾರ್ಕೋಮಾ ಎಂದು ಅವರ ಹೆಸರನ್ನು ಪಡೆದುಕೊಂಡಿತು. ೧೯೩೧ರಲ್ಲಿ ಎವಿಂಗ್ ಆಸ್ಪತ್ರೆಯ ಅಧ್ಯಕ್ಷರಾಗಿ ಔಪಚಾರಿಕವಾಗಿ ನೇಮಕಗೊಂಡರು ಮತ್ತು ಟೈಮ್ ಮ್ಯಾಗಜೀನ್‌ನ ಮುಖಪುಟದಲ್ಲಿ "ಕ್ಯಾನ್ಸರ್ ಮ್ಯಾನ್ ಎವಿಂಗ್" ಎಂದು ಕಾಣಿಸಿಕೊಂಡರು; ಜೊತೆಗಿರುವ ಲೇಖನವು ಅವರ ಯುಗದ ಪ್ರಮುಖ ಕ್ಯಾನ್ಸರ್ ವೈದ್ಯರಲ್ಲಿ ಒಬ್ಬನ ಪಾತ್ರವನ್ನು ವಿವರಿಸಿದೆ. ಅವರು ೧೯೩೯ರಲ್ಲಿ ನಿವೃತ್ತರಾಗುವವರೆಗೂ ಸ್ಮಾರಕ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು ಅವರ ನಾಯಕತ್ವದಲ್ಲಿ, ಮೆಮೋರಿಯಲ್ ಯುನೈಟೆಡ್ ಸ್ಟೇಟ್ಸ್‌ನ ಇತರ ಕ್ಯಾನ್ಸರ್ ಕೇಂದ್ರಗಳಿಗೆ ಮಾದರಿಯಾಯಿತು. ರೋಗಿಗಳ ಆರೈಕೆಯನ್ನು ಕ್ಲಿನಿಕಲ್ ಮತ್ತು ಲ್ಯಾಬೊರೇಟರಿ ಸಂಶೋಧನೆಯೊಂದಿಗೆ ಸಂಯೋಜಿಸುತ್ತದೆ "ಪ್ರತಿಯೊಂದು ಸಂಸ್ಥೆಯು ಕೆಲವು ಮನುಷ್ಯನ ಉದ್ದನೆಯ ನೆರಳು ಮಾತ್ರ.' ಡಾ. ಎವಿಂಗ್ ಸ್ಮಾರಕ ಆಸ್ಪತ್ರೆ" ಎಮರ್ಸನ್ "ಇವಿಂಗ್ ಮತ್ತು ಮೆಮೋರಿಯಲ್ ಆಸ್ಪತ್ರೆಯ ಸಂಬಂಧವನ್ನು ಹೀಗೆ ಹೇಳೀದ್ದಾರೆ. ೧೯೫೧ರಲ್ಲಿ, ಜೇಮ್ಸ್ ಎವಿಂಗ್ ಆಸ್ಪತ್ರೆ, ೬೭ ನೇ ಮತ್ತು ೬೮ನೇ ಬೀದಿಗಳ ನಡುವೆ ಫಸ್ಟ್ ಅವೆನ್ಯೂದಲ್ಲಿ ೧೨-ಅಂತಸ್ತಿನ ಕಟ್ಟಡವನ್ನು ತೆರೆಯಲಾಯಿತು; ಇದು ನ್ಯೂಯಾರ್ಕ್ ನಗರದ ಬಡವರಲಿ ಗಾಗಿ ಕ್ಯಾನ್ಸರ್ ಚಿಕಿತ್ಸೆಗಾಗಿ ಉದ್ದೇಶಿಸಲಾಗಿತ್ತು. ಗ್ರಂಥಸೂಚಿ ಅವರ ಪತ್ರವ್ಯವಹಾರದ ಸಂಗ್ರಹವನ್ನು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ನಡೆಸಲಾಗುತ್ತದೆ. ಝಂಟಿಂಗಾ, AR; ಕಾಪ್ಸ್, MJ: ಜೇಮ್ಸ್ ಎವಿಂಗ್ (1866-1943): "ದಿ ಚೀಫ್". ವೈದ್ಯಕೀಯ ಮತ್ತು ಮಕ್ಕಳ ಆಂಕೊಲಾಜಿ, ನ್ಯೂಯಾರ್ಕ್, 1993, 21 (7): 505-510. ಹುವೋಸ್, AG: ಜೇಮ್ಸ್ ಎವಿಂಗ್: ಕ್ಯಾನ್ಸರ್ ಮನುಷ್ಯ. ಆನಲ್ಸ್ ಆಫ್ ಡಯಾಗ್ನೋಸ್ಟಿಕ್ ಪೆಥಾಲಜಿ, ಏಪ್ರಿಲ್ 1998, 2 (2): 146-148. ಎವಿಂಗ್, ಜೆ: ಕ್ಲಿನಿಕಲ್ ಪ್ಯಾಥಾಲಜಿ ಆಫ್ ಬ್ಲಡ್: ಎ ಟ್ರೀಟೈಸ್ ಆನ್ ದಿ ಜನರಲ್ ಪ್ರಿನ್ಸಿಪಲ್ಸ್ ಅಂಡ್ ಸ್ಪೆಷಲ್ ಅಪ್ಲಿಕೇಷನ್ಸ್ ಆಫ್ ಹೆಮಟಾಲಜಿ. ಫಿಲಡೆಲ್ಫಿಯಾ ಮತ್ತು ನ್ಯೂಯಾರ್ಕ್, 1901. ಎವಿಂಗ್, ಜೆ: ನಿಯೋಪ್ಲಾಸ್ಟಿಕ್ ಡಿಸೀಸ್: ಎ ಟೆಕ್ಸ್ಟ್‌ಬುಕ್ ಆನ್ ಟ್ಯೂಮರ್ಸ್. ಫಿಲಡೆಲ್ಫಿಯಾ, WB ಸೌಂಡರ್ಸ್ ಮತ್ತು ಲಂಡನ್, 1919. ನಾಲ್ಕನೇ ಆವೃತ್ತಿ 1940. ಎವಿಂಗ್, ಜೆ: ಕಾರಣ, ರೋಗನಿರ್ಣಯ ಮತ್ತು ಕ್ಯಾನ್ಸರ್ ಚಿಕಿತ್ಸೆ. ಬಾಲ್ಟಿಮೋರ್, 1931. ಎವಿಂಗ್, ಜೆ: ರಕ್ತ . ಫಿಲಡೆಲ್ಫಿಯಾ. 1910. ಉಲ್ಲೇಖಗಳು ೧೮೬೬ ಜನನ
152359
https://kn.wikipedia.org/wiki/%E0%B2%B2%E0%B2%BF%E0%B2%82%E0%B2%AB%E0%B3%8B%E0%B2%B8%E0%B2%BF%E0%B2%B2%E0%B3%8D
ಲಿಂಫೋಸಿಲ್
ಲಿಂಫೋಸಿಲ್ ಎಪಿತೀಲಿಯಲ್ ಲೈನಿಂಗ್‌ನಿಂದ ಗಡಿಯಾಗಿರದ ದೇಹದೊಳಗಿನ ದುಗ್ಧರಸ ದ್ರವದ ಸಂಗ್ರಹವಾಗಿದೆ. ಇದು ಸಾಮಾನ್ಯವಾಗಿ ವ್ಯಾಪಕವಾದ ಶ್ರೋಣಿಯ ಶಸ್ತ್ರಚಿಕಿತ್ಸೆಯ ನಂತರ ಕಂಡುಬರುವ ಶಸ್ತ್ರಚಿಕಿತ್ಸಾ ತೊಡಕು (ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಂತಹವು) ಮತ್ತು ಇದು ಸಾಮಾನ್ಯವಾಗಿ ರೆಟ್ರೊಪೆರಿಟೋನಿಯಲ್ ಜಾಗದಲ್ಲಿ ಕಂಡುಬರುತ್ತದೆ. ಸ್ವಾಭಾವಿಕ ಬೆಳವಣಿಗೆ ಅಪರೂಪವಾಗಿ ಕಂಡುಬರುತ್ತದೆ. ರೋಗ ಸೂಚನೆ ಹಾಗೂ ಲಕ್ಷಣಗಳು ಅನೇಕ ಲಿಂಫೋಸಿಲ್‌ಗಳು ಲಕ್ಷಣರಹಿತವಾಗಿವೆ. ದೊಡ್ಡ ಲಿಂಫೋಸಿಲ್‌ಗಳು ಪಕ್ಕದ ರಚನೆಗಳ ಸಂಕೋಚನಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ಉಂಟುಮಾಡಬಹುದು, ಇದು ಕೆಳ ಹೊಟ್ಟೆ ನೋವು, ಕಿಬ್ಬೊಟ್ಟೆಯ ಪೂರ್ಣತೆ, ಮಲಬದ್ಧತೆ, ಮೂತ್ರದ ಆವರ್ತನ ಮತ್ತು ಜನನಾಂಗಗಳು ಮತ್ತು ಕಾಲುಗಳ ಎಡಿಮಾಗೆ ಕಾರಣವಾಗುತ್ತದೆ. ಲಿಂಫೋಸಿಲ್ ಸೋಂಕು, ಮೂತ್ರನಾಳದ ಅಡಚಣೆ ಮತ್ತು ಸೋಂಕು, ಕರುಳಿನ ಅಡಚಣೆ, ಸಿರೆಯ ಥ್ರಂಬೋಸಿಸ್, ಪಲ್ಮನರಿ ಎಂಬಾಲಿಸಮ್, ಚೈಲಸ್ ಅಸ್ಸೈಟ್ಸ್ ಮತ್ತು ದುಗ್ಧರಸ ಫಿಸ್ಟುಲಾ ರಚನೆಯನ್ನು ಒಳಗೊಂಡಿರುತ್ತದೆ. ಕ್ಲಿನಿಕಲ್ ಪರೀಕ್ಷೆಯಲ್ಲಿ ಚರ್ಮವು ಕೆಂಪಾಗಬಹುದು, ಊದಿಕೊಳ್ಳಬಹುದು ಮತ್ತು ದ್ರವ್ಯರಾಶಿಯನ್ನು ಅನುಭವಿಸಬಹುದು. ಅಲ್ಟ್ರಾಸೋನೋಗ್ರಫಿ ಅಥವಾ ಸಿಟಿ ಸ್ಕ್ಯಾನ್ ರೋಗನಿರ್ಣಯವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ಭೇದಾತ್ಮಕ ರೋಗನಿರ್ಣಯದಲ್ಲಿ ಪರಿಗಣಿಸಬೇಕಾದ ಇತರ ದ್ರವ ಸಂಗ್ರಹಗಳೆಂದರೆ ಯೂರಿನೋಮಾ, ಸೆರೋಮಾ, ಹೆಮಟೋಮಾ, ಹಾಗೆಯೇ ಕೀವು ಸಂಗ್ರಹಗಳು. ಅಲ್ಲದೆ, ಕೆಳ ಅಂಗಗಳ ಎಡಿಮಾ ಇರುವಾಗ, ಸಿರೆಯ ಥ್ರಂಬೋಸಿಸ್ ಅನ್ನು ಪರಿಗಣಿಸಬೇಕಾಗಿದೆ. ಕಾರಣ ದುಗ್ಧರಸ ಅಂಗಾಂಶದ ಬೆಳವಣಿಗೆಯ ಅಪಾಯವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ( ಲಿಂಫಾಡೆನೆಕ್ಟಮಿ ) ದುಗ್ಧರಸ ಅಂಗಾಂಶವನ್ನು ತೆಗೆದುಹಾಕುವ ಮಟ್ಟಿಗೆ ಧನಾತ್ಮಕವಾಗಿ ಸಂಬಂಧ ಹೊಂದಿದೆ. ಶಸ್ತ್ರಚಿಕಿತ್ಸೆಯು ದುಗ್ಧರಸ ಹರಿವಿನ ಸಾಮಾನ್ಯ ಚಾನಲ್‌ಗಳನ್ನು ನಾಶಪಡಿಸುತ್ತದೆ ಮತ್ತು ಅಡ್ಡಿಪಡಿಸುತ್ತದೆ. ಗಾಯವು ಚಿಕ್ಕದಾಗಿದ್ದರೆ, ಮೇಲಾಧಾರ ವಾಹಿನಿಗಳು ದುಗ್ಧರಸ ದ್ರವವನ್ನು ಸಾಗಿಸುತ್ತವೆ, ಆದರೆ ವ್ಯಾಪಕವಾದ ಹಾನಿಯೊಂದಿಗೆ, ದ್ರವವು ಅಂಗರಚನಾ ಜಾಗದಲ್ಲಿ ಸಂಗ್ರಹವಾಗಬಹುದು ಮತ್ತು ಇದರ ಪರಿಣಾಮವಾಗಿ ಲಿಂಫೋಸಿಲ್ ಉಂಟಾಗುತ್ತದೆ. ಲಿಂಫೋಸಿಸ್ಟ್‌ಗಳಿಗೆ ಕಾರಣವಾಗುವ ವಿಶಿಷ್ಟ ಕಾರ್ಯಾಚರಣೆಗಳು ಮೂತ್ರಪಿಂಡದ ಕಸಿ ಮತ್ತು ಮೂತ್ರಕೋಶ, ಮೂಲಭೂತ ಶ್ರೋಣಿಯ ಶಸ್ತ್ರಚಿಕಿತ್ಸೆ ಪ್ರಾಸ್ಟಾಟಿಕ್ ಅಥವಾ ಸ್ತ್ರೀರೋಗ ಕ್ಯಾನ್ಸರ್‌ನಿಂದಾಗಿ ದುಗ್ಧರಸ ಗ್ರಂಥಿಯನ್ನು ತೆಗೆದುಹಾಕುತ್ತದೆ. ಲಿಂಫೋಸಿಲ್ ಬೆಳವಣಿಗೆಯನ್ನು ಪ್ರಚೋದಿಸುವ ಇತರ ಅಂಶಗಳೆಂದರೆ ಪೂರ್ವಭಾವಿ ವಿಕಿರಣ ಚಿಕಿತ್ಸೆ, ಹೆಪಾರಿನ್ ರೋಗನಿರೋಧಕ (ಆಳವಾದ ಅಭಿಧಮನಿ ಥ್ರಂಬೋಸಿಸ್ ಅನ್ನು ತಡೆಗಟ್ಟಲು ಬಳಸಲಾಗುತ್ತದೆ) ಮತ್ತು ಗೆಡ್ಡೆಯ ಗುಣಲಕ್ಷಣಗಳು. ಫಾಲೋ-ಅಪ್ ಸಿಟಿ ಯೊಂದಿಗೆ ಗರ್ಭಕಂಠದ ಮತ್ತು ಅಂಡಾಶಯದ ಕ್ಯಾನ್ಸರ್ ಅಧ್ಯಯನಗಳಿಗೆ ಆಮೂಲಾಗ್ರ ಶಸ್ತ್ರಚಿಕಿತ್ಸೆಯ ನಂತರ ಕ್ರಮವಾಗಿ ೨೦% ಮತ್ತು ೩೨% ರಲ್ಲಿ ಲಿಂಫೋಸಿಲ್‌ಗಳು ಕಂಡುಬಂದಿವೆ. ಸಾಮಾನ್ಯವಾಗಿ ಅವರು ಶಸ್ತ್ರಚಿಕಿತ್ಸೆಯ ನಂತರ ೪ ತಿಂಗಳೊಳಗೆ ಬೆಳೆಯುತ್ತಾರೆ. ನಿರ್ವಹಣೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ಪೆರಿಟೋನೈಸೇಶನ್ ಅಲ್ಲದ (ಹಿಂಭಾಗದ ಪೆರಿಟೋನಿಯಂ ಅನ್ನು ಮುಚ್ಚದೆ) ಹೀರುವ ಡ್ರೈನ್‌ಗಳು ಲಿಂಫೋಸಿಲ್ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎಂದು ಸೂಚಿಸಲಾಗಿದೆ. ಸಣ್ಣ ಲಿಂಫೋಸಿಲ್‌ಗಳನ್ನು ನಿರೀಕ್ಷಿತವಾಗಿ ನಿರ್ವಹಿಸಬಹುದು ಜೊತೆಗೆ ಅನೇಕ ಗಾಯಗಳನ್ನು ಕಾಲಾನಂತರದಲ್ಲಿ ಹಿಮ್ಮೆಟ್ಟುತ್ತವೆ. ರೋಗಲಕ್ಷಣದ ಗಾಯಗಳಿಗೆ ಹಲವಾರು ವಿಧಾನಗಳು ಲಭ್ಯವಿವೆ. ಅಲ್ಟ್ರಾಸೌಂಡ್ ಅಥವಾ ಕಂಪ್ಯೂಟೆಡ್ ಟೊಮೊಗ್ರಫಿ ಮಾರ್ಗದರ್ಶನ, ಕ್ಯಾತಿಟರ್ ಅಳವಡಿಕೆ ಮತ್ತು ಒಳಚರಂಡಿ ( ಸ್ಕ್ಲೆರೋಸೆಂಟ್‌ಗಳ ಸಂಭವನೀಯ ಬಳಕೆಯೊಂದಿಗೆ) ಮತ್ತು ಶಸ್ತ್ರಚಿಕಿತ್ಸಾ ಒಳಚರಂಡಿಯೊಂದಿಗೆ ಉತ್ತಮ ಸೂಜಿ ಆಕಾಂಕ್ಷೆಯನ್ನು ಒಳಗೊಂಡಿರುತ್ತದೆ. ಲೈಂಗಿಕತೆ ಮತ್ತು ಹಸ್ತಮೈಥುನವು ಜನನಾಂಗದ ಪ್ರದೇಶದಲ್ಲಿದ್ದರೆ ಲಿಂಫೋಸಿಲ್ ಬೆಳವಣಿಗೆಗೆ ಕಾರಣವಾಗಬಹುದು. ಸುಮಾರು ನಾಲ್ಕರಿಂದ ಆರು ವಾರಗಳವರೆಗೆ ಈ ಚಟುವಟಿಕೆಗಳನ್ನು ತಪ್ಪಿಸಲು ಸೂಚಿಸಲಾಗುತ್ತದೆ. ಕೆಲವು ವ್ಯಾಯಾಮಗಳು ಅದನ್ನು ಕುಗ್ಗಿಸಲು ಸಹ ಸಹಾಯ ಮಾಡಬಹುದು. ಉಲ್ಲೇಖಗಳು ಆರೋಗ್ಯ
152360
https://kn.wikipedia.org/wiki/%E0%B2%B6%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%9A%E0%B2%BF%E0%B2%95%E0%B2%BF%E0%B2%A4%E0%B3%8D%E0%B2%B8%E0%B3%86%E0%B2%AF%20%E0%B2%A8%E0%B2%BF%E0%B2%B0%E0%B3%8D%E0%B2%AE%E0%B3%82%E0%B2%B2%E0%B2%A8%E0%B3%86
ಶಸ್ತ್ರಚಿಕಿತ್ಸೆಯ ನಿರ್ಮೂಲನೆ
ಶಸ್ತ್ರಚಿಕಿತ್ಸಾ ನಿರ್ಮೂಲನೆಯು ಸಾಂದರ್ಭಿಕವಾಗಿ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಇದರಲ್ಲಿ ಅಂಗ ಅಥವಾ ಅಂಗಾಂಶವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ ಅಥವಾ ನಿರ್ಮೂಲನೆ ಮಾಡಲಾಗುತ್ತದೆ. ವಿವಿಧ ವೈದ್ಯಕೀಯ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ನಿರ್ಮೂಲನೆಯನ್ನು ಬಳಸಲಾಗುತ್ತದೆ ಹಾಗೂ ಕ್ಯಾನ್ಸರ್ ಹರಡುವುದನ್ನು ತಡೆಗಟ್ಟುವ ಸಾಧನವಾಗಿಯೂ ಬಳಸಲಾಗುತ್ತದೆ. ನಿರ್ನಾಮದ ವಿಧಗಳು ಕರುಳುವಾಳುರಿತ ಅಥವಾ ಅಪೆಂಡೆಕ್ಟಮಿಯ ನಿರ್ಮೂಲನೆ , ತೀವ್ರವಾದ ಕರುಳುವಾಳದ ಪ್ರಕರಣಗಳಲ್ಲಿ ಬಳಸಲಾಗುವ ಪ್ರಮಾಣಿತ ಚಿಕಿತ್ಸೆಯಾಗಿದೆ. ಅಮೇರಿಕದಲ್ಲಿ ಸುಮಾರು ೩೦೦೦,೦೦೦ ವ್ಯಕ್ತಿಗಳು ಪ್ರತಿ ವರ್ಷ ತಮ್ಮ ಅಪೆಂಡಿಕ್ಸ್ ಅನ್ನು ತೆಗೆದುಹಾಕುತ್ತಾರೆ. ಕೊಲೊನ್ ಅಥವಾ ಕೊಲೆಕ್ಟಮಿ ನಿರ್ಮೂಲನೆ, ರೋಗಿಯ ಅಲ್ಸರೇಟಿವ್ ಕೊಲೈಟಿಸ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಅವರ ಇತರ ಚಿಕಿತ್ಸೆಗಳಿಗೆ ನಿರೋಧಕವಾಗಿದೆ. ಅನೇಕ ಸಂದರ್ಭಗಳಲ್ಲಿ, ಕೊಲೊನ್ ಅನ್ನು ತೆಗೆದುಹಾಕುವುದರಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಕರುಳಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೂಡ ಕೊಲೆಕ್ಟಮಿಯನ್ನು ಸಹ ಬಳಸಬಹುದು. ಪಿತ್ತಕೋಶದ ನಿರ್ಮೂಲನೆಯನ್ನು ಕೊಲೆಸಿಸ್ಟೆಕ್ಟಮಿ ಎಂದು ಕರೆಯಲಾಗುತ್ತದೆ, ಇದನ್ನು ಪುನರಾವರ್ತಿತ ಪಿತ್ತಗಲ್ಲು ಅಥವಾ ಕೊಲೆಸಿಸ್ಟೈಟಿಸ್‌ಗೆ ಚಿಕಿತ್ಸೆಯಾಗಿ ಬಳಸಬಹುದು. ಈ ರೀತಿಯ ಕಾರ್ಯವಿಧಾನವು ಸಾಮಾನ್ಯವಾಗಿ ಪ್ರಚಲಿತದಲ್ಲಿದೆ ಮತ್ತು ಕಾರ್ಯವಿಧಾನದ ನಂತರದ ಫಲಿತಾಂಶಗಳು ಸಾಮಾನ್ಯವಾಗಿ ಉತ್ತಮವಾಗಿರುತ್ತವೆ. ೧೯೮೫ ರಲ್ಲಿ ಮೊದಲ ಲ್ಯಾಪರೊಸ್ಕೋಪಿಕ್ ವಿಧಾನವನ್ನು ನಡೆಸಿದಾಗಿನಿಂದ ಕೊಲೆಸಿಸ್ಟೈಟಿಸ್ ರೋಗಿಗಳ ಮೇಲೆ ಕೊಲೆಸಿಸ್ಟೆಕ್ಟಮಿಗಳ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ; ೧೯೯೬ರಲ್ಲಿ ೨.೨% ದಿಂದ ೨೦೦೮ರಲ್ಲಿ ೩೨.೪% ಕ್ಕೆ ಜಿಗಿದಿದೆ ಉಲ್ಲೇಖಗಳು ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ತಂತ್ರಗಳು
152362
https://kn.wikipedia.org/wiki/%E0%B2%9F%E0%B2%BF%E0%B2%B5%E0%B2%BF%E0%B2%8E%E0%B2%B8%E0%B3%8D%20%E0%B2%95%E0%B3%81%E0%B2%9F%E0%B3%81%E0%B2%82%E0%B2%AC
ಟಿವಿಎಸ್ ಕುಟುಂಬ
ಟಿವಿಎಸ್ ಕುಟುಂಬವು ಭಾರತೀಯ ವ್ಯಾಪಾರ ಕುಟುಂಬವಾಗಿದ್ದು, ಭಾರತದ ಚೆನ್ನೈನಲ್ಲಿ ನೆಲೆಗೊಂಡಿದೆ. ಟಿವಿಎಸ್ ಸಂಘ ತನ್ನ ಪ್ರಧಾನ ಕಛೇರಿಯನ್ನು ಮಧುರೈನಲ್ಲಿ ಹೊಂದಿದೆ ಮತ್ತು ಅಂತಾರಾಷ್ಟ್ರೀಯ ಕೇಂದ್ರ ಕಛೇರಿಯನ್ನು ಚೆನ್ನೈನಲ್ಲಿ ಹೊಂದಿದೆ. ಇದು ತನ್ನ ಕ್ಷೇತ್ರಗಳಾದ್ಯಂತ ೫೦ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದೆ. ಮಧುರೈನಲ್ಲಿ ಟಿವಿ ಸುಂದ್ರಮ್ ಅಯ್ಯಂಗಾರ್ ಅವರು ೧೯೧೧ ರಂದು ಟಿವಿ ಸುಂದ್ರಮ್ ಅಯ್ಯಂಗಾರ್ ಮತ್ತು ಸನ್ಸ್ ಗುಂಪನ್ನು ಸ್ಥಾಪಿಸಿದರು. ಹಿನ್ನೆಲೆ ಕುಟುಂಬವು ಅಯ್ಯಂಗಾರ್ ಸಮುದಾಯದಿಂದ ಬಂದಿದೆ - ತಮಿಳು ಬ್ರಾಹ್ಮಣರು ಶ್ರೀ ವೈಷ್ಣವರ ಅನುಯಾಯಿಗಳು - ತಿರುನಲ್ವೇಲಿ ಜಿಲ್ಲೆಯಿಂದ ಬಂದವರು. ಸಂಸ್ಥಾಪಕ ಟಿವಿ ಸುಂದ್ರಂ ಅಯ್ಯಂಗಾರ್ ಅವರು ೧೮೭೭ರಲ್ಲಿ ತಿರುಕ್ಕುರುಂಗುಡಿಯಲ್ಲಿ ಜನಿಸಿದರು. ಸುಂದ್ರಮ್ ಅಯ್ಯಂಗಾರ್ ಅವರು ವಕೀಲರಾಗಿ ಅರ್ಹತೆ ಪಡೆದರು ಮತ್ತು ನಂತರ ಭಾರತೀಯ ರೈಲ್ವೇಸ್ , ನಂತರ ಬ್ಯಾಂಕಿನಲ್ಲಿ ಕೆಲಸ ಮಾಡಿದರು. ನಂತರ ಅವರು ಮಧುರೈಗೆ ತೆರಳಿ ಟಿವಿಎಸ್ ಸಮೂಹವನ್ನು ಸ್ಥಾಪಿಸಿದರು. ಕುಟುಂಬ ಸುಂದ್ರಮ್ ಅಯ್ಯಂಗಾರ್ ಮತ್ತು ಲಕ್ಷ್ಮಿ ಅಮ್ಮಾಳ್ ಅವರಿಗೆ ಎಂಟು ಮಕ್ಕಳು - ಐದು ಗಂಡು ಮತ್ತು ಮೂರು ಹೆಣ್ಣು ಮಕ್ಕಳು. ಐವರು ಗಂಡುಮಕ್ಕಳು ಕುಟುಂಬದ ವ್ಯಾಪಾರಕ್ಕೆ ಸೇರಿಕೊಂಡರು. ಹಿರಿಯ ಮಗ - ಟಿಎಸ್ ದೊರೈಸಾಮಿ ೧೯೪೩ರಲ್ಲಿ ನಿಧನರಾದರು ಮತ್ತು ಇತರ ನಾಲ್ವರು ಪುತ್ರರಾದ- ಟಿಎಸ್ ರಾಜಂ, ಟಿಎಸ್ ಸಂತಾನಂ, ಟಿಎಸ್ ಶ್ರೀನಿವಾಸನ್ ಮತ್ತು ಟಿಎಸ್ ಕೃಷ್ಣ ಅವರು ವಿಭಿನ್ನ ವ್ಯವಹಾರಗಳನ್ನು ನಡೆಸುವುದನ್ನು ಮುಂದುವರೆಸಿದರು.  . ಡಾ. ಟಿ.ಎಸ್. ಸೌಂದರಂ ಅವರು ವೈದ್ಯ, ಸಮಾಜ ಸುಧಾರಕ ಮತ್ತು ರಾಜಕಾರಣಿಯವರುಸುಂದ್ರಮ್ ಅಯ್ಯಂಗಾರ್ ಅವರ ಹೆಣ್ಣುಮಕ್ಕಳು . ವಂಶ ವೃಕ್ಷ ಉಲ್ಲೇಖಗಳು
152366
https://kn.wikipedia.org/wiki/%E0%B2%9F%E0%B2%BF.%E0%B2%B5%E0%B2%BF.%E0%B2%B8%E0%B3%81%E0%B2%82%E0%B2%A6%E0%B2%B0%E0%B2%82%20%E0%B2%85%E0%B2%AF%E0%B3%8D%E0%B2%AF%E0%B2%82%E0%B2%97%E0%B2%BE%E0%B2%B0%E0%B3%8D
ಟಿ.ವಿ.ಸುಂದರಂ ಅಯ್ಯಂಗಾರ್
ತಿರುಕುರುಂಗುಡಿ ವೆಂಗರಂ ಸುಂದರಂ ಅಯ್ಯಂಗಾರ್ (೨೨ ಮಾರ್ಚ್ ೧೮೭೭ - ೨೮ ಏಪ್ರಿಲ್ ೧೯೫೫) ಒಬ್ಬ ಭಾರತೀಯ ಕೈಗಾರಿಕೋದ್ಯಮಿ ಮತ್ತು ಆಟೋಮೊಬೈಲ್ ಪ್ರವರ್ತಕರಾಗಿದ್ದರು. ೧೯೧೧ರಲ್ಲಿ, ಅವರು ಟಿ.ವಿ.ಸುಂದರಂ ಅಯ್ಯಂಗಾರ್ ಮತ್ತು ಸನ್ಸ್ ಎಂಬ ಬಸ್ ಕಂಪನಿಯನ್ನು ಸ್ಥಾಪಿಸಿದರು, ಇದು ನಂತರ ಆಟೋಮೊಬೈಲ್ ಉತ್ಪಾದನೆಗೆ ವೈವಿಧ್ಯಮಯವಾಯಿತು ಮತ್ತು ಭಾರತದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾದ ಟಿವಿಎಸ್ ಗ್ರೂಪ್ನ ಮೂಲ ಕಂಪನಿಯಾಗಿ ಹೊರಹೊಮ್ಮಿತು. ವಕೀಲರಾಗಿ ಅವರ ವಿನಮ್ರ ಪ್ರಾರಂಭದೊಂದಿಗೆ, ಅವರು ತಮ್ಮ ಕಾಲದ ಅತ್ಯಂತ ಯಶಸ್ವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದರು. ಅವರ ಮಗ ಟಿ.ಎಸ್.ದೊರೈಸ್ವಾಮಿ ಸ್ಥಾಪಿಸಿದ ಟಿವಿಎಸ್ ಮೋಟಾರ್ಸ್ ಈ ಸಮೂಹದ ಪ್ರಮುಖ ಕಂಪನಿಯಾಗಿದೆ. ಅವರು ರಾಜ್ಯದ ಮೊದಲ ಬಸ್ ಸೇವೆಯ ಮೂಲಕ ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ರಸ್ತೆ ಸಾರಿಗೆ ಉದ್ಯಮಕ್ಕೆ ಅಡಿಪಾಯ ಹಾಕಿದರು. ಹೀಗೆ ಅವರು ಪ್ರಾರಂಭಿಸಿದ ಟಿವಿಎಸ್ ಸಮೂಹವು ಈಗ ಮೋಟಾರು ಉದ್ಯಮ, ಆಟೋ ಸೇವೆಗಳಿಂದ ಹಣಕಾಸು ಸೇವೆಗಳವರೆಗೆ ವಿಸ್ತರಿಸಿದೆ. ಜನನ ಮತ್ತು ಆರಂಭಿಕ ಜೀವನ ಟಿ.ವಿ.ಸುಂದರಂ ಅಯ್ಯಂಗಾರ್ ಅವರು ೧೮೭೭ರ ಆರಂಭದಲ್ಲಿ ಭಾರತದ ತಮಿಳುನಾಡು ರಾಜ್ಯದ ತಿರುಕುರುಂಗುಡಿಯಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಸುಂದರಂ ಅಯ್ಯಂಗಾರ್ ಅವರು ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ತಂದೆಯ ಇಚ್ಛೆಯಂತೆ, ಅವರು ನಂತರ ಭಾರತೀಯ ರೈಲ್ವೆಯಲ್ಲಿ ಮತ್ತು ನಂತರ ಬ್ಯಾಂಕಿನಲ್ಲಿ ಕೆಲಸ ಮಾಡಲು ತೆರಳಿದರು. ಕೈಗಾರಿಕೋದ್ಯಮಿಯಾಗಿ ಸುಂದರಂ ಅಯ್ಯಂಗಾರ್ ತಮ್ಮ ಉದ್ಯೋಗವನ್ನು ತೊರೆದು ೧೯೧೧ರಲ್ಲಿ ಮಧುರೈ ನಗರದಲ್ಲಿ ಮೊದಲ ಬಾರಿಗೆ ಬಸ್ ಸೇವೆಯನ್ನು ಪ್ರಾರಂಭಿಸುವ ಮೂಲಕ ದಕ್ಷಿಣ ಭಾರತದಲ್ಲಿ ಮೋಟಾರು ಸಾರಿಗೆ ಉದ್ಯಮಕ್ಕೆ ಅಡಿಪಾಯ ಹಾಕಿದರು. ಅವರು ೧೯೧೧ರಲ್ಲಿ ಟಿ.ವಿ.ಸುಂದರಂ ಅಯ್ಯಂಗಾರ್ ಅಂಡ್ ಸನ್ಸ್ ಲಿಮಿಟೆಡ್ ಅನ್ನು ಸ್ಥಾಪಿಸಿದರು, ಇದು ೧೯೫೫ ರಲ್ಲಿ ಅವರ ಮರಣದ ವೇಳೆಗೆ ಸದರ್ನ್ ರೋಡ್ವೇಸ್ ಲಿಮಿಟೆಡ್ ಎಂಬ ಶೀರ್ಷಿಕೆಯಡಿಯಲ್ಲಿ ಹಲವಾರು ಬಸ್ಸುಗಳು ಮತ್ತು ಲಾರಿಗಳನ್ನು ನಿರ್ವಹಿಸಿತು.ಇದು ಟಿವಿಎಸ್ ಗ್ರೂಪ್ನ ಉಗಮಕ್ಕೆ ದಾರಿ ಮಾಡಿಕೊಟ್ಟಿತು. ಎರಡನೆಯ ಮಹಾಯುದ್ಧದ ಸಮಯದಲ್ಲಿ, ಮದ್ರಾಸ್ ಪ್ರೆಸಿಡೆನ್ಸಿಯು ಪೆಟ್ರೋಲ್ ಕೊರತೆಯನ್ನು ಎದುರಿಸಿತು. ಅದರ ಬೇಡಿಕೆಗಳನ್ನು ಪೂರೈಸಲು, ಸುಂದರಂ ಅಯ್ಯಂಗಾರ್ ರವರು ಟಿವಿಎಸ್ ಅನಿಲ ಸ್ಥಾವರವನ್ನು ವಿನ್ಯಾಸಗೊಳಿಸಿದರು ಮತ್ತು ಅನಿಲ ಉತ್ಪಾದಿಸಿದರು. ಮದ್ರಾಸ್ ಆಟೋ ಸರ್ವಿಸ್ ಲಿಮಿಟೆಡ್ ಮತ್ತು ಟಿ.ವಿ.ಸುಂದರಂ ಅಯ್ಯಂಗಾರ್ & ಸನ್ಸ್ ಲಿಮಿಟೆಡ್ನ ವಿಭಾಗವಾದ ಸುಂದರಂ ಮೋಟಾರ್ಸ್ ಜೊತೆಗೆ ಅವರು ರಬ್ಬರ್ ಮರುಬಳಕೆಗಾಗಿ ಕಾರ್ಖಾನೆಯನ್ನು ಸಹ ಪ್ರಾರಂಭಿಸಿದರು. ಮೊದಲನೆಯದು ೧೯೫೦ರ ದಶಕದಲ್ಲಿ ಜನರಲ್ ಮೋಟಾರ್ಸ್ ನ ಅತಿದೊಡ್ಡ ವಿತರಕರಾಗಿದ್ದರು. ಒಬ್ಬ ವ್ಯಕ್ತಿಯ ಉತ್ಸಾಹವಾಗಿ ಪ್ರಾರಂಭವಾದ ಇದು ಶೀಘ್ರದಲ್ಲೇ ಕುಟುಂಬದ ವ್ಯವಹಾರವಾಯಿತು. ಸುಂದರಂ ಅಯ್ಯಂಗಾರ್ ಅವರಿಗೆ ಐದು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳಿದ್ದರು. ಅವರದ್ದು ಪಿತೃಪ್ರಭುತ್ವದ ತಮಿಳು ಬ್ರಾಹ್ಮಣ ಕುಟುಂಬವಾದ ಕಾರಣ ಎಲ್ಲಾ ಪುರುಷ ಸದಸ್ಯರು ವ್ಯವಹಾರದಲ್ಲಿ ತೊಡಗಿದರು. ಅವರ ಮಗ ಟಿ.ಎಸ್.ದೊರೈಸಾಮಿಯವರ ಅಕಾಲಿಕ ಮರಣದೊಂದಿಗೆ, ಇತರ ನಾಲ್ವರು ಪುತ್ರರಾದ ಟಿ.ಎಸ್.ರಾಜಮ್, ಟಿ.ಎಸ್.ಸಂತಾನಂ, ಟಿ.ಎಸ್.ಶ್ರೀನಿವಾಸನ್ ಮತ್ತು ಟಿ.ಎಸ್.ಕೃಷ್ಣ ಅವರು ವ್ಯವಹಾರದ ಅವಿಭಾಜ್ಯ ಅಂಗವಾದರು. ಶ್ರೀ ಸುಂದರಂ ಅಯ್ಯಂಗಾರ್ ಸ್ಥಾಪಿಸಿದ ಗ್ರೂಪ್, ಕಂಪನಿಯ ಪ್ರಕಾರ, ಪ್ರಸ್ತುತ ಭಾರತದ ಅತಿದೊಡ್ಡ ಆಟೋಮೊಬೈಲ್ ವಿತರಣಾ ಕಂಪನಿಯಾಗಿದೆ, ಸುಮಾರು ಯುಎಸ್ $ ೮.೫ ಬಿಲಿಯನ್ ವಹಿವಾಟು ಹೊಂದಿದೆ ಮತ್ತು ೬೦,೦೦೦ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಮೂಹವು ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್, ಆಟೋಮೋಟಿವ್ ಡೀಲರ್ಶಿಪ್ಗಳು, ಫೈನಾನ್ಸ್ ಮತ್ತು ಎಲೆಕ್ಟ್ರಾನಿಕ್ಸ್, ಜೊತೆಗೆ ಐಟಿ ಪರಿಹಾರಗಳು ಮತ್ತು ಸೇವೆಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವೈಯಕ್ತಿಕ ಜೀವನ ಟಿ.ವಿ. ಸುಂದರಂ ಅಯ್ಯಂಗಾರ್ ಅವರು ಲಕ್ಷ್ಮಿ ಅಮ್ಮಾಳ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಎಂಟು ಮಕ್ಕಳಿದ್ದರು - ಐದು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು. ಅವರ ಮಗ ಟಿ.ಎಸ್.ದೊರೈಸ್ವಾಮಿ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು. ಟಿ.ಎಸ್.ಸೌಂದರಾಮ್ ರವರು ಟಿ.ವಿ.ಸುಂದರಂ ಅಯ್ಯಂಗಾರ್ ಅವರ ಮಗಳಾಗಿದ್ದರು. ಮಹಾತ್ಮ ಗಾಂಧಿಯವರ ಒತ್ತಾಯದ ಮೇರೆಗೆ, ಹದಿಹರೆಯದ ವಿಧವೆಯಾಗಿದ್ದ ಟಿ.ಎಸ್.ಸೌಂದರಾಮ್ ಅವರು ಜಿ.ರಾಮಚಂದ್ರನ್ (ಸಮಾಜ ಸುಧಾರಕ) ಅವರೊಂದಿಗೆ ವಿವಾಹವಾದರು. ನಂತರ ಟಿ.ಎಸ್. ಸೌಂದರಾಮ್ ಗಾಂಧಿಯವರೊಂದಿಗೆ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಗೌರವಿಸಲಾಯಿತು. ಟಿ.ವಿ.ಸುಂದರಂ ಅಯ್ಯಂಗಾರ್ ಅವರು ಯಶಸ್ವಿ ಉದ್ಯಮಿಯಲ್ಲದೆ, ಕಲೆಗಳ ಪೋಷಕರಾಗಿದ್ದರು ಕೂಡ. ಹಿರಿಯ ರಾಜನೀತಿಜ್ಞ ಮತ್ತು ಆ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ರಾಜಾಜಿ ಅವರು ನಿವೃತ್ತಿ ಹೊಂದಿ ವ್ಯಾಪಾರವನ್ನು ತಮ್ಮ ಪುತ್ರರಿಗೆ ಹಸ್ತಾಂತರಿಸಿದ್ದಕ್ಕಾಗಿ ಟಿ.ವಿ. ಸುಂದರಂ ಅಯ್ಯಂಗಾರ್ ಅವರನ್ನು ಶ್ಲಾಘಿಸಿದರು. ಮರಣ ಅವರು ಏಪ್ರಿಲ್ ೨೮, ೧೯೫೫ ರಂದು ತಮ್ಮ 78 ನೇ ವಯಸ್ಸಿನಲ್ಲಿ ಕೊಡೈಕೆನಾಲ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಮತ್ತು ಆ ಸಮಯದಲ್ಲಿ ಅವರ ಪತ್ನಿ, ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದರು. ಗೌರವಗಳು ಆಗಸ್ಟ್ ೭, ೧೯೫೬ ರಂದು ತಮಿಳುನಾಡಿನ ಮಧುರೈ ನಗರದಲ್ಲಿ ಕಂಚಿನ ಮತ್ತು ಅಮೃತಶಿಲೆಯಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಸುಂದರಂ ಅಯ್ಯಂಗಾರ್ ಅವರನ್ನು ಭಾರತ ಸರ್ಕಾರ ಗೌರವಿ ನೀಡಿತು. ಉಲ್ಲೇಖಗಳು ಭಾರತೀಯ ಉದ್ಯಮಿಗಳು ಉದ್ಯಮಿಗಳು
152367
https://kn.wikipedia.org/wiki/%E0%B2%9F%E0%B2%BF%E0%B2%B5%E0%B2%BF%E0%B2%8E%E0%B2%B8%E0%B3%8D%20%E0%B2%B8%E0%B2%AA%E0%B3%8D%E0%B2%B2%E0%B3%88%20%E0%B2%9A%E0%B3%88%E0%B2%A8%E0%B3%8D%20%E0%B2%B8%E0%B3%8A%E0%B2%B2%E0%B3%8D%E0%B2%AF%E0%B3%82%E0%B2%B7%E0%B2%A8%E0%B3%8D%E0%B2%B8%E0%B3%8D
ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್
ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್ (ಟಿವಿಎಸ್ ಎಸ್ ಸಿ ಎಸ್) ಭಾರತೀಯ ಬಹುರಾಷ್ಟ್ರೀಯ ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್ ಕಂಪನಿಯಾಗಿದೆ. ಇದು ಭಾರತ, ಯುನೈಟೆಡ್ ಕಿಂಗ್‌ಡಮ್, ಯುರೋಪ್ ಮತ್ತು ಅಮೇರಿಕಾದಲ್ಲಿ ಆಟೋಮೋಟಿವ್, ಗ್ರಾಹಕ ಸರಕುಗಳು, ರಕ್ಷಣಾ ಮತ್ತು ಉಪಯುಕ್ತತೆ ವಲಯಗಳಲ್ಲಿನ ಗ್ರಾಹಕರಿಗೆ ಪೂರೈಕೆ ಸರಪಳಿ ನಿರ್ವಹಣಾ ಸೇವೆಗಳನ್ನು ಒದಗಿಸುತ್ತದೆ. ಇದು ಟಿವಿಎಸ್ ಗ್ರೂಪ್ ಆಫ್ ಕಂಪನಿಗಳ ಭಾಗವಾಗಿದೆ. ಆಟೋಮೋಟಿವ್ ವಲಯದಲ್ಲಿ ಟಿವಿಎಸ್ ನ ಪ್ರಮುಖ ಯುಕೆ ಗ್ರಾಹಕರೆಂದರೆ ಇಸುಜು, ಡೈಮ್ಲರ್ ಟ್ರಕ್ಸ್ ಮತ್ತು ಡೆನ್ನಿಸ್ ಈಗಲ್ . ರಕ್ಷಣಾ ವಲಯದಲ್ಲಿ ರಕ್ಷಣಾ ಸಚಿವಾಲಯ,ನೆಟ್‌ವರ್ಕ್ ರೈಲು, ವಿದ್ಯುತ್ ವಾಯುವ್ಯ ಮತ್ತು ಯುಟಿಲಿಟಿ ವಲಯದಲ್ಲಿ ಯುನೈಟೆಡ್ ಯುಟಿಲಿಟೀಸ್ ಕೂಡ ಅದರ ಗ್ರಾಹಕರಾಗಿದ್ದಾರೆ . ಇತಿಹಾಸ ಕಂಪನಿಯು ಟಿವಿಎಸ್ ಲಾಜಿಸ್ಟಿಕ್ಸ್ ಆಗಿ ೧೯೯೫ ರಲ್ಲಿ ಟಿವಿಎಸ್ ಮತ್ತು ಸನ್ಸ್‌ನ ವಿಭಾಗವಾಗಿ ಪ್ರಾರಂಭವಾಯಿತು. ೨೦೦೪ ರಲ್ಲಿ ಟಿವಿಎಸ್ ಲಾಜಿಸ್ಟಿಕ್ಸ್ ಸರ್ವಿಸಸ್ ಲಿಮಿಟೆಡ್ (ಟಿವಿಎಸ್ ಎಲ್‌ಎಸ್‌ಎಲ್) ಎಂದು ಪ್ರತ್ಯೇಕ ಕಂಪನಿಯಾಗಿ ಹಿವ್ಡ್ ಮಾಡಲಾಯಿತು. ೨೦೦೪ರಲ್ಲಿ ಇದು ಯುಕೆ ಮೂಲದ ಸಿಜೆ ಕಾಂಪೊನೆಂಟ್ಸ್ ಅನ್ನು ಖರೀದಿಸಿತು - ಆಟೋಮೋಟಿವ್ ಕಾಂಪೊನೆಂಟ್ ಸೋರ್ಸಿಂಗ್ ಕಂಪನಿ. ಕಂಪನಿಯು ಯುರೋಪ್, ಯುಕೆ, ಯುಎಸ್ಎ, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾದಾದ್ಯಂತ ಮತ್ತಷ್ಟು ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಅನುಸರಿಸಿತು. ೨೦೦೯ರಲ್ಲಿ, ಟಿವಿಎಸ್ ಎಲ್ ಎಸ್ ಎಲ್ ಮಲ್ಟಿಪಾರ್ಟ್ ಹೋಲ್ಡಿಂಗ್ ಅನ್ನು ಸ್ವಾಧೀನಪಡಿಸಿಕೊಂಡಿತು, ಇದು ಯುಕೆಯಲ್ಲಿನ ಮಾರುಕಟ್ಟೆ ಲಾಜಿಸ್ಟಿಕ್ಸ್ ಕಂಪನಿಗಳ ನಂತರ ಅಗ್ರ ಮೂರು ಸ್ಥಾನಗಳಲ್ಲಿದೆ. ಮಲ್ಟಿಪಾರ್ಟ್ ಸ್ವಾಧೀನದೊಂದಿಗೆ, ಟಿವಿಎಸ್ ಎಲ್ ಎಸ್ ಎಲ್ ಯುರೋಪಿನ ಅಂಗಸಂಸ್ಥೆಯಾದ ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್ (ಟಿವಿಎಸ್ ಎಸ್ ಸಿ ಎಸ್) ಅನ್ನು ಜೆಸಿ ಮತ್ತು ಮಲ್ಟಿಪಾರ್ಟ್‌ನಿಂದ ರಚಿಸಿತು. ಇದನ್ನು ೨೦೧೨ರಲ್ಲಿ ಅದೇ ದಿನದ ಕೊರಿಯರ್ ಮತ್ತು ಐಟಿ ಬೆಂಬಲ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆ ರಿಕೊ ಲಾಜಿಸ್ಟಿಕ್ಸ್ ಅನ್ನು ಗೆ ಸ್ವಾಧೀನಪಡಿಸಿಕೊಂಡಿತು. ರಿಕೊ ಟಿವಿಎಸ್ ಎಸ್ ಸಿ ಎಸ್ ನ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ೨೦೧೭ರಲ್ಲಿ ಟಿವಿಎಸ್ ಎಸ್ ಸಿ ಎಸ್ ರಿಕೊ ಎಂದು ಮರುನಾಮಕರಣ ಮಾಡಲಾಯಿತು ಟಿವಿಎಸ್ ಲಾಜಿಸ್ಟಿಕ್ಸ್ ಅನ್ನು ನಂತರ ೨೦೧೯ರಲ್ಲಿ ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್ ಎಂದು ಮರುನಾಮಕರಣ ಮಾಡಲಾಯಿತು. ೨೦೨೦ರಲ್ಲಿ, ಮಿತ್ಸುಬಿಷಿ ಕಾರ್ಪ್ ಅಲ್ಪಸಂಖ್ಯಾತರ ಪಾಲುಗಾಗಿ ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್‌ನಲ್ಲಿ ಹೂಡಿಕೆ ಮಾಡಿತು. ೨೦೨೩ರ ಆಗಸ್ಟ್ ನಲ್ಲಿ, ಕಂಪನಿಯು ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಪ್ರಾರಂಭಿಸಿತು ಮತ್ತು ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿಮಾಡಲ್ಪಟ್ಟಿತು. ಉಲ್ಲೇಖಗಳು ಟಿವಿಎಸ್ ಗ್ರೂಪ್
152369
https://kn.wikipedia.org/wiki/%E0%B2%B8%E0%B3%87%E0%B2%B5%E0%B2%BE%E0%B2%97%E0%B3%8D%E0%B2%B0%E0%B2%BE%E0%B2%AE%E0%B3%8D
ಸೇವಾಗ್ರಾಮ್
ಸೇವಾಗ್ರಾಮ್ (ಅಂದರೆ "ಸೇವೆಗಾಗಿ/ಒಂದು ಪಟ್ಟಣ") ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಪಟ್ಟಣವಾಗಿದೆ. ಇದು ಮಹಾತ್ಮ ಗಾಂಧಿಯವರ ಆಶ್ರಮದ ಸ್ಥಳ ಮತ್ತು ೧೯೩೬ ರಿಂದ ೧೯೪೮ರವರೆಗೆ ಅಂದರೆ ಅವರ ಮರಣದವರೆಗೆ ಅವರ ನಿವಾಸವಾಗಿತ್ತು ಸಬರಮತಿಯ ನಂತರ, ಮಹಾತ್ಮ ಗಾಂಧಿಯವರ ನಿವಾಸದಿಂದಾಗಿ ಸೇವಾಗ್ರಾಮ ಆಶ್ರಮವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಅವಲೋಕನ ಸೇವಾಗ್ರಾಮ್, ಮೂಲತಃ ಸೆಗಾಂವ್, ವಾರ್ಧಾದಿಂದ ೮ ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಗಾಂಧಿಯವರು ಹಳ್ಳಿಯ ಹೊರವಲಯದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು. ಗಾಂಧಿಯವರ ಶಿಷ್ಯರಾದ ವಾರ್ಧಾದ ಸೇಠ್ ಜಮ್ನಾಲಾಲ್ ಬಜಾಜ್ ಅವರು ಸುಮಾರು ೩೦೦ ಎಕರೆ (೧.೨ ಕಿಮೀ) ಭೂಮಿ ಆಶ್ರಮಕ್ಕೆ ಲಭ್ಯವಾಗುವಂತೆ ಮಾಡಿದರು. ಆಶ್ರಮದ ಬಳಿ ಭಾರತದ ಸ್ವಾತಂತ್ರ್ಯ ಹೋರಾಟದ ಕಲಾಕೃತಿಗಳನ್ನು ಸಂರಕ್ಷಿಸುವ ವಸ್ತುಸಂಗ್ರಹಾಲಯವಿದೆ. ಇತಿಹಾಸ ೧೯೩೦ರಲ್ಲಿ ಸಬರಮತಿ ಆಶ್ರಮದಿಂದ ಅಹಮದಾಬಾದ್‌ಗೆ ಉಪ್ಪಿನ ಸತ್ಯಾಗ್ರಹಕ್ಕಾಗಿ ಗಾಂಧಿಯವರು ತಮ್ಮ ಪಾದಯಾತ್ರೆಯನ್ನು (ಪಾದಯಾತ್ರೆ) ಪ್ರಾರಂಭಿಸಿದಾಗ, ಅವರು ಭಾರತಕ್ಕೆ ಸ್ವಾತಂತ್ರ್ಯವನ್ನು ಸಾಧಿಸುವವರೆಗೆ ಸಾಬರಮತಿಗೆ ಹಿಂತಿರುಗದೆ ಇರಲು ನಿರ್ಧರಿಸಿದರು. ಗಾಂಧಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ಅವರು ಭಾರತದಾದ್ಯಂತ ಪ್ರವಾಸ ಮಾಡಿದರು. ಅವರು ಮಧ್ಯ ಭಾರತದಲ್ಲಿನ ಒಂದು ಹಳ್ಳಿಯನ್ನು ತನ್ನ ಪ್ರಧಾನ ಕಛೇರಿಯನ್ನಾಗಿ ಮಾಡಲು ನಿರ್ಧರಿಸಿದರು. ಅವರು ೧೯೩೪ರಲ್ಲಿ ತಮ್ಮ ಅನುಯಾಯಿ ಮತ್ತು ಕೈಗಾರಿಕೋದ್ಯಮಿ ಜಮ್ನಾಲಾಲ್ ಬಜಾಜ್ ಅವರ ಆಹ್ವಾನದ ಮೇರೆಗೆ ವಾರ್ಧಾಗೆ ಬಂದರು ಮತ್ತು ವಾರ್ಧಾದಲ್ಲಿರುವ ಜಮ್ನಾಲಾಲ್ ಅವರ ಬಂಗಲೆ (ಬಜಾಜ್ವಾಡಿ) ಮತ್ತು ಮಹಿಳಾ ಆಶ್ರಮದ ಪ್ರಾರ್ಥನಾ ಮಂದಿರದಲ್ಲಿ ಸ್ವಲ್ಪ ಕಾಲ ಇದ್ದರು. ೧೯೩೬ರ ಏಪ್ರಿಲ್ ರಲ್ಲಿ, ಗಾಂಧೀಜಿ ವಾರ್ಧಾದ ಹೊರವಲಯದಲ್ಲಿರುವ ಸೆಗಾಂವ್ ಎಂಬ ಗ್ರಾಮದಲ್ಲಿ ತಮ್ಮ ನಿವಾಸವನ್ನು ಸ್ಥಾಪಿಸಿದರು, ಅದನ್ನು ಅವರು ಸೇವಾಗ್ರಾಮ್ ಎಂದು ಮರುನಾಮಕರಣ ಮಾಡಿದರು, ಅಂದರೆ 'ಸೇವೆಯ ಗ್ರಾಮ' ಎಂಬ ಅರ್ಥ ನೀದುತ್ತದೆ. ಸೇವಾಗ್ರಾಮಕ್ಕೆ ಬಂದಾಗ ಗಾಂಧೀಜಿಯವರಿಗೆ ೬೭ ವರ್ಷವಾಗಿತ್ತು. ಗಾಂಧಿ ಮತ್ತು ಕಸ್ತೂರಬಾ ಮತ್ತು ಅವರ ಅನುಯಾಯಿಗಳಿಗೆ ಆಶ್ರಮದಲ್ಲಿ ನಿರ್ಮಿಸಲಾದ ಸಣ್ಣ ಮನೆಗಳು ವಿಶಿಷ್ಟವಾದ ಹಳ್ಳಿಯ ಮನೆಗಳನ್ನು ಹೋಲುತ್ತವೆ. ಜಾತಿಯ ತಡೆಗೋಡೆಯನ್ನು ಮುರಿಯಲು ಆಶ್ರಮವು ಸಾಮಾನ್ಯ ಅಡುಗೆಮನೆಯಲ್ಲಿ ಕೆಲವು ಹರಿಜನರನ್ನು ನೇಮಿಸಿಕೊಂಡಿತು. ವಿನೋಬಾ ಭಾವೆಯವರ ಪರಮಧಾಮ ಆಶ್ರಮವು ಧಾಮ್ ನದಿಯ ದಡದಲ್ಲಿದೆ. ಸೇವಾಗ್ರಾಮದಲ್ಲಿ ಪ್ರಮುಖ ರಾಷ್ಟ್ರೀಯ ವಿಷಯಗಳು ಮತ್ತು ಚಳುವಳಿಗಳ ಕುರಿತು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ದೇಶದ ಅಂತರ್ಗತ ಶಕ್ತಿಗೆ ಸರಿಹೊಂದುವಂತೆ ಗಾಂಧೀಜಿ ರೂಪಿಸಿದ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಿಗಾಗಿ ಹಲವಾರು ಸಂಸ್ಥೆಗಳಿಗೆ ಇದು ಕೇಂದ್ರ ಸ್ಥಳವಾಯಿತು. ಸೇವಾಗ್ರಾಮ ಮಹಾರಾಷ್ಟ್ರದ ವಾರ್ಧಾ ಪಟ್ಟಣದಿಂದ ೮ ಕಿಮೀ ಮತ್ತು ೭೫ ನಾಗ್ಪುರದಿಂದ ಕಿ.ಮೀ ದೂರದಲ್ಲಿದೆ. ಅನೇಕ ಪ್ರಾಯೋಗಿಕ ತೊಂದರೆಗಳ ನಡುವೆಯೂ, ಗಾಂಧೀಜಿ ಇಲ್ಲಿ ನೆಲೆಸಲು ನಿರ್ಧರಿಸಿದರು. ಅವರ ಪತ್ನಿ ಕಸ್ತೂರಬಾ ಅವರನ್ನು ಹೊರತುಪಡಿಸಿ ಯಾರನ್ನೂ ತನ್ನೊಂದಿಗೆ ಇಟ್ಟುಕೊಳ್ಳುವ ಯಾವುದೇ ಉದ್ದೇಶವಿಲ್ಲದಿದ್ದರೂ, ಸೇವಾಗ್ರಾಮ ಆಶ್ರಮವು ಪೂರ್ಣ ಪ್ರಮಾಣದ ಸಂಸ್ಥೆಯಾಗುವವರೆಗೆ ಕೆಲಸದ ಒತ್ತಡವು ಅವರೊಂದಿಗೆ ಹೆಚ್ಚಿನ ಸಹೋದ್ಯೋಗಿಗಳ ಅಗತ್ಯವಿತ್ತು. ಸೇವಾಗ್ರಾಮದಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ, ಅಂಚೆ ಅಥವಾ ಟೆಲಿಗ್ರಾಫ್ ಕಚೇರಿಯೂ ಇರಲಿಲ್ಲ. ಪತ್ರಗಳನ್ನು ವಾರ್ಧಾದಿಂದ ತರುತ್ತಿದ್ದರು. ಈ ಪ್ರದೇಶದಲ್ಲಿ ಶೇಗಾಂವ್ ಎಂಬ ಇನ್ನೊಂದು ಗ್ರಾಮವಿತ್ತು, ಇದು ಸಂತ ಗಜಾನನ ಮಹಾರಾಜರ ನಿವಾಸದಿಂದ ಪ್ರಸಿದ್ಧವಾಗಿದೆ. ಹಾಗಾಗಿ ಗಾಂಧೀಜಿಯವರ ಪತ್ರಗಳು ದಿಕ್ಕು ತಪ್ಪಿಸುತ್ತಿದ್ದವು. ಆದ್ದರಿಂದ, ಈ ಗ್ರಾಮವನ್ನು ಸೇವಾಗ್ರಾಮ ಅಥವಾ 'ಸೇವೆಯ ಗ್ರಾಮ' ಎಂದು ಮರುನಾಮಕರಣ ಮಾಡಲು ೧೯೪೦ರಲ್ಲಿ ನಿರ್ಧರಿಸಲಾಯಿತು. ಗಾಂಧೀಜಿಯವರು ಜನವರಿ ೧೯೩೫ರಲ್ಲಿ ಮಂಗನವಾಡಿಯಲ್ಲಿ ತಂಗಿದ್ದರು, ೩೦ ಏಪ್ರಿಲ್ ೧೯೩೬ ರಂದು ತಮ್ಮ ಮೊದಲ ಸೇವಾಗ್ರಾಮಕ್ಕೆ ಭೇಟಿ ನೀಡಿದರು ಸಾರಿಗೆ ಸೇವಾಗ್ರಾಮವು ರೈಲು ಮತ್ತು ಬಸ್ಸುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಸೇವಾಗ್ರಾಮ ರೈಲು ನಿಲ್ದಾಣಮುಖ್ಯ ಗ್ರಾಮದಿಂದ ೬  ಕಿ.ಮೀ ದೂರದಲ್ಲಿದೆ. ಹಿಂದೆ ಈ ನಿಲ್ದಾಣಕ್ಕೆ ವಾರ್ಧಾ ಪೂರ್ವ ರೈಲು ನಿಲ್ದಾಣ ಎಂದು ಹೆಸರಿಸಲಾಗಿತ್ತು. ಸೇವಾಗ್ರಾಮ್ ಹೌರಾ-ನಾಗ್ಪುರ-ಮುಂಬೈ ಮಾರ್ಗದಲ್ಲಿರುವ ಒಂದು ನಿಲ್ದಾಣವಾಗಿದೆ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಪಶ್ಚಿಮಕ್ಕೆ ಹೆಚ್ಚಿನ ರೈಲುಗಳು ಈ ಮಾರ್ಗದ ಮೂಲಕ ಹಾದು ಹೋಗುತ್ತವೆ. ವರುದ್ ನಿಲ್ದಾಣವು ಹತ್ತಿರದಲ್ಲಿದೆ ಆದರೆ ಕೆಲವು ರೈಲುಗಳು ಅಲ್ಲಿ ನಿಲ್ಲುತ್ತವೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ನಾಗ್ಪುರ ವಿಮಾನ ನಿಲ್ದಾಣ. ಇದು ೫೫ ಕಿಮೀ ದೂರದಲ್ಲಿದೆ. ಬ್ರಿಟಿಷ್ ವೈಸರಾಯ್, ಲಾರ್ಡ್ ಲಿನ್ಲಿತ್ಗೋ (ಕಚೇರಿಯಲ್ಲಿ ೧೯೩೬-೧೯೪೩) ರವರು ಬಾಪು ಕುಟಿಯಲ್ಲಿ ಹಾಟ್‌ಲೈನ್ ಅನ್ನು ಸ್ಥಾಪಿಸಿದ್ದರು. ಇದಕ್ಕೆ ಬ್ರಿಟಿಷರು ಗಾಂಧೀಜಿಯವರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಬಯಸಿದ್ದರು ಎಂಬ ಕಾರಣವನ್ನು ನೀಡಲಾಗಿದೆ. ಲಾರ್ಡ್ ಲಿನ್ಲಿತ್ಗೋ ಒಮ್ಮೆ ಗಾಂಧಿಯವರೊಂದಿಗೆ ಸೇವಾಗ್ರಾಮ ಆಶ್ರಮದಲ್ಲಿ ಒಂದು ರಾತ್ರಿ ಕಳೆದಿದ್ದರು. ಶಿಕ್ಷಣ ಸೇವಾಗ್ರಾಮವು ಭಾರತದ ಮೊದಲ ಗ್ರಾಮೀಣ ವೈದ್ಯಕೀಯ ಕಾಲೇಜಾಗಿದೆ. ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮತ್ತು ಎಂಜಿನಿಯರಿಂಗ್ ಕಾಲೇಜು, ಬಾಪುರಾವ್ ದೇಶಮುಖ್ ಕಾಲೇಜ್ ಆಫ್ ಇಂಜಿನಿಯರಿಂಗ್, ಇವುಗಳು ಗ್ರಾಮೀಣ ಟ್ರಸ್ಟ್‌ನಿಂದ ನಡೆಸಲ್ಪಡುತ್ತದೆ. ಉಲ್ಲೇಖಗಳು ಹಳ್ಳಿಗಳು
152371
https://kn.wikipedia.org/wiki/%E0%B2%AE%E0%B3%8D%E0%B2%AF%E0%B2%BE%E0%B2%95%E0%B2%B0%E0%B2%B2%E0%B3%8D
ಮ್ಯಾಕರಲ್
ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ವಾಸಿಸುವ ಮ್ಯಾಕರಲ್ ಎನ್ನುವುದು ಮುಖ್ಯವಾಗಿ ಪಶ್ಚಿಮ ಕರಾವಳಿಯ ಪ್ರಧಾನ ಮೀನುಗಾರಿಕೆಗೆ ಕಾರಣವಾದ ಬಂಗುಡೆ (ರಾಸ್ಟ್ರೆಲ್ಲಿಜರ್ ಕನಗುರ್ತ) ಮೀನು. ಮ್ಯಾಕರಲ್‌ಗಳು ಬಹಳ ವೇಗವಾಗಿ ಈಜಬಲ್ಲ ಹಾಗೂ ಅತ್ಯಂತ ಚಟುವಟಿಕೆಯ ಮೀನುಗಳು. ದೇಹರಚನೆ ದೇಹದ ಮೇಲ್ಭಾಗ ನೀಲಿಬಣ್ಣದ್ದು. ಕೆಳಭಾಗ ಬಿಳಿ. ಬೆನ್ನಿನ ರೆಕ್ಕೆ ಮತ್ತು ಗುದದ ರೆಕ್ಕೆಗಳ ಹಿಂದೆ ಕಿರಿರೆಕ್ಕೆಗಳ ಸಾಲೊಂದು ಇರುವುದು. ಮುಖ್ಯ ಜಾತಿಗಳು ನಿಜವಾದ ಮ್ಯಾಕರಲ್‌ಗಳು ಎಂದು ಹೇಳಬಹುದಾದ ಜಾತಿಗಳು: ಸ್ಕಾಂಬರ್: ಮೆಡಿಟರೇನಿಯನ್ ಮತ್ತು ಉತ್ತರ ಅಟ್ಲಾಂಟಿಕ್ ಮಹಾಸಾಗರಗಳಲ್ಲಿ ನೆಲಸಿರುವ ಸ್ಕಾಂಬರ್ ಸ್ಕಾಂಬ್ರಸ್ ಜಾತಿಯ ಮೀನು. ಸ್ಕಾಂಬರ್ ಜಾತಿಯ ಮೀನುಗಾರಿಕೆ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಜಪಾನ್, ಸ್ಕಾಂಡಿನೇವಿಯ, ನೆದರ್‌ಲ್ಯಾಂಡ್ಸ್, ಸ್ಪೇನ್, ಪೋರ್ಚುಗಲ್ ಮತ್ತು ಬ್ರಿಟನ್‌ಗಳಲ್ಲಿ ವಿಶೇಷವಾಗಿದೆ. ಸ್ಕಾಂಬರ್ ಜಪಾನಿಕಸ್ ಪ್ರಭೇದ ಪೆಸಿಫಿಕ್ ಮಹಾಸಾಗರದ ಪ್ರಧಾನ ಮ್ಯಾಕರಲ್ ಮೀನು. ರಾಸ್ಟ್ರೆಲ್ಲಿಜರ್: ರಾಸ್ಟ್ರೆಲ್ಲಿಜರ್ ಕನಗುರ್ತ (ಬಂಗುಡೆ) ಹಿಂದೂ ಮಹಾಸಾಗರದ ಮುಖ್ಯವಾದ ಮ್ಯಾಕರಲ್ ಮೀನು. ಭಾರತ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಇದರ ಮೀನುಗಾರಿಕೆ ಮುಖ್ಯವೆನಿಸಿದೆ. ಬೇರೆ ಮುಖ್ಯವಾದ ಮೀನುಗಳು ಮ್ಯಾಕರಲ್ ಗುಂಪಿಗೆ ಸೇರಿದ ಆದರೆ ನಿಜವಾದ ಮ್ಯಾಕರಲ್‌ಗಳಲ್ಲದ ಬೇರೆ ಮುಖ್ಯವಾದ ಮೀನುಗಳು ಸ್ಕಾಂಬಿರೋಮೋರಸ್ (ಸುರ್ಮೈ) ಮತ್ತು ಆಕ್ಸಿಸ್ ಜಾತಿಗಳಿಗೆ ಸೇರಿದ ಮೀನುಗಳು. ಸ್ಕಾಂಬಿರೋಮೋರಸ್ ಕೆವಲ್ಲಾ ಪ್ರಭೇದ ಗುಂಪಿನ ಅತಿ ದೊಡ್ಡ ಮೀನು. ಇದು ಸುಮಾರು 50 ಕೆಜಿ ತೂಕದ್ದು. ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪೂರ್ವ ಸಮುದ್ರಗಳ ನಿವಾಸಿ. ಆ.ಥಿನ್ನಾಯ್‌ಡೆಸ್ (ಆ.ಟಾನೋಸೋಮಾ) ಸಿಕ್ಕಿರುವುದು ವರದಿಯಾಗಿದೆ. ಉಲ್ಲೇಖಗಳು ಹೊರಗಿನ ಕೊಂಡಿಗಳು Atlantic Mackerel British Marine Life Study Society. Retrieved 3 March 2012. Mackerel nutrition facts Fishing for mackerel ಮೀನುಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152372
https://kn.wikipedia.org/wiki/%E0%B2%B5%E0%B3%80%E0%B2%B0%E0%B2%95%E0%B2%AA%E0%B3%81%E0%B2%A4%E0%B3%8D%E0%B2%B0
ವೀರಕಪುತ್ರ
ವೀರಕಪುತ್ರ ಎಂಬುದು ಕೋಲಾರ ಜಿಲ್ಲೆಯ ಮಾಲೂರು ತಾಲೂಖಿನ ಒಂದು ಗ್ರಾಮ. ಅದರ ಗೂಗಲ್ ಮ್ಯಾಪ್ ನಕ್ಷೆ ಯ ವಿವರ ಹೀಗಿದೆ. https://www.google.com/maps/place/Veerakaputra,+Karnataka+563137/@13.0056977,78.0992292,15z/data=!3m1!4b1!4m6!3m5!1s0x3badef55c28e7509:0xbbd3df1b3d2424a!8m2!3d13.0056772!4d78.1095289!16s%2Fg%2F12hn64fc4?entry=ttu ಸ್ಥಲ ವಿವರ ಈ ಊರು ಮಾಲೂರು ತಾಲೂಕಿನಲ್ಲಿದೆ. ಇಲ್ಲಿಗೆ ಬಂಗಾರಪೇಟೆ ರೈಲ್ವೇ ನಿಲ್ದಾಣ ಸಹ ಅತಿ ಸಮೀಪವಿದೆ. ಬೆಂಗಳೂರಿನಿಂದ ಇಲ್ಲಿ ರಸ್ತೆ ಸೌಕರ್ಯವಿದೆ. ಇಲ್ಲಿನ ಜನಸಂಖ್ಯೆ ಮತ್ತು ಅಕ್ಷರಸ್ತರ ವಿವರಗಳನ್ನು ಸದ್ಯದಲ್ಲಿ ಪ್ರಕಟಿಸಲಾಗುವುದು. ವೀರಕಪುತ್ರ ಭಾರತದ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ/ಕುಗ್ರಾಮ. ಇದು ವೀರಕಪುತ್ರ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇದು ಬೆಂಗಳೂರು ವಿಭಾಗಕ್ಕೆ ಸೇರಿದೆ. ಇದು ಕೋಲಾರ ಜಿಲ್ಲಾ ಕೇಂದ್ರದಿಂದ ದಕ್ಷಿಣಕ್ಕೆ 18 ಕಿಮೀ ದೂರದಲ್ಲಿದೆ. ಮಾಲೂರಿನಿಂದ 16 ಕಿ.ಮೀ. ಅಂಚೆ ಕೇಂದ್ರ ಕಛೇರಿ ಬೆಂಗಳೂರಿನಿಂದ 65 ಕಿಮೀ ದೂರದಲ್ಲಿರುವ ಟೇಕಲ್ ಆಗಿದೆ ವೀರಕಪುತ್ರದಲ್ಲಿ ಟೇಕಲ್ (5 ಕಿಮೀ), ಸೂಲಿಕುಂಟೆ (5 ಕಿಮೀ), ಇನೋರ ಹೊಸಹಳ್ಳಿ (5 ಕಿಮೀ), ಕಾವಲ ಗಿರಿಯನ ಹಳ್ಳಿ (ಕೆಜಿ ಹಳ್ಳಿ) ಸೇರಿದಂತೆ ಹತ್ತಿರದ ಗ್ರಾಮಗಳಿವೆ. ವೀರಕಪುತ್ರವು ಪಶ್ಚಿಮಕ್ಕೆ ಮಾಲೂರು ತಾಲ್ಲೂಕು, ಉತ್ತರಕ್ಕೆ ಕೋಲಾರ ತಾಲ್ಲೂಕು, ದಕ್ಷಿಣಕ್ಕೆ ಗುಡುಪಲ್ಲಿ ತಾಲ್ಲೂಕು, ಪಶ್ಚಿಮಕ್ಕೆ ಬೆಂಗಳೂರು ಗ್ರಾಮಾಂತರ ತಾಲ್ಲೂಕುಗಳಿಂದ ಸುತ್ತುವರಿದಿದೆ. ಕೋಲಾರ, ಮಾಲೂರು, ರಾಬರ್ಟ್‌ಸನ್ ಪೆಟ್, ಮುಳಬಾಗಲು ವೀರಕಪುತ್ರಕ್ಕೆ ಸಮೀಪದಲ್ಲಿರುವ ನಗರಗಳು. ಈ ಸ್ಥಳವು ಕೋಲಾರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು ಗ್ರಾಮಾಂತರವು ಈ ಸ್ಥಳದ ಕಡೆಗೆ ಪಶ್ಚಿಮದಲ್ಲಿದೆ. ವೀರಕಪುತ್ರ 2011 ರ ಜನಗಣತಿ ವಿವರಗಳು ವೀರಕಪುತ್ರ ಸ್ಥಳೀಯ ಭಾಷೆ ಕನ್ನಡ. ವೀರಕಪುತ್ರ ಗ್ರಾಮದ ಒಟ್ಟು ಜನಸಂಖ್ಯೆ 600 ಮತ್ತು ಮನೆಗಳ ಸಂಖ್ಯೆ 125. ಮಹಿಳಾ ಜನಸಂಖ್ಯೆ 49.0%. ಗ್ರಾಮದ ಸಾಕ್ಷರತೆ ಪ್ರಮಾಣ 56.8% ಮತ್ತು ಮಹಿಳಾ ಸಾಕ್ಷರತೆ ಪ್ರಮಾಣ 24.0%. ಜನಸಂಖ್ಯೆ ವ್ಯಕ್ತಿಗಳು ವೀರಕಪುತ್ರ ಎಂ.ಶ್ರೀನಿವಾಸ ಎಂಬ ಕನ್ನಡ ಚಲನಚಿತ್ರ ಅಭಿಮಾನಿ ಕಾರ್ಯಕರ್ತರು ಮತ್ತು ವೀರಲೋಕ ಪುಸ್ತಕೋದ್ಯಮಿಗಳ ಸ್ವಂತ ಊರು. ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಅವರು ಕೈಗೊಂಡಿದ್ದಾರೆ. .
152374
https://kn.wikipedia.org/wiki/%E0%B2%B0%E0%B3%87%E0%B2%A1%E0%B2%BF%E0%B2%AF%E0%B3%8A%E0%B2%B2%E0%B3%87%E0%B2%B0%E0%B2%BF%E0%B2%AF
ರೇಡಿಯೊಲೇರಿಯ
ರೇಡಿಯೊಲೇರಿಯ ಸಾಗರಿಕ ಮಿಥ್ಯಪಾದಿ ಆದಿಜೀವಿಗಳ (ಮರೀನ್ ರೈಸೊಪಾಡ್ ಪ್ರೋಟೊಜೋವ) ಒಂದು ಗುಂಪು. ಪರ್ಯಾಯ ಪದ: ರೇಡಿಯೊಲೇರಿಡ. ಅನೇಕ ಪ್ರಭೇದಗಳಿವೆ. ದೇಹರಚನೆ ಒಳ ಮತ್ತು ಹೊರ ಕೋಶದ್ರವ್ಯವನ್ನು (ಸೈಟೊಪ್ಲಾಸಮ್) ಪ್ರತ್ಯೇಕಿಸುವ ಕೇಂದ್ರೀಯ ಸಂಪುಟ (ಕ್ಯಾಪ್ಸೂಲ್) ಇರುವುದು ಈ ಏಕಕೋಶಗಳ ವೈಶಿಷ್ಟ್ಯ. ಈ ಜೀವಿಗಳ ಪೈಕಿ ಆಕ್ಟಿನೊಪೈಲಿನಕ್ಕೆ ನೈಜ ಹೊರಬೆಳೆತ ಪಾದಗಳೂ (ಆಕ್ಸೊ ಪೋಡಿಯ) ಅರೀಯ (ರೇಡಿಯಲ್) ಅಂತರ್ವೇಶಿತ ಕಂಕಾಲ ಸರಳುಗಳುಳ್ಳ (ರೇಡಿಯಲ್ಲಿ ಪೆನಿಟ್ರೇಟಿಂಗ್ ರಾಡ್ಸ್) ತೆಳು ಕೇಂದ್ರೀಯ ಸಂಪುಟವೂ ಇವೆ. ಕಂಕಾಲ ಸರಳುಗಳ ಪ್ರಧಾನ ಘಟಕ ಸ್ಟ್ರಾನ್ಶಿಯಮ್ ಸಲ್ಫೇಟ್. ಮಿಕ್ಕವಕ್ಕೆ  ದಪ್ಪನೆಯ ಸರಂಧ್ರ ಸಂಪುಟವಿದೆ. ಸಾಮಾನ್ಯವಾಗಿ ಕೇಂದ್ರೀಯ ಸಂಪುಟದ ಹೊರಗೆ ಇರುವ ಸಿಲಿಕ ಸಹಿತ ಬಹಿರ್ಕಂಕಾಲ ರೇಡಿಯೊಲೇರಿಯಗಳ ಇನ್ನೊಂದು ವೈಶಿಷ್ಟ್ಯ. ಗೋಳೀಯ ಸಮ್ಮಿತಿಯುಳ್ಳ ಕಂಕಾಲದಲ್ಲಿ ಆಹಾರ ಹಿಡಿಯಲೋಸುಗ ಮಿಥ್ಯಪಾದಗಳನ್ನು ಹೊರಚಾಚಲು ಅನುಕೂಲವಾದ ರಂಧ್ರಗಳು ಇವೆ. ಅನೇಕ ಜೀವಿಗಳಲ್ಲಿ ಬಹಿರ್ಮುಖೀ ಮುಳ್ಳುಗಳೂ (ಸ್ಪೈನ್ಸ್) ಇವೆ. ಎಂದೇ, ಇವು ಕಿರಣಪಾದಿ (ಆಕ್ಟಿನೊಪಾಡ್) ಉಪವರ್ಗದವು. ಕೆಲವಕ್ಕೆ ಜೆಲಟಿನ್ ಕವಚವೂ ಉಂಟು. ಈ ಮೇಲ್ನೀರು ಜೀವಿಗಳು ತೇಲಲು ಅನುಕೂಲಿಸುವ ಕುಹರಯುಕ್ತ ಕೋಶದ್ರವ್ಯ ಇದೆ. ವ್ಯಾಪ್ತಿ ರೇಡಿಯೊಲೇರಿಯಗಳು ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಸಮೃದ್ಧವಾಗಿವೆ. ಜೀವಿಗಳು ಸತ್ತ ಬಳಿಕ ಸಾಗರತಳದಲ್ಲಿ ಉಂಟಾಗುವ ಕಂಕಾಲಸಂಚಯವೇ ರೇಡಿಯೊಲೇರಿಯನ್ ಊಜ಼್. ಜಲಜಶಿಲೆಗಳು ಈ ಸಂಚಯಗಳ ಮೇಲೆ ರೂಪುಗೊಳ್ಳುತ್ತವೆ. ಎಂದೇ ಇವಕ್ಕೆ ಭೂವೈಜ್ಞಾನಿಕ ಮಹತ್ತ್ವ ಇದೆ. ಉಲ್ಲೇಖಗಳು ಹೊರಗಿನ ಕೊಂಡಿಗಳು Radiolarians Radiolaria.org Radiolaria—Droplet Tree Of Life—Radiolaria ಜೀವಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152391
https://kn.wikipedia.org/wiki/%E0%B2%87%E0%B2%A8%E0%B3%8D%E0%B2%A8%E0%B2%B0%E0%B3%8D%20%E0%B2%8E%E0%B2%82%E0%B2%9C%E0%B2%BF%E0%B2%A8%E0%B3%80%E0%B2%B0%E0%B2%BF%E0%B2%82%E0%B2%97%E0%B3%8D
ಇನ್ನರ್ ಎಂಜಿನೀರಿಂಗ್
ಇನ್ನರ್ ಇಂಜಿನಿಯರಿಂಗ್ ಒಂದು ವೈಯಕ್ತಿಕ ಪರಿವರ್ತನಾ ವಿಧಾನವಾಗಿದ್ದು, ಪ್ರಮುಖ ಯೋಗಿ ಮತ್ತು ಮಾನವತಾವಾದಿ ಸದ್ಗುರುವಿನ ರಚನೆ. ಪ್ರಾಚೀನ ಯೋಗದ ವಿಜ್ಞಾನಕ್ಕೆ ನಿಹಿತವಾದ ಈ ಕಾರ್ಯಕ್ರಮ ವ್ಯಕ್ತಿಗಳಿಗೆ ಅವರ ಮನಸ್ಸು, ದೇಹ, ಮತ್ತು ಆತ್ಮಗಳ ಪೂರ್ಣ ಸಾಧನೆಯ ಮಾರ್ಗವನ್ನು ತರುತ್ತದೆ, ಜೀವನದಲ್ಲಿ ಸೌಹಾರ್ದಿಕ ಮತ್ತು ಅನುಭೂತಿಪೂರ್ಣ ಬದಲಾವಣೆಗೆ. ಈ ಲೇಖನದಲ್ಲಿ "ಆಂತರ ಇಂಜಿನಿಯರಿಂಗ್" ಯೋಗದ ವಿಚಾರಗಳು, ಅಭ್ಯಾಸಗಳು, ಹಾಗೂ ಅದರ ಪ್ರಯೋಜನಗಳ ಬಗ್ಗೆ ಪರಿಶೀಲಿಸಲಾಗುತ್ತದೆ. ಇನ್ನರ್ ಇಂಜಿನಿಯರಿಂಗ್ ದರ್ಶನ: ಇನ್ನರ್ ಇಂಜಿನಿಯರಿಂಗ್ ವೈಯಕ್ತಿಕ ಸುಖಶಾಂತಿಗೆ ಶರೀರಿಕ ಆರೋಗ್ಯ ಮಾತ್ರವಲ್ಲ ಎಂಬ ನಂಬಿಕೆಯ ಆಧಾರದ ಮೇಲೆ ನಿಂತಿದೆ. ಇದು ಸಂಗತ ಸಹಿತ ಅವನತಿಯ ಮೇಲೆ ಆಧಾರಿತವಾದ ಆತ್ಮ, ಮನಸ್ಸು ಮತ್ತು ಮಾನವಿಕ ದಿಗ್ಗಜ ದರ್ಶನಗಳನ್ನು ಸಲುಕೊಟ್ಟಿದೆ. ಆತ್ಮನ ಸ್ವಯಂ-ಪರಿಚಯ ಮತ್ತು ಸ್ವಯಂಸಾಧನೆಯ ಮೂಲಕ, ಜೀವನದ ಕಷ್ಟಗಳನ್ನು ಸುಲಭವಾಗಿಸಿಕೊಳ್ಳಲು ಜೀವನದ ಮೌಲ್ಯಗಳೊಡನೆ ಸಮನ್ವಯದ ಮತ್ತು ಪೂರ್ಣತೆಯ ಜೀವನದ ದಾರಿಯನ್ನು ಬೆಳೆಸುತ್ತದೆ. ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದಲ್ಲಿ ಶಾಂಭವಿ ಮಹಾಮುದ್ರವನ್ನು ಹೇಳಿ ಕೊಡುತ್ತಾರೆ. ಶಾಂಭವಿ ಮಹಾಮುದ್ರ: ಇದು 21 ನಿಮಿಷಗಳ ದೈನಂದಿನ ಧ್ಯಾನವಾಗಿದ್ದು, ಮಿತವಾದ ವಿಶೇಷ ಶಾರೀರಿಕ ಆಸನಗಳೊಡನೆ ಅಂತರೀಕರಣದ ಶ್ವಾಸದ ಸಾಥದಲ್ಲಿ ಇದೆ. ಈ ಅಭ್ಯಾಸ ಒಂದುತನ್ನು ಹೊಂದಿದೆ, ಶಾಂತಿಯನ್ನು ಮತ್ತು ಹೆಚ್ಚುವರ್ಣದ ಪ್ರಕರಣವನ್ನು ತರುತ್ತದೆ. ಯೋಗಾಭ್ಯಾಸವು ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಪ್ರಶಸ್ತಗೊಳಿಸುವ ಸರಳ ಮಾರ್ಗ. ಯೋಗದ ವಿವಿಧ ರೂಪಗಳಲ್ಲಿ ಒಂದು ಅತ್ಯುನ್ನತ ಮಟ್ಟದ ಯೋಗ ಅಭ್ಯಾಸವೇ ಶಾಂಭವಿ ಮಹಾಮುದ್ರ. ಈ ಮುದ್ರೆಯು ಆಧ್ಯಾತ್ಮಿಕ ಅನುಭವದ ಪ್ರತಿಷ್ಠೆಯನ್ನು ನೀಡುವ ಅತ್ಯುನ್ನತ ಯೋಗಾಭ್ಯಾಸವಾಗಿದೆ. ಶಾಂಭವಿ ಮಹಾಮುದ್ರದ ಮೂಲ ಹಿಂದೂ ಧರ್ಮದ ಅಂತರ್ಮುಖ ಆದರ್ಶಗಳ ಮೇಲೆ ಆಧಾರಿತವಾಗಿದೆ. ಇದು ಅತ್ಯಂತ ಪರಿಶುದ್ಧವಾದ ಮುದ್ರೆಗಳಲ್ಲೊಂದಾಗಿದ್ದು, ಯೋಗಿಗಳು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಸಾಧಿಸಲು ಬಳಸುತ್ತಾರೆ. ಶಾಂಭವಿ ಮಹಾಮುದ್ರ ಶಬ್ದ 'ಶಂಭ' ಅಥವ 'ಶಿವ' ಎಂಬ ದೇವರ ಹೆಸರನ್ನು ಸೂಚಿಸುತ್ತದೆ. ಈ ಮಹಾಮುದ್ರೆಯನ್ನು ಯೋಗಾಭ್ಯಾಸದ ಒಂದು ಮುಖ್ಯ ಅಂಶವಾಗಿ ಬಳಸಲಾಗುತ್ತದೆ, ಆದರೆ ಇದು ಮುಖ್ಯವಾಗಿ ಆಧ್ಯಾತ್ಮಿಕ ಪ್ರಕ್ರಿಯೆಗಾಗಿ ಉಪಯೋಗಿಸಲ್ಪಡುತ್ತದೆ. ಶಾಂಭವಿ ಮಹಾಮುದ್ರವು ಸ್ಥಾಣಿಕವಾಗಿ ಕುಳಿತುಕೊಂಡು ಯೋಗಾಸನ ಅಥವ ಪ್ರಾಣಾಯಾಮ ಅಭ್ಯಾಸಗಳಲ್ಲಿ ಅನುಗ್ರಹಿಸಲಾಗುತ್ತದೆ. ಈ ಮುದ್ರೆಯ ವಿಶೇಷತೆಯೇನೆಂದರೆ, ಅದು ಮಾನಸಿಕ ಸ್ಥಿರತೆಯ ಮತ್ತು ಆಧ್ಯಾತ್ಮಿಕ ಜಾಗರೂಕತೆಯ ಅಭ್ಯಾಸವನ್ನು ಪ್ರಾಪ್ತಮಾಡುವುದರ ಮೂಲಕ ಆತ್ಮಜ್ಞಾನ ಮತ್ತು ಆಂತರಿಕ ಶಾಂತಿಯನ್ನು ಸಾಧಿಸುವುದಲ್ಲ. ಉಲ್ಲೇಖಗಳು
152392
https://kn.wikipedia.org/wiki/%E0%B2%AE%E0%B2%BE%E0%B2%95%E0%B2%B8%E0%B2%BF%E0%B2%A8%E0%B3%8D%20%E0%B2%B9%E0%B2%BE%E0%B2%B5%E0%B3%81
ಮಾಕಸಿನ್ ಹಾವು
ಮಾಕಸಿನ್ ಹಾವು ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಗ್ನೇಯ ಹಾಗೂ ದಕ್ಷಿಣ ಭಾಗದಲ್ಲಿ ಕಂಡುಬರುವ ವಿಷಪೂರಿತ ಹಾವು. ಮಿಸಿಸಿಪ್ಪಿ ಮತ್ತು ಫ್ಲಾರಿಡ ರಾಜ್ಯಗಳ ಜವುಗು ಪ್ರದೇಶಗಳಲ್ಲಿ ಇದು ಬಲು ಸಾಮಾನ್ಯ. ವೈಪರಿಡೀ ಕುಟುಂಬದ ಕ್ರೋಟಾಲಿನೀ ಉಪಕುಟುಂಬಕ್ಕೆ ಸೇರಿದ ಇದು ಬುಡಬುಡಿಕೆ ಹಾವು (ರ‍್ಯಾಟಲ್ ಸ್ನೇಕ್), ಕೆಂಪುತಲೆ ಹಾವು (ಕಾಪರ್ ಹೆಡ್) ಕುಳಿಮಂಡಲ ಹಾವುಗಳಿಗೆ (ಪಿಟ್ ವೈಪರ್ಸ್) ಹತ್ತಿರ ಸಂಬಂಧಿಯಾಗಿದೆ. ಅಗ್‌ಕಿಸ್ಟ್ರೊಡಾನ್ ಪಿಸಿವೊರಸ್ ಇದರ ಶಾಸ್ತ್ರೀಯ ನಾಮ. ವಾಟರ್ ಮಾಕಸಿನ್ ಅಥವಾ ಕಾಟನ್ ಮೌತ್ (ಅರಳೆ ಬಾಯಿಯ ಹಾವು) ಎಂದೂ ಹೆಸರಿದೆ. ದೇಹರಚನೆ ಇದು ಮಧ್ಯಮ ಗಾತ್ರದ ಹಾವು: 2 ಮೀ.ಉದ್ದಕ್ಕೆ ಬೆಳೆಯುವ ದಾಖಲೆ ಇದೆಯಾದರೂ ಇದರ ಉದ್ದ ಸಾಧಾರಣವಾಗಿ 1 ಮೀ. ಮೀರದು. ಇದರ ಮೈಬಣ್ಣ ಕಂದು ಮಿಶ್ರಿತ ಬೂದು. ನಡವಳಿಕೆ ಇದು ನೆಲವಾಸಿಯಾದರೂ ಸಾಮಾನ್ಯವಾಗಿ ನೀರಿನಲ್ಲಿ ಇಲ್ಲವೆ ನೀರಿಗೆ ಹತ್ತಿರದಲ್ಲಿ ವಾಸಿಸುತ್ತದೆ. ಕೆರೆ, ನದಿಗಳ ಅಂಚಿನಲ್ಲಿ ಅಥವಾ ನೀರಿನಲ್ಲಿರುವ ದಿಮ್ಮಿಗಳ ಮೇಲೆ ಬಿಸಿಲಿಗೆ ಮೈಯೊಡ್ಡಿರುತ್ತದೆ. ಆಹಾರ ಇದರ ನೆಲೆ ನೀರಾದ್ದರಿಂದ ಕಪ್ಪೆ, ಮೀನು, ಮೆತುಬೆನ್ನಿನ ಆಮೆ ಮುಂತಾದ ಜಲಚರಿಗಳೇ ಇದರ ಪ್ರಧಾನ ಆಹಾರ. ಸ್ವಭಾವ ಇದು ಮಂದಸ್ವಭಾವದ ಹಾವು. ಸಮೀಪಿಸಿದಾಗ ಓಡಿಹೋಗದು. ಇದರಿಂದ ಇದರ ಬಗ್ಗೆ ಹುಷಾರಿರುವುದು ಅಗತ್ಯ. ಆದರೆ ಕೆಣಕಿದಾಗ ಒಮ್ಮಲೆ ಕಚ್ಚದೆ ತಲೆಯೆತ್ತಿ ಬಾಯಂಗಳ ಕಾಣುವಂತೆ ಬಾಯನ್ನು ಅಗಲಿಸಿ ತನ್ನ ಕೋಪವನ್ನು ವ್ಯಕ್ತಪಡಿಸುತ್ತದಾಗಿ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು. ಬಾಯನ್ನು ತೆರೆದಾಗ ಒಳಗಿನ ಭಾಗ ಬೆಳ್ಳಗೆ ಅರಳೆಯಂತೆ ಕಾಣುತ್ತದೆ. ಆದ್ದರಿಂದಲೇ ಇದಕ್ಕೆ ಕಾಟನ್‍ಮೌತ್ ಎಂಬ ಹೆಸರು ಬಂದಿದೆ. ಸಂತಾನೋತ್ಪತ್ತಿ ಇದರ ಸಂತಾನವೃದ್ಧಿಯ ಕಾಲ ಸೆಪ್ಟೆಂಬರ್. ಒಂದು ಸಲಕ್ಕೆ ಎಂಟು ಮರಿಗಳನ್ನು ಪಡೆಯುತ್ತದೆ. ಹುಟ್ಟುವಾಗ ಸುಮಾರು 16 ಸೆಂಮೀ ಉದ್ದವಿರುವ ಇವುಗಳ ಮೈಮೇಲೆ ಹೊಳೆಯುವ ಪಟ್ಟೆಗಳಿರುವುದಲ್ಲದೆ ಬಾಲ ಹಳದಿ ಬಣ್ಣದ್ದಾಗಿರುತ್ತದೆ. ಉಲ್ಲೇಖಗಳು ಹೊರಗಿನ ಕೊಂಡಿಗಳು Cottonmouth Fact Sheet at Smithsonian National Zoological Park. Accessed 7 December 2007. Cottonmouth snake – bites, identification, diet and habitat. ಹಾವುಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152393
https://kn.wikipedia.org/wiki/%E0%B2%B8%E0%B2%BE%E0%B2%82%E0%B2%A6%E0%B3%80%E0%B2%AA%E0%B2%A8%E0%B2%BF
ಸಾಂದೀಪನಿ
ಸಾಂದೀಪನಿ (ಸಂಸ್ಕೃತ: सान्दीपनि), ಕೆಲವೊಮ್ಮೆ ಸಂದೀಪನ ಎಂದು ನಿರೂಪಿಸಲಾಗಿದೆ. ಇವರು ಹಿಂದೂ ಧರ್ಮದಲ್ಲಿ ಕೃಷ್ಣ ಮತ್ತು ಬಲರಾಮನ ಗುರು. ಅವರು ಎಲ್ಲಾ ವೇದಗಳು, ಚಿತ್ರಕಲೆ, ಖಗೋಳಶಾಸ್ತ್ರ, ಗಂಧರ್ವ ವೇದ, ಔಷಧ, ಆನೆಗಳು ಮತ್ತು ಕುದುರೆಗಳನ್ನು ತರಬೇತಿ ಮತ್ತು ಬಿಲ್ಲುಗಾರಿಕೆಯ ಬಗ್ಗೆ ಅವರಿಗೆ ಶಿಕ್ಷಣ ನೀಡಿದ್ದಾರೆ ಎಂದು ಪರಿಗಣಿಸಲಾಗಿದೆ. ದಂತಕಥೆ ಭಾಗವತ ಪುರಾಣವು ಸಾಂದೀಪನಿಗೆ ಸಂಬಂಧಿಸಿದ ಈ ಕೆಳಗಿನ ಕಥೆಯನ್ನು ಹೇಳುತ್ತದೆ: ‘ಸಾಂದೀಪನಿ’ ಒಬ್ಬ ಬ್ರಾಹ್ಮಣ. ಮಾಳವ ದೇಶದಲ್ಲಿ ವಾಸಿಸುತ್ತಿದ್ದನು. ಇವರು ಬಲರಾಮ ಮತ್ತು ಶ್ರೀಕೃಷ್ಣರಿಗೆ ವಿದ್ಯೆಯನ್ನು ಹೇಳಿಕೊಡುತ್ತಿದ್ದರು. ಒಂದು ದಿನ ಈತನು ತನ್ನ ಪತ್ನಿಯೊಂದಿಗೆ ಪ್ರಭಾಸ ಕ್ಷೇತ್ರಕ್ಕೆ ಹೋಗಿದ್ದಾಗ, ಈತನ ಮಗನನ್ನು ಪ್ರಹ್ಲಾದನ ತಮ್ಮ ಸಂಹ್ಲಾದನ ಮಗನಾದ ಪಂಚಜನನು ಎತ್ತಿಕೊಂಡು ಸಮುದ್ರ ಪ್ರವೇಶಿಸಿದನು. ಮಗನಿಲ್ಲದ ಕೊರಗು ಸಾಂದೀಪನಿ ಋಷಿಯ ಮನದಲ್ಲಿ ನೆಲೆಸಿತ್ತು. ಶ್ರೀಕೃಷ್ಣನು ತನಗೆ ವಿದ್ಯೆ ಹೇಳಿಕೊಟ್ಟ ಗುರುವಿನಲ್ಲಿ ಒಂದು ದಿನ ಗುರುದಕ್ಷಿಣೆಯಾಗಿ ಏನು ಕೊಡಬೇಕೆಂದು ಕೇಳಿದ, ಆಗ ಗುರು ಹಾಗೂ ಗುರುಪತ್ನಿ ಇಬ್ಬರೂ ಸೇರಿಕೊಂಡು ನಮ್ಮ ಮಗನನ್ನು ಸಂಹ್ಲಾದನ ಮಗನಾದ ಪಂಚಜನನು ಕೊಂಡೊಯ್ದು ಸಮುದ್ರದ ತಳದಲ್ಲಿರಿಸಿದ್ದಾನೆ ಅವನನ್ನು ಜೀವಸಹಿತ ನಮಗೆ ತಂದೊಪ್ಪಿಸಬೇಕು, ಇದು ನಾವು ಅಪೇಕ್ಷಿಸುವ ಗುರುದಕ್ಷಿಣೆ ಎಂದರು. ಅವರ ಮಾತಿನಂತೆ ಶ್ರೀಕೃಷ್ಣನು ಗುರುವಿನ ಅಪೇಕ್ಷೆಯನ್ನು ಈಡೇರಿಸಿದನು. ಹರಿವಂಶ ಪುರಾಣದಲ್ಲಿ, ಸಾಂದೀಪನಿಯ ಮಗನನ್ನು ಪಂಚಜನ ಎಂಬ ಅಸುರನು ನುಂಗಿದನು ಮತ್ತು ನಾಶವಾದನು ಎಂದು ಕೃಷ್ಣನು ತಿಳಿದುಕೊಂಡನು. ಕೃಷ್ಣ ಮತ್ತು ಅವನ ಸಹೋದರ ತನ್ನ ಗುರುವಿನ ಮಗನನ್ನು ಮರಳಿ ಬದುಕಿಸಲು, ಯಮಲೋಕಕ್ಕೆ ಪ್ರಯಾಣ ಬೆಳೆಸಿ ಯಮನ ಮನವೊಲಿಸಿ, ಗುರುವಿಗೆ ಅವರ ಮಗನನ್ನು ಹಿಂತಿರುಗಿಸಿದನು. ಛಾಯಾಂಕಣ ಬಾಹ್ಯ ಕೊಂಡಿ ಸಾಂದೀಪನಿಗೆ ಸಂಬಂಧಿಸಿದ ಭಾಗವತ ಪುರಾಣದ ಮುಖ್ಯ ಸಾರ ಉಲ್ಲೇಖಗಳು ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ ಪುರಾಣಗಳು
152403
https://kn.wikipedia.org/wiki/%E0%B2%B0%E0%B2%BE%E0%B2%B0%E0%B3%8D%E0%B2%95%E0%B3%8D%E0%B2%B5%E0%B2%B2%E0%B3%8D
ರಾರ್ಕ್ವಲ್
ರಾರ್ಕ್ವಲ್ ಸಿಟೇಸಿಯ ಗಣದ ಬಲೀನಾಪ್ಟಿರಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ತಿಮಿಂಗಿಲ. ಬಲೀನಾಪ್ಟಿರ ಜಾತಿಯ ಪೈಸೇಲಸ್, ಬೋಯಾಲಿಸ್, ಅಕ್ಯೂಟೊರಾಸ್ಟ್ರೇಟ್ ಮತ್ತು ಎಡೆನಿ ಎಂಬ ಪ್ರಭೇದಗಳಿಗೂ ಸಿಬಾಲ್ಡಸ್ ಜಾತಿಯ ಮಸ್ಕ್ಯುಲಸ್ ಪ್ರಭೇದಕ್ಕೂ ಸಾಮಾನ್ಯವಾಗಿ ಈ ಹೆಸರನ್ನು ಅನ್ವಯಿಸುವುದುಂಟು. ಶಾರೀರಿಕ ಲಕ್ಷಣಗಳು ಇವುಗಳ ಗಂಟಲು ಮತ್ತು ಎದೆಗಳ ಮೇಲೆ 2.5-5 ಸೆಂಮೀ ಆಳದ 10-1000 ಉದ್ದುದ್ದನೆಯ ಮಡಿಕೆಗಳಂಥ ತೋಡುಗಳುಂಟು. ಇದು ಇವುಗಳ ಬಲುಮುಖ್ಯ ಲಕ್ಷಣ. ಈ ಮಡಿಕೆಗಳಿಂದಲೇ ಈ ತಿಮಿಂಗಿಲಗಳಿಗೆ ರಾರ್ಕ್ವಲ್ ಎಂದು ಹೆಸರು ಬಂದಿರುವುದು. ಬಾಯಿ ತೆರೆದಾಗ ಅದರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಮಡಿಕೆಗಳು ಹೆಚ್ಚಿಸುತ್ತವೆ. ಇವುಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಮರಿಗಳು ಬೆಳೆದು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಅವುಗಳ ಬಾಯಲ್ಲಿರುವ ಹಲ್ಲುಗಳು ಉದುರಿಹೋಗಿ ಬದಲಿಗೆ ಆಹಾರವನ್ನು ಸೋಸುವ ಸಾಮರ್ಥ್ಯವುಳ್ಳ ಬಲೀನ್ ಎಂಬ ಸೋಸುಕ ರೂಪುಗೊಳ್ಳುವುದು. ರಾರ್ಕ್ವಲ್‌ಗಳೆಲ್ಲವೂ ದೊಡ್ಡಗಾತ್ರದ ಪ್ರಾಣಿಗಳು. ದೇಹದ ಉದ್ದ ೯-೨೦ ಮೀ ಇರುತ್ತದೆ. ದೇಹದ ಆಕಾರ ಈಜಲು ಸಹಾಯಕವಾಗಿರುವಂತೆ ರೂಪಿತವಾಗಿದೆ. ಬಾಯಿಗಿಂತ ಕೊಂಚ ಹಿಂದೆ ದೇಹದ ಎರಡು ಪಾರ್ಶ್ವಗಳಲ್ಲಿ ಎರಡು ಈಜುರೆಕ್ಕೆಗಳೂ ಬೆನ್ನಮೇಲೆ ಒಂದು ಈಜುರೆಕ್ಕೆಯೂ ಇವೆ. ಈಜುವುದರಲ್ಲಿ ಬಲು ನಿಷ್ಣಾತವೆಂದು ಎನಿಸಿರುವ ಈ ತಿಮಿಂಗಿಲಗಳು ತುಂಬ ಶೀಘ್ರಗತಿಯಲ್ಲಿ ಈಜಬಲ್ಲವು; ಗಂಟೆಗೆ ೮ ಕಿಮೀ. ವೇಗದಲ್ಲಿ ಈಜುತ್ತವೆ ಎನ್ನಲಾಗಿದೆ. ಒಂಟೊಂಟಿಯಾಗಿಯೋ ದೊಡ್ಡ ಮಂದೆಗಳಲ್ಲೋ ಈಜುತ್ತ, ಬೆಳಗ್ಗೆ ಮತ್ತು ಸಾಯಂಕಾಲ ಆಹಾರವನ್ನು ಹುಡುಕುತ್ತಾ ಸಾಗುತ್ತವೆ. ಆಹಾರ ಮುಖ್ಯವಾಗಿ ಸೀಗಡಿ, ಕೋಪಿಪೋಡ, ಮುಂತಾದ ಸಣ್ಣಗಾತ್ರದ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಕೆಲವು ಬಗೆಯವು ಮೀನು, ಷಾರ್ಕ್, ಸ್ಕ್ವಿಡ್ಡು ಮುಂತಾದವನ್ನೂ ಕಬಳಿಸುತ್ತವೆ. ಸಂತಾನೋತ್ಪತ್ತಿ ಇವುಗಳ ಸಂತಾನವೃದ್ಧಿಯ ಕಾಲ ಚಳಿಗಾಲ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದೇ ಒಂದು ಮರಿ ಹುಟ್ಟುತ್ತದೆ. ಅಪೂರ್ವವಾಗಿ ಅವಳಿಗಳು ಹುಟ್ಟುವುದೂ ಉಂಟು. ಗರ್ಭಾವಸ್ಥೆಯ ಅವಧಿ ೧೦-೧೨ ತಿಂಗಳು; ೩ ೧/೨ - ೪ ವರ್ಷಗಳಲ್ಲಿ ಮರಿಗಳು ಪ್ರೌಢಾವಸ್ಥೆ ತಲುಪುತ್ತವೆ. ನೀಲಿ ತಿಮಿಂಗಿಲ ಸಿಬಾಲ್ಡಸ್ ಜಾತಿಯ ರಾರ್ಕ್ವಲ್ ತಿಮಿಂಗಿಲಕ್ಕೆ ನೀಲಿ ತಿಮಿಂಗಿಲ ಎಂಬ ಹೆಸರೂ ಇದೆ. ಅತ್ಯಂತ ದೊಡ್ಡ ಗಾತ್ರದ ತಿಮಿಂಗಿಲ ಇದು; ಲಭ್ಯ ಮಾಹಿತಿಯ ಪ್ರಕಾರ ಇದೇ ಅತ್ಯಂತ ಭಾರಿಗಾತ್ರದ ಸ್ತನಿ. ವಯಸ್ಕ ತಿಮಿಂಗಿಲ ಸುಮಾರು ೩೦ಮೀ. ಉದ್ದವೂ ೧೧೦ ಟನ್ ಭಾರವೂ ಇರುತ್ತದೆ. ಉಲ್ಲೇಖಗಳು ಹೊರಗಿನ ಕೊಂಡಿಗಳು ಸಸ್ತನಿ ಪ್ರಾಣಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152406
https://kn.wikipedia.org/wiki/%E0%B2%85%E0%B2%82%E0%B2%A4%E0%B2%B0%E0%B2%BE%E2%80%8D%E2%80%8C%E2%80%8C%E2%80%8C%E0%B2%B7%E0%B3%8D%E0%B2%9F%E0%B3%80%E0%B2%AF%20%E0%B2%B2%E0%B3%86%E0%B2%95%E0%B3%8D%E0%B2%95%E0%B2%AA%E0%B2%A4%E0%B3%8D%E0%B2%B0%20%E0%B2%AE%E0%B2%BE%E0%B2%A8%E0%B2%A6%E0%B2%82%E0%B2%A1%E0%B2%97%E0%B2%B3%20%E0%B2%AE%E0%B2%82%E0%B2%A1%E0%B2%B3%E0%B2%BF
ಅಂತರಾ‍‌‌‌ಷ್ಟೀಯ ಲೆಕ್ಕಪತ್ರ ಮಾನದಂಡಗಳ ಮಂಡಳಿ
ಈ ಮಂಡಳಿಯು ವಿಶ್ವಾದಂತ್ಯ ಲೆಕ್ಕಪತ್ರಗಳ ಮಾನದಂಡಗಳನ್ನು ಸಿದ್ಧಪಡಿಸುತ್ತದೆ. ೧ ಏಪ್ರಿಲ್ ೨೦೦೧ ರಂದು ಸ್ತಾಪಿಸಲಾಯಿತು. ಭಾರತದಲ್ಲಿ ಬಳಕೆ ಹಲವಾರು ಬದಲಾವಣೆಗಳ ಮೂಲಕ ಕಂಪನಿ ಅಧಿನಿಯಮ ೨೦೧೩ ರ ಮುಖೇನ ಇಂಡ್ ಎ.ಎಸ್ ಎಂದು ಕರೆಯಲ್ಪಡುತ್ತವೆ. IFRS ಫೌಂಡೇಶನ್ IASB ಕಾರ್ಯಾಚರಣೆಗಾಗಿ ಹಣವನ್ನು ಸಂಗ್ರಹಿಸುತ್ತದೆ. ಬಹುಪಾಲು ಹಣವು ರಾಷ್ಟ್ರೀಯ ಹಣಕಾಸು ಆಡಳಿತಗಳನ್ನು ಜಾರಿಗೆ ತಂದ ನ್ಯಾಯವ್ಯಾಪ್ತಿಗಳಿಂದ ಸ್ವಯಂಪ್ರೇರಿತ ಕೊಡುಗೆಯಾಗಿದೆ. ಕೊಡುಗೆಯು ಸಾಮಾನ್ಯವಾಗಿ ಎಲ್ಲಾ ಕೊಡುಗೆ ನ್ಯಾಯವ್ಯಾಪ್ತಿಗಳ ಒಟ್ಟು ಒಟ್ಟು ದೇಶೀಯ ಉತ್ಪನ್ನದ ಶೇಕಡಾವಾರು. ಹೆಚ್ಚುವರಿಯಾಗಿ, ಕೊಡುಗೆಗಳ ಭಾಗವು ದೊಡ್ಡ ಲೆಕ್ಕಪತ್ರ ಸಂಸ್ಥೆಗಳಿಂದ ಬರುತ್ತದೆ. 2019 ರಲ್ಲಿ, IFRS ಫೌಂಡೇಶನ್‌ನ ಆದಾಯವು GBP 31 ಮಿಲಿಯನ್ ಆಗಿತ್ತು, ಅದರಲ್ಲಿ GBP 20 ಮಿಲಿಯನ್ ಕೊಡುಗೆಗಳಿಂದ ಬಂದಿದೆ ಮತ್ತು GBP 11 ಮಿಲಿಯನ್ ಪ್ರಕಾಶನಗಳು ಮತ್ತು ಸಂಬಂಧಿತ ಚಟುವಟಿಕೆಗಳಿಂದ ಸ್ವಯಂ ಉತ್ಪತ್ತಿಯಾದ ಆದಾಯದಿಂದ ಬಂದಿದೆ.
152419
https://kn.wikipedia.org/wiki/%E0%B2%AE%E0%B3%81%E0%B2%96%E0%B2%AE%E0%B2%B2%E0%B3%8D%20%E0%B2%B9%E0%B3%86%E0%B2%97%E0%B3%8D%E0%B2%97%E0%B2%A3
ಮುಖಮಲ್ ಹೆಗ್ಗಣ
ಮುಖಮಲ್ ಹೆಗ್ಗಣ ಎನ್ಸೆಕ್ಟಿವೊರ ಗಣದ ಟಾಲ್ಪಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಕೀಟಾಹಾರಿ ಸ್ತನಿಗಳಿಗೆ ಅನ್ವಯವಾಗುವ ಹೆಸರು (ಮೋಲ್). ಸುಮಾರು 12 ವಿವಿಧ ಜಾತಿಗಳಿದ್ದು ಇವು ಯೂರೋಪ್, ಏಷ್ಯ ಹಾಗೂ ಉತ್ತರ ಅಮೆರಿಕಗಳಲ್ಲಿ ಕಾಣದೊರೆಯುತ್ತವೆ. ಅನೇಕ ಬಗೆಯ ಮುಖಮಲ್ ಹೆಗ್ಗಣಗಳಿಗೆ ಒಂದು ತೆರನ ಕಟುವಾಸನೆ ಇರುವುದರಿಂದ ಇವಕ್ಕೆ ಶತ್ರಗಳ ಕಾಟ ಕಡಿಮೆ. ದೇಹ ಲಕ್ಷಣಗಳು ಮುಖಮಲ್ ಹೆಗ್ಗಣಗಳು ನೆಲವನ್ನು ಕೊರೆದು ಬಿಲಗಳನ್ನು ರಚಿಸಿಕೊಂಡು ಜೀವಿಸುವಂಥ ಪ್ರಾಣಿಗಳು. ಇವುಗಳ ದೇಹದ ಉದ್ದ 65-220 ಮಿಮೀ. ಜೊತೆಗೆ 15-85 ಮಿಮೀ ಉದ್ದದ ಬಾಲವುಂಟು. ದೇಹದ ಮಾಟ ಉರುಳೆಯಂತಿದೆ. ಮೂತಿ ಉದ್ದವಾದ ಕೊಳವೆಯಂತಿದ್ದು ತುಂಬ ಗಡುಸಾಗಿಯೂ ರೋಮರಹಿತವಾಗಿಯೂ ಇದೆ. ಉತ್ತರ ಅಮೆರಿಕ ನಿವಾಸಿಯಾದ ಕಾಂಡಿಲ್ಯೂರ ಎಂಬ ಜಾತಿಯ ಹೆಗ್ಗಣದ ಮೂಗು ಮಾಂಸಲವಾದ 22 ನಳಿಕೆಗಳಾಗಿ ವಿಭಾಗಗೊಂಡಿದ್ದು ನಕ್ಷತ್ರದಾಕಾರದಲ್ಲಿ ಹರಡಿದೆ. ಇದರಿಂದ ಈ ಪ್ರಾಣಿಗೆ ನಕ್ಷತ್ರ ಮೂಗಿನ ಮುಖಮಲ್ ಹೆಗ್ಗಣ ಎಂಬ ಹೆಸರು ಬಂದಿದೆ. ಎಲ್ಲ ಹೆಗ್ಗಣಗಳಲ್ಲೂ ಕಣ್ಣು ತುಂಬ ಕಿರಿದಾಗಿದ್ದು ತುಪ್ಪುಳಿನಲ್ಲಿ ಇಲ್ಲವೆ ಚರ್ಮದ ಮಡಿಕೆಯಲ್ಲಿ ಹುದುಗಿರುತ್ತದೆ. ದೃಷ್ಟಿ ತುಂಬ ಮಂದವಾಗಿದೆ. ಹೊರಕಿವಿಗಳಿಲ್ಲ. ಕತ್ತು ಮೋಟು. ಕಾಲುಗಳು ಚಿಕ್ಕವು. ಪಾದಗಳಲ್ಲಿ ತಲಾ ಐದು ಬೆರಳುಗಳುಂಟು. ಮೈಮೇಲೆ ನಯವಾದ ತುಪ್ಪಳು ಇದೆ. ಕೊರೆಯುವ ಬಿಲ ಅಥವಾ ಸುರಂಗಗಳು ಮುಖಮಲ್ ಹೆಗ್ಗಣಗಳು ಎರಡು ತೆರನ ಬಿಲಗಳನ್ನು ಅಥವಾ ಸುರಂಗಗಳನ್ನು ಕೊರೆಯುತ್ತವೆ: ಒಂದು ಬಗೆಯವು ಹೆಚ್ಚು ಆಳವಿಲ್ಲದ ಸುರಂಗಗಳಾಗಿದ್ದು ಲಘ ವಿಶ್ರಾಂತಿಗೆ ಹಾಗೂ ಆಹಾರ ಸೇವನೆಗೆ ಬಳಕೆಯಾಗುತ್ತವೆ. ಇನ್ನೊಂದು ಬಗೆಯವು ಆಳವಾದ ಸುರಂಗಗಳು. ಇವುಗಳ ದ್ವಾರದ ಬಳಿ ಸಂಗ್ರಹಗೊಳ್ಳುವ ಮಣ್ಣಿನ ಗುಪ್ಪೆಗಳಿಂದ (ಮೋಲ್ ಹಿಲ್ಸ್) ಇವನ್ನು ಗುರುತಿಸಬಹುದು. ಮುಖಮಲ್ ಹೆಗ್ಗಣಗಳು ಬಿಲ ತೋಡುವುದರಲ್ಲಿ ಬಲು ನಿಷ್ಣಾತವಾಗಿವೆ. ಎಂಥ ಗಟ್ಟಿ ನೆಲವಾದರೂ ಚೂಪು ಉಗುರುಗಳಿಂದ ಕೊರೆಯುತ್ತ, ತಮ್ಮ ಮೂತಿಯ ಸಹಾಯದಿಂದ ಮಣ್ಣನ್ನು ಎತ್ತಿ ಎಸೆಯುತ್ತ, ಕೆಲವೇ ಸೆಕೆಂಡುಗಳಲ್ಲಿ ಆಳವಾದ ಬಿಲವನ್ನು ರಚಿಸಬಲ್ಲವು. ಕಣ್ಣು ಚುರುಕಾಗಿಲ್ಲದಿದ್ದರೂ ನೆಲದ ಕಂಪನಗಳ ಗ್ರಹಣದ ಮೂಲಕ ತಮಗೆ ಬೇಕಾದ ದಿಕ್ಕಿನಲ್ಲಿ, ರೀತಿಯಲ್ಲಿ ಸುರಂಗಗಳನ್ನು ನಿರ್ಮಿಸುವುವು. ಸಾಮಾಜಿಕ ಸ್ವರೂಪ ಸಾಮಾನ್ಯವಾಗಿ ಇವು ಒಂಟೊಂಟಿಯಾಗಿಯೇ ಜೀವಿಸುವುದಾರೂ ಕೆಲವೊಮ್ಮೆ ಹಲವಾರು ಮುಖಮಲ್ ಹೆಗ್ಗಣಗಳು ಒಂದೇ ಸುರಂಗಜಾಲವನ್ನು ರಚಿಸಿಕೊಂಡು ಬದುಕುವುದಿದೆ. ಹಗಲಿನಲ್ಲಿ ಎಂತೊ ರಾತ್ರಿ ವೇಳೆಯಲ್ಲೂ ಚಟುವಟಿಕೆಯಿಂದ ಇರುತ್ತವೆ. ಆಹಾರ ಇವುಗಳ ಪ್ರಧಾನ ಆಹಾರ ಕೀಟಗಳು ಹಾಗೂ ಮಣ್ಣು ಹುಳುಗಳು. ಕೆಲವೊಮ್ಮೆ ಬೇರೆ ತೆರನ ಸಣ್ಣ ಗಾತ್ರದ ಅಕಶೇರುಕ ಪ್ರಾಣಿಗಳನ್ನು ತಿನ್ನುವುದಿದೆ. ಕೆಲವು ಜಾತಿಯವು ಸಸ್ಯಜನ್ಯ ಆಹಾರವನ್ನು ಸೇವಿಸುವುವು. ಸಂತಾನೋತ್ಪತ್ತಿ ವರ್ಷಕ್ಕೆ ಒಂದು ಇಲ್ಲವೆ ಎರಡು ಸೂಲಿನಲ್ಲಿ ಮರಿ ಹಾಕುವುವು. ಒಂದು ಸೂಲಿಗೆ 1-7 ಮರಿಗಳು. ಗರ್ಭಾವಸ್ಧೆಯ ಅವಧಿ 28-42 ದಿನಗಳು. ಮುಖ್ಯವಾದ ಮುಖಮಲ್ ಹೆಗ್ಗಣಗಳು ಮುಖಮಲ್ ಹೆಗ್ಗಣಗಳ ಪೈಕಿ ಮುಖ್ಯವಾದವು ಇಂತಿವೆ: ಡೆಸ್ಮಾನ ಮಾಸ್ಕೇಟ (ರಷ್ಯದ ಡೆಸ್ಮನ್), ಟಾಲ್ಪ ಇನ್ಸುಲಾರಿಸ್ (ಫಾರ್ಮೋಸದ ಮುಖಮಲ್ ಹೆಗ್ಗಣ), ಟಾಲ್ಪ ಯೂರೊಪಿಯ, ಯೂರೋಟ್ರೈಕಸ್ ಟಾಲ್ಪಾಯ್ಡಿಸ್, ಸ್ಕಪಾನಸ್ ಒರೇರಿಯಸ್, ಸ್ಕಾಲೋಪಸ್ ಅಕ್ವಾಟಿಕಸ್, ಕಾಂಡಿಲ್ಯೂರ ಕ್ರಿಸ್ಟೇಟಸ್, ಭಾರತದ ಪೂರ್ವ ಹಿಮಾಲಯ, ಅಸ್ಸಾಮ್, ಖಾಸಿಯ ಮತ್ತು ನಾಗಾಪರ್ವತ ಪ್ರದೇಶಗಳಲ್ಲಿ ಟಾಲ್ಪ ಮೈಕ್ರೂರ ಎಂಬ ಬಗೆ ಕಾಣದೊರೆಯುತ್ತದೆ. ಇನ್ಸೆಕ್ಟಿವೊರ ಗಣದ ಕ್ರೈಸೊಕ್ಲೋರಿಡೀ ಕುಟುಂಬದ ಪ್ರಾಣಿಗಳಿಗೂ ಮುಖಮಲ್ ಹೆಗ್ಗಣ ಎಂಬ ಹೆಸರೇ ಇದೆ. ಉಲ್ಲೇಖಗಳು ಹೊರಗಿನ ಕೊಂಡಿಗಳು UK Government DEFRA paper on control the European mole British Traditional Molecatchers Register ಸಸ್ತನಿ ಪ್ರಾಣಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152493
https://kn.wikipedia.org/wiki/%E0%B2%87%E0%B2%B8%E0%B3%8D%E0%B2%95%E0%B2%BE%E0%B2%A8%E0%B3%8D%20%E0%B2%A6%E0%B3%87%E0%B2%B5%E0%B2%BE%E0%B2%B2%E0%B2%AF%2C%20%E0%B2%AA%E0%B3%81%E0%B2%A3%E0%B3%86
ಇಸ್ಕಾನ್ ದೇವಾಲಯ, ಪುಣೆ
ಇಸ್ಕಾನ್ ಹೊಸ ವೈದಿಕ ಸಾಂಸ್ಕೃತಿಕ ಕೇಂದ್ರ (NVCC), ಶ್ರೀ ಶ್ರೀ ರಾಧಾ ವೃಂದಾವನಚಂದ್ರ ದೇವಸ್ಥಾನ ಅಥವಾ ಇಸ್ಕಾನ್ ಪುಣೆ ಭಾರತದ ಪುಣೆಯಲ್ಲಿರುವ ಗೌಡಿಯ ವೈಷ್ಣವ ದೇವಾಲಯವಾಗಿದೆ. ಈ ದೇವಾಲಯವು ಹಿಂದೂ ದೇವರಾದ ರಾಧಾ ಕೃಷ್ಣನಿಗೆ ಸಮರ್ಪಿತವಾಗಿದೆ ಮತ್ತು ಇದನ್ನು ೨೦೧೩ ರಲ್ಲಿ ತೆರೆಯಲಾಯಿತು. ಇದು ಪುಣೆ ನಗರದ ಅತಿ ದೊಡ್ಡ ದೇವಾಲಯವಾಗಿದೆ. ಇತಿಹಾಸ ದೇವಾಲಯದ ಸಂಕೀರ್ಣವನ್ನು ೬ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಇದು ನಿರ್ಮಾಣಕ್ಕೆ ಏಳು ವರ್ಷಗಳನ್ನು ತೆಗೆದುಕೊಂಡಿತು. ಕ್ಯಾಂಪ್ ನ ಇಸ್ಕಾನ್ ದೇವಸ್ಥಾನ ಮತ್ತು ಭಕ್ತರ ಧನಸಹಾಯದಿಂದ ದೇವಾಲಯವನ್ನು ನಿರ್ಮಿಸಲು ೪೦ ಕೋಟಿ ರೂಪಾಯಿಗಳು ಬೇಕಾಯಿತು. ಈ ದೇವಾಲಯವನ್ನು ೨೦೧೩ ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು. ದೇವಾಲಯದ ಸಂಕೀರ್ಣವು ಎರಡು ದೇವಾಲಯಗಳನ್ನು ಹೊಂದಿದೆ- ಮುಖ್ಯ ರಾಧಾ ಕೃಷ್ಣ ದೇವಾಲಯ ಮತ್ತು ವೆಂಕಟೇಶ್ವರ (ಬಾಲಾಜಿ) ದೇವಾಲಯ. ರಾಧಾಕೃಷ್ಣ ದೇವಾಲಯವನ್ನು ಉತ್ತರ ಭಾರತೀಯ ವಾಸ್ತುಶೈಲಿಯಲ್ಲಿ ಕೆಂಪು ಕಲ್ಲು ಮತ್ತು ಅಮೃತಶಿಲೆಯನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ವೆಂಕಟೇಶ್ವರ ದೇವಾಲಯವನ್ನು ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯಲ್ಲಿ (ತಿರುಮಲದಲ್ಲಿನ ಬಾಲಾಜಿ ದೇವಾಲಯದಂತೆಯೇ) ಕೋಟಾ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ದೇವಾಲಯವು ಭಗವದ್ಗೀತೆ ಮತ್ತು ಶ್ರೀಮದ್ ಭಾಗವತದ ಕುರಿತು ದೈನಂದಿನ ತರಗತಿಗಳನ್ನು ನೀಡುತ್ತದೆ. ಛಾಯಾಂಕಣ ಸಹ ನೋಡಿ ಇಸ್ಕಾನ್ ಟೆಂಪಲ್ ಬೆಂಗಳೂರು ಉಲ್ಲೇಖಗಳು ಹಿಂದೂ ದೇವಾಲಯಗಳು ದೇವಾಲಯಗಳು ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ
152500
https://kn.wikipedia.org/wiki/%E0%B2%B0%E0%B3%87%20%E0%B2%AE%E0%B3%80%E0%B2%A8%E0%B3%81%E0%B2%97%E0%B2%B3%E0%B3%81
ರೇ ಮೀನುಗಳು
ರೇ ಮೀನುಗಳು ಕಾಂಡ್ರಿಕ್‌ತ್ಯಸ್ ವರ್ಗ, ಎಲ್ಯಾಸ್ಮೊಬ್ರಾಂಕಿ ಉಪವರ್ಗದ ಮೃದ್ವಸ್ಥಿ ಮೀನುಗಳ ಪೈಕಿ ರಾಜಿಫಾರ್ಮಿಸ್ ಅಥವಾ ಬ್ಯಾಟಾಯ್ಡಿಯೈ ಗಣಕ್ಕೆ ಸೇರಿದ ಮೀನುಗಳಿಗಿರುವ ಸಾಮನ್ಯ ಹೆಸರು. ಇವುಗಳಲ್ಲಿ ಸುಮಾರು 425 ಪ್ರಭೇದಗಳಿವೆ. ದೇಹ ರಚನೆ ಉದರಭಾಗದತ್ತ ಬೆನ್ನಿನ ಭಾಗವನ್ನು ಅದುಮಿದಂತೆ ತೋರುವ ಅಗಲವಾದ ಚಪ್ಪಟೆ ದೇಹ, ಮುಂಡದ ಇಕ್ಕೆಲಗಳಲ್ಲಿ ಬಾಲದಿಂದ ತಲೆಯವರೆಗೆ ವಿಸ್ತರಿಸಿರುವ ಎದೆಭಾಗದ (ಪೆಕ್ಟೊರಲ್) ದೊಡ್ಡ ಈಜುರೆಕ್ಕೆಗಳು ಮತ್ತು ವಜ್ರಾಕೃತಿಯನ್ನು  ಸರಿಸುಮಾರಾಗಿ ಹೋಲುವ ದೇಹವಿನ್ಯಾಸ-ಇವು ರೇ ಮೀನುಗಳ ವೈಶಿಷ್ಟ್ಯಗಳು. ಪ್ರತಿಯೊಂದು ಪ್ರಭೇದಕ್ಕೂ ಅದರದೇ ಆದ ವೈಶಿಷ್ಟ್ಯವಿದೆ. ದೊಡ್ಡ ಸ್ಪೈರಕಲ್‌ಗಳು (ತಿಮಿಂಗಿಲಗಳ ‘ಊದುರಂಧ್ರ’ದಂಥ ರಚನೆ) ಮತ್ತು ಕಣ್ಣುಗಳು ಬೆನ್ನಿನ ಪಾರ್ಶ್ವದಲ್ಲೂ ಕಿರಿದಾದ ಬಾಯಿ ಮತ್ತು ಕಿವಿರು ಸೀಳಿಕೆಗಳು ಉದರಪಾರ್ಶ್ವದಲ್ಲೂ ಇವೆ. ವಸ್ತಿಕುಹರದ (ಪೆಲ್ವಿಕ್) ರೆಕ್ಕೆಗಳು ಸಾಪೇಕ್ಷವಾಗಿ ಚಿಕ್ಕವು. ಗುದದ್ವಾರ ಸಮೀಪದ (ಏನಲ್) ರೆಕ್ಕೆಗಳು ಇಲ್ಲ. ಬಾಲದ ಭಾಗ ಸಪುರ ಚಾವಟಿಯಂತಿದೆ. ಎದೆಭಾಗದ ಈಜುರೆಕ್ಕೆಗಳ ನೆರವಿನಿಂದ ನಿಧಾನವಾಗಿ ಚಲಿಸುವ ಇವಕ್ಕೆ ಬಾಲವೇ ಚುಕ್ಕಾಣಿ. ಆಹಾರ ಮೃದ್ವಂಗಿ (ಮಾಲಸ್ಕ್) ಮತ್ತು ಚಿಪ್ಪುಪ್ರಾಣಿಗಳು (ಕ್ರಸ್ಟೇಷನ್ಸ್) ಆಹಾರ. ಈ ಆಹಾರ ಸೇವನೆಗೆ ಅಗತ್ಯವಾದ ಮೊಂಡುಹಲ್ಲುಗಳು ಬಾಯಿಯಲ್ಲಿವೆ. ಬಣ್ಣ ಬದಲಿಸಿ ಕಪಟರೂಪ ಧರಿಸುತ್ತವೆ. ಸಂತಾನೋತ್ಪತ್ತಿ ಆಂತರಿಕ ನಿಷೇಚನೆಯ ಮೂಲಕ ಸಂತಾನೋತ್ಪತ್ತಿ. ಇದಕ್ಕೆ ಅಗತ್ಯವಾದ ಸಂರಚನೆ ಗಂಡು ಮೀನುಗಳ ವಸ್ತಿಕುಹರದ ರೆಕ್ಕೆಗಳಲ್ಲಿವೆ. ಮೊಟ್ಟೆ ಇಡುವ ಮತ್ತು ಹೆಣ್ಣಿನ ದೇಹದಲ್ಲಿಯೇ ಮೊಟ್ಟೆಯನ್ನು ಮರಿಮಾಡುವ - ಈ ಎರಡೂ ಬಗೆಯ ಪ್ರಭೇದಗಳಿವೆ. ಆವಾಸಸ್ಥಾನ ಅನೇಕ ರೇಮೀನು ಪ್ರಭೇದಗಳ ವಾಸ ತೀರಕ್ಕೆ ಸಮೀಪದ ಸಾಗರದ ತಳಭಾಗದಲ್ಲಿ. ಸುಮಾರು 3000 ಮೀ ಆಳದಲ್ಲಿ ವಾಸಿಸುವವೂ ಇವೆ. ಅಮೆಜಾನ್ ನದಿಯ ಸಿಹಿನೀರಿನಲ್ಲಿ ವಾಸಿಸುವ ಒಂದು ಜಾತಿಯೂ ಇದೆ.  ಸಾಗರ ತಳದ ಮಣ್ಣಿನಲ್ಲಿ ಅಡಗಿದ್ದು ಸಮೀಪಿಸಿದ ಭೋಜನೀಯ ಜೀವಿಗಳನ್ನು ಬಲಿ ತೆಗೆದುಕೊಳ್ಳುವ ಪ್ರಭೇದಗಳ ಸಂಖ್ಯೆ ಹೆಚ್ಚು. ಮುಖ್ಯವಾದ ರೇ ಮೀನುಗಳು ಸಾಗರದ ಮೇಲ್ಭಾಗದಲ್ಲಿ ವಾಸಿಸುವ ಗ್ರೇಟ್ ಮ್ಯಾಂಟಾ ರೇ, ಬಾಲದ ತುದಿಯ ಚುಚ್ಚುಮುಳ್ಳಿನ ಮೂಲಕ ಶತ್ರುದೇಹಕ್ಕೆ ಮಾರಕ ವಿಷ ಹುಗಿಸಬಲ್ಲ ಸ್ಟಿಂಗ್ ರೇ, ತೀವ್ರ ವಿದ್ಯುದಾಘಾತ ನೀಡುವ ಟಾರ್ಪೀಡೊ ರೇ ಮಾನವನಿಗೆ ಹೆಚ್ಚು ಪರಿಚಿತ. ಕಡಿಮೆ ಚಪ್ಪಟೆ ವಿನ್ಯಾಸದ ಗಿಟಾರ್ ಮೀನು ಮತ್ತು ಗರಗಸ ಮೀನು ರೇ ಮೀನುಗಳೇ. ದೈತ್ಯ ಡೆವಿಲ್ ರೇ ಮೀನು (ಮಾಂಟಾ ಬೈರಾಸ್ಟ್ರಿಸ್) 22 ಅಡಿ ಅಗಲ (ರೆಕ್ಕೆಗಳ ತುದಿಯಿಂದ ತುದಿಯವರೆಗೆ) ಇದ್ದು ಸುಮಾರು 3500 ಪೌಂಡ್ ತೂಕವಿರುತ್ತದೆ. ಉಲ್ಲೇಖಗಳು ಗ್ರಂಥಸೂಚಿ ಹೊರಗಿನ ಕೊಂಡಿಗಳು – database of bibliography of living/fossil sharks and rays (see Chondrichtyes: Selachii) with more than 15 000 listed papers and many download links. ಮೀನುಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152511
https://kn.wikipedia.org/wiki/%E0%B2%B6%E0%B2%82%E0%B2%AC%E0%B3%82%E0%B2%95
ಶಂಬೂಕ
ಶಂಬೂಕ (, IAST : śambūka) ಎಂಬುದು ಒಂದು ಪ್ರಕ್ಷೇಪಿಸಿದ ಪಾತ್ರವಾಗಿದೆ, ಇದು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಕಂಡುಬರುವುದಿಲ್ಲ ಆದರೆ ನಂತರದ ಸೇರ್ಪಡೆಯಾದ ಉತ್ತರ ಕಾಂಡದಲ್ಲಿ ಕಂಡುಬರುತ್ತದೆ. ಕಥೆಯ ಪ್ರಕಾರ, ಧರ್ಮವನ್ನು ಉಲ್ಲಂಘಿಸಿ ತಪಸ್ಸನ್ನು ಮಾಡಲು ಪ್ರಯತ್ನಿಸಿದ್ದಕ್ಕಾಗಿ ರಾಮನಿಂದ ಶೂದ್ರ ತಪಸ್ವಿಯಾದ ಶಂಬೂಕನನ್ನು ಕೊಲ್ಲಲಾಯಿತು, ಇದು ಬ್ರಾಹ್ಮಣನ ಮಗನ ಸಾವಿಗೆ ಕಾರಣವಾದ ಕೆಟ್ಟ ಕರ್ಮಕ್ಕೆ ಕಾರಣವಾಯಿತು. ಈ ಕಥೆಯನ್ನು ನಂತರದ ಅವಧಿಯಲ್ಲಿ ರಚಿಸಲಾಗಿದೆ. ಜೈನ ಸಾಹಿತ್ಯದಲ್ಲಿ, ಶಂಬೂಕನ ಕಥೆ ವಿಭಿನ್ನವಾಗಿದೆ ಮತ್ತು ಅವನು ಶೂರ್ಪನಖಿಯ ಮಗ. ಕಥೆ ಈ ಕಥೆಯ ಪ್ರಕಾರ, ರಾಮನು ಅಯೋಧ್ಯೆಯನ್ನು ಆಳುತ್ತಿದ್ದಾಗ, ಒಬ್ಬ ಬ್ರಾಹ್ಮಣ ನ್ಯಾಯಾಲಯವನ್ನು ಸಂಪರ್ಕಿಸಿದನು ಮತ್ತು ರಾಮನ ದುರಾಡಳಿತದಿಂದ ತನ್ನ ಚಿಕ್ಕ ಮಗ ಸತ್ತನೆಂದು ಎಲ್ಲರಿಗೂ ಹೇಳಿದನು. ರಾಮನು ತಕ್ಷಣವೇ ತನ್ನ ಎಲ್ಲಾ ಮಂತ್ರಿಗಳೊಂದಿಗೆ ಸಭೆಯನ್ನು ಕರೆದು ಇದರ ಕಾರಣವನ್ನು ವಿಚಾರಿಸಿದನು. ತಪಸ್ಸಿನ ನಿಯಮದ ಉಲ್ಲಂಘನೆಯಿಂದ ಇದು ಸಂಭವಿಸಿದೆ ಎಂದು ನಾರದ ಋಷಿ ಅವನಿಗೆ ಹೇಳಿದರು. ಒಬ್ಬ ಶೂದ್ರನು ತಪಸ್ಸನ್ನು ಮಾಡುತ್ತಿದ್ದನೆಂದು ನಾರದನು ಅವನಿಗೆ ತಿಳಿಸಿದನು. ಹಾಗೂ ಅದು ತ್ರೇತಾಯುಗದಲ್ಲಿ ನಿಷೇಧಿಸಲ್ಪಟ್ಟಿತು. ಆದ್ದರಿಂದ ರಾಮನು ಶೂದ್ರನನ್ನು ಹುಡುಕಲು ಹೋದನು ಮತ್ತು ಶಂಬೂಕನು ತಪಸ್ಸು ಮಾಡುತ್ತಿದ್ದ ಸ್ಥಳವನ್ನು ಕಂಡುಕೊಂಡನು. ಶಂಬೂಕನು ಶೂದ್ರನೆಂದು ದೃಢಪಡಿಸಿದ ನಂತರ ರಾಮನು ಅವನನ್ನು ಕೊಂದನು. ದೇವರುಗಳು ಈ ಕಾರ್ಯಕ್ಕಾಗಿ ರಾಮನನ್ನು ಶ್ಲಾಘಿಸಿದರು ಮತ್ತು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿದ್ದಕ್ಕಾಗಿ ಮತ್ತು ಶೂದ್ರರಿಗೆ ವೈಯಕ್ತಿಕವಾಗಿ ಸ್ವರ್ಗವನ್ನು ಪಡೆಯಲು ಅನುಮತಿಸದಿದ್ದಕ್ಕಾಗಿ ರಾಮನನ್ನು ಅಭಿನಂದಿಸಿದರು. ಬ್ರಾಹ್ಮಣನ ಮಗನೂ ಪುನರುತ್ಥಾನಗೊಂಡನು. ಮನ್ನಣೆ ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ ಮುಂತಾದ ಲೇಖಕರು ಶಂಬೂಕನ ಪಾತ್ರವನ್ನು ನಂತರದ ಅವಧಿಯ ಪ್ರಕ್ಷೇಪಣ ಮತ್ತು ಸೃಷ್ಟಿ ಎಂದು ಪರಿಗಣಿಸಿದ್ದಾರೆ. ಪುಷ್ಟಿಮಾರ್ಗ ವೈಷ್ಣವ ಸಂಪ್ರದಾಯವು ರಾಮಾಯಣವು ಕಾಡಿನಲ್ಲಿ ವಾಸಿಸುತ್ತಿದ್ದ ಶಬರಿಯಂತಹ ಇತರ ಶೂದ್ರರನ್ನು ಉಲ್ಲೇಖಿಸುತ್ತದೆ ಎಂದು ಸೂಚಿಸುತ್ತದೆ. ಆದ್ದರಿಂದ ಶಂಬೂಕನು ರಾಮನ ಗಮನವನ್ನು ಸೆಳೆಯಲು ಉದ್ದೇಶಪೂರ್ವಕವಾಗಿ ಧರ್ಮವನ್ನು ಉಲ್ಲಂಘಿಸಿದನು ಮತ್ತು ಅವನ ಶಿರಚ್ಛೇದನಗೊಂಡಾಗ ಮೋಕ್ಷವನ್ನು ಪಡೆದನು. ಕನ್ನಡದ ಖ್ಯಾತ ಕವಿ ಕುವೆಂಪು, ಶೂದ್ರ ತಪಸ್ವಿ ಎಂಬ ತನ್ನ ನಾಟಕದಲ್ಲಿ, ಶಂಬೂಕನನ್ನು ಶಿಕ್ಷಿಸುವ ಮೂಲಕ ರಾಮನು ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಮತ್ತು ಏಕಕಾಲದಲ್ಲಿ ಶಂಬೂಕನನ್ನು ಧರ್ಮನಿಷ್ಠ ಮತ್ತು ಶ್ರದ್ಧಾವಂತ ಋಷಿಯಾಗಿ ಶೋಷಣೆಯಿಂದ ರಕ್ಷಿಸಬೇಕು ಎಂದು ತೋರಿಸಿದರು. ಮತ್ತು ಆ ಮೂಲಕ ಕಥೆಯನ್ನು ಬ್ರಾಹ್ಮಣರ ವಿಮರ್ಶೆಯಾಗಿ ಪರಿವರ್ತಿಸಿದರು. ಜಾತಿ ನಿರ್ಮೂಲನೆ ಎಂಬ ತಮ್ಮ ಮೂಲ ಕೃತಿಯಲ್ಲಿ ಬಿ. ಆರ್. ಅಂಬೇಡ್ಕರ್ ಅವರು ವರ್ಣ ವ್ಯವಸ್ಥೆಯನ್ನು ಟೀಕಿಸುತ್ತಾ ಶಂಬೂಕನ ಕಥೆಯನ್ನು ಎತ್ತಿ ತೋರಿಸಿದ್ದಾರೆ. ಜನರನ್ನು ನಾಲ್ಕು ನಿರ್ದಿಷ್ಟ ವರ್ಗಗಳಾಗಿ ನಿಖರವಾಗಿ ವರ್ಗೀಕರಿಸುವುದು ಅಸಾಧ್ಯವೆಂದು ಅವರು ವಾದಿಸುತ್ತಾರೆ. ಅಪರಾಧಿಯನ್ನು ಶಿಕ್ಷಿಸದ ಹೊರತು, ಪುರುಷರು ತಮ್ಮ ವರ್ಗಗಳಿಗೆ ಅಂಟಿಕೊಳ್ಳುವುದಿಲ್ಲ ಅಂದರೆ ಇಡೀ ವ್ಯವಸ್ಥೆಯು ಕುಸಿಯುತ್ತದೆ ಎಂದು ಅವರು ವಿವರಿಸುತ್ತಾರೆ. ರಾಮಾಯಣದಲ್ಲಿ, ಅಂಬೇಡ್ಕರ್ ಪ್ರಕಾರ, ರಾಮನು ಶಂಬೂಕನನ್ನು ಕೊಲ್ಲುವ ಮೂಲಕ ತನ್ನ ರಾಜ್ಯದಲ್ಲಿ ಅಪರಾಧ ನಡೆಯದಂತೆ ನೋಡಿಕೊಳ್ಳುತ್ತಾನೆ. ಕೆ. ಆರ್. ರಾಜು ಶಂಬೂಕನ ಕಥೆಯನ್ನು ಕ್ಷುಲ್ಲಕ ಮತ್ತು ದುರುದ್ದೇಶಪೂರಿತವಾಗಿ ನಿರ್ಮಿಸಲಾಗಿದೆ ಎಂದು ಕರೆದರು. ವಿದ್ವಾಂಸ ಎನ್. ಎಂ. ಚಕ್ರವರ್ತಿ, ಉತ್ತರಕಾಂಡವನ್ನು ಪ್ರಕ್ಷೇಪಣವೆಂದು ಪರಿಗಣಿಸುತ್ತಾರೆ ಮತ್ತು ಶಂಬೂಕನ ಕಥೆಯನ್ನು ಸಂಪೂರ್ಣವಾಗಿ ಅಸಮರ್ಥನೀಯ ಎಂದು ಕಂಡುಕೊಳ್ಳುತ್ತಾರೆ. ಟಿಪ್ಪಣಿಗಳು ರಾಮಾಯಣದ ಪಾತ್ರಗಳು ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ
152515
https://kn.wikipedia.org/wiki/%E0%B2%B2%E0%B2%B2%E0%B2%BF%E0%B2%A4%E0%B2%BE%20%E0%B2%B0%E0%B2%B5%E0%B3%80%E0%B2%B7%E0%B3%8D
ಲಲಿತಾ ರವೀಷ್
ಲಲಿತಾ ರವೀಷ್ (Lalitha Ravish) ಒಬ್ಬ ಭಾರತೀಯ ರಾಜಕಾರಣಿ. ಅವರು ಭಾರತದ ಕರ್ನಾಟಕ ರಾಜ್ಯತ ತುಮಕೂರು ಕ್ಷೇತ್ರದ ಮಾಜಿ ನಗರಾದ್ಯಕ್ಷ. ರಾಜಕೀಯ ಜೀವನ ಲಲಿತಾ ರವೀಷ್ ಜನತಾ ದಳ (ಜಾತ್ಯತೀತ) ಪಕ್ಷದ ರಾಜಕಾರಣಿ. ೨೦೧೫ರ ಜನವರಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರಾದ್ಯಕ್ಷ ಆಗಿ ಅಯ್ಕೆಯಾದರು. ಉಪನಗರಾದ್ಯಕ್ಷ ಆಗಿ ಭಾರತೀಯ ಜನತಾ ಪಕ್ಷದ ರೂಪಾ ಅಯ್ಕೆಯಾಗಿದ್ದಾರೆ. ಉಲ್ಲೇಖಗಳು ಕರ್ನಾಟಕ ರಾಜಕಾರಣಿಗಳು ಜೀವಂತ ವ್ಯಕ್ತಿಗಳು
152522
https://kn.wikipedia.org/wiki/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%BF%20%E0%B2%9A%E0%B2%A4%E0%B3%81%E0%B2%B0%E0%B3%8D%E0%B2%B5%E0%B3%87%E0%B2%A6%E0%B2%BF
ಸ್ವಾತಿ ಚತುರ್ವೇದಿ
ಸ್ವಾತಿ ಚತುರ್ವೇದಿ ಒಬ್ಬ ಭಾರತೀಯ ಪತ್ರಕರ್ತೆ. [5] ಅವರು ದಿ ಸ್ಟೇಟ್ಸ್‌ಮನ್, ದಿ ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಎನ್‌ಡಿಟಿವಿ, ಡೈಲಿಓ, ದಿ ವೈರ್ , ಗಲ್ಫ್ ನ್ಯೂಸ್ ಮತ್ತು ಡೆಕ್ಕನ್ ಹೆರಾಲ್ಡ್‌ನಂತಹ ವಿವಿಧ ಭಾರತೀಯ ಪತ್ರಿಕೆಗಳು ಮತ್ತು ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ; ಅವರ ಮೊದಲ ಪುಸ್ತಕ ಡ್ಯಾಡಿಸ್ ಗರ್ಲ್ ; ಅವರ ಎರಡನೇ ಪುಸ್ತಕದ ಶೀರ್ಷಿಕೆ ಐ ಆಮ್ ಎ ಟ್ರೋಲ್: ಇನ್ಸೈಡ್ ದಿ ಸೀಕ್ರೆಟ್ ವರ್ಲ್ಡ್ ಆಫ್ ದಿ ಬಿಜೆಪೀಸ್ ಡಿಜಿಟಲ್ ಆರ್ಮಿ . ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಅವರು ಪ್ರತಿಕೂಲ ವಾತಾವರಣದಲ್ಲಿ ಪತ್ರಿಕೋದ್ಯಮ ನಡೆಸುವುದಕ್ಕಾಗಿ ನೀಡುವ ಧೈರ್ಯ ಪ್ರಶಸ್ತಿಯನ್ನು ಸ್ವಾತಿ ಚತುರ್ವೇದಿ ಅವರು ೨೦೧೮ ರಲ್ಲಿ ಪಡೆದಿದ್ದಾರೆ. ಸಹ ನೋಡಿ ಬರ್ಖಾ ದತ್ ಉಲ್ಲೇಖಗಳು ಬಾಹ್ಯ ಕೊಂಡಿಗಳು ಎನ್‌ಡಿಟಿವಿಯ ಜಾಲತಾಣದಲ್ಲಿ ಸ್ವಾತಿ ಚತುರ್ವೇದಿ ಬಗ್ಗೆ ಜೀವಂತ ವ್ಯಕ್ತಿಗಳು
152530
https://kn.wikipedia.org/wiki/%E0%B2%B0%E0%B3%86%E0%B2%A8%E0%B3%86%E0%B2%9F%E0%B3%8D
ರೆನೆಟ್
ರೆನೆಟ್ ಹಾಲು ಕುಡಿಯುವ ನವಜಾತ ಸ್ತನಿಗಳ ಜಠರರಸಗಳಲ್ಲಿ ಇರುವ ಪದಾರ್ಥ. ಇದರಲ್ಲಿ ಹಾಲನ್ನು ಗರಣೆಗಟ್ಟಿಸುವ ಕಿಣ್ವ ರೆನಿನ್ ಇದೆ. ಹಾಲು ಜೀರ್ಣಿಸಲು, ಅರ್ಥಾತ್, ಹಾಲಿನಲ್ಲಿ ಇರುವ ಕೇಸೀನ್ ಎಂಬ ಪ್ರೋಟೀನನ್ನು ಪ್ರತ್ಯೇಕಿಸಲು ಇದು ಆವಶ್ಯಕ. ಅಂಟು, ವಸ್ತ್ರ, ಬಣ್ಣ ಮತ್ತು ಪ್ಲಾಸ್ಟಿಕ್ ತಯಾರಿಗೂ ಕೇಸೀನ್ ಬಳಕೆ ಉಂಟು. ಗಿಣ್ಣು ಮತ್ತು ಜಂಕೆಟ್ ಎಂಬ ಮೊಸರೊಡಕಿನ ಸಿಹಿ ಭಕ್ಷ್ಯಗಳ ವಾಣಿಜ್ಯೋತ್ಪಾದನೆಯಲ್ಲಿ ರೆನೆಟ್ ಆಹರಣಗಳ ಬಳಕೆ ಉಂಟು. ಕರುಗಳ ನಾಲ್ಕನೆಯ ಜಠರದ ಒಳಭಿತ್ತಿಯಿಂದ ರೆನೆಟ್ ಆಹರಣಗಳ ವಾಣಿಜ್ಯೋತ್ಪಾದನೆ. ಗಿಣ್ಣಿನ ತಯಾರಿಕೆಗೆ ಕರುಗಳಿಂದ ಪಡೆದ ರೆನೆಟ್ ಕಡಿಮೆ ಸಾಮಾನ್ಯವಾಗಿದೆ, ಎಷ್ಟರ ಮಟ್ಟಿಗೆ ಎಂದರೆ ಇಂದು ಅಮೇರಿಕದಲ್ಲಿ 5% ಗಿಂತ ಕಡಿಮೆ ಗಿಣ್ಣನ್ನು ಪ್ರಾಣಿಯ ರೆನೆಟ್ ಬಳಸಿ ತಯಾರಿಸಲಾಗುತ್ತದೆ. ಉಲ್ಲೇಖಗಳು ಪ್ರಾಣಿ ಉತ್ಪನ್ನಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
152558
https://kn.wikipedia.org/wiki/%E0%B2%95%E0%B2%B2%E0%B2%BE%E0%B2%AE%E0%B2%82%E0%B2%A1%E0%B2%B2%E0%B2%82%20%E0%B2%B8%E0%B2%A4%E0%B3%8D%E0%B2%AF%E0%B2%AD%E0%B2%BE%E0%B2%AE%E0%B2%BE
ಕಲಾಮಂಡಲಂ ಸತ್ಯಭಾಮಾ
ಕಲಾಮಂಡಲಂ ವಿ. ಸತ್ಯಭಾಮಾ (೪ ನವೆಂಬರ್ ೧೯೩೭ - ೧೩ ಸೆಪ್ಟೆಂಬರ್ ೨೦೧೫) ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ಶಿಕ್ಷಕಿ ಮತ್ತು ನೃತ್ಯ ಸಂಯೋಜಕಿ, ಮೋಹಿನಿಯಾಟ್ಟಂನಲ್ಲಿನ ತನ್ನ ಪ್ರದರ್ಶನಗಳು ಮತ್ತು ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಾಳೆ. ಭಾರತ ಸರ್ಕಾರದಿಂದ ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ೨೦೧೪ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಜೀವನಚರಿತ್ರೆ   ಸತ್ಯಭಾಮಾ ಅವರು ೧೯೩೭ ರಲ್ಲಿ, ದಕ್ಷಿಣ ಭಾರತದ ಕೇರಳದ ಪಾಲಕ್ಕಾಡ್‌ನ ಭರತಪುಳದ ಕರಾವಳಿಯ ಶೋರ್ನೂರ್‌ನಲ್ಲಿ ಸೀಮಿತ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವ ಕುಟುಂಬದಲ್ಲಿ ಸಣ್ಣ ಉದ್ಯಮಿಯಾದ ಕೃಷ್ಣನ್ ನಾಯರ್ ಮತ್ತು ಅಮ್ಮಿನಿ ತಂದೆ ತಾಯಿಗೆ ಜನಿಸಿದರು.[ ಉಲ್ಲೇಖದ ಅಗತ್ಯವಿದೆ ] ಅವರು ಚಿಕ್ಕ ವಯಸ್ಸಿನಲ್ಲೇ ಕೇರಳ ಕಲಾಮಂಡಲಂನ ಅರೆಕಾಲಿಕ ವಿದ್ಯಾರ್ಥಿಯಾಗಿ, ಕಲಾಮಂಡಲಂ ಅಚ್ಯುತ ವಾರಿಯರ್ ಮತ್ತು ಕಲಾಮಂಡಲಂ ಕೃಷ್ಣನ್‌ಕುಟ್ಟಿ ವಾರಿಯರ್ ಅವರ ಮಾರ್ಗದರ್ಶನದಲ್ಲಿ ನೃತ್ಯವನ್ನು ಕಲಿಯಲು ಪ್ರಾರಂಭಿಸಿದರು, ಅದೇ ಸಮಯದಲ್ಲಿ ಶೋರ್ನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಶೈಕ್ಷಣಿಕ ಜೀವನವನ್ನು ಆರಂಭಿಸಿದರು. ಅಲ್ಲಿ ೮ನೇ ತರಗತಿಯನ್ನು ಮುಗಿಸಿದ ನಂತರ ಪೂರ್ಣಾವಧಿ ವಿದ್ಯಾರ್ಥಿನಿಯಾಗಿ ಕಲಾಮಂಡಲಂ ಗ್ರಾಮಕ್ಕೆ ಸೇರಿದಳು. ಆಗ ಅವರು ಕಲಾಮಂಡಲಂ ಸ್ಟಾಲ್ವಾರ್ಟ್ ಮತ್ತು ತೊಟ್ಟಸ್ಸೆರಿ ಚಿನ್ನಮ್ಮು ಅಮ್ಮ ಅವರ ಅಡಿಯಲ್ಲಿ ಮೋಹಿನಿಯಾಟ್ಟಂ ಕಲಿಯಲು ಪ್ರಾರಂಭಿಸಿದರು, ಕಲಾಮಂಡಲಂನಲ್ಲಿ ಮೊದಲ ದೀರ್ಘಕಾಲ ನೃತ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು, ಆದರೂ ಅಧ್ಯಯನದ ಮುಖ್ಯ ಎಂದು ಭರತನಾಟ್ಯಕ್ಕೆ ಹೆಚ್ಚಿನ ಮಹತ್ವ ನೀಡಿದರು. ಚಿನ್ನಮ್ಮು ಅಮ್ಮ ಅವರು ಯುವ ಸತ್ಯಭಾಮಾ ಅವರಿಗೆ ಚೆಂಚುರುಟ್ಟಿ ಮತ್ತು ತೋಡಿಯಲ್ಲಿ ಅಡವು (ಮೂಲ ಚಲನೆಗಳು), ಚೋಲ್ಕೆಟ್ಟುಗಳು, ಜಾತಿಸ್ವರಂಗಳು (ಉಚ್ಚಾರಾಂಶಗಳು ಮತ್ತು ಸಂಗೀತದ ಟಿಪ್ಪಣಿಗಳು ) ಮುಂತಾದ ವಿವಿಧ ನೃತ್ಯ ತಂತ್ರಗಳನ್ನು ಪರಿಚಯಿಸಿದರು. ಶೀಘ್ರದಲ್ಲೇ, ಯುವತಿಯು ಮಲಯಾಳಂನ ಪ್ರಸಿದ್ಧ ಕವಿ, ಕೇರಳ ಕಲಾಮಂಡಲಂನ ಸಂಸ್ಥಾಪಕ ವಲ್ಲತೋಳ್ ನಾರಾಯಣ ಮೆನನ್ ಅವರ ಗಮನಕ್ಕೆ ಬಂದಳು, ಅವರು ಶಾಲಾ ಶುಲ್ಕವನ್ನು ಪಾವತಿಸಲು ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಯುವ ಮಹತ್ವಾಕಾಂಕ್ಷಿ ಕೌಶಲ್ಯಗಳನ್ನು ಪೋಷಿಸಿದರು. ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಸಮ್ಮುಖದಲ್ಲಿ ೧೯೫೫ ರಲ್ಲಿ ಕಲಾಮಂಡಲದ ರಜತ ಮಹೋತ್ಸವದ ಸಂದರ್ಭದಲ್ಲಿ ಸತ್ಯಭಾಮಾ ಅವರು ಪ್ರಮುಖ ವೇದಿಕೆಯ ಮೇಲೆ ಪಾದಾರ್ಪಣೆ ಮಾಡಿದರು.[ ಉಲ್ಲೇಖದ ಅಗತ್ಯವಿದೆ ] ಸಂಸ್ಥೆಯಲ್ಲಿನ ಮುಂದಿನ ಆರು ವರ್ಷಗಳ ಅಧ್ಯಯನವು ಸಿಂಗಾಪುರ ಮತ್ತು ಮಲೇಷ್ಯಾ ಪ್ರವಾಸದ ಕಲಾಮಂಡಲಂ ತಂಡದ ಭಾಗವಾಗಿ ಆಕೆಗೆ ಭೇಟಿ ನೀಡುವ ಅವಕಾಶವನ್ನು ನೀಡಿತು, ಅಲ್ಲಿ ಅವರು ಭರತನಾಟ್ಯ, ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ ಪ್ರದರ್ಶಿಸಿದರು. ಕೋರ್ಸ್ ಮುಗಿದ ನಂತರ, ಅವರು ಕಿರಿಯ ಶಿಕ್ಷಕಿಯಾಗಿ ಕಲಾಮಂಡಲಕ್ಕೆ ಸೇರಿದರು. ಅವರು ಶಾಸ್ತ್ರೀಯ ನೃತ್ಯದ ಡೊಯೆನ್ ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ ಅವರಿಂದ ತರಬೇತಿಯನ್ನು ಪಡೆದರು. ಈ ಸಮಯದಲ್ಲಿ, ಸತ್ಯಭಾಮಾ ಕಥಕ್ಕಳಿ ವ್ಯಾಕರಣದ ಮಾಸ್ಟರ್ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಪ್ರಸಿದ್ಧ ಕಥಕ್ಕಳಿ ಗುರು ಕಲಾಮಂಡಲಂ ಪದ್ಮನಾಭನ್ ನಾಯರ್ ಅವರನ್ನು ಭೇಟಿಯಾದರು. ಅವರ ಪರಿಚಯವು ಶೀಘ್ರದಲ್ಲೇ ಪ್ರಣಯ ತಿರುವು ಪಡೆದುಕೊಂಡಿತು, ಇದು ಅವರ ಮದುವೆಗೆ ಕಾರಣವಾಯಿತು. ಸತ್ಯಭಾಮಾ ಮತ್ತು ಪದ್ಮನಾಭನ್ ನಾಯರ್ ಅವರ ಮರಣದ ಸಮಯದಲ್ಲಿ, ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದರು, ಅದರಲ್ಲಿ ಇಬ್ಬರು ಮೋಹಿನಿಯಾಟ್ಟಂನಲ್ಲಿ ಸಕ್ರಿಯರಾಗಿದ್ದಾರೆ. ಅವರು ೭೭ ನೇ ವಯಸ್ಸಿನಲ್ಲಿ ೧೩ ಸೆಪ್ಟೆಂಬರ್ ೨೦೧೫ ರಂದು ಪಾಲಕ್ಕಾಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಲಾಮಂಡಲಂ ಸತ್ಯಭಾಮಾ ಅವರು ಕೇರಳ ಕಲಾಮಂಡಲಂನ ಮೊದಲ ಮಹಿಳಾ ವೈಸ್ ಪ್ರಿನ್ಸಿಪಾಲ್ ಆಗಿದ್ದರು ಮತ್ತು ನಂತರ ಅವರು ೧೯೯೨ ರಲ್ಲಿ ನಿವೃತ್ತರಾಗುವವರೆಗೂ ಅದರ ಪ್ರಾಂಶುಪಾಲರಾದರು ಅವರು ವಾರ್ಷಿಕ ಕಲಾಮಂಡಲಂ ಫೆಲೋಶಿಪ್‌ಗಳನ್ನು ನಿರ್ಧರಿಸಲು ಆಯ್ಕೆ ಸಮಿತಿಯಲ್ಲಿ ಕುಳಿತುಕೊಂಡರು ಅವರು ಕೇರಳ ಕಲಾಮಂಡಲದ ಡೀನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಪರಂಪರೆ ಕಲಾಮಂಡಲಂ ಸತ್ಯಭಾಮಾ ಅವರು ತಮ್ಮ ೨೪ ನೇ ವಯಸ್ಸಿನಲ್ಲಿ ಶಿಕ್ಷಕ ಮತ್ತು ನೃತ್ಯ ಸಂಯೋಜಕರಾಗಿ ಕರ್ತವ್ಯಕ್ಕೆ ಹಾಜರಾಗಲು ಸದ್ದಿಲ್ಲದೆ ಪ್ರದರ್ಶನದಿಂದ ನಿವೃತ್ತರಾದರು. ಅದರಂತೆ, ವೇದಿಕೆಯ ಪ್ರದರ್ಶನಗಳಿಗಿಂತ ನೃತ್ಯ ಪ್ರಕಾರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವಳು ಹೆಚ್ಚು ಗೌರವಿಸಲ್ಪಟ್ಟಿದ್ದಾಳೆ. ಬಾಹ್ಯ ಪ್ರಭಾವಗಳನ್ನು ಕಿತ್ತೊಗೆದು ನೃತ್ಯ ಪ್ರಕಾರವನ್ನು ಶುದ್ಧೀಕರಿಸಿದ ಕೀರ್ತಿ ಸತ್ಯಭಾಮಾ ಅವರಿಗೆ ಸಲ್ಲುತ್ತದೆ. ಅಭಿನಯದ ಭಾವನಾತ್ಮಕ ಅಂಶವು ಲಾಸ್ಯಂಗೆ ಕಟ್ಟುನಿಟ್ಟಾಗಿ ಅಂಟಿಕೊಳ್ಳುವಂತೆ ಅವರು ಕಾರ್ಯಕ್ಷಮತೆಯ ತಂತ್ರಗಳನ್ನು ಮಾರ್ಪಡಿಸಿದರು. ಆಕೆ ಕೇರಳ ಕಲಾಮಂಡಲಂನಲ್ಲಿ ಮೋಹಿನಿಯಾಟ್ಟಂ ಪಠ್ಯಕ್ರಮವನ್ನು ಕ್ರಾಂತಿಗೊಳಿಸಿದಳು ಎಂದು ಹೇಳಲಾಗುತ್ತದೆ, ಇದು ಕಲಾಮಂಡಲಂ ಶೈಲಿಯ ಮೋಹಿನಿಯಾಟ್ಟಂನ ವಿಕಾಸಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ. ಮುದ್ರೆಗಳು (ಅಂಗೈ ಮತ್ತು ಬೆರಳಿನ ಸನ್ನೆಗಳು), ಭಂಗಿಗಳು ಮತ್ತು ಹೆಜ್ಜೆಗಳ ಮೂಲಕ ಉತ್ಪ್ರೇಕ್ಷಿತ ದೇಹ ಚಲನಶಾಸ್ತ್ರದ ಮೂಲಕ ನಾಟಕವನ್ನು ಪ್ರಚೋದಿಸುವ ಮೂಲಕ ನೃತ್ಯ ರೂಪದ ಪ್ರಸ್ತುತಿಗೆ ಹೆಚ್ಚು ಮಸಾಲೆ ಸೇರಿಸಲು ಅವರು ಪ್ರಯತ್ನಿಸಿದರು, ಇದು ಕೆಲವೊಮ್ಮೆ ಟೀಕೆಗಳನ್ನು ಸಹ ಆಕರ್ಷಿಸಿತು. ಸತ್ಯಭಾಮಾ ಅವರ ಮತ್ತೊಂದು ಪ್ರಮುಖ ಕೊಡುಗೆ ಎಂದರೆ ಮೋಹಿನಿಯಾಟ್ಟಂ ವೇಷಭೂಷಣಗಳಲ್ಲಿ ಅವರು ತಂದ ಬದಲಾವಣೆಗಳು. ಅವರು ರಚಿಸಿದ ವಿನ್ಯಾಸಗಳು ಬಣ್ಣ, ಮಾದರಿ ಮತ್ತು ಪರಿಕರಗಳಲ್ಲಿ ಕೇರಳ ಸಂಪ್ರದಾಯಗಳನ್ನು ಅನುಸರಿಸುತ್ತವೆ ಮತ್ತು ಕಲಾಮಂಡಲಂ ಶೈಲಿಯ ಸಹಿಯಾಗಿವೆ. ರಾಜಾ ರವಿವರ್ಮ ಪೇಂಟಿಂಗ್‌ಗಳಿಂದ ಅಸ್ಪಷ್ಟವಾಗಿ ಅಳವಡಿಸಲಾಗಿರುವ ನರ್ತಕಿ ಕೂದಲಿನ ಶೈಲಿಯನ್ನು ಅವಳು ಬದಲಾಯಿಸಿದಳು. ಅವರು ೩೫ ಮೋಹಿನಿಯಾಟ್ಟಂ ಸಂಯೋಜನೆಗಳ ಶ್ರೀಮಂತ ಪರಂಪರೆಯನ್ನು ತೊರೆದರು, ಅದರ ವಿವರಗಳನ್ನು ಅವರ ಪುಸ್ತಕ ಮೋಹಿನಿಯಾಟ್ಟಂ - ಇತಿಹಾಸ, ತಂತ್ರಗಳು ಮತ್ತು ಪ್ರದರ್ಶನದಲ್ಲಿ ವಿವರಿಸಲಾಗಿದೆ. ಪ್ರಶಸ್ತಿಗಳು ಮತ್ತು ಮನ್ನಣೆಗಳು ಸತ್ಯಭಾಮಾ ಅವರಿಗೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ನೀಡಿ ಗೌರವಿಸಲಾಯಿತು. ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಹೊರತುಪಡಿಸಿ, ಅವರು ೨೦೦೫ ರಲ್ಲಿ ಕೇರಳ ಸರ್ಕಾರದ ನೃತ್ಯ ನಾಟ್ಯ ಪುರಸ್ಕಾರವನ್ನು ಮತ್ತು ಕೊಲ್ಲಂ ಕಥಕ್ಕಳಿ ಕ್ಲಬ್ ಮತ್ತು ಟ್ರೂಪ್‌ನಿಂದ ೨೦೦೬ ರಲ್ಲಿ ಮೊದಲ ಸ್ವಾತಿ ತಿರುನಾಳ್ ಪುರಸ್ಕಾರವನ್ನು ಪಡೆದರು ಸತ್ಯಭಾಮಾ ಅವರಿಗೆ ನೀಡಲಾದ ಕೆಲವು ಗಮನಾರ್ಹ ಪ್ರಶಸ್ತಿಗಳು: ಪದ್ಮಶ್ರೀ - ೨೦೧೪ ಕೇರಳ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ - ೨೦೦೭ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ - ೧೯೭೬ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ನವದೆಹಲಿ - ೧೯೯೪ ಕೇರಳ ಸರ್ಕಾರದ ನೃತ್ಯ ನಾಟ್ಯ ಪುರಸ್ಕಾರ - ೨೦೦೫ ಕೇರಳ ಕಲಾಮಂಡಲಂ ಪ್ರಶಸ್ತಿ - ೧೯೮೮ ಸ್ವಾತಿ ತಿರುನಾಳ್ ಪುರಸ್ಕಾರಮ್ ಷಡ್ಕಲಾ ಗೋವಿಂದ ಮಾರಾರ್ ಪ್ರಶಸ್ತಿ - ೨೦೧೩ ಕೇರಳ ಕಲಾಮಂಡಲಂ ಸತ್ಯಭಾಮಾ ಅವರ ಗೌರವಾರ್ಥವಾಗಿ ಪ್ರಶಸ್ತಿಯನ್ನು ಸ್ಥಾಪಿಸಿದೆ, ಇದನ್ನು ಮೋಹಿನಿಯಾಟ್ಟಂನ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ವಿದ್ಯಾರ್ಥಿವೇತನದ ರೂಪದಲ್ಲಿ ವಿತರಿಸಲಾಗುತ್ತದೆ. ಪ್ರಕಟಣೆಗಳು ಸತ್ಯಭಾಮಾ ಅವರು ಮೋಹಿನಿಯಾಟ್ಟಂ ಕುರಿತು ಮಲಯಾಳಂನಲ್ಲಿ ಒಂದು ಗ್ರಂಥವನ್ನು ಪ್ರಕಟಿಸಿದ್ದಾರೆ, ಮೋಹಿನಿಯಾಟ್ಟಂ - ಇತಿಹಾಸ, ತಂತ್ರಗಳು ಮತ್ತು ಪ್ರದರ್ಶನ ( Malayalam ) ಇದು ವಿಷಯದ ಬಗ್ಗೆ ಉಲ್ಲೇಖಿತ ಪುಸ್ತಕವೆಂದು ಪರಿಗಣಿಸಲಾಗಿದೆ ಮತ್ತು ಬರಹಗಾರರಿಂದ ೧೧ ಅಧ್ಯಾಯಗಳು ಮತ್ತು ೩೫ ಸಂಯೋಜನೆಗಳನ್ನು ಒಳಗೊಂಡಿದೆ. ಸಹ ನೋಡಿ   ಕಲಾಮಂಡಲಂ ಪದ್ಮನಾಭನ್ ನಾಯರ್ ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ ಮೋಹಿನಿಯಾಟ್ಟಂ ಉಲ್ಲೇಖಗಳು ಬಾಹ್ಯ ಕೊಂಡಿಗಳು ಕೇರಳ ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿನ ವಿವರ Narthaki.com ನಲ್ಲಿ ಉಲ್ಲೇಖ ಸತ್ಯಭಾಮಾ ಪ್ರಶಸ್ತಿ ಪುರಸ್ಕೃತರು ಸತ್ಯಭಾಮೆಗೆ ಸನ್ಮಾನ ೧ ಸತ್ಯಭಾಮೆಗೆ ಸನ್ಮಾನ ೨
152559
https://kn.wikipedia.org/wiki/%E0%B2%AE%E0%B3%88%E0%B2%B2%E0%B2%BE%E0%B2%B0%E0%B2%A6%20%E0%B2%AC%E0%B2%B8%E0%B2%B5%E0%B2%B2%E0%B2%BF%E0%B2%82%E0%B2%97%20%E0%B2%B6%E0%B2%B0%E0%B2%A3%E0%B2%B0%20%E0%B2%97%E0%B3%81%E0%B2%B0%E0%B3%81%E0%B2%95%E0%B2%B0%E0%B2%A3%20%E0%B2%A4%E0%B3%8D%E0%B2%B0%E0%B2%BF%E0%B2%B5%E0%B2%BF%E0%B2%A7%E0%B2%BF
ಮೈಲಾರದ ಬಸವಲಿಂಗ ಶರಣರ ಗುರುಕರಣ ತ್ರಿವಿಧಿ
ಮೈಲಾರದ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ = ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಬಣಜಿಗ ಸಮುದಾಯದವರು. ವ್ಯಾಪಾರ ಇವರ ವೃತ್ತಿ. ಮೈಲಾರದಿಂದ ಸುಮಾರು ೮ ಕಿ.ಲೋ ಮೀಟರ ದೂರದಲ್ಲಿರುವ ಚನ್ನವೀರಸ್ವಾಮಿಗಳ ಶಿ‌‌‌‌‌‍‍‍‍‍‍‌‍‍‍‍ಶ್ಯರಾಗಿದ್ದರು. ಇವರ ಕೃತಿಗಳು ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‍‍‍‍‍‍‍‍‍‍‍‍‍‍‍‍‍‍‍‍‍‌ಶಟ್ ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ್ ಗುರುಕರುಣ ತ್ರಿವಿಧಿ ಶಿವಾನುಭವ ದರ್ಪಣ ಲಿಂಗಪೂಜಾ ವಿಧಾನಗಳು ಭಕ್ತಿ ಬಿನ್ನಹ ದಂಡಕಗಳು ಐದು ಕೃತಿಗಳ್ಳಲ್ಲಿ ಗುರುಕರುಣ ತ್ರಿವಿಧಿ ಮುಖ್ಯವಾದ ಕೃತಿ. ಗುರು ಚನ್ನವೀರಸ್ವಾವಿಗಳು ಕೋಪದಿಂದ ನೀನು ಬಸಪ್ಪ ಅಲ್ಲ ಮುಸಪ್ಪ ಎಂದು ಬೈದ ಸಂದರ್ಭದಲ್ಲಿ ಒಂದು ಕಾಲಿನಲ್ಲಿ ನಿಂತು ೩೩೩ ತ್ರಿವಿದ್ಧಿಗಳನ್ನು ಹೇಳಿದರು. ತ್ರಿವಿಧಿ ಎಂದರೆ ಮೂರು ಸಾಲಿನ ಪದ್ಯ. ಮೊದಲಿನ ಎರಡು ಸಾಲುಗಳು ಮುಖ್ಯ ತತ್ವ ಒಳಗೊಂಡಿರುತ್ತವೆ. ಇದರಲ್ಲಿ ಅ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಶ್ಟಾವರಣ, ಪಂಚಾಚಾರ, ಶಟ್ ಸ್ಥಲ ತತ್ವಗಳ ವಿಚಾರ ಮುಖ್ಯವಾಗಿದೆ. ಶ್ರೀ ಗುರು ಪ್ರಾರ್ಥನೆ ಶ್ರೀ ಗುರುವೆ ಸತ್ಕ್ರಿಯೆಯ | ಆಗರವೆ ಸುಜ಼್ಜಾನ ಸಾಗರವೆ ಎನ್ನ ಮತಿಗೆ ಮಂಗಳವಿತ್ತು ರಾಗದಿಂ ಬೇಗ ಕೃಪೇಯಾಗು ||೧|| ಸದ್ಗುರುವಿನ ಸ್ವರೂಪ ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ ಹರವೆ ನಿಜಭಕ್ತಿ-ಜ಼್ಜಾನವೈರಾಗ್ಯಮಂ ದಿರವೆ ಮದ್ಗುರುವೆ ಕೃಪೆಯಾಗು ||೨|| ದೇಶಿಕನೆ ಅನುಭವೋ|ಲ್ಲಾಸಕನೆ ಸಂಕಲ್ಪ ನಾಶಕನೆ 'ಯಾಣ' ವಾದಿ ತ್ರೈಮಲದೊಳ್ನಿ ರಾಶಕನೆ ಎನಗೆ ಕೃಪೆಯಾಗು ||೩|| ಕಾರ್ಯಕಾರಣ್ ಭಕ್ತಿ| ತುರ್ಯತಾಮಸದ ಚಿ ತ್ಸೂರ್ಯ ಎಡರಿಂಗೆ-ಧೈರ್ಯವಾಗಿಹ ಗುರು ವರ್ಯ ನೀನೆನಗೆ ಕೃಪೆಯಾಗು ||೪||
152560
https://kn.wikipedia.org/wiki/%E0%B2%B5%E0%B2%BF.%E0%B2%85%E0%B2%A8%E0%B3%81%E0%B2%B8%E0%B3%82%E0%B2%AF%E0%B2%BE%20%E0%B2%AC%E0%B2%BE%E0%B2%AF%E0%B2%BF
ವಿ.ಅನುಸೂಯಾ ಬಾಯಿ
Articles with hCards ವಿ. ಅನುಸೂಯಾ ಬಾಯಿ (ಜನನ ೨೩ ಆಗಸ್ಟ್ ೧೯೫೩) ಒಬ್ಬ ಭಾರತೀಯ ಮಾಜಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ಅವರು ೧೯೭೫ ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ೧೯೭೬ ರಲ್ಲಿ ಪಾಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು ಅವರು ಭಾರತದ ಚೆನ್ನೈನಲ್ಲಿ ಜನಿಸಿದರು. ಅವರು ೧೯೭೩ ರ ಸಮ್ಮರ್ ಯೂನಿವರ್ಸಿಯೇಡ್ ಮಾಸ್ಕೋದಲ್ಲಿ ಭಾರತವನ್ನು ಪ್ರತಿನಿಧಿಸಿದರು, ಸ್ಪ್ರಿಂಟಿಂಗ್ ಈವೆಂಟ್‌ಗಳು ಮತ್ತು ಡಿಸ್ಕಸ್ ಥ್ರೋನಲ್ಲಿ ಸ್ಪರ್ಧಿಸಿದರು. ಅವರು ಆಗಸ್ಟ್, ೨೦೧೩ ರಲ್ಲಿ ಚೆನ್ನೈನ ದಕ್ಷಿಣ ರೈಲ್ವೆಯ ಡೆಪ್ಯುಟಿ ಚೀಫ್ ಪರ್ಸನಲ್ ಆಫೀಸರ್ (ವೆಲ್ಫೇರ್) ಆಗಿ ನಿವೃತ್ತರಾದರು ೨೦೧೩ ರಲ್ಲಿ ಪಶ್ಚಿಮ ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಏಷ್ಯಾವನ್ನು ಪ್ರತಿನಿಧಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳನ್ನು ೧೯೮೩ರವರೆಗೆ ಉದ್ಘಾಟಿಸಲಾಗಿಲ್ಲ; ೧೯೭೭ ರ IAAF ವಿಶ್ವಕಪ್‌ನಲ್ಲಿ ಬಾಯಿ ಸ್ಪರ್ಧಿಸಿದ ಘಟನೆ, ಅವರು ಫಲಿತಾಂಶಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕ್ರೀಡೆಗಾಗಿ ಭಾರತದ ಅತ್ಯುನ್ನತ ರಾಷ್ಟ್ರೀಯ ಗೌರವವಾದ ಅರ್ಜುನ ಪ್ರಶಸ್ತಿಯನ್ನು ಪಡೆದ ತಮಿಳುನಾಡಿನ ಮೊದಲ ಮಹಿಳೆ. ಉಲ್ಲೇಖಗಳು ಜೀವಂತ ವ್ಯಕ್ತಿಗಳು
152562
https://kn.wikipedia.org/wiki/%E0%B2%89%E0%B2%AE%E0%B2%BE%20%E0%B2%B0%E0%B2%BE%E0%B2%AE%E0%B2%B0%E0%B2%BE%E0%B2%B5%E0%B3%8D
ಉಮಾ ರಾಮರಾವ್
Articles with hCards ಕೆ. ಉಮಾ ರಾಮ ರಾವ್ ( Telugu ಉಮಾ ಮಹೇಶ್ವರಿ ಅವರು ೪ ಜುಲೈ ೧೯೩೮ - ರಂದು ಜನಿಸಿದರು) (೨೭ ಆಗಸ್ಟ ೨೦೧೬ ರಂದು ಮರಣ) ಇವರು ಭಾರತೀಯ ಕೂಚಿಪುಡಿ ನೃತ್ಯಗಾರ್ತಿ, ನೃತ್ಯ ಸಂಯೋಜಕಿ, ಸಂಶೋಧನಾ ವಿದ್ವಾಂಸೆ, ಲೇಖಕಿ ಮತ್ತು ನೃತ್ಯ ಶಿಕ್ಷಕಿ. ಇವರು ಭಾರತದ ಹೈದರಾಬಾದ್‌ನಲ್ಲಿ ೧೯೮೫ ರಲ್ಲಿ ಸ್ಥಾಪಿಸಲಾದ ಲಾಸ್ಯ ಪ್ರಿಯಾ ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕ ಮತ್ತು ನಿರ್ದೇಶಕರಾಗಿದ್ದರು. ೨೦೦೩ ರಲ್ಲಿ, ಭಾರತದ ರಾಷ್ಟ್ರೀಯ ಸಂಗೀತ ನೃತ್ಯ ಮತ್ತು ನಾಟಕ ಅಕಾಡೆಮಿಯಿಂದ ಕೊಡಲ್ಪಡುವ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಕೂಚಿಪುಡಿಯ ಪ್ರಾವೀಣ್ಯತೆಗಾಗಿ ನೀಡಲಾಯಿತು. ಇವರು ಸಂಗೀತ ನಾಟಕ ಅಕಾಡೆಮಿಯ ಮೂಲಕ ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯು ನೀಡುವ ರಾಷ್ಟ್ರೀಯ ಹಿರಿಯ ಫೆಲೋಶಿಪ್ ಅನ್ನು ಪಡೆದಿದ್ದಾರೆ. ಆರಂಭಿಕ ಜೀವನ ಮತ್ತು ಶಿಕ್ಷಣ ಉಮಾ ರಾಮ ರಾವ್ ಅವರು ೪ ಜುಲೈ ೧೯೩೮ ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನ 'ವಡ್ಡಾಡಿ' ಕುಟುಂಬದಲ್ಲಿ ಡಾ. ವಿ.ವಿ.ಕೃಷ್ಣ ರಾವ್ ಮತ್ತು ಸೌಭಾಗ್ಯಮ್ಮರಿಗೆ "ಉಮಾ ಮಹೇಶ್ವರಿ" ಆಗಿ ಜನಿಸಿದರು. ಸಾಹಿತ್ಯ, ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಪ್ರತಿಷ್ಠಿತ ವಿದ್ವಾಂಸರ ಹಿನ್ನೆಲೆಯನ್ನು ಹೊಂದಿರುವ ಅವರ ಕುಟುಂಬದಿಂದ ಉತ್ತೇಜಿತರಾದ ಅವರು ಆಚಾರ್ಯ ಪಿ.ವಿ.ನರಸಿಂಹರಾವ್, ಪದ್ಮಶ್ರೀ ಡಾ. ನಟರಾಜ ರಾಮಕೃಷ್ಣ, ಬ್ರಹ್ಮಶ್ರೀ ಮುಂತಾದ ಗುರುಗಳಿಂದ ೫ ವರ್ಷ ವಯಸ್ಸಿನಿಂದಲೇ ನೃತ್ಯ ತರಬೇತಿಯನ್ನು ಪ್ರಾರಂಭಿಸಿದರು. ವೇದಾಂತ ಲಕ್ಷ್ಮೀ ನಾರಾಯಣ ಶಾಸ್ತ್ರಿ, ಗುರು ಪಕ್ಕಿರಿಸ್ವಾಮಿ ಪಿಳ್ಳೈ ಮತ್ತು ಗುರು ಸಿಆರ್ ಆಚಾರ್ಯ ಕೂಚಿಪುಡಿ, ಭರತ ನಾಟ್ಯ ಮತ್ತು ಧಾರ್ಮಿಕ ನೃತ್ಯ ಸಂಪ್ರದಾಯಗಳಲ್ಲಿ. ಈ ಪ್ರಾಚೀನ ಸಾಂಪ್ರದಾಯಿಕ ಕಲಾ ಪ್ರಕಾರಗಳ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳಲ್ಲಿ ಅವಳು ಪ್ರವೀಣಳಾದಳು. ಆಕೆಯ ಆರಂಭಿಕ ವರ್ಷಗಳಲ್ಲಿ, ಅವರ ಸಹೋದರಿ ಸುಮತಿ ಕೌಶಲ್ ಜೊತೆಗೆ, ತಮ್ಮ ಗುರುಗಳ ವೈಯಕ್ತಿಕ ಮಾರ್ಗದರ್ಶನದಲ್ಲಿ ಹಲವಾರು ಸ್ಥಳಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ ೧೯೫೩ ಮತ್ತು ೧೯೫೫ ರಲ್ಲಿ, ಅವರು ಆಗಿನ ಮದ್ರಾಸ್ ಸರ್ಕಾರವು ನಡೆಸಿದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ನಂತರ ತನ್ನ ಗುರುಗಳ ಆಶೀರ್ವಾದದಿಂದ ಮುಖ್ಯವಾಗಿ ಡಾ.ನಟರಾಜ ರಾಮ ಕೃಷ್ಣ. ಈ ಸಂಪ್ರದಾಯವನ್ನು ಯುವ ಪೀಳಿಗೆಗೆ ವರ್ಗಾಯಿಸಲು ಅವರು ಬೋಧನೆಯನ್ನು ತೆಗೆದುಕೊಂಡರು. ಅಶ್ಟೇ ಅಲ್ಲದೇ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದರು. ಪ್ರದರ್ಶನಗಳು ಉಮಾ ಅವರು ಹಲವಾರು ಏಕವ್ಯಕ್ತಿ ವಸ್ತುಗಳು, ನೃತ್ಯ ವೈಶಿಷ್ಟ್ಯಗಳು, ನೃತ್ಯ ನಾಟಕಗಳು ಮತ್ತು ಸಾಂಪ್ರದಾಯಿಕ ಯಕ್ಷಗಾನಗಳನ್ನು ನೃತ್ಯ ಸಂಯೋಜನೆ ಮಾಡಿದರು, ಇದು ಹಿಂದಿನ ವರ್ಷಗಳ ಶ್ರೇಷ್ಠ ಸಂಯೋಜಕರು ಮತ್ತು ಇಂದಿನ ಸಮಕಾಲೀನ ಬರಹಗಾರರ ಸಾಹಿತ್ಯವನ್ನು ಆಧರಿಸಿದೆ, ಇದು ಅವರಿಗೆ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಮೂಲ ಸಾಂಪ್ರದಾಯಿಕ ರಚನೆಯಿಂದ ತಮ್ಮ ಸೌಂದರ್ಯ, ತಾತ್ವಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ವಿಮುಖವಾಗದೆ, ಹಳೆಯ ಸಾಂಪ್ರದಾಯಿಕ ಸಾಹಿತ್ಯ ರತ್ನಗಳನ್ನು ಸುಣ್ಣದ ಬೆಳಕಿಗೆ ತರುವುದು ಮತ್ತು ಹೊಸ ದೃಷ್ಟಿಕೋನವನ್ನು ನೀಡುವುದು ಅವರ ಧ್ಯೇಯವಾಕ್ಯವಾಗಿದೆ. ಕೆಲವು ಸಾಂಪ್ರದಾಯಿಕ ನಾಟಕಗಳಾದ ಶ್ರೀ ತ್ಯಾಗರಾಜರ ನೌಕ ಚರಿತ್ರೆ, ಪ್ರಹ್ಲಾದ ಭಕ್ತಿ ವಿಜಯಂ, ರಾಜ ಶಹಾಜಿಯ ಶಂಕರ ಮತ್ತು ವಿಷ್ಣು ಪಲ್ಲಕಿ ಸೇವಾ ಪ್ರಬಂಧಗಳು, ವಿಘ್ನೇಶ್ವರ ಕಲ್ಯಾಣ, ನಾರಾಯಣ ತೀರ್ಥರ ಸಾಧ್ವಿ ರುಕ್ಮಿಣಿ, ಮಾತೃಭೂತಯ್ಯನ ಪಾರಿಜಾತಾಪಹರಣಂ, ಕಾಕುತೂರಿಯ ವಿಶ್ವಾತ್ಯಂ ಪದ್ಮಾವತಿಯ ನೃತ್ಯ, ಶಿವನ ಕುತುರಿ ಮಂಡನೆಯ ಪದ್ಮಾವತಿ ಮುಂತಾದವುಗಳನ್ನು ಉಲ್ಲೇಖಿಸಬಹುದು., ಪದ್ಮಭೂಷಣ ಡಾ. ಸಿ.ನಾರಾಯಣ ರೆಡ್ಡಿ ಅವರ ಸ್ವರ ರಾಗ ನರ್ತನಂ, ತೆಲುಗು ವೆಲುಗುಲು, ಮೇಧಾ, ಕಂಪ್ಯೂಟರ್‌ನಲ್ಲಿ ಮೇಧಾ ವಿಕಾಸ್, ಇದು ಇವರ ಬಹುಮುಖ ನೃತ್ಯ ಪ್ರತಿಭೆ ಮತ್ತು ವಿಷಯದಲ್ಲಿ ಅವರ ಪಾಂಡಿತ್ಯಪೂರ್ಣ ಜ್ಞಾನವನ್ನು ಪ್ರದರ್ಶಿಸಿತು. ಶಿಕ್ಷಕ ವೃತ್ತಿ ಉಮಾ ರಾಮ ರಾವ್ ಹೈದರಾಬಾದ್‌ನ ಶ್ರೀ ತ್ಯಾಗರಾಜರ ಸರ್ಕಾರಿ ಸಂಗೀತ ಮತ್ತು ನೃತ್ಯ ಕಾಲೇಜಿನಲ್ಲಿ 1969 ರಿಂದ 1988 ರವರೆಗೆ ಹಿರಿಯ ನೃತ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು ಮತ್ತು ವಿದ್ಯಾರ್ಥಿಗಳಿಗೆ ಭರತ ನಾಟ್ಯದಲ್ಲಿ ಪ್ರಮಾಣಪತ್ರ, ಡಿಪ್ಲೊಮಾ ಮತ್ತು ಪದವಿ ಕೋರ್ಸ್‌ಗಳಲ್ಲಿ ತರಬೇತಿ ನೀಡಿದರು. ಪರಿಣಾಮವಾಗಿ, ಅವರು ಹೈದರಾಬಾದ್‌ನ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯಲ್ಲಿ ನೃತ್ಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ವಹಿಸಿಕೊಂಡರು. ಕಲಾ ವಿದ್ಯಾರ್ಥಿಗಳಿಗೆ ನೃತ್ಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಇತರ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲು, ಅವರು ' ಯಕ್ಷಗಾನ ರಾಜ ಶಹಾಜಿ -೧೧ ರ ಪ್ರಬಂಧಗಳು' - (ಕ್ರಿ.ಶ. ೧೬೮೪ ರಿಂದ ೧೭೧೨ ರವರೆಗೆ ತಂಜಾವೂರನ್ನು ಆಳಿದ ಮತ್ತು 20 ಯಕ್ಷಗಾನಗಳನ್ನು ರಚಿಸಿದ ಮಹಾರಾಷ್ಟ್ರದ) ಕುರಿತು ತಮ್ಮ ಪ್ರಬಂಧವನ್ನು ಸಲ್ಲಿಸಿದ್ದರು. ತೆಲುಗು ಭಾಷೆಯಲ್ಲಿ ನಾಟಕಗಳು ) ತೆಲುಗು ವಿಶ್ವವಿದ್ಯಾಲಯಕ್ಕೆ ಮತ್ತು ೧೯೯೪ ರಲ್ಲಿ ಚಿನ್ನದ ಪದಕದೊಂದಿಗೆ ಪಿಎಚ್‌ಡಿ ಪದವಿಯನ್ನು ಪಡೆದರು. ಅವರ ಕೆಲವು ಪ್ರಸಿದ್ಧ ಶಿಷ್ಯೆಯರೆಂದರೆ, ಡಾ. ಅಲೇಖ್ಯಾ ಪುಂಜಾಲ (ತೆಲುಗು ವಿಶ್ವವಿದ್ಯಾನಿಲಯದಲ್ಲಿ ನೃತ್ಯ ವಿಭಾಗದ ಮುಖ್ಯಸ್ಥರು), ಜ್ಯೋತಿ ಲಕ್ಕರಾಜು, ಮಾಧುರಿ ಕಿಶೋರ್, ಪದ್ಮಾ ಚೆಬ್ರೋಲು, ಪಲ್ಲವಿ ಕುಮಾರ್, ಫಣಿ ಜಯಂತಿ ಸೇನ್ ಇನ್ನೂ ಅನೇಕರು. ಲಾಸ್ಯ ಪ್ರಿಯಾ ಡ್ಯಾನ್ಸ್ ಅಕಾಡೆಮಿ ಅವರು 1985 ರಲ್ಲಿ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಲಾಸ್ಯ ಪ್ರಿಯಾ ಎಂಬ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದರು, ಇದು ಕೂಚಿಪುಡಿ ಮತ್ತು ಭರತ ನಾಟ್ಯ ಶಾಸ್ತ್ರೀಯ ನೃತ್ಯ ಸಂಪ್ರದಾಯಗಳಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳಲ್ಲಿ ತರಬೇತಿಯನ್ನು ನೀಡುತ್ತದೆ ಮತ್ತು ವಿವಿಧ ಹಂತದ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಪರೀಕ್ಷೆಗಳಿಗೆ ಅವರನ್ನು ಸಿದ್ಧಪಡಿಸುತ್ತದೆ. ಲಾಸ್ಯ ಪ್ರಿಯಾ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಸಂಯೋಜಿತ ಅಧ್ಯಯನ ಕೇಂದ್ರವಾಗಿದೆ. ನೃತ್ಯ ಕಲೆಯ ಕಡೆಗೆ ಅವರ ಸಮರ್ಪಣೆ, ಬದ್ಧತೆ ಮತ್ತು ಸೇವೆಯನ್ನು ಗುರುತಿಸಿ ಅವರು ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದರು. ಪ್ರಸ್ತಾಪಿಸಲು ಯೋಗ್ಯವಾಗಿವೆ ಆಂಧ್ರಪ್ರದೇಶ ಸರ್ಕಾರದಿಂದ ಕಲಾ ನೀರಾಜನಂ. ಆಂಧ್ರಪ್ರದೇಶ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ. ಉತ್ತರ ಅಮೆರಿಕಾದ ಸಂತ ಅನ್ನಮಾಚಾರ್ಯ ಯೋಜನೆಯಿಂದ ಶ್ರೀ ಕಲಾ ಪೂರ್ಣಾ (SAPNA). ಹೈದರಾಬಾದ್‌ನ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯದಿಂದ ಪ್ರತಿಭಾ ಪುರಸ್ಕಾರ. ಸಂಗೀತ ನಾಟಕ ಅಕಾಡೆಮಿ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀ ಕಲಾಂ ಅವರ ಕೈಯಿಂದ 26 ಅಕ್ಟೋಬರ್ ೨೦೦೪ ರಂದು ನೀಡಲಾಯಿತು. ಕೂಚಿಪುಡಿ ನೃತ್ಯದ ಕೂಚಿಪುಡಿ ಭರತಂ: ದಕ್ಷಿಣ ಭಾರತೀಯ ಶಾಸ್ತ್ರೀಯ ನೃತ್ಯ ಸಂಪ್ರದಾಯ . ಶ್ರೀ ಸದ್ಗುರು ಪಬ್ಲಿಕೇಷನ್ಸ್, 1992. . ಇತ್ತೀಚೆಗೆ ಡಾ. ಉಮಾ ರಾಮರಾವ್ ಅವರು 24, 25, 26 ಡಿಸೆಂಬರ್ 2010 ರಂದು ಹೈದರಾಬಾದ್‌ನ HICC ಮತ್ತು GMC ಬಾಲಯೋಗಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆದ ಐತಿಹಾಸಿಕ 2 ನೇ ಅಂತರರಾಷ್ಟ್ರೀಯ ಕೂಚಿಪುಡಿ ನೃತ್ಯ ಸಮ್ಮೇಳನದಲ್ಲಿ ಭಾಗವಹಿಸಿದರು, ಅಲ್ಲಿ ಸುಮಾರು 2,800 ಕೂಚಿಪುಡಿ ನೃತ್ಯಗಾರರು, 200+ ನಾಟ್ಯ ಗುರುಗಳು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಅವರ ಉಪಸ್ಥಿತಿಯು ಆಶೀರ್ವಾದದ ಕಾರ್ಯಕ್ರಮವನ್ನು ಮಾಡಿತು, ಅವರು ಸಾಂಸ್ಕೃತಿಕ ನೃತ್ಯ ಕೂಚಿಪುಡಿಯನ್ನು ದೀರ್ಘಕಾಲ ಬದುಕಲು ಅನೇಕ ವಿದ್ಯಾರ್ಥಿಗಳನ್ನು ನೇರವಾಗಿ ಪ್ರೇರೇಪಿಸಿದರು, ಪ್ರೋತ್ಸಾಹಿಸಿದರು ಮತ್ತು ಆಶೀರ್ವದಿಸಿದರು. ಬಾಹ್ಯ ಕೊಂಡಿಗಳು ಲಾಸ್ಯ ಪ್ರಿಯಾ ಡ್ಯಾನ್ಸ್ ಅಕಾಡೆಮಿ, ವೆಬ್‌ಸೈಟ್ ಈಶಾನ ಸಂಹಿತಾ ಸಪ್ನಾ ಸಿಲಿಕಾನ್ ಆಂಧ್ರ ೧೯೩೮ ಜನನ
152563
https://kn.wikipedia.org/wiki/%E0%B2%AA%E0%B2%BF%E0%B2%AF%E0%B3%81%20%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%BE
ಪಿಯು ಚಿತ್ರಾ
ಪಲಕ್ಕಿಝಿಲ್ ಉನ್ನಿಕೃಷ್ಣನ್ ಚಿತ್ರಾ (ಜನನ ೯ ಜೂನ್ ೧೯೯೫) ಒಬ್ಬ ಭಾರತೀಯ ಮಧ್ಯಮ-ದೂರ ಓಟಗಾ‌‌‌‌‌ರ, ಇವರು ೧೫೦೦ಮೀ ದೂರದಲ್ಲಿ ಪರಿಣತಿ ಹೊಂದಿದ್ದಾರೆ. ಅವರು ೨೦೧೬ ರ ದಕ್ಷಿಣ ಏಷ್ಯನ್ ಗೇಮ್ಸ್ ಮತ್ತು ೨೦೧೭ ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕಗಳನ್ನು ಮತ್ತು ೨೦೧೮ ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಅವರು ೨೦೧೯ರ ದೋಹಾ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ ವೈಯಕ್ತಿಕ ಜೀವನ ಮತ್ತು ಹಿನ್ನೆಲೆ ಚಿತ್ರಾ ಅವರು ೯ಜೂನ್ ೧೯೯೫ ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುಂಡೂರಿನಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ದಂಪತಿಗೆ ಜನಿಸಿದರು. ಸಣ್ಣ ಮಾಸಿಕ ಬೆಂಬಲ ರೂ. ೬೦೦ [ಅಂದಾಜು ೮.೧೫ಡಾಲರ್] ಮತ್ತು ರೂ. ಕೇರಳ ಸ್ಪೋರ್ಟ್ಸ್ ಕೌನ್ಸಿಲ್‌ನಿಂದ ದಿನಕ್ಕೆ ೨೫ [ಸರಿಸುಮಾರು ೦.೩೪ ಡಾಲರ್] ಮುಂಡೂರ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ತರಬೇತಿಯನ್ನು ಮುಂದುವರಿಸಲು ಸಹಾಯ ಮಾಡಿತು. ] ಚಿತ್ರಾ ಅವರು ಭಾರತಕ್ಕಾಗಿ ಪದಕಗಳನ್ನು ಗೆದ್ದರು ಮತ್ತು ೨೦೧೩ ರಲ್ಲಿ ಇಟಾವಾ (ಉತ್ತರ ಪ್ರದೇಶ) ಮತ್ತು ಕೇರಳ ರಾಜ್ಯ ಸ್ಕೂಲ್ ಮೀಟ್‌ನಲ್ಲಿ ನಡೆದ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಅತ್ಯುತ್ತಮ ಕ್ರೀಡಾಪಟು ಎಂದು ಆಯ್ಕೆಯಾದಾಗ ಎರಡು ಟಾಟಾ ನ್ಯಾನೋ ಕಾರುಗಳನ್ನು ಗೆದ್ದರು. [ ] ವೃತ್ತಿ ಚಿತ್ರಾ ಅವರು ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಮತ್ತು ೨೦೦೯ ರ ಕೇರಳ ರಾಜ್ಯ ಶಾಲಾ ಅಥ್ಲೆಟಿಕ್ಸ್ ಕೂಟದಲ್ಲಿ ೩,೦೦೦ ಮೀಟರ್ ಸ್ಪರ್ಧೆಯಲ್ಲಿ ಚಿನ್ನ ಮತ್ತು ೧,೫೦೦ ಮೀಟರ್ ಓಟದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಗಮನ ಸೆಳೆದರು. ೨೦೧೧ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ೧,೫೦೦ಮೀ, ೩,೦೦೦ಮೀ, ೫,೦೦೦ಮೀ ಓಟದಲ್ಲಿ ಚಿನ್ನದ ಪದಕ ಹಾಗೂ 3ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಕಿಮೀ ಕ್ರಾಸ್ ಕಂಟ್ರಿ ಓಟ. ೨೦೧೨ರ ಕೇರಳ ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ ತಿರುವನಂತಪುರಂನಲ್ಲಿ ಪುಣೆ ಪ್ರದರ್ಶನವನ್ನು ಚಿತ್ರಾ ಬಹುತೇಕ ಪುನರಾವರ್ತಿಸಿದರು ಮತ್ತು ೧,೫೦೦ಮೀ, ೩,೦೦೦ಮೀ ಮತ್ತು ೫,೦೦೦ಮೀ ಸ್ಪರ್ಧೆಗಳಲ್ಲಿ ವೇದಿಕೆಯ ಮೇಲ್ಭಾಗದಲ್ಲಿ ಮುಗಿಸಿದರು. ೨೦೧೩ರಲ್ಲಿ, ಅವರು ರಾಜ್ಯ, ರಾಷ್ಟ್ರ ಮತ್ತು ಕಾಂಟಿನೆಂಟಲ್ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಎರ್ನಾಕುಲಂನಲ್ಲಿ ನಡೆದ ಕೇರಳ ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ ಚಿತ್ರಾ ಅವರು ಹಿಂದಿನ ವರ್ಷ ಗೆದ್ದಿದ್ದ ಎಲ್ಲಾ ಚಿನ್ನದ ಪದಕಗಳನ್ನು ಸಮರ್ಥಿಸಿಕೊಂಡರು. ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಅವರು ಮತ್ತೆ ೧,೫೦೦ಮೀ, ೩,೦೦೦ಮೀ, ೫,೦೦೦ಮೀ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದರು. ೩ರಲ್ಲಿ ಗೆದ್ದಿದ್ದ ಕಂಚಿನ ಪದಕವನ್ನೂ ಪರಿವರ್ತಿಸಿದರು ಚಿನ್ನಕ್ಕೆ ೨೦೧೧ ರಲ್ಲಿ ಕಿಮೀ ಕ್ರಾಸ್ ಕಂಟ್ರಿ. ಅದೇ ವರ್ಷ ಮೊದಲ ಏಷ್ಯನ್ ಶಾಲಾ ಅಥ್ಲೆಟಿಕ್ ಕೂಟದಲ್ಲಿ ಪಾಲಕ್ಕಾಡ್ ಬಾಲಕಿ ೩,೦೦೦ ಮೀಟರ್ ಓಟದಲ್ಲಿ ಚಿನ್ನ ಗೆದ್ದರು. ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ೨೦೧೬ರ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ೧,೫೦೦ಮೀ, ೩,೦೦೦ಮೀ, ೫,೦೦೦ಮೀ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳೊಂದಿಗೆ ೨೦೧೩ರ ಪುನರಾವರ್ತನೆಯಾಗಿತ್ತು. ಕಿಮೀ ಕ್ರಾಸ್ ಕಂಟ್ರಿ. ಅದೇ ವರ್ಷ, ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ೧,೫೦೦ ಮೀ ಓಟದಲ್ಲಿ ಹಿರಿಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ಚಿತ್ರಾ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದರು. ವಿವಾದ ಚಿತ್ರಾ ಅವರು ೨೦೧೭ ರ ಭುವನೇಶ್ವರದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ೧,೫೦೦ ಮೀಟರ್ ಓಟದಲ್ಲಿ ವೇದಿಕೆಯ ಮೇಲ್ಭಾಗದಲ್ಲಿ ಮುಗಿಸಿದರು, ಲಂಡನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ ಅವರು ಭಾರತೀಯ ತಂಡದಲ್ಲಿ ಇರುವುದಿಲ್ಲ ಎಂದು ಒಂದು ವಾರದ ನಂತರ ತಿಳಿಸಲಾಯಿತು. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಫ್ಐ) ಆಕೆಯ ಪ್ರದರ್ಶನವು ಅರ್ಹತಾ ಸಮಯ ೪:೦೭:೫೦ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಿದೆ. ಈ ನಿರ್ಧಾರವನ್ನು ಹಿಂಪಡೆಯುವಂತೆ ಚಿತ್ರಾ ಅವರ ಕೋಚ್ ಕೇರಳದ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ನ್ಯಾಯಾಲಯವು ಚಿತ್ರಾ ಪರವಾಗಿ ತೀರ್ಪು ನೀಡಿತು, ಆದರೆ ಅಥ್ಲೀಟ್ ಅನ್ನು ಭಾರತೀಯ ತಂಡಕ್ಕೆ ಸೇರಿಸಿಕೊಳ್ಳುವ ಎಫ್ಐ ನ ಮನವಿಯನ್ನು ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ ತಿರಸ್ಕರಿಸಿತು. ಚಿತ್ರಾ ಅವರು ಸೆಪ್ಟೆಂಬರ್ ೨೦೧೭ ರಲ್ಲಿ ಏಷ್ಯನ್ ಒಳಾಂಗಣ ಮತ್ತು ಮಾರ್ಷಲ್ ಆರ್ಟ್ಸ್ ಕ್ರೀಡಾಕೂಟದಲ್ಲಿ ೧,೫೦೦ ಮೀ.ನಲ್ಲಿ ಚಿನ್ನದ ಪದಕವನ್ನು ಗೆದ್ದರು. ೨೦೧೮ ರ ಏಷ್ಯನ್ ಗೇಮ್ಸ್‌ನಲ್ಲಿ ೧,೫೦೦ಮೀ ಕಂಚಿನ ಪದಕದೊಂದಿಗೆ ಮತ್ತು ನಂತರ ದೋಹಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ಅವರು ಅದನ್ನು ಅನುಸರಿಸಿದರು. ದೋಹಾದಲ್ಲಿ ನಡೆದ ೨೦೧೯ ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ೧,೫೦೦ ಮೀ ಓಟದಲ್ಲಿ ಅವರ ವೈಯಕ್ತಿಕ ಅತ್ಯುತ್ತಮವಾದ ೪:೧೧:೧೦ಬಂದಿತು, ಆದರೆ ಅವರು ಲಕ್ನೋದಲ್ಲಿ ೨೦೧೯ ರ ಅಂತರ-ರಾಜ್ಯ ರಾಷ್ಟ್ರಗಳಲ್ಲಿ ೮೦೦ ಮೀಟರ್‌ಗಳಲ್ಲಿ ೨:೦೨:೯೬ರಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದರು. ಉಲ್ಲೇಖಗಳು ಬಾಹ್ಯ ಕೊಂಡಿಗಳು PU Chitra at World Athletics ಜೀವಂತ ವ್ಯಕ್ತಿಗಳು ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
152564
https://kn.wikipedia.org/wiki/%E0%B2%A4%E0%B2%AF%E0%B2%BE%E0%B2%AC%E0%B3%81%E0%B2%A8%E0%B3%8D%20%E0%B2%A8%E0%B2%BF%E0%B2%B6%E0%B2%BE
ತಯಾಬುನ್ ನಿಶಾ
ethnicityTayabun Nisha ತಯಾಬುನ್ ನಿಶಾ ಒಬ್ಬ ಭಾರತೀಯ ಮಾಜಿ ಅಥ್ಲೀಟ್. ಅವರು ೧೯೭೪ರಲ್ಲಿ ಡಿಸ್ಕಸ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದಾಗ ಅವರ ಪ್ರದ‌ರ್ಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಹಲವಾರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದರು. ಅವರು ಭಾರತದ ಅಸ್ಸಾಂನ ಶಿವಸಾಗರ ಜಿಲ್ಲೆಯ ಧಯಾಲಿಯಲ್ಲಿ ಜನಿಸಿದರು. ಅವಳು ೮ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ತನ್ನ ಹೆತ್ತವರನ್ನು ಕಳೆದುಕೊಂಡಳು. ಅಲ್ಲದೆ, ಸಂಪ್ರದಾಯಬದ್ದ ಕುಟುಂಬಕ್ಕೆ ಸೇರಿದ ಅವರು ಆರಂಭಿಕ ದಿನಗಳಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಹಲವು ಅಡೆತಡೆಗಳನ್ನು ಎದುರಿಸಿದಳು. ಆದರೆ ಈ ಅಡೆತಡೆಗಳು ಅವಳ ಗುರಿ ಸಾಧನೆಯನ್ನುಮತ್ತು ಸಾಧಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ೧೯೭೧ರಲ್ಲಿ ಅವರು ೯ ನೇ ಅಂತರ ರಾಜ್ಯ ಅಥ್ಲೆಟಿಕ್ ಮೀಟ್‌ನಲ್ಲಿ ಭಾಗವಹಿಸಿದರು ಮತ್ತು ಅಹಮದಾಬಾದ್‌ನಲ್ಲಿ ಪಾದಾರ್ಪಣೆ ಮಾಡಿದರು. ಅವರು ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಗೆದ್ದರು ಮತ್ತು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದು. ಅಸ್ಸಾಂ ರಾಜ್ಯದ ಮೊದಲ ಮಹಿಳಾ ಅಥ್ಲೀಟ್ ಎಂಬ ಇತಿಹಾಸವನ್ನು ಸೃಷ್ಟಿಸಿದರು. ೧೯೭೪ ರಂದು ಜೈಪುರದಲ್ಲಿ ಅವರು ಡಿಸ್ಕಸ್ ಎಸೆತದಲ್ಲಿ ೧೨ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಅವರು ಪಂದ್ಯಾವಳಿಯಲ್ಲಿ ೨೯.೩೨ ಮೀಟರ್ ದೂರ ಎಸೆದರು. ಅವರು ೧೯೮೨ ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದರು, ಆದರೆ ಪದಕವನ್ನು ತಪ್ಪಿಸಿಕೊಂಡರು. ಪ್ರಸ್ತುತ, ಅವರು ಬಡ ಕುಟುಂಬದ ಹೆಣ್ಣುಮಕ್ಕಳಿಗಾಗಿ ಕ್ರೀಡಾ ಅಕಾಡೆಮಿ ಮತ್ತು ಹಾಸ್ಟೆಲ್ ಅನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ. ಅಸ್ಸಾಂ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷೆ ಮತ್ತು ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಉಲ್ಲೇಖಗಳು   ಜೀವಂತ ವ್ಯಕ್ತಿಗಳು
152568
https://kn.wikipedia.org/wiki/%E0%B2%B6%E0%B3%8D%E0%B2%B0%E0%B3%80%E0%B2%9C%E0%B2%AF%20%E0%B2%A8%E0%B2%BE%E0%B2%AF%E0%B2%B0%E0%B3%8D
ಶ್ರೀಜಯ ನಾಯರ್
Articles with hCards ಶ್ರೀಜಯಾ ನಾಯರ್ ಒಬ್ಬ ಭಾರತೀಯ ನಟಿ ಮತ್ತು ನೃತ್ಯಗಾರ್ತಿ. ಅವರು ೧೯೯೦ ರ ದಶಕದ ಉದ್ದಕ್ಕು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿ ಮದುವೆಯ ನಂತರ ನಿವೃತ್ತರಾದರು. ೨೦೧೪ ರಲ್ಲಿ ನಟನೆಗೆ ಮರಳಿದರು. ಅವರು ವೃತ್ತಿಪರ ನೃತ್ಯಗಾರ್ತಿ ಮತ್ತು ಬೆಂಗಳೂರಿನಲ್ಲಿ ಶ್ರೀಜಯ ಸ್ಕೂಲ್ ಆಫ್ ಕ್ಲಾಸಿಕಲ್ ಡ್ಯಾನ್ಸ್ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ಆರಂಭಿಕ ಜೀವನ ಶ್ರೀಜಯಾ ಭಾರತದ ಕೇರಳದ ಕೋತಮಂಗಲಂ ಮೂಲದವರು. ಅವರು ಐದನೇ ವಯಸ್ಸಿನಿಂದ ಕಲಾಮಂಡಲಂ ಸುಮತಿ ಮತ್ತು ಕಲಾಮಂಡಲಂ ಸರಸ್ವತಿ ಶಿಕ್ಷಕರಲ್ಲಿ ನೃತ್ಯ ಕಲಿಯಲು ಪ್ರಾರಂಭಿಸಿದರು. ಅವರು ಕೇರಳ ಕಲಾಮಂಡಲಂ, ಭರತನಾಟ್ಯ, ಮೋಹಿನಿಯಾಟ್ಟಂ ಮತ್ತು ಕೂಚಿಪುಡಿ ತರಗತಿಗಳನ್ನು ತೆಗೆದುಕೊಂಡು ನಂತರ ಅವರ ಶಿಕ್ಷಕಿ ಚಿತ್ರಾ ಚಂದ್ರಶೇಖರ್ ದಾಶರಥಿ ಅವರಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ವೃತ್ತಿ ಇವರು ೧೯೯೨ ರಲ್ಲಿ ಮಲಯಾಳಂ ನಾಟಕದ ಕಮಲದಲಂನಲ್ಲಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ೧೯೯೮ ರಲ್ಲಿ, ಹಾಸ್ಯ ನಾಟಕ ಸಮ್ಮರ್ ಇನ್ ಬೆಥ್ ಲೆಹೆಮ್ ನಲ್ಲಿ ನಟಿಸಿದರು. ಮದುವೆಯ ನಂತರ ಸ್ವಲ್ಪ ವಿರಾಮ ತೆಗೆದುಕೊಂಡರು. ವೈಯಕ್ತಿಕ ಜೀವನ ಶ್ರೀಜಯಾ ಅವರು ಉದ್ಯಮಿ ಮದನ್ ನಾಯರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಮೈಥಿಲಿ ಎಂಬ ಮಗಳಿದ್ದಾಳೆ. ಮದುವೆಯ ನಂತರ ಅವರು ಕೋಝಿಕ್ಕೋಡ್‌ಗೆ, ಬೆಂಗಳೂರು ಮತ್ತು ಕೆನಡಾಕ್ಕೆ ತೆರಳಿದರು. ನಂತರ ಬೆಂಗಳೂರಿಗೆ ಹಿಂತಿರುಗಿ ನೆಲೆಸಿದರು. ಶ್ರೀಜಯ ಅವರು ಬೆಂಗಳೂರಿನಲ್ಲಿ ಶ್ರೀಜಯ ಸ್ಕೂಲ್ ಆಫ್ ಕ್ಲಾಸಿಕಲ್ ಡ್ಯಾನ್ಸ್ ಹೆಸರಿನ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ, ಇದು ನಗರದಲ್ಲಿ ೫ ಶಾಖೆಗಳನ್ನು ಹೊಂದಿದೆ ಮತ್ತು ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಚಿತ್ರಕಥೆ ಚಲನಚಿತ್ರಗಳು ದೂರದರ್ಶನ ಉಲ್ಲೇಖಗಳು ಬಾಹ್ಯ ಕೊಂಡಿಗಳು ಜೀವಂತ ವ್ಯಕ್ತಿಗಳು
152569
https://kn.wikipedia.org/wiki/%E0%B2%9A%E0%B2%82%E0%B2%A6%E0%B3%8D%E0%B2%B0%20%E0%B2%A8%E0%B2%BE%E0%B2%AF%E0%B3%8D%E0%B2%A1%E0%B3%81
ಚಂದ್ರ ನಾಯ್ಡು
Articles with hCards ಚಂದ್ರನಾಯುಡು (1933 - 4 ಏಪ್ರಿಲ್ 2021) ಒಬ್ಬ ಭಾರತೀಯ ಕ್ರಿಕೆಟ್ ನಿರೂಪಕ, ಕ್ರಿಕೆಟಿಗ, ಪ್ರಾಧ್ಯಾಪಕ ಮತ್ತು ಲೇಖಕ. ಅವರು ಭಾರತದ ಮೊದಲ ಮಹಿಳಾ ಕ್ರಿಕೆಟ್ ವಿವರಣೆಗಾರರಾಗಿದ್ದರು, ಜೊತೆಗೆ ಭಾರತದ ಆರಂಭಿಕ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು. ಜೀವನ ಮತ್ತು ಕುಟುಂಬ ಚಂದ್ರನಾಯುಡು ಅವರು 1933 ರಲ್ಲಿ ತೆಲುಗು ಮಾತನಾಡುವ ಕಾಪು ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ, ಸಿಕೆ ನಾಯುಡು ಅವರು ಪ್ರಸಿದ್ಧ ಕ್ರಿಕೆಟಿಗರಾಗಿದ್ದರು ಮತ್ತು ಭಾರತದ ಮೊದಲ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಸಿ.ಕೆ.ನಾಯುಡು ಅವರ ಮೊದಲ ಪತ್ನಿಯ ಮೂವರು ಪುತ್ರಿಯರಲ್ಲಿ ಕಿರಿಯವಳು. ಆಕೆಯ ಚಿಕ್ಕಪ್ಪ ಸಿಎಸ್ ನಾಯುಡು ಕೂಡ ಭಾರತಕ್ಕಾಗಿ ಆಡಿದ್ದರೆ, ಆಕೆಯ ಸೋದರಳಿಯ ವಿಜಯ್ ನಾಯುಡು ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು. ಆಕೆಯ ಪೂರ್ವಜರು ಆಂಧ್ರಪ್ರದೇಶದ ಮಚಲಿಪಟ್ಟಣಂ ಪಟ್ಟಣದಿಂದ ಬಂದವರು. ವೃತ್ತಿ ನಾಯುಡು ಇಂಗ್ಲಿಷ್‌ನಲ್ಲಿ ಪದವಿ ಪಡೆದರು ಮತ್ತು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಕಲಿಸಿದರು. ನಾಯುಡು ದೇಶೀಯ ಮಹಿಳಾ ಕ್ರಿಕೆಟ್‌ನಲ್ಲಿ ಸಂಕ್ಷಿಪ್ತವಾಗಿ ಸ್ಪರ್ಧಿಸಿದರು, ಮೊದಲ ಉತ್ತರ ಪ್ರದೇಶ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದರು, [ ಪ್ರಾಥಮಿಕವಲ್ಲದ ಮೂಲ ಅಗತ್ಯವಿದೆ ] ಮತ್ತು 1970 ರ ದಶಕದಲ್ಲಿ ಕ್ರಿಕೆಟ್ ವಿವರಣೆಯನ್ನು ತೆಗೆದುಕೊಳ್ಳುವ ಮೊದಲು ಅವರ ಕಾಲೇಜಿಗೆ ಕ್ರಿಕೆಟ್ ಆಡಿದರು. ಅವರು ಭಾರತದ ಮೊದಲ ಮಹಿಳಾ ಕ್ರಿಕೆಟ್ ವಿವರಣೆಗಾರರಾಗಿದ್ದರು. ಅವರು 1976-77 ಋತುವಿನಲ್ಲಿ ಪ್ರವಾಸಿ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ವಿರುದ್ಧ ಬಾಂಬೆ ನಡುವಿನ ಪಂದ್ಯದಲ್ಲಿ ಕಾಮೆಂಟರಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಿಗೆ ಕಾಮೆಂಟ್ ಮಾಡುವುದನ್ನು ಮುಂದುವರೆಸಿದರು. ಅವರು 1979-1980 ರಲ್ಲಿ ಭಾರತದ ಸಾರ್ವಜನಿಕ ಪ್ರಸಾರಕ, ಆಲ್ ಇಂಡಿಯಾ ರೇಡಿಯೋ ಗಾಗಿ ಆಂಗ್ಲ ತಂಡದ ಭಾರತ ಪ್ರವಾಸದ ಸಮಯದಲ್ಲಿ ನಿರೂಪಕರಾಗಿದ್ದರು ಮತ್ತು ನಂತರ ಕ್ರಿಕೆಟ್ ಇತಿಹಾಸಕಾರ ಡೇವಿಡ್ ರೇವೆರ್ನ್ ಅಲೆನ್ ಅವರೊಂದಿಗಿನ ಸಂದರ್ಶನಕ್ಕಾಗಿ ಕ್ರಿಕೆಟ್ ವ್ಯಾಖ್ಯಾನದಲ್ಲಿ ತಮ್ಮ ಅನುಭವಗಳನ್ನು ದಾಖಲಿಸಿದರು, ಲಾರ್ಡ್ ' ರು. ನಾಯುಡು ಅವರ ಪ್ರಕಾರ, ಅವರು ಆಸ್ಟ್ರೇಲಿಯಾದ ಮಹಿಳಾ ಕಾಮೆಂಟೇಟರ್‌ಗಿಂತ ಮೊದಲು ಮೊದಲ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ ಕಾಮೆಂಟೇಟರ್ ಆಗಿದ್ದರು. ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ನೀಡಿದ ಸಂದರ್ಶನದಲ್ಲಿ, ಕ್ರಿಕೆಟ್ ಕಾಮೆಂಟರಿಯಲ್ಲಿ ತನ್ನ ಆಸಕ್ತಿಯು ಕ್ರಿಕೆಟ್‌ನಲ್ಲಿ ತನ್ನ ತಂದೆಯ ಸಾಧನೆಗಳನ್ನು ಗೌರವಿಸುವ ಮಾರ್ಗವಾಗಿ ಪ್ರಾರಂಭವಾಯಿತು ಎಂದು ಹೇಳಿದ್ದಾರೆ. 1982 ರಲ್ಲಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಗೋಲ್ಡನ್ ಜುಬಿಲಿ ಟೆಸ್ಟ್ ಪಂದ್ಯಕ್ಕೆ ಅವಳನ್ನು ಆಹ್ವಾನಿಸಲಾಯಿತು. ಅವರು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಆಜೀವ ಸದಸ್ಯರಾಗಿದ್ದರು ಮತ್ತು ಅಂತರ-ವಿಶ್ವವಿದ್ಯಾಲಯ ಪಂದ್ಯಾವಳಿಯನ್ನು ಸ್ಥಾಪಿಸುವುದು ಸೇರಿದಂತೆ ಈ ಪ್ರದೇಶದಲ್ಲಿ ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸಲು ಹಲವಾರು ಪ್ರಯತ್ನಗಳನ್ನು ಕೈಗೊಂಡರು. ಆಕೆಯ ಸೋದರಳಿಯ, ಮಾಜಿ ಕ್ರಿಕೆಟಿಗ ವಿಜಯ್ ನಾಯುಡು ಅವರ ಪ್ರಕಾರ, ಕ್ರಿಕೆಟ್ ಪಂದ್ಯಾವಳಿಗಳಿಗಾಗಿ ತನ್ನ ಹೆತ್ತವರ ನೆನಪಿಗಾಗಿ ಅವರು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾಗೆ ಬೆಳ್ಳಿ ಬ್ಯಾಟ್ ಮತ್ತು ತಾಯಿಗೆ ಕಾಲೇಜು ಸ್ಮಾರಕ ಟ್ರೋಫಿಯನ್ನು ನೀಡುವುದು ಸೇರಿದಂತೆ ಹಲವಾರು ಟ್ರೋಫಿಗಳನ್ನು ರಚಿಸಿದ್ದಾರೆ. 1990 ರ ಆರಂಭದಲ್ಲಿ ಇಂದೋರ್‌ನ ಸರ್ಕಾರಿ ಬಾಲಕಿಯರ ಪಿಜಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅವರ ಕೊನೆಯ ಪೋಸ್ಟಿಂಗ್. 1995 ರಲ್ಲಿ, ಅವರು CK ನಾಯುಡು: ಎ ಡಾಟರ್ ರಿಮೆಂಬರ್ಸ್ ಎಂಬ ಶೀರ್ಷಿಕೆಯ ತನ್ನ ತಂದೆಯ ಆತ್ಮಚರಿತ್ರೆಯನ್ನು ಪ್ರಕಟಿಸಿದರು. ಸಾವು ನಾಯುಡು ಇಂದೋರ್‌ನ ಮನೋರಮಾ ಗಂಜ್‌ನಲ್ಲಿ ವಾಸಿಸುತ್ತಿದ್ದರು, ಹೋಲ್ಕರ್ ಸ್ಟೇಡಿಯಂಗೆ ಹತ್ತಿರ, ಅವರ ತಂದೆ ಆಗಾಗ್ಗೆ ಆಡುತ್ತಿದ್ದರು. ಅವರು 4 ಏಪ್ರಿಲ್ 2021 ರಂದು ಇಂದೋರ್‌ನಲ್ಲಿ 88 ನೇ ವಯಸ್ಸಿನಲ್ಲಿ ನಿಧನರಾದರು ಪ್ರಕಟಣೆಗಳು ಚಂದ್ರ ಕೆ. ನಾಯುಡು, ಸಿ.ಕೆ. ನಾಯುಡು: ಎ ಡಾಟರ್ ರಿಮೆಂಬರ್ಸ್ (ನವದೆಹಲಿ, ರೂಪಾ ಪಬ್ಲಿಕೇಷನ್ಸ್ 1995), ಉಲ್ಲೇಖಗಳು   ಭಾರತೀಯ ಮಹಿಳಾ ಕ್ರಿಕೆಟಿಗರು ೧೯೩೩ ಜನನ
152577
https://kn.wikipedia.org/wiki/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%20%E0%B2%AF%E0%B2%B0%E0%B3%8D%E0%B2%B0%E0%B2%BE%E0%B2%9C%E0%B2%BF
ಜ್ಯೋತಿ ಯರ್ರಾಜಿ
ಜ್ಯೋತಿ ಯರ್ರಾಜಿ (ಜನನ ೨೮ ಆಗಸ್ಟ್ ೧೯೯೯) ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದು ಅವರು ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಅವರು ೧೦ ಮೇ ೨೦೨೨ ರಂದು ೧೩.೨೩ ಸೆಕೆಂಡ್‌ಗಳಲ್ಲಿ ಓಡಿ ಅನುರಾಧ ಬಿಸ್ವಾಲ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದ ನಂತರ ೧೦೦ ಮೀ ಹರ್ಡಲ್ಸ್‌ಗಾಗಿ ಭಾರತೀಯ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ ಅವರು ೨೦೨೨ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ೧೦೦ ಮೀಟರ್ಸ್ ಹರ್ಡಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಫೈನಲ್‌ನಲ್ಲಿ 5 ನೇ ಸ್ಥಾನ ಪಡೆದ ಭಾರತೀಯ ಮಹಿಳೆಯರ ೪X೧೦೦ ಮೀಟರ್ ರಿಲೇ ತಂಡದ ಭಾಗವಾಗಿದ್ದರು. ೨೦೨೨ ರ ಭಾರತದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ, ಅವರು ೧೦೦ ಮೀಟರ್ ಮತ್ತು ೧೦೦ ಮೀಟರ್ ಹರ್ಡಲ್ಸ್ ಎರಡರಲ್ಲೂ ಚಿನ್ನ ಗೆದ್ದರು. ೧೭ ಅಕ್ಟೋಬರ್ ೨೦೨೨ ರಂದು, ಅವರು ೧೩ ಸೆಕೆಂಡ್‌ಗಳಿಗಿಂತ ಕಡಿಮೆ ಗಡಿಯಾರವನ್ನು ಮಾಡಿದ ಮೊದಲ ಭಾರತೀಯ ಮಹಿಳಾ ಹರ್ಡಲರ್ ಆದರು - ಇದು ಅವರು ವರ್ಷದ ೧೦೦ ಮೀಟರ್ಸ್ ಮಹಿಳೆಯರ ಹರ್ಡಲ್ಸ್‌ನಲ್ಲಿ ಎರಡನೇ ಅತ್ಯುತ್ತಮ ಏಷ್ಯನ್ ಮತ್ತು ೧೧ ನೇ ಅತ್ಯುತ್ತಮ ಏಷ್ಯನ್ ಆಗಿದ್ದಾರೆ. ೨೦೨೨ ರ ಇಂಡಿಯನ್ ಓಪನ್ ನ್ಯಾಷನಲ್ಸ್‌ನಲ್ಲಿ, ಅವರು ಮಹಿಳೆಯರಲ್ಲಿ ಅತ್ಯುತ್ತಮ ಕ್ರೀಡಾಪಟು ಎಂದು ಹೆಸರಿಸಲ್ಪಟ್ಟರು. ೨೦೨೩ ರ ಆರಂಭದಲ್ಲಿ, ಅಸ್ತಾನಾದಲ್ಲಿ ನಡೆದ ೨೦೨೩ ರ ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆಲ್ಲುವುದರ ಹೊರತಾಗಿ ಅವರು ಐದು ಬಾರಿ ಒಳಾಂಗಣ ೬೦ ಮೀಟರ್ ಹರ್ಡಲ್ಸ್‌ಗಾಗಿ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಉಲ್ಲೇಖಗಳು Jyothi Yarraji at World Athletics ಜೀವಂತ ವ್ಯಕ್ತಿಗಳು
152580
https://kn.wikipedia.org/wiki/%E0%B2%87%E0%B2%82%E0%B2%A6%E0%B3%8D%E0%B2%B0%E0%B2%BE%E0%B2%A3%E0%B2%BF%20%E0%B2%B0%E0%B3%86%E0%B2%B9%E0%B2%AE%E0%B2%BE%E0%B2%A8%E0%B3%8D
ಇಂದ್ರಾಣಿ ರೆಹಮಾನ್
{{Bold text{Short description|American dancer}} Articles with hCards ಇಂದ್ರಾಣಿ ರೆಹಮಾನ್ (19 ಸೆಪ್ಟೆಂಬರ್ 1930, ಚೆನ್ನೈ - 5 ಫೆಬ್ರವರಿ 1999, ನ್ಯೂಯಾರ್ಕ್) ಭರತ ನಾಟ್ಯಂ, ಕೂಚಿಪುಡಿ, ಕಥಕ್ಕಳಿ ಮತ್ತು ಒಡಿಸ್ಸಿಯ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದು, ಅವರು ಪಶ್ಚಿಮದಲ್ಲಿ ಜನಪ್ರಿಯಗೊಳಿಸಿದರು ಮತ್ತು ನಂತರ 1976 ರಲ್ಲಿ ನ್ಯೂಯಾರ್ಕ್‌ನಲ್ಲಿ ನೆಲೆಸಿದರು. 1952 ರಲ್ಲಿ, ಅವರು ಮಿಸ್ ಇಂಡಿಯಾ ಸ್ಪರ್ಧೆಯನ್ನು ಗೆದ್ದರು. ನಂತರ ತಾಯಿ ರಾಗಿಣಿ ದೇವಿಯ ಕಂಪನಿಗೆ ಸೇರಿಕೊಂಡರು. ಅವರು ತಮ್ಮ ಅಂತರಾಷ್ಟ್ರೀಯ ಪ್ರವಾಸಗಳಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಒಡಿಸ್ಸಿಯನ್ನು ಜನಪ್ರಿಯಗೊಳಿಸಿದರು. ಇಂದ್ರಾಣಿ ಅವರು 1969 ರಲ್ಲಿ ಪದ್ಮಶ್ರೀ ಮತ್ತು ಪ್ರದರ್ಶನ ಕಲೆಯಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ತಾರಕನಾಥ್ ದಾಸ್ ಪ್ರಶಸ್ತಿಯನ್ನು ಪಡೆದರು. ಹಿನ್ನೆಲೆ ಮತ್ತು ಕುಟುಂಬ ಇಂದ್ರಾಣಿ ರೆಹಮಾನ್ ಚೆನ್ನೈನಲ್ಲಿ (ಆಗ ಮದ್ರಾಸ್), ಇಂಡೋ-ಅಮೆರಿಕನ್ ಲೀಗ್‌ನ ಕೆಲ ಕಾಲದ ಅಧ್ಯಕ್ಷ ರಾಮಲಾಲ್ ಬಲರಾಮ್ ಬಾಜ್‌ಪೇಯ್ (1880-1962) ಅವರ ಮಗಳಾಗಿ, ಅವರ ಪತ್ನಿ ರಾಗಿಣಿ ದೇವಿ (ನೀ ಎಸ್ತರ್ ಲುಯೆಲ್ಲಾ ಶೆರ್ಮನ್) ಅವರಿಂದ ಜನಿಸಿದರು. ಆಕೆಯ ತಂದೆ ರಾಮಲಾಲ್ ಬಾಜಪೇಯ್ ಅವರು ಉತ್ತರ ಭಾರತದ ಹಿನ್ನೆಲೆಯವರಾಗಿದ್ದರು, ಅವರು ಉನ್ನತ ಶಿಕ್ಷಣಕ್ಕಾಗಿ US ಗೆ ಹೋದ ರಸಾಯನಶಾಸ್ತ್ರಜ್ಞರಾಗಿದ್ದರು. ಇಲ್ಲಿ ಅವರು ಹುಟ್ಟಿನಿಂದಲೇ ಅಮೇರಿಕನ್ ಎಸ್ತರ್ ಲುಯೆಲ್ಲಾ ಶೆರ್ಮನ್ ಅವರನ್ನು ಭೇಟಿಯಾದರು ಮತ್ತು ವಿವಾಹವಾದರು. 1893 ರಲ್ಲಿ ಮಿಚಿಗನ್‌ನ ಪೆಟೋಸ್ಕಿಯಲ್ಲಿ ಜನಿಸಿದರು, (1982 ರಲ್ಲಿ ನಿಧನರಾದರು), ಎಸ್ತರ್ ತನ್ನ ಮದುವೆಯ ನಂತರ ಹಿಂದೂ ಧರ್ಮವನ್ನು ಸ್ವೀಕರಿಸಿದರು ಮತ್ತು 'ರಾಗಿಣಿ ದೇವಿ' ಎಂಬ ಹೆಸರನ್ನು ಪಡೆದರು. ದಂಪತಿಗಳು 1920 ರ ದಶಕದಲ್ಲಿ ಭಾರತಕ್ಕೆ ಹಿಂತಿರುಗಿದರು. . ರಾಮಲಾಲ್ ನಂತರ ಲಾಲಾ ಲಜಪತ್ ರಾಯ್ ಅವರು ಸ್ಥಾಪಿಸಿದ ಯಂಗ್ ಇಂಡಿಯಾ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕೆಲಸ ಮಾಡಿದರು. ಸ್ವಾತಂತ್ರ್ಯದ ನಂತರ, ಅವರು ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆದರು, ಮತ್ತು ಇಂಡೋ-ಅಮೆರಿಕನ್ ಲೀಗ್‌ನ ಅಧ್ಯಕ್ಷರಾದರು. ಈ ಮಧ್ಯೆ, ರಾಗಿಣಿ ಭಾರತೀಯ ಶಾಸ್ತ್ರೀಯ ನೃತ್ಯದ ಭಾವೋದ್ರಿಕ್ತ ಪ್ರತಿಪಾದಕರಾದರು ಮತ್ತು ಅವರ ಪುನರುಜ್ಜೀವನ ಮತ್ತು ಪೋಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಭರತ ನಾಟ್ಯವನ್ನು ಕಲಿಯಲು ಪ್ರಾರಂಭಿಸಿದ ಮೈಸೂರಿನ ಜೆಟ್ಟಿ ತಾಯಮ್ಮ ಎಂಬ ಮಹಾನ್ ರಾಜದಾಸಿ (ರಾಜನ ವೇಶ್ಯೆ) ಅವರನ್ನು ಭೇಟಿಯಾದ ನಂತರ ಇದು ಸಂಭವಿಸಿತು. ನಂತರ ಅವರು ಚೆನ್ನೈನ ವೇಶ್ಯೆಯರಾದ ಗೌರಿ ಅಮ್ಮನ ಮಾರ್ಗದರ್ಶನದಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನು ಮೆರೆದರು. ರಾಗಿಣಿ ನಂತರ ಸ್ವತಃ ಪ್ರಸಿದ್ಧ ನರ್ತಕಿಯಾದರು ಮತ್ತು 1930 ರ ದಶಕದಲ್ಲಿ ಅತ್ಯಂತ ಗೌರವಾನ್ವಿತ ಪ್ರದರ್ಶಕರಲ್ಲಿ ಒಬ್ಬರಾದರು. ಅದೇ ಅವಧಿಯಲ್ಲಿ ರಾಗಿಣಿ ಕಥಕ್ಕಳಿಯ ಪುನರುಜ್ಜೀವನವನ್ನು ಸಹ ಸಮರ್ಥಿಸಿಕೊಂಡರು. ಇಂದ್ರಾಣಿ ದಂಪತಿಗಳಿಗೆ ಚೆನ್ನೈನಲ್ಲಿ ಜನಿಸಿದ ಇವರು ಮಿಶ್ರ ಜನಾಂಗದ ಕುಟುಂಬದಲ್ಲಿ ಬೆಳೆದರು. ಆಕೆಯ ಅಮೇರಿಕನ್ ತಾಯಿಯಿಂದ ಆಕೆಯನ್ನು ಅನಿರ್ಬಂಧಿತ ಮತ್ತು ಸ್ವತಂತ್ರವಾಗಿ ಬೆಳೆಸಲಾಯಿತು, ಅವರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ಸ್ಪರ್ಧೆಯಲ್ಲಿ ಸ್ಪರ್ಧಿಸಲು ಮನವೊಲಿಸಬಹುದಾದ ದೇಶಾದ್ಯಂತದ ಕೆಲವೇ ಕೆಲವು ಸ್ಪರ್ದಾಳುಗಳಲ್ಲಿ ಇವರು ಒಬ್ಬರಾಗಿದ್ದರು, ಇಂದ್ರಾಣಿ 1952 ರಲ್ಲಿ 'ಮಿಸ್ ಇಂಡಿಯಾ' ಕಿರೀಟವನ್ನು ಪಡೆದರು. ವೃತ್ತಿ ಇಂದ್ರಾಣಿ ತನ್ನ ಒಂಬತ್ತನೇ ವಯಸ್ಸಿನಲ್ಲಿ ತನ್ನ ತಾಯಿಯ ಕಂಪನಿಯಲ್ಲಿ ನೃತ್ಯವನ್ನು ಕಲಿಯಲು ಪ್ರಾರಂಭಿಸಿದರು ಮತ್ತು ಅವರು ಅಮೇರಿಕಾ ಮತ್ತು ಯುರೋಪಿನಲ್ಲಿ ಪ್ರಯಾಣಿಸುವಾಗ ಅವರೊಂದಿಗೆ ಹೋದರು. 1940 ರ ದಶಕದಲ್ಲಿ ಗುರು ಚೊಕ್ಕಲಿಂಗಂ ಪಿಳ್ಳೈ (1893-1968) ಅವರಿಂದ ಭರತ ನಾಟ್ಯಂನ ಪಂಡನಲ್ಲೂರ್ ಶೈಲಿಯನ್ನು ಕಲಿತ ನಂತರ ಅವರು ಮೊದಲು ಕಲಾ ಪ್ರದರ್ಶನ ಭರತ ನಾಟ್ಯಂನೊಂದಿಗೆ ಪ್ರಾರಂಭಿಸಿದರು. ಶೀಘ್ರದಲ್ಲೇ ಅವರು ವಿಜಯವಾಡದಲ್ಲಿದ್ದ, ಕೊರಡ ನರಸಿಂಹ ರಾವ್ ಅವರಿಂದ ಕೂಚಿಪುಡಿ ಕಲಿತರು, ನಂತರ ಅವರು ಪ್ರಪಂಚದ ಅನೇಕ ಭಾಗಗಳನ್ನು ಸುತ್ತಿದರು. 1947 ರಲ್ಲಿ, ಇಂದ್ರಾಣಿ ಭಾರತದ ಪ್ರಮುಖ ನೃತ್ಯ ಮತ್ತು ಕಲಾ ವಿಮರ್ಶಕ ಡಾ. ಚಾರ್ಲ್ಸ್ ಫ್ಯಾಬ್ರಿ ಅವರ ಗಮನವನ್ನು ಸೆಳೆದರು, ಅವರು ನಂತರ ಒರಿಸ್ಸಾಗೆ ಹೋಗಿ ಒಡಿಸ್ಸಿಯ ಕಡಿಮೆ-ಪ್ರಸಿದ್ಧ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಕಲಿಯಲು ಪ್ರೋತ್ಸಾಹಿಸಿದರು, ಒಡಿಸ್ಸಿ ಕಲಿತ ಮೊದಲ ವೃತ್ತಿಪರ ನೃತ್ಯಗಾರ್ತಿಯಾದರು. ಗುರು ಶ್ರೀ ದೇಬಾ ಪ್ರಸಾದ್ ದಾಸ್ ಅವರಿಂದ ಮೂರು ವರ್ಷಗಳ ಕಾಲ ಒಡಿಸ್ಸಿ ಕಲಿತ ನಂತರ, ಅವರು ಭಾರತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಅದನ್ನು ಜನಪ್ರಿಯಗೊಳಿಸಿದರು. 1952 ರಲ್ಲಿ, ವಿವಾಹವಾದರು. ಮತ್ತು ಮೊದಲ ಮಗುವಿನೊಂದಿಗೆ ಅವರು ಮೊದಲ ಮಿಸ್ ಇಂಡಿಯಾ ಆದರು, ಮತ್ತು ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 1952 ಸ್ಪರ್ಧೆಯಲ್ಲಿ ಸ್ಪರ್ಧಿಸಲು ಹೋದರು. ಇವರು ತಮ್ಮ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದರು ಮತ್ತು ಪ್ರಪಂಚದಾದ್ಯಂತ ಪ್ರದರ್ಶನ ನೀಡುತ್ತಿದ್ದರು. 1961 ರಲ್ಲಿ, ಅವರು ಏಷ್ಯಾ ಸೊಸೈಟಿಯಿಂದ ರಾಷ್ಟ್ರೀಯ ಪ್ರವಾಸದಲ್ಲಿ ನೃತ್ಯ ಪ್ರಸ್ತುತ ಪಡಿಸಿದ ಮೊದಲ ನರ್ತಕಿಯಾಗಿದ್ದರು ಮತ್ತು ವಾಷಿಂಗ್ಟನ್, DC ಗೆ ನೆಹರು ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ US ಅಧ್ಯಕ್ಷ ಜಾನ್ F. ಕೆನಡಿ ಮತ್ತು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗಾಗಿ ಪ್ರದರ್ಶನ ನೀಡಿದರು, ಮತ್ತು ಕೆಳಗಿನವುಗಳಲ್ಲಿ ಅವರು ಚಕ್ರವರ್ತಿ ಹೈಲೆ ಸೆಲಾಸಿ, ರಾಣಿ ಎಲಿಜಬೆತ್ II, ಮಾವೋ ಝೆಡಾಂಗ್, ನಿಕಿತಾ ಕ್ರುಶ್ಚೇವ್ ಮತ್ತು ಫಿಡೆಲ್ ಕ್ಯಾಸ್ಟ್ರೋ ಅವರಿಗಾಗಿ ವರ್ಷಗಳ ಕಾಲ ಪ್ರದರ್ಶನ ನೀಡಿದರು. 1976 ರಲ್ಲಿ ಅವರು ನ್ಯೂಯಾರ್ಕ್‌ನ ಲಿಂಕನ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿರುವ ಜೂಲಿಯಾರ್ಡ್ ಸ್ಕೂಲ್‌ನಲ್ಲಿ ನೃತ್ಯ ವಿಭಾಗದ ಅಧ್ಯಾಪಕರಾದರು, ಹಾರ್ವರ್ಡ್ ಸೇರಿದಂತೆ ವಿವಿಧ ಅಮೇರಿಕನ್ ವಿಶ್ವವಿದ್ಯಾಲಯಗಳಲ್ಲಿ ಕಲಿಸಿದರು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ತನ್ನ ಉಳಿದ ಎರಡು ದಶಕಗಳನ್ನು ವ್ಯಾಪಕವಾಗಿ ಪ್ರವಾಸ ಮಾಡಿದರು. ವೈಯಕ್ತಿಕ ಜೀವನ 15 ನೇ ವಯಸ್ಸಿನಲ್ಲಿ ಅವರು ಓಡಿಹೋಗಿ ಪ್ರಸಿದ್ಧ ವಾಸ್ತುಶಿಲ್ಪಿ ಹಬೀಬ್ ರೆಹಮಾನ್ (1915-1995), 1945 ರಲ್ಲಿ ವಿವಾಹವಾದರು, ದಂಪತಿಗೆ ಒಬ್ಬ ಮಗ, ಕಲಾವಿದ ರಾಮ್ ರೆಹಮಾನ್ ಮತ್ತು ಮಗಳು, ಸುಕನ್ಯಾ ರೆಹಮಾನ್ (ವಿಕ್ಸ್), ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ನೃತ್ಯವನ್ನೂ ಮಾಡಿದಳು. ಆಕೆಯ ಮೊಮ್ಮಕ್ಕಳು ವಾರ್ಡ್ರೀತ್ ವಿಕ್ಸ್ ಮತ್ತು ಹಬೀಬ್ ವಿಕ್ಸ್. ಸಾವು ಇಂದ್ರಾಣಿ ರೆಹಮಾನ್ 5 ಫೆಬ್ರವರಿ 1999 ರಂದು ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ನಲ್ಲಿ ನಿಧನರಾದರು. ಪ್ರಶಸ್ತಿಗಳು 1952: ಫೆಮಿನಾ ಮಿಸ್ ಇಂಡಿಯಾ 1969: ಪದ್ಮಶ್ರೀ 1981: ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹೆಚ್ಚಿನ ಓದುವಿಕೆ ಕುಟುಂಬದಲ್ಲಿ ನೃತ್ಯ, ಸುಕನ್ಯಾ ರೆಹಮಾನ್ ಅವರಿಂದ. 2001, ಹಾರ್ಪರ್‌ಕಾಲಿನ್ಸ್ ಇಂಡಿಯಾ,  . ರಾಗಿಣಿ ದೇವಿ ಅವರಿಂದ ಭಾರತದ ನೃತ್ಯ ಉಪಭಾಷೆಗಳು . ಮೋತಿಲಾಲ್ ಬನಾರ್ಸಿದಾಸ್ ಪಬ್ಲ್. , 1990. ISBN 81-208-0674-3 ,  . ಉಲ್ಲೇಖಗಳು ಬಾಹ್ಯ ಕೊಂಡಿಗಳು ಇಂದ್ರಾಣಿ ರೆಹಮಾನ್ 1979 ರಲ್ಲಿ ಜಾಕೋಬ್ಸ್ ಪಿಲ್ಲೊದಲ್ಲಿ ತರಂಗಂನಲ್ಲಿ ಪ್ರದರ್ಶನ ನೀಡಿದ ಆರ್ಕೈವಲ್ ದೃಶ್ಯಗಳು. ರಾಮ್ ರೆಹಮಾನ್ ವೆಬ್‌ಸೈಟ್‌ನಲ್ಲಿ ಇಂದ್ರಾಣಿ ಮತ್ತು ಹಬೀಬ್ ರೆಹಮಾನ್ ಅವರ ಫೋಟೋ ವೈಶಿಷ್ಟ್ಯವನ್ನು ೧೯೯೯ ನಿಧನ ೧೯೩೦ ಜನನ
152582
https://kn.wikipedia.org/wiki/%E0%B2%A6%E0%B3%87%E0%B2%AC%E0%B2%B6%E0%B3%8D%E0%B2%B0%E0%B3%80%20%E0%B2%AE%E0%B2%9C%E0%B3%81%E0%B2%AE%E0%B3%8D%E0%B2%A6%E0%B2%BE%E0%B2%B0%E0%B3%8D
ದೇಬಶ್ರೀ ಮಜುಮ್ದಾರ್
residenceDebashree Mazumdar ವೃತ್ತಿ ದೇಬಶ್ರೀ ಮಜುಂದಾರ್ ಅವರು ಆದಾಯ ತೆರಿಗೆ ಇಲಾಖೆಯಲ್ಲಿ ದೆಹಲಿಯಲ್ಲಿ ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 2017 ರಲ್ಲಿ ಭುವನೇಶ್ವರದಲ್ಲಿ ನಡೆದ 2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ MR ಪೂವಮ್ಮ, ಜಿಸ್ನಾ ಮ್ಯಾಥ್ಯೂ ಮತ್ತು ನಿರ್ಮಲಾ ಶೆರಾನ್ ಅವರೊಂದಿಗೆ ವಿಜೇತ 4 × 400 m ರಿಲೇ ವಿಜೇತರಾಗಿ ತಂಡದಲೀ ಭಾಗವಾಗಸಿದರು . ಉಲ್ಲೇಖಗಳ Debashree Mazumdar at World Athletics ಜೀವಂತ ವ್ಯಕ್ತಿಗಳು
152595
https://kn.wikipedia.org/wiki/%E0%B2%B5%E0%B3%83%E0%B2%B7%E0%B2%B8%E0%B3%87%E0%B2%A8
ವೃಷಸೇನ
ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ವೃಷಸೇನ ( ) ಯೋಧ ಕರ್ಣ ಮತ್ತು ಅವನ ಹೆಂಡತಿಯ ಹಿರಿಯ ಮಗ. ತನ್ನ ತಂದೆಯೊಂದಿಗೆ, ಅವನು ಕೌರವರ ಕಡೆಯಿಂದ ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಿದನು ಮತ್ತು ಉಪಪಾಂಡವರು, ದ್ರುಪದ, ದೃಷ್ಟದ್ಯುಮ್ನ, ನಕುಲ, ಸಹದೇವ, ವಿರಾಟ ಮತ್ತು ಇನ್ನೂ ಅನೇಕ ಪ್ರಮುಖ ಯೋಧರನ್ನು ಎದುರಿಸಿದನು. ಕುರುಕ್ಷೇತ್ರ ಯುದ್ಧ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ, ಕರ್ಣನು ಭೀಷ್ಮನೊಂದಿಗಿನ ವಿವಾದದಿಂದಾಗಿ ಮೊದಲ ಹತ್ತು ದಿನಗಳ ಕಾಲ ಭಾಗವಹಿಸಲಿಲ್ಲ. ಯುದ್ಧದ ೧೦ ನೇ ದಿನದಂದು ಭೀಷ್ಮನ ಪತನದ ನಂತರ, ಕರ್ಣ ಮತ್ತು ವೃಷಸೇನ ಸೇರಿದಂತೆ ಅವನ ಮಕ್ಕಳು ೧೧ ನೇ ದಿನ ಯುದ್ಧದಲ್ಲಿ ಸೇರಿಕೊಂಡರು ಮತ್ತು ಪಾಂಡವರ ವಿರುದ್ಧ ಹೋರಾಡಿದರು. ೧೧ ನೇ ದಿನ ಯುದ್ಧದ ೧೧ ನೇ ದಿನದಂದು, ವೃಷಸೇನನು ನಕುಲನ ಮಗನಾದ ಶತಾನೀಕನನ್ನು ಒಂದೇ ಯುದ್ಧದಲ್ಲಿ ಸೋಲಿಸಿದನು ಮತ್ತು ನಂತರ ಇತರ ಉಪಪಾಂಡವರ ವಿರುದ್ಧ ಹೋರಾಡಿದನು ಮತ್ತು ಅವರೆಲ್ಲರನ್ನು ಸೋಲಿಸಿದನು. ನಂತರ ಅವನು ಸಹದೇವನ ವಿರುದ್ಧ ಹೋರಾಡಿದನು, ಅಲ್ಲಿ ಅವನು ತನ್ನ ಧನುಸ್ಸನ್ನು ಮುರಿದು ಅವನನ್ನು ಪ್ರಜ್ಞೆ ತಪ್ಪಿಸಿದನು. ಕೊನೆಗೆ ಸಾತ್ಯಕಿ ಸಹದೇವನನ್ನು ರಕ್ಷಿಸಿದನು. ೧೨ ನೇ ದಿನ ಯುದ್ಧದ ೧೨ ನೇ ದಿನದಂದು ಅವನು ಪಾಂಡವ ಸೈನ್ಯದ ಮತ್ಸ್ಯ ಪಡೆಗಳ ಮೇಲೆ ದಾಳಿ ಮಾಡಿ ರಾಜ ವಿರಾಟನನ್ನು ಸೋಲಿಸುವ ಮೂಲಕ ವಿನಾಶವನ್ನು ಸೃಷ್ಟಿಸಿದನು ಮತ್ತು ಅವನನ್ನು ಕೆಟ್ಟದಾಗಿ ಗಾಯಗೊಳಿಸಿದನು. ಇದನ್ನು ಕಂಡು ಅಭಿಮನ್ಯು ವಿರಾಟನ ಸಹಾಯಕ್ಕೆ ಬಂದನು ಮತ್ತು ವೃಷಸೇನ ಮತ್ತು ಅಭಿಮನ್ಯು ನಡುವೆ ಘೋರ ದ್ವಂದ್ವಯುದ್ಧ ನಡೆಯಿತು. ವೃಷಸೇನನು ಅಭಿಮನ್ಯುವಿನ ಎದೆ ಮತ್ತು ತೊಡೆಗಳನ್ನು ಒಂದೆರಡು ಬಾಣಗಳಿಂದ ಚುಚ್ಚಿದನು ಆದರೆ ಅಂತಿಮವಾಗಿ ಅಭಿಮನ್ಯು ತನ್ನ ಬಿಲ್ಲನ್ನು ಮುರಿದು ಅವನನ್ನು ಸೋಲಿಸಿದನು. ೧೪ ನೇ ದಿನ ೧೪ ನೇ ದಿನದ ರಾತ್ರಿ, ವೃಷಸೇನನು ಪಾಂಚಾಲ ರಾಜನಾದ ದ್ರುಪದನ ವಿರುದ್ಧ ಒಂದೇ ಯುದ್ಧದಲ್ಲಿ ತೊಡಗಿದನು ಮತ್ತು ಅವನನ್ನು ಸೋಲಿಸಿದನು. ದ್ರುಪದನ ಸೋಲನ್ನು ಅನುಸರಿಸಿ, ಅವನು ದ್ರುಪದನ ಮಗ ಪಾಂಡವ ಸೈನ್ಯದ ಪ್ರಧಾನ ದಂಡನಾಯಕನಾದ ದೃಷ್ಟದ್ಯುಮನನ್ನು ಸೋಲಿಸಿದನು ಮತ್ತು ದ್ರುಪದ ಮತ್ತು ದೃಷ್ಟದ್ಯುಮ್ನರನ್ನು ಹಿಮ್ಮೆಟ್ಟುವಂತೆ ಮಾಡಿದನು. ೧೭ ನೇ ದಿನ ಯುದ್ಧದ ೧೭ ನೇ ದಿನದಂದು, ವೃಷಸೇನನು ನಕುಲನ ವಿರುದ್ಧ ಒಂದೇ ಯುದ್ಧದಲ್ಲಿ ತೊಡಗಿದನು ಮತ್ತು ಅವನ ರಥವನ್ನು ನಾಶಪಡಿಸಿದನು. ಅದರ ನಂತರ, ನಕುಲನು ಭೀಮನ ರಥವನ್ನು ಏರಿದನು, ಆದರೆ ವೃಷಸೇನನು ಅವರಿಬ್ಬರನ್ನೂ ಹೊಡೆಯುವುದನ್ನು ಮುಂದುವರೆಸಿದನು, ಅವನು ಭೀಮನ ಧನುಸ್ಸನ್ನು ಮುರಿದನು ಮತ್ತು ಹಲವಾರು ತೀಕ್ಷ್ಣವಾದ ಬಾಣಗಳಿಂದ ಭೀಮನ ಎದೆಯನ್ನು ಚುಚ್ಚಿದನು. ಆಗ ಭೀಮನು ವೃಷಸೇನನನ್ನು ಕೊಲ್ಲಲು ಅರ್ಜುನನನ್ನು ಕೇಳಿದನು ಮತ್ತು ಭೀಕರ ಯುದ್ಧದ ನಂತರ ಅರ್ಜುನನು ಅವನನ್ನು ಕೊಂದನು. ಉಲ್ಲೇಖಗಳು ಮಹಾಭಾರತದ ಪಾತ್ರಗಳು ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ
152670
https://kn.wikipedia.org/wiki/%E0%B2%B8%E0%B2%BF%E0%B2%B2%E0%B3%8D%E0%B2%B9%E0%B3%86%E0%B2%9F%E0%B2%BF%20%E0%B2%AD%E0%B2%BE%E0%B2%B7%E0%B3%86
ಸಿಲ್ಹೆಟಿ ಭಾಷೆ
ಸಿಲ್ಹೆಟಿ ಭಾಷೆ  (silɔʈi) ಇದು ಇಂಡೋ-ಆರ್ಯನ್ ಭಾಷೆಯಾಗಿದ್ದು, ಅಂದಾಜು 11 ಮಿಲಿಯನ್ ಜನರು ಮಾತನಾಡುತ್ತಾರೆ, ಪ್ರಾಥಮಿಕವಾಗಿ ಬಾಂಗ್ಲಾದೇಶದ ಸಿಲ್ಹೆಟ್ ವಿಭಾಗ, ಅಸ್ಸಾಂನ ಬರಾಕ್ ಕಣಿವೆ ಮತ್ತು ಭಾರತದ ತ್ರಿಪುರಾದ ಉತ್ತರ ಭಾಗಗಳಲ್ಲಿ. ಇದಲ್ಲದೆ, ಭಾರತೀಯ ರಾಜ್ಯಗಳಾದ ಮೇಘಾಲಯ, ಮಣಿಪುರ ಮತ್ತು ನಾಗಾಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮಧ್ಯಪ್ರಾಚ್ಯದಲ್ಲಿ ಡಯಾಸ್ಪೊರಾ ಸಮುದಾಯಗಳಲ್ಲಿ ಗಣನೀಯ ಸಂಖ್ಯೆಯ ಸಿಲ್ಹೆಟಿ ಮಾತನಾಡುವವರು ಇದ್ದಾರೆ. ಧ್ವನಿಶಾಸ್ತ್ರ ಇದು ಉಸಿರಾಟ ಮತ್ತು ಮಹತ್ವಾಕಾಂಕ್ಷೆಯ ವ್ಯತಿರಿಕ್ತತೆಯ ನಷ್ಟದಿಂದ ನಿರೂಪಿಸಲ್ಪಟ್ಟಿದೆ, ಇದು ಅದರ ಫೋನೆಮ್ ಇನ್ವೆಂಟರಿಯಲ್ಲಿ ಗಮನಾರ್ಹ ಇಳಿಕೆಗೆ ಮತ್ತು ಟೋನ್ಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನಿರ್ದಿಷ್ಟವಾಗಿ, ಈ ಕೆಳಗಿನ ಬೆಳವಣಿಗೆಗಳು ಕಂಡುಬರುತ್ತವೆ. ಭಾರತೀಯ ಭಾಷೆಗಳು